Cheteshwar Pujara : ಭಾರತದ ಹಿರಿಯ ಕ್ರಿಕೆಟಿಗ ಚೇತೇಶ್ವರ ಪೂಜಾರಗೆ ಬ್ಯಾನ್​! Vistara News
Connect with us

ಕ್ರಿಕೆಟ್

Cheteshwar Pujara : ಭಾರತದ ಹಿರಿಯ ಕ್ರಿಕೆಟಿಗ ಚೇತೇಶ್ವರ ಪೂಜಾರಗೆ ಬ್ಯಾನ್​!

ಪೂಜಾರ (Cheteshwar Pujara) ಅವರು ಸಸೆಕ್ಸ್ ತಂಡ ಕೌಂಟಿ ಕ್ರಿಕೆಟ್​ನ ನಿರ್ಧಾರವನ್ನು ಪ್ರಶ್ನಿಸದೇ ನಿರ್ಬಂಧಗಳನ್ನು ಸ್ವೀಕರಿಸಿದ್ದಾರೆ.

VISTARANEWS.COM


on

Cheeteshwara Pujara
Koo

ಬೆಂಗಳೂರು: ಒಂದು ಋತುವಿನಲ್ಲಿ ನಾಲ್ಕು ನಿಗದಿತ ಪೆನಾಲ್ಟಿಗಳನ್ನು ಪಡೆದಿರುವ ಪರಿಣಾಮವಾಗಿ ಸಸೆಕ್ಸ್ ತಂಡಕ್ಕೆ ಪ್ರಸ್ತುತ ನಡೆಯುತ್ತಿರುವ ಕೌಂಟಿ ಚಾಂಪಿಯನ್ ಶಿಪ್ ನಲ್ಲಿ 12 ಪಾಯಿಂಟ್ ಗಳ ದಂಡ ವಿಧಿಸಲಾಗಿದೆ. ಇಸಿಬಿಯ ವೃತ್ತಿಪರ ನಡವಳಿಕೆ ನಿಯಮಗಳ ಪ್ರಕಾರ ಕ್ಲಬ್ ನಾಯಕ ಚೇತೇಶ್ವರ ಪೂಜಾರ (Cheteshwar Pujara) ಅವರನ್ನು ಒಂದು ಪಂದ್ಯದಿಂದ ಅಮಾನತುಗೊಳಿಸಲಾಗಿದೆ. ಈ ಮೂಲ ಭಾರತದಲ್ಲಿ ಎಂದೂ ಅಮಾನತು ಶಿಕ್ಷೆಯನ್ನು ಪಡೆಯದ ಪೂಜಾರ ಕೌಂಟಿ ಕ್ರಿಕೆಟ್​ನಲ್ಲಿ ಅಮಾನತು ಶಿಕ್ಷೆ ಅನುಭವಿಸಿದ್ದಾರೆ.

ವೃತ್ತಿಪರ ನಡವಳಿಕೆ ನಿಬಂಧನೆಗಳ ಪ್ರಕಾರ, ಇದು ತಂಡಕ್ಕೆ ಪ್ರತ್ಯೇಕ ಅಪರಾಧವಾಗಿ ನಿಲ್ಲುತ್ತದೆ. ಆದರೆ ನಿಯಮ 4.29 ಅಂತಹ ಅಪರಾಧಕ್ಕೆ ಸ್ವಯಂಚಾಲಿತ ದಂಡವು 12 ಅಂಕಗಳ ಕಡಿತವಾಗಿರುತ್ತದೆ ಎಂದು ಹೇಳುತ್ತದೆ.

ಸೆಪ್ಟೆಂಬರ್ 13, 2023 ರಂದು ಲಿಸೆಸ್ಟರ್​ಶೈರ್​ ವಿರುದ್ಧದ ಕೌಂಟಿ ಚಾಂಪಿಯನ್​ಶಿಪ್​ ಪಂದ್ಯದಲ್ಲಿ ಎರಡು ಹೆಚ್ಚುವರಿ ನಿಗದಿತ ಪೆನಾಲ್ಟಿಗಳನ್ನು ಪಡೆಯುವ ಮೂಲಕ, ಸಸೆಕ್ಸ್ ಸಿಸಿಸಿ ಈಗ ಒಂದು ಋತುವಿನಲ್ಲಿ ನಾಲ್ಕು ನಿಗದಿತ ಪೆನಾಲ್ಟಿಗಳ ಮಿತಿಯನ್ನು ದಾಟಿದೆ. ಹಿಂದೆ ಚಾಂಪಿಯನ್​ಶಿಪ್​ ಎರಡು ನಿಗದಿತ ಪೆನಾಲ್ಟಿಗಳನ್ನು ಸ್ವೀಕರಿಸಿತ್ತು ಎಂದು ಇಸಿಬಿ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : Asia Cup 2023 : ಸಿರಾಜ್‌ರಿಂದ 10 ಓವರ್​ ಹಾಕಿಸುವ ಉದ್ದೇಶವಿತ್ತು, ಟ್ರೈನರ್​ ಬಿಡಲಿಲ್ಲ ಎಂದ ರೋಹಿತ್​

ವೃತ್ತಿಪರ ನಡವಳಿಕೆ ನಿಯಮಗಳ ನಿಯಮ 4.30ರ ಪ್ರಕಾರ, ನಿಗದಿತ ದಂಡವನ್ನು ಸ್ವೀಕರಿಸಿದ ಎಲ್ಲಾ ಪಂದ್ಯಗಳಲ್ಲಿ ಒಬ್ಬನೇ ತಂಡವನ್ನು ಮುನ್ನಡೆಸಿದ್ದರೆ ಅದು ಪ್ರತ್ಯೇಕ ಅಪರಾಧವಾಗಿರುತ್ತದೆ. ಹೀಗಾಗಿ ನಾಯಕನು ಮುಂದಿನ ಸ್ಪರ್ಧೆಯಿಂದ ಅಮಾನತು ಶಿಕ್ಷೆಗೆ ಒಳಗಾಗುತ್ತಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪೂಜಾರ ಮತ್ತು ಸಸೆಕ್ಸ್ ದಂಡವನ್ನು ಪ್ರಶ್ನಿಸದೆ ನಿರ್ಬಂಧಗಳನ್ನು ಸ್ವೀಕರಿಸಿದ್ದಾರೆ. ಅಮಾನತುಗೆ ಶಿಕ್ಷೆಗೆ ಹೇನ್ಸ್, ಜ್ಯಾಕ್ ಕಾರ್ಸನ್ ಮತ್ತು ಅರಿ ಕಾರ್ವೆಲಾಸ್ ಕೂಡ ಸೇರಿದ್ದರೆ ಅವರಲ್ಲಿ ಯಾರನ್ನೂ ಸೆಪ್ಟೆಂಬರ್ 19ರಿಂದ ಪ್ರಾರಂಭವಾಗುವ ಡರ್ಬಿಶೈರ್ ವಿರುದ್ಧದ ಸೆಸೆಕ್ಸ್​ ಮುಂಬರುವ ಪಂದ್ಯಕ್ಕೆ ಆಯ್ಕೆ ಮಾಡಲಾಗಿಲ್ಲ.

ಹಿಂದಿನ ಪಂದ್ಯದಲ್ಲಿ ಅವರ ನಡವಳಿಕೆಯಿಂದಾಗಿ ಟಾಮ್ ಹೇನ್ಸ್ ಮತ್ತು ಜ್ಯಾಕ್ ಕಾರ್ಸನ್ ಅವರನ್ನು ಮುಖ್ಯ ಕೋಚ್ ಪಾಲ್ ಫರ್ಬ್ರೇಸ್ ಆಯ್ಕೆಗೆ ಇಲ್ಲ ಎಂದು ಹೇಳಿದ್ದಾರೆ. ಲೀಸೆಸ್ಟೈರ್​ ಪಂದ್ಯದಲ್ಲಿ ನಡೆದ ಘಟನೆಯ ತನಿಖೆ ಮುಗಿಯುವವರೆಗೂ ಆರಿ ಕಾರ್ವೆಲಾಸ್ ಕೂಡ ಲಭ್ಯವಿರುವುದಿಲ್ಲ ಎಂದು ಸಸೆಕ್ಸ್ ಹೇಳಿಕೆಯಲ್ಲಿ ತಿಳಿಸಿದೆ.

129 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದ ಸಸೆಕ್ಸ್ ಪೆನಾಲ್ಟಿ ಹೇರಿಕೆಯಿಂದಾಗಿ ಐದನೇ ಸ್ಥಾನಕ್ಕೆ ಕುಸಿದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Rohit Sharma : ರೋಹಿತ್ ಶರ್ಮಾ ಪಾಲಿನ ಭಯಾನಕ ಬೌಲರ್ ಯಾರು ಗೊತ್ತೇ? ಅವರೇ ಹೇಳಿದ್ದಾರೆ ಕೇಳಿ

VISTARANEWS.COM


on

Dale stain
Koo

ರಾಜ್​ಕೋಟ್​: ಸೆಪ್ಟೆಂಬರ್ 27ರಂದು ರಾಜ್​ಕೋಟ್​ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಆಡಲಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಮತ್ತು ಕುಲದೀಪ್ ಯಾದವ್ ಅವರಿಗೆ ಸರಣಿಯ ಮೊದಲ ಎರಡು ಏಕದಿನ ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿತ್ತು. ಅವರೀಗ ತಂಡ ಸೇರಿಕೊಳ್ಳಲಿದ್ದಾರೆ.

ಮುಂಬೈ ಮೂಲದ ರೋಹಿತ್​ ಶರ್ಮಾ ಕ್ರಿಕೆಟ್​ ಇತಿಹಾಸದ ಸಾರ್ವಕಾಲಿಕ ಅತ್ಯುತ್ತಮ ಬ್ಯಾಟರ್​ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ, ವಿಶೇಷವಾಗಿ ವೈಟ್-ಬಾಲ್ ಕ್ರಿಕೆಟ್​ಗಳಾದ ಏಕದಿನ ಮತ್ತು ಟಿ 20 ಪಂದ್ಯಗಳಲ್ಲಿ ಅವರು ಬಾರಿಸಿರುವ ರನ್​ಗಳೇ ಅದಕ್ಕೆ ಸಾಕ್ಷಿ. 36 ವರ್ಷದ ಮುಂಬೈಕರ್ ಏಕದಿನ ಪಂದ್ಯಗಳಲ್ಲಿ ವೇಗವಾಗಿ 10,000 ರನ್ ಗಳಿಸಿದ ಎರಡನೇ ಬ್ಯಾಟರ್​ ಮತ್ತು ಟಿ 20ಐನಲ್ಲಿ ಸಾರ್ವಕಾಲಿಕ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ.

ಏಕದಿನ ಪಂದ್ಯಗಳಲ್ಲಿ ಮೂರು ದ್ವಿಶತಕಗಳು ಮತ್ತು ಟಿ 20ಐನಲ್ಲಿ ನಾಲ್ಕು ಶತಕಗಳನ್ನು ಗಳಿಸಿದ ಏಕೈಕ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ಅವರು ತಮ್ಮ ವೃತ್ತಿಜೀವನದಲ್ಲಿ ಎದುರಿಸಿದ ಕಠಿಣ ಬೌಲರ್ ಬಗ್ಗೆ ವಿವರಣೆ ನೀಡಿದ್ದಾರೆ. ಟ್ರೆಂಟ್ ಬೌಲ್ಟ್, ಮೊಹಮ್ಮದ್ ಅಮೀರ್ ಮತ್ತು ಶಾಹೀನ್ ಅಫ್ರಿದಿ ಸೇರಿದಂತೆ ಎಡಗೈ ಬೌಲರ್​ಗಳೆಂದರೆ ರೋಹಿತ್​ಗೆ ಸ್ವಲ್ಪ ಭಯ. ಆದರೆ ಅವರನ್ನು ಹೆಚ್ಚು ಭಯಭೀತರನ್ನಾಗಿ ಮಾಡಿದ್ದು ಬಲಗೈ ಬೌಲರ್​.

ದಕ್ಷಿಣ ಆಫ್ರಿಕಾದ ವೇಗಿ

ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಡೇಲ್ ಸ್ಟೇನ್ ಅವರನ್ನು ರೋಹಿತ್ ಶರ್ಮಾ ಅವರು ಎದುರಿಸಿದ ಕಠಿಣ ಬೌಲರ್ ಎಂದು ಕರೆದಿದ್ದಾರೆ. ಸ್ಟೇನ್ ಅವರ ಶಿಸ್ತು, ಕೆಲಸದ ನೀತಿ ಮತ್ತು ಹೊಸ ಚೆಂಡಿನೊಂದಿಗಿನ ಅವರ ಸಾಮರ್ಥ್ಯವನ್ನು ಎದುರಿಸುವುದು ಸವಾಲಿನ ಕೆಲಸ ಎಂದು ರೋಹಿತ್ ಬಣ್ಣಿಸಿದ್ದಾರೆ. ಆದರೂ ಅವರ ವಿರುದ್ಧ ಆಡಲು ಅವರು ಯಾವಾಗಲೂ ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

“ಡೇಲ್ ಸ್ಟೇನ್ ನನ್ನ ಪಾಲಿಗೆ ಎದುರಿಸಲು ಅತ್ಯಂತ ಕಠಣ ಬೌಲರ್​. ಅವರ ಕೆಲಸದ ನೀತಿ, ಶಿಸ್ತು ಮತ್ತು ಹೊಸ ಚೆಂಡಿನೊಂದಿಗಿನ ಅವರ ಸಾಮರ್ಥ್ಯವು ಯಾವಾಗಲೂ ಸವಾಲುಗಳಾಗಿದ್ದವು, ಮತ್ತು ನಾನು ಅವರ ವಿರುದ್ಧ ಆಡಲು ಇಷ್ಟಪಡುತ್ತೇನೆ”ಎಂದು ರೋಹಿತ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ ವ: Rohit Sharma : ಏರ್​ಪೋರ್ಟ್​ಗೆ ಹೊರಡುವಾಗ ಪಾಸ್​​​ಪೋರ್ಟ್​​ ಮರೆತು ಬಂದ ರೋಹಿತ್​! ಎಲ್ಲರಿಗೂ ಪೀಕಲಾಟ

ರೋಹಿತ್​ ಶರ್ಮಾ ವಿಶ್ವಕಪ್ 2023 ರಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ, ಭಾರತದಲ್ಲಿ ತಮ್ಮ ನೆಚ್ಚಿನ ಮೈದಾನವನ್ನು ಆಯ್ಕೆ ಮಾಡಲು ಕೇಳಿದಾಗ ತಮ್ಮ ತವರು ಮೈದಾನ ವಾಂಖೆಡೆ ಅಲ್ಲ ಎಂದು ಹೇಳಿದರು. ಬದಲಾಗಿ ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್​ ಅತ್ಯುತ್ತಮ ಕ್ರಿಕೆಟ್​ ಸ್ಟೇಡಿಯಮ್ ಎಂದು ಹೇಳಿದರು.

ನಾನು ಈಡನ್ ಗಾರ್ಡನ್ಸ್ನಲ್ಲಿ (ಟೆಸ್ಟ್ ಕ್ರಿಕೆಟ್​​ಗೆ) ಭಾರತಕ್ಕೆ ಪಾದಾರ್ಪಣೆ ಮಾಡಿದೆ. ವೆಸ್ಟ್ ಇಂಡೀಸ್ ವಿರುದ್ಧ 177 ರನ್ ಗಳಿಸಿದೆ, ನಂತರ ಅತಿ ಹೆಚ್ಚು ಏಕದಿನ ಸ್ಕೋರ್ 264. ಅದೂ ಕೋಲ್ಕೊತಾದಲ್ಲಿ. ನನ್ನ ಐಪಿಎಲ್ ಶತಕವೂ ಅಲ್ಲಿತ್ತು. ನಾನು ಅಲ್ಲಿ ರಣಜಿ ಟ್ರೋಫಿ 200ರನ್ ಗಳಿಸಿದ್ದೇನೆ. ಸ್ಕೋರ್​ಗಳನ್ನು ಮೀರಿ, ಐಪಿಎಲ್ ನಾಯಕನಾಗಿ ನನ್ನ ಮೊದಲ ಟ್ರೋಫಿ ಅಲ್ಲಿಯೇ ಬಂದಿತು. ಮತ್ತೊಂದು ಪ್ರಶಸ್ತಿಯೂ ಅಲ್ಲಿಯೂ ಬಂದಿತು. ಹೀಗಾಗಿ ಆ ಕ್ರೀಡಾಂಗಣವನ್ನು ಪ್ರೀತಿಸುತ್ತೇನೆ ಎಂದು ಅವರು ಹೇಳಿದರು.

Continue Reading

ಕ್ರಿಕೆಟ್

World Cup 2023 : ವಿಶ್ವ ಕಪ್​ಗೆ 15 ಸದಸ್ಯರ ಬಾಂಗ್ಲಾದೇಶ ತಂಡ ಪ್ರಕಟ, ಸ್ಟಾರ್ ಆಟಗಾರನೇ ಇಲ್ಲ

ವಿಶ್ವ ಕಪ್​ಗೆ (World Cup 2023) ಆಯ್ಕೆಯಾಗಿರುವ ಬಾಂಗ್ಲಾದೇಶ ತಂಡದನ್ನು ಆಲ್​ರೌಂಡರ್​​ ಶಕೀಬ್ ಅಲ್ ಹಸನ್ ತಂಡವನ್ನು ಮುನ್ನಡೆಸಲಿದ್ದು, ಲಿಟನ್ ದಾಸ್ ಉಪನಾಯಕನ ಪಾತ್ರವನ್ನು ನಿರ್ವಹಿಸಲಿದ್ದಾರೆ.

VISTARANEWS.COM


on

Bangladesh Cricket team
Koo

ನವದೆಹಲಿ: ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಭಾರತದಲ್ಲಿ ನಡೆಯಲಿರುವ ಮುಂಬರುವ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಗಾಗಿ ಬಾಂಗ್ಲಾದೇಶ ಮಂಗಳವಾರ (ಸೆಪ್ಟೆಂಬರ್ 26) ತನ್ನ 15 ಸದಸ್ಯರ ತಂಡವನ್ನು ಅನಾವರಣಗೊಳಿಸಿದೆ. ಆಲ್​ರೌಂಡರ್​​ ಶಕೀಬ್ ಅಲ್ ಹಸನ್ ತಂಡವನ್ನು ಮುನ್ನಡೆಸಲಿದ್ದು, ಲಿಟನ್ ದಾಸ್ ಉಪನಾಯಕನ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಜುಲೈನಲ್ಲಿ ನಿವೃತ್ತಿ ನಿರ್ಧಾರವನ್ನು ಬದಲಾಯಿಸುವ ಮೂಲಕ ಕ್ರಿಕೆಟ್​ ಕ್ಷೇತ್ರಕ್ಕೆ ಆಘಾತ ನೀಡಿದ್ದ ಅನುಭವಿ ತಮೀಮ್ ಇಕ್ಬಾಲ್ ಅವರನ್ನು ವಿಶ್ವಕಪ್ ತಂಡದಲ್ಲಿ ಸೇರಿಸಿಕೊಳ್ಳಲಾಗಿಲ್ಲ. ಬೆನ್ನುನೋವಿನಿಂದಾಗಿ ಏಷ್ಯಾ ಕಪ್ 2023 ರಲ್ಲಿ ಕಾಣಿಸಿಕೊಳ್ಳದಿದ್ದರೂ, ಅವರು ಫಿಟ್ನೆಸ್ ಅನ್ನು ಮರಳಿ ಪಡೆದುಕೊಂಡಿದ್ದರು. ಅವರು ಇತ್ತೀಚೆಗೆ ತವರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾಗವಹಿಸಿದ್ದರು. ಆದ್ದರಿಂದ, ವಿಶ್ವ ಕಪ್ ತಂಡದಿಂದ ಅವರ ಅನುಪಸ್ಥಿತಿಯು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ : World Cup 2023 : ಮುಂಬರುವ ವಿಶ್ವ ಕಪ್​ ಮಿಸ್ ಮಾಡಿಕೊಳ್ಳಲಿರುವ ಸ್ಟಾರ್​ ಪ್ಲೇಯರ್​ಗಳ ಲಿಸ್ಟ್​ ಇಲ್ಲಿದೆ

ಜುಲೈನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಬಲಗೈ ವೇಗಿ ಎಬಾದತ್ ಹುಸೇನ್ ಮೊಣಕಾಲು ಗಾಯದಿಂದ ಅವಕಾಶ ಪಡೆಯಲು ವಿಫಲರಾಗಿದ್ದರು. ಅವರೂ ವಿಶ್ವ ಕಪ್​ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಅನುಭವಿಗಳ ಸೇರ್ಪಡೆ

ತಮೀಮ್ ಅನುಪಸ್ಥಿತಿಯ ಹೊರತಾಗಿಯೂ, ಬಾಂಗ್ಲಾದೇಶದ ಬ್ಯಾಟಿಂಗ್ ಸಾಲಿನಲ್ಲಿ ಮುಷ್ಫಿಕರ್ ರಹೀಮ್, ನಜ್ಮುಲ್ ಹುಸೇನ್ ಶಾಂಟೊ, ಲಿಟನ್ ದಾಸ್ ಮತ್ತು ಶಕೀಬ್ ಅವರಂತಹ ಅನುಭವಿ ಪ್ರಚಾರಕರು ಇದ್ದಾರೆ. ಶಕೀಬ್, ಮೆಹಿದಿ ಹಸನ್ ಮಿರಾಜ್, ನಸುಮ್ ಅಹ್ಮದ್ ಮತ್ತು ಮಹೆದಿ ಹಸನ್ ಅವರ ಉಪಸ್ಥಿತಿಯೊಂದಿಗೆ ಬಾಂಗ್ಲಾದೇಶದ ಸ್ಪಿನ್ ವಿಭಾಗವು ಸಾಕಷ್ಟು ಪ್ರಬಲವಾಗಿದೆ.

ಟಸ್ಕಿನ್ ಅಹ್ಮದ್ ಮತ್ತು ಮುಸ್ತಾಫಿಜುರ್ ರೆಹಮಾನ್ ವೇಗದ ದಾಳಿಯನ್ನು ಮುನ್ನಡೆಸಲಿದ್ದು, ಶೋರಿಫುಲ್ ಇಸ್ಲಾಂ, ಹಸನ್ ಮಹಮೂದ್ ಮತ್ತು ತಂಝಿಮ್ ಹಸನ್ ಕೂಡ ಅವಕಾಶ ಪಡೆದಿದ್ದಾರೆ. ಬಾಂಗ್ಲಾದೇಶ ತನ್ನ ವಿಶ್ವಕಪ್ ಅಭಿಯಾನವನ್ನು ಅಕ್ಟೋಬರ್ 7 ರಂದು ಧರ್ಮಶಾಲಾದಲ್ಲಿ ಅಫ್ಘಾನಿಸ್ತಾನ ವಿರುದ್ಧ ಪ್ರಾರಂಭಿಸಲಿದೆ.

ಬಾಂಗ್ಲಾದೇಶ ತಂಡ: ಶಕೀಬ್ ಅಲ್ ಹಸನ್ (ನಾಯಕ), ಮುಷ್ಫಿಕರ್ ರಹೀಮ್, ಲಿಟನ್ ದಾಸ್ (ಉಪನಾಯಕ), ನಜ್ಮುಲ್ ಹುಸೇನ್ ಶಾಂಟೊ, ಮೆಹಿದಿ ಹಸನ್ ಮಿರಾಜ್, ತೌಹಿದ್ ಹೃದೋಯ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರಹಮಾನ್, ಶೋರಿಫುಲ್ ಇಸ್ಲಾಂ, ಹಸನ್ ಮಹಮೂದ್, ನಸೂಮ್ ಅಹ್ಮದ್, ಮಹೆದಿ ಹಸನ್, ತಂಝೀಮ್ ಹಸನ್ ಸಾಕಿಬ್, ತಂಜಿದ್ ಹಸನ್ ತಮೀಮ್, ಮಹಮುದುಲ್ಲಾ ರಿಯಾದ್.

ಶ್ರೀಲಂಕಾ ತಂಡವೂ ಪ್ರಕಟ

ಶ್ರೀಲಂಕಾದ ಸ್ಟಾರ್ ಆಲ್ರೌಂಡರ್ ವನಿಂದು ಹಸರಂಗ ಗಾಯದ ಸಮಸ್ಯೆಯಿಂದಾಗಿ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವುದರಿಂದ ಮುಂಬರುವ ಏಕ ದಿನ ವಿಶ್ವಕಪ್​​ಗೆ (World Cup 2023) ಶ್ರೀಲಂಕಾ ಮಂಗಳವಾರ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಮೂರನೇ ಹಂತದ ಸ್ನಾಯು ಸೆಳೆತದಿಂದಾಗಿ ಹಸರಂಗ ಟೂರ್ನಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಲಂಕಾ ತಂಡವು ಪ್ರಮುಖ ಬೌಲರ್​ಗಳು ಇಲ್ಲದೇ ಆಡುವಂತಾಗಿದೆ. ತಮ್ಮ ಕೆಲವು ಪ್ರಮುಖ ಆಟಗಾರರನ್ನು ಕಾಡುತ್ತಿರುವ ಗಾಯವು ಅಲ್ಲಿನ ಆಯ್ಕೆದಾದರರನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಇದೀಗ ಪ್ರಮುಖ ಸ್ಪಿನ್ನರ್​ಗಳು ಇಲ್ಲದೇ ತಂಡವನ್ನು ಪ್ರಕಟಿಸಲಾಗಿದೆ.

ಊಹಾಪೋಹಗಳು ಮತ್ತು ಅನುಮಾನಗಳನ್ನು ನಿವಾರಿಸಿದ ದಸುನ್ ಶನಕಾ ಅವರು ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ವನಿಂದು ಹಸರಂಗ, ಮಹೇಶ್ ತೀಕ್ಷಣಾ ಮತ್ತು ದಿಲ್ಶಾನ್ ಮಧುಶಂಕಾ ಅವರ ಫಿಟ್ನೆಸ್ ಬಗ್ಗೆ ದೀರ್ಘಕಾಲದ ಕಳವಳ ವ್ಯಕ್ತತೊಂಡಿವೆ. ಶ್ರೀಲಂಕಾದ ಮ್ಯಾನೇಜ್ಮೆಂಟ್ ಈ ವಿಷಯದ ಮೇಲೆ ಬೆಳಕು ಚೆಲ್ಲಿದೆ, ಅವರ ಭಾಗವಹಿಸುವಿಕೆಯು ಅವರ ದೈಹಿಕ ಸ್ಥಿತಿಯ ಮೇಲೆ ಅವಲಂಬಿತವಾಗಿದೆ ಎಂದು ಒತ್ತಿಹೇಳಿದೆ.

ಶ್ರೀಲಂಕಾ ತಂಡ: ದಸುನ್ ಶನಕಾ (ನಾಯಕ), ಕುಸಾಲ್ ಮೆಂಡಿಸ್ (ಉಪನಾಯಕ), ಕುಸಾಲ್ ಪೆರೆರಾ, ಪಥುಮ್ ನಿಸ್ಸಾಂಕಾ, ದಿಮುತ್ ಕರುಣರತ್ನೆ, ಸದೀರಾ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದುಶಾನ್ ಹೇಮಂತ, ಮಹೇಶ್ ತೀಕ್ಷಾ, ದುನಿತ್ ವೆಲ್ಲಾಗೆ, ಕಸುನ್ ರಜಿತಾ, ಮಥೀಶಾ ಪತಿರಾನಾ, ಲಹಿರು ಕುಮಾರ, ದಿಲ್ಶಾನ್ ಮಧುಶಂಕಾ.

Continue Reading

ಕ್ರಿಕೆಟ್

World Cup 2023 : ಮುಂಬರುವ ವಿಶ್ವ ಕಪ್​ ಮಿಸ್ ಮಾಡಿಕೊಳ್ಳಲಿರುವ ಸ್ಟಾರ್​ ಪ್ಲೇಯರ್​ಗಳ ಲಿಸ್ಟ್​ ಇಲ್ಲಿದೆ

ಅಕ್ಟೋಬರ್ 5ರಿಂದ ಭಾರತದ ಆತಿಥ್ಯದಲ್ಲಿ ಏಕದಿನ ವಿಶ್ವ ಕಪ್​ ವಿಶ್ವ ಕಪ್​ ನಡೆಯಲಿದೆ. ಬಹುತೇಕ ತಂಡಗಳು ಈಗಾಗಲೇ ಭಾರತಕ್ಕೆ ಬಂದು ಬೀಡುಬಿಟ್ಟಿವೆ.

VISTARANEWS.COM


on

Rishabh Pant
Koo

ನವ ದೆಹಲಿ: ಅಕ್ಟೋಬರ್ 5 ರಿಂದ ಭಾರತದಲ್ಲಿ ಪ್ರಾರಂಭವಾಗಲಿರುವ ಏಕದಿನ ವಿಶ್ವಕಪ್​​ಗೆ ಮುಂಚಿತವಾಗಿ ಎಲ್ಲ ತಂಡಗಳಲ್ಲಿ ಗಾಯದ ಆತಂಕ ಎದುರಾಗಿವೆ. ಕಳೆದ ಆವೃತ್ತಿಯ ಟಿ 20 ಏಷ್ಯಾ ಕಪ್​​ನ ಪಂದ್ಯಾವಳಿಯ ಆಟಗಾರ ಪ್ರಶಸ್ತಿ ಪಡೆದ ಶ್ರೀಲಂಕಾದ ಸ್ಟಾರ್ ಆಲ್​ರೌಂಡರ್​​ ವನಿಂದು ಹಸರಂಗ ಅವರು ಮೆಗಾ ಟೂರ್ನಮೆಂಟ್​ನಿಂದ ಹೊರಗುಳಿಯುವ ಕ್ರಿಕೆಟಿಗರ ಪಟ್ಟಿಗೆ ಸೇರಿಕೊಂಡಿದ್ದಾರೆ.

ಹಸರಂಗ ಹೊರತುಪಡಿಸಿ, ಶ್ರೀಲಂಕಾ ಕೂಡ ವಿಶ್ವಕಪ್​​ನಲ್ಲಿ ದುಷ್ಮಂತ ಚಮೀರಾ ಅವರ ಸೇವೆಯನ್ನು ಕಳೆದುಕೊಳ್ಳಲಿದೆ. ಹೀಗಾಗಿ ಯುವ ಆಟಗಾರರಾದ ಮಹೀಶ್​​ ತೀಕ್ಷಣ, ಮತೀಶಾ ಪತಿರಾನಾ ಮತ್ತು ದಿಲ್ಶಾನ್ ಮಧುಶಂಕಾ ಅವರನ್ನು ತಂಡ ಅಲಂಭಿಸಿದೆ.

ಇದೇ ರೀತಿ ಟೂರ್ನಿಯಲ್ಲಿ ಆಡಲಿರುವ ಹಲವು ತಂಡಗಳಲ್ಲಿ ಆಟಗಾರರು ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದಾರೆ. ದಕ್ಷಿಣ ಆಫ್ರಿಕಾದ ವೇಗಿ ಅನ್ರಿಚ್ ನೋರ್ಜೆ , ಇಂಗ್ಲೆಂಡ್​​ ವೇಗದ ಬೌಲರ್​ ಜೋಫ್ರಾ ಆರ್ಚರ್ ಮತ್ತು ಪಾಕಿಸ್ತಾನದ ಯುವ ವೇಗದ ಬೌಲರ್​ ನಸೀಮ್ ಶಾ ಕೂಡ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ. ಇದೇ ವೇಲೆ ಇಂಗ್ಲೆಂಡ್​ ಸ್ಟಾರ್ ಬ್ಯಾಟರ್​ ಜೇಸನ್ ರಾಯ್ ಅವರನ್ನು ಕೊನೆಯ ಕ್ಷಣದಲ್ಲಿ ತಂಡದಿಂದ ಕೈಬಿಡಲಾಗಿದೆ. ಹ್ಯಾರಿ ಬ್ರೂಕ್ ಅವರನ್ನು ಅವರ ಬದಲಿ ಆಟಗಾರನಾಗಿ ಘೋಷಿಸಲಾಗಿದೆ. ದಕ್ಷಿಣ ಆಫ್ರಿಕಾದ ಆಂಡಿಲೆ ಫೆಹ್ಲುಕ್ವಾಯೊ ಮತ್ತು ಲಿಜಾದ್ ವಿಲಿಯಮ್ಸ್ ಅವರನ್ನು ಬದಲಿ ಆಟಗಾರರಾಗಿ ದಕ್ಷಿಣ ಆಫ್ರಿಕಾ ಹೆಸರಿಸಿದೆ. ಆಫ್ರಿಕಾ ತಂಡದ ಸಿಸಾಂಡಾ ಮಗಲಾ ಅವರೂ ತಂಡದಲ್ಲಿ ಇಲ್ಲ.

ಇದನ್ನೂ ಓದಿ : Asia Cup 2023 : ಏಕ ದಿನ ಕ್ರಿಕೆಟ್​ ಇತಿಹಾಸದಲ್ಲಿಯೇ ಕಳಪೆ ಸಾಧನೆ ಮಾಡಿದ ಶ್ರೀಲಂಕಾ ತಂಡ

ನ್ಯೂಜಿಲೆಂಡ್​ ವಿಚಾರಕ್ಕೆಬಂದಾಗ ನಾಯಕ ಕೇನ್ ವಿಲಿಯಮ್ಸನ್ 2023 ರ ಐಪಿಎಲ್ ಸಮಯದಲ್ಲಿ ಗಾಯಕ್ಕೆ ಒಳಗಾಗಿದ್ದರು. ಅಲ್ಲಿಂದ ಇನ್ನೂ ಸ್ಪರ್ಧಾತ್ಮಕ ಪಂದ್ಯವನ್ನು ಆಡಿಲ್ಲ. ಅವರನ್ನು ನ್ಯೂಜಿಲೆಂಡ್​ನ ವಿಶ್ವಕಪ್ ತಂಡದಲ್ಲಿ ಸೇರಿಸಲಾಗಿದೆ ಆದರೆ ಅವರ ಫಿಟ್ನೆಸ್ ಅನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಇದಲ್ಲದೆ, ವೇಗಿ ಟಿಮ್ ಸೌಥಿ ಇತ್ತೀಚೆಗೆ ಹೆಬ್ಬೆರಳಿನ ಗಾಯದಿಂದ ಬಳಲುತ್ತಿದ್ದಾರೆ, ಇದು ಅವರನ್ನು ಸ್ಪರ್ಧೆಯಿಂದ ಹೊರಗುಳಿಯುವಂತೆ ಮಾಡುತ್ತದೆ. ಮೈಕೆಲ್ ಬ್ರೇಸ್​​ವೆಲ್​ ಅವರೂ ಗಾಯದ ಕಾರಣಕ್ಕೆ ತಂಡಿಂದ ಹೊರಗುಳಿದಿದ್ದಾರೆ.

ಭಾರತದಲ್ಲಿ ಯಾರಿಲ್ಲ?

ಭಾರತದಿಂದ ರಿಷಭ್ ಪಂತ್ ಅವಕಾಶ ಕಳೆದುಕೊಂಡ ಪ್ರಮುಖ ಆಟಗಾರ. ಕಳೆದ ವರ್ಷ ಕಾರು ಅಪಘಾತದಲ್ಲಿ ಅನುಭವಿಸಿದ ಅನೇಕ ಗಾಯಗಳಿಂದ ಚೇತರಿಸಿಕೊಳ್ಳುತ್ತಿರುವುದರಿಂದ ಟೂರ್ನಿಇಂದ ಹೊರಗುಳಿಯಲಿದ್ದಾರೆ. ಪ್ರಮುಖ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಕರೆ ಪಡೆಯಲು ವಿಫಲರಾಗಿದ್ದಾರೆ. ಪ್ರಸ್ತುತ, ಅಕ್ಷರ್ ಪಟೇಲ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ವಿಶ್ವಕಪ್​ಗೆ ಫಿಟ್ ಆಗುವ ನಿರೀಕ್ಷೆಯಿದೆ.

ಆಸ್ಟ್ರೇಲಿಯಾ ತಂಡದ ಪರ ಟ್ರಾವಿಸ್ ಹೆಡ್ ಪ್ರಸ್ತುತ ಕೈ ಗಾಯದಿಂದ ಬಳಲುತ್ತಿರುವುದರಿಂದ ಅವರ ವಿಶ್ವ ಕಪ್​ ಭವಿಷ್ಯವೂ ಗೊಂದಲದಲ್ಲಿದೆ. ಅವರು ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ. ಇಡೀ ಪಂದ್ಯಾವಳಿಯಲ್ಲದಿದ್ದರೂ ವಿಶ್ವಕಪ್​ನ ಕೆಲವು ಪಂದ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಪ್ರಸ್ತುತ ವಿಶ್ವಕಪ್ ತಂಡದ ಭಾಗವಲ್ಲದ ಮರ್ನಸ್​ ಲಾಬುಶೇನ್​ ತಂಡಕ್ಕೆ ಸೇರ್ಪಡೆಗೊಳ್ಳುವ ಅವಕಾಶಗಳಿವೆ.

Continue Reading

ಕ್ರಿಕೆಟ್

Ruturaj Gaikwad : ಚೀನಾಗೆ ಹೊರಡುವ ಮೊದಲು ಪುಣೆಯ ಗಣೇಶ ಮಂದಿರಕ್ಕೆ ಭೇಟಿ ನೀಡಿದ ಋತುರಾಜ್​

ಏಷ್ಯಾ ಕಪ್​ಗೆ ಭಾರತದ ಎರಡನೇ ಹಂತದ ತಂಡವನ್ನು ಕಳುಹಿಸಲಾಗಿದೆ. ಆ ತಂಡವನ್ನು ಋತುರಾಜ್ ಗಾಯಕ್ವಾಡ್​ (Ruturaj Gaikwad)ಮುನ್ನಡೆಸಲಿದ್ದಾರೆ.

VISTARANEWS.COM


on

Ruturaj Gaikwad
Koo

ಪುಣೆ: ಮಹಾರಾಷ್ಟ್ರ ಮೂಲದ ಬ್ಯಾಟರ್​ ಋತುರಾಜ್​ ಗಾಯಕ್ವಾಡ್​ (Ruturaj Gaikwad) ಏಷ್ಯನ್​ ಗೇಮ್ಸ್​ನಲ್ಲಿ ಭಾರತ ಕ್ರಿಕೆಟ್​ ತಂಡದ ನೇತೃತ್ವ ವಹಿಸಿದ್ದಾರೆ. ಆದರೆ, ವಿವಿಎಸ್​ ಲಕ್ಷ್ಮಣ್​ ನೇತೃತ್ವದ ಕೋಚಿಂಗ್​ ಸಿಬ್ಬಂದಿ ಜತೆಗೆ ಆಟಗಾರರೆಲ್ಲರೂ ಚೀನಾ ತಲುಪಿದ್ದಾರೆ. ಆದರೆ, ಋತುರಾಜ್​ ತಡವಾಗಿ ಹೊರಟಿದ್ದಾರೆ. ಮಂಗಳವಾರ ಅವರು ಚೀನಾದ ಫ್ಲೈಟ್ ಹತ್ತಿದ್ದಾರೆ. ಪ್ರವಾಸ ಆರಂಭಿಸುವ ಮೊದಲು ಅವರು ಪುಣೆಯ ವಿಶ್ವಪ್ರಸಿದ್ಧ ಶ್ರೀಮಂತ ದಗಡೂಶೇಠ್​ ಹಲ್ವಾಯಿ ಗಣಪತಿ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ದಗಡೂಶೇಟ್​ ಗಣಪತಿ ಮಂದಿರ ಪುಣೆ ನಗರದ ಮಧ್ಯದಲ್ಲಿದ್ದು ವರ್ಷಕ್ಕೆ ಲಕ್ಷಾಂತರ ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ವಿಘ್ನ ನಿವಾರಕನಾದ ಗಣಪ ಇಲ್ಲಿಗೆ ಬರುವ ಭಕ್ತರ ಅಭಿಲಾಷೆಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಎಲ್ಲರದು. ಅಂತೆಯೇ ಏಷ್ಯನ್​ ಗೇಮ್ಸ್​ಗೆ ಹೊರಟಿರುವ ಋತುರಾಜ್​ ಗಾಯಕ್ವಾಡ್​ ತಮ್ಮ ಪ್ರಾರ್ಥನೆ ಸಲ್ಲಿಸಲು ಗಣಪತಿ ದೇವಳಕ್ಕೆ ಹೋಗಿದ್ದಾರೆ.

ಋತುರಾಜ್​ ಗಾಯಕ್ವಾಡ್ ಅವರೊಂದಿಗೆ ಪತ್ನಿ ಉತ್ಕರ್ಷ ಪವಾರ್​ ಕೂಡ ಇದ್ದರು. ಋತುರಾಜ್ ಮತ್ತು ಉತ್ಕರ್ಷ ಅವರು ಐಪಿಎಲ್ ಮುಕ್ತಾಯಗೊಂಡ ತಕ್ಷಣ ವಿವಾಹವಾಗಿದ್ದರು. ಅವರಿಬ್ಬರ ವಿವಾಹ ಆಯೋಜನೆಗೊಂಡಿದ್ದ ಕಾರಣ ವಿಶ್ವ ಟೆಸ್ಟ್​ ಚಾಂಪಿಯನ್​ಷಿನ್​ನ ಫೈನಲ್​ ಪಂದ್ಯದಲ್ಲಿ ಬ್ಯಾಕ್​ ಅಪ್​ ಆಟಗಾರನಾಗಿ ಆಯ್ಕೆಗೊಂಡಿದ್ದ ಋತುರಾಜ್​ ಇಂಗ್ಲೆಂಡ್​ಗೆ ಪ್ರವಾಸ ಮಾಡಿರಲಿಲ್ಲ.

ಋತುರಾಜ್ ಗಾಯಕ್ವಾಡ್​ಗೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಮೊದಲ ಪಂದ್ಯದಲ್ಲಿ ಅವರು ಅರ್ಧ ಶತಕ ಬಾರಿಸುವ ಮೂಲಕ ಮಿಂಚಿದ್ದರು. ಅಲ್ಲದೆ, ಏಷ್ಯಾ ಕಪ್​ಗೆ ಮೊದಲು ಅವರಿಗೆ ಫುಲ್ ಅಭ್ಯಾಸ ದೊರಕಿದಂತಾಗಿದೆ.

ಎರಡನೇ ಹಂತದ ಹಂತ

ಅಕ್ಟೊಬರ್ 5ರಂದು ಭಾರತದ ಆತಿಥ್ಯದಲ್ಲಿ ವಿಶ್ವ ಕಪ್ ಆರಂಭವಾಗಲಿದೆ. ಹೀಗಾಗಿ ಏಷ್ಯನ್ ಗೇಮ್ಸ್​ಗೆ ಎರಡನೇ ಹಂತದ ತಂಡವನ್ನು ಕಳುಹಿಸಲಾಗಿದೆ. ಆರಂಭಿಕ ತಂಡವನ್ನು ಜುಲೈನಲ್ಲಿ ಹೆಸರಿಸಲಾಯಿತು. ಬಳಿಕ ಒಂದು ಬದಲಾವಣೆ ಮಾಡಲಾಯಿತು ಆರಂಭಿಕ ತಂಡದಲ್ಲಿದ್ದ ಶಿವಂ ಮಾವಿ ಬದಲಿಗೆ ಆಕಾಶ್ ದೀಪ್ ಅವರನ್ನು ಏಷ್ಯನ್ ಗೇಮ್ಸ್ 2023 ಗಾಗಿ ಭಾರತೀಯ ಪುರುಷರ ಕ್ರಿಕೆಟ್ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಮಾವಿ ಬೆನ್ನುನೋವಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಹ್ಯಾಂಗ್ಝೌಗೆ ಪ್ರಯಾಣಿಸುವುದಿಲ್ಲ.

ಇದನ್ನೂ ಓದಿ : Asia Cup 2023 : ಏಷ್ಯಾಕಪ್ ಗೆದ್ದ ರೋಹಿತ್ ಶರ್ಮಾ ಬಳಗಕ್ಕೆ ಪ್ರಧಾನಿ ಮೋದಿ ಅಭಿನಂದನೆ, ಏನಂದ್ರು ಅವರು?

ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 8 ರವರೆಗೆ ನಡೆಯಲಿರುವ ಏಷ್ಯನ್ ಗೇಮ್ಸ್ 2023 ರ ಪುರುಷರ ಕ್ರಿಕೆಟ್ ಈವೆಂಟ್ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 8 ರವರೆಗೆ ನಡೆಯಲಿದೆ. ಎಲ್ಲಾ ಪಂದ್ಯಗಳು ಪಿಂಗ್ಫೆಂಗ್ ಕ್ರಿಕೆಟ್ ಫೀಲ್ಡ್ಸ್​​ನ ಝೆಜಿಯಾಂಗ್ ಯುನಿವರ್ಸಿಟಿ ಆಫ್ ಟೆಕ್ನಾಲಜಿಯಲ್ಲಿ ನಡೆಯಲಿವೆ.

ಅಕ್ಟೋಬರ್ 5 ರಿಂದ ಭಾರತದಲ್ಲಿ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಪ್ರಾರಂಭವಾಗಲಿದ್ದು, ಭಾರತವು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಇತರರಂತಹ ಮೊದಲ ತಂಡದ ನಿಯಮಿತ ಆಟಗಾರರಿಲ್ಲದೆ ಹ್ಯಾಂಗ್ಝೌ ಕ್ರೀಡಾಕೂಟದಲ್ಲಿ ಹೆಚ್ಚಾಗಿ ಎರಡನೇ ಸ್ಟ್ರಿಂಗ್ ತಂಡವನ್ನು ಕಣಕ್ಕಿಳಿಸಲಿದೆ.

ಏಷ್ಯನ್​ ಗೇಮ್ಸ್​ಗೆ ಭಾರತ ತಂಡ

ಋತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷ್ದೀಪ್ ಸಿಂಗ್, ಮುಖೇಶ್ ಕುಮಾರ್, ಶಿವಂ ದುಬೆ, ಪ್ರಭ್ಸಿಮ್ರನ್ ಸಿಂಗ್ (ವಿಕೆಟ್ ಕೀಪರ್), ಆಕಾಶ್ ದೀಪ್.

ಮೀಸಲು ಆಟಗಾರರು: ಯಶ್ ಠಾಕೂರ್, ಸಾಯಿ ಕಿಶೋರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಸಾಯಿ ಸುದರ್ಶನ್

Continue Reading
Advertisement
MLA BY Vijayendra
ಕರ್ನಾಟಕ4 hours ago

Cauvery Water Dispute: ಜನರ ಸಂಕಷ್ಟದೊಂದಿಗೆ ರಾಜ್ಯ ಸರ್ಕಾರ ಚೆಲ್ಲಾಟ: ಬಿ.ವೈ.ವಿಜಯೇಂದ್ರ

jai shankar
ದೇಶ4 hours ago

UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!

Raja Three yakshagana
ಕಲೆ/ಸಾಹಿತ್ಯ4 hours ago

Yakshagana Show: ಅ.7ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷನೂಪುರ ʼರಾಜಾ ತ್ರೀʼ ಪ್ರದರ್ಶನ

What did they wrong, Why they are murdered asked Parents Of Manipur Teens
ದೇಶ5 hours ago

Manipur Horror: ಅಪಹರಿಸಿ ಕೊಂದ್ರಲ್ಲಾ… ನಮ್ಮ ಮಕ್ಕಳು ಮಾಡಿದ ತಪ್ಪಾದ್ರೂ ಏನು? ಹತ್ಯೆಗೀಡಾದ ವಿದ್ಯಾರ್ಥಿಗಳ ಪೋಷಕರ ಪ್ರಶ್ನೆ

Vaidyanath Co-operative sugar factory
ದೇಶ5 hours ago

GST Evasion: ಜಿಎಸ್‌ಟಿ ವಂಚಿಸಿದ ಬಿಜೆಪಿ ನಾಯಕಿಯ ಸಕ್ಕರೆ ಕಾರ್ಖಾನೆಯ 19 ಕೋಟಿ ರೂ. ಮೌಲ್ಯದ ಸೊತ್ತು ಜಪ್ತಿ!

Dale stain
ಕ್ರಿಕೆಟ್6 hours ago

Rohit Sharma : ರೋಹಿತ್ ಶರ್ಮಾ ಪಾಲಿನ ಭಯಾನಕ ಬೌಲರ್ ಯಾರು ಗೊತ್ತೇ? ಅವರೇ ಹೇಳಿದ್ದಾರೆ ಕೇಳಿ

MLA Dr N T Srinivas drives the foot and mouth disease vaccination campaign at Kudligi
ವಿಜಯನಗರ6 hours ago

Vijayanagara News: ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಶಾಸಕ ಡಾ. ಎನ್. ಟಿ. ಶ್ರೀನಿವಾಸ್ ಚಾಲನೆ

Death News Prajna Basavanyappa passed away
ಶಿವಮೊಗ್ಗ6 hours ago

Death News: ಹಿರಿಯ ಸಾಹಿತಿ ಪ್ರಾಜ್ಞ ಬಸವಣ್ಯಪ್ಪ ನಿಧನ

ಕ್ರೈಂ6 hours ago

Vijayanagara News: ಗೋಡೆ ಕಲ್ಲು ಬಿದ್ದು ಮಗು ಸಾವು; ಎಮ್ಮೆ ಗುದ್ದಿದ್ದರಿಂದ ನಡೆಯಿತು ಅನಾಹುತ!

Top 10 news kannada
ಕ್ರೀಡೆ6 hours ago

VISTARA TOP 10 NEWS : ಕಾವೇರಿ ಹೋರಾಟಕ್ಕೆ ಸ್ವಯಂಪ್ರೇರಿತ ಬೆಂಬಲ, ಮತ್ತೆ ಕೇಂದ್ರ-ಸುಪ್ರೀಂ ಜಟಾಪಟಿ ಮತ್ತಿತರ ದಿನದ ಪ್ರಮುಖ ಸುದ್ದಿಗಳು

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ8 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ11 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Dina Bhavishya
ಪ್ರಮುಖ ಸುದ್ದಿ23 hours ago

Dina Bhavishya : ಈ ರಾಶಿಯ ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ

At the Janata Darshan event MP S Muniswamy MLA SN Narayanaswamy is fighting
ಕರ್ನಾಟಕ1 day ago

Janata Darshan : ವೇದಿಕೆಯಲ್ಲಿ ಭೂ ಗಲಾಟೆ; ಹೊಡೆದಾಟಕ್ಕೆ ಮುಂದಾದ ಶಾಸಕ-ಸಂಸದ

Davanagere bandh
ಕರ್ನಾಟಕ2 days ago

Davanagere bandh : ಭದ್ರಾ ನೀರಿಗಾಗಿ ಬೀದಿಗಿಳಿಯಲಿಲ್ಲ ಭತ್ತ ಬೆಳೆಗಾರರು!

HD Devegowda Press meet
ಕರ್ನಾಟಕ2 days ago

Cauvery water dispute : ಜಲ ಶಕ್ತಿ ಇಲಾಖೆಯಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಲಿ, ಮೋದಿ ಮಧ್ಯ ಪ್ರವೇಶಿಸಲಿ: ಎಚ್.ಡಿ. ದೇವೇಗೌಡ

Farmers protest Mundargi bandh
ಕರ್ನಾಟಕ2 days ago

Mundargi Bandh : ಬರ ಪೀಡಿತ ತಾಲೂಕು ಘೋಷಣೆಗೆ ಒತ್ತಾಯಿಸಿ ಮುಂಡರಗಿ ಬಂದ್!

Dina bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಇಂದು ಹೂಡಿಕೆ ಬೇಡ! ಕೆಲ ವಿಷಯದಲ್ಲಿ ಇರಲಿ ಗೌಪ್ಯತೆ

Actor padhmini Kirk
ಕರ್ನಾಟಕ3 days ago

Viral News : ಕಿರುತೆರೆ ನಟಿ ಕಿರಿಕ್‌; ಕೆಲಸ ಕಳೆದುಕೊಂಡ ಓಲಾ ಆಟೋ ಡ್ರೈವರ್‌!

dina bhavishya
ಪ್ರಮುಖ ಸುದ್ದಿ3 days ago

Dina Bhavishya : ಈ ರಾಶಿಯವರಿಗೆ ಕೋಪವೇ ಮುಳುವು!

Dina bhavishya
ಪ್ರಮುಖ ಸುದ್ದಿ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ದಿನದ ಮಟ್ಟಿಗೆ ಈ ರಾಶಿಯವರು ಹೂಡಿಕೆ ಮಾಡ್ಬೇಡಿ!

ಟ್ರೆಂಡಿಂಗ್‌