Made in India: ನಾಲ್ಕು ಅಪರೂಪದ ಕಾಯಿಲೆಗಳಿಗೆ ಸ್ವದೇಶಿ ಔಷಧ ಆವಿಷ್ಕಾರ; 100 ಪಟ್ಟು ಇಳಿಯಲಿದೆ ಚಿಕಿತ್ಸೆ ವೆಚ್ಚ! - Vistara News

ಆರೋಗ್ಯ

Made in India: ನಾಲ್ಕು ಅಪರೂಪದ ಕಾಯಿಲೆಗಳಿಗೆ ಸ್ವದೇಶಿ ಔಷಧ ಆವಿಷ್ಕಾರ; 100 ಪಟ್ಟು ಇಳಿಯಲಿದೆ ಚಿಕಿತ್ಸೆ ವೆಚ್ಚ!

Made in India: ನಾಲ್ಕು ಅಪರೂಪದ ಕಾಯಿಲೆಗಳಿಗೆ ಭಾರತದಲ್ಲೇ ಔಷಧ ತಯಾರಿಸಲಾಗಿದೆ. ಈ ಔಷಧಗಳ ಬೆಲೆಯಲ್ಲಿ ಭಾರೀ ಕಡಿತವಾಗಲಿದೆ ಎಂದು ಕೇಂದ್ರ ಹೇಳಿದೆ.

VISTARANEWS.COM


on

drugs
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಭಾರತೀಯ ಔಷಧೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕೇಂದ್ರ ಸರ್ಕಾರ ಮುನ್ನುಡಿ ಬರೆದಿದೆ. ನಾಲ್ಕು ಅಪರೂಪದ ಕಾಯಿಲೆಗಳಿಗೆ ಸ್ವದೇಶಿ ಔಷಧಗಳನ್ನು (Made in India) ಭಾರತ ಆವಿಷ್ಕರಿಸಿದೆ. ಇವುಗಳಿಂದಾಗಿ ಮುಂದಿನ ದಿನಗಳಲ್ಲಿ ಈ ಕಾಯಿಲೆಗಳ ಚಿಕಿತ್ಸೆಯ ವೆಚ್ಚ 100 ಪಟ್ಟು ಇಳಿಯಲಿದೆ.

ಟೈರೋಸಿನೇಮಿಯಾ ಟೈಪ್, ಗೌಚರ್ಸ್ ಕಾಯಿಲೆ, ವಿಲ್ಸನ್ ಕಾಯಿಲೆ ಮತ್ತು ಡ್ರಾವೆಟ್ ಅಥವಾ ಲೆನಾಕ್ಸ್ ಗ್ಯಾಸ್ಟಾಟ್ ಸಿಂಡ್ರೋಮ್ ಸೆಳೆತಗಳು ಸದ್ಯ ಸ್ವದೇಶಿ ಔಷಧ ಕಂಡುಹಿಡಿಯಲಾಗಿರುವ ಕಾಯಿಲೆಗಳು. ಕೇಂದ್ರ ಸರ್ಕಾರವು 13 ಅಪರೂಪದ ರೋಗಗಳು ಮತ್ತು ಜೀವ ಕೋಶ ರೋಗಗಳ ಔಷಧ ತಯಾರಿಕೆಗೆ ಆದ್ಯತೆ ನೀಡಿದೆ. ಶೈಕ್ಷಣಿಕ, ಫಾರ್ಮಾ ಕೈಗಾರಿಕೆಗಳು, ವಿವಿಧ ಸಂಸ್ಥೆಗಳು ಮತ್ತು ಸೆಂಟ್ರಲ್‌ ಡ್ರಗ್‌ ಸ್ಟಾಂಡರ್ಡ್‌ ಕಂಟ್ರೋಲ್‌ ಆರ್ಗನೈಸೇಷನ್‌ (Central Drugs Standard Control Organization-CDSCO) ಔಷಧೀಯ ಇಲಾಖೆಯೊಂದಿಗೆ ನಡೆಸಿದ ಚರ್ಚೆಗಳ ನಂತರ 2022ರ ಜುಲೈಯಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಯಿತು.

ಕೇಂದ್ರ ಸರ್ಕಾರ ಹೇಳಿದ್ದೇನು?

“ಫಾರ್ಮಾ ಕಂಪನಿಗಳು, ವಿಜ್ಞಾನಿಗಳು, ಔಷಧ ನಿಯಂತ್ರಕರು ಮತ್ತು ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿದ ನಂತರ ನಾವು ಔಷಧಗಳ ಉತ್ಪಾದನೆಯನ್ನು ಪ್ರಾರಂಭಿಸಲು ನಿರ್ಧರಿಸಿದ್ದೇವೆ. 13 ಅಪರೂಪದ ಕಾಯಿಲೆ ಮತ್ತು ಜೀವ ಕೋಶ ಕಾಯಿಲೆಗಳಿಗೆ ಅಗತ್ಯವಾದ ಔಷಧಗಳ ತಯಾರಿಕೆಗೆ ಆದ್ಯತೆ ನೀಡಿದ್ದೇವೆʼʼ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕೃತ ಮೂಲಗಳು ತಿಳಿಸಿವೆ.

ಬೆಲೆಯಲ್ಲಿ ಭಾರಿ ವ್ಯತ್ಯಾಸ

“ಇದು ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಲಿದೆ. ಸ್ವದೇಶಿ ನಿರ್ಮಿತ ಔಷಧಗಳ ಬೆಲೆಯಲ್ಲಿ ಭಾರಿ ವ್ಯತ್ಯಾಸ ಕಂಡುಬರಲಿದೆ. ಸಾಮಾನ್ಯವಾಗಿ ಹೊರಗೆ ಒಂದು ಔಷಧದ ಬೆಲೆ 2.5 ಕೋಟಿ ರೂ. ಇದ್ದರೆ ಭಾರತದಲ್ಲಿ ಅದರ ಬೆಲೆ 2.5 ಲಕ್ಷ ರೂ.ʼʼ ಎಂದು ಮೂಲಗಳು ಹೇಳಿವೆ. ಅಪರೂಪದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುವ ಎಲ್ಲ ಔಷಧಗಳನ್ನು ಇಲ್ಲಿಯವರೆಗೆ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದ್ದರಿಂದಲೇ ಇವು ದುಬಾರಿಯಾಗಿದ್ದವು. ಇದೀಗ ಇಲ್ಲೇ ತಯಾರಿಸಲಾಗುವುದರಿಂದ ವೆಚ್ಚ 100 ಪಟ್ಟು ಕಡಿಮೆ ಆಗುತ್ತದೆ. ಉದಾಹರಣೆಗೆ ಸ್ವೀಡನ್‌ನ 5 ಲಕ್ಷ ರೂ. ಬೆಲೆಯ 2 ಎಂ.ಜಿ. ಮಾತ್ರೆ ಭಾರತದಲ್ಲಿ 6,500 ರೂ.ಗೆ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಅಪರೂಪದ ಕಾಯಿಲೆಯು ಕಡಿಮೆ ಸಂಖ್ಯೆಯ ಜನರಲ್ಲಿ ಕಂಡುಬರುತ್ತದೆ. ಹೀಗಾಗಿ ಅವುಗಳ ಚಿಕಿತ್ಸೆಗೂ ಒತ್ತು ಕಡಿಮೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಂಚಿಕೊಂಡ ಮಾಹಿತಿಯ ಪ್ರಕಾರ ಭಾರತದಲ್ಲಿ ಇಂತಹ 8.4-10 ಕೋಟಿ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಶೇ. 80ರಷ್ಟು ಆನುವಂಶಿಕವಾಗಿ ಕಾಣಿಸಿಕೊಂಡಿವೆ.

ಯಾವೆಲ್ಲ ಔಷಧಗಳು?

ಅಪರೂಪದ ಕಾಯಿಗೆಗಳಿಗೆ ಪ್ರಸ್ತುತ ಎಂಟು ರೀತಿಯ ಜೆನರಿಕ್ ಔಷಧಗಳಿವೆ ಮತ್ತು ನಾಲ್ಕು ರೀತಿಯ ಔಷಧಗಳು ಭಾರತದಲ್ಲಿ ಲಭ್ಯ. ಮುಂದಿನ ವರ್ಷ ಇನ್ನೂ ನಾಲ್ಕು ರೀತಿಯ ಔಷಧಗಳು ಲಭ್ಯವಾಗಲಿದೆ. ಸದ್ಯ ಟೈರೋಸಿನೇಮಿಯಾ ಟೈಪ್, ಗೌಚರ್ಸ್ ಕಾಯಿಲೆ, ವಿಲ್ಸನ್ ಕಾಯಿಲೆ ಮತ್ತು ಡ್ರಾವೆಟ್ ಅಥವಾ ಲೆನಾಕ್ಸ್ ಗ್ಯಾಸ್ಟಾಟ್ ಸಿಂಡ್ರೋಮ್ ಸೆಳೆತಗಳಿಗೆ ಔಷಧ ದೊರೆಯುತ್ತಿದೆ.

ನಿಟಿಸಿನೋನ್ (ಕ್ಯಾಪ್ಸೂಲ್‌) ಅನ್ನು ಟೈರೋಸಿನೇಮಿಯಾ ಟೈಪ್ 1 ಚಿಕಿತ್ಸೆಗೆ ಬಳಸಲಾಗುತ್ತದೆ ಮತ್ತು ಇತರ ದೇಶಗಳಿಂದ ಖರೀದಿಸಿದರೆ ಈ ಔಷಧಿಯ ಬೆಲೆ ವರ್ಷಕ್ಕೆ 2.2 ಕೋಟಿ ರೂ. ಇದನ್ನೇ ಭಾರತೀಯ ಕಂಪೆನಿಯು ವರ್ಷಕ್ಕೆ 2.5 ಲಕ್ಷ ರೂ. ವೆಚ್ಚದಲ್ಲಿ ತಯಾರಿಸುತ್ತಿದೆ. ಗೌಚರ್ ಕಾಯಿಲೆಯ ಚಿಕಿತ್ಸೆಗಾಗಿ ಶಿಫಾರಸು ಮಾಡಲಾದ ಎಲಿಗ್ಲುಸ್ಟಾಟ್ ಔಷಧವು ಭಾರತದಲ್ಲಿ ವರ್ಷಕ್ಕೆ 3-6 ಲಕ್ಷ ರೂ.ಗೆ ಲಭ್ಯ. ಸಿಕ್ಕಲ್‌ ಸೆಲ್‌ ಅನೀಮಿಯಾ (Sickle Cell Anemia) ಕಾಯಿಲೆಯ ಚಿಕಿತ್ಸೆಗೆ ಬಳಸುವ ಹೈಡ್ರಾಕ್ಸಿಯೂರಿಯಾ ಔಷಧವೂ ಕಡಿಮೆ ಬೆಲೆಯಲ್ಲಿ ದೊರೆಯುತ್ತಿದೆ.

ಇದನ್ನೂ ಓದಿ: ಸಂಗಾತಿಗಾಗಿ 2000 ಕಿ.ಮೀ ಸಂಚರಿಸಿದ ರಾಯಲ್ ಬೆಂಗಾಲ್ ಟೈಗರ್! ಈ ಹುಲಿ ಹೋಗಿದ್ದೆಲ್ಲಿಗೆ?

ಭಾರತದಲ್ಲಿ ಸರಿಸುಮಾರು 65 ಟೈರೋಸಿನೇಮಿಯಾ ಟೈಪ್ 1 ಕಾಯಿಲೆ, 235 ಗೌಚರ್ ಕಾಯಿಲೆ ಮತ್ತು ಗರಿಷ್ಠ ಸಂಖ್ಯೆಯ ಬೆನ್ನುಮೂಳೆಯ ಸ್ನಾಯು ಕ್ಷೀಣತೆಯ ಪ್ರಕರಣಗಳು ವರದಿಯಾಗಿವೆ. ಇತರ ದೇಶಗಳ ಯಶಸ್ವಿ ಮಾದರಿಗಳನ್ನು ಅಧ್ಯಯನ ಮಾಡಿದ ನಂತರ ಭಾರತವು ಅಪರೂಪದ ಕಾಯಿಲೆಗಳ ಚಿಕಿತ್ಸೆಗಾಗಿ ಕಡಿಮೆ ವೆಚ್ಚದ ಔಷಧಗಳ ಉತ್ಪಾದನೆ ಆರಂಭಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

Health Tips Kannada: ಚಹಾ, ಕಾಫಿಯನ್ನು ಯಾವ ಸಮಯದಲ್ಲಿ ಕುಡಿಯಬಾರದು ಗೊತ್ತೇ?

Health Tips Kannada: ಎದ್ದ ಕೂಡಲೇ ಚಹಾ ಕುಡಿಯದಿದ್ದರೆ ಅದೇನೋ ಕಳೆದುಕೊಂಡ ಭಾವ ಹಲವರನ್ನು ಕಾಡುತ್ತದೆ. ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು ಒಳ್ಲೆಯದಲ್ಲ ಎಂಬುದು ಗೊತ್ತಿದ್ದರೂ, ಈ ಚಹಾ ಕುಡಿಯುವ ಅಭ್ಯಾಸವನ್ನು ಬಿಡಲು ಬಹುತೇಕರಿಗೆ ಸಾಧ್ಯವಾಗುವುದಿಲ್ಲ. ಅದೇನೇ ಆಗಲಿ, ಚಹಾ ಮಾತ್ರ ಬೇಕು. ಆದರೆ, ನೆನಪಿಡಿ. ಎಲ್ಲ ಸಮಯದಲ್ಲೂ ಚಹಾ ಕಾಫಿ ಸೇವನೆ ಒಳ್ಳೆಯದಲ್ಲ.

VISTARANEWS.COM


on

Health Tips Kannada
Koo

ಬಹುತೇಕರಿಗೆ ದಿನದ ಆರಂಭ ಎಂದರೆ ಒಂದು ಕಪ್‌ ಚಹಾ ಅಥವಾ ಕಾಫಿ. ಇದೊಂದು ಸಂಪ್ರದಾಯದಂತೆ ಎಷ್ಟೋ ವರ್ಷಗಳಿಂದ ನಮ್ಮನ್ನು ಪೊರೆಯುತ್ತಿದೆ. ಎದ್ದ ಕೂಡಲೇ ಚಹಾ ಕುಡಿಯದಿದ್ದರೆ ಅದೇನೋ ಕಳೆದುಕೊಂಡ ಭಾವ ಹಲವರನ್ನು ಕಾಡುತ್ತದೆ. ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು ಒಳ್ಲೆಯದಲ್ಲ ಎಂಬುದು ಗೊತ್ತಿದ್ದರೂ, ಈ ಚಹಾ ಕುಡಿಯುವ ಅಭ್ಯಾಸವನ್ನು ಬಿಡಲು ಬಹುತೇಕರಿಗೆ ಸಾಧ್ಯವಾಗುವುದಿಲ್ಲ. ಅದೇನೇ ಆಗಲಿ, ಚಹಾ ಮಾತ್ರ ಬೇಕು. ಆದರೆ, ನೆನಪಿಡಿ. ಎಲ್ಲ ಸಮಯದಲ್ಲೂ ಚಹಾ ಕಾಫಿ ಸೇವನೆ ಒಳ್ಳೆಯದಲ್ಲ. ಕೆಲವು ಸಮಯಗಳಲ್ಲಿ ಇವುಗಳ ಸೇವನೆ ಮಾಡುವುದರಿಂದ ನಾವು ಸೇವಿಸುವ ಆಹಾರಗಳಲ್ಲಿರುವ ಪೋಷಕಾಂಶಗಳು ದೇಹಕ್ಕೆ ಸರಿಯಾಗಿ ಸೇರದೆ ನಷ್ವಾಗಬಹುದು. ಇನ್ನೂ ಕೆಲವೊಮ್ಮೆ ಇವು ಜೀರ್ಣಕ್ರಿಯೆಯನ್ನೇ ಬಾಧಿಸಬಹುದು. ಅಷ್ಟೇ ಅಲ್ಲ, ನಮ್ಮ ದೇಹದ ಹಲವು ಸಮಸ್ಯೆಗಳಿಗೆ ಮೂಲ ಕಾರಣ ಈ ನಮ್ಮ ಕೆಟ್ಟ ಅಭ್ಯಾಸದಿಂದಲೂ ಇರಬಹುದು. ಬನ್ನಿ, ಚಹಾ ಹಾಗೂ ಕಾಫಿಯನ್ನು ನಾವು ಯಾವ ಸಮಯದಲ್ಲಿ ಕುಡಿಯಬಾರದು (Health Tips Kannada) ಎಂಬುದನ್ನು ನೋಡೋಣ.

drink tea

ಬೆಳಗ್ಗೆ ಎದ್ದ ಕೂಡಲೇ

ಬಹುತೇಕ ಎಲ್ಲರಿಗೂ ಇರುವ ಅಭ್ಯಾಸವಿದು. ಬೆಳಗ್ಗೆ ಎದ್ದ ಕೂಡಲೇ ಒಂದು ಕಪ್‌ ಚಹಾ ಕೈಯಲ್ಲಿದ್ದರೇ ದಿನ ಆರಂಭವಾದ ಹಾಗೆ. ಈ ಅಭ್ಯಾಸ ಅನೇಕರಿಗಿದೆ. ಇದನ್ನು ಬಿಡುವುದು ಕಷ್ಟ ನಿಜವೇ. ಆದರೆ, ಬೆಳಗ್ಗೆ ಎದ್ದ ಕೂಡಲೇ ಚಹಾ ಅಥವಾ ಕಾಫಿಯನ್ನು ಹೊಟ್ಟೆಗಿಳಿಸುವುದರಿಂದ ಇದರಲ್ಲಿರುವ ಕೆಫೀನ್‌ ಅಂಶವು ಖಾಲಿ ಹೊಟ್ಟೆಯ ವ್ಯವಸ್ಥೆಯನ್ನು ಹದಗೆಡಿಸುತ್ತದೆ. ಹಾರ್ಮೋನ್‌ ಉತ್ಪಾದನೆಯ ವ್ಯವಸ್ಥೆಯನ್ನೂ ಇದೂ ಹದಗೆಡಿಸುವುದಲ್ಲದೆ, ಇದರಿಂದ ಮಾನಸಿಕವಾಗಿಯೂ ಒತ್ತಡ ಇತ್ಯಾದಿ ಸಮಸ್ಯೆಗಳು ಬರಬಹುದು.

ಇದನ್ನೂ ಓದಿ: Contact Lens: ಕಾಂಟ್ಯಾಕ್ಟ್‌ ಲೆನ್ಸ್‌ ಬಳಸುತ್ತೀರಾ? ಈ ವಿಷಯಗಳು ತಿಳಿದಿರಲಿ!

ಊಟ ತಿಂಡಿಯ ಜೊತೆಗೆ

ನಿಮಗೆ ಊಟ ತಿಂಡಿಯ ಜೊತೆಗೆ ಕಾಫಿ ಅಥವಾ ಚಹಾ ಕುಡಿಯುವ ಅಭ್ಯಾಸ ಇದ್ದರೆ ಮತ್ತೊಮ್ಮೆ ಯೋಚಿಸಿ. ಚಹಾ ಮತ್ತು ಕಾಫಿ ಆಮ್ಲೀಯ ಗುಣವನ್ನೂ ಹೊಂದಿರುವುದರಿಂದ ಇದು ನಿಮ್ಮ ಜೀರ್ಣಕ್ರಿಯೆಯನ್ನೇ ಹಾಳುಗೆಡವಬಹುದು. ನೀವು ಪ್ರೊಟೀನ್‌ಯುಕ್ತ ಆಹಾರ ತೆಗೆದುಕೊಂಡರೆ, ಅದರ ಜೊತೆಗೆ ಚಹಾ/ಕಾಫಿಯನ್ನೂ ಸೇವಿಸಿದರೆ ಪ್ರೊಟೀನ್‌ ನಿಮ್ಮ ದೇಹದಕ್ಕೆ ಒದಗದು. ಅಷ್ಟೇ ಅಲ್ಲ, ಪ್ರೊಟೀನ್‌ ಕರಗಲು ಕಷ್ಟವಾಗುತ್ತದೆ. ನಿಮ್ಮ ಆಹಾರದಲ್ಲಿರುವ ಕಬ್ಬಿಣದಂಶವೂ ಕೂಡಾ ದೇಹಕ್ಕೆ ಸೇರಲು ಕಷ್ಟವಾಗಬಹುದು. ಹಾಗಾಗಿ, ಆಹಾರದ ಜೊತೆಗೆ ಚಹಾ ಕಾಫಿ ಸೇವನೆ ಮಾಡುವುದರಿಂದ ನಿಮ್ಮ ಆಹಾರದಲ್ಲಿರುವ ಪೋಷಕಾಂಶಗಳು ಕರಗಿ ನಿಮ್ಮ ದೇಹಕ್ಕೆ ಸೇರುವ ಕ್ರಿಯೆ ನಿಧಾನವಾಗುತ್ತದೆ. ಹಾಗೆಯೇ ಪೋಷಕಾಂಶಗಳು ನಷ್ಟವಾಗಲೂಬಹುದು.

drink coffe

ಸಂಜೆ ನಾಲ್ಕು ಗಂಟೆಯ ನಂತರ

ಸಂಜೆ ಕಾಫಿ ಅಥವಾ ಚಹಾ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡ ಮಂದಿ ಇಲ್ಲೊಮ್ಮೆ ಕೇಳಿ. ಚಹಾ ಅಥವಾ ಕಾಫಿಯನ್ನು ನೀವು ಮಲಗುವುದಕ್ಕೂ ಹತ್ತು ಗಂಟೆಗಳ ಮೊದಲು ಸೇವಿಸಬೇಕಂತೆ. ಆದರೆ ಇದು ಸಾಧ್ಯವಾಗದಿದ್ದರೆ, ಕನಿಷ್ಟ ಆರು ಗಂಟೆಗಳ ಮೊದಲು ಸೇವಿಸಬಹುದಂತೆ. ಅಂದರೆ, ಸಂಜೆ ನಾಲ್ಕು ಗಂಟೆಗೂ ಮೊದಲು ಕಾಫಿ ಚಹಾ ಸೇವಿಸಿ. ಇದು ನಿಮ್ಮ ನಿದ್ದೆಯ ಗುಣಮಟ್ಟವನ್ನು ಹೆಚ್ಚಿಸುವುದಲ್ಲದೆ, ಪಿತ್ತಕೋಶವನ್ನೂ ಆರೋಗ್ಯವಾಗಿಡುತ್ತದೆ. ಕಾರ್ಟಿಸಾಲ್‌ ಮಟ್ಟವನ್ನೂ ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಪ್ರಚೋದಿಸುತ್ತದೆ.
ಈ ಸಮಯವನ್ನು ಹೊರತುಪಡಿಸಿ, ಉಳಿದ ಸಮಯಗಳಲ್ಲಿ ನೀವು ನಿಮ್ಮ ಇಷ್ಟದ ಚಹಾ ಕಾಫಿಯನ್ನು ಕುಡಿಯಬಹುದು. ಆದರೆ, ಇದು ಅತಿಯಾಗದಿರಲಿ. ಅಂದು ದಿನಕ್ಕೆ 300 ಮಿಲಿಗ್ರಾಂಗಿಂತ ಹೆಚ್ಚಿನ ಕೆಫೀನ್‌ ನಿಮ್ಮ ಹೊಟ್ಟೆ ಸೇರದಿರಲಿ. ಸುಮಾರು 150 ಎಂಎಲ್‌ ಕಾಫಿಯಲ್ಲಿ 80ರಿಂದ 120 ಮಿಲಿಗ್ರಾಂ ಕೆಫೀನ್‌ ಇದೆ. ಇನ್‌ಸ್ಟ್ಯಾಂಟ್‌ ಕಾಫಿಯಲ್ಲಿ 50-65 ಎಂಜಿ ಕೆಫೀನ್‌ ಇದ್ದರೆ, ಚಹಾದಲ್ಲಿ 30-65 ಎಂಜಿ ಕೆಫೀನ್‌ ಇದೆ. ಹೀಗಾಗಿ, ಈ ಬಗ್ಗೆ ಎಚ್ಚರ ವಹಿಸಿ ಹಿತಮಿತವಾಗಿ ನಿಮ್ಮ ಪ್ರೀತಿಯ ಪೇಯವನ್ನು ನಿತ್ಯವೂ ಕುಡಿಯಬಹುದು ಎಂಬುದು ತಜ್ಞರ ಮಾತು.

Continue Reading

ಧಾರ್ಮಿಕ

Shravan 2024: ಶ್ರಾವಣ ಮಾಸದಲ್ಲಿ ಯಾವ ಆಹಾರ ತಿನ್ನಬೇಕು, ಯಾವುದನ್ನು ತಿನ್ನಬಾರದು?

Shravan 2024: ಶ್ರಾವಣ ಮಾಸದಲ್ಲಿ (Shravan Month 2024) ಹೆಚ್ಚಾಗಿ ದೇವರ ಭಕ್ತಿ, ಪ್ರಾರ್ಥನೆಯಲ್ಲಿ ತೊಡಗುವುದರಿಂದ ಆಹಾರ ನಿಯಮಗಳನ್ನು ಕಠಿಣವಾಗಿ ಅನುಸರಿಸಲಾಗುತ್ತದೆ. ಉಪವಾಸ ಇರುವವರು ಈ ಸಂದರ್ಭದಲ್ಲಿ ಆಹಾರದ ಮಾರ್ಗಸೂಚಿಗಳನ್ನು ಅನುಸರಿಸಿ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆಧ್ಯಾತ್ಮಿಕ ಗಮನವನ್ನು ಕೇಂದ್ರೀಕರಿಸಬಹುದು.

VISTARANEWS.COM


on

By

Shravan Month 2024
Koo

ಶ್ರಾವಣಾ ಬಂತು ಕಾಡಿಗೆ.. ಬಂತು ನಾಡಿಗೆ.. ಬಂತು ಬೀಡಿಗೆ.. ಕವಿ ದ. ರಾ. ಬೇಂದ್ರೆಯವರ (da.ra. bendre) ಕವನದ ಸಾಲುಗಳು ಶ್ರಾವಣ ಮಾಸದ (Shravan 2024) ಸಂಭ್ರಮವನ್ನು ವರ್ಣಿಸುವಂತೆ ಶ್ರಾವಣ ಮಾಸವು (Shravan Month) ಹಬ್ಬ ಹರಿದಿನಗಳನ್ನು ಹೊತ್ತುಕೊಂಡು ಬರುತ್ತದೆ. ಈ ಮಾಸವು ಶಿವನಿಗೆ ಸಮರ್ಪಿತವಾಗಿದ್ದು, ಈ ಸಂದರ್ಭದಲ್ಲಿ ಹಿಂದೂಗಳು ಉಪವಾಸ, ಪ್ರಾರ್ಥನೆಯಲ್ಲಿ ಕಳೆಯುತ್ತಾರೆ.

ಈ ಬಾರಿ ಆಗಸ್ಟ್ 4ರಿಂದ ಶ್ರಾವಣ ಮಾಸ ಆರಂಭಗೊಳ್ಳಲಿದ್ದು, ಈ ಮಂಗಳಕರ ಅವಧಿಯಲ್ಲಿ ವಿಶೇಷ ಪ್ರಾರ್ಥನೆ, ಆಚರಣೆ ಮತ್ತು ಆಹಾರದ ನಿರ್ಬಂಧ ಇರುತ್ತದೆ. ಶ್ರಾವಣ ಮಾಸದಲ್ಲಿ ಭಕ್ತರು ತಮ್ಮ ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಲು ನಿರ್ದಿಷ್ಟ ಆಹಾರ ಮಾರ್ಗಸೂಚಿಗಳನ್ನು ಅನುಸರಿಸುತ್ತಾರೆ. ಈ ಪವಿತ್ರ ಮಾಸದಲ್ಲಿ ಯಾವ ಆಹಾರಗಳನ್ನು ಸೇವಿಸಬೇಕು ಮತ್ತು ತಪ್ಪಿಸಬೇಕು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಶ್ರಾವಣ ಮಾಸದಲ್ಲಿ ತಿನ್ನಬಹುದಾದ ಆಹಾರಗಳು

Shravan Month 2024
Shravan Month 2024


ತಾಜಾ ಹಣ್ಣುಗಳು: ಶ್ರಾವಣ ಮಾಸದಲ್ಲಿ ತಾಜಾ ಹಣ್ಣುಗಳು ಆಹಾರದ ಅತ್ಯಗತ್ಯ ಭಾಗವಾಗಿದೆ. ಅವುಗಳನ್ನು ಶುದ್ಧ ಮತ್ತು ಜೀರ್ಣಿಸಿಕೊಳ್ಳಲು ಸುಲಭವೆಂದು ಪರಿಗಣಿಸಲಾಗುತ್ತದೆ. ಅಗತ್ಯವಾದ ಪೋಷಕಾಂಶಗಳು ಮತ್ತು ಜಲಸಂಚಯನವನ್ನು ಒದಗಿಸುತ್ತದೆ.ಇದರಲ್ಲಿ ಬಾಳೆಹಣ್ಣು, ಸೇಬು, ದಾಳಿಂಬೆ ಮತ್ತು ಕಲ್ಲಂಗಡಿಗಳು ಸೇರಿವೆ.

ಡೇರಿ ಉತ್ಪನ್ನಗಳು: ಹಾಲು, ಮೊಸರು, ಪನೀರ್ ಮತ್ತು ತುಪ್ಪವನ್ನು ಶ್ರಾವಣ ಮಾಸದಲ್ಲಿ ಸೇವಿಸಬಹುದು. ಈ ಡೇರಿ ಉತ್ಪನ್ನಗಳು ಪೌಷ್ಟಿಕಾಂಶ ಮಾತ್ರವಲ್ಲದೇ ದೇಹವನ್ನು ತಂಪಾಗಿಸುತ್ತದೆ.

ಸಾಬುದಾನ: ಉಪವಾಸದ ಸಮಯದಲ್ಲಿ ಸಾಬುದಾನ ಖಿಚಡಿ ಅಥವಾ ವಡಾ ಶ್ರಾವಣ ಮಾಸದ ಮುಖ್ಯವಾದ ಆಹಾರವಾಗಿದೆ. ಸಾಬುದಾನವು ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿದ್ದು ದಿನವಿಡೀ ಶಕ್ತಿಯನ್ನು ನೀಡುತ್ತದೆ.

ಹುರುಳಿಕಾಳಿನ ಹಿಟ್ಟು: ಪೂರಿ, ಚಪಾತಿ ಅಥವಾ ಪ್ಯಾನ್ ಕೇಕ್‌ಗಳನ್ನು ತಯಾರಿಸಲು ಹುರುಳಿಕಾಳಿನ ಹಿಟ್ಟನ್ನು ಬಳಸಲಾಗುತ್ತದೆ. ಇದು ಜೀರ್ಣಿಸಿಕೊಳ್ಳಲು ಸುಲಭವಾಗಿದೆ ಮತ್ತು ಉಪವಾಸಕ್ಕೆ ಸೂಕ್ತವಾಗಿದೆ.

ಚೆಸ್ ನೆಟ್ ಹಿಟ್ಟು: ಹುರುಳಿ ಹಿಟ್ಟಿನಂತೆಯೇ ಇದು ಪೂರಿ ಮತ್ತು ಹಲ್ವಾದಂತಹ ವಿವಿಧ ಭಕ್ಷ್ಯಗಳನ್ನು ತಯಾರಿಸಲು ಬಳಸುವ ಮತ್ತೊಂದು ಉಪವಾಸ ಸ್ನೇಹಿ ಹಿಟ್ಟಾಗಿದೆ.

ಆಲೂಗಡ್ಡೆಗಳು ಮತ್ತು ಸಿಹಿ ಆಲೂಗಡ್ಡೆಗಳು: ಇದನ್ನು ವಿವಿಧ ಪಾಕವಿಧಾನಗಳಲ್ಲಿ ಬಳಸಬಹುದು. ಇದರಿಂದ ಉಪವಾಸದಲ್ಲಿರುವವರು ಅಗತ್ಯ ಶಕ್ತಿಯನ್ನು ತುಂಬುತ್ತಾರೆ ಮತ್ತು ಒದಗಿಸುತ್ತಾರೆ.

ಬೀಜಗಳು ಮತ್ತು ಒಣ ಹಣ್ಣುಗಳು: ಬಾದಾಮಿ, ವಾಲ್ ನಾಟ್, ಒಣದ್ರಾಕ್ಷಿ ಮತ್ತು ಇತರ ಒಣ ಹಣ್ಣುಗಳು ಲಘು ಆಹಾರಕ್ಕಾಗಿ ಮತ್ತು ಹೆಚ್ಚುವರಿ ಪೌಷ್ಟಿಕಾಂಶ ಮತ್ತು ಶಕ್ತಿಗಾಗಿ ಭಕ್ಷ್ಯಗಳಿಗೆ ಸೇರಿಸಲು ಉತ್ತಮವಾಗಿದೆ.

ತೆಂಗಿನಕಾಯಿ: ಶ್ರಾವಣ ಮಾಸದಲ್ಲಿ ತಾಜಾ ತೆಂಗಿನಕಾಯಿ, ತೆಂಗಿನ ನೀರು ಮತ್ತು ತೆಂಗಿನ ಹಾಲು ಸಾಮಾನ್ಯವಾಗಿ ಸೇವಿಸಲಾಗುತ್ತದೆ.

Shravan Month 2024
Shravan Month 2024


ಶ್ರಾವಣ ಮಾಸದಲ್ಲಿ ತಪ್ಪಿಸಬೇಕಾದ ಆಹಾರಗಳು

ಮಾಂಸಾಹಾರ: ಮಾಂಸ, ಮೀನು ಮತ್ತು ಮೊಟ್ಟೆಗಳನ್ನು ಶ್ರಾವಣ ಮಾಸದಲ್ಲಿ ಕಟ್ಟುನಿಟ್ಟಾಗಿ ತಪ್ಪಿಸಲಾಗುತ್ತದೆ. ಶುದ್ಧತೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಉತ್ತೇಜಿಸಲು ಸಸ್ಯಾಹಾರಿ ಆಹಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ.

ಈರುಳ್ಳಿ ಮತ್ತು ಬೆಳ್ಳುಳ್ಳಿ: ಇವುಗಳು ದೇಹದಲ್ಲಿ ಶಾಖವನ್ನು ಉಂಟುಮಾಡುತ್ತವೆ ಎಂದು ನಂಬಲಾಗಿದೆ. ಆದ್ದರಿಂದ ಶ್ರಾವಣ ಮಾಸದಲ್ಲಿ ಅವುಗಳನ್ನು ತಪ್ಪಿಸಲಾಗುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ಉತ್ತೇಜಿಸುತ್ತದೆ.

ಧಾನ್ಯಗಳು ಮತ್ತು ಬೇಳೆಕಾಳುಗಳು: ಗೋಧಿ, ಅಕ್ಕಿ, ಧಾನ್ಯ ಮತ್ತು ಬೇಳೆಕಾಳುಗಳನ್ನು ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಬಳಸಲಾಗುವುದಿಲ್ಲ. ಇದರ ಬದಲು ಹುರುಳಿ ಕಾಳು, ಚೆಸ್ಟ್ ಹಿಟ್ಟನ್ನು ಬಳಸಲಾಗುತ್ತದೆ.

ಮದ್ಯ ಮತ್ತು ತಂಬಾಕು: ಶ್ರಾವಣ ಮಾಸ ಪವಿತ್ರ ತಿಂಗಳಾಗಿರುವುದರಿಂದ ಮದ್ಯ ಮತ್ತು ತಂಬಾಕು ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಇದನ್ನೂ ಓದಿ: Home Remedies for Dengue: ಡೆಂಗ್ಯು ಜ್ವರ ಬಂದರೂ ಪ್ಲೇಟ್‌ಲೆಟ್‌ ಸಂಖ್ಯೆ ಕುಸಿಯದಿರಲು ಯಾವ ಆಹಾರ ಸೇವಿಸಬೇಕು?

ಸಂಸ್ಕರಿಸಿದ ಮತ್ತು ಜಂಕ್ ಆಹಾರಗಳು: ಆರೋಗ್ಯಕರ ಮತ್ತು ನೈಸರ್ಗಿಕ ಆಹಾರಕ್ಕೆ ಹೆಚ್ಚಿನ ಒತ್ತು ನೀಡುವುದರಿಂದ ಚಿಪ್ಸ್, ಪ್ಯಾಕೆಟ್ ತಿಂಡಿಗಳು ಮತ್ತು ಇತರ ಸಂಸ್ಕರಿಸಿದ ಆಹಾರಗಳನ್ನು ಸೇವಿಸಲಾಗುವುದಿಲ್ಲ.

ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರಗಳು: ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರವನ್ನು ಸಾಮಾನ್ಯವಾಗಿ ತಪ್ಪಿಸಲಾಗುತ್ತದೆ ಏಕೆಂದರೆ ಅವು ಜೀರ್ಣಕ್ರಿಯೆಗೆ ಅಡ್ಡಿಪಡಿಸಬಹುದು ಮತ್ತು ಉಪವಾಸಕ್ಕೆ ತೊಂದರೆ ಉಂಟು ಮಾಡುವುದು.

Continue Reading

ಆರೋಗ್ಯ

Remedies For Fatty Liver: ಲಿವರ್‌ನ ಕೊಬ್ಬನ್ನು ನೈಸರ್ಗಿಕವಾಗಿ ಹೀಗೆ ಕರಗಿಸಲು ಸಾಧ್ಯ!

Remedies For Fatty Liver: ಫ್ಯಾಟಿ ಲಿವರ್‌ ಅತ್ಯಂತ ವ್ಯಾಪಕವಾಗಿ ಕಾಣುತ್ತಿರುವ ಸಮಸ್ಯೆ. ದೇಹದ ಎಲ್ಲಾ ಅಂಗಗಳೂ ಮುಖ್ಯವಾದವುಗಳೇ ಹೌದಾದರೂ, ಪಿತ್ತಜನಕಾಂಗದ ಸಮಸ್ಯೆ ಇತರೆಲ್ಲ ಅಂಗಗಳಿಗೆ ಭಿನ್ನವಾದ ಸಮಸ್ಯೆಗಳನ್ನು ತಂದೊಡ್ಡಬಲ್ಲದು. ಇದಕ್ಕೆ ಕಾರಣಗಳೇನು, ಲಕ್ಷಣಗಳೇನು ಮತ್ತು ನೈಸರ್ಗಿಕವಾದ ಪರಿಹಾರ ಹೇಗೆ ಎಂಬಂಥ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

Remedies For Fatty Liver
Koo

ಆರೋಗ್ಯದ ಬಗ್ಗೆ ಒಂದು ವರ್ಗದಲ್ಲಿ ಅರಿವು ಹೆಚ್ಚಾದಂತೆಯೇ, ಅನಾರೋಗ್ಯದ ವ್ಯಾಪಕತೆಯೂ ಅಧಿಕವಾಗುತ್ತಿರುವುದು ಆತಂಕದ ಸಂಗತಿ. ಇತ್ತೀಚಿನ ದಿನಗಳಲ್ಲಿ ಯಕೃತ್ತಿಗೆ ಕೊಬ್ಬಿನ ಸಮಸ್ಯೆ ಹೆಚ್ಚಿರುವುದು ಕಳವಳಕಾರಿಯಾಗಿದೆ. ದೇಹದ ಎಲ್ಲಾ ಅಂಗಗಳೂ ಮುಖ್ಯವಾದವುಗಳೇ ಹೌದಾದರೂ, ಪಿತ್ತಜನಕಾಂಗದ ಸಮಸ್ಯೆ ಇತರೆಲ್ಲ ಅಂಗಗಳಿಗೆ ವಿವಿಧ ಸಮಸ್ಯೆಗಳನ್ನು ತಂದೊಡ್ಡಬಲ್ಲದು. ಹಾಗಾಗಿ ಫ್ಯಾಟಿಲಿವರ್‌ನ ಲಕ್ಷಣಗಳು, ಕಾರಣಗಳು, ನೈಸರ್ಗಿಕವಾದ ಪರಿಹಾರದಂಥ ಕೆಲವು ಮಾಹಿತಿಗಳನ್ನು (Remedies For Fatty Liver) ಇಲ್ಲಿ ನೀಡಲಾಗಿದೆ.

Fatty Lever Disease

ಏನು ಹೀಗೆಂದರೆ?

ಯಕೃತ್ತಿನಲ್ಲಿ ಅಧಿಕ ಕೊಬ್ಬು ಶೇಖರವಾದ ಪರಿಣಾಮ, ಯಕೃತ್ತು ಅಗಲವಾಗಿ ದೊಡ್ಡದಾಗುತ್ತದೆ. ಇದನ್ನೇ ಫ್ಯಾಟಿಲಿವರ್‌ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಬೊಜ್ಜು ಇರುವವರು, ದೀರ್ಘಕಾಲದಿಂದ ಮಧುಮೇಹಿಗಳಾಗಿದ್ದವರು ಮತ್ತು ಹೆಚ್ಚು ಅಲ್ಕೋಹಾಲ್‌ ಸೇವಿಸುವವರಲ್ಲಿ ಈ ಸಮಸ್ಯೆ ಸಾಮಾನ್ಯವಾಗಿದೆ. ಈ ಸಮಸ್ಯೆಯ ದೂರಗಾಮಿ ಪರಿಣಾಮಗಳನ್ನು ಲಕ್ಷಿಸಿದಾಗ, ಆದಷ್ಟೂ ಶೀಘ್ರ ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಸೂಕ್ತ.

ಲಕ್ಷಣಗಳೇನು?

ಆರಂಭಿಕ ಲಕ್ಷಣಗಳು ಸೌಮ್ಯವಾಗಿದ್ದು, ಗಮನಕ್ಕೆ ಬಾರದೆ ಹೋಗುವುದೇ ಹೆಚ್ಚು. ಆದರೆ ಕೊಬ್ಬು ಶೇಖರಣೆಯ ಪ್ರಮಾಣ ಹೆಚ್ಚುತ್ತಾ ಹೋದಂತೆ ಅತಿಯಾದ ಸುಸ್ತು, ಹೊಟ್ಟೆಯ ಮೇಲಿನ ಭಾಗದ ಬಲಪಕ್ಕದಲ್ಲಿ ನೋವು ಮೊದಲಿಗೆ ಕಾಣಿಸಿಕೊಳ್ಳಬಹುದು. ಸಮಸ್ಯೆ ಮುಂದುವರಿಯುತ್ತಿದ್ದಂತೆ, ನಿದ್ರಾಹೀನತೆ, ಅತಿಯಾದ ಸುಸ್ತು, ಆಲಸ್ಯ, ಹೊಟ್ಟೆ ಉಬ್ಬರಿಸಿದಂತಾಗುವುದು, ಕಾಲು ಊದಿಕೊಳ್ಳುವುದು ಮುಂತಾದ ಲಕ್ಷಣಗಳು ತೋರಬಹುದು.

ಕಾರಣಗಳೇನು?

ಹಲವಾರು ಕಾರಣಗಳಿವೆ- ಬೊಜ್ಜು, ಅಲ್ಕೋಹಾಲ್‌ ಸೇವನೆ, ದೀರ್ಘಕಾಲದ ಮಧುಮೇಹ, ಅತಿಹೆಚ್ಚಿನ ಕ್ಯಾಲರಿ ಆಹಾರವನ್ನು ಸದಾ ತಿನ್ನುವುದು, ವ್ಯಾಯಾಮವಿಲ್ಲದ ಜೀವನ, ಕೆಲವು ಔಷಧಗಳ ಬೇಕಾಬಿಟ್ಟಿ ಸೇವನೆ, ಆನುವಂಶೀಯ ಕಾರಣಗಳು, ಹೆಪಟೈಟಿಸ್‌ ಬಿ ಮತ್ತು ಸಿ ವೈರಸ್‌ ಮುಖ್ಯ ಕಾರಣಗಳು. ಇದನ್ನೀಗ ಸರಿಪಡಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲವೇ ಎಂಬುದೀಗ ಮುಖ್ಯ ವಿಷಯ. ಈ ತೊಂದರೆ ಆರಂಭಿಕ ಹಂತಗಳಲ್ಲಿದ್ದರೆ, ಸರಿಪಡಿಸಿಕೊಳ್ಳುವ ಅವಕಾಶ ಹೆಚ್ಚು. ಹೇಗೆ ಎಂಬುದನ್ನು ನೋಡೋಣ.

Fatty Liver disease

ತೂಕ ಇಳಿಕೆ

ಹೆಚ್ಚುವರಿ ತೂಕ ಇದ್ದವರಿಗೆ ಇದು ಅನ್ವಯವಾಗುತ್ತದೆ. ಅಧಿಕ ತೂಕ ಇದ್ದವರಿಗೆ, ಶೇ 20ರಷ್ಟು ತೂಕ ಇಳಿಸಿದರೂ ಯಕೃತ್‌ನ ಆರೋಗ್ಯ ಸಾಕಷ್ಟು ಸುಧಾರಿಸುತ್ತದೆ ಎಂಬುದು ವೈದ್ಯಲೋಕದ ಮಾತು. ಇದಕ್ಕಾಗಿ ಏನಕ್ಕೇನೋ ಪ್ರಯತ್ನಗಳನ್ನು ಮಾಡಿ, ಆರೋಗ್ಯವನ್ನೂ ಇನ್ನೂ ಹದಗೆಡಿಸಿಕೊಳ್ಳುವ ಬದಲು ತಿನ್ನುವ ಆಹಾರದ ಮೇಲೆ ನಿಗಾ ಇಡುವುದು ಮತ್ತು ವ್ಯಾಯಾಮವನ್ನು ನಿಯಮಿತವಾಗಿ ಮಾಡುವುದು ಒಳ್ಳೆಯದು.

ಯಾವುದೂ ಅತಿ ಬೇಡ

ಒಂದೊಮ್ಮೆ ಆಲ್ಕೋಹಾಲ್‌ ಸಮಸ್ಯೆಯಿಂದ ಈ ಯಕೃತ್‌ ಕೊಬ್ಬು ಬಂದಿದ್ದಲ್ಲ ಎಂದಾದರೆ ಆಹಾರದ ಬಗ್ಗೆ ಗಮನ ನೀಡಿ. ಸಂಸ್ಕರಿಸಿದ ಆಹಾರವನ್ನು ಸಂಪೂರ್ಣ ದೂರ ಮಾಡಿ. ಅತಿಯಾದ ಖಾರ, ಜಿಡ್ಡು ಬೇಡ. ಆರೋಗ್ಯಕರವಾದ್ದನ್ನು ತಿನ್ನುವ ಭರದಲ್ಲಿ ಸಿಕ್ಕಾಪಟ್ಟೆ ಹಣ್ಣು ತಿನ್ನಬೇಡಿ. ದಿನಕ್ಕೆ ಕೇಜಿಗಟ್ಟಲೆ ಹಣ್ಣು ತಿನ್ನುವ ಬದಲು, ಹಣ್ಣ-ತರಕಾರಿ-ಸೊಪ್ಪು-ಮೊಳಕೆಕಾಳುಗಳ ಮಿಶ್ರಣ ಒಳ್ಳೆಯ ಫಲಿತಾಂಶ ನೀಡೀತು. ಇಡೀ ಧಾನ್ಯಗಳು ಆಹಾರವಾಗಲಿ. ಮೀನು, ಬೀಜಗಳು, ಬೆಣ್ಣೆ ಹಣ್ಣಿನಂಥ ಆರೋಗ್ಯಕರ ಕೊಬ್ಬು ಬೇಕು.

Weight Loss
Weight Loss

ವ್ಯಾಯಾಮ

ಜಡ ಜೀವನಶೈಲಿಯು ಎಂಥವರಿಗಾದರೂ ರೋಗ ಅಂಟಿಸುತ್ತದೆ. ಹಾಗಾಗಿ ವಾರಕ್ಕೆ ಆರು ದಿನ, ಪ್ರತಿದಿನ ೩೦ ನಿಮಿಷಗಳಂತೆ ವ್ಯಾಯಾಮ ಮಾಡುವುದನ್ನು ತಪ್ಪಿಸಬೇಡಿ. ಇದಕ್ಕಿಂತ ಹೆಚ್ಚಿನ ವ್ಯಾಯಾಮ ಮಾಡುತ್ತೀರಿ ಎಂದಾದರೆ ಒಳ್ಳೆಯದೆ. ಇದಕ್ಕಾಗಿ ಜಿಮ್‌ಗೇ ಹೋಗಬೇಕೆಂದಿಲ್ಲ. ನಿಮ್ಮಿಷ್ಟದ ಯಾವುದಾದರೂ ಮಧ್ಯಮಗತಿಯ ವ್ಯಾಯಾಮ ಆದೀತು. ಜೋರು ನಡಿಗೆ, ಯೋಗ, ಸೈಕಲ್‌ ಹೊಡೆಯುವುದು, ಏರೋಬಿಕ್ಸ್‌, ಪಿಲಾಟೆ, ಜುಂಬಾ, ಈಜು, ಯಾವುದಾದರೂ ಆಟ ಇತ್ಯಾದಿ ರೂಢಿಸಿಕೊಳ್ಳಿ.

ಇದನ್ನೂ ಓದಿ: Home Remedies for Dengue: ಡೆಂಗ್ಯು ಜ್ವರ ಬಂದರೂ ಪ್ಲೇಟ್‌ಲೆಟ್‌ ಸಂಖ್ಯೆ ಕುಸಿಯದಿರಲು ಯಾವ ಆಹಾರ ಸೇವಿಸಬೇಕು?

ನಿಯಂತ್ರಣ ಬೇಕು

ಮಧುಮೇಹ ಮತ್ತು ಕೊಲೆಸ್ಟ್ರಾಲ್‌ ಮೇಲೆ ನಿಯಂತ್ರಣ ಸಾಧಿಸುವುದು ಅಗತ್ಯ. ಹಣ್ಣುಗಳಲ್ಲಿನ ನೈಸರ್ಗಿಕ ಸಕ್ಕರೆಯಂಶವನ್ನು ಬಿಟ್ಟರೆ, ಬೇರಾವುದೇ ಹೆಚ್ಚುವರಿ ಸಕ್ಕರೆಯನ್ನು ಬಿಟ್ಹಾಕಿ. ಬೇಕ್‌ ಮಾಡಿದ ತಿನಿಸುಗಳು, ಕ್ಯಾಂಡಿ-ಚಾಕಲೇಟ್‌, ಐಸ್‌ಕ್ರೀಂ, ಎನರ್ಜಿ ಡ್ರಿಂಕ್‌, ಹಣ್ಣಿನ ಜ್ಯೂಸ್‌ಗಳು, ಸಕ್ಕರೆಭರಿತ ಯೋಗರ್ಟ್‌ಗಳು, ಸೋಡಾ, ಜಿಲೇಬಿ-ಕೇಸರಿಭಾತ್‌ನಂಥವು- ಎಲ್ಲವನ್ನೂ ಕಡಿಮೆ ಮಾಡಿ. ಯಾವುದೆಲ್ಲ ಸಾಧ್ಯವೋ ಅವುಗಳನ್ನು ಬಿಟ್ಟುಬಿಡಿ. ಹಾಗೆಯೇ ಕೊಬ್ಬಿನಂಶವನ್ನು ಕಡಿಮೆ ಮಾಡುವ ಮೂಲಕ ಕೊಲೆಸ್ಟ್ರಾಲ್‌ ಇಳಿಸಿ. ಇದಕ್ಕೆ ಆಹಾರದಲ್ಲಿ ನಾರಿನಂಶವನ್ನು ಹೆಚ್ಚಿಸುವುದು ಸಹ ಪರಿಣಾಮಕಾರಿ ಫಲಿತಾಂಶವನ್ನು ನೀಡುತ್ತದೆ.

Continue Reading

ಆರೋಗ್ಯ

Gastric Problems In Monsoon: ಮಳೆಗಾಲದಲ್ಲಿ ಕಾಡುವ ಹೊಟ್ಟೆಯುಬ್ಬರದ ಸಮಸ್ಯೆಗೆ ನಮ್ಮಲ್ಲೇ ಇದೆ ಸಿಂಪಲ್‌ ಪರಿಹಾರ!

 gastric problems in monsoon: ಗ್ಯಾಸ್‌, ಹೊಟ್ಟೆಯುಬ್ಬರ ಇತ್ಯಾದಿಗಳು ಮಳೆಗಾಲದಲ್ಲಿ ಸಾಮಾನ್ಯ. ಮಳೆಗಾಲದಲ್ಲಿ ಕಾಡುವ ಹೊಟ್ಟೆಯ ಸಮಸ್ಯೆಗಳಿಗೆ ನಮ್ಮ ಅಡುಗೆ ಮನೆಯಲ್ಲೇ ಇರುವ ಯಾವೆಲ್ಲ ಪದಾರ್ಥಗಳಲ್ಲಿ ಸಮರ್ಥವಾಗಿ ಪರಿಹಾರ ದೊರೆಯುತ್ತದೆ ಎಂಬ ಬಗ್ಗೆ ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

gastric
Koo

ಮಳೆಗಾಲ ಬಂದರೆ ನಾವು ತಿನ್ನುವ ಪ್ರಮಾಣವೂ ಏರುತ್ತದೆ. ಬಗೆಗಳೂ ಏರುತ್ತವೆ. ಮಳೆಗೆ ಹಿತವಾಗಿ ಬಗೆಬಗೆಯ ತಿನಿಸುಗಳನ್ನು ತಿನ್ನುವ ಜೊತೆಗೆ ಮಳೆಗಾಲದಲ್ಲಿ ವಾತಾವರಣದಲ್ಲಿ ಹೆಚ್ಚಿರುವ ತೇವಾಂಶದಿಂದಾಗಿ ಹೊಟ್ಟೆ ಕೆಡುವ ಸಂಭವವೂ ಹೆಚ್ಚು. ಗ್ಯಾಸ್‌, ಹೊಟ್ಟೆಯುಬ್ಬರ ಇತ್ಯಾದಿಗಳು ಮಳೆಗಾಲದಲ್ಲಿ ಸಾಮಾನ್ಯ. ಬನ್ನಿ, ಮಳೆಗಾಲದಲ್ಲಿ ಕಾಡುವ ಹೊಟ್ಟೆಯ ಸಮಸ್ಯೆಗಳಿಗೆ ನಮ್ಮ ಅಡುಗೆ ಮನೆಯಲ್ಲೇ ಇರುವ ಯಾವೆಲ್ಲ ಪದಾರ್ಥಗಳಲ್ಲಿ ಸಮರ್ಥವಾಗಿ ಪರಿಹಾರ ದೊರೆಯುತ್ತದೆ ಎಂಬುದನ್ನು (gastric problems in monsoon) ನೋಡೋಣ.

ginger

ಶುಂಠಿ

ಹೊಟ್ಟೆಗೆ ಬಹಳ ಒಳ್ಳೆಯದು ಈ ಶುಂಠಿ. ಶುಂಠಿ ಚಹಾ ಮಾಡಿ ಕುಡಿದರೆ ಸಾಕು, ಅನೇಕ ಜೀರ್ಣಕ್ರಿಯೆಯ ಸಮಸ್ಯೆಗಳೂ ಮಂಗ ಮಾಯ. ಗ್ಯಾಸ್‌ ಮತ್ತಿತರ ಸಮಸ್ಯೆಗಳಿಗೂ ಇದು ರಾಮ ಬಾಣ. ಹೊಟ್ಟೆಯಲ್ಲಿ ಏನೇ ತಳಮಳವಾದರೂ, ಶುಂಠೀ ಚಹಾ ಮಾಡಿ ಕುಡಿದರೆ ಪರಿಹಾರ ಪಡೆಯಬಹುದು.

Fennel Seed

ಬಡೇಸೊಂಪು

ಚೆನ್ನಾಗಿ ಉಂಡ ಮೇಲೆ ಚಮಚದಲ್ಲಿ ಬಡೇಸೋಂಪು ಬಾಯಿಗೆ ಹಾಕಿಕೊಳ್ಳುವುದು ರೂಢಿ. ರೆಸ್ಟೊರೆಂಟುಗಳಲ್ಲಿ ಈ ಪದ್ಧತಿ ಅನುಸರಿಸಿ ಅನೇಕರಿಗೆ ಗೊತ್ತಿದೆ. ಇದು ಕೇವಲ ಬಾಯಿಯ ಸುಗಂಧಕ್ಕಾಗಿ ಎಂದುಕೊಂಡರೆ ಅದು ತಪ್ಪು. ಇದು ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ. ಗ್ಯಾಸ್‌ನಿಂದ ಹೊಟ್ಟೆ ಉಬ್ಬರಿಸಿದಂತಾಗುವ ಸಮಸ್ಯೆಗೆ ಹೇಳಿ ಮಾಡಿಸಿದ ಮದ್ದು.

mint
Asafoetida

ಪುದಿನ ಎಲೆ

ಈ ತಾಜಾ ಎಲೆಗಳು ಮೂಗಿಗೆ ಮಾತ್ರ ತಾಜಾ ಅಲ್ಲ. ಇದು ಹೊಟ್ಟೆಗೂ ಸಾಕಷ್ಟು ಒಳ್ಳೆಯದನ್ನೇ ಮಾಡುತ್ತದೆ. ಪುದಿನ ಹೊಟ್ಟೆಗೆ ತಂಗಾಳಿಯಂತೆ ಜೀವ ಕೊಟ್ಟು, ಹೊಟ್ಟೆಯನ್ನು ಪ್ರಫುಲ್ಲಗೊಳಿಸಿ, ಗ್ಯಾಸ್‌, ಹೊಟ್ಟೆಯುಬ್ಬರದ ಲಕ್ಷಣಗಳನ್ನು ದೂರ ಓಡಿಸುತ್ತದೆ.

Health Tips about curd

ಮೊಸರು

ಮೊಸರಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ಇದೆ. ಇದು ನಮ್ಮ ಹೊಟ್ಟೆಗೆ ಒಳ್ಳೆಯದನ್ನೇ ಮಾಡುತ್ತದೆ. ಮೊಸರು ಅಥವಾ ಮಜ್ಜಿಗೆಯ ಸೇವನೆ ಹೊಟ್ಟೆಯನ್ನು ತಂಪಾಗಿಡುತ್ತದೆ. ಗ್ಯಾಸ್‌, ಹೊಟ್ಟೆಯುಬ್ಬರ ಇತ್ಯಾದಿ ಸಮಸ್ಯೆಗಳನ್ನು ಹತ್ತಿರ ಸುಳಿಯಲೂ ಬಿಡದು.

Cucumber

ಸೌತೆಕಾಯಿ

ಸೌತೆಕಾಯಿ ನಮ್ಮ ದೇಹದಲ್ಲಿರುವ ಕಶ್ಮಲಗಳನ್ನು ದೂರ ಓಡಿಸಿ ದೇಹಕ್ಕೆ ಬೇಕಾದ ನೀರನ್ನು ಒದಗಿಸಿ ದೇಹವನ್ನು ತಂಪಾಗಿರಿಸುತ್ತದೆ. ಅಷ್ಟೇ ಅಲ್ಲ, ಇದು ಹೊಟ್ಟೆಯ್ಲಿದ್ದರೆ, ಹೊಟ್ಟೆಯುಬ್ಬರ, ಗ್ಯಾಸ್‌ ಇತ್ಯಾದಿಗಳ ಸಮಸ್ಯೆಯೇ ಬರದು.

Image Of Papaya Benefits

ಪಪ್ಪಾಯಿ

ಪಪ್ಪಾಯಿ ಜೀರ್ಣಕ್ರಿಯೆಗೆ ಬಹಳ ಒಳ್ಳೆಯ ಹಣ್ಣು. ಇದು ಆಹಾರವನ್ನು ಜೀರ್ಣವಾಗುವಂತೆ ನೋಡಿಕೊಳ್ಳುವ ಜೊತೆಗೆ ಹೊಟ್ಟೆಯುಬ್ಬರವನ್ನೂ ಹತ್ತಿರ ಸುಳಿಯಲು ಬಿಡುವುದಿಲ್ಲ.

Banana conditioner
Asafoetida

ಬಾಳೆಹಣ್ಣು

ಪೊಟಾಶಿಯಂ ಹೇರಳವಾಗಿರುವ ಈ ಹಣ್ಣು ನಮ್ಮ ದೇಹದಲ್ಲಿ ಸೋಡಿಯಂನ ಮಟ್ಟವನ್ನು ಕಾಪಾಡುವಲ್ಲಿ ನೆರವಾಗುತ್ತದೆ. ಆ ಮೂಲಕ ದೇಹದಲ್ಲಿ ಅತಿಯಾಗಿ ನೀರು ನಿಲ್ಲುವುದಿಲ್ಲ. ಹೊಟ್ಟೆಯುಬ್ಬರದಂತಹ ಸಮಸ್ಯೆಗಳೂ ಬರದು.

Watermelon

ಕಲ್ಲಂಗಡಿಹಣ್ಣು

ಪ್ರಕೃತಿಯೇ ನೀಡಿರುವ ಡಿಟಾಕ್ಸ್‌ ಡ್ರಿಂಕ್‌ ಈ ಕಲ್ಲಂಗಡಿಹಣ್ಣಿನ ರಸ. ತಾಜಾ ಅನುಭವ ನೀಡುವ ಈ ಹಣ್ಣೂ ಕೂಡಾ ಹೊಟ್ಟೆಯುಬ್ಬರ ಬರದಂತೆ ಕಾಪಾಡುತ್ತದೆ.

lemonade
Asafoetida

ನಿಂಬೆ ರಸ

ನಿಂಬೆಹಣ್ಣಿನ ರಸ ಹಿಂಡಿದ ಒಂದು ಲೋಟ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ಸಾಕಷ್ಟು ಸಮಸ್ಯೆಗಳನ್ನು ದೂರವಿಡಬಹುದು.

Asafoetida
Asafoetida

ಇಂಗು

ಭಾರತೀಯ ಮನೆಗಳಲ್ಲಿ ಹೊಟ್ಟೆಯುಬ್ಬರಕ್ಕೆ ಮನೆಮದ್ದಾಗಿರುವ ಇಂಗು ಹೊಟ್ಟೆಗೆ ಹಿತ. ಘಾಟು ಇದ್ದರೂ, ಒಂದು ಚಿಟಿಕೆ ಇಂಗನ್ನು ಬಿಸಿನೀರಿನಲ್ಲೋ, ಮಜ್ಜಿಗೆಯಲ್ಲೋ ಹಾಕಿ ಕುಡಿದರೆ ಹೊಟ್ಟೆ ನಿರಾಳವಾಗುತ್ತದೆ.

ಇದನ್ನೂ ಓದಿ: Health Article Kannada: ಸ್ವೀಟ್‌ ತಿನ್ನುವ ಚಪಲವೇ? ಆರೋಗ್ಯಕರವಾಗಿ ಸಿಹಿ ತಿನ್ನುವ ಉಪಾಯ ಇಲ್ಲಿದೆ!

ಈ ಎಲ್ಲಕ್ಕಿಂತ ಮುಖ್ಯ, ಮಳೆಗಾಲವಾದರೂ ಸರಿಯಾಗಿ ನೀರು ಕುಡಿಯುವುದು ಬಃಳ ಮುಖ್ಯ. ದೇಹ ಹೈಡ್ರೇಟ್‌ ಆಗಿದ್ದರೆ ಯಾವ ಸಮಸ್ಯೆಯೂ ಬಾರದು. ಮಳೆಗಾಲವೆಂದುಕೊಂಡು ನೀರು ಕುಡಿಯುವುದು ಕಡಿಮೆ ಮಾಡಿದಾಗ ಇಂತಹ ಹೊಟ್ಟೆಯ ಸಮಸ್ಯೆಗಳು ಬರುತ್ತವೆ. ಒಮ್ಮೆಲೇ ಹೊಟ್ಟೆ ಬಿರಿಯ ಉಣ್ಣಬೇಡಿ. ಹೊಟ್ಟೆಯಲ್ಲಿ ಇನ್ನೂ ಐದಾರು ತುತ್ತು ಹಿಡಿಸಬಹುದು ಎಂದನಿಸುವಾಗಲೇ ಊಟ ನಿಲ್ಲಿಸಿ. ಆಗಾಗ ಸ್ವಲ್ಪ ಸ್ವಲ್ಪವೇ ತಿನ್ನಿ. ಕಾರ್ಬೋನೇಟೆಡ್‌ ಡ್ರಿಂಕ್‌ಗಳನ್ನು ಕುಡಿಯಬೇಡಿ. ಹೆಚ್ಚು ಉಪ್ಪು ಹಾಕಿ ಅಡುಗೆ ಮಾಡಬೇಡಿ. ಊಟವನ್ನು ಚೆನ್ನಾಗಿ ಜಗಿದು ಉಣ್ಣಿ. ಮಳೆಗಾಲವೆಂದು ವ್ಯಾಯಾಮಕ್ಕೆ ಆಲಸ್ಯ ಮಾಡಬೇಡಿ. ಯೋಗ, ನಡಿಗೆ, ವ್ಯಾಯಾಮ ಯಾವುದೇ ಆಗಿರಲಿ, ಅದಕ್ಕೊಂದಿಷ್ಟು ಸಮಯ ಮೀಸಲಿಡಿ.

Continue Reading
Advertisement
Family Drama Film Review
ಸಿನಿಮಾ4 mins ago

Family Drama Film Review: ಹೊಸ ಅನುಭವ ನೀಡುವ ಫ್ಯಾಮಿಲಿ ಡ್ರಾಮಾ

Michel Phelps ರಾಜಮಾರ್ಗ ಅಂಕಣ
ಅಂಕಣ28 mins ago

ರಾಜಮಾರ್ಗ ಅಂಕಣ: 28 ಒಲಿಂಪಿಕ್ ಪದಕಗಳ ವಿಶ್ವದಾಖಲೆ- ಮೈಕೆಲ್ ಫೆಲ್ಪ್ಸ್

Aadhaar Update
ವಾಣಿಜ್ಯ42 mins ago

Aadhaar Update: ಹೊಸ ನಿಯಮ ಪ್ರಕಾರ ಆಧಾರ್ ವಿಳಾಸ ನವೀಕರಣಕ್ಕೆ ಯಾವ ದಾಖಲೆ ಬಳಸಬಹುದು?

Health Tips Kannada
ಆರೋಗ್ಯ57 mins ago

Health Tips Kannada: ಚಹಾ, ಕಾಫಿಯನ್ನು ಯಾವ ಸಮಯದಲ್ಲಿ ಕುಡಿಯಬಾರದು ಗೊತ್ತೇ?

Vastu Tips
ಧಾರ್ಮಿಕ2 hours ago

Vastu Tips: ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಬೇಕೆಂದರೆ ಅಡುಗೆ ಮನೆ ಹೀಗಿರಬೇಕು!

Remedies For Fatty Liver
ಆರೋಗ್ಯ2 hours ago

Remedies For Fatty Liver: ಲಿವರ್‌ನ ಕೊಬ್ಬನ್ನು ನೈಸರ್ಗಿಕವಾಗಿ ಹೀಗೆ ಕರಗಿಸಲು ಸಾಧ್ಯ!

Shravan Month 2024
ಧಾರ್ಮಿಕ2 hours ago

Shravan 2024: ಶ್ರಾವಣ ಮಾಸದಲ್ಲಿ ಯಾವ ಆಹಾರ ತಿನ್ನಬೇಕು, ಯಾವುದನ್ನು ತಿನ್ನಬಾರದು?

karnataka Weather Forecast
ಮಳೆ2 hours ago

Karnataka Weather : ಕರಾವಳಿ-ಮಲೆನಾಡಿನಲ್ಲಿ ಮುಂದುವರಿಯಲಿದೆ ಮಳೆ ಅಬ್ಬರ- ಇರಲಿ ಎಚ್ಚರ

dina bhavishya
ಭವಿಷ್ಯ2 hours ago

Dina Bhavishya : ಈ ರಾಶಿಯವರಿಗೆ ಮಾತೇ ಮೃತ್ಯು, ಮೌನಕ್ಕೆ ಶರಣಾಗಿ

Paris Olympics 2024
ಪ್ರಮುಖ ಸುದ್ದಿ7 hours ago

Paris Olympics 2024 : ಪ್ರಣಯ ನಗರಿ ಪ್ಯಾರಿಸ್​ನಲ್ಲಿ ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Ankola landslide
ಉತ್ತರ ಕನ್ನಡ13 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ14 hours ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ15 hours ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ16 hours ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ3 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ4 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

ಟ್ರೆಂಡಿಂಗ್‌