ಫೈನಲ್​ನಲ್ಲಿ ಆಸೀಸ್ ​2 ವಿಕೆಟ್​ಗೆ 450, ಭಾರತ 65ಕ್ಕೆ ಆಲೌಟ್​: ಭವಿಷ್ಯ ನುಡಿದ ಮಿಚೆಲ್​ ಮಾರ್ಷ್ - Vistara News

ಕ್ರಿಕೆಟ್

ಫೈನಲ್​ನಲ್ಲಿ ಆಸೀಸ್ ​2 ವಿಕೆಟ್​ಗೆ 450, ಭಾರತ 65ಕ್ಕೆ ಆಲೌಟ್​: ಭವಿಷ್ಯ ನುಡಿದ ಮಿಚೆಲ್​ ಮಾರ್ಷ್

ಅಹಮದಾಬಾದ್‌ನಲ್ಲಿ ಭಾನುವಾರ ನಡೆಯಲಿರುವ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 385 ರನ್ ಗೆಲುವು ಸಾಧಿಸಲಿದೆ ಎಂದು ಮಿಚೆಲ್​ ಮಾರ್ಷ್​ ಭವಿಷ್ಯ ನುಡಿದಿದ್ದಾರೆ.

VISTARANEWS.COM


on

India vs Australia, Final
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: 5 ಬಾರಿಯ ವಿಶ್ವ ಚಾಂಪಿಯನ್​ ಆಸ್ಟ್ರೇಲಿಯಾ(India vs Australia, Final) ಮತ್ತು 2 ಬಾರಿಯ ಚಾಂಪಿಯನ್ ಭಾರತ ತಂಡ ಈ ಬಾರಿಯ ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯವನ್ನಾಡಲು ಸಜ್ಜಾಗಿ ನಿಂತಿದೆ. ಇತ್ತಂಡಗಳ ಈ ಫೈನಲ್​ ಮುಖಾಮುಖಿ ಭಾನುವಾರ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುಲಿದೆ. ಇದಕ್ಕೂ ಮುನ್ನವೇ ಆಸೀಸ್​ ಆಲ್​ರೌಂಡರ್​ ಮಿಚೆಲ್​ ಮಾರ್ಷ್(Mitchell Marsh)​ ಫೈನಲ್ ಪಂದ್ಯದ ಭವಿಷ್ಯ ನುಡಿದಿದ್ದಾರೆ.

ಅಹಮದಾಬಾದ್‌ನಲ್ಲಿ ಭಾನುವಾರ ನಡೆಯಲಿರುವ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟಿಂಗ್​ ನಡೆಸಿ 2 ವಿಕೆಟ್​ಗೆ 450 ಬಾರಿಸಲಿದೆ. ಬೃಹತ್​ ಮೊತ್ತವನ್ನು ಬೆನ್ನಟ್ಟುವ ಭಾರತ ತಂಡ ಕೇವಲ 65 ರನ್​ಗೆ ಆಲೌಟ್​ ಆಗಲಿದೆ. ಆಸ್ಟ್ರೇಲಿಯಾ 385 ರನ್ ಗೆಲುವು ಸಾಧಿಸಲಿದೆ ಎಂದು ಮಿಚೆಲ್​ ಮಾರ್ಷ್​ ಹೇಳಿದ್ದಾರೆ. ಐಪಿಎಲ್​ನ ಡೆಲ್ಲಿ ಕ್ಯಾಪಿಟಲ್ಸ್​ ತಂಡ ನಡೆಸಿದ ಸಂದರ್ಶನದಲ್ಲಿ ಅವರು ಈ ವಿಚಾರವನ್ನು ತಿಳಿಸಿದ್ದಾರೆ. ಈ ವಿಡಿಯೊ ಎಲ್ಲಡೆ ವೈರಲ್​ ಆಗಿದೆ. ಅಲ್ಲದೆ ನೆಟ್ಟಿಗರು ತಕ್ಕ ಉತ್ತರವನ್ನು ನೀಡಿದ್ದಾರೆ.

ಇದನ್ನೂ ಓದಿ ಫೈನಲ್​ ಪಂದ್ಯಕ್ಕೆ ಅಂಪೈರ್ ಪಟ್ಟಿ ಬಿಡುಗಡೆ; ಟೀಮ್​ ಇಂಡಿಯಾ ಅಭಿಮಾನಿಗಳಲ್ಲಿ ನಡುಕ!​

ಮೊದಲು ನೀವು ಖಾತೆ ತೆರೆಯಿರಿ. ಆ ಬಳಿಕ ಮಾತನಾಡಿ ಎಂದಿದ್ದಾರೆ. ಲೀಗ್​ ಪಂದ್ಯದಲ್ಲಿ ಭಾರತ ವಿರುದ್ಧ ಮಾರ್ಷ್​ ಶೂನ್ಯಕ್ಕೆ ಔಟ್ ಆಗಿದ್ದರು. ಇನ್ನು ಕೆಲವರು ಈ ನೀವು ಸರಿಯಾದ ಭವಿಷ್ಯವನ್ನೇ ನುಡಿದಿದ್ದೀರಿ. ಆದರೆ, ಇಲ್ಲೊಂದು ಸಣ್ಣ ಬದಲಾವಣೆ ಇದೆ. 2 ವಿಕೆಟ್​ಗೆ 450 ಬಾರಿಸುವ ತಂಡ ಭಾರತ, 65 ರನ್​ಗೆ ಆಲೌಟ್ ಆಗುವ ತಂಡ ಆಸ್ಟ್ರೇಲಿಯಾ ಎಂದು ತಿರುಗೇಟು ನೀಡಿದ್ದಾರೆ.​

ಇದನ್ನೂ ಓದಿ ಫೈನಲ್​ ಫೈಟ್​ಗೆ ಸಿದ್ಧತೆ ಆರಂಭಿಸಿದ ಟೀಮ್​ ಇಂಡಿಯಾ; ಹೇಗಿತ್ತು ಇಂದಿನ ಕಸರತ್ತು?

ಆಸೀಸ್​ ತಂಡದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ಕೂಡ ಭಾರತವನ್ನು ಸೋಲಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಸೆಮಿಫೈನಲ್​ ಪಂದ್ಯ ಗೆದ್ದ ಬಳಿಕ ಮಾತನಾಡಿದ ಸ್ಟಾರ್ಕ್​, ಭಾರತ ಎಲ್ಲ ಹತ್ತು ಪಂದ್ಯಗಳನ್ನು ಗೆದ್ದಿರಬಹುದು. ಆದರೆ, ಫೈನಲ್​ನಲ್ಲಿ ಗೆಲ್ಲುವುದು ಮುಖ್ಯ. ಫೈನಲ್ ಪಂದ್ಯಕ್ಕೆ ನಮ್ಮ ಪ್ರದರ್ಶನವೇ ಬೇರೆ ರೀತಿಯಲ್ಲಿರುತ್ತದೆ ಇದನ್ನೂ ಊಹಿಸಲೂ ಸಾಧ್ಯವಿಲ್ಲ ಎಂದು ಹೇಳಿದ್ದರು. ಒಟ್ಟಾರೆ ಇತ್ತಂಡಗಳ ಈ ಫೈನಲ್​ ಫೈಟ್​ ಮಾತ್ರ ರೋಚಕವಾಗಿ ಕೂಡಿರುವುದರಲ್ಲಿ ಯಾವುವೇ ಅನುಮಾನವಿಲ್ಲ.

ಆಸ್ಟ್ರೇಲಿಯಾಗೇ ಸೋಲುಣಿಸಿದ್ದ ಭಾರತ…

ಭಾರತ ತಂಡ ವಿಶ್ವಕಪ್​ ಅಭಿಯಾನ ಆರಂಭಿಸಿದ್ದು 5 ಬಾರಿಯ ವಿಶ್ವ ಚಾಂಪಿಯನ್​ ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ. ಅಕ್ಟೋಬರ್​ 8ರಂದು ಚೆನ್ನೈಯ ಚಿದಂಬರಂ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಆಸ್ಟ್ರೇಲಿಯಾ ಡೇವಿಡ್​ ವಾರ್ನರ್​ ಮತ್ತು ಸ್ಟೀವನ್​ ಸ್ಮಿತ್​ ಅವರ ಬ್ಯಾಟಿಂಗ್​ ನೆರವಿನಿಂದ 49.3 ಓವರ್​ಗಳಲ್ಲಿ 199 ರನ್​ಗೆ ಕುಸಿಯಿತು. ಗುರಿ ಬೆನ್ನಟ್ಟಿದ ಭಾರತ ಕೂಡ ಆರಂಭಿಕ ಆಘಾತ ಎದುರಿಸಿತು. 2 ರನ್​ಗೆ ಮೂರು ವಿಕೆಟ್​ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಈ ವೇಳೆ ಜತೆಯಾದ ವಿರಾಟ್ ಕೊಹ್ಲಿ(85) ಮತ್ತು ಕೆ.ಎಲ್​ ರಾಹುಲ್(ಅಜೇಯ 97)​ ಅಸಾಮಾನ್ಯ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ತಂಡಕ್ಕ ಸ್ಮರಣೀಯ ಗೆಲುವು ತಂದು ಕೊಟ್ಟರು. ಭಾರತ 41.2 ಓವರ್​ಗಳಲ್ಲಿ 4 ವಿಕೆಟ್​ಗೆ 201 ರನ್​ ಬಾರಿಸಿ ಗೆಲುವಿನ ನಗೆ ಬೀರಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Virat kohli : ನಿವೃತ್ತಿಯಾಗುವುದು ಉತ್ತಮ; ಕೊಹ್ಲಿ, ರೋಹಿತ್​ಗೆ ಸಲಹೆ ನೀಡಿದ ವೀರೇಂದ್ರ ಸೆಹ್ವಾಗ್​

Virat kohli :ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಬ್ಯಾಟ್​ಗಳು ಮೌನವಾಗಿವೆ. ಐಸಿಸಿ ಈವೆಂಟ್​ನಲ್ಲಿ ಮೊದಲ ಬಾರಿಗೆ ಆರಂಭಿಕ ಜೋಡಿಯಾಗಿ ಆಡುತ್ತಿರುವ ಅವರಿಬ್ಬರು ನಿಧಾನಗತಿಯ ಮತ್ತು ಕೆಟ್ಟದಾಗಿ ಆಡುತ್ತಿದ್ದಾರೆ.

VISTARANEWS.COM


on

Virat kohli
Koo

ನವದೆಹಲಿ: ಭಾರತದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್​ ಶರ್ಮಾ ಆಸ್ಟ್ರೇಲಿಯಾ ವಿರುದ್ಧದದ ಸೂಪರ್ 8 ನಲ್ಲಿ ರನ್ ಗಳಿಸಲೇಬೇಕು ಎಂದು ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಖಡಕ್ ಸೂಚನೆ ಕೊಟ್ಟಿದ್ದಾರೆ. ಇಲ್ಲದಿದ್ದರೆ ಅವರ ನಿವೃತ್ತಿ ದಿನಗಳು ಹತ್ತಿರ ಬರುತ್ತವೆ ಎಂಬುದಾಗಿಯೂ ತಿಳಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಂದು ಮುಂಬರುವ ಪಂದ್ಯಗಳಲ್ಲಿ ದೊಡ್ಡ ಮೊತ್ತವನ್ನು ಗಳಿಸದಿದ್ದರೆ ಅವರ ಇರುವಿಕೆಯ ಪ್ರಶ್ನೆಗಳು ಏಳುತ್ತವೆ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ. ಆ ಪ್ರಶ್ನೆಗಳು ವಿರಾಟ್ ಮತ್ತು ರೋಹಿತ್ಗೆ ಮಾತ್ರ ಸೀಮಿತವಾಗಿರದೆ ಮುಖ್ಯ ಆಯ್ಕೆ ಸಮಿತಿಗೂ ಅನ್ವಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಬ್ಯಾಟ್​ಗಳು ಮೌನವಾಗಿವೆ. ಐಸಿಸಿ ಈವೆಂಟ್​ನಲ್ಲಿ ಮೊದಲ ಬಾರಿಗೆ ಆರಂಭಿಕ ಜೋಡಿಯಾಗಿ ಆಡುತ್ತಿರುವ ಅವರಿಬ್ಬರು ನಿಧಾನಗತಿಯ ಮತ್ತು ಕೆಟ್ಟದಾಗಿ ಆಡುತ್ತಿದ್ದಾರೆ. ರನ್ ಗಳಿಸಲು ಹೆಣಗಾಡುತ್ತಿದ್ದಾರೆ. ಹೀಗಾಗಿ ಅವರು ರನ್ ಗಳಿಸುವುದು ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.

ರೋಹಿತ್ ಶರ್ಮಾ 5 ಪಂದ್ಯಗಳಿಂದ 99 ರನ್ ಗಳಿಸಿದ್ದರೆ, ವಿರಾಟ್ ಕೊಹ್ಲಿ ಕೇವಲ 66 ರನ್ ಗಳಿಸಿದ್ದಾರೆ. ಆರಂಭಿಕ ಗ್ರೂಪ್ ಹಂತದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ರೋಹಿತ್ ಅವರ ಅತ್ಯಧಿಕ ಸ್ಕೋರ್ ಬಂದಿತು. ಅಲ್ಲಿ ಅವರು 52* ರನ್ ಗಳಿಸಿದ್ದರು. ಆದರೆ ಅದರ ನಂತರ ಅವರು ಗಮನಾರ್ಹ ಇನ್ನಿಂಗ್ಸ್​​ ಆಡಲಿದ್ದಲ ಬಾಂಗ್ಲಾದೇಶದ ವಿರುದ್ಧವೂ ವಿಫಲಗೊಂಡಿದ್ದರು.

ಐರ್ಲೆಂಡ್, ಪಾಕಿಸ್ತಾನ ಮತ್ತು ಯುಎಸ್ಎ ವಿರುದ್ಧದ 3 ಗ್ರೂಪ್ ಎ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಕೇವಲ 5 ರನ್ ಗಳಿಸಿದ್ದರು. ಸೂಪರ್ 8ರ ದಶಕದಲ್ಲಿ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧದ ಪಂದ್ಯಗಳು ಸೇರಿ ಒಟ್ಟು 66 ರನ್ ಗಳಿಸಿದ್ದಾರೆ. ಕಳೆದ ಪಂದ್ಯದಲ್ಲಿ, ಅವರು ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ 37 ರನ್ ಗಳಿಸಿದ್ದೇ ಗರಿಷ್ಠ ಮೊತ್ತ.

ಭಾರತವು ವಿಶ್ವ ಟಿ 20 ಚಾಂಪಿಯನ್​ಶಿಪ್​ ಗೆಲ್ಲಬೇಕಾದರೆ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರೂ ಅಗ್ರ ಕ್ರಮಾಂಕದಲ್ಲಿ ಮಿಂಚಬೇಕು. 10 ಎಸೆತಗಳಲ್ಲಿ 30 ಅಥವಾ 20 ಎಸೆತಗಳಲ್ಲಿ 40 ರನ್ ಗಳಿಸಬೇಕು. ಅವರು ತಮ್ಮ ಇನ್ನಿಂಗ್ಸ್ ಅನ್ನು ವಿಸ್ತರಿಸುವ ಬಗ್ಗೆ ಯೋಚಿಸಬೇಕು. ಅದು ಸಂಭವಿಸಿದಲ್ಲಿ, ಭಾರತೀಯ ತಂಡಕ್ಕೆ ಹೆಚ್ಚಿನ ಲಾಭವಾಗಲಿದೆ.

ವಿರಾಟ್ ಮತ್ತು ರೋಹಿತ್ ಅವರ ರನ್​​ಗಳ ಕೊರತೆ ಎದುರಿಸುತ್ತಿರುವುದು ಆಘಾತಕಾರಿ. ಇಲ್ಲದಿದ್ದರೆ ಅವರನ್ನು ಮುಂದಿನ ದಿನಗಳಲ್ಲಿ ಪರಿಶೀಲನೆಗೆ ಒಳಪಡಿಬೇಕಾಗುತ್ತದೆ ಎಂದು ಸೆಹ್ವಾಗ್ ಹೇಳಿದ್ದಾರೆ.

ಇದನ್ನೂ ಓದಿ: Team India : ಜಿಂಬಾಬ್ವೆ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟ, ಶುಭ್​ಮನ್ ಗಿಲ್​ಗೆ ನಾಯಕತ್ವ

“ಅವರಿಬ್ಬರ ಬ್ಯಾಟಿಂಗ್​ ಕಳವಳಕಾರಿ ವಿಷಯವಾಗಿದೆ ಏಕೆಂದರೆ ಯಾವುದೇ ಆರಂಭಿಕ ಆಟಗಾರರು. ಆದರೂ ರನ್ ಗಳಿಸಿಲ್ಲ. ಅವರು ದೊಡ್ಡ ಆಟಗಾರರು ಎಂದು ಹೇಳಿದರಷ್ಟೇ ಸಾಕಾಗುವುದಿಲ್ಲ. ಕೊನೆಯಲ್ಲಿ, ಅವರು ರನ್ ಗಳಿಸಬೇಕಾಗುತ್ತದೆ. ಅವರಿಗೆ ಸಾಧ್ಯವಾಗದಿದ್ದರೆ, ಆಯ್ಕೆದಾರರು ವಿಶ್ವಕಪ್ ನಂತರ ಯೋಚಿಸಬೇಕಾಗುತ್ತದೆ,” ಎಂದು ಸೆಹ್ವಾಗ್ ಕ್ರಿಕ್​ಬಜ್​ ಜತೆ ಮಾತನಾಡುತ್ತಾ ಹೇಳಿದ್ದಾರೆ.

ವೀರೇಂದ್ರ ಸೆಹ್ವಾಗ್ ಮಾತಿನ ಅರ್ಥವೇನು?

ಕ್ರಿಕ್​ಬಜ್​ ಜೊತೆ ಮಾತನಾಡಿದ ವೀರೇಂದ್ರ ಸೆಹ್ವಾಗ್, 2024 ರ ಐಸಿಸಿ ಟಿ 20 ವಿಶ್ವಕಪ್​​ನಲ್ಲಿ ಭಾರತ ತಂಡವನ್ನು ನಿಜವಾಗಿಯೂ ಪರೀಕ್ಷಿಸಲಾಗಿಲ್ಲ ಎಂದು ಒತ್ತಿ ಹೇಳಿದರು. ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಹೊರತುಪಡಿಸಿ ಎಲ್ಲ ಪಂದ್ಯವೂ ಏಕಮುಖವಾಗಿತ್ತು. ನಿಜವಾದ ಟಾಸ್ಕ್ ಆಸ್ಟ್ರೇಲಿಯನ್ನರ ವಿರುದ್ಧ ಎದುರಾಗುತ್ತದೆ ಎಂದು ಹೇಳಿದ್ದಾರೆ.

ಪಂದ್ಯಾವಳಿಯಲ್ಲಿ ಆರಂಭದಲ್ಲಿ ಸ್ಪರ್ಧಾತ್ಮಕ ತಂಡವನ್ನು ಎದುರಿಸದ ಕಾರಣ ಭಾರತವು ಮುಂದೆ ಬಳಲಬಹುದು. ಅದು ಅವರ ಕೌಶಲಗಳನ್ನು ಪರೀಕ್ಷಿಸಬಹುದು ಎಂದು ವೀರೇಂದ್ರ ಸೆಹ್ವಾಗ್ ಹೇಳಿದರು. ಟಿ 20 ವಿಶ್ವಕಪ್ ಫೈನಲ್ ತಲುಪುವ ಭಾರತದ ಸಾಧ್ಯತೆಗಳ ಬಗ್ಗೆ ಸ್ವಲ್ಪ ಖಚಿತವಿಲ್ಲ ಎಂದು ಅವರು ಹೇಳಿದರು. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಅತ್ಯಂತ ಕಠಿಣ ಪರಿಸ್ಥಿತಿಗಳು ಇರುತ್ತವೆ ಎಂದು ಅಭಿಪ್ರಾಯಪಟ್ಟರು.

ಪಾಕಿಸ್ತಾನವನ್ನು ಹೊರತುಪಡಿಸಿ ಭಾರತ ಒಂದೇ ಒಂದು ಉತ್ತಮ ಪಂದ್ಯವನ್ನು ಆಡಿಲ್ಲ, ಅಲ್ಲಿ ನೀವು ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ನಿಮ್ಮ ಅಗ್ರ ಕ್ರಮಾಂಕ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ರನ್ ಗಳಿಸುವ ಬಗ್ಗೆ ಚಿಂತಿಸಬೇಕು ಎಂದು ಸೆಹ್ವಾಗ್​ ಹೇಳಿದ್ದಾರೆ.

Continue Reading

ಪ್ರಮುಖ ಸುದ್ದಿ

Team India : ಜಿಂಬಾಬ್ವೆ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟ, ಶುಭ್​ಮನ್ ಗಿಲ್​ಗೆ ನಾಯಕತ್ವ

Team India : ಭಾರತ ಮತ್ತು ಜಿಂಬಾಬ್ವೆ ನಡುವಿನ ಸರಣಿ ಜುಲೈ 6 ರಿಂದ 14 ರವರೆಗೆ ನಡೆಯಲಿದೆ. ಎಲ್ಲಾ ಪಂದ್ಯಗಳು ಹರಾರೆಯಲ್ಲಿ ನಡೆಯಲಿವೆ. ಅಭಿಷೇಕ್ ಶರ್ಮಾ, ಧ್ರುವ್ ಜುರೆಲ್, ನಿತೀಶ್ ರೆಡ್ಡಿ, ರಿಯಾನ್ ಪರಾಗ್ ಮತ್ತು ತುಷಾರ್ ದೇಶಪಾಂಡೆ ಅವರಂತಹ ಹಲವಾರು ಆಟಗಾರರಿಗೆ ಆಯ್ಕೆದಾರರು ಮೊದಲ ಬಾರಿಗೆ ಕರೆ ನೀಡಿದ್ದಾರೆ.

VISTARANEWS.COM


on

Team India
Koo

ಬೆಂಗಳೂರು: ಜಿಂಬಾಬ್ವೆ ಪ್ರವಾಸದಲ್ಲಿ ನಡೆಯಲಿರುವ ಐದು ಪಂದ್ಯಗಳ ಟಿ 20 ಐ ಸರಣಿಗೆ ಬಿಸಿಸಿಐ ಸೋಮವಾರ (ಜೂನ್ 24) ಭಾರತ ತಂಡವನ್ನು (Team India) ಪ್ರಕಟಿಸಲಾಗಿದೆ. ಇದು ಸೀಮಿತ ಓವರ್​ಗಳ ಸರಣಿಯಾಗಿದ್ದು ಯುವ ಆಟಗಾರರನ್ನು ಹೊಂದಿರುವ ಮೆನ್ ಇನ್ ಬ್ಲೂ ಜಿಂಬಾಬ್ವೆಗೆ ಭೇಟಿ ನೀಡಲಿದೆ. ನಿರೀಕ್ಷೆಯಂತೆ, ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಪ್ರವಾಸಕ್ಕಾಗಿ ಎರಡನೇ ಹಂತದ ತಂಡವನ್ನು ಆಯ್ಕೆ ಮಾಡಿದೆ. ಭಾರತ ತಂಡವು ಪ್ರಸ್ತುತ ಟಿ 20 ವಿಶ್ವಕಪ್​ನಲ್ಲಿ ಆಡುತ್ತಿರುವುದರಿಂದ, ವಿಶ್ವಕಪ್ ತಂಡದ ಹೆಚ್ಚಿನ ಆಟಗಾರರಿಗೆ ಜಿಂಬಾಬ್ವೆ ವಿರುದ್ಧದ ಸರಣಿಗೆ ವಿಶ್ರಾಂತಿ ನೀಡಲಾಗುವುದು ಎಂದು ನಿರೀಕ್ಷಿಸಲಾಗಿತ್ತು. ಅಂತೆಯೇ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಿರುವುದರಿಂದ ಮುಂಬರುವ ಸರಣಿಗೆ ಶುಭ್ಮನ್ ಗಿಲ್ ಅವರನ್ನು ನಾಯಕರನ್ನಾಗಿ ಹೆಸರಿಸಲಾಗಿದೆ.

ಭಾರತ ಮತ್ತು ಜಿಂಬಾಬ್ವೆ ನಡುವಿನ ಸರಣಿ ಜುಲೈ 6 ರಿಂದ 14 ರವರೆಗೆ ನಡೆಯಲಿದೆ. ಎಲ್ಲಾ ಪಂದ್ಯಗಳು ಹರಾರೆಯಲ್ಲಿ ನಡೆಯಲಿವೆ. ಅಭಿಷೇಕ್ ಶರ್ಮಾ, ಧ್ರುವ್ ಜುರೆಲ್, ನಿತೀಶ್ ರೆಡ್ಡಿ, ರಿಯಾನ್ ಪರಾಗ್ ಮತ್ತು ತುಷಾರ್ ದೇಶಪಾಂಡೆ ಅವರಂತಹ ಹಲವಾರು ಆಟಗಾರರಿಗೆ ಆಯ್ಕೆದಾರರು ಮೊದಲ ಬಾರಿಗೆ ಕರೆ ನೀಡಿದ್ದಾರೆ. ಎಲ್ಲಾ ಆಟಗಾರರು ಈ ವರ್ಷ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.

ಇದನ್ನೂ ಓದಿ: Irfan Pathan : ಇರ್ಫಾನ್ ಪಠಾಣ್​ ಮೇಕಪ್ ಆರ್ಟಿಸ್ಟ್​​ ವೆಸ್ಟ್​ ಇಂಡೀಸ್​ನ ಸ್ವಿಮ್ಮಿಂಗ್​ ಪೂಲ್​ನಲ್ಲಿ ಶವವಾಗಿ ಪತ್ತೆ!

ಕಳೆದ ವರ್ಷ, ರೋಹಿತ್ ಅನುಪಸ್ಥಿತಿಯಲ್ಲಿ ಪಾಂಡ್ಯ ಮತ್ತು ಸೂರ್ಯಕುಮಾರ್ ಟಿ 20 ಪಂದ್ಯಗಳಲ್ಲಿ ತಂಡ ಮುನ್ನಡೆಸಿದ್ದರು. ಇಬ್ಬರೂ ಜಿಂಬಾಬ್ವೆ ಸರಣಿಗೆ ತಂಡದ ಭಾಗವಾಗದ ಕಾರಣ, ಗಿಲ್​ಗೆ ಜವಾಬ್ದಾರಿ ನೀಡಲಾಗಿದೆ. ಗಿಲ್ ಎಂದಿಗೂ ಭಾರತೀಯ ತಂಡವನ್ನು ಮುನ್ನಡೆಸಿಲ್ಲ. ಆದರೆ ಅವರು ಐಪಿಎಲ್​ನಲ್ಲಿ ಗುಜರಾತ್​ ಟೈಟಾನ್ಸ್ ತಂಡ ನಾಯಕತ್ವ ವಹಿಸಿದ್ದರು.

ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡ:

ಭಾರತ ಮತ್ತು ಜಿಂಬಾಬ್ವೆ ನಡುವಿನ ಟಿ 20 ವಿಶ್ವಕಪ್ ಸರಣಿಗೆ ಭಾರತದ ಇಬ್ಬರು ಆಟಗಾರರನ್ನು ಮಾತ್ರ ಹೆಸರಿಸಲಾಗಿದೆ. ಯಶಸ್ವಿ ಜೈಸ್ವಾಲ್ ಮತ್ತು ಸಂಜು ಸ್ಯಾಮ್ಸನ್ ಆ ಪ್ರಮುಖ ಆಟಗಾರರು. ಜೈಸ್ವಾಲ್ ಅಥವಾ ಸ್ಯಾಮ್ಸನ್ ಟಿ20 ವಿಶ್ವ ಕಪ್​ನಲ್ಲಿ ಇಲ್ಲಿಯವರೆಗೆ ಒಂದು ಪಂದ್ಯವನ್ನೂ ಆಡಿಲ್ಲ. ಸ್ಪರ್ಧೆಯ ಉಳಿದ ಭಾಗಕ್ಕೆ ಅವರು ಪ್ಲೇಯಿಂಗ್ ಹನ್ನೊಂದರಲ್ಲಿ ಅವಕಾಶ ಪಡೆಯುವ ಸಾಧ್ಯತೆಯಿಲ್ಲ.

ತಂಡ: ಶುಬ್ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ನಿತೀಶ್ ರೆಡ್ಡಿ, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ.

Continue Reading

ಪ್ರಮುಖ ಸುದ್ದಿ

Irfan Pathan : ಇರ್ಫಾನ್ ಪಠಾಣ್​ ಮೇಕಪ್ ಆರ್ಟಿಸ್ಟ್​​ ವೆಸ್ಟ್​ ಇಂಡೀಸ್​ನ ಸ್ವಿಮ್ಮಿಂಗ್​ ಪೂಲ್​ನಲ್ಲಿ ಶವವಾಗಿ ಪತ್ತೆ!

Irfan Pathan : ಐಸಿಸಿ ಟಿ 20 ವಿಶ್ವಕಪ್ 2024 ಪ್ರಸ್ತುತ ಯುಎಸ್ಎ ಮತ್ತು ವೆಸ್ಟ್ ಇಂಡೀಸ್​ನಲ್ಲಿ ನಡೆಯುತ್ತಿದೆ. ಸೂಪರ್ 8 ಪಂದ್ಯಗಳು ವೆಸ್ಟ್ ಇಂಡೀಸ್​ನಲ್ಲಿ ನಡೆಯುತ್ತಿವೆ. ಪಠಾಣ್ ವಿಂಡೀಸ್​ಗೆ ತೆರಳಿದ್ದು ಅನ್ಸಾರಿಯೂ ಹೋಗಿದ್ದಾರೆ. ಜೂನ್ 21 ರ ಶುಕ್ರವಾರ ಸಂಜೆ ಅನ್ಸಾರಿ ಹೋಟೆಲ್ ಈಜುಕೊಳದಲ್ಲಿ ಸ್ನಾನ ಮಾಡುವಾಗ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವೆಸ್ಟ್ ಇಂಡೀಸ್ ನಿಂದ ಮಾಹಿತಿ ಸಿಕ್ಕಿದೆ.

VISTARANEWS.COM


on

Irfan Pathan
Koo

ನವದೆಹಲಿ: ಟಿ 20 ವಿಶ್ವಕಪ್​​ನ ವೀಕ್ಷಕ ವಿವರಣೆ ತಂಡದ ಭಾಗವಾಗಿ ವೆಸ್ಟ್​ ಇಂಡೀಸ್​ಗೆ ಹೋಗಿದ್ದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರ ಮೇಕಪ್​ ಆರ್ಟಿಸ್ಟ್​ ಫಯಾಜ್ ಅನ್ಸಾರಿ ಇಂಡೀಸ್​ನ ಈಜುಕೊಳದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಫಯಾಜ್​ ಅವರು ವಿಶ್ವ ಕಪ್ ಹಿನ್ನೆಲೆಯಲ್ಲಿ ವೆಸ್ಟ್​ ಇಂಡೀಸ್​​ಗೆ ತೆರಳಿದ್ದರು. ಈ ದುರಂತ ಘಟನೆಯು ಅವರ ಕುಟುಂಬಕ್ಕೆ ಆಘಾತ ತಂದಿದೆ. ಫಯಾಜ್ ಅನ್ಸಾರಿ ಉತ್ತರ ಪ್ರದೇಶದ ಬಿಜ್ನೋರ್​​ ನಾಗಿನಾ ಮೂಲದವರು.

22 ವರ್ಷಗಳ ಹಿಂದೆ, ಬಿಜ್ನೋರ್​ನ ನಾಗಿನಾ ತಹಸಿಲ್​​ನ ಮೊಹಲ್ಲಾ ಖಾಜಿ ಸರಾಯ್ನ ಫಯಾಜ್ ಅನ್ಸಾರಿ ಮುಂಬೈಗೆ ತೆರಳಿ ತಮ್ಮದೇ ಆದ ಸಲೂನ್ ಪ್ರಾರಂಭಿಸಿದ್ದರು. ಈ ಸಮಯದಲ್ಲಿ, ಪಠಾಣ್ ಮೇಕಪ್​ಗಾಗಿ ಅವರ ಸಲೂನ್​ಗೆ ಭೇಟಿ ನೀಡಲು ಪ್ರಾರಂಭಿಸಿದರು. ತರುವಾಯ, ಮಾಜಿ ಆಲ್​ರೌಂಡರ್​ ಅನ್ಸಾರಿಯನ್ನು ತಮ್ಮ ವೈಯಕ್ತಿಕ ಮೇಕಪ್ ಕಲಾವಿದನನ್ನಾಗಿ ಇಟ್ಟುಕೊಂಡಿದ್ದರು. ಅವರನ್ನು ಅಂತಾರಾಷ್ಟ್ರೀಯ ಪ್ರವಾಸಗಳಿಗೆ ಕರೆದೊಯ್ಯುತ್ತಿದ್ದರು.

ಐಸಿಸಿ ಟಿ 20 ವಿಶ್ವಕಪ್ 2024 ಪ್ರಸ್ತುತ ಯುಎಸ್ಎ ಮತ್ತು ವೆಸ್ಟ್ ಇಂಡೀಸ್​ನಲ್ಲಿ ನಡೆಯುತ್ತಿದೆ. ಸೂಪರ್ 8 ಪಂದ್ಯಗಳು ವೆಸ್ಟ್ ಇಂಡೀಸ್​ನಲ್ಲಿ ನಡೆಯುತ್ತಿವೆ. ಪಠಾಣ್ ವಿಂಡೀಸ್​ಗೆ ತೆರಳಿದ್ದು ಅನ್ಸಾರಿಯೂ ಹೋಗಿದ್ದಾರೆ. ಜೂನ್ 21 ರ ಶುಕ್ರವಾರ ಸಂಜೆ ಅನ್ಸಾರಿ ಹೋಟೆಲ್ ಈಜುಕೊಳದಲ್ಲಿ ಈಜುವಾಗ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವೆಸ್ಟ್ ಇಂಡೀಸ್ ನಿಂದ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: Hardik Pandya : ಹಾರ್ದಿಕ್ ಪಾಂಡ್ಯ ನತಾಶಾಗೆ ವಿಚ್ಛೇದನ ಕೊಡುವುದು ಖಾತರಿ ಎಂದ ಟೀಮ್​ ಇಂಡಿಯಾ ಆಟಗಾರ

ಅನ್ಸಾರಿ ಅವರ ಸೋದರಸಂಬಂಧಿ ಮೊಹಮ್ಮದ್ ಅಹ್ಮದ್ ಅವರ ಪ್ರಕಾರ, ಅವರು ಕೇವಲ ಎರಡು ತಿಂಗಳ ಹಿಂದೆ ವಿವಾಹವಾಗಿದ್ದರು. ಎಂಟು ದಿನಗಳ ಹಿಂದೆಯಷ್ಟೇ ಬಿಜ್ನೋರ್​ನ ನಾಗಿನಾದಿಂದ ಮುಂಬೈಗೆ ಹೋಗಿದ್ದರು. ಹಠಾತ್ ಅಪಘಾತವು ಕುಟುಂಬವನ್ನು ದುಃಖದಲ್ಲಿ ಮುಳುಗಿಸಿದೆ. ಅವರ ಪತ್ನಿ ಮತ್ತು ಸಂಬಂಧಿಕರು ದುಃಖಿತರಾಗಿದ್ದರು.

ಅನ್ಸಾರಿ ಅವರ ದೇಹವನ್ನು ಭಾರತಕ್ಕೆ ತರಲು ಇರ್ಫಾನ್ ಪಠಾಣ್ ಸ್ವತಃ ವೆಸ್ಟ್ ಇಂಡೀಸ್​ನಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ. ಕುಟುಂಬವು ದೆಹಲಿಯಲ್ಲಿ ಶವವನ್ನು ಸ್ವೀಕರಿಸಲು ಯೋಜನೆ ರೂಪಿಸಿದೆ. ಇದು ಸುಮಾರು ಮೂರರಿಂದ ನಾಲ್ಕು ದಿನಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ

Continue Reading

ಪ್ರಮುಖ ಸುದ್ದಿ

Hardik Pandya : ಹಾರ್ದಿಕ್ ಪಾಂಡ್ಯ ನತಾಶಾಗೆ ವಿಚ್ಛೇದನ ಕೊಡುವುದು ಖಾತರಿ ಎಂದ ಟೀಮ್​ ಇಂಡಿಯಾ ಆಟಗಾರ

Hardik Pandya : ಪತ್ನಿ ನತಾಶಾ ಸ್ಟಾಂಕೋವಿಕ್ ಅವರಿಂದ ವಿಚ್ಛೇದನದ ವರದಿಗಳೊಂದಿಗೆ ಅವರ ಜೀವನದಲ್ಲಿ ಭಾವನಾತ್ಮಕ ಪ್ರಕ್ಷುಬ್ಧತೆಗೆ ಕಾರಣವಾಯಿತು. ಇದೀಗ ಅವರ ಕುಟುಂಬದಲ್ಲಿ ಸಮಸ್ಯೆ ಆಗಿರುವುದು ಹೌದು ಎಂದು ಟೀಮ್ ಇಂಡಿಯಾ ಆಟಗಾರರೊಬ್ಬರು ಹೇಳಿದ್ದಾರೆ. ನತಾಶಾ ಜತೆಗೆ ಅವರ ಸಂಬಂಧ ಮುರಿದು ಬೀಳುವುದು ಬಹುತೇಕ ಖಚಿತ ಎಂಬುದಾಗಿ ಅವರು ಹೇಳಿದ್ದಾರೆ.

VISTARANEWS.COM


on

Hardik Pandya
Koo

ಬೆಂಗಳೂರು: ಪ್ರಸ್ತುತ ನಡೆಯುತ್ತಿರುವ ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ (T20 World Cup 2024) ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಅವರ ಪ್ರದರ್ಶನವು ಗಮನ ಸೆಳೆದಿದೆ. ಮುಂಬೈ ಇಂಡಿಯನ್ಸ್ ನಾಯಕರಾಗಿ ಅವರು ಐಪಿಎಲ್ 2024 ರ ಕಳಪೆ ಋತುವಿನ ನಂತರ ವಿಶ್ವ ಕಪ್​ಗೆ ಪ್ರವೇಶ ಪಡೆದಿದ್ದಾರೆ. ಹೀಗಾಗಿ ಅವರು ಪ್ರದರ್ಶನದ ಬಗ್ಗೆ ಅನುಮಾನಗಳು ಇದ್ದವು. ಇದೀಗ ಎಲ್ಲ ಅನುಮಾನಗಳಿಗೆ ಪರಿಹಾರ ಕೊಟ್ಟಿದ್ದು, ಬ್ಯಾಟ್ ಮೂಲಕ ಮಿಂಚಿದ್ದಾರೆ.

ಐಪಿಎಲ್ 2024 ರಲ್ಲಿ ರೋಹಿತ್ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್ (ಎಂಐ) ನಾಯಕನ ಸ್ಥಾನದಿಂದ ಇಳಿಸಿ ಹಾರ್ದಿಕ್​ಗೆ ಪಟ್ಟ ಕಟ್ಟಿದ್ದಕ್ಕಾಗಿ ಭಾರಿ ಟೀಕೆಗಳನ್ನು ಎದುರಿಸಿದ್ದರು. ನಂತರ ಪತ್ನಿ ನತಾಶಾ ಸ್ಟಾಂಕೋವಿಕ್ ಅವರಿಂದ ವಿಚ್ಛೇದನದ ವರದಿಗಳೊಂದಿಗೆ ಅವರ ಜೀವನದಲ್ಲಿ ಭಾವನಾತ್ಮಕ ಪ್ರಕ್ಷುಬ್ಧತೆಗೆ ಕಾರಣವಾಯಿತು. ಇದೀಗ ಅವರ ಕುಟುಂಬದಲ್ಲಿ ಸಮಸ್ಯೆ ಆಗಿರುವುದು ಹೌದು ಎಂದು ಟೀಮ್ ಇಂಡಿಯಾ ಆಟಗಾರರೊಬ್ಬರು ಹೇಳಿದ್ದಾರೆ. ನತಾಶಾ ಜತೆಗೆ ಅವರ ಸಂಬಂಧ ಮುರಿದು ಬೀಳುವುದು ಬಹುತೇಕ ಖಚಿತ ಎಂಬುದಾಗಿ ಅವರು ಹೇಳಿದ್ದಾರೆ.

ನತಾಶಾ ಮತ್ತು ಹಾರ್ದಿಕ್ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಎಂಬುದಾಗಿ ಐಪಿಎಲ್ ಮುಕ್ತಾಯಗೊಂಡ ತಕ್ಷಣ ಸುದ್ದಿಯಾಗಿತ್ತು. ಈ ಸುದ್ದಿಗೆ ರೆಕ್ಕೆ ಪುಕ್ಕಗಳು ಹುಟ್ಟಿಕೊಂಡ ಕಾರಣ ಅದು ಚರ್ಚೆಯ ವಿಷಯವಾಯಿತು. ನತಾಶಾ ಸ್ಟಾಂಕೊವಿಕ್​ ಪತಿಯನ್ನು ತೊರೆದಿದ್ದಾರೆ ಎಂಬುದಾಗಿ ಸುದ್ದಿಯಾಯಿತು. ತನ್ನ ಇನ್​​ಸ್ಟಾಗ್ರಾಮ್​ ಬಯೊದಲ್ಲಿ ಪಾಂಡ್ಯ ಹೆಸರನ್ನು ತೆಗೆದಿರುವುದೇ ಅದಕ್ಕೆ ಕಾರಣ. ಕೊನೆಯಲ್ಲಿ ಅದಕ್ಕೆ ತೇಪೆ ಹಚ್ಚಲಾಯಿತು. ತಾವು ಜತೆಗೆ ಇದ್ದೇವೆ ಎಂಬ ಪರೋಕ್ಷ ಸಂದೇಶವನ್ನು ನತಾಶಾ ಕಳುಹಿಸಿದ್ದರು. ಆದರೆ ಅದು ಖಾತರಿಯಾಗಿರಲಿಲ್ಲ. ಇದೀಗ ಆ ಸುದ್ದಿಯನ್ನೂ ನಿರಾಕರಿಸಲಾಗಿದೆ.

ಟೀಕಾಕಾರರ ಬಾಯಿ ಮುಚ್ಚಿದ ಹಾರ್ದಿಕ್ ಪಾಂಡ್ಯ

ಐರ್ಲೆಂಡ್ ವಿರುದ್ಧದ ಭಾರತದ ಆರಂಭಿಕ ಪಂದ್ಯದಲ್ಲಿ, ಪಾಂಡ್ಯ ತಮ್ಮ ನಾಲ್ಕು ಓವರ್​​ಗಳಲ್ಲಿ 27 ರನ್​​ಗಳಿಗೆ ಮೂರು ವಿಕೆಟ್​​ಗಳನ್ನು ಪಡೆದಿದ್ದದರು. 2024 ರ ಟಿ 20 ವಿಶ್ವಕಪ್ ಅಭಿಯಾನದಲ್ಲಿ ತಮ್ಮ ತಂಡದ ಗೆಲುವಿನ ಪ್ರಾರಂಭದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದು ಪಾಂಡ್ಯ ಮತ್ತು ಟೀಮ್ ಇಂಡಿಯಾ ಇಬ್ಬರಿಗೂ ಗಮನಾರ್ಹ ಆತ್ಮವಿಶ್ವಾಸವನ್ನು ಹೆಚ್ಚಿಸಿತು.

ಐಪಿಎಲ್ 2024 ಫಾರ್ಮ್ ಕಾರಣದಿಂದಾಗಿ ಟಿ 20 ವಿಶ್ವಕಪ್ 2024 ತಂಡದಲ್ಲಿ ಅವರನ್ನು ಸೇರಿಸುವ ಬಗ್ಗೆ ಆರಂಭಿಕ ಅನುಮಾನಗಳ ಹೊರತಾಗಿಯೂ, ಸ್ಟಾರ್ ಭಾರತೀಯ ಆಲ್ರೌಂಡರ್ ಪ್ರಸ್ತುತ ನಡೆಯುತ್ತಿರುವ ಮೆಗಾ ಐಸಿಸಿ ಈವೆಂಟ್​​ನ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ತಮ್ಮ ಪರಿಣಾಮಕಾರಿ ಪ್ರದರ್ಶನ ನೀಡುತ್ತಿದ್ದಾರೆ.

ಅವರು ಭಾರತೀಯ ಕ್ರಿಕೆಟ್ ತಂಡಕ್ಕೆ ಉತ್ತಮ ಸಮತೋಲನ ಒದಗಿಸುತ್ತಿದ್ದಾರೆ, ಪ್ಲೇಯಿಂಗ್ ಇಲೆವೆನ್​ ಸಂಯೋಜನೆಗಳಿಗೆ ಪೂರಕವಾಗಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಟಿ 20 ವಿಶ್ವಕಪ್ 2024 ಪ್ರಗತಿಯಲ್ಲಿ, ಮೆನ್ ಇನ್ ಬ್ಲೂ ಪಂದ್ಯಾವಳಿಯಲ್ಲಿ ಪಾಂಡ್ಯ ಅವರ ಅದ್ಭುತ ಫಾರ್ಮ್ ಅನ್ನು ಮುಂದುವರಿಸಲು ಇಲ್ಲಿಯವರೆಗೆ ಅವರ ಮೂರು ಇನ್ನಿಂಗ್ಸ್​ಗಳಲ್ಲಿ 7, 32, 50* ರನ್ ಬಾರಿಸಿದ್ದಾರೆ.

ಇದನ್ನೂ ಓದಿ: T20 World Cup 2024 : ದಕ್ಷಿಣ ಆಫ್ರಿಕಾ ತಂಡ ಸೆಮೀಸ್​ಗೆ, ಆತಿಥೇಯ ವಿಂಡೀಸ್ ಔಟ್​

ಬಾಂಗ್ಲಾದೇಶ ವಿರುದ್ಧ 27 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಹಾರ್ದಿಕ್ ಅವರ ಬೌಲಿಂಗ್ ಪ್ರದರ್ಶನದ ಬಗ್ಗೆ ಮಾತನಾಡುತ್ತಾ, ಭಾರತದ ಸ್ಟಾರ್ ಆಲ್ರೌಂಡರ್ ಪ್ರಸ್ತುತ ನಡೆಯುತ್ತಿರುವ ಟಿ 20 ವಿಶ್ವಕಪ್ 2024 ರಲ್ಲಿ ಇಲ್ಲಿಯವರೆಗೆ 8 ವಿಕೆಟ್​​ ಪಡೆಯುವ ಮೂಲಕ ಸ್ಥಿರವಾಗಿ ಬೌಲಿಂಗ್ ಮಾಡುತ್ತಿದ್ದಾರೆ.

ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮತ್ತು ಬೌಲಿಂಗ್​ಗೆ ಮೆಚ್ಚುಗೆ ತೋರಿದ ರಾಬಿನ್ ಉತ್ತಪ್ಪ

ಪ್ರಸ್ತುತ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಪಾಂಡ್ಯ ಅವರ ಅಸಾಧಾರಣ ಪಾತ್ರವನ್ನು ಶ್ಲಾಘಿಸಿದ ಮಾಜಿ ಬ್ಯಾಟರ್​ ರಾಬಿನ್​ ಉತ್ತಪ್ಪ, ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅವರ ಪ್ರಭಾವಶಾಲಿ ಪ್ರದರ್ಶನ ತಂಡಕ್ಕೆ ನೆರವಾಗಿದೆ ಎಂದು ಹೇಳಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ಅವರು ಎದುರಿಸಿದ ಸವಾಲುಗಳನ್ನು ಪರಿಗಣಿಸಿ ಪಾಂಡ್ಯ ಅವರ ಪ್ರಸ್ತುತ ಫಾರ್ಮ್ ಇನ್ನೂ ಗಮನಾರ್ಹ ಎಂದು ಹೇಳಿದರು.

Continue Reading
Advertisement
Virat kohli
ಪ್ರಮುಖ ಸುದ್ದಿ2 mins ago

Virat kohli : ನಿವೃತ್ತಿಯಾಗುವುದು ಉತ್ತಮ; ಕೊಹ್ಲಿ, ರೋಹಿತ್​ಗೆ ಸಲಹೆ ನೀಡಿದ ವೀರೇಂದ್ರ ಸೆಹ್ವಾಗ್​

Parliament Session 2024
ದೇಶ7 mins ago

Parliament Session 2024: ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ರಾಹುಲ್‌ ಗಾಂಧಿ ಮಾಡಿದ್ದೇನು ಗೊತ್ತಾ? ವೈರಲಾಯ್ತು ವಿಡಿಯೋ

Rahul Gandhi
ದೇಶ11 mins ago

Rahul Gandhi: ಸಂಸತ್‌ ಅಧಿವೇಶನದಲ್ಲಿ ರಾಷ್ಟ್ರಗೀತೆ ಹಾಡುವ ಕಾರ್ಯಕ್ರಮಕ್ಕೆ ರಾಹುಲ್‌ ಗಾಂಧಿ ಚಕ್ಕರ್?

Viral Video
Latest37 mins ago

Viral Video: ಶಾಪಿಂಗ್‌ ಮಾಲ್‌ನ ಆಟಿಕೆ ರೈಲು ಪಲ್ಟಿಯಾಗಿ ಬಾಲಕ ಸಾವು

Team India
ಪ್ರಮುಖ ಸುದ್ದಿ39 mins ago

Team India : ಜಿಂಬಾಬ್ವೆ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟ, ಶುಭ್​ಮನ್ ಗಿಲ್​ಗೆ ನಾಯಕತ್ವ

karnataka Weather Forecast
ಮಳೆ41 mins ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

Artificial Colours Ban
ಪ್ರಮುಖ ಸುದ್ದಿ47 mins ago

Artificial Colours Ban: ರಾಜ್ಯದಲ್ಲಿ ಚಿಕನ್‌, ಫಿಶ್‌ ಕಬಾಬ್‌ನಲ್ಲಿ ಕೃತಕ ಬಣ್ಣ ಬಳಕೆ ನಿಷೇಧ!

Divorce
ದೇಶ1 hour ago

Divorce: ತೂಕ ಇಳಿಸಿಕೊಳ್ಳಲು ನೆರವಾಗದ ‘ಜಿಮ್‌ ಟ್ರೇನರ್‌’ ಗಂಡನಿಗೆ ಮಹಿಳೆ ಡಿವೋರ್ಸ್‌!

Crush Saree Fashion
ಫ್ಯಾಷನ್1 hour ago

Crush Saree Fashion: ಸೆಲೆಬ್ರೆಟಿ ಲುಕ್‌ ನೀಡುವ ಡಿಸೈನರ್‌ ಕ್ರಶ್‌ ಸೀರೆಗಳು

ಕರ್ನಾಟಕ1 hour ago

Renuka Swamy Murder: ರೇಣುಕಾಸ್ವಾಮಿ ಹತ್ಯೆ ಕೇಸ್‌ನ 4 ಆರೋಪಿಗಳು ತುಮಕೂರು ಜೈಲಿಗೆ ಶಿಫ್ಟ್; ಕಾರಣವೇನು?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ41 mins ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ3 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ3 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ4 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌