BBK SEASON 10: ಡಬಲ್‌ ಎಲಿಮಿನೇಷನ್‌; ಬಿಗ್‌ಬಾಸ್‌ ಮನೆಯಿಂದ ಹೊರಬಂದ ಅವಿನಾಶ್, ಮೈಕಲ್‌ - Vistara News

ಕಿರುತೆರೆ

BBK SEASON 10: ಡಬಲ್‌ ಎಲಿಮಿನೇಷನ್‌; ಬಿಗ್‌ಬಾಸ್‌ ಮನೆಯಿಂದ ಹೊರಬಂದ ಅವಿನಾಶ್, ಮೈಕಲ್‌

BBK SEASON 10: ಈ ವಾರ ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಆಗಿದ್ದು, ಅವಿನಾಶ್ ಶೆಟ್ಟಿ ಮತ್ತು ಮೈಕಲ್‌ ಅಜಯ್‌ ಹೊರಬಂದಿದ್ದಾರೆ.

VISTARANEWS.COM


on

Avinash Shetty and Michael Ajay get evicted from Bigg Boss house
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಿಗ್​ಬಾಸ್​ ಮನೆಯಿಂದ (BBK SEASON 10) ಈ ವಾರ ಯಾರು ಹೊರಗೆ ಬರಲಿದ್ದಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿತ್ತು. ಆದರೆ, ಈ ಬಾರಿ ಡಬಲ್‌ ಎಲಿಮಿನೇಷನ್‌ ಆಗಿದ್ದರಿಂದ ಇಬ್ಬರು ಸ್ಪರ್ಧಿಗಳು ಹೊರಬಿದ್ದಿದ್ದಾರೆ. ವೈಲ್ಡ್‌ ಕಾರ್ಡ್‌ ಮೂಲಕ ಎಂಟ್ರಿ ಪಡೆದಿದ್ದ ಅವಿನಾಶ್ ಶೆಟ್ಟಿ ಮತ್ತು ಮೈಕಲ್‌ ಅಜಯ್‌ ದೊಡ್ಮನೆಯಿಂದ ಹೊರಬಂದಿದ್ದಾರೆ.

ಹಿಂದೆಂದಿಗಿಂತಲೂ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಬಿಗ್​ಬಾಸ್​ ಕನ್ನಡದ 10ನೇ ಆವೃತ್ತಿಯು (BBK SEASON 10) 77 ದಿನಗಳನ್ನು ಪೂರೈಸಿ ಭರ್ಜರಿಯಾಗಿ ಮುನ್ನುಗುತ್ತಿದೆ. ಇದೀಗ ಸುದೀಪ್ (Sudeep) ಅನುಪಸ್ಥಿತಿಯಲ್ಲಿ ಡಬಲ್ ಎಲಿಮಿನೇಷನ್ ನಡೆದಿದ್ದು, ಬಿಗ್ ಬಾಸ್ ಮನೆಯಿಂದ ಅವಿನಾಶ್ ಶೆಟ್ಟಿ (Avinash Shetty) ಮತ್ತು ಮೈಕಲ್‌ ಅಜಯ್‌ (Michael Ajay) ಹೊರಕ್ಕೆ ಬಂದಿದ್ದಾರೆ.

ಈ ವಾರ ಸಂಗೀತಾ ಶೃಂಗೇರಿ, ವರ್ತೂರು ಸಂತೋಷ್, ‘ಡ್ರೋನ್’ ಪ್ರತಾಪ್, ಮೈಕಲ್ ಅಜಯ್, ಅವಿನಾಶ್ ಶೆಟ್ಟಿ ಮತ್ತು ಸಿರಿ ಅವರು ನಾಮಿನೇಟ್ ಆಗಿದ್ದರು. ಅಂತಿಮವಾಗಿ ಇವರಲ್ಲಿ ಎಲ್ಲರೂ ಸೇಫ್ ಆಗಿ ಮೈಕಲ್ ಅಜಯ್, ಅವಿನಾಶ್ ಶೆಟ್ಟಿ ಮಾತ್ರ ಉಳಿದುಕೊಂಡರು. ಅವರಿಬ್ಬರಲ್ಲಿ ಒಬ್ಬರು ಸೇಫ್ ಆಗಬಹುದೆಂಬ ಎಂಬ ನಿರೀಕ್ಷೆ ಇತ್ತು. ಆದರೆ ಇಬ್ಬರೂ ಹೊರಹೋಗಿದ್ದಾರೆ.

ಇದನ್ನೂ ಓದಿ | Arbaaz Khan : ಮೇಕಪ್​ ಕಲಾವಿದೆ ಜತೆ ಎರಡನೇ ಮದುವೆಯಾದ ಅರ್ಬಾಜ್ ಖಾನ್​

ಹೇಗಿತ್ತು ಎಲಿಮಿನೇಷನ್‌?

ಬಿಗ್‌ಬಾಸ್‌ ಮನೆಯೊಳಗೆ ಎರಡು ಕಾರುಗಳು ಬಂದಿತ್ತು. ಆ ಕಾರಿನೊಳಗೆ ಅವಿನಾಶ್ ಮತ್ತು ಮೈಕಲ್ ಹೋಗಿದ್ದರು . ಈ ಎರಡು ಕಾರುಗಳಲ್ಲಿ ಒಂದು ಕಾರು ತಡವಾಗಿ ಬರುತ್ತದೆ. ಬಂದ ಕಾರಿನಲ್ಲಿರುವವರು ಸೇಫ್ ಎನ್ನಲಾಗಿತ್ತು. ಆದರೆ, ಕಾರುಗಳು ಕೆಲಹೊತ್ತು ಮನೆಯ ಗಾರ್ಡನ್ ಏರಿಯಾದಲ್ಲಿ ರೌಂಡ್ ಹಾಕಿ, ಹೊರಗೆ ಹೋಗಿದ್ದರಿಂದ ಇಬ್ಬರೂ ಎಲಿಮಿನೇಟ್‌ ಆಗಿದ್ದಾರೆ.

ಬಿಗ್​ಬಾಸ್ ಶೋ 50 ದಿನ ಪೂರೈಸಿದ ಸಂದರ್ಭದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮಂಗಳೂರಿನ ಅವಿನಾಶ್ ಶೆಟ್ಟಿ ಪ್ರವೇಶ ಪಡೆದಿದ್ದರು. ಎಂಟ್ರಿ ಕೊಟ್ಟಾಗಲೇ ಆನೆ ವಿನಯ್‌ಗೆ ಮಾವುತನಾಗಿ ಆತನನ್ನು ಪಳಗಿಸುತ್ತೇನೆ ಎಂದು ಅವಿನಾಶ್ ಡೈಲಾಗ್ ಹೊಡೆದಿದ್ದರು. ಅದು ಸಿಕ್ಕಾಪಟ್ಟೆ ಕ್ರೇಜ್​ ಹುಟ್ಟುಹಾಕಿತ್ತು. ಆದರೆ, ಮತ್ತೆ ಮೂರೇ ವಾರದಲ್ಲಿ ಬಿಗ್ ಬಾಸ್ ಮನೆ ಆಟದಿಂದ ಅವಿನಾಶ್​ ಹೊರಕ್ಕೆ ಬಂದಿದ್ದಾರೆ.

ಮತ್ತೊಂದೆಡೆ ಟಾಸ್ಕ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಮೈಕಲ್‌ ಕೂಡ ಈ ವಾರ ಎಲಿಮಿನೇಟ್ ಆಗಿದ್ದಾರೆ. ವಿನಯ್‌ ಜತೆ ಆತ್ಮೀಯವಾಗಿದ್ದವರಲ್ಲಿ ಮೈಕಲ್‌ ಕೂಡ ಒಬ್ಬರು. ಸ್ನೇಹಿತ್‌ ಗೌಡ ಬಿಗ್‌ ಬಾಸ್‌ ಮನೆಯಿಂದ ಹೊರಹೋದ ಬೆನ್ನಲ್ಲೇ ಇದೀಗ ಮೈಕಲ್‌ ಕೂಡ ಹೋಗಿರುವುದು ವಿನಯ್‌ ತಂಡಕ್ಕೆ ಶಾಕ್‌ ನೀಡಿದೆ.

ಇದನ್ನೂ ಓದಿ | BBK SEASON 10: ಈ ವಾರ ಡಬಲ್‌ ಎಲಿಮಿನೇಶನ್‌ ಜತೆ ಶೈನ್ ಶೆಟ್ಟಿ, ಶುಭಾ ಎಂಟ್ರಿ!

ಸೂಪರ್ ಸಂಡೇ ಕಾರ್ಯಕ್ರಮ ನಡೆಸಿಕೊಡಲು ಸುದೀಪ್ ಬಂದಿಲ್ಲ. ಬದಲಾಗಿ ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ಶೈನ್ ಶೆಟ್ಟಿ ಹಾಗೂ ಶುಭಾ ಪೂಂಜಾ ದೊಡ್ಮನೆಗೆ ಆಗಮಿಸಿದ್ದರು. ಈ ಇಬ್ಬರ ಆಗಮನ ಎಲ್ಲ ಸ್ಪರ್ಧಿಗಳ ಮುಖದಲ್ಲೂ ಸಂತಸ ತರಿಸಿತ್ತು. ಆದರೆ, ಈ ಮಧ್ಯೆ ಎಲಿಮಿನೇಷನ್ ಕೂಡ ನಡೆದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Bhoomi Shetty: ಆಫ್ರಿಕನ್‌ ಲುಕ್‌ನಲ್ಲಿ ನಮ್ಮ ʻಕಿನ್ನರಿʼ ನಟಿ! ಈ ಚೇಂಜ್‌ ಹೇಗನಿಸುತ್ತೆ ನಿಮಗೆ?

Bhoomi Shetty:  ಭೂಮಿ ಆಗಾಗ ತಮ್ಮ ಡ್ರೆಸ್‌ ಹಾಗೂ ಸ್ಟೈಲ್‌ ಮೂಲಕ ಟ್ರೋಲ್‌ಗೆ ಗುರಿಯಾಗುತ್ತಲೇ ಇರುತ್ತಾರೆ. ಭೂಮಿ ಶೆಟ್ಟಿ ಈ ಹಿಂದೆ ಪಾರ್ಟಿ ವೇರ್‌ನಲ್ಲಿ ಕಂಡಿದ್ದರು. ಡ್ರೆಸ್ ನಲ್ಲಿ ಎದೆ ಸೀಳು ಎದ್ದು ಕಾಣುತ್ತಿತ್ತು. ಹೀಗಾಗಿ ಭೂಮಿ ತೊಟ್ಟಿರುವ ಡ್ರೆಸ್‌ಗೆ ನೆಟ್ಟಿಗರು ಕಮೆಂಟ್ ಮೂಲಕ ಆಕ್ರೋಶ ಹೊರ ಹಾಕಿದ್ದರು. ಆದರೀಗ ನಟಿ ಆಫ್ರಿಕನ್‌ ಲುಕ್‌ನಲ್ಲಿ ಕಂಡಿದ್ದಾರೆ.

VISTARANEWS.COM


on

Bhoomi Shetty African braids Look style
Koo

`ಕಿನ್ನರಿ’ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಭೂಮಿ ಶೆಟ್ಟಿಯನ್ನು (Bhoomi Shetty) ಪ್ರೇಕ್ಷಕರು ಮೆಚ್ಚಿದ್ದರು. ಕುಂದಾಪುರದ ಭೂಮಿ ಆಗಾಗ ಬೈಕ್ ರೈಡ್ ಮೂಲಕ ಹಳ್ಳಿ ಶೈಲಿಯ ಫೋಟೊಗಳನ್ನು ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಆಗಾಗ ಹಾಟ್‌ ಅವತಾರ ತಾಳುವ ಭೂಮಿ ಇದೀಗ ಹೊಸ ಲುಕ್‌ನೊಂದಿಗೆ ಕಂಡಿದ್ದಾರೆ. ಆಫ್ರಿಕನ್‌ ಸ್ಟೈಲ್‌ನಲ್ಲಿ ಭೂಮಿ ಸಖತ್‌ ಹಾಟ್‌ ಆಗಿ ಪೋಸ್‌ ಕೊಟ್ಟಿದ್ದಾರೆ.

ಇದನ್ನೂ ಓದಿ: Bhoomi Shetty: ಎದೆ ಸೀಳು ಎದ್ದು ಕಾಣುವಂತೆ ಡ್ರೆಸ್‌ ಧರಿಸಿದ ಭೂಮಿ ಶೆಟ್ಟಿ; ನೆಟ್ಟಿಗರ ತರಾಟೆ!

ಭೂಮಿ ಇದೀಗ ದಕ್ಷಿಣ ಆಫ್ರಿಕಾ ಸ್ಪೆಷಲ್‌ ಸ್ಟೈಲ್‌ ಬ್ರೇಡ್ಸ್‌( braids) ಸ್ಟೈಲ್‌ ಮಾಡಿಸಿಕೊಂಡಿದ್ದಾರೆ. ಈ ಬ್ರೇಡ್ಸ್‌ ಸ್ಟೈಲ್‌ ಕುರಿತು ಇನ್‌ಸ್ಟಾದಲ್ಲಿ ವಿವರಣೆ ಕೂಡ ಕೊಟ್ಟಿದ್ದಾರೆ ಭೂಮಿ.

ಭೂಮಿ ಹೊಸ ಲುಕ್‌ ಪೋಸ್ಟ್‌ ಮಾಡಿ ಈ ರೀತಿ ಬರೆದುಕೊಂಡಿದ್ದಾರೆ ʻನನಗೆ, ಈ ಸ್ಟೈಲ್‌ ಸಾಂಸ್ಕೃತಿಕವಾಗಿ ಮೆಚ್ಚುಗೆಯಾಗಿರಬಹುದು. “ಬಾಕ್ಸ್ ಬ್ರೇಡ್‌ʼ ಸ್ಟೈಲ್‌ ದಕ್ಷಿಣ ಆಫ್ರಿಕಾದಲ್ಲಿ ಹುಟ್ಟಿಕೊಂಡಿದ್ದು. ಈ ರೀತಿ ಕೂದಲನ್ನು ಮಾಡಿಕೊಳ್ಳಲು ಸುಮಾರು 5-8 ಗಂಟೆಗಳವರೆಗೆ ಬೇಕಾಗುತ್ತದೆ. ಈ ಬ್ರೇಡ್‌ ಸ್ಟೈಲ್‌ ಯಾರನ್ನು ನಿಭಾಯಿಸುತ್ತಿದ್ದರೋ ಅವರನ್ನು ಶ್ರೀಮಂತ ಮಹಿಳೆ ಎಂದು ಹಲವರು ನಂಬಿದ್ದರು. ಬ್ರೇಡ್‌ಗಳು ಕಪ್ಪು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಬ್ರೇಡ್‌ಗಳು ಸಾವಿರಾರು ವರ್ಷಗಳ ಹಿಂದಿನದು ಎಂದು ಇತಿಹಾಸದಲ್ಲಿದೆ. ಈ ರೀತಿ ಸ್ಟೈಲ್‌ಗಳು ಸಾಮಾಜಿಕ ಪದ್ಧತಿಗಳನ್ನು ಎತ್ತಿಹಿಡಿಯುವುದು ಮಾತ್ರವಲ್ಲದೆ ಅವು ಆಗಿನ ಸಮಯದಲ್ಲಿ ಫ್ಯಾಶನ್ ಆಗಿದ್ದವು. ಆಫ್ರಿಕನ್ ಮಹಿಳೆಯರು ತಮ್ಮ ಕೂದಲನ್ನು ಅಲಂಕರಿಸುವ ವಿಷಯದಲ್ಲಿ ಶ್ರೀಮಂತ ಇತಿಹಾಸವನ್ನು ಹೊಂದಿದ್ದಾರೆ. ನೀವು ಕೇಶವಿನ್ಯಾಸವನ್ನು ಹೊಂದವ ಮೊದಲು ನೀವು ಆಯಾ ಶೈಲಿಯ ಇತಿಹಾಸದ ಬಗ್ಗೆ ತಿಳಿದುಕೊಂಡಿರಬೇಕುʼʼಎಂದು ಬರೆದುಕೊಂಡಿದ್ದಾರೆ.

ಕೆಲವರು ಭೂಮಿಯವರ ಸ್ಟೈಲ್‌ ಇಷ್ಟ ಪಟ್ಟರೆ, ಇನ್ನೂ ಕೆಲವರು ನಟಿಯ ಬಗ್ಗೆ ಕೆಟ್ಟದ್ದಾಗಿ ಕಮೆಂಟ್‌ ಮಾಡಿದ್ದಾರೆ. ಭೂಮಿ ಶೆಟ್ಟಿ ಅವರು ಧಾರಾವಾಹಿ ಮಾತ್ರವಲ್ಲದೇ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಕೂಡ ಭಾಗವಹಿಸಿ ಪ್ರೇಕ್ಷಕರ ಮನಸನ್ನು ಗೆದ್ದಿದ್ದರು.
Continue Reading

ಕಿರುತೆರೆ

Star Suvarna Kannada: ಪ್ರೀತಿಯ ಸ್ವಾದವನ್ನು ಹೊತ್ತು ಬರುತ್ತಿದೆ ಈ ಹೊಸ ಕಥೆ! ʻಜಾನಕಿ ಸಂಸಾರʼ ಯಾವಾಗ?

Star Suvarna Kannada: ʻಸ್ಟಾರ್ ಸುವರ್ಣ ವಾಹಿನಿʼ ಹೊಸ ಕಥೆ ಪ್ರೇಕ್ಷಕರಿಗೆ ಪರಿಚಯಿಸುತ್ತಿದೆ. ಈ ಸಾಲಿಗೆ ಸೇರ್ಪಡೆಯಾಗುತ್ತಿರುವ ಹೊಸ ಧಾರಾವಾಹಿ ‘ಜಾನಕಿ ಸಂಸಾರ’.ಅಂಜನಾ ಶ್ರೀನಿವಾಸ್ 13 ವರ್ಷಗಳ ಬಳಿಕ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ‘ಜಾನಕಿ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೊಸ ಧಾರಾವಾಹಿ “ಜಾನಕಿ ಸಂಸಾರ” ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

VISTARANEWS.COM


on

Star Suvarna Kannada Janaki Samsara
Koo

ಬೆಂಗಳೂರು: ಕನ್ನಡ ಕಿರುತೆರೆಯ ಕಡಲಲ್ಲಿ ʻಸ್ಟಾರ್ ಸುವರ್ಣ ವಾಹಿನಿʼಯು (Star Suvarna Kannada) ಹೊಸ ಯೋಜನೆಗಳ ಜತೆ ವಿನೂತನ ಪರಿಕಲ್ಪನೆಗಳೊಂದಿಗೆ ಮನರಂಜನೆಯ ಕ್ರಾಂತಿಯನ್ನೇ ಹುಟ್ಟು ಹಾಕಿದೆ. ಈ ಸಾಲಿಗೆ ಸೇರ್ಪಡೆಯಾಗುತ್ತಿರುವ ಹೊಸ ಧಾರಾವಾಹಿ ‘ಜಾನಕಿ ಸಂಸಾರ'(Janaki Samsara Serial).

ಇದೊಂದು ತುಂಬು ಕುಟುಂಬದ ಕಥೆ. ಈ ಮನೆಯ ಹಿರಿ ಸೊಸೆ ಜಾನಕಿ, ಇಡೀ ಸಂಸಾರದ ಹೊಣೆ ಹೊತ್ತವಳು. ಎಷ್ಟೇ ಕಷ್ಟ ಬಂದರು ಎದುರಿಸುವ ಛಲಗಾರ್ತಿ. ವಿದ್ಯಾವಂತೆಯಾಗಿರುವ ಜಾನಕಿ ತನ್ನ ಸಂಸಾರದ ಜತೆ ಉದ್ಯೋಗವನ್ನು ಸರಿ ಸಮಾನಾಗಿ ನಿಭಾಯಿಸುತ್ತಿರುತ್ತಾಳೆ. ಸದಾಕಾಲ ಮನೆ ಮಂದಿಯನ್ನು ಒಗ್ಗಟ್ಟಾಗಿಡಲು ಬಯಸುವ ಜಾನಕಿಯ ಸಂಸಾರಕ್ಕೆ ಮನೆಯೊಡೆಯುವ ವ್ಯಕ್ತಿಯ ಆಗಮನವಾದರೆ, ಮುಂದೆ ಜಾನಕಿ ತನ್ನ ಸಂಸಾರವನ್ನು ಹೇಗೆ ಕಾಪಾಡ್ತಾಳೆ? ಎಂಬುದು ಈ ಧಾರಾವಾಹಿಯ ಮುಖ್ಯ ಕಥಾ ಹಂದರ.

ʻಜಾನಕಿ ಸಂಸಾರ’ ಧಾರಾವಾಹಿಯು ಸುಂದರ ತಾರಾಗಣವನ್ನು ಹೊಂದಿದ್ದು, ಕನ್ನಡಿಗರ ಮನಸು ಕದ್ದ ಕಣ್ಮಣಿ, ‘ಕೃಷ್ಣರುಕ್ಮಿಣಿ’ ಧಾರಾವಾಹಿ ಖ್ಯಾತಿಯ ರುಕ್ಮಿಣಿ ಅಲಿಯಾಸ್ ಅಂಜನಾ ಶ್ರೀನಿವಾಸ್ ಇದ್ದಾರೆ. ಅಂಜನಾ ಶ್ರೀನಿವಾಸ್ ಅವರು 13 ವರ್ಷಗಳ ಬಳಿಕ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ‘ಜಾನಕಿ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜತೆಗೆ ಸೂರಜ್ ಹೊಳಲು, ಕಾವ್ಯ ಶಾಸ್ತ್ರೀ, ಬಾಲ ನಟಿ ಶ್ರೀ ದಿಶಾ, ಮರೀನ ತಾರಾ, ರವಿ ಭಟ್, ಚಂದನ್ ಸೇರಿದಂತೆ ಇನ್ನು ಅನೇಕ ಅನುಭವಿ ಕಲಾವಿದರು ಅಭಿನಯಿಸುತ್ತಿದ್ದಾರೆ. ಹೊಸ ಧಾರಾವಾಹಿ “ಜಾನಕಿ ಸಂಸಾರ” ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಇದನ್ನೂ ಓದಿ: Puttakkana Makkalu Serial: ಅವ್ವನಂತೆ ಯಾರ ಹಂಗಿಲ್ಲದೆ ಬದುಕಲು ಮನೆ ಬಿಟ್ಟು ಹೊರಟೇ ಬಿಟ್ಟಳು ಸಹನಾ!

ಸ್ಟಾರ್ ಸುವರ್ಣವಾಹಿನಿಯಲ್ಲಿ (Star Suvarna) ಪ್ರಸಾರವಾಗುತ್ತಿದ್ದ ʻನಮ್ಮ ಲಚ್ಚಿ’ (Namma Lacchi) ಧಾರಾವಾಹಿ ಅಂತ್ಯ ಕಂಡ ಬೆನ್ನಲ್ಲೇ ಹೊಸ ಧಾರಾವಾಹಿಗಳು ಬರುತ್ತಿವೆ. 2023ರ ಫೆಬ್ರವರಿ 6ಕ್ಕೆ ಧಾರಾವಾಹಿ ಶುರು ಆಗಿತ್ತು. ಬಂಗಾಳಿ ಭಾಷೆಯ ʻಪೋಟಲ್ ಕುಮಾರ್ ಗಾನಾವಾಲʼ (Potol Kumar Gaanwala) ಧಾರಾವಾಹಿಯ ಅಧಿಕೃತ ರೀಮೆಕ್ ಈ ʻನಮ್ಮ ಲಚ್ಚಿʼ. 

ʼನಮ್ಮ ಲಚ್ಚಿ’ ಧಾರಾವಾಹಿಯಲ್ಲಿ ಮೂವರು ಮಕ್ಕಳು ಸಾಕಷ್ಟು ಗಮನ ಸೆಳೆಯುತ್ತಾರೆ. ಅದರಲ್ಲಿ ಲಚ್ಚಿ ಮುಖ್ಯ ಪಾತ್ರಧಾರಿಯಾದರೆ, ರಿಯಾ ಕೂಡ ಪ್ರಾಮುಖ್ಯತೆ ಪಡೆದಿದ್ದಾರೆ. ಇನ್ನು ಸುಗ್ಗಿ, ಲಚ್ಚಿಗೆ ತಂಗಿಯಾಗಿ ಗಮನ ಸೆಳೆದಿದ್ದಳು.

Continue Reading

ಕಿರುತೆರೆ

Puttakkana Makkalu Serial: ಅವ್ವನಂತೆ ಯಾರ ಹಂಗಿಲ್ಲದೆ ಬದುಕಲು ಮನೆ ಬಿಟ್ಟು ಹೊರಟೇ ಬಿಟ್ಟಳು ಸಹನಾ!

Puttakkana Makkalu Serial: ಮುರಳಿ-ಸಹನಾ ದಾಂಪತ್ಯ ಜೀವನದಲ್ಲಿ ಒಡಕು ಮೂಡಿದೆ. ಸಹನಾಗೆ ವಿಚ್ಛೇದನ ಬೇಕು, ಮುರಳಿಗೆ ತನ್ನ ತಪ್ಪಿನ ಅರಿವಾಗಿದೆ. ಮುರಳಿ ಜತೆ ಬಾಳಲು ರೆಡಿ ಇಲ್ಲ ಸಹನಾ. ಸಹನಾ ಈಗ ಮನೆ ಬಿಟ್ಟು ಹೋಗಿದ್ದಾಳೆ.ತಾಯಿಗೆ ಎಲ್ಲಿ ತಾನು ಭಾರವಾಗುತ್ತೇನೋ ಎಂದು ಸಹನಾ ಮನೆಯಿಂದ ಆಚೆ ನಡೆದಿದ್ದಾಳೆ. ಕಂಠಿ, ಕಾಳಿಯಿಂದ ಹೇಗೋ ಪಾರಾಗಿ ಬಸ್‌ ಹತ್ತಿ ಹೊರಟು ಬಿಟ್ಟಳು ಸಹನಾ.

VISTARANEWS.COM


on

Puttakkana Makkalu Serial puttakka daughter Sahana left home
Koo

ಬೆಂಗಳೂರು:  ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (puttakkana makkalu Serial) ಶುರುವಾಗಿ ಎರಡು ವರ್ಷಗಳು ಸಂದಿವೆ. ಉಮಾಶ್ರೀ, ಸಂಜನಾ ಬುರ್ಲಿ, ಧನುಷ್ ಎನ್​ಎಸ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದೀಗ ಪುಟ್ಟಕ್ಕನ ದೊಡ್ಡ ಮಗಳು ಸಹನಾ ದೇವಿಪುರ ಬಿಟ್ಟು ಹೊರನಡೆದಿದ್ದಾಳೆ. ಪುಟ್ಟಕ್ಕನಿಗೆ ಮಗಳು ಸಹನಾ ಗಂಡನ ಮನೆಯಲ್ಲಿ ಹಾಯಾಗಿ ಸಂಸಾರ ಮಾಡಬೇಕು ಎಂದು ಆಸೆಯಾದರೆ, ಮುರಳಿಯ ಜತೆ ಸಂಸಾರ ಮಾಡಲು ಒಲ್ಲೆ ಎನ್ನುತ್ತಿದ್ದಾಳೆ ಸಹನಾ. ಇದೀಗ ತಾಯಿಗೆ ಎಲ್ಲಿ ತಾನು ಭಾರವಾಗುತ್ತೇನೋ ಎಂದು ಸಹನಾ ಮನೆಯಿಂದ ಆಚೆ ನಡೆದಿದ್ದಾಳೆ.

ಮುರಳಿ-ಸಹನಾ ದಾಂಪತ್ಯ ಜೀವನದಲ್ಲಿ ಒಡಕು ಮೂಡಿದೆ. ಸಹನಾಗೆ ವಿಚ್ಛೇದನ ಬೇಕು, ಮುರಳಿಗೆ ತನ್ನ ತಪ್ಪಿನ ಅರಿವಾಗಿದೆ. ಎಷ್ಟೇ ಕ್ಷಮೆ ಕೇಳಿದರೂ ಕೂಡ ಸಹನಾ ಮುರಳಿಯನ್ನು ಕ್ಷಮಿಸಿ, ಅವನ ಜತೆ ಬಾಳಲು ರೆಡಿ ಇಲ್ಲ. ತವರು ಮನೆಗೆ ಭಾರ ಆಗದೆ ಬದುಕುವ ನಿರ್ಧಾರ ಮಾಡಿರುವ ಸಹನಾ, ಈಗ ಮನೆ ಬಿಟ್ಟು ಹೋಗಿದ್ದಾಳೆ.

ಸಹನಾ ಮನಸ್ಸಲ್ಲಿ ಏನಿದೆ?

ಇತ್ತ ಪುಟ್ಟಕ್ಕ ಕೂಡ ಸಹನಾಳ ಮನಸ್ಸನ್ನು ಆರ್ಥ ಮಾಡಿಕೊಳ್ಳಲು ರೆಡಿ ಇಲ್ಲ. ಸಹನಾ ಮನಸ್ಸಲ್ಲಿ ಏನಿದೆ? ಎಂದು ಪುಟ್ಟಕ್ಕ ಅರ್ಥ ಮಾಡಿಕೊಳ್ಳುತ್ತಿಲ್ಲ. ಇತ್ತ ಸಹನಾ ಕೂಡ ಏಕಾಏಕಿ ಬ್ಯಾಗ್‌ ಹಿಡಿದು ಮನೆಯಿಂದ ಹೊರ ಹೋಗಲು ಸಜ್ಜಾಗುತ್ತಾಳೆ. ತಂದೆ ತಾಯಿಗೆ ನಮಸ್ಕರಿಸಿ ಅಳುತ್ತಾಳೆ. ʻʻಏನೇ ಆಗಲಿ ತವರು ಮನೆಗೆ ಭಾರವಾಗಿ ನಾನು ಬದುಕಲಾರೆ. ನಾನು ಏನಾದರೂ ಸಾಧಿಸಿ ತೋರಿಸುತ್ತೇನೆ. ದಯವಿಟ್ಟು ಕ್ಷಮಿಸು ಅವ್ವ. ಅಮ್ಮ ನೀನು ನಮ್ಮೆರನ್ನು ಭದ್ರವಾಗಿ ಸಾಕು ಬಿಟ್ಟೆ. ಈಗ ನಾನು ಏನಾದರೂ ಸಾಧನೆ ಮಾಡಿಯೇ ಬರುತ್ತೇನೆʼʼಎಂದು ಸಹನಾ ಮನಸ್ಸಿನಲ್ಲಿ ಮರಗುಳತ್ತಾಳೆ. ಪುಟ್ಟಕ್ಕನಿಗೆ ಸಹನಾ ಮನೆ ಬಿಟ್ಟು ಹೋಗುತ್ತಾಳೆ ಎನ್ನುವ ಪರಿವೇ ಇಲ್ಲದೆ ಗಾಢವಾದ ನಿದ್ದೆಗೆ ಜಾರಿರುತ್ತಾರೆ.

ಇದನ್ನೂ ಓದಿ: Viral News: ಕೊಲೆಯಾಗಿದ್ದಾರೆ ಎನ್ನಲಾದ ಸಹೋದರಿಯರು ವರ್ಷದ ಬಳಿಕ ಪತ್ತೆ; ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ ಈ ಘಟನೆ

ಇಷ್ಟೂ ದಿನವೂ ಸಹನಾ ಮನವೊಲಿಸಿ,ಮುರುಳಿ ಜತೆ ಮಗಳು ಚೆನ್ನಾಗಿ ಬದುಕಬೇಕು ಎಂದು ಪುಟ್ಟಕ್ಕ ಹರಸಾಹಸ ಪಡುತ್ತಿರುತ್ತಾಳೆ. ಆದರೆ ಆ ಪ್ರಯತ್ನ ಈಗ ವ್ಯರ್ಥವಾಗಿದೆ. ಸಹನಾ ಎಲ್ಲರೂ ಮನೆಯಲ್ಲಿ ಮಲಗಿರುವಾಗ ಬಸ್ ಸ್ಟ್ಯಾಂಡಿಗೆ ಹೋಗುತ್ತಾಳೆ. ಬಸ್‌ಗೆಂದು ಕಾಯುತ್ತಿರುವಾಗ, ತಂಗಿಯ ಗಂಡ ಅಂದರೆ ಕಂಠಿ ರಸ್ತೆಯಲ್ಲಿಯೇ ಪಾಸ್ ಆಗುತ್ತಾರೆ. ಕಂಠಿಯನ್ನು ನೋಡಿದ ಸಹನಾ ಒಂದು ಮರದ ಬದಿಗೆ ಬಂದು ಅವಿತು ಕುಳಿತುಕೊಳ್ಳುತ್ತಾಳೆ. ಮಾತ್ರವಲ್ಲ ಅದೇ ಸಮಯಕ್ಕೆ ಕಾಳಿ ಕೂಡ ಅಲ್ಲಿ ಇರುತ್ತಾನೆ. ಕಾಳಿ ಕೂಡ ನಶೆಯಲ್ಲಿ ಇದ್ದ ಕಾರಣ ಅವನೂ ಸಹನಾಳನ್ನು ಪತ್ತೆ ಹಚ್ಚಲು ಆಗುವುದಿಲ್ಲ. ಆ ಬಳಿಕ ಸಹನಾ ಹೇಗೋ ಇಬ್ಬರಿಂದ ತಪ್ಪಿಸಿಕೊಂಡು ಒಬ್ಬಳೇ ನನ್ನನ್ನು ಕ್ಷಮಿಸಿಬಿಡಿ ಎಂದು ಜೋರಾಗಿ ಅಳುತ್ತಾಳೆ.

ಸಹನಾಗೆ ಬಸ್ ಹತ್ತಿವಾಗ ಬಹಳ ಬೇಸರ ಆಗುತ್ತದೆ. ದೇವಿಪುರಕ್ಕೆ ಮತ್ತೆ ಬರುವುದಿಲ್ಲ ಎಂದು ಮನಸ್ಸಿನಲ್ಲಿ ಅಂದುಕೊಂಡು ಬಸ್ಸನ್ನು ಏರಿ, ಅಲ್ಲಿಂದ ಹೊರಟು ಹೋಗುತ್ತಾಳೆ. ಅತ್ತ ತಂಗಿ ಸ್ನೇಹಾಗೆ ತನ್ನ ಅಕ್ಕನದ್ದೇ ಚಿಂತೆ. ಆದರೀಗ ಸಹನಾ ಎಲ್ಲರನ್ನೂ ಬಿಟ್ಟು ದೂರದ ಊರಿಗೆ ಪ್ರಯಾಣ ಬೆಳೆಸಿದ್ದಾಳೆ. ಈ ಸಂಚಿಕೆ ಕಂಡು ವೀಕ್ಷಕರು ಸಹನಾ ನಿರ್ಧಾರಕ್ಕೆ ಸಾಥ್‌ ಕೊಟ್ಟಿದ್ದಾರೆ.

 ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (puttakkana makkalu Serial) ಶುರುವಾಗಿ ಎರಡು ವರ್ಷಗಳು ಸಂದಿವೆ. ಉಮಾಶ್ರೀ, ಸಂಜನಾ ಬುರ್ಲಿ, ಧನುಷ್ ಎನ್​ಎಸ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

Continue Reading

ಕಿರುತೆರೆ

Rupali Ganguly: ನಾನು ಮೋದಿಯ ʻಡೈ ಹಾರ್ಡ್‌ ಫ್ಯಾನ್‌ʼ ಎಂದು ಬಿಜೆಪಿ ಸೇರಿದ ಖ್ಯಾತ ಕಿರುತೆರೆ ನಟಿ!

Rupali Ganguly: ರೂಪಾಲಿ ಗಂಗೂಲಿ (Rupali Ganguly) ಅವರು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾಗಿದ್ದಾರೆ. 1990ರ ಸಮಯದಲ್ಲಿ ನಟಿ ರೂಪಾಲಿ ಗಂಗೂಲಿಯವರು ಧಾರಾವಾಹಿ ಕ್ಷೇತ್ರದಲ್ಲಿ ಬಹಳಷ್ಟು ಹೆಸರು ಮಾಡಿದ್ದರು. ಹಲವಾರು ವಿಭಿನ್ನವಾದ ಧಾರಾವಾಹಿಗಳಲ್ಲಿ ಕಾಣಿಸಿಕೊಂಡ ಇವರು ತಮ್ಮ ನಟನೆಯ ಮೂಲಕ ಮನೆ ಮಾತಾಗಿದ್ದರು. ರೂಪಾಲಿ ಗಂಗೂಲಿ ರಾಜಕೀಯ ವೃತ್ತಿಜೀವನವನ್ನು ಘೋಷಿಸಿದ್ದರೂ, 2024ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆಯೇ ಎಂದು ಅವರು ಇನ್ನೂ ಖಚಿತಪಡಿಸಿಲ್ಲ.

VISTARANEWS.COM


on

Rupali Ganguly Of Anupamaa Fame Joins BJP
Koo

ಬೆಂಗಳೂರು: ದೂರದರ್ಶನ ನಟಿ ರೂಪಾಲಿ ಗಂಗೂಲಿ (Rupali Ganguly) ಅವರು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾಗಿದ್ದಾರೆ. ಮೇ 1ರಂದು ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. 1990ರ ಸಮಯದಲ್ಲಿ ನಟಿ ರೂಪಾಲಿ ಗಂಗೂಲಿಯವರು ಧಾರಾವಾಹಿ ಕ್ಷೇತ್ರದಲ್ಲಿ ಬಹಳಷ್ಟು ಹೆಸರು ಮಾಡಿದ್ದರು. ಹಲವಾರು ವಿಭಿನ್ನವಾದ ಧಾರಾವಾಹಿಗಳಲ್ಲಿ ಕಾಣಿಸಿಕೊಂಡ ಇವರು ತಮ್ಮ ನಟನೆಯ ಮೂಲಕ ಮನೆ ಮಾತಾಗಿದ್ದರು.

ಬಿಜೆಪಿ ಸೇರ್ಪಡೆ ಬಳಿಕ ನಟಿ ಮಾಧ್ಯಮದವರೊಂದಿಗೆ ಮಾತನಾಡಿ “ನಾನು ಬಿಜೆಪಿಗೆ ಸೇರ್ಪಡೆಯಾಗಿರುವುದು ತುಂಬಾ ಗೌರವ ಎಂದೆನಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದಾರೆ. ನಾನು ಪ್ರಧಾನಿ ಮೋದಿಯವರ ದೊಡ್ಡ ಅಭಿಮಾನಿ. ಬಿಜೆಪಿ ಉತ್ತಮ ಕೆಲಸ ಮಾಡುತ್ತಿದೆ. ಹಾಗಾಗಿ ನಾನು ಬಿಜೆಪಿ ಸೇರಲು ಬಯಸುತ್ತೇನೆ. ನಾನು ಪಕ್ಷಕ್ಕೆ ತುಂಬಾ ಕೃತಜ್ಞನಾಗಿದ್ದೇನೆʼʼ ಎಂದು ಹೇಳಿಕೊಂಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ರಾಜಕೀಯ ಮುಖಂಡ ವಿನೋದ್ ತಾವ್ಡೆ ಮತ್ತು ಅನಿಲ್ ಬಲುನಿ ಕೂಡ ಇದ್ದರು. ನಟಿ ರೂಪಾಲಿ ಗಂಗೂಲಿ ಅವರು ‘ಸುಕನ್ಯಾ’ ಧಾರಾವಾಹಿ ಮೂಲಕ ಕಿರುತೆರೆ ಕ್ಷೇತ್ರಕ್ಕೆ ಕಾಲಿಟ್ಟರು. ನಂತರ ‘ಸಾರಾಭಾಯಿ ವರ್ಸಸ್ ಸಾರಾಭಾಯಿ’ ಧಾರಾವಾಹಿಯಿಂದ ಬಹಳಷ್ಟು ಮನೆ ಮಾತಾಗಿದ್ದರು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ಒಂದು ದೊಡ್ಡ ಬ್ರೇಕ್ ತೆಗೆದುಕೊಂಡಿರುವ ನಟಿ ರೂಪಾಲಿ ಗಂಗೂಲಿ ‘ಅನುಪಮಾ’ ಎಂಬ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ʻಅನುಪಮಾʼ ಧಾರಾವಾಹಿ ಕೂಡ ಪ್ರೇಕ್ಷಕರ ಮೆಚ್ಚಿನ ಧಾರಾವಾಹಿಯಾಗಿ ಹೊರಹೊಮ್ಮಿತು.

ಇದನ್ನೂ ಓದಿ: Mallikarjuna Kharge: ಶಿವ, ಶ್ರೀರಾಮನ ಬಗ್ಗೆ ಖರ್ಗೆ ವಿವಾದಾತ್ಮಕ ಹೇಳಿಕೆ; ಬಿಜೆಪಿ ಕಿಡಿ

ರೂಪಾಲಿ ಗಂಗೂಲಿ ರಾಜಕೀಯ ವೃತ್ತಿಜೀವನವನ್ನು ಘೋಷಿಸಿದ್ದರೂ, 2024ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆಯೇ ಎಂದು ಅವರು ಇನ್ನೂ ಖಚಿತಪಡಿಸಿಲ್ಲ.

ತಿಂಗಳ ಮುಂಚೆ ಮೋದಿಯವರನ್ನು ಭೇಟಿಯಾಗಿದ್ದ ನಟಿ!

ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಬಗ್ಗೆ ನಟಿ ಮಾರ್ಚ್‌ನಲ್ಲಿ ಇನ್‌ಸ್ಟಾ ಮೂಲಕ ಹೇಳಿಕೊಂಡಿದ್ದರು. ʻʻ ನನ್ನ ಕನಸು ನನಸಾಯಿತು…ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಜಿ ಅವರನ್ನು ಭೇಟಿ ಮಾಡುವ ದಿನ. ಇದು ನಿಜಕ್ಕೂ ಅಭಿಮಾನಿ ಹುಡುಗಿಯ ಕ್ಷಣ! 14 ವರ್ಷಗಳ ಕಾಲ ನಾನು ಅಂತಹ ಒಂದು ದೊಡ್ಡ ವೇದಿಕೆ ಹಂಚಿಕೊಳ್ಳಬೇಕು ಎಂದು ಕಾಯುತ್ತಿದ್ದೆʼʼಎಂದು ಸಂತಸ ವ್ಯಕ್ತಪಡಿಸಿದ್ದರು.

ಹೆಚ್ಚು ಕಮ್ಮಿ ಆರರಿಂದ ಏಳು ವರ್ಷಗಳ ಕಾಲ ಯಾವುದೇ ನಟನೆಯಲ್ಲಿ ಕಾಣಿಸಿಕೊಳ್ಳದ ನಟಿ ರೂಪಾಲಿ ಗಂಗೂಲಿ ʻಅನುಪಮಾʼ ಮೂಲಕ ಮತ್ತೆ ಕಿರುತೆರೆಗೆ ಬಂದಿದ್ದರು. ʻʻದಶಕಗಳ ಹಿಂದೆ ನಮ್ಮ ಮನೆಯಲ್ಲಿ ಆರ್ಥಿಕ ಸಂಕಷ್ಟವಿತ್ತು. ನನ್ನ ತಂದೆ ಆರೋಗ್ಯ ಸರಿ ಇರಲಿಲ್ಲ. ಯಾವುದೇ ವ್ಯವಸ್ಥೆ ಇಲ್ಲದ ಸರ್ಕಾರಿ ಆಸ್ಪತ್ರೆಯಲ್ಲಿ ಅವರನ್ನು ಸೇರಿಸಲು ನನಗೆ ಇಷ್ಟವಿರಲಿಲ್ಲ. ಹಾಗಾಗಿ ನಾನು ಧಾರಾವಾಹಿ ಕ್ಷೇತ್ರಕ್ಕೆ ಕಾಲಿಟ್ಟೆ. ಆಗ ಬರುತ್ತಿದ್ದ ಹಣ ನನಗೆ ಬಹಳ ಮುಖ್ಯವಾಗಿತ್ತು ಎಂದು ರೂಪಾಲಿ ಈ ಹಿಂದೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

Continue Reading
Advertisement
Rinku Singh
ಕ್ರೀಡೆ1 min ago

Rinku Singh: ಟಿ20 ವಿಶ್ವಕಪ್​ಗೆ ರಿಂಕು ಆಯ್ಕೆಯಾಗಬಹುದೆಂದು ಪಟಾಕಿ, ಸಿಹಿ ತಂದಿಟ್ಟಿದ್ದ ತಂದೆಗೆ ನಿರಾಸೆ

Crime News
ಕ್ರೈಂ2 mins ago

Crime News : 6 ವರ್ಷದ ಬಾಲಕಿಯ ಅಪಹರಿಸಲು ಯತ್ನಿಸಿದ ದುಷ್ಟ; ಹಿಟ್‌ ಆ್ಯಂಡ್‌ ರನ್‌ ಮಾಡಿ ಚಾಲಕರಿಬ್ಬರು ಎಸ್ಕೇಪ್‌

Samsung
ತಂತ್ರಜ್ಞಾನ21 mins ago

ಸ್ಯಾಮ್‌ಸಂಗ್‌ನ ‘ಫ್ಯಾಬ್ ಗ್ರಾಬ್ ಫೆಸ್ಟ್’: ಸ್ಮಾರ್ಟ್‌ಫೋನ್‌, ಟಿವಿ, ಲ್ಯಾಪ್‌ಟಾಪ್‌, ಡಿಜಿಟಲ್ ಉಪಕರಣಗಳ ಮೇಲೆ ಅದ್ಭುತ ಆಫರ್

students self harming
ಕ್ರೈಂ51 mins ago

Students Self harming: 20 ವರ್ಷಗಳಲ್ಲಿ ಐಐಟಿಯ 115 ವಿದ್ಯಾರ್ಥಿಗಳು ಆತ್ಮಹತ್ಯೆ

Prajwal Revanna Case HD DeveGowda and HD Kumaraswamy slams HD Revanna
ಕ್ರೈಂ1 hour ago

Prajwal Revanna Case: ನಿನ್ನ ಮಗನಿಂದ ಇಂಥ ಕಪ್ಪು ಚುಕ್ಕೆ ಬಂತು; ರೇವಣ್ಣ ಮೇಲೆ ಮುಗಿಬಿದ್ದ ಎಚ್‌ಡಿಡಿ, ಎಚ್‌ಡಿಕೆ

Pawan Kalyan Hari Hara Veera Mallu Part 1 teaser Out
ಟಾಲಿವುಡ್1 hour ago

Pawan Kalyan: ʻಹರಿ ಹರ ವೀರ ಮಲ್ಲುʼವಾಗಿ ಅಬ್ಬರಿಸಿದ ಪವನ್ ಕಲ್ಯಾಣ್; ಟೀಸರ್‌ ಔಟ್‌!

supreme court
ದೇಶ1 hour ago

Supreme Court: CBI ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿಲ್ಲ; ಸುಪ್ರೀಂಕೋರ್ಟ್‌ಗೆ ಸರ್ಕಾರ ಸ್ಪಷ್ಟನೆ

Viral News
ವೈರಲ್ ನ್ಯೂಸ್2 hours ago

Viral News: ಮದುವೆಗೆ ಮುನ್ನವೇ 2 ಬಾರಿ ಗರ್ಭಿಣಿಯಾದ ಅಪ್ರಾಪ್ತೆ; ಪೋಷಕರು ಮಗುವನ್ನು ಮಾರಾಟ ಮಾಡಿದ್ದಾರೆಂದು ದೂರು

Uber Cup 2024 Quarterfinal
ಕ್ರೀಡೆ2 hours ago

Uber Cup 2024 Quarterfinal: ಭಾರತದ ಸವಾಲು ಅಂತ್ಯ; ಜಪಾನ್​ ವಿರುದ್ಧ ಕ್ವಾ. ಫೈನಲ್​ನಲ್ಲಿ ಸೋಲು

Ambedkar statue
ಕಲಬುರಗಿ2 hours ago

Ambedkar Statue: ಅಂಬೇಡ್ಕರ್‌ ಪ್ರತಿಮೆ ಅಪಮಾನ ಪ್ರಕರಣ ಸಿಐಡಿಗೆ ಹಸ್ತಾಂತರ! ಡಾ. ಜಿ. ಪರಮೇಶ್ವರ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ10 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌