Asia Cup 2023 : ಪಾಕ್​​ನಲ್ಲೇ ಏಷ್ಯಾ ಕಪ್​; ಭಾರತ, ಪಾಕಿಸ್ತಾನ ಪಂದ್ಯ ತಟಸ್ಥ ತಾಣದಲ್ಲಿ - Vistara News

ಕ್ರಿಕೆಟ್

Asia Cup 2023 : ಪಾಕ್​​ನಲ್ಲೇ ಏಷ್ಯಾ ಕಪ್​; ಭಾರತ, ಪಾಕಿಸ್ತಾನ ಪಂದ್ಯ ತಟಸ್ಥ ತಾಣದಲ್ಲಿ

ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಗಳು ಶ್ರೀಲಂಕಾ ಅಥವಾ ಯುಎಇನಲ್ಲಿ ನಡೆಯಲಿದೆ ಎನ್ನಲಾಗಿದೆ.

VISTARANEWS.COM


on

Asia Cup in Pakistan; India vs Pakistan match at a neutral venue
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ : ಮುಂಬರುವ ಏಷ್ಯಾ ಕಪ್ (Asia Cup 2023)​ ಕ್ರಿಕೆಟ್​ ಟೂರ್ನಿ ಎಲ್ಲಿ ನಡೆಯಬೇಕು ಎಂಬ ವಿವಾದಕ್ಕೆ ಕೊನೆ ಹಾಡಲು ಏಷ್ಯಾ ಕ್ರಿಕೆಟ್​ ಕೌನ್ಸಿಲ್​ ಮುಂದಾಗಿದೆ. ಆತಿಥ್ಯ ಪಡೆದಿರುವ ಪಾಕಿಸ್ತಾನದಲ್ಲೇ ಟೂರ್ನಿ ನಡೆಸಲು ನಿರ್ಧರಿಸಿದೆ. ಆದರೆ, ಭಾರತದ ಪಂದ್ಯಗಳು ತಟಸ್ಥ ತಾಣಗಳಲ್ಲಿ ನಡೆಯಲಿವೆ ಎಂಬುದಾಗಿ ವರದಿಯಾಗಿದೆ. ಇದರಿಂದಾಗಿ ಏಷ್ಯಾ ಕಪ್​ನಲ್ಲಿ ಪಾಲ್ಗೊಳ್ಳುವುದಕ್ಕೆ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣ ಮಾಡುವ ಅಗತ್ಯ ಇರುವುದಿಲ್ಲ. ಅದೇ ರೀತಿ ನಮ್ಮ ನೆಲದಲ್ಲಿಯೇ ಟೂರ್ನಿ ನಡೆಯಬೇಕು ಎಂಬ ಪಾಕಿಸ್ತಾನದ ವಾದಕ್ಕೂ ಮನ್ನಣೆ ಸಿಕ್ಕಂತಾಗುತ್ತದೆ.

ಆರು ದೇಶಗಳನ್ನು ಒಳಗೊಂಡಿರುವ ಏಷ್ಯಾ ಕಪ್​ ಸೆಪ್ಟೆಂಬರ್​ ಆರಂಭದಲ್ಲಿ ನಡೆಯಲಿದೆ. 13 ದಿನ ನಡೆಯುವ 13 ಪಂದ್ಯಗಳಿಗೆ ಪಾಕಿಸ್ತಾನ ತಂಡ ಆತಿಥ್ಯ ವಹಿಸಲಿದೆ. ಈ ಬಾರಿ ಏಕ ದಿನ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಮೂರು ತಂಡಗಳ ಎರಡು ಗುಂಪುಗಳ ನಡುವೆ ಪಂದ್ಯ ನಡೆಯಲಿದೆ. ಭಾರತ ಹಾಗೂ ಪಾಕಿಸ್ತಾನ ಒಂದೇ ಗುಂಪಿನಲ್ಲಿ ಇರಲಿದ್ದು ಎರಡು ಬಾರಿ ಪರಸ್ಪರ ಮುಖಾಮುಖಿಯಾಗುವ ಸಾಧ್ಯತೆಗಳಿವೆ. ಒಂದು ವೇಳೆ ಎರಡೂ ತಂಡಗಳು ಫೈನಲ್​ಗೇರಿದರೆ ಮೂರನೇ ಬಾರಿ ಪರಸ್ಪರ ಎದುರಾಗುವ ಸಾಧ್ಯತೆಗಳಿವೆ.

ತಟಸ್ಥ ತಾಣ ಯಾವುದೆಂಬುದು ಇನ್ನೂ ಗೊತ್ತಾಗಿಲ್ಲ. ಶ್ರೀಲಂಕಾ ಅಥವಾ ಯುಎಇನಲ್ಲಿ ಪಂದ್ಯಗಳು ನಡೆಯಬಹುದು ಎಂದು ಹೇಳಲಾಗಿದೆ.

ಇಎಸ್​ಪಿಎನ್​ ಕ್ರಿಕ್​​ ಇನ್ಫೋ ಪ್ರಕಾರ, ವೇಳಾಪಟ್ಟಿ ಹಾಗೂ ತಾಣಗಳನ್ನು ನಿಗದಿಪಡಿಸಲು ತಂಡವೊಂದನ್ನು ರಚಿಸಲಾಗಿದೆ. ಯುಎಇ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಹಣಾಹಣಿಗೆ ಪ್ರಶಸ್ತ ತಾಣವಾಗಿದ್ದರೂ ಆ ವೇಳೆ ಅಲ್ಲಿ 40 ಡಿಗ್ರಿ ಉಷ್ಣಾಂಶವಿರುತ್ತದೆ. ಒಮನ್​ ಮತ್ತು ಮಸ್ಕತ್​ನಲ್ಲಿಯೂ ಅದೇ ಮಾದರಿಯ ತಾಪಮಾನವಿರುತ್ತದೆ. ಆದರೆ, ಇಂಗ್ಲೆಂಡ್​ನಲ್ಲಿ ಪೂರಕ ವಾತಾವರಣ ಇರುತ್ತದೆ.

ಕೊನೆಗೂ ಜಗಳ ಅಂತ್ಯ

ಏಷ್ಯಾ ಕಪ್​ನಲ್ಲಿ ಪಾಲ್ಗೊಳ್ಳಲು ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವುದಿ್ಲ್ಲ ಎಂಬುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಕೆಲವು ತಿಂಗಳ ಹಿಂದೆ ಹೇಳಿಕೆ ಕೊಟ್ಟಿದ್ದರು. ಇದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಕೆರಳಿಸಿತ್ತು. ಹಾಗಾದರೆ ನಾವು ಕೂಡ ಭಾರತದ ಆತಿಥ್ಯದಲ್ಲಿ ನಡೆಯುವ ವಿಶ್ವ ಕಪ್​ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿತ್ತು. ಹೀಗಾಗಿ ಪದೇ ಪದೇ ಎರಡೂ ದೇಶಗಳ ಕ್ರಿಕೆಟ್​ ಮಂಡಳಿಯಿಂದ ಹೇಳಿಕೆಗಳು ಬರುತ್ತಿದ್ದವು. ಭಾರತ ತಂಡದ ಆಟಗಾರರು ಪಾಕಿಸ್ತಾನಕ್ಕೆ ಹೋಗಲು ಸರಕಾರದ ಅನುಮತಿ ಸಿಗುವುದಿಲ್ಲ ಎಂದು ಕಾರಣ ನೀಡಲಾಗಿತ್ತು. ಪಾಕಿಸ್ತಾನದಲ್ಲಿ ನಿರಂತರವಾಗಿ ಭಯೋತ್ಪಾದನಾ ಚಟುವಟಿಕೆಗಳು ನಡೆಯುವ ಕಾರಣ ನಮ್ಮ ಸ್ಟಾರ್​ ಆಟಗಾರರು ಆ ನೆಲದಲ್ಲಿ ಸುರಕ್ಷಿತವಲ್ಲ ಎಂಬುದೇ ಸರಕಾರದ ಅಭಿಪ್ರಾಯವಾಗಿದೆ

ಭಾರತ ತಂಡ ಪಾಕಿಸ್ತಾನಕ್ಕೆ ಹೋಗದಿರುವ ಹಿನ್ನೆಲೆಯಲ್ಲಿ ಟೂರ್ನಿಯನ್ನು ತಟಸ್ಥ ತಾಣದಲ್ಲಿ ನಡೆಸುವುದು ಏಷ್ಯಾ ಕ್ರಿಕೆಟ್​ ಕೌನ್ಸಿಲ್​ ಉದ್ದೇಶವಾಗಿತ್ತು. ಆದರೆ, ನಮ್ಮ ಆತಿಥ್ಯದಲ್ಲಿ ನಡೆಯುವುದಾದರೆ ನಮ್ಮಲ್ಲೇ ನಡೆಯಲಿ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಟ್ಟು ಹಿಡಿದು ಕುಳಿತಿದೆ. ಹೀಗಾಗಿ ಏಷ್ಯಾ ಕ್ರಿಕೆಟ್ ಕೌನ್ಸಿಲ್​ ಅದಕ್ಕೊಂದು ಪರಿಹಾರ ಕಂಡುಹುಡುಕಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IPL 2024 : ಇಂಪ್ಯಾಕ್ಟ್​ ಪ್ಲೇಯರ್ ನಿಯಮಕ್ಕೆ ಆಕ್ಷೇಪ ಎತ್ತಿದ ರಿಕಿ ಪಾಂಟಿಂಗ್​

IPL 2024: ಸ್ಪೆಷಲಿಸ್ಟ್ ಬ್ಯಾಟರ್​ ಅನ್ನು 8 ನೇ ಕ್ರಮಾಂಕದವರೆಗೆ ಆಡಿಸಬಹುದು. ಆದರೆ ತರಬೇತುದಾರ ಮತ್ತು ಆಟಗಾರರಿಗೆ ಇಂಪ್ಯಾಕ್ಟ್​​ ಪ್ಲೇಯರ್​ ಬಹುಶಃ ಸೂಕ್ತವಲ್ಲ ಎಂದು ನಾನು ಭಾವಿಸುತ್ತೇನೆ. ಈ ವಿಧಾನವನ್ನು ಜನರನ್ನು ರಂಜಿಸಲು ಮಾಡಲಾಗುತ್ತಿದೆ ನಿಮಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ”ಎಂದು ಪಾಂಟಿಂಗ್ ವಿವರಿಸಿದರು.

VISTARANEWS.COM


on

IPL 2024
Koo

ನವದೆಹಲಿ: ಐಪಿಎಲ್​ 2024ರಲ್ಲಿ (IPL 2024) ಜಾರಿಯಾಗಿರುವ ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಆಲ್ರೌಂಡರ್​ಗಳ ಬೆಳವಣಿಗೆಗೆ ಅಡ್ಡಿಯಾಗಬಹುದು ಎಂದು ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಶುಕ್ರವಾರ ಹೇಳಿದ್ದಾರೆ. ಅಲ್ಲದೆ ಇದರ ಪರಿಣಾಮ ಅಭಿಮಾನಿಗಳೇ ಅರಿತುಕೊಳ್ಳಬಹುದು ಎಂದು ಹೇಳಿದ್ದಾರೆ.

ಪಾಂಟಿಂಗ್ ಆರಂಭದಿಂದಲೂ ಇಂಪ್ಯಾಕ್ಟ್ ಪ್ಲೇಯರ್​ ವ್ಯವಸ್ಥೆಯ ಪ್ರತಿಪಾದಕರಾಗಿರಲಿಲ್ಲ. ಇತ್ತೀಚಿನ ಯೂಟ್ಯೂಬ್ ಪಾಡ್​ಕಾಸ್ಟ್​​ನಲ್ಲಿ ರೋಹಿತ್ ಶರ್ಮಾ ಅವರು “ನಿಯಮದ ಅಭಿಮಾನಿಯಲ್ಲ” ಎಂದು ಹೇಳಿದ್ದರು. ಅಲ್ಲಿ.ದ ನಂತರ ಈ ಚರ್ಚೆಯು ವೇಗ ಪಡೆದುಕೊಂಡಿದೆ. ಏಕೆಂದರೆ ಇದು ಭಾರತೀಯ ಆಲ್​ರೌಂಡರ್​ಗಳ ಅಭಿವೃದ್ಧಿಗೆ ಧಕ್ಕೆ ತರುತ್ತದೆ ಎಂದು ಪಾಟಿಂಗ್ ಹೇಳಿದ್ದಾರೆ. . “ನೋಡಿ, ರೋಹಿತ್ ಶರ್ಮಾ ಅವರಿಂದ ಕೆಲವು ನಿಜವಾಗಿಯೂ ಆಸಕ್ತಿದಾಯಕ ನೀಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಈ ಇಂಪ್ಯಾಕ್ಟ್ ಪ್ಲೇಯರ್ ಆಲ್ರೌಂಡರ್​ಗಳನ್ನು ಆಟದಿಂದ ಸ್ವಲ್ಪ ಹೊರಗಿಡುತ್ತಿದೆ” ಎಂದು ಪಾಂಟಿಂಗ್ ಹೇಳಿದ್ದಾರೆ.

ಸ್ಪೆಷಲಿಸ್ಟ್ ಬ್ಯಾಟರ್​ ಅನ್ನು 8 ನೇ ಕ್ರಮಾಂಕದವರೆಗೆ ಆಡಿಸಬಹುದು. ಆದರೆ ತರಬೇತುದಾರ ಮತ್ತು ಆಟಗಾರರಿಗೆ ಇಂಪ್ಯಾಕ್ಟ್​​ ಪ್ಲೇಯರ್​ ಬಹುಶಃ ಸೂಕ್ತವಲ್ಲ ಎಂದು ನಾನು ಭಾವಿಸುತ್ತೇನೆ. ಈ ವಿಧಾನವನ್ನು ಜನರನ್ನು ರಂಜಿಸಲು ಮಾಡಲಾಗುತ್ತಿದೆ ನಿಮಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ”ಎಂದು ಪಾಂಟಿಂಗ್ ವಿವರಿಸಿದರು.

ಟಿ20 ಆಟವು ಮನರಂಜನಾ ಪ್ಯಾಕೇಜ್ ಆಗಿದೆ. ಪ್ರಭಾವಶಾಲಿ ಆಟಗಾರನ ಬಗ್ಗೆ ಪ್ರೇಕ್ಷಕರು ಏನು ಯೋಚಿಸುತ್ತಾರೆ ಎಂದು ಕೇಳುವುದು ಉತ್ತಮ. ಏಕೆಂದರೆ ತಂಡಗಳು ಬಹಳಷ್ಟು ಪಂದ್ಯಗಳಲ್ಲಿ 220 ರಿಂದ 250 ರವರೆಗೆ ಗಳಿಸುತ್ತಿವೆ ಎಂಬ ಅಂಶವನ್ನು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಆದರೆ ಆಟಗಾರರ ಬೆಳವಣಿಗೆಗೆ ಅಡ್ಡಿಯಾಗಲಿದೆ ಎಂದು ಹೇಳಿದರು. ಪ್ರೇಕ್ಷಕರು ಅದನ್ನು ಹೆಚ್ಚು ಇಷ್ಟಪಡದಿದ್ದರೆ. ಹಳೆಯ ಮಾದರಿಗೆ ಹಿಂದಿರುಗಬೇಕ ಎಂದು ಹೇಳಿದ್ದಾರೆ.

ವಾರ್ನರ್ ಶೇ.85ರಿಂದ 90ರಷ್ಟು ಫಿಟ್

ಬೆರಳಿನ ಗಾಯದಿಂದಾಗಿ ಕಳೆದ ಪಂದ್ಯದಿಂದ ಹೊರಗುಳಿದಿದ್ದ ಡೇವಿಡ್ ವಾರ್ನರ್, ನೆಟ್ಸ್​​ನಲ್ಲಿ ಬ್ಯಾಟಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಥ್ರೋಡೌನ್​ಗಳನ್ಉ ಎದುರಿಸುವಾಗ ಸಿಕ್ಸರ್​ಗಳನ್ನು ಬಾರಿಸಿದ್ದಾರೆ. ಪಾಂಟಿಂಗ್ ಅವರು ಸುಮಾರು 85 ರಿಂದ 90% ಫಿಟ್ ಆಗಿದ್ದಾರೆ ಎಂದು ಪಾಂಟಿಂಗ್ ಹೇಳಿದ್ದಾರೆ.

ಇದನ್ನೂ ಓದಿ: IPL 2024 : ಪಾಂಡ್ಯ ಅಂದ್ರೆ ಡೋಂಟ್​ ಕೇರ್​, ರೋಹಿತ್​ಗೆ ಫುಲ್​ ರೆಸ್ಪೆಕ್ಟ್​; ಯುವ ಬೌಲರ್​ನ ನಡೆ ಫುಲ್ ವೈರಲ್​

“ಡೇವಿಡ್ ಆಟದ ದಿನದಂದು ಫಿಟ್ನೆಸ್ ಪರೀಕ್ಷೆಯನ್ನು ಮಾಡಿದ್ದಾರೆ. ಒಂದೆರಡು ದಿನಗಳ ಹಿಂದೆ ಅವನಿಗೆ ಬಹುಶಃ 85 ಅಥವಾ 90% ಆಗಿದ್ದಾರೆ. ಇನ್ನೂ ಹೆಚ್ಚಿನ ಸುಧಾರಣೆಯಾಗಲಿದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಪಾಂಟಿಂಗ್ ಹೇಳಿದ್ದಾರೆ.

Continue Reading

ಕ್ರೀಡೆ

IPL 2024 : ಪಾಂಡ್ಯ ಅಂದ್ರೆ ಡೋಂಟ್​ ಕೇರ್​, ರೋಹಿತ್​ಗೆ ಫುಲ್​ ರೆಸ್ಪೆಕ್ಟ್​; ಯುವ ಬೌಲರ್​ನ ನಡೆ ಫುಲ್ ವೈರಲ್​

IPL 2024: ಕೊನೆಯ ಓವರ್ ಎಸೆಯುವ ಮೊದಲು, ಮಧ್ವಾಲ್ ತಮ್ಮ ಮೊದಲ ಮೂರು ಓವರ್​ಗಳಲ್ಲಿ 44 ರನ್​ ಬಿಟ್ಟುಕೊಟ್ಟಿದ್ದರು. ವಿಕೆಟ್ ಪಡೆದಿರಲಿಲ್ಲ. ರೊಮಾರಿಯೊ ಶೆಫರ್ಡ್​ಗೆ ಚೆಂಡನ್ನು ನೀಡುವ ಆಯ್ಕೆಯನ್ನು ಹಾರ್ದಿಕ್ ಹೊಂದಿದ್ದರು. ಆದರೆ, ರೋಹಿತ್​​ ಮಧ್ವಾಲ್ ಅವರನ್ನು ಆಯ್ಕೆ ಮಾಡಿದರು. ಬರೋಡಾ ಆಲ್​ರೌಂಡರ್​ ಬೌಲಿಂಗ್​ಗೆ ಮೊದಲು ರೋಹಿತ್ ಜತೆ ಸುದೀರ್ಘ ಚರ್ಚೆ ನಡೆಸಿದ್ದರು.

VISTARANEWS.COM


on

IPL 2024
Koo

ಬೆಂಗಳೂರು: ಪಂಜಾಬ್ ಕಿಂಗ್ಸ್ (PBKS) ವಿರುದ್ಧದ ರೋಮಾಂಚಕ ಐಪಿಎಲ್​ 2024ರ (IPL 2024) ಪಂದ್ಯದ ಕೊನೆಯ ಓವರ್​​ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ತಮ್ಮ ತಂಡಕ್ಕೆ ಫೀಲ್ಡ್​ ಸೆಟ್ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಹಾಲಿ ನಾಯಕ ಪಾಂಡ್ಯ ಇದ್ದ ಹೊರತಾಗಿಯೂ ಅವರು ಬೌಲರ್​ ಜತೆ ಸೇರಿಕೊಂಡು ಫೀಲ್ಡ್​ ಸೆಟ್ ಮಾಡುವ ವಿಡಿಯೊ ವೈರಲ್ ಆಗಿದೆ ಯುವ ಬೌಲರ್ ಕೂಡ ಪಾಂಡ್ಯನ ಮಾತುಗಳಿಗೆ ಕಿಮ್ಮತ್ತು ಕೊಡದೇ ಕೇವಲ ರೋಹಿತ್​ ಮಾತುಗಳನ್ನು ಮಾತ್ರ ಕೇಳಿಸಿಕೊಳ್ಳುತ್ತಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ.

ಪಂದ್ಯವನ್ನು ಮುಂಬಯಿ ತಂಡ ಬಹುತೇಕ ಕಳೆದುಕೊಳ್ಳುವ ಹಂತದಲ್ಲಿ ಇತ್ತು. ಆದರೆ, ಕೊನೇ ಹಂತದಲ್ಲಿ ಗೆಲುವು ಲಭಿಸಿತು. ಮುಲ್ಲಾನ್ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 193 ರನ್​ಗಳ ಗುರಿ ಬೆನ್ನತ್ತಿದ ಕಿಂಗ್ಸ್ ಎರಡನೇ ಓವರ್​​ನಲ್ಲಿ 4 ವಿಕೆಟ್ ನಷ್ಟಕ್ಕೆ 14 ರನ್ ಗಳಿಸಿತ್ತು. ಆದರೆ ಅಶುತೋಷ್ ಶರ್ಮಾ 28 ಎಸೆತಗಳಲ್ಲಿ 61 ರನ್ ಗಳಿಸಿ ಗೆಲುವು ಸಾಧಿಸುವ ಭರವಸೆ ಮೂಡಿಸಿದರು. ಕೊನೆಯ ಓವರ್​ನಲ್ಲಿ ಆತಿಥೇಯರಿಗೆ ಗೆಲ್ಲಲು 12 ರನ್​ಗಳ ಅವಶ್ಯಕತೆಯಿತ್ತು. ಆದರೆ ಕೇವಲ ಒಂದು ವಿಕೆಟ್ ಮಾತ್ರ ಉಳಿದಿತ್ತು. ಮುಂಬೈ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಜವಾಬ್ದಾರಿಯನ್ನು ಬೌಲರ್​​ ಆಕಾಶ್ ಮಧ್ವಾಲ್ ಅವರಿಗೆ ನೀಡಲಾಯಿತು.

ಕೊನೆಯ ಓವರ್ ಎಸೆಯುವ ಮೊದಲು, ಮಧ್ವಾಲ್ ತಮ್ಮ ಮೊದಲ ಮೂರು ಓವರ್​ಗಳಲ್ಲಿ 44 ರನ್​ ಬಿಟ್ಟುಕೊಟ್ಟಿದ್ದರು. ವಿಕೆಟ್ ಪಡೆದಿರಲಿಲ್ಲ. ರೊಮಾರಿಯೊ ಶೆಫರ್ಡ್​ಗೆ ಚೆಂಡನ್ನು ನೀಡುವ ಆಯ್ಕೆಯನ್ನು ಹಾರ್ದಿಕ್ ಹೊಂದಿದ್ದರು. ಆದರೆ, ರೋಹಿತ್​​ ಮಧ್ವಾಲ್ ಅವರನ್ನು ಆಯ್ಕೆ ಮಾಡಿದರು. ಬರೋಡಾ ಆಲ್​ರೌಂಡರ್​ ಬೌಲಿಂಗ್​ಗೆ ಮೊದಲು ರೋಹಿತ್ ಜತೆ ಸುದೀರ್ಘ ಚರ್ಚೆ ನಡೆಸಿದ್ದರು. ಆದರೆ, ನಾಯಕ ಪಾಂಡ್ಯನ ಬಳಿ ಒಂದೇ ಒಂದು ಮಾತು ಆಡಿರಲಿಲ್ಲ. ಮಾಜಿ ನಾಯಕ ಹಾಗೂ ಬೌಲರ್ ಫೀಲ್ಡ್​ ಸೆಟ್ ಮಾಡುವಾಗ ಪಾಂಡ್ಯ ಪೆಚ್ಚು ಮೋರೆ ಹಾಕಿ ನೋಡುತ್ತಿದ್ದರು.

ಇದನ್ನೂ ಓದಿ: Royal Challenges Bangalore : ಬೆಂಗಳೂರಿನ ಮೂರು ಕೆರೆಗಳನ್ನೂ ಅಭಿವೃದ್ಧಿ ಮಾಡಿದ ಆರ್​ಸಿಬಿ

ರೋಹಿತ್ ಶರ್ಮಾ ಅವರ ನಾಯಕತ್ವದ ಕೌಶಲ್ಯಗಳ ಬಗ್ಗೆ ಮುಕ್ತವಾಗಿ ಮೆಚ್ಚುಗೆ ವ್ಯಕ್ತಪಡಿಸಿರುವ ಆಕಾಶ್ ಮಧ್ವಾಲ್, ಮೈದಾನದ ಫೀಲ್ಡ್​ ಸೆಟಿಂಗ್​ನಲ್ಲಿ ಅವರ ನೆರವು ಕೇಳಿದ್ದಾರೆ. ಕೊನೆಯಲ್ಲಿ, ಹಾರ್ದಿಕ್ ರೋಹಿತ್​ ಹೇಳಿದ್ದನ್ನೇ ಒಪ್ಪಿಕೊಂಡರು.

ಪಂಜಾಬ್ ವಿರುದ್ಧ ಮುಂಬೈಗೆ ಗೆಲುವು

ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್ ಮುಗಿಸಲು ಮುಂಬೈ ಇಂಡಿಯನ್ಸ್​​ 20 ನೇ ಓವರ್​ನಲ್ಲಿ ಕೇವಲ ಒಂದು ವಿಕೆಟ್​​ ಅಗತ್ಯವಿತ್ತು. ಕಗಿಸೊ ರಬಾಡ ಎರಡು ರನ್​ ಗಳಿಸುವ ಯೋಜನೆಯಲ್ಲಿ ಓಡಿದರು. ಅವರು ರನ್​ಔಟ್ ಆದರು. ಈ ಪಂದ್ಯವನ್ನು ಹಾರ್ದಿಕ್ ಬಳಗ 9 ರನ್ ಗಳಿಂದ ಗೆದ್ದುಕೊಂಡಿತು. 4 ಓವರ್​ಗಳಲ್ಲಿ 21 ರನ್​ಗೆ 3 ವಿಕೆಟ್ ಕಬಳಿಸಿದ ಜಸ್ಪ್ರೀತ್ ಬುಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಮತ್ತೊಂದು ಗಮನಾರ್ಹ ಪ್ರದರ್ಶನದಲ್ಲಿ, ದಕ್ಷಿಣ ಆಫ್ರಿಕಾದ ಜೆರಾಲ್ಡ್ ಕೊಟ್ಜೆ ಕೂಡ ಬುಮ್ರಾಗೆ ಉತ್ತಮ ಬೆಂಬಲ ನೀಡಿ 3 ವಿಕೆಟ್ ಪಡೆದರು. ಐಪಿಎಲ್ 2024 ರ ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್ ಇನ್ನು ರಾಜಸ್ಥಾನ್ ರಾಯಲ್ಸ್ (ಆರ್​ಆರ್​ ವಿರುದ್ಧ ಆಡಲಿದೆ.

Continue Reading

ಕ್ರೀಡೆ

Royal Challenges Bangalore : ಬೆಂಗಳೂರಿನ ಮೂರು ಕೆರೆಗಳನ್ನೂ ಅಭಿವೃದ್ಧಿ ಮಾಡಿದ ಆರ್​ಸಿಬಿ

Royal Challenges Bangalore: ರಾಜಾನುಕುಂಟೆ ಸಮೀಪದ ಇಟ್ಟಗಲ್ಲಪುರ ಕೆರೆ ಮತ್ತು ಸಾದೇನಹಳ್ಳಿ ಕೆರೆಯಲ್ಲಿ ಆರ್​ಸಿಬಿ ಹೂಳೆತ್ತುವ ಮತ್ತು ಅಭಿವೃದ್ಧಿಪಡಿಸುವ ಕೆಲಸ ಮಾಡಿದೆ. ಅಕ್ಟೋಬರ್ 2023 ರಲ್ಲಿ ಆರ್​ಸಿಬಿ ಈ ಯೋಜನೆ ಪ್ರಾರಂಭಿಸಿತ್ತು. ಈ ಪ್ರದೇಶದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು ಬೋರ್​ವೆಲ್​ಗಳನ್ನು 1000 ರಿಂದ 1500 ಅಡಿಗಳವರೆಗೆ ಕೊರೆಸಬೇಕಾಗಿದೆ. ಈ ಪ್ರದೇಶಗಳು ಕಾವೇರಿ ನದಿಯ ನೀರಿನ ಲಭ್ಯತೆಯನ್ನು ಹೊಂದಿಲ್ಲ. ಹೀಗಾಗಿ ಈ ಕೆರೆಗಳನ್ನು ಅಭಿವೃದ್ಧಿ ಮಾಡಲಾಗಿದೆ.

VISTARANEWS.COM


on

Royal Challengers Banaglore
Koo

ಬೆಂಗಳೂರು: ಇಂಡಿಯಾ ಕೇರ್ಸ್ ಫೌಂಡೇಶನ್​ನ ಇತ್ತೀಚಿನ ವರದಿಯ ಪ್ರಕಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challenges Bangalore) ಬೆಂಗಳೂರಿನ ಎರಡು ಪ್ರಮುಖ ಕೆರೆಗಳ ಪುನರುಜ್ಜೀವನ ಕಾರ್ಯವನ್ನು ಪೂರ್ಣಗೊಳಿಸಿದೆ, ಈ ಕೆರೆಗಳ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿದೆ ಮತ್ತು ಮೂರನೇ ಕೆರೆ ಪಕ್ಕದಲ್ಲಿ ನಾಗರಿಕ ಸೌಲಭ್ಯಗಳನ್ನು ಸೇರಿಸಿದೆ.

ರಾಜಾನುಕುಂಟೆ ಸಮೀಪದ ಇಟ್ಟಗಲ್ಲಪುರ ಕೆರೆ ಮತ್ತು ಸಾದೇನಹಳ್ಳಿ ಕೆರೆಯಲ್ಲಿ ಆರ್​ಸಿಬಿ ಹೂಳೆತ್ತುವ ಮತ್ತು ಅಭಿವೃದ್ಧಿಪಡಿಸುವ ಕೆಲಸ ಮಾಡಿದೆ. ಅಕ್ಟೋಬರ್ 2023 ರಲ್ಲಿ ಆರ್​ಸಿಬಿ ಈ ಯೋಜನೆ ಪ್ರಾರಂಭಿಸಿತ್ತು. ಈ ಪ್ರದೇಶದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು ಬೋರ್​ವೆಲ್​ಗಳನ್ನು 1000 ರಿಂದ 1500 ಅಡಿಗಳವರೆಗೆ ಕೊರೆಸಬೇಕಾಗಿದೆ. ಈ ಪ್ರದೇಶಗಳು ಕಾವೇರಿ ನದಿಯ ನೀರಿನ ಲಭ್ಯತೆಯನ್ನು ಹೊಂದಿಲ್ಲ. ಹೀಗಾಗಿ ಈ ಕೆರೆಗಳನ್ನು ಅಭಿವೃದ್ಧಿ ಮಾಡಲಾಗಿದೆ.

ವರದಿಯ ಪ್ರಕಾರ, ಇಟ್ಟಗಲ್ಲಪುರ ರ ಕೆರೆ ಮತ್ತು ಸಾದೇನಹಳ್ಳಿ ಕೆರೆಯಿಂದ 1.20 ಲಕ್ಷ ಟನ್ ಹೂಳು ಮತ್ತು ಮರಳನ್ನು ತೆಗೆಯಲಾಗಿದೆ. ಇದನ್ನು ಕೆರೆಗಳಿಗೆ ಅಡ್ಡಲಾಗಿ ಕಟ್ಟೆಗಳು ಮತ್ತು ಮಾರ್ಗಗಳನ್ನು ನಿರ್ಮಿಸಲು ಬಳಸಲಾಗಿದೆ. 52 ರೈತರು ತಮ್ಮ ಹೊಲಗಳಿಗೆ ಮೇಲ್ಮಣ್ಣು ಬಳಸಲು ಮಣ್ಣನ್ನು ತೆಗೆದುಕೊಂಡಿದ್ದಾರೆ.

ಒಟ್ಟು ಒಂಬತ್ತು ಎಕರೆ ಕೆರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಪರಿಣಾಮವಾಗಿ ಕೊಳಗಳು ಮತ್ತು ಗದ್ದೆಗಳು ಸೃಷ್ಟಿಯಾಗಿವೆ. ಈ ವೈಶಿಷ್ಟ್ಯಗಳು ಸರೋವರಗಳಲ್ಲಿ ವಾಸಿಸುವ ಪಕ್ಷಿಗಳು ಮತ್ತು ಪ್ರಾಣಿಗಳಿಗೆ ಪ್ರಯೋಜನವನ್ನು ನೀಡುತ್ತಿವೆ ಕೆರೆಗಳ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವೂ ೧೭ ಎಕರೆಗಳವರೆಗೆ ಹೆಚ್ಚಾಗಿದೆ.

ಇದನ್ನೂ ಓದಿ: IPL 2024 : ಆರ್​ಸಿಬಿ, ಕೊಹ್ಲಿಯ ನೆರವು ಸ್ಮರಿಸಿದ ಕೆ. ಎಲ್ ರಾಹುಲ್​

ಈ ಸರೋವರಗಳು ಅಂತರ್ಜಲ ಮರುಪೂರಣಕ್ಕೆ ಅನುಕೂಲವಾಗುವುದಲ್ಲದೆ, ಕುಡಿಯುವ ನೀರಿನ ಪ್ರಮುಖ ಮೂಲಗಳಾಗಿ ಕಾರ್ಯನಿರ್ವಹಿಸುತ್ತವೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳನ್ನು ಬೆಂಬಲಿಸುತ್ತವೆ. ಇದು ಎರಡು ಸರೋವರಗಳ ಮೀನುಗಾರರು ಮತ್ತು ರೈತರಿಗೆ ಹೆಚ್ಚುವರಿ ಜೀವನೋಪಾಯದ ಅವಕಾಶಗಳನ್ನು ನೀಡುತ್ತದೆ. ಈಗ ಮೊದಲಿಗಿಂತ ಮೂರು ಪಟ್ಟು ಹೆಚ್ಚು ಮೀನು ಪಡೆಯಬಹುದು. ಪ್ರಸ್ತುತ ಕೃಷಿಗಾಗಿ ಕೊಳವೆಬಾವಿಗಳನ್ನು ಅವಲಂಬಿಸಿರುವ ರೈತರು ಈಗ ಈ ಪುನರುಜ್ಜೀವನಗೊಂಡ ಸರೋವರಗಳನ್ನು ಕೃಷಿ ಮತ್ತು ಇತರ ಉದ್ದೇಶಗಳಿಗಾಗಿ ಬಳಸಬಹುದು.

ಕಣ್ಣೂರು ಕರೆಯ ವ್ಯಾಪ್ತಿಯಲ್ಲಿ ನಾಗರಿಕ ಸೌಲಭ್ಯಗಳನ್ನು ನೀಡಲಾಗಿದೆ. ಎಲ್ಲಾ ಮೂರು ಸರೋವರಗಳಲ್ಲಿ ಜನಾಂಗೀಯ-ಔಷಧೀಯ ಸಸ್ಯಗಳ ಉದ್ಯಾನವನಗಳು, ಬಿದಿರು ಉದ್ಯಾನಗಳು ಮತ್ತು ಚಿಟ್ಟೆ ಉದ್ಯಾನಗಳನ್ನು ನಿರ್ಮಿಸಲಾಗಿದೆ. ಏಕೆಂದರೆ ಈ ಉಪಕ್ರಮವು ಸರೋವರಗಳ ಜೀವವೈವಿಧ್ಯತೆಯನ್ನು ಸುಧಾರಿಸುವ ಮತ್ತು ಸುಸ್ಥಿರಗೊಳಿಸುವ ಗುರಿ ಹೊಂದಿದೆ, ಪರಿಸರ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಮಕ್ಕಳಿಗೆ ಶೈಕ್ಷಣಿಕ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತದೆ.

Continue Reading

ಪ್ರಮುಖ ಸುದ್ದಿ

IPL 2024 : ಆರ್​ಸಿಬಿ, ಕೊಹ್ಲಿಯ ನೆರವು ಸ್ಮರಿಸಿದ ಕೆ. ಎಲ್ ರಾಹುಲ್​

IPL 2024 : ರಣಜಿ ಟ್ರೋಫಿಯನ್ನು ಆಡುವ ಮೂಲಕ
ಉತ್ತಮ ಆಟಗಾರನಾಗಲು ನಾನು ತೆಗೆದುಕೊಂಡ ಸಮಯವು ಬಹುಶಃ 7-8 ಋತುಗಳು. ಆದರೆ ಐಪಿಎಲ್​​ನಲ್ಲಿ ಆ ಎರಡು ತಿಂಗಳುಗಳು ನಾನು ತುಂಬಾ ಜ್ಞಾನ ಮತ್ತು ಅನುಭವ ಪಡೆದುಕೊಂಡೆ. ಎಲ್ಲವೂ ವೇಗವಾಗಿ ಮುಂದುವರಿಯಿತು ಎಂದು ರಾಹುಲ್ ಹೇಳಿದ್ದಾರೆ.

VISTARANEWS.COM


on

IPL 2024
Koo

ಬೆಂಗಳೂರು: ಕೆಎಲ್ ರಾಹುಲ್ 2022ರಲ್ಲಿ ಪ್ರಾರಂಭವಾದಾಗಿನಿಂದ ಸಾಕಷ್ಟು ಸ್ಥಿರವಾಗಿರುವ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯ ನಾಯಕನಾಗಿದ್ದಾರೆ. ಆದರೆ ಅವರ ಹೃದಯದ ಒಂದು ಭಾಗವು ಅವರ ಮೊದಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜತೆಗಿದೆ ಎನ್ನಲಾಗುತ್ತಿದೆ.

2013 ರ ಋತುವಿಗೆ ಮುಂಚಿತವಾಗಿ ಜನಪ್ರಿಯ ಫ್ರಾಂಚೈಸಿಗೆ ಆಡುವುದಾಗಿ ಸಹಿ ಹಾಕಿದ ನಂತರ ರಾಹುಲ್ ಐಪಿಎಲ್​​ನಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನಂತರ ರಾಯಲ್ ಚಾಲೆಂಜರ್ಸ್ ತಂಡ ಸೇರಲು ವಿರಾಟ್ ಕೊಹ್ಲಿ ಅವರನ್ನು ಕೇಳಿಕೊಂಡಿದರು. ಎಂದು ವಿಕೆಟ್ ಕೀಪರ್- ಬ್ಯಾಟರ್​ ಬಹಿರಂಗಪಡಿಸಿದ್ದಾರೆ. ವಾಸ್ತವವಾಗಿ, ಕೊಹ್ಲಿ ನನಗೆ ಆಯ್ಕೆ ನೀಡಲಿಲ್ಲ. ಆರ್​ಸಿಬಿ ಪರ ಆಡುವುದು ಯಾವಾಗಲೂ ತನ್ನ ಕನಸು ಎಂದು ಕರ್ನಾಟಕದ ಬ್ಯಾಟರ್​ ಹೇಳಿದ್ದಾರೆ.

ಸಹಿ ಹಾಕು ಅಂದಿದ್ದ ಕೊಹ್ಲಿ

ವಿರಾಟ್ ತರಬೇತುದಾರ ರೇ ಜೆನ್ನಿಂಗ್ಸ್ ಮತ್ತು ಇತರ ಸಹಾಯಕ ಸಿಬ್ಬಂದಿ ಹೋಟೆಲ್​ನಲ್ಲಿದ್ದರು. ವಿರಾಟ್ ‘ನೀವು ಈ ಒಪ್ಪಂದಕ್ಕೆ ಸಹಿ ಹಾಕಿ ಆರ್​ಸಿಬಿಗಾಗಿ ಆಡಲು ಬಯಸುವಿರಾ?’ ಎಂದು ಕೇಳಿದರು. ನಾನು, ‘ನೀವು ತಮಾಷೆ ಮಾಡುತ್ತಿದ್ದೀರಾ? ಅದು ಯಾವಾಗಲೂ ನನ್ನ ಕನಸಾಗಿತ್ತು ಎಂದು ಹೇಳಿದೆ. ಈ ವೇಳೆ ವಿರಾಟ್ ನಾನು ತಮಾಷೆ ಮಾಡುತ್ತಿದ್ದೇನೆ. ಇದು ಆಯ್ಕೆಯಲ್ಲ, ಈ ಒಪ್ಪಂದಕ್ಕೆ ಸಹಿ ಹಾಕಿ ಎಂದು ಹೇಳಿದರು. ಎಂದು ರವಿಚಂದ್ರನ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್​​ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ರಾಹುಲ್ ಮಾತನಾಡಿದ್ದಾರೆ.

ಆ ಎರಡು ತಿಂಗಳಲ್ಲಿ ನಾನು ಕಲಿತ ವಿಷಯಗಳು ಸಾಕಷ್ಟಿವೆ. ಕೇವಲ ರಣಜಿ ಟ್ರೋಫಿಯನ್ನು ಆಡುವ ಮೂಲಕ ಆಟಗಾರನಾಗಲು ನಾನು ತೆಗೆದುಕೊಂಡ ಸಮಯವು ಬಹುಶಃ 7-8 ಋತುಗಳು. ಆದರೆ ಐಪಿಎಲ್​​ನಲ್ಲಿ ಆ ಎರಡು ತಿಂಗಳುಗಳು ನಾನು ತುಂಬಾ ಜ್ಞಾನ ಮತ್ತು ಅನುಭವ ಪಡೆದುಕೊಂಡೆ. ಎಲ್ಲವೂ ವೇಗವಾಗಿ ಮುಂದುವರಿಯಿತು, “ಎಂದು ರಾಹುಲ್ ಹೇಳಿದ್ದಾರೆ.

ನಾನು ಆರ್ಸಿಬಿಯಲ್ಲಿ ಮುಗಿಸಲು ಬಯಸಿದ್ದೆ: ಕೆಎಲ್ ರಾಹುಲ್

ಕೆಎಲ್ ರಾಹುಲ್ ತಮ್ಮ ಅಧಿಕಾರಾವಧಿಯಲ್ಲಿ ಆರ್​ಸಿಬಿ ಪರ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದರು. ಆದಾಗ್ಯೂ, ಅವರು ಇಲೆವೆನ್​ನಲ್ಲಿ ಶಾಶ್ವತ ಸ್ಥಾನವನ್ನು ಪಡೆಯಲು ಸಾಧ್ಯವಾಗಲಿಲ್ಲ ಮತ್ತು ಅಂತಿಮವಾಗಿ 2016 ರ ಋತುವಿನ ನಂತರ ಬಿಡುಗಡೆ ಮಾಡಲಾಯಿತು. ತಮ್ಮ ಇಡೀ ಐಪಿಎಲ್ ವೃತ್ತಿಜೀವನವನ್ನು ಬೆಂಗಳೂರು ಮೂಲದ ಫ್ರಾಂಚೈಸಿಯಲ್ಲಿ ಕಳೆಯಲು ಇಷ್ಟಪಡುತ್ತೇನೆ ಎಂದು 32 ವರ್ಷದ ಆಟಗಾರ ಹೇಳಿದ್ದಾರೆ ಆರ್​ಸಿಬಿಯಿಂದ ಬಿಡುಗಡೆಯಾದ ನಂತರ, ರಾಹುಲ್ ಲಕ್ನೋಗೆ ಹೋಗುವ ಮೊದಲು ಸನ್ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ಪರ ಆಡಿದ್ದರು.

ಇದನ್ನೂ ಓದಿ: IPL 2024 : ಪಾಂಡ್ಯನನ್ನು ವಿಚಿತ್ರ ನಾಯಕ ಎಂದ ಮುಂಬೈ ಇಂಡಿಯನ್ಸ್​ ಆಲ್​ರೌಂಡರ್​​

“ನಾನು ಬೆಂಗಳೂರು ಪರ ಆಡಲು ಇಷ್ಟಪಡುತ್ತಿದ್ದೆ. ನಾನು ಅಲ್ಲಿಂದ ಪ್ರಾರಂಭಿಸಿದ್ದೆ, ನಾನು ಅಲ್ಲಿಯೇ ಮುಗಿಸಲು ಬಯಸಿದ್ದೆ. ಅದು ನನ್ನ ತಲೆಯಲ್ಲಿತ್ತು. ಆದರೆ ಐಪಿಎಲ್​ನ ಸೌಂ ದರ್ಯವೆಂದರೆ ನೀವು ವಿಭಿನ್ನ ಆಟಗಾರರೊಂದಿಗೆ ವಿಭಿನ್ನ ತಂಡಗಳಿಗೆ ಹೋಗಬಹುದು ,” ಎಂದು ರಾಹುಲ್ ಹೇಳಿದರು.

Continue Reading
Advertisement
kaalnadige Jatha programme in Uttara kannada
ಉತ್ತರ ಕನ್ನಡ24 mins ago

Lok Sabha Election 2024: ಉ.ಕ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದ ಮತದಾನದ ಗುರಿ; ಡಿಸಿ

Bangalore Rural Lok Sabha Constituency Congress candidate D K Suresh Election campaign
ಬೆಂಗಳೂರು ಗ್ರಾಮಾಂತರ26 mins ago

Lok Sabha Election 2024: ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿ: ಡಿ.ಕೆ. ಸುರೇಶ್

Neha Murder Case
ಕರ್ನಾಟಕ26 mins ago

Neha Murder Case: ನನ್ನ ಮಗನಿಗೆ ಶಿಕ್ಷೆ ಆಗಬೇಕು; ಯಾರೂ ಇಂಥ ಕೃತ್ಯ ಎಸಗಬೇಡಿ ಎಂದು ಫಯಾಜ್‌ ತಂದೆ ಕಣ್ಣೀರು

IPL 2024
ಪ್ರಮುಖ ಸುದ್ದಿ29 mins ago

IPL 2024 : ಇಂಪ್ಯಾಕ್ಟ್​ ಪ್ಲೇಯರ್ ನಿಯಮಕ್ಕೆ ಆಕ್ಷೇಪ ಎತ್ತಿದ ರಿಕಿ ಪಾಂಟಿಂಗ್​

Lok Sabha Election 2024
Lok Sabha Election 202432 mins ago

Lok Sabha Election 2024: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ; ಕಾರಣ ಇದು

Day 2 of CET 2024 Exam 26 out of syllabus question KEA asks to raise objections by April 27
ಶಿಕ್ಷಣ1 hour ago

CET 2024 Exam: ಸಿಇಟಿ ಪರೀಕ್ಷೆಯ 2ನೇ ದಿನವೂ 26 ಔಟ್‌ ಆಫ್‌ ಸಿಲಬಸ್‌ ಪ್ರಶ್ನೆ! ಏ.27ರೊಳಗೆ ಆಕ್ಷೇಪಣೆ ಸಲ್ಲಿಸಲು KEA ಸೂಚನೆ

Maldives Tourism
ವಿದೇಶ1 hour ago

Maldives Tourism: ಪರಿಣಾಮ ಬೀರಿದ ಮಾಲ್ಡೀವ್ಸ್ ಬಹಿಷ್ಕಾರದ ಕೂಗು; ಭೇಟಿ ನೀಡುವ ಭಾರತೀಯರ ಸಂಖ್ಯೆಯಲ್ಲಿ ಭಾರೀ ಕುಸಿತ

IPL 2024
ಕ್ರೀಡೆ1 hour ago

IPL 2024 : ಪಾಂಡ್ಯ ಅಂದ್ರೆ ಡೋಂಟ್​ ಕೇರ್​, ರೋಹಿತ್​ಗೆ ಫುಲ್​ ರೆಸ್ಪೆಕ್ಟ್​; ಯುವ ಬೌಲರ್​ನ ನಡೆ ಫುಲ್ ವೈರಲ್​

Party symbols
ರಾಜಕೀಯ1 hour ago

Party Symbols: ವಿವಿಧ ಪಕ್ಷಗಳ ಚುನಾವಣಾ ಚಿಹ್ನೆ ಹಿಂದೆ ಹೇಗಿತ್ತು, ಈಗ ಏನಾಗಿದೆ? ಸಂಗ್ರಹಯೋಗ್ಯ ಮಾಹಿತಿ

letter to President
ಕರ್ನಾಟಕ1 hour ago

letter to President: ಗೋವಾ ಕನ್ನಡಿಗರ ಮೇಲೆ ದೌರ್ಜನ್ಯ: ನ್ಯಾಯ ಕೊಡಿಸಲು ರಾಷ್ಟ್ರಪತಿಗಳಿಗೆ ಕರವೇ ನಾರಾಯಣಗೌಡ ಮನವಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case
ಹುಬ್ಬಳ್ಳಿ6 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ17 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ7 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 week ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

ಟ್ರೆಂಡಿಂಗ್‌