Kitchen Tips: ನಿಂಬೆಹಣ್ಣಿನ ರಸವೇ ನಿಮ್ಮ ಕಿಚನ್‌ ಕ್ಲೀನರ್:‌ ಸ್ವಚ್ಛ ಅಡುಗೆಮನೆಗೆ ಇಲ್ಲಿವೆ ಟಿಪ್ಸ್! - Vistara News

ಆಹಾರ/ಅಡುಗೆ

Kitchen Tips: ನಿಂಬೆಹಣ್ಣಿನ ರಸವೇ ನಿಮ್ಮ ಕಿಚನ್‌ ಕ್ಲೀನರ್:‌ ಸ್ವಚ್ಛ ಅಡುಗೆಮನೆಗೆ ಇಲ್ಲಿವೆ ಟಿಪ್ಸ್!

ನಿಂಬೆಹಣ್ಣು ಅಸಿಡಿಕ್‌ ಆಗಿರುವುದರಿಂದ ಇದು ಅತ್ಯುತ್ತಮ ಕ್ಲೀನಿಂಗ್‌ ಏಜೆಂಟ್‌ ಕೂಡಾ ಹೌದು. ಉಪ್ಪು, ನೀರು, ವಿನೆಗರ್‌ ಅಥವಾ ಬೇಕಿಂಗ್‌ ಸೋಡಾ ಇತ್ಯಾದಿ ವಸ್ತುಗಳನ್ನು ನಿಂಬೆಹಣ್ಣಿನ ರಸದ ಜೊತೆ ಬೆರೆಸಿದರೆ ಅತ್ಯುತ್ತಮ ಕ್ಲೀನಿಂಗ್‌ ಏಜೆಂಟ್‌ ಆಗಿ ಕೆಲಸ ಮಾಡುತ್ತದೆ.

VISTARANEWS.COM


on

lemon
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ರತಿ ಮನೆಯ ಪಾಲಿಗೆ ಅಡುಗೆ ಮನೆಗಿಂತ ಮುಖ್ಯವಾದ ಇನ್ನೊಂದು ಕೋಣೆಯಿಲ್ಲ. ಪ್ರತಿದಿನವೂ ಮನೆಯ ಮಂದಿಗೆಲ್ಲ ಅನ್ನ ಕೊಡುವ ತಾಣವದು. ಮನೆಯ ಎಲ್ಲರನ್ನೂ ಆರೋಗ್ಯವಾಗಿಡುವ ದೇವರೂ ಅಡುಗೆ ಮನೆಯೆಂದರೆ ತಪ್ಪಾಗಲಾರದು. ಆರೋಗ್ಯಕ್ಕಿಂತ ದೊಡ್ಡ ಭಾಗ್ಯ ಇನ್ನೇನಿದೆ!

ಇಂತಹ ಅಡುಗೆಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದೂ ಕೂಡಾ ಅಷ್ಟೇ ಮುಖ್ಯ. ಇದಕ್ಕಾಗಿ ಇಂದು ಅನೇಕ ಕ್ಲೀನರ್‌ಗಳು, ಬಗೆಬಗೆಯ ಸ್ವಚ್ಛತೆಯ ಲಿಕ್ವಿಡ್‌ಗಳು, ಒರೆಸುವ ಬಟ್ಟೆಗಳು ಮಾರುಕಟ್ಟೆಯಲ್ಲಿ ಬೇಕಾದಷ್ಟು ದೊರೆಯುತ್ತದೆ ನಿಜ. ಅಡುಗೆ ಮನೆಯ ಕೊಳೆ, ಜಿಡ್ಡಿನ ಕಲೆ, ಮಸಿ ಕಲೆ ಸೇರಿದಂತೆ, ದಿನವೂ ಅಡುಗೆ ಮಾಡುವ ಒಲೆ, ಸುತ್ತಮುತ್ತಲ ಟೈಲ್ಸ್‌ ಎಲ್ಲವೂ ಬೇಗನೆ ಕೊಳೆಯಾಗುತ್ತದೆ. ಇವನ್ನೆಲ್ಲ ನಿತ್ಯವೂ ನೀಟಾಗಿ, ವಾಸನೆ ಬರದಂತೆ ಅಚ್ಚುಕಟ್ಟಾಗಿ ಜೋಡಿಸಿಡುವುದೂ ಕೂಡಾ ಅಡುಗೆ ಮನೆಗೆ ಶೋಭೆ. ಇವಕ್ಕೆ ಮಾರುಕಟ್ಟೆಯ ಲಿಕ್ವಿಡ್‌ಗಳಿಗಿಂತಲೂ ಅಡುಗೆ ಮನೆಯಲ್ಲೇ ಲಭ್ಯವಿರುವ ವಸ್ತುಗಳಿಂದಲೂ ಸ್ವಚ್ಛ ಮಾಡಬಹುದು. ನಿಂಬೆಹಣ್ಣು ಈ ವಸ್ತುಗಳ ಪೈಕಿ ಮುಂಚೂಣಿಯಲ್ಲಿರುವ ಸರಳವಾದ ವಿಧಾನ.

ನಿಂಬೆಹಣ್ಣು ಅಸಿಡಿಕ್‌ ಆಗಿರುವುದರಿಂದ ಇದು ಅತ್ಯುತ್ತಮ ಕ್ಲೀನಿಂಗ್‌ ಏಜೆಂಟ್‌ ಕೂಡಾ ಹೌದು. ಆದರೆ, ಬಳಸುವ ಮೊದಲು ಇದಕ್ಕೆ ಕೊಂಚ ನೀರು ಸೇರಿಸಿ ಹದ ಮಾಡಿಕೊಳ್ಳುವ ಅಗತ್ಯವೂ ಇದೆ. ಅಷ್ಟೇ ಅಲ್ಲ ಇದರ ಜೊತೆಗೆ ಇನ್ನೂ ಕೆಲವು ವಸ್ತುಗಳನ್ನು ಮಿಕ್ಸ್‌ ಮಾಡುವ ಮೂಲಕವೂ ಕ್ಲೀನಿಂಗ್‌ ಏಜೆಂಟ್‌ ಆಗಿ ಬಳಸಬಹುದು. ಉಪ್ಪು, ನೀರು, ವಿನೆಗರ್‌ ಅಥವಾ ಬೇಕಿಂಗ್‌ ಸೋಡಾ ಇತ್ಯಾದಿ ವಸ್ತುಗಳನ್ನು ನಿಂಬೆಹಣ್ಣಿನ ರಸದ ಜೊತೆ ಬೆರೆಸಿದರೆ ಅತ್ಯುತ್ತಮ ಕ್ಲೀನಿಂಗ್‌ ಏಜೆಂಟ್‌ ಆಗಿ ಕೆಲಸ ಮಾಡುತ್ತದೆ. ಈ ವಸ್ತುಗಳ ಪೈಕಿ ಯಾವುದಾದರೊಂದನ್ನು ನಿಂಬೆಹಣ್ಣಿನ ಜೊತೆ ಸೇರಿಸುವ ಮೂಲಕ ನಿಂಬೆಹಣ್ಣಿನ ಅಸಿಡಿಕ್‌ ಗುಣವನ್ನು ಕೊಂಚ ತಗ್ಗಿಸಿಕೊಳ್ಳಬಹುದು.

ಕಿಚನ್‌ ಸ್ವಚ್ಛತೆಗೆ ಸ್ಪ್ರೇ ಕೊಳ್ಳಲು ನೀವು ಮಾರುಕಟ್ಟೆಗೆ ಎಡತಾಕಬೇಕಿಲ್ಲ. ನಿಂಬೆಹಣ್ಣನ್ನು ಉಪಯೋಗಿಸಿ ಕ್ನೀನಿಂಗ್‌ ಸ್ಪ್ರೇ ಕೂಡಾ ನೀವು ಮನೆಯಲ್ಲಿಯೇ ತಯಾರಿಸಬಹುದು. ಅರ್ಧ ನಿಂಬಹಣ್ಣನ್ನು ತೆಗೆದುಕೊಳ್ಳಿ. ಅದರ ರಸ ಹಿಂಡಿ ಅದಕ್ಕೆ ಅರ್ಧ ಕಪ್‌ ನೀರು ಸೇರಿಸಿ. ಅಥವಾ ಇದಕ್ಕೆ ವಿನೆಗರ್‌ ಅನ್ನೂ ಸೇರಿಸಿ ಇನ್ನೂ ಶಕ್ತಿಯುತವಾಗಿ ಕ್ಲೀನಿಂಗ್‌ ಸ್ಪ್ರೇ ಆಗಿ ತಯಾರಿಸಬಹುದು. ಇದನ್ನು ಒಂದು ಬಾಟಲ್‌ನಲ್ಲಿ ಹಾಕಿಟ್ಟು ಕೊಳಕಾದ ಜಾಗಗಳಿಗೆ ಸ್ಪ್ರೇ ಮಾಡಿ, ಬಟ್ಟೆಯಲ್ಲಿ ಉಜ್ಜಿ ತೆಗೆಯಿರಿ.

1. ಮೈಕ್ರೋವೇವ್‌ನಲ್ಲಿ ಕಲೆಗಳು ಕೆಲವೊಮ್ಮೆ ಹಾಗೆಯೇ ಉಳಿದುಬಿಡುತ್ತವೆ. ಇದನ್ನು ಎಷ್ಟು ಚೆನ್ನಾಗಿ ಉಜ್ಜಿ ತೆಗೆಯಲು ನೋಡಿದರೂ ಬಹಳ ಸಾರಿ ಈ ಕಲೆ ಹೋಗುವುದೇ ಇಲ್ಲ. ಇಂಥ ಸಂದರ್ಭ ಅತ್ಯಂತ ಚೆನ್ನಾಗಿ ಬಳಕೆಗೆ ಬರುವುದು ನೀವೇ ತಯಾರಿಸಿಕೊಳ್ಳಬಹುದಾದ ಈ ನಿಂಬೆಹಣ್ಣಿನ ಕ್ಲೀನಿಂಗ್‌ ಏಜೆಂಟ್‌. ಅರ್ಧ ಕಪ್‌ ನೀರಿಗೆ ಅರ್ಧ ನಿಂಬೆಹಣ್ಣಿನ ರಸ ಸೇರಿಸಿ ಮೈಕ್ರೋವೇವ್‌ನಲ್ಲಿ ಐದು ನಿಮಿಷ ಇಡಿ. ಈ ನೀರಿನಲ್ಲಿ ಮೈಕ್ರೋವೇವ್‌ ಅನ್ನು ಕೂಡಲೇ ಟವಲ್‌ನಿಂದ ಉಜ್ಜಿ ತೆಗೆಯಿರಿ.

2. ಸ್ಟೀಲ್‌ ಪಾತ್ರೆಗಳು ಹಳೇ ಕಲೆಗಳನ್ನು ಉಳಿಸಿಕೊಂಡಿದ್ದರೂ ಕೂಡಾ ಈ ಲಿಕ್ವಿಡ್‌ ಒಳ್ಳೆಯ ಪರ್ಯಾಯ ಉಪಾಯ. ಪಾತ್ರೆಗಳನ್ನು ತೊಳೆಯುವಾಗ ಒಂದಿಷ್ಟು ನಿಂಬೆಹಣ್ಣಿನ ರಸವನ್ನು ಹಾಕಿ ಉಜ್ಜಿ ತೊಳೆಯಿರಿ. ಪಾತ್ರೆಗಳೆಲ್ಲ ಪಳಪಳನೆ ಹೊಳೆಯುತ್ತವೆ. ಅಥವಾ ಬಳಸಿದ ನಿಂಬೆಹಣ್ಣಿನ ಉಳಿದ ಸಿಪ್ಪೆಯನ್ನು ಎಸೆಯದೆ ಹಾಗೆಯೇ ಇಡಿ. ಇದನ್ನು ಸಂಗ್ರಹಿಸಿ ಬೇಕಾದ ಪಾತ್ರೆಗಳ್ನು ಉಜ್ಜಿ ತೊಳೆಯಲು ಬಳಸಬಹುದು. ಅಥವಾ ಪಾತ್ರೆ ತೊಳೆಯುವ ಸಿಂಕ್‌ ಕ್ಲೀನ್‌ ಮಾಡಲು ಈ ಸಿಪ್ಪೆಯನ್ನು ಬಳಸಬಹುದು.

ಇದನ್ನೂ ಓದಿ: Indian Spices: ಮನೆಯೊಳಗಿನ ಮಸಾಲೆ ಡಬ್ಬಿಯಲ್ಲಿದೆ ಮನೆಯವರ ಆರೋಗ್ಯ!

3. ಚೂರಿಯಲ್ಲಿ ತುಕ್ಕು ಹಿಡಿದಿದ್ದರೂ ಆ ತುಕ್ಕನ್ನು ತೆಗೆದು ಚೂರಿಯನ್ನು ಪಳಪಳ ಹೊಳೆವಂತೆ ಮಾಡಲು ನಿಂಬೆಹಣ್ಣಿನ ರಸ ಅಪಕಾರಿ. ಇದು ಚೂರಿಗೆ ಹೊಳಪನ್ನೂ ನೀಡುತ್ತದೆ.

4. ತರಕಾರಿ ಕತ್ತರಿರುವ ಬೋರ್ಡ್‌ ಮೇಲೆ ತರಕಾರಿಗಳ ಕಲೆ ಉಳಿದುಹೋಗಿದೆಯಾ? ನಿಂಬೆಹಣ್ಣಿನ ರಸದಿಂದ ತಿಕ್ಕಿ ತೊಳೆಯಿರಿ. ಬೋರ್ಡ್‌ ಫಳಪಳಿಸುತ್ತದೆ.

5. ಕಿಚನ್‌ ಸಂದಿಗಳಲ್ಲಿ, ಒಲೆಯ ಸಂದಿಗಳಲ್ಲಿ ಸೇರಿದಂತೆ ಕಿಚನ್‌ನ ಹಲವೆಡೆ ಜಿಡ್ಡು, ಕೊಳೆ ಸೇರಿ ಬಹಳ ದಿನವೇ ಆಗಿರುತ್ತದೆ. ಇದು ಕೆಟ್ಟ ವಾಸನೆಯನ್ನೂ ಕೊಡುತ್ತಿದ್ದರೆ, ಕಿಚನ್‌ ಫಳಪಳಿಸಲು ಕೂಡಾ ನಿಂಬೆರಸವೇ ಸಾಕು. ನೀರು ಹಾಕಿ ಮಾಡಿಟ್ಟ ನಿಂಬೆಹಣ್ಣಿನ ಲಿಕ್ವಿಡ್‌ ಸ್ಪ್ರೇ ಬಳಸಿ ಕ್ಲೀನ್‌ ಮಾಡಿ. ವಾಸನೆ ಎಲ್ಲ ಮಾಯ! ರಾಸಾಯನಿಕ ಯುಕ್ತ ಕ್ಲೀನರ್‌ಗಳ ಬದಲು ನೈಸರ್ಗಿಕ ವಿಧಾನಗಳ ಕ್ಲೀನಿಂಗ್‌ ಆರೋಗ್ಯಕ್ಕೂ ಒಳ್ಳೆಯದು.

ಇದನ್ನೂ ಓದಿ: Kitchen Tips: ಊಟದ ಡಬ್ಬಿಯಲ್ಲಿ ಉಳಿದು ಹೋಗುವ ಕೆಟ್ಟ ವಾಸನೆಯಿಂದ ಮುಕ್ತಿ ಹೇಗೆ? ಇಲ್ಲಿವೆ ಟಿಪ್ಸ್!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Health Tips: ಈ ಐದು ಆಹಾರಗಳನ್ನು ಬೆಳಗಿನ ಉಪಾಹಾರಕ್ಕೆ ಬಳಸಲೇಬೇಡಿ!

ಉತ್ತಮ ಆರೋಗ್ಯಕರ ಬೆಳಗಿನ ಉಪಾಹಾರವೂ ಕೂಡ ನಮ್ಮ ಆರೋಗ್ಯದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಆದರೆ ಕೆಲವು ಅನಾರೋಗ್ಯಕರ ತಿನಿಸುಗಳನ್ನು ಇಂದಿನ ಧಾವಂತದ ಯುಗದಲ್ಲಿ ಬಹುತೇಕರು ಬೆಳಗಿನ ಉಪಾಹಾರಕ್ಕಾಗಿ (Health Tips) ಸೇವಿಸುತ್ತಾರೆ. ಇದು ಅನಾರೋಗ್ಯಕರ.

VISTARANEWS.COM


on

Health Tips
Koo

ಇಡೀ ದಿನದ ಆಹಾರಕ್ರಮದಲ್ಲಿ ಬಹಳ ಮುಖ್ಯವಾದದ್ದು ಬೆಳಗಿನ ಉಪಾಹಾರ. ಇದನ್ನು ಸರಿಯಾಗಿ ಮಾಡದಿದ್ದರೆ ಅದು ಇಡೀ ದಿನದ ಕೆಲಸದ ಮೇಲೆ ಪ್ರಭಾವ ಬೀರುತ್ತದೆ. ಉಪಾಹಾರವನ್ನೇ ಬಿಟ್ಟರೆ ಕೇವಲ ದೇಹವಷ್ಟೇ ಅಲ್ಲ, ಮನಸ್ಸೂ ಕೂಡ ಸರಿ ಇರುವುದಿಲ್ಲ. ಕಿರಿಕಿರಿ, ಏನೋ ಕಳೆದುಕೊಂಡ ಭಾವ ಅಷ್ಟೇ ಅಲ್ಲ, ಶಕ್ತಿಗುಂದುವಿಕೆ, ಇಡೀ ದಿನದ ಕೆಲಸಕ್ಕೆ ಶಕ್ತಿ ಇಲ್ಲದಂತಾಗುವುದು ಇತ್ಯಾದಿ ಪರಿಣಾಮ ಕಂಡುಬರುತ್ತದೆ. ಹೀಗಾಗಿ, ಬ್ರೇಕ್‌ಫಾಸ್ಟ್‌ ಅನ್ನು ಬಿಡುವುದು ಆರೋಗ್ಯದ ಲಕ್ಷಣವಲ್ಲ. ಅಷ್ಟೇ ಅಲ್ಲ. ಉತ್ತಮ ಆರೋಗ್ಯಕರ ಬೆಳಗಿನ ಉಪಾಹಾರವೂ ಕೂಡ ನಮ್ಮ ಆರೋಗ್ಯದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಆದರೆ ಕೆಲವು ಅನಾರೋಗ್ಯಕರ ತಿನಿಸುಗಳನ್ನು ಇಂದಿನ ಧಾವಂತದ ಯುಗದಲ್ಲಿ ಬಹುತೇಕರು ಬೆಳಗಿನ ಉಪಾಹಾರಕ್ಕಾಗಿ ಸೇವಿಸುತ್ತಾರೆ. ಸಂಸ್ಕರಿಸಿದ ಇಂತಹ ಆಹಾರಗಳನ್ನು ಬೆಳಗಿನ ಉಪಾಹಾರಕ್ಕಾಗಿ ಸೇವಿಸಿದರೆ, ನಮ್ಮ ಜೀರ್ಣಾಂಗ ವ್ಯವಸ್ಥೆಗೆ ನಾವೇ ಅಪಚಾರ ಬಗೆದಂತೆ. ಬನ್ನಿ, ಯಾವೆಲ್ಲ ಆಹಾರಗಳನ್ನು ಬೆಳಗ್ಗಿನ ಉಪಹಾರಕ್ಕೆ ತಿನ್ನಲೇಬಾರದು (Health Tips) ಎಂಬುದನ್ನು ನೋಡೋಣ.

Health Tips about curd

ಫ್ಲೇವರ್ಡ್‌ ಮೊಸರು

ಅಂಗಡಿಗಳಲ್ಲಿ ದೊರೆಯುವ ಬಗೆಬಗೆಯ ಫ್ಲೇವರ್ಡ್‌ ಮೊಸರುಗಳು ತಿನ್ನಲು ಬಲು ರುಚಿ. ಸ್ಟ್ರಾಬೆರಿ, ಬ್ಲೂಬೆರ್ರಿ, ರಸ್‌ಬೆರ್ರಿ, ಮಾವು ಇತ್ಯಾದಿ ಇತ್ಯಾದಿ ಬಗೆಬಗೆಯ ಮೊಸರುಗಳು ಡಬ್ಬಗಳಲ್ಲಿ ಇಂದು ಲಭ್ಯ. ಸುಲಭವಾಗಿ ಅಂಗಡಿಗಳಲ್ಲಿ ದೊರೆಯುವ ಆರೋಗ್ಯಕರ ಆಹಾರ ಎಂದು ಬಹುತೇಕರು ಇದನ್ನು ಆಗಾಗ ಬಳಸುವುದುಂಟು. ಆದರೆ, ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಕ್ಕರೆ, ಕೃತಕ ಪದಾರ್ಥಗಳೂ ಇರುವುದರಿಂದ ಇವು ಖಂಡಿತ ಒಳ್ಳೆಯದು ಮಾಡಲಾರವು. ಇವುಗಳ ಒಳ್ಳೆಯ ಗುಣಗಳಿಗಿಂತ ಅಡ್ಡ ಪರಿಣಾಮಗಳೇ ಹೆಚ್ಚು. ತೂಕ ಹೆಚ್ಚಾಗುವಿಕೆ, ಶೀತ, ಕಫಗಳನ್ನು ಹೆಚ್ಚಿಸುತ್ತವೆ.

Serial eat

ಸಿರಿಯಲ್‌ಗಳು

ಬೆಳಗ್ಗೆ ಎದ್ದ ಕೂಡಲೇ ಸುಲಭವಾಗಿ ಮಾಡಬಹುದಾದ ಬ್ರೇಕ್‌ಫಾಸ್ಟ್‌ಗಳ ಪೈಕಿ, ಒಂದು. ಬಹುತೇಕರು ತಿನ್ನುವುದು ಇಂದು ಇವನ್ನೇ. ಬೆಳಗ್ಗೆ ಎದ್ದ ಕೂಡಲೇ ಒಂದಿಷ್ಟು ಸಿರಿಯಲ್‌ ಅನ್ನು ಬೌಲ್‌ನಲ್ಲಿ ಹಾಕಿ ಅದಕ್ಕೆ ಸ್ವಲ್ಪ ಹಾಲು ಹಾಕಿ ಸೇವಿಸಿದರೆ ಮುಗೀತು. ಆಫೀಸ್‌ ಹೊರಡುವ ಗಡಿಬಿಡಿಯಲ್ಲಿ ಬಹುತೇಕರು ಹೀಗೆ ಇದನ್ನು ತಿನ್ನುವುದು ಹೆಚ್ಚು. ಆದರೆ, ಕಾರ್ನ್‌ ಫ್ಲೇಕ್ಸ್‌ ಸೇರಿದಂತೆ ಇಂಥ ಸಿರಿಯಲ್‌ಗಳು ಸಂಸ್ಕರಿಸಿದ ಆಹಾರಗಳ ಪೈಕಿ ಒಂದಾಗಿರುವುದರಿಂದ ಹಾಗೂ ಇವುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಕ್ಕರೆ ಹಾಗೂ ಕೃತಕ ವಸ್ತುಗಳೂ ಸೇರಿಸಲ್ಪಟ್ಟಿರುವುದರಿಂದ ಆರೋಗ್ಯಕ್ಕೆ ಅಂದುಕೊಂಡ ಹಾಗೆ ಒಳ್ಳೆಯದನ್ನು ಮಾಡಲಾರವು. ಅಡ್ಡ ಪರಿಣಾಮಗಳೂ ಇವೆ.

Image Of Fruit Juices Role in Managing Blood Sugar Levels

ಹಣ್ಣಿನ ರಸ

ಹಣ್ಣು ಆರೋಗ್ಯಕ್ಕೆ ಒಳ್ಳೆಯದು ನಿಜ. ಹಾಗೆಯೇ ಹಣ್ಣಿನ ರಸವೂ ಕೂಡಾ. ಆದರೆ, ಹಣ್ಣಿನ ರಸ ಒಳ್ಳೆಯದು ಅಂದುಕೊಂಡು ಬೆಳಗ್ಗೆ ಹಣ್ಣಿನ ರಸ ಕುಡಿದರೆ ಖಂಡಿತ ಒಳ್ಳೆಯದಾಗದು. ಇದರಿಂದ ಇದ್ದಕ್ಕಿದ್ದ ಹಾಗೆ ರಕ್ತದಲ್ಲಿನ ಗ್ಲುಕೋಸ್‌ ಪ್ರಮಾಣ ಏರುತ್ತದೆ. ಒಂದು ಹಣ್ಣು ತಿನ್ನುವುದಕ್ಕೂ ಹಣ್ಣಿನ ರಸ ಕುಡಿಯುವುದಕ್ಕೂ ವ್ಯತ್ಯಾಸವಿದೆ. ಒಂದು ಲೋಟ ಹಣ್ಣಿನ ರಸಕ್ಕೆ ಸಾಕಷ್ಟು ಹಣ್ಣುಗಳು ಬೇಕಾಗುತ್ತವೆ, ಅಷ್ಟೇ ಅಲ್ಲ, ಹಣ್ಣಿನ ನಾರಿನಂಶವನ್ನು ಎಸೆದು ಬಿಡಲಾಗುತ್ತದೆ. ಆದರೆ, ಹಣ್ಣಿನಲ್ಲಿ ಹಾಗಲ್ಲ. ಹಾಗಾಗಿ ಜ್ಯೂಸ್‌ಗಿಂತ ಹಣ್ಣನ್ನು ಹಾಗೆಯೇ ತಿನ್ನುವುದು ಬಹಳ ಒಳ್ಳೆಯದು. ಬೆಳಗ್ಗೆ ಉಪಾಹಾರಕ್ಕಂತೂ ಹಣ್ಣಿನ ರಸ ಕುಡಿಯುವುದು ಒಳ್ಳೆಯದಲ್ಲ.

Waffle

ವ್ಯಾಫಲ್

ಪ್ಯಾನ್‌ಕೇಕ್‌ಗಳು ಹಾಗೂ ವ್ಯಾಫಲ್‌ಗಳನ್ನು ಬೆಳಗಿನ ಹೊತ್ತು ಉಪಹಾರಕ್ಕೆ ತಿನ್ನುವುದು ಒಳ್ಳೆಯದಲ್ಲ. ಇದರಲ್ಲಿ ಹೆಚ್ಚು ಮೈದಾ ಇರುತ್ತದೆ. ಅಷ್ಟೇ ಅಲ್ಲ, ಇದರಲ್ಲಿ ಯಾವುದೇ ಪೋಷಕಾಂಶಗಳಿರುವುದಿಲ್ಲ. ಉದಾಸೀನತೆಯನ್ನು ಹೆಚ್ಚು ಮಾಡುವ ಯಾವುದೇ ಶಕ್ತಿ ನೀಡದ ಆಹಾರವಿದು.

Cakes, Muffins

ಕೇಕ್‌, ಮಫಿನ್‌ಗಳು

ಬೆಳಗಿನ ಉಪಾಹಾರಕ್ಕೆ ಕೇಕ್‌, ಮಫಿನ್‌ನಂತಹ ಆಹಾರಗಳು ಒಳ್ಳೆಯದಲ್ಲ. ಮೈದಾ, ಸಕ್ಕರೆ, ಎಣ್ಣೆ ಇತ್ಯಾದಿಗಳೇ ಹೆಚ್ಚಿರುವ ಈ ಆಹಾರದಲ್ಲಿ ಒಳ್ಳೆಯ ಅಂಶಗಳು ಕಡಿಮೆ. ಹೆಚ್ಚು ಕ್ಯಾಲರಿಯ, ಹೆಚ್ಚು ಕೊಬ್ಬಿನ ಆಹಾರ. ಸಕ್ಕರೆಯ ಪ್ರಮಾಣವೂ ಹೆಚ್ಚು. ಹಾಗಾಗಿ ಈ ಬೆಳಗಿನ ಉಪಾಹಾರಕ್ಕೆ ಆರೋಗ್ಯಕರವಲ್ಲ.

ಇದನ್ನೂ ಓದಿ: Work Stress: ಉದ್ಯೋಗದ ವಿಪರೀತ ಒತ್ತಡ; ಅಪಾಯದಲ್ಲಿ ಐಟಿ ನೌಕರರು!

Continue Reading

ಆಹಾರ/ಅಡುಗೆ

Tea Desserts: ಚಹಾ ಪ್ರಿಯರಿಗೆ ಬಗೆಬಗೆಯ ಚಹಾ ಡೆಸರ್ಟುಗಳು! ಇಲ್ಲಿವೆ ಕ್ರೇಜಿ ಐಡಿಯಾಗಳು!

ಚಹಾಪ್ರಿಯರಿಗೆ ತಮ್ಮ ಚಹಾ ಪ್ರೇಮವನ್ನು ಸಮರ್ಥಿಸಲು ಕಾರಣ ನೂರಾರು. ಬೇಸಿಗೆಯಲ್ಲಿ ಯಾವುದೇ ಕ್ರೇಜಿ ಐಡಿಯಾ ಮಾಡಿಯಾದರೂ ಅವರು ಚಹಾ ಸೇವಿಸುತ್ತಾರೆ. ಇಂಥ ಚಹಾಪ್ರಿಯರಿಗೊಂದು ಕ್ರೇಜಿ ಡೆಸರ್ಟ್‌ಗಳು (Tea Desserts) ಇಲ್ಲಿವೆ.

VISTARANEWS.COM


on

Tea Desserts
Koo

ಚಳಿಗಾಲದಲ್ಲಿ ಚಹಾ ಕುಡಿಯುವ ಗಮ್ಮತ್ತೇ ಬೇರೆ. ಬಿಸಿ ಬಿಸಿ ಹೊಗೆಯಾಡುವ ಬಗೆಬಗೆಯ ಚಹಾವನ್ನು ನಾವು ಲೋಟಗಟ್ಟಲೆ ದಿನವಿಡೀ ಕುಡಿದೆವು ಎಂದು ಚಹಾಪ್ರಿಯರು ತಮ್ಮ ಚಹಾಪ್ರೇಮದ ಬಗ್ಗೆ ವ್ಯಾಖ್ಯಾನ ನೀಡಬಹುದು. ಆದರೆ, ಬೇಸಿಗೆಯಲ್ಲಿ? ಚಹಾ ಬೇಸಿಗೆಯ ಪೇಯವಲ್ಲ ನಿಜ. ಆದರೂ, ಚಹಾಪ್ರಿಯರು ದಿನಕ್ಕೆರಡು ಬಾರಿಯಾದರೂ ಚಹಾ ಕುಡಿಯದೆ ಬಿಡಲಾರರು. ನೀವು ಏನೇ ಹೇಳಿ, ಯಾವುದೇ ವಾದ ಮಂಡಿಸಿ, ಚಹಾಪ್ರಿಯರಿಗೆ ತಮ್ಮ ಚಹಾ ಪ್ರೇಮವನ್ನು ಸಮರ್ಥಿಸಲು ಕಾರಣ ನೂರಾರು. ಬೇಸಿಗೆಯಲ್ಲಿ ಯಾವುದೇ ಕ್ರೇಜಿ ಐಡಿಯಾ ಮಾಡಿಯಾದರೂ ಅವರು ಚಹಾ ಸೇವಿಸುತ್ತಾರೆ. ಇಂಥ ಚಹಾಪ್ರಿಯರಿಗೊಂದು ಕ್ರೇಜಿ ಡೆಸರ್ಟ್‌ಗಳು (Tea Desserts) ಇಲ್ಲಿವೆ. ಬೇಸಿಗೆಯಲ್ಲಿ ನಿಮ್ಮ ಚಹಾಪ್ರೇಮಕ್ಕೆ ಕಳಶವಿಟ್ಟಂತೆ ಈ ಚಿತ್ರವಿಚಿತ್ರ ಚಹಾದ ಡೆಸರ್ಟ್‌ಗಳು ಇಂದು ಕೆಲವೆಡೆ ವಿಶೇಷವಾಗಿ ಲಭ್ಯವಿವೆಯಂತೆ. ಬನ್ನಿ ಚಹಾದ ಈ ಚಿತ್ರವಿಚಿತ್ರ ಡೆಸರ್ಟ್‌ಗಳ ಹೆಸರು ಕೇಳಿ ನೀವೂ ಮನೆಯಲ್ಲಿ ಪ್ರಯತ್ನಿಸಿ.

Masala tea ice cream

ಮಸಾಲಾ ಚಹಾ ಐಸ್‌ಕ್ರೀಂ

ಬೇಸಿಗೆಯಲ್ಲಿ ಐಸ್‌ಕ್ರೀಂ ಅನ್ನು ಯಾರಾದರೂ ಬೇಡ ಎನ್ನುತ್ತಾರೆಯೋ. ಖಂಡಿತ ಇಲ್ಲ. ಆದರೆ ಇದು ಮಸಾಲೆ ಚಹಾ ಐಸ್‌ ಕ್ರೀಂ. ಎಲ್ಲಿಯ ಚಹಾ ಎಲ್ಲಿಯ ಐಸ್‌ಕ್ರೀಂ ಎನ್ನಬೇಡಿ. ಬಿಸಿಬಿಸಿಯಾದ ಚಹಾದ ಬದಲಿಗೆ ಬಾಯಲ್ಲಿಟ್ಟರೆ ಕರಗುವ ಮಸಾಲೆ ಚಹಾದ ರುಚಿಯ ಐಸ್‌ಕ್ರೀಂ ರೂಪದ ಡೆಸರ್ಟ್‌ ನಿಮಗೆ ಸಿಕ್ಕರೆ?! ವಾಹ್‌ ಎನಿಸೀತೇ? ಹಾಗಿದ್ದರೆ ಒಮ್ಮೆ ನೀವೂ ಮನೆಯಲ್ಲಿ ಟ್ರೈ ಮಾಡಿ ನೋಡಬಹುದು. ಈಗ ಸಾಕಷ್ಟು ಟ್ರೆಂಡ್‌ನಲ್ಲಿರುವ ಈ ಹೊಸ ಐಸ್‌ಕ್ರೀಂ ಹುಡುಕಿ ತಿನ್ನಿ, ಇಲ್ಲವೇ ಮನೆಯಲ್ಲೇ ಟ್ರೈ ಮಾಡಿ ತಿನ್ನಿ!

Masala tea cake

ಮಸಾಲಾ ಚಹಾ ಕೇಕ್

ಮಸಾಲೆ ಚಹಾದ ರುಚಿಯಿರುವ ಘಮವಿರುವ ಕೇಕ್‌ ಕೂಡಾ ತಯಾರಿಸಬಹುದು. ಚಹಾ ಪ್ರಿಯರಿಗೆ ಇದು ಖಂಡಿತ ಇಷ್ಟವಾಗಲೂಬಹುದು. ಕಾಫಿ ಫ್ಲೇವರ್‌ನ ಕೇಕ್‌ನಂತೆ ಈಗ ಚಹಾ ಪ್ರಿಯರಿಗೆ ಚಹಾ ಫ್ಲೇವರಿನ ಕೇಕುಗಳೂ ಕೆಲವೆಡೆ ಲಭ್ಯವಾಗುತ್ತಿವೆಯಂತೆ. ಹಾಗಾಗಿ ನೀವೂ ಕೇಕ್‌ ತಜ್ಞರಾಗಿದ್ದರೆ, ಮಾಡುವ ಅಭ್ಯಾಸ ನಿಮಗಿದ್ದರೆ ಒಮ್ಮೆ ಈ ರುಚಿಯನ್ನು ಪ್ರಯತ್ನಿಸಿ. ಈ ಕೇಕ್‌ ಅನ್ನು ರಬ್ಡೀ ಜೊತೆಗೆ ಸವಿದರೆ ಇನ್ನೂ ರುಚಿಯಂತೆ!

Cutting Chai Kulfi

ಕಟ್ಟಿಂಗ್‌ ಚಾಯ್‌ ಕುಲ್ಫಿ

ನೀವು ಮುಂಬೈಯ ಕಟ್ಟಿಂಗ್‌ ಚಾಯ್‌ ಪ್ರಿಯರಾಗಿದ್ದಲ್ಲಿ ಈ ಬಗೆಯ ಕುಲ್ಫಿ ಟ್ರೈ ಮಾಡಬಹುದು. ಕಟ್ಟಿಂಗ್‌ ಚಾಯ್‌ ತಯಾರಿಸಿ ಕುಲ್ಫಿ ಮೌಲ್ಡ್‌ಗಳಲ್ಲಿ ಹಾಕಿಟ್ಟು, ಅದಕ್ಕೆ ಇನ್ನೂ ಆಕರ್ಷಕವಾಗಿಸಲು ಗುಲಾಬಿದಳಗಳು, ಪಿಸ್ತಾ ಹಾಗೂ ಬಾದಾಮಿ ಚೂರುಗಳು ಮತ್ತಿತರ ಬೀಜಗಳನ್ನೂ ಸೇರಿಸಬಹುದು. ನಿಮ್ಮ ಚಹಾ ಕುಲ್ಫಿ ರೆಡಿ. ಬಗೆಬಗೆಯ ಫ್ಲೇವರ್‌ಗಳ ಕುಲ್ಫಿಗಳ ಜೊತೆಗೆ ಈಗ ಈ ಕಟ್ಟಿಂಗ್‌ ಚಾಯ್‌ ಕುಲ್ಫಿ ಕೂಡಾ ಟ್ರೆಂಡ್‌ನಲ್ಲಿದೆ. ಯುವಜನರನ್ನು ಆಕರ್ಷಿಸುತ್ತಿದೆ.

Masala Chai Cookies

ಮಸಾಲಾ ಚಾಯ್‌ ಕುಕ್ಕೀಸ್‌

ನಿಮ್ಮ ಚಹಾ ಟೈಮ್‌ಗೆ ನೀವು ತಿನ್ನುವ ಕುಕ್ಕೀಸ್‌ ಕೂಡಾ ಚಹಾ ಫ್ಲೇವರ್‌ನದ್ದೇ ಆಗಿದ್ದರೆ!? ವಾಹ್‌, ಎಂಥಾ ಐಡಿಯಾ ಎನ್ನುತ್ತೀರಾ? ಚಹಾ ಘಮವಿರುವ ಕುಕ್ಕೀಸ್‌ ಕೂಡಾ ತಯಾರು ಮಾಡಬಹುದು. ಸಂಜೆಯ ಹೊತ್ತು ಕೂತು ಚಹಾವನ್ನೂ ಜೊತೆಗೆ ಚಹಾದ ಘಮವಿರುವ ಕುಕ್ಕೀಸನ್ನೂ ಸವಿಯಬಹುದು!

Continue Reading

ಆಹಾರ/ಅಡುಗೆ

Dry Seeds: ಒಣ ಬೀಜಗಳನ್ನು ಅಡುಗೆಗೆ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ!

ಬೀಜಗಳನ್ನು (dry seeds) ಅಡುಗೆಗೆ ಬಳಸುವ ಸಂದರ್ಭದಲ್ಲಿ ಬಹಳಷ್ಟು ಜನ ತಪ್ಪುಗಳನ್ನು ಮಾಡಿ ಬಿಡುತ್ತಾರೆ. ಯಾವ ಬಗೆಯಲ್ಲಿ ಇದನ್ನು ಬಳಸಬೇಕು ಎಂಬ ಗೊಂದಲ ಕೆಲವರದ್ದು. ಈ ಬಗ್ಗೆ ಇಲ್ಲಿದೆ ಮಾಹಿತಿ.

VISTARANEWS.COM


on

Dry Seeds
Koo

ಬೀಜಗಳು ಕೇವಲ ಬೆಳಗಿನ ಹೊತ್ತು ನೆನೆಸಿಟ್ಟು ತಿನ್ನುವ ಅಥವಾ ಸ್ನ್ಯಾಕ್‌ ಟೈಮ್‌ಗೆ ತಿನ್ನುವ ಆಹಾರಗಳಷ್ಟೇ ಅಲ್ಲ. ಅವುಗಳನ್ನು ಸಾಕಷ್ಟು ರೀತಿಯಲ್ಲಿ ಬಗೆಬಗೆಯ ಆಹಾರ ಪದಾರ್ಥಗಳನ್ನು ಮಾಡುವಲ್ಲಿಯೂ ಪ್ರಧಾನ ಪದಾರ್ಥವಾಗಿ ಬಳಸುತ್ತೇವೆ. ಇವುಗಳು ಅನೇಕ ಖಾದ್ಯಗಳ ರುಚಿಯನ್ನು ಹೆಚ್ಚುಸುತ್ತವೆ. ಕೇವಲ ರುಚಿಯಷ್ಟೇ ಅಲ್ಲ, ಆಹಾರದ ಪೋಷಕಾಂಶಗಳ ಮಟ್ಟವನ್ನೂ ಇವು ಏರಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಅನೇಕ ಬಗೆಯ ಉತ್ತರ ಭಾರತೀಯ ಅಡುಗೆಗಳಲ್ಲಿ, ಸಬ್ಜಿ, ಗ್ರೇವಿಗಳಲ್ಲಿ ಬೀಜಗಳನ್ನು ಅದರ ರುಚಿ ಹಾಗೂ ಸಾಂದ್ರತೆಯನ್ನು ಹೆಚ್ಚು ಮಾಡಲು ಬಳಸಲಾಗುತ್ತದೆ. ಬೀಜಗಳಲ್ಲಿ ಗ್ಲುಟೆನ್‌ ಇಲ್ಲದೇ ಇರುವುದು ಹಾಗೂ ಇವು ಪೋಷಕಾಂಶಗಳಿಂದ ಭರಪೂರವಾಗಿರುವುದು ಕೂಡಾ ಇವುಗಳಿಂದ ಸಿಗುವ ಲಾಭ. ಆದರೆ, ಈ ಬೀಜಗಳನ್ನು ಅಡುಗೆಗೆ ಬಳಸುವ ಸಂದರ್ಭ ಹಲವರು ಕೆಲವು ತಪ್ಪುಗಳನ್ನು ಮಾಡಿ ಬಿಡುತ್ತಾರೆ. ಯಾವ ಬಗೆಯಲ್ಲಿ ಇದನ್ನು ಬಳಸಬೇಕು ಎಂಬ ಗೊಂದಲ ಕೆಲವರದ್ದು. ಬನ್ನಿ, ಬೀಜಗಳನ್ನು (dry seeds) ಅಡುಗೆಯಲ್ಲಿ ಬಳಸುವ ಸಂದರ್ಭ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ನೋಡೋಣ.

Dry seeds

ಹೆಚ್ಚು ಹುರಿಯಬೇಡಿ

ಒಣಬೀಜಗಳನ್ನು ಹಾಗೆಯೇ ತಿನ್ನುವುದು ಬಹಳ ರುಚಿ ನಿಜವೇ ಆದರೂ, ಅವುಗಳನ್ನು ಹುರಿದು ತಿನ್ನುವುದರಿಂದ ಇನ್ನಷ್ಟು ರುಚಿಯಾಗುತ್ತದೆ ಎಂಬುದು ಸತ್ಯವೇ ಆಗಿದೆ. ಆದರೆ, ಬೀಜಗಳನ್ನು ಹೆಚ್ಚು ಕಂದು ಬಣ್ಣ ಬರುವಂತೆ ಹುರಿದುಕೊಂಡು ಸೇರಿಸುವುದರಿಂದ ಕೆಲವರಿಗೆ ಹೆಚ್ಚು ರುಚಿಯಾಗುತ್ತದೆ ಎಂಬ ಯೋಚನೆ ಇರಬಹುದಾದರೂ, ಹಾಗೆ ಮಾಡುವುದರಿಂದ ಕೆಲವೊಮ್ಮೆ ಹೆಚ್ಚಾಗಿ ಹುರಿದುಬಿಡುವ ಸಂಭವವಿದೆ. ಹಾಗಾದಾಗ ಇದು ಕಹಿರುಚಿಗೆ ತಿರುಗಿಬಿಡುತ್ತದೆ. ಹಾಗಾಗಿ, ಬೀಜಗಳನ್ನು ಹುರಿಯುವಾಗ ಮಂದ ಉರಿಯಲ್ಲಿ ಹುರಿದುಕೊಂಡು ಹೊಂಬಣ್ಣಕ್ಕೆ ತಿರುಗುವಾಗ ತೆಗೆದುಬಿಡಿ. ಅಥವಾ ಸ್ವಲ್ಪವೇ ಸ್ವಲ್ಪ ಹುರಿದುಕೊಂಡು ತೆಗೆದುಬಿಡಿ. ಕಪ್ಪಗಾಗಲು ಬಿಡಬೇಡಿ.

ತಾಜಾ ಆಗಿರಲಿ

ಬೀಜಗಳು ಹಾಳಾಗುವುದಿಲ್ಲವೆಂದು ನೀವಂದುಕೊಂಡರೆ ಅದು ತಪ್ಪು. ತಾಜಾ ಆಗಿ ಬೀಜಗಳನ್ನು ಖರೀದಿಸಿ ಅವುಗಳನ್ನು ಆಗಾಗಲೇ ಬಳಸಿ. ಬಹಳ ಕಾಲ ಡಬ್ಬಗಳಲ್ಲಿ ಹಾಕಿಟ್ಟಾಗ ಅವುಗಳ ತಾಜಾತನ ಕಳೆದುಹೋಗಿ ರುಚಿ ಕೆಡುತ್ತದೆ. ಬೀಜಗಳಲ್ಲಿ ಎಣ್ಣೆಯಂಶ ಹೇರಳವಾಗಿ ಇರುವುದರಿಂದ ಅವುಗಳು ಹೆಚ್ಚು ಕಾಲವಾದರೆ ಕೆಟ್ಟ ವಾಸನೆ ಬರಲಾರಂಭಿಸುತ್ತದೆ. ಹಾಗಾಗಿ ಆದಷ್ಟೂ ಬೀಜಗಳನ್ನು ಆಗಾಗಲೇ ಬಳಸಿ. ಹೆಚ್ಚು ಬೀಜವಿದ್ದರೆ, ಫ್ರೀಜರ್‌ನಲ್ಲಿ ಶೇಖರಿಸಿಡಿ. ಗಾಳಿಯಾಡದ ಡಬ್ಬಗಳಲ್ಲಿ ಹಾಕಿಡಿ.

Dry Seeds

ಉಪ್ಪು ಹಾಕಿದ ಬೀಜ ಬಳಕೆ ಬೇಡ

ಉಪ್ಪು ಹಾಕಿದ ಬೀಜಗಳನ್ನು ಆಹಾರ ತಯಾರಿಸುವ ಸಂದರ್ಭ ಬಳಸಬೇಡಿ. ಹಸಿಯಾಗಿರುವ ತಾಜಾ ಬೀಜಗಳನ್ನು ಹಾಗೆಯೇ ಅಥವಾ ನೀವೇ ಹುರಿದುಕೊಂಡು ಬಳಸಿ. ಉಪ್ಪು ಹಾಕಿದ ಬೀಜಗಳನ್ನು ಬಳಸುವುದರಿಂದ ನಿಮ್ಮ ಆಹಾರದಲ್ಲಿ ಉಪ್ಪು ಹೆಚ್ಚಾಗುವ ಸಂಭವವಿದೆ. ಈ ಬಗ್ಗೆ ನಿಮಗೆ ಮೊದಲೇ ಅರಿವಾಗುವುದಿಲ್ಲ.

ಒಟ್ಟಿಗೇ ಹುರಿಯಬೇಡಿ

ಬೇರೆಬೇರೆ ಮಾದರಿಯ ಬೀಜಗಳನ್ನು ಒಟ್ಟಿಗೆ ಹುರಿಯುವ ತಪ್ಪು ಯಾವತ್ತೂ ಮಾಡಬೇಡಿ. ಯಾವುದಾದರೂ ಡಿಶ್‌ ತಯಾರಿಸುವ ಸಂದರ್ಭ ಬಗೆಬಗೆಯ ಬೀಜಗಳನ್ನು ಹಾಕುವ ಸಂದರ್ಭ ಬೇರೆ ಬೇರೆ ಬೇಜಗಳ್ನು ಬೇರೆ ಬೇರೆಯಾಗಿ ಹುರಿಯಿರಿ. ಆಗ, ಬೀಜಗಳನ್ನು ಸರಿಯಾದ ಹದದಲ್ಲಿ ಹುರಿಯಬಹುದು. ಒಂದೊಂದು ಬೀಜ ಬೇಗನೆ ಕಪ್ಪಗಾದರೆ, ಇನ್ನೂ ಕೆಲವಕ್ಕೆ ಹೆಚ್ಚು ಶಾಖ ಹೆಚ್ಚು ಹೊತ್ತು ಬೇಕಾಗುತ್ತದೆ. ಗಡಿಬಿಡಿಯಲ್ಲಿ ಹಾಗೆ ಮಾಡಿ ಆಹಾರವೇ ಕೆಟ್ಟು ಹೋಗಬಹುದು. ನಿಧಾನವಾಗಿ ಒಂದೊಂದನ್ನೇ ಸರಿಯಾದ ಪ್ರಮಾಣದಲ್ಲಿ ಮಂದ ಉರಿಯಲ್ಲಿ ಹುರಿಯಿರಿ.

You can drink water on an empty stomach in the morning and eat soaked grapes Health Benefits Of Raisin Water

ಸರಿಯಾಗಿ ನೆನೆಸಿ

ಕೆಲವು ಗ್ರೇವಿಗಳಿಗೆ ಬೀಜಗಳನ್ನು ನೆನೆಸಿಕೊಳ್ಳುವುದು ಒಳ್ಳೆಯದು. ಗಡಿಬಿಡಿಯಲ್ಲಿ ನೆನೆಸದೆ, ಹಾಗೆಯೇ ಅವನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಲು ಹೊರಟರೆ ಪರಿಸ್ಥಿತಿ ಕೈಮೀರುತ್ತದೆ. ಹಾಗಾಗಿ ಗ್ರೇವಿ ಮಾಡುವ 30 ನಿಮಿಷ ಮೊದಲೇ ಬೀಜವನ್ನು ಬಿಸಿ ನೀರಿನಲ್ಲಿ ನೆನೆ ಹಾಕಿಡಿ. ಆಗ ಬಹುಬೇಗನೆ ಅವು ಮೆತ್ತಗಾಗುತ್ತವೆ. ಜೊತೆಗೆ ಚೆನ್ನಾಗಿ ರುಬ್ಬಿಕೊಳ್ಳಲು ಸಾಧ್ಯವಾಗುತ್ತದೆ.

Continue Reading

ಪ್ರಮುಖ ಸುದ್ದಿ

Zomato : ಪ್ಯೂರ್​ ವೆಜ್​ ಫುಡ್​ ಮಾತ್ರ ವಿತರಿಸುವ ಹೊಸ ಯೋಜನೆ ಘೋಷಿಸಿದ ಜೊಮ್ಯಾಟೊ

Zomato : ಫ್ಯೂರ್ ವೆಜ್ ಮೋಡ್​ನ ಪಟ್ಟಿಯಲ್ಲಿ ಯಾವುದೇ ನಾನ್​ವೆಜ್​ ಹೋಟೆಲ್​ಗಳು ಇರುವುದಿಲ್ಲ ಎಂಬುದಾಗಿ ಜೊಮ್ಯಾಟೊ ಹೇಳಿದೆ.

VISTARANEWS.COM


on

Zomato Deli vary
Koo

ಬೆಂಗಳೂರು: ಆನ್​ಲೈನ್ ಬುಕಿಂಗ್ ಮೂಲಕ ಆಹಾರ ವಿತರಣೆ ಮಾಡುವ ಕಂಪನಿ ಜೊಮ್ಯಾಟೊ (Zomato) ನೂರಕ್ಕೆ 100ರಷ್ಟು ಸಸ್ಯಾಹಾರಿ ಆಹಾರವನ್ನು ಗ್ರಾಹಕರಿಗೆ ಪೂರೈಸುವ ‘ಪ್ಯೂರ್ ವೆಜ್ ಮೋಡ್’ ಮತ್ತು ‘ಪ್ಯೂರ್ ವೆಜ್ ಫ್ಲೀಟ್’ (Pure Veg Mode Pure Veg Fleet) ಅನ್ನು ಘೋಷಿಸಿದೆ. ಜೊಮ್ಯಾಟೊ ಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್ ಮಂಗಳವಾರ ಎಕ್ಸ್ (ಈ ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿತ್ತು) ನಲ್ಲಿ ಈ ಪ್ರಕಟಣೆಯನ್ನು ಹೊರಡಿಸಿದ್ದಾರೆ.

“ಭಾರತವು ವಿಶ್ವದಲ್ಲೇ ಅತಿಹೆಚ್ಚು ಸಸ್ಯಾಹಾರಿಗಳನ್ನು ಹೊಂದಿರುವ ದೇಶ. ಅವರೆಲ್ಲರಿಗೂ ತಮ್ಮ ಆಹಾರವನ್ನು ಹೇಗೆ ಬೇಯಿಸಲಾಗುತ್ತದೆ ಮತ್ತು ಆಹಾರವನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬುದರ ಕಾಳಜಿಯಿತ್ತು. ಅದಕ್ಕೆ ಪರಿಹಾರವಾಗಿ ವೆಜ್ ಆರಂಭಿಸಲಾಗಿದೆ ಎಂದು ಹೇಳಿದರು.

ದೇಶದಲ್ಲಿ ಸಸ್ಯಾಹಾರಿಗಳಿಂದ ಪಡೆದ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ಈ ಸೇವೆಯನ್ನು ಪ್ರಾರಂಭಿಸಲಾಗಿದೆ ಎಂದು ಆಹಾರ ವಿತರಣಾ ಕಂಪನಿಯ ಸಂಸ್ಥಾಪಕರು ಹೇಳಿದ್ದಾರೆ.

“ಗ್ರಾಹಕರ ಆಹಾರದ ಆದ್ಯತೆಗಳನ್ನು ಪರಿಹರಿಸಲು, ನಾವು ಇಂದು ಜೊಮ್ಯಾಟೊದಲ್ಲಿ “ಪ್ಯೂರ್ ವೆಜ್ ಫ್ಲೀಟ್” ಜೊತೆಗೆ “ಪ್ಯೂರ್ ವೆಜ್ ಮೋಡ್” ಅನ್ನು ಪ್ರಾರಂಭಿಸುತ್ತಿದ್ದೇವೆ. ಶೇಕಡಾ 100 ರಷ್ಟು ಸಸ್ಯಾಹಾರಿ ಆಹಾರ ಆದ್ಯತೆಯನ್ನು ಹೊಂದಿರುವ ಗ್ರಾಹಕರಿಗಾಗಿ ಈ ಸೇವೆ” ಎಂದು ದೀಪಿಂದರ್ ಗೋಯಲ್ ಹೇಳಿದರು.

ವೆಜ್ ಹೋಟೆಲ್ ಮಾತ್ರ ಪಟ್ಟಿಯಲ್ಲಿ

ಶುದ್ಧ ಸಸ್ಯಾಹಾರಿ ಮೋಡ್ ನಲ್ಲಿರುವ ರೆಸ್ಟೋರೆಂಟ್ ಗಳು ಸಸ್ಯಾಹಾರಿ ಆಹಾರವನ್ನು ಮಾತ್ರ ಬೇಯಿಸುವ ಮತ್ತು ಬಡಿಸುವ ಮಳಿಗೆಗಳ ಪಟ್ಟಿಯನ್ನು ಒಳಗೊಂಡಿರುತ್ತವೆ. ಪ್ಯೂರ್ ವೆಜ್ ಮೋಡ್ ಶುದ್ಧ ಸಸ್ಯಾಹಾರಿ ಆಹಾರವನ್ನು ಮಾತ್ರ ಪೂರೈಸುವ ರೆಸ್ಟೋರೆಂಟ್​ಗಳ ಕ್ಯೂರೇಶನ್ ಅನ್ನು ಒಳಗೊಂಡಿರುತ್ತದೆ. ಯಾವುದೇ ಮಾಂಸಾಹಾರಿ ಆಹಾರ ಪದಾರ್ಥವನ್ನು ಪೂರೈಸುವ ಎಲ್ಲಾ ರೆಸ್ಟೋರೆಂಟ್​ಗಳನ್ನು ಸೇರಿಸುವುದಿಲ್ಲ ಎಂದು ಗೋಯಲ್ ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : Chinese visa scam : ಚೀನಾ ವೀಸಾ ಹಗರಣ: ಕಾರ್ತಿ ಚಿದಂಬರಂ ಸೇರಿ ಹಲವರಿಗೆ ಕೋರ್ಟ್​​ ಸಮನ್ಸ್

ಹೊಸದಾಗಿ ಪ್ರಾರಂಭಿಸಲಾದ ಸೇವೆಯು ಯಾವುದೇ ಧಾರ್ಮಿಕ ಅಥವಾ ರಾಜಕೀಯ ಆದ್ಯತೆಯ ವಿರುದ್ಧ ತಾರತಮ್ಯ ಮಾಡುವುದಿಲ್ಲ ಎಂದು ಗೋಯಲ್ ಹೇಳಿದ್ದಾರೆ. “ಈ ಪ್ಯೂರ್ ವೆಜ್ ಮೋಡ್ ಅಥವಾ ಪ್ಯೂರ್ ವೆಜ್ ಫ್ಲೀಟ್ ಯಾವುದೇ ಧಾರ್ಮಿಕ ಅಥವಾ ರಾಜಕೀಯ ಬೇಡಿಕೆಗಳನ್ನು ಪೂರೈಸುವುದಿಲ್ಲ. ಇನ್ನೊಬ್ಬರಿಗೆ ತಾರತಮ್ಯ ಮಾಡುವುದಿಲ್ಲ” ಎಂದು ಅವರು ಹೇಳಿದರು.

“ಭವಿಷ್ಯದಲ್ಲಿ, ಗ್ರಾಹಕರ ಅಗತ್ಯಗಳಿಗಾಗಿ ಅನುಗುಣವಾಗಿ ವಿಶೇಷ ಫ್ಲೀಟ್​ಗಳನ್ನು ಸೇರಿಸಲು ನಾವು ಯೋಜಿಸಿದ್ದೇವೆ. ಉದಾಹರಣೆಗೆ, ಹೈಡ್ರಾಲಿಕ್ ಬ್ಯಾಲೆನ್ಸ್​​ಗಳೊಂದಿಗೆ ವಿಶೇಷ ಕೇಕ್ ವಿತರಣಾ ಫ್ಲೀಟ್ ತಯಾರಾಗಿದೆ. ಇದು ವಿತರಣೆಯ ಸಮಯದಲ್ಲಿ ನಿಮ್ಮ ಕೇಕ್ ಹಾಳಾಗದಂತೆ ತಡೆಯುತ್ತದೆ ಎಂದು ಗೋಯಲ್ ಹೇಳಿದರು. ಮುಂದಿನ ಕೆಲವು ವಾರಗಳಲ್ಲಿ ವಿಶೇಷ ಕೇಕ್ ವಿತರಣಾ ಫ್ಲೀಟ್ ಲೈವ್ ಆಗಲಿದೆ ಎಂದು ಅವರು ಬಹಿರಂಗಪಡಿಸಿದರು

Continue Reading
Advertisement
Rajasthan Royals
ಪ್ರಮುಖ ಸುದ್ದಿ7 mins ago

IPL 2024 : ಬದಲಿ ಆಟಗಾರರನ್ನು ಘೋಷಿಸಿದ ರಾಜಸ್ಥಾನ್​ ರಾಯಲ್ಸ್​, ಕೆಕೆಆರ್​​

SBI Debit Cards
ವಾಣಿಜ್ಯ10 mins ago

SBI Debit Cards: ಎಸ್‌ಬಿಐ ಡೆಬಿಟ್‌ ಕಾರ್ಡ್‌ದಾರರಿಗೆ ಬ್ಯಾಡ್‌ ನ್ಯೂಸ್‌; ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!

Rishabh Pant -IPL 2024
ಕ್ರೀಡೆ41 mins ago

Rishabh Pant : ಡೆಲ್ಲಿ ಪರ 100ನೇ ಪಂದ್ಯವಾಡಿದ ರಿಷಭ್ ಪಂತ್​!

Parliament Flashback
ಕರ್ನಾಟಕ1 hour ago

Parliament Flashback: ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಗೆದ್ದು, ಬಿಜೆಪಿಯಿಂದ ಸ್ಪರ್ಧಿಸಿದಾಗ ಸೋತು ಹೋಗಿದ್ದ ಒಡೆಯರ್‌!

Lok Sabha Election 2024 HD Kumaraswamy to file nomination for Mandya Lok Sabha seat on April 4
ಕರ್ನಾಟಕ1 hour ago

Lok Sabha Election 2024: ಮಂಡ್ಯದಲ್ಲಿ ಜೆಡಿಎಸ್-ಬಿಜೆಪಿ ಮುಖಂಡರ ಸಮನ್ವಯ ಸಭೆ ಯಶಸ್ವಿ; ಏ. 4ಕ್ಕೆ ಹೆಚ್ಡಿಕೆ ನಾಮಪತ್ರ ಸಲ್ಲಿಕೆ

IPL 2024- Jayadev Unadkat
ಕ್ರೀಡೆ2 hours ago

IPL 2024 : ಐಪಿಎಲ್ ಇತಿಹಾಸದಲ್ಲಿ ವಿಭಿನ್ನ ಸಾಧನೆ ಮಾಡಿದ ಎಸ್​ಆರ್​​ಎಚ್​​ ಬೌಲರ್​ ಉನಾದ್ಕಟ್​

bengaluru dc
ಬೆಂಗಳೂರು2 hours ago

Hindu Temple: ಜಾತ್ರೆ, ಉತ್ಸವಗಳಲ್ಲಿ ಹಿಂದುಯೇತರರ ಅಂಗಡಿಗೆ ಅನುಮತಿ ನೀಡಬೇಡಿ; ಜಿಲ್ಲಾಧಿಕಾರಿಗೆ ಮನವಿ

minister Lakshmi hebbalkar latest statement
ಬೆಳಗಾವಿ2 hours ago

Belagavi News: ಕರ್ಮಭೂಮಿ ಎನ್ನಲು ಏನಿದೆ ಬೆಳಗಾವಿಗೆ ನಿಮ್ಮ ಕೊಡುಗೆ? ಶೆಟ್ಟರ್‌ಗೆ ಹೆಬ್ಬಾಳ್ಕರ್ ಪ್ರಶ್ನೆ

Chikkaballapura lok sabha constituency congress ticket aspirants Sivasankar Reddy Veerappa Moily and Raksha Ramayya
Lok Sabha Election 20242 hours ago

Lok Sabha Election 2024: ಕಾಂಗ್ರೆಸ್‌ಗೆ ಚಿಕ್ಕಬಳ್ಳಾಪುರ ಟೆನ್ಶನ್‌; ಟಿಕೆಟ್‌ ಸಿಗದಿದ್ದರೆ ಪಕ್ಷ ತೊರೆಯುವ ಎಚ್ಚರಿಕೆ ಕೊಟ್ಟ ಶಿವಶಂಕರ ರೆಡ್ಡಿ!

Karnataka Weather
ಮಳೆ2 hours ago

Karnataka Weather : ಕಲಬುರಗಿಯಲ್ಲಿ 40ರ ಗಡಿದಾಟಿದ ತಾಪಮಾನ; 4 ಜಿಲ್ಲೆಗಳಿಗೆ ಹೀಟ್‌ ವೇವ್‌ ಅಲರ್ಟ್‌

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20247 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20248 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ16 hours ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20241 day ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20241 day ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20241 day ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು2 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

Lok Sabha Election 2024 Sanganna Karadi rebels quell and assure to support koppala BJP Candidate
Lok Sabha Election 20243 days ago

Lok Sabha Election 2024: ರಾಜ್ಯಸಭೆ ಇಲ್ಲವೇ ಪರಿಷತ್‌ ಸ್ಥಾನದ ಭರವಸೆ; ತಣ್ಣಗಾದ ಕರಡಿ! ಅಭ್ಯರ್ಥಿ ಪರ ಪ್ರಚಾರಕ್ಕೆ ಜೈ

ಟ್ರೆಂಡಿಂಗ್‌