Gandhi Jayanti 2022 | ನಿಜವಾದ ಸಭ್ಯತೆ ಎಂಥದು? ಭಾರತೀಯರ ಸಭ್ಯತೆ ಬಗ್ಗೆ ಗಾಂಧೀಜಿ ಹೇಳಿದ್ದೇನು ಗೊತ್ತೇ? - Vistara News

ದೇಶ

Gandhi Jayanti 2022 | ನಿಜವಾದ ಸಭ್ಯತೆ ಎಂಥದು? ಭಾರತೀಯರ ಸಭ್ಯತೆ ಬಗ್ಗೆ ಗಾಂಧೀಜಿ ಹೇಳಿದ್ದೇನು ಗೊತ್ತೇ?

ಇಂದು ಗಾಂಧಿ ಜಯಂತಿ (Gandhi Jayanti 2022). ರಾಷ್ಟ್ರಪಿತ ಗಾಂಧೀಜಿಯ ಜೀವನ, ಹೋರಾಟ, ಸರಳತೆ ಬಗ್ಗೆ ನಮಗೆಲ್ಲರಿಗೂ ಗೊತ್ತು. ಅವರು ಬರೆದ ಲೇಖನಗಳಲ್ಲಿ ಸಭ್ಯತೆಯ ಕುರಿತ ಅವರ ಪುಟ್ಟ ಬರಹ ಈಗಲೂ ಪ್ರಸ್ತುತವೆನಿಸಿದೆ. ಸಭ್ಯತೆಯನ್ನು ಭಾರತೀಯರು ಯಾರಿಂದಲೂ ಕಲಿಯಬೇಕಾಗಿಲ್ಲ ಎಂಬ ಗಾಂಧೀಜಿಯ ಮಾತುಗಳನ್ನು ಈಗ ಜಗತ್ತೇ ಒಪ್ಪಿಕೊಳ್ಳುತ್ತಿದೆ.

VISTARANEWS.COM


on

Gandhi Jayanti 2022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗಾಂಧಿ ಜಯಂತಿಯ ದಿನ (Gandhi Jayanti 2022) ನಾವು ಅವರನ್ನು ಸ್ಮರಿಸುತ್ತೇವೆ, ಪೂಜಿಸುತ್ತೇವೆ. ಸ್ವಾತಂತ್ರಕ್ಕಾಗಿ ಹೋರಾಡಿದ ಮಹಾತ್ಮ ಗಾಂಧೀಜಿ 1908ರಲ್ಲಿಯೇ ಭಾರತಕ್ಕೆ ಎಂತಹ ಸ್ವರಾಜ್ಯ ಬೇಕು ಎಂಬುದನ್ನು ವಿವರಿಸಲು “ಹಿಂದ್‌ ಸ್ವರಾಜ್‌ʼʼ ಎಂಬ ಕೃತಿ ಬರೆದಿದ್ದರು. ಲಂಡನ್‌ನಿಂದ ಹಿಂದಿರುಗುವಾಗ ಹಡಗಿನಲ್ಲಿ ಬರೆದ ಕೃತಿ ಇದು. ಎಲ್ಲರಿಂದಲೂ ಮೆಚ್ಚುಗೆ ಪಡೆದ ಪ್ರಶ್ನೋತ್ತರ ಮಾದರಿಯ (ಓದುಗ-ಸಂಪಾದಕ) ಈ ಕೃತಿ ಮೂಲತಃ ಗುಜರಾತಿ ಭಾಷೆಯಲ್ಲಿದೆ. ಆ ನಂತರ ಬೇರೆ ಬೇರೆ ಭಾಷೆಗಳಿಗೆ ಅನುವಾದಗೊಂಡಿತು. ಸುಮಾರು 30 ಸಾವಿರ ಪದಗಳನ್ನು ಒಳಗೊಂಡ ಈ ಕೃತಿ ದ್ವೇಷದ ಬದಲು ಪ್ರೀತಿಯನ್ನು ಬೋಧಿಸುತ್ತದೆ. ಹಿಂಸೆಗೆ ಬದಲು ಅತ್ಮತ್ಯಾಗವನ್ನು ಕಲಿಸುತ್ತದೆ. ಪಶುಬಲಕ್ಕೆ ವಿರುದ್ಧವಾಗಿ ಆತ್ಮಬಲವನ್ನು ಇದಿರು ನಿಲ್ಲಿಸುತ್ತದೆ.

ಈ ಕೃತಿಯ 13ನೇ ಅಧ್ಯಾಯದಲ್ಲಿ “ನಿಜವಾದ ಸಭ್ಯತೆ ಎಂಥದು?ʼʼ ಎಂದು ಗಾಂಧೀಜಿಯವರು ವಿವರಿಸಿದ್ದಾರೆ. ಭಾರತೀಯರೆಲ್ಲರೂ ಓದಲೇಬೇಕಾದ ಅಧ್ಯಾಯ ಇದು. ಈ ಅಧ್ಯಾಯವನ್ನು ಇಲ್ಲಿ ನೀಡಲಾಗಿದೆ.

ಓದುಗ: ರೈಲಿನ, ವೈದ್ಯರ, ವಕೀಲರ ಟೀಕೆಯಾಯಿತು. ಸರಿ, ಯಂತ್ರಗಳೇ ಬೇಡ ಎನ್ನುತ್ತೀರಿ ನೀವು. ಹಾಗಾದರೆ ಸಭ್ಯತೆಯೆಂದರೇನು?

ಸಂಪಾದಕ: ಅದಕ್ಕೆ ಉತ್ತರ ಕಷ್ಟವಲ್ಲ. ನಾನು ಭಾರತೀಯ ಸಭ್ಯತೆಗಿಂತ ಹೆಚ್ಚಿನದು ಯಾವುದೂ ಇಲ್ಲವೆಂದು ನಂಬಿದ್ದೇನೆ. ನಮ್ಮ ಪೂರ್ವಜರು ಬಿತ್ತಿದ ಬೀಜಕ್ಕೆ ಸಾಟಿಯಾದುದು ಯಾವುದೂ ಇಲ್ಲ, ರೋಂ ಮಣ್ಣುಗೂಡಿತು, ಗ್ರೀಸೂ ಅಷ್ಟೇ. ಈಜಿಪ್ಟಿನ ಫರೋಹಾ ಸಾಮ್ರಾಜ್ಯ ನಾಶವಾಯಿತು; ಜಪಾನ್ ಪಶ್ಚಿಮದ ವೇಷ ತೊಟ್ಟಿತು; ಚೀನಾದ ಬಗ್ಗೆ ಹೇಳುವಂತಿಲ್ಲ. ಆದರೆ ಹಿಂದೂಸ್ಥಾನ ಮಾತ್ರ ಏಳುತ್ತ ಬೀಳುತ್ತ ಇನ್ನೂ ಭದ್ರವಾಗಿಯೇ ಇದೆ, ಬುಡದಲ್ಲಿ, ರೋಂ ಗ್ರೀಸುಗಳ ವೈಭವ ಈಗಿಲ್ಲ. ಆದರೂ ಯೂರೋಪಿನ ಜನರು ರೋಂ ಗ್ರೀಸುಗಳ ಪಾಠವನ್ನ ಕಲಿಯುತ್ತ ಅವರು, ಮಾಡಿದ ತಪ್ಪುಗಳನ್ನು ನಾವು ಬಿಡೋಣ ಎಂದು ಆಶಿಸುತ್ತಾರೆ.

ಹೀಗಿದೆ ಅವರ ದಯನೀಯ ಸ್ಥಿತಿ. ಇಂಥದರಲ್ಲಿಯೂ ಹಿಂದೂಸ್ಥಾನ ಮಾತ್ರ ಅಚಲವಾಗಿದೆ. ಇದೇ ಅದರ ಶೋಭೆ. ಇಲ್ಲಿನ ಜನರು ಅನಾಗರಿಕರು, ಅಜ್ಞಾನಿಗಳು,ಸೋಮಾರಿಗಳು; ಏನು ಬದಲಾವಣೆ ಮಾಡಬೇಕೆಂದರೂ ಅವರನ್ನು ತಿದ್ದುವುದು ಕಷ್ಟ ಎಂದು ಹಿಂದೂಸ್ಥಾನದ ಮೇಲೆ ಆರೋಪವಿದೆ. ಆದರೆ ಇದು ನಮ್ಮ ದೋಷವಲ್ಲ, ಗುಣ, ಅನುಭವದ ಒರೆಗಲ್ಲಿಗೆ ತಿಕ್ಕಿ ಸರಿಯೆಂದು ಕಂಡು ಕೊಂಡದನ್ನು ಬದಲಿಸೋಣವೆ? ಹಿಂದೂಸ್ಥಾನಕ್ಕೆ ಬುದ್ಧಿ ಹೇಳುವವರು ಬಹಳ  ಜನ. ಆದರೂ ಹಿಂದೂಸ್ಥಾನ ಅವಿಚಲಿತವಾಗಿ ಇದೆ. ಇದೇ ಅದರ ಸೊಬಗು; ಇದೇ ನಮ್ಮ ಆಶಾಕಿರಣ.

ಮನುಷ್ಯನಿಗೆ ಕರ್ತವ್ಯ ತೋರಿಸುವ ಆಚಾರ ವ್ಯವಹಾರವೇ ಸಭ್ಯತೆ, ಕರ್ತವ್ಯ  ಪಾಲನೆ ನೀತಿಪಾಲನೆಯೆ. ಅದಕ್ಕೇ ಇನ್ನೊಂದು ಹೆಸರು ಇದು, ನೀತಿಪಾಲನೆ ಯೆಂದರೆ ಇಂದ್ರಿಯನಿಗ್ರಹ, ರಾಗದ್ವೇಷಗಳ ಸಂಯಮ. ಹಾಗೆ ನಡೆದರೆ ನಮ್ಮನ್ನು ನಾವು ಅರಿತುಕೊಳ್ಳುತ್ತೇವೆ. ಸಭ್ಯತೆ ಎಂದರೆ ಒಳ್ಳೆಯ ನಡತೆ, ಈ ವ್ಯಾಖ್ಯೆ ಸರಿಯೆಂದರೆ, ಅನೇಕ ಲೇಖಕರು ಹೇಳಿರುವಂತೆ ಹಿಂದೂಸ್ಥಾನ ಯಾರಿಂದಲೂ ಏನೂ ಕಲಿಯಬೇಕಾಗಿಲ್ಲ. ಅದು ಸರಿ. ಮನುಷ್ಯನ ಮನಸ್ಸು ಅತಿ ಚಂಚಲವೆಂಬುದು ನಮಗೆ ಗೊತ್ತು. ಕೊಟ್ಟಷ್ಟೂ ಬೇಕು ಎನ್ನುತ್ತದೆ, ಸಾಲದು ಎನ್ನುತ್ತದೆ. ಇಂದ್ರಿಯಗಳನ್ನು ಎಷ್ಟು ಸಡಿಲಬಿಟ್ಟರೆ ಅಷ್ಟು ಭೋಗಲಾಲಸೆ ಹೆಚ್ಚುತ್ತದೆ.

ಆದುದರಿಂದಲೇ ನಮ್ಮ ಪೂರ್ವಜರು ಅದಕ್ಕೆ ಮಿತಿ ಮೇರೆ ಕಲ್ಪಿಸಿದ್ದರು. ಸುಖ ಎಂಬುದು ನಮ್ಮ ಮನಸ್ಸಿನದೇ ಒಂದು ಸೃಷ್ಟಿ ಎಂಬುದನ್ನು ಅವರು ಅರಿತಿದ್ದರು. ಸಿರಿವಂತನಾದುದರಿಂದ ಒಬ್ಬನು ಸುಖಿಯಲ್ಲ. ಬಡವನಾದುದರಿಂದ ಒಬ್ಬನು ದುಃಖಿಯಲ್ಲ. ಎಷ್ಟೋ ಸಂದರ್ಭಗಳಲ್ಲಿ ಸಿರಿವಂತನೇ ದುಃಖಿ, ಬಡವನೇ ಸುಖಿ ಆಗಿರುವುದು ಕಾಣಬರುತ್ತದೆ. ಜನಸ್ತೋಮ ಯಾವಾಗಲೂ ಬಡವರಾಗಿಯೇ ಇರುತ್ತಾರೆ. ಇದನ್ನೆಲ್ಲ ನೋಡಿ ತಿಳಿದೇ ನಮ್ಮ ಹಿರಿಯರು ಭೋಗವಿಲಾಸಕ್ಕೆ ಬಲಿಯಾಗಬೇಡಿ ಎಂದು ನಮಗೆ ಹೇಳಿದ್ದಾರೆ.

ಸಾವಿರಾರು ವರ್ಷಗಳಿಂದ ಅದೇ ನೇಗಿಲನ್ನೇ ನಾವು ಬಳಸುತ್ತಿದ್ದೇವೆ. ಸಾವಿರಾರು ವರ್ಷಗಳ ಹಿಂದೆ ಇದ್ದಂಥ ಗುಡಿಸಲೇ ಈಗಲೂ ಇದೆ. ನಮ್ಮ ದೇಶೀಶಿಕ್ಷಣ ಮೊದಲಿನ ಹಾಗೆಯೇ ಇದೆ. ನಮ್ಮಲ್ಲಿ ಈ ಸರ್ವನಾಶಕ ಸ್ಪರ್ಧೆಯಿರಲಿಲ್ಲ. ಪ್ರತಿಯೊಬ್ಬನೂ ತನ್ನ ತನ್ನ ಕಸಬನ್ನು ನಡೆಸಿಕೊಂಡು ಹೋಗುತ್ತಿದ್ದ, ನಿಯಮಿತವಾದ ಪ್ರತಿಫಲ ಪಡೆಯುತ್ತಿದ್ದ. ಯಂತ್ರಗಳನ್ನು ಮಾಡುವುದು ನಮಗೆ ಗೊತ್ತಿರಲಿಲ್ಲವೆಂದಲ್ಲ. ಆದರೆ ಯಂತ್ರದ ಮಾಯೆಗೆ ಸಿಲುಕಿದರೆ ಮನುಷ್ಯ ಅದರ ದಾಸನಾಗಿ ಅನೀತಿಯ ಪಾಲಾಗುತ್ತಾನೆ ಎಂಬುದನ್ನು ನಮ್ಮ ಹಿರಿಯರು ಕಂಡಿದ್ದರು. ಆದುದರಿಂದ ದೀರ್ಘ ಚಿಂತನೆ ಮಾಡಿ, ನಮ್ಮ ಕೈಕಾಲುಗಳಿಂದ ಎಷ್ಟು ಸಾಧ್ಯವೋ ಏನು ಸಾಧ್ಯವೋ ಅದನ್ನೇ ಮಾಡಬೇಕು ಎಂದು ನಿರ್ಣಯಿ ಸಿದರು. ನಮ್ಮ ಕೈಕಾಲುಗಳನ್ನು ಸರಿಯಾಗಿ ಉಪಯೋಗಿಸುವುದೇ ಆಯುರಾರೋಗ್ಯ ಸುಖಸಂತೋಷಗಳಿಗೆ ದಾರಿ ಎಂದು ಅವರು ಅರಿತಿದ್ದರು. ದೊಡ್ಡ ದೊಡ್ಡ ಪಟ್ಟಣಗಳು ಬರೀ ಜಂಜಾಟ, ವ್ಯರ್ಥ ಮಾಯಾಜಾಲ; ಅದರಲ್ಲಿನ ಜನಕ್ಕೆ ಸುಖವಿಲ್ಲ ಎಂದು ಅವರು ತೀರ್ಮಾನಿಸಿದರು.

ಆ ಮಾಯಾ ಬಜಾರುಗಳಲ್ಲಿ ದುರಾಚಾರ, ದುರ್ನಿತಿ, ಸೂಳೆಗಾರಿಕೆ, ಜೂಜು ಹೆಚ್ಚಾಗಿ ಬೆಳೆದು, ಕಳ್ಳಕಾಕರಿಗೆ ದರೋಡೆಗಾರರ ತಂಡಗಳಿಗೆ ಅವು ನೆಲೆವೀಡಾಗುತ್ತವೆ. ಬಡವರನ್ನು ಭಾಗ್ಯವಂತರು ಸುಲಿಯುತ್ತಾರೆ ಎಂಬುದನ್ನೂ ಅರಿತುಕೊಂಡಿದ್ದರು. ಅದರಿಂದ ಚಿಕ್ಕ ಚಿಕ್ಕ ಹಳ್ಳಿಗಳೇ ಅವರಿಗೆ ತೃಪ್ತಿದಾಯಕ ವಾಗಿದ್ದವು. ರಾಜರು, ರಾಜದಂಡ, ಅವರ ಖಡ್ಗ ಎಲ್ಲವೂ ನೈತಿಕ ಬಲಕ್ಕೆ ಸಮನಲ್ಲ ಎಂಬುದು ಅವರಿಗೆ ತಿಳಿದಿತ್ತು. ಹೀಗಾಗಿ ರಾಜಧಿರಾಜರಿಗಿಂತ ಋಷಿಮುನಿಗಳು ಸಾಧುಶರಣರು ಹೆಚ್ಚು ಎಂದು ಅವರ ಅಭಿಪ್ರಾಯವಾಗಿತ್ತು, ಇಂಥ ರಚನೆಯುಳ್ಳ ರಾಷ್ಟ್ರ ಯಾರಿಂದ ಏನು ಕಲಿಯಬೇಕು? ಇತರರಿಗೆ ಕಲಿಸುವ ರಾಷ್ಟ್ರ ಇದು. ಈ ರಾಷ್ಟ್ರದಲ್ಲಿಯೂ ವೈದ್ಯರು, ವಕೀಲರು, ಕೋರ್ಟು ಕಚೇರಿ ಎಲ್ಲವೂ ಇತ್ತು. ಎಲ್ಲಕ್ಕೂ ಒಂದು ಮಿತಿಯಿತ್ತು. ಈ ವೃತ್ತಿ ಯಾವುದೂ ಉಳಿದುದಕ್ಕಿಂತ ಶ್ರೇಷ್ಠ ಎಂದು ಯಾರೂ ತಿಳಿದಿರಲಿಲ್ಲ. ಅಲ್ಲದೆ ಆ ವಕೀಲರು, ವೈದ್ಯರು ಜನರನ್ನು ಕೊಳ್ಳೆ ಹೊಡೆಯುತ್ತಿರಲಿಲ್ಲ; ಜನತೆಯ ಆಶ್ರಿತರು ಅವರು, ಆಶ್ರಯದಾತರಲ್ಲ ಎಂದು ಎಲ್ಲರೂ ತಿಳಿದಿದ್ದರು. ನ್ಯಾಯ ತೃಪ್ತಿಕರವಾಗಿತ್ತು.

ಸಾಧಾರಣವಾಗಿ ಯಾರೂ ನ್ಯಾಯಾಲಕ್ಕೆ ಹೋಗುತ್ತಿರಲಿಲ್ಲ. ಕೋರ್ಟುಗಳಿಗೆ ಜನರನ್ನು ಸೆಳೆಯಲು ದಳ್ಳಾಳಿಗಳು ಯಾರೂ ಇರಲಿಲ್ಲ. ಅಂಥದೇನಾದರೂ ಇದ್ದರೆ, ರಾಜಧಾನಿಗಳಲ್ಲಿ ಮಾತ್ರ ಸಾಮಾನ್ಯ ಜನತೆ ತಮ್ಮ ಬೇಸಾಯ ಮಾಡುತ್ತ ಸ್ವತಂತ್ರವಾಗಿದ್ದರು. ಅವರದು ನಿಜವಾಗಿಯೂ ಸ್ವರಾಜ್ಯ ಈಗಲೂ ಈ ದುಷ್ಟ ಆಧುನಿಕ ನಾಗರಿಕತೆ ಎಲ್ಲಿ ವ್ಯಾಪಿಸಿಲ್ಲವೋ ಅಲ್ಲಿ ಹಿಂದೂಸ್ಥಾನ ಮೊದಲಿನಂತೆಯೇ ಇದೆ. ಆ ಪ್ರದೇಶಗಳ ಜನತೆ ನಿಮ್ಮ ಹೊರ ಆಡಂಬರವನ್ನು ನೋಡಿ ನಗುತ್ತಾರೆ. ಇಂಗ್ಲಿಷರು ಅವರನ್ನು ಅಳುತ್ತಿಲ್ಲ. ನೀವೂ ಎಂದಿಗೂ ಅವರನ್ನು ಆಳಲಾರಿರಿ. ನಾನು ಯಾರ ಮಾತನ್ನಾಡುತ್ತಿದ್ದೇವೋ ಅವರು ನಮ್ಮನ್ನು ಅರಿಯರು, ನಾವು ಅವರನ್ನು ಅರಿಯೆವು, ದೇಶ ಪ್ರೇಮವಿರುವ ನಿಮ್ಮಂಥವರು ನಮ್ಮ ದೇಶದಲ್ಲಿ ರೈಲಿಗೆ ಇನ್ನೂ ಎಟುಕದ ಪ್ರದೇಶಗಳಿಗೆ ಹೋಗಿ ಆರು ತಿಂಗಳು ವಾಸಮಾಡಿ ಎಂದು ನಾನು ಸಲಹೆ ಕೊಡುತ್ತೇನೆ. ಆಮೇಲೆ ನೀವು ನಿಜವಾದ ದೇಶಭಕ್ತಿ ಕಲಿತೀರಿ; ಆಗ ಸ್ವರಾಜ್ಯದ ಮಾತನ್ನು ಆಡಿ.

ಯಾವುದನ್ನು ನಾನು ನಿಜವಾದ ಸಭ್ಯತೆ ಎನ್ನುತ್ತೇನೋ ತಿಳಿಯಿತಲ್ಲ. ಈ ಪರಿಸ್ಥಿತಿಯನ್ನೆಲ್ಲ ಬದಲಿಸಬೇಕೆನ್ನುವವರು ಹಿಂದೂಸ್ಥಾನದ ಶತ್ರುಗಳು.

ಓದುಗ: ನೀವು ಹೇಳಿದ ಹಾಗೆ ಹಿಂದೂಸ್ತಾನ ಇದ್ದಿದ್ದರೆ ಸರಿ, ಆದರೆ ಈ ನೂರಾರು ಬಾಲವಿಧವೆಯರು, ಎರಡು ವರ್ಷಕ್ಕೆ ಮದುವೆಯಾದ ಮಕ್ಕಳು, ಹನ್ನೆರಡು ವರ್ಷಕ್ಕೆ ಮಕ್ಕಳನ್ನು ಹೆತ್ತ ಬಾಲಮಾತೃ ಗೃಹಿಣಿಯರು, ಬಹುಪತಿಗಳುಳ್ಳ ಸತಿಯರು, ನಿಯೋಗ ಪದ್ಧತಿ, ಧರ್ಮ ಹೆಸರಿನಲ್ಲಿ ಕುರಿ ಮೇಕೆಗಳ ಪ್ರಾಣಿ ಬಲಿ, ಇದೆಲ್ಲವೂ ಇದೆಯಲ್ಲ ಹಿಂದೂಸ್ಥಾನದಲ್ಲಿ? ಇವು ನೀವು ವರ್ಣಿಸಿದ ಸಭ್ಯತೆಯ ಲಕ್ಷಣಗಳೇನು?

ಸಂಪಾದಕ: ನೀವು ತಪ್ಪು ಮಾಡುತ್ತಿದ್ದೀರಿ. ನೀವು ತೋರಿಸಿದ ದೋಷಗಳೆಲ್ಲವೂ ದೋಷಗಳೇ. ಇವು ಪುರಾತನ ಸಭ್ಯತೆ ಎಂದು ಯಾರೂ ತಿಳಿದಿಲ್ಲ. ಆ ಸಭ್ಯತೆಗೂ ಮೀರಿ ಈ ದೋಷ ನಿಂತಿದೆ. ಇದನ್ನು ನಿವಾರಿಸಲು ಸದಾ ಪ್ರಯತ್ನ ನಡೆದಿದೆ. ಮುಂದೆಯೂ ನಡೆಯುತ್ತದೆ. ಈ ದೋಷಗಳನ್ನು ತೊಳೆಯಲು ನಮ್ಮೊಳಗೆ ಈಗ ಆಗಿರುವ ಹೊಸ ಜಾಗೃತಿಯನ್ನು ಉಪಯೋಗಿಸಬಹುದು. ಆದರೆ ಆಧುನಿಕ ನಾಗರಿಕತೆಯ ಲಕ್ಷಣಗಳೆಂದು ನಾನು ತೋರಿಸಿದುದನ್ನೆಲ್ಲ ಹಾಗೆಂದು ಅದರ ಭಕ್ತರೇ ಒಪ್ಪಿದ್ದಾರೆ. ಭಾರತೀಯ ಸಭ್ಯತೆಯನ್ನು ಅದರ ಭಕ್ತರು ಹೀಗೆ ವರ್ಣಿಸಿದ್ದಾರೆ. ಯಾವ ಸಭ್ಯತೆಯಿಂದಲೂ ಯಾವ ದೇಶದಲ್ಲಿಯೂ ಸಮಸ್ತರೂ ಪೂರ್ಣತೆ ಪಡೆದಿಲ್ಲ. ಆದರೆ, ಭಾರತೀಯ ಸಭ್ಯತೆಯ ಪ್ರವೃತ್ತಿ ನೈತಿಕ ವಿಕಾಸಕ್ಕೆ ಪಶ್ಚಿಮದ ನಾಗರಿಕತೆಯ ಪ್ರವೃತ್ತಿ ಅನೈತಿಕತೆಗೆ, ಪ್ರೋತ್ಸಾಹ. ಪಶ್ಚಿಮದ ನಾಗರಿಕತೆ ನಾಸ್ತಿಕವಾದುದು, ಭಾರತೀಯ ಸಭ್ಯತೆ ಆಸ್ತಿಕವಾದುದು, ಇದನ್ನು ತಿಳಿದು ಹಿಂದೂಸ್ಥಾನದ ಹಿತೈಷಿಗಳು ಪ್ರಾಚೀನ ಭಾರತೀಯ ಸಭ್ಯತೆ ಯನ್ನು, ಮಗು ತಾಯಿಯ ಎದೆಯನ್ನು ಅವಚಿಕೊಳ್ಳುವಂತೆ, ಅಷ್ಟು ಶ್ರದ್ಧೆಯಿಂದ ಅಪ್ಪಿಕೊಳ್ಳಬೇಕು.

ಇದನ್ನೂ ಓದಿ | Amrit Mahotsav | ಗಾಂಧೀಜಿ ಪ್ರೇರಣೆಯಾದರೂ ಕ್ರಾಂತಿಕಾರಿಯಾಗಿದ್ದ ಅಣ್ಣು ಗುರೂಜಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

YouTube channels: ಅತಿ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ಹೊಂದಿರುವ ಟಾಪ್‌ 10 ಯುಟ್ಯೂಬ್‌ ಚಾನೆಲ್‌ಗಳಿವು!

ಲಕ್ಷಾಂತರ ಯುಟ್ಯೂಬ್ ಚಾನೆಲ್ ಗಳಿದ್ದು ಇದರಲ್ಲಿ ಅತೀ ಹೆಚ್ಚು ಚಂದಾದಾರನ್ನು ಹೊಂದಿರುವ ಮೊದಲ ಹತ್ತು ಯು ಟ್ಯೂಬ್ ಚಾನೆಲ್ ಗಳು (YouTube channels) ಯಾವುದು ಗೊತ್ತೇ? ಅತಿ ಹೆಚ್ಚು ಚಂದಾದಾರರನ್ನು ಹೊಂದಿರುವ ಹತ್ತು ಯುಟ್ಯೂಬ್‌ ಚಾನೆಲ್‌ಗಳ ವಿವರ ಇಲ್ಲಿದೆ.

VISTARANEWS.COM


on

By

YouTube channels
Koo

ಲಕ್ಷಾಂತರ ಯೂಟ್ಯೂಬ್ ಚಾನೆಲ್‌ಗಳಿದ್ದು (YouTube channels) ಇದರಲ್ಲಿ ಮಿಸ್ಟರ್ ಬೀಸ್ಟ್ (MrBeast) 267 ಮಿಲಿಯನ್ ಚಂದಾದಾರರನ್ನು (subscribers) ಹೊಂದಿದ್ದು, ಅತೀ ಹೆಚ್ಚು ಸಬ್ ಸ್ಕ್ರೈಬ್ ಆಗಿರುವ ಯುಟ್ಯೂಬ್ ಚಾನೆಲ್ ಎಂಬ ಖ್ಯಾತಿಯನ್ನು ಪಡೆದಿದೆ. ಟಿ-ಸಿರೀಸ್‌ಅನ್ನು (T-Series) ಕೆಳಗಿಳಿಸಿ ಮಿಸ್ಟರ್ ಬೀಸ್ಟ್ ಮೊದಲ ಸ್ಥಾನವನ್ನು ಪಡೆದಿದೆ.

ಯು ಟ್ಯೂಬ್‌ನಲ್ಲಿ ಟಿ-ಸಿರೀಸ್ 266 ಮಿಲಿಯನ್ ಚಂದಾದಾರರನ್ನು ಹೊಂದಿದೆ. ಇದರ ಬಳಿಕ ಕೊಕೊಮೆಲನ್ – ನರ್ಸರಿ ರೈಮ್ಸ್ (Cocomelon – Nursery Rhymes) 176 ಮಿಲಿಯನ್, ಎಸ್ ಇಟಿ ಇಂಡಿಯಾ (SET India) 173 ಮಿಲಿಯನ್, ಕಿಡ್ಸ್ ಡಯಾನಾ ಶೋ (Kids Diana Show) 122 ಮಿಲಿಯನ್, ವ್ಲಾಡ್ ಮತ್ತು ನಿಕಿ (Vlad and Niki) 118 ಮಿಲಿಯನ್, ಲೈಕ್ ನಾಸ್ತ್ಯ (Like Nastya) 116 ಮಿಲಿಯನ್, ಪ್ಯೂಡಿಪಿ (Pewdiepie) 111 ಮಿಲಿಯನ್, ಝೀ ಸಂಗೀತ ಕಂಪೆನಿ (Zee Music Company) 107 ಮಿಲಿಯನ್ ಮತ್ತು WWE 102 ಮಿಲಿಯನ್ ಚಂದಾದಾರನ್ನು ಹೊಂದಿದೆ.

ಮಿಸ್ಟರ್ ಬೀಸ್ಟ್ ಭಾನುವಾರ ಟಿ-ಸರಣಿಯನ್ನು ಮೀರಿಸಿ ಅತಿ ಹೆಚ್ಚು ಚಂದಾದಾರರಾಗಿರುವ ಯೂಟ್ಯೂಬರ್ ಆಗಿ ಹೊರಹೊಮ್ಮಿದೆ. 26 ವರ್ಷದ ಮಿಸ್ಟರ್ ಬೀಸ್ಟ್ ಅವರ ನಿಜವಾದ ಹೆಸರು ಜೇಮ್ಸ್ ಸ್ಟೀಫನ್. ತಮ್ಮ ಸಾಧನೆಯನ್ನು ಕೊಂಡಾಡುತ್ತಾ ಮಿಸ್ಟರ್ ಬೀಸ್ಟ್ ಹೀಗೆ ಬರೆದಿದ್ದಾರೆ: ಆರು ವರ್ಷಗಳ ಅನಂತರ ನಾವು ಅಂತಿಮವಾಗಿ ಪ್ಯೂಡಿಪಿಯ (PewDiePie) ಮೇಲೆ ಸೇಡು ತೀರಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಮಿಸ್ಟರ್ ಬೀಸ್ಟ್ ಈ ವಾರದ ಆರಂಭದಲ್ಲೇ 2018ರ ಟಿ-ಸೀರೀಸ್‌ನೊಂದಿಗೆ ಚಂದಾದಾರರನ್ನು ಹೆಚ್ಚಿಸುವ ಪೈಪೋಟಿಗೆ ಇಳಿದಿತ್ತು. ಈ ಸಮಯದಲ್ಲಿ PewDiePie ಗೆ ಸಹಾಯ ಮಾಡುವ ಕುರಿತು ಅವರು ಹೇಳಿದ್ದರು. ಜಾನ್ ಯೂಶೈ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಮಿಸ್ಟರ್ ಬೀಸ್ಟ್ ಜೇಮ್ಸ್ ಸ್ಟೀಫನ್ ಅವರು, ಇದು ಅಮೆರಿಕ ಮತ್ತು ಭಾರತದ ವಿರುದ್ಧ ನಡೆದ ಯುದ್ಧ ಎಂದು ನಾನು ಭಾವಿಸುವುದಿಲ್ಲ. ಪ್ರಾರಂಭದಲ್ಲಿ ಇದು ಮೊದಲು ಸ್ವಲ್ಪ ಜನಾಂಗೀಯತೆ ರೂಪವನ್ನು ಪಡೆಯಿತು. ಅಲ್ಲದೇ ಇದು ಭಾರತ ವಿರುದ್ಧ ಅಮೆರಿಕ ಚರ್ಚೆಯಾಗಿ ಬದಲಾಗಬಹುದೆಂಬ ಭಯವಿತ್ತು ಎಂದರು.

ಇದನ್ನೂ ಓದಿ: YouTube New Feature: ನಿಮ್ಮಿಷ್ಟದ ಹಾಡು ಗುನುಗಿದ್ರೂ ಸಾಕು ಯುಟ್ಯೂಬ್ ಆ ಹಾಡನ್ನು ಹೆಕ್ಕಿ ತೆಗೆಯುತ್ತದೆ!

ಚಾನಲ್‌ಗೆ ಇನ್ನೂ ಹೆಚ್ಚು ಚಂದಾದಾರರಾಗಲು ಬಯಸುತ್ತಿದ್ದಾರೆ. ನನಗೆ ಸಹಾಯ ಮಾಡುವ ಬಹಳಷ್ಟು ಜನರಿದ್ದಾರೆ. ನಾನು ಇದರೊಂದಿಗೆ ಬದುಕುತ್ತೇನೆ ಮತ್ತು ಉಸಿರಾಡುತ್ತೇನೆ. ನಾನು ಇದರ ಸೃಷ್ಟಿಕರ್ತ ಎಂದು ಅವರು ಹೇಳಿದರು.

ಹೆಚ್ಚಿನ ಯೂಟ್ಯೂಬ್ ಚಾನೆಲ್ ಸೃಷ್ಟಿಕರ್ತರೇ ನನ್ನ ಚಾನೆಲ್‌ಗೆ ಹೆಚ್ಚು ಚಂದಾದಾರರಾಗಿರುವುದು ಸಂತೋಷವಾಗಿದೆ ಎಂದು ನಾನು ಭಾವಿಸುತ್ತೇನೆ. T-ಸಿರೀಸ್‌ ಅನ್ನು ನಾಕ್ ಮಾಡುತ್ತಿಲ್ಲ. ಯಾಕೆಂದರೆ ಅವರು ನನಗಿಂತ ಸಾವಿರ ಪಟ್ಟು ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದಾರೆ ಎಂದು ತಿಳಿಸಿದರು.

Continue Reading

ವಾಣಿಜ್ಯ

Highest Salary Paying Companies: ಎಂಜಿನಿಯರ್‌ಗಳಿಗೆ ಅತೀ ಹೆಚ್ಚು ಸಂಬಳ ಕೊಡುವ ಕಂಪನಿಗಳ ಪಟ್ಟಿ ಇಲ್ಲಿದೆ

ಗೂಗಲ್ ನಲ್ಲಿ ಅತ್ಯಧಿಕ ಪಾವತಿ ಮಾಡಲಾಗುತ್ತಿದ್ದು, ಇಲ್ಲಿನ ಎಂಜಿನಿಯರ್ ಗಳು ವಾರ್ಷಿಕವಾಗಿ 66 ಲಕ್ಷ ರೂ. ಸಂಬಳ ಪಡೆಯುತ್ತಿದ್ದಾರೆ. ಇದು ಅತ್ಯಂತ ಜನಪ್ರಿಯವಾದ ಕಂಪನಿಗಳಲ್ಲಿ ಅತ್ಯಧಿಕವಾಗಿದೆ. ವಿಶ್ವ
ಇತರ ಪ್ರಸಿದ್ಧ ಕಂಪನಿಗಳು ಭಾರತದಲ್ಲಿ ಎಂಜಿನಿಯರ್ ಗಳಿಗೆ ಎಷ್ಟು ಸಂಬಳ ಪಾವತಿ (Highest Salary Paying Companies) ಮಾಡುತ್ತಿದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Highest Paying Companies
Koo

ಗೂಗಲ್ (Google), ಅಮೆಜಾನ್ (amazon), ಮೈಕ್ರೋ ಸಾಫ್ಟ್ (microsoft) ಸೇರಿದಂತೆ ವಿಶ್ವ ಪ್ರಸಿದ್ಧ ಕಂಪನಿಗಳ ಸ್ಯಾಲರಿ ಪ್ಯಾಕೇಜ್ (Highest Salary Paying Companies) ಎಷ್ಟಿರಬಹುದು ಎನ್ನುವ ಕುತೂಹಲ ಎಲ್ಲರಿಗೂ ಇದೆ. ಈ ಕುರಿತು ಇದೀಗ ಎಕ್ಸ್ ನಲ್ಲಿ (x) ಮಾಹಿತಿ ವೈರಲ್ (viral) ಆಗಿದ್ದು, ವಿಶ್ವ ಪ್ರಸಿದ್ಧ ಕಂಪನಿಗಳ ಎಂಜಿನಿಯರ್ ಗಳು ವಾರ್ಷಿಕ ಸರಾಸರಿ 26 ಸಾವಿರ ರೂ.ನಿಂದ 66 ಲಕ್ಷ ರೂ. ವರೆಗೆ ಸಂಬಳ ಪಡೆಯುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.

ಗೂಗಲ್ ನಲ್ಲಿ ಅತ್ಯಧಿಕ ಪಾವತಿ ಮಾಡಲಾಗುತ್ತಿದ್ದು, ಇಲ್ಲಿನ ಎಂಜಿನಿಯರ್ ಗಳು ವಾರ್ಷಿಕವಾಗಿ 66 ಲಕ್ಷ ರೂ. ಸಂಬಳ ಪಡೆಯುತ್ತಿದ್ದಾರೆ. ಇದು ಅತ್ಯಂತ ಜನಪ್ರಿಯವಾದ ಕಂಪನಿಗಳಲ್ಲಿ ಅತ್ಯಧಿಕವಾಗಿದೆ. ಬಳಿಕ ಗೊಜೆಕ್, ಮೈಕ್ರೋಸಾಫ್ಟ್, ಝೀಟಾ, ಅಡೋಬ್ ಮತ್ತು ಸೇಲ್ಸ್‌ಫೋರ್ಸ್‌ನಲ್ಲಿ ಎಂಜಿನಿಯರ್‌ ಹೆಚ್ಚಿನ ಸಂಬಳ ಪಡೆಯುತ್ತಿದ್ದಾರೆ. ಇದರಲ್ಲಿ ಕ್ರಮವಾಗಿ 59.7 ಲಕ್ಷ, 58.5 ಲಕ್ಷ, 58 ಲಕ್ಷ, 56.3 ಲಕ್ಷ, ಮತ್ತು 56.1 ಲಕ್ಷ ಸಂಬಳ ಪಡೆಯುವ ಎಂಜಿನಿಯರ್ ಗಳು ಇದ್ದಾರೆ.

ಬಳಿಕದ ಸ್ಥಾನದಲ್ಲಿ ವಿಎಂ ವೇರ್, ಶೇರ್ ಚಾಟ್, ಗೋಲ್ಡ್ ಮನ್, ಪೇ ಪಾಲ್, ಮಿಂತ್ರಾ, ವಾಲ್ ಮಾರ್ಟ್, ಸರ್ವಿಸ್ ನೌ, ಫ್ಲಿಪ್ ಕಾರ್ಟ್, ರಝೋರ್ ಪೇ, ಒರಾಕಲ್, ಅಮೆಜಾನ್ ಕೂಡ ಸೇರಿದೆ. ಇದರಲ್ಲಿ ಬಹುತೇಕ ಎಂಜಿನಿಯರ್‌ಗಳ ಸಂಬಳ 51.4 ಲಕ್ಷ ರೂ. ವರೆಗೆ ಇದೆ. ಟೆಕೀವ್ನ್, ಸಿಸ್ಕೊ, ಪೇ ಟಿಎಂ, ಕ್ವ್ಯಾಲ್ ಕಾಮ್, ಸ್ಯಾಪ್, ಓಯೋ ಕಂಪೆನಿಗಳ ಎಂಜಿನಯರ್ ಗಳಿಗೆ 5೦ ಲಕ್ಷ ರೂ.ವರೆಗೆ ವಾರ್ಷಿಕ ಪಾವತಿ ಮಾಡಲಾಗುತ್ತದೆ.


ಉಳಿದಂತೆ ಐಬಿಎಂ, ಸ್ಯಾಮ್ ಸಂಗ್, ಅಕ್ವೆವೆಂಚರ್, ಕಾಗ್ನಿಜೆಂಟ್, ಇನ್ಫೋಸಿಸ್, ಕ್ಯಾಂಪ್ಗೆಮಿನಿ, ಟಿಸಿಎಸ್ ಕಂಪೆನಿಗಳಲ್ಲಿ ಎಂಜಿನಿಯರ್ ಗಳಿಗೆ ಗರಿಷ್ಠ ವಾರ್ಷಿಕ ಪಾವತಿ 30 ಲಕ್ಷ ರೂ.ವರೆಗೆ ನೀಡಲಾಗುತ್ತದೆ.

ಇದನ್ನೂ ಓದಿ: LinkedIn: ಉದ್ಯೋಗ ಹುಡುಕಾಟದಲ್ಲಿರುವ ಪದವೀಧರರಿಗೆ ಲಿಂಕ್ಡ್‌ಇನ್‌ ಸಲಹೆಗಳು ಪ್ರಕಟ; ಏನೇನಿವೆ ತಪ್ಪದೇ ಓದಿ

ಹೆಚ್ಚು ಮತ್ತು ಕಡಿಮೆ ಪಾವತಿಸುವ ಕಂಪನಿಗಳ ಮಾಹಿತಿ ಸಂಗ್ರಹಕ್ಕಾಗಿ ಒಟ್ಟು 25,000 ಮಂದಿಯ ಸಂಬಳವನ್ನು ವಿಶ್ಲೇಷಿಸಲಾಗಿದೆ ಎಂದು ಎಕ್ಸ್ ಬಳಕೆದಾರರು ಹೇಳಿಕೊಂಡಿದ್ದಾರೆ. ಭಾರತದಲ್ಲಿ ಸಂಬಳ ಪಾವತಿಯ ಬಗ್ಗೆ ಪಾರದರ್ಶಕತೆ ಬಹಳ ಮುಖ್ಯ ಎಂದಿರುವ ಅವರು ಇದರಲ್ಲಿ ಮೂಲ ವೇತನದಲ್ಲಿ ಕೊಂಚ ವ್ಯತ್ಯಾಸವಿರಬಹುದು ಎಂದು ತಿಳಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Bangalore Rural Lok Sabha Constituency : ಡಿ.ಕೆ ಸುರೇಶ್​​ ನಾಗಾಲೋಟಕ್ಕೆ ಡಾ. ಮಂಜುನಾಥ್​ ಅಡ್ಡಿಯಾಗುವ ಆತಂಕ

Bangalore Rural Lok Sabha Constituency : ಈ ಬಾರಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿ-ಜೆಡಿಎಸ್ ಮೈತ್ರಿಕೂಟವು ಕಾಂಗ್ರೆಸ್ ಅಭ್ಯರ್ಥಿಯನ್ನು ಎದುರಿಸಲು ಎಚ್.ಡಿ.ಕುಮಾರಸ್ವಾಮಿ ಅವರ ಭಾವ ಡಾ.ಸಿ.ಎನ್.ಮಂಜುನಾಥ್ ಅವರನ್ನು ನಿಲ್ಲಿಸಿದೆ.

VISTARANEWS.COM


on

Bangalore Rural Lok Sabha Constituency
Koo

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ (Bangalore Rural Lok Sabha Constituency) 24 ಲಕ್ಷ ಮತದಾರರನ್ನು ಹೊಂದಿರುವ ದೇಶದ ಪ್ರಮುಖ ಲೋಕಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ಸ್ಥಾನವು 2008ರಲ್ಲಿ ಕ್ಷೇತ್ರ ಮರುವಿಂಗಡಣೆ ನಂತರ ಅಸ್ತಿತ್ವಕ್ಕೆ ಬಂತು. ಇಲ್ಲಿ ಮೊದಲ ಚುನಾವಣೆ 2009ರಲ್ಲಿ ಇಲ್ಲಿ ನಡೆಯಿತು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ (JDS) ನಾಯಕ ಎಚ್.ಡಿ.ಕುಮಾರಸ್ವಾಮಿ (HD kumaraswmay) ಈ ಕ್ಷೇತ್ರದ ಮೊದಲ ಸಂಸದ. ಆದರೆ, 2013ರ ಉಪಚುನಾವಣೆ ಸೇರಿದಂತೆ ಸತತ ಎರಡು ಬಾರಿ ಕಾಂಗ್ರೆಸ್ ಈ ಸ್ಥಾನವನ್ನು ಗೆದ್ದುಕೊಂಡಿದೆ. ಇಲ್ಲಿನ ಹಾಲಿ ಸಂಸದ ಕರ್ನಾಟಕದ ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಅವರ ಸಹೋದರ ಡಿ.ಕೆ ಸುರೇಶ್​.

ಕ್ಷೇತ್ರ ವಿಂಗಡಣೆಗೆ ಮೊದಲು ಇದನ್ನು ಕನಕಪುರ ಲೋಕಸಭಾ ಕ್ಷೇತ್ರವಾಗಿ ಗುರುತಿಸಲಾಗಿತ್ತು. ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್. ಡಿ.ದೇವೇಗೌಡ ಅವರು ಇಲ್ಲಿ ಕೊನೇ ಬಾರಿ ಗೆದ್ದಿದ್ದರು. ಎಂ.ವಿ.ಚಂದ್ರಶೇಖರ ಮೂರ್ತಿ ಈ ಕ್ಷೇತ್ರದಿಂದ ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಈ ಕ್ಷೇತ್ರವು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ, ಅವುಗಳಲ್ಲಿ ಏಳು ಹಿಂದಿನ ಕನಕಪುರ ಲೋಕಸಭಾ ಕ್ಷೇತ್ರದ ಭಾಗವಾಗಿದ್ದವು. ತುಮಕೂರು ಜಿಲ್ಲೆಯ ಕುಣಿಗಲ್ ಜೊತೆಗೆ ಬೆಂಗಳೂರು ದಕ್ಷಿಣ, ಆನೇಕಲ್ ಮತ್ತು ರಾಜರಾಜೇಶ್ವರಿ ನಗರ ಹೊಸ ವಿಧಾನಸಭಾ ಕ್ಷೇತ್ರಗಳು ಇದರ ಭಾಗವಾಗಿವೆ.

ಡಿಕೆಸು ವೇಗಕ್ಕೆ ಅಡ್ಡಿಯಾಗುವರೇ ಮಂಜುನಾಥ್​​?

ಈ ಬಾರಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿ-ಜೆಡಿಎಸ್ ಮೈತ್ರಿಕೂಟವು ಕಾಂಗ್ರೆಸ್ ಅಭ್ಯರ್ಥಿಯನ್ನು ಎದುರಿಸಲು ಎಚ್.ಡಿ.ಕುಮಾರಸ್ವಾಮಿ ಅವರ ಭಾವ ಡಾ.ಸಿ.ಎನ್.ಮಂಜುನಾಥ್ ಅವರನ್ನು ನಿಲ್ಲಿಸಿದೆ.

ಇಲ್ಲಿ ಗೆದ್ದವರು ಯಾರು?

2014ರ ಚುನಾವಣೆಯಲ್ಲಿ ಮೋದಿ ಅಲೆಯ ನಡುವೆಯೂ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರು ಬಿಜೆಪಿಯ ಮುನಿರಾಜು ಗೌಡ ಅವರನ್ನು 2.31 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ. ಸುರೇಶ್ 6.52 ಲಕ್ಷ ಮತಗಳನ್ನು ಪಡೆದರೆ, ದೇವೇಗೌಡರು 4.21 ಲಕ್ಷ ಮತಗಳನ್ನು ಮಾತ್ರ ಪಡೆದರು.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರು ಬಿಜೆಪಿಯ ಅಶ್ವತ್ಥನಾರಾಯಣ ಗೌಡ ಅವರನ್ನು 2,06,870 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ 2019 ರಲ್ಲಿ ಕಾಂಗ್ರೆಸ್ 54.12% ಮತಗಳನ್ನು ಹೊಂದಿತ್ತು.

ಇದನ್ನೂ ಓದಿ: Bangalore Central Election : ಮನ್ಸೂರ್ ಅಲಿ ಖಾನ್ ವಿರುದ್ಧ ಗೆದ್ದು ಅಜೇಯ ಓಟ ಮುಂದುವರಿಸುವರೇ ಪಿ. ಸಿ ಮೋಹನ್​

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರು ಬಿಜೆಪಿಯ ಮುನಿರಾಜು ಗೌಡ ಪಿ ಅವರನ್ನು 2,31,480 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಕಾಂಗ್ರೆಸ್ 44.76% ಮತಗಳನ್ನು ಗಳಿಸಿದೆ.

2009ರ ಸಾರ್ವತ್ರಿಕ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿಯ ಸಿ.ಪಿ.ಯೋಗೀಶ್ವರ್ ಅವರನ್ನು 1,30,275 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಜೆಡಿಎಸ್ ಶೇ.44.73ರಷ್ಟು ಮತಗಳನ್ನು ಪಡೆದಿತ್ತು.

ವ್ಯಾಪ್ತಿ ಹೇಗಿದೆ?

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕುಣಿಗಲ್, ರಾಜರಾಜೇಶ್ವರಿನಗರ, ಬೆಂಗಳೂರು ದಕ್ಷಿಣ, ಆನೇಕಲ್, ಮಾಗಡಿ, ರಾಮನಗರ, ಕನಕಪುರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿವೆ. ಕಾಂಗ್ರೆಸ್ 5, ಬಿಜೆಪಿ 2, ಜೆಡಿಎಸ್ 1 ಸ್ಥಾನ ಹೊಂದಿವೆ. ಭಾರತದ ಚುನಾವಣಾ ಆಯೋಗದ ಪ್ರಕಾರ, 2019 ರಲ್ಲಿ ಒಟ್ಟು ಮತದಾರರ ಸಂಖ್ಯೆ 24,97,458. 2019ರಲ್ಲಿ ಶೇ.64.9ರಷ್ಟು ಮತದಾನವಾಗಿತ್ತು. 2011 ರ ಜನಗಣತಿಯ ಅಂಕಿಅಂಶಗಳ ಪ್ರಕಾರ ನಗರ ಮತದಾರರು ಒಟ್ಟು ಮತದಾರ ಪೈಕಿ 54.2% ರಷ್ಟಿದ್ದಾರೆ. ಸರಾಸರಿ ಸಾಕ್ಷರತಾ ಪ್ರಮಾಣವು 68.91% ಆಗಿತ್ತು.

Continue Reading

ದೇಶ

Arvind Kejriwal: ಮಧ್ಯಂತರ ಜಾಮೀನು ಅವಧಿ ಮುಗಿದು ಜೈಲಿಗೆ ಮರಳಿದ ಅರವಿಂದ್‌ ಕೇಜ್ರಿವಾಲ್‌; ಜೂ. 5ರ ತನಕ ನ್ಯಾಯಾಂಗ ಬಂಧನ

Arvind Kejriwal: ದಿಲ್ಲಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ನೂರಾರು ಕೋಟಿ ರೂ. ಹಗರಣದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಮಧ್ಯಂತರ ಜಾಮೀನು ಅವಧಿ ಪೂರ್ಣಗೊಂಡಿದ್ದು, ಇಂದು (ಜೂ. 2) ಅವರು ತಿಹಾರ್‌ ಜೈಲಿಗೆ ಮರಳಿದ್ದಾರೆ. ದೆಹಲಿಯ ರೂಸ್ ಅವೆನ್ಯೂ ಕೋರ್ಟ್‌ ಜಾಮೀನು ಅರ್ಜಿಯ ವಿಚಾರಣೆ ನಡೆಸಿ ಜೂನ್ 5ರಂದು ತೀರ್ಪು ಪ್ರಕಟಿಸುವುದಾಗಿ ಹೇಳಿದೆ.

VISTARANEWS.COM


on

Arvind Kejriwal
Koo

ನವದೆಹಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಅಬಕಾರಿ ನೀತಿ ಜಾರಿ (Delhi Excise Policy Case) ವೇಳೆ ನಡೆದಿದೆ ಎನ್ನಲಾದ ನೂರಾರು ಕೋಟಿ ರೂ. ಹಗರಣದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರ ಮಧ್ಯಂತರ ಜಾಮೀನು ಅವಧಿ ಪೂರ್ಣಗೊಂಡಿದ್ದು, ಇಂದು (ಜೂ. 2) ಅವರು ತಿಹಾರ್‌ ಜೈಲಿಗೆ ಮರಳಿದ್ದಾರೆ. ಈ ಹಿಂದೆ ದೆಹಲಿಯ ರೋಸ್‌ ಅವನ್ಯೂ ಕೋರ್ಟ್‌ ಜೂನ್‌ 5ರ ತನಕ ದೆಹಲಿ ಮುಖ್ಯಮಂತ್ರಿಗೆ ಜೈಲು ಶಿಕ್ಷೆ ವಿಧಿಸಿತ್ತು. ಲೋಕಸಭಾ ಚುನಾವಣೆ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕೋರ್ಟ್‌ ಮೇ 10ರಂದು ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. 

21 ದಿನಗಳ ಮಧ್ಯಂತರ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ಕೇಜ್ರಿವಾಲ್‌ ಶರಣಾದರು. ಶರಣಾದ ಕೇಜ್ರಿವಾಲ್ ಅವರನ್ನು ವರ್ಚುವಲ್ ಕಾನ್ಫರೆನ್ಸ್ ಮೂಲಕ ಮ್ಯಾಜಿಸ್ಟ್ರೇಟ್ ಸಂಜೀವ್ ಅಗರ್ವಾಲ್ ಅವರ ಮುಂದೆ ಹಾಜರುಪಡಿಸಲಾಯಿತು.

ಮೇ 20ರಂದು ಜಾರಿ ನಿರ್ದೇಶನಾಲಯ (Enforcement Directorate)ದ ಅಧಿಕಾರಿಗಳು ಕೋರ್ಟ್‌ ಮೆಟ್ಟಿಲೇರಿ ವಿಚಾರಣೆಗಾಗಿ ಕೇಜ್ರಿವಾಲ್‌ ಅವರನ್ನು ಇನ್ನೂ 14 ದಿನ ತಮ್ಮ ವಶಕ್ಕೆ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಅರವಿಂದ್ ಕೇಜ್ರಿವಾಲ್ ಅವರ ವಕೀಲರಾದ ರಿಷಿಕೇಶ್ ಕುಮಾರ್ ಮತ್ತು ವಿವೇಕ್ ಜೈನ್ ವಿರೋಧ ವ್ಯಕ್ತಪಡಿಸಿದ್ದರು. ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸುವ ಮೊದಲು ಕೇಜ್ರಿವಾಲ್ ಶರಣಾಗಬೇಕಾಗುತ್ತದೆ ಎಂದು ಇ.ಡಿ. ಹೇಳಿತ್ತು. ಅದರಂತೆ ಅವರು ಇದೀಗ ಜೈಲಿಗೆ ಮರಳಿದ್ದು, ರೂಸ್ ಅವೆನ್ಯೂ ಕೋರ್ಟ್‌ ಜಾಮೀನು ಅರ್ಜಿಯ ವಿಚಾರಣೆ ನಡೆಸಿ ಜೂನ್ 5ರಂದು ತೀರ್ಪು ಪ್ರಕಟಿಸುವುದಾಗಿ ಹೇಳಿದೆ.

ಶರಣಾಗುವ ಮುನ್ನ ದೆಹಲಿ ಸಿಎಂ ಹೇಳಿದ್ದೇನು?

ಇಂದು ತಿಹಾರ್‌ ಜೈಲಿಗೆ ತೆರಳುವ ಮುನ್ನ ಕೇಜ್ರಿವಾಲ್‌ ಹನುಮಂತನ ದೇಗುಲ, ಗಾಂಧಿ ಸ್ಮಾರಕ ಮತ್ತು ಆಪ್ ಕಚೇರಿಗೆ ಭೇಟಿ ನೀಡಿದ್ದರು. ಬಳಿಕ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ʼʼಜಾಮೀನಿನ ಮೂಲಕ ಹೊರಗಡೆ ಬಂದ ನಾನು ಈ 21 ದಿನದಲ್ಲಿ ಒಂದು ನಿಮಿಷವನ್ನೂ ವ್ಯರ್ಥವಾಗಿ ಕಳೆದಿಲ್ಲ. ನಮ್ಮ ಎಲ್ಲ ಮಿತ್ರ ಪಕ್ಷಗಳಿಗಾಗಿ ಪ್ರಚಾರ ನಡೆಸಿದೆ. ದೇಶವನ್ನು ಉಳಿಸಲು ಹೋರಾಟ ನಡೆಸಿದೆ. ನನಗೆ ಆಮ್‌ ಆದ್ಮಿ ಪಾರ್ಟಿಗಿಂತ ದೇಶ ಮೊದಲುʼʼ ಎಂದು ಹೇಳಿದರು. ಜತೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸರ್ವಾಧಿಕಾರ ಧೋರಣೆ ಹೊಂದಿದೆ ಎಂದೂ ಆರೋಪಿಸಿದರು.

ಇದನ್ನೂ ಓದಿ: Arvind Kejriwal: ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಇಂದು ಮತ್ತೆ ತಿಹಾರ್‌ ಜೈಲಿಗೆ

ಪ್ರಕರಣದ ಹಿನ್ನೆಲೆ

ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ. 5ರಿಂದ 12ಕ್ಕೆ ಹೆಚ್ಚಿಸಲಾಗಿತ್ತು. ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಲ್ಲಿ ಕೆ. ಕವಿತಾ ಅವರ ಪಾಲೂ ಇದೆ ಎಂಬ ಆರೋಪವಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಅರವಿಂದ್‌ ಕೇಜ್ರಿವಾಲ್‌ ಮಾತ್ರವಲ್ಲ ಬಿಆರ್‌ಎಸ್‌ ನಾಯಕಿ ಕೆ. ಕವಿತಾ ಅವರನ್ನೂ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಈ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್​ ಅವರಿಗೆ ಇ.ಡಿ. 9 ಬಾರಿ ನೋಟಿಸ್ ಜಾರಿ ಮಾಡಿತ್ತು. ಬಳಿಕ ಮಾರ್ಚ್​ 21ರಂದು ಅವರನ್ನು ಬಂಧಿಸಲಾಗಿತ್ತು.

Continue Reading
Advertisement
YouTube channels
ವೈರಲ್ ನ್ಯೂಸ್7 mins ago

YouTube channels: ಅತಿ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ಹೊಂದಿರುವ ಟಾಪ್‌ 10 ಯುಟ್ಯೂಬ್‌ ಚಾನೆಲ್‌ಗಳಿವು!

Highest Paying Companies
ವಾಣಿಜ್ಯ13 mins ago

Highest Salary Paying Companies: ಎಂಜಿನಿಯರ್‌ಗಳಿಗೆ ಅತೀ ಹೆಚ್ಚು ಸಂಬಳ ಕೊಡುವ ಕಂಪನಿಗಳ ಪಟ್ಟಿ ಇಲ್ಲಿದೆ

Pro-Palestinian Protest
ಕರ್ನಾಟಕ27 mins ago

Pro-Palestinian Protest: ಬೆಂಗಳೂರಲ್ಲಿ ಪ್ಯಾಲೆಸ್ತೀನ್ ಬೆಂಬಲಿಸಿ ಪ್ರತಿಭಟನೆ; ಮಹಿಳೆಯರು ಸೇರಿ ಹಲವರು ವಶಕ್ಕೆ

Bangalore Rural Lok Sabha Constituency
ಪ್ರಮುಖ ಸುದ್ದಿ36 mins ago

Bangalore Rural Lok Sabha Constituency : ಡಿ.ಕೆ ಸುರೇಶ್​​ ನಾಗಾಲೋಟಕ್ಕೆ ಡಾ. ಮಂಜುನಾಥ್​ ಅಡ್ಡಿಯಾಗುವ ಆತಂಕ

Arvind Kejriwal
ದೇಶ1 hour ago

Arvind Kejriwal: ಮಧ್ಯಂತರ ಜಾಮೀನು ಅವಧಿ ಮುಗಿದು ಜೈಲಿಗೆ ಮರಳಿದ ಅರವಿಂದ್‌ ಕೇಜ್ರಿವಾಲ್‌; ಜೂ. 5ರ ತನಕ ನ್ಯಾಯಾಂಗ ಬಂಧನ

Bangalore North Lok Sabha Constituency
ದೇಶ1 hour ago

Bangalore North Lok Sabha Constituency : ಕ್ಷೇತ್ರ ಬದಲಾಯಿಸಿದ ಶೋಭಾ ಕರಂದ್ಲಾಜೆಗೆ ಒಲಿಯವುದೇ ಬೆಂಗಳೂರು ಉತ್ತರ

Congress leader Celebration
ಕರ್ನಾಟಕ1 hour ago

Congress leader Celebration: ತಲ್ವಾರ್ ಹಿಡಿದು ಕೇಕ್ ಕಟ್ ಮಾಡಿದ ಕಾಂಗ್ರೆಸ್‌ ಮುಖಂಡ; ವಿಡಿಯೊ ವೈರಲ್‌

Karnataka Weather Forecast
ಮಳೆ2 hours ago

Karnataka Weather : ಕೋಲಾರದಲ್ಲಿ ಅಬ್ಬರಿಸಿದ ವರುಣ; ಒಳನಾಡಿನಲ್ಲಿ ತಾಪಮಾನ ಇಳಿಕೆ

Exit Polls
ವಾಣಿಜ್ಯ2 hours ago

Exit Polls: ಚುನಾವಣೋತ್ತರ ಸಮೀಕ್ಷೆ ಪ್ರಕಟವಾದ ಬೆನ್ನಲ್ಲೇ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಜಿಗಿತ ಸಾಧ್ಯತೆ

Raichur Lok Sabha Constituency
ರಾಯಚೂರು2 hours ago

Raichur Lok Sabha Constituency: ರಾಯಚೂರಿನಲ್ಲಿ ನಾಯಕರ ನಡುವಿನ ಕಾಳಗದಲ್ಲಿ ಯಾರು ರಾಜ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ9 hours ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 day ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ3 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು5 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ6 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ2 weeks ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌