Team India Cricket : ಆಟಗಾರರ ಗಾಯದ ಸಮಸ್ಯೆ ಪರಿಹಾರಕ್ಕೆ ಹೊಸ ಮಾರ್ಗ ಹುಡುಕಿದ ಬಿಸಿಸಿಐ! - Vistara News

ಕ್ರಿಕೆಟ್

Team India Cricket : ಆಟಗಾರರ ಗಾಯದ ಸಮಸ್ಯೆ ಪರಿಹಾರಕ್ಕೆ ಹೊಸ ಮಾರ್ಗ ಹುಡುಕಿದ ಬಿಸಿಸಿಐ!

ಕ್ರಿಕೆಟ್​ ಆಟಗಾರರ ತರಬೇತಿಯನ್ನು ಸುಧಾರಿಸಲು ಎನ್​ಸಿಎ ಆಸ್ಟ್ರೇಲಿಯನ್ ಸ್ಟ್ರೆಂತ್ ಆ್ಯಂಡ್​ ಕಂಡೀಷನಿಂಗ್ ಅಸೋಸಿಯೇಷನ್ (ಎಎಸ್ಸಿಎ) ಸಹಾಯದಿಂದ ಎಲ್ಲ ರಾಜ್ಯಗಳ ಕೋಚ್​​ಗಳಿಗೆ ತರಬೇತಿ ನೀಡಲಾಗಿದೆ.

VISTARANEWS.COM


on

Cricket Coach
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇತ್ತೀಚೆಗೆ ರಾಜ್ಯ ಘಟಕದ ತರಬೇತಿಯನ್ನು ಮೇಲ್ದರ್ಜೆಗೇರಿಸುವ ಪ್ರಯತ್ನವೊಂದನ್ನು ಮಾಡಿದೆ. ಆಟಗಾರರರ ಗಾಯದ ಸಮಸ್ಯೆ ನಿವಾರಣೆ ಹೊಸ ಪ್ರಯೋಗವೊಂದನ್ನು ಮಾಡಿದೆ. ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್​ಸಿಎ) ಮತ್ತು ಆಸ್ಟ್ರೇಲಿಯನ್ ಸ್ಟ್ರೆಂಥ್​ ಆ್ಯಂಡ್​ ಕಂಡೀಷನಿಂಗ್ ಅಸೋಸಿಯೇಷನ್ (ಎಎಸ್​ಸಿಎ) ಸಹಯೋಗದೊಂದಿಗೆ ಈ ಪರೀಕ್ಷೆಯನ್ನು ನಡೆಸಲಾಗಿದೆ. ಅಂದರೆ 114 ಸ್ಟ್ರೆಂಥ್ ಆ್ಯಂಡ್ ಕಂಡಿಷನ್​ ಕೋಚ್​ಗಳಿಗೆ ತರಬೇತಿ ನೀಡಲಾಗಿದೆ. ಇದೇ ವೇಳೆ ನಿತಿನ್ ಪಟೇಲ್ ನೇತೃತ್ವದ ಎನ್​​ಸಿಎ ಕ್ರೀಡಾ ವಿಜ್ಞಾನ ವಿಭಾಗ ರಾಜ್ಯಗಳು ಅನುಸರಿಸಬೇಕಾದ ಏಕರೂಪದ ತರಬೇತಿ (ಎಸ್ & ಸಿ) ಮಾಡ್ಯೂಲ್ ಅನ್ನು ರೂಪಿಸಲು ಮುಂದಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಇತ್ತೀಚೆಗೆ ಹೇಳಿದ್ದಾರೆ.

ಭಾರತ ತಂಡದ ಆಟಗಾರರು ಪದೇಪದೆ ಗಾಯಗೊಳ್ಳುತ್ತಿದ್ದಾರೆ. ಅವರು ಪ್ರಮುಖ ಟೂರ್ನಿಗಳಿಗೆ ಲಭ್ಯವಾಗುತ್ತಿಲ್ಲ. ಅದಕ್ಕೆ ಪರಿಹಾರ ಎಂಬಂತೆ ಬಿಸಿಸಿಐ ಎಎಸ್ಸಿಎ ಕ್ರಿಕೆಟ್ ಸ್ಪೆಸಿಫಿಕ್ ಸ್ಟ್ರೆಂತ್ & ಕಂಡೀಷನಿಂಗ್ ಕೋರ್ಸ್ ಎಂಬ ಹೊಸ ಯೋಜನೆಯನ್ನು ಹುಟ್ಟು ಹಾಕಿದೆ ಬಿಸಿಸಿದೆ. ಈ ತರಬೇತಿ ಮುಗಿದವರನ್ನು ಭಾರತ ತಂಡದ ತರಬೇತುದಾರರನ್ನಾಗಿ ಆಯ್ಕೆ ಮಾಡಿಕೊಳ್ಳುವುದೇ ಇದರ ಉದ್ದೇಶವಾಗಿದೆ. ಆಟಗಾರರು ಹೆಚ್ಚು ಗಾಯಕ್ಕೆ ಒಳಗಾಗದಂತೆ ನೋಡಿಕೊಳ್ಳುವ ಉದ್ದೇಶವನ್ನೂ ಹೊಂದಲಾಗಿದೆ. ಅಂದರೆ ಪ್ರತಿಯೊಬ್ಬ ಆಟಗಾರನಿಗೂ ತಂಡ ಸೇರ್ಪಡೆಗೊಳ್ಳುವ ಮೊದಲು ಕೆಲವೊಂದು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಆಟಗಾರರು ಲೆವೆಲ್ 1 ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ, ಶೇಕಡಾ 75 ರಷ್ಟು ಅಂಕಗಳನ್ನು ಪಡೆದವರು ಮಾತ್ರ ಲೆವೆಲ್ 2 ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ ಎಂಬುದು ಬಿಸಿಸಿಐ ಹೊಸ ಯೋಜನೆಯಾಗಿದೆ. ಅದಕ್ಕಾಗಿ ಸ್ಟ್ರೆಂಥ್ ಆ್ಯಂಡ್ ಕಂಡೀಷನಿಂಗ್ ಕೋಚ್​​ಗಳಿಗೆ ತರಬೇತಿ ನೀಡಲಾಗಿದೆ.

ಈ ತರಬೇತುದಾರರಲ್ಲಿ ಹೆಚ್ಚಿನವರು ಈಗಾಗಲೇ ವಿವಿಧ ಪ್ರಥಮ ದರ್ಜೆ ತಂಡಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಹೀಗಾಗಿ ಮೂಲದಲ್ಲಿಯೇ ಆಟಗಾರರ ಸದೃಢತೆಯ ಪತ್ತೆಗೆ ಮುಂದಾಗಿದೆ ಬಿಸಿಸಿಐ. ಈ ತರಬೇತಿ ಪಡೆದ 15 ಜನರಲ್ಲಿ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ತರಬೇತುದಾರ ಯುವರಾಜ್ ಸಾಲ್ವಿ, ಹಿಮಾಚಲ ಪ್ರದೇಶದ ಸಿಎಯ ರಜನೇಶ್ ಮೆಹ್ತಾ ಮತ್ತು ಜರ್ನಾಲ್ ಸಿಂಗ್, ಸಿಎಬಿಯ ಸಂಜೀವ್ ದಾಸ್, ಎಂಸಿಎಯ ತನುಜಾ ಲೆಲೆ, ನಾಗಾಲ್ಯಾಂಡ್​ನ ಶೈಲಾ ಆಲಂ ಮತ್ತು ರೈಲ್ವೆಯ ಕವಿತಾ ಪಟೇಲ್ ಶೇಕಡಾ ಅವರಿದ್ದಾರೆ. ಅವರೆಲ್ಲರೂ ಪರೀಕ್ಷೆಯಲ್ಲಿ ಶೇಕಡಾ 75ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.

ಇದನ್ನೂ ಓದಿ : World Cup 2023 : ಪಾಕ್​ ತಂಡಕ್ಕೆ ಇನ್ನೂ ಅಭದ್ರತೆ; ಪರಿಶೀಲನೆಗೆ ಬರುತ್ತದಂತೆ ನಿಯೋಗ!

ಎನ್​ಸಿಎ ಈ ಉನ್ನತ ಕೌಶಲ್ಯ ಉಪಕ್ರಮಕ್ಕಾಗಿ ಪ್ರತಿ ರಾಜ್ಯ ಘಟಕಕ್ಕೆ ಸಂಬಂಧಿಸಿದ ಇಬ್ಬರು ಪುರುಷರು ಮತ್ತು ಒಬ್ಬ ಮಹಿಳಾ ಎಸ್ & ಸಿ ತರಬೇತುದಾರರನ್ನು ಕರೆಸಿದೆ ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ. ಮೂರು ದಿನಗಳ ಕಾರ್ಯಾಗಾರದೊಂದಿಗೆ ತರಬೇತಿ ಆರಂಭಗೊಂಡಿತ್ತು. ಪ್ರತಿಯೊಬ್ಬರೂ ನಾಲ್ಕು ವಿಭಿನ್ನ ಬ್ಯಾಚ್​ಗಳಲ್ಲಿ ತರಬೇತಿ ಪಡೆದುಕೊಂಡಿದ್ದಾರೆ.

ಪೀರಿಯಡಿಸೇಷನ್​, ಪ್ರೋಗ್ರಾಂ ಡಿಸೈನ್, ಅಗತ್ಯಗಳ ವಿಶ್ಲೇಷಣೆ, ಆಟಕ್ಕೆ ಮರಳುವುದು ಮುಂತಾದ ವಿಷಯಗಳು ಕುರಿತು ತರಬೇತಿ ನಡೆಯಿತು. ಆಧುನಿಕ ದಿನದ ಕ್ರಿಕೆಟ್ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಚರ್ಚಿಸಲಾಗಿದೆ ಕಾರ್ಯಾಗಾರದ ನಂತರ ಪ್ರತಿ ಮಾರ್ಗದರ್ಶಕರಿಗೆ ಪ್ರಾಕ್ಟಿಕಲ್ ತರಬೇತಿ ನಡೆಯಿತು. ಜೂನ್​ ಬೆಂಗಳೂರಿ ಆಲೂರು ಕ್ರಿಕೆಟ್ ಕ್ರೀಡಾಂಗಣದಲ್ಲಿ ಥಿಯರಿ ಮತ್ತು ಪ್ರಾಕ್ಟಿಕಲ್ ಪರೀಕ್ಷೆ ನಡೆಯಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

LPL 2024 : ಐಪಿಎಲ್ ಎಫೆಕ್ಟ್​, ಸಿಕ್ಕಾಪಟ್ಟೆ ದುಡ್ಡು ಬಾಚಿದ ಮಹೀಶ್ ಪತಿರಾನಾ

LPL 2024: ಐಪಿಎಲ್​​ನಲ್ಲಿ ವೀರೋಚಿತ ಪ್ರದರ್ಶನ ನೀಡಿದ ನಂತರ ಮಥೀಶಾ ಪಥಿರಾನಾ ಟಿ 20 ಕ್ರಿಕೆಟ್​ನಲ್ಲಿ ಅತ್ಯಂತ ಜನಪ್ರಿಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಅವರು 2022 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್​​ ಪರ ಸಹಿ ಹಾಕಿದರು ಮತ್ತು ಅಂದಿನಿಂದ ಆ ತಂಡದಲ್ಲೇ ಇದ್ದಾರೆ.

VISTARANEWS.COM


on

LPL 2024
Koo

ಕೊಲಂಬೊ: ಶ್ರೀಲಂಕಾದ ಸ್ಟಾರ್ ಆಟಗಾರ ಮಥೀಶಾ ಪಥಿರಾನಾ ಅವರು ಲಂಕಾ ಪ್ರೀಮಿಯರ್ ಲೀಗ್ (LPL 2024) ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೊಲಂಬೊ ಮೂಲದ ತಂಡವು ಬಲಗೈ ವೇಗಿಯನ್ನು 120,000 ಯುಎಸ್ ಡಾಲರ್​ (1 ಕೋಟಿ ರೂಪಾಯಿ) ಒಪ್ಪಂದ ಮಾಡಿಕೊಂಡಿದೆ. ಅವರು ಹರಾಜು ಪಟ್ಟಿಯ ಅತಿದೊಡ್ಡ ಹೆಸರುಗಳಲ್ಲಿ ಒಬ್ಬರಾಗಿದ್ದರು. ಕೊಲಂಬೊ ಸ್ಟ್ರೈಕರ್ಸ್ ಅವರನ್ನು ರೈಟ್ ಟು ಮ್ಯಾಚ್ ಕಾರ್ಡ್ ಮೂಲಕ ಮರು ಸಹಿ ಮಾಡುವ ಮೊದಲು ಹಲವಾರು ತಂಡಗಳು ಅವರನ್ನು ತೆಕ್ಕೆಗೆ ತೆಗೆದುಕೊಳ್ಳುವುದಕ್ಕೆ ಅತ್ಯುತ್ತಮ ಪ್ರಯತ್ನ ಮಾಡಿದವು. ಇದಕ್ಕೆಲ್ಲ ಕಾರಣ ಅವರು ಐಪಿಎಲ್​ನ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪರ ಮಿಂಚಿದ್ದು.

ಮಥೀಶಾ ಪತಿರಾನಾ ಅವರ ಮೂಲ ಬೆಲೆ 50,000 ಯುಎಸ್ ಡಾಲರ್ ಮತ್ತು ಡಂಬುಲ್ಲಾ ಥಂಡರ್ 70,000 ಯುಎಸ್ ಡಾಲರ್ ಗೆ ಬಿಡ್ಡಿಂಗ್ ಪ್ರಾರಂಭಿಸಿತು. ಗಾಲೆ ಮಾರ್ವೆಲ್ಸ್ ಶೀಘ್ರದಲ್ಲೇ ರೇಸ್​​ಗೆ ಸೇರಿಕೊಂಡಿತು ಮತ್ತು ವೇಗಿಯ ಬೆಲೆಯನ್ನು ಯುಎಸ್ 100,000 ಡಾಲರ್​ಗೆ ಕೊಂಡೊಯ್ಯುವ ಮೂಲಕ ಎಲ್​ಪಿಎಲ್​ ದಾಖಲೆ ಮುರಿದರು. ಕೊಲಂಬೊ ಸ್ಟ್ರೈಕರ್ಸ್ ಪಂದ್ಯದ ಹಕ್ಕನ್ನು ಚಲಾಯಿಸಿದರು. ಎಲ್ಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎಂಬ ದಾಖಲೆಯನ್ನು ಈ ಹಿಂದೆ ಶ್ರೀಲಂಕಾದ ವೇಗಿ ದಿಲ್ಶಾನ್ ಮಧುಶಂಕಾ ಹೊಂದಿದ್ದರು. ಎಡಗೈ ವೇಗಿಯನ್ನು ಕಳೆದ ಹರಾಜಿನಲ್ಲಿ ಜಾಫ್ನಾ ಕಿಂಗ್ಸ್ 92,000 ಯುಎಸ್ ಡಾಲರ್​ಗೆ ಸೇಲ್​ ಆಗಿದ್ದರು.

ಐಪಿಎಲ್​ನಲ್ಲಿ ಮಿಂಚಿದ ಮಥೀಶಾ ಪತಿರಾನಾ

ಐಪಿಎಲ್​​ನಲ್ಲಿ ವೀರೋಚಿತ ಪ್ರದರ್ಶನ ನೀಡಿದ ನಂತರ ಮಥೀಶಾ ಪಥಿರಾನಾ ಟಿ 20 ಕ್ರಿಕೆಟ್​ನಲ್ಲಿ ಅತ್ಯಂತ ಜನಪ್ರಿಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಅವರು 2022 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್​​ ಪರ ಸಹಿ ಹಾಕಿದರು ಮತ್ತು ಅಂದಿನಿಂದ ಆ ತಂಡದಲ್ಲೇ ಇದ್ದಾರೆ. 2022 ರಲ್ಲಿ, ಅವರು ಕೇವಲ ಎರಡು ಪಂದ್ಯಗಳನ್ನು ಆಡಿದರು ಮತ್ತು ಅಂತಿಮವಾಗಿ ಕಳೆದ ವರ್ಷ ಐಪಿಎಲ್​​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.

ಇದನ್ನೂ ಓದಿ: IPL 2024 : ಕೆಕೆಆರ್​ 4ನೇ ಬಾರಿ ಐಪಿಎಲ್​​ನ​ ಫೈನಲ್​ಗೆ, ಎಸ್ಆರ್​ಎಚ್​ಗೆ ಇನ್ನೊಂದು ಅವಕಾಶ

12 ಪಂದ್ಯಗಳನ್ನಾಡಿರುವ ಮಥೀಶಾ ಪಥಿರಾನಾ 19 ವಿಕೆಟ್ ಕಬಳಿಸಿ ಸಿಎಸ್​ಕೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ತಮ್ಮ ವಿಕೆಟ್ ತೆಗೆದುಕೊಳ್ಳುವ ಸಾಮರ್ಥ್ಯದಿಂದ ಮಾತ್ರವಲ್ಲದೆ ಎಕನಾಮಿಕಲ್​ ಸ್ಪೆಲ್​ಗಳನ್ನು ಎಸೆಯುವ ಸಾಮರ್ಥ್ಯದಿಂದ ಎಲ್ಲರನ್ನೂ ಆಕರ್ಷಿಸಿದ್ದರು. 21 ವರ್ಷದ ಆಟಗಾರ ಪ್ರಸಕ್ತ ಋತುವಿನಲ್ಲಿಯೂ ಉತ್ತಮ ಫಾರ್ಮ್​ನಲ್ಲಿದ್ದರು. ಆದರೆ, ಅವರಿಗೆ ಗಾಯದ ಸಮಸ್ಯೆ ಬಾಧಿಸಿತ್ತು.

ಸ್ನಾಯುಸೆಳೆತದ ಗಾಯದಿಂದಾಗಿ ಹೊರಗುಳಿಯುವ ಮೊದಲು ಅವರು ಐಪಿಎಲ್ 2024 ರಲ್ಲಿ ಕೇವಲ ಆರು ಪಂದ್ಯಗಳನ್ನು ಆಡಲು ಸಾಧ್ಯವಾಯಿತು. ಆ 6 ಪಂದ್ಯಗಳಲ್ಲಿ, ಪಥಿರಾನಾ 8 ಕ್ಕಿಂತ ಕಡಿಮೆ ಎಕಾನಮಿ ರೇಟ್ ಕಾಯ್ದುಕೊಂಡು 13 ವಿಕೆಟ್​​ಗಳನ್ನು ಪಡೆದರು. ಮುಂಬರುವ ಐಪಿಎಲ್ ಮೆಗಾ ಹರಾಜಿಗೆ ಮುಂಚಿತವಾಗಿ ಅವರನ್ನು ಸಿಎಸ್​ಕೆ ಉಳಿಸಿಕೊಳ್ಳುವ ಸಾಧ್ಯತೆಯಿದೆ.

Continue Reading

ಕ್ರೀಡೆ

IPL 2024 : ಕೆಕೆಆರ್​ 4ನೇ ಬಾರಿ ಐಪಿಎಲ್​​ನ​ ಫೈನಲ್​ಗೆ, ಎಸ್ಆರ್​ಎಚ್​ಗೆ ಇನ್ನೊಂದು ಅವಕಾಶ

IPL 2024: ಟಾಸ್ ಗೆದ್ದ ಎಸ್​ಆರ್​ಎಚ್​ ತಂಡ ಮೊದಲ ಬ್ಯಾಟ್​ ಮಾಡಲು ನಿರ್ಧರಿಸಿತು. ಆದರೆ, ಕೆಕೆಆರ್ ತಂಡದ ಪ್ರಚಂಡ ಬೌಲಿಂಗ್ ಮುಂದೆ ಎಸ್​ಆರ್​​ಎಚ್ ಬ್ಯಾಟರ್​ಗಳು ತಲೆ ಬಾಗಿ 19.3 ಓವರ್​ಗಳಲ್ಲಿ 159 ರನ್​ಗಳಿಗೆ ಆಲ್​ಔಟ್​ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಕೆಕೆಆರ್​ ತಂಡ ಕೇವಲ 13.4 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 162 ರನ್ ಬಾರಿಸಿ ಗೆಲುವು ಸಾಧಿಸಿತು.

VISTARANEWS.COM


on

IPL 2024
Koo

ಅಹಮದಾಬಾದ್​​: ಮಿಚೆಲ್​ ಸ್ಟಾರ್ಕ್​ (4 ವಿಕೆಟ್​ 34ರನ್​​ ) ಅವರ ಮಾರಕ ಬೌಲಿಂಗ್ ಹಾಗೂ ಶ್ರೇಯಸ್​ ಅಯ್ಯರ್​ (58 ರನ್​ 24 ಎಸೆತ), ವೆಂಕಟೇಶ್​ ಅಯ್ಯರ್ (51 ರನ್​ 28 ಎಸೆತ) ಜೋಡಿಯ ಅರ್ಧ ಶತಕಗಳ ನೆರವು ಪಡೆದ ಕೋಲ್ಕೊತಾ ನೈಟ್​ ರೈಡರ್ಸ್ ತಂಡ ಐಪಿಎಲ್​ 17ನೇ ಆವೃತ್ತಿಯ (IPL 2024) ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್​ ರೈಸರ್ಸ್​ ಹೈದರಾಬಾದ್ ತಂಡದ ವಿರುದ್ಧ ಅಮೋಘ 8 ವಿಕೆಟ್​ಗಳ ಗೆಲುವು ಸಾಧಿಸಿದೆ. ಇದರೊಂದಿಗೆ ಕೋಲ್ಕೊತಾ ಮೂಲದ ತಂಡ ಐಪಿಎಲ್​​ನಲ್ಲಿ ನಾಲ್ಕನೇ ಬಾರಿ ಫೈನಲ್​ಗೆ ಪ್ರವೇಶ ಮಾಡಿದೆ. ಈ ಹಿಂದೆ ಮೂರು ಬಾರಿ ಪ್ರವೇಶಿಸಿ ಎರಡು ಬಾರಿ ಟ್ರೋಫಿ ಗೆದ್ದಿತ್ತು. ಒಂದು ಬಾರಿ ವೈಫಲ್ಯ ಕಂಡಿತ್ತು.

ಈ ಪಂದ್ಯದಲ್ಲಿ ಸೋಲು ಕಂಡಿರುವ ಎಸ್​ಆರ್​ಎಚ್ ತಂಡಕ್ಕೆ ಎಲಿಮಿನೇಟರ್​ ಪಂದ್ಯದ ವಿಜೇತರ ವಿರುದ್ಧ ಮತ್ತೊಂದು ಪಂದ್ಯವಾಡುವ ಅವಕಾಶವಿದೆ. ಅಲ್ಲಿ ಗೆದ್ದರೆ ಫೈನಲ್​ಗೆ ಫೈನಲ್​ಗೆ ಪ್ರವೇಶ ಮಾಡಬಹುದು. ಆದಾಗ್ಯೂ ಈ ಪಂದ್ಯವು ಸಂಪೂರ್ಣವಾಗಿ ಏಕಮುಖವಾಗಿತ್ತು. ಎಸ್​ಆರ್​ಎಚ್​​ ಈ ಪಂದ್ಯದಲ್ಲಿ ಗೆದ್ದಿರುವುದು ಕೇವಲ ಟಾಸ್​ ಮಾತ್ರ. ಉಳಿದೆಲ್ಲ ಕ್ಷಣಗಳು ಕೆಕೆಆರ್​ ಪರವಾಗಿದ್ದವು.

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಎಸ್​ಆರ್​ಎಚ್​ ತಂಡ ಮೊದಲ ಬ್ಯಾಟ್​ ಮಾಡಲು ನಿರ್ಧರಿಸಿತು. ಆದರೆ, ಕೆಕೆಆರ್ ತಂಡದ ಪ್ರಚಂಡ ಬೌಲಿಂಗ್ ಮುಂದೆ ಎಸ್​ಆರ್​​ಎಚ್ ಬ್ಯಾಟರ್​ಗಳು ತಲೆ ಬಾಗಿ 19.3 ಓವರ್​ಗಳಲ್ಲಿ 159 ರನ್​ಗಳಿಗೆ ಆಲ್​ಔಟ್​ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಕೆಕೆಆರ್​ ತಂಡ ಕೇವಲ 13.4 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 162 ರನ್ ಬಾರಿಸಿ ಗೆಲುವು ಸಾಧಿಸಿತು.

ಇದನ್ನೂ ಓದಿ: IPL 2024 : ರನ್​ ಔಟ್​​ ಆಗಿದ್ದಕ್ಕೆ ಸಿಟ್ಟಿಗೆದ್ದ ಕಾವ್ಯಾ ಮಾರನ್​, ಕಣ್ಣೀರು ಹಾಕಿದ ರಾಹುಲ್ ತ್ರಿಪಾಠಿ

ಭರ್ಜರಿ ಬ್ಯಾಟಿಂಗ್​

ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಲು ಹೊರಟ ಕೆಕೆಆರ್​ಗೆ ಉತ್ತಮ ಆರಂಭ ದೊರಕಿತು. ರಹ್ಮನುಲ್ಲಾ ಗುರ್ಬಾಜ್​ 23 ರನ್ ಬಾರಿಸಿದರೆ ಸುನೀಲ್​ ನರೈನ್​ 21 ರನ್​ ಬಾರಿಸಿದರು. ಹೀಗಾಗಿ ಮೊದಲ ವಿಕೆಟ್​​ಗೆ 41 ರನ್ ದೊರಕಿತು. ಬಳಿಕ ಬಂದ ವೆಂಕಟೇಶ್ ಅಯ್ಯರ್​ ಎಸ್​ಆರ್​ಎಚ್​ ಬೌಲರ್​ಗಳಿಗೆ ಚೇತರಿಸಿಕೊಳ್ಳಲು ಅವಕಾಶ ಕೊಡಲಿಲ್ಲ. 5 ಫೋರ್​ ಮತ್ತು 4 ಸಿಕ್ಸರ್ ಸಮೇತ ಅಜೇಯ 51 ರನ್ ಬಾರಿಸಿದರು. ಬಳಿಕ ಬಂದ ನಾಯಕ ಶ್ರೇಯಸ್​ ಅಯ್ಯರ್​ 5 ಫೋರ್ 4 ಸಿಕ್ಸರ್ ಸಮೇತ 5 ಅಜೇಯ 58 ರನ್ ಬಾರಿಸಿ ಪಂದ್ಯ ಬೇಗ ಮುಗಿಯುವಂತೆ ನೋಡಿಕೊಂಡರು.

ಬ್ಯಾಟಿಂಗ್ ವೈಫಲ್ಯ

ಮೊದಲು ಬ್ಯಾಟ್ ಮಾಡಲು ಮುಂದಾದ ಎಸ್​ಆರ್​ಎಚ್ ತಂಡಕ್ಕೆ ಆಸೀಸ್​ ವೇಗಿ ಸ್ಟಾರ್ಕ್​ ಆಘಾತ ಕೊಟ್ಟರು. ಹೊಡೆಬಡಿಯ ಬ್ಯಾಟರ್ ಟ್ರಾವಿಸ್​ ಹೆಡ್​ ಶೂನ್ಯಕ್ಕೆ ಪೆವಿಲಿಯನ್​ಗೆ ಸಾಗುವಂತೆ ಅವರು ಮಾಡಿದರು. ಅಭಿಷೇಕ್ ಶರ್ಮಾ 3 ವಿಕೆಟ್​ಗೆ ಔಟಾಗುವುದರೊಂದಿಗೆ ತಂಡದ ವಿಕೆಟ್​ ಪತನದ ಕತೆ ಶುರುವಾಯಿತು. ನಿತಿಶ್ ಕುಮಾರ್​ 9 ರನ್​ಗೆ ಔಟಾದರೆ ಶಹಬಾಜ್​ ಅಹಮದ್​ ಡಕ್​ಔಟ್ ಆದರು. ರಾಹುಲ್ ತ್ರಿಪಾಠಿ (55 ರನ್​) ಅರ್ಧ ಶತಕ ಬಾರಿಸಿ ತಂಡಕ್ಕೆ ನೆರವಾಗಲು ಯತ್ನಿಸಿದರೂ ಅವರು ಪ್ರಯತ್ನ ಕೈಗೂಡಲಿಲ್ಲ. ಕ್ಲಾಸೆನ್​ 32 ರನ್ ಬಾರಿಸಿ ಔಟಾದರು. ಕೊನೆಯಲ್ಲಿ ನಾಯಕ ಪ್ಯಾಟ್ ಕಮಿನ್ಸ್​ 30 ರನ್​ ಬಾರಿಸುವ ಮೂಲಕ ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾದರು. ಆದಾಗ್ಯೂ ದೈತ್ಯ ಕೆಕೆಆರ್​ಗೆ ಆ ರನ್ ಸವಾಲಾಗಲೇ ಇಲ್ಲ.

Continue Reading

ಕ್ರೀಡೆ

IPL 2024 : ರನ್​ ಔಟ್​​ ಆಗಿದ್ದಕ್ಕೆ ಸಿಟ್ಟಿಗೆದ್ದ ಕಾವ್ಯಾ ಮಾರನ್​, ಕಣ್ಣೀರು ಹಾಕಿದ ರಾಹುಲ್ ತ್ರಿಪಾಠಿ

IPL 2024: 11ನೇ ಓವರ್​ನಲ್ಲಿ ಕ್ಲಾಸೆನ್ ಔಟಾದಾಗ ಎಸ್ಆರ್​ಎಚ್​ 5 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿತ್ತು. ಇನ್ನೂ ಒಂಬತ್ತು ಓವರ್​ಗಳು ಬಾಕಿ ಇರುವಾಗ ಮತ್ತು ಮಧ್ಯದಲ್ಲಿ ರಾಹುಲ್ ತ್ರಿಪಾಠಿ ಉತ್ತಮವಾಗಿ ಸೆಟ್ ಆಗಿರುವುದರಿಂದ, ಎಸ್ಆರ್​ಎಚ್​​ ಉತ್ತಮ ಮೊತ್ತ ದಾಖಲಿಸಲು ಸಜ್ಜಾಗಿತ್ತು. ಆದಾಗ್ಯೂ, 14 ನೇ ಓವರ್​ನಲ್ಲಿ ತ್ರಿಪಾಠಿ ಮತ್ತು ಅಬ್ದುಲ್ ಸಮದ್ ನಡುವಿನ ತಪ್ಪು ಸಂವಹನವು ವಿಕೆಟ್​ ಪತನಕ್ಕೆ ಕಾರಣವಾಯಿತು.

VISTARANEWS.COM


on

IPL 2024
Koo

ಅಹಮದಾಬಾದ್​​: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಸನ್​ರೈಸರ್ಸ್​​ ಹೈದರಾಬಾದ್​ (Sunrisers Hyderabad) ತಂಡಗಳ ನಡುವಿನ ಐಪಿಎಲ್ 2024 ರ (IPL 2024) ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಹುಲ್ ತ್ರಿಪಾಠಿ ರನೌಟ್ ಆದ ವೇಳೆ ಎಸ್​ಆರ್​ಎಚ್​ ತಂಡದೊಳಗೆ ತಲ್ಲಣಗಳೇ ಉಂಟಾಯಿತು. ತಂಡದ ಮಾಲಕಿ ಕಾವ್ಯಾ ಮಾರನ್ ಸಿಟ್ಟಿಗೆದ್ದು ಕೂಗಾಡಿದರೆ, ರನ್​ಔಟ್​ ಆದ ರಾಹುಲ್ ತ್ರಿಪಾಠಿ ಕಣ್ಣೀರು ಹಾಕಿದರು. ತ್ರಿಪಾಠಿ ಔಟ್ ಆಗಿರುವುದು ಎಸ್​ಆರ್​ಎಚ್​ ತಂಡದ ಕುಸಿತಕ್ಕೆ ಕಾರಣವಾಯಿತು.

ಬಲಗೈ ಬ್ಯಾಟರ್​ ಹೋರಾಟದ ಅರ್ಧಶತಕವನ್ನು ಗಳಿಸಿದ್ದರು ಮತ್ತು 14 ನೇ ಓವರ್​ನಲ್ಲಿ ಅವರ ಭರವಸೆಗಳು ಭಗ್ನಗೊಳ್ಳುವ ಮೊದಲು ಎಸ್ಆರ್​​ಎಚ್​ ತಂಡವನ್ನು ದೊಡ್ಡ ಮೊತ್ತಕ್ಕೆ ಏರಿಸುವ ಗುರಿ ಹೊಂದಿದ್ದರು. ಮಿಚೆಲ್ ಸ್ಟಾರ್ಕ್ ಟ್ರಾವಿಸ್ ಹೆಡ್ ಅವರನ್ನು ಡಕ್ ಔಟ್ ಮಾಡಿದ ನಂತರ ರಾಹುಲ್ ತ್ರಿಪಾಠಿ ಮೊದಲ ಓವರ್​ನಲ್ಲಿ ಬ್ಯಾಟಿಂಗ್​ಗೆ ಇಳಿದಿದ್ದರು. ಎರಡನೇ ಓವರ್​ನಲ್ಲಿ ವೈಭವ್ ಅರೋರಾ ಅಭಿಷೇಕ್ ಶರ್ಮಾ ಅವರನ್ನು ಔಟ್ ಮಾಡುವ ಮೂಲಕ ಎಸ್ಆರ್​ಎಚ್​​ 2 ವಿಕೆಟ್ ನಷ್ಟಕ್ಕೆ 13 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು.

ಪವರ್ ಪ್ಲೇ ಅಂತ್ಯಗೊಳ್ಳುವ ಮುನ್ನ ಎಸ್ ಆರ್ ಎಚ್ ಇನ್ನೂ ಎರಡು ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಸ್ಟಾರ್ಕ್ ನಿತೀಶ್ ರೆಡ್ಡಿ ಮತ್ತು ಶಹಬಾಜ್ ಅಹ್ಮದ್ ಅವರನ್ನು ಸತತ ಎಸೆತಗಳಲ್ಲಿ ಔಟ್ ಮಾಡಿ ಹೈದರಾಬಾದ್ ಮೂಲದ ತಂಡವನ್ನು 4 ವಿಕೆಟ್ ನಷ್ಟಕ್ಕೆ 39 ಕ್ಕೆ ಇಳಿಸಿದರು. ನಂತರ ರಾಹುಲ್ ತ್ರಿಪಾಠಿ ಮತ್ತು ಹೆನ್ರಿಚ್​ ಕ್ಲಾಸೆನ್ ಐದನೇ ವಿಕೆಟ್​ಗೆ 62 ರನ್​ಗಳನ್ನು ಸೇರಿಸುವ ಮೂಲಕ ಉತ್ತಮ ಮೊತ್ತಕ್ಕೆ ಅಡಿಪಾಯ ಹಾಕಿದರು.

11ನೇ ಓವರ್​ನಲ್ಲಿ ಕ್ಲಾಸೆನ್ ಔಟಾದಾಗ ಎಸ್ಆರ್​ಎಚ್​ 5 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿತ್ತು. ಇನ್ನೂ ಒಂಬತ್ತು ಓವರ್​ಗಳು ಬಾಕಿ ಇರುವಾಗ ಮತ್ತು ಮಧ್ಯದಲ್ಲಿ ರಾಹುಲ್ ತ್ರಿಪಾಠಿ ಉತ್ತಮವಾಗಿ ಸೆಟ್ ಆಗಿರುವುದರಿಂದ, ಎಸ್ಆರ್​ಎಚ್​​ ಉತ್ತಮ ಮೊತ್ತ ದಾಖಲಿಸಲು ಸಜ್ಜಾಗಿತ್ತು. ಆದಾಗ್ಯೂ, 14 ನೇ ಓವರ್​ನಲ್ಲಿ ತ್ರಿಪಾಠಿ ಮತ್ತು ಅಬ್ದುಲ್ ಸಮದ್ ನಡುವಿನ ತಪ್ಪು ಸಂವಹನವು ವಿಕೆಟ್​ ಪತನಕ್ಕೆ ಕಾರಣವಾಯಿತು.

ಸುನಿಲ್ ನರೈನ್ ಎಸೆದ ಓವರ್​ನ ಎರಡನೇ ಎಸೆತದಲ್ಲಿ ಸಮದ್ ಆಂಡ್ರೆ ರಸೆಲ್ ಅವರ ಕಡೆಗೆ ಚೆಂಡನ್ನು ಹೊಡೆದರು. ಕೆಕೆಆರ್ ಆಲ್ರೌಂಡರ್ ಉತ್ತಮ ಡೈವಿಂಗ್ ಮಾಡಿ ಚೆಂಡು ತಡೆದರು. ತ್ರಿಪಾಠಿ ಚೆಂಡನ್ನು ನೋಡುತ್ತಿರುವಾಗ ಸಮದ್ ಏಕಾಂಗಿಯಾಗಿ ಹೊರಟರು. ರಸೆಲ್ ಎದ್ದು ನಿಂತು ವಿಕೆಟ್ ಕೀಪರ್ ರಹಮಾನುಲ್ಲಾ ಗುರ್ಬಾಜ್ ಗೆ ಚೆಂಡನ್ನು ಎಸೆದಾಗ ತ್ರಿಪಾಠಿ ಪಿಚ್ ನ ಮಧ್ಯದಲ್ಲಿ ಸಿಲುಕಿಕೊಂಡರು. ಎಸ್ ಆರ್ ಎಚ್ ಸಿಇಒ ಕಾವ್ಯಾ ಮಾರನ್ ಅವರು ತ್ರಿಪಾಠಿ ಅವರ ರನ್ ಔಟ್ ಅನ್ನು ನೋಡಿ ಕೋಪಗೊಂಡರು.

ಇದನ್ನೂ ಓದಿ: IPL 2024 : ಮುಂಬೈ ಕಳಪೆ ಪ್ರದರ್ಶನಕ್ಕೆ ಪಾಂಡ್ಯ ಅಲ್ಲ ರೋಹಿತ್​ ಕಾರಣ ಎಂದ ಹರ್ಭಜನ್ ಸಿಂಗ್​

ಬಲಗೈ ಬ್ಯಾಟ್ಸ್ಮನ್ ತಮ್ಮ ಮಾಜಿ ತಂಡದ ವಿರುದ್ಧ 35 ಎಸೆತಗಳಲ್ಲಿ 55 ರನ್ ಗಳಿಸಿದ ನಂತರ ನಿರ್ಗಮಿಸಿದರು. ಔಟಾದ ನಂತರ, ಬೇಸರಗೊಂಡ ರಾಹುಲ್ ಮೆಟ್ಟಿಲುಗಳ ಬಳಿ ಮೊಣಕಾಲಿನ ಮೇಲೆ ತಲೆಯಿಟ್ಟು ಕುಳಿತು, ತನ್ನ ವಜಾದ ಬಗ್ಗೆ ಅಳುತ್ತಿರುವುದು ಕಂಡುಬಂದಿದೆ.

Continue Reading

ಪ್ರಮುಖ ಸುದ್ದಿ

IPL 2024 : ಮುಂಬೈ ಕಳಪೆ ಪ್ರದರ್ಶನಕ್ಕೆ ಪಾಂಡ್ಯ ಅಲ್ಲ ರೋಹಿತ್​ ಕಾರಣ ಎಂದ ಹರ್ಭಜನ್ ಸಿಂಗ್​

IPL 2024: ಮುಂಬೈ ಇಂಡಿಯನ್ಸ್​ ದೊಡ್ಡ ಬಳಗವನ್ನು ಹೊಂದಿದೆ. ನಾನು ಆ ತಂಡಕ್ಕೆ ಆಡಿದ್ದೇನೆ. ಮ್ಯಾನೇಜ್ಮೆಂಟ್ ಉತ್ತಮವಾಗಿದೆ. ತಂಡವನ್ನು ಉತ್ತಮವಾಗಿ ನಡೆಸುತ್ತದೆ. ಆದರೆ ಈ ನಿರ್ಧಾರವು ಹಿನ್ನಡೆಯನ್ನುಂಟು ಮಾಡಿದೆ. ಬಹುಶಃ ಭವಿಷ್ಯವನ್ನು ಹುಡುಕುವ ಆಲೋಚನೆ ಇತ್ತು. ಅವರು ಒಗ್ಗಟ್ಟಾಗಿ ಕಾಣದ ಕಾರಣ ಅದು ತಂಡದೊಂದಿಗೆ ಸರಿಯಾಗಿ ಕೆಲಸ ಮಾಡಲಿಲ್ಲ ಎಂದು ತೋರುತ್ತದೆ.

VISTARANEWS.COM


on

IPL 2024
Koo

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರಲ್ಲಿ ಮುಂಬೈ ಇಂಡಿಯನ್ಸ್ ತಂಡ ನೀರಸ ಪ್ರದರ್ಶನ ತೋರಿದೆ. ಆಡಿರುವ 14 ಪಂದ್ಯಗಳಲ್ಲಿ ಕೇವಲ 4ರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿದೆ. ಐದು ಬಾರಿಯ ಚಾಂಪಿಯನ್ ತಂಡದ ನಿರಾಶಾದಾಯಕ ಪ್ರದರ್ಶನದ ಬಗ್ಗೆ ಜೋರು ಚರ್ಚೆಗಳು ನಡೆದಿವೆ. ಫ್ರಾಂಚೈಸಿಯ ಅಭಿಮಾನಿಗಳು ಮತ್ತು ಕೆಲವು ಪಂಡಿತರು ಎಂಐ ನಾಯಕ ಹಾರ್ದಿಕ್ ಪಾಂಡ್ಯ ಅವರ ಸಾಮಾನ್ಯ ನಾಯಕತ್ವದ ಕೌಶಲ್ಯಕ್ಕಾಗಿ ಅವರನ್ನು ಟೀಕಿಸಿದ್ದಾರೆ. ಅವರ ಹುಂಬತನದಿಂದಾಗಿ ತಂಡ ಸೋತಿದೆ ಎಂಬುದಾಗಿ ಎಲ್ಲರೂ ಹೇಳಿಕೆ ನೀಡಿದ್ದಾರೆ. ಇದೀಗ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಬೇರೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಾಂಡ್ಯ ಬೆಂಬಲಕ್ಕೆ ನಿಂತ ಅವರು ಸೋಲಿಗೆ ರೋಹಿತ್​ ಶರ್ಮಾ ಕಾರಣ ಎಂದು ಹೇಳಿದ್ದಾರೆ.

ಐಪಿಎಲ್ 2024 ಕ್ಕೆ ಮುಂಚಿತವಾಗಿ ಪಾಂಡ್ಯ ಅವರನ್ನು ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯಿಂದ ಮುಂಬೈ ಇಂಡಿಯನ್ಸ್ ದಾಖಲೆಯ ಒಪ್ಪಂದಕ್ಕೆ ಖರೀದಿಸಿತ್ತು. ನಂತರ, ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ಮುಂಬೈ ನಾಯಕನನ್ನಾಗಿ ಮಾಡಲಾಯಿತು. ಈ ವೇಳೆ ಅಭಿಮಾನಿಗಳಿಂದ ಕೆಟ್ಟ ಪ್ರತಿಕ್ರಿಯೆ ವ್ಯಕ್ತಗೊಂಡಿತು. ಈ ಕುರಿತ ಕೋಲಾಹಲ ಉಂಟಾಯಿತು. ಅದಕ್ಕೆ ತಕ್ಕ ಹಾಗೆ ತಂಡ ಕೆಟ್ಟದಾಗಿ ಸೋತಿತು. ಎಂಐ ಶಿಬಿರದ ಭಾಗವಾಗಿದ್ದ ಹರ್ಭಜನ್ ಸಿಂಗ್ ಈ ಕುರಿತು ಮಾತನಾಡಿದ್ದು, ಮುಂದಿನ ಋತುವಿನಲ್ಲಿ ಬಲವಾಗಿ ಪುಟಿದೇಳಲು ಪಾಂಡ್ಯ ಮತ್ತು ಮ್ಯಾನೇಜ್ಮೆಂಟ್ ಮೇಲೆ ನಂಬಿಕೆ ಇಟ್ಟಿದ್ದಾರೆ. ಇದೇ ವೇಳೆ ರೋಹಿತ್ ಶರ್ಮಾ ಗೆಲುವಿನ ಕೆಚ್ಚು ತೋರಿಲ್ಲ ಎಂಬುದಾಗಿ ಹೇಳಿಕೆ ನೀಡಿದ್ದಾರೆ.

ಮುಂಬೈ ಇಂಡಿಯನ್ಸ್​ ದೊಡ್ಡ ಬಳಗವನ್ನು ಹೊಂದಿದೆ. ನಾನು ಆ ತಂಡಕ್ಕೆ ಆಡಿದ್ದೇನೆ. ಮ್ಯಾನೇಜ್ಮೆಂಟ್ ಉತ್ತಮವಾಗಿದೆ. ತಂಡವನ್ನು ಉತ್ತಮವಾಗಿ ನಡೆಸುತ್ತದೆ. ಆದರೆ ಈ ನಿರ್ಧಾರವು ಹಿನ್ನಡೆಯನ್ನುಂಟು ಮಾಡಿದೆ. ಬಹುಶಃ ಭವಿಷ್ಯವನ್ನು ಹುಡುಕುವ ಆಲೋಚನೆ ಇತ್ತು. ಅವರು ಒಗ್ಗಟ್ಟಾಗಿ ಕಾಣದ ಕಾರಣ ಅದು ತಂಡದೊಂದಿಗೆ ಸರಿಯಾಗಿ ಕೆಲಸ ಮಾಡಲಿಲ್ಲ ಎಂದು ತೋರುತ್ತದೆ. ಇಷ್ಟು ದೊಡ್ಡ ತಂಡವಾಗಿದ್ದು ನನ್ನ ಹಳೆಯ ತಂಡವು ಇಂತಹ ಕಳಪೆ ಫಲಿತಾಂಶಗಳನ್ನು ಎದುರಿಸುತ್ತಿರುವುದನ್ನು ನೋಡಿ ನನಗೆ ನೋವಾಗುತ್ತದೆ ಎಂದು ಹರ್ಭಜನ್ ಹೇಳಿದ್ದಾರೆ.

ಇದನ್ನೂ ಓದಿ: Harbhajan Singh : ಭಾರತ ತಂಡದ ಕೋಚ್ ಆಗಲು ಉತ್ಸಾಹ ತೋರಿದ ಹರ್ಭಜನ್​ ಸಿಂಗ್​

ಬಹುಶಃ ನಿರ್ಧಾರದ ಸಮಯ ಸರಿಯಾಗಿರಲಿಲ್ಲ. ಒಂದು ವರ್ಷದ ನಂತರ ಈ ನಿರ್ಧಾರವನ್ನು ತೆಗೆದುಕೊಂಡಿದ್ದರೆ ಉತ್ತಮವಾಗುತ್ತಿತ್ತು. ಇದು ಹಾರ್ದಿಕ್ ಅವರ ತಪ್ಪಲ್ಲ, ಅವರು ಜಿಟಿಯಲ್ಲಿ ನಿಜವಾಗಿಯೂ ಉತ್ತಮವಾಗಿ ನಾಯಕರಾಗಿದ್ದರು. ನಾಯಕ ಯಾರೇ ಆಗಿರಲಿ ಆಟಗಾರರನ್ನು ಒಗ್ಗಟ್ಟಾಗಿಡುವುದು ಹಿರಿಯ ಆಟಗಾರರ ಕರ್ತವ್ಯ. ಕ್ಯಾಪ್ಟನ್ ಗಳು ಬರುತ್ತಾರೆ ಮತ್ತು ಹೋಗುತ್ತಾರೆ. ಆದರೆ ಅವರು ಒಂದು ತಂಡದಂತೆ ಆಡಲಿಲ್ಲ, “ಎಂದು ಸಿಂಗ್ ಹೇಳಿದರು.

2024ರ ಟಿ20 ವಿಶ್ವಕಪ್ ಕಡೆಗೆ ಗಮನ

ಐಪಿಎಲ್ 2024 ತನ್ನ ಟೂರ್ನಿಯ ಅಂತ್ಯವನ್ನು ತಲುಪಿದ್ದು, ಪ್ಲೇಆಫ್ ಹಂತಗಳು ಸಮೀಪಿಸುತ್ತಿರುವುದರಿಂದ, ಗಮನವು ಶೀಘ್ರದಲ್ಲೇ ಐಸಿಸಿ ಟಿ 20 ವಿಶ್ವಕಪ್ 2024 ರತ್ತ ತಿರುಗುತ್ತದೆ. ಜೂನ್ 2ರಿಂದ ಟೂರ್ನಿ ಆರಂಭವಾಗಲಿದ್ದು, ಭಾರತ ತಂಡವನ್ನು ಪ್ರಕಟಿಸಲಾಗಿದೆ. ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದು, ಪಾಂಡ್ಯ ಉಪನಾಯಕರಾಗಿದ್ದಾರೆ. ಶುಬ್ಮನ್ ಗಿಲ್ ಮತ್ತು ರಿಂಕು ಸಿಂಗ್ ಅವರಂತಹ ಆಟಗಾರರು 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರಿಂದ ಕೆಲವೊಂದು ಪ್ರಶ್ನೆಗಳು ಉಳಿದುಕೊಂಡಿವೆ.

Continue Reading
Advertisement
Mobile
ದೇಶ5 hours ago

ಪರೀಕ್ಷೆಗೆ ಓದುವುದು ಬಿಟ್ಟು ಮೊಬೈಲ್‌ನಲ್ಲೇ ತಲ್ಲೀನ; 22 ವರ್ಷದ ಮಗಳನ್ನೇ ಕೊಂದ ತಾಯಿ

Rameshwaram Cafe Blast
ಕರ್ನಾಟಕ5 hours ago

Rameshwaram Cafe Blast: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಹುಬ್ಬಳ್ಳಿಯಲ್ಲಿ ಇಬ್ಬರು ಎನ್‌ಐಎ ವಶಕ್ಕೆ

LPL 2024
ಪ್ರಮುಖ ಸುದ್ದಿ6 hours ago

LPL 2024 : ಐಪಿಎಲ್ ಎಫೆಕ್ಟ್​, ಸಿಕ್ಕಾಪಟ್ಟೆ ದುಡ್ಡು ಬಾಚಿದ ಮಹೀಶ್ ಪತಿರಾನಾ

Porsche
ಸಂಪಾದಕೀಯ6 hours ago

ವಿಸ್ತಾರ ಸಂಪಾದಕೀಯ: ಸಬಲರ ಎದುರು ದುರ್ಬಲ ಕಾನೂನು; ಅಮಾಯಕರ ಜೀವಕ್ಕೆ ಬೆಲೆಯೇ ಇಲ್ಲ

Hajj pilgrimage
ಬೆಂಗಳೂರು6 hours ago

Hajj Pilgrimage: ಹಜ್ ಯಾತ್ರಿಗಳನ್ನು ಬೀಳ್ಕೊಟ್ಟ ಸಿಎಂ ಸಿದ್ದರಾಮಯ್ಯ; ಹಜ್ ಭವನ ನಿರ್ಮಾಣಕ್ಕೆ ಅನುದಾನ

IPL 2024
ಕ್ರೀಡೆ6 hours ago

IPL 2024 : ಕೆಕೆಆರ್​ 4ನೇ ಬಾರಿ ಐಪಿಎಲ್​​ನ​ ಫೈನಲ್​ಗೆ, ಎಸ್ಆರ್​ಎಚ್​ಗೆ ಇನ್ನೊಂದು ಅವಕಾಶ

Robert Vadra
ದೇಶ7 hours ago

Robert Vadra: ಸ್ವಂತ ಬಲದಿಂದ ರಾಜಕೀಯಕ್ಕೆ ಬರುವೆ, ಗಾಂಧಿ ಹೆಸರು ಬಳಸಲ್ಲ; ರಾಬರ್ಟ್‌ ವಾದ್ರಾ ಶಪಥ!

IPL 2024
ಕ್ರೀಡೆ7 hours ago

IPL 2024 : ರನ್​ ಔಟ್​​ ಆಗಿದ್ದಕ್ಕೆ ಸಿಟ್ಟಿಗೆದ್ದ ಕಾವ್ಯಾ ಮಾರನ್​, ಕಣ್ಣೀರು ಹಾಕಿದ ರಾಹುಲ್ ತ್ರಿಪಾಠಿ

Talking Digital Safety for Teens programme by Meta in Bengaluru
ಕರ್ನಾಟಕ7 hours ago

Meta: ಮೆಟಾದಿಂದ ಯುವ ಜನರಿಗೆ ಡಿಜಿಟಲ್ ಸುರಕ್ಷಾ ಪಾಠ

MLC Election North East Graduates Constituency Election Prohibitory order imposed in Vijayanagar district from June 1
ವಿಜಯನಗರ7 hours ago

MLC Election: ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ: ವಿಜಯನಗರ ಜಿಲ್ಲೆಯಲ್ಲಿ ಜೂ.1ರಿಂದ ನಿಷೇಧಾಜ್ಞೆ ಜಾರಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ11 hours ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು16 hours ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು18 hours ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ2 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ3 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ3 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ5 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

ಟ್ರೆಂಡಿಂಗ್‌