BBK Season 10 : ಸಂಗೀತಾ ಯು ಆರ್‌ ರಾಂಗ್;‌ ಡಾಮಿನೆನ್ಸ್‌ ಕ್ವೀನ್‌ ಕಿವಿ ಹಿಂಡಿದ ಕಿಚ್ಚ - Vistara News

ಕಿರುತೆರೆ/ಒಟಿಟಿ

BBK Season 10 : ಸಂಗೀತಾ ಯು ಆರ್‌ ರಾಂಗ್;‌ ಡಾಮಿನೆನ್ಸ್‌ ಕ್ವೀನ್‌ ಕಿವಿ ಹಿಂಡಿದ ಕಿಚ್ಚ

BBK Season 10 : ಫ್ಲಿಪ್‌ ಎಂಬ ಪದ ಬಳಸಿ ತನಿಷಾ ಮತ್ತು ಕಾರ್ತಿಕ್‌ ಅವರ ಸ್ನೇಹವನ್ನೇ ಪ್ರಶ್ನೆ ಮಾಡಿದ ಸಂಗೀತಾ ಶೃಂಗೇರಿಗೆ ನಿಮ್ಮ ಸ್ನೇಹ ಎಷ್ಟು ಸಾಚಾ ಎಂದು ಪ್ರಶ್ನೆ ಮಾಡಿದ್ದಾರೆ ಕಿಚ್ಚ ಸುದೀಪ್‌. ಈ ಮೂಲಕ ಡಾಮಿನೆನ್ಸ್‌ ರಾಣಿಯ ಕಿವಿ ಹಿಂಡಿದ್ದಾರೆ.

VISTARANEWS.COM


on

Sangeetha Shringeri and Kiccha Sudeep
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಫ್ಲಿಪ್‌ ಎಂಬ ಪದವನ್ನು ಇಟ್ಟುಕೊಂಡು ಎರಡು ದಿನಗಳ ಕಾಲ ತನಿಷಾ (Tanisha Kuppanda) ಮತ್ತು ಕಾರ್ತಿಕ್‌ (Kartik Mahesh) ಅವರನ್ನು ಕಾಡಿದ, ಇಬ್ಬರೂ ಕಣ್ಣೀರು ಹಾಕುವಂತೆ ಮಾಡಿ ಕೊನೆಗೆ ತಾನು ಮಾತ್ರ ಸೇಫ್‌ ಆಗಿ ಸಂಭ್ರಮಿಸಿದ ಸಂಗೀತಾ ಶೃಂಗೇರಿ (Sangeeta Shringeri) ಅವರಿಗೆ ಕಿಚ್ಚ ಸುದೀಪ್‌ (Kiccha Sudeep) ಸಖತ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ನೀವು ಮೂವರೂ ಹೊರಗಡೆ ತುಂಬ ಕೆಟ್ಟದಾಗಿ ಕಾಣಿಸುತ್ತಿದ್ದೀರಿ. ಒಬ್ಬರು ಓವರ್ ಡಾಮಿನೆಂಟ್‌ ಆಗಿ ಕಾಣಿಸುತ್ತಿದ್ದೀರಿ. ಒಬ್ಬರು ತುಂಬಾ ವೀಕ್ ಆಗಿ ಕಾಣಿಸುತ್ತಿದ್ದೀರಿ. ಇನ್ನೊಬ್ಬರು ವಿಧಿನೇ ಇಲ್ಲದೆ, ತಲೆ ಇಲ್ಲದೆ ಆಡ್ತಿರೋರ ಹಾಗೆ ಕಾಣಿಸುತ್ತಿದ್ದೀರಿ. ಹೀಗೆ ಮಾಡಿದರೆ ಡೆಡ್‌ ಎಂಡ್‌ಗೆ ಹೋಗುವುದು ಮೂವರಿಗೂ ಕಷ್ಟ ಆಗುತ್ತದೆ. ಆ ದಿನ ನೀವು ನನ್ನ ಮಾತು ನೆನಪಿಸಿಕೊಳ್ತೀರಿ ಎಂದು ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

‘ಬಿಗ್ ಬಾಸ್‌ ಕನ್ನಡ ಸೀಸನ್‌ 10’ (BBK Season 10) ಇದರ ಆರನೇ ವಾರದ ʻವಾರದ ಕಥೆ ಕಿಚ್ಚನ ಜತೆʼ ಸಂಚಿಕೆಯಲ್ಲಿ ತುಂಬಾ ಹೊತ್ತು ಸಂಗೀತಾ – ಕಾರ್ತಿಕ್ – ತನಿಷಾ ನಡುವಿನ ಸ್ನೇಹ ಮತ್ತು ವಾದ ವಿವಾದಗಳ ಚರ್ಚೆ ನಡೆಯಿತು. ‘’ಫ್ರೆಂಡ್‌ ಆಗಿ ಅವಕಾಶವಿದ್ದರೂ ನನ್ನನ್ನ ಸೇಫ್‌ ಮಾಡಲಿಲ್ಲ’’ ಎಂದು ಪದೇಪದೆ ಕಾರ್ತಿಕ್ ಮತ್ತು ತನಿಷಾ ಅವರನ್ನು ಚುಚ್ಚಿದ ಸಂಗೀತಾ ಅವರನ್ನು ಕಿಚ್ಚ ಸುದೀಪ್‌ ʻಯೂ ಆರ್‌ ರಾಂಗ್‌ʼ ಅಂತ ನೇರವಾಗಿಯೇ ಹೇಳಿದರು. ಏನೇ ಹೇಳಿದರೂ ಕೇಳದೆ ವಾದವನ್ನೇ ಮುಂದುವರಿಸಿದ ಸಂಗೀತಾ ಅವರಿಗೆ ಕಿಚ್ಚ ಚೆನ್ನಾಗಿಯೇ ಕ್ಲಾಸ್‌ ತೆಗೆದುಕೊಂಡರು. ಫ್ರೆಂಡ್‌ಷಿಪ್‌ ಅಂತ ಹೇಳ್ತಾ ಉಳಿದವರ ತಪ್ಪುಗಳನ್ನು ಎತ್ತಿ ತೋರಿಸುತ್ತಾ ಡಾಮಿನೆನ್ಸ್‌ ಮಾಡುವ ನೀವು ಫ್ರೆಂಡ್‌ ಆಗಿ 100% ಕೊಟ್ಟಿದ್ದೀರಾ ಎಂದು ನೇರವಾಗಿಯೇ ಕೇಳಿದರು.

ಕಳೆದ ವಾರದ ಲುಡೋ ಟಾಸ್ಕ್‌ನಲ್ಲಿ ಸಂಗೀತಾ, ಕಾರ್ತಿಕ್‌ ಮತ್ತು ತನಿಷಾ ಒಂದು ಗ್ರೂಪ್‌ ಆಗಿದ್ದರು. ಆಟದ ನಡುವೆ ಈ ಗ್ರೂಪ್‌ಗೆ SWAP ಎನ್ನುವ ಆಪ್ಶನ್‌ ಸಿಕ್ಕಾಗ ಅತಿ ಹೆಚ್ಚು ಸೇಫ್‌ ಆಗಿದ್ದ, HOMEಗೆ ಹೋಗಲು ಕೇವಲ ಎರಡನೇ ನಂಬರ್‌ ಅಗತ್ಯವಿದ್ದ ವರ್ತೂರು ಸಂತೋಷ್‌ ಅವರ ಸ್ಥಾನವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆಗ ಸಂಗೀತಾ ತಾನು ಹೋಗುವುದಾಗಿ ಹೇಳಿದ್ದರು. ತನಿಷಾ ಮತ್ತು ಕಾರ್ತಿಕ್‌ ಯಾವ ಮಾತೂ ಇಲ್ಲದೆ ಒಪ್ಪಿ ಸಂಗೀತಾರನ್ನು ಕಳುಹಿಸಿಕೊಟ್ಟಿದ್ದರು. ವರ್ತೂರು ಬಂದು ತನಿಷಾ ಮತ್ತು ಕಾರ್ತಿಕ್‌ ಜತೆ ಸೇರಿದ್ದರು.

sangeetha Karthik tanisha

ಮುಂದಿನ ಹಂತದಲ್ಲಿ ಈ ಗ್ರೂಪ್‌ಗೆ ಒಬ್ಬರನ್ನು ಸೇವ್‌ ಮಾಡುವ ಅವಕಾಶ ಸಿಕ್ಕಾಗ ಕಾರ್ತಿಕ್‌ ಮತ್ತು ತನಿಷಾ ಸಂಗೀತಾ ಅವರ ಹೆಸರು ಎತ್ತಿಕೊಳ್ಳಲು ಮುಂದಾದರಾದರೂ ವರ್ತೂರು ಸಂತೋಷ್‌ ಅವರು ಈ ವಿಚಾರದಲ್ಲಿ ನನ್ನ ಜತೆಗೂ ಚರ್ಚೆ ಮಾಡಿ ಎಂದು ಸೂಚಿಸಿದರು. ಆದರೆ, ಮೂವರ ಚರ್ಚೆಯ ಹಂತದಲ್ಲಿ ಸಂಗೀತಾ ಹೆಸರು ಬರಲಿಲ್ಲ. ಬದಲಾಗಿ ನೀತು ಮತ್ತು ಸಿರಿ ಅವರ ಹೆಸರು ಬಂದು ಸಿರಿ ಅವರನ್ನು ಆಯ್ಕೆ ಮಾಡಲಾಗಿತ್ತು. ಆಗ ಸಂಗೀತಾ ʻಫ್ಲಿಪ್‌ʼ ಎಂಬ ಪದವನ್ನು ಬಳಸಿ ಕಾರ್ತಿಕ್‌ ಮತ್ತು ತನಿಷಾ ಅವರನ್ನು ಛೇಡಿಸಿದ್ದರು. ಮುಂದೆಯೂ ಬೆಂಬಿಡದೆ ಕಾಡಿದ್ದರು. ಫ್ರೆಂಡ್‌ ಆಗಿ ನೀವು ನನ್ನನ್ನು ಸೇಫ್‌ ಮಾಡದೆ ಸಿರಿ ಅವರನ್ನು ಆಯ್ಕೆ ಮಾಡುವ ಮೂಲಕ ಬಣ್ಣ ಬದಲಿಸಿದಿರಿ ಎಂದು ಹೇಳಿದ್ದರು. ಕಾರ್ತಿಕ್‌ ಮತ್ತು ತನಿಷಾ ಹೇಗೆ ಹೇಗೆ ವಿವರಿಸಿದರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.

ಇದೆಲ್ಲ ವಿಚಾರಗಳು ಕಿಚ್ಚನ ಪಂಚಾಯಿತಿಯಲ್ಲಿ ಚರ್ಚೆಗೆ ಬಂತು.

ನಿಮಗೂ ಅವಕಾಶ ಸಿಕ್ಕಿತ್ತು, ನೀವ್ಯಾಕೆ ನಿಮ್ಮ ಫ್ರೆಂಡ್ಸ್‌ ಹೆಸರು ತೆಗೆದುಕೊಂಡಿಲ್ಲ!

ಲೂಡೋ ಆಟದ ವೇಳೆ ಸಂತೋಷ್‌ ಅವರ ಜತೆ ಪ್ಲೇಸ್‌ ಸ್ವಾಪ್‌ ಮಾಡುವ ಹಂತದಲ್ಲಿ ನಾನು ಹೋಗ್ತೀನಿ ಅಂತ ಸಂಗೀತಾ ಮುಂದಾಗಿದ್ದನ್ನು ಉಲ್ಲೇಖಿಸಿದ ಸುದೀಪ್‌, ಆ ಜಾಗಕ್ಕೆ ಹೋಗುವ ವಿಚಾರದಲ್ಲಿ ನೀವು ಕಾರ್ತಿಕ್‌ ಮತ್ತು ತನಿಷಾ ಜತೆ ಚರ್ಚೆ ಮಾಡಿದ್ರಾ ಎಂದು ಕೇಳಿದರು. ಆಗ ಸಂಗೀತಾ ʻಅವರೂ ಕೇಳಬಹುದಿತ್ತುʼ ಎಂದರು. ಆಗ ಸುದೀಪ್‌, ವಾರವಿಡೀ ‘ನೀನೂ ಕೇಳಬಹುದಿತ್ತು’ ಅಂತ ನೀವು ತುಂಬಾ ಸಲ ಹೇಳಿದ್ದೀರಿ. ಆದ್ರೆ ನೀವ್ಯಾಕೆ ಕೇಳಲಿಲ್ಲ? ಎಂದು ಪ್ರಶ್ನಿಸಿದರು.

ಆಗ ಸಂಗೀತ- ‘ನೀನು ಹೋಗು’ ಅಂದ್ಮೇಲೆ ನಾನು ಇನ್ನೇನು ಕೇಳಲಿ? ಎಂದು ಪ್ರಶ್ನಿಸಿದರು. ನೀವು ಹೋಗ್ತೀನಿ ಎಂದಾಗ ‘’ಹೋಗಬೇಡ’’ ಅನ್ನೋಕೆ ಅವರಿಗೆ ಮನಸ್ಸಾಗಲಿಲ್ಲ. ಒಬ್ಬ ಫ್ರೆಂಡ್‌ ಹೋಗಲು ಇಷ್ಟಪಟ್ಟರು. ಬಾಕಿ ಇಬ್ಬರು ಅದಕ್ಕೆ ಸ್ಪಂದಿಸಿದರು. ‘’ನಾನೂ ಹೋಗಬೇಕು’’ ಅಂತ ಹೇಳುವ ಮನಸ್ಸು ಇಬ್ಬರಿಗೂ ಇರಲಿಲ್ಲ ಎಂದು ವಿವರಿಸಿದರು.

ಕಾರ್ತಿಕ್‌ ಮತ್ತು ತನಿಷಾ ತಮಗೂ ಅಲ್ಲಿಗೆ ಹೋಗಬೇಕು ಅನ್ನೋ ಮನಸಿತ್ತು. ಆದರೆ, ಸಂಗೀತಾ ಆಸಕ್ತಿ ತೋರಿಸಿದಾಗ ಬೇಡ ಅನ್ನಲಾಗಲಿಲ್ಲ. ಅದಕ್ಕೆ ಬಿಟ್ಟುಕೊಟ್ಟೆವು ಎಂದರು.

ಲುಡೋ ಆಟದಲ್ಲಿ ನಿಮಗೂ ಒಬ್ಬರನ್ನು ಸೇಫ್‌ ಮಾಡುವ ಅವಕಾಶ ಸಿಕ್ಕಿತ್ತು. ಆಗ ನೀವ್ಯಾಕೆ ನಿಮ್ಮ ಫ್ರೆಂಡ್ಸ್ ಹೆಸರು ತೆಗೆದುಕೊಂಡಿಲ್ಲ, ಎಥಿಕ್ಸ್‌ ಹೆಸರಲ್ಲಿ ವರ್ತೂರು ಸಂತೋಷ್‌ ಹೆಸರು ತೆಗೆದುಕೊಂಡಿರಿ. ಆಗ ನಿಮಗೆ ಫ್ರೆಂಡ್‌ಷಿಪ್‌ ಯಾಕೆ ನೆನಪಾಗಲಿಲ್ಲ ಎಂದು ಸುದೀಪ್‌ ನೇರವಾಗಿ ಸಂಗೀತಾ ಅವರನ್ನು ಕೇಳಿದರು.

ಆಗ ಸಂಗೀತಾ, ವರ್ತೂರು ಸಂತೋಷ್ ಅವರ ಮನೆಗೆ ನಾನು ಬಂದಿದ್ದೆ. ಅಲ್ಲಿಗೆ ಬರದೇ ಹೋಗಿದ್ದರೆ ನನಗೆ ಗೆಲ್ಲುವ ಚಾನ್ಸಸ್ ಇರ್ತಿರ್ಲಿಲ್ಲ ಎಂದರು. ಆಗ ಸುದೀಪ್‌, ʻʻಇಲ್ಲ ಸಂಗೀತಾ ಅವರೇ, ಅವರಿಬ್ಬರು ನಿಮ್ಮನ್ನು ಅಲ್ಲಿಗೆ ಕಳುಹಿಸಲಿಲ್ಲ ಅಂದಿದ್ದರೆ ನೀವು ಗೆಲ್ಲೋಕೆ ಸಾಧ್ಯ ಆಗುತ್ತಿರಲಿಲ್ಲʼʼ ಎಂದರು.

ಅದಕ್ಕೆ ಮೊಂಡುವಾದ ಮಾಡಿದ ಸಂಗೀತಾ, ಅಲ್ಲಿ ಪ್ರಾಬಬಿಲಿಟಿ ಆಫ್‌ ವಿನ್ನಿಂಗ್ ⅙ ಇತ್ತು, ಅಲ್ಲಿ ಲಕ್ ಇತ್ತು… ಹೀಗಾಗಿ ಕ್ರೆಡಿಟ್‌ ಅನ್ನು ಕಾರ್ತಿಕ್‌ ಮತ್ತು ತನಿಷಾಗೆ ಕೊಡುವುದಿಲ್ಲ ಎಂದರು.

ಆಗ ಸುದೀಪ್‌- ವರ್ತೂರು ಸಂತೋಷ್ ಅವರ ಜಾಗದಲ್ಲಿ ನೀವೇ ಬರಬೇಕು ಅನ್ನೋದು ವರ್ತೂರು ಸಂತೋಷ್ ಅವರ ಆಯ್ಕೆ ಅಲ್ಲ. ನಿಮ್ಮ ಆಸೆ ಪ್ರಕಾರ.. ಕಾರ್ತಿಕ್, ತನಿಷಾ ಹಿಂದೆ ಮುಂದೆ ನೋಡದೆ ಸ್ಪಂದಿಸಿದರು. ಆಟ ಅಲ್ಲಿ ನೋಡಬೇಕಾದರೆ, ಸೇಫೆಸ್ಟ್ ಇದ್ದದ್ದು ಅದೇ ಮನೆ. ಏನು ಬೇಕಾದರೂ ಆಗಬಹುದಿತ್ತು ಅನ್ನೋದು ಆಮೇಲೆ. ಆದರೆ, ಸರ್‌ಫೇಸ್‌ ಲೆವೆಲ್‌ನಲ್ಲಿ ನಿಮ್ಮ ಪರವಾಗಿ ನಿಂತವರು ಕಾರ್ತಿಕ್, ತನಿಷಾ. ಆಟದ ರೂಲ್ಸ್ ಪ್ರಕಾರ ವರ್ತೂರು ಸಂತೋಷ್ ಶಿಫ್ಟ್ ಆದರು ಅನ್ನೋದು ಬಿಟ್ಟರೆ ದೊಡ್ಡತನದಲ್ಲಿ ಅಲ್ಲ. ಆ ಟ್ವಿಸ್ಟ್ ಬರಲಿಲ್ಲ ಅಂದಿದ್ದರೆ ವರ್ತೂರು ಸಂತೋಷ್ ಅಲ್ಲೇ ಇರುತ್ತಿದ್ದರು ಎಂದು ನೆನಪಿಸಿದರು.

ಇಷ್ಟೆಲ್ಲ ವಾದ ಮಾಡಿ, ಜಗಳವಾಡಿದ ನೀವೇ ಸೇಫ್‌ ಆಗಿ ಕುಳಿತಿದ್ದೀರಿ.. ಎಲ್ಲವನ್ನೂ ಕೇಳಿಸಿಕೊಂಡ ತನಿಷಾ ಮತ್ತು ಕಾರ್ತಿಕ್‌ ನಾಮಿನೇಷನ್‌ ಸೀಟ್‌ ನಲ್ಲಿ ಕುಳಿತಿದ್ದಾರೆ ಎಂದು ನೆನಪಿಸಿದರು ಕಿಚ್ಚ ಸುದೀಪ್‌.

ಸಂಗೀತಾ ಸ್ನೇಹದಲ್ಲಿ 100% ಕೊಟ್ಟಿಲ್ಲ ಎಂದ ಕಾರ್ತಿಕ್‌, ತನಿಷಾ

ಸಂಗೀತಾ ನೀವು ಪದೇಪದೆ ನೀವ್ಯಾಕೇ ಕೇಳಲಿಲ್ಲ, ನೀವು ಕೇಳಬೇಕಿತ್ತು ಅಂತ ಹೇಳುತ್ತಲೇ ಇದ್ರಿ. ಏನೂ ಯೋಚನೆ ಮಾಡದೆ.. ನಿಮ್ಮ ಮಾತನ್ನ ಕೇಳಿದ ತಕ್ಷಣ ಆಕಡೆಗೆ ಕಳುಹಿಸಿಕೊಟ್ರಲ್ಲ. ಅದಾದ್ಮೇಲೂ ಅನ್ನಿಸಿಕೊಂಡ್ರಲ್ಲ. ಅದರ ವಾಲ್ಯೂ ಏನು? ಇದೇನಾ ನಿಮ್ಮ ಫ್ರೆಂಡ್‌ಶಿಪ್‌? ಈ ಫ್ರೆಂಡ್‌ಶಿಪ್‌ನಲ್ಲಿ ನೀವು 100% ಗಿವಿಂಗ್ ಆಗಿದ್ದೀರಾ? ಎಂದು ಕಿಚ್ಚ ಕೇಳಿದರು. ಇಲ್ಲಿವರೆಗೂ ಕೊಟ್ಟಿದ್ದೀನಿ ಅಂತ ಸಂಗೀತಾ ಹೇಳಿದರು. ಆದರೆ, ಕಾರ್ತಿಕ್‌ ಮತ್ತು ತನಿಷಾ ಇಲ್ಲ ಎಂದರು. ʻʻಫ್ರೆಂಡ್‌ಶಿಪ್ ಹಾಳಾಗಬಾರದು ಅಂತ ಸ್ವಲ್ಪ ಜಾಸ್ತಿನೇ ಅಡ್ಜಸ್ಟ್ ಮಾಡಿಕೊಳ್ತಿದ್ದೀವಿ ಅನ್ಸತ್ತೆ ಸರ್.ʼʼ ಎಂದು ತನಿಷಾ ಹೇಳಿದರು.

ಈ ನಡುವೆ ಕಿಚ್ಚ ಅವರು ನಮೃತಾ ಬಳಿ ಕಾರ್ತಿಕ್‌, ಸಂಗೀತಾ, ತನಿಷಾ ಸಂಬಂಧದ ಬಗ್ಗೆ ಕೇಳುತ್ತಾರೆ. ಆಗ ನಮೃತಾ ʻʻಮೂವರ ಮಧ್ಯೆಯೇ ಬೇರೆ ಬೇರೆ ಗ್ರೂಪ್ ಇದೆ ಅನ್ಸುತ್ತೆ. ಅಂದ್ರೆ.. ಕಾರ್ತಿಕ್ – ಸಂಗೀತಾ, ಕಾರ್ತಿಕ್ – ತನಿಷಾ ಅಂತ. ಫ್ರೆಂಡ್‌ಶಿಪ್‌ನಿಂದ ಸಂಗೀತಾ ಬೇರೆ ಏನೋ ಎಕ್ಸ್‌ಪೆಕ್ಟ್ ಮಾಡ್ತಾರೆ. ತನಿಷಾ ಏನೂ ಎಕ್ಸ್‌ಪೆಕ್ಟ್ ಮಾಡ್ತಿಲ್ಲ. ಕಾರ್ತಿಕ್ ಇಬ್ಬರ ಮಧ್ಯೆ ಒಳ್ಳೆಯ ಈಕ್ವೇಷನ್ ಇಟ್ಟುಕೊಂಡಿದ್ದಾರೆ ಅಂತ ಅನ್ಸುತ್ತೆ ಸರ್ʼʼ ಎಂದು ವಾಸ್ತವ ಹೇಳಿದರು.

ತ್ಯಾಗ ಮಾಡೋದೂ ಮುಖ್ಯ ಅಲ್ಲ, ತಾಯಿ ಆಗೋದೂ ಮುಖ್ಯ ಅಲ್ಲ

ಸಂಗೀತಾ ವಿಷಯದಲ್ಲಿ ತಾನು ತುಂಬ ತ್ಯಾಗ ಮಾಡುತ್ತಿದ್ದೇನೆ, ಕಾಂಪ್ರೊಮೈಸ್‌ ಮಾಡಿಕೊಳ್ಳುತ್ತಿದ್ದೇನೆ ಅನಿಸುತ್ತಿದೆ ಎಂದು ಕಾರ್ತಿಕ್‌ ಹೇಳಿದರೆ, ನಾನು ಸಂಗೀತಾಳನ್ನು ಪುಟ್ಟ ಹುಡುಗಿ ಅಂದುಕೊಂಡು ತಾಯಿ ಹಾಗೆ ನೋಡಿಕೊಂಡೆ ಎಂದು ತನಿಷಾ ಹೇಳಿದರು. ಆದರೆ ನಂಬಿಕೆ ಇಲ್ಲ ಅಂತ ಸಂಗೀತಾ ಹೇಳುವಾಗ ಬೇಜಾರಾಯ್ತು ಅಂದರು.

ಆಗ ಸುದೀಪ್‌, ʻʻನಿಮ್ಮ ಫ್ರೆಂಡ್‌ಶಿಪ್‌ನ ನೀವೇನು ಮೇನ್‌ಟೇನ್ ಮಾಡೋಕೆ ಹೋಗ್ತೀರೋ.. ತ್ಯಾಗ ಮಾಡೋಕೆ ಹೋಗ್ತೀರೋ.. ಗೊತ್ತಿಲ್ಲ. ಹೊರಗಡೆ ಅಗ್ಲಿ ಆಗಿ ಕಾಣಬೇಡಿ. ಅಗ್ಲಿ ಹಾಗೇ ಕಾಣಿಸುತ್ತಿದೆ. ನಿಮ್ಮ ನಿಮ್ಮಲ್ಲಿ ನೀವು ಸ್ಟ್ರಾಂಗ್ ಸ್ಪರ್ಧಿಗಳು ಅಂದುಕೊಂಡರೆ, ಅದಕ್ಕೆ ತಕ್ಕ ಹಾಗೆ ಬಾಳಿ ಬದುಕಬೇಕೇ ಹೊರತು ಎಕ್ಸ್‌ಪೆಕ್ಟ್ ಮಾಡೋದು, ತ್ಯಾಗ ಮಾಡೋದು, ತಾಯಿ ಆಗೋದು ಮುಖ್ಯನಾ? ಎಂದು ಕೇಳಿದರು.

ಇದನ್ನೂ ಓದಿ: BBK Season 10: ಆರನೇ ವಾರ ಬಿಗ್‌ ಬಾಸ್‌ ಮನೆಯಿಂದ ಇಶಾನಿ ಔಟ್‌

ಅಂದು ನಡೆದಿದ್ದೇನು? ಕ್ಲಾರಿಟಿ ಕೊಟ್ಟ ಸುದೀಪ್‌

ಲುಡೋ ಆಟದ ವೇಳೆ ಒಬ್ಬರನ್ನು ಸೇವ್‌ ಮಾಡಬೇಕು ಅಂತ ಬಂದಾಗ ಸಂಗೀತಾ ಹೇಗಿದ್ದರೂ ಸೇಫ್ ಆಗ್ತಾಳೆ ಈಗ ಅಂತ ಕಾರ್ತಿಕ್, ತನಿಷಾ ಮಾತನಾಡಿಕೊಂಡರು. ಅದು ವರ್ತೂರು ಸಂತೋಷ್‌ಗೆ ಕೇಳಿಸಲಿಲ್ಲ. ವರ್ತೂರು ಸಂತೋಷ್ ಬಂದ್ಮೇಲೆ ಸಿರಿ ಹೆಸರನ್ನು ತೆಗೆದುಕೊಂಡರು. ದುರದೃಷ್ಟ ಏನಂದರೆ.. ಸಂಗೀತಾ ಅವರೇ.. ತಾವು ಸೇಫ್ ಆದ್ಮೇಲೂ ಇಷ್ಟೆಲ್ಲಾ ಮಾಡಿದ್ದು ಸರಿ ಅಲ್ಲ ಎಂದು ಕಿಚ್ಚ ಸುದೀಪ್‌ ಸ್ಪಷ್ಟವಾಗಿ ಹೇಳಿದರು.

ನೀವು ಮೂರೂ ಜನ ಆಡೋಕೆ ಹೋಗಿದ್ದೀರಾ.. ಅಥವಾ ಸಂಗೀತಾನ ಗೆಲ್ಲಿಸೋಕೆ ನೀವಿಬ್ಬರೂ ಹೋಗಿದ್ದೀರಾ ಅಂತ ಹೊರಗಡೆ ಡೌಟ್‌ ಇದೆ. ಫ್ರೆಂಡ್‌ಶಿಪ್‌ ತಪ್ಪು ಅಂತ ಹೇಳುತ್ತಿಲ್ಲ. ಡೋಂಟ್‌ ಮೇಕ್‌ ಇಟ್‌ ಟಾಕ್ಸಿಕ್. ಹೊರಗಡೆ ನೋಡುತ್ತಿರುವವರಿಗೆ ಟಾಕ್ಸಿಕ್ ಮಾಡಬೇಡಿ ಎಂದು ಕಿವಿ ಮಾತು ಹೇಳಿದರು. ಇಷ್ಟಾದರೂ ಮಾತು ಮುಂದುವರಿಸಿದ ಸಂಗೀತಾ ಅವರಿಗೆ ಯೂ ಆರ್‌ ರಾಂಗ್‌ ಅಂತ ಕಿಚ್ಚ ಸ್ಪಷ್ಟವಾಗಿಯೇ ಹೇಳಿದರು. ಹೀಗೇ ಮುಂದುವರಿದರೆ ಮುಂದಿನ ದಾರಿ ಕಷ್ಟ ಆಗುತ್ತದೆ ಎಂದು ಎಚ್ಚರಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Kannada Web Series: ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದ ಬಸ್ ಮೆಕಾನಿಕಲ್; ಸೆಟ್ಟೇರಿತು ‘ಕರ್ನಾಟಕ Love’s ಕೇರಳ’ ವೆಬ್ ಸಿರೀಸ್

Kannada Web Series: ಕನ್ನಡದಲ್ಲಿ ವೆಬ್‌ ಸೀರಿಸ್‌ಗಳು ಕಡಿಮೆ. ಇದೀಗ ಈ ಕೊರತೆಯನ್ನು ನೀಗಿಸಲು ಹೊಸಬರ ತಂಡವೊಂದು ಮುಂದಾಗಿದೆ. ‘ಕರ್ನಾಟಕ Love’s ಕೇರಳ’ ಹೆಸರಿನ ವೆಬ್‌ ಸೀರಿಸ್‌ ಬೆಂಗಳೂರಿನಲ್ಲಿ ಸೆಟ್ಟೇರಿದೆ.

VISTARANEWS.COM


on

kannada web series
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ಈಗ ಹೊಸಬರಿಗೆ ವಿಫುಲ ಅವಕಾಶವಿದೆ. ಹೊಸಬರ ಚಿತ್ರಗಳು ಸಿನಿಪ್ರಿಯರ ಮೆಚ್ಚುಗೆ ಗಳಿಸುತ್ತಿವೆ. ಇದೀಗ ಮತ್ತೊಂದು ಪ್ರತಿಭಾನ್ವಿತ ಹಾಗೂ ಯುವ ಸಿನಿಮೋತ್ಸಾಹಿಗಳ ತಂಡವೊಂದು ಸೇರಿ ‘ಕರ್ನಾಟಕ Love’s ಕೇರಳ’ (Karnataka Loves Kerala) ಎಂಬ ವೆಬ್ ಸಿರೀಸ್ ರೂಪಿಸುತ್ತಿದೆ.‌ ಅದರ ಮೊದಲ ಭಾಗವಾಗಿ ಇತ್ತೀಚೆಷ್ಟೇ ಬೆಂಗಳೂರಿನ ವೆಂಕಟೇಶ್ವರ ದೇಗುಲದಲ್ಲಿ ವೆಬ್‌ ಸೀರಿಸ್‌ (Kannada Web Series)ಗೆ ಮುಹೂರ್ತ ನಡೆಸಲಾಯಿತು. ‘ಕರ್ನಾಟಕ Love’s ಕೇರಳ’ ಸಿರೀಸ್‌ಗೆ ಗರುಡ ರಾಮ್ ಕ್ಲಾಪ್ ಮಾಡಿದ್ದು, ವೀರಕಪುತ್ರ ಶ್ರೀನಿವಾಸ್ ಕ್ಯಾಮೆರಾ ಚಾಲನೆ ನೀಡಿದರು.

‘ಕರ್ನಾಟಕ Love’s ಕೇರಳ’ ವೆಬ್ ಸರಣಿಗೆ ಯುವ ಪ್ರತಿಭೆ ಲೋಕೇಶ್ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ನಿರ್ದೇಶನದ ಜತೆಗೆ ನಾಯಕನಾಗಿಯೂ ಅದೃಷ್ಟ ಪರೀಕ್ಷೆಗಿಳಿದ್ದಾರೆ. ಬಸ್ ಮೆಕಾನಿಕಲ್ ಆಗಿರುವ ಲೋಕೇಶ್‌‌ ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಹಲವು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿಯಿಸಿದ್ದು, ಇದೀಗ ಪೂರ್ಣ ಪ್ರಮಾಣದ ನಾಯಕನಾಗಿ ಬಣ್ಣ ಹಚ್ಚುತ್ತಿದ್ದಾರೆ. ಇವರಿಗೆ ಜೋಡಿಯಾಗಿ ಜ್ಯೋತಿ, ಸಹನಾ ಸಾಥ್ ನೀಡುತ್ತಿದ್ದಾರೆ.

ಎಂ.ಎಂ.ಕೆ. ಬಾಲು ನಿರ್ಮಾಣ‌ ಮಾಡುತ್ತಿರುವ ʼಕರ್ನಾಟಕದ love’s ಕೇರಳʼ ಸಿರೀಸ್‌ಗೆ ಲೋಕೇಶ್ ಅವರದ್ದೇ ಕಥೆ ಚಿತ್ರಕಥೆ. ಟೈಟಲ್ ಹೇಳುವಂತೆ ಇದೊಂದು ಪ್ರೇಮಕಥೆ‌‌ ಒಳಗೊಂಡಿದೆ. ಆನಂದ್ ಇಳಯರಾಜ ಛಾಯಾಗ್ರಹಣ, ಪ್ರವೀಣ್ ಶ್ರೀನಿವಾಸ್ ಸಂಗೀತ, ಮಹೇಶ್ ಸಂಕಲನ ಸರಣಿಗಿದೆ.‌ ಮುಂದಿನ ವಾರದಿಂದ ಕೇರಳ ಭಾಗದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಸಜ್ಜಾಗಿದೆ.

’ಭುವನಂ ಗಗನಂ’ ಸಿನಿಮಾಗೆ ಧ್ರುವ ಸರ್ಜಾ ಸಾಥ್‌

ಬೆಂಗಳೂರು: ಸ್ಯಾಂಡಲ್‌ವುಡ್‌ ಅಂಗಳದ ಇಬ್ಬರು ಪ್ರತಿಭಾನ್ವಿತ ನಟರಾದ ʻಸಲಾರ್ʼ ಪ್ರಮೋದ್ ಹಾಗೂ ʼದಿಯಾʼ ಪೃಥ್ವಿ ಅಂಬಾರ್ ನಟನೆಯ ಬಹುನಿರೀಕ್ಷಿತ ಸಿನಿಮಾ ʻಭುವನಂ ಗಗನಂʼ. ಈ ಚಿತ್ರದ ನಿರ್ಮಾಪಕ ಎಂ. ಮುನೇಗೌಡ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಟೀಸರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಬೆಸ್ಟ್ ವಿಷಸ್ ತಿಳಿಸಿದ್ದಾರೆ. ಬೆಂಗಳೂರಿನ ಡಾ. ರಾಜಕುಮಾರ್‌ ಇಂಡೋರ್ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ನಟ ನೆನಪಿರಲಿ ಪ್ರೇಮ್, ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಹಲವರು ಉಪಸ್ಥಿತಿದ್ದರು.

ಇದನ್ನೂ ಓದಿ: Kannada New Movie: ʻಕಮಲ್ ಹಾಸನ್ʼ ಬಂದು ಟೈಟಲ್‌ ಲಾಂಚ್‌ ಮಾಡಿದ್ರು! ಯಾವುದು ಆ ಸಿನಿಮಾ?

ಭುವನಂ ಗಗನಂ ಸಿನಿಮಾ ಲವ್, ರೋಮ್ಯಾನ್ಸ್, ಫ್ಯಾಮಿಲಿ ಎಮೋಷನ್ ಕಥಾಹಂದರ ಸಿನಿಮಾವಾಗಿದ್ದು, ನಗರ, ಹಳ್ಳಿ ಎರಡು ಬ್ಯಾಕ್ ಡ್ರಾಪ್‌ನಲ್ಲಿ ನಡೆಯುವ ಕಥೆಯಾಗಿದ್ದು, ಪ್ರಮೋದ್‌ಗೆ ಜೋಡಿಯಾಗಿ ʼಲವ್ ಮಾಕ್ಟೇಲ್ʼ ಖ್ಯಾತಿಯ ರೆಚೆಲ್ ಡೇವಿಡ್, ಪೃಥ್ವಿಗೆ ಜೋಡಿಯಾಗಿ ಅಶ್ವಥಿ ನಟಿಸ್ತಿದ್ದಾರೆ. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ʼಸ್ಪರ್ಶʼ ರೇಖಾ, ಪ್ರಜ್ವಲ್ ಶೆಟ್ಟಿ, ಚೇತನ್ ದುರ್ಗ ತಾರಾಬಳಗದಲ್ಲಿದ್ದಾರೆ. ಉದಯ್ ಲೀಲಾ ಕ್ಯಾಮೆರಾ ಕೈಚಳಕ, ಗುಮ್ಮಿನೇನಿ ವಿಜಯ್ ಮ್ಯೂಸಿಕ್ ಕಿಕ್, ಸುನಿಲ್‌ ಕಶ್ಯಪ್ ಸಂಕಲನ ಸಿನಿಮಾಕ್ಕಿದೆ. ಮಳೆಗಾಲದಲ್ಲಿ ʼಭುವನಂ ಗಗನಂʼ ಸಿನಿಮಾ ತೆರೆಗೆ ಬರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕಿರುತೆರೆ/ಒಟಿಟಿ

Kapil Sharma: ಸುನಿಲ್‌ ಗ್ರೋವರ್ ಜತೆಗೆ ನೆಟ್​ಫ್ಲಿಕ್ಸ್​ಗೆ ಕಾಲಿಟ್ಟ ಕಪಿಲ್ ಶರ್ಮಾ; ಶೋ ಟ್ರೇಲರ್‌ ಔಟ್‌: ಪ್ರಸಾರ ಯಾವಾಗ ?

Kapil Sharma: ಹಾಸ್ಯ, ಮನರಂಜನೆಯ ರಸದೌತಣ ನೀಡಿ ದೇಶದ ಮನೆಮಾತಾಗಿರುವ ಕಪಿಲ್‌ ಶರ್ಮಾ ಅವರ ಹೊಸ ಶೋ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋ’ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. ಸದ್ಯ ಶೋದ ಟ್ರೇಲರ್‌ ಬಿಡುಗಡೆಯಾಗಿದ್ದು, ಗಮನ ಸೆಳೆಯುತ್ತಿದೆ.

VISTARANEWS.COM


on

kapil sharma
Koo

ಮುಂಬೈ: ಭಾರತೀಯರ ಅಚ್ಚುಮೆಚ್ಚಿನ ಕಾಮಿಡಿ ಶೋ ʼದಿ ಕಪಿಲ್‌ ಶರ್ಮಾ ಶೋʼ (The Kapil Sharma Show). ಈ ಶೋ ಮೂಲಕ ಹಾಸ್ಯ, ಮನರಂಜನೆಯ ರಸದೌತಣ ನೀಡಿ ದೇಶದ ಮನೆಮಾತಾಗಿರುವ ಕಪಿಲ್‌ ಶರ್ಮಾ (Kapil Sharma) ಹಾಗೂ ಸುನಿಲ್‌ ಗ್ರೋವರ್‌ (Sunil Grover) ಮತ್ತೆ ಒಂದಾಗಿದ್ದಾರೆ. ಸುಮಾರು ಆರು ವರ್ಷಗಳ ಮುನಿಸಿನ ಬಳಿಕ ಇಬ್ಬರೂ ಒಂದಾಗಿದ್ದಾರೆ. ನೆಟ್‌ಫ್ಲಿಕ್ಸ್‌ (Netflix)ನಲ್ಲಿ ಪ್ರಸಾರವಾಗಲಿರುವ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋ’ (The Great Indian Kapil Show)ದಲ್ಲಿ ಈ ಇಬ್ಬರು ದಿಗ್ಗಜರು ಒಂದಾಗಲಿದ್ದಾರೆ. ಈ ಮೂಲಕ ಟಿವಿಯಲ್ಲಿ ಜನಪ್ರಿಯವಾದ ಶೋ ಒಟಿಟಿಗೂ ಕಾಲಿಟ್ಟಿದೆ. ಶನಿವಾರ (ಮಾರ್ಚ್‌ 23) ಈ ಶೋದ ಟ್ರೇಲರ್‌ ಬಿಡುಗಡೆಯಾಗಿದ್ದು, ಗಮನ ಸೆಳೆದಿದೆ.

ಬಾಲಿವುಡ್​, ಕ್ರಿಕೆಟ್​ ಲೋಕದ ಭಾರಿ ದೊಡ್ಡ ಸೆಲೆಬ್ರಿಟಿಗಳು ಕಪಿಲ್​ ಅವರ ಶೋಗೆ ಬಂದಿರುವುದು ಟ್ರೇಲರ್‌ನಲ್ಲಿ ಕಂಡು ಬಂದಿದೆ. ಮತ್ತೊಂದು ವಿಶೇಷ ಎಂದರೆ ಕಪಿಲ್​ ಶರ್ಮಾ ಅವರ ಹಳೆಯ ಗೆಳೆಯರೆಲ್ಲ ಮತ್ತೆ ಶೋಗೆ ಬಂದಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಇನ್ನು ನಗುವಿಗೆ ಕೊರತೆ ಇಲ್ಲ ಎಂದು ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ.

ಯಾವಾಗ ಪ್ರಸಾರ ?

ಸುನಿಲ್‌ ಗ್ರೋವರ್‌ ಜತೆಗೆ ಅರ್ಚನಾ ಪೂರನ್‌ ಸಿಂಗ್‌, ಕಿಕು ಶಾರದಾ, ರಾಜೀವ್ ಠಾಕೂರ್ ಮತ್ತು ಕೃಷ್ಣ ಅಭಿಷೇಕ್ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋ’ದ ಭಾಗವಾಗಲಿದ್ದಾರೆ. ನೆಟ್​ಫ್ಲಿಕ್ಸ್​ನಲ್ಲಿ ಮಾರ್ಚ್ 30ರಿಂದ ಪ್ರತಿ ಶನಿವಾರ ರಾತ್ರಿ 8 ಗಂಟೆಗೆ ಹೊಸ ಈ ಶೋ ಪ್ರಸಾರವಾಗಲಿದೆ.

ಟ್ರೇಲರ್‌ನಲ್ಲಿ ಏನಿದೆ?

ಶೋ ಅದ್ದೂರಿಯಾಗಿ ಮೂಡಿ ಬಂದಿದೆ ಎನ್ನುವುದಕ್ಕೆ ಟ್ರೇಲರ್‌ನಲ್ಲಿ ಸಾಕ್ಷಿ ಸಿಕ್ಕಿದೆ. ಭಾರತೀಯ ಚಿತ್ರರಂಗ ಹಾಗೂ ಕ್ರಿಕೆಟ್​ ಲೋಕದ ದಿಗ್ಗಜರು ಈ ಬಾರಿ ಶೋಗೆ ಅತಿಥಿಗಳಾಗಿ ಆಗಮಿಸಲಿದ್ದಾರೆ. ಪ್ರಸ್ತುತ ಬಿಡುಗಡೆ ಆಗಿರುವ ಟ್ರೇಲರ್‌ನಲ್ಲಿ ​ಬಾಲಿವುಡ್ ಸ್ಟಾರ್ ನಟ ರಣ್​ಬೀರ್ ಕಪೂರ್, ತಮ್ಮ ತಾಯಿ ಹಾಗೂ ಸಹೋದರಿ ಜತೆಗೆ ಶೋದಲ್ಲಿ ಭಾಗವಹಿಸಿರುವುದು ಕಂಡು ಬಂದಿದೆ. ಸಾಮಾನ್ಯವಾಗಿ ಯಾವುದೇ ಶೋಗೆ ಹೋಗದ ಆಮೀರ್ ಖಾನ್ ಸಹ ಕಪಿಲ್ ಶರ್ಮಾ ಶೋಗೆ ಆಗಮಿಸಿದ್ದಾರೆ. ಭಾರತೀಯ ಕ್ರಿಕೆಟ್ ಟೀಂನ ನಾಯಕ ರೋಹಿತ್‌ ಶರ್ಮಾ, ಕ್ರಿಕೆಟಿಗ ಶ್ರೆಯಸ್ ಐಯ್ಯರ್ ಮತ್ತಿತರರು ಆಗಮಿಸಿದ್ದಾರೆ. ಹೀಗಾಗಿ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋ’ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ನಾರಾಯಣಮೂರ್ತಿ ಬಸ್‌ ಕಂಡಕ್ಟರ್ ಹೈ ಕ್ಯಾ?‌ ಭೇಟಿ ಕುರಿತು ಕಪಿಲ್‌ ಶರ್ಮಾ ಶೋನಲ್ಲಿ ಸುಧಾಮೂರ್ತಿ ಹೇಳಿದ್ದೇನು?

ಇಬ್ಬರ ಮಧ್ಯೆ ಏಕೆ ಜಗಳ?

ಕಪಿಲ್‌ ಶರ್ಮಾ ಹಾಗೂ ಸುನಿಲ್‌ ಗ್ರೋವರ್‌ ಅವರ ಮಧ್ಯೆ 2017ರಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು. ಆಸ್ಟ್ರೇಲಿಯಾದಲ್ಲಿ ಶೋ ಮುಗಿಸಿ, ಮುಂಬೈಗೆ ಆಗಮಿಸುವಾಗ ವಿಮಾನದಲ್ಲಿಯೇ ಕಪಿಲ್‌ ಶರ್ಮಾ ಅವರು ಸುನಿಲ್‌ ಗ್ರೋವರ್‌ ಅವರಿಗೆ ಬೈದಿದ್ದರು. ಇದಾದ ಬಳಿಕ ಇಬ್ಬರೂ ವಾಗ್ವಾದ ನಡೆಸಿದ್ದರು ಎನ್ನಲಾಗಿದೆ. ನಂತರ ಸುನಿಲ್‌ ಗ್ರೋವರ್‌ ಅವರು ʼದಿ ಕಪಿಲ್‌ ಶರ್ಮಾ ಶೋʼ ತೊರೆದಿದ್ದರು. ಜಗಳದ ಕುರಿತು ಸ್ಪಷ್ಟನೆ ನೀಡಿದ್ದ ಕಪಿಲ್‌ ಶರ್ಮಾ, “ನಾನು ಎಂದಿಗೂ ಸುನಿಲ್‌ ಗ್ರೋವರ್‌ ಜತೆ ಜಗಳ ಆಡಿಲ್ಲ, ಬೈದಿಲ್ಲ. ನಾನು ಅದ್ಭುತ ವ್ಯಕ್ತಿಗಳ ಜತೆ ಕೆಲಸ ಮಾಡಲು ಬಯಸುತ್ತೇನೆ. ಅವರಲ್ಲಿ ಸುನಿಲ್‌ ಗ್ರೋವರ್‌ ಕೂಡ ಒಬ್ಬರು” ಎಂದು ಹೇಳಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕಿರುತೆರೆ/ಒಟಿಟಿ

OTT Release: ಒಟಿಟಿ ಪ್ರಿಯರಿಗೆ ಈ ವಾರ ಹಬ್ಬ; ʼಉಪಾಧ್ಯಕ್ಷʼ ಚಿತ್ರದ ಜತೆಗೆ ರಿಲೀಸ್‌ ಆದ‌ ಇತರ ಶೋಗಳ ವಿವರ ಇಲ್ಲಿದೆ

OTT Release: ಈ ವಾರ ಒಟಿಟಿಯಲ್ಲಿ ಚಿಕ್ಕಣ್ಣ ಅಭಿನಯದ ಉಪಾಧ್ಯಕ್ಷ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ತೆರೆ ಕಂಡಿವೆ. ಈ ಕುರಿತಾದ ವಿವರ ಇಲ್ಲಿದೆ.

VISTARANEWS.COM


on

ott
Koo

ಮುಂಬೈ: ಇತ್ತೀಚೆಗೆ ಒಟಿಟಿ ಫ್ಲಾಟ್‌ಫಾರ್ಮ್‌ಗೆ ವೀಕ್ಷಕರು ಹೆಚ್ಚಾಗಿದ್ದಾರೆ. ಹಲವರು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವುದಕ್ಕಿಂತ ಒಟಿಟಿ ರಿಲೀಸ್‌ಗೆ ಕಾಯುತ್ತಿರುತ್ತಾರೆ. ಸಿನಿಮಾ ಜತೆಗೆ ವೆಬ್‌ ಸೀರಿಸ್‌, ಶೋಗಳಿಗೂ ಸಾಕಷ್ಟು ಸಂಖ್ಯೆಯಲ್ಲಿ ಪ್ರೇಕ್ಷಕರಿದ್ದಾರೆ. ಈ ವಾರ ಒಟಿಟಿಯಲ್ಲಿ ತೆರೆ ಕಾಣುತ್ತಿರುವ ಪ್ರಮುಖ ಚಿತ್ರಗಳು, ಶೋಗಳ ವಿವರ ಇಲ್ಲಿದೆ (OTT Release).

ಶೋ ಟೈಮ್‌ (ಡಿಸ್ನಿ ಪ್ಲಸ್‌ ಹಾಟ್‌ ಸ್ಟಾರ್‌)-ಮಾರ್ಚ್‌ 8

ಬಾಲಿವುಡ್‌ ಸ್ಟಾರ್‌ ಇಮ್ರಾನ್‌ ಹಶ್ಮಿ ಅಭಿನಯದ ವೆಬ್‌ ಸೀರಿಸ್‌ ʼಶೋ ಟೈಮ್‌ʼ ಡಿಸ್ನಿ ಪ್ಲಸ್‌ ಹಾಟ್‌ ಸ್ಟಾರ್‌ನಲ್ಲಿ ಮಾರ್ಚ್‌ 8ರಿಂದ ಸ್ಟ್ರೀಮಿಂಗ್‌ ಆಗುತ್ತಿದೆ. ಕರಣ್‌ ಜೋಹರ್‌ ಅವರ ಧರ್ಮ ಪ್ರೊಡಕ್ಷನ್ಸ್‌ ಈ ವೆಬ್‌ ಸೀರಿಸ್‌ ಅನ್ನು ನಿರ್ಮಿಸಿದ್ದು, ಶ್ರೀಯಾ ಶರಣ್‌, ಮೌನಿ ರಾಯ್‌, ನಾಸಿರುದ್ದೀನ್‌ ಶಾ ಮತ್ತಿತರರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಮಹಾರಾಣಿ ಸೀನಸ್‌ 3 (ಸೋನಿ ಲೈವ್‌)-ಮಾರ್ಚ್‌ 7

ಜನಪ್ರಿಯ ವೆಬ್‌ ಸೀರಿಸ್‌ ʼಮಹಾರಾಣಿʼಯ ಮೂರನೇ ಸೀಸನ್‌ ಕೂಡ ಮಾರ್ಚ್‌ 8ರಿಂದ ಪ್ರಸಾರವಾಗುತ್ತಿದೆ. ಬಾಲಿವುಡ್‌ ನಟಿ ಹುಮಾ ಖರೇಷಿ ಅಭಿನಯದ ಈ ಪಾಲಿಟಿಕಲ್‌ ಡ್ರಾಮವನ್ನು ಸೋನಿ ಲೈವ್‌ (SonyLIV)ನಲ್ಲಿ ವೀಕ್ಷಿಸಬಹುದು. ಸಾಮಾನ್ಯ ಹೆಣ್ಣು ಮಗಳೊಬ್ಬಳು ರಾಜಕೀಯ ಪ್ರವೇಶ ಪಡೆಯುವ ರೋಚಕ ಕಥೆಯನ್ನು ಇದು ಒಳಗೊಂಡಿದೆ.

ಮೆರ‍್ರಿ ಕ್ರಿಸ್‌ಮಸ್‌ (ನೆಟ್‌ಫ್ಲಿಕ್ಸ್‌)-ಮಾರ್ಚ್‌ 8

ಮಾರ್ಚ್‌ 8ರಿಂದ ನೀವು ನೋಡಬಹುದಾದ ಥ್ರಿಲ್ಲರ್‌ ಚಿತ್ರ ʼಮೆರ‍್ರಿ ಕ್ರಿಸ್‌ಮಸ್‌ʼ. ಕಾಲಿವುಡ್‌ ಸ್ಟಾರ್‌ ವಿಜಯ್‌ ಸೇತುಪತಿ ಮತ್ತು ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಮೊದಲ ಬಾರಿ ತೆರೆ ಮೇಲೆ ಒಂದಾದ ಚಿತ್ರವನ್ನು ಶ್ರೀರಾಮ್‌ ರಾಘವನ್‌ ನಿರ್ದೇಶಿಸಿದ್ದಾರೆ. ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಅಷ್ಟೇನೂ ಸದ್ದು ಮಾಡಿಲ್ಲ. ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾವನ್ನು ವೀಕ್ಷಿಸಬಹುದು.

ದಿ ರಿಜಿಮ್‌ (ಜಿಯೋ ಸಿನಿಮಾ)- ಮಾರ್ಚ್‌ 4

ಈ ಇಂಗ್ಲಿಷ್‌ ಟಿವಿ ಮಿನಿ ಸಿರೀಸ್‌ ಮಾರ್ಚ್‌ 4ರಿಂದ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ. ಸರ್ವಾಧಿಕಾರಿ ಎಲೆನಾ ವೆರ್ನ್ಹ್ಯಾಮ್ ಪಾತ್ರದಲ್ಲಿ ಆಸ್ಕರ್ ಪ್ರಶಸ್ತಿ ವಿಜೇತೆ ಕೇಟ್ ವಿನ್ಸ್ಲೆಟ್ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಹಗ್ ಗ್ರಾಂಟ್, ಮಥಿಯಾಸ್ ಶೋನರ್ಟ್ಸ್ ಮತ್ತು ಗೈಲ್ಯೂಮ್ ಗ್ಯಾಲಿಯನ್ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಡ್ಯಾಮ್‌ಸೆಲ್‌ (ನೆಟ್‌ಫ್ಲಿಕ್ಸ್‌)- ಮಾರ್ಚ್‌ 8

ಅಮೆರಿಕನ್‌ ಡಾರ್ಕ್‌ ಫ್ಯಾಂಟಸಿ ಚಿತ್ರ ʼಡ್ಯಾಮ್‌ಸೆಲ್‌ʼ ಮಾರ್ಚ್‌ 8ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯ. ಮಿಲ್ಲಿ ಬಾಬಿ ಬ್ರೌನ್, ರೇ ವಿನ್ಸ್ಟೋನ್, ನಿಕ್ ರಾಬಿನ್ಸನ್, ಶೋಹ್ರೆ ಅಘ್ಡಾಶ್ಲೂ, ಏಂಜೆಲಾ ಬ್ಯಾಸೆಟ್, ರಾಬಿನ್ ರೈಟ್ ಮತ್ತಿತರರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಲಾಲ್‌ ಸಲಾಂ (ನೆಟ್‌ಫ್ಲಿಕ್ಸ್‌)- ಮಾರ್ಚ್‌ 8

ಕಾಲಿವುಡ್‌ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಭಿನಯದ ʼಲಾಲ್‌ ಸಲಾಂʼ ಚಿತ್ರವನ್ನು ಥಿಯೇಟರ್‌ನಲ್ಲಿ ಮಿಸ್‌ ಮಾಡಿಕೊಂಡವರು ಒಟಿಟಿಯಲ್ಲಿ ಮಾರ್ಚ್‌ 8ರಿಂದ ಈ ಸಿನಿಮಾವನ್ನು ನೋಡಬಹುದು. ನೆಟ್‌ಫ್ಲಿಕ್ಸ್‌ನಲ್ಲಿ ಇದು ಸ್ಟ್ರೀಮಿಂಗ್‌ ಆಗುತ್ತಿದೆ. ಐಶ್ವರ್ಯಾ ರಜನಿಕಾಂತ್‌ ನಿರ್ದೇಶನದ ಈ ಚಿತ್ರದಲ್ಲಿ ವಿಷ್ಣು ವಿಶಾಲ್‌, ವಿಕ್ರಾಂತ್‌ ಮತ್ತಿತರರು ಮುಖ್ಯ ಪಾತ್ರದಲ್ಲಿದ್ದಾರೆ. ಥಿಯೇಟರ್‌ನಲ್ಲಿ ಸಾಧಾರಣ ಯಶಸ್ಸು ಕಂಡಿದ್ದ ಇದು ಒಟಿಟಿಯಲ್ಲಿ ಗಮನ ಸೆಳೆಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಉಪಾಧ್ಯಕ್ಷ (ಸನ್‌ ನೆಕ್ಟ್ಸ್‌) – ಮಾರ್ಚ್‌ 8

ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಸುದ್ದಿ ಮಾಡಿದ ಚಿತ್ರ ʼಉಪಾಧ್ಯಕ್ಷʼ. ಇದೀಗ ಈ ಸಿನಿಮಾ ಸದ್ದಿಲ್ಲದೆ ಒಟಿಟಿಗೆ ಲಗ್ಗೆ ಇಟ್ಟಿದೆ. ಮಾರ್ಚ್‌ 8ರಿಂದ ನೀವು ಸನ್‌ ನೆಕ್ಟ್ಸ್‌ಲ್ಲಿ ಉಪಾಧ್ಯಕ್ಷ ಚಿತ್ರ ವೀಕ್ಷಿಸಬಹುದು. ಚಿಕ್ಕಣ್ಣ ನಾಯಕನಾಗಿರುವ ಈ ಚಿತ್ರ ಮಲೈಕಾ ವಸುಪಾಲ್‌, ರವಿಶಂಕರ್‌, ಸಾಧು ಕೋಕಿಲ, ವೀಣಾ ಸುಂದರ್‌ ಮತ್ತಿತರರು ಪ್ರಧಾನ ಪಾತ್ರಗಳಲ್ಲಿ ಮಿಂಚಿದ್ದಾರೆ.

ಅನ್ವೇಷಿಪ್ಪಿನ್‌ ಕಂಡೆಂತ್ತುಮ್‌ (ನೆಟ್‌ಫ್ಲಿಕ್ಸ್‌)- ಮಾರ್ಚ್‌ 8

ನೀವು ಮಲಯಾಳಂ ಚಿತ್ರ ಪ್ರೇಮಿಗಳಾಗಿದ್ದರೆ ಈ ಚಿತ್ರವನ್ನು ಮಿಸ್‌ ಮಾಡದೇ ನೋಡಿ. ಈ ಕ್ರೈಂ ಥ್ರಿಲ್ಲರ್‌ 90ರ ದಶಕದ ಪೊಲೀಸ್‌ ತನಿಖೆಯ ಕಥೆ ಹೇಳುತ್ತುದೆ. ಟೊವಿನೋ ಥಾಮಸ್‌, ಇಂದ್ರನ್ಸ್‌, ಸಿದ್ಧಿಕ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಈ ಚಿತ್ರದಲ್ಲಿ ಯಾರೂ ಊಹಿಸದ ಕ್ಲೈಮ್ಯಾಕ್ಸ್‌ ಇದೆ. ಡಾರ್ವಿನ್ ಕುರಿಯಕ್ಕೋಸ್‌ ಈ ಸಿನಿಮಾದ ನಿರ್ದೇಶಕರು. ಅನ್ವೇಷಿಪ್ಪಿನ್‌ ಕಂಡೆಂತ್ತುಮ್‌ ಚಿತ್ರವನ್ನು ಮಾರ್ಚ್‌ 8ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ: Nitish Bharadwaj: ʼ16,000 ಹೆಂಡತಿಯರನ್ನು ನಿಭಾಯಿಸಿದʼವನಿಗೆ ಪತ್ನಿಯಿಂದ ದೌರ್ಜನ್ಯ! ಏನಿವರ ಗೋಳಿನ ಕತೆ?

Continue Reading

ಕಿರುತೆರೆ

Nitish Bharadwaj: ʼ16,000 ಹೆಂಡತಿಯರನ್ನು ನಿಭಾಯಿಸಿದʼವನಿಗೆ ಪತ್ನಿಯಿಂದ ದೌರ್ಜನ್ಯ! ಏನಿವರ ಗೋಳಿನ ಕತೆ?

ಇದು ಜನಪ್ರಿಯ ಟಿವಿ ಸೀರಿಯಲ್‌ (TV Serial) ʼಮಹಾಭಾರತʼದ ಕೃಷ್ಣನ ಪಾತ್ರಧಾರಿ ನಟ ನಿತೀಶ್ ಭಾರದ್ವಾಜ್ (Nitish Bharadwaj) ಬದುಕಿನ ಕತೆ.

VISTARANEWS.COM


on

nitish bharadwaj with wife
Koo

ಮುಂಬಯಿ: ಮಹಾಭಾರತದ (Mahabharat) ಕೃಷ್ಣನೇನೋ 16,000 ಹೆಂಡತಿಯರನ್ನು ಜಗಳವಿಲ್ಲದೆ ನಿಭಾಯಿಸಿದ. ಆದರೆ ಈ ʼಕೃಷ್ಣʼನ (Krishna) ಬದುಕು ಮಾತ್ರ ಪತ್ನಿಯಿಂದಲೇ ಬರ್ಬಾದ್‌ ಆಗಿದೆ. ಇದು ಜನಪ್ರಿಯ ಟಿವಿ ಸೀರಿಯಲ್‌ (TV Serial) ʼಮಹಾಭಾರತʼದ ಕೃಷ್ಣನ ಪಾತ್ರಧಾರಿ ನಟ ನಿತೀಶ್ ಭಾರದ್ವಾಜ್ (Nitish Bharadwaj) ಬದುಕಿನ ಕತೆ.

ನಿತೀಶ್‌ ಭಾರದ್ವಾಜ್‌ ಮತ್ತು ಅವರ ವಿಚ್ಛೇದಿತ ಪತ್ನಿ ಸ್ಮಿತಾ ಭಾರದ್ವಾಜ್ ನಡುವಿನ ಕಲಹದ ಕತೆ ಹೊಸದೇನೂ ಅಲ್ಲ. ಕಳೆದ ಕೆಲವು ತಿಂಗಳುಗಳಲ್ಲಿ ಇಬ್ಬರೂ ಪರಸ್ಪರರ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ನಿತೀಶ್ ಇನ್ನಷ್ಟು ಆಘಾತಕಾರಿ ಆರೋಪಗಳನ್ನು ಮಾಡಿದ್ದಾರೆ. ತಮ್ಮಿಬ್ಬರ ದಾಂಪತ್ಯದಲ್ಲಿ ತಾನು ಅತ್ಯಂತ ದೌರ್ಜನ್ಯಕ್ಕೀಡಾದವನು ಎಂದು ಹೇಳಿಕೊಂಡಿದ್ದಾರೆ.

“ಈ ದಾಂಪತ್ಯದಲ್ಲಿ ನಾನು ಎಲ್ಲಾ ರೀತಿಯ ನಿಂದನೆಗಳನ್ನು ಎದುರಿಸಿದ್ದೇನೆ. ನನ್ನ ಪೋಷಕರನ್ನು ನನ್ನಿಂದ ದೂರವಿಡಲಾಯಿತು. ನನ್ನ ಇಬ್ಬರು ಮಕ್ಕಳನ್ನು ನನ್ನಿಂದ ದೂರವಿಡಲಾಯಿತು. ನನ್ನ 11 ವರ್ಷದ ಹೆಣ್ಣುಮಕ್ಕಳು ಹೇಳಿದ ಎರಡು ಸಾಲುಗಳನ್ನು ಮಾತ್ರ ನಾನು ನಿಮಗೆ ಹೇಳುವೆ- ʻಅಪ್ಪಾ, ನಿಮ್ಮನ್ನು ನಮ್ಮ ತಂದೆ ಎಂದು ಕರೆಯಲು ನಮಗೆ ಅಸಹ್ಯವಾಗುತ್ತದೆ.’ ಇದು ಒಂದು ಮಗು ನನಗೆ ಹೇಳಿದ್ದು” ಎಂದು ನಿತೀಶ್ ದುಃಖಿಸಿದ್ದಾರೆ.

“ನನಗೆ ಆಗುತ್ತಿರುವ ಪ್ರಕ್ಷುಬ್ಧತೆಯನ್ನು ಹೇಗೆ ನಿಭಾಯಿಸಬೇಕೆಂದು ನನಗೆ ತಿಳಿಯುತ್ತಿಲ್ಲ. ನಾನು ಹಣ ಕೇಳುತ್ತಿದ್ದೇನೆ ಎಂದು ನನ್ನ ಮೇಲೆ ಮಾಡಿರುವ ಆರೋಪ ಸುಳ್ಳು. ನಾನು ನನ್ನಿಂದ ಮೋಸ ಮಾಡಿ ಕಸಿಯಲಾದ ಹಣವನ್ನು ಕೇಳುತ್ತಿದ್ದೇನೆ. ಹಾಗಾಗಿ ಇಂದು ನಾನು ಮಾಡುತ್ತಿರುವುದು ನನ್ನ ಮಕ್ಕಳ ಪಾಲಿನ ಹೋರಾಟವಾಗಿದೆ” ಎಂದಿದ್ದಾರೆ ನಿತೀಶ್. ‌

“ವಂಚಿತನಾದ ನಾನು ಬೇರೆ ಯಾವುದೇ ಮಹಿಳೆಗೆ ನ್ಯಾಯ ಸಲ್ಲಿಸಲು ಸಾಧ್ಯವಾಗುತ್ತದೆಯೇ ಎಂದು ನನಗೆ ಗೊತ್ತಾಗುತ್ತಿಲ್ಲ. ದಾಂಪತ್ಯ ನನಗೆ ಎಂದೂ ಗೌರವಾರ್ಹವಾದುದು. ನಾನು ಅದನ್ನು ನಂಬುತ್ತೇನೆ. ನನ್ನ ಹೆತ್ತವರ ದಾಂಪತ್ಯ ಸೇರಿದಂತೆ ಹಲವು ಯಶಸ್ವಿ ಕುಟುಂಬಗಳನ್ನು ನಾನು ನೋಡಿದ್ದೇನೆ” ಎಂದಿದ್ದಾರೆ ಅವರು.

ಕಳೆದ ತಿಂಗಳು ನಿತೀಶ್ ಭಾರದ್ವಾಜ್ ಅವರು ಅವರ ಪತ್ನಿ ಸ್ಮಿತಾ ಗೇಟ್ ವಿರುದ್ಧ ಕಿರುಕುಳ ಮತ್ತು ಅಶಿಸ್ತಿನ ವರ್ತನೆಯನ್ನು ಆರೋಪಿಸಿ ಪೊಲೀಸ್ ದೂರು ದಾಖಲಿಸಿದ್ದಾರೆ. ಸ್ಮಿತಾ ಗೇಟ್‌, ಮಧ್ಯಪ್ರದೇಶದ ಮಾನವ ಹಕ್ಕುಗಳ ಆಯೋಗದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವರದಿಯ ಪ್ರಕಾರ, ತಮ್ಮ ಅವಳಿ ಹೆಣ್ಣು ಮಕ್ಕಳಾದ ದೇವಯಾನಿ ಮತ್ತು ಶಿವರಂಜನಿ ಅವರನ್ನು ಭೇಟಿಯಾಗದಂತೆ ನಿತೀಶ್‌ ಅವರನ್ನು ಸ್ಮಿತಾ ತಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ತಮ್ಮ ಹೆಣ್ಣುಮಕ್ಕಳ ಶಾಲೆಗಳಿಗೆ ತಾವು ಹೋಗುವುದನ್ನು ತಡೆದಿದ್ದಾರೆ. ಇದು ತಮ್ಮ ಮಾನಸಿಕ ನೆಮ್ಮದಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಅವರು ದೂರಿದ್ದಾರೆ.

ಜನಪ್ರಿಯ ಟಿವಿ ಸರಣಿ ಮಹಾಭಾರತದಲ್ಲಿ ಶ್ರೀಕೃಷ್ಣನ ಪಾತ್ರದಲ್ಲಿ ನಿತೀಶ್ ದೇಶಾದ್ಯಂತ ಖ್ಯಾತಿ ಗಳಿಸಿದ್ದರು. ವಿಷ್ಣು ಪುರಾಣ, ಮೊಹೆಂಜೊದಾರೋ, ಕೇದಾರನಾಥ್ ಮತ್ತಿತರ ಜನಪ್ರಿಯ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Actor Dhanush: ಧನುಷ್‌-ರಶ್ಮಿಕಾ ಅಭಿನಯದ ಸಿನಿಮಾದ ಟೈಟಲ್‌ ರಿವೀಲ್‌!

Continue Reading
Advertisement
Drowned in water mysuru
ಮೈಸೂರು2 mins ago

Drowned In water : ಈಜಲು 20 ಅಡಿ ಎತ್ತರದಿಂದ ನೀರಿನ ಬುಗ್ಗೆಗೆ ಜಿಗಿದವನು ಮತ್ತೆ ಏಳಲೇ ಇಲ್ಲ!

Drowned in water
ದಕ್ಷಿಣ ಕನ್ನಡ23 mins ago

Drowned In water : ಹೆತ್ತವರ ಕಣ್ಣೇದುರಿಗೆ ನೇತ್ರಾವತಿ ನದಿಯಲ್ಲಿ ಕೊಚ್ಚಿ ಹೋದರು ಪುತ್ರಿಯರು

ED Raid
ದೇಶ36 mins ago

ED Raid: ಇಡಿ ಭರ್ಜರಿ ಬೇಟೆ; ಕಾಂಗ್ರೆಸ್‌ ಮುಖಂಡನ ಆಪ್ತ ಕಾರ್ಯದರ್ಶಿ ಮನೆಯಿಂದ 25 ಕೋಟಿ ರೂ. ವಶ

Mahanati Show Gagana Comedy About Rishi actor
ಕಿರುತೆರೆ46 mins ago

Mahanati Show: ‘ಮಹಾನಟಿʼ ವೇದಿಕೆಯಲ್ಲಿ ನಟ ರಿಷಿ ಫೋನ್‌ ನಂಬರ್‌ ಕೇಳಿದ ಚಿತ್ರದುರ್ಗದ ಗಗನಾ!

amethi unrest
ದೇಶ1 hour ago

Amethi Unrest: ಕಾಂಗ್ರೆಸ್‌ ಕಚೇರಿ ಮೇಲೆ ಕಿಡಿಗೇಡಿಗಳಿಂದ ಅಟ್ಯಾಕ್‌; ಬಿಜೆಪಿಯ ದುಷ್ಕೃತ್ಯ ಎಂದು ಆರೋಪ

Paris Olympics
ಕ್ರೀಡೆ2 hours ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ​ಭಾರತದ ಪುರುಷರ & ಮಹಿಳೆಯರ ರಿಲೇ ತಂಡ

Prajwal Revanna Case
ಕರ್ನಾಟಕ2 hours ago

Prajwal Revanna Case: ಗಂಡ, ಮಗನ ಕೇಸ್‌ನಿಂದ ಭವಾನಿ ರೇವಣ್ಣಗೂ ಕಾನೂನು ಕಂಟಕ?

Boat Capsize
ವೈರಲ್ ನ್ಯೂಸ್2 hours ago

Boat Capsizes: ಜಲಾವೃತ ಸೇತುವೆಗೆ ದೋಣಿ ಡಿಕ್ಕಿ; ಶಾಕಿಂಗ್‌ ವಿಡಿಯೋ ವೈರಲ್‌

T20 World Cup 2024
ಕ್ರೀಡೆ2 hours ago

T20 World Cup 2024: ಟಿ20 ವಿಶ್ವಕಪ್​ಗೆ ಪಾಕ್​ ಉಗ್ರರಿಂದ ಭಯೋತ್ಪಾದಕ ದಾಳಿಯ ಎಚ್ಚರಿಕೆ

Megha Dhade bigg boss marathi winner crptic post about rahul gandhi
ಸಿನಿಮಾ2 hours ago

Megha Dhade: ನಮ್ಮ ದೇಶ ಬಿಟ್ಟು ನರಕಕ್ಕೆ ಹೋಗಿ ಎಂದು ರಾಹುಲ್‌ ಗಾಂಧಿ ವಿರುದ್ಧ ʻಬಿಗ್‌ ಬಾಸ್‌ʼ ವಿಜೇತೆ ಆಕ್ರೋಶ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ7 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ16 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ18 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ18 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ4 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

ಟ್ರೆಂಡಿಂಗ್‌