Income Tax Returns: ಆದಾಯ ತೆರಿಗೆ ರಿಟರ್ನ್ಸ್; ಯಾವ ಆದಾಯದವರಿಗೆ ಯಾವ ಫಾರ್ಮ್? - Vistara News

ಮನಿ-ಗೈಡ್

Income Tax Returns: ಆದಾಯ ತೆರಿಗೆ ರಿಟರ್ನ್ಸ್; ಯಾವ ಆದಾಯದವರಿಗೆ ಯಾವ ಫಾರ್ಮ್?

ಐಟಿಆರ್ (Income Tax Returns) ಸಲ್ಲಿಸುವಾಗ ಸರಿಯಾದ ಅರ್ಜಿ ನಮೂನೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಆದಾಯ ತೆರಿಗೆ ಇಲಾಖೆಯು ಏಳು ವಿಧದ ಅರ್ಜಿ ನಮೂನೆಗಳನ್ನು ನೀಡುತ್ತದೆ. ಪ್ರತಿಯೊಂದೂ ವಿಭಿನ್ನ ಮಾನದಂಡಗಳನ್ನು ಹೊಂದಿರುತ್ತದೆ. ಯಾವ ಆದಾಯ ವರ್ಗದವರಿಗೆ ಯಾವ ಫಾರ್ಮ್ ಸೂಕ್ತ ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

Income Tax Returns
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಎಲ್ಲ ತೆರಿಗೆದಾರರೇ ಗಮನಿಸಿ. ಈವರೆಗೂ ನೀವು ಆದಾಯ ತೆರಿಗೆ ರಿಟರ್ನ್ (Income Tax Returns) ಫೈಲ್ ಮಾಡದೇ ಇದ್ದರೆ ದಂಡ (fine) ಕಟ್ಟಬೇಕಾಗಬಹುದು. ಹೀಗಾಗಿ ಕೂಡಲೇ ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡಿ. ಯಾಕೆಂದರೆ 2023- 24 ಹಣಕಾಸು ವರ್ಷಕ್ಕೆ (financial year) ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನ ಜುಲೈ 31.

ಈಗಾಗಲೇ ಅನೇಕ ತೆರಿಗೆದಾರರು ತಮ್ಮ ಐಟಿಆರ್ ಅನ್ನು ಸಲ್ಲಿಸಿದ್ದಾರೆ. ಆದರೂ ನೀವು ಸಲ್ಲಿಸಿರುವ ಐಟಿಆರ್ ಸರಿಯಾಗಿದೆಯೇ ಎನ್ನುವುದನ್ನು ಮರು ಪರಿಶೀಲನೆ ಮಾಡುವುದು ಒಳ್ಳೆಯದು. ಐಟಿಆರ್ ಸಲ್ಲಿಸುವಾಗ ಸರಿಯಾದ ಅರ್ಜಿ ನಮೂನೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ಆದಾಯ ತೆರಿಗೆ ಇಲಾಖೆಯು ಏಳು ವಿಧದ ಅರ್ಜಿ ನಮೂನೆಗಳನ್ನು ನೀಡುತ್ತದೆ. ಪ್ರತಿಯೊಂದೂ ವಿಭಿನ್ನ ಮಾನದಂಡಗಳನ್ನು ಹೊಂದಿರುತ್ತದೆ. ಮೊದಲ ಬಾರಿಗೆ ಐಟಿಆರ್ ಅನ್ನು ಸಲ್ಲಿಸುತ್ತಿದ್ದರೆ ಯಾವ ಫಾರ್ಮ್ ಅನ್ನು ಭರ್ತಿ ಮಾಡಬೇಕೆಂದು ನಿರ್ಧರಿಸಲು ಸಹಾಯ ಮಾಡುವ ಮಾಹಿತಿ ಇಲ್ಲಿದೆ.

ಐಟಿಆರ್ ಫಾರ್ಮ್ 1

ವಾರ್ಷಿಕ ಆದಾಯ 50 ಲಕ್ಷ ರೂ. ವರೆಗಿನ ಸಂಬಳ ಪಡೆಯುವ ವ್ಯಕ್ತಿಗಳು ರಿಟರ್ನ್ಸ್ ಸಲ್ಲಿಸಲು ಈ ಫಾರ್ಮ್ ಅನ್ನು ಬಳಸುತ್ತಾರೆ. 50 ಲಕ್ಷ ರೂ. ವರೆಗಿನ ಆದಾಯವು ಸಂಬಳ, ಪಿಂಚಣಿ, ಒಂದು ಮನೆಯ ಆಸ್ತಿಯಿಂದ ಆದಾಯ ಮತ್ತು ಇತರ ಮೂಲಗಳನ್ನು ಒಳಗೊಂಡಿರುತ್ತದೆ. 5,000 ರೂ. ವರೆಗಿನ ಕೃಷಿ ಆದಾಯವೂ ಸೇರಿದೆ.
ಕಂಪೆನಿಯ ನಿರ್ದೇಶಕರಾಗಿದ್ದರೆ, ಪಟ್ಟಿ ಮಾಡದ ಕಂಪೆನಿಯಲ್ಲಿ ಹೂಡಿಕೆ ಮಾಡಿದ್ದರೆ, ಬಂಡವಾಳದಿಂದ ಲಾಭ ಗಳಿಸಿದರೆ, ಒಂದಕ್ಕಿಂತ ಹೆಚ್ಚು ಮನೆ ಆಸ್ತಿಯಿಂದ ಆದಾಯವನ್ನು ಹೊಂದಿದ್ದರೆ ಅಥವಾ ವ್ಯಾಪಾರದಿಂದ ಗಳಿಸಿದರೆ ಈ ಫಾರ್ಮ್ ಅನ್ನು ಬಳಸಲಾಗುವುದಿಲ್ಲ.

ಐಟಿಆರ್ ಫಾರ್ಮ್ 2

ಆದಾಯವು 50 ಲಕ್ಷ ರೂ. ಗಿಂತ ಹೆಚ್ಚಿದ್ದರೆ ಫಾರ್ಮ್ 2 ಬಳಸಿ. ಈ ನಮೂನೆಯು ಒಂದಕ್ಕಿಂತ ಹೆಚ್ಚು ವಸತಿ ಆಸ್ತಿಯಿಂದ ಬರುವ ಆದಾಯ, ಹೂಡಿಕೆಯ ಮೇಲಿನ ಬಂಡವಾಳ ಲಾಭಗಳು ಅಥವಾ ನಷ್ಟಗಳು, 10 ಲಕ್ಷ ರೂ. ಗಿಂತ ಹೆಚ್ಚಿನ ಲಾಭಾಂಶ ಆದಾಯ ಮತ್ತು 5000 ರೂ. ಗಿಂತ ಹೆಚ್ಚಿನ ಕೃಷಿ ಆದಾಯವನ್ನು ಒಳಗೊಂಡಿರುತ್ತದೆ. ಪಿಎಫ್ ಮೇಲಿನ ಬಡ್ಡಿಯಿಂದ ಆದಾಯವನ್ನು ಹೊಂದಿದ್ದರೆ ಈ ಫಾರ್ಮ್ ಸಹ ಅನ್ವಯಿಸುತ್ತದೆ.


ಐಟಿಆರ್ ಫಾರ್ಮ್ 3

ಫಾರ್ಮ್ 3 ವ್ಯಾಪಾರ ಮಾಲೀಕರು, ಪಟ್ಟಿ ಮಾಡದ ಈಕ್ವಿಟಿ ಷೇರುಗಳಲ್ಲಿನ ಹೂಡಿಕೆದಾರರು ಅಥವಾ ಸಂಸ್ಥೆಯಲ್ಲಿ ಪಾಲುದಾರರಾಗಿ ಗಳಿಸುವವರಿಗೆ, ಬಡ್ಡಿ, ಸಂಬಳ, ಬೋನಸ್, ಬಂಡವಾಳ ಲಾಭಗಳು, ಕುದುರೆ ರೇಸಿಂಗ್, ಲಾಟರಿ ಅಥವಾ ಬಹು ಆಸ್ತಿಗಳಿಂದ ಬಾಡಿಗೆಯಿಂದ ಆದಾಯವನ್ನು ಹೊಂದಿದ್ದರೆ ಇದು ಅನ್ವಯಿಸುತ್ತದೆ. ಸ್ವತಂತ್ರೋದ್ಯೋಗಿಗಳು ಸಹ ಈ ಫಾರ್ಮ್ ಅನ್ನು ಬಳಸಬೇಕು.

ಐಟಿಆರ್ ಫಾರ್ಮ್ 4

ಈ ನಮೂನೆಯು 50 ಲಕ್ಷ ರೂ. ನಿಂದ 2 ಕೋಟಿ ರೂಪಾಯಿಗಳ ನಡುವಿನ ಆದಾಯವಿರುವ ವ್ಯವಹಾರಗಳು, ವೈದ್ಯರು ಅಥವಾ ವಕೀಲರಿಗಾಗಿ ಆಗಿದೆ. 50 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವ ಸ್ವತಂತ್ರೋದ್ಯೋಗಿಗಳು ಸಹ ಈ ಫಾರ್ಮ್ ಅನ್ನು ಬಳಸಬೇಕು.

ಇದನ್ನೂ ಓದಿ: Money Guide: ನಿಮ್ಮ ಎಲ್‌ಐಸಿ ಪಾಲಿಸಿ ಲ್ಯಾಪ್ಸ್‌ ಆಗಿದೆಯಾ? ನವೀಕರಿಸಲು ಹೀಗೆ ಮಾಡಿ

ಐಟಿಆರ್ ಫಾರ್ಮ್ 5

ಫಾರ್ಮ್ 5 ಸಂಸ್ಥೆಗಳು, ಎಲ್‌ಎಲ್‌ಪಿಗಳು, ಎಒಪಿಗಳು ಅಥವಾ ಬಿಒಐಗಳಾಗಿ ನೋಂದಾಯಿಸಲಾದ ಘಟಕಗಳಿಗೆ ಆಗಿದೆ. ಇದನ್ನು ಸಂಘಸಂಸ್ಥೆಗಳಿಗೂ ಬಳಸಲಾಗುತ್ತದೆ.

ಐಟಿಆರ್ ಫಾರ್ಮ್ 6 ಮತ್ತು 7

ಫಾರ್ಮ್ 6 ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 11 ರ ಅಡಿಯಲ್ಲಿ ವಿನಾಯಿತಿ ಪಡೆಯದ ಕಂಪೆನಿಗಳಿಗೆ. ಫಾರ್ಮ್ 7 ಕಂಪೆನಿಗಳು ಮತ್ತು ವ್ಯಕ್ತಿಗಳಿಗೆ 139(4A), 139(4B), 139(4C), ಅಥವಾ 139(4D) ಅಡಿಯಲ್ಲಿ ರಿಟರ್ನ್ಸ್ ಸಲ್ಲಿಸಲು ಅಗತ್ಯವಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

National Pension System: ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆಗಾಗಿ ಎನ್‌ಪಿಎಸ್ ಯೋಜನೆ ಸೂಕ್ತ

ನಿವೃತ್ತಿ ಬಳಿಕ ಆರ್ಥಿಕ ಭದ್ರತೆ ಮತ್ತು ಸ್ಥಿರವಾದ ಬದುಕನ್ನು ಖಚಿತಪಡಿಸುವ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ (National Pension System) 18 ವರ್ಷ ಮೇಲ್ಪಟ್ಟ ಎಲ್ಲರೂ ಹೂಡಿಕೆ ಮಾಡಬಹುದಾಗಿದೆ. ಹಣಕಾಸಿನ ವಿಚಾರದಲ್ಲಿ ಸರಿಯಾದ ಸಮಯದಲ್ಲಿ ಸರಿಯಾದ ಯೋಜನೆ ರೂಪಿಸಿಕೊಳ್ಳುವುದು ಸುಭದ್ರ ಭವಿಷ್ಯದ ದೃಷ್ಟಿಯಿಂದ ಅತ್ಯತ್ತಮ ಮಾರ್ಗವಾಗಿದೆ. ಎನ್‌ಪಿಎಸ್ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

India's National Pension System
Koo

ನಿವೃತ್ತಿ ಬಳಿಕ ಆರ್ಥಿಕ ಭದ್ರತೆ ಮತ್ತು ಸ್ಥಿರವಾದ ಬದುಕನ್ನು ಖಚಿತಪಡಿಸುವ ಉದ್ದೇಶದಿಂದ ಭಾರತದಲ್ಲಿ ಸರ್ಕಾರಿ ಪ್ರಾಯೋಜಿತ ಪಿಂಚಣಿ ಯೋಜನೆಯಾದ (pension scheme) ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (National Pension System) ಅನ್ನು ಜಾರಿಗೆ ತರಲಾಗಿದೆ. ಇದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (Pension Fund Regulatory and Development Authority) ಅಡಿಯಲ್ಲಿ ಸ್ವಯಂಪ್ರೇರಿತ, ದೀರ್ಘಾವಧಿಯ ನಿವೃತ್ತಿ ಹೂಡಿಕೆ ಯೋಜನೆಯಾಗಿದೆ. ನಿವೃತ್ತಿ ಯೋಜನೆಗಾಗಿ ಉದ್ಯೋಗದ ಅವಧಿಯಲ್ಲಿ ವ್ಯವಸ್ಥಿತ ಉಳಿತಾಯಕ್ಕೆ ಆದ್ಯತೆ ನೀಡಲು ಎನ್ ಪಿಎಸ್ ಒಂದು ಅತ್ಯತ್ತಮ ಆಯ್ಕೆಯಾಗಿದೆ.

ದಾಖಲಾತಿ ಸುಲಭ

18ರಿಂದ 65 ವರ್ಷ ವಯಸ್ಸಿನ ಭಾರತೀಯ ನಾಗರಿಕರು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ಆನ್‌ಲೈನ್‌ನಲ್ಲಿ eNPS ಪೋರ್ಟಲ್ ಮೂಲಕ ಅಥವಾ ಆಫ್‌ಲೈನ್‌ನಲ್ಲಿ ಯಾವುದೇ ಪಾಯಿಂಟ್ ಆಫ್ ಪ್ರೆಸೆನ್ಸ್-ಸರ್ವಿಸ್ ಪ್ರೊವೈಡರ್‌ನಲ್ಲಿ ಮಾಡಿಸಬಹುದು. ಇದಕ್ಕಾಗಿ ಗ್ರಾಹಕರ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ ಮತ್ತು ಚಂದಾದಾರರ ಫಾರ್ಮ್ ಅನ್ನು ಭರ್ತಿ ಮಾಡಬೇಕು.

ಖಾತೆಗಳಿಗೆ ಆರಂಭಿಕ 500 ರೂ. ಅಗತ್ಯವಿದ್ದು, ಕೆಲವು ವಿನಾಯಿತಿಗಳೊಂದಿಗೆ ನಿವೃತ್ತಿ ಅಥವಾ 60 ವರ್ಷವನ್ನು ತಲುಪುವವರೆಗೆ ಇವುಗಳನ್ನು ಹಿಂಪಡೆಯಲಾಗುವುದಿಲ್ಲ.


ಹೂಡಿಕೆಯ ಆಯ್ಕೆ

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯು ಶ್ರೇಣಿ I ಮತ್ತು ಶ್ರೇಣಿ II ಖಾತೆಗಳನ್ನು ನೀಡುತ್ತದೆ. ಶ್ರೇಣಿ Iರಲ್ಲಿ ನಿವೃತ್ತಿಯ ಉಳಿತಾಯಕ್ಕಾಗಿ ಆದರೆ ಶ್ರೇಣಿ II ಸಕ್ರಿಯ ಸ್ವಯಂಪ್ರೇರಿತ ಪೂರಕ ಆಯ್ಕೆಯಾಗಿದೆ.

ಈಕ್ವಿಟಿ, ಕಾರ್ಪೊರೇಟ್ ಬಾಂಡ್‌ಗಳು, ಸರ್ಕಾರಿ ಭದ್ರತೆಗಳು ಮತ್ತು ಪರ್ಯಾಯ ಹೂಡಿಕೆಗಳ ನಡುವೆ ಸ್ವತ್ತುಗಳನ್ನು ನಿಯೋಜಿಸಲು ಚಂದಾದಾರರು ಸಕ್ರಿಯ ಆಯ್ಕೆಯನ್ನು ಮಾಡಬಹುದು ಅಥವಾ ಸ್ವಯಂ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಇದು ಸ್ವಯಂಚಾಲಿತವಾಗಿ ವಯಸ್ಸಿನ ಆಧಾರದ ಮೇಲೆ ಬದಲಾಗುತ್ತದೆ.


ತೆರಿಗೆ ಉಳಿತಾಯ

ಎನ್‌ಪಿಎಸ್‌ನಲ್ಲಿ ತೆರಿಗೆ ಪ್ರಯೋಜನಗಳನ್ನು ನೀಡಲಾಗಿದೆ. ಎನ್‌ಪಿಎಸ್‌ನಲ್ಲಿನ ಹೂಡಿಕೆಗಳು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿಸಿಇ ಅಡಿಯಲ್ಲಿ ವಾರ್ಷಿಕ 1.5 ಲಕ್ಷ ರೂ.ವರೆಗಿನ ತೆರಿಗೆ ಪ್ರಯೋಜನಗಳನ್ನು ಒದಗಿಸುತ್ತದೆ. ಇದು ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ಚಂದಾದಾರರಿಗೆ ಅನ್ವಯವಾಗುತ್ತದೆ. ಸೆಕ್ಷನ್ 80ಸಿಸಿಡಿ(1ಬಿ) ಅಡಿಯಲ್ಲಿ 50,000 ರೂ. ವರೆಗಿನ ವಿಶೇಷ ಕಡಿತ ಲಭ್ಯವಿದೆ.

ಇದನ್ನೂ ಓದಿ: ITR Filing: ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯ ದಿನಾಂಕ 1 ತಿಂಗಳು ವಿಸ್ತರಣೆಗೆ ಮನವಿ

ಹಿಂತೆಗೆದುಕೊಳ್ಳಲು ಸರಳ ನಿಯಮ

ವಯಸ್ಸು 60 ತಲುಪಿದ ಅನಂತರ ಅಥವಾ ನಿವೃತ್ತಿಯಾದ ಬಳಿಕ ಚಂದಾದಾರರು ತಮ್ಮ ಕಾರ್ಪಸ್ ತೆರಿಗೆ- ಮುಕ್ತ ಶೇ. 60ರಷ್ಟನ್ನು ಮರಳಿ ಪಡೆಯಬಹುದು. ಉಳಿದ ಶೇ.40ರಷ್ಟನ್ನು ಸಾಮಾನ್ಯ ನಿವೃತ್ತಿ ಆದಾಯಕ್ಕಾಗಿ ವರ್ಷಾಶನವನ್ನು ಪಡೆಯಬಹುದಾಗಿದೆ.

60 ವರ್ಷಕ್ಕಿಂತ ಮೊದಲು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಿಂದ ನಿರ್ಗಮಿಸಲು ಸಾಧ್ಯ. ಆದರೆ ಇದು ಗಂಭೀರ ಅನಾರೋಗ್ಯದಂತಹ ಕಾರಣಗಳಿಗಾಗಿ ಮಾತ್ರ ಸಾಧ್ಯ.

Continue Reading

ಮನಿ-ಗೈಡ್

LIC New Jeevan Shanti Plan: ಒಮ್ಮೆ ಪಾವತಿಸಿದರೆ ಸಾಕು; ಜೀವನ ಪರ್ಯಂತ ಪಿಂಚಣಿ!

ಉದ್ಯೋಗದಲ್ಲಿದ್ದಾಗ ನಾವು ಮಾಡಬಹುದಾದ ಒಂದು ದೊಡ್ಡ ಮೊತ್ತದ ಉಳಿತಾಯವೂ ವೃದ್ಧಾಪ್ಯದಲ್ಲಿ ನಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸುತ್ತದೆ. ಆದರೆ ದೈನಂದಿನ ಕೆಲಸಕ್ಕೆ ನಿಯಮಿತ ಆದಾಯದ ಅಗತ್ಯವಿರುತ್ತದೆ. ಇದಕ್ಕಾಗಿ ವ್ಯವಸ್ಥೆ ಇಲ್ಲದಿದ್ದರೆ, ವೃದ್ಧಾಪ್ಯದಲ್ಲಿ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಅಗತ್ಯಕ್ಕೂ ಇತರರನ್ನು ಅವಲಂಬಿಸಬೇಕಾಗುತ್ತದೆ. ಎಲ್ ಇಸಿಯ ಹೊಸ ಜೀವನ ಶಾಂತಿ ಯೋಜನೆಯು (LIC New Jeevan Shanti Plan) ಈ ಸಮಸ್ಯೆಯನ್ನು ದೂರಮಾಡಬಲ್ಲದು. ಈ ಯೋಜನೆಯ ವಿವರ ಇಲ್ಲಿದೆ.

VISTARANEWS.COM


on

By

LIC New Jeevan Shanti Plan
Koo

ವೃದ್ಧಾಪ್ಯದಲ್ಲಿ ಆರ್ಥಿಕ ತೊಂದರೆಯನ್ನು ದೂರ ಮಾಡಲು ಪಿಂಚಣಿ ಯೋಜನೆಯು (lifetime pension) ನಿಮಗೆ ಸಹಾಯ ಮಾಡುತ್ತದೆ. ಎಲ್‌ಐಸಿಯು (LIC) ಪರಿಚಯಿಸಿರುವ ಹೊಸ ಜೀವನ ಶಾಂತಿ ಯೋಜನೆಯು (LIC New Jeevan Shanti Plan) ವೃದ್ಧಾಪ್ಯದಲ್ಲಿ ಎದುರಾಗಬಹುದಾದ ಹಣಕಾಸಿನ ಸಮಸ್ಯೆಯನ್ನು ಪರಿಹರಿಸುತ್ತದೆ. ಇದಕ್ಕಾಗಿ ಒಮ್ಮೆ ಮಾತ್ರ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಬಳಿಕ ಜೀವಮಾನ ಪೂರ್ತಿ ಪಿಂಚಣಿ ಸೌಲಭ್ಯ ಪಡೆಯಬಹುದು.

ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೆಲಸದ ಸಮಯದಲ್ಲಿ ಸಾಕಷ್ಟು ಹಣವನ್ನು ಗಳಿಸಬಹುದು ಮತ್ತು ವೃದ್ಧಾಪ್ಯಕ್ಕಾಗಿ ಅದನ್ನು ಉಳಿಸಬಹುದು.

ಒಂದು ದೊಡ್ಡ ಮೊತ್ತದ ಉಳಿತಾಯವೂ ಎಲ್ಲಾ ಅಗತ್ಯಗಳನ್ನು ಪೂರೈಸುತ್ತದೆ. ಆದರೆ ದೈನಂದಿನ ಕೆಲಸಕ್ಕೆ ನಿಯಮಿತ ಆದಾಯದ ಅಗತ್ಯವಿರುತ್ತದೆ. ನಿಮ್ಮಲ್ಲಿ ಈ ವ್ಯವಸ್ಥೆ ಇಲ್ಲದಿದ್ದರೆ, ವೃದ್ಧಾಪ್ಯದಲ್ಲಿ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಅಗತ್ಯಕ್ಕೂ ಇತರರನ್ನು ಅವಲಂಬಿಸಬೇಕಾಗುತ್ತದೆ. ಎಲ್ ಇಸಿಯ ಹೊಸ ಜೀವನ ಶಾಂತಿ ಯೋಜನೆಯು ಈ ಸಮಸ್ಯೆಯನ್ನು ಪರಿಹರಿಸುತ್ತದೆ.

ಹೊಸ ಜೀವನ್ ಶಾಂತಿ ಯೋಜನೆ

ಈ ಯೋಜನೆಯ ಅಡಿಯಲ್ಲಿ ಎರಡು ಹೂಡಿಕೆ ಆಯ್ಕೆಗಳನ್ನು ನೀಡಲಾಗಿದೆ. ಮೊದಲ ಏಕ ಜೀವನ ಮತ್ತು ಎರಡನೇ ಜಂಟಿ ಜೀವನ. ನೀವು ‘ಡಿಫರ್ಡ್ ಆನ್ಯುಟಿ ಫಾರ್ ಸಿಂಗಲ್ ಲೈಫ್’ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಮುಂದೂಡಲ್ಪಟ್ಟ ಅವಧಿ ಮುಗಿದ ಅನಂತರ ನಿಗದಿತ ಮೊತ್ತವನ್ನು ಪಿಂಚಣಿಯಾಗಿ ಪಡೆಯುತ್ತೀರಿ ಮತ್ತು ಮರಣದ ಅನಂತರ ಹೂಡಿಕೆ ಮಾಡಿದ ಹಣವನ್ನು ನಿಮ್ಮ ನಾಮಿನಿಗೆ ಹಿಂತಿರುಗಿಸಲಾಗುತ್ತದೆ.

ಜಂಟಿ ಜೀವನಕ್ಕಾಗಿ ಮುಂದೂಡಲ್ಪಟ್ಟ ವರ್ಷಾಶನದಲ್ಲಿ ಹೂಡಿಕೆ ಮಾಡುವುದರಿಂದ ಮುಂದೂಡಲ್ಪಟ್ಟ ಅವಧಿ ಮುಗಿದ ಅನಂತರ ನೀವು ಪಿಂಚಣಿ ಪಡೆಯಲು ಪ್ರಾರಂಭಿಸುತ್ತೀರಿ ಮತ್ತು ನಿಮ್ಮ ಮರಣದ ಅನಂತರ, ಯಾರ ಹೆಸರನ್ನು ಸೇರಿಸಲಾಗಿದೆಯೋ ಆ ವ್ಯಕ್ತಿಗೆ ಆಜೀವ ಪಿಂಚಣಿ ಸಿಗುತ್ತದೆ.

ಹೂಡಿಕೆ ಮಾಡಿದ ಮೊತ್ತವನ್ನು ಇಬ್ಬರ ಮರಣದ ಅನಂತರವೇ ನಾಮಿನಿಗೆ ನೀಡಲಾಗುತ್ತದೆ. ಅಜ್ಜ, ಪೋಷಕರು, ಮಕ್ಕಳು, ಮೊಮ್ಮಕ್ಕಳು, ಗಂಡ- ಹೆಂಡತಿ ಅಥವಾ ಒಡಹುಟ್ಟಿದವರಂತಹ ಹತ್ತಿರದ ಸಂಬಂಧಿಗಳೊಂದಿಗೆ ಜಂಟಿ ಜೀವನ ಯೋಜನೆಯನ್ನು ತೆಗೆದುಕೊಳ್ಳಬಹುದು. ಪಿಂಚಣಿಗಾಗಿ ನೀವು ವಾರ್ಷಿಕ, ಅರ್ಧ ವಾರ್ಷಿಕ, ತ್ರೈಮಾಸಿಕ ಮತ್ತು ಮಾಸಿಕ ಆಯ್ಕೆಯನ್ನು ಪಡೆಯುತ್ತೀರಿ.

LIC New Jeevan Shanti Plan
LIC New Jeevan Shanti Plan


ಕನಿಷ್ಠ 1.5 ಲಕ್ಷ ರೂ. ಹೂಡಿಕೆ ಅಗತ್ಯ

ಈ ಯೋಜನೆಯಲ್ಲಿ ಕನಿಷ್ಠ 1.5 ಲಕ್ಷ ರೂ. ಹೂಡಿಕೆ ಮಾಡುವುದು ಅವಶ್ಯಕ. ಗರಿಷ್ಠ ಖರೀದಿ ಬೆಲೆಗೆ ಯಾವುದೇ ಮಿತಿಯಿಲ್ಲ. 1.5 ಲಕ್ಷ ರೂ. ಹೂಡಿಕೆ ಮಾಡಿದರೆ ವಾರ್ಷಿಕವಾಗಿ 12 ಸಾವಿರ ರೂಪಾಯಿ ಪಿಂಚಣಿ ಮತ್ತು ಮಾಸಿಕ 1000 ರೂಪಾಯಿಗಳನ್ನು ಪಡೆಯಬಹುದು.

30ರಿಂದ 79 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ಪಾಲಿಸಿಯನ್ನು ಖರೀದಿಸಬಹುದು. ಪಾಲಿಸಿಯನ್ನು ಖರೀದಿಸಿದ ಅನಂತರ ನಿಮಗೆ ಇಷ್ಟವಾಗದಿದ್ದರೆ ನೀವು ಅದನ್ನು ಯಾವಾಗ ಬೇಕಾದರೂ ಸರೆಂಡರ್ ಮಾಡಬಹುದು. ಈ ಪಾಲಿಸಿಯಲ್ಲಿ ಸಾಲ ಪಡೆಯುವ ಸೌಲಭ್ಯವನ್ನೂ ನೀಡಲಾಗಿದೆ.

10 ಲಕ್ಷ ರೂ. ಹೂಡಿಕೆಗೆ ಎಷ್ಟು ಪಿಂಚಣಿ?

ಈ ಪಾಲಿಸಿಯನ್ನು ಖರೀದಿಸುವಾಗ ಮುಂದೂಡುವ ಅವಧಿ ಅಂದರೆ ಹೂಡಿಕೆ ಮತ್ತು ಪಿಂಚಣಿ ಆರಂಭದ ನಡುವಿನ ಅವಧಿ ಅಥವಾ ಹೆಚ್ಚಿನ ವಯಸ್ಸು ಹೂಡಿಕೆ ಮಾಡಿದರೆ ಹೆಚ್ಚಿನ ಪಿಂಚಣಿ ಪಡೆಯುತ್ತೀರಿ ಎಂಬುದನ್ನು ನೆನಪಿನಲ್ಲಿಡಿ.

45ನೇ ವಯಸ್ಸಿನಲ್ಲಿ ಹೊಸ ಜೀವನ ಶಾಂತಿ ಯೋಜನೆಯ ಏಕ ಜೀವನಕ್ಕಾಗಿ ಮುಂದೂಡಲ್ಪಟ್ಟ ವರ್ಷಾಶನವನ್ನು 10 ಲಕ್ಷ ರೂಪಾಯಿಗೆ ಖರೀದಿಸಿದರೆ ಮತ್ತು 12 ವರ್ಷಗಳ ಮುಂದೂಡುವ ಅವಧಿಯನ್ನು ಇಟ್ಟುಕೊಂಡರೆ 12 ವರ್ಷಗಳ ಅನಂತರ ವಾರ್ಷಿಕವಾಗಿ 1,42,500 ರೂಪಾಯಿಗಳನ್ನು ಪಡೆಯಲು ಪ್ರಾರಂಭಿಸುತ್ತೀರಿ.

ಇದನ್ನೂ ಓದಿ: LPG Price Hike: ತಿಂಗಳ ಆರಂಭದಲ್ಲೇ ಎಲ್‌ಪಿಜಿ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್‌; ಬೆಂಗಳೂರಿನಲ್ಲಿ ಇಷ್ಟಾಗಿದೆ ದರ

ಅರ್ಧ ವಾರ್ಷಿಕ ಪಿಂಚಣಿ ಆಯ್ಕೆ ಮಾಡಿದರೆ ಪ್ರತಿ ಆರು ತಿಂಗಳಿಗೊಮ್ಮೆ 69,825 ರೂ.ಗಳನ್ನು, ತ್ರೈಮಾಸಿಕ ಪಿಂಚಣಿ ಆಯ್ಕೆಯನ್ನು ಮಾಡಿದರೆ 34,556 ಮತ್ತು ಮಾಸಿಕ ಪಿಂಚಣಿ ಆಯ್ಕೆ ಮಾಡಿದರೆ ಪ್ರತಿ ತಿಂಗಳು 11,400 ರೂ. ಪಡೆಯಬಹುದು.

45ನೇ ವಯಸ್ಸಿನಲ್ಲಿ ಜಂಟಿ ಜೀವನ ಯೋಜನೆಗಾಗಿ ಮುಂದೂಡಲ್ಪಟ್ಟ ವರ್ಷಾಶನವನ್ನು 12 ವರ್ಷಗಳ ಮುಂದೂಡಿಕೆ ಅವಧಿಯೊಂದಿಗೆ 10 ಲಕ್ಷಕ್ಕೆ ಖರೀದಿಸಿದರೆ ವಾರ್ಷಿಕವಾಗಿ 1,33,400 ರೂ., ಪ್ರತಿ ಆರು ತಿಂಗಳಿಗೊಮ್ಮೆ 65,366 ರೂ., ಮೂರು ತಿಂಗಳಿಗೊಮ್ಮೆ 32,350 ರೂ., ಮಾಸಿಕ 10,672 ರೂ. ಪಡೆಯಬಹುದು.

Continue Reading

ಮನಿ-ಗೈಡ್

Money Guide: PPF v/s NPS Vatsalya ನಿಮ್ಮ ಮಕ್ಕಳಿಗೆ ಯಾವುದು ಉತ್ತಮ ಯೋಜನೆ? ಇಲ್ಲಿದೆ ವಿವರ

Money Guide: ಸಾರ್ವಜನಿಕರಲ್ಲಿ ಉಳಿತಾಯದ ಮನೋಭಾವವನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಸಾರ್ವಜನಿಕ ಭವಿಷ್ಯ ನಿಧಿ ಮತ್ತು ರಾಷ್ಟ್ರೀಯ ಪಿಂಚಣಿ ವಾತ್ಸಲ್ಯ ಯೋಜನೆಯನ್ನು ಆರಂಭಿಸಿದೆ. ಇವೆರಡು ಯೋಜನೆಗಳ ವೈಶಿಷ್ಟ್ಯ, ಯೋಜನೆ ನಡುವಿನ ವ್ಯತ್ಯಾಸ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಮಕ್ಕಳ ಜೀವನ, ಭವಿಷ್ಯ ಉತ್ತಮವಾಗಿರಬೇಕು ಎನ್ನುವುದು ಪ್ರತಿಯೊಬ್ಬ ಪೋಷಕರ ಕನಸು. ಈ ಕನಸು ನನಸಾಗಬೇಕಾದರೆ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು. ಪ್ರಸ್ತುತ ಹೆಚ್ಚುತ್ತಿರುವ ಜೀವನ ವೆಚ್ಚ, ದುಬಾರಿಯಾಗುತ್ತಿರುವ ಶಿಕ್ಷಣ ಮುಂತಾದ ಕಾರಣಗಳಿಂದ ಇದಕ್ಕಾಗಿ ಈಗಲೇ ಒಂದಷ್ಟು ಯೋಜನೆ ರೂಪಿಸಬೇಕಾಗುತ್ತದೆ. ಜತೆಗೆ ಅವರ ನಿವೃತ್ತಿ ಜೀವನದ ಬಗ್ಗೆಯೂ ಚಿಂತನೆ ನಡೆಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡುವುದು ಅತ್ಯುತ್ತಮ ನಿರ್ಧಾರ ಎನಿಸಿಕೊಳ್ಳಲಿದೆ ಎನ್ನುತ್ತಾರೆ ಆರ್ಥಿಕ ತಜ್ಞರು. ಇದೀಗ ಅಪ್ರಾಪ್ತ ವಯಸ್ಕರ ಹೆಸರಿನಲ್ಲಿಯೂ ಹೂಡಿಕೆ ಮಾಡಬಹುದಾದ ಆಯ್ಕೆ ಲಭ್ಯ. ಅವರ ಉನ್ನತ ಶಿಕ್ಷಣಕ್ಕೆ ಇದು ನೆರವಾಗುತ್ತದೆ. ಹಾಗಾದರೆ ಹೂಡಿಕೆಗೆ ಉತ್ತಮ ಆಯ್ಕೆ ಎನಿಸಿಕೊಂಡಿರುವ ಪಿಪಿಎಫ್‌ ಮತ್ತು ಇತ್ತೀಚೆಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿರುವ ಎನ್‌ಪಿಎಸ್ ವಾತ್ಸಲ್ಯ ಯೋಜನೆ ಪೈಕಿ ಯಾವುದು ಉತ್ತಮ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ (Money Guide).

ಸಾರ್ವಜನಿಕರಲ್ಲಿ ಉಳಿತಾಯದ ಮನೋಭಾವವನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಸಾರ್ವಜನಿಕ ಭವಿಷ್ಯ ನಿಧಿ (Public Provident Fund-PPF) ಮತ್ತು ರಾಷ್ಟ್ರೀಯ ಪಿಂಚಣಿ ವಾತ್ಸಲ್ಯ ಯೋಜನೆಯನ್ನು (National Pension Scheme Vatsalya) ಆರಂಭಿಸಿದೆ. ಇವೆರಡು ಯೋಜನೆಗಳ ವೈಶಿಷ್ಟ್ಯ, ಯೋಜನೆ ನಡುವಿನ ವ್ಯತ್ಯಾಸ ನೋಡೋಣ.

ಪಿಪಿಎಫ್‌

ಸಾರ್ವಜನಿಕ ಭವಿಷ್ಯ ನಿಧಿ-ಇದು ಸರ್ಕಾರ ನಿರ್ವಹಿಸುವ ಉಳಿತಾಯ ಯೋಜನೆಯಾಗಿರುವುದರಿಂದ ಇದರಲ್ಲಿ ಅಪಾಯ ಕಡಿಮೆ. ಜತೆಗೆ ತೆರಿಗೆ ಪ್ರಯೋಜವೂ ಲಭ್ಯ. ಮಕ್ಕಳಲ್ಲಿ ಉಳಿತಾಯ ಮನೋಭಾವವನ್ನು ಉತ್ತೇಜಿಸಲು ಸರ್ಕಾರ ಪಿಪಿಎಫ್‌ ಮೈನರ್‌ (PPF minor) ಖಾತೆಯನ್ನೂ ಜಾರಿಗೆ ತಂದಿದೆ. ಪಾಲಕರು ತಮ್ಮ ಅಪ್ರಾಪ್ತ ಮಗುವಿನ ಹೆಸರಿನಲ್ಲಿ ಪಿಪಿಎಫ್ ಖಾತೆಯನ್ನು ತೆರೆಯುವ ಆಯ್ಕೆಯನ್ನು ಹೊಂದಿದ್ದಾರೆ. ಆಕರ್ಷಕ ಬಡ್ಡಿದರ ಮತ್ತು ತೆರಿಗೆ ಪ್ರಯೋಜನಗಳನ್ನು ನೀಡುವ ಪಿಪಿಎಫ್ ಖಾತೆಯು ಮಕ್ಕಳಿಗಾಗಿಯೇ ವಿನ್ಯಾಸಗೊಳಿಸಲಾದ ಹೂಡಿಕೆ ಆಯ್ಕೆಗಳಲ್ಲಿ ಒಂದು. ಅಪ್ರಾಪ್ತ ಮಗುವಿಗೆ 18 ವರ್ಷ ತುಂಬುವವರೆಗೆ ಪಿಪಿಎಫ್ ಖಾತೆಯನ್ನು ಪಾಲಕರು ನಿರ್ವಹಿಸುತ್ತಾರೆ. ಬಳಿಕ ಆತ / ಅವಳು ತನ್ನ ಖಾತೆಯನ್ನು ಸ್ವತಂತ್ರವಾಗಿ ನಿರ್ವಹಿಸಬಹುದಾಗಿದೆ.

ಪಿಪಿಎಫ್‌ನ ವೈಶಿಷ್ಟ್ಯ

  • ವಾರ್ಷಿಕ ಗರಿಷ್ಠ 1,50,000 ರೂ.ಗಳಿಂದ ಕನಿಷ್ಠ 500 ರೂ.ಗಳವರೆಗೆ ಠೇವಣಿ ಇಡಬಹುದು.
  • ಮೂಲ ಅವಧಿ 15 ವರ್ಷಗಳು. ಅದರ ನಂತರ 5 ವರ್ಷಗಳ ಅವಧಿಗೆ ವಿಸ್ತರಿಸಬಹುದು. 
  • ಪ್ರತಿ ತ್ರೈಮಾಸಿಕದಲ್ಲಿ ಬಡ್ಡಿದರವನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಪ್ರಸ್ತುತ ಬಡ್ಡಿದರ ವಾರ್ಷಿಕ ಶೇ. 7.10ರಷ್ಟಿದೆ.
  • ಖಾತೆಯ ತೆರೆದ ದಿನಾಂಕ ಆಧಾರದಲ್ಲಿ ಸಾಲ ಪಡೆಯಬಹುದು.
  • ಪಿಪಿಎಫ್ ಖಾತೆಗಳಲ್ಲಿನ ಹೂಡಿಕೆಗಳು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹವಾಗಿವೆ.
  • ಒಂದು ಅಥವಾ ಹೆಚ್ಚು ವ್ಯಕ್ತಿಗಳ ನಾಮನಿರ್ದೇಶನ ಸೌಲಭ್ಯ ಇದೆ.
  • ಖಾತೆಯನ್ನು ಬ್ಯಾಂಕ್‌ ಅಥವಾ ಪೋಸ್ಟ್‌ ಆಫೀಸ್‌ನ ಇತರ ಶಾಖೆಗಳಿಗೆ ವರ್ಗಾಯಿಸಬಹುದು.

ಎನ್‌ಪಿಎಸ್‌ ವಾತ್ಯಲ್ಯ ಯೋಜನೆ

ಎನ್‌ಪಿಎಸ್‌ ವಾತ್ಸಲ್ಯ – 2024ರ ಕೇಂದ್ರ ಬಜೆಟ್‌ನಲ್ಲಿ ಪರಿಚಯಿಸಲಾದ ಹೊಸ ಪಿಂಚಣಿ ಯೋಜನೆಯಾಗಿದ್ದು, ಅಪ್ರಾಪ್ತ ವಯಸ್ಕ ಮಕ್ಕಳ ಹೆಸರಿನಲ್ಲಿ ಪೋಷಕ ಖಾತೆ ತೆರೆಯಬಹುದು. ಪೋಷಕರಿಗೆ ತಮ್ಮ ಅಪ್ರಾಪ್ತ ವಯಸ್ಸಿನ ಮಗುವಿನ ಎನ್‌ಪಿಎಸ್ ಖಾತೆಯನ್ನು ಪ್ರಾರಂಭಿಸಲು ಅವಕಾಶ ನೀಡುವ ಮೂಲಕ ಚಿಕ್ಕ ವಯಸ್ಸಿನಿಂದಲೇ ಜವಾಬ್ದಾರಿಯುತ ಹಣಕಾಸು ನಿರ್ವಹಣೆಗೆ ಅಡಿಪಾಯವನ್ನು ಹಾಕಿಕೊಟ್ಟಂತಾಗುತ್ತದೆ. ಪ್ರೌಢಾವಸ್ಥೆಯಲ್ಲಿ ಈ ಖಾತೆಗಳು ನಿಯಮಿತ ಎನ್‌ಪಿಎಸ್ ಯೋಜನೆಗಳಾಗಿ ಪರಿವರ್ತನೆಯಾಗುತ್ತವೆ. ಇದರಿಂದ ಮಕ್ಕಳ ಪ್ರೌಢಾವಸ್ಥೆಯಲ್ಲಿ ಉಳಿತಾಯ ಅಭ್ಯಾಸ ಸುಗಮವಾಗಿ ಮುಂದುವರಿಯುತ್ತದೆ.

ಎನ್‌ಪಿಎಸ್‌ ಅನ್ನು 18 ವರ್ಷದ ನಂತರ ಆರಂಭಿಸಬಹುದಾಗಿದ್ದರೆ ಎನ್‌ಪಿಎಸ್ ವಾತ್ಸಲ್ಯ ಯೋಜನೆಯಲ್ಲಿ ಪೋಷಕರು ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಬಹುದಾಗಿದೆ. ಎನ್‌ಪಿಎಸ್ ಯೋಜನೆಯಡಿ ಖಾತೆದಾರರು ನಿರ್ದಿಷ್ಟ ಮೊತ್ತದ ಬಡ್ಡಿಯನ್ನು ಪಡೆಯುತ್ತಾರೆ. ನಿಮ್ಮ ಮಕ್ಕಳು 60ರ ನಿವೃತ್ತಿ ವಯಸ್ಸನ್ನು ತಲುಪಿದ ಮೇಲೆ ಖಾತೆಯಲ್ಲಿರುವ ಸಂಗ್ರಹ ಮೊತ್ತದೊಂದಿಗೆ ಬಡ್ಡಿ ಸೇರಿ ಗಣನೀಯ ಮೊತ್ತವನ್ನು ಪಡೆಯುತ್ತಾರೆ.

ಯಾವುದು ಉತ್ತಮ?

ಎನ್‌ಪಿಎಸ್‌ ವಾತ್ಯಲ್ಯ ಯೋಜನೆಯನ್ನು ಸರ್ಕಾರ ಇತ್ತೀಚೆಗೆಷ್ಟೇ ಘೋಷಿಸಿದ್ದು ಹೂಡಿಕೆ ಮಾಡಬಹುದಾದ ಅಪ್ರಾಪ್ತ ವಯಸ್ಕರ ಕನಿಷ್ಠ ವಯಸ್ಸನ್ನು ಇನ್ನೂ ಬಹುರಂಗಪಡಿಸಿಲ್ಲ. ಎರಡೂ ಯೋಜನೆಗಳು ನಿಮ್ಮ ಮಕ್ಕಳ ಭವಿಷ್ಯ ದೃಷ್ಟಿಯಿಂದ ಉತ್ತಮ ಆಯ್ಕೆ ಎನಿಸಿಕೊಂಡಿದೆ. ನಿಮ್ಮ ಉದ್ದೇಶಕ್ಕೆ ಅನುಗುಣವಾದ, ಆರ್ಥಿಕ ಸ್ಥಿತಿಗೆ ಹೊಂದಿಕೆಯಾಗುವ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ.

ಇದನ್ನೂ ಓದಿ: Money Guide: ನಿಮ್ಮ ಎನ್‌ಪಿಎಸ್‌ ಖಾತೆ ಸ್ಥಗಿತಗೊಂಡಿದ್ದರೆ ಚಿಂತಿಸಬೇಡಿ; ಮನೆಯಲ್ಲೇ ಕೂತು ಸಕ್ರಿಯಗೊಳಿಸುವ ವಿಧಾನ ಇಲ್ಲಿದೆ

Continue Reading

ಮನಿ-ಗೈಡ್

Mahila Samman Savings Certificate: ಮಹಿಳಾ ಸಮ್ಮಾನ್‌‌ನಲ್ಲಿ ಹೂಡಿಕೆಯಿಂದ ಏನು ಲಾಭ?

2023ರ ಬಜೆಟ್ ನಲ್ಲಿ ಘೋಷಿಸಿರುವ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ (Mahila Samman Savings Certificate) ಮಹಿಳಾ ಹೂಡಿಕೆದಾರರಿಗೆ ಭಾರತ ಸರ್ಕಾರವು ನೀಡುವ ಸಣ್ಣ ಉಳಿತಾಯ ಪ್ರಮಾಣ ಪತ್ರವಾಗಿದೆ. ಕಡಿಮೆ ಸಮಯದಲ್ಲಿ ಮಹಿಳೆಯರಿಗೆ ಉತ್ತಮ ಆದಾಯವನ್ನು ನೀಡಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯನ್ನು ಸರ್ಕಾರವು 2025 ರವರೆಗೆ ಮುಂದುವರಿಸಲಿದೆ. ಈ ಯೋಜನೆಯ ಪ್ರಯೋಜನಗಳ ವಿವರ ಇಲ್ಲಿದೆ.

VISTARANEWS.COM


on

By

Mahila Samman Savings Certificate
Koo

ಮಹಿಳಾ ಹೂಡಿಕೆದಾರರನ್ನು ಆಕರ್ಷಿಸಲು ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನು ಪ್ರಕಟಿಸುತ್ತಲೇ ಇರುತ್ತದೆ. ಇದರಲ್ಲಿ 2023ರ ಬಜೆಟ್ ನಲ್ಲಿ (Budget 2023) ಘೋಷಿಸಿರುವ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ (Mahila Samman Savings Certificate:) ಕೂಡ ಒಂದಾಗಿದೆ. ಇದು ಮಹಿಳಾ ಹೂಡಿಕೆದಾರರಿಗೆ ಭಾರತ ಸರ್ಕಾರವು ನೀಡುವ ಸಣ್ಣ ಉಳಿತಾಯ ಪ್ರಮಾಣ (small savings certificate) ಪತ್ರವಾಗಿದೆ.

ಇದರಲ್ಲಿ ಹೂಡಿಕೆ ಮಾಡುವ ಮೂಲಕ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಆರ್ಥಿಕವಾಗಿ ಸಬಲರಾಗಬಹುದು ಎಂದು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಕಡಿಮೆ ಸಮಯದಲ್ಲಿ ಮಹಿಳೆಯರಿಗೆ ಉತ್ತಮ ಆದಾಯವನ್ನು ನೀಡಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯನ್ನು ಸರ್ಕಾರವು 2025ರವರೆಗೆ ಮುಂದುವರಿಸಲಿದೆ.

2024ರಲ್ಲಿ ವಿಸ್ತರಿಸಲಾಗಿದೆಯೇ?

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದ ಕುರಿತು 2024ರ ಬಜೆಟ್‌ನಲ್ಲಿ ಯಾವುದೇ ಪ್ರಕಟಣೆಯನ್ನು ಮಾಡಲಾಗಿಲ್ಲ. ಪ್ರಸ್ತುತ, ಬಡ್ಡಿ ದರ ಮತ್ತು ಹೂಡಿಕೆಯ ಸಮಯದ ಮಿತಿ ಮೊದಲಿನಂತೆಯೇ ಇರುತ್ತದೆ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವು ಏಪ್ರಿಲ್ 2023 ರಿಂದ ಮಾರ್ಚ್ 2025 ರವರೆಗೆ 2 ವರ್ಷಗಳವರೆಗೆ ಲಭ್ಯವಿರುವ ಒಂದು ಬಾರಿಯ ಯೋಜನೆಯಾಗಿದೆ. ಇದರ ಖಾತೆಯನ್ನು ಯಾವುದೇ ಪೋಸ್ಟ್ ಆಫೀಸ್‌ನಲ್ಲಿ ತೆರೆಯಬಹುದು. ಆದರೆ, ಕೆಲವು ಬ್ಯಾಂಕ್‌ಗಳು ತಮ್ಮೊಂದಿಗೆ ಈ ಖಾತೆ ತೆರೆಯುವ ಸೌಲಭ್ಯವನ್ನೂ ಒದಗಿಸುತ್ತಿವೆ.

Mahila Samman Savings Certificate
Mahila Samman Savings Certificate


ಯಾರು ತೆರೆಯಬಹುದು?

ಈ ಯೋಜನೆಯ ಅಡಿಯಲ್ಲಿ ಯಾವುದೇ ವಯಸ್ಸಿನ ಭಾರತೀಯ ಮಹಿಳೆ ಖಾತೆಯನ್ನು ತೆರೆಯಬಹುದು. ಪುರುಷ ಪೋಷಕರು ತಮ್ಮ ಅಪ್ರಾಪ್ತ ಮಗಳಿಗೆ ಈ ಖಾತೆಯನ್ನು ತೆರೆಯಬಹುದು. ಈ ಯೋಜನೆಯು ಅಪ್ರಾಪ್ತ ಬಾಲಕಿಯರಿಗೆ ಹಣಕಾಸಿನ ಉತ್ಪನ್ನಗಳಲ್ಲಿ ಹೂಡಿಕೆ ಮಾಡಲು ಅವಕಾಶವನ್ನು ಒದಗಿಸುತ್ತದೆ.

ಬಡ್ಡಿ ಎಷ್ಟಿದೆ?

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರವು ವಾರ್ಷಿಕವಾಗಿ ಶೇ. 7.5ರ ಬಡ್ಡಿಯನ್ನು ನೀಡುತ್ತದೆ. ಇದನ್ನು ಪ್ರತಿ ತ್ರೈಮಾಸಿಕದಲ್ಲಿ ಖಾತೆಗೆ ಸೇರಿಸಲಾಗುತ್ತದೆ. ಆದರೆ ಬಡ್ಡಿ ಮತ್ತು ಅಸಲು ಮುಕ್ತಾಯದ ಮೇಲೆ ಮಾತ್ರ ಲಭ್ಯವಿರುತ್ತದೆ. ಈ ಯೋಜನೆಯ ಮುಕ್ತಾಯ ಅವಧಿಯು 2 ವರ್ಷಗಳು. ನೀವು 2 ವರ್ಷಗಳವರೆಗೆ ಈ ಯೋಜನೆಯಲ್ಲಿ 2 ಲಕ್ಷವನ್ನು ಹೂಡಿಕೆ ಮಾಡಿದರೆ ಮುಕ್ತಾಯದ ವೇಳೆಗೆ 2.32 ಲಕ್ಷ ರೂ. ವನ್ನು ಪಡೆಯಬಹುದು.

ಇದನ್ನೂ ಓದಿ: Mudra loan: ಕೇಂದ್ರ ಬಜೆಟ್‌ನಲ್ಲಿ ಮುದ್ರಾ ಸಾಲ ಮಿತಿ ಹೆಚ್ಚಳ; ಷರತ್ತುಗಳೇನು? ಯಾರಿಗೆ ಪ್ರಯೋಜನ?

ಹೂಡಿಕೆ ಮಿತಿ

ಈ ಯೋಜನೆಯಲ್ಲಿ ಕನಿಷ್ಠ 1,000 ರೂ. ಗಳನ್ನು 2 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಗರಿಷ್ಠ ಹೂಡಿಕೆ ಮಿತಿ ಪ್ರತಿ ಖಾತೆಗೆ 2 ಲಕ್ಷ ರೂ. 1000 ರೂ. ಗಿಂತ ಹೆಚ್ಚಿನ ಮೊತ್ತವನ್ನು 100 ರ ಗುಣಕಗಳಲ್ಲಿ ಮಾತ್ರ ಠೇವಣಿ ಮಾಡಬಹುದು. ಖಾತೆಯನ್ನು ತೆರೆದ 1 ವರ್ಷದ ಅನಂತರ ಒಟ್ಟು ಠೇವಣಿ ಮೊತ್ತದ ಶೇ. 40ರಷ್ಟನ್ನು ಹಿಂಪಡೆಯಬಹುದು.

Continue Reading
Advertisement
Wayanad Landslide
ಕರ್ನಾಟಕ56 mins ago

Wayanad Landslide: ವಯನಾಡು ಸಂತ್ರಸ್ತರಿಗೆ ಮಿಡಿದ ಕರುನಾಡು; ಸರ್ಕಾರದ ಜತೆಗೆ ಜನರಿಂದಲೂ ನೆರವು!

Kavya Maran
ಕ್ರಿಕೆಟ್1 hour ago

Kavya Maran : ಐಪಿಎಲ್​ ಆಟಗಾರರ ಹರಾಜಿನ ನಿಯಮಗಳ ಬಗ್ಗೆ ಕಾವ್ಯಾ ಮಾರನ್ ಇಟ್ಟಿರುವ ಬೇಡಿಕೆಗಳು ಇವು…

Champions Trophy 2025
ಪ್ರಮುಖ ಸುದ್ದಿ2 hours ago

Champions Trophy 2025 : ಚಾಂಪಿಯನ್ಸ್​ ಟ್ರೋಫಿಗಾಗಿ 544 ಕೋಟಿ ರೂಪಾಯಿ ಬಿಡುಗಡೆ ಮಾಡಿದ ಐಸಿಸಿ

Viral Video
ವೈರಲ್ ನ್ಯೂಸ್2 hours ago

Viral Video: ಪ್ರವಾಹದಲ್ಲಿ ಸಿಲುಕಿದ ನಾಯಿಗಳಿಗೆ ಡ್ರೋನ್‌ ಮೂಲಕ ಬಿರಿಯಾನಿ ರವಾನೆ; ಮಾನವೀಯತೆ ಅಂದ್ರೆ ಇದು!

Best Teacher Award
ಕರ್ನಾಟಕ2 hours ago

Best Teacher Award: ‘ರಾಜ್ಯ ಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ

Union Minister Pralhad Joshi latest statement at Mysore Chalo Padayatra
ಕರ್ನಾಟಕ2 hours ago

BJP-JDS Padayatra: ವಾಲ್ಮೀಕಿ ನಿಗಮ, ಮುಡಾ ಹಗರಣದಲ್ಲಿ ಕಾಂಗ್ರೆಸ್ ಹೈಕಮಾಂಡ್ ಶೇರ್ ಹೋಲ್ಡರ್: ಪ್ರಲ್ಹಾದ್‌ ಜೋಶಿ ಆರೋಪ

Farmer dies after falling under power tiller wheel in Moralli village
ಉತ್ತರ ಕನ್ನಡ2 hours ago

Farmer Death: ಪವರ್ ಟಿಲ್ಲರ್ ಚಕ್ರಕ್ಕೆ ಸಿಲುಕಿ ರೈತ ದಾರುಣ ಸಾವು

KHIR City project Launch on August 23 at bengaluru says Minister MB Patil
ಕರ್ನಾಟಕ2 hours ago

KHIR City: ಬೆಂಗಳೂರಿನಲ್ಲಿ ದೇಶದಲ್ಲೇ ಮೊದಲ ‘ನಾಲೆಡ್ಜ್, ಹೆಲ್ತ್, ಇನ್ನೋವೇಶನ್ ಆಂಡ್ ರೀಸರ್ಚ್ ಸಿಟಿ’; ಆ.23ರಂದು ಉದ್ಘಾಟನೆ

IND vs SL ODI
ಪ್ರಮುಖ ಸುದ್ದಿ2 hours ago

IND vs SL ODI : ಶ್ರೀಲಂಕಾ ವಿರುದ್ಧ ಭಾನುವಾರ ಎರಡನೇ ಪಂದ್ಯ; ಮತ್ತೊಂದು ಥ್ರಿಲ್ಲರ್ ನಿರೀಕ್ಷೆ

Indian Organ Donation Day program inauguration by Minister Dinesh Gundurao at Belagavi
ಕರ್ನಾಟಕ3 hours ago

Belagavi News: ಸ್ವಾತಂತ್ರ್ಯ ದಿ‌ನಾಚರಣೆಯಂದು ಅಂಗಾಂಗ ದಾನಿಗಳ ಕುಟುಂಬಗಳಿಗೆ ಗೌರವ; ದಿ‌ನೇಶ್ ಗುಂಡೂರಾವ್

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka rain
ಮಳೆ11 hours ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ4 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ4 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ5 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ5 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ5 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

ಟ್ರೆಂಡಿಂಗ್‌