R Ashwin | ಕ್ರಿಕೆಟ್ ಕ್ಷೇತ್ರದಲ್ಲಿ ಸ್ಟಾರ್ ಗಿರಿ ದೊರಕದಿದ್ದರೂ ಸ್ಟಾರ್​ಗಳ ಸ್ಟಾರ್ ಈ ಅಶ್Win - Vistara News

ಕ್ರಿಕೆಟ್

R Ashwin | ಕ್ರಿಕೆಟ್ ಕ್ಷೇತ್ರದಲ್ಲಿ ಸ್ಟಾರ್ ಗಿರಿ ದೊರಕದಿದ್ದರೂ ಸ್ಟಾರ್​ಗಳ ಸ್ಟಾರ್ ಈ ಅಶ್Win

VISTARANEWS.COM


on

R ashwin
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಿತ್ಯಾನಂದ ವಿವೇಕವಂಶಿ

ಬಾಂಗ್ಲಾದೇಶದ ವಿರುದ್ಧ ಎರಡನೇ ಟೆಸ್ಟ್ ನಲ್ಲಿ ಭಾರತದ ಗೆಲುವಿಗೆ ಕಾರಣಕರ್ತರಾದ ಆರ್ ಅಶ್ವಿನ್ ಎಲೆ ಮರೆ ಕಾಯಿಯಂತೆ ಇದ್ದುಕೊಂಡು ಮಾಡಿರುವ ಸಾಧನೆ ಅಮೋಘ. ಆದರೆ ಕೊಹ್ಲಿ, ಧೋನಿ ಇವರಿಗೆ ಸಿಕ್ಕ ಸ್ಟಾರ್ ವ್ಯಾಲ್ಯೂ ಅಶ್ವಿನ್ ಗೆ ಸಿಗದಿದ್ದುದು ಆಶ್ಚರ್ಯ. ಬನ್ನಿ ಅಶ್ವಿನ್ ಮಾಡಿರುವ ಸಾಧನೆಯನ್ನು ಗಮನಿಸೋಣ.

ಟೆಸ್ಟ್ ನಲ್ಲಿ 3,000 ರನ್ ಗಳು ಮತ್ತು 400 ವಿಕೆಟ್ ಗಳಿಸಿರುವ ಭಾರತದ ಇಬ್ಬರೇ ಆಲ್ ರೌಂಡರ್​ಗಳಲ್ಲಿ ಆಶ್ವಿನ್ ಒಬ್ಬರು. ಇನ್ನೊಬ್ಬರು ಕಪಿಲ್ ದೇವ್ (131 ಟೆಸ್ಟ್). ಪ್ರಪಂಚದಲ್ಲಿ ಈ ಸಾಧನೆ ಮಾಡಿರುವವ ಇನ್ನೂ ಮೂವರೆಂದರೆ ಶಾನ್ ಪೊಲಾಕ್(108 ಟೆಸ್ಟ್), ಸ್ಟುವರ್ಟ್ ಬ್ರಾಡ್ (159 ಟೆಸ್ಟ್), ಶೇನ್ ವಾರ್ನ್(145 ಟೆಸ್ಟ್), ರಿಚರ್ಡ್ ಹ್ಯಾಡ್ಲಿ (86 ಟೆಸ್ಟ್). ಆದರೆ ಇಷ್ಟು ಸಾಧನೆ ಮಾಡಲು ಅಶ್ವಿನ್ ತೆಗೆದುಕೊಂಡಿರುವುದು ಕೇವಲ 88 ಟೆಸ್ಟ್. ಅಂದರೆ ಆಶ್ವಿನ್ ಎಂತಹ ಪ್ರತಿಭಾನ್ವಿತ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.

ಟೆಸ್ಟ್​​ನಲ್ಲಿ 449 ವಿಕೆಟ್​ ಗಳಿಸಿರುವ ಅಶ್ವಿನ್ ಇನ್ನೊಂದು ವಿಕೆಟ್ ತೆಗೆದ ತಕ್ಷಣ ಟೆಸ್ಟ್ ಕ್ರಿಕೆಟ್​ನಲ್ಲಿ 450 ವಿಕೆಟ್​ಗಳ ಸರದಾರನಾಗುತ್ತಾರೆ. ಆಗ ಟೆಸ್ಟ್ ಕ್ರಿಕೆಟ್​ನಲ್ಲಿ 450 ವಿಕೆಟ್ ಮತ್ತು 3,000 ರನ್ ಗಳಿಸಿದ ವಿಶ್ವದ ಮೂರೇ ಆಟಗಾರರಲ್ಲಿ ಒಬ್ಬರಾಗುತ್ತಾರೆ. ಈ ಸಾಧನೆ ಮಾಡಿದ ಏಕೈಕ ಭಾರತೀಯನಾಗುತ್ತಾರೆ. ಅಶ್ವಿನ್ ಬಿಟ್ಟರೆ ಈ ಸಾಧನೆ ಮಾಡಿರುವ ಇನ್ನಿಬ್ಬರು ಶೇನ್ ವಾರ್ನ್ ಮತ್ತು ಸ್ಟುವರ್ಟ್ ಬ್ರಾಡ್ ಮಾತ್ರ.

ಅತಿ ಹೆಚ್ಚು ಬಾರಿ ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ ಸೆಂಚುರಿ ಮತ್ತು ಐದು ವಿಕೆಟ್ ಪಡೆದಿರುವವರಲ್ಲಿ ಎರಡನೇ ಸ್ಥಾನದಲ್ಲಿರುವವರು ಆಲ್ ರೌಂಡರ್ ಅಶ್ವಿನ್‌ (ಒಟ್ಟು 3 ಬಾರಿ). ಮೊದಲ ಸ್ಥಾನದಲ್ಲಿರುವ ಇಂಗ್ಲೆಂಡ್​ನ ಇಯಾನ್ ಬಾಥಮ್ 5 ಬಾರಿ ಈ ಸಾಧನೆ ಮಾಡಿದ್ದಾರೆ. ಭಾರತದ ಪರವಾಗಿ ಈ ಸಾಧನೆ ಮಾಡಿರುವ ಇತರರೆಂದರೆ ಎಮ್​ ಎಚ್​ ಮಂಕಂಡ್ (1 ಬಾರಿ), ಉಮ್ರಿಗರ್ (1 ಬಾರಿ) ರವೀಂದ್ರ ಜಡೇಜಾ (1ಬಾರಿ).

ಪ್ರಪಂಚದ ಟೆಸ್ಟ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿರುವ ಎರಡನೇ ಆಟಗಾರ ಆರ್ ಅಶ್ವಿನ್. (ಒಟ್ಟು 9 ಬಾರಿ) ಇದಕ್ಕಾಗಿ ಅವರು ಕೇವಲ 88 ಟೆಸ್ಟ್ ಮತ್ತು 36 ಸರಣಿಗಳಲ್ಲಿ ಆಡಿದ್ದಾರೆ. ಮೊದಲ ಸ್ಥಾನದಲ್ಲಿ 133 ಟೆಸ್ಟ್ ಆಡಿ 61 ಸರಣಿಗಳಲ್ಲಿ ಭಾಗವಹಿಸಿರುವ ಮುತ್ತಯ್ಯ ಮುರಳೀಧರನ್(11 ಬಾರಿ ಸರಣಿ ಶ್ರೇಷ್ಠ) ಇದ್ದರೆ, ಅಶ್ವಿನ್ ರ ಜೊತೆ ಜಂಟಿ ಎರಡನೇ ಸ್ಥಾನವನ್ನು ಹಂಚಿಕೊಂಡಿರುವ ದಕ್ಷಿಣ ಆಫ್ರಿಕಾದ ಜಾಕ್​ ಕಾಲೀಸ್ 9 ಬಾರಿ ಸರಣಿ ಶ್ರೇಷ್ಠರಾಗಲು 166 ಟೆಸ್ಟ್ ಮತ್ತು 61 ಸರಣಿಗಳಲ್ಲಿ ಭಾಗವಹಿಸಿದ್ದರು. ಇನ್ನು ಭಾರತೀಯ ಸಾಧಕರಿಗೆ ಹೋಲಿಸಿದರೆ ಅಶ್ವಿನ್​ಗಿಂತ ಹಿಂದೆ ಇರುವವರು ವೀರೇಂದ್ರ ಸೆಹ್ವಾಗ್( 104 ಟೆಸ್ಟ್ 39 ಸರಣಿ) ಮತ್ತು ಸಚಿನ್ ತೆಂಡೂಲ್ಕರ್ (200 ಟೆಸ್ಟ್ 74 ಸರಣಿ). ಇವರಿಬ್ಬರು ಕೇವಲ 5 ಬಾರಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ. ಇದನ್ನು ಗಮನಿಸಿದರೆ ತಂಡದ ಗೆಲುವಿನಲ್ಲಿ ಅಶ್ವಿನ್ ಪಾತ್ರ ಮತ್ತು ಅವರ ನಿರಂತರ ಮತ್ತು ಯಶಸ್ಸನ್ನು ಗುರುತಿಸಬಹುದು.

ಟೆಸ್ಟ್ ಮ್ಯಾಚ್ ಒಂದರಲ್ಲಿ ಅತಿ ಹೆಚ್ಚು ಬಾರಿ ಹತ್ತು ವಿಕೆಟ್ ಗೊಂಚಲು (ಒಟ್ಟು 7 ಬಾರಿ) ಗಳಿಸಿದ ಭಾರತದ ಎರಡನೇ ಮತ್ತು ಪ್ರಪಂಚದ ಒಂಭತ್ತನೇ ಬೌಲರ್. ಈ ಸಾಧನೆ ಮಾಡಿರುವ ಇನ್ನೊಬ್ಬ ಭಾರತೀಯ ಬೌಲರ್ ಎಂದರೆ ಅನಿಲ್ ಕುಂಬ್ಳೆ(8 ಬಾರಿ). ಅಶ್ವಿನ್ ತಾವು ನಿವೃತ್ತರಾಗುವುದರೊಳಗೆ ಇನ್ನೊಂದು ಬಾರಿ ಈ ಸಾಧನೆ ಮಾಡಿದರೆ ಕುಂಬ್ಳೆ(8ಬಾರಿ) ಯವರನ್ನು ಸರಿಗಟ್ಟುವುದಲ್ಲದೇ ಭಾರತದ ಪಟ್ಟಿಯಲ್ಲಿ ಕುಂಬ್ಳೆಯವರೊಂದಿಗೆ ಜಂಟಿ ಮೊದಲ ಸ್ಥಾನ ಮತ್ತು ಪ್ರಪಂಚದ ಪಟ್ಟಿಯಲ್ಲಿ ಕುಂಬ್ಳೆಯವರೊಂದಿಗೆ ಜಂಟಿ ನಾಲ್ಕನೇ ಸ್ಥಾನ ಗಳಿಸಲಿದ್ದಾರೆ. ನಿವೃತ್ತರಾಗುವುದರೊಳಗೆ ಎರಡು ಬಾರಿ ಏನಾದರೂ ಈ ಸಾಧನೆ ಮಾಡಿದರೆ ಅನಿಲ್ ಕುಂಬ್ಳೆಯವರನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ ಭಾರತದ ಏಕೈಕ ಬೌಲರ್ ಎನಿಸುವುದಲ್ಲದೇ ಪ್ರಪಂಚದ ಪಟ್ಟಿಯಲ್ಲಿ ನ್ಯೂಜಿಲೆಂಡ್ ನ ರಿಚರ್ಡ್ ಹ್ಯಾಡ್ಲಿ(9 ಬಾರಿ) ಮತ್ತು ಶ್ರೀಲಂಕಾದ ಹೇರತ್(9 ಬಾರಿ) ಜೊತಗೆ ಜಂಟಿ ಮೂರನೇ ಸ್ಥಾನ ಪಡೆಯಲಿದ್ದಾರೆ. ಇನ್ನೂ ಮೂರು ಬಾರಿ ಏನಾದರೂ ಈ ಸಾಧನೆ ಮಾಡಿಬಿಟ್ಟರೆ ಶೇನ್ ವಾರ್ನ್ (10 ಬಾರಿ) ರವರ ಜೊತೆ ಜಂಟಿ ಎರಡನೇ ಸ್ಥಾನ ಪಡೆಯಲಿದ್ದಾರೆ. ಮೊದಲ ಸ್ಥಾನದಲ್ಲಿ 22 ಬಾರಿ ಈ ಸಾಧನೆ ಮಾಡಿರುವ ಶ್ರೀಲಂಕಾ ದ ಮುತ್ತಯ್ಯ ಮುರಳೀಧರನ್ ಹೆಸರಿದ್ದು, ಭಾರತದ ಅಶ್ವಿನ್ ಸೇರಿದಂತೆ ಪ್ರಪಂಚದ ಇನ್ಯಾವ ಬೌಲರ್ ಕೈಲೂ ಮುರಿಯುವುದು ಅಸಾಧ್ಯವಾದ ದಾಖಲೆಯಾಗಿದೆ.

ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ ಪ್ರಪಂಚದಲ್ಲೇ ಅತಿ ಹೆಚ್ಚು ಬಾರಿ ಐದು ವಿಕೆಟ್ ಗಳಿಸಿದ ಬೌಲರ್​ಗಳ ಪೈಕಿಯೂ ಟಾಪ್ 10 ರ ಪಟ್ಟಿಯಲ್ಲಿ ಇದ್ದಾರೆ ಅಶ್ವಿನ್. (ಒಟ್ಟು 30 ಬಾರಿ, 10ನೇ ಸ್ಥಾನ). ಪ್ರಪಂಚದ ಟಾಪ್ 10 ಪಟ್ಟಿಯಲ್ಲಿ ಇರುವ ಇನ್ನೊಬ್ಬ ಭಾರತೀಯ ಅನಿಲ್ ಕುಂಬ್ಳೆ ಮಾತ್ರ. (4 ನೇ ಸ್ಥಾನ 35 ಬಾರಿ). ಹೀಗಾಗಿ ನಿವೃತ್ತರಾಗುವುದರೊಳಗೆ ಅಶ್ವಿನ್​ಗೆ ಕುಂಬ್ಳೆ ಯವರ ದಾಖಲೆ ಮುರಿಯುವ ಸಾಮರ್ಥ್ಯವಿದೆ. ಕುಂಬ್ಳೆಯವರಿಗಿಂಥ ಮೇಲಿರುವವರೆಂದರೆ ಶೇನ್​ ವಾರ್ನ್ (37 ಬಾರಿ) ಹ್ಯಾಡ್ಲಿ ( 36 ಬಾರಿ) ಮುರಳೀಧರನ್(67 ಬಾರಿ) ಮಾತ್ರ. ಪ್ರಯತ್ನ ಪಟ್ಟರೆ ಅಶ್ವಿನ್ ನಿವೃತ್ತರಾಗುವುದರೊಳಗೆ ನಂ 2 ಸ್ಥಾನಕ್ಕೇರಬಹುದು.

ಬ್ಯಾಟ್ಸ್​ಮನ್​ಗಳನ್ನು ಅತಿ ಹೆಚ್ಚು ಬಾರಿ ಎಲ್​ಬಿಡಬ್ಲ್ಯು ಬಲೆಗೆ ಕೆಡವಿದ ಪ್ರಪಂಚದ ಹತ್ತು ಬೌಲರ್​ಗಳಲ್ಲಿ ಅಶ್ವಿನ್ ಕೂಡಾ ಒಬ್ಬರು (96 ಬಾರಿ). ಇನ್ನೂ ಆರು ವಿಕೆಟ್​​ಗಳನ್ನು ಎಲ್​ಬಿಡಬ್ಲ್ಯು ರೂಪದಲ್ಲಿ ಅಶ್ವಿನ್ ಪಡೆದರೆ 100 ಬಾರಿ ಈ ಸಾಧನೆ ಮಾಡಿದವರಾಗಿ 100 ಎಲ್​ಬಿಡಬ್ಲ್ಯು ವಿಕೆಟ್ ಕ್ಲಬ್​ಗೆ ಸೇರುತ್ತಾರೆ. ಪ್ರಪಂಚದಲ್ಲಿ ಇದುವರೆಗೂ ಈ ಸಾಧನೆ ಮಾಡಿರುವವರು ಕೇವಲ 9 ಬೌಲರ್ ಗಳು ಮಾತ್ರ. ಅಂದ ಹಾಗೆ ಪ್ರಪಂಚದ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಭಾರತದ ಅನಿಲ್ ಕುಂಬ್ಳೆ ಎಂಬುದು ಹೆಮ್ಮೆಯ ಸಂಗತಿ. (ಒಟ್ಟು 150 ಸಲ) ಈ ಪಟ್ಟಿಯಲ್ಲಿ ಇರುವ ಇನ್ನೊಬ್ಬ ಭಾರತೀಯ ಕಪಿಲ್ ದೇವ್ (111 ಸಲ) ಮಾತ್ರ.

ಟೆಸ್ಟ್​​ನಲ್ಲಿ ಅತಿ ಹೆಚ್ಚು ಬಾರಿ ಎಡಗೈ ಬ್ಯಾಟ್ಸ್​ಮನ್​ ಗಳನ್ನು ಔಟ್ ಮಾಡಿದ ಬೌಲರ್​ಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನ ಅಶ್ವಿನ್ ಅವರದ್ದು. ಇನ್ನೂರು ಎಡಗೈ ಆಟಗಾರರನ್ನು ಪೆವಿಲಿಯನ್​ಗೆ ಕಳುಹಿಸಿದ ಪ್ರಪಂಚದ ಏಕೈಕ ಬೌಲರ್ ಅಶ್ವಿನ್ ಅನ್ನುವುದು ವಿಶೇಷ.

ಪ್ರಪಂಚದಲ್ಲಿ ಅತಿವೇಗದ 250, 300, 350 ವಿಕೆಟ್ ಗಳಿಸಿದವರ ಪೈಕಿ ಅಶ್ವಿನ್ ಮೊದಲ ಸ್ಥಾನದಲ್ಲಿದ್ದಾರೆ. ಕ್ರಮವಾಗಿ ಕೇವಲ 45, 54, 66 ಟೆಸ್ಟ್​​ಗಳಲ್ಲಿ ಅವರು ಈ ಸಾಧನೆ ಮಾಡಿದ್ದರು.

ಅಶ್ವಿನ್ ರೊಂದಿಗೆ ಅತಿ ವೇಗದ 350 ವಿಕೆಟ್ ಸಾಧನೆಯಲ್ಲಿ ಜಂಟಿ ಮೊದಲ ಸ್ಥಾನ ಪಡೆದಿರುವ ಮುತ್ತಯ್ಯ ಮುರಳಿಧರನ್ ಈ ಸಾಧನೆ ಮಾಡಲು ವೃತ್ತಿ ಜೀವನದ 9 ವರ್ಷ 9 ದಿನಗಳನ್ನು ತೆಗೆದುಕೊಂಡಿದ್ದರೆ ಅಶ್ವಿನ್ ಕೇವಲ 7 ವರ್ಷ 330 ದಿನಗಳಲ್ಲಿ ಈ ಸಾಧನೆ ಮಾಡಿದ್ದರು ಎಂಬುದು ಗಮನಾರ್ಹ. ಇನ್ನುಳಿದಂತೆ ವೇಗದ 350 ವಿಕೆಟ್ ಪಟ್ಟಿಯಲ್ಲಿರುವ ಇತರ ಭಾರತೀಯರೆಂದರೆ ಅನಿಲ್ ಕುಂಬ್ಳೆ (77 ಟೆಸ್ಟ್ 6 ನೇ ಸ್ಥಾನ), ಹರ್ಭಜನ್ ಸಿಂಗ್(83 ಟೆಸ್ಟ್ 11 ನೇ ಸ್ಥಾನ) ಮತ್ತು ಕಪಿಲ್ ದೇವ್ (100 ಟೆಸ್ಟ್ 19 ನೇ ಸ್ಥಾನ) ಮಾತ್ರ.

ಇನ್ನು ಅತಿ ವೇಗದ 400 ವಿಕೆಟ್ ಸಾಧನೆಯಲ್ಲಿ ಅಶ್ವಿನ್ ಎರಡನೇ ಸ್ಥಾನ ಪಡೆದಿದ್ದಾರೆ (77 ಟೆಸ್ಟ್). ಮೊದಲ ಸ್ಥಾನದಲ್ಲಿರುವ ಮುತ್ತಯ್ಯ ಮುರಳೀಧರನ್ 72 ಟೆಸ್ಟ್​​ಗಳಲ್ಲಿ ಈ ಸಾಧನೆ ಮಾಡಿದ್ದರು. ಮೂರನೇ ಸ್ಥಾನದಲ್ಲಿ ರಿಚರ್ಡ್ ಹ್ಯಾಡ್ಲಿ 80 ಟೆಸ್ಟ್​​ಗಳಲ್ಲಿ ಈ ಸಾಧನೆ ಮಾಡಿದ್ದರು. ಕುಂಬ್ಳೆ (85 ಟೆಸ್ಟ್), ಹರ್ಭಜನ್ (96 ಟೆಸ್ಟ್) ಮತ್ತು ಕಪಿಲ್ ದೇವ್(115 ಟೆಸ್ಟ್) ಈ ರೇಸ್ ನಲ್ಲಿರುವ ಭಾರತೀಯರು.

ಮುಂದಿನ ಟೆಸ್ಟ್​​ನಲ್ಲಿ ಇನ್ನೊಂದು ವಿಕೆಟ್ ಕಿತ್ತರೆ ಅತಿ ವೇಗದ 450 ವಿಕೆಟ್ ರೇಸ್​​ನಲ್ಲೂ ಅಶ್ವಿನ್ (89 ಟೆಸ್ಟ್) ಮತ್ತೆ 2ನೇ ಸ್ಥಾನ ಪಡೆಯಲಿದ್ದಾರೆ. ಮೊದಲ ಸ್ಥಾನ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್(80 ಟೆಸ್ಟ್) ಮತ್ತು ಮೂರನೇ ಸ್ಥಾನ ನಮ್ಮ ಅನಿಲ್ ಕುಂಬ್ಳೆ (93 ಟೆಸ್ಟ್) ಅವರದ್ದಾಗಿದೆ. ಪ್ರಪಂಚದಲ್ಲಿ ಕೇವಲ 10 ಜನ ಮಾತ್ರ ಮಾಡಿರುವ ಈ ಸಾಧನೆಯ ರೇಸ್​​ನಲ್ಲಿ ಅಶ್ವಿನ್ ಮತ್ತು ಕುಂಬ್ಳೆ ಬಿಟ್ಟರೆ ಇನ್ಯಾವ ಭಾರತೀಯನೂ ಇಲ್ಲ.

ಒಂದು ವೇಳೆ ಅಶ್ವಿನ್ 500 ವಿಕೆಟ್​ನ ಗುರಿ ಮುಟ್ಟಿದರೆ ಬಹುಶಃ ಈ ಸಾಧನೆ ಮಾಡಿದ ವಿಶ್ವದ 8 ನೇ ಆಟಗಾರರಾಗಲಿದ್ದಾರೆ. ವೇಗದ 500 ವಿಕೆಟ್ ಗಳಿಸುವಲ್ಲಿ ಎರಡನೇ ಸ್ಥಾನ ಗಳಿಸುವ ಸಾಧ್ಯತೆ ಇದೆ. ಅಶ್ವಿನ್ ಆ ಸ್ಥಾನ ಪಡೆಯಬೇಕಿದ್ದರೆ ಕುಂಬ್ಳೆ(105 ಟೆಸ್ಟ್) ಯವರಿಗಿಂತ ಮೊದಲು ಅಂದರೆ ಇನ್ನು 17 ಟೆಸ್ಟ್​ ಪಂದ್ಯದ ಒಳಗೆ 51 ವಿಕೆಟ್ ಗಳಿಸಬೇಕು. ಅಷ್ಟು ಟೆಸ್ಟ್​​ಗಳಲ್ಲಿ ಆಡುವ ಅವಕಾಶ ಅಶ್ವಿನ್​ಗೆ ದೊರೆತರೆ ನೀರು ಕುಡಿದಷ್ಟೇ ಸುಲಭವಾಗಿ ಈ ರೆಕಾರ್ಡ್ ಅನ್ನು ಮುರಿದುಹಾಕುವುದು ಖಚಿತ. ಇನ್ನು ಮೊದಲ ಸ್ಥಾನದಲ್ಲಿರುವ ಮುತ್ತಯ್ಯ ಮುರಳೀಧರನ್ (87 ಟೆಸ್ಟ್) ರವರ ದಾಖಲೆ ಮುರಿಯಲು ಸಾಧ್ಯವೇ ಇಲ್ಲ. ಯಾಕೆಂದರೆ ಅದಾಗಲೇ ಅಶ್ವಿನ್ 88 ಟೆಸ್ಟ್ ಮ್ಯಾಚ್ ಆಡಿಯಾಗಿದೆ. ಆದರೆ ಭವಿಷ್ಯದಲ್ಲಿ ಅಶ್ವಿನ್​ ಅವರ ಎರಡನೇ ಅತಿ ವೇಗದ 500 ವಿಕೆಟ್ ಗಳ ದಾಖಲೆಯನ್ನೂ ಮುರಿಯುವುದು ಕಷ್ಟಸಾಧ್ಯ. ಏಕೆಂದರೆ ಈಗ ಆಡುತ್ತಿರುವವರಲ್ಲಿ ಅಶ್ವಿನ್ ಅವರ ಸನಿಹದಲ್ಲೂ ಯಾರೂ ಇಲ್ಲ.

ಭಾರತ ಟೆಸ್ಟ್ ಬೌಲರ್ ಗಳಲ್ಲಿ ವೇಗದ 50, 100, 150, 200, 250, 300, 350, 400, 450 ವಿಕೆಟ್ ಗಳ ದಾಖಲೆಯೂ ಅಶ್ವಿನ್ ಹೆಸರಿನಲ್ಲಿಯೇ ಇದೆ. ವೇಗದ 500 ಕೂಡಾ ಕೆಲವೇ ದಿನಗಳಲ್ಲಿ ಅವರದ್ದೇ ಆಗಲಿದೆ.

ಅಶ್ವಿನ್ ಐಸಿಸಿಯ ಪ್ರಪಂಚದ ಸರ್ವಕಾಲಿಕ ಶ್ರೇಷ್ಠ ಆಲ್ ರೌಂಡರ್ ಗಳ ಪೈಕಿ 12 ನೇ ಸ್ಥಾನ ಗಳಿಸಿದ್ದಾರೆ. 20 ಆಟಗಾರರ ಈ ಪಟ್ಟಿಯಲ್ಲಿ ಅಶ್ವಿನ್ ಬಿಟ್ಟರೆ ಇನ್ನೊಬ್ಬ ಭಾರತೀಯ ಆಟಗಾರನಿಲ್ಲ . ಹಾಗೆಯೇ ಬೌಲರ್ ಗಳ ಪಟ್ಟಿಯಲ್ಲಿ ಅಶ್ವಿನ್ 19ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲೂ ಸಹಾ ಅಶ್ವಿನ್ ಹೊರತುಪಡಿಸಿ ಇನ್ನೊಬ್ಬ ಭಾರತೀಯ ಆಟಗಾರನಿಲ್ಲ ಅನ್ನುವುದು ಅಶ್ವಿನ್ ಶ್ರೇಷ್ಠ ನಿರ್ವಹಣೆಯನ್ನು ಎತ್ತಿ ತೋರಿಸುತ್ತದೆ. ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ 11 ನೇ ಸ್ಥಾನದಲ್ಲಿದ್ದು ಕೊಹ್ಲಿಯನ್ನು ಹೊರತುಪಡಿಸಿ ಇನ್ನೊಬ್ಬ ಈ ಪಟ್ಟಿಯಲ್ಲಿ ಭಾರತೀಯ ಇಲ್ಲ. ಅಂದರೆ ಪ್ರಪಂಚದ ಸಾರ್ವಕಾಲಿಕ ಟೆಸ್ಟ್ ಆಟಗಾರರಲ್ಲಿ ಇರುವ ಇಬ್ಬರೇ ಇಬ್ಬರು ಭಾರತೀಯರಲ್ಲಿ ಅಶ್ವಿನ್ ಒಬ್ಬರು. ಕೊಹ್ಲಿ ಬ್ಯಾಟಿಂಗ್ ನಲ್ಲಿ ಸ್ಥಾನ ಪಡೆದಿದ್ದರೆ ಅಶ್ವಿನ್ ಬೌಲಿಂಗ್ ಮತ್ತು ಆಲ್ ರೌಂಡರ್ ಎರಡೂ ವಿಭಾಗಗಳಲ್ಲಿ ಸ್ಥಾನ ಪಡೆದಿದ್ದಾರೆ. ಇಷ್ಟಾದರೂ ಭಾರತೀಯ ಕ್ರಿಕೆಟ್ ಲೋಕ ಈ ಆಟಗಾರನನ್ನು ಸ್ಟಾರ್ ಎಂದು ನೋಡುವುದೇ ಇಲ್ಲ ಎನ್ನುವುದೇ ಅಚ್ಚರಿಯ ಸಂಗತಿ.

ಪ್ರಪಂಚದ ಸರ್ವ ಶ್ರೇಷ್ಠ ಟೆಸ್ಟ್ ಆಲ್ ರೌಂಡರ್ ಆಗಿರುವ ಈ ಅಶ್ವಿನ್ ಟೆಸ್ಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಪ್ರಪಂಚದ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಸಾಮಾನ್ಯದ ಮಾತಲ್ಲ. ಇನ್ನು ಕೆಲವೇ ಕೆಲವು ಟೆಸ್ಟ್ ಮ್ಯಾಚ್ ಗಳಲ್ಲಿ ಆಡುವ ಅವಕಾಶ ಸಿಕ್ಕರೆ ಟೆಸ್ಟ್ ವಿಕೆಟ್ ಗಳಿಕೆಯ ದೃಷ್ಟಿಯಲ್ಲಿ ಪ್ರಪಂಚದ ಟಾಪ್ 7 ಸ್ಥಾನ ಪಡೆಯುವುದು ಗ್ಯಾರಂಟಿ. ಇನ್ನು 12 ಟೆಸ್ಟ್ ಗಳಲ್ಲಿ ಆಡಿದರೆ ಸಾಕು ಅಶ್ವಿನ್ ಒಟ್ಟು100 ಟೆಸ್ಟ್ ಆಡಿದಂತಾಗುತ್ತದೆ. ಉತ್ತಮ ಫಾರ್ಮ್ ನಲ್ಲಿರುವ ಅಶ್ವಿನ್ ಇನ್ನಿಂಗ್ಸ್ ಒಂದರಲ್ಲಿ 3 ವಿಕೆಟ್​ ತೆಗೆದರೂ ತನ್ನ ಖಾತೆಗೆ 72 ವಿಕೆಟ್ ಸೇರಿಸಿಕೊಳ್ಳುತ್ತಾರೆ. ಆ ಮೂಲಕ ಕರ್ಟ್ನಿ ವಾಲ್ಷ್ ರ 519 ವಿಕೆಟ್​ಗಳ ದಾಖಲೆ ಪುಡಿಯಾಗಿ 521 ವಿಕೆಟ್ ಗಳಿಸುವ ಅಶ್ವಿನ್ ಪ್ರಪಂಚದ ಅತಿ ಹೆಚ್ಚು ಟೆಸ್ಟ್ ವಿಕೆಟ್ ಗಳಿಸಿದವರ ಪೈಕಿ 7 ನೇ ಸ್ಥಾನಕ್ಕೇರುತ್ತಾರೆ.

ಅಶ್ವಿನ್ ಅವರು ಭಾರತದ ಪರ ನೂರು ಟೆಸ್ಟ್ ಆಡಿದ ಕೇವಲ 15 ಜನರ ಪೈಕಿಯೂ ಸ್ಥಾನ ಪಡೆಯುತ್ತಾರೆ. ಈಗಾಗಲೇ ಹನ್ನೆರಡು ಜನರಿರುವ ಈ ಕ್ಲಬ್ ಸೇರುವ ಅರ್ಹತೆ ಇರುವ ಇನ್ನೂ ಮೂವರೆಂದರೆ 88 ಟೆಸ್ಟ್ ಆಡಿರುವ ಅಶ್ವಿನ್, 98 ಟೆಸ್ಟ್ ಆಡಿರುವ ಚೇತೇಶ್ವರ ಪೂಜಾರ, 82 ಟೆಸ್ಟ್ ಆಡಿರುವ ಅಜಿಂಕ್ಯ ರಹಾನೆ. ಸದ್ಯಕ್ಕೆ ಆಡುತ್ತಿರುವವರಲ್ಲಿ ಈ ಮೂವರಿಗೆ ಹತ್ತಿರ ಇರುವ ಇನ್ನೊಬ್ಬ ಆಟಗಾರ ಅಂದರೆ 60 ಟೆಸ್ಟ್ ಆಡಿರುವ ಜಡೇಜಾ. ಅಂದರೆ 20-20 ಯುಗದಲ್ಲಿ ಜಡೇಜಾ ಸೇರಿದಂತೆ ಈ ದಾಖಲೆಯನ್ನು ಇನ್ನು ಯಾರೂ ಮುರಿಯಲು ಸಾಧ್ಯವಿಲ್ಲ. ಆದರೆ ಆಯ್ಕೆ ಸಮಿತಿ ಅಶ್ವಿನ್ ಎಂಬ ಈ ಅನುಭವಿ ಆಟಗಾರನಿಗೆ ಇನ್ನೂ 12 ಟೆಸ್ಟ್ ಆಡುವ ಅವಕಾಶ ನೀಡುವುದೇ? ಟ್ವೆಂಟಿ ಟ್ವೆಂಟಿ ಯುಗದಲ್ಲಿ ಟೀಮ್ ಇಂಡಿಯಾ ಅಷ್ಟು ಮ್ಯಾಚ್ ಆಡಲು ಇನ್ನೂ ಎಷ್ಟು ವರ್ಷ ಬೇಕೋ? ಅಲ್ಲಿಯವರೆಗೂ ಅಶ್ವಿನ್ ಗೆ ಎಷ್ಟು ವರ್ಷಗಳಾಗುತ್ತವೆ? ಅಲ್ಲದೆ ಅವರು ಫಿಟ್ ಇರುತ್ತಾರೆಯೇ ಅನ್ನುವುದೇ ಪ್ರಶ್ನೆ.

ಟೆಸ್ಟ್ ಆಡುತ್ತಿರುವ ಪ್ರಪಂಚದ ಆಟಗಾರರಲ್ಲಿ ಹಿರಿತನದ ದೃಷ್ಟಿಯಿಂದ 9 ನೇ ಸ್ಥಾನ ಅಶ್ವಿನ್ ಅವರದ್ದು. ಭಾರತ ತಂಡದಲ್ಲೇ ಅತ್ಯಂತ ಹಿರಿಯನಾದ ಈ ಆಟಗಾರನಿಗೆ ಈಗ 36 ವರ್ಷ ವಯಸ್ಸು. ಇನ್ನೈದು ವರ್ಷ ಏನಾದರೂ ಅಶ್ವಿನ್ ಟೆಸ್ಟ್ ಕ್ರಿಕೆಟ್ ಆಡಿದರೆ ಒಟ್ಟು 42 ಟೆಸ್ಟ್ ಗಳು ಆಡಲು ಸಿಗುತ್ತವೆ. ಈಗಿರುವ ಸರಾಸರಿಯಲ್ಲೇ ಆಡಿದರೆ ಇನ್ನೂ 200 ವಿಕೆಟ್ ಗಳಿಸಲು ಶಕ್ತ ಅಶ್ವಿನ್. ಹಾಗಾದಲ್ಲಿ ನಿವೃತ್ತಿ ಆಗುವ ವೇಳೆಗೆ ಪ್ರಪಂಚದ ಬೌಲಿಂಗ್ ವಿಭಾಗದಲ್ಲಿ ಮುತ್ತಯ್ಯ ಮುರಳೀಧರನ್ ಶೇನ್ ವಾರ್ನ್ ಮತ್ತು ಕುಂಬ್ಳೆಯಂಥ ದಿಗ್ಗಜರ ಸಾಲಿನಲ್ಲಿ ಅಶ್ವಿನ್ ವಿರಾಜಮಾನರಾಗಲಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಅಶ್ವಿನ್ ಇನ್ನೂ ಅನೇಕ ದಾಖಲೆಗಳನ್ನು ಮುರಿದು ಹೊಸಾ ದಾಖಲೆಗಳನ್ನು ಸೃಷ್ಟಿಸಲಿ, ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣಗಳಂಥಾ ಗೌರವವನ್ನು ಪಡೆಯಲಿ.

ಇದನ್ನೂ ಓದಿ ’ R Ashwin | ಟೀಮ್​ ಇಂಡಿಯಾದ ಸ್ಪಿನ್​ ಬೌಲರ್​​ ಆರ್​ ಅಶ್ವಿನ್​ ಅವರ ಟೆಸ್ಟ್​ ಬೌಲಿಂಗ್​ ಸಾಧನೆ ಈ ರೀತಿ ಇದೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

MS Dhoni: ಧೋನಿ ಅಭಿಮಾನಿಗಳಿಗೆ ನಿರಾಸೆ; ಇಂದಿನ ಪಂದ್ಯಕ್ಕೆ ಅನುಮಾನ

MS Dhoni: ಮೊಣಕಾಲು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಧೋನಿ ಇಂದು ನಡೆಯುವ ಲಕ್ನೋ ಸೇರಿ ಮುಂದಿನ ಕೆಲ ಪಂದ್ಯಗಳಿಗೂ ಅಲಭ್ಯರಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

VISTARANEWS.COM


on

IPL 2024
Koo

ಲಕ್ನೋ: ವಿದಾಯದ ಐಪಿಎಲ್(IPL 2024)​ ಟೂರ್ನಿ ಆಡುತ್ತಿರುವ ಚೆನ್ನೈ ಸೂಪರ್​ ಕಿಂಗ್ಸ್(CSK)​ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ಇಂದು ನಡೆಯುವ ಲಕ್ನೋ ಸೇರಿ ಮುಂದಿನ ಕೆಲ ಪಂದ್ಯಗಳಿಗೂ ಅಲಭ್ಯರಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಮೊಣಕಾಲು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಧೋನಿ ಕಳೆದ ವರ್ಷ ಮುಂಬೈಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಈ ಬಾರಿಯ ಐಪಿಎಲ್​ನ ಮೊದಲ ಪಂದ್ಯದಲ್ಲಿಯೇ ಧೋನಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬಂದಿತ್ತು. ಕಳೆದ ಮುಂಬೈ ಮತ್ತು ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್​ ನಡೆಸಿದ ವೇಳೆ ಕುಂಟುತಾ ನಡೆದಾಡಿದ ಫೋಟೊ ಮತ್ತು ವಿಡಿಯೊ ವೈರಲ್​ ಆಗಿತ್ತು. ಮೂಲಗಳ ಪ್ರಕಾರ ಧೋನಿ ಮತ್ತೆ ಗಾಯಗೊಂಡಿದ್ದು ಕೆಲ ಪಂದ್ಯಗಳಿಂದ ವಿಶ್ರಾಂತಿ ಬಯಸಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಧೋನಿ ಗಾಯದ ಮಧ್ಯೆಯೇ ಸಂಪೂರ್ಣವಾಗಿ ನೋವು ನಿವಾರಕ ಪ್ಲಾಸ್ಟರ್​ ಸುತ್ತಿ ಟೂರ್ನಿ ಆಡಿದ್ದರು.

ಎಂ.ಎಸ್.ಧೋನಿ(MS Dhoni), ಕ್ಯಾಪ್ಟನ್‌ ಕೂಲ್‌, ಮಾಹಿ, ತಾಲಾ… ಎಂದೆಲ್ಲ ಪ್ರೀತಿಯಿಂದ ಕರೆಸಿಕೊಳ್ಳುವ ಮಹೇಂದ್ರ ಸಿಂಗ್‌ ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. ಹೀಗಾಗಿ ನೆಚ್ಚಿನ ಆಟಗಾರನ ಬ್ಯಾಟಿಂಗ್​ ಕುಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಪ್ರತಿ ಪಂದ್ಯದ ವೇಳೆ ಬಹಳ ನಿರೀಕ್ಷೆಯಿಂದ ಕಾಯುತ್ತಿರುತ್ತಾರೆ.

ಇದನ್ನೂ ಓದಿ IPL 2024: ಡಿಆರ್​ಎಸ್​ ಚೀಟಿಂಗ್ ವೇಳೆ ಸಿಕ್ಕಿ ಬಿದ್ದ ಮುಂಬೈ ಇಂಡಿಯನ್ಸ್​; ವಿಡಿಯೊ ವೈರಲ್​

ಇಂದು ನಡೆಯುವ ಐಪಿಎಲ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ ಆಡಲಿದೆ. ಈ ಪಂದ್ಯ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಲಕ್ನೋ ಸೂಪರ್​ ಜೈಂಟ್ಸ್​ ಇದುವರೆಗೆ ಐಪಿಎಲ್​ನಲ್ಲಿ ಮೂರು ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ತಲಾ ಒಂದು ಪಂದ್ಯಗಳಲ್ಲಿ ಉಭಯ ತಮಡಗಳು ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ.​

ಸಂಭಾವ್ಯ ತಂಡ

ಚೆನ್ನೈ ಸೂಪರ್​ ಕಿಂಗ್ಸ್​: ಋತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೆರಿಲ್ ಮಿಚೆಲ್, ಸಮೀರ್ ರಿಜ್ವಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್​ ಕೀಪರ್​), ಶಾರ್ದೂಲ್ ಠಾಕೂರ್, ಮುಸ್ತಫಿಜುರ್ ರೆಹಮಾನ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ.

ಲಕ್ನೋ: ಕೈಲ್​ ಮೇಯರ್ಸ್, ಕೆಎಲ್ ರಾಹುಲ್ (ನಾಯಕ), ದೀಪಕ್​ ಹೂಡಾ, ಮ್ಯಾಟ್​ ಹೆನ್ರಿ, ನಿಕೋಲಸ್ ಪೂರನ್, ಆಯುಷ್ ಬಡೋನಿ, ಕೆ. ಗೌತಮ್​, ರವಿ ಬಿಷ್ಣೋಯ್, ಶಮರ್​ ಜೋಸೆಫ್​, ಯಶ್ ಠಾಕೂರ್, ಮಯಾಂಕ್​ ಯಾದವ್​.

Continue Reading

ಕ್ರೀಡೆ

IPL 2024: ಡಿಆರ್​ಎಸ್​ ಚೀಟಿಂಗ್ ವೇಳೆ ಸಿಕ್ಕಿ ಬಿದ್ದ ಮುಂಬೈ ಇಂಡಿಯನ್ಸ್​; ವಿಡಿಯೊ ವೈರಲ್​

IPL 2024: ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದ ಕಾರಣಕ್ಕೆ ಮುಂಬೈ ನಾಯಕ ಹಾರ್ದಿಕ್​ ಪಾಂಡ್ಯ(Hardik Pandya)​ ಅವರಿಗೆ ಬಿಸಿಸಿಐ 12 ಲಕ್ಷ ರೂ. ದಂಡ ವಿಧಿಸಿದೆ. “ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಐಪಿಎಲ್ ನೀತಿ ಸಂಹಿತೆಯ ಅಡಿಯಲ್ಲಿ ಇದು ಅವರ ತಂಡದ ಮೊದಲ ಅಪರಾಧವಾಗಿರುವುದರಿಂದ, ಪಾಂಡ್ಯ ಅವರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ” ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

VISTARANEWS.COM


on

IPL 2024
Koo

ಮುಂಬಯಿ: ಮುಂಬೈ ಇಂಡಿಯನ್ಸ್(Mumbai Indians)​ ವಿರುದ್ಧ ಈ ಬಾರಿಯ ಐಪಿಎಲ್​ನಲ್ಲಿ(IPL 2024) ಹಲವು ಆರೋಪಗಳು ಕೇಳಿ ಬರುತ್ತಲೇ ಇದೆ. ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಟಾಸ್​ ಚೀಟಿಂಗ್, ನೋಬಾಲ್​ ನೀಡದ​ ಆರೋಪ ಕೇಳಿಬಂದಿತ್ತು. ಇದೀಗ ಪಂಜಾಬ್​ ವಿರುದ್ಧ ಪಂದ್ಯದಲ್ಲಿ ಡಿಆರ್​ಎಸ್ ಚೀಟಿಂಗ್​ನ(‘DRS Cheating) ಆರೋಪ ಕೇಳಿ ಬಂದಿದೆ. ಅಲ್ಲದೆ ಈ ಘಟನೆಯ ದೃಶ್ಯ ​ ವೈರಲ್​ ಆಗಿದ್ದು ಫ್ರಾಂಚೈಸಿ ವಿರುದ್ಧ ಹಲವರು ಛೀಮಾರಿ ಹಾಕಿದ್ದಾರೆ.

ಪಂದ್ಯದ 15ನೇ ಓವರ್​ನಲ್ಲಿ ಈ ಘಟನೆ ನಡೆದಿದೆ. ಅರ್ಶ್​ದೀಪ್​ ಸಿಂಗ್​ ಎಸೆತ ಈ ಓವರ್​ನ 5ನೇ ಎಸೆತ ವೈಡ್​ ಲೈನ್​ನಲ್ಲಿ ಸಾಗಿ ಕೀಪರ್​ ಕೈ ಸೇರಿತು. ಸೂರ್ಯಕುಮಾರ್ ಯಾದವ್​ ಬ್ಯಾಟಿಂಗ್​ ನಡೆಸುತ್ತಿದ್ದರು. ಈ ವೇಳೆ ಡಗೌಟ್​ನಲ್ಲಿದ್ದ ಟಿಮ್​ ಡೇವಿಡ್​ ಮತ್ತು ಕೋಚ್​ ಮಾರ್ಕ್​ ಬೌಚರ್ ಡಿಆರ್​ಎಸ್​ ತೆಗೆದುಕೊಳ್ಳುವಂತೆ ಸನ್ನೆಯ ಮೂಲಕ ಸೂರ್ಯ ಅವರಿಗೆ ಮನವಿ ಮಾಡಿದ್ದಾರೆ. ಇದು ಪಂದ್ಯದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ​ಬೌಚರ್ ಮತ್ತು ಡೇವಿಡ್ ಡಿಆರ್​ಎಸ್​ ಸನ್ನೆ ಮಾಡುತ್ತಿರುವುದನ್ನು ಕಂಡ ಪಂಜಾಬ್​ ನಾಯಕ ಸ್ಯಾಮ್​ ಕರನ್​ ಓಡಿ ಬಂದು ಅಂಪೈರ್​ ಗಮನಕ್ಕೆ ತಂದಿದ್ದಾರೆ. ಈ ಎಲ್ಲ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿದೆ.

ಇದೇ ಪಂದ್ಯದಲ್ಲಿ ಪಂಜಾಬ್​ ಬ್ಯಾಟಿಂಗ್​ ನಡೆಸುತ್ತಿದ್ದ ವೇಳೆ ಹಾರ್ದಿಕ್​ ಪಾಂಡ್ಯ ಎಸೆದ 19ನೇ ಓವರ್​ನಲ್ಲಿ ಬ್ಯಾಟರ್​ನ ಲೆಗ್​ ಸೈಡ್​ನಿಂದ ಚೆಂಡು ಸಾಗಿದರೂ ಕೂಡ ಅಂಪೈರ್​ ಇದನ್ನು ವೈಡ್​ ನೀಡಲಿಲ್ಲ. ಈ ವಿಚಾರವಾಗಿಯೂ ಮುಂಬೈ ಮತ್ತು ಅಂಪೈರ್​ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿದೆ. ಮುಂಬೈ ಇಂಡಿಯನ್ಸ್​ ಬದಲು ಮುಂಬೈ ಅಂಪೈರ್ಸ್​ ಎಂದು ತಂಡಕ್ಕೆ ಹೆಸರಿಡುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ಒಟ್ಟಾರೆಯಾಗಿ ಮುಂಬೈ ತಂಡ ಈ ಬಾರಿ ಕೇವಲ ವಿವಾದದಿಂದಲೇ ಸುದ್ದಿಯಾಗುತ್ತಿದೆ.

ಇದನ್ನೂ ಓದಿ IPL 2024: ಸಿಕ್ಸರ್​ ಮೂಲಕ ದಾಖಲೆ ಬರೆದ ಹಿಟ್​ಮ್ಯಾನ್​ ರೋಹಿತ್​

ಈ ಪಂದ್ಯದಲ್ಲಿ (IPL 2024) ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದ ಕಾರಣಕ್ಕೆ ಮುಂಬೈ ನಾಯಕ ಹಾರ್ದಿಕ್​ ಪಾಂಡ್ಯ(Hardik Pandya)​ ಅವರಿಗೆ ಬಿಸಿಸಿಐ 12 ಲಕ್ಷ ರೂ. ದಂಡ ವಿಧಿಸಿದೆ. “ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಐಪಿಎಲ್ ನೀತಿ ಸಂಹಿತೆಯ ಅಡಿಯಲ್ಲಿ ಇದು ಅವರ ತಂಡದ ಮೊದಲ ಅಪರಾಧವಾಗಿರುವುದರಿಂದ, ಪಾಂಡ್ಯ ಅವರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ” ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಮಹಾರಾಜಾ ಯಾದವೀಂದ್ರ ಸಿಂಗ್​ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಪಂಜಾಬ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಮುಂಬಯಿ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 192 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಂಜಾಬ್​ 19.1 ಓವರ್​ಗಳಲ್ಲಿ 183 ರನ್​ಗೆ ಆಲ್​ಔಟ್​ ಆಗಿ ಕೇವಲ 9 ರನ್​ ಅಂತರದಿಂದ ಸೋಲೊಪ್ಪಿಕೊಂಡಿತು. ಗೆಲುವು ಸಾಧಿಸಿದ ಮುಂಬೈ ಅಂಕಪಟ್ಟಿಯಲ್ಲಿ(IPL 2024 Points Table) ಪ್ರಗತಿ ಸಾಧಿಸಿದೆ. ಈ ಪಂದ್ಯಕ್ಕೂ ಮುನ್ನ 9ನೇ ಸ್ಥಾನದಲ್ಲಿದ್ದ ಮುಂಬೈ ಈ ಗೆಲುವಿನೊಂದಿಗೆ 7ನೇ ಸ್ಥಾನಕ್ಕೇರಿದೆ. ಸೋಲು ಕಂಡ ಪಂಜಾಬ್​ 9ನೇ ಸ್ಥಾನಕ್ಕೆ ಕುಸಿದಿದೆ.

Continue Reading

ಕ್ರಿಕೆಟ್

IPL 2024: ಸಿಕ್ಸರ್​ ಮೂಲಕ ದಾಖಲೆ ಬರೆದ ಹಿಟ್​ಮ್ಯಾನ್​ ರೋಹಿತ್​

IPL 2024: ಈ ಬಾರಿಯ ಐಪಿಎಲ್​ನಲ್ಲಿ ತಂಡವೊಂದು ಪವರ್​ ಪ್ಲೇಯಲ್ಲಿ ಬಾರಿಸಿದ ಸಿಕ್ಸರ್​ಗಳಿಗಿಂತ ಹೆಚ್ಚು ರೋಹಿತ್​ ಒಬ್ಬರೆ ಹೆಚ್ಚಿನ ಸಿಕ್ಸರ್​ ಬಾರಿಸಿದ್ದಾರೆ. ರೋಹಿತ್​ ಈ ಬಾರಿ ಪವರ್​ ಪ್ಲೇಯಲ್ಲಿ 13 ಸಿಕ್ಸರ್​ ಬಾರಿಸಿದ್ದಾರೆ. ಲಕ್ನೋ ತಂಡ 12 ಸಿಕ್ಸರ್​ ಬಾರಿಸಿದೆ.

VISTARANEWS.COM


on

IPL 2024
Koo

ಮುಂಬಯಿ: ಪಂಜಾಬ್(Punjab Kings)​ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ 250ನೇ ಐಪಿಎಲ್(IPL 2024)​ ಪಂದ್ಯಗಳನ್ನು ಪೂರ್ತಿಗೊಳಿಸಿದ ಹಿಟ್​ ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮ(Rohit Sharma) ಅವರು ಇದೇ ಪಂದ್ಯದಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಮುಂಬೈ ಇಂಡಿಯನ್ಸ್(Mumbai Indians)​ ತಂಡದ ಪರ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.

ರೋಹಿತ್​ ಶರ್ಮ ಪಂಜಾಬ್​ ವಿರುದ್ಧ ಮೂರು ಸಿಕ್ಸರ್​ ಬಾರಿಸಿಸುವ ಮೂಲಕ ಮುಂಬೈ ತಂಡದ ಪರ ಅತ್ಯಧಿಕ ಸಿಕ್ಸರ್​ ಬಾರಿಸಿದ್ದ ಮಾಜಿ ಆಟಗಾರ ಕೈರಾನ್​ ಪೊಲಾರ್ಡ್ ಅವರ ದಾಖಲೆಯನ್ನು ಮುರಿದರು. ಪೊಲಾರ್ಡ್​ ಮುಂಬೈ ಪರ 223 ಸಿಕ್ಸರ್​ ಬಾರಿಸಿ ಇದುವರೆಗೆ ಅಗ್ರಸ್ಥಾನದಲ್ಲಿದ್ದರು. ಈ ದಾಖಲೆಯನ್ನು ರೋಹಿತ್​ ಮುರಿದಿದ್ದಾರೆ. ಸದ್ಯ ರೋಹಿತ್​ ಮುಂಬೈ ಪರ 224* ಸಿಕ್ಸರ್​ ಬಾರಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಹಾರ್ದಿಕ್​ ಪಾಂಡ್ಯ ಕಾಣಿಸಿಕೊಂಡಿದ್ದಾರೆ. ಪಾಂಡ್ಯ 104* ಸಿಕ್ಸರ್​ ಸಿಡಿಸಿದ್ದಾರೆ. ಇಶಾನ್​ ಕಿಶನ್​(104*) ಮತ್ತು ಸೂರ್ಯಕುಮಾರ್​(97*) ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.

ಮುಂಬೈ ಪರ ಅತ್ಯಧಿಕ ಸಿಕ್ಸರ್​ ಬಾರಿಸಿದ ಬ್ಯಾಟರ್​ಗಳು


ರೋಹಿತ್​ ಶರ್ಮ-224*

ಕೈರಾನ್​ ಪೊಲಾರ್ಡ್​-223

ಹಾರ್ದಿಕ್​ ಪಾಂಡ್ಯ-104*

ಇಶಾನ್​ ಕಿಶನ್​-103*

ಸೂರ್ಯಕುಮಾರ್​ ಯಾದವ್​-97*

ಮುಂಬೈ ಪರ ಮಾತ್ರವಲ್ಲದೆ ಈ ಬಾರಿಯ ಐಪಿಎಲ್​ನಲ್ಲಿ ತಂಡವೊಂದು ಪವರ್​ ಪ್ಲೇಯಲ್ಲಿ ಬಾರಿಸಿದ ಸಿಕ್ಸರ್​ಗಳಿಗಿಂತ ಹೆಚ್ಚು ರೋಹಿತ್​ ಒಬ್ಬರೆ ಹೆಚ್ಚಿನ ಸಿಕ್ಸರ್​ ಬಾರಿಸಿದ್ದಾರೆ. ರೋಹಿತ್​ ಈ ಬಾರಿ ಪವರ್​ ಪ್ಲೇಯಲ್ಲಿ 13 ಸಿಕ್ಸರ್​ ಬಾರಿಸಿದ್ದಾರೆ. ಲಕ್ನೋ ತಂಡ 12 ಸಿಕ್ಸರ್​ ಬಾರಿಸಿದೆ.

ಇದನ್ನೂ ಓದಿ IPL 2024: ಮುಂಬೈ ಗೆದ್ದರೂ ಪಾಂಡ್ಯಗಿಲ್ಲ ಖುಷಿ; ನಿಧಾನಗತಿಯ ಓವರ್​ಗೆ ಬಿತ್ತು 12 ಲಕ್ಷ ದಂಡ


ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಆಕ್ಷೇಪ


ಐಪಿಎಲ್​ನಲ್ಲಿ(IPL 2024) ಕಳೆದ ವರ್ಷ ಜಾರಿಗೆ ತಂದ ವಿನೂತನ ಇಂಪ್ಯಾಕ್ಟ್ ಪ್ಲೇಯರ್(Impact Player) ನಿಯಮದ ಬಗ್ಗೆ ಟೀಮ್​ ಇಂಡಿಯಾದ ನಾಯಕ, ಮುಂಬೈ ಇಂಡಿಯನ್ಸ್​ನ ಆಟಗಾರ ರೋಹಿತ್​ ಶರ್ಮ(Rohit Sharma) ಶರ್ಮ ​ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ನಿಯಮದಿಂದ ಭಾರತೀಯ ಕ್ರಿಕೆಟ್‌ಗೆ ದೊಡ್ಡ ನಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.

ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ ರೋಹಿತ್​, ‘ಕ್ರಿಕೆಟ್ 11 ಜನ ಆಡುವ ಆಟ, 12 ಜನರಿಂದಲ್ಲ, ಇಂಪ್ಯಾಕ್ಟ್ ಆಟಗಾರ ನಿಯಮದಿಂದಾಗಿ ನೈಜ ಕ್ರಿಕೆಟ್​ಗೆ ಹಾನಿಯಾಗಿದೆ. ಇದು ಮನರಂಜನೆ ಒದಗಿಸಬಹುದೇ ಹೊರತು ಕ್ರಿಕೆಟ್​ ಬೆಳವಣಿಗೆಗೆ ಅಪಾಯಕಾರಿ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇಂಪ್ಯಾಕ್ಟ್ ನಿಯಮದಿಂದ ಓರ್ವ ಆಟಗಾರನಿಗೆ ತನ್ನ ಸಾಮರ್ಥ್ಯವನ್ನು ತೋರ್ಪಡಿಸುವ ಅವಕಾಶ ಸಿಗುತಿಲ್ಲ. ಉದಾಹರಣೆಗೆ ಶಿವಂ ದುಬೆ, ವಾಷಿಂಗ್ಟನ್ ಸುಂದರ್ ಸೇರಿದಂತೆ ಅನೇಕ ಆಲ್ರೌಂಡರ್‌ಗಳಿಗೆ ಬ್ಯಾಟಿಂಗ್​ ಸಿಕ್ಕರೆ ಬೌಲಿಂಗ್​ ಸಿಗುತ್ತಿಲ್ಲ. ಬೌಲಿಂಗ್​ ಸಿಕ್ಕರೆ ಬ್ಯಾಟಿಂಗ್​ ಸಿಗುತ್ತಿಲ್ಲ ಎಂದು ರೋಹಿತ್ ಬೇಸರ ವ್ಯಕ್ತಪಡಿಸಿದ್ದಾರೆ.

Continue Reading

ಕ್ರೀಡೆ

IPL 2024: ಮುಂಬೈ ಗೆದ್ದರೂ ಪಾಂಡ್ಯಗಿಲ್ಲ ಖುಷಿ; ನಿಧಾನಗತಿಯ ಓವರ್​ಗೆ ಬಿತ್ತು 12 ಲಕ್ಷ ದಂಡ

IPL 2024: ಪಾಂಡ್ಯ ಇದುವರೆಗೆ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಘೋರ ವೈಫಲ್ಯ ಕಂಡಿದ್ದಾರೆ. ಇದೇ ಪ್ರದರ್ಶನ ಮುಂದಿನ ಪಂದ್ಯದಲ್ಲಿಯೂ ಕಂಡುಬಂದರೆ ಅವರಿಗೆ ಟಿ20 ವಿಶ್ವಕಪ್​ ತಂಡದಲ್ಲಿ ಅವಕಾಶ ಸಿಗುವುದು ಅನುಮಾನ ಎನ್ನಲಡ್ಡಿಯಿಲ್ಲ.

VISTARANEWS.COM


on

IPL 2024
Koo

ಮುಂಬಯಿ: ಗುರುವಾರ ರಾತ್ರಿ ನಡೆದ ಐಪಿಎಲ್​ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​(PBKS vs MI) ವಿರುದ್ಧ ಮುಂಬೈ ಇಂಡಿಯನ್ಸ್​ 9 ರನ್​ಗಳ ರೋಚಕ ಗೆಲುವು ಸಾಧಿಸಿತು. ಆದರೆ, ಈ ಪಂದ್ಯದಲ್ಲಿ (IPL 2024) ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದ ಕಾರಣಕ್ಕೆ ಮುಂಬೈ ನಾಯಕ ಹಾರ್ದಿಕ್​ ಪಾಂಡ್ಯ(Hardik Pandya)​ ಅವರಿಗೆ ಬಿಸಿಸಿಐ 12 ಲಕ್ಷ ರೂ. ದಂಡ ವಿಧಿಸಿದೆ.

“ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಐಪಿಎಲ್ ನೀತಿ ಸಂಹಿತೆಯ ಅಡಿಯಲ್ಲಿ ಇದು ಅವರ ತಂಡದ ಮೊದಲ ಅಪರಾಧವಾಗಿರುವುದರಿಂದ, ಪಾಂಡ್ಯ ಅವರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ” ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಐಪಿಎಲ್​ನ ಕೋಡ್​ ಆಫ್​ ಕಂಡಕ್ಟ್​ನ ಮೊದಲ​ ಅಪರಾಧವಾದ ಕಾರಣ ಪಾಂಡ್ಯಗೆ 12 ಲಕ್ಷ ದಂಡ ವಿಧಿಸಲಾಗಿದೆ. ಇದೇ ತಪ್ಪು ಮತ್ತೆ ಮುಂದುವರಿದರೆ 24 ಲಕ್ಷ ದಂಡ ಬರೆ ಬೀಳಲಿದೆ. ಹೀಗಾಗಿ ಪಾಂಡ್ಯ ಮುಂದಿನ ಪಂದ್ಯದಲ್ಲಿ ಎಚ್ಚರಿಕೆಯಿಂದ ಆಡಬೇಲಿದೆ. ಬೆನ್ನು ನೋವಿನಿಂದ ಚೇತರಿಕೆಂಡು ಐಪಿಎಲ್​ ಆಡಲಿಳಿದ ಪಾಂಡ್ಯ ಇದುವರೆಗೆ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಘೋರ ವೈಫಲ್ಯ ಕಂಡಿದ್ದಾರೆ. ಇದೇ ಪ್ರದರ್ಶನ ಮುಂದಿನ ಪಂದ್ಯದಲ್ಲಿಯೂ ಕಂಡುಬಂದರೆ ಅವರಿಗೆ ಟಿ20 ವಿಶ್ವಕಪ್​ ತಂಡದಲ್ಲಿ ಅವಕಾಶ ಸಿಗುವುದು ಅನುಮಾನ ಎನ್ನಲಡ್ಡಿಯಿಲ್ಲ.

ಇದನ್ನೂ ಓದಿ IPL 2024: ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ರೋಹಿತ್​ ಶರ್ಮ

​ಸ್ಲೋ ಓವರ್​ ರೇಟ್​ ನಿಯಮದ ಪ್ರಕಾರ ಮೊದಲ ತಪ್ಪಿಗೆ ನಾಯಕನನ್ನು ದೋಷಿಯನ್ನಾಗಿ ಮಾಡಲಾಗುತ್ತದೆ. ಮೊದಲ ಬಾರಿಯ ತಪ್ಪಿಗೆ 12 ಲಕ್ಷ ರೂ. ದಂಡ ಹಾಕಲಾಗುತ್ತದೆ. ಇದು ಪುನರಾವರ್ತನೆಯಾದಲ್ಲಿ 24 ಲಕ್ಷ ರೂ. ದಂಡ ನಿಗದಿ ಮಾಡಲಾಗಿದೆ. ಅಲ್ಲದೆ ತಂಡದ ಇತರೆ ಆಟಗಾರರು ಪಂದ್ಯದ ಶುಲ್ಕದ ಶೇ.25 ರಷ್ಟು ಮೊತ್ತವನ್ನು ದಂಡವಾಗಿ ನೀಡಬೇಕು. ಒಂದೊಮ್ಮೆ ಮೂರನೇ ಬಾರಿ ಮತ್ತೆ ಇದೇ ತಪ್ಪು ಮರುಕಳಿಸಿದರೆ ಆಗ ನಾಯಕ ಒಂದು ಪಂದ್ಯದ ನಿಷೇಧಕ್ಕೆ ಗುರಿಯಾಗಲಿದ್ದಾರೆ.

ಪಂದ್ಯ ಗೆದ್ದ ಮುಂಬಯಿ


ಮಹಾರಾಜಾ ಯಾದವೀಂದ್ರ ಸಿಂಗ್​ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಪಂಜಾಬ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಮುಂಬಯಿ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 192 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಂಜಾಬ್​ 19.1 ಓವರ್​ಗಳಲ್ಲಿ 183 ರನ್​ಗೆ ಆಲ್​ಔಟ್​ ಆಗಿ ಕೇವಲ 9 ರನ್​ ಅಂತರದಿಂದ ಸೋಲೊಪ್ಪಿಕೊಂಡಿತು. ಗೆಲುವು ಸಾಧಿಸಿದ ಮುಂಬೈ ಅಂಕಪಟ್ಟಿಯಲ್ಲಿ(IPL 2024 Points Table) ಪ್ರಗತಿ ಸಾಧಿಸಿದೆ. ಈ ಪಂದ್ಯಕ್ಕೂ ಮುನ್ನ 9ನೇ ಸ್ಥಾನದಲ್ಲಿದ್ದ ಮುಂಬೈ ಈ ಗೆಲುವಿನೊಂದಿಗೆ 7ನೇ ಸ್ಥಾನಕ್ಕೇರಿದೆ. ಸೋಲು ಕಂಡ ಪಂಜಾಬ್​ 9ನೇ ಸ್ಥಾನಕ್ಕೆ ಕುಸಿದಿದೆ.

Continue Reading
Advertisement
Rain in Karnataka
ಮಳೆ14 mins ago

Weather Report: ಬೆಂಗಳೂರಿನ ಜನ ಮಳೆಗಾಗಿ ಮೇವರೆಗೆ ಕಾಯಬೇಕು!

Tumkur Lok Sabha constituency BJP candidate Somanna election campaign in various places of Koratagare
ತುಮಕೂರು20 mins ago

Lok Sabha Election 2024: ಕೇಂದ್ರಿಯ ವಿದ್ಯಾಲಯ ಸ್ಥಾಪನೆಗೆ ನನ್ನನ್ನು ಬೆಂಬಲಿಸಿ: ವಿ. ಸೋಮಣ್ಣ

Lok Sabha Election 2024
Lok Sabha Election 202422 mins ago

Lok Sabha Election 2024: ಹಕ್ಕು ಚಲಾಯಿಸಿ ಮಾದರಿಯಾದ ವಿಶ್ವದ ಅತ್ಯಂತ ಕುಬ್ಜ ಮಹಿಳೆ ಜ್ಯೋತಿ ಆಮ್ಗೆ

Yuva Movie streaming ott yuva rajkumar
ಸ್ಯಾಂಡಲ್ ವುಡ್23 mins ago

Yuva Movie: ಒಟಿಟಿಗೆ ಬಂದಾಯ್ತು ʻಯುವʼ: ಸಿನಿಮಾ ನೋಡಬಹುದು, ಆದರೆ….

IPL 2024
ಕ್ರೀಡೆ39 mins ago

MS Dhoni: ಧೋನಿ ಅಭಿಮಾನಿಗಳಿಗೆ ನಿರಾಸೆ; ಇಂದಿನ ಪಂದ್ಯಕ್ಕೆ ಅನುಮಾನ

evm vvpat verification lok sbha election 2024
Lok Sabha Election 202445 mins ago

ವಿಸ್ತಾರ explainer: VVPAT Verification: ಇವಿಎಂನಲ್ಲಿ ನಿಮ್ಮ ಮತ ದಾಖಲಾಗುವುದು ಹೇಗೆ? ವಿವಿಪ್ಯಾಟ್‌ ಕೆಲಸ ಏನು? ಇಲ್ಲಿದೆ ಸಮಗ್ರ ವಿವರ

Neha Murder case JDS slams hands for defending love jihad to protect accused
ಕರ್ನಾಟಕ46 mins ago

Neha Murder Case: ಲವ್ ಜಿಹಾದ್ ಸಮರ್ಥಿಸಿಕೊಂಡಿದ್ದ ಕೈಗಳಿಂದಲೇ ಆರೋಪಿ ರಕ್ಷಣೆಗೆ ಹೊಂಚು: ಜೆಡಿಎಸ್‌ ಕಿಡಿ

Pro Pak Slogan
ಕರ್ನಾಟಕ48 mins ago

Pro Pak Slogan: ಮೋದಿ ಹಾಡು ಬರೆದಿದ್ದಕ್ಕೆ ಯುವಕನಿಗೆ ಥಳಿತ; ಪಾಕ್‌ ಪರ ಘೋಷಣೆ ಕೂಗಲು ಒತ್ತಾಯ

lok sabha Election
ದೇಶ49 mins ago

Lok Sabha Election : ಮಣಿಪುರದ ಮತಗಟ್ಟೆಯಲ್ಲಿ ಗುಂಡಿನ ಚಕಮಕಿ; ಇಲ್ಲಿದೆ ವಿಡಿಯೊ

Neha Murder Case
ಹುಬ್ಬಳ್ಳಿ1 hour ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case
ಹುಬ್ಬಳ್ಳಿ1 hour ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ12 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ2 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ3 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ5 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ6 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 week ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

ಟ್ರೆಂಡಿಂಗ್‌