Article 370 : ಕೆಲವು ಯುದ್ಧಗಳನ್ನು ಸೋಲಲೆಂದೇ ಮಾಡಬೇಕಾಗುತ್ತದೆ ಎಂದ ಕಪಿಲ್‌ ಸಿಬಾಲ್‌ - Vistara News

ಕೋರ್ಟ್

Article 370 : ಕೆಲವು ಯುದ್ಧಗಳನ್ನು ಸೋಲಲೆಂದೇ ಮಾಡಬೇಕಾಗುತ್ತದೆ ಎಂದ ಕಪಿಲ್‌ ಸಿಬಾಲ್‌

Article 370 : ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿ ರದ್ದತಿ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಿದ್ದ ಹಿರಿಯ ವಕೀಲು ಕಪಿಲ್‌ ಸಿಬಾಲ್‌, ಕೆಲವೊಂದು ಯುದ್ಧಗಳನ್ನು ಸೋಲಲೆಂದೇ ಮಾಡಬೇಕಾಗುತ್ತದೆ ಎಂದಿದ್ದಾರೆ.

VISTARANEWS.COM


on

Article 370 Election in Jammu and Kashmir Kapil sibal
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು (Special status Jammu And Kashmir) ನೀಡಿದ 370ನೇ ವಿಧಿಯನ್ನು (Article 370) ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮ ಮತ್ತು ರೀತಿಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದವರ ಪರವಾಗಿ ವಾದ ಮಾಡಿರುವ ಹಿರಿಯ ವಕೀಲ ಕಪಿಲ್‌ ಸಿಬಾಲ್‌ (Senior Advocate Kapil sibal) ಅವರು ಕೆಲವೊಂದು ಯುದ್ಧಗಳನ್ನು ಸೋಲಲೆಂದೇ ಮಾಡಬೇಕಾಗುತ್ತದೆ ಎಂದಿದ್ದಾರೆ. ಸುಪ್ರೀಂಕೋರ್ಟ್‌ ತೀರ್ಪಿಗೆ (Supreme Court Judgement) ಮುನ್ನವೇ ಟ್ವೀಟ್‌ ಮಾಡಿದ ಅವರು ಸೋಲನ್ನು ಮೊದಲೇ ಒಪ್ಪಿಕೊಂಡಿದ್ದರು. ಆದರೆ, ಸೋಲೋ ಗೆಲುವೋ ಕೆಲವು ವಿಚಾರಗಳನ್ನು ಪ್ರಶ್ನೆ ಮಾಡುವುದು ಅಗತ್ಯವಾಗಿರುತ್ತದೆ ಎಂದಿದ್ದಾರೆ.

ಕೆಲವೊಂದು ಯುದ್ಧಗಳಲ್ಲಿ ನಾವು ಸೋಲುವುದಕ್ಕಾಗಿಯೇ ಸೆಣಸಬೇಕಾಗುತ್ತದೆ. ಸಾಂಸ್ಥಿಕ ನಿರ್ಣಯಗಳ ಸರಿ-ತಪ್ಪುಗಳ ಬಗ್ಗೆ ಮುಂದಿನ ವರ್ಷಗಳಲ್ಲಿ ಚರ್ಚೆ ನಡೆಯುತ್ತದೆ. ಅದಕ್ಕೆ ನಾವು ಮಾಡಿರುವ ಪ್ರಶ್ನೆಗಳೇ ಆಧಾರವಾಗಿರುತ್ತವೆ ಎಂದು ಅವರು ಹೇಳಿದ್ದಾರೆ.

2019ರ ಆಗಸ್ಟ್‌ 5ರಂದು ಕೇಂದ್ರ ಸರ್ಕಾರ ರಾಷ್ಟ್ರಪತಿಗಳ ಆದೇಶದ ಮೂಲಕ 370ನೇ ವಿಧಿಯನ್ನು ರದ್ದುಪಡಿಸಿತ್ತು. ಅದಕ್ಕಿಂತ ಮೊದಲು ಅದು ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಹಿಂಪಡೆದು ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಿತ್ತು. ಅರ್ಜಿದಾರರ ಪರವಾಗಿ ಕಪಿಲ್‌ ಸಿಬಾಲ್‌ ವಾದ ಮಂಡಿಸಿದ್ದರು.

ಇದನ್ನೂ ಓದಿ: Article 370 :‌ ಕಾಶ್ಮೀರದಲ್ಲಿ 2024ರ ಸೆ. 30ರೊಳಗೆ ಚುನಾವಣೆ; ಸುಪ್ರೀಂ ಆರ್ಡರ್‌

ಕಪಿಲ್‌ ಸಿಬಾಲ್‌ ವಾದ ಏನಾಗಿತ್ತು?

  1. ಭಾರತದ ಇತಿಹಾಸದಲ್ಲಿ ಹಿಂದೆಂದೂ ಒಂದು ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತನೆ ಮಾಡಿರಲಿಲ್ಲ.
  2. ನೀವು ಒಂದು ರಾಜ್ಯದ ಗಡಿ ರೇಖೆಗಳನ್ನು ಬದಲಿಸಬಹುದು, ದೊಡ್ಡ ರಾಜ್ಯವಾಗಿದ್ದರೆ ಸಣ್ಣ ರಾಜ್ಯಗಳಾಗಿ ವಿಭಜಿಸಬಹುದು. ಆದರೆ, ಒಂದು ರಾಜ್ಯದ ಅಸ್ತಿತ್ವವನ್ನೇ ನಾಶ ಮಾಡಿರಲಿಲ್ಲ.
  3. ನೀವು ಮಧ್ಯ ಪ್ರದೇಶ ರಾಜ್ಯವನ್ನು ದೊಡ್ಡದಿದೆ ಎಂಬ ಕಾರಣಕ್ಕೆ ವಿಭಜನೆ ಮಾಡಬಹುದು. ಆದರೆ, ಒಂದು ದಿನ ನೇರವಾಗಿ ಅದನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಲಾಗದು.
  4. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆಗೆಯಲು 370ನೇ ವಿಧಿಯನ್ನು ರದ್ದು ಮಾಡಿದ್ದು ಸಾಂವಿಧಾನಿಕ ನಡೆಯಲ್ಲ, ರಾಜಕೀಯ ಪ್ರೇರಿತ ಕ್ರಮ.

370ನೇ ವಿಧಿ ತಾತ್ಕಾಲಿಕ, ರದ್ದತಿ ಸರಿ ಎಂದ ಸುಪ್ರೀಂಕೋರ್ಟ್

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ವಿಶೇಷ ಸ್ಥಾನಮಾನ (Special Status) ಕಲ್ಪಿಸುವ ಆರ್ಟಿಕಲ್ 370 (Article 370) ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್ (Supreme Court) ಎತ್ತಿ ಹಿಡಿದಿದೆ. ಆರ್ಟಿಕಲ್‌ 370 ತಾತ್ಕಾಲಿಕವಾಗಿದ್ದು, ಆ ಕುರಿತು ಕ್ರಮ ಕೈಗೊಳ್ಳುವ ಅಧಿಕಾರ ರಾಷ್ಟ್ರಪತಿಗಳದ್ದಾಗಿದೆ ಎಂದು ಸಾಂವಿಧಾನಿಕ ಪೀಠ ಹೇಳಿದೆ. ಇದರೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರಕ್ಕೆ ಈ ವಿಚಾರದಲ್ಲಿ ಐತಿಹಾಸಿಕ ಜಯ ದೊರೆತಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ನೇತೃತ್ವದ ಸಾಂವಿಧಾನಿಕ ಪೀಠವು ನಡೆಸಿದ ಸುದೀರ್ಘ ಅವಧಿಯ ವಿಚಾರಣೆಯನ್ನು ಅಂತಿಮಗೊಳಿಸಿ, ಈ ಬಗ್ಗೆ ತೀರ್ಪು ನೀಡಿದೆ. ಸೆಪ್ಟೆಂಬರ್ 5ರಂದು ಸುಪ್ರೀಂ ಕೋರ್ಟ್ ತೀರ್ಪು ಕಾಯ್ದಿರಿಸಿತ್ತು. 16 ದಿನಗಳ ಕಾಲ ಸಮಗ್ರ ವಿಚಾರಣೆ ನಡೆದಿತ್ತು. ಅರ್ಜಿದಾರರು ಮತ್ತು ಸರ್ಕಾರ ಇಬ್ಬರೂ ತಮ್ಮ ವಾದಗಳನ್ನು ಮಂಡಿಸಿದ್ದರು. ಆರ್ಟಿಕಲ್ 370 ಅನ್ನು ರದ್ದುಗೊಳಿಸಲು ಬಳಸಿದ ಕಾರ್ಯವಿಧಾನದ ಸಾಂವಿಧಾನಿಕತೆ, ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವ ಹಾಗೂ ನಂತರದ ರದ್ದತಿಯನ್ನು ವಿಚಾರಣೆಯಲ್ಲಿ ಪರಿಶೀಲಿಸಲಾಗಿತ್ತು.

ಆರ್ಟಿಕಲ್ 370 ರದ್ದುಗೊಳಿಸುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ 23 ಅರ್ಜಿಗಳನ್ನು ದಾಖಲಾಗಿದ್ದವು. ದೂರಗಾಮಿ ಪರಿಣಾಮಗಳನ್ನು ಬೀರು ಮತ್ತು ಹೆಗ್ಗುರಾತಾಗಬಹುದಾದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ದೀರ್ಘ ಸಮಯದಿಂದ ನಡೆಸುತ್ತಾ ಬಂದಿದೆ. 16 ಮ್ಯಾರಥಾನ್ ದಿನಗಳ ವಿಚಾರಣೆಗಳು ಮತ್ತು ಎರಡೂ ಕಡೆಯವರು ಮಂಡಿಸಿದ ವಾದಗಳ ನಂತರ, ನ್ಯಾಯಾಲಯವು ಸೆಪ್ಟೆಂಬರ್ 5ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿಆರ್ ಗವಾಯಿ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಸಂವಿಧಾನ ಪೀಠ ವಿಚಾರಣೆ ನಡೆಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Actor Darshan : ನಟ ದರ್ಶನ್‌ ಜಾಮೀನು ಭವಿಷ್ಯ ಅ.14ಕ್ಕೆ ನಿರ್ಧಾರ; ವಾದ-ಪ್ರತಿವಾದ ಆಲಿಸಿ ಆದೇಶ ಕಾಯ್ದಿರಿಸಿದ ಕೋರ್ಟ್‌

Actor Darshan : ನಟ ದರ್ಶನ್‌ ಜಾಮೀನು ಭವಿಷ್ಯ ಅ.14ಕ್ಕೆ ನಿರ್ಧಾರ ಆಗಲಿದೆ. ವಾದ-ಪ್ರತಿವಾದ ಆಲಿಸಿರುವ ಕೋರ್ಟ್‌ ಜಾಮೀನು ಅರ್ಜಿ ಆದೇಶವನ್ನು ಕಾಯ್ದಿರಿಸಿದೆ.

VISTARANEWS.COM


on

By

Actor Darshan
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಕೇಸ್‌ನಲ್ಲಿ ನಟ ದರ್ಶನ್ (Actor Darshan) ಆ್ಯಂಡ್ ಗ್ಯಾಂಗ್‌ ಜೈಲುಪಾಲಾಗಿದೆ. ನಟ ದರ್ಶನ್‌ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯು ಅ.10ರಂದು ನಡೆಯಿತು. ಸುದೀರ್ಘವಾಗಿ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಜಾಮೀನು ಅರ್ಜಿ ವಿಚಾರಣೆಯ ಆದೇಶವನ್ನು ಅ.14ಕ್ಕೆ ಕಾಯ್ದಿರಿಸಿದೆ. ಈ ಮೂಲಕ ದರ್ಶನ್‌ ಜಾಮೀನು ಭವಿಷ್ಯ ಮೂರು ದಿನ ಮುಂದಕ್ಕೆ ಹೋಗಿದ್ದು, ದಚ್ಚು ಜೈಲುವಾಸದಲ್ಲಿ ಇರುವಂತಾಗಿದೆ.

ಆರೋಪಿಗಳ ಜಾಮೀನು ಅರ್ಜಿಗಳಿಗೆ ಗುರುವಾರ (ಅ.10) ಆಕ್ಷೇಪಣೆ ಮಾಡಿ ಎಸ್‌ಪಿಪಿ ಪ್ರಸನ್ನಕುಮಾರ್‌ ವಾದಿಸಿದರು. ದರ್ಶನ್‌ ಪರ ಸುದೀರ್ಘ ವಾದ ಮಂಡಿಸಿದ್ದ ಸಿ.ವಿ ನಾಗೇಶ್ ವಾದಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್‌ ಕೌಂಟರ್ ಕೊಟ್ಟರು. ದರ್ಶನ್‌ ವಿರುದ್ಧ ತನಿಖಾಧಿಕಾರಿಗಳು ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿದ್ದಾರೆ ಎಂದು ದರ್ಶನ್‌ ಪರ ಸಿ.ವಿ ನಾಗೇಶ್‌ ಆರೋಪಿಸಿದ್ದರು. ಇದೆಲ್ಲದಕ್ಕೂ ಪ್ರಸನ್ನ ಕುಮಾರ್‌ ಒಂದೊಂದಾಗಿ ಎದುರೇಟು ಕೊಟ್ಟರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ತುಮಕೂರು

Murder Case : ಬುದ್ದಿವಾದ ಹೇಳಿದ್ದಕ್ಕೆ ತಾಯಿಯನ್ನೇ ಕೊಂದ ಮಗನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್‌

Murder Case : ಹಣ ನೀಡುವಂತೆ ಪೀಡಿಸುತ್ತಿದ್ದ ಮಗನಿಗೆ ಬುದ್ದಿವಾದ ಹೇಳಿದ್ದಕ್ಕೆ, ತಾಯಿ ತಲೆ ಮೇಲೆ ಖಾರ ಅರೆಯುವ ಗುಂಡು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ. ಇದೀಗ ತಾಯಿ ಕೊಂದ ಪಾಪಿ ಮಗನಿಗೆ ನ್ಯಾಯಾಲಯವು ಜೀವವಾಧಿ ಶಿಕ್ಷೆ ವಿಧಿಸಿದೆ.

VISTARANEWS.COM


on

By

Murder case
Koo

ತುಮಕೂರು: ತಾಯಿ ಬುದ್ದಿವಾದ ಹೇಳಿದ್ದಕ್ಕೆ ಸಿಟ್ಟಾದ ಮಗನೊಬ್ಬ ಬರ್ಬರವಾಗಿ ಕೊಲೆ (Murder Case) ಮಾಡಿದ್ದ. ಇದೀಗ ಕೊಲೆ ಆರೋಪ ಸಾಬೀತು ಆದ ಹಿನ್ನೆಲೆಯಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ತುಮಕೂರು ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಅಪರಾಧಿ ವಿರೂಪಾಕ್ಷ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ತುಮಕೂರಿನ ಕುಣಿಗಲ್ ತಾಲ್ಲೂಕು ಹಂಗರಹಳ್ಳಿ ಗ್ರಾಮದ ನಿವಾಸಿ ವಿರೂಪಾಕ್ಷ, ಬುದ್ದಿವಾದ ಹೇಳಿದ್ದ ತಾಯಿ ಜಯಮ್ಮಳನ್ನು 2021 ಜನವರಿ 15ರಂದು ರಾತ್ರಿ ಕೊಲೆ ಮಾಡಿದ್ದ. ವಿರೂಪಾಕ್ಷ ಕೆಲಸ ಮಾಡದೆ ಮನೆಯಲ್ಲೇ ಇರುತ್ತಿದ್ದ. ಜಯಮ್ಮ ಹೂ ಹಾಗೂ ಹಾಲು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಇತ್ತ ಹಣ ನೀಡುವಂತೆ ಪದೇ ಪದೇ ತಾಯಿಯನ್ನು ಪೀಡಿಸಿ ವಿರೂಪಾಕ್ಷ ಗಲಾಟೆ ಮಾಡುತ್ತಿದ್ದ. ಹಣ ನೀಡಲು ನಿರಾಕರಿಸಿ ಜಯಮ್ಮ ಮಗನಿಗೆ ಬುದ್ದಿವಾದ ಹೇಳಿದ್ದರು.

ಗಲಾಟೆ ನಂತರ ಜಯಮ್ಮ ಮಲಗಿದ್ದ ವೇಳೆ ತಲೆ ಮೇಲೆ ಖಾರ ಅರೆಯುವ ಗುಂಡು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ. ಈ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಸಿಪಿಐ ಗುರುಪ್ರಸಾದ್ ತನಿಖೆ ನಡೆಸಿ ಕೋರ್ಟ್ ಗೆ ದೋಷಾರೋಪಣ ವರದಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕ ಟಿ.ಆರ್ ಅರುಣ್ ಹಾಗೂ ಕೆ.ಸಿ ದೀಪಕ್ ವಾದ ಮಂಡಿಸಿದ್ದರು. ವಾದ- ವಿವಾದ ಆಲಿಸಿ ನ್ಯಾ.ವೈ.ಎಲ್ ಲಡಖಾನ್ ಅವರು ಶಿಕ್ಷೆ ಪ್ರಕಟಿಸಿದ್ದಾರೆ. ನ್ಯಾಯಾಲಯವು ಐಪಿಸಿ 302 ಅಡಿಯಲ್ಲಿ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Renukaswamy Case : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ A11, A12 ಆರೋಪಿಗಳ ಜಾಮೀನು ಅರ್ಜಿಯೂ ನಾಳೆಗೆ ಮುಂದೂಡಿಕೆ

Renukaswamy Case : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ A11, A12 ಆರೋಪಿಗಳ ಜಾಮೀನು ಅರ್ಜಿಯನ್ನು ನಾಳೆ ಬುಧವಾರಕ್ಕೆ ಕೋರ್ಟ್‌ ಮುಂದೂಡಿದೆ.

VISTARANEWS.COM


on

By

Actor Darshan
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದ ಎ11 ಹಾಗೂ ಎ12 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯು ಮಂಗಳವಾರ ನಡೆಯಿತು. ಲಕ್ಷ್ಮಣ್ ಹಾಗೂ ನಾಗರಾಜು ಸಲ್ಲಿದ್ದ ಜಾಮೀನು ಅರ್ಜಿ ವಿಚಾರಣೆ 57ನೇ ಸೆಷನ್ಸ್ ಕೋರ್ಟ್‌ನಲ್ಲಿ ನಡೆಯಿತು. ನಾಗರಾಜು ನಟ ದರ್ಶನ್ ಫಾರ್ಮ್ ಹೌಸ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರೆ, ಲಕ್ಷ್ಮಣ್ ದರ್ಶನ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಕ್ತಾಯವಾಗಿದ್ದು, ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಬೇರೆ ಯಾವುದೇ ಕ್ರೈಂಗಳಲ್ಲಿ ಭಾಗಿಯಾಗಿಲ್ಲ. ಜಾಮೀನು ನೀಡಿದರೆ ತಲೆಮರೆಸಿಕೊಳ್ಳುವ ಹುನ್ನಾರವಿಲ್ಲ. ಹೀಗಾಗಿ ಜಾಮೀನು ನೀಡಬೇಕೆಂದು ಲಕ್ಷ್ಮಣ್ ಹಾಗೂ ನಾಗರಾಜ್ ಪರ ವಕೀಲರು ವಾದ ಮಂಡಿಸಿದ್ದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸೆಲೆಬ್ರಿಟಿಗಳು ಇರುವುದರಿಂದ ಸೆನ್ಷೇಷನಲ್ ಆಗಿದೆ. ಜಾಮೀನು ನೀಡುವಾಗ ಆರೋಪಿಗಳು ಪೂರ್ವಗ್ರಹ ಪೀಡಿತ ರಾಗಬಾರದು. ಆರೋಪಿಗಳ ವಿರುದ್ಧ ಕೊಲೆ, ಒಳಸಂಚು ಸಾಮಾನ್ಯ ಉದ್ದೇಶದ ಆರೋಪವಿದೆ. ಜೊತೆಗೆ ಸಾಕ್ಷಿ ನಾಶದ ಆರೋಪವೂ ಇದೆ. ಆರೋಪ ಸಾಬೀತಾಗುವರೆಗೂ ಆರೋಪಿಗಳನ್ನು ಮುಗ್ಧರಾಗಿ ಪರಿಗಣಿಸಬೇಕು.

ಆರೋಪಿಗಳು ಈಗಾಗಲೇ ನಾಲ್ಕು ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಲಕ್ಷ್ಮಣ್ ಹಾಗೂ ನಾಗರಾಜ್ ವಿರುದ್ಧ ಅಪರಾಧ ಹಿನ್ನೆಲೆ ಇಲ್ಲ. ಆರೋಪಿಗಳು ಜಾಮೀನು ಪಡೆಯಲು ಟ್ರೈಪಾರ್ಟ್ ಟೆಸ್ಟ್ ಮುಖ್ಯ ಎಂದು ಲಕ್ಷ್ಮಣ್ ಹಾಗೂ ನಾಗರಾಜ್ ಪರ ವಕೀಲ ಸಂದೇಶ್ ಚೌಟ ವಾದಿಸಿದರು. ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಿದ ವಿಚಾರವಾಗಿಯೂ ಉಲ್ಲೇಖ‌ ಮಾಡಿದ ಸಂದೇಶ್ ಚೌಟ, ಈ ಫೋಟೊಗೆ ಸಂಬಂಧಿಸಿದಂತೆ ಮೂರು ಪ್ರಕರಣ ದಾಖಲು ಮಾಡಲಾಗಿದೆ. ನಂತರ ನಮ್ಮ ಕಕ್ಷಿದಾರರನ್ನು ಬೇರೆ ಬೇರೆ ಜೈಲುಗಳಿಗೆ ರವಾನೆ ಮಾಡಲಾಯಿತು. ಅಲ್ಲಿ ನಮ್ಮ ಕಕ್ಷಿದಾರರು ಸಫರ್ ಆಗುತ್ತಿದ್ದಾರೆ.

ಜೈಲಿನಲ್ಲಿ ಸಿಗರೇಟ್ ಸೇದುವುದು ಅಪರಾಧ ಅಲ್ಲ. ಅಲ್ಲಿ ಧೂಮಪಾನಕ್ಕೆ ಪ್ರತ್ಯೇಕ ಜಾಗ ನೀಡಲು ಜೈಲು ಮ್ಯಾನ್ಯುಲ್ ಸೂಚಿಸುತ್ತದೆ. ಆದರೆ ಇದನ್ನೇ ಮಹಾ ಅಪರಾಧ ಎಂಬಂತೆ ಬಿಂಬಿಸಲಾಗಿದೆ. ಈ ಪ್ರಕರಣದ ಮೂವರು ಆರೋಪಿಗಳ ವಿರುದ್ಧ 201 ಅಡಿಯಲ್ಲಿ ಚಾರ್ಜಸ್ ಮಾಡಲಾಗಿತ್ತು. ಅವರನ್ನು ಇವರೆ ಬಿಡುಗಡೆ ಮಾಡಬಹುದಿತ್ತು. ಆದರೆ ಯಾಕೆ ಜಾಮೀನು ನೀಡಬಹುದಾದ ಪ್ರಕರಣದಲ್ಲಿ, ಮೂರು ತಿಂಗಳಿಗೂ ಅಧಿಕ ಕಾಲ ಯಾಕೆ ಕಂಬಿ ಹಿಂದೆ ಇಡಲಾಗಿತ್ತು. ಜಾಮೀನು ಎಂಬುದು ಎಲ್ಲರ ಹಕ್ಕು. ಇದು ಭಯೋತ್ಪಾದನೆ ಅಲ್ಲ, ದೇಶದ ಭದ್ರತೆಗೆ ಧಕ್ಕೆ ಅಲ್ಲ, ಕ್ರೂರಾತಿ ಕ್ರೂರ ಕ್ರಿಮಿನಲ್ ಹಿನ್ನೆಲೆ ಉಳ್ಳವರು ಅಲ್ಲ. ಹೀಗಾಗಿ ಇವರಿಗೆ ಜಾಮೀನು ನೀಡಬೇಕು. ಜಾಮೀನು ಪರಿಗಣನೆಗೆ ಕೋರ್ಟ್ ಎಂಟು ಅಂಶಗಳನ್ನು ಪರಿಗಣಿಸುತ್ತೆ, ಆ ಎಂಟು ಅಂಶಗಳು ಇವೆ. ಹೀಗಾಗಿ ನಮ್ಮ ಕಕ್ಷಿದಾರರಿಗೆ ಜಾಮೀನು ನೀಡಬೇಕು.

ಅರ್ಜಿದಾರರ ಸುದೀರ್ಘ ವಾದ ಆಲಿಸಿದ್ದ ನ್ಯಾಯಾಧೀಶರು ಬಳಿಕ ಮಧ್ಯಾಹ್ನ 2.45ಕ್ಕೆ ಮುಂದೂಡಿದ್ದರು. ಮಧ್ಯಾಹ್ನದ ನಂತರ ಲಕ್ಷ್ಮಣ್ ಹಾಗೂ ನಾಗರಾಜ್ ಪರ ಸಂದೇಶ್ ಚೌಟ ವಾದ ಮುಂದುವರಿಸಿದರು. ಪೊಲೀಸರು ಸಾಕಷ್ಟು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ರಿಮ್ಯಾಂಡ್ ಅರ್ಜಿಯಲ್ಲಿ ಎಲ್ಲಾ ವಿಚಾರಗಳು ಉಲ್ಲೇಖ ಮಾಡಬೇಕಿತ್ತು. ಆದರೆ ಯಾವುದನ್ನೂ ಸರಿಯಾಗಿ ಉಲ್ಲೇಖ ಮಾಡಿಲ್ಲ. ಕೋಕಾ, ಎನ್‌ಐಎ, ಯುಎಪಿಎ ಕಾಯ್ದೆ ಅಡಿಯಲ್ಲಿ ಸಾಕ್ಷಿಗಳನ್ನು ಮರೆಮಾಚಬಹುದು.

ಆದರೆ ಇವರು ರಿಮ್ಯಾಂಡ್ ಅರ್ಜಿಯಲ್ಲಿ ಸಾಕ್ಷಿಗಳನ್ನು ಉಲ್ಲೇಖ ಮಾಡಿಲ್ಲ. ಆದರೆ ಸಾಕ್ಷಿಗಳ ಹೆಸರನ್ನು ಮುಚ್ಚಿಟ್ಟಾಗ ಸರಿಯಾದ ಕಾರಣ ತಿಳಿಸಬೇಕು. ಅದನ್ನು ಕೋರ್ಟ್ ಪರಿಗಣನೆಗೆ ತೆಗೆದುಕೊಳ್ಳಬೇಕು, ಆದರೆ ಇದ್ಯಾವುದೂ ಆಗಿಲ್ಲ. ಕೋಕಾ ಎನ್‌ಐಎ ಯುಎಪಿಎ ಪ್ರಕರಣಗಳಲ್ಲಿ ಸಾಕ್ಷಿಗಳನ್ನು ಮರೆಮಾಚಬಹುದು. ಆದರೆ ಇವರು ಎಲ್ಲಿಯೂ ಯಾವ ರಿಮ್ಯಾಂಡ್ ಅರ್ಜಿಯಲ್ಲೂ ಸಾಕ್ಷಿಗಳ ಬಗ್ಗೆ ಉಲ್ಲೇಖ ಮಾಡಿಲ್ಲ. ಒಂದು ವೇಳೆ ಸಾಕ್ಷಿಗಳ ಹೆಸರನ್ನು ಮುಚ್ಚಿಟ್ಟಾಗ ಸರಿಯಾದ ಕಾರಣ ತಿಳಿಸಬೇಕು. ಅದನ್ನು ಕೋರ್ಟ್ ಪರಿಗಣನೆಗೆ ತೆಗೆದುಕೊಳ್ಳಬೇಕು. ಪಟ್ಟಣಗೆರೆ ಶೆಡ್‌ನ ಸೆಕ್ಯೂರಿಟಿ‌ ಗಾರ್ಡ್ ಈ ಪ್ರಕರಣದ ಐ ವಿಟ್ನೆಸ್ ಆಗಿದ್ದು, ಎಲ್ಲೂ ಸಹ ಆರೋಪಿ‌ ಲಕ್ಷ್ಮಣ್ ಬಗ್ಗೆ ಹೇಳಿಕೆ ನೀಡಿಲ್ಲ. ಅದು 161 ಹೇಳಿಕೆ ಇರಲಿ ಅಥವಾ 164 ಹೇಳಿಕೆ ಇರಲಿ. ಎಲ್ಲಿಯೂ ಆರೋಪಿ ಲಕ್ಷ್ಮಣ್ ಬಗ್ಗ ಹೇಳಿಕೆ ನೀಡಿಲ್ಲ.

ಸಾಕ್ಷಿಗಳ ಹೇಳಿಕೆ ದಾಖಲು‌ ಮಾಡುವಲ್ಲಿಯೂ ಸಾಕಷ್ಟೂ ತಡ ಆಗಿದೆ. ಪ್ರತ್ಯಕ್ಷದರ್ಶಿಗಳಾದ ಕಿರಣ್, ಮಲ್ಲಿಕಾರ್ಜುನ, ವಿಜಯ್ ಕುಮಾರ್ ಜೂನ್ 15 ಕ್ಕೆ ಪಡೆದಿದ್ದಾರೆ. ನಂತರ ಮಧುಸೂಧನ್, ಪುನೀತ್ ಹೇಳಿಕೆ ದಾಖಲಾಗಿದೆ. ಪುನೀತ್‌ ಸ್ಟಾರ್ ವಿಟ್ನೇಸ್ ಆಗಿದ್ದು, ಘಟನಾ ಸ್ಥಳದಲ್ಲಿ ಇದ್ದ ಎಂಬ ಮಾಹಿತಿ ಇದ್ದರೂ ತಡವಾಗಿ ಹೇಳಿಕೆ ದಾಖಲಿಸಿದ್ಯಾಕೆ.? ಎಂದು ಪ್ರಶ್ನಿಸಿದ್ದರು. ಕೃತ್ಯದಲ್ಲಿ ಯಾವುದೇ ಆರೋಪಿ ಡೆಡ್ಲಿ ವೆಪನ್ ಬಳಸಿಲ್ಲ. ಅಲ್ಲದೇ ಸಂಚು ಮಾಡಿ ಯಾವುದೇ ವೆಪನ್ ತಂದಿಲ್ಲ. ನೈಲಾನ್ ಹಗ್ಗ, ಲಾಠಿ & ವಾಟರ್ ಬಾಟೆಲ್ ಅಷ್ಟೇ. ಈ ಪ್ರಕರಣದಲ್ಲಿ ಈ ಇಬ್ಬರು ಆರೋಪಿಗಳ ವಿರುದ್ಧ ನೇರವಾದ ಯಾವುದೇ ಸಾಕ್ಷಿಗಳಿಲ್ಲ. ಹೀಗಾಗಿ ಜಾಮೀನು ನೀಡಬೇಕು ನಾಗರಾಜ್ ಮತ್ತು ಲಕ್ಷ್ಮಣ್ ಪರವಾಗಿ ಸಂದೇಶ್ ಚೌಟ ವಾದಿಸಿದರು.

ಸಾಕ್ಷಿ ಸೃಷ್ಟಿ, ಇರುವ ಸಾಕ್ಷಿ ನಾಶ, ಸಾಕ್ಷಿಗಳ ತತ್ವಿರುದ್ದ ಮಾಹಿತಿ ನೀಡಲಾಗಿದೆ. ಕೇಸ್ ದಾಖಲಿಸುವುದು ತಡ ಆಗಿದೆ. ಮೃತನ ಸಾವಿನ ಸಮಯ ತಿಳಿದಿಲ್ಲ. ರಿಮ್ಯಾಂಡ್ ಅರ್ಜಿಯಲ್ಲಿ ಸಾಕ್ಷಿಗಳ ಹೆಸರೆಳಿಲ್ಲ. ಕೇಸ್ ಡೈರಿ ಉಲ್ಲೇಖಿಸದೇ ಇರೋದು, ಪೊಲೀಸರಿಗೆ ಮಾಹಿತಿ ಇದ್ದರೂ ತನಿಖೆ ತಡ, ಕೊಲೆಗೆ ಬಳಕೆ ಮಾಡಿದ್ದರೆ ಎನ್ನಲಾದ ವಸ್ತುಗಳಲ್ಲಿ ರಕ್ತ ಮಾದರಿ ಇಲ್ಲ. ಬಂಧನಕ್ಕೆ ಪೊಲೀಸರು ಕಾರಣ ನೀಡಿಲ್ಲ. ಚಾರ್ಜ್ ಶೀಟ್ ನಲ್ಲಿ ಸಾಕಷ್ಟು ತಪ್ಪುಗಳಿವೆ. ಮಾಡಿರುವ ಆರೋಪ ಸುಳ್ಳು ಎಂಬುದಕ್ಕೆ ಸಾಕ್ಷಿ ಇದೆ. ಹೀಗಾಗಿ ನಾಗರಾಜ್ ಹಾಗೂ ಲಕ್ಷ್ಮಣ್ ಗೆ ಜಾಮೀನು ನೀಡುವಂತೆ ಮನವಿ ಮಾಡಿದರು. ಸುದೀರ್ಘ ವಾದ ಆಲಿಸಿದ ನ್ಯಾಯಾಲಯ ನಾಳೆ ಬುಧವಾರಕ್ಕೆ ಲಕ್ಷ್ಮಣ್ ಹಾಗೂ ನಾಗರಾಜ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿತು.

Continue Reading

ಬೆಂಗಳೂರು

Actor Darshan : ನಟ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಅ.9ಕ್ಕೆ ಮುಂದೂಡಿಕೆ; ಬೇಲ್‌ ಸಿಗದಿರಲು ಇದೇ ಕಾರಣ

Actor Darshan : ರೇಣುಕಾಸ್ವಾಮಿ ಕೊಲೆ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಮಂಗಳವಾರ ನಡೆಯಿತು. ಸುದೀರ್ಘ ಪ್ರತಿವಾದ ಆಲಿಸಿದ ಕೋರ್ಟ್‌ ಬುಧವಾರಕ್ಕೆ ಮುಂದೂಡಿದೆ.

VISTARANEWS.COM


on

By

Actor Darshan and Gang
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಕೇಸ್‌ನಲ್ಲಿ ನಟ ದರ್ಶನ್ (Actor Darshan) ಆ್ಯಂಡ್ ಗ್ಯಾಂಗ್‌ ಜೈಲುಪಾಲಾಗಿದೆ. ಮುಂದೂಡಿಕೆ ಆಗಿದ್ದ ದರ್ಶನ್‌ರ ಜಾಮೀನು ಅರ್ಜಿ ವಿಚಾರಣೆಯು ಮಂಗಳವಾರ ನಡೆಯಿತು. ದರ್ಶನ್ ಜಾಮೀನು ಅರ್ಜಿ ವಿಚಾರಣೆಯಲ್ಲಿ ಎಸ್‌ಪಿಪಿ ಪ್ರಸನ್ನ ಕುಮಾರ್ ಪ್ರತಿ ವಾದ ಆರಂಭಿಸಿದರು. ಬಳಿಕ ಸುದೀರ್ಘ ಆಲಿಸಿದ ಕೋರ್ಟ್‌ ವಿಚಾರಣೆಯನ್ನು ನಾಳೆ ಬುಧವಾರ‌ ಮಧ್ಯಾಹ್ನ 12ಕ್ಕೆ ಮುಂದೂಡಿದೆ. ಎಲ್ಲಾ ಆರೋಪಿಗಳ ಜಾಮೀನು ಅರ್ಜಿಗಳಿಗೆ ಎಸ್‌ಪಿಪಿ ಪ್ರಸನ್ನಕುಮಾರ್‌ ಆಕ್ಷೇಪಣೆ ವಾದ ಮುಂದುವರಿಸಲಿದ್ದಾರೆ.

ಆರೋಪಿ ಪವಿತ್ರಗೌಡ ಮಾಡಿರುವ ಕೃತ್ಯದ ಬಗ್ಗೆ ಪ್ರಸನ್ನ ಕುಮಾರ್ ವಾದ ಶುರು ಮಾಡಿದರು. ಫೆಬ್ರವರಿಯಿಂದಲೇ ರೇಣುಕಾಸ್ವಾಮಿ ಬಗ್ಗೆ ಪವಿತ್ರಗೌಡಗೆ ಗೊತ್ತಿತ್ತು. ತನ್ನ ನಂಬರ್ ಕೊಟ್ಟು ಪವನ್ ಮೂಲಕ ಕಮ್ಯುನಿಕೇಷನ್ ಮಾಡಲು ಪವಿತ್ರಗೌಡ ಹೇಳಿದ್ದರು. ರೇಣುಕಾಸ್ವಾಮಿ ಅಶ್ಲೀಲ ಫೋಟೊ ಕಳಿಸಿ ಹೇಗಿದೆ ಎಂದು ಕೇಳಿದ್ದಾನೆ. ಅದನ್ನು ಬ್ಲಾಕ್ ಮಾಡಬಹುದಿತ್ತು ಅಥವಾ ಪೊಲೀಸರಿಗೆ ದೂರು ನೀಡಬಹುದಿತ್ತು. ಪವನ್ ಮೆಸೇಜ್ ಮಾಡಿ ರೇಣುಕಾಸ್ವಾಮಿಗೆ ಮೆಸೇಜ್‌ ಮಾಡಿ ಎಲ್ಲಿದ್ದೀಯಾ ಅಂತ ಮಾತುಕತೆ ಶುರು ಮಾಡಿದ್ದಾನೆ. ಆಗ ರೇಣುಕಾಸ್ವಾಮಿ ಅಪೋಲೋ ಫಾರ್ಮಸಿ ಎಂದು ಹೇಳಿರ್ತಾರೆ. ಅದಕೆ ಪವಿತ್ರಗೌಡ ಎಡಗೈ ತಂಬ್ ಸಿಂಬಲ್ ಕಳಿಸಿರ್ತಾಳೆ. ಅಷ್ಟೇ ಅಲ್ಲದೇ ಅಖಿಲ ಕರ್ನಾಟಕ ದರ್ಶನ್ ಅಭಿಮಾನಿಗಳ ಸೇನಾ ಅಧಕ್ಷರಿಗೆ ಮಾಹಿತಿ ನೀಡುತ್ತಾನೆ. ಆ ಸೇನೆ ಪ್ಯಾರಲಲ್ ಆಗಿ ಕೆಲಸ ಮಾಡಿದೆ.

ಅಡ್ರೆಸ್ ಹೇಳದೆ ರೇಣುಕಾಸ್ವಾಮಿ ಫೋಟೋ‌ ಕಳಿಸಿದ್ದ. ಇತ್ತ ಎ3 ಪವನ್‌ ರೇಣುಕಾಸ್ವಾಮಿಯ ಫೋಟೋವನ್ನು ಸೈಯದ್ ತೌಸಿಪ್‌ ಎಂಬಾತನಿಗೆ ಕಳಿಸಿ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿರುವ ಅಫೋಲೊ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದನಾ ಎಂದು ಹುಡುಕಾಡಿಸಿದ್ದಾನೆ. ಇದೆಲ್ಲ ಹೇಗೆ ಸಾಧ್ಯ ಎಂದು ಸಿಡಿಆರ್ ಸಂಬಂಧ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದಿಸಿದರು.

ಈ ಪ್ರಕರಣದಲ್ಲಿ ಎಲ್ಲ ಆರೋಪಿಗಳು ಪರಸ್ಪರ ಗೊತ್ತಿರುವವರೆ. ದರ್ಶನ್ ಪರ ವಕೀಲರು ನೇರವಾಗಿ ಕಾಲ್ ಲಿಂಕ್ ಇಲ್ಲ‌ ಎಂದಿದ್ದರು. ಆರೋಪಿಗಳು ಎಷ್ಟು ಬಾರಿ ಫೋನ್ ಸಂಭಾಷಣೆ ನಡೆಸಿದ್ದಾರೆ ಎಂಬ ದಾಖಲೆ ಸಲ್ಲಿಕೆ ಮಾಡಲಾಗಿದೆ. A1,a2,a3 ರಿಂದ A11ರ ಆರೋಪಿ ವರೆಗೆ ಮಾತಾಡಿರುವ ಕಾಲ್ ಡಿಟೇಲ್ಸ್ ಇದೆ. A3,A9 ಹಾಗೂ ಇತರೆ ಆರೋಪಿಗಳು ರೇಣುಕಾಸ್ವಾಮಿ ಜತೆ ನಡೆಸಿರುವ ಫೋನ್‌ ಸಂಭಾಷಣೆಯ ದಾಖಲೆಯೂ ಸಲ್ಲಿಕೆ ಮಾಡಲಾಗಿದೆ. ಈ ಎಲ್ಲಾ ದಾಖಲೆಗಳನ್ನು ನೋಡಿದರೆ ಆರೋಪಿಗಳ ಒಳಸಂಚಿನ ಬಗ್ಗೆ ತಿಳಿಯಬಹುದು. ದರ್ಶನ್ ಸೇನೆಯ ಸದಸ್ಯರು ರೇಣುಕಾಸ್ವಾಮಿಯನ್ನು ಹಿಡಿಯಲು ಹೋಗಿರುತ್ತಾರೆ. ಎಲ್ಲಿದ್ದೀಯ ಎಷ್ಟೊತ್ತಿರ್ತೀಯಾ ಅಂತ ಚಾಟ್ ಮಾಡಿದ್ದಾರೆ. ರೇಣುಕಾಸ್ವಾಮಿ ಸ್ಕೂಟರ್‌ನಲ್ಲಿ ಇದ್ದರೆ, ಆರೋಪಿಗಳು ಆಟೋದಲ್ಲಿ ಇರುತ್ತಾರೆ. A4,A6,A7 ಆರೋಪಿಗಳ ಟವರ್ ಲೋಕೇಷನ್ ಸಿಕ್ಕಿದೆ.

ಜೂನ್ ತನಕ ರೇಣುಕಾಸ್ವಾಮಿ ಗೊತ್ತಿಲ್ಲ ಅಂತಾರೆ, ಫೆ.27 ಕ್ಕೆ ರೇಣುಕಾಸ್ವಾಮಿ ಜತೆ ಚಾಟ್ ಮಾಡಿದ್ದಾರೆ. ಗೌತಮ್ ಹೆಸರಲ್ಲಿ ಪವಿತ್ರಗೌಡಗೆ ಮೆಸೇಜ್ ಬಂದಿದೆ. ರೇಣುಕಾಸ್ವಾಮಿ ಯಾರೆಂದು ಫೆಬ್ರವರಿಯಲ್ಲೇ ಗೊತ್ತಾಗಿದೆ. ಚಿತ್ರದುರ್ಗದಿಂದ ರೇಣುಕಾಸ್ವಾಮಿನ ಕಿಡ್ನ್ಯಾಪ್ ಮಾಡಿಕೊಂಡು ಬಂದಿದ್ದಾರೆ. ಬರುವ ಮಾರ್ಗ ಮಧ್ಯೆ ದುರ್ಗಾ ಬಾರ್‌ನಲ್ಲಿ‌ಮದ್ಯ ಖರೀದಿ‌ ಮಾಡಿದ್ದಾರೆ. ಆರೋಪಿಗಳು ಬರುವ ಮಾರ್ಗದಲ್ಲಿ‌ ಸಿಸಿಟಿವಿ ಸೆರೆಯಾಗಿದೆ. ಎ3 ಆರೋಪಿ ಪವನ್ ನಿರ್ದೇಶನದಂತೆ ಜೂನ್ 8 ರಂದು 1.30ಕ್ಕೆ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದಿದ್ದಾರೆ ಎಂದು ರೇಣುಕಾಸ್ವಾಮಿ ಕಾಣುವ ಸಿಸಿಟಿವಿ ಚಿತ್ರವನ್ನು ಸಲ್ಲಿಕೆ ಮಾಡಿ ಪ್ರತಿವಾದ ಮುಂದುವರಿಸಿದರು.

A8 ಕಾರನ್ನು ಡ್ರೈವ್ ಮಾಡುಕೊಂಡು ಶೆಡ್‌ಗೆ ಬಂದಿದ್ದಾನೆ. ಐ ವಿಟ್ನೆಸ್ ಸೆಕ್ಯೂರಿಟಿ ಗಾರ್ಡ್‌ ಅದಕ್ಕೆ ಸಾಕ್ಷಿಯಾಗಿದ್ದಾನೆ. ಅವರು A4 ಗೆ ಶೆಡ್ ಲೊಕೇಷನ್ ಕಳಿಸಿದ್ದಾರೆ. ತನಿಖೆಯನ್ನು ಮಾಧ್ಯಮಗಳಿಗೆ ಲೀಕ್ ಮಾಡಿದ್ದಾರೆ ಎಂದು ದರ್ಶನ್‌ ಪರ ವಕೀಲರು ಹೇಳ್ತಾರೆ, ಆದರೆ ಆರೋಪಿಗಳ ವಕೀಲರೇ ಮೀಡಿಯಾ ಮುಂದೆ ಹೇಳಿಕೆ ನೀಡಿದ್ದಾರೆ.

ರೇಣುಕಾಸ್ವಾಮಿ ಪವಿತ್ರಗೌಡಗೆ ಕಳಿಸಿರುವ ಮೆಸೇಜ್ ತೋರಿಸಿ ಪ್ರತಿವಾದಿಸಿದ ಪ್ರಸನ್ನ ಕುಮಾರ್, ಖುದ್ದು ಪವಿತ್ರಗೌಡ ನಂಬರ್‌ಗೆ ರೇಣುಕಾಸ್ವಾಮಿ ಮಸೇಜ್‌ ಕಳಿಸಿದ್ದಾನೆ. ಬಳಿಕ ಪವನ್ ನಂಬರ್‌ ಅನ್ನು ನನ್ನ ನಂಬರ್ ಅಂತ ಕೊಟ್ಟಿದ್ದಾಳೆ. A3 ಆರೋಪಿಯಿಂದ A9ರವರೆಗಿನ ಆರೋಪಿಗಳು ಮೊದಲೇ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ. ಅದಕ್ಕೆ ಬಸವರಾಜ, ಸೆಕ್ಯುರಿಟಿ ಗಾರ್ಡ್ ನರೇಂದ್ರ ಸಿಂಗ್ ಕೂಡ ಸಾಕ್ಷಿಯಾಗಿದ್ದಾರೆ. 75,76,79,91 ಸಾಕ್ಷಿಗಳು ಶೆಡ್‌ನಲ್ಲಿ‌ಕೆಲಸ‌ ಮಾಡುವ ಕೆಲಸಗಾರರಾಗಿದ್ದಾರೆ. ಆದರೆ ಈ ಸಾಕ್ಷಿಗಳನ್ನು ಪೊಲೀಸರು ಸೃಷ್ಟಿಸಿರುವ ಸಾಕ್ಷಿಗಳು ಎನ್ನುತ್ತಾರೆ.

ಸ್ಟ್ರೋನಿ ಬ್ರೂಕ್‌ನಲ್ಲಿ ಪ್ಲ್ಯಾನ್‌ ಮಾಡಿರುವ ಬಗ್ಗೆಯೂ ಪ್ರಸ್ತಾಪಿಸಿದ ಪ್ರಸನ್ನಕುಮಾರ್‌, ಸ್ಟ್ರೋನಿ ಬ್ರೂಕ್‌ನಲ್ಲಿ ನಟ ದರ್ಶನ್, ವಿನಯ್ ಎಲ್ಲ ಸೇರಿದ್ದರು. ಇದಕ್ಕೆ ನಟ ಚಿಕ್ಕಣ್ಣ, ಯಶಸ್ ಸೂರ್ಯ‌ ಸಾಕ್ಷಿಗಳಿದ್ದಾರೆ. ಎಲ್ಲರೂ ಸೇರಿ ಪಿತೂರಿ ಮಾಡಿದರೂ ಅನ್ನೋದಕ್ಕೆ ಸಾಕ್ಷಿಇದೆ. ಟೆಕ್ನಿಕಲ್ ಹಾಗೂ ಡಿಜಿಟಲ್ ಎವಿಡೆನ್ಸ್ ಸುಳ್ಳು ಹೇಳಲ್ಲ. ಅಷ್ಟೇ ಅಲ್ಲದೇ ಆರೋಪಿಗಳು ಓಡಾಡಿರುವುದುಕ್ಕೆ ಸಾಕ್ಷಿಗಳಿವೆ. ಶೆಡ್ ಮುಂದಿನ ಸಿಟಿ ಟಿವಿಯಲ್ಲಿ ಚಲನವಲನ ಸೆರೆಯಾಗಿದೆ.

8ನೇ ತಾರೀಖು ಕೆಲಸಕ್ಕೆ ಹೋಗಿದ್ದಾಗಿ ಪುನೀತ್ ಹೇಳಿದ್ದಾನೆ. ಸಾಕ್ಷಿಗಳ ಹೇಳಿಕೆ ತಡವಾಗಿ ದಾಖಲಿಸಿರುವುದಕ್ಕೆ ಪ್ರತಿವಾದಿಸಿದ ಪ್ರಸನ್ನಕುಮಾರ್‌, ಮಧ್ಯಾಹ್ನ 1 ಗಂಟೆಗೆ ಶೆಡ್ ಹೋಗಿದ್ದೆ, ಅಲ್ಲಿ A5, A9 ಇದ್ದರು. ಆಮೇಲೆ ಪವನ್ ಹಾಗೂ ಇತರರು ಬಂದರು. ನಂದೀಶ್ ಹಾಗೂ ಧನರಾಜ್ ಶೆಡ್‌ನಲ್ಲಿದ್ದರು ಎಂದು ಪುನೀತ್ ಹೇಳಿಕೆ ನೀಡಿದ್ದಾನೆ. ದರ್ಶನ್ ಮನೆಯಲ್ಲಿ ಕೆಲಸ ಮಾಡುವವರು ಕಾರಿನಲ್ಲಿದ್ದರು. ರೇಣುಕಾಸ್ವಾಮಿಯನ್ನು ಇಟಿಯೋಸ್ ಕಾರಿನಲ್ಲಿ ಕರೆದುಕೊಂಡು ಬಂದರು. ಆತ ನೋಡಲು ಸಣ್ಣಗೆ ಇದ್ದ, ಆತನ ಮೇಲೆ ಒಂದು ಕಟ್ಟಿಗೆಯಿಂದ 10 ನಿಮಿಷ ಬೆನ್ನು, ಕಾಲಿಗೆ ಹೊಡೆದರು. ಯಾರೆಂದು ಕೇಳಿದಾಗ ಪವಿತ್ರಗೌಡ ಅತ್ತಿಗೆಗೆ ಮೆಸೇಜ್ ಮಾಡುತ್ತಿದ್ದವನು ಅಂದರು. ವಿನಯ್ ರೇಣುಕಾಸ್ವಾಮಿಯನ್ನು ನಾಲ್ಕೈದು ಅಡಿ ಎತ್ತಿ ಬಿಸಾಡಿ ಹಲ್ಲೆ ಮಾಡಿದ್ದಾಗಿ ಪುನೀತ್‌ ಹೇಳಿಕೆ ನೀಡಿದ್ದಾನೆ.

ಪೋಸ್ಟ್ ಮಾರ್ಟಮ್ ಬಗ್ಗೆ ಪ್ರತಿವಾದ ಮಾಡಿದ ಎಸ್ ಪಿಪಿ, 10 ನಿಮಿಷಗಳ ಕಾಲ ಹೊಡೆದಿದ್ದಕ್ಕೆ, ಆತ ಸುಸ್ತಾಗಿ ಬಿದ್ದಿದ್ದ. ನಾನು (ಪುನೀತ್‌) ಹೋಗಿ ಕೇಳಿದಾಗ ನಿನಗೆ ಏನೂ ಗೊತ್ತಿಲ್ಲ ಸುಮ್ಮನೆ ಇರು ಎಂದರು. ಆಗ ಪವಿತ್ರಾಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡುತ್ತಾನೆ ಎಂದು ಹೇಳಿ ಹಲ್ಲೆ ಮಾಡಿದರು. ನಂದೀಶ್‌ ಎತ್ತಿ ಎತ್ತಿ ಕುಕ್ಕಿ ಹಲ್ಲೆ‌ ಮಾಡಿದ್ದರು. ಆಗ ಧನರಾಜ್ ಎಲೆಕ್ಟ್ರಿಕ್ ಶಾಕ್ ಕೊಡುತ್ತಾನೆ. ಆಗ ವಿನಯ್ ಫೋನ್‌ ನೀಡುವಂತೆ ಹೇಳಿದ್ದು, ಕಣ್ಣು, ಬಾಯಿ ಬಿಟ್ಟುಕೊಂಡಿದ್ದ ರೇಣುಕಾಸ್ವಾಮಿ ಫೋಟೋ ಕಳಿಸಿದೆ. ಆಗ ಯಾರೂ ಹೊಡೆಯಬಾರದು ಎಂದು ಹೇಳು ಎಂದಿದ್ದ ವಿನಯ್, ದರ್ಶನ್ ಬರುತ್ತಾರೆ ಯಾರನ್ನೂ ಬಿಡಬೇಡ ಎಂದಿದ್ದರು. ಆಗ ದರ್ಶನ್, ಪವಿತ್ರಾಗೌಡ, ವಿನಯ್ ಬಂದಿದ್ದರು.

ಕಾರಿನಿಂದ ಇಳಿಯುತ್ತಿದ್ದಂತೆ ರೇಣುಕಾಸ್ವಾಮಿ ಎದೆಗೆ ಒದ್ದಿದ್ದ ದರ್ಶನ್‌

ದರ್ಶನ್ ಕಾರಿನಿಂದ ಇಳಿದವರೆ ರೇಣುಕಾಸ್ವಾಮಿ ಎದೆಗೆ ಕಾಲಿನಿಂದ ಹೊಡೆದರು. ಪವಿತ್ರಾಗೌಡ ಚಪ್ಪಲಿಯಿಂದ‌ ಹೊಡೆದರು. ನನ್ನ ಹೆಂಡತಿಗೆ ಮೆಸೇಜ್ ಮಾಡುತ್ತಿಯಾ, ಗೋವಾದಲ್ಲಿ ರೂಂ ಮಾಡುತ್ತೀಯಾ ಎಂದು ಹೇಳಿ ಹೊಡೆದರು. ಕಾರು ಚಾಲಕ ಲಕ್ಷ್ಮಣ್ ಕೂಡ ಹೊಡೆದಿದ್ದ. ಆಗ ದರ್ಶನ್‌ ರೇಣುಕಾಸ್ವಾಮಿಯ ಪ್ಯಾಂಟ್‌ ಅನ್ನು ಬಿಚ್ಚು ಮತ್ತು ಮೆಸೇಜ್ ಓದಿಸು ಎಂದಿದ್ದರು. ಆಗ ಪ್ಯಾಂಟ್ ಬಿಚ್ಚಿಸಿ ಖಾಸಗಿ ಅಂಗಕ್ಕೆ ದರ್ಶನ್ ತುಳಿದರೆ, ವಿನಯ್ ಕಾಲಿನಿಂದ ಹೊಡೆದಿದ್ದರು. ಆಗ ಮತ್ತೆ ದರ್ಶನ್ ಶೂ ಕಾಲಿನಿಂದ ಎದೆಗೆ ಹೊಡೆಯುತ್ತಿದ್ದರು. ನಂತರ ಪವಿತ್ರಾಗೌಡ ಅವರನ್ನು ಮನೆಗೆ ಬಿಟ್ಟು ಬರುವಂತೆ ವಿನಯ್‌ಗೆ ದರ್ಶನ್ ಹೇಳಿದ್ದಾರೆ.

ಮತ್ತೆ ದರ್ಶನ್ ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದಾರೆ. ದರ್ಶನ್ ಹೊರಗೆ ಹೋಗುವಾಗ ಚಿತ್ರದುರ್ಗದಿಂದ ಬಂದ ವ್ಯಕ್ತಿಗಳು ಬಾಸ್ ಬಾಸ್ ಎಂದು ಫೋಟೋ ಕೇಳಿದ್ದಾರೆ. ಫೋಟೋ ತೆಗೆದ ಬಳಿಕ ಹಾಯ್ ಎಂದು ಕಳಿಸಿ ಎಂದು ನನಗೆ ಹೇಳಿದ್ದರು. ಚಿತ್ರದುರ್ಗದಿಂದ ಬಂದವರಿಗೆ ಊಟ ನೀಡುವಂತೆ ಹೇಳಿದ್ದರು. ಆಗ ಚಿತ್ರದುರ್ಗದಿಂದ‌ ಬಂದವ ನೀರು ಕುಡಿಯುತ್ತಿಲ್ಲ ಎಂದು ಹೇಳಿದೆ . ನನಗೆ ಭಯ ಆಯಿತು, ನಾನು ಮನೆಗೆ ಹೋದೆ. ಜಯಣ್ಣಗೆ ಫೋನ್ ಮಾಡಿ ಏನಾಯಿತು ಎಂದು ಹೇಳಿದೆ. ನಂತರ ಮಲೆ‌ಮಾದೇಶ್ವರ ಬೆಟ್ಟಕ್ಕೆ ಹೊರಟಿದ್ದೆ. ಆಗ ವಿನಯ್ ಫೋನ್‌ ಮಾಡಿ ದರ್ಶನ್, ಪವಿತ್ರಾಗೌಡ ಶೆಡ್‌ಗೆ ಬಂದಿದ್ದ ವಿಚಾರ ಯಾರಿಗೂ ಹೇಳದಂತೆ ಹೇಳಿದ್ದರು ಎಂದು ಹೇಳಿಕೆ ನೀಡಿದ್ದಾನೆ.

ಮರಣೋತ್ತರ ಪರೀಕ್ಷೆ ತಡವಾಗಿದ್ದೇಕೆ ಅಂತ ವಾದಿಸಿದ್ದಾರೆ. ದೇಹದ ಹೊರಭಾಗದಲ್ಲಿ 39 ಗಾಯದ ಗುರುತುಗಳಿವೆ, ಏಳು ಕಡೆ ಮೂಳೆ ಮುರಿತವಾಗಿದೆ. ಎಡಗಡೆಯ ರಿಬ್ ಮುರಿದಿದೆ. ಗಂಭೀರ ರಕ್ತಸ್ರಾವವಾಗಿದೆ. ಎಲ್ಲಾ ಗಾಯಗಳು ರೇಣುಕಾಸ್ವಾಮಿ ಸಾವಿನ ಮೊದಲೇ ಆಗಿರುವ ಗಾಯಗಳಾಗಿವೆ. ಸಾವಿನ ಬಳಿಕ ಆದರೆ ಅನುಮಾನ ಇರುತ್ತೆ. ಒಂದೇ ಒಂದು ಗಾಯ ಆಳವಾಗಿದೆ. ಅದು ಶೆಡ್‌ನಲ್ಲಿರುವ ಗಾಡಿಯ ಬಂಪರ್‌ಗೆ ಹೊಡೆದಾಗ ಸಂಭವಿಸಿರುವ ಗಾಯದ ಗುರುತಾಗಿದೆ. ಈ ಸಂಧರ್ಭದಲ್ಲಿ ತೆಗೆದ ಒಂದಷ್ಟು ಫೋಟೊಗಳು ವಿನಯ್ ಮೊಬೈಲ್ ನಲ್ಲಿ ಪತ್ತೆಯಾಗಿವೆ.

ದೇಹದ ಮೇಲಾಗಿರುವ ಗಾಯಗಳಿಗೆ ರೀಸನ್ ನೀಡಲಾಗಿದೆ. ಇನ್ನೂ ಟೈಮ್ ಆಫ್ ಡೆತ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಸಿವಿ ನಾಗೇಶ್ ಪ್ರಶ್ನೆಗೆ ಉತ್ತರ ನೀಡಿದ ಎಸ್ ಪಿಪಿ ಪ್ರಸನ್ನ ಕುಮಾರ್, ದರ್ಶನ್ ಪ್ಯಾಂಟ್ ಬಿಚ್ಚಲು ಹೇಳಿದಕ್ಕೂ ಸಾಕ್ಷಿ ಇದೆ ಎಂದು ವಾದಿಸಿದರು. ಬಳಿಕ ಸುದೀರ್ಘ ಆಲಿಸಿದ ಕೋರ್ಟ್‌ ವಿಚಾರಣೆಯನ್ನು ನಾಳೆ ಬುಧವಾರ‌ ಮಧ್ಯಾಹ್ನ 12ಕ್ಕೆ ಮುಂದೂಡಿದೆ. ಎಲ್ಲಾ ಆರೋಪಿಗಳ ಜಾಮೀನು ಅರ್ಜಿಗಳಿಗೆ ಎಸ್‌ಪಿಪಿ ಪ್ರಸನ್ನಕುಮಾರ್‌ ಆಕ್ಷೇಪಣೆ ವಾದ ಮುಂದುವರಿಸಲಿದ್ದಾರೆ.

A11, A12 ಆರೋಪಿಗಳ ಜಾಮೀನು ಅರ್ಜಿ ಮುಂದೂಡಿಕೆ

ಜತೆಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ11 ಹಾಗೂ ಎ12 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯು ನಡೆಯಿತು. ಲಕ್ಷ್ಮಣ್ ಹಾಗೂ ನಾಗರಾಜು ಸಲ್ಲಿದ್ದ ಜಾಮೀನು ಅರ್ಜಿ ವಿಚಾರಣೆ 57ನೇ ಸೆಷನ್ಸ್ ಕೋರ್ಟ್‌ನಲ್ಲಿ ನಡೆದಿದೆ. ನಾಗರಾಜು ನಟ ದರ್ಶನ್ ಫಾರ್ಮ್ ಹೌಸ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರೆ, ಲಕ್ಷ್ಮಣ್ ದರ್ಶನ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಕ್ತಾಯವಾಗಿದ್ದು, ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಬೇರೆ ಯಾವುದೇ ಕ್ರೈಂಗಳಲ್ಲಿ ಭಾಗಿಯಾಗಿಲ್ಲ. ಜಾಮೀನು ನೀಡಿದರೆ ತಲೆಮರೆಸಿಕೊಳ್ಳುವ ಹುನ್ನಾರವಿಲ್ಲ. ಹೀಗಾಗಿ ಜಾಮೀನು ನೀಡಬೇಕೆಂದು ಲಕ್ಷ್ಮಣ್ ಹಾಗೂ ನಾಗರಾಜ್ ಪರ ವಕೀಲರು ವಾದ ಮಂಡಿಸಿದ್ದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸೆಲೆಬ್ರಿಟಿಗಳು ಇರುವುದರಿಂದ ಸೆನ್ಷೇಷನಲ್ ಆಗಿದೆ. ಜಾಮೀನು ನೀಡುವಾಗ ಆರೋಪಿಗಳು ಪೂರ್ವಗ್ರಹ ಪೀಡಿತ ರಾಗಬಾರದು. ಆರೋಪಿಗಳ ವಿರುದ್ಧ ಕೊಲೆ, ಒಳಸಂಚು ಸಾಮಾನ್ಯ ಉದ್ದೇಶದ ಆರೋಪವಿದೆ. ಜೊತೆಗೆ ಸಾಕ್ಷಿ ನಾಶದ ಆರೋಪವೂ ಇದೆ. ಆರೋಪ ಸಾಬೀತಾಗುವರೆಗೂ ಆರೋಪಿಗಳನ್ನು ಮುಗ್ಧರಾಗಿ ಪರಿಗಣಿಸಬೇಕು.

ಆರೋಪಿಗಳು ಈಗಾಗಲೇ ನಾಲ್ಕು ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಲಕ್ಷ್ಮಣ್ ಹಾಗೂ ನಾಗರಾಜ್ ವಿರುದ್ಧ ಅಪರಾಧ ಹಿನ್ನೆಲೆ ಇಲ್ಲ. ಆರೋಪಿಗಳು ಜಾಮೀನು ಪಡೆಯಲು ಟ್ರೈಪಾರ್ಟ್ ಟೆಸ್ಟ್ ಮುಖ್ಯ ಎಂದು ಲಕ್ಷ್ಮಣ್ ಹಾಗೂ ನಾಗರಾಜ್ ಪರ ವಕೀಲ ಸಂದೇಶ್ ಚೌಟ ವಾದಿಸಿದರು. ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಿದ ವಿಚಾರವಾಗಿಯೂ ಉಲ್ಲೇಖ‌ ಮಾಡಿದ ಸಂದೇಶ್ ಚೌಟ, ಈ ಫೋಟೊಗೆ ಸಂಬಂಧಿಸಿದಂತೆ ಮೂರು ಪ್ರಕರಣ ದಾಖಲು ಮಾಡಲಾಗಿದೆ. ನಂತರ ನಮ್ಮ ಕಕ್ಷಿದಾರರನ್ನು ಬೇರೆ ಬೇರೆ ಜೈಲುಗಳಿಗೆ ರವಾನೆ ಮಾಡಲಾಯಿತು. ಅಲ್ಲಿ ನಮ್ಮ ಕಕ್ಷಿದಾರರು ಸಫರ್ ಆಗುತ್ತಿದ್ದಾರೆ.

ಜೈಲಿನಲ್ಲಿ ಸಿಗರೇಟ್ ಸೇದುವುದು ಅಪರಾಧ ಅಲ್ಲ. ಅಲ್ಲಿ ಧೂಮಪಾನಕ್ಕೆ ಪ್ರತ್ಯೇಕ ಜಾಗ ನೀಡಲು ಜೈಲು ಮ್ಯಾನ್ಯುಲ್ ಸೂಚಿಸುತ್ತದೆ. ಆದರೆ ಇದನ್ನೇ ಮಹಾ ಅಪರಾಧ ಎಂಬಂತೆ ಬಿಂಬಿಸಲಾಗಿದೆ. ಈ ಪ್ರಕರಣದ ಮೂವರು ಆರೋಪಿಗಳ ವಿರುದ್ಧ 201 ಅಡಿಯಲ್ಲಿ ಚಾರ್ಜಸ್ ಮಾಡಲಾಗಿತ್ತು. ಅವರನ್ನು ಇವರೆ ಬಿಡುಗಡೆ ಮಾಡಬಹುದಿತ್ತು. ಆದರೆ ಯಾಕೆ ಜಾಮೀನು ನೀಡಬಹುದಾದ ಪ್ರಕರಣದಲ್ಲಿ, ಮೂರು ತಿಂಗಳಿಗೂ ಅಧಿಕ ಕಾಲ ಯಾಕೆ ಕಂಬಿ ಹಿಂದೆ ಇಡಲಾಗಿತ್ತು. ಜಾಮೀನು ಎಂಬುದು ಎಲ್ಲರ ಹಕ್ಕು. ಇದು ಭಯೋತ್ಪಾದನೆ ಅಲ್ಲ, ದೇಶದ ಭದ್ರತೆಗೆ ಧಕ್ಕೆ ಅಲ್ಲ, ಕ್ರೂರಾತಿ ಕ್ರೂರ ಕ್ರಿಮಿನಲ್ ಹಿನ್ನೆಲೆ ಉಳ್ಳವರು ಅಲ್ಲ. ಹೀಗಾಗಿ ಇವರಿಗೆ ಜಾಮೀನು ನೀಡಬೇಕು. ಜಾಮೀನು ಪರಿಗಣನೆಗೆ ಕೋರ್ಟ್ ಎಂಟು ಅಂಶಗಳನ್ನು ಪರಿಗಣಿಸುತ್ತೆ, ಆ ಎಂಟು ಅಂಶಗಳು ಇವೆ. ಹೀಗಾಗಿ ನಮ್ಮ ಕಕ್ಷಿದಾರರಿಗೆ ಜಾಮೀನು ನೀಡಬೇಕು.

ಅರ್ಜಿದಾರರ ಸುದೀರ್ಘ ವಾದ ಆಲಿಸಿದ್ದ ನ್ಯಾಯಾಧೀಶರು ಬಳಿಕ ಮಧ್ಯಾಹ್ನ 2.45ಕ್ಕೆ ಮುಂದೂಡಿದ್ದರು. ಮಧ್ಯಾಹ್ನದ ನಂತರ ಲಕ್ಷ್ಮಣ್ ಹಾಗೂ ನಾಗರಾಜ್ ಪರ ಸಂದೇಶ್ ಚೌಟ ವಾದ ಮುಂದುವರಿಸಿದರು. ಪೊಲೀಸರು ಸಾಕಷ್ಟು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ರಿಮ್ಯಾಂಡ್ ಅರ್ಜಿಯಲ್ಲಿ ಎಲ್ಲಾ ವಿಚಾರಗಳು ಉಲ್ಲೇಖ ಮಾಡಬೇಕಿತ್ತು. ಆದರೆ ಯಾವುದನ್ನೂ ಸರಿಯಾಗಿ ಉಲ್ಲೇಖ ಮಾಡಿಲ್ಲ. ಕೋಕಾ, ಎನ್‌ಐಎ, ಯುಎಪಿಎ ಕಾಯ್ದೆ ಅಡಿಯಲ್ಲಿ ಸಾಕ್ಷಿಗಳನ್ನು ಮರೆಮಾಚಬಹುದು.

ಆದರೆ ಇವರು ರಿಮ್ಯಾಂಡ್ ಅರ್ಜಿಯಲ್ಲಿ ಸಾಕ್ಷಿಗಳನ್ನು ಉಲ್ಲೇಖ ಮಾಡಿಲ್ಲ. ಆದರೆ ಸಾಕ್ಷಿಗಳ ಹೆಸರನ್ನು ಮುಚ್ಚಿಟ್ಟಾಗ ಸರಿಯಾದ ಕಾರಣ ತಿಳಿಸಬೇಕು. ಅದನ್ನು ಕೋರ್ಟ್ ಪರಿಗಣನೆಗೆ ತೆಗೆದುಕೊಳ್ಳಬೇಕು, ಆದರೆ ಇದ್ಯಾವುದೂ ಆಗಿಲ್ಲ. ಕೋಕಾ ಎನ್‌ಐಎ ಯುಎಪಿಎ ಪ್ರಕರಣಗಳಲ್ಲಿ ಸಾಕ್ಷಿಗಳನ್ನು ಮರೆಮಾಚಬಹುದು. ಆದರೆ ಇವರು ಎಲ್ಲಿಯೂ ಯಾವ ರಿಮ್ಯಾಂಡ್ ಅರ್ಜಿಯಲ್ಲೂ ಸಾಕ್ಷಿಗಳ ಬಗ್ಗೆ ಉಲ್ಲೇಖ ಮಾಡಿಲ್ಲ. ಒಂದು ವೇಳೆ ಸಾಕ್ಷಿಗಳ ಹೆಸರನ್ನು ಮುಚ್ಚಿಟ್ಟಾಗ ಸರಿಯಾದ ಕಾರಣ ತಿಳಿಸಬೇಕು. ಅದನ್ನು ಕೋರ್ಟ್ ಪರಿಗಣನೆಗೆ ತೆಗೆದುಕೊಳ್ಳಬೇಕು. ಪಟ್ಟಣಗೆರೆ ಶೆಡ್‌ನ ಸೆಕ್ಯೂರಿಟಿ‌ ಗಾರ್ಡ್ ಈ ಪ್ರಕರಣದ ಐ ವಿಟ್ನೆಸ್ ಆಗಿದ್ದು, ಎಲ್ಲೂ ಸಹ ಆರೋಪಿ‌ ಲಕ್ಷ್ಮಣ್ ಬಗ್ಗೆ ಹೇಳಿಕೆ ನೀಡಿಲ್ಲ. ಅದು 161 ಹೇಳಿಕೆ ಇರಲಿ ಅಥವಾ 164 ಹೇಳಿಕೆ ಇರಲಿ. ಎಲ್ಲಿಯೂ ಆರೋಪಿ ಲಕ್ಷ್ಮಣ್ ಬಗ್ಗ ಹೇಳಿಕೆ ನೀಡಿಲ್ಲ.

ಸಾಕ್ಷಿಗಳ ಹೇಳಿಕೆ ದಾಖಲು‌ ಮಾಡುವಲ್ಲಿಯೂ ಸಾಕಷ್ಟೂ ತಡ ಆಗಿದೆ. ಪ್ರತ್ಯಕ್ಷದರ್ಶಿಗಳಾದ ಕಿರಣ್, ಮಲ್ಲಿಕಾರ್ಜುನ, ವಿಜಯ್ ಕುಮಾರ್ ಜೂನ್ 15 ಕ್ಕೆ ಪಡೆದಿದ್ದಾರೆ. ನಂತರ ಮಧುಸೂಧನ್, ಪುನೀತ್ ಹೇಳಿಕೆ ದಾಖಲಾಗಿದೆ. ಪುನೀತ್‌ ಸ್ಟಾರ್ ವಿಟ್ನೇಸ್ ಆಗಿದ್ದು, ಘಟನಾ ಸ್ಥಳದಲ್ಲಿ ಇದ್ದ ಎಂಬ ಮಾಹಿತಿ ಇದ್ದರೂ ತಡವಾಗಿ ಹೇಳಿಕೆ ದಾಖಲಿಸಿದ್ಯಾಕೆ.? ಎಂದು ಪ್ರಶ್ನಿಸಿದ್ದರು. ಕೃತ್ಯದಲ್ಲಿ ಯಾವುದೇ ಆರೋಪಿ ಡೆಡ್ಲಿ ವೆಪನ್ ಬಳಸಿಲ್ಲ. ಅಲ್ಲದೇ ಸಂಚು ಮಾಡಿ ಯಾವುದೇ ವೆಪನ್ ತಂದಿಲ್ಲ. ನೈಲಾನ್ ಹಗ್ಗ, ಲಾಠಿ & ವಾಟರ್ ಬಾಟೆಲ್ ಅಷ್ಟೇ. ಈ ಪ್ರಕರಣದಲ್ಲಿ ಈ ಇಬ್ಬರು ಆರೋಪಿಗಳ ವಿರುದ್ಧ ನೇರವಾದ ಯಾವುದೇ ಸಾಕ್ಷಿಗಳಿಲ್ಲ. ಹೀಗಾಗಿ ಜಾಮೀನು ನೀಡಬೇಕು ನಾಗರಾಜ್ ಮತ್ತು ಲಕ್ಷ್ಮಣ್ ಪರವಾಗಿ ಸಂದೇಶ್ ಚೌಟ ವಾದಿಸಿದರು.

ಸಾಕ್ಷಿ ಸೃಷ್ಟಿ, ಇರುವ ಸಾಕ್ಷಿ ನಾಶ, ಸಾಕ್ಷಿಗಳ ತತ್ವಿರುದ್ದ ಮಾಹಿತಿ ನೀಡಲಾಗಿದೆ. ಕೇಸ್ ದಾಖಲಿಸುವುದು ತಡ ಆಗಿದೆ. ಮೃತನ ಸಾವಿನ ಸಮಯ ತಿಳಿದಿಲ್ಲ. ರಿಮ್ಯಾಂಡ್ ಅರ್ಜಿಯಲ್ಲಿ ಸಾಕ್ಷಿಗಳ ಹೆಸರೆಳಿಲ್ಲ. ಕೇಸ್ ಡೈರಿ ಉಲ್ಲೇಖಿಸದೇ ಇರೋದು, ಪೊಲೀಸರಿಗೆ ಮಾಹಿತಿ ಇದ್ದರೂ ತನಿಖೆ ತಡ, ಕೊಲೆಗೆ ಬಳಕೆ ಮಾಡಿದ್ದರೆ ಎನ್ನಲಾದ ವಸ್ತುಗಳಲ್ಲಿ ರಕ್ತ ಮಾದರಿ ಇಲ್ಲ. ಬಂಧನಕ್ಕೆ ಪೊಲೀಸರು ಕಾರಣ ನೀಡಿಲ್ಲ. ಚಾರ್ಜ್ ಶೀಟ್ ನಲ್ಲಿ ಸಾಕಷ್ಟು ತಪ್ಪುಗಳಿವೆ. ಮಾಡಿರುವ ಆರೋಪ ಸುಳ್ಳು ಎಂಬುದಕ್ಕೆ ಸಾಕ್ಷಿ ಇದೆ. ಹೀಗಾಗಿ ನಾಗರಾಜ್ ಹಾಗೂ ಲಕ್ಷ್ಮಣ್ ಗೆ ಜಾಮೀನು ನೀಡುವಂತೆ ಮನವಿ ಮಾಡಿದರು. ಸುದೀರ್ಘ ವಾದ ಆಲಿಸಿದ ನ್ಯಾಯಾಲಯ ನಾಳೆ ಬುಧವಾರಕ್ಕೆ ಲಕ್ಷ್ಮಣ್ ಹಾಗೂ ನಾಗರಾಜ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿತು.

Continue Reading
Advertisement
Old Hubballi riot case Union Minister Pralhad Joshi expresses displeasure over nia's decision to withdraw
ಹುಬ್ಬಳ್ಳಿ10 ಗಂಟೆಗಳು ago

Hubballi news : ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ; ಎನ್‌ಐಎಯಿಂದ ಹಿಂಪಡೆವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಪ್ರಲ್ಹಾದ ಜೋಶಿ ಆಕ್ರೋಶ

Online gambling Rs 20 lakh for rummy addiction debt Bank employee leaves home due to debtors
ಬೆಂಗಳೂರು13 ಗಂಟೆಗಳು ago

Online gambling : ರಮ್ಮಿ ಚಟಕ್ಕೆ 20 ಲಕ್ಷ ರೂ. ಸಾಲ; ಸಾಲಗಾರರ ಕಾಟಕ್ಕೆ ‘ನಾನು ಸೋತಿದ್ದೇನೆ’ ಎಂದು ಮನೆ ತೊರೆದ ಬ್ಯಾಂಕ್‌ ನೌಕರ

Kantilal Bhansali a close aide of former CM BS Yediyurappa attacked assaulted in gadag
ಗದಗ14 ಗಂಟೆಗಳು ago

Assault Case : ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಕಾಂತಿಲಾಲ್ ಬನ್ಸಾಲಿ ಮೇಲೆ ಹಲ್ಲೆ ನಡೆಸಿ ಹಣ ದೋಚಿ ಅಪರಿಚಿತರು ಪರಾರಿ

Husband and wife arrested for honey-trapping in Hubballi-Dharwad
ಹುಬ್ಬಳ್ಳಿ14 ಗಂಟೆಗಳು ago

Honey Trap : ಹುಬ್ಬಳ್ಳಿ- ಧಾರವಾಡದಲ್ಲಿ ಹನಿಟ್ರ್ಯಾಪ್‌ಗೆ ಇಳಿದ ಗಂಡ-ಹೆಂಡತಿ

Heavy rains lash Yadgir Woman killed in lightning strike
ಮಳೆ15 ಗಂಟೆಗಳು ago

Karnataka Rain : ಯಾದಗಿರಿಯಲ್ಲಿ ಮಳೆಯಾರ್ಭಟ; ಸಿಡಿಲು ಬಡಿದು ಮಹಿಳೆ ಸಾವು, ಮತ್ತಿಬ್ಬರಿಗೆ ಗಾಯ

Ayudha Puja celebrations across the karnataka state Temples housefull by devotees
ಬೆಂಗಳೂರು16 ಗಂಟೆಗಳು ago

Ayudha Puja: ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮ; ಭಕ್ತಾಧಿಗಳಿಂದ ದೇವಸ್ಥಾನಗಳು ಹೌಸ್‌ಫುಲ್‌

karnataka Weather Forecast
ಮಳೆ23 ಗಂಟೆಗಳು ago

Karnataka Weather : ದಕ್ಷಿಣದಿಂದ ಉತ್ತರ ಒಳನಾಡಿನವರೆಗೂ ಗುಡುಗು ಸಹಿತ ವ್ಯಾಪಕ ಮಳೆ ಮುನ್ಸೂಚನೆ

Dina Bhavishya
ಭವಿಷ್ಯ24 ಗಂಟೆಗಳು ago

Dina Bhavishya : ನಂಬಿದ ವ್ಯಕ್ತಿಗಳಿಂದ ಈ ರಾಶಿಯವರು ಮೋಸ ಹೋಗುತ್ತೀರಿ

karnataka Weather Forecast
ಮಳೆ1 ದಿನ ago

Karnataka Weather : ಚಿಕ್ಕಮಗಳೂರಿನಲ್ಲಿ ಅಬ್ಬರಿಸುತ್ತಿರುವ ಮಳೆ; ನಾಳೆಗೂ ಭಾರಿ ವರ್ಷಧಾರೆ

Actor Darshan
ಬೆಂಗಳೂರು1 ದಿನ ago

Actor Darshan : ನಟ ದರ್ಶನ್‌ ಜಾಮೀನು ಭವಿಷ್ಯ ಅ.14ಕ್ಕೆ ನಿರ್ಧಾರ; ವಾದ-ಪ್ರತಿವಾದ ಆಲಿಸಿ ಆದೇಶ ಕಾಯ್ದಿರಿಸಿದ ಕೋರ್ಟ್‌

galipata neetu
ಕಿರುತೆರೆ11 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ1 ವಾರ ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್1 ತಿಂಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌