Pro Kabaddi | ಮತ್ತೆ ಮಿಂಚಿದ ಭರತ್‌, ಪ್ಯಾಂಥರ್ಸ್‌ಗೆ ಸೋಲುಣಿಸಿದ ಬೆಂಗಳೂರು ಬುಲ್ಸ್ - Vistara News

ಕ್ರೀಡೆ

Pro Kabaddi | ಮತ್ತೆ ಮಿಂಚಿದ ಭರತ್‌, ಪ್ಯಾಂಥರ್ಸ್‌ಗೆ ಸೋಲುಣಿಸಿದ ಬೆಂಗಳೂರು ಬುಲ್ಸ್

ಬೆಂಗಳೂರು ಬುಲ್ಸ್‌ ತಂಡ ಜೈಪುರ ಪಿಂಕ್‌ ಪ್ಯಾಂಥರ್ಸ್‌ ವಿರುದ್ಧ 37-31 ಅಂಕಗಳ ಅಂತರದಲ್ಲಿ ಜಯ ಗಳಿಸಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ.

VISTARANEWS.COM


on

pro kabaddi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪುಣೆ: ಇಲ್ಲಿನ ಶ್ರೀಶಿವಛತ್ರಪತಿ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿರುವ ವಿವೋ ಪ್ರೋ ಕಬಡ್ಡಿ ಲೀಗ್‌ನ (Pro Kabaddi) ಭಾನುವಾರದ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡ ಜೈಪುರ ಪಿಂಕ್‌ ಪ್ಯಾಂಥರ್ಸ್‌ ವಿರುದ್ಧ 37-31 ಅಂಕಗಳ ಅಂತರದಲ್ಲಿ ಜಯ ಗಳಿಸಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ.

ಬರ್ತ್‌ಡೇ ಬಾಯ್‌ ಭರತ್‌ ಸೂಪರ್‌ 10 ಸಾಧನೆ ಮಾಡಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ವಿಕಾಶ್‌ ಕಂಡೊಲ (9) ಮತ್ತು ನೀರಜ್‌ ನರ್ವಾಲ್‌ (5) ರೈಡಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿ ಅದ್ಭುತ ಜಯಕ್ಕೆ ನೆರವಾದರು. ಇತ್ತಂಡಗಳು ಕೊನೆಯ ಕ್ಷಣದವರೆಗೂ ಸಮಬಲದ ಹೋರಾಟ ನೀಡುತ್ತಿದ್ದವು, ಆದರೆ ವಿಕಾಶ್‌ ಕಂಡೋಲ ಕೊನೆಯ ಕ್ಷಣದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವನ್ನು ಆಲೌಟ್‌ ಮಾಡುವ ಮೂಲಕ ಬೆಂಗಳೂರು ಬುಲ್ಸ್‌ ಮುನ್ನಡೆ ಕಂಡು ಜಯವನ್ನು ಖಚಿತಪಡಿಸಿಕೊಂಡಿತು. ಜೈಪುರ ಪಿಂಕ್‌ ಪ್ಯಾಂಥರ್ಸ್‌ ಪರ ಅರ್ಜುನ್‌ ದೇಸ್ವಾಲ್‌ ಸೂಪರ್‌ ಟೆನ್‌ ಸಾಧನೆ ಮಾಡಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ಕೊನೆಯ ಕ್ಷಣದಲ್ಲಾದ ಆಲೌಟ್‌ ತಂಡದ ಜಯವನ್ನು ಕಸಿದುಕೊಂಡಿತು.

ಪ್ರಥಮಾರ್ಧದಲ್ಲಿ ಸಮಬಲ

ಒಂದು ಹಂತದಲ್ಲಿ 15-5ರಲ್ಲಿ ಮುನ್ನಡೆ ಕಂಡಿದ್ದ ಬೆಂಗಳೂರು ಬುಲ್ಸ್‌ ಇದ್ದಕ್ಕಿದ್ದಂತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದುದರ ಪರಿಣಾಮ ಜೈಪುರ ಪಿಂಕ್‌ ಪ್ಯಾಂಥರ್ಸ್‌ ವಿರುದ್ಧದ ಪಂದ್ಯ 19-19ರಲ್ಲಿ ಸಮಬಲಗೊಂಡಿತು. ಭರತ್‌ ಅವರು ರೈಡಿಂಗ್‌ನಲ್ಲಿ 7 ಅಂಕಗಳನ್ನು ಗಳಿಸಿ ಬೆಂಗಳೂರು ಬುಲ್ಸ್‌ ತಂಡಕ್ಕೆ ಉತ್ತಮ ಮುನ್ನಡೆಗೆ ಅವಕಾಶ ನೀಡಿದ್ದರು. ವಿಕಾಶ್‌ ಕಂಡೋಲ 4 ಅಂಕಗಳನ್ನು ಗಳಿಸಿ ಭರತ್‌ಗೆ ಸಾಥ್‌ ನೀಡಿದ್ದರು. ನೀರಜ್‌ ನರ್ವಾಲ್‌ ಟ್ಯಾಕಲ್‌ನಲ್ಲಿ 3 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು. ಜೈಪುರ ಪಿಂಕ್‌ ಪ್ಯಾಂಥರ್ಸ್‌ ಆರಂಭದಲ್ಲಿ ನೀರಸ ಪ್ರದರ್ಶನ ತೋರಿತ್ತು, ಆದರೆ ಕೊನೆಯ ಕ್ಷಣದಲ್ಲಿ ಅರ್ಜುನ್‌ ದೇಶ್ವಾಲ್‌ ಅವರು ರೈಡಿಂಗ್‌ನಲ್ಲಿ 8 ಅಂಕಗಳನ್ನು ಗಳಿಸುವ ಮೂಲಕ ಪಂದ್ಯ 19-19ರಲ್ಲಿ ಸಮಬಲಗೊಂಡಿತು. ರೈಡಿಂಗ್‌ನಲ್ಲಿ ಬೆಂಗಳೂರು 13 ಅಂಕಗಳನ್ನು ಗಳಿಸಿದರೆ, ಜೈಪುರ ಪಿಂಕ್‌ ಪ್ಯಾಂಥರ್ಸ್‌ 12 ಅಂಕಗಳನ್ನು ಗಳಿಸಿತ್ತು. ಇತ್ತಂಡಗಳು ತಲಾ ಒಂದೊಂದು ಬಾರಿ ಆಲೌಟ್‌ ಆದವು. ಟ್ಯಾಕಲ್‌ನಲ್ಲೂ ಸಮಾನ ಅಂಕ ( 4) ಗಳಿಸಿದವು. ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಬೆಂಗಳೂರು ಬುಲ್ಸ್‌ನ ರೈಡರ್‌ ಭರತ್‌ ಹೂಡಾ ಅವರು ಪ್ರಸಕ್ತ ಲೀಗ್‌ನಲ್ಲಿ 100 ರೈಡಿಂಗ್‌ ಅಂಕಗಳನ್ನು ಗಳಿಸಿದ ಹೆಗ್ಗಳಿಕೆಗೆ ಪಾತ್ರರಾದರು.

ಇದನ್ನೂ ಓದಿ | Pro Kabaddi | ಭರತ್ ಸೂಪರ್‌ ಶೋ; ಡೆಲ್ಲಿಗೆ ಸೋಲುಣಿಸಿ ಅಗ್ರ ಸ್ಥಾನಕ್ಕೇರಿದ ಬೆಂಗಳೂರು ಬುಲ್ಸ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೀಡೆ

RCB Unbox Event: ಇಂದಿನ ಆರ್​ಸಿಬಿ ಅನ್​ಬಾಕ್ಸ್​ನಲ್ಲಿ ವಿರಾಟ್​ ಕೊಹ್ಲಿಯೂ ಹಾಜರ್​!

ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಆರ್​ಸಿಬಿ ಅನ್​ಬಾಕ್ಸ್ ಸಮಾರಂಭದಲ್ಲಿ ಮಹಿಳಾ ಪ್ರೀಮಿಯರ್‌ ಲೀಗ್​ನಲ್ಲಿ ಚಾಂಪಿಯನ್‌ ಆಗಿರುವ ಆರ್‌ಸಿಬಿ ಮಹಿಳಾ ತಂಡ ಪಾಲ್ಗೊಳ್ಳಲಿದೆ.

VISTARANEWS.COM


on

RCB Unbox
Koo

ಬೆಂಗಳೂರು: ಆರ್​ಸಿಬಿ(RCB) ತನ್ನ ಅಭಿಯಾನ ಆರಂಭಿಸುವ ಮುನ್ನ ಪೂರ್ವಭಾವಿಯಾಗಿ ಅಭಿಮಾನಿಗಳಿಗಾಗಿ ಈ ಸಲವೂ ವಿಶೇಷ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಕಳೆದೆರಡು ವರ್ಷಗಳಿಂದ ಆರ್​ಸಿಬಿ ಅನ್​ಬಾಕ್ಸ್​(RCB’s Unbox Event) ಹೆಸರಿನಲ್ಲಿ ನಡೆಯುತ್ತ ಬಂದಿರುವ ಕಾರ್ಯಕ್ರಮ ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ಮಹಿಳಾ ಪ್ರೀಮಿಯರ್‌ ಲೀಗ್​ನಲ್ಲಿ ಚಾಂಪಿಯನ್‌ ಆಗಿರುವ ಆರ್‌ಸಿಬಿ ಮಹಿಳಾ(rcb women’s team) ತಂಡ ಪಾಲ್ಗೊಳ್ಳಲಿದೆ.

ಕಳೆದ ವರ್ಷ ಆರ್‌ಸಿಬಿ ಅನ್​ಬಾಕ್ಸ್​ ಕಾರ್ಯಕ್ರಮದಲ್ಲಿ ಕ್ರಿಸ್‌ ಗೇಲ್‌ ಮತ್ತು ಎಬಿ ಡಿ ವಿಲಿಯರ್ ಅವರನ್ನು ಗೌರವಿಸಲಾಗಿತ್ತು. ಈ ಬಾರಿ ಡಬ್ಲ್ಯುಪಿಎಲ್‌ ಚಾಂಪಿಯನ್‌ ತಂಡವನ್ನು ಮತ್ತು ಆರ್​ಸಿಬಿ ಪರ 16 ವರ್ಷಗಳಿಂದ ಕ್ರಿಕೆಟ್​ ಆಡುತ್ತಿರುವ ಕಿಂಗ್​ ಖ್ಯಾತಿಯ ವಿರಾಟ್​ ಕೊಹ್ಲಿ ಅವರನ್ನು ಗೌರವಿಸುವ ಕಾರ್ಯಕ್ರಮವನ್ನು ನಿರೀಕ್ಷಿಸಲಾಗಿದೆ. ಈ ಅದ್ದೂರಿ ಕಾರ್ಯಕ್ರಮದಲ್ಲಿ ರಘು ದೀಕ್ಷಿತ್, ಅಲಾನ್ ವಾಕರ್(Alan Walker), ನೀತಿ ಮೋಹನ್ ಸೇರಿ ಹಲವು ಸಿಂಗರ್​ಗಳು ಪ್ರದರ್ಶನ ನೀಡಲಿದ್ದಾರೆ.

ಈ ಬಾರಿಯ ಅಚ್ಚರಿಗಳಲ್ಲಪೊಂದು ಹೆಸರು ಬದಲಾವಣೆ. ಬ್ಯಾಂಗಳೂರು ಬದಲಾಗಿ ಬೆಂಗಳೂರು ಎಂದು ನಾಮಕರಣ ಮಾಡುವುದು ಈಗಾಗಲೇ ಖಚಿತವಾಗಿದೆ. ಇನ್ನುಳಿದ ಅಚ್ಚರಿಯ ಸಂಗತಿ ಏನೆಂಬುದನ್ನು ಆರ್​ಸಿಬಿ ಅಭಿಮಾನಿಗಳು ಕಾದು ಕುಳಿತಿದ್ದಾರೆ.  ಮೂಲಗಳ ಪ್ರಕಾರ ತಂಡದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿಯೂ(Virat Kohli) ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಐಪಿಎಲ್ 2024ರ ವೇಳಾಪಟ್ಟಿ

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​​ಸಿಬಿ) ನಡುವಿನ ಐಪಿಎಲ್ 2024 ರ ಉದ್ಘಾಟನಾ ಪಂದ್ಯವು ಮಾರ್ಚ್ 22 ರಂದು ಚೆನ್ನೈನ ಎಂಎ ಚಿದಂಬರಂ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ರಾತ್ರಿ 8:00 ಗಂಟೆಗೆ ಪ್ರಾರಂಭವಾಗಲಿದೆ. 17 ನೇ ಆವೃತ್ತಿಯ ಉಳಿದ ಲೀಗ್ ಪಂದ್ಯಗಳು ಮಧ್ಯಾಹ್ನ 3.30 ಮತ್ತು ಸಂಜೆ 7.30 ಕ್ಕೆ ಪ್ರಾರಂಭವಾಗಲಿವೆ.

Continue Reading

ಪ್ರಮುಖ ಸುದ್ದಿ

IPL 2024 : ಸಿಎಸ್​ಕೆ ತಂಡಕ್ಕೆ ಮತ್ತೊಂದು ಆಘಾತ; ಮುಸ್ತಾಫಿಜುರ್​ಗೂ ಗಾಯ

IPL 2024 : ಸಿಎಸ್​ಕೆಯಲ್ಲಿ ಈಗಾಗಲೇ ಡೆವೋನ್ ಕಾನ್ವೆ, ಮಹೀಶ್ ಪತಿರಾಣಾ ಸೇರಿದಂತೆ ಹಲವು ಆಟಗಾರರು ಗಾಯಗೊಂಡಿದ್ದಾರೆ.

VISTARANEWS.COM


on

Mustafizur Rahman
Koo

ನವದೆಹಲಿ: ಐಪಿಎಲ್ 2024 ಕ್ಕೆ (IPL 2024) ನಾಲ್ಕು ದಿನಗಳು ಬಾಕಿ ಇರುವಾಗ, ಹಾಲಿ ಚಾಂಪಿಯನ್ ಸಿಎಸ್​ಕೆಗೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ. ಇತ್ತೀಚೆಗೆ ಖರೀದಿಸಿದ ಮುಸ್ತಾಫಿಜುರ್ ರಹಮಾನ್ ಶ್ರೀಲಂಕಾ ವಿರುದ್ಧದ 3 ನೇ ಏಕದಿನ ಪಂದ್ಯದಲ್ಲಿ ಗಾಯಗೊಂಡು ಮೈದಾನದಿಂದ ಹೊರಗುಳಿಯಬೇಕಾಯಿತು. ಚಟ್ಟೋಗ್ರಾಮ್​​ನ ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವೆ ಮೂರನೇ ಏಕದಿನ ಪಂದ್ಯ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ. 42ನೇ ಓವರ್​ನಲ್ಲಿ ರೆಹಮಾನ್ ಸೆಳೆತದಿಂದ ಬಳಲುತ್ತಿದ್ದರು ಮತ್ತು ಆ ಓವರ್​ನ ಕೊನೇ ಎಸೆತವನ್ನು ಎಸೆದ ನಂತರ ನೆಲಕ್ಕೆ ಕುಸಿದುಬಿದ್ದರು. ರೆಹಮಾನ್ 9 ಓವರ್ ಗಳಲ್ಲಿ 39 ರನ್ ನೀಡಿ 2 ವಿಕೆಟ್ ಪಡೆದಿದ್ದರು.

48ನೇ ಓವರ್​ನಲ್ಲಿ ರೆಹಮಾನ್ ತಮ್ಮ ಅಂತಿಮ ಓವರ್ ಎಸೆಯಲು ಮರಳಿದರು. ಆದರೆ ಅವರ ಮೊದಲ ಪ್ರಯತ್ನದಲ್ಲಿ ಅವರು ಮೊದಲ ಎಸೆತವನ್ನು ಎಸೆಯಲು ವಿಫಲರಾದರು. ಕಡಿಮೆ ರನ್-ಅಪ್​ನೊಂದಿಗೆ ಬೌಲಿಂಗ್ ಮಾಡುವ ಪ್ರಯತ್ನದಲ್ಲಿ ವೈಡ್ ಬಾಲ್ ಎಸೆದ ನಂತರ ಪ್ರಯತ್ನ ಕೈಬಿಟ್ಟರು. ಇನ್ನು ಮುಂದೆ ಆಡಲು ಸಾಧ್ಯವಿಲ್ಲ ಎಂದು ನಿರ್ಧರಿಸಿದರು. ರೆಹಮಾನ್ ಬದಲಿಗೆ ಸೌಮ್ಯ ಸರ್ಕಾರ್ ಓವರ್ ಎಸೆದು, ಮಹೇಶ್ ದೀಕ್ಷಾ ಅವರ ವಿಕೆಟ್ ಪಡೆದರು ಮತ್ತು ಕೇವಲ ಐದು ರನ್​ಗಳನ್ನು ಬಿಟ್ಟುಕೊಟ್ಟರು.

Mumbai Indians : ಮುಂಬಯಿ ಇಂಡಿಯನ್ಸ್​ ತಂಡಕ್ಕೆ ವೇಗದ ಬೌಲರ್ ಸೇರ್ಪಡೆ

ರೆಹಮಾನ್ ಅವರ ಇತ್ತೀಚಿನ ಫಿಟ್ನೆಸ್​ ಕಾಳಜಿಯು ಅವರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ಸಿಎಸ್ಕೆ ಯೋಜನೆಗಳಿಗೆ ದೊಡ್ಡ ಹೊಡೆತವಾಗಿದೆ. ರೆಹಮಾನ್ ಅವರನ್ನು ಐಪಿಎಲ್ ಹರಾಜಿನಲ್ಲಿ ಸಿಎಸ್​ಕೆ ಅವರ ಮೂಲ ಬೆಲೆ 2 ಕೋಟಿ ರೂ.ಗೆ ಖರೀದಿಸಿತು. ಇತ್ತೀಚೆಗೆ ಹೆಬ್ಬೆರಳು ಮುರಿದು 8 ವಾರಗಳ ಕಾಲ ಹೊರಗುಳಿದಿದ್ದ ನ್ಯೂಜಿಲೆಂಡ್ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಅವರ ಸೇವೆಯನ್ನು ಸಿಎಸ್ಕೆ ಈಗಾಗಲೇ ಕಳೆದುಕೊಂಡಿದೆ. ಅಷ್ಟೇ ಅಲ್ಲ, ಸಿಎಸ್​ಕೆಯ ಶ್ರೀಲಂಕಾದ ವೇಗಿ ಮಥೀಶಾ ಪತಿರಾನಾ ಕೂಡ ಮುಂಬರುವ ಪಂದ್ಯಾವಳಿಯ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ.

Continue Reading

ಪ್ರಮುಖ ಸುದ್ದಿ

Mumbai Indians : ಮುಂಬಯಿ ಇಂಡಿಯನ್ಸ್​ ತಂಡಕ್ಕೆ ವೇಗದ ಬೌಲರ್ ಸೇರ್ಪಡೆ

Mumbai Indians : ಜೇಸನ್ ಬೆಹ್ರೆನ್ಡಾರ್ಫ್ ಗಾಯಗೊಂಡು ಮುಂಬರುವ ಆವೃತ್ತಿಯ ಐಪಿಎಲ್​ನಿಂದ ಹೊರಗುಳಿದಿದ್ದಾರೆ.

VISTARANEWS.COM


on

Luke wood
Koo

ನವದೆಹಲಿ: ಆಸ್ಟ್ರೇಲಿಯಾ ರಾಷ್ಟ್ರೀಯ ಕ್ರಿಕೆಟ್ ತಂಡದ ಎಡಗೈ ವೇಗಿ ಜೇಸನ್ ಬೆಹ್ರೆನ್ಡಾರ್ಫ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಿಂದ ಹೊರಗುಳಿದಿದ್ದಾರೆ. ಮುಂಬರುವ ಆವೃತ್ತಿಯ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಪರ ಪ್ಲೇಯಿಂಗ್ ಇಲೆವೆನ್​ನಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಿದ್ದ ಆಟಗಾರರಲ್ಲಿ ಬೆಹ್ರೆನ್ಡಾರ್ಫ್ ಕೂಡ ಒಬ್ಬರು. ಕಳೆದ ವರ್ಷ ಅವರು 12 ಪಂದ್ಯಗಳಲ್ಲಿ 27.64 ಸರಾಸರಿ, 9.21 ಎಕಾನಮಿ ಮತ್ತು 18.00 ಸ್ಟ್ರೈಕ್ ರೇಟ್​ನೊಂದಿಗೆ 14 ವಿಕೆಟ್​ಗಳನ್ನು ಉರುಳಿಸಿದ್ದರು. ಅವರ ಬದಲಿಗೆ ಇದೀಗ ಲ್ಯೂಕ್ ವುಡ್ ತಂಡ ಸೇರಿಕೊಂಡಿದ್ದಾರೆ.

ಬೆಹ್ರೆನ್ಡಾರ್ಫ್ ಅನುಪಸ್ಥಿತಿಯು ಮುಂಬೈ ಇಂಡಿಯನ್ಸ್ ಬೌಲಿಂಗ್ ವಿಭಾಗಕ್ಕೆ ಎರಡನೇ ಹೊಡೆತವಾಗಿದೆ. ಏಕೆಂದರೆ ಶ್ರೀಲಂಕಾ ರಾಷ್ಟ್ರೀಯ ಕ್ರಿಕೆಟ್ ತಂಡದ ಎಡಗೈ ವೇಗಿ ದಿಲ್ಶಾನ್ ಮಧುಶಂಕಾ ಕೂಡ ಐಪಿಎಲ್ 2024 ರ ಮೊದಲ ಕೆಲವು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಶ್ರೀಲಂಕಾದ ಸ್ಟಾರ್ ಆಟಗಾರ ದಿಲ್ಶಾನ್ ಮಧುಶಂಕಾ ಎಡಗೈ ಸ್ನಾಯುಸೆಳೆತದ ಗಾಯದಿಂದ ಬಳಲುತ್ತಿದ್ದು, 4-6 ವಾರಗಳ ಕಾಲ ಆಟದಿಂದ ಹೊರಗುಳಿಯುವ ನಿರೀಕ್ಷೆಯಿದೆ.

ಜೇಸನ್ ಬೆಹ್ರೆನ್ಡಾರ್ಫ್ ಅನುಪಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್ (Mumbai Indians) 28 ವರ್ಷದ ಇಂಗ್ಲೆಂಡ್ ರಾಷ್ಟ್ರೀಯ ಕ್ರಿಕೆಟ್ ತಂಡದ ಎಡಗೈ ವೇಗಿ ಲ್ಯೂಕ್ ವುಡ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ವೇಗಿ ಇತ್ತೀಚೆಗೆ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) 2024ರಲ್ಲಿ ಬಾಬರ್ ಅಜಮ್ ನೇತೃತ್ವದ ಪೇಶಾವರ್ ಝಲ್ಮಿ ಪರ ಆಡಿದ್ದರು.

ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) 2024ರಲ್ಲಿ 11 ಪಂದ್ಯಗಳಲ್ಲಿ, ಲ್ಯೂಕ್ ವುಡ್ 29.08 ಸರಾಸರಿ, 8.24 ಎಕಾನಮಿ ಮತ್ತು 21.16 ಸ್ಟ್ರೈಕ್ ರೇಟ್ನೊಂದಿಗೆ 12 ವಿಕೆಟ್​ಗಳನ್ನು ಉರುಳಿಸಿದ್ದಾರೆ. ಲ್ಯೂಕ್ ವುಡ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯನ್ನು 50 ಲಕ್ಷ ರೂ.ಗೆ ಸೇರಿಕೊಳ್ಳಲಿದ್ದಾರೆ.

ಮುಂಬರುವ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (IPL2024 ) ಗಾಗಿ ಗಾಯಗೊಂಡ ಜೇಸನ್ ಬೆಹ್ರೆನ್ಡಾರ್ಫ್ ಬದಲಿಗೆ ಮುಂಬೈ ಇಂಡಿಯನ್ಸ್ (ಎಂಐ) ಲ್ಯೂಕ್ ವುಡ್ ಅವರನ್ನು ಹೆಸರಿಸಿದೆ. ಎಡಗೈ ವೇಗಿ – ವುಡ್ ಇಂಗ್ಲೆಂಡ್ ಪರ 5 ಟಿ 20 ಪಂದ್ಯಗಳನ್ನು ಆಡಿದ್ದಾರೆ, ಜೊತೆಗೆ 2 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು ಅವರ ಬಳಿ 8 ಟಿ 20 ಐ ವಿಕೆಟ್ ಗಳಿವೆ. ವುಡ್ 50 ಲಕ್ಷ ರೂ.ಗೆ ಮುಂಬೈ ಇಂಡಿಯನ್ಸ್ ಸೇರಲಿದ್ದಾರೆ, “ಎಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಅಧಿಕೃತ ಮಾಧ್ಯಮ ಪ್ರಕಟಣೆ ತಿಳಿಸಿದೆ.

ಟಿ 20 ಕ್ರಿಕೆಟ್​​ ಲ್ಲಿ 140 ಪಂದ್ಯಗಳನ್ನು ಆಡಿರುವ ವುಡ್ 25.87 ಸರಾಸರಿಯಲ್ಲಿ 147 ವಿಕೆಟ್​ಗಳನ್ನು ಪಡೆದಿದ್ದಾರೆ, 8.45 ಎಕಾನಮಿ ಮತ್ತು 18.3 ಸ್ಟ್ರೈಕ್ ರೇಟ್, 50 ರನ್​ಗೆ 5 ವಿಕೆಟ್​ ಪಡೆದ ಅತ್ಯುತ್ತಮ ಬೌಲಿಂಗ್ ಅಂಕಿಅಂಶ ಹೊಂದಿದ್ದಾರೆ.

ಹಾರ್ದಿಕ್ ನಾಯಕ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. 5 ಬಾರಿ ಐಪಿಎಲ್ ವಿಜೇತ ನಾಯಕ ರೋಹಿತ್ ಶರ್ಮಾ ಅವರನ್ನು ತೆಗೆದುಹಾಕುವ ಮೂಲಕ ಫ್ರಾಂಚೈಸಿ ಅವರನ್ನು ನಾಯಕನನ್ನಾಗಿ ನೇಮಿಸಿದೆ.

ಇದನ್ನೂ ಓದಿ : IPL 2024 : ಆರ್​ಸಿಬಿ ತಂಡಕ್ಕೆ ಸವಾಲೆಸೆದ ವಿಜಯ್​ ಮಲ್ಯ; ಏನದು ಚಾಲೆಂಜ್​​?

ಮುಂಬೈ ಇಂಡಿಯನ್ಸ್ (ಎಂಐ) ಕಳೆದ ಕೆಲವು ಋತುಗಳಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಫೈನನ್​ಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡವನ್ನು ಸೋಲಿಸಿದ ನಂತರ 2020ರ ನಂತರ ಟ್ರೋಫಿ ಗೆದ್ದಿಲ್ಲ.

ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಮುಖ್ಯ ಕೋಚ್ ಮಾರ್ಕ್ ಬೌಷರ್ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ವಿಷಯಗಳ ಬಗ್ಗೆ ಮಾತನಾಡಿದರು. ಸಂವಾದದ ಸಮಯದಲ್ಲಿ, ಹಾರ್ದಿಕ್ ಪಾಂಡ್ಯ ತಮ್ಮ ಮತ್ತು ರೋಹಿತ್ ಶರ್ಮಾ ನಡುವೆ ಎಲ್ಲವೂ ಸರಿಯಾಗಿದೆ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಲ್ಲಿ ತಂಡವನ್ನು ಮುನ್ನಡೆಸುವಾಗ ಮಾಜಿ ಮುಂಬೈ ಇಂಡಿಯನ್ಸ್ ನಾಯಕನ ಮಾರ್ಗದರ್ಶನವನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ, ರೋಹಿತ್ ಶರ್ಮಾ ಮಾರ್ಚ್ 18 ರ ಸೋಮವಾರ ಫ್ರಾಂಚೈಸಿಗೆ ಸೇರಿದರು.

Continue Reading

ಪ್ರಮುಖ ಸುದ್ದಿ

IPL 2024 : ಆರ್​ಸಿಬಿ ತಂಡಕ್ಕೆ ಸವಾಲೆಸೆದ ವಿಜಯ್​ ಮಲ್ಯ; ಏನದು ಚಾಲೆಂಜ್​​?

IPL 2024 : ಐಪಿಎಲ್​ಗೆ ಸಿದ್ಧಗೊಳ್ಳುತ್ತಿರುವ ಆರ್​ಸಿಬಿ ತಂಡಕ್ಕೆ ಮುಂದಿನ ಕನಸನ್ನು ವಿಜಯ್​ ಮಲ್ಯ ಬಿತ್ತಿದ್ದಾರೆ.

VISTARANEWS.COM


on

Vijay Malya
Koo

ನವದೆಹಲಿ: ಭಾನುವಾರ ರಾತ್ರಿ ಮುಕ್ತಾಯಗೊಂಡ ಮಹಿಳಾ ಪ್ರೀಮಿಯರ್ ಲೀಗ್ (WPL 2024) ನಲ್ಲಿ ಮಹಿಳಾ ತಂಡದ ಗೆಲುವಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ (RCB Team) ಅಭಿಮಾನಿಗಳಿಗೆ ಪುರುಷರ ತಂಡವೂ ಪ್ರಶಸ್ತಿ ಗೆಲ್ಲುವ ಆಶಾವಾದ ಸೃಷ್ಟಿಯಾಗಿದೆ. ಇದೇ ವೇಳೆ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ (Vijay Malya) ಫ್ರಾಂಚೈಸಿಯ ಪುರುಷರ ತಂಡಕ್ಕೆ (IPL 2024) ವಿಶೇಷ ಸವಾಲೊಂದನ್ನು ಒಡ್ಡಿದ್ದಾರೆ.

ಸ್ಮೃತಿ ಮಂದಾನ ನಾಯಕತ್ವದ ಆರ್​ಸಿಬಿ ಫೈನಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎಂಟು ವಿಕೆಟ್​​ಗಳಿಂದ ಸೋಲಿಸಿ ಡಬ್ಲ್ಯುಪಿಎಲ್​​ನ ಎರಡನೇ ಆವೃತ್ತಿಯನ್ನು ಗೆದ್ದುಕೊಂಡಿತು. ಇದು ಫ್ರಾಂಚೈಸಿಗೆ ಮೊದಲ ಪ್ರಶಸ್ತಿಯಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ 19 ಓವರ್​ಗಳಲ್ಲಿ ಕೇವಲ 113 ರನ್​ಗಳಿಗೆ ಆಲೌಟ್ ಆಯಿತು. ಡೆಲ್ಲಿ ಪರ ಆರಂಭಿಕರಾದ ಮೆಗ್ ಲ್ಯಾನಿಂಗ್ ಮತ್ತು ಶಫಾಲಿ ವರ್ಮಾ ಮೊದಲ ವಿಕೆಟ್​ಗೆ 64 ರನ್​ಗಳ ಜೊತೆಯಾಟ ನೀಡಿದರು.

ಸೋಫಿ ಮೊಲಿನೆಕ್ಸ್ ಒಂದು ಓವರ್​ನಲ್ಲಿ ಮೂರು ವಿಕೆಟ್ಗಳನ್ನು ಪಡೆದು ಡೆಲ್ಲಿಯನ್ನು 3 ವಿಕೆಟ್ಗೆ 64 ಕ್ಕೆ ಇಳಿಸಿದರು. ಆ ಹಿನ್ನಡೆಯಿಂದ ಚೇತರಿಸಿಕೊಳ್ಳಲು ಸಾಧ್ಯವಾಗದ ಡೆಲ್ಲಿ 113 ರನ್​​ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಆರ್​ಸಿಬಿ ಮೂರು ಎಸೆತಗಳು ಬಾಕಿ ಇರುವಾಗ ಮೊತ್ತವನ್ನು ಬೆನ್ನಟ್ಟಿತು. ಸ್ಮೃತಿ ಮಂದಾನ (31), ಸೋಫಿ ಡಿವೈನ್ (32) ಮತ್ತು ಎಲಿಸ್ ಪೆರ್ರಿ (35*) ಉತ್ತಮ ಆಟ ಪ್ರದರ್ಶಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ವಿಜಯ್ ಮಲ್ಯ ಸವಾಲಿನ ಸಂದೇಶ

ಆರ್​ಸಿಬಿ ಡಬ್ಲ್ಯುಪಿಎಲ್ ಗೆದ್ದ ಕೂಡಲೇ, ವಿಜಯ್ ಮಲ್ಯ ಎಕ್ಸ್ (ಹಿಂದೆ ಟ್ವಿಟರ್) ಮೂಲಕ ಶುಭಾಶಯಗಳನ್ನು ಕೋರಿದರು. ಮುಂಬರುವ ಐಪಿಎಲ್ 2024 ರಲ್ಲಿ ಪುರುಷರ ತಂಡವು ಇದೇ ಯಶಸ್ಸನ್ನು ಪುನರಾವರ್ತಿಸಲು ಸಾಧ್ಯವಾದರೆ ಅದು ಅದ್ಭುತವಾಗಿರುತ್ತದೆ ಎಂದು ಹೇಳಿದರು. ಐಪಿಎಲ್ ಗೆಲ್ಲುವುದು ಪುರುಷರ ತಂಡಕ್ಕೆ ಬಹಳ ಸಮಯದಿಂದ ಬಾಕಿ ಉಳಿದಿದೆ ಎಂದು ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ.

ಡಬ್ಲ್ಯುಪಿಎಲ್ ಗೆದ್ದ ಆರ್​ಸಿಬಿ ಮಹಿಳಾ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಆರ್​​ಸಿಬಿ ಪುರುಷರ ತಂಡವು ದೀರ್ಘಕಾಲದಿಂದ ಬಾಕಿ ಉಳಿದಿರುವ ಐಪಿಎಲ್ ಅನ್ನು ಗೆದ್ದರೆ ಅದು ಅದ್ಭುತ ದ್ವಿಗುಣವಾಗಲಿದೆ. ಶುಭವಾಗಲಿ. ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : Virat kohli : ಕಿಂಗ್ ಇಸ್​ ಬ್ಯಾಕ್​, ಅಭ್ಯಾಸದ ವೇಳೆ ಅಬ್ಬರಿಸಿದ ಕೊಹ್ಲಿ

ಆರ್​ಸಿಬಿಗೆ ಈ ವರ್ಷ ಎಲ್ಲಾ ರೀತಿಯಲ್ಲೂ ಹೋಗಲು ಕಪ್ ಗೆಲ್ಲಲು ಅವಕಾಶವಿದೆ. ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್​, ರಜತ್ ಪಾಟಿದಾರ್, ಲಾಕಿ ಫರ್ಗುಸನ್ ಮತ್ತು ಹಲವಾರು ದೊಡ್ಡ ಹೆಸರುಗಳು ತಂಡದಲ್ಲಿವೆ.

ಆರ್​ಸಿಬಿ ಈ ಹಿಂದೆ ಮೂರು ಬಾರಿ ಫೈನಲ್​ಗೆ ಅರ್ಹತೆ ಪಡೆದಿತ್ತು. ಆದರೆ ಪ್ರತಿ ಬಾರಿಯೂ ಫಲಿತಾಂಶ ವಿರುದ್ಧವಾಗಿ ಬಂದಿತ್ತು. 2016ರಲ್ಲಿ ವಿರಾಟ್ ಕೊಹ್ಲಿ 973 ರನ್ ಬಾರಿಸಿದ್ದರು. ಕೊಹ್ಲಿ ಆ ಋತುವನ್ನು ಪುನರಾವರ್ತಿಸುತ್ತಾರೆ ಮತ್ತು ಪ್ರಶಸ್ತಿ ಗೆಲ್ಲಿಸಿಕೊಡುತ್ತಾರೆ ಎಂಬ ಆಶಯ ಅಭಿಮಾನಿಗಳದ್ದು.

Continue Reading
Advertisement
hanuman chalisa case
ಪ್ರಮುಖ ಸುದ್ದಿ6 mins ago

ಹನುಮಾನ್‌ ಚಾಲೀಸಾ ಕೇಸ್:‌ ಐದು ಮಂದಿ ಬಂಧನ, ಇಂದು ನಗರ್ತಪೇಟೆಯಲ್ಲಿ ಕೇಸರಿ ಹವಾ

Delhi
ದೇಶ28 mins ago

Delhi Pollution: ಮತ್ತೆ ವಿಶ್ವದ ಅತ್ಯಂತ ಕಲುಷಿತ ರಾಜಧಾನಿಯಾದ ದೆಹಲಿ

Kannada New Movie Pavan Kumar Wadeyar New Movie
ಸ್ಯಾಂಡಲ್ ವುಡ್33 mins ago

Kannada New Movie: ಸೆಟ್ಟೇರಿತು ಪವನ್ ಒಡೆಯರ್ ನಿರ್ಮಾಣದ ಮತ್ತೊಂದು ಸಿನಿಮಾ

Prabhas Vs Allu Arjun
ಟಾಲಿವುಡ್50 mins ago

Prabhas Vs Allu Arjun: ‘ಪುಷ್ಪ 2’ ಜತೆ ಪೈಪೋಟಿಗಿಳಿದ ಶಿವಣ್ಣ, ಪ್ರಭಾಸ್!

Firing in JewelleryFiring in Jewellery
ಕ್ರೈಂ51 mins ago

Firing in Jewellery : ಕೊಡಿಗೇಹಳ್ಳಿ ಜುವೆಲ್ಲರಿ ಫೈರಿಂಗ್‌ ಕೇಸಿಗೆ ಟ್ವಿಸ್ಟ್‌; ದರೋಡೆಕೋರನೇ ಗುಂಡಿಗೆ ಬಲಿ!

meghana foods it raid
ಬೆಂಗಳೂರು1 hour ago

IT Raid: ಬೆಂಗಳೂರಿನಲ್ಲಿ 10 ಕಡೆ ಐಟಿ ದಾಳಿ, ತೆರಿಗೆ ಪಾವತಿಸದ ರೆಸ್ಟೋರೆಂಟ್‌ಗಳ ಪರಿಶೀಲನೆ

Israeli Forces
ದೇಶ1 hour ago

Israel Palestine War: ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್‌ ದಾಳಿ; 20 ಸಾವು

RCB Unbox
ಕ್ರೀಡೆ2 hours ago

RCB Unbox Event: ಇಂದಿನ ಆರ್​ಸಿಬಿ ಅನ್​ಬಾಕ್ಸ್​ನಲ್ಲಿ ವಿರಾಟ್​ ಕೊಹ್ಲಿಯೂ ಹಾಜರ್​!

Thalapathy Vijay
ಮಾಲಿವುಡ್2 hours ago

Thalapathy Vijay: 14 ವರ್ಷಗಳ ಬಳಿಕ ಕೇರಳಕ್ಕೆ ಬಂದ ದಳಪತಿ ವಿಜಯ್‌!

anekal self harm
ಕ್ರೈಂ2 hours ago

Self Harm: ಪ್ರೀತಿಸಿದ ಯುವತಿ ಸಿಗಲಿಲ್ಲ, ಕೈ ಕೊಯ್ದು ನೇಣು ಬಿಗಿದುಕೊಂಡ ಯುವಕ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina Bhavishya
ಭವಿಷ್ಯ5 hours ago

Dina Bhavishya : ಈ ರಾಶಿಯವರು ಎಚ್ಚರ ವಹಿಸಿ; ಅಮೂಲ್ಯವಾದ ವಸ್ತುವೊಂದು ಕೈ ತಪ್ಪಬಹುದು

Tejaswi Surya About Hanuman Chalisa Issue
ಬೆಂಗಳೂರು16 hours ago

ಹನುಮಾನ್‌ ಚಾಲೀಸಾ ಕೇಸ್‌; ಆರೋಪಿಗಳು ಅರೆಸ್ಟ್ ಆಗದಿದ್ದರೆ ಪ್ರತಿಭಟನೆ- ತೇಜಸ್ವಿ ಸೂರ್ಯ ಎಚ್ಚರಿಕೆ

read your daily horoscope predictions for march 18 2024
ಭವಿಷ್ಯ1 day ago

Dina Bhavishya : ಈ ದಿನ ನೀವೂ ಮೋಸ ಹೋಗುವುದು ಗ್ಯಾರಂಟಿ; ಬೆನ್ನ ಹಿಂದೆಯೇ ನಡೆಯುತ್ತೆ ಪಿತೂರಿ

Lok Sabha Election 2024 Congress finalises list of 13 seats
Lok Sabha Election 20242 days ago

Lok Sabha Election 2024: ಕಾಂಗ್ರೆಸ್‌ನಲ್ಲಿ 13 ಕ್ಷೇತ್ರಗಳ ಪಟ್ಟಿ ಫೈನಲ್!‌ ಸಂಭಾವ್ಯ ಅಭ್ಯರ್ಥಿಗಳ ಲಿಸ್ಟ್‌ ಇಲ್ಲಿದೆ

dina Bhvishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಅತ್ತೆ ಮನೆಯಿಂದ ಸಿಗಲಿದೆ ಭರಪೂರ ಉಡುಗೊರೆ

Dina Bhavishya
ಭವಿಷ್ಯ3 days ago

Dina Bhavishya : ಇವತ್ತು ಈ ರಾಶಿಯವರು ಮೌನದಿಂದ ಇರುವುದು ಒಳಿತು

Lok Sabha Election 2024 Is Operation JDS Worker Behind DK Brothers Breakfast Meeting
Lok Sabha Election 20244 days ago

Lok Sabha Election 2024: ಡಿಕೆ ಬ್ರದರ್ಸ್‌ ಬ್ರೇಕ್‌ಫಾಸ್ಟ್‌ ಮೀಟಿಂಗ್ ಹಿಂದೆ ‘ಆಪರೇಷನ್‌ ಜೆಡಿಎಸ್‌ ಕಾರ್ಯಕರ್ತ’?

read your daily horoscope predictions for march 15 2024
ಭವಿಷ್ಯ4 days ago

Dina Bhavishya : ಕೆಲವು ರಹಸ್ಯ ವಿಷಯಗಳು ಈ ರಾಶಿಯವರಿಗೆ ಅಚ್ಚರಿ ತರಲಿದೆ

Lok Sabha Election 2024 Yaduveer talks about entering politics and Yaduveer Krishnadatta Chamaraja Wadiyar meets BY Vijayendra
ಕರ್ನಾಟಕ5 days ago

‌Lok Sabha Election 2024: ಮೆಣಸಿನಕಾಯಿಯನ್ನು ಜೀರ್ಣಿಸಿಕೊಳ್ತೇನೆ; ನನ್ನ ಮೇಲೆ ರಾಜಸ್ಥಾನದ ಪ್ರಭಾವ ಇಲ್ಲ: ಯದುವೀರ್

Different Danny Filed Case Against Ravi Varma
ಬೆಂಗಳೂರು5 days ago

Different Danny : ಫೈಟ್‌ ಮಾಸ್ಟರ್ಸ್‌ ಫೈರ್‌ ಫೈಟಿಂಗ್‌; ರವಿವರ್ಮ ವಿರುದ್ಧ ಡಿಫರೆಂಟ್‌ ಡ್ಯಾನಿ ಸಮರ

ಟ್ರೆಂಡಿಂಗ್‌