2028 Olympics Cricket: 2028ರ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಕ್ರಿಕೆಟ್‌ ಸೇರ್ಪಡೆ? - Vistara News

ಕ್ರಿಕೆಟ್

2028 Olympics Cricket: 2028ರ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಕ್ರಿಕೆಟ್‌ ಸೇರ್ಪಡೆ?

ಲಾಸ್‌ ಏಂಜಲೀಸ್​ನಲ್ಲಿ ನಡೆಯಲಿರುವ ಪ್ರತಿಷ್ಠಿತ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕ್ರಿಕೆಟ್​ ಸೇರ್ಪಡಿಸಲು ಐಸಿಸಿ ಮುಂದಾಗಿದೆ ಎಂದು ತಿಳಿದುಬಂದಿದೆ.

VISTARANEWS.COM


on

2028 Olympics Cricket: Cricket added to the 2028 Olympics?
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಾಸ್​ ಏಂಜಲೀಸ್​: 2028ರಲ್ಲಿ ಲಾಸ್‌ ಏಂಜಲೀಸ್​ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌(2028 Olympics Cricket) ಕ್ರೀಡಾ ಕೂಟದಲ್ಲಿ ಕ್ರಿಕೆಟ್​ ಸೇರಿಸಲು ಅಂ​ತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌(ಐಸಿಸಿ) ಮುಂದಾಗಿದೆ. ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಆರು ತಂಡಗಳ ಟಿ20 ಕೂಟದ ವೇಳಾಪಟ್ಟಿಯನ್ನು ಗೇಮ್ಸ್‌ನ ಸಂಘಟನ ಸಮಿತಿಗೆ ಶಿಫಾರಸು ಮಾಡಿದೆ.

ಕ್ರಿಕೆಟ್‌ ಸೇರ್ಪಡೆಯ ಕುರಿತು ಮುಂದಿನ ಅಕ್ಟೋಬರ್‌ ವೇಳೆಗೆ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ ನಿರ್ಧಾರ ತೆಗೆದುಕೊಳ್ಳಲಿದೆ. ಇದಕ್ಕಿಂದ ಮೊದಲು ಸಂಘಟನಾ ಸಮಿತಿಯು ಹೊಸ ಕ್ರೀಡೆಗಳ ಪಟ್ಟಿಯನ್ನು ಅಂತಿ ಮಗೊಳಿಸಲಿದೆ ಎಂದು ತಿಳಿದುಬಂದಿದೆ.

ಕ್ರಿಕೆಟ್‌ ಅಲ್ಲದೇ ಬೇಸ್‌ಬಾಲ್‌/ಸಾಫ್ಟ್ಬಾಲ್‌, ಕರಾಟೆ, ಕಿಕ್‌ಬಾಕ್ಸಿಂಗ್‌, ಸ್ಕ್ವಾಷ್‌ ಸೇರಿದಂತೆ ಕೆಲವು ಆಟಗಳು 2028ರ ಒಲಿಂಪಿಕ್ಸ್‌ಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಒಂದೊಮ್ಮೆ ಕ್ರಿಕೆಟ್​ ಸೇರ್ಪಡೆಯಾದರೆ ಯಾವ ತಂಡಗಳು ಸ್ಥಾನ ಪಡೆಯಲಿದೆ ಮತ್ತು ಯಾವ ಆಧಾರದಲ್ಲಿ 6 ತಂಡಗಳನ್ನು ಆಯ್ಕೆ ಮಾಡಲಾಗುವುದು ಎನ್ನುವುದು ಸದ್ಯದ ಕುತೂಹಲ.

ಇದನ್ನೂ ಓದಿ | IND VS NZ: ರಾಯ್‌ಪುರದಲ್ಲಿ ಟೀಮ್​ ಇಂಡಿಯಾದ ರಾಯಭಾರ; ಕಿವೀಸ್​ ವಿರುದ್ಧ 8 ವಿಕೆಟ್​ ಗೆಲುವು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

IND vs PAK : ಪಾಕಿಸ್ತಾನದ ಬೌಲರ್​ ವಿರುದ್ಧ ವಿಶೇಷ ದಾಖಲೆ ಮಾಡಿದ ರೋಹಿತ್ ಶರ್ಮಾ

IND vs PAK : ರೋಹಿತ್ ಶರ್ಮಾ ಓವರ್​ನ ಮೊದಲ ಎಸೆತದಲ್ಲಿ 2 ರನ್ ಗಳಿಸಿದರು ಮತ್ತು ನಂತರ ಅವರು ಹಿಂತಿರುಗಿ ನೋಡಲಿಲ್ಲ. ಓವರ್​ನ ಮೂರನೇ ಎಸೆತದಲ್ಲಿ ಎಡಗೈ ವೇಗಿ ಅಫ್ರಿದಿಗೆ ಅದ್ಭುತ ಸಿಕ್ಸರ್ ಬಾರಿಸಿದರು. ಇದು ಈ ಪಂದ್ಯದ ಅದ್ಭುತ ಸಿಕ್ಸರ್​. ಶಾಹಿನ್ ಅಫ್ರಿದಿ ಫುಲ್ ಲೆಂತ್ ಎಸೆತವನ್ನು ಎಸೆದಿದ್ದರು. ಅದು ರೋಹಿತ್​ ಪ್ಯಾಡ್​ಗಳಿಗೆ ಬಡಿಯಬೇಕಿತ್ತು. ಆದರೆ ಫ್ಲಿಕ್ ಮಾಡಿದ ರೋಹಿತ್ ಸಿಕ್ಸರ್ ಬಾರಿಸಿದರು.

VISTARANEWS.COM


on

IND vs PAK
Koo

ಬೆಂಗಳೂರು: ಪಾಕಿಸ್ತಾನ ವಿರುದ್ಧ ಪಂದ್ಯವನ್ನು (IND vs PAK) ಗೆದ್ದ ನಂತರ ಭಾರತ ಕ್ರಿಕೆಟ್​ ತಂಡದ ಅಭಿಮಾನಿಗಳು ತುಂಬಾ ಖುಷಿಯಲ್ಲಿದ್ದಾರೆ. ಯಾಕೆಂದರೆ ಟಿ20 ವಿಶ್ವ ಕಪ್​ನಲ್ಲಿ(T20 World Cup) ಭಾರತ ತಂಡದ ಪಾರಮ್ಯ 8-1 ಕ್ಕೆ ಮುನ್ನಡೆದಿದೆ. ಆದಾಗ್ಯೂ ಭಾರತ ತಂಡದ ಬ್ಯಾಟಿಂಗ್ ಪ್ರದರ್ಶನದ ಮೇಲೆ ಕಟ್ಟರ್ ಅಭಿಮಾನಿಗಳಿಗೆ ಕೋಪವಿದೆ. ಆದರೆ, ಬೌಲರ್​ಗಳು ತಂಡವನ್ನು ರಕ್ಷಿಸಿರುವ ಪರಿಗೆ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ. ನಾಯಕ ರೋಹಿತ್ ಶರ್ಮಾ(Rohit Sharma) , ವಿರಾಟ್ ಕೊಹ್ಲಿಯಂಥ ವಿಶ್ವ ದರ್ಜೆಯ ಬ್ಯಾಟರ್​ಗಳ ಬಗ್ಗೆ ಪ್ರಶ್ನಿಸಲು ಆರಂಭಿಸಿದ್ದಾರೆ. ಇವೆಲ್ಲದರ ನಡುವೆಯೂ ನಾಯಕ ರೋಹಿತ್​ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಪರೂಪದ ಸಾಧನೆಯೊಂದನ್ನು ಮಾಡಿದ್ದಾರೆ.

ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ನಾಯಕ ಬಾಬರ್​ ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಭಾರತ ಉತ್ತಮ ಆರಂಭವನ್ನು ಪಡೆಯಿತು. ನಾಯಕ ರೋಹಿತ್ ಶರ್ಮಾ ಎಡಗೈ ವೇಗಿ ಶಾಹೀನ್ ಅಫ್ರಿದಿ ವಿರುದ್ಧ ಅಬ್ಬರಿಸಿದರು. ಆದರೆ 13 ರನ್ ಗೆ ಸೀಮಿತಗೊಂಡರು. ಅದಕ್ಕಿಂತ ಮೊದಲು ಅವರು ಇನಿಂಗ್ಸ್​​ನ ಮೊದಲ ಓವರ್​ನಲ್ಲಿಯೇ ಅದ್ಭುತ ಸಿಕ್ಸರ್ ಒಂದನ್ನು ಬಾರಿಸಿದ್ದರು. ಇದು ಅಲ್ಲಿನ ಅಭಿಮಾನಿಗಳ ಕಣ್ಮನ ಸೆಳೆಯಿತು.

ರೋಹಿತ್ ಶರ್ಮಾ ಓವರ್​ನ ಮೊದಲ ಎಸೆತದಲ್ಲಿ 2 ರನ್ ಗಳಿಸಿದರು ಮತ್ತು ನಂತರ ಅವರು ಹಿಂತಿರುಗಿ ನೋಡಲಿಲ್ಲ. ಓವರ್​ನ ಮೂರನೇ ಎಸೆತದಲ್ಲಿ ಎಡಗೈ ವೇಗಿ ಅಫ್ರಿದಿಗೆ ಅದ್ಭುತ ಸಿಕ್ಸರ್ ಬಾರಿಸಿದರು. ಇದು ಈ ಪಂದ್ಯದ ಅದ್ಭುತ ಸಿಕ್ಸರ್​. ಶಾಹಿನ್ ಅಫ್ರಿದಿ ಫುಲ್ ಲೆಂತ್ ಎಸೆತವನ್ನು ಎಸೆದಿದ್ದರು. ಅದು ರೋಹಿತ್​ ಪ್ಯಾಡ್​ಗಳಿಗೆ ಬಡಿಯಬೇಕಿತ್ತು. ಆದರೆ ಫ್ಲಿಕ್ ಮಾಡಿದ ರೋಹಿತ್ ಸಿಕ್ಸರ್ ಬಾರಿಸಿದರು.

ಶಾಹೀನ್ ಅಫ್ರಿದಿ ವಿರುದ್ಧದ ಮೊದಲ ಓವರ್​ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ರೋಹಿತ್ ಶರ್ಮಾ ಇತ್ತಂಡಗಳ ಮುಖಾಮುಖಿ ಇತಿಹಾಸದಲ್ಲಿ ಪಾಕಿಸ್ತಾನದ ಎಡಗೈ ವೇಗಿ ಶಾಹೀನ್ ಅಫ್ರಿದಿ ವಿರುದ್ಧ ವಿಶೇಷ ದಾಖಲೆ ಬರೆದರು. ಎಡಗೈ ವೇಗಿ ವಿರುದ್ಧ ಇನ್ನಿಂಗ್ಸ್​​ನ ಮೊದಲ ಓವರ್​ನಲ್ಲಿ ಎರಡು ಸಿಕ್ಸರ್​ ಬಾರಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರೋಹಿತ್​ ಏಕದಿನ ಮಾದರಿಯಲ್ಲೂ ಅದೇ ದಾಖಲೆಯನ್ನು ಹೊಂದಿದ್ದಾರೆ.

ಇದನ್ನೂ ಓದಿ: IND vs PAK : ಭಾರತ ಪರ ಬೆಟ್ಟಿಂಗ್ ಕಟ್ಟಿ 5.4 ಕೋಟಿ ರೂಪಾಯಿ ಗೆದ್ದ ಕೆನಡಾದ ರ್ಯಾಪರ್ ಡ್ರೇಕ್!

ಶ್ರೀಲಂಕಾದಲ್ಲಿ ನಡೆದ ಏಷ್ಯಾ ಕಪ್ 2023 ರ ಸೂಪರ್ ಫೋರ್ ಪಂದ್ಯದಲ್ಲಿ ರೋಹಿತ್ ಶರ್ಮಾ ಏಕದಿನ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ರೋಹಿತ್ ಅಲ್ಲಿಯೂ ಇದೇ ರೀತಿಯ ಸಿಕ್ಸರ್ ಅನ್ನು ಹೊಡೆದಿದ್ದರು.

ಗೆಲುವು ತಂದುಕೊಟ್ಟ ಬೌಲರ್​ಗಳು

ಜಸ್ಪ್ರೀತ್ ಬುಮ್ರಾ ನೇತೃತ್ವದ ಭಾರತೀಯ ಬೌಲಿಂಗ್ ವಿಭಾಗ ಬ್ಯಾಟರ್​ಗಳು ಪೇರಿಸಿದ್ದ 119 ರನ್​ಗಳ ಸಾಧಾರಣ ಮೊತ್ತವನ್ನು ಯಶಸ್ವಿಯಾಗಿ ರಕ್ಷಿಸಿತು ಈ ಭಾರೀ ಜಿದ್ದಾಜಿದ್ದಿನ ಹೋರಾಟಕ್ಕೆ 34,000 ಕ್ಕೂ ಹೆಚ್ಚು ಅಭಿಮಾನಿಗಳು ಸಾಕ್ಷಿಯಾಗಿದ್ದರು. ಬುಮ್ರಾ ಅವರ ಅಸಾಧಾರಣ ಪ್ರದರ್ಶನವು ಪಾಕಿಸ್ತಾನ ವಿರುದ್ಧದ ಭಾರತದ ಗೆಲುವಿನಲ್ಲಿ ನಿರ್ಣಾಯಕ ಅಂಶವೆಂದು ಸಾಬೀತಾಗಿದೆ. ಯಾಕೆಂದರೆ ಈ ಹಂತದಲ್ಲಿ ಪಾಕಿಸ್ತಾನದ ಗೆಲುವಿನ ನಿರೀಕ್ಷೆ ಶೇಕಡಾ 92 ರಷ್ಟು ಇದ್ದರೆ, ಭಾರತದ್ದು ಕೇವಲ 8% ಇತ್ತು. ಆದರೆ, ಫಲಿತಾಂಶ ಮಾತ್ರ ಉಲ್ಟಾ ಆಯಿತು. ವಿಶ್ವ ವೇದಿಕೆಯಲ್ಲಿ ನಾವೇ ಬಾಸ್​ ಎಂಬುದನ್ನು ಭಾರತ ಮತ್ತೊಂದು ಬಾರಿ ಸಾಕ್ಷಿ ಸಮೇತ ತೋರಿಸಿತು.

ಭಾರತವು 119 ರನ್​ಗಳ ಸಾಧಾರಣ ಮೊತ್ತವನ್ನು ರಕ್ಷಿಸಿದಾಗ, ಅವರ ಪ್ರತಿಭೆ ಅನಾವರಣಗೊಂಡಿತು. 3 ವಿಕೆಟ್​ಗೆ 80 ರನ್ ಗಳಿಸಿದ್ದ ಪಾಕಿಸ್ತಾನವು ಅಂತಿಮವಾಗಿ 113 ರನ್​ಗೆ ಸೀಮಿತಗೊಂಡಿದ್ದು ಭಾರತ ತಂಡದ ಸಾಮರ್ಥ್ಯಕ್ಕೆ ಸಾಕ್ಷಿ. ಈ ಪ್ರದರ್ಶನವು ಬುಮ್ರಾ ಅವರ ಶ್ರೇಷ್ಠ ವೃತ್ತಿಜೀವನದಲ್ಲಿ ಸ್ಮರಣೀಯ ಎನಿಸಿಕೊಳ್ಳಲಿದೆ. ಪಾಕ್​ ತಂಡದ ರನ್​ ಎಚ್ಚರಿಕೆಯಿಂದ ಪ್ರಾರಂಭವಾಗಿತ್ತು. ಮೊಹಮ್ಮದ್ ರಿಜ್ವಾನ್ 31 ರನ್ ಗಳಿಸಿ ಇನ್ನಿಂಗ್ಸ್ ಗೆ ಭದ್ರ ಬುನಾದಿ ಹಾಕಿದ್ದರು. ಆದಾಗ್ಯೂ, ನಿಯಮಿತವಾಗಿ ವಿಕೆಟ್​ಗಳು ಕಳೆದುಕೊಂಡ ಕಾರಣ ಪಾಕಿಸ್ತಾನದ ವೇಗಕ್ಕೆ ಅಡ್ಡಿಯಾಯಿತು.

Continue Reading

ಕ್ರೀಡೆ

IND vs PAK : ಭಾರತಕ್ಕೆ ಗೆಲುವಿನ ಚಾನ್ಸ್ ಕೇವಲ ಶೇ. 8, ಪಾಕ್ ಗೆ ಶೇ.92 ಇತ್ತು; ಆದರೆ…

IND vs PAK: ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ವೇಗದ ಬೌಲಿಂಗ್​ನಲ್ಲಿ ಮಾಸ್ಟರ್ ಕ್ಲಾಸ್ ಪ್ರದರ್ಶನ ನೀಡಿದ್ದರು. ನಿರ್ಣಾಯಕ ವಿಕೆಟ್​ಗಳನ್ನು ಅವರು ಪಡೆದರು. 14 ರನ್​ ವೆಚ್ಚದಲ್ಲಿ 3 ವಿಕೆಟ್​ ಪಡೆದ ಅಸಾಧಾರಣ ಅಂಕಿಅಂಶಗಳೊಂದಿಗೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಸ್ಪೆಲ್​ನಲ್ಲಿ 15 ಡಾಟ್ ಬಾಲ್ ಇದ್ದವು. ಇದರಿಂದಲೇ ಪಾಕ್​ ತಂಡಕ್ಕೆ ಒತ್ತಡ ಎದುರಾಯಿತು.

VISTARANEWS.COM


on

IND vs PAK
Koo

ಬೆಂಗಳೂರು : ನ್ಯೂಯಾರ್ಕ್​ನ ನಸ್ಸೌ ಕೌಂಟಿ ಇಂಟರ್​​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬಗ್ಗು ಬಡಿದಿದೆ. ಈ ಮೂಲಕ ಟಿ20 ವಿಶ್ವ ಕಪ್​ ಇತಿಹಾಸದ ಮುಖಾಮುಖಿಯಲ್ಲಿ 8-1 ರ ಮುನ್ನಡೆ ಪಡೆದುಕೊಂಡಿದೆ. ಜಸ್ಪ್ರೀತ್ ಬುಮ್ರಾ ನೇತೃತ್ವದ ಭಾರತೀಯ ಬೌಲಿಂಗ್ ವಿಭಾಗ ಬ್ಯಾಟರ್​ಗಳು ಪೇರಿಸಿದ್ದ 119 ರನ್​ಗಳ ಸಾಧಾರಣ ಮೊತ್ತವನ್ನು ಯಶಸ್ವಿಯಾಗಿ ರಕ್ಷಿಸಿದೆ. ಈ ಭಾರೀ ಜಿದ್ದಾಜಿದ್ದಿನ ಹೋರಾಟಕ್ಕೆ 34,000 ಕ್ಕೂ ಹೆಚ್ಚು ಅಭಿಮಾನಿಗಳು ಸಾಕ್ಷಿಯಾಗಿದ್ದರು. ಬುಮ್ರಾ ಅವರ ಅಸಾಧಾರಣ ಪ್ರದರ್ಶನವು ಪಾಕಿಸ್ತಾನ ವಿರುದ್ಧದ ಭಾರತದ ಗೆಲುವಿನಲ್ಲಿ ನಿರ್ಣಾಯಕ ಅಂಶವೆಂದು ಸಾಬೀತಾಗಿದೆ. ಯಾಕೆಂದರೆ ಈ ಹಂತದಲ್ಲಿ ಪಾಕಿಸ್ತಾನದ ಗೆಲುವಿನ ನಿರೀಕ್ಷೆ ಶೇಕಡಾ 92 ರಷ್ಟು ಇದ್ದರೆ, ಭಾರತದ್ದು ಕೇವಲ 8% ಇತ್ತು. ಆದರೆ, ಫಲಿತಾಂಶ ಮಾತ್ರ ಉಲ್ಟಾ ಆಯಿತು. ವಿಶ್ವ ವೇದಿಕೆಯಲ್ಲಿ ನಾವೇ ಬಾಸ್​ ಎಂಬುದನ್ನು ಭಾರತ ಮತ್ತೊಂದು ಬಾರಿ ಸಾಕ್ಷಿ ಸಮೇತ ತೋರಿಸಿತು.

ಭಾರತವು 119 ರನ್​ಗಳ ಸಾಧಾರಣ ಮೊತ್ತವನ್ನು ರಕ್ಷಿಸಿದಾಗ, ಅವರ ಪ್ರತಿಭೆ ಅನಾವರಣಗೊಂಡಿತು. 3 ವಿಕೆಟ್​ಗೆ 80 ರನ್ ಗಳಿಸಿದ್ದ ಪಾಕಿಸ್ತಾನವು ಅಂತಿಮವಾಗಿ 113 ರನ್​ಗೆ ಸೀಮಿತಗೊಂಡಿದ್ದು ಭಾರತ ತಂಡದ ಸಾಮರ್ಥ್ಯಕ್ಕೆ ಸಾಕ್ಷಿ. ಈ ಪ್ರದರ್ಶನವು ಬುಮ್ರಾ ಅವರ ಶ್ರೇಷ್ಠ ವೃತ್ತಿಜೀವನದಲ್ಲಿ ಸ್ಮರಣೀಯ ಎನಿಸಿಕೊಳ್ಳಲಿದೆ. ಪಾಕ್​ ತಂಡದ ರನ್​ ಎಚ್ಚರಿಕೆಯಿಂದ ಪ್ರಾರಂಭವಾಗಿತ್ತು. ಮೊಹಮ್ಮದ್ ರಿಜ್ವಾನ್ 31 ರನ್ ಗಳಿಸಿ ಇನ್ನಿಂಗ್ಸ್ ಗೆ ಭದ್ರ ಬುನಾದಿ ಹಾಕಿದ್ದರು. ಆದಾಗ್ಯೂ, ನಿಯಮಿತವಾಗಿ ವಿಕೆಟ್​ಗಳು ಕಳೆದುಕೊಂಡ ಕಾರಣ ಪಾಕಿಸ್ತಾನದ ವೇಗಕ್ಕೆ ಅಡ್ಡಿಯಾಯಿತು.

ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ವೇಗದ ಬೌಲಿಂಗ್​ನಲ್ಲಿ ಮಾಸ್ಟರ್ ಕ್ಲಾಸ್ ಪ್ರದರ್ಶನ ನೀಡಿದ್ದರು. ನಿರ್ಣಾಯಕ ವಿಕೆಟ್​ಗಳನ್ನು ಅವರು ಪಡೆದರು. 14 ರನ್​ ವೆಚ್ಚದಲ್ಲಿ 3 ವಿಕೆಟ್​ ಪಡೆದ ಅಸಾಧಾರಣ ಅಂಕಿಅಂಶಗಳೊಂದಿಗೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಸ್ಪೆಲ್​ನಲ್ಲಿ 15 ಡಾಟ್ ಬಾಲ್ ಇದ್ದವು. ಇದರಿಂದಲೇ ಪಾಕ್​ ತಂಡಕ್ಕೆ ಒತ್ತಡ ಎದುರಾಯಿತು.

ಒಂದು ಹಂತದಲ್ಲಿ 2 ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿದ್ದ ಪಾಕಿಸ್ತಾನ ಗೆಲುವಿನ ಕಡೆಗೆ ಸಾಗಿತ್ತ. ಮುಹಮ್ಮದ್ ರಿಜ್ವಾನ್, ಬಾಬರ್ ಅಜಮ್ ಮತ್ತು ಉಸ್ಮಾನ್ ಖಾನ್ ನಡುವಿನ ಅಗ್ರ ಮೂರು ಜೊತೆಯಾಟಗಳು ಮೆನ್ ಇನ್ ಗ್ರೀನ್​ಗೆ ಆರಂಭಿಕ ಮುನ್ನಡೆ ತಂದುಕೊಟ್ಟಿತ್ತು. ಆದರೆ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರ ಮಾರಕ ದಾಳಿಗೆ ಪಾಕಿಸ್ತಾನದ ಅವನತಿ ಶುರುವಾಯಿತು. ಪಾಕಿಸ್ತಾನ 11.5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿದ್ದಾಗ ಆ ತಂಡದ ಗೆಲುವಿನ ನಿರೀಕ್ಷೆ ಶೇ.92ರಷ್ಟಿತ್ತು. ಭಾರತದ ಅಭಿಮಾನಿಗಳೆಲ್ಲರೂ ಸೋಲು ನಿರೀಕ್ಷಿತ ಎಂದು ಅಂದುಕೊಂಡಿದ್ದರು. ಇನ್ನು ಮ್ಯಾಚ್ ನೋಡುವುದು ಬೇಡ ಎಂದು ಮಲಗಿದ್ದರು. ಆದರೆ, ಬೆಳಗ್ಗೆದ್ದು ನೋಡುವಾಗ ಭಾರತ ಗೆದ್ದಿತ್ತು. ಇದು ಭಾರತದ ಬೌಲರ್​ಗಳ ಸಾಮರ್ಥ್ಯದಿಂದ ಎಂಬುದು ಅರ್ಥವಾಯಿತು. ಗೆದ್ದೇ ಗೆಲ್ಲುತ್ತೇವೆ ಎಂದು ಅಂದುಕೊಂಡಿದ್ದ ಪಾಕಿಸ್ತಾನದ ಅಭಿಮಾನಿಗಳ ಒಣ ಜಂಭ ಠುಸ್ ಎಂದಿತು.

ಸತತ ಎರಡು ಅವಮಾನ

ಪಾಕಿಸ್ತಾನ 12.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 73 ರನ್ ಗಳಿಸಿ ಗೆಲುವಿನ ಹಾದಿಯಲ್ಲಿತ್ತು. ಆದರೆ 20 ಓವರ್ ಗಳಲ್ಲಿ ಆ ತಂಡ 7 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿ ಸೋತಿತು. ಅಲ್ಲದೆ ಗ್ರೂಪ್ ಹಂತದಲ್ಲಿ ಸತತ ಎರಡನೇ ಪಂದ್ಯವನ್ನು ಕಳೆದುಕೊಂಡಿತು. ಈ ಹಿಂದೆ ಕ್ರಿಕೆಟ್​ ಶಿಶು ಅಮೆರಿಕ ವಿರುದ್ಧ ಹೀನಾಯವಾಗಿ ಸೂಪರ್ ಓವರ್​ನಲ್ಲಿ ಸೋತಿತ್ತು. ನಮ್ಮದು ಬೆಸ್ಟ್ ಬೌಲಿಂಗ್ ಘಟಕ ಎಂದು ಹೇಳಿಕೊಳ್ಳುವ ಪಾಕ್​ ಮತ್ತೊಮ್ಮೆ ಅವಮಾನಕ್ಕೆ ಒಳಗಾಯಿತು.

ಇದನ್ನೂ ಓದಿ:IND vs PAK : ಭಾರತ ಪರ ಬೆಟ್ಟಿಂಗ್ ಕಟ್ಟಿ 5.4 ಕೋಟಿ ರೂಪಾಯಿ ಗೆದ್ದ ಕೆನಡಾದ ರ್ಯಾಪರ್ ಡ್ರೇಕ್!

ಶೇ.8ರಷ್ಟು ಗೆಲುವಿನ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಭಾರತ ಸತತ ಎರಡನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಟಿ20ಐನಲ್ಲಿ ಭಾರತ ಸಾಧಿಸಿದ ಅತ್ಯಂತ ಕಡಿಮೆ ಗುರಿ

120 ರನ್ – ಪಾಕ್ ವಿರುದ್ಧ , ನ್ಯೂಯಾರ್ಕ್ 2024 *

139 ರನ್​, ಜಿಂಬಾಬ್ವೆ ವಿರುದ್ಧ ಹರಾರೆ 2016

145 – ಇಂಗ್ಲೆಂಡ್ ವಿರುದ್ಧ ನಾಗಪುರ- 2017

147 ರನ್​​- ಬಾಂಗ್ಲಾದೇಶ ವಿರುದ್ಧ- ಬೆಂಗಳೂರು 2016

ಟಿ20 ವಿಶ್ವಕಪ್​ನಲ್ಲಿ ರಕ್ಷಿಸಿದ ಸಣ್ಣ ಮೊತ್ತಗಳು

120 ರನ್​, ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ, ಚಟ್ಟೋಗ್ರಾಮ್ 2014

120 ರನ್- ಪಾಕಿಸ್ತಾನ ವಿರುದ್ಧ​ ಭಾರತ, ನ್ಯೂಯಾರ್ಕ್ 2024 *

124 ವೆಸ್ಟ್ ಇಂಡೀಸ್ ವಿರುದ್ಧ ಅಫಘಾನಿಸ್ತಾನ- ನಾಗ್ಪುರ 2016

Continue Reading

ಪ್ರಮುಖ ಸುದ್ದಿ

IND vs PAK : ಭಾರತ ಪರ ಬೆಟ್ಟಿಂಗ್ ಕಟ್ಟಿ 5.4 ಕೋಟಿ ರೂಪಾಯಿ ಗೆದ್ದ ಕೆನಡಾದ ರ್ಯಾಪರ್ ಡ್ರೇಕ್!

IND vs PAK : ಡ್ರೇಕ್ ಕ್ರಿಕೆಟ್ ಬೆಟ್ಟಿಂಗ್ ಮಾಡುತ್ತಿರುವುದು ಇದೇ ಮೊದಲಲ್ಲ. ಐಪಿಎಲ್ 2024 ರ ಫೈನಲ್​​ಗೆ ಮುಂಚಿತವಾಗಿ, ಕೆನಡಾದ ರ್ಯಾಪರ್ ಕೋಲ್ಕತಾ ನೈಟ್ ರೈಡರ್ಸ್​ ಪರ ಸನ್​​​ರೈಸರ್ಸ್​ ಹೈದರಾಬಾದ್ ಚಾಂಪಿಯನ್ ಆಗಿ ಹೊರಹೊಮ್ಮುತ್ತದೆ 2 ಕೋಟಿ ರೂ. ಕಟ್ಟಿದ್ದರು. ಆದರೆ ಫಲಿತಾಂಶ ಅವರಿಗೆ ಪೂರಕವಾಗಿ ಬರಲಿಲ್ಲ.

VISTARANEWS.COM


on

IND vs PAK
Koo

ಬೆಂಗಳೂರು: ಟಿ20 ವಿಶ್ವ ಕಪ್​ನಲ್ಲಿ (T20 World Cup) ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (IND vs PAK) ವಿರುದ್ಧ 6 ರನ್​ಗಳ ವಿಜಯ ದಾಖಲಿಸಿದೆ. ಈ ಮೂಲಕ ನೆರೆಯ ದೇಶದ ವಿರುದ್ಧದ ವಿಶ್ವ ಕಪ್ ಪ್ರಾಬಲ್ಯವನ್ನು ಮುಂದುವರಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಭಾರತ 18.3 ಓವರ್​ಗಳಲ್ಲಿ 119 ರನ್​ಗಳಿಗೆ ಆಲ್​ಔಟ್ ಆಯಿತು. ಈ ವೇಳೆ ಪಾಕ್(Pakistan Cricket Team)​ ಗೆಲ್ಲುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಭಾರತದ (India Cricket Team) ಬೌಲರ್​ಗಳು ತನ್ನ ಪ್ರಭಾವಿ ಸ್ಪೆಲ್​ಗಳ ಮೂಲಕ ಪಾಕಿಸ್ತಾನ ತಂಡವನ್ನು 113 ರನ್​ಗಳಿಗೆ ಕಟ್ಟಿ ಹಾಕಿತು. ಹೀಗಅಗಿ ಭಾರತ ತಂಡದ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ. ಇದೇ ವೇಳೆ ಕೆನಡಾದ ರ್ಯಾಪರ್​ ಡ್ರೇಕ್​ಗೂ ಸಾಕಷ್ಟು ಖುಷಿ ಸಿಕ್ಕಿದೆ. ಹೇಗೆಂದರೆ ಅವರು ಭಾರತ ಪರ 5.4 ಕೋಟಿ ರೂಪಾಯಿ ಬೆಟ್​ ಕಟ್ಟಿದ್ದರು. ಇದೀಗ ಅವರಿಗೆ ಅದರ ಎರಡು ಪಟ್ಟು ಹಣ ಸಿಕ್ಕಿದೆ.

ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿಯೇ ಸೋಲಿಸುತ್ತದೆ ಎಂಬ ವಿಶ್ವಾಸದಲ್ಲಿ ಕೆನಡಾದ ರ್ಯಾಪರ್ ಆಬ್ರೆ ಡ್ರೇಕ್ ಗ್ರಹಾಂ ಟೀಮ್ ಇಂಡಿಯಾ ಪರ 5 ಕೋಟಿ ರೂಪಾಯಿ ಬೆಟ್​ ಕಟ್ಟಿದ್ದರು. ಟಿ 20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ಒಂಬತ್ತನೇ ಬಾರಿಗೆ ಮುಖಾಮುಖಿಯಾಗಿದ್ದು ಎಂಟು ಸಲ ಭಾರತವೇ ಗೆದ್ದಿದೆ. ಹೀಗಾಗಿ ಅವರು ಸಹಜವಾಗಿ ಭಾರತ ಪರವೇ ಬೆಟ್ಟಿಂಗ್​ ಕಟ್ಟಿದ್ದಾರೆ. ಇನ್ನು 2021ರ ಆವೃತ್ತಿಯಲ್ಲಿ ಪಾಕಿಸ್ತಾನ ತಂಡ ಗೆಲುವು ಸಾಧಿಸಿದೆ. ಇದು ಆ ತಂಡಕ್ಕೆ ವಿಶ್ವ ಕಪ್​ನಲ್ಲಿ ಏಕೈಕ ಗೆಲುವು.

ಟಿ 20 ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಪ್ರಾಬಲ್ಯ ಹೊಂದಿರುವ ಕಾರಣ ಪಂದ್ಯವನ್ನು ಗೆಲ್ಲುವ ಪ್ರಬಲ ನೆಚ್ಚಿನ ತಂಡವೆಂದು ಬೆಟ್ಟಿಂಗ್​ ಆ್ಯಪ್​ಗಳ ಪರಿಗಣಿಸಿದ್ದವು. ಮೆನ್ ಇನ್ ಗ್ರೀನ್ ವಿರುದ್ಧದ ಮೆನ್ ಇನ್ ಬ್ಲೂ ಗಮನಾರ್ಹ ಟ್ರ್ಯಾಕ್ ದಾಖಲೆಯನ್ನು ಗಮನದಲ್ಲಿಟ್ಟುಕೊಂಡು, ಡ್ರೇಕ್ ನ್ಯೂಯಾರ್ಕ್​​ನಲ್ಲಿ ನಡೆದ ಬಹುನಿರೀಕ್ಷಿತ ಮುಖಾಮುಖಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡದ ಮೇಲೆ ಪಣತೊಡಲು ನಿರ್ಧರಿಸಿದ್ದರು.

ಇದನ್ನೂ ಓದಿ: IND vs PAK : ಪಾಕಿಸ್ತಾನದ ಆಟಗಾರನಿಗೆ ಕಣ್ಣೀರು ಹಾಕಿಸಿದ ಭಾರತ ತಂಡ!

ಡ್ರೇಕ್ ಕ್ರಿಕೆಟ್ ಬೆಟ್ಟಿಂಗ್ ಮಾಡುತ್ತಿರುವುದು ಇದೇ ಮೊದಲಲ್ಲ. ಐಪಿಎಲ್ 2024 ರ ಫೈನಲ್​​ಗೆ ಮುಂಚಿತವಾಗಿ, ಕೆನಡಾದ ರ್ಯಾಪರ್ ಕೋಲ್ಕತಾ ನೈಟ್ ರೈಡರ್ಸ್​ ಪರ ಸನ್​​​ರೈಸರ್ಸ್​ ಹೈದರಾಬಾದ್ ಚಾಂಪಿಯನ್ ಆಗಿ ಹೊರಹೊಮ್ಮುತ್ತದೆ 2 ಕೋಟಿ ರೂ. ಕಟ್ಟಿದ್ದರು. ಆದರೆ ಫಲಿತಾಂಶ ಅವರಿಗೆ ಪೂರಕವಾಗಿ ಬರಲಿಲ್ಲ. ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ತಂಡವು ಪ್ಯಾಟ್ ಕಮಿನ್ಸ್ ಮುಂದಾಳತ್ವದ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಮೂರನೇ ಬಾರಿಗೆ ಐಪಿಎಲ್ ಪ್ರಶಸ್ತಿ ಗೆದ್ದುಕೊಂಡಿತ್ತು. ಡ್ರೇಕ್ ಹಣ ಕಳೆದುಕೊಂಡಿದ್ದರು.

ಪಾಕಿಸ್ತಾನ ವಿರುದ್ಧ ಬುಮ್ರಾ ಭರ್ಜರಿ ಪ್ರದರ್ಶನ

ಜಸ್ಪ್ರೀತ್ ಬುಮ್ರಾ ಭಾರತ ತಂಡಕ್ಕೆ ರಕ್ಷಕನಂತೆ ಆಡಿದರು. ಅವರು ಕೆಲವು ನಿರ್ಣಾಯಕ ವಿಕೆಟ್​ಗಳನ್ನು ಗಳಿಸಿದರು. ಇನ್ನಿಂಗ್ಸ್​ನ 19 ನೇ ಓವರ್​ನಲ್ಲಿ ಒಂದು ವಿಕೆಟ್ ಪಡೆದರು. ಅವರು ತಂಡಕ್ಕೆ ಅಗತ್ಯವಿದ್ದಾಗ ನಿಖರವಾಗಿ ಪ್ರದರ್ಶನ ನೀಡಿದರು ಮತ್ತು ಪಾಕಿಸ್ತಾನ ವಿರುದ್ಧದ ಸೋಲಿನಿಂದ ಭಾರತವನ್ನು ಕಾಪಾಡಿದರು.

120 ರನ್​ಗಳ ಗುರಿ ಬೆನ್ನತ್ತಿದ ಪಾಕ್​​ ಹೀನಾಯ ಸೋಲಿಗೆ ಒಳಗಾಯಿತು. ಇದೇ ವೇಳೆ ಮೆನ್ ಇನ್ ಬ್ಲೂ ನಿಜವಾದ ವಿಜೇತರಂತೆ ಆಡಿತು. ಟಿ 20 ಐ ಇತಿಹಾಸದಲ್ಲಿ ಅತ್ಯಂತ ಕಡಿಮೆ ಸ್ಕೋರ್ ಅನ್ನು ರಕ್ಷಿಸಿತು. ಜಸ್ಪ್ರೀತ್ ಬುಮ್ರಾ ನಿಗದಿತ 4 ಓವರ್ಗಳಲ್ಲಿ 3.50 ಎಕಾನಮಿಯೊಂದಿಗೆ 3 ವಿಕೆಟ್ ಪಡೆದರು. ಆರಂಭಿಕ ವೇಗಿ ಭಾರತ ತಂಡವನ್ನು ನಿರಾಶಾದಾಯಕ ಸೋಲಿನಿಂದ ರಕ್ಷಿಸಿದರು. To Beat Pakistan

Continue Reading

ಕ್ರೀಡೆ

IND vs PAK : ಪಾಕಿಸ್ತಾನದ ಆಟಗಾರನಿಗೆ ಕಣ್ಣೀರು ಹಾಕಿಸಿದ ಭಾರತ ತಂಡ!

IND vs PAK: ಭಾರತ ತಂಡ ಪಾಕಿಸ್ತಾನದ ಆಟಗಾರರಿಗೆ ಕಣ್ಣೀರು ಹಾಕಿಸುವುದು ಇದೇ ಮೊದಲಲ್ಲ. ಎರಡು ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳ ಪಂದ್ಯಗಳು ಅತ್ಯಂತ ರೋಚಕವಾಗಿಯೇ ಕೊನೆಗೊಳ್ಳುತ್ತದೆ. ಈ ಹಿಂದಿನ ಆವೃತ್ತಿಯಲ್ಲೂ ಇದೇ ಮುಂದುವರಿದಿತ್ತು. ಆಸ್ಟ್ರೇಲಿಯಾದ ಗಬ್ಬಾದಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅಜೇಯ 2 ರನ್ ಬಾರಿಸಿ ಭಾರತವನ್ನು ಗೆಲ್ಲಿಸಿದ್ದರು. ಆ ವೇಳೆಯೂ ಕಣ್ಣೀರು ಹಾಕುವುದು ಪಾಕಿಸ್ತಾನ ತಂಡದ ಆಟಗಾರರ ಸರದಿಯಾಯಿತು.

VISTARANEWS.COM


on

IND vs PAK
Koo

ಬೆಂಗಳೂರು: ನ್ಯೂಯಾರ್ಕ್​ನ ನಸ್ಸೌ ಕೌಂಟಿ ಇಂಟರ್​ನ್ಯಾಷನಲ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವ ಕಪ್​ನ (T20 World Cup) ಭಾರತ ಮತ್ತು ಪಾಕಿಸ್ತಾನ (IND vs PAK) ನಡುವಿನ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು 6 ರನ್​​ಗಳಿಂದ ಸೋಲಿಸಿದೆ. ಟಾಸ್ ಗೆದ್ದ ಪಾಕಿಸ್ತಾನ ನಾಯಕ ಬಾಬರ್ ಅಜಮ್​ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಏರುಪೇರಿನ ಬ್ಯಾಟಿಂಗ್ ಬಳಿಕ ಮೆನ್ ಇನ್ ಬ್ಲೂ ತಂಡವು 18.3 ಓವರ್​ಗಳಲ್ಲಿ ಎಲ್ಲ ವಿಕೆಟ್​ ಕಳೆದುಕೊಂಡು 120 ರನ್ ಗಳ ಗುರಿಯನ್ನು ನೀಡಿತು. ಪ್ರತಿಯಾಗಿ ಆಡಿದ ಪಾಕಿಸ್ತಾನ 20 ಓವರ್​ಗಳಲ್ಲಿ 113 ರನ್​ಗಳಿಗೆ ಸೀಮಿತಗೊಂಡಿತು.

ಸೋಲಿನ ನಂತರ ಪಾಕಿಸ್ತಾನದ ಸ್ಟಾರ್ ಬೌಲರ್ ನಸೀಮ್ ಶಾ ಅಳುತ್ತಿರುವುದು ಕಂಡುಬಂತು. ಅವರು 8 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದರು. ಅವರು ತಂಡಕ್ಕೆ 4 ಎಸೆತಗಳಲ್ಲಿ 14 ರನ್​ಗಳ ಅಗತ್ಯವಿದ್ದಾಗ 2 ಬೌಂಡರಿಗಳನ್ನು ಹೊಡೆದರು. ಅಸಾಧ್ಯವಾದ ಗುರಿಯನ್ನು ಬೆನ್ನಟ್ಟುವಲ್ಲಿ ಧೈರ್ಯ ತೋರಿದ ಅವರಿಗೆ ಗೆಲುವು ಸಿಗದೇ ಹೋದಾಗ ಅಳು ಬಂತು. ಅವರು ಮೊದಲ ಇನ್ನಿಂಗ್ಸ್​​ನಲ್ಲಿ ಶಾ ತಮ್ಮ ನಾಲ್ಕು ಓವರ್​ಗಳಲ್ಲಿ 5.25 ಎಕಾನಮಿಯೊಂದಿಗೆ ಮೂರು ವಿಕೆಟ್​ಗಳನ್ನು ಪಡೆದಿದ್ದರು. ಹೀಗಾಗಿ ಅವರಿಗೆ ನಿರಾಸೆ ಎದುರಾಯಿತು. ಭಾರತ ವಿರುದ್ಧ ಸೋಲುವುದು ಅವಮಾನ ಎಂದುಕೊಂಡ ಅವರು ಮೈದಾನದಿಂದ ಮರಳುವ ವೇಳೆ ಕಣ್ಣೀರು ಸುರಿಸಿದರು.

ಭಾರತ ತಂಡ ಪಾಕಿಸ್ತಾನದ ಆಟಗಾರರಿಗೆ ಕಣ್ಣೀರು ಹಾಕಿಸುವುದು ಇದೇ ಮೊದಲಲ್ಲ. ಎರಡು ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳ ಪಂದ್ಯಗಳು ಅತ್ಯಂತ ರೋಚಕವಾಗಿಯೇ ಕೊನೆಗೊಳ್ಳುತ್ತದೆ. ಈ ಹಿಂದಿನ ಆವೃತ್ತಿಯಲ್ಲೂ ಇದೇ ಆಗಿತ್ತು. ಆಸ್ಟ್ರೇಲಿಯಾದ ಗಬ್ಬಾದಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅಜೇಯ 82 ರನ್ ಬಾರಿಸಿ ಭಾರತವನ್ನು ಗೆಲ್ಲಿಸಿದ್ದರು. ಆ ವೇಳೆಯೂ ಕಣ್ಣೀರು ಹಾಕುವುದು ಪಾಕಿಸ್ತಾನ ತಂಡದ ಆಟಗಾರರ ಸರದಿಯಾಗಿತ್ತು.

ಪಾಕಿಸ್ತಾನ ವಿರುದ್ಧ ಬುಮ್ರಾ ಭರ್ಜರಿ ಪ್ರದರ್ಶನ

ಜಸ್ಪ್ರೀತ್ ಬುಮ್ರಾ ಭಾರತ ತಂಡಕ್ಕೆ ರಕ್ಷಕನಂತೆ ಆಡಿದರು. ಅವರು ಕೆಲವು ನಿರ್ಣಾಯಕ ವಿಕೆಟ್​ಗಳನ್ನು ಗಳಿಸಿದರು. ಇನ್ನಿಂಗ್ಸ್​ನ 19 ನೇ ಓವರ್​ನಲ್ಲಿ ಒಂದು ವಿಕೆಟ್ ಪಡೆದರು. ಅವರು ತಂಡಕ್ಕೆ ಅಗತ್ಯವಿದ್ದಾಗ ನಿಖರವಾಗಿ ಪ್ರದರ್ಶನ ನೀಡಿದರು ಮತ್ತು ಪಾಕಿಸ್ತಾನ ವಿರುದ್ಧದ ಸೋಲಿನಿಂದ ಭಾರತವನ್ನು ಕಾಪಾಡಿದರು.

ಇದನ್ನೂ ಓದಿ: IND vs PAK : ‘ಗೆಲುವಿಗೆ ಮೊದಲೇ ಸಂಭ್ರಮಿಸಬೇಡಿ, ವಿಶ್ವ ಕಪ್​ನಲ್ಲಿ ನಮ್ದೇ ಹವಾ’; ಪಾಕಿಸ್ತಾನಕ್ಕೆ ತಿರುಗೇಟು ಕೊಟ್ಟ ಭಾರತದ ಅಭಿಮಾನಿಗಳು

120 ರನ್​ಗಳ ಗುರಿ ಬೆನ್ನತ್ತಿದ ಪಾಕ್​​ ಹೀನಾಯ ಸೋಲಿಗೆ ಒಳಗಾಯಿತು. ಇದೇ ವೇಳೆ ಮೆನ್ ಇನ್ ಬ್ಲೂ ನಿಜವಾದ ವಿಜೇತರಂತೆ ಆಡಿತು. ಟಿ 20 ಐ ಇತಿಹಾಸದಲ್ಲಿ ಅತ್ಯಂತ ಕಡಿಮೆ ಸ್ಕೋರ್ ಅನ್ನು ರಕ್ಷಿಸಿತು. ಜಸ್ಪ್ರೀತ್ ಬುಮ್ರಾ ನಿಗದಿತ 4 ಓವರ್ಗಳಲ್ಲಿ 3.50 ಎಕಾನಮಿಯೊಂದಿಗೆ 3 ವಿಕೆಟ್ ಪಡೆದರು. ಆರಂಭಿಕ ವೇಗಿ ಭಾರತ ತಂಡವನ್ನು ನಿರಾಶಾದಾಯಕ ಸೋಲಿನಿಂದ ರಕ್ಷಿಸಿದರು.

ಮೆನ್ ಇನ್ ಗ್ರೀನ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಯಾರ್ಕರ್ ಕಿಂಗ್ ಬುಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಾಕಿಸ್ತಾನ ಎರಡನೇ ಇನ್ನಿಂಗ್ಸ್ ನಲ್ಲಿಯೂ ಕಠಿಣ ಆರಂಭ ನೀಡಿತು. ಆದರೆ ಭಾರತೀಯ ಬೌಲರ್​ಗಳು ಅವಕಾಶ ನೀಡಲಿಲ್ಲ.

ಟಾಸ್ ಗೆದ್ದ ಪಾಕಿಸ್ತಾನ ನಾಯಕ ಅಝಾಮ್ ಭಾರತವನ್ನು ಮೊದಲು ಬ್ಯಾಟಿಂಗ್​ಗೆ ಇಳಿಸಿದರು. ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಕ್ರಮವಾಗಿ 13 ಮತ್ತು 4 ರನ್​ಗಳಿಗೆ ಔಟ್ ಆದರು. ರಿಷಭ್ ಪಂತ್ ಮತ್ತು ಅಕ್ಷರ್ ಪಟೇಲ್ 39 ರನ್ಗಳ ಜೊತೆಯಾಟದ ಮೂಲಕ ಭಾರತದ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದರು. ನಾಸಿಮ್​ ಶಾ ಮತ್ತು ಹ್ಯಾರಿಸ್ ರವೂಫ್ ತಲಾ ಮೂರು ವಿಕೆಟ್ ಕಬಳಿಸುವ ಮೂಲಕ ಮಧ್ಯಮ ಮತ್ತು ಕೆಳ ಕ್ರಮಾಂಕ ಕುಸಿಯುವಂತೆ ಮಾಡಿದರು. ಆದರೆ ಪಂತ್​ 42 ರನ್ ಬಾರಿಸಿ ಸಹಾಯ ಮಾಡಿದರು. ಪ್ರತಿಯಾಗಿ ಆಡಿದ ಪಾ ಕಿಸ್ತಾನವು ಏಳು ಬ್ಯಾಟರ್​ಗಳನ್ನು ಕಳೆದುಕೊಂಡು ತಮ್ಮ ಸ್ಕೋರ್ ಕಾರ್ಡ್​ಗೆ ಕೇವಲ 113 ರನ್​​ ಸೇರಿಸಿತು.

Continue Reading
Advertisement
IND vs PAK
ಪ್ರಮುಖ ಸುದ್ದಿ17 mins ago

IND vs PAK : ಪಾಕಿಸ್ತಾನದ ಬೌಲರ್​ ವಿರುದ್ಧ ವಿಶೇಷ ದಾಖಲೆ ಮಾಡಿದ ರೋಹಿತ್ ಶರ್ಮಾ

IND vs PAK
ಕ್ರೀಡೆ42 mins ago

IND vs PAK : ಭಾರತಕ್ಕೆ ಗೆಲುವಿನ ಚಾನ್ಸ್ ಕೇವಲ ಶೇ. 8, ಪಾಕ್ ಗೆ ಶೇ.92 ಇತ್ತು; ಆದರೆ…

Poonam Pandey making cake with ice cream with hot look
ಬಾಲಿವುಡ್48 mins ago

Poonam Pandey: ಪೂನಂ ಪಾಂಡೆಯ ರೆಸಿಪಿಗಿಂತ ಏಪ್ರನ್ ಮೇಲೆ ನೆಟ್ಟಿಗರ ಕಣ್ಣು; ರಸಿಕರ ಕಣ್ಣರಳಿಸಿದ ಹಾಟ್‌ ಬೆಡಗಿ!

Vastu Tips
ಧಾರ್ಮಿಕ52 mins ago

Vastu Tips: ನೆಮ್ಮದಿಯಿಂದ ನಿದ್ದೆ ಮಾಡಬೇಕೆ? ಈ ವಾಸ್ತು ನಿಯಮ ಪಾಲಿಸಿ

pm narendra Modi Cabinet
ಪ್ರಮುಖ ಸುದ್ದಿ52 mins ago

PM Narendra Modi: ಇಂದು ಸಂಜೆ ನರೇಂದ್ರ ಮೋದಿ ಸಂಪುಟ ಮೊದಲ ಸಭೆ; ಏನು ಅಜೆಂಡಾ?

Narendra Modi Oath Ceremony Celebs Congratulate PM Modi
ಸಿನಿಮಾ1 hour ago

Narendra Modi: ಪ್ರಧಾನಿ ಮೋದಿಗೆ ಸೆಲೆಬ್ರಿಟಿಗಳಿಂದ ಅಭಿನಂದನೆಗಳ ಮಹಾಪೂರ !

IND vs PAK
ಪ್ರಮುಖ ಸುದ್ದಿ1 hour ago

IND vs PAK : ಭಾರತ ಪರ ಬೆಟ್ಟಿಂಗ್ ಕಟ್ಟಿ 5.4 ಕೋಟಿ ರೂಪಾಯಿ ಗೆದ್ದ ಕೆನಡಾದ ರ್ಯಾಪರ್ ಡ್ರೇಕ್!

IND vs PAK
ಕ್ರೀಡೆ2 hours ago

IND vs PAK : ಪಾಕಿಸ್ತಾನದ ಆಟಗಾರನಿಗೆ ಕಣ್ಣೀರು ಹಾಕಿಸಿದ ಭಾರತ ತಂಡ!

PM Narendra Modi and Siddaramaiah
ಪ್ರಮುಖ ಸುದ್ದಿ2 hours ago

PM Narendra Modi: “ಒಕ್ಕೂಟ ವ್ಯವಸ್ಥೆಯ ಆಶಯ…” ಪ್ರಧಾನಿ ಮೋದಿಗೆ ಶುಭ ಕೋರಿದ ಸಿಎಂ ಸಿದ್ದರಾಮಯ್ಯ

IND vs PAK
ಕ್ರೀಡೆ2 hours ago

IND vs PAK : ‘ಗೆಲುವಿಗೆ ಮೊದಲೇ ಸಂಭ್ರಮಿಸಬೇಡಿ, ವಿಶ್ವ ಕಪ್​ನಲ್ಲಿ ನಮ್ದೇ ಹವಾ’; ಪಾಕಿಸ್ತಾನಕ್ಕೆ ತಿರುಗೇಟು ಕೊಟ್ಟ ಭಾರತದ ಅಭಿಮಾನಿಗಳು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ3 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ3 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ6 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ7 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ7 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌