Motivational story | ಸಾಧುವಿನ ಬಳಿಗೆ ಹೋದ ಯುವ ರಾಜಕಾರಣಿ ಬಾಯಿಗೆ ಬಂದಂತೆ ಬೈದ: ಪ್ರತಿಯಾಗಿ ಸಾಧು ಮಾಡಿದ್ದೇನು? - Vistara News

ಪ್ರಮುಖ ಸುದ್ದಿ

Motivational story | ಸಾಧುವಿನ ಬಳಿಗೆ ಹೋದ ಯುವ ರಾಜಕಾರಣಿ ಬಾಯಿಗೆ ಬಂದಂತೆ ಬೈದ: ಪ್ರತಿಯಾಗಿ ಸಾಧು ಮಾಡಿದ್ದೇನು?

Motivational story : ಸಾಧುವಿನ ಬಳಿಗೆ ಹೋದ ರಾಜಕಾರಣಿ ತನ್ನ ಧಿಮಾಕು ತೋರಿಸಿದ. ಆದರೆ, ಸಾಧು ಮಾತ್ರ ಅವನನ್ನು ಹೊಗಳಿ ಕಳುಹಿಸಿದ. ಇದನ್ನು ಕೇಳಿದ ರಾಜಕಾರಣಿಯ ಅಪ್ಪ ಹೇಳಿದ್ದೇನು?

VISTARANEWS.COM


on

buddha motivational story
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೃಷ್ಣ ಭಟ್‌ ಅಳದಂಗಡಿ- Motivational story
ಒಂದು ಬಾರಿ ಒಬ್ಬ ದೊಡ್ಡ ರಾಜಕೀಯ ನಾಯಕ ಒಬ್ಬ ಸಾಧುವಿನ ಸಣ್ಣ ಆಶ್ರಮಕ್ಕೆ ಹೋದ. ಆ ಸಾಧುವಿನ ಬಗ್ಗೆ ಅವನಿಗೆ ತುಂಬಾ ಜನ ಹೇಳಿದ್ದರು. ಹಾಗಿರುವಾಗ ತಾನೂ ಒಂದು ಸಾರಿ ಹೋಗಿ ಬಂದರೆ ಹೇಗೆ ಎಂದು ಅನಿಸಿ ಅವನು ಅಲ್ಲಿಗೆ ಹೋಗಿದ್ದ. ತನಗೂ ಅವರಿಂದ ಏನಾದರೂ ಒಳ್ಳೆಯದು ಆದೀತು ಎನ್ನುವ ಆಲೋಚನೆ ಅವನಿಗಿತ್ತು.

ಅವನು ಆಶ್ರಮಕ್ಕೆ ಹೋದ. ಆಶ್ರಮವೆಂದರೆ ದೊಡ್ಡದೇನಲ್ಲ. ಸಣ್ಣದೊಂದು ಕುಟೀರದಂಥ ಮನೆ. ಅಲ್ಲಿನ ಒಂದು ಸಣ್ಣ ಕೋಣೆಯಲ್ಲಿ ಸಾಧು ಕುಳಿತಿದ್ದರು. ಅವರ ಮುಂದೆ ಒಂದಷ್ಟು ಜನರು. ಅಲ್ಲಿ ಸ್ವಾಮೀಜಿ ಭಕ್ತರ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದರು. ಅಂದ ಹಾಗೆ ರಾಜಕೀಯ ನಾಯಕ ಒಬ್ಬನೇ ಹೋಗಿರಲಿಲ್ಲ. ನಾಲ್ಕು ಮಂದಿ ಬಾಡಿ ಗಾರ್ಡ್‌ಗಳು ಕೂಡಾ ಇದ್ದರು.

ಇವರನ್ನೆಲ್ಲ ಕಟ್ಟಿಕೊಂಡು ರಾಜಕೀಯ ನಾಯಕ ಸಾಧುವಿನ ಕೋಣೆಯನ್ನು ಪ್ರವೇಶ ಮಾಡಿದ. ಸಾಧು ಇವರನ್ನು ಗಮನಿಸಿದರೂ ಗಮನಿಸದಂತೆ ಪ್ರಶ್ನೋತ್ತರ ಕಲಾಪ ಮುಂದುವರಿಸಿದರು. ಸಾಮಾನ್ಯವಾಗಿ ರಾಜಕೀಯ ನಾಯಕ ಎಲ್ಲೇ ಹೋದರೂ ಜನರು ಎದ್ದು ನಿಂತು ಗೌರವಿಸುವುದು, ತಲೆ ತಗ್ಗಿಸಿ ನಮಸ್ಕಾರ ಮಾಡುವುದು ವಾಡಿಕೆಯಾಗಿ ಹೋಗಿತ್ತು. ಆದರೆ, ಇಲ್ಲಿ ಸಾಧುವಾಗಲೀ, ಇತರರಾಗಲೀ ಎದ್ದು ನಿಲ್ಲದೆ ಇದ್ದುದು ಅವನಿಗೆ ಸಿಟ್ಟುಬಂತು.

ಸಾಧುಗಳು ಅಲ್ಲಿ ನೆರೆದಿದ್ದವರ ಜತೆ ಮಾತನಾಡುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ರಾಜಕೀಯ ನಾಯಕ, ನನಗೆ ನಿಮ್ಮ ಬಳಿ ಸ್ವಲ್ಪ ಮಾತನಾಡಲಿಕ್ಕಿದೆ ಎಂದ. ಆಗ ಸಾಧು ಅವನತ್ತ ತಿರುಗಿ ಹೇಳಿದರು: ದಯವಿಟ್ಟು ಸ್ವಲ್ಪ ಹೊತ್ತು ಕಾಯಿರಿ. ನಾನು ಇವರ ಪ್ರಶ್ನೆಗಳಿಗೆ ಉತ್ತರಿಸಿ ನಂತರ ನಿಮ್ಮ ಬಳಿ ಮಾತನಾಡುತ್ತೇನೆ. ನೀವು ಅಷ್ಟು ಹೊತ್ತು ಕಾಯಲು ಸಿದ್ಧರಿದ್ದೀರಿ ಎಂದರೆ ಕಾಯಬಹುದು.

ಈ ಮಾತನ್ನು ಕೇಳುತ್ತಲೇ ರಾಜಕೀಯ ಮುಖಂಡನ ಸಿಟ್ಟು ನೆತ್ತಿಗೇರಿತು. ಅಲ್ಲಿವರೆಗೆ ಸಾಧುವನ್ನು ಬಹುವಚನದಿಂದ ಮಾತನಾಡಿಸುತ್ತಿದ್ದ ರಾಜಕೀಯ ನಾಯಕ, ವಿನಯದಿಂದ ನಡೆದುಕೊಳ್ಳುತ್ತಿದ್ದ ರಾಜಕೀಯ ಮುಖಂಡ ಒಮ್ಮಿಂದೊಮ್ಮೆಗೆ ಭಾಷೆ ಬದಲಿಸಿದ. ʻನಾನು ಯಾರೂಂತ ನಿನಗೆ ಗೊತ್ತಾ? ನೀನು ಯಾರ ಜತೆ ಮಾತನಾಡುತ್ತಿದ್ದಿ ಎಂದು ಗೊತ್ತಿದೆಯಾʼ ಎಂದು ಕೇಳಿದ.

ಆಗ ಸಾಧು ಅತ್ಯಂತ ಸಂಯಮದಿಂದ ಮುಗುಳ್ನಗೆಯೊಂದಿಗೆ ಹೇಳಿದರು: ನೀವು ಯಾರು ಎನ್ನುವುದು ನನ್ನ ವಿಚಾರದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ನೀವು ಯಾರೇ ಆಗಿರಬಹುದು. ನಾನು ನಿಮ್ಮ ಪ್ರಶ್ನೆಗಳಿಗೆ ಉತ್ತರ ಕೊಡಬೇಕು ಅಂತಿದ್ದರೆ, ನಿಮ್ಮ ಜತೆ ಮಾತನಾಡಲೇಬೇಕು ಅಂತಿದ್ದರೆ ನೀವು ಇನ್ನು ಸ್ವಲ್ಪ ಹೊತ್ತು ಕಾಯಲೇಬೇಕು.

ಆಗ ರಾಜಕೀಯ ಮುಖಂಡನ ಸಿಟ್ಟು ಇನ್ನೂ ಹೆಚ್ಚಾಯಿತು: ನಾನು ಯಾರು ಅಂತ ನಿನಗೆ ತೋರಿಸುತ್ತೇನೆ. ಜತೆಗೆ ನಿನ್ನ ಮುಖವಾಡವನ್ನೂ ಕಳಚುತ್ತೇನೆ. ನೀನು ನನ್ನನ್ನು ಎದುರು ಹಾಕಿಕೊಂಡು ತಪ್ಪು ಮಾಡಿದ್ದೀಯಾ ಸಾಧು.. ನೀನು ಒಬ್ಬ ಕಳ್ಳ ಸನ್ಯಾಸಿ. ಜನರಿಗೆ ಮೋಸ ಮಾಡ್ತಾ ಇದ್ದೀಯಾ.. ನೀನು ಢೋಂಗಿ.. ಇಲ್ಲಿ ಕುಳಿತವರಿಗೆಲ್ಲ ವಂಚನೆ ಮಾಡ್ತಾ ಇದೀಯಾ.. ನಿನ್ನ ಲಾಭಕ್ಕಾಗಿ ಇವರನ್ನೆಲ್ಲ ಬಳಸಿಕೊಳ್ತಾ ಇದ್ದೀಯಾ.. ನಾನು ನಿನ್ನನ್ನು ಬಿಡಲ್ಲ.. ನಿನ್ನ ಎಲ್ಲ ಮೋಸದ ಮುಖವಾಡಗಳನ್ನು ಬಿಚ್ಚುತ್ತೇನೆ- ಎಂದು ಹೇಳಿದ.

ರಾಜಕೀಯ ಮುಖಂಡ ಅಷ್ಟು ಹೇಳಿದ ನಂತರವೂ ಸಾಧುವಿನ ಮುಖದಲ್ಲಿನ ಮುಗುಳ್ನಗೆ ಹಾಗೆಯೇ ಇತ್ತು. ಇದನ್ನು ನೋಡಿ ರಾಜಕೀಯ ಮುಖಂಡನಿಗೆ ಇನ್ನಷ್ಟು ಉರಿ ಹತ್ತಿತ್ತು. ʻʻನೋಡು ಸಾಧು.. ಇನ್ನು ಒಂದು ಕ್ಷಣವೂ ನಾನು ಇಲ್ಲಿ ಇರುವುದಿಲ್ಲ. ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ನಿನಗೆ ಇನ್ನೂ ಟೈಮಿದೆ… ನನಗೆ ಗೌರವ ಕೊಟ್ಟು ಕ್ಷಮೆ ಕೇಳಬಹುದು. ನನ್ನ ಜತೆ ಏನಾದರೂ ಹೇಳಲು ಇದ್ದರೆ ಕಡೆಯ ಅವಕಾಶ ಕೊಡುತ್ತೇನೆ.. ತಿದ್ದಿಕೊಳ್ಳಲುʼʼ ಎಂದು ಹೇಳಿದ.

ಈಗಲೂ ಸಾಧುವಿನ ಮುಖದ ಮುಗುಳ್ನಗೆ ಬದಲಾಗಲಿಲ್ಲ. ಅವರು ಅದೇ ಮುಗ್ಧ ನಗುವಿನೊಂದಿಗೆ ಆ ರಾಜಕಾರಣಿಯ ಕಡೆಗೆ ತಿರುಗಿ ಕೈಮುಗಿದು ಹೇಳಿದರು: ನನಗೆ ನಿಮ್ಮ ಬಗ್ಗೆ ಯಾವುದೇ ತಪ್ಪು ಭಾವನೆಯೂ ಇಲ್ಲ. ನೀವೀಗ ನನ್ನ ಬಗ್ಗೆ ಹೇಳಿದಿರಲ್ಲ.. ಅದರ ಬಗ್ಗೆಯೂ ನನಗೆ ಯಾವುದೇ ತಕರಾರಿಲ್ಲ. ಯಾಕೆಂದರೆ ಅದು ನಿಮ್ಮ ಯೋಚನೆ. ನನ್ನ ಮಟ್ಟಿಗೆ ನೀವೊಬ್ಬ ದೊಡ್ಡ ವ್ಯಕ್ತಿ ಅಂತ ಅನಿಸುತ್ತೀರಿ. ಇನ್ನಷ್ಟು ದೊಡ್ಡ ಮನುಷ್ಯ ಆಗಬಲ್ಲಿರಿ.

ಇಷ್ಟು ಮಾತು ಕೇಳಿದ ರಾಜಕೀಯ ನಾಯಕನಿಗೆ ಸ್ವರ್ಗವೇ ಕೈ ಎಟುಕಿಗೆ ಬಂದ ಹಾಗಾಯಿತು. ಸಾಧು ಕ್ಷಮೆ ಕೇಳಿದ ಅನ್ನೋದು ಒಂದು ಕಡೆಯಾದರೆ, ಇನ್ನೊಂದು ಕಡೆ ಅವನೇ ನನ್ನನ್ನು ಹೊಗಳಿದನಲ್ಲಾ ಎನ್ನುವ ಖುಷಿ ಇನ್ನೊಂದು ಕಡೆ.

ರಾಜಕೀಯ ಮುಖಂಡ ಸಾಧುವನ್ನು ಮಣಿಸಿದ ಖುಷಿಯಲ್ಲಿ ಮನೆಗೆ ಬಂದ. ಮನೆಯಲ್ಲಿ ಅವನ ತಂದೆ ಇದ್ದರು. ಅವರೂ ಒಬ್ಬ ಹಿರಿಯ ರಾಜಕೀಯ ಮುಖಂಡರಾಗಿ ಈಗ ಸಕ್ರಿಯ ರಾಜಕೀಯದಿಂದ ದೂರವಿದ್ದವರು, ಒಳ್ಳೆಯ ಮನುಷ್ಯ. ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಕೆಲಸ ಮಾಡಿದವರು.

ಧ್ಯಾನದಲ್ಲಿದ್ದ ಅವರು ಪಕ್ಕದಲ್ಲಿ ಮಗ ಬಂದು ಕುಳಿತದ್ದು ನೋಡಿ ಖುಷಿಯಾದರು. ಯಾಕೋ ಮಗ ಇವತ್ತು ತುಂಬಾ ಖುಷಿಯಾಗಿದ್ದ ಹಾಗೆ ಕಂಡಿತು. ಏನು ವಿಷಯ ಎಂದು ಕೇಳಿದರು. ಮಗ ಬೆಳಗ್ಗೆ ನಡೆದ ಅಷ್ಟೂ ಘಟನೆಗಳನ್ನು ವಿವರಿಸಿದ. ಸಾಧುವನ್ನು ತಾನು ಹೇಗೆ ಮಟ್ಟ ಹಾಕಿದೆ, ಕೊನೆಗೆ ಆತನೇ ತನ್ನನ್ನು ಹೊಗಳುವ ಪರಿಸ್ಥಿತಿ ಬಂದಿದ್ದನ್ನೆಲ್ಲ ವಿವರಿಸಿದ.

ಆಗ ಅವನ ಅಪ್ಪ ನಗುತ್ತಾ ಹೇಳಿದರು: ಮಗಾ.. ಅವರು ನಿನ್ನನ್ನು ಹೊಗಳಿದ್ದೇನೂ ಅಲ್ಲ. ಅವರು ನೀನೇನೂ ಅಂತ ಹೇಳಲೂ ಇಲ್ಲ. ಅವರು ಹೇಳಿದ್ದು ಅವರಿಗೆ ನೀನು ಹೇಗೆ ಕಾಣಿಸುತ್ತಿದ್ದಿ ಎನ್ನುವುದನ್ನಷ್ಟೇ. ಅದು ಅವರ ದೃಷ್ಟಿ. ನೀನು ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗಲೂ ಅವರು ಏನೂ ಮಾತನಾಡಿಲ್ಲ. ಯಾಕೆಂದರೆ, ಅವರಿಗೆ ಚೆನ್ನಾಗಿ ಗೊತ್ತಿತ್ತು… ಅದು ಅವರಲ್ಲ.. ನಿನ್ನ ಯೋಚನೆ ಅಷ್ಟೇ ಅಂತ. ನೀನು ಅಷ್ಟು ಹೇಳಿದ ಮೇಲೂ ಅವರು ನಿನ್ನನ್ನು ಹೊಗಳಿದ್ದಾರೆ ಎಂದರೆ ಅವರು ಹೊಗಳಿದ್ದು ನಿನ್ನ ವ್ಯಕ್ತಿತ್ವವನ್ನಲ್ಲ.. ನಿನ್ನ ಶ್ರೇಷ್ಠತೆಯನ್ನಲ್ಲ.. ಬದಲಾಗಿ ಅವರ ದೃಷ್ಟಿಯನ್ನು. ಹೌದು, ಅವರ ದೃಷ್ಟಿ ಚೆನ್ನಾಗಿತ್ತು.. ನೀನು ಅವರಿಗೆ ಹಾಗೆ ಕಂಡಿದ್ದೀಯಾ.. ನಿನ್ನ ದೃಷ್ಟಿ ಹೇಗಿದೆ ಎನ್ನುವುದನ್ನು ನೀನೇ ನೋಡಿಕೋ..

ಯುವ ರಾಜಕಾರಣಿ ತಲೆ ತಗ್ಗಿಸಿ ಎಲ್ಲವೂ ಅರ್ಥವಾಯಿತು ಎನ್ನುವ ಹಾಗೆ ತಲೆಯಾಡಿಸಿದ.

ಇದನ್ನೂ ಓದಿ | Motivational Story: ಸೋಲಿನ ಭಯದಲ್ಲೇ ಇದ್ದ ಅವನಿಗೆ ಕೇಶವ ಮೂರ್ತಿ ಹೇಳಿದ ಗೆಲುವಿನ ಮಂತ್ರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Cow Smuggling : ಗೋವು ಸಾಗಿಸುತ್ತಿದ್ದವರಿಂದ ಹಿಂದೂಪರ ಸಂಘಟನೆ ಕಾರ್ಯಕರ್ತರ ಮೇಲೆ ಗಂಭೀರ ಹಲ್ಲೆ

Cow Smuggling : ಟಂ ಟಂ‌ ಹಾಗೂ ಪಿಕ್ ವಾಹನದ ಮೂಲಕ ಸಾಗಿಸಲಾಗುತ್ತಿದ್ದ ಗೋವುಗಳನ್ನು ಹಿಂದೂಪರ ಸಂಘಟನೆ ಕಾರ್ಯಕರ್ತರು ತಡೆದಿದ್ದಾರೆ. ಈ ವೇಳೆ ಅವರ ಮೇಲೆ ಕಲ್ಲುಗಳನ್ನು ತೂರಿದ್ದಾರೆ. ಘಟನೆಯಲ್ಲಿ ರಮೇಶ್ ದೇಸಾಯಿ, ಹಾಗೂ ಮಹಾದೇವ್ ಎನ್ನುವರಿಗೆ ಗಾಯವಾಗಿದೆ. ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ. ನೀಡಲಾಗುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.

VISTARANEWS.COM


on

cow smuuggling
Koo

ಕಲಬುರಗಿ: ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಆರು ಗೋವುಗಳ ರಕ್ಷಣೆ ಮಾಡಲು(Cow Smuggling) ಮುಂದಾದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಹಲ್ಲೆ ನಡೆದ ಪ್ರಕರಣ ಗುರುವಾರ ರಾತ್ರಿ ನಡೆದಿದೆ. ಗೋವುಗಳನ್ನು ಸಾಗಿಸುತ್ತಿದ್ದನ್ನು ತಡೆದಿದ್ದಕ್ಕೆ‌ 30ರಿಂದ 35 ಮುಸ್ಲಿಂ ಯುವಕರು ಹಿಂದೂ ಕಾರ್ಯಕರ್ತರ ಮೇಲೆ ಕಲ್ಲು ತೂರಾಟ ಮಾಡಿ ಗಾಯಗೊಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಲಬುರಗಿ ನಗರದ ಖಾದ್ರಿ ಚೌಕ್ ಬಳಿ ಘಟನೆ. ನಡೆದಿದ್ದು, ರಾಮ ಸೇನೆ ಕಾರ್ಯಕರ್ತರು ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಕಲ್ಲು ತೂರಾಟ ನಡೆದಿದೆ ಎಂಬುದಾಗಿ ದೂರಿನಲ್ಲಿ ದಾಖಲಾಗಿದೆ. ಬಕ್ರಿದ್ ಹಬ್ಬದ ಹಿನ್ನಲೆಯಲ್ಲಿ ಖಾದ್ರಿ ಚೌಕ್ ಬಳಿ‌ ಕಸಾಯಿ ಖಾನೆಗೆ‌ ಗೋವುಗಳನ್ನು ಸಾಗಿಸುತ್ತಿದ್ದರು. ಆಳಂದ ಕಾಲೋನಿ ಬಳಿ ಒಂದು ಟಂ ಟಂ‌ ಹಾಗೂ ಪಿಕ್ ವಾಹನದ ಮೂಲಕ ಸಾಗಿಸಲಾಗುತ್ತಿದ್ದ ಗೋವುಗಳನ್ನು ಹಿಂದೂಪರ ಸಂಘಟನೆ ಕಾರ್ಯಕರ್ತರು ತಡೆದಿದ್ದಾರೆ. ಈ ವೇಳೆ ಅವರ ಮೇಲೆ ಕಲ್ಲುಗಳನ್ನು ತೂರಿದ್ದಾರೆ. ಘಟನೆಯಲ್ಲಿ ರಮೇಶ್ ದೇಸಾಯಿ, ಹಾಗೂ ಮಹಾದೇವ್ ಎನ್ನುವರಿಗೆ ಗಾಯವಾಗಿದೆ. ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ. ನೀಡಲಾಗುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಚೌಕ್ ಪೊಲೀಸ್ ಠಾಣಾವ್ಯಾಪ್ತಿ ಪ್ರಕರಣ ದಾಖಲಾಗಿದೆ.

ಧಾರವಾಡದಲ್ಲೂ ಹಲ್ಲೆ, ಪ್ರತಿಭಟನೆ

ಗೋವು ಸಾಗಿಸುತ್ತಿದ್ದನ್ನು ಪ್ರಶ್ನಿಸಿದ ಬಜರಂಗ ದಳ ಕಾರ್ಯಕರ್ತನ ಮೇಲೆ ಮುಸ್ಲಿಮರು ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಘಟನೆ ಬಳಿಕೆ ಇಲ್ಲಿನ ಉಪನಗರ ಠಾಣೆಗೆ ಹಿಂದೂಪರ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಸೋಮಶೇಖರ ಚೆನ್ನಶೆಟ್ಟಿ ಹಲ್ಲೆಗೊಳಗಾದ ಯುವಕ. ಗೋ ರಕ್ಷಣೆ ಮಾಡಲು ಹೋದಾಗ ಆತನ ಮೇಲೆ ಹಲ್ಲೆ ನಡೆಸಲಾಗಿದೆ. ನಗರದ ಹಳೆ ಎಪಿಎಂಸಿ ಬಳಿ ಘಟನೆ ನಡೆದಿದ್ದು, ಪ್ರಾಣಿ ರಕ್ಷಕನೂ ಆಗಿರೋ ಸೋಮಶೇಖರನ ಮೇಲಿನ ಹಲ್ಲೆಯನ್ನು ಖಂಡಿಸಲಾಗಿದೆ. ಉರಗ ರಕ್ಷಕನೂ ಆಗಿರೋ ಸೋಮಶೇಖರ ಮೇಲೆ ಹಲ್ಲೆ ಮಾಡಿರುವುದು ತಪ್ಪು ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ಇದನ್ನೂ ಓದಿ: Road Accident : ಚಿತ್ರದುರ್ಗದಲ್ಲಿ ಭೀಕರ ಅಪಘಾತ; ಇಬ್ಬರು ಮಕ್ಕಳು ಸೇರಿ ಸ್ಥಳದಲ್ಲೇ ನಾಲ್ಕು ಮಂದಿ ಸಾವು

ಪ್ರತಿಭಟನೆ ಬಳಿಕ ವಿಧಾನ ಸಭೆ ವಿಪಕ್ಷ ಉಪನಾಯಕರ ಅರವಿಂದ ಬೆಲ್ಲದ್ ಮಾತನಾಡಿ, ಶಾಂತ ಧಾರವಾಡದಲ್ಲಿ ಇವತ್ತು ಇನ್ನೊಂದು ದುರ್ಘಟನೆ ಆಗಿದೆ. ಬಕ್ರೀದ್ ಸಮಯದಲ್ಲಿ ಹಸುಗಳನ್ನು ಕಡಿಯಲು ಉದ್ದೇಶಿಸಿದ್ದರು. ಇಂತಿಷ್ಟು ವಯಸ್ಸಾದ್ರೆ ಮಾತ್ರ ವಧೆ ಮಾಡುವ ಅವಕಾಶವಿದೆ. ಆದರೆ, ಚಿಕ್ಕವಯಸ್ಸಿನ ಹಸು ಸಾಗಿಸುತ್ತಿರುವ ಬಗ್ಗೆ ಪ್ರಶ್ನಿಸಿದ್ದಕ್ಕೆ ಯುವಕ ಹಲ್ಲೆ ಮಾಡಿದ್ದಾರೆ.

ಸೋಮಶೇಖರ್ ಚನ್ನಶಟ್ಟಿ ಎಲ್ಲ ಪ್ರಾಣಿ, ಜೀವಿಗಳ ರಕ್ಷಣೆ ಮಾಡುತ್ತಾರೆ. ಪ್ರಾಣಿ ಪಕ್ಷಿಗಳಿಗೆ ತೊಂದರೆಯಾದರೆ ಚಿಕಿತ್ಸೆ ಕೊಡಿಸುತ್ತಾರೆ. ಬೇಫಾರಿ ಎಂಬ ಕಸಾಯಿಖಾನೆ ಮಾಲೀಕ ಹಲ್ಲೆ ಮಾಡಿದ್ದಾನೆ. ಅವನ ಜೊತೆಗೆ 50-60 ಜನ ಸೇರಿ ಹಲ್ಲೆ ಮಾಡಿದ್ದಾರೆ. ಕಿವಿ ಕತ್ತರಿಸುವಂತೆ ಹೊಡೆದಿದ್ದಾರೆ. ಘಟನೆ ಆಗಿ ಮೂರುವರೆ ಗಂಟೆಯಾದರೂ ಪೊಲೀಸರಿಂದ ಯಾವುದೇ ಕ್ರಮ ಆಗಿರಲಿಲ್ಲ. ಹೀಗಾಗಿ ಠಾಣೆಗೆ ಮುತ್ತಿಗೆ ಹಾಕಲಾಗಿದೆ. ಈಗ ಪೊಲೀಸ್ ಆಯುಕ್ತರು ಕ್ರಮದ ಭರವಸೆ ನೀಡಿದ್ದಾರೆ. ಅರ್ಧ ತಾಸಿನಲ್ಲಿ ಎಫ್.ಐಆರ್ ಮಾಡುತ್ತೇವೆ ಎಂದಿದ್ದಾರೆ. ಹೀಗಾಗಿ ಈಗ ಪ್ರತಿಭಟನೆ ವಾಪಸ್ ಪಡೆಯುತ್ತಿದ್ದೇವೆ ಎಂದು ಹೇಳಿದ್ದಾಎ.

ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಹೇಳಿಕೆ ನೀಡಿ, ಜಾನುವಾರು ವಿಚಾರವಾಗಿ ಎರಡು ಕೋಮಿನವರ ಮಧ್ಯೆ ಗಲಾಟೆಯಾಗಿದೆ. ಒಂದು ಕೋಮಿನವರು ದೂರು ಕೊಟ್ಟಿದ್ದಾರೆ. ಗಂಭೀರ ಹಲ್ಲೆಯ ದೂರು ಕೊಟ್ಟಿದ್ದಾರೆ. ಇದರ ಪ್ರಕಾರ ಎಫ್​ಐಆರ್​ ದಾಖಲಿಸಲಾಗಿದೆ. ದೂರಿನಲ್ಲಿ ಇಬ್ಬರು ಮತ್ತು ಒಂದಷ್ಟು ಹತ್ತು ಜನರು ಹಲ್ಲೆ ಮಾಡಿದ್ದಾರೆಂದು ತಿಳಿಸಿದ್ದಾರೆ. ಹಲ್ಲೆಯಾದ ಏರಿಯಾದಲ್ಲಿ ಸಿಸಿಟಿವಿಗಳಿವೆ. ಅದು ಎಪಿಎಂಸಿ ಯಾರ್ಡ್ ಇದೆ. ಅದನ್ನೆಲ್ಲ‌ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

Continue Reading

ಪ್ರಮುಖ ಸುದ್ದಿ

Road Accident : ಚಿತ್ರದುರ್ಗದಲ್ಲಿ ಭೀಕರ ಅಪಘಾತ; ಇಬ್ಬರು ಮಕ್ಕಳು ಸೇರಿ ಸ್ಥಳದಲ್ಲೇ ನಾಲ್ಕು ಮಂದಿ ಸಾವು

Road Accident : ಲಾರಿ ಮತ್ತು ಕಾರು ಚಿತ್ರದುರ್ಗ ಕಡೆಯಿಂದ ದಾವಣಗೆರೆ ಕಡೆಗೆ ಹೊರಟಿತ್ತು. ಈ ವೇಳೆ ಅತಿ ವೇಗದಲ್ಲಿ ಬಂದ ಲಾರಿ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

VISTARANEWS.COM


on

Chitradurga News
Koo

ಚಿತ್ರದುರ್ಗ : ಶನಿವಾರ ಮುಂಜಾನೆ ವೇಳೆಗೆ ಚಿತ್ರದುರ್ಗ ತಾಲೂಕಿನ ಚಿಕ್ಕಬೆನ್ನೂರು ಗ್ರಾಮದಲ್ಲಿ ಹಾದು ಹೋಗುವ NH 4 ರಲ್ಲಿ ಭೀಕರ ಅಪಘಾತ(Road Accident) ನಡೆದಿದೆ. ನ್ಯಾಷನಲ್​ ಹೈವೇನಲ್ಲಿ ಚಲಿಸುತ್ತಿದ್ದ ಕಾರೊಂದಕ್ಕೆ ಹಿಂಬದಿಂದ ಲಾರಿಯೊಂದು ರಭಸದಿಂದ ಗುದ್ದಿದ ಪರಿಣಾಮ ಇಬ್ಬರು ಮಕ್ಕಳು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭರಮಸಾಗರ ಹೋಬಳಿಯ ಚಿಕ್ಕಬೆನ್ನೂರು ಗ್ರಾಮದ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಲಾರಿ ಮತ್ತು ಕಾರು ಚಿತ್ರದುರ್ಗ ಕಡೆಯಿಂದ ದಾವಣಗೆರೆ ಕಡೆಗೆ ಹೊರಟಿತ್ತು. ಈ ವೇಳೆ ಅತಿ ವೇಗದಲ್ಲಿ ಬಂದ ಲಾರಿ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ಕಾರಿನಲ್ಲಿದ್ದವರು ಒಂದೇ ಕುಟುಂಬಕ್ಕೆ ಸೇರಿದವರು ಇರಬೇಕು ಎಂದು ಸ್ಥಳೀಯರು ಅಂದಾಜಿಸಿದ್ದಾರೆ. ಶನಿವಾರವಾಗಿದ್ದ ಕಾರಣ ಮುಂಜಾನೆ ತಮ್ಮ ಪ್ರಯಾಣ ಆರಂಭಿಸಿರಬಹುದು ಎಂದು ಹೇಳಲಾಗಿದೆ. ನಿಗದಿತ ಕಾರ್ಯಕ್ರಮವನ್ನು ಉದ್ದೇಶವಾಗಿಟ್ಟುಕೊಂಟು ಅವರು ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅದರೆ ಯಮಧರ್ಮರಾಯನಂತೆ ನುಗ್ಗಿದ ಲಾರಿಯು ಹಿಂಬದಿಂದ ಜೋರಾಗಿ ಗುದ್ದಿದೆ. ದೊಡ್ಡ ಲಾರಿಯು ಗುದ್ದಿದ ರಭಸಕ್ಕೆ ಕಾರಿನ ಹಿಂಭಾಗದಲ್ಲಿ ದೊಡ್ಡ ಪ್ರಮಾಣದ ಹಾನಿ ಉಂಟಾಗಿದೆ. ಈ ವೇಳೆ ಹಿಂಬದಿ ಸೀಟಿನಲ್ಲಿದ್ದ ಮಕ್ಕಳು ಹಾಗೂ ಮಹಿಳೆಯರಿಬ್ಬರು ಅಲ್ಲೇ ಮೃತಪಟ್ಟಿದ್ದಾರೆ. ಮುಂಬದಿ ಸೀಟು ಹಾಗೂ ಮಧ್ಯದಲ್ಲ ಕುಳಿತಿದ್ದವರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಡಿವೈಡರ್ ಕಲ್ಲುಗಳಿಗೆ ಬಡಿದು ಕಾರು ಪಲ್ಟಿ

ರಸ್ತೆ ಮಧ್ಯೆ ಇಟ್ಟಿದ್ದ ಕಲ್ಲಿಗೆ ಕಾಣದೇ ಗುದ್ದಿದ ಕಾರೊಂದು ಪಲ್ಟಿಯಾ ಘಟನೆ ಉಡುಪಿ ಮಣಿಪಾಲ ಮಧ್ಯದ ಇಂದ್ರಾಳಿಯಲ್ಲಿ ನಡೆದಿದೆ. ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರಿಗೆ ತೀವ್ರ ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಇದನ್ನೂ ಓದಿ: Namma Metro : ಮೆಟ್ರೊ ಪ್ರಯಾಣಿಕರೆ ಗಮನಿಸಿ;ಮಧ್ಯಾಹ್ನ1 ಗಂಟೆವರೆಗೆ ಚಲ್ಲಘಟ್ಟದಿಂದ ಕೆಂಗೇರಿ ತನಕ ಸೇವೆ ಇಲ್ಲ

ಮಣಿಪಾಲದಿಂದ ಉಡುಪಿಯತ್ತ ಬರುತ್ತಿದ್ದ ಫೋರ್ಡ್ ಫಿಗೊ ಕಾರು ರಸ್ತೆ ಮಧ್ಯದಲ್ಲಿ ನಿರ್ಲಕ್ಷ್ಯದಿಂದ ಇಡಲಾಗಿದ್ದ ಕಲ್ಲಿಗೆ ಗುದ್ದಿದೆ. ಕಾರು ಡಿವೈಡರ್ ಕಲ್ಲಿಗೆ ಡಿಕ್ಕಿ ಹೊಡೆದ ತಕ್ಷಣ ಕಲ್ಲಿನ ತುಂಡೊಂದು ಹಾರಿ ಸಮೀಪದಲ್ಲಿ ಹೋಗುತ್ತಿದ್ದ ಹಾರಿ ಬೈಕ್ ಗೂ ತೀವ್ರ ಹಾನಿಯಾಗಿದೆ. ಆದರೆ, ಬೈಕ್ ಸವಾರ ಅಪಾಯದಿಂದ ಪಾರಾಗಿದ್ದಾರೆ.

ರಸ್ತೆ ಮಧ್ಯೆ ವಿಭಜಕವನ್ನು ನಿರ್ಮಿಸಲು ಬಳಸುತ್ತಿದ್ದ ಕಲ್ಲುಗಳನ್ನು ಎಲ್ಲೆಂದರಲ್ಲಿ ಇಡಲಾಗಿತ್ತು. ಮುಂಜಾನೆ ವೇಳೆ ಹೆಡ್​ ಲೈಟ್ ಪ್ರಭಾವಕ್ಕೆ ಕಲ್ಲುಗಳು ಇರುವುದನ್ನು ಅರಿಯದ ಚಾಲಕ ಅದಕ್ಕೆ ಡಿಕ್ಕಿ ಹೊಡೆದಿದ್ದಾನೆ.

Continue Reading

ಪ್ರಮುಖ ಸುದ್ದಿ

Namma Metro : ಮೆಟ್ರೊ ಪ್ರಯಾಣಿಕರೆ ಗಮನಿಸಿ; ಜೂನ್​ 17ರಂದು 1 ಗಂಟೆವರೆಗೆ ಚಲ್ಲಘಟ್ಟದಿಂದ ಕೆಂಗೇರಿ ತನಕ ಸೇವೆ ಇಲ್ಲ

Namma Metro: ಕೆಂಗೇರಿ ಮತ್ತು ಚಲ್ಲಘಟ್ಟ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸೇವೆಗಳು ಬೆಳಗ್ಗೆ 5 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಲಭ್ಯ ಲಭ್ಯವಿರುವುದಿಲ್ಲ. ರೈಲು ಸೇವೆಗಳು ಮಧ್ಯಾಹ್ನ 1 ಗಂಟೆಯ ನಂತರ ವೇಳಾಪಟ್ಟಿಯ ಪ್ರಕಾರ ಚಲ್ಲಘಟ್ಟ ಮತ್ತು ವೈಟ್ ಫೀಲ್ಡ್ ನಡುವಿನ ಸಂಪೂರ್ಣ ನೇರಳೆ ಮಾರ್ಗದಲ್ಲಿ ಲಭ್ಯವಿರುತ್ತವೆ.

VISTARANEWS.COM


on

Namma Metro
Koo

ಬೆಂಗಳೂರು: ನಮ್ಮ ಮೆಟ್ರೊದಲ್ಲಿನ (Namma Metro) ನೇರಳೆ ಮಾರ್ಗದ ಚಲ್ಲಘಟ್ಟ ನಿಲ್ದಾಣದಿಂದ ಕೆಂಗೇರಿವರೆಗಿನ ಮಾರ್ಗದಲ್ಲಿ ಸೋಮವಾರ 5 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮಟ್ರೊ ರೈಲುಗಳು ಸಂಚರಿಸುವುದಿಲ್ಲ. ಈ ಮಾರ್ಗದ ರೈಲುಗಳನ್ನು ಅವಲಂಬಿಸಿರುವ ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಮಾಡಿಕೊಂಡರೆ ಉತ್ತಮ. ಈ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು ದುರಸ್ತಿಗಾಗಿ ನಮ್ಮ ಮೆಟ್ರೊ ರೈಲು ಪ್ರಾಧಿಕಾರ ಸೇವೆಯನ್ನು ನಿಲ್ಲಿಸುವುದಾಗಿ ಹೇಳಿದೆ. ಸೋಮವಾರವಾಗಿರುವ ಕಾರಣ ಐಟಿ ಅಂದು ಕಚೇರಿ ಕೆಲಸಗಳು ಇರುತ್ತವೆ. ಹೀಗಾಗಿ ಈ ಮಾರ್ಗವನ್ನು ಅತಿ ಹೆಚ್ಚು ನಂಬಿಕೊಂಡವರು ಆದ್ಯತೆ ಮೇರೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ.

ನಮ್ಮ ಮೆಟ್ರೊ ಕೊಟ್ಟಿರುವ ಪ್ರಕಟಣೆ ಈ ರೀತಿ ಇದೆ; ನೇರಳೆ ಮಾರ್ಗದಲ್ಲಿರುವ ಚಲ್ಲಘಟ್ಟ ಮೆಟ್ರೋ ನಿಲ್ದಾಣದಲ್ಲಿ ದಿನಾಂಕ 17ನೇ ಜೂನ್ 2024 (ಸೋಮವಾರ) ರಂದು ನಿರ್ವಹಣೆ ಕೆಲಸ ನಡೆಯಲಿದೆ. ಹೀಗಾಗಿ ಕೆಂಗೇರಿ ಮತ್ತು ಚಲ್ಲಘಟ್ಟ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸೇವೆಗಳು ಬೆಳಗ್ಗೆ 5 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಲಭ್ಯ ಲಭ್ಯವಿರುವುದಿಲ್ಲ. ರೈಲು ಸೇವೆಗಳು ಮಧ್ಯಾಹ್ನ 1 ಗಂಟೆಯ ನಂತರ ವೇಳಾಪಟ್ಟಿಯ ಪ್ರಕಾರ ಚಲ್ಲಘಟ್ಟ ಮತ್ತು ವೈಟ್ ಫೀಲ್ಡ್ ನಡುವಿನ ಸಂಪೂರ್ಣ ನೇರಳೆ ಮಾರ್ಗದಲ್ಲಿ ಲಭ್ಯವಿರುತ್ತವೆ. ಹಸಿರು ಮಾರ್ಗದಲ್ಲಿ ಮೆಟ್ರೋ ರೈಲು ಸೇವೆಗಳು ಎಂದಿನಂತೆ ವೇಳಾಪಟ್ಟಿಯ ಪ್ರಕಾರ ಚಲಿಸುತ್ತವೆ. ಪ್ರಯಾಣಿಕರ ಅನಾನುಕೂಲಕ್ಕೆ ವಿಷಾದಿಸುತ್ತೇವೆ.

ನಮ್ಮ ಮೆಟ್ರೊ ರೈಲುಗಳ ವ್ಯಾಪ್ತಿ ವಿಸ್ತರಣೆಗೊಂಡಿರುವ ಜತೆಯಾಗಿ ತಾಂತ್ರಿಕ ಸಮಸ್ಯೆಯೂ ಹೆಚ್ಚಾಗುತ್ತಿದೆ. ಎರಡು ದಿನಗಳ ಹಿಂದೆಯಷ್ಟೇ ಮೆಟ್ರೊ ರೈಲು ತಾಂತ್ರಿಕ ದೋಷದಿಂದ ನಿಂತು ಪ್ರಯಾಣಕರು ಅರ್ಧದಾರಿಯಲ್ಲೇ ಪರಿತಪಿಸಿದ್ದರು.

ಅಂದು ಏನಾಗಿತ್ತು?

ಜೂ.13ರಂದು ಬೆಳಗ್ಗೆ ಹಲವೆಡೆ ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಎಂ.ಜಿ ರಸ್ತೆ ಸೇರಿದಂತೆ ಹಲವೆಡೆ ರೈಲು ಬರುವುದು ತಡವಾಗಿದ್ದವು. ಎಂಜಿ ರಸ್ತೆ, ಟ್ರಿನಿಟಿ, ಹಲಸೂರು ಸೇರಿದಂತೆ ಹಲವೆಡೆ ಪ್ರಯಾಣಿಕರು ನಿಲ್ದಾಣಗಳಲ್ಲಿ ಕಾದು ನಿಂತಿದ್ದರು. ಸುಮಾರು 15 ನಿಮಿಷಕ್ಕೂ ಹೆಚ್ಚು ಸಮಯದಿಂದ ರೈಲು ಬಾರದೇ ಪ್ರಯಾಣಿಕರು ಕಿರಿಕಿರಿ ಅನುಭವಿಸಿದ್ದರು.

ಇದನ್ನೂ ಓದಿ: Darshan Arrested : ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣೆಯಲ್ಲಿ ಬೀಗರೂಟವೇ? ಶಾಮಿಯಾನ ಹಾಕಿದ ಪೊಲೀಸರ ನಡೆ ಫುಲ್ ಟ್ರೋಲ್​!

ಎಕ್ಸ್‌ ಮೂಲಕ ಬಿಎಂಆರ್‌ಸಿಎಲ್‌ಗೆ ಟ್ಯಾಗ್‌ ಮಾಡಿ ಮೆಟ್ರೋ ರೈಲು ವಿಳಂಬಕ್ಕೆ ಕಾರಣವೇನು? ಎಂದು ಪ್ರಶ್ನಿಸಿದ್ದರು. ಸದ್ಯ ತಾಂತ್ರಿಕ ಸಮಸ್ಯೆಯಿಂದಾಗಿ ಮೆಟ್ರೋ ಓಡಾಟದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಹೇಳಲಾಗಿತ್ತು.

ಮೆಟ್ರೋ ಸೇವೆಯಲ್ಲಿ ವ್ಯತ್ಯಯ ವಿಚಾರ ಕುರಿತು ಬಿಎಂಆರ್‌ಸಿಎಲ್‌ ಮಾಹಿತಿ ನೀಡಿತ್ತು. ಗುರುವಾರ ಬೆಳಗ್ಗೆ 9.58 ಕ್ಕೆ ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ದೋಷದಿಂದಾಗಿ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಮೆಜೆಸ್ಟಿಕ್‌ನಲ್ಲಿ ದೋಷಯುಕ್ತ ರೈಲನ್ನು ಪಾಕೆಟ್ ಟ್ರ್ಯಾಕ್ಗೆ ಸ್ಥಳಾಂತರಿಸಲಾಗಿದೆ. ರೈಲು ಸೇವೆಗಳನ್ನು ಪುನಃಸ್ಥಾಪಿಸಲಾಗಿದ್ದು, ಸಾಮಾನ್ಯ ಸ್ಥಿತಿಗೆ ಮರಳಲು ಕನಿಷ್ಠ ಒಂದು ಗಂಟೆ ತೆಗೆದುಕೊಳ್ಳಬಹುದು. ಆದ ಅನಾನುಕೂಲತೆಗೆ ವಿಷಾದಿಸುತ್ತೇವೆ ಎಂದು ಕೋರಿತ್ತು.

Continue Reading

ಪ್ರಮುಖ ಸುದ್ದಿ

G7 Summit : ನಿಮ್ಮ ಭೇಟಿಯಿಂದ ಸಂತೋಷವಾಗಿದೆ; ಅಮೆರಿಕ ಅಧ್ಯಕ್ಷ ಬೈಡೆನ್​ ಭೇಟಿ ಬಗ್ಗೆ ಮೋದಿ ಉತ್ಸಾಹ

G7 Summit : ಪ್ರಧಾನಿ ಮೋದಿ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರೊಂದಿಗೆ ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯ ಪ್ರಮುಖ ಅಂಶಗಳ ಬಗ್ಗೆ ಚರ್ಚೆಯಲ್ಲಿ ತೊಡಗಿದ್ದರು. ಅಧ್ಯಕ್ಷ ಮ್ಯಾಕ್ರನ್ ಅವರು ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಇಂಧನ, ರಕ್ಷಣೆ, ಸಂಶೋಧನೆ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಸಹಯೋಗದ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.

VISTARANEWS.COM


on

G7 Summit
Koo

ಅಪುಲಿಯಾ: ಜಿ 7 ಶೃಂಗಸಭೆಯ (G7 Summit) ಹೊರತಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ರಾತ್ರಿ ಇಟಲಿಯಲ್ಲಿ ಅಮರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ಅನೌಪಚಾರಿಕವಾಗಿ ಭೇಟಿಯಾದರು. ಭಾರತ ಮತ್ತು ಯುಎಸ್ “ಜಾಗತಿಕ ಒಳಿತನ್ನು ಮತ್ತಷ್ಟು ಹೆಚ್ಚಿಸಲು ಒಟ್ಟಾಗಿ ಕೆಲಸ ಮಾಡುತ್ತಲೇ ಇರುತ್ತವೆ” ಈ ಭೇಟಿಯ ಬಳಿಕ ಮೋದಿ ಹೇಳಿದ್ದಾರೆ. ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಪಿಎಂ ಮೋದಿ ಸಂತೋಷ ವ್ಯಕ್ತಪಡಿಸಿದ್ದಾರೆ. ಯುಎಸ್ ಅಧ್ಯಕ್ಷರನ್ನು ಭೇಟಿಯಾಗುವುದು ಯಾವಾಗಲೂ ಸಂತೋಷವಾಗಿದೆ ಎಂದು ಬರೆದಿದ್ದಾರೆ.

ಜೋ ಬೈಡೆನ್​, ನಿಮ್ಮನ್ನು ಭೇಟಿಯಾಗುವುದು ಯಾವಾಗಲೂ ಸಂತೋಷದ ಸಂಗತಿ. ಜಾಗತಿಕ ಒಳಿತಿಗಾಗಿ ಭಾರತ ಮತ್ತು ಯುಎಸ್ಎ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಲಿವೆ” ಎಂದು ಪಿಎಂ ಮೋದಿ ಬರೆದುಕೊಂಡಿದ್ದಾರೆ.

ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರೊಂದಿಗೆ ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯ ಪ್ರಮುಖ ಅಂಶಗಳ ಬಗ್ಗೆ ಚರ್ಚೆಯಲ್ಲಿ ತೊಡಗಿದ್ದರು. ಅಧ್ಯಕ್ಷ ಮ್ಯಾಕ್ರನ್ ಅವರು ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಇಂಧನ, ರಕ್ಷಣೆ, ಸಂಶೋಧನೆ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಸಹಯೋಗದ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.

ತಮ್ಮ ಸಭೆಯಲ್ಲಿ, ಪಿಎಂ ಮೋದಿ ಮತ್ತು ಅಧ್ಯಕ್ಷ ಮ್ಯಾಕ್ರನ್ ಭಾರತ ಮತ್ತು ಫ್ರಾನ್ಸ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ರೂಪಿಸುವ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ರಕ್ಷಣಾ ಸಹಯೋಗವು ಚರ್ಚೆಯಲ್ಲಿ ಪ್ರಮುಖ ವಿಷಯವಾಗಿತ್ತು. ಉಭಯ ನಾಯಕರು ರಕ್ಷಣಾ ಸಹಕಾರವನ್ನು ಹೆಚ್ಚಿಸುವ ಬದ್ಧತೆಯನ್ನು ಪುನರುಚ್ಚರಿಸಿದರು. ಚರ್ಚೆಯ ಸಮಯದಲ್ಲಿ ಭಾರತ ಮತ್ತು ಫ್ರಾನ್ಸ್ ನಡುವಿನ ಸಾಂಸ್ಕೃತಿಕ ಸಂಬಂಧಗಳ ವೃದ್ಧಿಗೂ ಆದ್ಯತೆ ನೀಡಲಾಯಿತು.

ಇದನ್ನೂ ಓದಿ: Narendra Modi: ತಂತ್ರಜ್ಞಾನ ಜತೆಗೆ ಮಾನವ ಕೇಂದ್ರಿತ ಏಳಿಗೆಗೆ ಭಾರತ ಆದ್ಯತೆ; ಇಟಲಿ ಜಿ7 ಸಭೆಯಲ್ಲಿ ಮೋದಿ

ಜಿ 7 ನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದೆವು. ಇಂಧನ, ರಕ್ಷಣೆ, ಸಂಶೋಧನೆ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಭಾರತ ಮತ್ತು ಫ್ರಾನ್ಸ್ ಅನ್ನು ಒಂದುಗೂಡಿಸುವ ಕಾರ್ಯತಂತ್ರದ ಪಾಲುದಾರಿಕೆಯ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ಅವರಲ್ಲಿ ಅತ್ಯುತ್ಸಾಹವಿದೆ. ಎಂದು ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಒಂದು ವರ್ಷದಲ್ಲಿ ನಾಲ್ಕನೇ ಭೇಟಿ

ಒಂದು ವರ್ಷದಲ್ಲಿ ಅಧ್ಯಕ್ಷ ಮ್ಯಾಕ್ರನ್ ಅವರೊಂದಿಗೆ ಪ್ರಧಾನಿ ಮೋದಿಯವರ ನಾಲ್ಕನೇ ಸಭೆ ಇದಾಗಿದೆ. ಯುವಕರಲ್ಲಿ ಸಂಶೋಧನಾ ಜಾಯಮಾನ ಉತ್ತೇಜಿಸುವ ಮಾರ್ಗಗಳ ಬಗ್ಗೆಯೂ ಅವರು ಚರ್ಚಿಸಿದ್ದಾರೆ.

ಜಿ 7 ಶೃಂಗಸಭೆಯ ಹೊರತಾಗಿ ಪ್ರಧಾನಿ ಮೋದಿ ಅವರು ಯುಕೆ ಪ್ರಧಾನಿ ರಿಷಿ ಸುನಕ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರನ್ನು ಭೇಟಿಯಾದರು. ವಿಶೇಷವೆಂದರೆ, ಭಾರತವು ಗ್ರೂಪ್ ಆಫ್ ಸೆವೆನ್ (ಜಿ 7) ಶೃಂಗಸಭೆಯಲ್ಲಿ ವಿದೇಶಿ ಆಹ್ವಾನಿತ ದೇಶವಾಗಿ ಭಾಗವಹಿಸಿದೆ.

ಜೂನ್ 13 ರಿಂದ 15 ರವರೆಗೆ ಇಟಲಿಯ ಅಪುಲಿಯಾ ಪ್ರದೇಶದ ಐಷಾರಾಮಿ ಬೊರ್ಗೊ ಎಗ್ನಾಜಿಯಾ ರೆಸಾರ್ಟ್​​ನಲ್ಲಿ ಶೃಂಗಸಭೆ ನಡೆದಿದೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.

Continue Reading
Advertisement
Actor Darshan case Film chamber visit to the renukaswamy house
ಸ್ಯಾಂಡಲ್ ವುಡ್8 mins ago

Actor Darshan:  ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಲು ಹೊರಟ ಚಲನಚಿತ್ರ ವಾಣಿಜ್ಯ ಮಂಡಳಿ

India Coach
ಕ್ರೀಡೆ14 mins ago

India Coach: ಕೋಚ್​ ಆಗುವ ಮುನ್ನವೇ ಗಂಭೀರ್​ಗೆ ಕಿವಿಮಾತು ಹೇಳಿದ ಅನಿಲ್ ಕುಂಬ್ಳೆ

tumkur Murder
ತುಮಕೂರು28 mins ago

Tumkur Murder : ಬೈಕ್ ಆ್ಯಕ್ಸಿಡೆಂಟ್ ಕೇಸ್‌ಗೆ ಬಿಗ್ ಟ್ವಿಸ್ಟ್; ಎದುರಾಳಿಯನ್ನು ಕೊಂದ ಹಂತಕರು ಅರೆಸ್ಟ್‌

Sapthami Gowda breakup story in stage
ಸ್ಯಾಂಡಲ್ ವುಡ್46 mins ago

Sapthami Gowda: ಲವ್‌ ಬ್ರೇಕಪ್‌ ಆಗಿದೆ, ಬಾಯ್‌ಫ್ರೆಂಡ್‌ ನನ್ನ ಜತೆ ಇಲ್ಲ ಎಂದ ಸಪ್ತಮಿ ಗೌಡ!

ESP vs CRO
ಕ್ರೀಡೆ57 mins ago

ESP vs CRO: ಯುರೋ ಕಪ್​ನಲ್ಲಿ ಇಂದು 2 ಪಂದ್ಯ; ಸ್ಪೇನ್‌ಗೆ ಸವಾಲೊಡ್ಡೀತೇ ಕ್ರೊವೇಷಿಯಾ?

Actor Darshan
ಕರ್ನಾಟಕ57 mins ago

Actor Darshan: ಇಂದೇ ಪರಪ್ಪನ ಅಗ್ರಹಾರ ಸೇರ್ತಾರ ದರ್ಶನ್‌, ಪವಿತ್ರಾ ಗೌಡ?

Actor Darshan continue as Agriculture Department ambassador What MB Patil said
ಸ್ಯಾಂಡಲ್ ವುಡ್2 hours ago

Actor Darshan: ಕೃಷಿ ಇಲಾಖೆ ರಾಯಭಾರಿ ಹುದ್ದೆಯಿಂದ ಕೊಲೆ ಆರೋಪಿ ದರ್ಶನ್‌ ವಜಾ!

Pakistan cricket team
ಕ್ರೀಡೆ2 hours ago

Pakistan Team Troll: ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಪಾಕ್​ಗೆ ಟ್ರೋಲ್​ಗಳ ಛಡಿಯೇಟು

Road Accident
ಕರ್ನಾಟಕ2 hours ago

Road Accident: ಬೆಂಗಳೂರು-ಮೈಸೂರು‌ ಎಕ್ಸ್‌ಪ್ರೆಸ್‌ ವೇಯಲ್ಲಿ ಸರಣಿ ಅಪಘಾತ; ಐದು ಕಾರುಗಳು ಜಖಂ

Importance Of Tilaka
ಧಾರ್ಮಿಕ2 hours ago

Importance Of Tilaka: ಹಣೆಯ ಮೇಲೆ ತಿಲಕ ಇಟ್ಟರೆ ಏನೇನು ಪ್ರಯೋಜನ? ಇದಕ್ಕಿದೆ ವೈಜ್ಞಾನಿಕ ಕಾರಣ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ17 hours ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು18 hours ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು19 hours ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ19 hours ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ4 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ4 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ4 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ4 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

ಟ್ರೆಂಡಿಂಗ್‌