Rani Gaidinliu : 16ನೇ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೈಲು ಸೇರಿದ್ದ ಸೇನಾನಿ ರಾಣಿ ಗೈಡಿನ್ಲ್ಯೂ - Vistara News

ದೇಶ

Rani Gaidinliu : 16ನೇ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೈಲು ಸೇರಿದ್ದ ಸೇನಾನಿ ರಾಣಿ ಗೈಡಿನ್ಲ್ಯೂ

ನಾಗಾರಾಣಿ ಎಂದೇ ಪ್ರಸಿದ್ಧರಾಗಿದ್ದ ರಾಣಿ ಗೈಡಿನ್ಲ್ಯೂ (Rani Gaidinliu) ಅವರ ಜನ್ಮ ದಿನ ಇಂದು. ನಾಗಾ ಸಮಾಜವನ್ನು ಸಂಘಟಿಸಿ, ಮತಾಂತರದ ವಿರುದ್ಧ ಹೋರಾಟ ನಡೆಸಿದ ಈ ಸ್ವಾತಂತ್ರ್ಯ ಹೋರಾಟಗಾರ್ತಿಯ ಬದುಕಿನ ಬಗ್ಗೆ ತಿಳಿಯೋಣ.

VISTARANEWS.COM


on

Rani Gaidinliu
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೆಚ್ ಎಂ ರುಕ್ಮಿಣಿ ನಾಯಕ್
ಕೋಲ್ಕತಾದ ಇಂಡಿಯನ್‌ ಚೇಂಬರ್‌ ಆಫ್‌ ಕಾಮರ್ಸ್‌ನಲ್ಲಿ ಸ್ವಾಮಿ ವಿವೇಕಾನಂದ ಸೇವಾ ಪುರಸ್ಕಾರ ಸಮಾರಂಭ ಆಯೋಜನೆಗೊಂಡಿತ್ತು. ಈ ಪುರಸ್ಕಾರವನ್ನು ಲೋಕಮಾನ್ಯ ಸಮಾಜ ಸೇವಕಿಯರಿಗೆ ಮತ್ತು ಸ್ವಾತಂತ್ರ್ಯ ಸೇನಾನಿಗಳಿಗೆ ಕೊಡುವುದೆಂದು ತೀರ್ಮಾನಿಸಲಾಗಿತ್ತು. ಈ ಪುರಸ್ಕಾರವನ್ನು ಮೊಟ್ಟಮೊದಲಿಗೆ ಪಡೆದ ಹೆಗ್ಗಳಿಕೆ ನಾಗಾರಾಣಿ ಎಂದು ಪ್ರಸಿದ್ಧರಾಗಿದ್ದ ರಾಣಿ ಗೈಡಿನ್ಲ್ಯೂ (Rani Gaidinliu) ಅವರದ್ದು.

ಈಕೆ ಕೇವಲ ತಮ್ಮ ಹದಿಮೂರನೇಯ ವಯಸ್ಸಿನಿಂದಲೇ ಗುರು ಜಾದೋನಾಂಗರು ನಡೆಸಿದ ಸ್ವಾತಂತ್ರ್ಯ ಆಂದೋಲನದಲ್ಲಿ ಧುಮುಕಿದವರು. ಜನರಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯವಾಗಿ ಜಾಗೃತಿಯನ್ನು ಉಂಟು ಮಾಡುತ್ತಾ ಜೇಮಿ, ಲಿಯಾಂಗ್ಮಯ್ ಮತ್ತುರಾಂಗ್‌ಮೈ (ಇವು ಅಲ್ಲಿನ ನಾನಾ ಪಂಗಡಗಳು) ನಾಗಾಗಳನ್ನು ಜೆಲಿಯಾಂಗ್ರಾಂಗ್ ಹೆಸರಿನಲ್ಲಿ ಒಗ್ಗೂಡಿಸಿದರು. ತತ್ಮೂಲಕ ಒಂದು ಸಮರಸ ಸಮಾಜವನ್ನು ಕಟ್ಟಿ, ಜೀವನದ ಕೊನೆ ಉಸಿರಿನವರಿಗೂ ದೇಶ ಹಾಗೂ ಸಮಾಜಸೇವೆ ಮಾಡುತ್ತಲೇ ಇದ್ದವರು.

ಸ್ವಾಮಿ ವಿವೇಕಾನಂದ ಪುರಸ್ಕಾರ ಸಮಾರಂಭವನ್ನು ರಾಣಿ ಗೈಡಿನ್ಲ್ಯೂ ಭಾರತ ಮಾತೆ ಹಾಗೂ ಸ್ವಾಮಿ ವಿವೇಕಾನಂದರ ಪ್ರತಿಮೆ ಎದುರು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು. ಅಧ್ಯಕ್ಷೀಯ ಸ್ಥಾನದಿಂದ ಮಾತನಾಡಿದ ಸ್ವಾಮಿ ವಿಜಯಾನಂದರು ರಾಣಿಮಾರವರ ವ್ಯಕ್ತಿತ್ವವನ್ನು ಈ ರೀತಿ ವರ್ಣಿಸಿದರು. “ಭಾರತದ ಇತಿಹಾಸದಲ್ಲಿ ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಅನೇಕ ರಾಣಿಯರು ಕಂಡು ಬರುತ್ತಾರೆ. ರಾಣಿ ಲಕ್ಷ್ಮೀಬಾಯಿ, ರಾಣಿ ದುರ್ಗಾವತಿ, ದೇವಿ ಅಹಲ್ಯಾಬಾಯಿ ಹೋಳ್ಕರ್, ಕಣ್ಣಗಿ ಮುಂತಾದವರು ತಮ್ಮತ್ಯಾಗ ಹಾಗೂ ವೀರತ್ವದಿಂದ ಅವಿಸ್ಮರಣೀಯರಾಗಿದ್ದಾರೆ. ರಾಣಿ ಗೈಡಿನ್ಲ್ಯೂ ಕೂಡ ಬ್ರಿಟಿಷರಿಗೆ ನೀರು ಕುಡಿಸಿದವರು ಹಾಗೂ ಸ್ವಾತಂತ್ರ್ಯದ ನಂತರವೂ 1960 ರಿಂದ 1966 ರವರೆಗೆ ನಾಗಾ ಆತಂಕವಾದಿಗಳ ವಿರುದ್ಧ ಹಾಗೂ ಚರ್ಚಿನ ಸೇನೆಯೊಂದಿಗೆ ನಾಗಾಲ್ಯಾಂಡಿನಲ್ಲಿ ಏಕಾಂಗಿಯಾಗಿ ಹೋರಾಡಿದರು. ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಈಕೆಯ ಹೆಸರು ಸುವರ್ಣಾಕ್ಷರದಲ್ಲಿ ಬರೆಯಲುಅರ್ಹವಾಗಿದೆ” ಎಂದು ಮನಸಾರೆ ಶ್ಲಾಘಿಸಿದರು.

ಸ್ವಾಮಿ ವಿವೇಕಾನಂದ ಪುರಸ್ಕಾರ ಪಡೆದ ನಂತರ ರಾಣಿಮಾತಮ್ಮ ಹೃದಯದ ಭಾವನೆಯನ್ನು ಈ ರೀತಿ ಹಂಚಿಕೊಂಡರು. “ಈದೇಶದ ಸೇವೆ ಇಲ್ಲಿಯ ಧರ್ಮ ಸಂಸ್ಕೃತಿಯ ರಕ್ಷೆ ಮತ್ತು ವಿಕಾಸ ನನ್ನ ಜೀವನದಗುರಿಯಾಗಿದೆ. ನಾಗಾಲ್ಯಾಂಡಿನಲ್ಲಿ ಬೆರೆಳೆಣಿಕೆಯಷ್ಟು ಆತಂಕವಾದಿಗಳನ್ನು ಬಿಟ್ಟರೆ ಉಳಿದೆಲ್ಲ ನಾಗಾಗಳು ಭಾರತ ವರ್ಷವನ್ನು ತಮ್ಮ ದೇವರೆಂದು ತಿಳಿದಿರುವವರು ಹಾಗೂ ಒಪ್ಪಿರುವವರು. ಆದರೆ ನಾಗ ಆತಂಕವಾದಿಗಳ ಹಾಗೂ ಚರ್ಚಿನ ಒತ್ತಡ – ಬೆದರಿಕೆಯಿಂದಾಗಿ ಅವರು ತಮ್ಮದೇಶ ಪ್ರೇಮವನ್ನು ಬಹಿರಂಗಪಡಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ಮನೋಬಲ ನೀಡುವ ಅವಶ್ಯಕತೆ ಇದೆ. ಸಮಸ್ತ ಹಿಂದೂ ಸಮಾಜದ ಗಮನವನ್ನು ನಾಗಲ್ಯಾಂಡಿನ ಸಮಸ್ಯೆಯತ್ತ ಹೊರಳಿಸುವ ಅಗತ್ಯವಿದೆ” ಎನ್ನುತ್ತಾ ಜನಾಂಗದ ಬಗ್ಗೆ ತಮಗಿರುವ ಪ್ರೀತಿಯನ್ನು ವಿವರಿಸಿದರು.

ರಾಣಿಮಾರವರ ಸತತ ಪ್ರಯತ್ನದಿಂದಾಗಿ ನಾಗ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ದೇಶದ ನಾನಾ ಭಾಗಗಳಿಗೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸಲಾಯಿತು. ಇಂದು ಬೇರೆ ಬೇರೆ ಸಂಘಟನೆಗಳ ನೂರಾರು ವಿದ್ಯಾರ್ಥಿ ನಿಲಯಗಳಲ್ಲಿ ಸೂಮಾರು 2000 ವಿದ್ಯಾರ್ಥಿ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ನಾಗಾ ಸಮಾಜದಲ್ಲಿ ಯಾವುದೇ ಹೆಣ್ಣು ಮಕ್ಕಳು ಅವಿವಾಹಿತರಾಗಿ ಉಳಿದಿಲ್ಲ. ದೇಶ ಹಾಗೂ ಸಮಾಜ ಸೇವೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟ ಉದಾಹರಣೆಗಳಿಲ್ಲ. ರಾಣಿಮಾ ಇಂತಹ ಆದರ್ಶವನ್ನು ಸಮಾಜದ ಮುಂದೆತಮ್ಮ ಬದುಕಿನ ಮೂಲಕ ಮುಂದಿಟ್ಟರು. ಇವರಿಂದ ಪ್ರೇರಿತರಾಗಿ ಅನೇಕ ಮಹಿಳೆಯರು ಅವಿವಾಹಿತರಾಗುಳಿದು ದೇಶ ಸೇವೆಗೆ ಹಾಗೂ ಸಮಾಜ ಸೇವೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟರು.

ಹೀಗೆ ಆದರ್ಶ ಮಹಿಳೆಯಾಗಿ ಹೊರಹೊಮ್ಮಿದ ರಾಣಿ ಗೈಡಿನ್ಲ್ಯೂರವರು 1915 ಜನವರಿ 26ರಂದು ಮಣಿಪುರದ ರಾಂಗ್‌ಮೈಗ್ರಾಮದಲ್ಲಿ ಜನಿಸಿದರು. ಇವರತಂದೆ ಲೋಥೋನಾಂಗ ತಾಯಿ ಕೆಲುವತಲಿನ್ಲಿಯೂರ. ತಂದೆ ಸಾಮಾಜಿಕ ವ್ಯವಸ್ಥೆಯಲ್ಲಿ ಆಡಳಿತ ಜವಾಬ್ದಾರಿಯನ್ನು ನಿರ್ವಹಿಸುವ ಪಾಮಯ ಜನಾಂಗದ ಪ್ರಮುಖರಾಗಿದ್ದರು. ಹೀಗೆ ರಾಣಿಮಾರಿಗೆ ನಾಯಕತ್ವಗುಣ, ವಂಶದ ಬಳುವಳಿಯಾಗಿರಬಹುದು. ತಂದೆ ತಾಯಿ ಹಾಗೂ ಗ್ರಾಮಸ್ಥರು ಈ ಮಗುವನ್ನು ದೈವದತ್ತವೆಂದು ಭಾವಿಸಿದರು. ಮುಂದೆ ಹೀಗೆ ಆಧ್ಯಾತ್ಮಿಕ ತಳಹದಿಯಲ್ಲಿ ಹೋರಾಟ ನಡೆಸಿದರು.

ಹುಟ್ಟಿನಿಂದಲೇ ಸದೃಢ ಹಾಗೂ ಸುಂದರ ಬಾಲಕಿ. ಶಾಂತ ಸ್ವಭಾವದವಳು. ಚಿಕ್ಕಂದಿನಿಂದ ಧ್ಯಾನಸ್ಥಳಾಗುತ್ತಿದ್ದಳು. ಬೆಳೆಯುತ್ತಾ ಬೆಳೆಯುತ್ತಾ ಸ್ವತಂತ್ರಚಿಂತನೆ, ಜಿಜ್ಞಾಸೆ, ಅಂತರ್ಮುಖತೆ ಇವರ ಪ್ರವೃತ್ತಿಯಾಯಿತು. ಇಂತಹ ಅಪೂರ್ವ ವ್ಯಕ್ತಿತ್ವದ ಈಕೆಯನ್ನು ಜನ ದುರ್ಗೆಯ ಅವತಾರವೆಂದು ನಂಬಿದ್ದರು.

ಸನಾತನ ಧರ್ಮದ ಪ್ರಚಾರ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಂಡಿದ್ದ ಜಾತೋನಾಂಗರನ್ನು ತಮ್ಮ ಗುರುವಾಗಿ ಸ್ವೀಕರಿಸಿದರು. ಅವರ ಪ್ರಭಾವದಿಂದ ಭೌತಿಕ ಸುಖ ಹಾಗೂ ಪ್ರಾಪಂಚಿಕ ಆಕರ್ಷಣೆಯಿಂದ ದೂರ ಸರಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದರು.

ಕೇವಲ ತಮ್ಮ ಹದಿನಾರನೇ ವಯಸ್ಸಿನಲ್ಲಿ ನಾಯಕಿಯಾಗಿ ಜನರನ್ನು ಉತ್ತಮ ಮಾರ್ಗದಲ್ಲಿ ನಡೆಸತೊಡಗಿದರು. ಯುವಜನಾಂಗಕ್ಕೆ ಸಂದೇಶ ನೀಡುತ್ತಾ “ನಾವು ನಾಗಾಗಳು ಯಾವತ್ತೂ ಸ್ವತಂತ್ರರಾಗಿಯೇ ಇರುವೆವು. ನಾವೆಂದಿಗೂ ಯಾರದಾಸ್ಯವನ್ನೂ ಒಪ್ಪಿಕೊಂಡವರಲ್ಲ ಅಂದ ಮೇಲೆ ಎಲ್ಲಿಂದಲೋ ಬಂದ ಬ್ರಿಟಿಷರಿಗೆ ನಮ್ಮ ಮೇಲೆ ಆಡಳಿತ ನಡೆಸಲು ಯಾವ ಅಧಿಕಾರವಿದೆ? ಅವರ ದಬ್ಬಾಳಿಕೆಯನ್ನು ನಾವು ಸಹಿಸಬಾರದು. ಅವರಿಗೆ ತೆರಿಗೆಕೊಡಬಾರದು. ಅವರ ಕಾನೂನುಗಳನ್ನು ಪಾಲಿಸಬಾರದು. ಅವರ ಯಾವುದೇ ಕೆಲಸದಲ್ಲಿ ಕಾರ್ಮಿಕರಾಗಿ ದುಡಿಯಬೇಕಾಗಿಲ್ಲ. ಕೂಲಿ ಆಳುಗಳಂತೆ ಅವರ ಸರಕುಗಳನ್ನು ಹೊರುವುದು ಸರಿಯಲ್ಲ. ಒಟ್ಟಿನಲ್ಲಿ ಅವರನ್ನು ನಮ್ಮ ನಮ್ಮ ಊರುಗಳಲ್ಲಿ ಪ್ರವೇಶಿಸಲು ಬಿಡಕೂಡದು” ಎಂದು ಭವಿಷ್ಯದದಾರಿಯನ್ನು ತೋರಿಸಿದರು, ಸ್ಫೂರ್ತಿತುಂಬಿದರು.

ಬ್ರಿಟಿಷ್ ಸರ್ಕಾರ ಮೋಸದಿಂದ ರಾಣಿಮಾರ ಗುರುಗಳಾದ ಜಾದೋನಾಂಗರನ್ನು ಸೆರಿ ಹಿಡಿಯಿತು. ಜೈಲಿನಲ್ಲಿ ಅವರನ್ನು ಭೇಟಿ ಮಾಡಿದರಾಣಿ ಮಾತಮ್ಮ ಭಾಷೆಯಲ್ಲಿ– “ಸ್ವಾತಂತ್ರ್ಯ ನಮ್ಮ ಜನ್ಮ ಸಿದ್ಧ ಹಕ್ಕು. ಬ್ರಿಟಿಷರ ಕುರುಡು ಆಡಳಿತ ಕೊನೆಗೊಳಿಸಿ ಅವರ ಮಿಷಿನರಿಗಳಿಂದ ನಮ್ಮ ಧರ್ಮವನ್ನು ರಕ್ಷಿಸುವುದು ನನ್ನ ಜೀವನದ ಗುರಿಯಾಗಿದೆ. ತಾವು ಬಂಧನದಲ್ಲಿದ್ದರೂ ನಾವು ಈ ಹೋರಾಟ ಮುಂದುವರಿಸುತ್ತೇವೆ. ನಿಮ್ಮನ್ನು ಮೋಸದಿಂದ ಬಂಧಿಸಿದ ಬ್ರಿಟಿಷರು ಇದರ ದಂಡತೆರಬೇಕಾಗುವುದು. ತಾವು ಭಾರತ ಮಾತೆಯ ಸುಪುತ್ರರು. ದೇಶ ತಮ್ಮನ್ನು ಗೌರವಿಸುವುದು”. ಒಬ್ಬ ಶಿಷ್ಯೆ ತನ್ನ ಗುರುವಿಗೆ ಸಲ್ಲಿಸಬಹುದಾದ ಅತ್ಯಂತ ದೊಡ್ಡ ಕಾಣಿಕೆ ಇದಲ್ಲವೇ?!

Rani Gaidinliu
ರಾಣಿ ಗೈಡಿನ್ಲ್ಯೂ

ಇಷ್ಟರಲ್ಲಿ ಬ್ರಿಟಿಷ್ ಸರ್ಕಾರಕ್ಕೆ ರಾಣಿ ಗೈಡಿನ್ಲ್ಯೂರವರ ಶಕ್ತಿ ಸಾಮರ್ಥ್ಯದ ಅರಿವಾಗಿತ್ತು. ಆಕೆಯನ್ನು ಬಂಧಿಸುವ ಪ್ರಯತ್ನ ನಡೆದಿತ್ತು. ಈ ವಿಷಯ ತಿಳಿದ ರಾಣಿ ಮಾತಮ್ಮಯುದ್ಧ ಪರಿಣಿತರೊಂದಿಗೆ ಮಣಿಪುರದ ರಾಜಸ್ಥಾನದಲ್ಲಿ ಭೂಗತರಾಗಿದ್ದುಕೊಂಡು ಹೋರಾಟ ನಡೆಸಿದರು. ಕೇವಲ ಏಳು ತಿಂಗಳಲ್ಲಿ ಬ್ರಿಟಿಷ್ ಸರ್ಕಾರವನ್ನು ನಡುಗಿಸಿದರು. ಗುರಿಯೆಡೆಗೆ ದೃಷ್ಟಿ ಇದ್ದವರಿಗೆ ಹಸಿವು ನಿದ್ದೆ ಪರಿಶ್ರಮಯಾವುದರ ಪರಿವಿಯೂ ಇರಲಿಲ್ಲ. ಇದು ಅವರ ಆಧ್ಯಾತ್ಮಿಕ ಒಲವೂ ಇದ್ದಿರಬಹುದು.

ಬ್ರಿಟಿಷ್ ಸರ್ಕಾರ ಆಕೆಯನ್ನು ಬಂಧಿಸಲು ಸತತ ಪ್ರಯತ್ನ ಹಾಕಿತು. ಆಕೆಯನ್ನು ಹಿಡಿದುಕೊಟ್ಟವರಿಗೆ ರೂ.200, ರೂ.500 ರವರೆಗೆ ಬಹುಮಾನ ಘೋಷಿಸಿದರು. ಆ ಗ್ರಾಮದ ಹತ್ತು ವರ್ಷದ ಕಂದಾಯವನ್ನು ಮನ್ನಾ ಮಾಡಲಾಗುವುದು ಎಂದು ಸಾರಿದರು. ಜನರಿಗೆ ಕಿರುಕುಳ ನೀಡಲು ಆರಂಭಿಸಿದರು. ಇದನ್ನು ತಪ್ಪಿಸಲುತನ್ನ ಜನರ ಪ್ರಾಣರಕ್ಷಣೆಗಾಗಿ ಆಕೆ ಬ್ರಿಟಿಷರಿಗೆ ಸೆರೆಯಾದಳು. ಸರ್ಕಾರ ವಿಚಾರಣೆಯ ನಾಟಕ ವಾಡಿ ಅಜೀವಪರ್ಯಂತ ಕಾರಾಗ್ರಹ ಶಿಕ್ಷೆ ವಿಧಿಸಿತು. 17 ವರ್ಷದ ಸಿಂಹಿಣಿಯನ್ನು ಪಂಜರದಲ್ಲಿ ಕೂಡಿಡಲಾಯಿತು.

ರಾಣಿ ಗೈಡಿನ್ಲ್ಯೂರವ ಸೆರೆಸಿಕ್ಕ ನಂತರ ವಿಹರಕ್ಕಾ ಆಂದೋಲನವು ಕ್ರಮೇಣ ದುರ್ಬಲವಾಯಿತು. ಬ್ರಿಟೀಷರು ಅಸ್ಸಾಂ, ನಾಗಾ ಹಿಲ್ಸ್ ಹಾಗೂ ಮಣಿಪುರಗಳಲ್ಲಿ ವಿಕಾಸ ಕಾರ್ಯವನ್ನು ತಡೆಹಿಡಿದರು. ಅಲ್ಲಿಯಜನ ಬಡತನ, ಅಜ್ಞಾನ, ದೌರ್ಬಲ್ಯದಿಂದ ನರಳುವಂತೆ ಮಾಡಿದರು. ಎಲ್ಲಿಯವರೆಗೆ ಆ ಜನಾಂಗ ಮತಾಂತರಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅವರ ಏಳಿಗೆ ಸಾಧ್ಯವಿಲ್ಲ ಎಂಬ ಅಭಿಪ್ರಾಯ ಮೂಡಿಸಲಾಯಿತು.

ದೇಶಕ್ಕೆ ಸ್ವಾತಂತ್ರ್ಯ ದೊರೆತ ದಿನ 1947 ಆಗಸ್ಟ್ 15 ರಂದು ರಾಣಿತಮ್ಮ 15 ವರ್ಷಗಳ ಬಂಧನದಿಂದ ಮುಕ್ತರಾದರು. ಆಗ ಅವರಿಗೆ ಕೇವಲ 37 ವರ್ಷ. ಜೈಲಿನಿಂದ ಬಿಡುಗಡೆಯಾದರೂ ಅವರಿಗೆ ಮಣಿಪುರ ನಾಗಾಲ್ಯಾಂಡ್ ಮೊದಲಾದಕಡೆ ಪ್ರವೇಶಕ್ಕೆ ನಿರ್ಬಂಧ ಹೇರಲಾಯಿತು. ಇದರಿಂದ ಆಕೆಗೆ ಬಹಳ ನೋವಾಯಿತು. ತನ್ನ ತಮ್ಮನ ಮನೆಯಲ್ಲಿ ಗೃಹ ಬಂಧಿಯಾಗಿ ಇರಲು ಸರ್ಕಾರ ಅನುಮತಿ ನೀಡಿತು. ಆದರೆ ಸಾಮಾನ್ಯ ಜನರು ಆಕೆಯನ್ನು ದೇವತೆ ಎಂಬಂತೆ ಗೌರವಿಸಿದರು.

ರಾಷ್ಟಾçದ್ಯಂತ ಹಿಂದೂ ಸಂಘಟನೆಗಳು ಆಕೆಯನ್ನು ಗೌರವಿಸಿ ಆಕೆಯ ಬೆನ್ನೆಲುಬಾಗಿ ನಿಂತವು. ಬಿಂದುವಿನಲ್ಲಿ 1985 ಜನವರಿಯಲ್ಲಿ ನಡೆದ ಪ್ರಥಮ ರಾಷ್ಟ್ರೀಯ ವನವಾಸಿ ಮಹಾಸಮ್ಮೇಳನದಲ್ಲಿ ರಾಣಿ ಗೈಡಿನ್ಲ್ಯೂ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. 2ಸಾವಿರಕ್ಕೂ ಹೆಚ್ಚು ಮಾತೆಯರು ದೇಶದ ಎಲ್ಲಾ ಕಡೆಯಿಂದ ಭಾಗವಹಿಸಿದರು. ರಾಣಿಮಾ ಮಹಾ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿರಾಷ್ಟ್ರ ನಿರ್ಮಾಣದಲ್ಲಿ ಹೆಣ್ಣು ಮಕ್ಕಳು ಭಾಗವಹಿಸುವಂತೆ ಕರೆ ನೀಡಿದರು. ಇದೇ ಸಂದರ್ಭದಲ್ಲಿಜನವರಿ 26ರಂದು ರಾಣಿಮಾರನ್ನುಒಂದು ಶೃಂಗರಿಸಿದ ರಥದಲ್ಲಿ ಕುಳ್ಳಿರಿಸಲಾಯಿತು. ಆಕೆಯ ಅಕ್ಕಪಕ್ಕದಲ್ಲಿ ಇಬ್ಬರು ಯುವತಿಯರು ರೈಫಲ್ ಹಿಡಿದು ನಿಂತಿದ್ದರು. ಶೋಭಾಯಾತ್ರೆಯ ಮುಂದುಗಡೆ 24 ಜನ ಮಹಿಳೆಯರು ಮೋಟರ್ ಸೈಕಲ್ ಸವಾರಿ ಮಾಡಿ ಹೆಣ್ಣು ಮಕ್ಕಳ ಶಕ್ತಿಯನ್ನು ಪ್ರದರ್ಶಿಸಿ ರಾಣಿ ಮಾಗೇಗೌರವ ಸಮರ್ಪಿಸಿದರು.

ರಾಣಿಮಾರ ಶೌರ್ಯ, ನಿಷ್ಠೆ, ಧೈರ್ಯ, ಸಾಹಸದ ಕಥೆಗಳನ್ನು ಹಿರಿಯರು ತಮ್ಮ ಮನೆಯ ಮಕ್ಕಳಿಗೆ ಹೇಳಿ ಸ್ಫೂರ್ತಿತುಂಬಿದರು. ರಾಣಿಮಾರ ಬಗ್ಗೆ ಅವರಿಗೆಲ್ಲ ಅಪಾರ ಗೌರವ ಭಕ್ತಿ ಇತ್ತು ಏಕೆಂದರೆ ರಾಣಿಮಾ ಭಾರತೀಯತೆಯ ಪ್ರತೀಕವಾಗಿದ್ದರು.

ರಾಣಿ ಗೈಡಿನ್ಲ್ಯೂರವರ ಹೋರಾಟದ ಬದುಕನ್ನು ಶ್ಲಾಘಿಸುತ್ತಾ ನಾನಾ ಪ್ರಶಸ್ತಿಗಳು ಅರಸಿ ಬಂದವು. ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಂಡವು. ಅವುಗಳಲ್ಲಿ ಮುಖ್ಯವಾದವು ಸ್ವಾತಂತ್ರ್ಯ ಸೇನಾನಿ ತಾಮ್ರ ಪತ್ರ ಪುರಸ್ಕಾರ 1972, ಆಗಸ್ಟ್ ಸ್ವಾತಂತ್ರ್ಯದ ರಜತಮಹೋತ್ಸವದ ಸಂದರ್ಭದಲ್ಲಿ ಸಂದ ಪದ್ಮಭೂಷಣ (1972 ಜನವರಿ 26), ಭಗವಾನ್ ಬಿರಸಾ ಮುಂಡ ಪುರಸ್ಕಾರ-1996(ಮರಣದ ನಂತರ), ಒಂದು ರೂಪಾಯಿ ಬೆಲೆಯ ಅಂಚೆ ಚೀಟಿಯ ಬಿಡುಗಡೆ ಪ್ರಮುಖವಾದವು. ಭಾರತ ಸರ್ಕಾರ ಭಾರತೀಯ ಇತಿಹಾಸದ ಐದು ಪ್ರಮುಖ ನಾರಿಯರ ಸಮ್ಮಾನದಲ್ಲಿ ಸ್ತ್ರೀಶಕ್ತಿ ಪುರಸ್ಕಾರ ಪ್ರಾರಂಭ ಮಾಡಿದ್ದು ಅವರಲ್ಲಿ ರಾಣಿ ರಾಣಿ ಗೈಡಿನ್ಲ್ಯೂ ಸಹ ಒಬ್ಬರು. ಉಳಿದವರು ಅಹಲ್ಯ ಬಾಯಿ ಹೊಳ್ಕರ್, ಕಣ್ಣಗಿ, ಜೀಜಾಬಾಯಿ.

ಸ್ವಾತಂತ್ರ್ಯದ ನಂತರವೂ ದೇಶದ ಅಖಂಡತೆ ಹಾಗೂ ಸಾರ್ವಭೌಮತ್ವದ ಸುರಕ್ಷೆಗಾಗಿ ಜೀವಮಾನವಿಡೀ ಹೋರಾಡಿದ ಮಹಾನಾಯಕಿ ರಾಣಿ ಗೈಡಿನ್ಲ್ಯೂ 1993 ಫೆಬ್ರವರಿ 17ರಂದು ದೈವಾಧೀನರಾದರು. ಆದರೂ ಭಾರತದೇಶದ ಲಕ್ಷಾಂತರ ಪ್ರಾಥಃಸ್ಮರಣೀಯರಲ್ಲಿ ರಾಣಿ ಗೈಡಿನ್ಲ್ಯೂ ಸಹ ಒಬ್ಬರೆಂದು ಹೆಮ್ಮೆ ಎನಿಸುತ್ತದೆ. ಇಂಥವರ ತ್ಯಾಗ ಬಲಿದಾನಗಳಿಂದ ವನವಾಸಿಗಳ ಇಂದಿನ ಬದುಕು ಸುಂದರಗೊಳ್ಳುತ್ತಿದೆ. ಇಂತಹವರ ಸಂತತಿ ದಿನೇ ದಿನೇ ವೃದ್ಧಿಸಲಿ ಎಂಬುದೇ ನಮ್ಮ ಆಶಯ.

ಲೇಖಕರು ಸಂಚಾಲಕರು, ಶ್ರೀ ಅನ್ನಪೂರ್ಣೇಶ್ವರಿ ಮುಷ್ಟಿ ಅಕ್ಕಿ ಯೋಜನೆ, ಶಿವಮೊಗ್ಗ

ಇದನ್ನೂ ಓದಿ : Republic Day 2023 President Speech: ಜಿ20 ಪ್ರೆಸಿಡೆನ್ಸಿಯು ಪ್ರಜಾಪ್ರಭುತ್ವ, ಬಹುತ್ವ ಉತ್ತೇಜಿಸುವ ಅವಕಾಶ ಎಂದು ಬಣ್ಣಿಸಿದ ರಾಷ್ಟ್ರಪತಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

Modi Meditation: ಮೋದಿ ಮಾಡ್ತಿರೋದು ‘ಧ್ಯಾನ’ ಅಲ್ಲ ‘ಡ್ರಾಮಾ’ ಎಂದ ಮಲ್ಲಿಕಾರ್ಜುನ ಖರ್ಗೆ!

Modi Meditation: ನರೇಂದ್ರ ಮೋದಿ ಅವರು ಕನ್ಯಾಕುಮಾರಿಯಲ್ಲಿ ಗುರುವಾರದಿಂದ (ಮೇ 30) 45 ಗಂಟೆಗಳವರೆಗೆ ಧ್ಯಾನ ಆರಂಭಿಸಿದ್ದಾರೆ. ನರೇಂದ್ರ ಮೋದಿ ಅವರು ಧ್ಯಾನ ಮಾಡುವ 45 ಗಂಟೆಯೂ ಆಹಾರ ಸೇವಿಸುವುದಿಲ್ಲ. ಹಣ್ಣುಗಳನ್ನು ಕೂಡ ಅವರು ಸೇವಿಸುವುದಿಲ್ಲ. ಎರಡು ದಿನವೂ ಅವರು ಪಾನೀಯ ಮಾತ್ರ ಸೇವಿಸಲಿದ್ದಾರೆ.

VISTARANEWS.COM


on

Modi Meditation
Koo

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿರುವ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಶಿಲೆ ಸ್ಮಾರಕದಲ್ಲಿ (Vivekananda Rock Memorial) 45 ಗಂಟೆಗಳ ಧ್ಯಾನ ಆರಂಭಿಸಿದ್ದಾರೆ. ಸುಮಾರು 131 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಧ್ಯಾನ ಮಂಟಪದಲ್ಲಿ ಮೋದಿ ಧ್ಯಾನದಲ್ಲಿ (Modi Meditation) ತೊಡಗಿಕೊಂಡಿದ್ದಾರೆ. ಇದರ ಬೆನ್ನಲ್ಲೇ, “ಮೋದಿ ಅವರು ಮನೆಯಲ್ಲಿಯೇ ಧ್ಯಾನ ಮಾಡಬಹುದಿತ್ತು. ಕನ್ಯಾಕುಮಾರಿಯಲ್ಲಿ ಧ್ಯಾನದ ಹೆಸರಿನಲ್ಲಿ ಡ್ರಾಮಾ ಮಾಡುವ ಅವಶ್ಯಕತೆ ಇರಲಿಲ್ಲ” ಎಂಬುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದ್ದಾರೆ.

ಇಂಡಿಯಾ ಟಿವಿಗೆ ನೀಡಿದ ಸಂದರ್ಶನದ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಧ್ಯಾನದ ಕುರಿತು ಮಾತನಾಡಿದರು. “ನರೇಂದ್ರ ಮೋದಿ ಅವರು ಮನೆಯಲ್ಲಿಯೇ 45 ಗಂಟೆ ಧ್ಯಾನ ಮಾಡಬಹುದಿತ್ತು. ಕನ್ಯಾಕುಮಾರಿಗೆ ಹೋಗುವ ಅನಿವಾರ್ಯತೆ ಏನಿತ್ತು? ನರೇಂದ್ರ ಮೋದಿ ಅವರ ಭದ್ರತೆಗೆ 10 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇಷ್ಟೊಂದು ಡ್ರಾಮಾ ಏಕೆ ಬೇಕಿತ್ತು? ಅವರು ಮನೆಯಲ್ಲಿಯೇ ಪೂಜೆ, ಧ್ಯಾನ ಮಾಡಬಹುದಿತ್ತು” ಎಂಬುದಾಗಿ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಹಾರ ಸೇವಿಸಲ್ಲ ಮೋದಿ

ನರೇಂದ್ರ ಮೋದಿ ಅವರು ಧ್ಯಾನ ಮಾಡುವ 45 ಗಂಟೆಯೂ ಆಹಾರ ಸೇವಿಸುವುದಿಲ್ಲ. ಹಣ್ಣುಗಳನ್ನು ಕೂಡ ಅವರು ಸೇವಿಸುವುದಿಲ್ಲ. ಎರಡು ದಿನವೂ ಅವರು ಪಾನೀಯ ಮಾತ್ರ ಸೇವಿಸಲಿದ್ದಾರೆ. ಜ್ಯೂಸ್‌, ಹಾಲಿನಲ್ಲಿಯೇ ಎರಡು ದಿನ ಕಳೆಯಲಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಜನವರಿಯಲ್ಲಿ ರಾಮಮಂದಿರದ ಲೋಕಾರ್ಪಣೆ ಹಿನ್ನೆಲೆಯಲ್ಲಿಯೂ ನರೇಂದ್ರ ಮೋದಿ ಅವರು 11 ದಿನಗಳ ಉಪವಾಸ ಕೈಗೊಂಡಿದ್ದರು. ಹಾಸಿಗೆಯ ಮೇಲೆ ಮಲಗುವುದನ್ನು ನಿಲ್ಲಿಸಿದ್ದರು. ನೆಲದ ಮೇಲೆ ಬಟ್ಟೆ ಹಾಸಿಕೊಂಡು ನಿದ್ದೆ ಮಾಡಿದ್ದರು. ಈ ಅವಧಿಯಲ್ಲಿ ಅವರು ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸಿದ್ದರು. ಹಣ್ಣುಗಳನ್ನು ಮಾತ್ರ ಸೇವಿಸಿದ್ದರು.

ನರೇಂದ್ರ ಮೋದಿ ಅವರು ಕೇರಳ ರಾಜಧಾನಿ ತಿರುವನಂತಪುರಂನಿಂದ ಕನ್ಯಾಕುಮಾರಿಗೆ ಆಗಮಿಸಿದರು. ಧ್ಯಾನ ಆರಂಭಿಸುವ ಮೊದಲು ಅವರು ಭಗವತಿ ಅಮ್ಮನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಇದಾದ ಬಳಿಕ ಮೋದಿ ಅವರು ಧ್ಯಾನ ಆರಂಭಿಸಿದರು. ಮೋದಿ ಅವರು ಎರಡು ದಿನ ಧ್ಯಾನ ಮಾಡುವ ಹಿನ್ನೆಲೆಯಲ್ಲಿ ಸ್ಮಾರಕದ ಸುತ್ತಲೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: Lok Sabha Election: ನಾಳೆ ಕೊನೆಯ ಹಂತದ ಮತದಾನ; ಮೋದಿ, ಕಂಗನಾ ಸೇರಿ ಹಲವರ ಭವಿಷ್ಯ ನಿರ್ಧಾರ

Continue Reading

ದೇಶ

Lok Sabha Election: ನಾಳೆ ಕೊನೆಯ ಹಂತದ ಮತದಾನ; ಮೋದಿ, ಕಂಗನಾ ಸೇರಿ ಹಲವರ ಭವಿಷ್ಯ ನಿರ್ಧಾರ

Lok Sabha Election: ಉತ್ತರ ಪ್ರದೇಶದ 13 ಲೋಕಸಭೆ ಕ್ಷೇತ್ರಗಳು, ಪಂಜಾಬ್‌ 13, ಪಶ್ಚಿಮ ಬಂಗಾಳ 9, ಬಿಹಾರ 8, ಒಡಿಶಾ 6, ಹಿಮಾಚಲ ಪ್ರದೇಶ 4, ಜಾರ್ಖಂಡ್‌ 3 ಹಾಗೂ ಚಂಡೀಗಢದ 1 ಲೋಕಸಭೆ ಕ್ಷೇತ್ರದಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ನಡೆಯಲಿದೆ. ಇದರೊಂದಿಗೆ ಲೋಕಸಭೆ ಚುನಾವಣೆ ಮುಗಿಯಲಿದ್ದು, ಜೂನ್‌ 4ರ ಫಲಿತಾಂಶದತ್ತ ಎಲ್ಲ ಚಿತ್ತ ವಾಲಿದೆ.

VISTARANEWS.COM


on

Lok Sabha Election
Koo

ನವದೆಹಲಿ: ದೇಶದ ಭವಿಷ್ಯವನ್ನು ನಿರ್ಧರಿಸುವ ಲೋಕಸಭೆ ಚುನಾವಣೆ (Lok Sabha Election 2024) ಕೊನೆಯ ಹಂತಕ್ಕೆ ಬಂದಿದೆ. ಶನಿವಾರ (ಜೂನ್‌ 1) ಏಳನೇ ಅಥವಾ ಕೊನೆಯ ಹಂತದ ಮತದಾನ ನಡೆಯಲಿದ್ದು, ಇದರೊಂದಿಗೆ ಸಾರ್ವತ್ರಿಕ ಚುನಾವಣೆ ಕೊನೆಗೊಳ್ಳಲಿದೆ. ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದ್ದು, ಎಲ್ಲರ ಗಮನವೀಗ ಫಲಿತಾಂಶದ ಕಡೆ ವಾಲಿದೆ. ಶನಿವಾರ 7 ರಾಜ್ಯಗಳು ಹಾಗೂ 1 ಕೇಂದ್ರಾಡಳಿತ ಪ್ರದೇಶ ಸೇರಿ 57 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಇದಕ್ಕಾಗಿ ಚುನಾವಣೆ ಆಯೋಗವು (Election Commission) ಸಕಲ ಸಿದ್ಧತೆ ಮಾಡಿಕೊಂಡಿದೆ.

ಉತ್ತರ ಪ್ರದೇಶದ 13 ಲೋಕಸಭೆ ಕ್ಷೇತ್ರಗಳು, ಪಂಜಾಬ್‌ 13, ಪಶ್ಚಿಮ ಬಂಗಾಳ 9, ಬಿಹಾರ 8, ಒಡಿಶಾ 6, ಹಿಮಾಚಲ ಪ್ರದೇಶ 4, ಜಾರ್ಖಂಡ್‌ 3 ಹಾಗೂ ಚಂಡೀಗಢದ 1 ಲೋಕಸಭೆ ಕ್ಷೇತ್ರದಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ನಡೆಯಲಿದೆ. ಸಂಜೆ 6 ಗಂಟೆವರೆಗೆ ಜನ ಹಕ್ಕು ಚಲಾಯಿಸಬಹುದಾಗಿದ್ದು, ಶಾಂತಿಯುತ ಹಾಗೂ ಪಾರದರ್ಶಕ ಚುನಾವಣೆಗಾಗಿ ಆಯೋಗವು ಬಿಗಿ ಬಂದೋಬಸ್ತ್‌ ಸೇರಿ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವರ ಭವಿಷ್ಯವು ಶನಿವಾರ ಮತಯಂತ್ರಗಳಲ್ಲಿ ಭದ್ರವಾಗಲಿದೆ.

ಕಣದಲ್ಲಿರುವ ಪ್ರಮುಖರು

ನರೇಂದ್ರ ಮೋದಿ, ವಾರಾಣಸಿ

ವಾರಾಣಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. 2014ರಿಂದ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧೆ ಮಾಡುತ್ತಿದ್ದು, ಕ್ಕಾಂಗ್ರೆಸ್ ಪಕ್ಷವು ಅಜಯ್ ರೈ ಅವರನ್ನು ಮೂರನೇ ಬಾರಿಗೆ ಕಣಕ್ಕಿಳಿಸಿದೆ.

ಕಂಗನಾ ರಣಾವತ್‌, ಮಂಡಿ

ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ನಟಿ ಕಂಗನಾ ರಣಾವತ್ ಅವರನ್ನು ಕಣಕ್ಕಿಳಿಸಿದೆ. ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ವಿರುದ್ಧ ಕಾಂಗ್ರೆಸ್ ಭದ್ರಕೋಟೆಯಾದ ಮಂಡಿಯಲ್ಲಿ ಕಂಗನಾ ಸ್ಪರ್ಧಿಸುತ್ತಿದ್ದಾರೆ.

ಚರಣ್‌ಜೀತ್‌ ಸಿಂಗ್‌ ಚನ್ನಿ, ಜಲಂಧರ್

ಪಂಜಾಬ್‌ನ ಜಲಂಧರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮತ್ತು ಮಾಜಿ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ ಕಣದಲ್ಲಿದ್ದಾರೆ. ಚನ್ನಿ, ಜಲಂಧರ್ ಕ್ಷೇತ್ರದಲ್ಲಿ ಎಎಪಿ ಅಭ್ಯರ್ಥಿ ಪವನ್ ಕುಮಾರ್ ಟಿನು ವಿರುದ್ಧ ಸ್ಪರ್ಧೆ ಮಾಡುತ್ತಿದ್ದಾರೆ

ಅನುರಾಗ್ ಠಾಕೂರ್, ಹಮೀರ್‌ಪುರ‌

ಹಿಮಾಚಲ ಪ್ರದೇಶದ ಹಮೀರ್‌ಪುರ ಕ್ಷೇತ್ರದಿಂದ ಬಿಜೆಪಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಸ್ಪರ್ಧೆ ಮಾಡುತ್ತಿದ್ದಾರೆ. 2008ರ ಉಪಚುನಾವಣೆಯಲ್ಲಿ ಅನುರಾಗ್ ಮೊದಲ ಬಾರಿಗೆ ಗೆದಿದ್ದು, 5ನೇ ಬಾರಿ ಈ ಕ್ಷೇತ್ರದಿಂದ ಅನುರಾಗ್ ಠಾಕೂರ್ ಸ್ಪರ್ಧೆ ಮಾಡುತ್ತಿದ್ದಾರೆ.

ಅಭಿಷೇಕ್ ಬ್ಯಾನರ್ಜಿ, ಡೈಮಂಡ್‌ ಹಾರ್ಬರ್

ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದಿಂದ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಕಣಕ್ಕಿಳಿದಿದ್ದಾರೆ. ಡೈಮಂಡ್ ಹಾರ್ಬರ್ ತೃಣಮೂಲ ಕಾಂಗ್ರೆಸ್‌ನ ಭದ್ರಕೋಟೆ. ಈ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಅಭಿಷೇಕ್ ಬ್ಯಾನರ್ಜಿ, ಸಿಪಿಐ(ಎಂ)ನ ಪ್ರತೀಕುರ್ ರಹಮಾನ್ ಮತ್ತು ಬಿಜೆಪಿಯ ಅಭಿಜಿತ್ ದಾಸ್ ಕಣದಲ್ಲಿದ್ದಾರೆ.

ಮೀಸಾ ಭಾರ್ತಿ, ಪಾಟಲಿಪುತ್ರ

ಬಿಹಾರದ ಪಾಟಲಿಪುತ್ರ ಲೋಕಸಭಾ ಕ್ಷೇತ್ರದಿಂದ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರಿ ಮೀಸಾ ಭಾರ್ತಿ ಆರ್‌ಜೆಡಿ ಪಕ್ಷದಿಂದ ಕಣದಲ್ಲಿದ್ದಾರೆ. 2014ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ರಾಮ್ ಕೃಪಾಲ್ ಯಾದವ್ ಇವರ ವಿರುದ್ಧ ಸ್ಪರ್ಧಿಸಿದ್ದಾರೆ.

ಇದನ್ನೂ ಓದಿ: PM Narendra Modi: ಕನ್ಯಾಕುಮಾರಿಯಲ್ಲಿ ʼನಮೋʼ- ಪ್ರಧಾನಿ ಮೋದಿಯ 33 ವರ್ಷ ಹಳೆಯ ಫೊಟೋ ವೈರಲ್‌

Continue Reading

ದೇಶ

ರಾಹುಲ್ ಪ್ರಧಾನಿಯಾಗಬೇಕು, ಪ್ರಿಯಾಂಕಾ ಚುನಾವಣೆಗೆ ಸ್ಪರ್ಧಿಸಬೇಕು: ಇದು ಮಲ್ಲಿಕಾರ್ಜುನ ಖರ್ಗೆಯವರ ಆಸೆ

ದೇಶದಲ್ಲಿ ಯಾರಾದರೂ ಪ್ರಧಾನಿಯಾಗಬೇಕು ಎಂದರೆ ನನ್ನ ಆಯ್ಕೆ ರಾಹುಲ್‌ ಗಾಂಧಿ. ದೇಶದ ಯುವಕ-ಯುವತಿಯರು, ದೇಶದ ಶಕ್ತಿಯನ್ನು ಅವರು ಪ್ರತಿನಿಧಿಸುತ್ತಾರೆ. ಹಾಗಾಗಿ, ರಾಹುಲ್‌ ಗಾಂಧಿ ಅವರೇ ಪ್ರಧಾನಿಯಾಗಬೇಕು ಎಂಬುದು ನನ್ನ ಆಸೆಯಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮನದ ಆಸೆಯನ್ನು ತಿಳಿಸಿದ್ದಾರೆ.

VISTARANEWS.COM


on

Mallikarjun Kharge
Koo

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಕೊನೆಯ ಹಂತಕ್ಕೆ ಬಂದಿದೆ. ಶನಿವಾರ (ಜೂನ್‌ 1) ಕೊನೆಯ ಹಂತದ ಮತದಾನ ನಡೆಯಲಿದೆ. ಇದರೊಂದಿಗೆ ಸಾರ್ವತ್ರಿಕ ಚುನಾವಣೆ ಮುಗಿಯಲಿದ್ದು, ಜೂನ್‌ 4ರ ಫಲಿತಾಂಶದತ್ತ ಎಲ್ಲರ ಗಮನ ಇರಲಿದೆ. ಈಗಾಗಲೇ ಮೂರನೇ ಬಾರಿಗೆ ಪ್ರಧಾನಿಯಾಗುವುದು ನಿಶ್ಚಿತ ಎಂಬುದಾಗಿ ನರೇಂದ್ರ ಮೋದಿ (Narendra Modi) ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಇನ್ನು, ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟವೂ ಗೆಲುವಿನ ವಿಶ್ವಾಸದಲ್ಲಿದೆ. ಇದರ ಬೆನ್ನಲ್ಲೇ, “ರಾಹುಲ್‌ ಗಾಂಧಿ ಪ್ರಧಾನಿಯಾಗಬೇಕು. ಪ್ರಿಯಾಂಕಾ ವಾದ್ರಾ ಅವರು ಚುನಾವಣೆಯಲ್ಲಿ ಸ್ಪರ್ಧಿಸಬೇಕಿತ್ತು” ಎಂಬುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದ್ದಾರೆ.

ಎನ್‌ಡಿಟಿವಿಯೊಂದಿಗೆ ಮಾತನಾಡುವಾಗ ಮಲ್ಲಿಕಾರ್ಜುನ ಖರ್ಗೆ ಈ ಕುರಿತು ಮಾತನಾಡಿದ್ದಾರೆ. “ದೇಶದಲ್ಲಿ ಯಾರಾದರೂ ಪ್ರಧಾನಿಯಾಗಬೇಕು ಎಂದರೆ ನನ್ನ ಆಯ್ಕೆ ರಾಹುಲ್‌ ಗಾಂಧಿ. ದೇಶದ ಯುವಕ-ಯುವತಿಯರು, ದೇಶದ ಶಕ್ತಿಯನ್ನು ಅವರು ಪ್ರತಿನಿಧಿಸುತ್ತಾರೆ. ಹಾಗಾಗಿ, ರಾಹುಲ್‌ ಗಾಂಧಿ ಅವರೇ ಪ್ರಧಾನಿಯಾಗಬೇಕು ಎಂಬುದು ನನ್ನ ಆಸೆಯಾಗಿದೆ” ಎಂದು ಅವರು ಹೇಳಿದ್ದಾರೆ. ಇನ್ನು ಪ್ರಿಯಾಂಕಾ ವಾದ್ರಾ ಸ್ಪರ್ಧೆ ಬಗ್ಗೆ ಮಾತನಾಡಿದ ಅವರು, “ಪ್ರಿಯಾಂಕಾ ವಾದ್ರಾ ಅವರು ಚುನಾವಣೆಯಲ್ಲಿ ಸ್ಪರ್ಧಿಸಬೇಕಿತ್ತು. ಆದರೆ, ಚುನಾವಣೆ ಪ್ರಚಾರಕ್ಕೆ ರಾಹುಲ್‌ ಗಾಂಧಿ ಅವರಿಗೆ ಸಾಥ್‌ ನೀಡಲು ಅವರು ಸ್ಪರ್ಧಿಸಲಿಲ್ಲ” ಎಂದು ಸ್ಪಷ್ಟಪಡಿಸಿದರು.

Mallikarjun Kharge

ಇಂಡಿಯಾ ಕೂಟ ಗೆದ್ದರೆ ಯಾರು ಪ್ರಧಾನಿ?

ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಗೆಲುವು ಸಾಧಿಸಿದರೆ ಯಾರು ಪ್ರಧಾನಿಯಾಗುತ್ತಾರೆ ಎಂಬ ಕುರಿತು ಮಲ್ಲಿಕಾರ್ಜುನ ಖರ್ಗೆ ಉತ್ತರಿಸಿದರು. “ಇಂಡಿಯಾ ಒಕ್ಕೂಟದ ಕೆಲವು ಪಕ್ಷಗಳು ಒಗ್ಗೂಡಿ ಚುನಾವಣೆಯಲ್ಲಿ ಸ್ಪರ್ಧಿಸಿವೆ. ಇನ್ನೂ ಕೆಲವು ಪಕ್ಷಗಳು ಏಕಾಂಗಿಯಾಗಿ ಸ್ಪರ್ಧಿಸಿವೆ. ಆದರೆ, ಚುನಾವಣೆ ಫಲಿತಾಂಶದ ಬಳಿಕ ಎಲ್ಲ ಪಕ್ಷಗಳು ಒಗ್ಗೂಡಿ ಸರ್ಕಾರ ರಚಿಸುವ, ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಚುನಾವಣೆ ಫಲಿತಾಂಶದ ಬಳಿಕವೇ ಇದೆಲ್ಲ ನಿರ್ಧಾರವಾಗುತ್ತದೆ” ಎಂದು ಸ್ಪಷ್ಟಪಡಿಸಿದರು.

ನೀವೇ ಪ್ರಧಾನಿ ಆಗ್ತೀರಾ ಎಂದಿದ್ದಕ್ಕೆ ಖರ್ಗೆ ಪ್ರತಿಕ್ರಿಯೆ

“ಇಂಡಿಯಾ ಒಕ್ಕೂಟ ಗೆದ್ದರೆ ನೀವೇ ಪ್ರಧಾನಿಯಾಗುತ್ತೀರಾ” ಎಂಬ ಪ್ರಶ್ನೆಗೆ ಮಲ್ಲಿಕಾರ್ಜುನ ಖರ್ಗೆ ಉತ್ತರಿಸಿದರು. “ಪ್ರಧಾನಿ ಹುದ್ದೆಗೆ ನನ್ನನ್ನು ನಾನೇ ಹೇಗೆ ಪ್ರಸ್ತಾಪ ಮಾಡಿಕೊಳ್ಳಲು ಆಗುತ್ತದೆ? ಪಕ್ಷವು ಈ ಕುರಿತು ತೀರ್ಮಾನ ಮಾಡುತ್ತದೆ. ಮೈತ್ರಿಕೂಟದ ಪಕ್ಷಗಳು ಈ ಕುರಿತು ನಿರ್ಧಾರ ಮಾಡುತ್ತವೆ. ಎಲ್ಲರೂ ಕುಳಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. 2004 ಅಥವಾ 2009ರಲ್ಲಿ ಪ್ರಧಾನಿ ಆಯ್ಕೆಗೆ ಯಾವ ಪ್ರಕ್ರಿಯೆ ಅನುಸರಿಸಲಾಗಿತ್ತೋ, ಅದನ್ನೇ ಅನುಸರಿಸಲಾಗುತ್ತದೆ” ಎಂಬುದಾಗಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಇದನ್ನೂ ಓದಿ: PM Narendra Modi: ಕನ್ಯಾಕುಮಾರಿಯಲ್ಲಿ ʼನಮೋʼ- ಪ್ರಧಾನಿ ಮೋದಿಯ 33 ವರ್ಷ ಹಳೆಯ ಫೊಟೋ ವೈರಲ್‌

Continue Reading

Lok Sabha Election 2024

Exit Poll: ಈ ಹಿಂದೆ 5 ಬಾರಿ ಎಕ್ಸಿಟ್ ಪೋಲ್ ಭವಿಷ್ಯ ಉಲ್ಟಾ ಹೊಡೆದಿತ್ತು! ಯಾವಾಗ ನೆನಪಿದೆಯೆ?

ಲೋಕಸಭೆ ಚುನಾವಣೆಯ ಅಂತಿಮ ಹಂತದ ಮತದಾನವನ್ನು ಎದುರು ನೋಡುತ್ತಿರುವಾಗಲೇ ಎಲ್ಲರ ದೃಷ್ಟಿ ಈಗ ಎಕ್ಸಿಟ್ ಪೋಲ್ ನತ್ತ ನೆಟ್ಟಿದೆ. ಈ ಮೂಲಕ ಚುನಾವಣಾ ಆಯೋಗದ (Election Commission) ಅಧಿಕೃತ ಘೋಷಣೆಯ ಮೊದಲೇ ಚುನಾವಣಾ ಫಲಿತಾಂಶದ ಸುಳಿವು ಜನರಿಗೆ ಲಭ್ಯವಾಗುತ್ತದೆ. ಬಹುತೇಕ ಬಾರಿ ಎಕ್ಸಿಟ್ ಪೋಲ್ (Exit Poll) ಸಮೀಕ್ಷೆ ನಿಜವಾಗಿದ್ದರೂ ಹಲವು ಬಾರಿ ಉಲ್ಟಾ ಆಗಿದೆ. ಅದು ಯಾವಾಗ, ಎಲ್ಲಿ ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Exit Poll
Koo

ಲೋಕಸಭಾ ಚುನಾವಣೆಯ (Loksabha election-2024) ಅಂತಿಮ ಹಂತದ ಮತದಾನ (voting) ಜೂನ್ 1ರಂದು ನಡೆಯಲಿದ್ದು, ಜೂನ್ 4ರಂದು ಏಳು ಹಂತದ ಮತದಾನದ ಫಲಿತಾಂಶ ಹೊರಬೀಳಲಿದೆ. ರಾಜಕೀಯ ನಾಯಕರು (political leaders), ತಜ್ಞರು, ನಾಗರಿಕರು ಸೇರಿದಂತೆ ಎಲ್ಲರ ಗಮನ ಈಗ ಎಕ್ಸಿಟ್ ಪೋಲ್‌ಗಳತ್ತ (Exit Poll) ಇದೆ. ಜೂನ್‌ 1ರಂದು ಸಂಜೆ 6.30ರ ಹೊತ್ತಿಗೆ ವಿವಿಧ ಮಾಧ್ಯಮಗಳ ಎಕ್ಸಿಟ್‌ ಪೋಲ್‌ ಪ್ರಕಟವಾಗಲಿದೆ. ಕಳೆದ ಅನೇಕ ವರ್ಷಗಳಲ್ಲಿ ಎಕ್ಸಿಟ್ ಪೋಲ್‌ಗಳು ಮತದಾರರ ಚಿತ್ತವನ್ನು ಅಳೆಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಚುನಾವಣಾ ಆಯೋಗದ (Election Commission) ಅಧಿಕೃತ ಘೋಷಣೆಯ ಮೊದಲೇ ಚುನಾವಣಾ ಫಲಿತಾಂಶದ ನಿಖರವಾದ ವಿವರಣೆ ಲಭ್ಯವಾಗುತ್ತದೆ.

ಸಮೀಕ್ಷೆಗಳು ಬಹುತೇಕ ಯಾವಾಗಲೂ ನಿಖರವಾಗಿವೆಯೇ ಇದ್ದರೂ ಕೆಲವು ಬಾರಿ ತಪ್ಪಾಗಿದ್ದೂ ಇದೆ. ತೀವ್ರವಾದ ಪರಿಶೀಲನೆ, ಚರ್ಚೆಯ ಬಳಿಕವೂ ಎಕ್ಸಿಟ್ ಪೋಲ್‌ಗಳು ಯಾವಾಗಲೂ ಅಂತಿಮ ಫಲಿತಾಂಶಗಳನ್ನು ನಿಖರವಾಗಿ ಹೇಳುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಒಟ್ಟು ಐದು ಬಾರಿ ಎಕ್ಸಿಟ್‌ ಪೋಲ್‌ ಭವಿಷ್ಯ ಸುಳ್ಳಾಗಿದೆ. ಈ ಕುರಿತ ಹಿನ್ನೋಟ ಇಲ್ಲಿದೆ.
2004ರ ಲೋಕಸಭಾ ಚುನಾವಣೆ

2004ರಲ್ಲಿ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನ ರಾಜ್ಯಗಳ ಚುನಾವಣೆಗಳಲ್ಲಿ ಭರ್ಜರಿ ಜಯ ಗಳಿಸಿ, ಆಡಳಿತಾರೂಢ ಬಿಜೆಪಿಯು ‘ಇಂಡಿಯಾ ಶೈನಿಂಗ್’ ಬ್ಯಾನರ್ ಅಡಿಯಲ್ಲಿ ಅವಧಿಪೂರ್ವವೇ ಲೋಕಸಭೆ ಚುನಾವಣೆ ಎದುರಿಸಿತು. ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ನಾಯಕರು ಭಾರಿ ಆತ್ಮವಿಶ್ವಾಸದಿಂದಿದ್ದರು. ಎಕ್ಸಿಟ್ ಪೋಲ್‌ಗಳು ಬಿಜೆಪಿ ನೇತೃತ್ವದ ಎನ್‌ಡಿಎಗೆ 240ರಿಂದ 250 ಸ್ಥಾನಗಳು ಬರಲಿವೆ ಎಂದು ಭವಿಷ್ಯ ನುಡಿದಿದ್ದವು. ಆದರೆ ನಿಜವಾದ ಫಲಿತಾಂಶಗಳು ಬಂದಾಗ ಸಂಖ್ಯೆಗಳು ಸಂಪೂರ್ಣವಾಗಿ ವಿರುದ್ಧವಾಗಿದ್ದವು. ಎನ್‌ಡಿಎ ಕೇವಲ 181 ಸೀಟುಗಳನ್ನು ಗೆಲ್ಲಲು ಸಾಧ್ಯವಾಯಿತು. 218 ಸ್ಥಾನಗಳನ್ನು ಗಳಿಸಿದ ಯುಪಿಎ ಮಿತ್ರ ಪಕ್ಷಗಳ ನೆರವಿನಿಂದ ಕೇಂದ್ರದಲ್ಲಿ ಅಧಿಕಾರ ನಡೆಸಿತು.


2015ರ ದೆಹಲಿ ಅಸೆಂಬ್ಲಿ ಚುನಾವಣೆ

2015ರ ದೆಹಲಿ ಅಸೆಂಬ್ಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) 70ರಲ್ಲಿ 67 ಸ್ಥಾನಗಳನ್ನು ಗಳಿಸಿ ಅಭೂತಪೂರ್ವ ಜಯ ಸಾಧಿಸಿತು. ಆದರೆ ಮತದಾನದ ದಿನದಂದು ನಡೆಸಿದ ಎಕ್ಸಿಟ್ ಪೋಲ್‌ಗಳು ಆಪ್‌ಗೆ ಸ್ಪಷ್ಟ ಬಹುಮತ ಎಂದು ಹೇಳಿತ್ತಾದರೂ, 50ರಷ್ಟು ಸೀಟು ಬರಬಹುದು ಎಂದಿತ್ತು. ಆದರೆ ಆಪ್‌ ಎಲ್ಲರ ನಿರೀಕ್ಷೆಗೂ ಮೀರಿದಷ್ಟು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಮೂಲಕ, ಜನರ ತೀರ್ಪನ್ನು ಸ್ಪಷ್ಟವಾಗಿ ಗುರುತಿಸಲು ಎಕ್ಸಿಟ್‌ ಪೋಲ್‌ಗಳು ವಿಫಲವಾಗಿದ್ದವು.

2015ರ ಬಿಹಾರ ವಿಧಾನಸಭಾ ಚುನಾವಣೆ

2015ರ ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ತೀವ್ರ ಪೈಪೋಟಿಯಿಂದ ಕೂಡಿತ್ತು. ಯಾವುದೇ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ದೊರೆಯುವುದಿಲ್ಲ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿದ್ದವು. ಆದರೆ ಈ ಮುನ್ಸೂಚನೆಯ ಹೊರತಾಗಿಯೂ ಆರ್‌ಜೆಡಿ-ಜೆಡಿಯು-ಕಾಂಗ್ರೆಸ್ ಒಕ್ಕೂಟವು ಭರ್ಜರಿ ಜಯ ಸಾಧಿಸಿತು. ಲಾಲು ಪ್ರಸಾದ್ ಅವರ ಆರ್‌ಜೆಡಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ 2017

ನೋಟು ಅಮಾನ್ಯೀಕರಣದ ಅನಂತರ ನಡೆದ 2017ರ ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆಯ ಸಮೀಕ್ಷೆಗಳು ಭಾರಿ ಕುತೂಹಲ ಮೂಡಿಸಿದ್ದವು. ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಆದರೆ ಸರಳ ಬಹುಮತಕ್ಕೂ ಕೆಲವು ಸ್ಥಾನಗಳು ಕೊರತೆ ಆಗಲಿವೆ. ಬಿಜೆಪಿಗೆ ಹೆಚ್ಚೆಂದರೆ 185ರಿಂದ 200 ಸ್ಥಾನಗಳು ಬರಬಹುದು ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿದ್ದವು. ಎಸ್‌ಪಿ-ಕಾಂಗ್ರೆಸ್‌ ಮೈತ್ರಿಕೂಟ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲಿದೆ ಎಂದು ಹೇಳಲಾಗಿತ್ತು. ಆದರೆ ಎಲ್ಲ ಮತಗಟ್ಟೆ ಸಮೀಕ್ಷೆಗಳಿಗೆ ವ್ಯತಿರಿಕ್ತವಾಗಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಒಟ್ಟು 403 ಸೀಟುಗಳಲ್ಲಿ 312 ಸೀಟುಗಳನ್ನು ಗೆದ್ದುಕೊಂಡಿತು. 2012ರ ಚುನಾವಣೆಯಲ್ಲಿ ಕೇವಲ 47 ಸ್ಥಾನ ಗಳಿಸಿದ್ದ ಬಿಜೆಪಿಗೆ 2017ರಲ್ಲಿ ಭರ್ಜರಿ ಜಯ ಸಾಧಿಸಿ ಯೋಗಿ ಆದಿತ್ಯನಾಥ್‌ ನೇತೃತ್ವದಲ್ಲಿ ಸರ್ಕಾರ ರಚಿಸಿತು. ಆ ಚುನಾವಣೆಯಲ್ಲಿ ಬಿಎಸ್‌ಪಿ ಕೇವಲ 19 ಸ್ಥಾನ ಗೆದ್ದಿತು. ಎಸ್ಪಿಗೆ ಕೇವಲ 47 ಸೀಟುಗಳು ಸಿಕ್ಕಿದವು. ಕಾಂಗ್ರೆಸ್‌ಗೆ ಕೇವಲ 7 ಸ್ಥಾನಗಳು ಲಭಿಸಿದವು. ಮತಗಟ್ಟೆ ಸಮೀಕ್ಷೆಗಳು ಉತ್ತರ ಪ್ರದೇಶದಲ್ಲಿ ಬಿಜೆಪಿ ಪರ ಭಾರಿ ಅಲೆ ಇರುವುದನ್ನು ಗುರುತಿಸುವಲ್ಲಿ ವಿಫವಾದವು.

ಇದನ್ನೂ ಓದಿ: PM Narendra Modi: ಕನ್ಯಾಕುಮಾರಿಯಲ್ಲಿ ʼನಮೋʼ- ಪ್ರಧಾನಿ ಮೋದಿಯ 33 ವರ್ಷ ಹಳೆಯ ಫೊಟೋ ವೈರಲ್‌

2014ರ ಲೋಕಸಭಾ ಚುನಾವಣೆ

2014ರ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವು ಸಾಧಿಸಲಿದೆ ಎಂದು ಹೇಳಿತ್ತು. ಆದರೆ ಬಿಜೆಪಿಯೊಂದೇ ಸರಳ ಬಹುಮತಕ್ಕೆ ಅಗತ್ಯವಾದ 272 ಸಂಖ್ಯೆ ಪಡೆಯುವುದಿಲ್ಲ ಎಂದು ಬಹುತೇಕ ಸಮೀಕ್ಷೆಗಳು ಹೇಳಿದ್ದವು. ಟುಡೇಸ್‌ ಚಾಣಕ್ಯ ಸಮೀಕ್ಷೆಯೊಂದು ಮಾತ್ರ ಬಿಜೆಪಿಗೆ 291 ಸೀಟು ಬರಬಹುದು ಎಂದು ಹೇಳಿತ್ತು. ಆದರೆ ಅಂತಿಮ ಫಲಿತಾಂಶದಲ್ಲಿ ಬಿಜೆಪಿಗೆ ಭರ್ಜರಿ 282 ಸೀಟುಗಳು ಲಭಿಸಿದವು. ಎನ್‌ಡಿಎ ಸೀಟುಗಳ ಸಂಖ್ಯೆ 300 ದಾಟಿತು. ಕಾಂಗ್ರೆಸ್ ಕೇವಲ 44 ಸ್ಥಾನಗಳಿಗೆ ಸೀಮಿತವಾಯಿತು. ಬಿಜೆಪಿ ಮತ್ತು ಎನ್‌ಡಿಎಯ ಭಾರಿ ಗೆಲುವಿನ ಸುಳಿವು ಮತಗಟ್ಟೆ ಸಮೀಕ್ಷೆಗಳಿಗೆ ಸಿಕ್ಕಿರಲಿಲ್ಲ. ಹಾಗಾಗಿ ಮತಗಟ್ಟೆ ಸಮೀಕ್ಷೆಗಳು ಎಲ್ಲ ಕಾಲಕ್ಕೂ ಸರಿಯಾಗಿಯೇ ಇರುತ್ತವೆ ಎಂದು ಹೇಳಲಾಗುವುದಿಲ್ಲ.

Continue Reading
Advertisement
Modi Meditation
ಪ್ರಮುಖ ಸುದ್ದಿ1 min ago

Modi Meditation: ಮೋದಿ ಮಾಡ್ತಿರೋದು ‘ಧ್ಯಾನ’ ಅಲ್ಲ ‘ಡ್ರಾಮಾ’ ಎಂದ ಮಲ್ಲಿಕಾರ್ಜುನ ಖರ್ಗೆ!

Virat Kohli
ಪ್ರಮುಖ ಸುದ್ದಿ16 mins ago

Virat kohli : ಕಡೆಗಣಿಸುವ ಹೇಳಿಕೆ ನೀಡಿ ಕೊಹ್ಲಿಗೆ ಮತ್ತೆ ಅವಮಾನ ಮಾಡಿದ ಅಂಬಾಟಿ ರಾಯುಡು

Anjali Murder Case
ಕರ್ನಾಟಕ27 mins ago

Anjali Murder Case: ಅಂಜಲಿ ಹಂತಕ ಗಿರೀಶ್‌ಗೆ ಜೂನ್ 16ರವರೆಗೆ‌ ನ್ಯಾಯಾಂಗ ಬಂಧನ

Vastu Tips
ಧಾರ್ಮಿಕ50 mins ago

Vastu Tips: ನೆಲ ಒರೆಸುವಾಗಲೂ ವಾಸ್ತು ನಿಯಮ ಪಾಲಿಸಲೇಬೇಕು!

T20 World Cup
ಕ್ರೀಡೆ51 mins ago

T20 World Cup 2024 : ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಕ್ರಿಕೆಟಿಗರು ಈಗ ಎಲ್ಲಿದ್ದಾರೆ?

Lok Sabha Election
ದೇಶ54 mins ago

Lok Sabha Election: ನಾಳೆ ಕೊನೆಯ ಹಂತದ ಮತದಾನ; ಮೋದಿ, ಕಂಗನಾ ಸೇರಿ ಹಲವರ ಭವಿಷ್ಯ ನಿರ್ಧಾರ

Shocking Video
ವೈರಲ್ ನ್ಯೂಸ್1 hour ago

Shocking Video: ಮಗುವನ್ನು ಎತ್ತಿಕೊಂಡು ಹೋಗಲು ಕೋತಿಯ ಶತಪ್ರಯತ್ನ; ಮುಂದೇನಾಯ್ತು?

MLC Election
ಪ್ರಮುಖ ಸುದ್ದಿ1 hour ago

MLC Election: ವಿಧಾನ ಪರಿಷತ್‌ ಚುನಾವಣೆ; ಯತೀಂದ್ರ ಸಿದ್ದರಾಮಯ್ಯ ಅವಿರೋಧ ಆಯ್ಕೆ

Karnataka Weather Forecast
ಮಳೆ1 hour ago

Karnataka Weather : ರಾಜ್ಯದಲ್ಲಿ ತಗ್ಗಿದ ಮಳೆ ಪ್ರಮಾಣ; ಸ್ವಲ್ಪ ಕಡೆ ವರುಣ ಸಾಧಾರಣ, ಗಾಳಿ ರಭಸ ಅಸಾಧಾರಣ

World No Tobacco Day
ಆರೋಗ್ಯ2 hours ago

World No Tobacco Day: ತಂಬಾಕಿನ ಚಟ ಎಷ್ಟೊಂದು ರೋಗಗಗಳಿಗೆ ಕಾರಣ ಆಗುತ್ತದೆ ನೋಡಿ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ1 day ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ3 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು3 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ4 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ5 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು5 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌