Valentine's Day 2024 : ಫೆಬ್ರುವರಿ 14 ರಂದೇ ಪ್ರೇಮಿಗಳ ದಿನ ಆಚರಿಸುವುದು ಯಾಕೆ? ಅದರ ಮಹತ್ವವೇನು? - Vistara News

ಲೈಫ್‌ಸ್ಟೈಲ್

Valentine’s Day 2024 : ಫೆಬ್ರುವರಿ 14 ರಂದೇ ಪ್ರೇಮಿಗಳ ದಿನ ಆಚರಿಸುವುದು ಯಾಕೆ? ಅದರ ಮಹತ್ವವೇನು?

Valentine’s Day : ಒಂದು ವಾರದ ಕಾಲ ನಡೆಯುವ ಪ್ರೇಮಿಗಳ ದಿನದ ಬಗ್ಗೆ ಹಲವಾರು ದಂತಕತೆಗಳಿವೆ. ಒಬ್ಬೊಬ್ಬರು ಒಂದೊಂದು ಕತೆಯನ್ನು ಹೇಳುತ್ತಾರೆ.

VISTARANEWS.COM


on

Valentine's Day
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ವ್ಯಾಲೆಂಟೈನ್ಸ್ ಡೇ ಅಥವಾ ಸೇಂಟ್ ವ್ಯಾಲೆಂಟೈನ್ ಹಬ್ಬ ಎಂದೂ ಕರೆಯಲ್ಪಡುವ ಪ್ರೇಮಿಗಳ ದಿನವನ್ನು ಪ್ರತಿವರ್ಷ ಫೆಬ್ರವರಿ 14ರಂದು (Valentine’s Day 2024 ) ಆಚರಿಸಲಾಗುತ್ತದೆ. ಆದರೆ ಪ್ರೀತಿಯ ಹಬ್ಬ ಫೆಬ್ರವರಿ 7ಕ್ಕೆ ಅಂದರೆ ಒಂದು ವಾರ ಮುಂಚಿತವಾಗಿ ಪ್ರಾರಂಭವಾಗುತ್ತವೆ. ಈ ಎಲ್ಲ ದಿನಗಳಂದು ಪ್ರೇಮಿಗಳು ಶುಭಾಶಯ ಗ್ರೀಟಿಂಗ್ಸ್​​ ಕಾರ್ಡ್ ಗಳು (Greeting Cards) ಮತ್ತು ಗುಲಾಬಿ ಹೂವುಗಳನ್ನು (Roses) ಪರಸ್ಪರ ಹಂಚಿಕೊಳ್ಳುತ್ತಾರೆ. ಅಲ್ಲದೆ, ಪರಸ್ಪರ ಪ್ರೀತಿಯನ್ನು ಅಭಿವ್ಯಕ್ತಿಸಲು ವಿಶೇಷ ಸಮಯವನ್ನು ಮೀಸಲಿಡುತ್ತಾರೆ.

ಪ್ರಸ್ತಕ ವರ್ಷ ಪ್ರೇಮಿಗಳ ದಿನ ಫೆಬ್ರವರಿ 14ರ ಪ್ರೇಮಿಗಳ ದಿನ ಬುಧವಾರದಂದು ಬರುತ್ತದೆ. ಆದಾಗ್ಯೂ, ಪ್ರೇಮಿಗಳ ದಿನವನ್ನು ಕೇವಲ ಒಂದು ದಿನಕ್ಕೆ ಸೀಮಿತವಾಗಿಲ್ಲ. “ವ್ಯಾಲೆಂಟೈನ್ಸ್ ಡೇ ವೀಕ್” (Valentine’s Day week) ಎಂದು ಇಡೀ ವಾರದವರೆಗೆ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ, “ಲವ್ ವೀಕ್” ಅಥವಾ ” ರೊಮ್ಯಾನ್ಸ್​ ವೀಕ್​” ಎಂದೂ ಕರೆಯಲ್ಪಡುವ ವ್ಯಾಲೆಂಟೈನ್ಸ್ ವೀಕ್ ಫೆಬ್ರವರಿ 7ರಂದು ಪ್ರಾರಂಭಗೊಂಡಿದೆ. ಇದನ್ನು ಫೆಬ್ರವರಿ 14 ರ ಕೊನೆಯ ವ್ಯಾಲೆಂಟೈನ್ ಡೇ ತನಕ ಆಚರಿಸಲಾಗುತ್ತಿದೆ. ಅದಕ್ಕೂ ಮೊದಲು ರೋಸ್ ಡೇ, ಪ್ರಪೋಸ್ ಡೇ, ಚಾಕೊಲೇಟ್ ಡೇ, ಟೆಡ್ಡಿ ಡೇ, ಪ್ರಾಮಿಸ್ ಡೇ, ಹಗ್ ಡೇ ಮತ್ತು ಕಿಸ್ ಡೇ ಅನ್ನು ಆಚರಿಸಿದ್ದಾರೆ.

ಫೆಬ್ರವರಿ 14ರಂದೇ ಪ್ರೇಮಿಗಳ ದಿನವನ್ನು ಏಕೆ ಆಚರಿಸಲಾಗುತ್ತದೆ?

ಪ್ರತಿ ವರ್ಷ ಪ್ರೇಮಿಗಳ ದಿನವನ್ನು ಬಹಳ ಪ್ರೀತಿಯಿಂದ ಆಚರಿಸಲಾಗುತ್ತದೆ. ಈ ವಿಶೇಷ ದಿನವು ವ್ಯಕ್ತಿಯಿಂದ ವ್ಯಕ್ತಿಗೆ ಹಂಚಿಕೊಳ್ಳುವ ಅತ್ಯಂತ ಸುಂದರವಾದ ಭಾವನೆಯಾದ ಪ್ರೀತಿಯನ್ನು ವ್ಯಕ್ತಪಡಿಸಲು ಮತ್ತು ಅನುಭವಿಸಲು ಮೀಸಲಾಗಿದೆ. ಪ್ರೀತಿಯನ್ನು ಹಂಚಿಕೊಳ್ಳುವುದಕ್ಕೆ ಇದೇ ದಿನ ಯಾಕೆ ಎಂಬುದು ಎಲ್ಲರ ಪ್ರಶ್ನೆ. ಆದರೆ ಅದಕ್ಕೊಂದು ಹಿನ್ನೆಲೆಯಿದೆ. ಆದರೆ, ಈ ಬಗ್ಗೆ ಹಲವಾರು ಕತೆಗಳನ್ನು ಹೇಳಲಾಗುತ್ತದೆ.

ಕ್ರಿ.ಶ. 14, 270 ರಂದು ನಿಧನರಾದ ಮೂರನೇ ಶತಮಾನದ ರೋಮನ್ ಕ್ಯಾಥೊಲಿಕ್ ಪಾದ್ರಿ ಸೇಂಟ್ ವ್ಯಾಲೆಂಟೈನ್ ಅವರ ಗೌರವಾರ್ಥವಾಗಿ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ ಎಂದು ನಂಬಲಾಗಿದೆ. ಇನ್ನೊಂದು ನಂಬಿಕೆ ಪ್ರಕಾರ ರೋಮ್​ನಲ್ಲಿ ಲುಪರ್ಕಾಲಿಯಾ ಎಂಬ ಆಚರಣೆಯೊಂದಿತ್ತು. ಇಲ್ಲಿ ಪುರುಷ ಮತ್ತು ಮಹಿಳೆಯನ್ನು ಲಾಟರಿ ಎತ್ತುವ ಮೂಲಕ ಜೋಡಿ ಮಾಡಲಾಗುತ್ತಿತ್ತು. ಇವುಗಳಲ್ಲಿ ಕೆಲವು ಮದುವೆಯಲ್ಲಿ ಕೊನೆಗೊಳ್ಳುತ್ತಿತ್ತು. ಪೋಪ್‌ ಗೆಲಾಸಿಯಸ್‌ 1 ಈ ಹಬ್ಬವನ್ನು ವ್ಯಾಲೆಂಟೈನ್ಸ್‌ ಆಗಿ ಬದಲಿಸಿದರು ಎಂದು ಹೇಳಲಾಗುತ್ತದೆ. ಈ ಕಥೆಯ ಪ್ರಕಾರ 14ನೇ ಶತಮಾನದ ಅವಧಿಯಲ್ಲಿ ವ್ಯಾಲೆಂಟೈನ್ಸ್‌ ಡೇ ಆಚರಣೆ ಶುರುವಾಯಿತು.

ಇನ್ನೊಂದು ಕತೆಯ ಪ್ರಕಾರ ರೋಮ್‌ ದೇಶದ ದೊರೆ ಕ್ಲಾಡಿಯಸ್ II ತನ್ನ ಸೈನಿಕರು ಯಾರೂ ಮದುವೆಯಾಗಬಾರದು ಎಂಬ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದ್ದ. ಅಂತಹ ಸಮಯದಲ್ಲಿ ರಾಜನನ್ನೇ ಎದುರು ಹಾಕಿಕೊಂಡ ಸೇಂಟ್‌ ವ್ಯಾಲೆಂಟೈನ್‌ ಗುಟ್ಟಾಗಿ ಸೈನಿಕರಿಗೆ ಮದುವೆ ಮಾಡಿಸುತ್ತಿದ್ದರು. ಸೈನಿಕರ ಬದುಕಿನಲ್ಲೂ ಪ್ರೇಮ ಮೂಡುವಂತೆ ಮಾಡುತ್ತಿದ್ದರು. ಇದನ್ನು ತಿಳಿದ ರಾಜ ಕ್ಲಾಡಿಯಸ್‌ ವಾಲೈಂಟೈನ್‌ ಅವರನ್ನು ಫೆ. 14 ರಂದು ಗಲ್ಲಿಗೇರಿಸುತ್ತಾನೆ. ಆ ದಿನದಿಂದ ಪ್ರೇಮಿಗಳ ದಿನ ಆಚರಣೆಗೆ ಬಂತು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ : Valentines Day: ಕೇಳಿ ಪ್ರೇಮಿಗಳೇ, ಇಲ್ಲಿದೆ ಗುಡ್‌ನ್ಯೂಸ್! ಈ ವಾರ ಪ್ರತಿದಿನವೂ ಪ್ರೇಮಿಗಳ ಹಬ್ಬವೇ!

ವ್ಯಾಲೆಂಟೈನ್ಸ್‌ ಡೇ ಎಂಬುದು ಪ್ರೀತಿಯ ದೇವತೆ ಕ್ಯುಪಿಡ್‌ನಿಂದಲೂ ಬಂದಿದೆ ಎನ್ನಲಾಗುತ್ತದೆ. ರೋಮನ್‌ ಪುರಾಣದ ಪ್ರಕಾರ ಕ್ಯುಪಿಡ್‌ ಶುಕ್ರನ ಮಗ. ಇವನು ಪ್ರೀತಿ ಹಾಗೂ ಸೌಂದರ್ಯದ ದೇವತೆ . ಕ್ಯುಪಿಡ್‌ ಬಿಡುವ ಬಾಣ ಹೃದಯಕ್ಕೆ ನಾಟಿದರೆ ಪ್ರೀತಿ ಬಿತ್ತುತ್ತದೆಹೀಗಾಗಿ ಈ ದೇವತೆಯ ಹೆಸರಿನಲ್ಲಿ ವ್ಯಾಲೆಂಟೈನ್ ಡೇ ಆಚರಿಸಲಾಗುತ್ತದೆ.

ಟೀಕೆಯೂ ಎದುರಾಗುತ್ತದೆ

ಕೃಷಿಯ ದೇವರಾದ ಫೌನಸ್, ರೋಮುಲಸ್ ಮತ್ತು ರೋಮ್​​ನ ಸ್ಥಾಪಕರಾದ ರೆಮಸ್​​ಗೆ ಸಮರ್ಪಿತವಾದ ರೋಮನ್ ಹಬ್ಬವಾದ ಲುಪರ್ಕಾಲಿಯಾ ರಜಾದಿನವನ್ನು ‘ಕ್ರಿಶ್ಚಿಯನೀಕರಣ’ ಮಾಡುವ ಚರ್ಚ್​​ನ ಪ್ರಯತ್ನವಾಗಿ ಈ ಆಚರಣೆ ಹುಟ್ಟಿಕೊಂಡವು ಎಂಬ ವಾದವೂ ಇದೆ. ಇದು ಪಾಶ್ಚಿಮಾತ್ಯ ಸಂಸ್ಕೃತಿ ಎಂದೂ ಆರೋಪಿಸುತ್ತಾರೆ.

ಪ್ರೇಮಿಗಳ ದಿನ ಯುವ ಜೋಡಿಗೆ ಮಾತ್ರ ಸೀಮಿತವೇ?

ಜನಪ್ರಿಯ ಸಂಸ್ಕೃತಿಯು ಪ್ರೇಮಿಗಳ ದಿನವು ಪ್ರೀತಿಯಲ್ಲಿ ಬಿದ್ದಿರುವ ಯುವ ಜೋಡಿಗೆ ಮಾತ್ರ ಎಂದು ನಂಬುವಂತೆ ಮಾಡುತ್ತದೆ. ಇದು ಪ್ರೀತಿಯ ದಿನ ಮತ್ತು ಆ ಪ್ರೀತಿ ಯಾರೊಂದಿಗ ಇದ್ದರೂ ವ್ಯಕ್ತಪಡಿಸಬಹುದು. ಎಲ್ಲಾ ರೀತಿಯ ಪ್ರೀತಿಯನ್ನು ಆಚರಿಸಬೇಕು; ಅದು ನಿಮ್ಮ ಹೆತ್ತವರು, ನಿಮ್ಮ ಒಡಹುಟ್ಟಿದವರು ಅಥವಾ ನಿಮ್ಮ ಮಕ್ಕಳು ಯಾರೂ ಇರಬಹುದು ಎಂದು ಹೇಳಲಾಗುತ್ತದೆ.

ಪ್ರೇಮಿಗಳ ವಾರದ ವಿವರ ಇಲ್ಲಿದೆ

ದಿನ 1: ರೋಸ್ ಡೇ, ಫೆಬ್ರವರಿ 7
ರೋಸ್ ಡೇ ವ್ಯಾಲೆಂಟೈನ್ಸ್ ವೀಕ್ ನ ಮೊದಲ ದಿನವಾಗಿದ್ದು ಫೆಬ್ರವರಿ 7ರಂದು ಆಚರಿಸಲಾಗುತ್ತದೆ. ಈ ದಿನ ಇಬ್ಬರು ಪ್ರೇಮಿಗಳು ಪರಸ್ಪರ ಗುಲಾಬಿಗಳನ್ನು ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.

ದಿನ 2: ಪ್ರಪೋಸ್ ಡೇ, ಫೆಬ್ರವರಿ 8
ಪ್ರಪೋಸ್ ಡೇ ವ್ಯಾಲೆಂಟೈನ್ಸ್ ವೀಕ್ ನ ಎರಡನೇ ದಿನವಾಗಿದೆ. ಇದನ್ನು ಅತ್ಯಂತ ವಿಶೇಷ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಪ್ರೇಮಿಗಳು ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ಪ್ರೀತಿಯನ್ನು ನಿವೇದಿಸುತ್ತಾರೆ.

ದಿನ 3: ಚಾಕೊಲೇಟ್ ಡೇ, ಫೆಬ್ರವರಿ 9
ಚಾಕೊಲೇಟ್ ಡೇ ವ್ಯಾಲೆಂಟೈನ್ಸ್ ವೀಕ್ ನ ಮೂರನೇ ದಿನ. ಪ್ರೀತಿ ನಿವೇದನೆಯಲ್ಲಿ ಯಶಸ್ವಿ ಆದರೂ ಆಗದಿದ್ದರೂ ಪ್ರೇಮಿಗಳು ಚಾಕೊಲೆಟ್ ಪೆಟ್ಟಿಯೊಂದಿಗೆ ತಮ್ಮ ಪ್ರೀತಿಯನ್ನು ಅಭಿವ್ಯಕ್ತಿಸುತ್ತಾರೆ.

ದಿನ 4: ಟೆಡ್ಡಿ ಡೇ, ಫೆಬ್ರವರಿ 10
ಟೆಡ್ಡಿ ಡೇ ವ್ಯಾಲೆಂಟೈನ್ಸ್ ಡೇ ವಾರದ ನಾಲ್ಕನೇ ದಿನ; ಇದನ್ನು ಫೆಬ್ರವರಿ 10ರಂದು ಆಚರಿಸಲಾಗುತ್ತದೆ. ಪ್ರಿಯತಮ ಟೆಡ್ಡಿಯನ್ನು (ಬೊಂಬೆಯನ್ನು) ಪ್ರಿಯತಮೆಗೆ ನೀಡುವ ದಿನ. ಅದನ್ನು ಆಕೆ ಜೀವನಪರ್ಯಂತ ಇಟ್ಟುಕೊಳ್ಳುವಂತೆ ಕೇಳಿಕೊಳ್ಳಬಹುದು.

ದಿನ 5: ಪ್ರಾಮಿಸ್ ಡೇ, ಫೆಬ್ರವರಿ 11
ಫೆಬ್ರವರಿ 11ರಂದು, ಪ್ರೇಮಿಗಳು ಕಷ್ಟ ಮತ್ತು ಸುಖದ ಕಾಲದಲ್ಲಿ ಜತೆಯಾಗಿಯೇ ಇರುತ್ತೇವೆ ಎಂಬುದನ್ನು ಪರಸ್ಪರ ಪ್ರಮಾಣ ಮಾಡುತ್ತಾರೆ.

ದಿನ 6: ಅಪ್ಪುಗೆ ದಿನ, ಫೆಬ್ರವರಿ 12
ವ್ಯಾಲೆಂಟೈನ್ಸ್ ವೀಕ್ ನ ಆರನೇ ದಿನ ಅಪ್ಪುಗೆ ದಿನ. ಈ ದಿನ, ಜನರು ತಮ್ಮ ಪ್ರೀತಿಪಾತ್ರರನ್ನು ತಬ್ಬಿಕೊಳ್ಳುವ ಮೂಲಕ ಪ್ರೀತಿ ವ್ಯಕ್ತಪಡಿಸುತ್ತಾರೆ. ಪ್ರೀತಿಸುವವರನ್ನು ತಬ್ಬಿಕೊಳ್ಳುವುದು ತುಂಬಾ ಸಂತೋಷದ ಕ್ಷಣವೆಂದು ಹೇಳಲಾಗುತ್ತದೆ.

ದಿನ 7: ಕಿಸ್ ಡೇ, ಫೆಬ್ರವರಿ 13
ವ್ಯಾಲೆಂಟೈನ್ಸ್ ವೀಕ್ ನ ಏಳನೇ ದಿನವನ್ನು “ಕಿಸ್ ಡೇ” ಎಂದು ಆಚರಿಸಲಾಗುತ್ತದೆ. ಕಿಸ್ ಡೇ ದಿನ ಪ್ರೀಮಿಗಳು ಪರಸ್ಪರ ಚುಂಬಿಸುತ್ತಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

Drinks for Summer: ಬೇಸಿಗೆಯಲ್ಲಿ ತಂಪಾಗಿರಬೇಕೆ? ಈ ಪೇಯಗಳನ್ನು ತಪ್ಪದೇ ಕುಡಿಯಿರಿ

ಸುಡು ಬೇಸಿಗೆ ಸಹಿಸಲಸಾಧ್ಯ ಎಂಬಂತಾಗಿದೆ. ಏನೂ ತಿನ್ನುವುದೇ ಬೇಡ, ತಂಪಾಗಿ ಕುಡಿಯುವುದಕ್ಕೆ ಇದ್ದರೆ ಸಾಕು ಎನ್ನುವ ಈ ದಿನಗಳಲ್ಲಿ ದೇಹ ಬಳಲದಂತೆ ಕಾಪಾಡುವುದು ಹೇಗೆ? ಇಲ್ಲಿವೆ ಹಲವು ರೀತಿಯ ಆರೋಗ್ಯಕರ ಪೇಯಗಳು. ಇವು ಬೇಸಿಗೆಯ (Drinks for Summer) ದಾಹ ನೀಗಿಸುತ್ತವೆ. ಮಾತ್ರವಲ್ಲ, ಆರೋಗ್ಯಕ್ಕೂ ಹಿತಕರ.

VISTARANEWS.COM


on

Drinks for Summer
Koo

ʻಅಯ್ಯೋ, ಊಟವೂ ಬೇಡ, ತಿಂಡಿಯೂ ಬೇಡʼ ಎಂದು ಈ ದಿನಗಳಲ್ಲಿ ಯಾರಾದರೂ ಹೇಳಿದರೆ, ಅವರು ಉಪವಾಸದಲ್ಲಿದ್ದಾರೆ ಎಂದು ಭಾವಿಸುವ ಅಗತ್ಯವಿಲ್ಲ. ಈ ಉರಿ ಸೆಕೆಯಲ್ಲಿ ತಿನ್ನುವುದಕ್ಕೇನೂ ಬೇಡ, ತಂಪಾಗಿಡುವಂಥ ಪೇಯಗಳು ಮಾತ್ರವೇ ಸಾಕು ಎಂಬುದು ಅವರ ಭಾವವಾಗಿರುತ್ತದೆ. ಸುಳ್ಳೇನಲ್ಲ, ಈ ಸುಡುವ ಬಿಸಿಲಿನಲ್ಲಿ ದೇಹವನ್ನು ತಂಪಾಗಿಡುವಂಥ ಪೇಯಗಳು ಇದ್ದಷ್ಟಕ್ಕೂ ಬೇಕೆನಿಸುತ್ತದೆ. ಹಾಗೆಂದು ಸದಾ ಕಾಲ ನೀರು ಕುಡಿಯಲೂ ಸಾಧ್ಯವಿಲ್ಲ. ದೇಹಕ್ಕೆ ಪೋಷಣೆಯನ್ನೂ ನೀಡಿ, ನೀರಡಿಕೆಯನ್ನೂ ಹೋಗಲಾಡಿಸುವಂಥ ಒಂದಿಷ್ಟು ಪೇಯಗಳು (Drinks for Summer) ಇಲ್ಲಿವೆ. ನಿಮಗೆ ಯಾವುದಿಷ್ಟ?

Drinking warm water with a little lemon juice on an empty stomach in the morning is beneficial for health Benefits Of Lemon Water

ನಿಂಬೆ ಪಾನಕ

ವಿಟಮಿನ್‌ ಸಿ ಹೇರಳವಾಗಿರುವ ಈ ಪಾನಕಕ್ಕೆ ಸಿಹಿಯನ್ನು ಬೆರೆಸದೆಯೇ ಸೇವಿಸಲೂಬಹುದು. ಬೆಲ್ಲ, ಏಲಕ್ಕಿಯಂಥವನ್ನು ಸ್ವಲ್ಪ ಸೇರಿಸಿಕೊಂಡರೆ, ಈ ಚೇತೋಹಾರಿಯಾದ ಪಾನಕ ದೇಹವನ್ನು ತಂಪಾಗಿಸುತ್ತದೆ. ಇದರಿಂದ ಜೀರ್ಣಕ್ರಿಯೆಗೆ, ರೋಗನಿರೋಧಕ ಶಕ್ತಿಗೆ ಇಂಬು ದೊರೆಯುತ್ತದೆ.

ಇನ್ಫ್ಯೂಸ್ಡ್‌ ವಾಟರ್

ಹೆಸರು ನೋಡಿ ಏನೋ ಎಂದುಕೊಳ್ಳಬೇಕಿಲ್ಲ. ಅನಾನಸ್‌, ಸೌತೇಕಾಯಿ, ಪುದೀನಾ, ನಿಂಬೆಹುಲ್ಲು, ದ್ರಾಕ್ಷಿ ಮುಂತಾದ ನಿಮ್ಮಿಷ್ಟದ ಯಾವುದನ್ನಾದರೂ ಒಂದು ದೊಡ್ಡ ಕಪ್‌ನಷ್ಟು ತೆಗೆದುಕೊಂಡು ಮೂರು ಲೀಟರ್‌ ನೀರಿನ ಪಾತ್ರೆಗೆ ಬೆರೆಸಿ, ಕೆಲಕಾಲ ಇಡಿ. ವಿಭಿನ್ನ ರುಚಿ ಮತ್ತು ಘಮ ಹೊಂದಿರುವ ಈ ನೀರನ್ನು ದಿನವಿಡೀ ಕುಡಿಯಿರಿ. ಯಾವುದನ್ನೆಲ್ಲ ನೀರಿಗೆ ಬೆರೆಸುತ್ತೀರಿ ಎಂಬುದರ ಮೇಲೆ ಆ ನೀರಿನ ಸತ್ವವೇನು ಎಂಬುದು ನಿರ್ಧಾರವಾಗುತ್ತದೆ.

Coconut water Foods For Fight Against Dengue Fever

ಎಳನೀರು

ಇದಂತೂ ಬೇಸಿಗೆಯಲ್ಲಿ ಅಮೃತ ಸಮಾನ. ದೇಹಕ್ಕೆ ಬೇಕಾದ ಎಲೆಕ್ಟ್ರೊಲೈಟ್‌ಗಳನ್ನೆಲ್ಲ ನೈಸರ್ಗಿಕವಾಗಿ ಒದಗಿಸುವ ಅದ್ಭುತ ಪೇಯವಿದು. ಅದರಲ್ಲೂ ವ್ಯಾಯಾಮ ಮಾಡಿದ ನಂತರ, ಬಿಸಿಲಿನಲ್ಲಿ ತಿರುಗಾಡುವಾಗ, ಆಯಾಸವಾಗಿದ್ದಲ್ಲಿ ಒಂದು ಎಳನೀರು ಹೊಟ್ಟೆಗೆ ಬಿದ್ದರೂ, ದೇಹ ಚೇತರಿಸಿಕೊಳ್ಳುತ್ತದೆ. ಬೇಸಿಗೆ ತಣಿಯುವವರೆಗೂ ದಿನಕ್ಕೊಂದು ಎಳನೀರು ಖಂಡಿತ ಕುಡಿಯಬಹುದು.

ಎಳ್ಳಿನ ಪಾನಕ

ಒಂದು ದೊಡ್ಡ ಚಮಚ ಎಳ್ಳನ್ನು ಕೆಲಕಾಲ ನೆನೆಸಿ, ಏಲಕ್ಕಿಯೊಂದಿಗೆ ರುಬ್ಬಿಕೊಳ್ಳಿ. ಇದಕ್ಕೆ ರುಚಿಗೆ ತಕ್ಕಷ್ಟು ತಂಪಾದ ಹಾಲು, ಬೆಲ್ಲ ಬೆರೆಸಿ. ದೇಹ ತಣಿಯುವಷ್ಟು ಸೇವಿಸಿ. ಹೆಸರು ಕಾಳನ್ನೂ ಹೀಗೆಯೇ ನೆನೆಸಿ, ರುಬ್ಬಿ, ಪೇಯ ಮಾಡಿಕೊಂಡು ಸೇವಿಸಬಹುದು.

ragi drink

ರಾಗಿ ತಿಳಿ

ಯಾವುದೇ ಧಾನ್ಯಗಳ ತಿಳಿಗಳು ದೇಹಕ್ಕೆ ತಂಪೆರೆಯುತ್ತವೆ. ಕೇವಲ ರಾಗಿಯೆಂದಲ್ಲ, ಅಕ್ಕಿ, ಗೋದಿ ಮುಂತಾದ ನಿಮ್ಮಿಷ್ಟದ ಯಾವುದೇ ಧಾನ್ಯಗಳ ತಿಳಿಯನ್ನು ಈ ದಿನಗಳಲ್ಲಿ ಸೇವಿಸುವುದರಿಂದ ದಾಹವೂ ನೀಗುತ್ತದೆ, ದೇಹಕ್ಕೆ ಬೇಕಾದ ಪೋಷಣೆಯೂ ಲಭಿಸುತ್ತದೆ. ತಿನ್ನುವುದೇ ಬೇಡ ಎನ್ನುವ ಈ ದಿನಗಳಲ್ಲಿ ದೇಹ ಬಳಲದಂತೆ ಈ ಮೂಲಕ ಕಾಪಾಡಿಕೊಳ್ಳಬಹುದು.

ಬೂದುಗುಂಬಳದ ರಸ

ನೈಸರ್ಗಿಕವಾಗಿಯೇ ರಸಭರಿತವಾದಂಥ ತರಕಾರಿಯಿದು. ಇದನ್ನು ಕತ್ತರಿಸಿ ರುಬ್ಬಿ ರಸ ತೆಗೆದುಕೊಳ್ಳಿ. ಬೆಳಗಿನ ಖಾಲಿ ಹೊಟ್ಟೆಯಲ್ಲಿ ಮಾತ್ರವೇ ಅಲ್ಲ, ದಿನದ ಯಾವುದೇ ಹೊತ್ತಿನಲ್ಲಿ ಬೂದುಗುಂಬಳದ ರಸ ಸೇವಿಸುವುದರಿಂದ ದೇಹವನ್ನು ತಂಪಾಗಿಸಿಕೊಳ್ಳಬಹುದು. ಹಲವು ರೀತಿಯ ಖನಿಜಗಳು ಮತ್ತು ವಿಟಮಿನ್‌ಗಳನ್ನು ಶರೀರಕ್ಕೆ ಒದಗಿಸಬಹುದು.

ಹಣ್ಣಿನ ರಸಗಳು

ಕಲ್ಲಂಗಡಿಯಿಂದ ಹಿಡಿದು, ಅನಾನಸ್‌, ಕಿತ್ತಳೆ, ದ್ರಾಕ್ಷಿ ಮುಂತಾದ ಯಾವುದೇ ರಸಭರಿತ ಹಣ್ಣುಗಳನ್ನು ಜ್ಯೂಸರ್‌ಗೆ ಹಾಕಿದರೆ ಶುದ್ಧ ಹಣ್ಣಿನ ರಸ ಲಭ್ಯವಾಗುತ್ತದೆ. ಮಾರುಕಟ್ಟೆಯಲ್ಲಿ ದೊರೆಯುವ ಯಾವುದೇ ಕೃತಕ ಬಣ್ಣ, ಪರಿಮಳದ ಜ್ಯೂಸ್‌ ಖರೀದಿಸುವ ಬದಲು, ಇಂಥ ಶುದ್ಧ ಹಣ್ಣಿನ ರಸಗಳು ಆರೋಗ್ಯಕ್ಕೆ ಬೇಕಾದ ಆರೈಕೆಯನ್ನು ನೀಡುತ್ತವೆ.

buttermilk Drinks That Control Blood pressure

ಮಜ್ಜಿಗೆ

ತಂಪಾದ ಮಜ್ಜಿಗೆಯನ್ನಂತೂ ಹೇಗೆ ಬೇಕೆಂದರೆ ಹಾಗೆ ಒಗ್ಗಿಸಿಕೊಳ್ಳಬಹುದು. ಇಂಗು, ಜೀರಿಗೆ, ಉಪ್ಪು, ಕೊತ್ತಂಬರಿ ಸೊಪ್ಪು, ಹಸಿಶುಂಠಿ, ಹಸಿಮೆಣಸು… ಹೀಗೆ ತರಹೇವಾರಿ ಘಮಗಳೊಂದಿಗೆ ನೀರು-ಮಜ್ಜಿಗೆಯನ್ನು ಕುಡಿಯುವ ಕ್ರಮ ಹೆಚ್ಚಿನ ಕಡೆಗಳಲ್ಲಿ ರಾಮನವಮಿಗೆ ಮುನ್ನವೇ ಆರಂಭವಾಗಿರುತ್ತದೆ. ಹೊಟ್ಟೆಯ ಆರೋಗ್ಯವನ್ನೂ ಜೋಪಾನ ಮಾಡುವ ಮಜ್ಜಿಗೆ ದೇಹಕ್ಕೆ ಅಗತ್ಯ ಸತ್ವವನ್ನೂ ಒದಗಿಸುತ್ತದೆ.

ಬೀಜಗಳು

ಕಾಮಕಸ್ತೂರಿ, ಚಿಯಾ ಮುಂತಾದ ಸಣ್ಣ ಬೀಜಗಳನ್ನು ನೀರಲ್ಲಿ ನೆನೆಸಿ, ಒಂದೆರಡು ಗಂಟೆಗಳ ಕಾಲ ಬಿಡಿ. ಇದನ್ನು ಬೇಕಾದಷ್ಟು ಪ್ರಮಾಣದ ನೀರಿಗೆ ಹಾಗೆಯೇ ಬೆರೆಸಿ ಕುಡಿಯಬಹುದು ಅಥವಾ ಹಾಲಿನೊಂದಿಗೂ ಬೆರೆಸಿಕೊಳ್ಳಬಹುದು. ಇವು ದೇಹಕ್ಕೆ ಬೇಕಾದಂಥ ಮಹತ್ವದ ಸತ್ವಗಳನ್ನು ಒದಗಿಸಿ, ಸುಡು ಬೇಸಿಗೆಯಲ್ಲಿ ದೇಹ ತಂಪಾಗಿರುವಂತೆ ಮಾಡುತ್ತದೆ.

ಇದನ್ನೂ ಓದಿ: ORS: ಒಆರ್‌ಎಸ್‌ ಜೀವಜಲ; ಯಾರು, ಎಷ್ಟು ಪ್ರಮಾಣದಲ್ಲಿ ಸೇವಿಸಬಹುದು?

Continue Reading

ಆರೋಗ್ಯ

Summer Food Tips: ಬೇಸಿಗೆಯಲ್ಲಿ ಈ 8 ಆಹಾರಗಳಿಂದ ದೂರ ಇರಿ!

ಕೆಲವು ಆಹಾರಗಳು ಹೆಚ್ಚಿನ ಉಷ್ಣತೆಯನ್ನು “(Summer Food Tips) ದೇಹದಲ್ಲಿ ಉತ್ಪತ್ತಿ ಮಾಡುತ್ತವೆ ಅಥವಾ ಜೀರ್ಣವಾಗಲು ದೀರ್ಘ ಕಾಲ ತೆಗೆದುಕೊಳ್ಳುತ್ತವೆ. ಇದರಿಂದ ದೇಹ ತಂಪಾಗಿಡುವುದು ಕಷ್ಟಸಾಧ್ಯ. ಯಾವ ಆಹಾರಗಳವು? ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

Summer Food Tips
Koo

ಬೇಸಿಗೆಯ ತಾಪಮಾನ 40 ಡಿ.ಸೆ. ದಾಟುತ್ತಿದೆ ಬಹಳಷ್ಟು ಕಡೆಗಳಲ್ಲಿ. ಕಂಡು ಕೇಳರಿಯದ ಈ ಬೆಂಕಿಯಂಥ ಬೇಸಿಗೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಎಲ್ಲರೂ ಒದ್ದಾಡುತ್ತಿದ್ದಾರೆ. ದೇಹವನ್ನು ತಂಪು ಮಾಡುವ ಭರದಲ್ಲಿ ಕೆಲವೊಮ್ಮೆ ತದ್ವಿರುದ್ಧ ಕೆಲಸವನ್ನೇ ಮಾಡಿರುತ್ತೇವೆ. ಅದರಲ್ಲೂ ಕೆಲವು ಆಹಾರಗಳು ಹೆಚ್ಚಿನ ಉಷ್ಣತೆಯನ್ನು ದೇಹದಲ್ಲಿ ಉತ್ಪತ್ತಿ ಮಾಡುತ್ತವೆ ಅಥವಾ ಜೀರ್ಣವಾಗಲು ದೀರ್ಘ ಕಾಲ ತೆಗೆದುಕೊಳ್ಳುತ್ತವೆ. ಇದರಿಂದ ದೇಹ ತಂಪಾಗಿಡುವುದು ಕಷ್ಟಸಾಧ್ಯ. ಯಾವ (Summer Food Tips) ಆಹಾರಗಳವು?

Coffee and Caffeinated Beverages Healthy Foods That Are Harmful To Consume At Night

ಕಾಫಿ

ಹೀಗೆನ್ನುತ್ತಿದ್ದಂತೆ ಕಾಫಿ ಪ್ರಿಯರು ಸಿಟ್ಟಿಗೇಳಬಹುದು. ಆದರೆ ಕೇವಲ ಕಾಫಿ ಅಂತಲೇ ಅಲ್ಲ, ಕೆಫೇನ್‌ ಹೆಚ್ಚಿರುವ ಯಾವುದೇ ಪಾನೀಯಗಳು ಬೇಸಿಗೆಗೆ ಹೇಳಿಸಿದ್ದಲ್ಲ. ಚಹಾ ಸೇವನೆ ಹೆಚ್ಚಾದರೂ ಬೇಸಿಗೆಯಲ್ಲಿ ತೊಂದರೆಗೆ ಆಹ್ವಾನ ನೀಡಿದಂತೆ. ಹಾಗಾಗಿ ಈ ಬಿರು ಬೇಸಿಗೆಯಲ್ಲಿ ಬೇರೆ ಆರೋಗ್ಯಕರ ಪಾನೀಯಗಳ ಮೊರೆ ಹೋಗುವುದು ಸೂಕ್ತ.

Kerala Inji Curry Ginger Pickle Most Famous Indian Pickles And Their Origin Place

ಉಪ್ಪಿನಕಾಯಿ

ಕೆಲವರಿಗೆ ಊಟಕ್ಕೆ ಮುಂಚೆ ಇದೇ ಬೇಕಾಗುತ್ತದೆ; ಆದರೆ ಬೇಸಿಗೆಯಲ್ಲಿ ಸರಿಯಲ್ಲ. ಇವುಗಳಲ್ಲಿ ಉಪ್ಪಿನಂಶ ಹೆಚ್ಚಿರುವುದರಿಂದ, ದೇಹದಲ್ಲಿನ ನೀರಿನಂಶ ಕಡಿಮೆಯಾಗುವಂತೆ ಮಾಡುತ್ತವೆ. ಹಾಗಾಗಿ ಹೆಚ್ಚು ಉಪ್ಪಿರುವ ಯಾವುದೇ ಆಹಾರಗಳನ್ನೂ ಬಿರು ಬೇಸಿಗೆಯಲ್ಲಿ ಸೇವಿಸದೆ ಇರುವುದು ಜಾಣತನ.

Soda Effects Of Drinks

ಸೋಡಾ

ಇದರಲ್ಲಿ ಕೆಫೇನ್‌ ಮತ್ತು ಸಕ್ಕರೆ ಎರಡೂ ಸೇರಿದ್ದರಿಂದ, ಬೇಸಿಗೆಯ ದಾಹ ತಣಿಸಿಕೊಳ್ಳಲು ಹೇಳಿಸಿದ್ದಲ್ಲ ಈ ಪೇಯ. ಒಮ್ಮೆ ಕುಡಿದರೆ ಮತ್ತೆ ಕುಡಿಯಬೇಕೆನಿಸುವ ಸೋಡಾಗಳು, ದಾಹ ತಣಿಸುವುದಕ್ಕಿಂತ, ದೇಹವನ್ನು ನಿರ್ಜಲೀಕರಣದತ್ತ ದೂಡುತ್ತವೆ. ಅನಗತ್ಯ ಸಕ್ಕರೆಯಂಶವನ್ನು ದೇಹಕ್ಕೆ ತುರುಕಿ, ತೂಕವನ್ನೂ ಹೆಚ್ಚಿಸುತ್ತವೆ.

Image Of Dry Fruits For Hair Fall

ಒಣ ಹಣ್ಣುಗಳು

ಖರ್ಜೂರ, ಉತ್ತುತ್ತೆ, ಅಂಜೂರ ಮುಂತಾದ ಒಣ ಹಣ್ಣುಗಳು ಜೀರ್ಣವಾಗಲು ದೀರ್ಘ ಕಾಲ ತೆಗೆದುಕೊಳ್ಳುತ್ತವೆ. ಹಾಗಾಗಿ ಹೆಚ್ಚು ಶಾಖವನ್ನು ಉತ್ಪತ್ತಿ ಮಾಡುತ್ತವೆ. ಇವುಗಳ ಬದಲಿಗೆ ಬೇಸಿಗೆಯ ತಾಜಾ ರಸಭರಿತ ಹಣ್ಣುಗಳನ್ನು ಸೇವಿಸುವುದು ಸೂಕ್ತ. ಒಣದ್ರಾಕ್ಷಿಯ ಬದಲಿಗೆ ಹಸಿ ದ್ರಾಕ್ಷಿಯನ್ನು ಸೇವಿಸಬಾರದೇಕೆ?

Spicy foods Foods To Avoid Eating With Tea

ಖಾರದ ತಿನಿಸುಗಳು

ಬಾಯಿಗೆ ರುಚಿಕಟ್ಟೆನಿಸುವ ಖಾರದ ತಿನಿಸುಗಳು ಬೇಸಿಗೆಯಲ್ಲಿ ಸೂಕ್ತವಲ್ಲ. ಜೀರ್ಣಾಂಗಗಳ ಕಿರಿಕಿರಿ, ಅಜೀರ್ಣಕ್ಕೆ ಕಾರಣವಾಗಿ, ದೇಹದ ಉಷ್ಣತೆಯನ್ನು ಅಧಿಕ ಮಾಡುತ್ತವೆ. ಜೊತೆಗೆ ಎಷ್ಟು ನೀರು ಕುಡಿದರೂ ಮುಗಿಯದ ನೀರಡಿಕೆಯನ್ನು ತಂದಿಕ್ಕುತ್ತವೆ. ಹಾಗಾಗಿ ಖಾರ ಪ್ರಿಯರು ನೀವಾಗಿದ್ದರೆ, ಬೇಸಿಗೆಯಲ್ಲಿ ಸ್ವಲ್ಪ ಖಾರ ಕಡಿಮೆ ಮಾಡುವುದು ಒಳ್ಳೆಯದು.

Assorted fried snacks Inflammation

ಕರಿದ ತಿಂಡಿಗಳು

ಇದರಲ್ಲೂ ಸೋಡಿಯಂ ಅಂಶ ಹೆಚ್ಚಿರುವುದರಿಂದ, ಕುಡಿದಷ್ಟಕ್ಕೂ ದಾಹ ತೀರುವುದೇ ಇಲ್ಲ ಎನ್ನುವಂತಾಗುತ್ತದೆ. ಜೊತೆಗೆ ಹೆಚ್ಚು ಕೊಬ್ಬಿರುವ ಆಹಾರಗಳು ಜೀರ್ಣಾಂಗಗಳಿಗೆ ಸಿಕ್ಕಾಪಟ್ಟೆ ಕೆಲಸ ನೀಡುತ್ತವೆ. ಇದನ್ನು ಚೂರ್ಣಿಸುವಲ್ಲಿ ದೇಹದ ಶಾಖವೂ ಏರುತ್ತದೆ. ಹಾಗಾಗಿ ಕರಿದ ತಿಂಡಿಗಳು ಸಹ ಬೇಸಿಗೆಗೆ ಸೂಕ್ತವಾದದ್ದಲ್ಲ.

ಮೊಟ್ಟೆ, ಚಿಕನ್

ಕೊಬ್ಬು ಮತ್ತು ಪ್ರೊಟೀನ್‌ ಸಾಂದ್ರವಾದ ಆಹಾರವಿದು. ಜೊತೆಗೆ ಹಲವು ರೀತಿಯ ಖನಿಜಗಳೂ ದೇಹಕ್ಕೆ ದೊರೆಯುತ್ತವೆ. ಆದರೆ ಇದನ್ನು ಪಚನ ಮಾಡುವುದಕ್ಕೆ ದೇಹದಲ್ಲಿ ಬಹಳಷ್ಟು ಶಾಖ‌ ಉತ್ಪತ್ತಿಯಾಗುತ್ತದೆ. ಸದಾ ಕಾಲ ಸೆಕೆಯ ಅನುಭವ ಆಗಬಹುದು ಕೆಲವರಿಗೆ. ಹಾಗಾಗಿ ಬೇಸಿಗೆಯಲ್ಲಿ ಈ ಆಹಾರಗಳ ಸೇವನೆಯನ್ನು ಮಿತಗೊಳಿಸಿದರೆ ಒಳ್ಳೆಯದು.

Remember that alcohol also triggers diabetes Simple Steps to Preventing Diabetes

ಆಲ್ಕೊಹಾಲ್

ಯಾವುದೇ ರೀತಿಯ ಆಲ್ಕೋಹಾಲ್‌ ಸೇವನೆಯು ದೇಹವನ್ನು ನಿರ್ಜಲೀಕರಣದತ್ತ ದೂಡುತ್ತದೆ. ಇದರಿಂದ ಬಾಯಿ ಒಣಗುವುದು, ತಲೆನೋವು ಮುಂತಾದ ಲಕ್ಷಣಗಳು ಕಾಣಬಹುದು. ಜೊತೆಗೆ ಅತಿಯಾದ ಮೂತ್ರ ಮತ್ತು ಬೆವರು ಉತ್ಪತ್ತಿ ಮಾಡಿ, ದೇಹವನ್ನು ಸಂಕಷ್ಟಕ್ಕೆ ದೂಡುತ್ತದೆ. ಹಾಗಾಗಿ ಬೇಸಿಗೆಗೆ ಹೇಳಿಸಿದ್ದಲ್ಲ ಇದು.

Continue Reading

ಆರೋಗ್ಯ

Home Remedy For Cracked Heels: ಒಡೆದ ಹಿಮ್ಮಡಿಗಳಿಗೆ ಕರ್ಪೂರದ ಎಣ್ಣೆ ಪರಿಣಾಮಕಾರಿ

ಒಡೆದ ಹಿಮ್ಮಡಿಗಳಿಗೆ (Home Remedy For Cracked Heels) ಮದ್ದರೆಯುವುದಕ್ಕೆ ಪರಂಪರಾಗತ ಔಷಧಿಯಾಗಿ ಬಳಕೆಯಲ್ಲಿರುವ ವಸ್ತುಗಳ ಪೈಕಿ ಕರ್ಪೂರ ಸಹ ಒಂದು. ಒಣಗಿ ಪುಡಿಯಾಗುವ ಚರ್ಮಕ್ಕೆ ಅಗತ್ಯವಾದ ತೇವವನ್ನು ಒದಗಿಸುವುದರ ಜೊತೆಗೆ, ಇದರ ಬ್ಯಾಕ್ಟೀರಿಯ ಮತ್ತು ಶಿಲೀಂಧ್ರ ನಿರೋಧಕ ಗುಣಗಳು ಹಿಮ್ಮಡಿಯ ಆರೈಕೆಗೆ ಪೂರಕವಾಗುತ್ತವೆ. ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

Home Remedy For Cracked Heels
Koo

ಒಡೆದ ಹಿಮ್ಮಡಿಗಳಿಗೆ (Home Remedy For Cracked Heels) ಕಾಡುವುದಕ್ಕೆ ಚಳಿಗಾಲದವೇ ಆಗಬೇಕೆಂದಿಲ್ಲ. ಶುಷ್ಕವಾದ ಬಿರುಬೇಸಿಗೆಯಲ್ಲೂ ಹಿಮ್ಮಡಿಗಳು ಬಿರಿದು, ಅತೀವ ನೋವು ಕೊಡಬಹುದು. ಕೆಲವೊಮ್ಮೆ ಎಷ್ಟೇ ಕ್ರೀಮುಗಳನ್ನು ಹಚ್ಚಿದರೂ ಸಮಸ್ಯೆ ಪರಿಹಾರವಾಗುವುದಿಲ್ಲ. ಜೊತೆಗೆ, ಬೇಸಿಗೆಯ ದಿನಗಳಲ್ಲಿ ತ್ವಚೆ ಅಂಟಾದಂತಾಗಿ ಅತಿಯಾಗಿ ಕ್ರೀಮುಗಳನ್ನು ಲೇಪಿಸುವುದಕ್ಕೂ ಕಷ್ಟವಾಗುತ್ತದೆ. ಅದನ್ನು ಹಾಗೆಯೇ ಬಿಟ್ಟರೆ ನೋವು ಹೆಚ್ಚಾಗಿ, ಬಿರುಕು ಅತಿಯಾಗಿ ರಕ್ತ ಸೋರಲೂ ಬಹುದು. ಒಡೆದ ಹಿಮ್ಮಡಿಗಳಿಗೆ ಮದ್ದರೆಯುವುದಕ್ಕೆ ಪರಂಪರಾಗತ ಔಷಧಿಯಾಗಿ ಬಳಕೆಯಲ್ಲಿರುವ ವಸ್ತುಗಳ ಪೈಕಿ ಕರ್ಪೂರ ಸಹ ಒಂದು. ಒಣಗಿ ಪುಡಿಯಾಗುವ ಚರ್ಮಕ್ಕೆ ಅಗತ್ಯವಾದ ತೇವವನ್ನು ಒದಗಿಸುವುದರ ಜೊತೆಗೆ, ಇದರ ಬ್ಯಾಕ್ಟೀರಿಯ ಮತ್ತು ಶಿಲೀಂಧ್ರ ನಿರೋಧಕ ಗುಣಗಳು ಹಿಮ್ಮಡಿಯ ಆರೈಕೆಗೆ ಪೂರಕವಾಗುತ್ತವೆ. ಮಾತ್ರವಲ್ಲ, ಕರ್ಪೂರದಲ್ಲಿ ಉರಿಯೂತ ಶಾಮಕ ಗುಣಗಳೂ ಇದ್ದು, ಹಿಮ್ಮಡಿಯ ನೋವು, ಊತ ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಒಡೆದ ಹಿಮ್ಮಡಿಗಳು (Home Remedy For Cracked Heels) ಯಾವುದೇ ಪಾದಗಳನ್ನೂ ಕಾಡಬಹುದು. ಆ ಭಾಗದ ಚರ್ಮ ದಪ್ಪವಾಗಿ, ಒಣಗಿ, ಒರಟಾಗಿ ಬಿರಿಯಲು, ಪುಡಿಯಾಗಲು ಪ್ರಾರಂಭವಾಗುತ್ತದೆ. ಇದಕ್ಕೆ ಆರಂಭದಲ್ಲೇ ಮದ್ದರೆದರೆ ತಹಬಂದಿಗೆ ಬಂದೀತು. ಸ್ವಲ್ಪ ಅಜಾಗ್ರತೆ ತೋರಿದರೂ, ಹೆಜ್ಜೆ ಇಡಲಾಗದಂತೆ ನೋವು ಕಾಡುತ್ತದೆ. ಎಳೆಯರಿಂದ ಹಿಡಿದು ವಯಸ್ಸಾದವರವರೆಗೆ, ಸ್ತ್ರೀ-ಪುರುಷರೆನ್ನದೆ ಯಾರೂ ಈ ತೊಂದರೆಗೆ ತುತ್ತಾಗಬಹುದು. ಒಂದು ಸಮೀಕ್ಷೆಯ ಪ್ರಕಾರ, ಶೇ. ೨೦ರಷ್ಟು ವಯಸ್ಕರಲ್ಲಿ ಈ ಸಮಸ್ಯೆ ಒಂದಿಲ್ಲೊಂದು ಕಾಲದಲ್ಲಿ ಬಾಧಿಸುತ್ತದೆ.

cracked heels

ಕಾರಣಗಳೇನು?

ಎಲ್ಲಕ್ಕಿಂತ ಮುಖ್ಯವಾದ ಕಾರಣವೆಂದರೆ ಹವಾಮಾನ. ಬೇಸಿಗೆಯಲ್ಲಿ ಅತಿಯಾದ ಶುಷ್ಕತೆಗೆ ಈ ತೊಂದರೆ ಎದುರಾದರೆ, ಚಳಿಗಾಲದಲ್ಲಿ ಒಣಹವೆಗೆ ಈ ಅವಸ್ಥೆ ಉಂಟಾಗಬಹುದು. ಮಳೆಗಾಲದಲ್ಲಿ ಮಣ್ಣು ನೀರು ಸೋಕುವುದು ಸಹ ಇರುವ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಅದಲ್ಲದೆ, ದೀರ್ಘ ಕಾಲದವರೆಗೆ ನಿಂತು ಕೆಲಸ ಮಾಡುವುದು, ಧೂಳಿಗೆ ತೆರೆದುಕೊಳ್ಳುವುದು, ಸದಾಕಾಲ ಪಾದ ಮುಚ್ಚದಂಥ ಪಾದರಕ್ಷೆಗಳ ಬಳಕೆ, ಬೊಜ್ಜು, ಮಧುಮೇಹ, ಥೈರಾಯ್ಡ್‌ ಸಮಸ್ಯೆ ಮತ್ತಿತರ ಆರೋಗ್ಯ ಸಮಸ್ಯೆಗಳು ಹಿಮ್ಮಡಿಯ ಒಡಕಿಗೆ ಕಾರಣವಾಗುತ್ತವೆ.

Camphor

ಕರ್ಪೂರ ಹೇಗೆ ಸಹಕಾರಿ?

ಹಿಂದಿನ ಕಾಲದಿಂದಲೂ ಒಡೆದ ಹಿಮ್ಮಡಿಗಳನ್ನು ಗುಣ ಪಡಿಸುವುದಕ್ಕೆ ಕರ್ಪೂರ ಬಳಕೆಯಲ್ಲಿದೆ. ಮೇಲ್ಮೈಗೆ ಇದನ್ನು ಲೇಪಿಸುವುದರಿಂದ ಚರ್ಮ ಮೃದುವಾಗಿ, ತೇವಭರಿತವಾಗಿ, ಒಡೆದು ಬಿರಿದ ಹಿಮ್ಮಡಿ ಕೂಡಿಕೊಳ್ಳುತ್ತದೆ. ಜೊತೆಗೆ, ಬಿರಿದ ಹಿಮ್ಮಡಿಗಳಲ್ಲಿ ಕೆಲವೊಮ್ಮೆ ಸೂಕ್ಷ್ಮ ಗಾಯಗಳಾಗಬಹುದು. ನೆಲದ ಧೂಳು, ಸೂಕ್ಷ್ಮಾಣುಗಳು ಈ ಗಾಯಗಳಲ್ಲಿ ಸೇರಿ, ಯಾವ ಕ್ರೀಮುಗಳನ್ನು ಹಚ್ಚಿದರೂ ಸಮಸ್ಯೆ ಪರಿಹಾರವಾಗದೆ ಉಳಿಯುವ ಸಂದರ್ಭವೇ ಹೆಚ್ಚಾಗುತ್ತದೆ. ಇಂಧ ಸಂದರ್ಭದಲ್ಲಿ ಕರ್ಪೂರದ ಚಿಕಿತ್ಸೆ ಪರಿಣಾಮಕಾರಿ. ಇದರಲ್ಲಿರುವ ಬ್ಯಾಕ್ಟೀರಿಯ ಮತ್ತು ಫಂಗಸ್‌ ವಿರೋಧಿ ಗುಣಗಳು, ಗಾಯದಲ್ಲಿರುವ ಸೋಂಕನ್ನು ಕಡಿಮೆ ಮಾಡುತ್ತವೆ. ಕರ್ಪೂರ ಪ್ರಬಲವಾದ ಉತ್ಕರ್ಷಣ ನಿರೋಧಕ. ಹಾಗಾಗಿಯೇ ಹಲವಾರು ವೇಪರ್‌ ರಬ್‌ಗಳು, ನೋವಿನ ಮುಲಾಮುಗಳಲ್ಲಿ ಕರ್ಪೂರವನ್ನು ಬಳಸಲಾಗುತ್ತದೆ. ಇದು ಊತವನ್ನು ಕಡಿಮೆ ಮಾಡಿ, ನೋವನ್ನೂ ಶಮನ ಮಾಡುತ್ತದೆ. ಇದನ್ನು ಒಡೆದ ಹಿಮ್ಮಡಿಗಳಿಗೆ ಹಚ್ಚುವುದರಿಂದ ಅಲ್ಲಿನ ಊತ ಮತ್ತು ನೋವು ಶಮನವಾಗುತ್ತದೆ. ಜೊತೆಗೆ ಹೊಸ ಕೋಶಗಳ ಉತ್ಪತ್ತಿಯನ್ನು ಇದು ಪ್ರೋತ್ಸಾಹಿಸುತ್ತದೆ. ಹಾಗಾಗಿ ತುಂಡಾದ ಚರ್ಮದಲ್ಲಿನ ಕೋಶಗಳು ನಾಶವಾಗಿ, ಹೊಸ ಚರ್ಮ ಮೂಡಿ, ಪಾದ ನಯವಾಗುತ್ತದೆ.

ಇದನ್ನೂ ಓದಿ: Summer Nail Art : ಸಮ್ಮರ್ ಸೀಸನ್​ನಲ್ಲಿ ಟ್ರೆಂಡಿಯಾದ ಕಲ್ಲಂಗಡಿ ಹಣ್ಣಿನ ನೇಲ್ಆರ್ಟ್

ಉಪಯೋಗಿಸುವುದು ಹೇಗೆ?

ಸಾಮಾನ್ಯವಾಗಿ ಕರ್ಪೂರದ ಎಣ್ಣೆ ಇಂಥ ಸಂದರ್ಭಗಳಲ್ಲಿ ಬಳಕೆಯಾಗುತ್ತದೆ. ಆದರೆ ಶುದ್ಧ ಎಣ್ಣೆಯನ್ನು ನೇರವಾಗಿ ಲೇಪಿಸಿದರೆ, ಅದರ ತೀವ್ರತೆಯಿಂದ ಚರ್ಮಕ್ಕೆ ಕಿರಿಕಿರಿ ಆಗಬಹುದು. ಹಾಗಾಗಿ ನಾಲ್ಕಾರು ಹನಿ ಕರ್ಪೂರದ ತೈಲವನ್ನು ಕೊಬ್ಬರಿ ಎಣ್ಣೆ, ಆಲಿವ್‌ ಎಣ್ಣೆ ಅಥವಾ ಬಾದಾಮಿ ಎಣ್ಣೆಯೊಂದಿಗೆ ಮಿಶ್ರ ಮಾಡಿ, ಬೇಕಾದ ಭಾಗಕ್ಕೆ ಲೇಪಿಸುವುದು ಒಂದು ಕ್ರಮ. ಇದಲ್ಲದೆ, ಉಗುರು ಬಿಸಿಯಾದ ನೀರಿಗೆ ನಾಲ್ಕೆಂಟು ಹನಿ ಕರ್ಪೂರದ ತೈಲವನ್ನು ಬೆರೆಸಿ. ಆ ನೀರಿನಲ್ಲಿ 20 ನಿಮಿಷಗಳ ಕಾಲ ಪಾದವನ್ನು ನೆನೆಸುವುದು ಇನ್ನೊಂದು ಕ್ರಮ. ಇದನ್ನು ವಿವರವಾಗಿ ಹೇಳಬೇಕೆಂದರೆ, ಹಿಮ್ಮಡಿಗಳಿಗೆ ಕರ್ಪೂರದ ತೈಲವನ್ನು ಲೇಪಿಸಿದ 30 ನಿಮಿಷಗಳ ನಂತರ, ಉಗುರು ಬಿಸಿಯಾದ ಸೋಪಿನ ನೀರಿನಲ್ಲಿ 10 ನಿಮಿಷಗಳವರೆಗೆ ಪಾದಗಳನ್ನು ನೆನೆಸಿಡಿ. ನಂತರ ಆ ಬಿರುಕುಗಳನ್ನು ನಯವಾಗಿ ಉಜ್ಜಿ ಸ್ವಚ್ಛಗೊಳಿಸಿ. ಇದರಿಂದ ಬಿರುಕುಗಳು ಶುಚಿಯಾಗಿ, ಕರ್ಪೂರದೆಣ್ಣೆ ಆ ಬಿರುಕುಗಳ ಒಳಗೆ ಪ್ರವೇಶಿಸಲು ಸಾಧ್ಯವಾಗುತ್ತದೆ. ಇದರ ನಂತರ, ಪಾದಗಳನ್ನು ತೊಳೆದು ಶುಚಿ ಮಾಡಿ. ಸ್ವಚ್ಛವಾದ ಬಟ್ಟೆಯಿಂದ ಒರೆಸಿ, ಒಣಗಿಸಿ. ಈಗ ಕೊಬ್ಬರಿ ಎಣ್ಣೆಯ ಜೊತೆಗೆ ಸ್ವಲ್ಪವೇ ಕರ್ಪೂರದೆಣ್ಣೆ ಬೆರೆಸಿ ಪಾದಗಳಿಗೆ ನಯವಾಗಿ ಉಜ್ಜಿ. ಇದನ್ನು ರಾತ್ರಿ ಮಲಗುವ ಮುನ್ನ ಮಾಡುವುದು ಒಳ್ಳೆಯದು. ನಿಯಮಿತವಾಗಿ ಈ ಚಿಕಿತ್ಸೆಯನ್ನು ಮಾಡಿದಲ್ಲಿ, ಒಡೆದ ಹಿಮ್ಮಡಿಗಳಿಂದ ಮುಕ್ತರಾಗಬಹುದು.

Continue Reading

ಫ್ಯಾಷನ್

Cotton Saree Fashion: ಕಾಟನ್ ಸೀರೆ ಫ್ಯಾಷನ್ ಕುರಿತು ಚಂದ್ರಯಾನ 3 ಖ್ಯಾತಿಯ ಇಸ್ರೋ ರೂಪಾ ವ್ಯಾಖ್ಯಾನ ಹೀಗಿದೆ!

ಚಂದ್ರಯಾನ – 3 ಇಸ್ರೋ ಡೆಪ್ಯೂಟಿ ಪ್ರಾಜೆಕ್ಟ್‌ ಡೈರೆಕ್ಟರ್‌ ಇಸ್ರೋ ರೂಪಾ ಮಳಲಿ ಯಾರಿಗೆ ಗೊತ್ತಿಲ್ಲ! ಅವರ ಸಾಧನೆ ಎಲ್ಲರಿಗೂ ಗೊತ್ತಿದೆ. ಆದರೆ, ಅವರ ಸಿಂಪಲ್‌ ಕಾಟನ್‌ ಸೀರೆ ಫ್ಯಾಷನ್‌ (Cotton Saree Fashion) ಸ್ಟೇಟ್‌ಮೆಂಟ್‌ ಬಗ್ಗೆ ಗೊತ್ತೇ! ಈ ಕುರಿತಂತೆ ಖುದ್ದು ಅವರೇ ವಿಸ್ತಾರ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ.

VISTARANEWS.COM


on

Cotton Saree Fashion Roopa Malali, Chandrayaan - 3 ISRO Deputy Project Director
ಚಿತ್ರಗಳು : ರೂಪ ಮಳಲಿ, ಚಂದ್ರಯಾನ - 3 ಇಸ್ರೋ ಡೆಪ್ಯೂಟಿ ಪ್ರಾಜೆಕ್ಟ್‌ ಡೈರೆಕ್ಟರ್‌
Koo

ಸಂದರ್ಶನ : ಶೀಲಾ ಸಿ. ಶೆಟ್ಟಿ
ಚಂದ್ರಯಾನ – 3 ಇಸ್ರೋ ಡೆಪ್ಯೂಟಿ ಪ್ರಾಜೆಕ್ಟ್‌ ಡೈರೆಕ್ಟರ್‌ ಇಸ್ರೋ ರೂಪ ಮಳಲಿ ಯಾರಿಗೆ ಗೊತ್ತಿಲ್ಲ! ಯಶಸ್ವಿ ಚಂದ್ರಯಾನ ಮೂರರ ನಂತರ ಸಾಕಷ್ಟು ಗುರುತಿಸಿಕೊಂಡವರು. ಎಲ್ಲದಕ್ಕಿಂತ ಹೆಚ್ಚಾಗಿ ಅವರು ನಮ್ಮ ಕನ್ನಡತಿ. ಅವರ ಸಾಧನೆ ಬಗ್ಗೆ ಅವರ ಜೀವನಗಾಥೆ ಕುರಿತಂತೆ ಸಾಕಷ್ಟು ಕಡೆ ಸುದ್ದಿಯಾಗಿದೆ. ಅವರ ಕಾರ್ಯವೈಖರಿ ಕುರಿತಂತೆಯೂ ಎಲ್ಲೆಡೆ ಪ್ರಶಂಸೆಯ ಸುರಿಮಳೆಯಾಗಿರುವುದು, ನಾನಾ ಪ್ರಶಸ್ತಿ ಪುರಸ್ಕಾರ ದೊರೆತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಮಧ್ಯೆ ಉದ್ಯಾನನಗರಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ ಅವರು, ತಮ್ಮ ಸಿಂಪಲ್‌ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್ಸ್‌ ಬಗ್ಗೆ ಸಂದರ್ಶನ ನೀಡಿದರು. ಈ ಕುರಿತ (Cotton Saree Fashion) ಸಂಕ್ಷಿಪ್ತ ಸಾರಂಶ ಇಲ್ಲಿದೆ.

Roopa Malali, Chandrayaan - 3 ISRO Deputy Project Director

ವಿಸ್ತಾರ ನ್ಯೂಸ್‌: ಸದಾ ತಮ್ಮ ಪ್ರಾಜೆಕ್ಟ್‌ಗಳಲ್ಲಿ ಬ್ಯುಝಿಯಾಗಿರುವ ನಿಮ್ಮ ಲೈಫ್‌ಸ್ಟೈಲ್‌ನಲ್ಲಿ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳಿಗೆ ಜಾಗವಿದೆಯೇ!

ರೂಪಾ ಮಳಲಿ : ಖಂಡಿತಾ ಇಲ್ಲ! ನಾನೆಂದು ಫ್ಯಾಷನ್‌ ಹಾಗೂ ಸ್ಟೈಲ್‌ ಎಂದೆಲ್ಲಾ ತಲೆಕೆಡಿಸಿಕೊಂಡವಳಲ್ಲ! ನನ್ನ ಗುರಿ ನನ್ನ ಸಾಧನೆ ಬಗ್ಗೆ ಸದಾ ಯೋಚಿಸುವವಳು. ಇನ್ನು ಇವೆಲ್ಲದರ ಮಧ್ಯೆ ನನ್ನ ಜೀವನಶೈಲಿಗೆ ತಕ್ಕಂತೆ ಅಗತ್ಯವಿರುವುದನ್ನು ಫಾಲೋ ಮಾಡುತ್ತೇನಷ್ಟೇ!

ವಿಸ್ತಾರ ನ್ಯೂಸ್‌: ನಿಮಗೆ ಕಾಟನ್ ಸೀರೆಗಳೆಂದರೇ ಇಷ್ಟವಂತೆ ?

ರೂಪಾ ಮಳಲಿ : ಹೌದು. ನನಗೆ ಕಾಟನ್‌ ಸೀರೆಗಳೆಂದರೇ ತುಂಬಾ ಇಷ್ಟ. ನಾನು ಹೆಚ್ಚಾಗಿ ಕಾಟನ್ ಸೀರೆಗಳನ್ನೇ ಉಡುತ್ತೇನೆ.

Roopa Malali, Chandrayaan - 3 ISRO Deputy Project Director

ವಿಸ್ತಾರ ನ್ಯೂಸ್‌ : ಹಾಗಾದಲ್ಲಿ, ನೀವು ಸೀರೆ ಪ್ರೇಮಿಯಾ ?

ರೂಪಾ ಮಳಲಿ: ಪ್ರತಿ ಮಹಿಳೆಗೂ ಸೀರೆ ಪ್ರೇಮ ಇದ್ದೇ ಇರುತ್ತದೆ. ಅದರಲ್ಲೂ ನನಗೆ ಸಿಂಪಲ್‌ ಕಾಟನ್‌ ಸೀರೆಗಳೆಂದರೇ ಮೊದಲಿನಿಂದಲೂ ಪ್ರೀತಿ. ಇದಕ್ಕೆ ಕಾರಣವೂ ಇದೆ. ಅವು ಲೈಟ್‌ವೈಟ್‌ ಆಗಿರುತ್ತವೆ. ನೋಡಲು ಆಕರ್ಷಕವಾಗಿ ಕಾಣುತ್ತವೆ. ಇನ್ನು ಉಟ್ಟಾಗ ಎಲಿಗೆಂಟ್‌ ಲುಕ್‌ ನೀಡುತ್ತವೆ.

ವಿಸ್ತಾರ ನ್ಯೂಸ್‌: ನಿಮ್ಮ ಬಳಿ ಸೀರೆ ಕಲೆಕ್ಷನ್‌ ಇದೆಯಾ?

ರೂಪಾ ಮಳಲಿ : ಒಂದಿಷ್ಟು ಇದೆ. ಹಾಗೆಂದು ರಾಶಿ ರಾಶಿ ಸೀರೆಗಳ ಕಲೆಕ್ಷನ್‌ ಇಲ್ಲ! ನನಗೆ ಅಗತ್ಯವಿರುವಷ್ಟು ಸೀರೆಗಳಿವೆ. ರೇಷ್ಮೆ ಸೀರೆಗಳಿಗಿಂತ ಹೆಚ್ಚಾಗಿ ಕಾಟನ್‌ ಸೀರೆಗಳು ನನ್ನ ಬಳಿ ಇವೆ.

Roopa Malali, Chandrayaan - 3 ISRO Deputy Project Director

ವಿಸ್ತಾರ ನ್ಯೂಸ್‌ : ನಿಮಗೆ ಡ್ರೆಸ್‌ಕೋಡ್‌ ಇದೆಯಾ? ನಿಮ್ಮ ವರ್ಕಿಂಗ್‌ ನೇಚರ್‌ನಲ್ಲಿ ನೀವು ಪ್ರಿಫರ್‌ ಮಾಡುವ ಉಡುಪು ಯಾವುದು?

ರೂಪಾ ಮಳಲಿ : ಡ್ರೆಸ್‌ಕೋಡ್‌ ಇಲ್ಲ! ನಮ್ಮ ವರ್ಕ್‌ ನೇಚರ್‌ನಲ್ಲಿ ಇದೇ ಉಡುಪು ಧರಿಸಬೇಕೆಂಬ ನಿಯಮವೇನೂ ಇಲ್ಲ! ಆಯಾ ವ್ಯಕ್ತಿಗೆ ಅನುಗುಣವಾಗಿ ಅವರವರು ತಂತಮ್ಮ ಡ್ರೆಸ್‌ಕೋಡ್‌ ನಿರ್ಧರಿಸುತ್ತಾರೆ. ಹಾಗೆಯೇ ನಾನು ಕೂಡ. ಸಿಂಪಲ್‌, ಎಲಿಗೆಂಟ್‌ ಹಾಗೂ ಡಿಸೆಂಟ್‌ ಉಡುಪನ್ನು ಧರಿಸಲು ಇಷ್ಟಪಡುತ್ತೇನೆ.

ವಿಸ್ತಾರ ನ್ಯೂಸ್‌: ನಿಮ್ಮ ಯೂನಿಕ್‌ ಸ್ಟೈಲ್‌ ಸ್ಟೇಟ್ಮೆಂಟ್‌ ಬಗ್ಗೆ ಹೇಳಿ ?

ರೂಪ ಮಳಲಿ : ನನ್ನದು ಯೂನಿಕ್‌ ಎನ್ನುವುದಕ್ಕಿಂತ ಸದಾ ಸಿಂಪಲ್‌ ಕಾಟನ್‌ ಸೀರೆ, ಅದಕ್ಕೊಂದು ಪರ್ಲ್‌ ನೆಕ್‌ಪೀಸ್‌, ಸ್ಟಡ್ಸ್‌ ಧರಿಸುತ್ತೇನೆ. ಇದು ನನ್ನ ಆಲ್‌ ಟೈಮ್‌ ಯೂನಿಕ್‌ ಸ್ಟೈಲ್‌ ಸ್ಟೇಟ್ಮೆಂಟ್ಸ್.‌

Roopa Malali, Chandrayaan - 3 ISRO Deputy Project Director

ವಿಸ್ತಾರ ನ್ಯೂಸ್‌: ಉದ್ಯೋಗಸ್ಥ ಮಹಿಳೆಯರಿಗೆ ನೀವು ನೀಡುವ ಟಿಪ್ಸ್‌ ಏನು ?

ರೂಪಾ ಮಳಲಿ : ನಿಮ್ಮ ವ್ಯಕ್ತಿತ್ವಕ್ಕೆ ತಕ್ಕಂತೆ ನಿಮ್ಮ ಲೈಫ್‌ಸ್ಟೈಲ್‌ ರೂಪಿಸಿಕೊಳ್ಳಿ. ಗುರಿಯೊಂದಿಗೆ ನಿಮ್ಮ ಚಾಯ್ಸ್ಗೂ ಅವಕಾಶ ನೀಡಿ. ಆತ್ಮವಿಶ್ವಾಸದಿಂದ ಮುನ್ನೆಡೆಯಿರಿ. ಇನ್ನು, ಫ್ಯಾಷನ್‌ ವಿಷಯಕ್ಕೆ ಬಂದಲ್ಲಿ, ನಿಮ್ಮ ಮನಸ್ಸಿಗೆ ಮುದ ನೀಡುವ ಉಡುಗೆಗಳನ್ನು ಧರಿಸಿ. ಇಡೀ ದಿನ ಉಲ್ಲಾಸಮಯವಾಗಿರುತ್ತದೆ.

(ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Flower Crown Trend: ಬಣ್ಣಬಣ್ಣದ ಫಂಕಿ ಫ್ಲವರ್‌ ಕ್ರೌನ್‌ಗೆ ಯುವತಿಯರು ಫಿದಾ

Continue Reading
Advertisement
777 Charlie
ಸ್ಯಾಂಡಲ್ ವುಡ್1 min ago

777 Charlie: ಜಪಾನಿನಲ್ಲಿ `777 ಚಾರ್ಲಿ ಹವಾ’: ವರ್ಲ್ಡ್​​ ಟೂರ್‌ಗೆ ಧರ್ಮ ಹಾಗೂ ಚಾರ್ಲಿ ರೆಡಿ!

Food Poisoning
ಪ್ರಮುಖ ಸುದ್ದಿ11 mins ago

Food Poisoning : ಹೃದಯ ವಿದ್ರಾವಕ ಘಟನೆ; ವಿಷ ಆಹಾರ ಸೇವಿಸಿ ಇಬ್ಬರು ಮಕ್ಕಳ ಸಾವು, ಮೂವರು ಅಸ್ವಸ್ಥ

Manjummel Boys
ಮಾಲಿವುಡ್42 mins ago

Manjummel Boys: ‘ಮಂಜುಮ್ಮೆಲ್ ಬಾಯ್ಸ್’ ಒಟಿಟಿ ಡೇಟ್ ಅನೌನ್ಸ್ ಮಾಡಿದ ಡಿಸ್ನಿ!

girl Saved Mother
ಪ್ರಮುಖ ಸುದ್ದಿ49 mins ago

Girl Saved Mother : ಬುದ್ಧಿವಂತ ಬಾಲಕಿ; ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಯನ್ನು ಕಾಪಾಡಿದ 7 ವರ್ಷದ ಪುತ್ರಿ

ವಿದೇಶ1 hour ago

TikTok star: ಇರಾಕ್‌ನಲ್ಲಿ ಗುಂಡಿಕ್ಕಿ ಟಿಕ್‌ಟಾಕ್‌ ಸ್ಟಾರ್‌ನ ಭೀಕರ ಹತ್ಯೆ

Sahil Khan Arrested in Mahadev Betting App Case
ಬಾಲಿವುಡ್1 hour ago

Sahil Khan: ಬೆಟ್ಟಿಂಗ್​ ಅಕ್ರಮದಲ್ಲಿ ಭಾಗಿ; ನಟ ಸಾಹಿಲ್ ಖಾನ್ ಅರೆಸ್ಟ್‌

Modi in Karnataka stay in Belagavi tomorrow and Huge gatherings at five places
ಪ್ರಮುಖ ಸುದ್ದಿ2 hours ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ದೇಶ2 hours ago

Usman Ghani: ಪ್ರಧಾನಿ ಮೋದಿಯನ್ನು ಟೀಕಿಸಿದ್ದ ಬಿಜೆಪಿ ಉಚ್ಚಾಟಿತ ನಾಯಕ ಅರೆಸ್ಟ್‌

Car Accident
ಪ್ರಮುಖ ಸುದ್ದಿ2 hours ago

Car Accident : ಯಮವೇಗದಲ್ಲಿ ಬಂದ ಇನೋವಾ ಕಾರು ಪಲ್ಟಿ, ಯುವತಿ ಸಾವು

Manvita Kamath Marriage Details Future Husband Arun
ಸ್ಯಾಂಡಲ್ ವುಡ್2 hours ago

Manvita Kamath: ‘ಟಗರು ಪುಟ್ಟಿʼ ಮಾನ್ವಿತಾದ್ದು ಲವ್ ಮ್ಯಾರೇಜ್? ಕೊನೆಗೂ ಸ್ಪಷ್ಟನೆ ಕೊಟ್ಟ ನಟಿ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Modi in Karnataka stay in Belagavi tomorrow and Huge gatherings at five places
ಪ್ರಮುಖ ಸುದ್ದಿ2 hours ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ6 hours ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 202418 hours ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ23 hours ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ1 day ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ2 days ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20242 days ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20242 days ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ2 days ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ3 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

ಟ್ರೆಂಡಿಂಗ್‌