Money Guide: ಕಾರು ಚಲಾಯಿಸಿದಷ್ಟೇ ವಿಮೆ ಪ್ರೀಮಿಯಂ ಪಾವತಿಸಿ; ಏನಿದು ಹೊಸ ಯೋಜನೆ? ಅನುಕೂಲಗಳೇನು? - Vistara News

ಮನಿ-ಗೈಡ್

Money Guide: ಕಾರು ಚಲಾಯಿಸಿದಷ್ಟೇ ವಿಮೆ ಪ್ರೀಮಿಯಂ ಪಾವತಿಸಿ; ಏನಿದು ಹೊಸ ಯೋಜನೆ? ಅನುಕೂಲಗಳೇನು?

Money Guide: ಈಗ ಕಾರು ʼಚಲಾಯಿಸಿದಷ್ಟೇ ಪಾವತಿʼ ವಿಮಾ ಮಾದರಿ ಜನಪ್ರಿಯವಾಗುತ್ತಿದೆ. ಅಂದರೆ ವಾರ್ಷಿಕ ಪ್ರೀಮಿಯಂ ಬದಲಾಗಿ ನೀವು ಕಾರನ್ನು ಎಷ್ಟು ದೂರ ಚಲಾಯಿಸಿದ್ದೀರೋ ಅದರ ಆಧಾರದಲ್ಲಿ ಪ್ರೀಮಿಯಂ ಅನ್ನು ಪಾವತಿಸಿದರೆ ಸಾಕು. ಅಂದರೆ ನೀವು ಕಾರನ್ನು ಕಡಿಮೆ ಬಳಸಿದರೆ ಕಡಿಮೆ ಪ್ರೀಮಿಯಂ ಪಾವತಿಸಿದರೆ ಸಾಕು. ಈ ಯೋಜನೆಯ ಅನುಕೂಲ, ಅನಾನುಕೂಲಗಳೇನು? ಎನ್ನುವ ವಿವರ ಇಲ್ಲಿದೆ.

VISTARANEWS.COM


on

Money Guide
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಭಾರತದಲ್ಲಿ ಪ್ರತಿಯೊಂದು ವಾಹನ ವಿಮೆಯನ್ನು (Vehicle insurance) ಹೊಂದಿರುವುದು ಕಡ್ಡಾಯ. ಇದು ವಾಹನಗಳಿಗೆ ಗರಿಷ್ಠ ಸುರಕ್ಷತೆ ಒದಗಿಸುತ್ತದೆ. ಒಂದು ವೇಳೆ ವಾಹನ ಕಳ್ಳತನವಾದರೆ ಅಥವಾ ಅಪಘಾತದಂತಹ ಅನಿರೀಕ್ಷಿತ ಸಮಸ್ಯೆ ಎದುರಾದರೆ ವಾಹನ ವಿಮಾ ಪಾಲಿಸಿ ಆರ್ಥಿಕವಾಗಿ ಸಹಾಯ ಮಾಡುತ್ತದೆ. ವಾಹನ ಮಾದರಿಗಳನ್ನು ಆಧರಿಸಿ ವಿಮೆಯ ಪ್ರೀಮಿಯಂ ಪಾವತಿ ನಿರ್ಧಾರವಾಗುತ್ತದೆ. ಇದರ ಜತೆಗೆ ಈಗ ಕಾರಿಗೆ ʼಚಲಾಯಿಸಿದಷ್ಟೇ ಪಾವತಿʼ (Pay as You Drive-PAYD) ವಿಧಾನ ಜನಪ್ರಿಯವಾಗುತ್ತಿದೆ. ಅಂದರೆ ವಾರ್ಷಿಕ ಪ್ರೀಮಿಯಂ ಬದಲಾಗಿ ನೀವು ಕಾರನ್ನು ಎಷ್ಟು ದೂರ ಚಲಾಯಿಸಿದ್ದೀರೋ ಅದರ ಆಧಾರದಲ್ಲಿ ಪ್ರೀಮಿಯಂ ಅನ್ನು ಪಾವತಿಸಿದರೆ ಸಾಕು. ಅಂದರೆ ನೀವು ಕಾರನ್ನು ಕಡಿಮೆ ಬಳಸಿದರೆ ಕಡಿಮೆ ಪ್ರೀಮಿಯಂ ಪಾವತಿಸಿದರೆ ಸಾಕು. ಈ ಯೋಜನೆಯ ಅನುಕೂಲ, ಅನಾನುಕೂಲಗಳೇನು? ಎನ್ನುವ ವಿವರ ಇಲ್ಲಿದೆ (Money Guide).

ವಾಹನ ವಿಮೆಯಲ್ಲಿನ ವಿಧಗಳು

ಸಾಮಾನ್ಯ ವಾಹನ ವಿಮೆಯಲ್ಲಿ 2 ವಿಧಗಳಿವೆ. ಮೊದಲನೆಯದ್ದು ಮೂರನೇ ವ್ಯಕ್ತಿಯಿಂದ ಪಡೆದುಕೊಳ್ಳುವಂತದ್ದು. ಇದು ಭಾರತದಲ್ಲಿ ಕಡ್ಡಾಯ. ಮತ್ತೊಂದು ಸಮಗ್ರ ವಿಮಾ ಪಾಲಿಸಿ. ಮೂರನೇ ವ್ಯಕ್ತಿಯ ವಿಮೆಯನ್ನು ಬಹುತೇಕ ಡೀಲರ್‌ಗಳೇ ಒದಗಿಸುತ್ತಾರೆ ಹಾಗೂ ಪ್ರೀಮಿಯಂ ವಾಹನದ ಬೆಲೆಯನ್ನು ಅವಲಂಬಿಸಿರುತ್ತದೆ. ಸಮಗ್ರ ವಿಮೆಯು ಮೂರನೇ ವ್ಯಕ್ತಿಯ ಹೊಣೆಗಾರಿಕೆಗಳು, ವೈಯಕ್ತಿಕ ಅಪಘಾತಗಳು ಮತ್ತು ಕಳ್ಳತನಗಳನ್ನು ಒಳಗೊಂಡಿರುತ್ತದೆ. ಆದಾಗ್ಯೂ ಸಮಗ್ರ ವಿಮೆಯು ಮೂರನೇ ವ್ಯಕ್ತಿಯ ವಿಮೆಗೆ ಹೋಲಿಸಿದರೆ ದುಬಾರಿ. ಇನ್ನು ಚಲಾಯಿಸಿದಷ್ಟೇ ಪಾವತಿ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.

ಹೇಗೆ ಲೆಕ್ಕ ಹಾಕಲಾಗುತ್ತದೆ?

ಕಿ.ಮೀ. ಲೆಕ್ಕಾಚಾರ: ನೀವು ಕಾರು ಓಡಿಸಲು ನಿರೀಕ್ಷಿಸುವ ಒಟ್ಟು ಕಿಲೋ ಮೀಟರ್‌ಗಳನ್ನು ಪಾಲಿಸಿ ಅವಧಿಯಲ್ಲಿ ನೀವು ಅಂದಾಜು ಮಾಡಿ ಸೂಕ್ತವಾದ ಸ್ಲ್ಯಾಬ್ ಅನ್ನು ಆಯ್ಕೆ ಮಾಡಿ.

ಟೆಲಿಮ್ಯಾಟಿಕ್ಸ್‌ ಆಧಾರಿತ ವಾಹನ ವಿಮೆ: ಈ ಪಾಲಿಸಿಯಲ್ಲಿ ನಿಮ್ಮ ವಾಹನವನ್ನು ಚಲಾಯಿಸುವ ಕ್ರಮ, ಸಂಚಾರ ನಿಯಮಗಳನ್ನು ಪಾಲಿಸುವ ಶಿಸ್ತು ಮತ್ತು ಗುಣಮಟ್ಟವನ್ನು ಆಧರಿಸಿ ವಿಮೆಯ ಪ್ರೀಮಿಯಂ ದರ ನಿಗದಿಯಾಗುತ್ತದೆ. ವೇಗ, ದೂರ, ದಿನದ ಸಮಯ ಮತ್ತು ಚಾಲನಾ ಮಾದರಿಗಳು ಸೇರಿದಂತೆ ಚಾಲನೆಯ ವಿವಿಧ ಅಂಶಗಳ ಬಗ್ಗೆ ಡೇಟಾವನ್ನು ಸಂಗ್ರಹಿಸಿ ಪ್ರೀಮಿಯಂ ನಿರ್ಧರಿಸಲಾಗುತ್ತದೆ.

ಪ್ರೀಮಿಯಂ ಮೊತ್ತ ನಿರ್ಧಾರ: ನೀವು ಆಯ್ಕೆ ಮಾಡಿದ ಕಿ.ಮೀ. ಸ್ಲ್ಯಾಬ್‌ನ ಆಧಾರದ ಮೇಲೆ ಕಂಪನಿ ಪ್ರೀಮಿಯಂ ನಿರ್ಧರಿಸುತ್ತದೆ.

ಟ್ರ್ಯಾಕಿಂಗ್: ಟೆಲಿಮ್ಯಾಟಿಕ್ಸ್ ಉಪಕರಣವನ್ನು ಬಳಸಿಕೊಂಡು ಅಥವಾ ನಿಮ್ಮ ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್ ಮೂಲಕ ವಾಹನದ ಮೈಲೇಜ್ ಅನ್ನು ಟ್ರ್ಯಾಕ್ ಮಾಡಲಾಗುತ್ತದೆ.

ಪ್ರೀಮಿಯಂ ಹೊಂದಾಣಿಕೆ: ಪಾಲಿಸಿ ಅವಧಿಯ ಕೊನೆಯಲ್ಲಿ ನಿಮ್ಮ ನಿಜವಾದ ಮೈಲೇಜ್ ಅನ್ನು ಘೋಷಿತ ಮೈಲೇಜ್‌ಗೆ ಹೋಲಿಸಲಾಗುತ್ತದೆ. ನೀವು ಕಡಿಮೆ ಚಾಲನೆ ಮಾಡಿದ್ದರೆ ನೀವು ಮರುಪಾವತಿ ಪಡೆಯುತ್ತೀರಿ. ನೀವು ಹೆಚ್ಚು ಚಾಲನೆ ಮಾಡಿದ್ದರೆ ನೀವು ಹೆಚ್ಚುವರಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ.

ಅನುಕೂಲಗಳೇನು?

  • ವೆಚ್ಚ ಉಳಿತಾಯ: ನೀವು ಕಾರನ್ನು ಕಡಿಮೆ ಕಿ.ಮೀ. ಚಲಾಯಿಸಿದ್ದರೆ ಅಲ್ಪ ಮೊತ್ತದ ಪ್ರೀಮಿಯಂ ಪಾವತಿಸಿದರೆ ಸಾಕು.
  • ನ್ಯಾಯೋಚಿತ ಬೆಲೆ: ನೀವು ಬಳಸುವ ಕವರೇಜ್‌ಗೆ ಮಾತ್ರ ಪಾವತಿ.
  • ಸುರಕ್ಷಿತವಾಗಿ ವಾಹನ ಚಲಾಯಿಸಲು ಪ್ರೋತ್ಸಾಹ: ಕೆಲವು ವಿಮಾ ಕಂಪನಿಗಳು ಟೆಲಿಮ್ಯಾಟಿಕ್ಸ್ ಉಪಕರಣದ ಮೂಲಕ ಟ್ರ್ಯಾಕ್ ಮಾಡಿ ಸುರಕ್ಷಿತ ಚಾಲನೆಗೆ ರಿಯಾಯಿತಿಗಳನ್ನು ನೀಡುತ್ತವೆ.
  • ಬಳಕೆ ಆಧಾರಿತ ಪ್ರೀಮಿಯಂಗಳು: ವಾಹನವನ್ನು ಓಡಿಸುವ ದೂರವನ್ನು ಆಧರಿಸಿ ವಿಮಾ ಪ್ರೀಮಿಯಂ ಅನ್ನು ಲೆಕ್ಕ ಹಾಕಲಾಗುತ್ತದೆ. ಮೈಲೇಜ್ ಮತ್ತು ಚಾಲನಾ ನಡವಳಿಕೆಯನ್ನು ದಾಖಲಿಸುವ ಟೆಲಿಮ್ಯಾಟಿಕ್ಸ್ ಉಪಕರಣ ಅಥವಾ ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ಇದನ್ನು ಸಾಮಾನ್ಯವಾಗಿ ಟ್ರ್ಯಾಕ್ ಮಾಡಲಾಗುತ್ತದೆ.
  • ವೆಚ್ಚದ ದಕ್ಷತೆ: ಕಾರನ್ನು ವಿರಳವಾಗಿ ಬಳಸುವ ಅಥವಾ ಕಡಿಮೆ ದೂರ ಸಂಚರಿಸುವವರಿಗೆ ಪಿಇಡಿ ಹೆಚ್ಚು ಸೂಕ್ತ. ಪ್ರೀಮಿಯಂಗಳು ಬಳಕೆಯೊಂದಿಗೆ ನೇರ ಸಂಬಂಧ ಹೊಂದಿವೆ.
  • ಕಸ್ಟಮೈಸ್ ಮಾಡಬಹುದಾದ ಕವರೇಜ್: ಪಾಲಿಸಿದಾರರು ತಮ್ಮ ಚಾಲನಾ ಅಭ್ಯಾಸ ಮತ್ತು ಅಗತ್ಯಗಳ ಆಧಾರದ ಮೇಲೆ ವಿವಿಧ ಹಂತದ ಕವರೇಜ್ ಅನ್ನು ಆಯ್ಕೆ ಮಾಡಬಹುದು.
  • ಚಾಲನಾ ಅಭ್ಯಾಸವನ್ನು ಸುಧಾರಣೆ: ನಿಮ್ಮ ಚಾಲನಾ ಅಭ್ಯಾಸವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಅನಾನುಕೂಲ

  • ಗೌಪ್ಯತೆ ಬಗ್ಗೆ ಪ್ರಶ್ನೆ: ಚಾಲನಾ ಅಭ್ಯಾಸದ ನಿರಂತರ ಟ್ರ್ಯಾಕಿಂಗ್ ಗೌಪ್ಯತೆಗೆ ಧಕ್ಕೆ ತರುತ್ತದೆ.
  • ಆಗಾಗ್ಗೆ ಚಾಲನೆ ಮಾಡುವವರಿಗೆ ಅಧಿಕ ವೆಚ್ಚ: ಸಾಂಪ್ರದಾಯಿಕ ವಿಮಾ ಪಾಲಿಸಿಗೆ ಹೋಲಿಸಿದರೆ ಆಗಾಗ್ಗೆ ಚಾಲನೆ ಮಾಡುವವರು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.
  • ಕ್ಲೈಮ್‌ಗಳಲ್ಲಿನ ಸಂಕೀರ್ಣತೆ: ಕ್ಲೈಮ್ ಸಂದರ್ಭದಲ್ಲಿ, ದೂರ ಚಾಲಿತ ಮತ್ತು ಇತರ ಟೆಲಿಮ್ಯಾಟಿಕ್ಸ್ ಡೇಟಾವನ್ನು ಪರಿಶೀಲಿಸಲು ತೊಡಕು ಎದುರಾಗುವ ಸಾಧ್ಯತೆ ಇದೆ.
  • ಟೆಲಿಮ್ಯಾಟಿಕ್ಸ್‌ನ ವಿಶ್ವಾಸಾರ್ಹತೆ: ಟೆಲಿಮ್ಯಾಟಿಕ್ಸ್ ಉಪಕರಣ ಅಥವಾ ಅಪ್ಲಿಕೇಶನ್‌ನಲ್ಲಿನ ಯಾವುದೇ ಅಸಮರ್ಪಕ ಕಾರ್ಯ ವಿಧಾನ ಪ್ರೀಮಿಯಂ ಲೆಕ್ಕಾಚಾರದ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: Money Guide: ನೆರೆ, ಭೂಕುಸಿತದಿಂದ ನಿಮ್ಮ ಮನೆಯನ್ನು ರಕ್ಷಿಸಲು ಜಸ್ಟ್‌ ಹೀಗೆ ಮಾಡಿ ಸಾಕು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: ಆನ್‌ಲೈನ್‌ ಶಾಪಿಂಗ್‌ ವೇಳೆ ಮೋಸ ಹೋಗದಿರಲು ಈ ಟಿಪ್ಸ್‌ ಪಾಲೋ ಮಾಡಿ

Money Guide: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಶಾಪಿಂಗ್‌ ಜನಪ್ರಿಯವಾಗುತ್ತಿದೆ. ಆದರೆ ಕೆಲವೊಮ್ಮೆ ಈ ಹೆಸರಿನಲ್ಲಿ ವಂಚನೆಯೂ ನಡೆಯುತ್ತದೆ. ಆರ್ಡರ್‌ ಮಾಡಿದ ಬೆಲೆ ಬಾಳುವ ವಸ್ತುವಿನ ಬದಲು ಕಲ್ಲು, ಮರದ ತುಂಡು, ಸೋಪು ಅಷ್ಟೇ ಏಕೆ ಹಾವು ಕೂಡ ಪಾರ್ಸೆಲ್‌ ಮೂಲಕ ಬರುತ್ತದೆ! ಕೆಲವೊಂದು ಫೇಕ್‌ ವೆಬ್‌ಸೈಟ್‌ಗಳು ಆರ್ಡರ್‌ ಮಾಡಿದ ಬಳಿಕ ಉತ್ಪನ್ನಗಳನ್ನು ಕಳುಹಿಸದೆ ಮೋಸ ಎಸಗುತ್ತದೆ. ಹೀಗಾಗಿ ಆನ್‌ಲೈನ್‌ ಶಾಪಿಂಗ್‌ ಮಾಡುವ ಮುನ್ನ ಸಾಕಷ್ಟು ಮುನ್ನೆಚ್ಚರಿಕೆ ವಹಿಸದಿದ್ದರೆ ಯಾಮಾರುವುದು ಖಂಡಿತ. ಹೀಗಾಗಿ ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ಯಾವೆಲ್ಲ ಅಂಶಗಳನ್ನು ಗಮನಿಸಬೇಕು ಎನ್ನುವ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಶಾಪಿಂಗ್‌ (Online shopping) ಜನಪ್ರಿಯವಾಗುತ್ತಿದೆ. ಒಂದೇ ಕಡೆ ಹಲವು ಆಯ್ಕೆ, ಕಡಿಮೆ ಬೆಲೆ ಮತ್ತು ಸಮಯದ ಉಳಿತಾಯ ಹೀಗೆ ನಾನಾ ಕಾರಣಗಳಿಂದ ಇದು ಗ್ರಾಹಕರ ಮನ ಗೆದ್ದಿದೆ. ಇದಕ್ಕಾಗಿಯೇ ಇರುವ ನಾನಾ ಆ್ಯಪ್‌ಗಳು ವಿಶೇಷ ಸಂದರ್ಭಗಳಲ್ಲಿ ಕೊಡುಗೆ ಪ್ರಕಟಿಸಿ ಇನ್ನಷ್ಟು ಆಕರ್ಷಿಸುತ್ತದೆ. ಇದರ ಜತೆಗೆ ಕೆಲವೊಮ್ಮೆ ವಂಚನೆಯೂ ನಡೆಯುತ್ತದೆ. ಆರ್ಡರ್‌ ಮಾಡಿದ ಬೆಲೆ ಬಾಳುವ ವಸ್ತುವಿನ ಬದಲು ಕಲ್ಲು, ಮರದ ತುಂಡು, ಸೋಪು ಅಷ್ಟೇ ಏಕೆ ಹಾವು ಕೂಡ ಪಾರ್ಸೆಲ್‌ ಮೂಲಕ ಬರುತ್ತದೆ! ಕೆಲವೊಂದು ಫೇಕ್‌ ವೆಬ್‌ಸೈಟ್‌ಗಳು ಆರ್ಡರ್‌ ಮಾಡಿದ ಬಳಿಕ ಉತ್ಪನ್ನಗಳನ್ನು ಕಳುಹಿಸದೆ ಮೋಸ ಎಸಗುತ್ತವೆ. ಹೀಗಾಗಿ ಆನ್‌ಲೈನ್‌ ಶಾಪಿಂಗ್‌ ಮಾಡುವ ಮುನ್ನ ಸಾಕಷ್ಟು ಮುನ್ನೆಚ್ಚರಿಕೆ ವಹಿಸದಿದ್ದರೆ ಯಾಮಾರುವುದು ಖಂಡಿತ. ಇಂದಿನ ಮನಿಗೈಡ್‌ (Money Guide)ನಲ್ಲಿ ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ಯಾವೆಲ್ಲ ಅಂಶಗಳನ್ನು ಗಮನಿಸಬೇಕು ಎನ್ನುವುದನ್ನು ನೋಡೋಣ.

ಮಾರಾಟಗಾರರ ಹಿನ್ನಲೆ

ಆನ್‌ಲೈನ್‌ನಲ್ಲಿ ಯಾವುದೇ ವಸ್ತು ಖರೀದಿಸುವ ಮುನ್ನ ಮಾರಾಟಗಾರರ ಹಿನ್ನಲೆ ಪರಿಶೀಲಿಸಿ. ಕೆಲವೊಮ್ಮೆ ಸೋಷಿಯಲ್‌ ಮೀಡಿಯಾಗಳಲ್ಲಿ ಆಕರ್ಷಕ ಕೊಡುಗೆ ಪ್ರಕಟಿಸಿ ಫೇಕ್‌ ವೆಬ್‌ಸೈಟ್‌ಗಳು ನಿಮ್ಮ ಗಮನ ಸೆಳೆಯುತ್ತವೆ. ಇವರು ಕ್ಯಾಷ್‌ ಆನ್‌ ಡೆಲಿವರಿ ಆಯ್ಕೆಯನ್ನು ಹೊಂದಿರುವುದಿಲ್ಲ. ನೀವು ಆರ್ಡರ್‌ ಮಾಡುವಾಗಲೇ ಹಣ ಪಾವತಿಸಬೇಕಾಗುತ್ತದೆ. ಒಮ್ಮೆ ನೀವು ಹಣ ಪಾವತಿಸಿದರೆ ಬಳಿಕ ಸಂಪರ್ಕಕ್ಕೇ ಸಿಗುವುದಿಲ್ಲ. ಜತೆಗೆ ನೀವು ಆರ್ಡರ್‌ ಮಾಡಿದ ಉತ್ಪನ್ನವೂ ನಿಮ್ಮನ್ನು ತಲುಪುವುದಿಲ್ಲ. ಇನ್ನು ಕೆಲವೊಮ್ಮೆ ಇಂತಹ ಅನಧಿಕೃತ ವೆಬ್‌ಸೈಟ್‌ಗಳು ಕಳಪೆ ಉತ್ಪನ್ನಗಳನ್ನು ಕಳುಹಿಸುತ್ತವೆ. ಆಕರ್ಷಕ ಫೋಟೊ ತೋರಿಸಿ ಹಾಳಾದ ಉತ್ಪನ್ನ ಅಥವಾ ಬೇರೆಯದೇ ಪ್ರಾಡಕ್ಟ್‌ ಕಳುಹಿಸುತ್ತವೆ. ಹೀಗಾಗಿ ವೆಬ್‌ಸೈಟ್‌ ಅಧಿಕೃತವೇ ಎನ್ನುವುದನ್ನು ಮೊದಲೇ ದೃಢಪಡಿಸಿಕೊಳ್ಳಿ. ವೆಬ್‌ಸೈಟ್‌ ಸುರಕ್ಷಿತ ಪಾವತಿ ವಿಧಾನ, ಸೂಕ್ತ ರಿಟರ್ನ್ ಪಾಲಿಸಿಗಳು ಹೊಂದಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಜತೆಗೆ ಗ್ರಾಹಕ ರಿವ್ಯೂ ಕೂಡ ಗಮನಿಸಿ.

ಉತ್ಪನ್ನದ ರಿವ್ಯೂ ಗಮನಿಸಿ

ರಿಯಾಯಿತಿ ಇದೆ ಎನ್ನುವ ಕಾರಣಕ್ಕೆ ಕಣ್ಣು ಮುಚ್ಚಿ ಯಾವುದೇ ಉತ್ಪನ್ನಗಳನ್ನು ಕೊಂಡುಕೊಳ್ಳಬೇಡಿ. ಖರೀದಿಸುವ ಮುನ್ನ ಆ ಉತ್ಪನ್ನಕ್ಕೆ ಗ್ರಾಹಕರು ಕೊಟ್ಟಿರುವ ರಿವ್ಯೂ ಪರಿಶೀಲಿಸಿ. ಜಾಹೀರಾತು, ಮಾರಾಟಗಾರರ ಮಾತನ್ನು ಪೂರ್ಣವಾಗಿ ನಂಬಬೇಡಿ. ಗ್ರಾಹಕ ರಿವ್ಯೂ ಗಮನಿಸಿ ಅಲ್ಲಿ ಸಕಾರಾತ್ಮಕ ಪ್ರಕ್ರಿಯೆಗಿಂತ ನಕಾರಾತ್ಮಕ ಅಭಿಮತವೇ ಹೆಚ್ಚಿದ್ದರೆ ಖರೀದಿಸಬೇಡಿ.

ಶಿಪ್ಪಿಂಗ್‌ ಚಾರ್ಜ್‌ ಮತ್ತು ಸಮಯ

ನೀವು ಖರೀದಿಸಲು ಬಯಸುವ ಉತ್ಪನ್ನಕ್ಕೆ ವಿಧಿಸುವ ಶಿಪ್ಪಿಂಗ್‌ ಜಾರ್ಜ್‌ ಅನ್ನು ಗಮನಿಸಿ. ಜತೆಗೆ ಅದು ಯಾವಾಗ ತಲುಪುತ್ತದೆ ಎನ್ನುವುದನ್ನೂ ಪರಿಶೀಲಿಸಿ. ಕೆಲವೊಂದು ಆನ್‌ಲೈನ್‌ ಅಪ್ಲಿಕೇಷನ್‌ಗಳು ಶಿಪ್ಪಿಂಗ್‌ ಜಾರ್ಜ್‌ ಇಲ್ಲದೆ ಡೆಲಿವರಿ ಮಾಡುತ್ತವೆ. ಆದರೆ ಉತ್ಪನ್ನ ತಲುಪಲು ಹೆಚ್ಚಿನ ಸಮಯ ತಗಲುತ್ತದೆ. ಹೀಗಾಗಿ ಈ ಅಂಶದ ಬಗ್ಗೆ ಗಮನ ಹರಿಸಿ. ಜತೆಗೆ ಶಿಪ್ಪಿಂಗ್‌ ಜಾರ್ಜ್‌ ಮತ್ತು ಪ್ರಾಡಕ್ಟ್‌ ನಿಮ್ಮ ಕೈ ಸೇರಲಿರುವ ದಿನಗಳನ್ನು ಬೇರೆ ಆ್ಯಪ್‌ಗಳೊಂದಿಗೆ ಹೋಲಿಸಿ ನೋಡಿ. ವಿದೇಶಗಳಿಂದ ನೀವು ಉತ್ಪನ್ನ ಖರೀದಿಸುತ್ತಿದ್ದರೆ ಇದರ ಮೇಲೆ ವಿಧಿಸುವ ತೆರಿಗೆಯೂ ನಿಮ್ಮ ಗಮನದಲ್ಲಿರಲಿ.

ರಿಟರ್ನ್‌ ಪಾಲಿಸಿ ಅರ್ಥ ಮಾಡಿಕೊಳ್ಳಿ

ಆನ್‌ಲೈನ್‌ ಮೂಲಕ ಯಾವುದೇ ವಸ್ತುವನ್ನು ಖರೀದಿಸುವ ಮುನ್ನ ಮೊದಲು ಅರ್ಥ ಮಾಡಿಕೊಳ್ಳಬೇಕಾದುದು ಅದರ ರಿಟರ್ನ್‌ ಪಾಲಿಸಿಯನ್ನು. ಹೆಚ್ಚಿನ ಅಪ್ಲಿಕೇಷನ್‌ಗಳು ಉತ್ಪನ್ನಗಳನ್ನು ಹಿಂದಿರುಗಿಸಲು 20-30 ದಿನಗಳ ಕಾಲಾವಕಾಶ ನೀಡುತ್ತವೆ. ಕೆಲವೊಮ್ಮೆ ಉತ್ಪನ್ನ, ಮಾರಾಟಗಾರರನ್ನು ಹೊಂದಿಕೊಂಡು ಈ ನಿಯಮದಲ್ಲಿ ವ್ಯತ್ಯಾಸಗಳಿರುತ್ತವೆ. ಜತೆಗೆ ರಿಟರ್ನ್‌ ಮಾಡುವಾಗ ಶಿಪ್ಪಿಂಗ್‌ ಚಾರ್ಜ್‌ ಇದೆಯೇ ಎನ್ನುವುದನ್ನು ಪರಿಶೀಲಿಸುವುದನ್ನು ಮರೆಯಬೇಡಿ. ಸಮರ್ಪಕ ರಿಟರ್ನ್‌ ಪಾಲಿಸಿಯಿಂದ ನಿಮ್ಮ ಹಣ ವ್ಯರ್ಥವಾಗುವುದನ್ನು ತಡೆಯಬಹುದು.

ಬೆಲೆ ಹೋಲಿಕೆ ಮಾಡಿ

ನಾವು ಅಂಗಡಿಗೆ ತೆರಳಿ ಶಾಪಿಂಗ್‌ ಮಾಡುವಾಗ ವಿವಿಧ ಕಡೆಗಳ ಬೆಲೆ ಹೋಲಿಸಿ ನೋಡುವಂತೆ ವಿವಿಧ ಅಪ್ಲಿಕೇಷನ್‌, ವೆಬ್‌ಸೈಟ್‌ಗಳಲ್ಲಿನ ಬೆಲೆಯನ್ನು ಪರಿಶೀಲಿಸಿ. ಇದರಿಂದ ಸಾಕಷ್ಟು ಹಣವನ್ನು ಉಳಿಸಬಹುದು. ಜತೆಗೆ ಹಲವು ಆ್ಯಪ್‌ಗಳು ವಿಶೇಷ ಸಂದರ್ಭಗಳಲ್ಲಿ ಪ್ರಕಟಿಸುವ ವಿಶೇಷ ಕೊಡುಗೆ, ರಿಯಾಯಿತಿಗಳ ಪ್ರಯೋಜನ ಪಡೆದುಕೊಳ್ಳಿ. ಕೆಲವೊಮ್ಮೆ ಕೂಪನ್‌ಗಳೂ ಲಭ್ಯ. ಇದರ ಲಾಭ ಪಡೆಯಿರಿ.

ಪಾವತಿ ವಿಧಾನ ಚೆಕ್‌ ಮಾಡಿ

ಹಲವು ಆನ್‌ಲೈನ್‌ ಸ್ಟೋರ್‌ಗಳು ಪಾವತಿಗಾಗಿ ವಿವಿಧ ಆಯ್ಕೆಗಳನ್ನು ನೀಡುತ್ತವೆ. ಕೆಲವೊಮ್ಮೆ ಎಲ್ಲ ರೀತಿಯ ಪಾವತಿಗಳನ್ನು ಸ್ವೀಕರಿಸುವುದಿಲ್ಲ. ಹೀಗಾಗಿ ಆರ್ಡರ್‌ ಮಾಡುವ ಮುನ್ನ ನಿಮಗೆ ಅನುಕೂಲವಾಗುವ ಪಾವತಿ ವಿಧಾನ ಇದೆಯೇ ಎನ್ನುವುದನ್ನು ಚೆಕ್‌ ಮಾಡಿ. ನಿಮ್ಮ ಪಾವತಿಯ ಸುರಕ್ಷತೆಯನ್ನು ಗಮನಿಸಲು ಮರೆಯಬೇಡಿ. ಜತೆಗೆ ನಿಮ್ಮ ವೈಯಕ್ತಿಕ ಮಾಹಿತಿ ಎಲ್ಲಿಯೂ ಸೋರಿಕೆಯಾಗುತ್ತಿಲ್ಲ ಎನ್ನುವುದನ್ನೂ ಖಚಿತಪಡಿಸಿ.

ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವ ಮುನ್ನ

ಲ್ಯಾಪ್‌ಟಾಪ್‌, ಟಿವಿ, ಮೊಬೈಲ್‌ ಫೋನ್‌ ಮೊದಲಾದ ಬೆಲೆಬಾಳುವ ವಸ್ತುಗಳನ್ನು ಖರೀದಿಸುವಾಗ ಆದಷ್ಟು ಕ್ಯಾಷ್‌ ಆನ್‌ ಡೆಲಿವರಿ (Cash on delivery)ಯನ್ನೇ ಆಯ್ಕೆ ಮಾಡಿ. ಜತೆಗೆ ಉತ್ಪನ್ನ ಬಂದಾಗ ಡೆಲಿವರಿ ಬಾಯ್‌ ಎದುರಿನಲ್ಲೇ ಓಪನ್‌ ಮಾಡಿ. ಒಂದು ವೇಳೆ ಇದೂ ಆಗಿಲ್ಲ ಎಂದಾದರೆ ಪಾರ್ಸೆಲ್‌ ತೆರೆಯುವ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೊ ಮಾಡಿಟ್ಟುಕೊಳ್ಳಿ.

ಇದನ್ನೂ ಓದಿ: National Pension System: ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆಗಾಗಿ ಎನ್‌ಪಿಎಸ್ ಯೋಜನೆ ಸೂಕ್ತ

Continue Reading

ಮನಿ-ಗೈಡ್

Money Guide: ನೆರೆ, ಭೂಕುಸಿತದಿಂದ ನಿಮ್ಮ ಮನೆಯನ್ನು ರಕ್ಷಿಸಲು ಜಸ್ಟ್‌ ಹೀಗೆ ಮಾಡಿ ಸಾಕು

Money Guide: ನೆರೆ, ಭೂಕುಸಿತದಂತಹ ಪ್ರಕೃತಿ ದುರಂತ, ಬೆಂಕಿ ಆಕಸ್ಮಿಕ, ಕಳ್ಳತನದಂತಹ ಸಂದರ್ಭದಲ್ಲಿ ಪರಿಹಾರ ನೀಡುವ ಯೋಜನೆಯೇ ಗೃಹ ವಿಮೆ. ಮನೆ ಕಳೆದುಕೊಂಡರೂ ಬೀದಿಗೆ ಬೀಳದಂತೆ ಇದು ನೋಡಿಕೊಳ್ಳುತ್ತದೆ. ಅತ್ಯಂತ ಅಮೂಲ್ಯ ಮತ್ತು ಬೆಲೆ ಬಾಳುವ ಆಸ್ತಿಯಾದ ಮನೆಗೆ ವಿಮೆ ಮಾಡಿಸಲೇಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಹೀಗಾಗಿ ಗೃಹ ವಿಮೆಯ ವಿವರ ಇಂದಿನ ಮನಿಗೈಡ್‌ನಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಸ್ವಂತ ಮನೆ ಹೊಂದಬೇಕು ಎನ್ನುವುದು ಬಹುತೇಕ ಎಲ್ಲರ ಕನಸು. ಆದರೆ ಈ ದುಬಾರಿ ಜಗತ್ತಿನಲ್ಲಿ ಇದು ಸುಲಭ ಅಲ್ಲವೇ ಅಲ್ಲ. ಇದಕ್ಕಾಗಿಯೇ ʼಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡುʼ ಎನ್ನುವ ಮಾತು ಪ್ರಚಲಿತದಲ್ಲಿದೆ. ಅಂದರೆ ಈ ಎರಡು ಕೆಲಸ ಬಹಳ ಶ್ರಮದಾಯಕವಾದುದು. ಅದಾಗ್ಯೂ ಸಾಲ ಮಾಡಿ, ಇದ್ದ ಉಳಿತಾಯವನ್ನೆಲ್ಲ ಒಟ್ಟುಗೂಡಿಸಿ ಮನೆ ನಿರ್ಮಾಣ ಮಾಡಿ ನಿಟ್ಟುಸಿರು ಬಿಡುವಷ್ಟರಲ್ಲಿ ಅಗ್ನಿ ಆಕಸ್ಮಿಕ, ನೆರೆ ಅಥವಾ ಭೂಕುಸಿತದಂತಹ ಅವಘಡ ಎದುರಾದರೆ? ಇತ್ತೀಚಿನ ದಿನಗಳಲ್ಲಿ ಇಂತಹ ಅಪಾಯವನ್ನು ತಳ್ಳಿ ಹಾಕುವಂತಿಲ್ಲ. ಪ್ರಕೃತಿಯ ಅಸಮತೋಲನದಿಂದಾಗಿ ಯಾವಾಗ, ಎಲ್ಲಿ ದುರಂತ ಎದುರಾಗುತ್ತದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಗೃಹ ವಿಮೆ (Home Insurance) ರಕ್ಷಾ ಕವಚದಂತೆ ನಮ್ಮನ್ನು ಕಾಪಾಡುತ್ತದೆ. ಮನೆ ಕಳೆದುಕೊಂಡರೂ ಬೀದಿಗೆ ಬೀಳದಂತೆ ನೋಡಿಕೊಳ್ಳುತ್ತದೆ. ಹಾಗಾದರೆ ಗೃಹ ವಿಮೆಯನ್ನು ಯಾರೆಲ್ಲ ಮಾಡಿಸಬಹುದು? ಯಾವೆಲ್ಲ ಕಾರಣಗಳಿಗೆ ಪರಿಹಾರ ದೊರೆಯುತ್ತದೆ? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ (Money Guide).

ವರದಿಗಳ ಪ್ರಕಾರ ಭಾರತವು ಯಾವಾಗ ಬೇಕಾದರೂ ಪ್ರಾಕೃತಿಕ ದುರಂತ ಸಂಭವಿಸಬಹುದಾದ ದೇಶಗಳ ಪೈಕಿ ಒಂದು ಎನಿಸಿಕೊಂಡಿದೆ. 27 ರಾಜ್ಯಗಳು ವಿಪತ್ತು ಪೀಡಿತವಾಗಿವೆ. ಶೇ. 58.6ರಷ್ಟು ಭೂಪ್ರದೇಶವು ಮಧ್ಯಮದಿಂದ ಹೆಚ್ಚಿನ ತೀವ್ರತೆಯ ಭೂಕಂಪಗಳಿಗೆ ಗುರಿಯಾಗುವ ಮತ್ತು ಶೇ. 12ರಷ್ಟು ಭೂಮಿ ಪ್ರವಾಹ ಮತ್ತು ನದಿ ಸವೆತಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ.

ಇನ್ನು 7,516 ಕಿ.ಮೀ. ವ್ಯಾಪ್ತಿಯ ಕರಾವಳಿಯಲ್ಲಿ ಪೈಕಿ 5,700 ಕಿ.ಮೀ.ಯಷ್ಟು ಚಂಡಮಾರುತ ಮತ್ತು ಸುನಾಮಿಗಳಿಗೆ ಗುರಿಯಾಗುತ್ತದೆ. ಕೃಷಿಯೋಗ್ಯ ಭೂಮಿಯ ಪೈಕಿ ಶೇ. 68ರಷ್ಟು ಬರಕ್ಕೆ ತುತ್ತಾಗಬಹುದು. ಶೇ. 15ರಷ್ಟು ಭೂ ಪ್ರದೇಶವು ಭೂ ಕುಸಿತಕ್ಕೆ ಗುರಿಯಾಗುವ ಅಪಾಯ ಎದುರಿಸುತ್ತಿದೆ. ವಿಶೇಷವಾಗಿ ಮಳೆಗಾಲದಲ್ಲಿ ಚಂಡಮಾರುತಗಳು, ಭೂಕುಸಿತಗಳು ಮತ್ತು ಮಿಂಚಿನಿಂದ ಉಂಟಾಗುವ ಅಪಾಯ ಹೆಚ್ಚು. ಇಷ್ಟೆಲ್ಲ ಅಪಾಯವಿದ್ದರೂ ನಾವು ಮನೆಗೆ ವಿಮೆ ಮಾಡಿಸಲು ಮುಂದಾಗುವುದಿಲ್ಲ ಎನ್ನುವುದು ವಿಪರ್ಯಾಸ. ಅತ್ಯಂತ ಅಮೂಲ್ಯ ಮತ್ತು ಬೆಲೆ ಬಾಳುವ ಆಸ್ತಿಯಾದ ಮನೆಗೆ ವಿಮೆ ಮಾಡಿಸಲೇಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಅಂಕಿ-ಅಂಶ ಏನು ಹೇಳುತ್ತದೆ?

ನೈಸರ್ಗಿಕ ವಿಕೋಪಕ್ಕೆ ತುತ್ತಾಗಿ ಮನೆ, ಆಸ್ತಿ ಕಳೆದುಕೊಳ್ಳುವವರ ಪೈಕಿ ಕೇವಲ ಶೇ. 8ರಷ್ಟು ಜನ ವಿಮೆ ಮಾಡಿಸಿಕೊಂಡಿರುತ್ತಾರೆ ಎನ್ನುತ್ತದೆ ಅಂಕಿ-ಅಂಶ. ಗೃಹ ವಿಮೆ ಕೇವಲ ರಕ್ಷಣೆಯಲ್ಲ; ಇದು ಕಠಿಣ ಪರಿಶ್ರಮದ ಮೂಲಕ ಗಳಿಸಿದ ಸ್ವತ್ತುಗಳನ್ನು ರಕ್ಷಿಸುವ ನಿರ್ಣಾಯಕ ಹೂಡಿಕೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ.

ಯಾಕಾಗಿ ಗೃಹ ವಿಮೆ?

ನಿಮ್ಮ ಮನೆಗೆ ಆಗಬಹುದಾದ ಹಾನಿ ಮತ್ತು ಅದರಲ್ಲಿನ ಬೆಲೆಬಾಳುವ ವಸ್ತುಗಳ ನಷ್ಟಕ್ಕೆ ಪರಿಹಾರ ಒದಗಿಸಲು ಗೃಹ ವಿಮೆ ಅತ್ಯಗತ್ಯ. ಜತೆಗೆ ಬೆಂಕಿ ಆಕಸ್ಮಿಕ, ಕಳ್ಳತನ, ಗಲಭೆ ಆದಾಗಲೂ ಪರಿಹಾರ ನೀಡುತ್ತದೆ. ಒಟ್ಟಿನಲ್ಲಿ ಮನೆಗೆ ಅನಿರೀಕ್ಷಿತವಾಗಿ ಉಂಟಾಗಬಹುದಾದ ಯಾವುದೇ ನಷ್ಟಗಳ ವಿರುದ್ಧ ರಕ್ಷಣೆ ನೀಡುವ ರಕ್ಷಾ ಕವಚದಂತೆ ಗೃಹ ವಿಮೆ ಕೆಲಸ ಮಾಡುತ್ತದೆ. ಹೀಗಾಗಿ ವೈಯಕ್ತಿಕ, ಆರೋಗ್ಯ, ವಾಹನ ವಿಮೆ ಮಾಡಿಸುವಂತೆ ಇದನ್ನು ಕೂಡ ಅತ್ಯಗತ್ಯವಾಗಿ ಮಾಡಿಸಬೇಕು.

ಗೃಹ ವಿಮೆ ಯಾರೆಲ್ಲ ಮಾಡಿಸಬಹುದು?

  • ಸ್ವಂತ ಮನೆ ಹೊಂದಿದವರು, ಭೂ ಮಾಲೀಕರು ಅಥವಾ ಬಾಡಿಗೆದಾರರು ಇನ್ಶೂರೆನ್ಸ್‌ ಖರೀದಿಸಬಹುದು. ಹೌದು, ಬಾಡಿಗೆದಾರರು ಸಹ ತಮ್ಮ ಮನೆಗಳಿಗೆ ವಿಮೆ ಮಾಡಬಹುದು.
  • ನಿವಾಸಕ್ಕಾಗಿ ಬಳಸುವ ಆಸ್ತಿಗಳಿಗೆ ಮಾತ್ರ ಗೃಹ ವಿಮೆಯನ್ನು ಖರೀದಿಸಬಹುದು. ವಸತಿಯನ್ನು ಯಾವುದೇ ವಾಣಿಜ್ಯ ಚಟುವಟಿಕೆಗೆ ಬಳಸಿದರೆ – ಗೃಹ ವಿಮೆ ಹೊರತುಪಡಿಸಿ ಸೂಕ್ತ ವಿಮಾ ಪಾಲಿಸಿ ಖರೀದಿಸಬೇಕು.

ಇದರಿಂದೆಲ್ಲ ರಕ್ಷಣೆ

ಗೃಹ ವಿಮೆ ಮಾಡಿಸಿದರೆ ವಿಶೇಷವಾಗಿ ಮಳೆಗಾಲದಲ್ಲಿ ಈ ಎಲ್ಲ ಕಾರಣಕ್ಕೆ ಮನೆಗೆ ಹಾನಿಯಾದರೆ ನಿಮಗೆ ಪರಿಹಾರ ಸಿಗಲಿದೆ.

  • ಚಂಡಮಾರುತ, ಸುಂಟರಗಾಳಿ, ಸುನಾಮಿ
  • ಪ್ರವಾಹ
  • ಮಿಂಚು, ಗುಡುಗು
  • ಭೂಕುಸಿತ
  • ಮರ ಬಿದ್ದು ಮನೆಗೆ ಹಾನಿ

ವಿಧಗಳು

ಮನೆಯ ರಚನೆ: ಇದು ನಿಮ್ಮ ಮನೆಗೆ ಉಂಟಾಗುವ ಹಾನಿಗೆ ಪರಿಹಾರ ನೀಡುತ್ತದೆ. ಗೃಹಬಳಕೆಯ ಔಟ್‌ಹೌಸ್‌, ಕಾಂಪೌಂಡ್ ಗೋಡೆಗಳು, ಪಾರ್ಕಿಂಗ್ ಸ್ಥಳ, ಸೌರ ಫಲಕಗಳು, ನೀರಿನ ಟ್ಯಾಂಕ್‌ ಮುಂತಾದವುಗಳನ್ನು ಇದು ಒಳಗೊಂಡಿರುತ್ತದೆ.

ಸಾಮಗ್ರಿ: ಈ ವಿಧದ ವಿಮೆ ನಿಮ್ಮ ಮನೆಯಲ್ಲಿನ ಗೃಹೋಪಯೋಗಿ ವಸ್ತುಗಳನ್ನು ಒಳಗೊಂಡಿದೆ. ಟಿವಿ, ರೆಫ್ರಿಜರೇಟರ್, ಪೀಠೋಪಕರಣಗಳು ಮತ್ತಿತರ ವಸ್ತುಗಳ ಹಾನಿಗೆ ಪರಿಹಾರ ನೀಡುತ್ತದೆ. ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ಆಭರಣಗಳು, ಕಲಾಕೃತಿಗಳು, ಬೆಳ್ಳಿಯ ವಸ್ತುಗಳು, ವರ್ಣಚಿತ್ರಗಳು ಮುಂತಾದ ಅಮೂಲ್ಯವಾದ ವಸ್ತುಗಳನ್ನು ಸಹ ನೀವು ಕವರ್ ಮಾಡಬಹುದು.

ಆಕಸ್ಮಿಕ ಸಾವು: ಈ ಕವರೇಜ್ ವಿಮಾದಾರರ ಸಾವಿನ ಸಂದರ್ಭದಲ್ಲಿ ನೆರವಾಗುತ್ತದೆ.

ಈ ಕೆಳಗಿನ ಕಾರಣಗಳಿಂದ ಮನೆಗೆ ಹಾನಿಯಾದರೆ ಗೃಹ ವಿಮೆಯ ಪರಿಹಾರ ಲಭ್ಯ

ವಿಮಾನ ದುರಂತ, ಗಲಭೆ, ಪ್ರತಿಭಟನೆ, ಕ್ಷಿಪಣಿ ಪ್ರಯೋಗ, ನೆರೆ, ಚಂಡ ಮಾರುತ, ಮಿಂಚು, ಭೂಕಂಪ, ಕಳವು, ಬೆಂಕಿ ಆಕಸ್ಮಿಕ.

ಈ ಕೆಳಗಿನ ಕಾರಣಗಳಿಂದ ಮನೆಗೆ ಹಾನಿಯಾದರೆ ಗೃಹ ವಿಮೆಯ ಪರಿಹಾರ ಲಭಿಸುವುದಿಲ್ಲ

ನಗದು ಕಳವು, ಯುದ್ಧ, ವಿದ್ಯುತ್‌ ಉಪಕರಣಗಳ ಅತಿಯಾದ ಬಳಿಕೆಯಿಂದ ಆಗುವ ಹಾನಿ.

ಇದನ್ನೂ ಓದಿ: Money Guide: ಹೋಮ್‌ ಲೋನ್‌ಗೆ ಇನ್ಶೂರೆನ್ಸ್‌ ಮಾಡಿಸಿದ್ದೀರಾ? ಏನಿದರ ಮಹತ್ವ? ನಿಮ್ಮ ಸಂಶಯಗಳಿಗೆ ಇಲ್ಲಿದೆ ಉತ್ತರ

Continue Reading

ಮನಿ-ಗೈಡ್

National Pension System: ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆಗಾಗಿ ಎನ್‌ಪಿಎಸ್ ಯೋಜನೆ ಸೂಕ್ತ

ನಿವೃತ್ತಿ ಬಳಿಕ ಆರ್ಥಿಕ ಭದ್ರತೆ ಮತ್ತು ಸ್ಥಿರವಾದ ಬದುಕನ್ನು ಖಚಿತಪಡಿಸುವ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ (National Pension System) 18 ವರ್ಷ ಮೇಲ್ಪಟ್ಟ ಎಲ್ಲರೂ ಹೂಡಿಕೆ ಮಾಡಬಹುದಾಗಿದೆ. ಹಣಕಾಸಿನ ವಿಚಾರದಲ್ಲಿ ಸರಿಯಾದ ಸಮಯದಲ್ಲಿ ಸರಿಯಾದ ಯೋಜನೆ ರೂಪಿಸಿಕೊಳ್ಳುವುದು ಸುಭದ್ರ ಭವಿಷ್ಯದ ದೃಷ್ಟಿಯಿಂದ ಅತ್ಯತ್ತಮ ಮಾರ್ಗವಾಗಿದೆ. ಎನ್‌ಪಿಎಸ್ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

India's National Pension System
Koo

ನಿವೃತ್ತಿ ಬಳಿಕ ಆರ್ಥಿಕ ಭದ್ರತೆ ಮತ್ತು ಸ್ಥಿರವಾದ ಬದುಕನ್ನು ಖಚಿತಪಡಿಸುವ ಉದ್ದೇಶದಿಂದ ಭಾರತದಲ್ಲಿ ಸರ್ಕಾರಿ ಪ್ರಾಯೋಜಿತ ಪಿಂಚಣಿ ಯೋಜನೆಯಾದ (pension scheme) ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (National Pension System) ಅನ್ನು ಜಾರಿಗೆ ತರಲಾಗಿದೆ. ಇದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (Pension Fund Regulatory and Development Authority) ಅಡಿಯಲ್ಲಿ ಸ್ವಯಂಪ್ರೇರಿತ, ದೀರ್ಘಾವಧಿಯ ನಿವೃತ್ತಿ ಹೂಡಿಕೆ ಯೋಜನೆಯಾಗಿದೆ. ನಿವೃತ್ತಿ ಯೋಜನೆಗಾಗಿ ಉದ್ಯೋಗದ ಅವಧಿಯಲ್ಲಿ ವ್ಯವಸ್ಥಿತ ಉಳಿತಾಯಕ್ಕೆ ಆದ್ಯತೆ ನೀಡಲು ಎನ್ ಪಿಎಸ್ ಒಂದು ಅತ್ಯತ್ತಮ ಆಯ್ಕೆಯಾಗಿದೆ.

ದಾಖಲಾತಿ ಸುಲಭ

18ರಿಂದ 65 ವರ್ಷ ವಯಸ್ಸಿನ ಭಾರತೀಯ ನಾಗರಿಕರು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ಆನ್‌ಲೈನ್‌ನಲ್ಲಿ eNPS ಪೋರ್ಟಲ್ ಮೂಲಕ ಅಥವಾ ಆಫ್‌ಲೈನ್‌ನಲ್ಲಿ ಯಾವುದೇ ಪಾಯಿಂಟ್ ಆಫ್ ಪ್ರೆಸೆನ್ಸ್-ಸರ್ವಿಸ್ ಪ್ರೊವೈಡರ್‌ನಲ್ಲಿ ಮಾಡಿಸಬಹುದು. ಇದಕ್ಕಾಗಿ ಗ್ರಾಹಕರ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ ಮತ್ತು ಚಂದಾದಾರರ ಫಾರ್ಮ್ ಅನ್ನು ಭರ್ತಿ ಮಾಡಬೇಕು.

ಖಾತೆಗಳಿಗೆ ಆರಂಭಿಕ 500 ರೂ. ಅಗತ್ಯವಿದ್ದು, ಕೆಲವು ವಿನಾಯಿತಿಗಳೊಂದಿಗೆ ನಿವೃತ್ತಿ ಅಥವಾ 60 ವರ್ಷವನ್ನು ತಲುಪುವವರೆಗೆ ಇವುಗಳನ್ನು ಹಿಂಪಡೆಯಲಾಗುವುದಿಲ್ಲ.


ಹೂಡಿಕೆಯ ಆಯ್ಕೆ

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯು ಶ್ರೇಣಿ I ಮತ್ತು ಶ್ರೇಣಿ II ಖಾತೆಗಳನ್ನು ನೀಡುತ್ತದೆ. ಶ್ರೇಣಿ Iರಲ್ಲಿ ನಿವೃತ್ತಿಯ ಉಳಿತಾಯಕ್ಕಾಗಿ ಆದರೆ ಶ್ರೇಣಿ II ಸಕ್ರಿಯ ಸ್ವಯಂಪ್ರೇರಿತ ಪೂರಕ ಆಯ್ಕೆಯಾಗಿದೆ.

ಈಕ್ವಿಟಿ, ಕಾರ್ಪೊರೇಟ್ ಬಾಂಡ್‌ಗಳು, ಸರ್ಕಾರಿ ಭದ್ರತೆಗಳು ಮತ್ತು ಪರ್ಯಾಯ ಹೂಡಿಕೆಗಳ ನಡುವೆ ಸ್ವತ್ತುಗಳನ್ನು ನಿಯೋಜಿಸಲು ಚಂದಾದಾರರು ಸಕ್ರಿಯ ಆಯ್ಕೆಯನ್ನು ಮಾಡಬಹುದು ಅಥವಾ ಸ್ವಯಂ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಇದು ಸ್ವಯಂಚಾಲಿತವಾಗಿ ವಯಸ್ಸಿನ ಆಧಾರದ ಮೇಲೆ ಬದಲಾಗುತ್ತದೆ.


ತೆರಿಗೆ ಉಳಿತಾಯ

ಎನ್‌ಪಿಎಸ್‌ನಲ್ಲಿ ತೆರಿಗೆ ಪ್ರಯೋಜನಗಳನ್ನು ನೀಡಲಾಗಿದೆ. ಎನ್‌ಪಿಎಸ್‌ನಲ್ಲಿನ ಹೂಡಿಕೆಗಳು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿಸಿಇ ಅಡಿಯಲ್ಲಿ ವಾರ್ಷಿಕ 1.5 ಲಕ್ಷ ರೂ.ವರೆಗಿನ ತೆರಿಗೆ ಪ್ರಯೋಜನಗಳನ್ನು ಒದಗಿಸುತ್ತದೆ. ಇದು ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ಚಂದಾದಾರರಿಗೆ ಅನ್ವಯವಾಗುತ್ತದೆ. ಸೆಕ್ಷನ್ 80ಸಿಸಿಡಿ(1ಬಿ) ಅಡಿಯಲ್ಲಿ 50,000 ರೂ. ವರೆಗಿನ ವಿಶೇಷ ಕಡಿತ ಲಭ್ಯವಿದೆ.

ಇದನ್ನೂ ಓದಿ: ITR Filing: ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯ ದಿನಾಂಕ 1 ತಿಂಗಳು ವಿಸ್ತರಣೆಗೆ ಮನವಿ

ಹಿಂತೆಗೆದುಕೊಳ್ಳಲು ಸರಳ ನಿಯಮ

ವಯಸ್ಸು 60 ತಲುಪಿದ ಅನಂತರ ಅಥವಾ ನಿವೃತ್ತಿಯಾದ ಬಳಿಕ ಚಂದಾದಾರರು ತಮ್ಮ ಕಾರ್ಪಸ್ ತೆರಿಗೆ- ಮುಕ್ತ ಶೇ. 60ರಷ್ಟನ್ನು ಮರಳಿ ಪಡೆಯಬಹುದು. ಉಳಿದ ಶೇ.40ರಷ್ಟನ್ನು ಸಾಮಾನ್ಯ ನಿವೃತ್ತಿ ಆದಾಯಕ್ಕಾಗಿ ವರ್ಷಾಶನವನ್ನು ಪಡೆಯಬಹುದಾಗಿದೆ.

60 ವರ್ಷಕ್ಕಿಂತ ಮೊದಲು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಿಂದ ನಿರ್ಗಮಿಸಲು ಸಾಧ್ಯ. ಆದರೆ ಇದು ಗಂಭೀರ ಅನಾರೋಗ್ಯದಂತಹ ಕಾರಣಗಳಿಗಾಗಿ ಮಾತ್ರ ಸಾಧ್ಯ.

Continue Reading

ಮನಿ-ಗೈಡ್

LIC New Jeevan Shanti Plan: ಒಮ್ಮೆ ಪಾವತಿಸಿದರೆ ಸಾಕು; ಜೀವನ ಪರ್ಯಂತ ಪಿಂಚಣಿ!

ಉದ್ಯೋಗದಲ್ಲಿದ್ದಾಗ ನಾವು ಮಾಡಬಹುದಾದ ಒಂದು ದೊಡ್ಡ ಮೊತ್ತದ ಉಳಿತಾಯವೂ ವೃದ್ಧಾಪ್ಯದಲ್ಲಿ ನಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸುತ್ತದೆ. ಆದರೆ ದೈನಂದಿನ ಕೆಲಸಕ್ಕೆ ನಿಯಮಿತ ಆದಾಯದ ಅಗತ್ಯವಿರುತ್ತದೆ. ಇದಕ್ಕಾಗಿ ವ್ಯವಸ್ಥೆ ಇಲ್ಲದಿದ್ದರೆ, ವೃದ್ಧಾಪ್ಯದಲ್ಲಿ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಅಗತ್ಯಕ್ಕೂ ಇತರರನ್ನು ಅವಲಂಬಿಸಬೇಕಾಗುತ್ತದೆ. ಎಲ್ ಇಸಿಯ ಹೊಸ ಜೀವನ ಶಾಂತಿ ಯೋಜನೆಯು (LIC New Jeevan Shanti Plan) ಈ ಸಮಸ್ಯೆಯನ್ನು ದೂರಮಾಡಬಲ್ಲದು. ಈ ಯೋಜನೆಯ ವಿವರ ಇಲ್ಲಿದೆ.

VISTARANEWS.COM


on

By

LIC New Jeevan Shanti Plan
Koo

ವೃದ್ಧಾಪ್ಯದಲ್ಲಿ ಆರ್ಥಿಕ ತೊಂದರೆಯನ್ನು ದೂರ ಮಾಡಲು ಪಿಂಚಣಿ ಯೋಜನೆಯು (lifetime pension) ನಿಮಗೆ ಸಹಾಯ ಮಾಡುತ್ತದೆ. ಎಲ್‌ಐಸಿಯು (LIC) ಪರಿಚಯಿಸಿರುವ ಹೊಸ ಜೀವನ ಶಾಂತಿ ಯೋಜನೆಯು (LIC New Jeevan Shanti Plan) ವೃದ್ಧಾಪ್ಯದಲ್ಲಿ ಎದುರಾಗಬಹುದಾದ ಹಣಕಾಸಿನ ಸಮಸ್ಯೆಯನ್ನು ಪರಿಹರಿಸುತ್ತದೆ. ಇದಕ್ಕಾಗಿ ಒಮ್ಮೆ ಮಾತ್ರ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಬಳಿಕ ಜೀವಮಾನ ಪೂರ್ತಿ ಪಿಂಚಣಿ ಸೌಲಭ್ಯ ಪಡೆಯಬಹುದು.

ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೆಲಸದ ಸಮಯದಲ್ಲಿ ಸಾಕಷ್ಟು ಹಣವನ್ನು ಗಳಿಸಬಹುದು ಮತ್ತು ವೃದ್ಧಾಪ್ಯಕ್ಕಾಗಿ ಅದನ್ನು ಉಳಿಸಬಹುದು.

ಒಂದು ದೊಡ್ಡ ಮೊತ್ತದ ಉಳಿತಾಯವೂ ಎಲ್ಲಾ ಅಗತ್ಯಗಳನ್ನು ಪೂರೈಸುತ್ತದೆ. ಆದರೆ ದೈನಂದಿನ ಕೆಲಸಕ್ಕೆ ನಿಯಮಿತ ಆದಾಯದ ಅಗತ್ಯವಿರುತ್ತದೆ. ನಿಮ್ಮಲ್ಲಿ ಈ ವ್ಯವಸ್ಥೆ ಇಲ್ಲದಿದ್ದರೆ, ವೃದ್ಧಾಪ್ಯದಲ್ಲಿ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಅಗತ್ಯಕ್ಕೂ ಇತರರನ್ನು ಅವಲಂಬಿಸಬೇಕಾಗುತ್ತದೆ. ಎಲ್ ಇಸಿಯ ಹೊಸ ಜೀವನ ಶಾಂತಿ ಯೋಜನೆಯು ಈ ಸಮಸ್ಯೆಯನ್ನು ಪರಿಹರಿಸುತ್ತದೆ.

ಹೊಸ ಜೀವನ್ ಶಾಂತಿ ಯೋಜನೆ

ಈ ಯೋಜನೆಯ ಅಡಿಯಲ್ಲಿ ಎರಡು ಹೂಡಿಕೆ ಆಯ್ಕೆಗಳನ್ನು ನೀಡಲಾಗಿದೆ. ಮೊದಲ ಏಕ ಜೀವನ ಮತ್ತು ಎರಡನೇ ಜಂಟಿ ಜೀವನ. ನೀವು ‘ಡಿಫರ್ಡ್ ಆನ್ಯುಟಿ ಫಾರ್ ಸಿಂಗಲ್ ಲೈಫ್’ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಮುಂದೂಡಲ್ಪಟ್ಟ ಅವಧಿ ಮುಗಿದ ಅನಂತರ ನಿಗದಿತ ಮೊತ್ತವನ್ನು ಪಿಂಚಣಿಯಾಗಿ ಪಡೆಯುತ್ತೀರಿ ಮತ್ತು ಮರಣದ ಅನಂತರ ಹೂಡಿಕೆ ಮಾಡಿದ ಹಣವನ್ನು ನಿಮ್ಮ ನಾಮಿನಿಗೆ ಹಿಂತಿರುಗಿಸಲಾಗುತ್ತದೆ.

ಜಂಟಿ ಜೀವನಕ್ಕಾಗಿ ಮುಂದೂಡಲ್ಪಟ್ಟ ವರ್ಷಾಶನದಲ್ಲಿ ಹೂಡಿಕೆ ಮಾಡುವುದರಿಂದ ಮುಂದೂಡಲ್ಪಟ್ಟ ಅವಧಿ ಮುಗಿದ ಅನಂತರ ನೀವು ಪಿಂಚಣಿ ಪಡೆಯಲು ಪ್ರಾರಂಭಿಸುತ್ತೀರಿ ಮತ್ತು ನಿಮ್ಮ ಮರಣದ ಅನಂತರ, ಯಾರ ಹೆಸರನ್ನು ಸೇರಿಸಲಾಗಿದೆಯೋ ಆ ವ್ಯಕ್ತಿಗೆ ಆಜೀವ ಪಿಂಚಣಿ ಸಿಗುತ್ತದೆ.

ಹೂಡಿಕೆ ಮಾಡಿದ ಮೊತ್ತವನ್ನು ಇಬ್ಬರ ಮರಣದ ಅನಂತರವೇ ನಾಮಿನಿಗೆ ನೀಡಲಾಗುತ್ತದೆ. ಅಜ್ಜ, ಪೋಷಕರು, ಮಕ್ಕಳು, ಮೊಮ್ಮಕ್ಕಳು, ಗಂಡ- ಹೆಂಡತಿ ಅಥವಾ ಒಡಹುಟ್ಟಿದವರಂತಹ ಹತ್ತಿರದ ಸಂಬಂಧಿಗಳೊಂದಿಗೆ ಜಂಟಿ ಜೀವನ ಯೋಜನೆಯನ್ನು ತೆಗೆದುಕೊಳ್ಳಬಹುದು. ಪಿಂಚಣಿಗಾಗಿ ನೀವು ವಾರ್ಷಿಕ, ಅರ್ಧ ವಾರ್ಷಿಕ, ತ್ರೈಮಾಸಿಕ ಮತ್ತು ಮಾಸಿಕ ಆಯ್ಕೆಯನ್ನು ಪಡೆಯುತ್ತೀರಿ.

LIC New Jeevan Shanti Plan
LIC New Jeevan Shanti Plan


ಕನಿಷ್ಠ 1.5 ಲಕ್ಷ ರೂ. ಹೂಡಿಕೆ ಅಗತ್ಯ

ಈ ಯೋಜನೆಯಲ್ಲಿ ಕನಿಷ್ಠ 1.5 ಲಕ್ಷ ರೂ. ಹೂಡಿಕೆ ಮಾಡುವುದು ಅವಶ್ಯಕ. ಗರಿಷ್ಠ ಖರೀದಿ ಬೆಲೆಗೆ ಯಾವುದೇ ಮಿತಿಯಿಲ್ಲ. 1.5 ಲಕ್ಷ ರೂ. ಹೂಡಿಕೆ ಮಾಡಿದರೆ ವಾರ್ಷಿಕವಾಗಿ 12 ಸಾವಿರ ರೂಪಾಯಿ ಪಿಂಚಣಿ ಮತ್ತು ಮಾಸಿಕ 1000 ರೂಪಾಯಿಗಳನ್ನು ಪಡೆಯಬಹುದು.

30ರಿಂದ 79 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ಪಾಲಿಸಿಯನ್ನು ಖರೀದಿಸಬಹುದು. ಪಾಲಿಸಿಯನ್ನು ಖರೀದಿಸಿದ ಅನಂತರ ನಿಮಗೆ ಇಷ್ಟವಾಗದಿದ್ದರೆ ನೀವು ಅದನ್ನು ಯಾವಾಗ ಬೇಕಾದರೂ ಸರೆಂಡರ್ ಮಾಡಬಹುದು. ಈ ಪಾಲಿಸಿಯಲ್ಲಿ ಸಾಲ ಪಡೆಯುವ ಸೌಲಭ್ಯವನ್ನೂ ನೀಡಲಾಗಿದೆ.

10 ಲಕ್ಷ ರೂ. ಹೂಡಿಕೆಗೆ ಎಷ್ಟು ಪಿಂಚಣಿ?

ಈ ಪಾಲಿಸಿಯನ್ನು ಖರೀದಿಸುವಾಗ ಮುಂದೂಡುವ ಅವಧಿ ಅಂದರೆ ಹೂಡಿಕೆ ಮತ್ತು ಪಿಂಚಣಿ ಆರಂಭದ ನಡುವಿನ ಅವಧಿ ಅಥವಾ ಹೆಚ್ಚಿನ ವಯಸ್ಸು ಹೂಡಿಕೆ ಮಾಡಿದರೆ ಹೆಚ್ಚಿನ ಪಿಂಚಣಿ ಪಡೆಯುತ್ತೀರಿ ಎಂಬುದನ್ನು ನೆನಪಿನಲ್ಲಿಡಿ.

45ನೇ ವಯಸ್ಸಿನಲ್ಲಿ ಹೊಸ ಜೀವನ ಶಾಂತಿ ಯೋಜನೆಯ ಏಕ ಜೀವನಕ್ಕಾಗಿ ಮುಂದೂಡಲ್ಪಟ್ಟ ವರ್ಷಾಶನವನ್ನು 10 ಲಕ್ಷ ರೂಪಾಯಿಗೆ ಖರೀದಿಸಿದರೆ ಮತ್ತು 12 ವರ್ಷಗಳ ಮುಂದೂಡುವ ಅವಧಿಯನ್ನು ಇಟ್ಟುಕೊಂಡರೆ 12 ವರ್ಷಗಳ ಅನಂತರ ವಾರ್ಷಿಕವಾಗಿ 1,42,500 ರೂಪಾಯಿಗಳನ್ನು ಪಡೆಯಲು ಪ್ರಾರಂಭಿಸುತ್ತೀರಿ.

ಇದನ್ನೂ ಓದಿ: LPG Price Hike: ತಿಂಗಳ ಆರಂಭದಲ್ಲೇ ಎಲ್‌ಪಿಜಿ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್‌; ಬೆಂಗಳೂರಿನಲ್ಲಿ ಇಷ್ಟಾಗಿದೆ ದರ

ಅರ್ಧ ವಾರ್ಷಿಕ ಪಿಂಚಣಿ ಆಯ್ಕೆ ಮಾಡಿದರೆ ಪ್ರತಿ ಆರು ತಿಂಗಳಿಗೊಮ್ಮೆ 69,825 ರೂ.ಗಳನ್ನು, ತ್ರೈಮಾಸಿಕ ಪಿಂಚಣಿ ಆಯ್ಕೆಯನ್ನು ಮಾಡಿದರೆ 34,556 ಮತ್ತು ಮಾಸಿಕ ಪಿಂಚಣಿ ಆಯ್ಕೆ ಮಾಡಿದರೆ ಪ್ರತಿ ತಿಂಗಳು 11,400 ರೂ. ಪಡೆಯಬಹುದು.

45ನೇ ವಯಸ್ಸಿನಲ್ಲಿ ಜಂಟಿ ಜೀವನ ಯೋಜನೆಗಾಗಿ ಮುಂದೂಡಲ್ಪಟ್ಟ ವರ್ಷಾಶನವನ್ನು 12 ವರ್ಷಗಳ ಮುಂದೂಡಿಕೆ ಅವಧಿಯೊಂದಿಗೆ 10 ಲಕ್ಷಕ್ಕೆ ಖರೀದಿಸಿದರೆ ವಾರ್ಷಿಕವಾಗಿ 1,33,400 ರೂ., ಪ್ರತಿ ಆರು ತಿಂಗಳಿಗೊಮ್ಮೆ 65,366 ರೂ., ಮೂರು ತಿಂಗಳಿಗೊಮ್ಮೆ 32,350 ರೂ., ಮಾಸಿಕ 10,672 ರೂ. ಪಡೆಯಬಹುದು.

Continue Reading
Advertisement
Waqf Act
ದೇಶ25 mins ago

Waqf Act: ಪುರಸಭೆ ಕಚೇರಿಯನ್ನೇ ನುಂಗಿದ ವಕ್ಫ್‌ ಮಂಡಳಿ; ಆಸ್ತಿ ಕಬಳಿಕೆ ಬಣ್ಣ ಬಯಲು ಮಾಡಿದ ಕೇಂದ್ರ ಸಚಿವ!

ಪ್ರಮುಖ ಸುದ್ದಿ39 mins ago

Paris Olympics 2024 : ಭಾರತ ಹಾಕಿ ತಂಡಕ್ಕೆ ಕಂಚಿನ ಪದಕ, ಸ್ಪೇನ್ ವಿರುದ್ಧ 2-1 ಗೋಲ್​ಗಳ ಗೆಲುವು

Viral Video
Latest1 hour ago

Viral Video: ಮೃಗಾಲಯಕ್ಕೆ ನುಗ್ಗಿ ಪ್ರಾಣಿಗಳನ್ನೂ ಹಿಂಸಿಸಿದ ಬಾಂಗ್ಲಾದ ದುಷ್ಟ ಪ್ರತಿಭಟನಾಕಾರರು!

CM Siddaramaiah
ಕರ್ನಾಟಕ1 hour ago

CM Siddaramaiah: ಮೋದಿ ಸರ್ಕಾರದ ವಕ್ಫ್ ಬೋರ್ಡ್ ಕಾನೂನು ತಿದ್ದುಪಡಿಗೆ ಸಿದ್ದರಾಮಯ್ಯ ವಿರೋಧ

KPSC Exam
ನೋಟಿಸ್ ಬೋರ್ಡ್1 hour ago

KPSC Exam: ಆ.25ರಂದು 384 ಗೆಜೆಟೆಡ್‌ ಹುದ್ದೆಗಳ ನೇಮಕಾತಿಗಾಗಿ ನಡೆಯಬೇಕಿದ್ದ ಪರೀಕ್ಷೆ ಮುಂದೂಡಿಕೆ

Baby Death
Latest1 hour ago

Baby Death: ಪ್ರಣಯಕ್ಕೆ ಡಿಸ್ಟರ್ಬ್‌ ಆಯಿತೆಂದು ಕೋಪಗೊಂಡ ಪ್ರಿಯತಮ ಮಹಿಳೆಯ ಮಗುವನ್ನು ನೆಲಕ್ಕೆ ಬಡಿದು ಕೊಂದ!

Wayanad Landslide
ದೇಶ1 hour ago

Wayanad Landslide: ವಯನಾಡಿನಲ್ಲಿ ಸೈನಿಕರ ಕಾರ್ಯಾಚರಣೆ ಮುಕ್ತಾಯ; ಸೆಲ್ಯೂಟ್‌ ಹೊಡೆದು ಬೀಳ್ಕೊಟ್ಟ ಜನ, Video ಇದೆ

Manu Bhaker
ಪ್ರಮುಖ ಸುದ್ದಿ2 hours ago

Paris Olympics 2024 : ಅಥ್ಲೀಟ್​ಗಳಿಗೆ ಒಲಿಂಪಿಕ್ಸ್​ ಮಸ್ಕಾಟ್​ ಚಿತ್ರ ಇರುವ ಕಾಂಡೋಮ್ ಹಂಚಿದ ಆಯೋಜಕರು!

Viral Video
Latest2 hours ago

Viral Video: ಒಂಟೆಯ ಮುಂದಿನ ಕಾಲು ಕಟ್ಟಿ ಚೂರಿಯಿಂದ ಇರಿದ; ಒಂಟೆ ಜಾಡಿಸಿ ಒದ್ದ ಹೊಡೆತಕ್ಕೆ ಸತ್ತೇ ಹೋದ!

Bengaluru Power Cut
ಕರ್ನಾಟಕ2 hours ago

Bengaluru Power Cut: ಆ.10ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 hours ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 hours ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ5 hours ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ5 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌