Claudia Mancinelli : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಕಂಡ ಈ ಸುಂದರಿ ಜಿಮ್ನಾಸ್ಟಿಕ್​ ಕೋಚ್​​ ಈಗ ಇಂಟರ್ನೆಟ್​ ಸೆನ್ಷೇಷನ್​ - Vistara News

ಕ್ರೀಡೆ

Claudia Mancinelli : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಕಂಡ ಈ ಸುಂದರಿ ಜಿಮ್ನಾಸ್ಟಿಕ್​ ಕೋಚ್​​ ಈಗ ಇಂಟರ್ನೆಟ್​ ಸೆನ್ಷೇಷನ್​

Claudia Mancinelli : ಇಟಲಿಯಾ ಫ್ಯಾಬ್ರಿಯಾನೊದಲ್ಲಿ ಹುಟ್ಟಿ ಬೆಳೆದ ಕ್ಲೌಡಿಯಾ ಮನ್ಸಿನೆಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಜಿಮ್ನಾಸ್ಟಿಕ್​ನಲ್ಲಿ ತೊಡಗಿದ್ದರು. ಕ್ರಿಸ್ಟಿನಾ ಘಿಯುರೋವಾ ಮತ್ತು ಮಿರ್ನಾ ಬಾಲ್ಡೋನಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದರು. ಬಳಿಕ ಅವರು ಸ್ಥಳೀಯ ಕ್ಲಬ್ ಅನ್ನು ಸೆರಿದ್ದರು. ಇವೆಲ್ಲದರ ನಡುವೆ ಆಶ್ಚರ್ಯಕರ ರೀತಿಯಲ್ಲಿ ಅವರು ನಟನಾ ವೃತ್ತಿಜೀವನವನ್ನು ಮುಂದುವರಿಸಲು ಕ್ರೀಡೆಯನ್ನು ತೊರೆದರು.

VISTARANEWS.COM


on

Claudia Mancinelli
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಸ್ಪರ್ಧೆಯೊಂದರ ರೆಫರಿಗಳ ಮುಂದೆ ನಿರ್ಭೀತಿಯಿಂದ ನಿಂತಿರುವ ಮಹಿಳಾ ಕೋಚ್​ ಒಬ್ಬರ ವಿಡಿಯೊ ವೈರಲ್ ಆಗಿತ್ತು. ಅವರೇ ಮಾಜಿ ನಟಿ ಮತ್ತು ಇಟೆಲಿಯ ರಿಥಮಿಕ್ ಜಿಮ್ನಾಸ್ಟಿಕ್ಸ್ ತಂಡದ ಕೋಚ್​ ಕ್ಲಾಡಿಯಾ ಮನ್ಸಿನೆಲ್ಲಿ (Claudia Mancinelli, ಅವರೀಗ ಸಾಮಾಜಿಕ ಮಾಧ್ಯಮದ ಸೆನ್ಸೇಷನ್ ಆಗಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಜಿಮ್ನಾಸ್ಟಿಕ್ಸ್ ಸ್ಪರ್ಧೆಯ ಸಮಯದಲ್ಲಿ ಅವರ ಆತ್ಮವಿಶ್ವಾಸದ ಪ್ರತಿಕ್ರಿಯೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಮೂಲಕ ಅವರು ಇಂಟರ್ನೆಟ್​​ ಪ್ರಪಂಚದ “ರಾಣಿ” ಎಂಬ ಬಿರುದು ಪಡೆದುಕೊಂಡಿದ್ದಾರೆ. ಆ ವಿಡಿಯೋವನ್ನು 3.4 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಆಲ್ರೌಂಡ್ ವಿಭಾಗದ ಫೈನಲ್​​ನಲ್ಲಿ ತೀರ್ಪುಗಾರರ ಆರಂಭಿಕ ಸ್ಕೋರ್ ಇಟೆಲಿಯ ಜಿಮ್ನಾಸ್ಟ್ ಸೋಫಿಯಾ ರಾಫೆಲಿ ಅವರ ಗೆಲುವಿನ ಅವಕಾಶಗಳನ್ನು ಕಸಿಯವ ಅವಕಾಶ ಇತ್ತು. ಆದರೆ ಕೋಚ್​​ ಕ್ಲಾಡಿಯಾ ಮನ್ಸಿನೆಲ್ಲಿ, ಸ್ಕೋರ್​​ ಬಗ್ಗೆ ತಕರಾರು ಎತ್ತಿದರು. ರೆಫರಿಗಳ ಬಳಿಗೆ ಹೋಗಿ ಸ್ಕೋರ್ ಮರುಪರಿಶೀಲಿಸುವಂತೆ ಒತ್ತಾಯಿಸಿದರು. ಈ ವೇಳೆ ಅವರು ನಿರ್ಭೀತಿಯಿಂದ ಅವರು ಮಾತನಾಡಿದ ಶೈಲಿ ಕೋಪದಿಂದ ತಿರುಗಿ ನಡೆದದುಕೊಂಡು ಹೋಗುತ್ತಿರುವ ವಿಡಿಯೊ ವೈರಲ್ ಆಗಿದೆ. ಆ ವಿಡಿಯೊ ಅದು ಕಾಡ್ಗಿಚ್ಚಿನಂತೆ ಹರಡಿತ್ತು ಕೊನೆಗೂ ವೈಯಕ್ತಿಕ ಆಲ್ರೌಂಡ್ ಸ್ಪರ್ಧೆಯಲ್ಲಿ ಇಟೆಲಿಯ ರಾಫೆಲಿ ಕಂಚಿನ ಪದಕ ಗೆದ್ದರು.

ಫಲಿತಾಂಶಕ್ಕಿಂತ ಕೋಚ್​ ಕ್ಲಾಡಿಯಾ ಅವರ ವ್ಯಕ್ತಿತ್ವ ಮತ್ತು ಆತ್ಮವಿಶ್ವಾಸ ಅವರನ್ನು ಅಂತರ್ಜಾಲದ ಸೆನ್ಷೇಷನ್ ಆಗಿ ಮಾಡಿತು. ಹಲವಾರು ಜನರು ಅವರ ಚಿತ್ರಗಳು ಮತ್ತು ವೀಡಿಯೊಗಳನ್ನು ಆನ್ ಲೈನ್ ನಲ್ಲಿ ಹಂಚಿಕೊಂಡಿದ್ದಾರೆ. ಕ್ಲಾಡಿಯಾ ಅವರ ಸೌಂದರ್ಯ ಮತ್ತು ಆತ್ಮವಿಶ್ವಾಸವನ್ನು ಶ್ಲಾಘಿಸಿದ್ದಾರೆ.

ಕ್ಲೌಡಿಯಾ ಯಾರು?

ಇಟಲಿಯಾ ಫ್ಯಾಬ್ರಿಯಾನೊದಲ್ಲಿ ಹುಟ್ಟಿ ಬೆಳೆದ ಕ್ಲಾಡಿಯಾ ಮನ್ಸಿನೆಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಜಿಮ್ನಾಸ್ಟಿಕ್​ನಲ್ಲಿ ತೊಡಗಿದ್ದರು. ಕ್ರಿಸ್ಟಿನಾ ಘಿಯುರೋವಾ ಮತ್ತು ಮಿರ್ನಾ ಬಾಲ್ಡೋನಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದರು. ಬಳಿಕ ಅವರು ಸ್ಥಳೀಯ ಕ್ಲಬ್ ಅನ್ನು ಸೆರಿದ್ದರು. ಇವೆಲ್ಲದರ ನಡುವೆ ಆಶ್ಚರ್ಯಕರ ರೀತಿಯಲ್ಲಿ ಅವರು ನಟನಾ ವೃತ್ತಿಜೀವನವನ್ನು ಮುಂದುವರಿಸಲು ಕ್ರೀಡೆಯನ್ನು ತೊರೆದರು.

ಬೆಳ್ಳಿ ಪರದೆಗೆ ಪಾದಾರ್ಪಣೆ ಮಾಡಿದ ಅವರು ‘ ಯೂನಿಕ್ ಬ್ರದರ್ಸ್​’, ‘ದಿ ಟೂರಿಸ್ಟ್’ ಮತ್ತು ‘ನೈನ್’ ನಂತಹ ಗಮನಾರ್ಹ ಚಿತ್ರಗಳಲ್ಲಿ ಪಾತ್ರ ವಹಿಸಿದ್ದರು. ಈ ನಡುವೆ ಪ್ಯಾರಿಸ್ ಒಲಿಂಪಿಕ್ಸ್​ಗೆ ಕೇವಲ ಹತ್ತು ತಿಂಗಳು ಬಾಕಿ ಇರುವಾಗ ಖ್ಯಾತ ತರಬೇತುದಾರ ಜೂಲಿಯೆಟಾ ಕ್ಯಾಂಟಲುಪ್ಪಿ ರಾಜೀನಾಮೆ ನೀಡಿದರು. ಹೀಗಾಗಿ ರಿಧಮಿಕ್​ ಜಿಮ್ನಾಸ್ಟಿಕ್ಸ್ ತಂಡವನ್ನು ಒಲಿಂಪಿಕ್ಸ್​​ನಲ್ಲಿ ಮುನ್ನಡೆಸಲು ಮನ್ಸಿನೆಲ್ಲಿ ಅವರನ್ನು ಫೆಡರೇಶನ್ ಕೇಳಿಕೊಂಡಿತು.

ಇದನ್ನೂ ಓದಿ: Sarabjot Singh : ಹರಿಯಾಣ ಸರ್ಕಾರದ ಉದ್ಯೋಗದ ಆಫರ್​ ತಿರಸ್ಕರಿಸಿದ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಸರಬ್ಜೋತ್​ ಸಿಂಗ್​​

ಒಲಿಂಪಿಕ್ಸ್​ಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ, ಮನ್ಸಿನೆಲ್ಲಿ ಕಠಿಣ ಸವಾಲನ್ನು ಎದುರಿಸಿದರು. ಸೋಫಿಯಾ ರಾಫೆಲಿ ಮತ್ತು ಮಿಲೆನಾ ಬಾಲ್ಡಸ್ಸಾರಿ ಅವರನ್ನು ವಿಶ್ವದರ್ಜೆಯ ಸ್ಪರ್ಧಿಗಳಾಗಿ ಪರಿವರ್ತಿಸಿದಿರು. ನಂಬಿಕೆ, ಗೌರವ ಮತ್ತು ಸಮರ್ಪಣೆಯ ಮೂಲಕ ಮನ್ಸಿನೆಲ್ಲಿ ಅವರಲ್ಲಿನ ಅತ್ಯುತ್ತಮ ಪ್ರದರ್ಶನ ಹೊರತಂದರು. ಅವರ ಮಾರ್ಗದರ್ಶನದಲ್ಲಿ, ರಾಫೆಲಿ ಅಂತಿಮವಾಗಿ ವೈಯಕ್ತಿಕ ಆಲ್ರೌಂಡ್ ಸ್ಪರ್ಧೆಯಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

PR Sreejesh : ಮಲ್ಲು ಸ್ಟೈಲಲ್ಲಿ ಮುಂಡು ಉಟ್ಟು ಐಫೆಲ್ ಟವರ್ ಮುಂದೆ ಫೋಟೋ ತೆಗಿಸಿಕೊಂಡ ಪಿ.ಆರ್​ ಶ್ರೀಜೇಶ್​​

PR Sreejesh : ಪಂದ್ಯಾವಳಿಯ ನಂತರ ಶ್ರೀಜೇಶ್ ಕ್ರೀಡೆಯಿಂದ ನಿವೃತ್ತರಾಗಿದ್ದಾರೆ. ಜೂನಿಯರ್ ಪುರುಷರ ಹಾಕಿ ತಂಡದ ಮುಖ್ಯ ತರಬೇತುದಾರರಾಗಿ ಜವಾಬ್ದಾರಿ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಪ್ಯಾರಿಸ್​​ನಲ್ಲಿ ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಭಾರತದ ಜಂಟಿ ಧ್ವಜಧಾರಿಯಾಗಿ ನಡೆಯಲಿದ್ದಾರೆ. ಆದಾಗ್ಯೂ, ಅದಕ್ಕೂ ಮೊದಲು, ಅವರು ಸಾಂಪ್ರದಾಯಿಕ ಮುಂಡು ಧರಿಸಿ ಐಫೆಲ್ ಟವರ್ ಮುಂದೆ ಪೋಸ್ ನೀಡಿದರು. ಈ ವೇಳೆ ಸೂಪರ್​ಹಿಟ್ ಮಲಯಾಳಂ ಚಲನಚಿತ್ರ ಆವೇಶಮ್ ನ ಪ್ರಸಿದ್ಧ ಹೇಳಿಕೆ ‘ಎಡಾ ಮೋನೆ’ ಯನ್ನೂ ಹೇಳಿದರು.

VISTARANEWS.COM


on

PR Sreejesh
Koo

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ (Paris Olympics 2024) ಕಂಚಿನ ಪದಕ ವಿಜೇತ ಭಾರತ ಹಾಕಿ ತಂಡದ ಗೋಲ್​ಕೀಪರ್​​ ಪಿ.ಆರ್.ಶ್ರೀಜೇಶ್ (PR Sreejesh) ಅವರು ಆಗಸ್ಟ್ 11 ರಂದು ಕೇರಳದ ಸಾಂಪ್ರದಾಯಿಕ ದಿರಸು ಮುಂಡು ಉಟ್ಟು ಐಫೆಲ್ ಟವರ್ ಮುಂದೆ ಪೋಟೋ ತೆಗಿಸಿಕೊಂಡಿದ್ದಾರೆ. 1972ರ ಬಳಿಕ ಇದೇ ಮೊದಲ ಬಾರಿಗೆ ಸತತ ಎರಡನೇ ಬಾರಿಗೆ ಒಲಿಂಪಿಕ್ ಪದಕ ಗೆದ್ದ ಭಾರತೀಯ ಪುರುಷರ ಹಾಕಿ ತಂಡದ ಪಾಲಿಗೆ ಗೋಲ್​ಕೀಪರ್​​ ಶ್ರೀಜೇಶ್ ಸ್ಟಾರ್ ಎನಿಸಿದ್ದರು. ಆಸ್ಟ್ರೇಲಿಯಾ, ಗ್ರೇಟ್ ಬ್ರಿಟನ್ ಮತ್ತು ಸ್ಪೇನ್ ವಿರುದ್ಧದ ನಿರ್ಣಾಯಕ ಪಂದ್ಯಗಳಲ್ಲಿ 36 ವರ್ಷದ ಆಟಗಾರ ಎದುರಾಳಿಗಳ ಹಲವಾರು ಗೋಲ್​ ಪ್ರಯತ್ನಗಳನ್ನು ತಡೆದಿದ್ದರು. ಹೀಗಾಗಿ ಭಾರತಕ್ಕೆ ದೊಡ್ಡ ಯಶಸ್ಸು ಸಿಕ್ಕಿತ್ತು.

ಪಂದ್ಯಾವಳಿಯ ನಂತರ ಶ್ರೀಜೇಶ್ ಕ್ರೀಡೆಯಿಂದ ನಿವೃತ್ತರಾಗಿದ್ದಾರೆ. ಜೂನಿಯರ್ ಪುರುಷರ ಹಾಕಿ ತಂಡದ ಮುಖ್ಯ ತರಬೇತುದಾರರಾಗಿ ಜವಾಬ್ದಾರಿ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಪ್ಯಾರಿಸ್​​ನಲ್ಲಿ ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಭಾರತದ ಜಂಟಿ ಧ್ವಜಧಾರಿಯಾಗಿ ನಡೆಯಲಿದ್ದಾರೆ. ಆದಾಗ್ಯೂ, ಅದಕ್ಕೂ ಮೊದಲು, ಅವರು ಸಾಂಪ್ರದಾಯಿಕ ಮುಂಡು ಧರಿಸಿ ಐಫೆಲ್ ಟವರ್ ಮುಂದೆ ಪೋಸ್ ನೀಡಿದರು. ಈ ವೇಳೆ ಸೂಪರ್​ಹಿಟ್ ಮಲಯಾಳಂ ಚಲನಚಿತ್ರ ಆವೇಶಮ್ ನ ಪ್ರಸಿದ್ಧ ಹೇಳಿಕೆ ‘ಎಡಾ ಮೋನೆ’ ಯನ್ನೂ ಹೇಳಿದರು.

ನಿವೃತ್ತಿಯ ಕುರಿತು ಶ್ರೀಜೇಶ್ ಹೇಳಿದ್ದೇನು?

ನಿವೃತ್ತಿಯ ಬಗ್ಗೆ ಮಾತನಾಡಿದ ಶ್ರೀಜೇಶ್, ಆಟದ ಅಗ್ರಸ್ಥಾನಕ್ಕೆ ಹೋಗಲು ಬಯಸುತ್ತೇನೆ ಮತ್ತು ನಾನು ಆಟವನ್ನು ಏಕೆ ತೊರೆಯುತ್ತಿದ್ದಾರೆ ಎಂದು ಜನರನ್ನು ಕೇಳುವಂತೆ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಗೆಲುವಿನ ನಂತರ, ನಾನು ನಿವೃತ್ತರಾಗಬೇಕೆಂದು ಯಾರೂ ಬಯಸಲಿಲ್ಲ ಎಂದು ನನಗೆ ತಿಳಿದಿದೆ. ಆದರೆ ನಾನು ಮೊದಲೇ ಹೇಳಿದಂತೆ ನನ್ನ ತರಬೇತುದಾರ ಹೇಳಿದಂತೆ ಮಾಡಿದ್ದೇನೆ. ನಾನು ಉತ್ತಮ ಫಾರ್ಮ್​ನಲ್ಲಿ ಇರುವಾಗಲೇ ನಿವೃತ್ತಿ ಪಡೆದರೆ ಯಾಕೆ ತೆಗೆದುಕೊಂಡೆ ಎಂದು ಜನರು ಕೇಳುತ್ತಾರೆ. ಇದು ಪರಿಪೂರ್ಣ ಮಾರ್ಗ ಎಂದು ನಾನು ಭಾವಿಸುತ್ತೇನೆ. ಆದರೆ, ನನ್ನ ತಂಡವು ನನಗೆ ಅತ್ಯುತ್ತಮ ವಿದಾಯವನ್ನು ನೀಡಿದೆ ಎಂದು ನಾನು ಭಾವಿಸುತ್ತೇನೆ” ಎಂದು ಕಂಚಿನ ಪದಕ ಗೆದ್ದ ನಂತರ ಪಿಆರ್ ಶ್ರೀಜೇಶ್ ಹೇಳಿದ್ದಾರೆ.

ಇದನ್ನೂ ಓದಿ: Vinesh Phogat : ವಿನೇಶ್​ಗೆ ಬೆಳ್ಳಿಯ ಪದಕ ನೀಡಬೇಕು; ಸೌರವ್​ ಗಂಗೂಲಿ ಆಗ್ರಹ

ತಂಡದಲ್ಲಿ ಯಾರಾದರೂ ತಮ್ಮ ಸ್ಥಾನ ತುಂಬುತ್ತಾರೆ ಎಂಬ ವಿಶ್ವಾಸವನ್ನು ಶ್ರೀಜೇಶ್ ಹೊಂದಿದ್ದಾರೆ. “ನನ್ನ ಜಾಗವನ್ನು ಖಂಡಿತವಾಗಿಯೂ ತುಂಬುತ್ತಾರೆ. ಎಲ್ಲಾ ಕ್ರೀಡೆಗಳಲ್ಲಿಯೂ ಹಾಗೆಯೇ, ಹಿಂದೆ ಸಚಿನ್ ತೆಂಡೂಲ್ಕರ್ ಇದ್ದರು ಮತ್ತು ಈಗ ವಿರಾಟ್ ಕೊಹ್ಲಿ ಇದ್ದಾರೆ, ಆದರೆ ನಾಳೆ ಯಾರಾದರೂ ಅವರ ಸ್ಥಾನ ತುಂಬುತ್ತಾರೆ. ಆದ್ದರಿಂದ, ಶ್ರೀಜೇಶ್ ನಿನ್ನೆ ಅಲ್ಲಿದ್ದರು, ಆದರೆ ನಾಳೆ ಅವರ ಸ್ಥಾನವನ್ನು ಯಾರಾದರೂ ತೆಗೆದುಕೊಳ್ಳುತ್ತಾರೆ” ಎಂದು ಶ್ರೀಜೇಶ್ ಹೇಳಿದ್ದಾರೆ.

ಸ್ವದೇಶಕ್ಕೆ ಮರಳಿದ ನಂತರ ಶ್ರೀಜೇಶ್ ಕೋಚ್ ಆಗಿ ತಮ್ಮ ಹೊಸ ಪಾತ್ರ ವಹಿಸಿಕೊಳ್ಳುವ ನಿರೀಕ್ಷೆಯಿದೆ.

Continue Reading

ಕ್ರೀಡೆ

Vinesh Phogat : ವಿನೇಶ್​ಗೆ ಬೆಳ್ಳಿಯ ಪದಕ ನೀಡಬೇಕು; ಸೌರವ್​ ಗಂಗೂಲಿ ಆಗ್ರಹ

VISTARANEWS.COM


on

Vinesh Phogat
Koo

ಬೆಂಗಳೂರು : ಪ್ಯಾರಿಸ್ ಒಲಿಂಪಿಕ್ಸ್​​ನ ಮಹಿಳೆಯರ 50 ಕೆ.ಜಿ ಕುಸ್ತಿಯ ಫೈನಲ್ ಸ್ಪರ್ಧೆಯಿಂದ ವಿನೇಶ್ ಫೋಗಟ್ (Vinesh Phogat) ಅವರನ್ನು ಅನರ್ಹಗೊಳಿಸಿರುವ ಬಗ್ಗೆ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಮಾತನಾಡಿದ್ದು, ಅವರಿಗೆ ಬೆಳ್ಳಿ ಪದಕ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್​​ ಫೈನಲ್​ನಿಂದ ಅನರ್ಹಗೊಂಡ ನಂತರ ಫೋಗಟ್ ಕುಸ್ತಿಯಿಂದ ನಿವೃತ್ತಿ ಘೋಷಿಸಿದರು. ಕಳೆದ ಮಂಗಳವಾರ ರಾತ್ರಿ ನಡೆದ ಸೆಮಿಫೈನಲ್​​ನಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಸೋಲಿಸುವ ಮೂಲಕ ಫೋಗಟ್ ಚಿನ್ನದ ಪದಕದ ಹೋರಾಟಕ್ಕೆ ಪ್ರವೇಶಿಸಿದ್ದರು. ಅವರು ಚಿನ್ನದ ಪದಕಕ್ಕಾಗಿ ಯುನೈಟೆಡ್ ಸ್ಟೇಟ್ಸ್​​​ನ ಸಾರಾ ಆನ್ ಹಿಲ್ಡೆಬ್ರಾಂಟ್ ವಿರುದ್ಧ ಸ್ಪರ್ಧಿಸಲು ಸಜ್ಜಾಗಿದ್ದರು ಆದರೆ ತೂಕದ ಮಿತಿ ಉಲ್ಲಂಘಿಸಿದ್ದಕ್ಕಾಗಿ ಬುಧವಾರ ಅನರ್ಹಗೊಂಡರು. ಅನರ್ಹತೆಯ ನಂತರ, ಫೋಗಟ್ ತನಗೆ ಬೆಳ್ಳಿ ಪದಕವನ್ನು ನೀಡುವಂತೆ ಸಿಎಎಸ್​ಗೆ ವಿನಂತಿಸಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸೌರವ್​ ಗಂಗೂಲಿ, ತನಗೆ ಸರಿಯಾಗಿ ಕುಸ್ತಿಯ ನಿಯಮಗಳು ತಿಳಿದಿಲ್ಲ ಆದರೆ ಅವರು ಬೆಳ್ಳಿ ಪದಕಕ್ಕೆ ಅರ್ಹರು ಎಂದು ಹೇಳಿದ್ದಾರೆ.

ನಿಖರವಾದ ನಿಯಮ ಏನು ಎಂದು ನನಗೆ ತಿಳಿದಿಲ್ಲ, ಆದರೆ ವಿನೇಶ್​​ ಫೈನಲ್​ಗೆ ಹೋಗುವ ತನಕ ಸರಿಯಾಗಿ ಅರ್ಹತೆ ಪಡೆದಿದ್ದಾರೆ ಎಂದು ನನಗೆ ಖಾತ್ರಿಯಿದೆ. ಆದ್ದರಿಂದ ಫೈನಲ್ ಗೆ ಹೋದ ಮೇಲೆ ಬೆಳ್ಳಿ ಅಥವಾ ಚಿನ್ನದ ಪದಕಕ್ಕೆ ಅರ್ಹರು. ಹೀಗಾಗಿ ಅವರನ್ನು ತಪ್ಪಾಗಿ ಅನರ್ಹಗೊಳಿಸಲಾಗಿದೆ. ಹೀಗಾಗಿ ಅವರು ಕನಿಷ್ಠ ಬೆಳ್ಳಿಗೆ ಅರ್ಹರು,” ಎಂದು ಗಂಗೂಲಿ ಹೇಳಿದ್ದಾರೆ.

ಇದನ್ನೂ ಓದಿ: Paris Olympics 2024 : ನಮ್ಮ ರಾಜಕಾರಣಿಗಳು ಕ್ರೀಡಾಕ್ಷೇತ್ರದಲ್ಲೂ ರಾಜಕೀಯ ಮಾಡ್ತಾರೆ; ಉಕ್ರೇನ್​ ಸಂಸದ ದೇಶಕ್ಕಾಗಿ ಪದಕಗಳನ್ನು ಗೆದ್ದಿದ್ದಾರೆ!

ಪ್ಯಾರಿಸ್ ಒಲಿಂಪಿಕ್ಸ್​​ನಿಂದ ಅನರ್ಹಗೊಂಡ ವಿನೇಶ್ ಫೋಗಟ್ ಅವರಿಗೆ ಬೆಳ್ಳಿ ಪದಕ ನೀಡಬೇಕೇ ಎಂಬ ಬಗ್ಗೆ ತೀರ್ಪು ನೀಡುವ ಗಡುವನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ (ಸಿಎಎಸ್) ಆಗಸ್ಟ್ 13 ರವರೆಗೆ ವಿಸ್ತರಿಸಿದೆ.

“ವಿನೇಶ್ ಫೋಗಟ್ ವರ್ಸಸ್ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ವಿಷಯದಲ್ಲಿ ಏಕಮಾತ್ರ ಮಧ್ಯಸ್ಥಿಕೆದಾರ ಡಾ.ಅನ್ನಾಬೆಲ್ಲೆ ಬೆನೆಟ್ ಅವರಿಗೆ ಆಗಸ್ಟ್ 13, 2024 ರಂದು ಸಂಜೆ 6-00 ಗಂಟೆಯವರೆಗೆ ನಿರ್ಧಾರ ತೆಗೆದುಕೊಳ್ಳಲು ಸಿಎಎಸ್​ನ ತಾತ್ಕಾಲಿಕ ವಿಭಾಗವು ಸಮಯವನ್ನು ವಿಸ್ತರಿಸಿದೆ” ಎಂದು ಐಒಎ ಶನಿವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪ್ಯಾರಿಸ್ ಒಲಿಂಪಿಕ್ಸ್ ಫೈನಲ್​​ನಿಂದ ಅನರ್ಹಗೊಂಡ ನಂತರ ವಿನೇಶ್ ಫೋಗಟ್ ಎಕ್ಸ್​ನಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. ನನ್ನ ವಿರುದ್ಧ ಕುಸ್ತಿ ಗೆದ್ದಿತು, ನಾನು ಸೋತೆ. ನನ್ನನ್ನು ಕ್ಷಮಿಸಿ, ಕನಸು ಮತ್ತು ನನ್ನ ಧೈರ್ಯ ಮುರಿದಿದೆ. ನನಗೆ ಈಗ ಹೆಚ್ಚಿನ ಶಕ್ತಿ ಇಲ್ಲ. ಗುಡ್ ಬೈ ಕುಸ್ತಿ 2001-2024. ನಿಮ್ಮೆಲ್ಲರ ಕ್ಷಮೆಗಾಗಿ ನಾನು ಯಾವಾಗಲೂ ಋಣಿಯಾಗಿದ್ದೇನೆ ಎಂದು ಬರೆದುಕೊಂಡಿದ್ದರು.

Continue Reading

ಕ್ರೀಡೆ

Paris Olympics 2024 : ನಮ್ಮ ರಾಜಕಾರಣಿಗಳು ಕ್ರೀಡಾಕ್ಷೇತ್ರದಲ್ಲೂ ರಾಜಕೀಯ ಮಾಡ್ತಾರೆ; ಉಕ್ರೇನ್​ ಸಂಸದ ದೇಶಕ್ಕಾಗಿ ಪದಕಗಳನ್ನು ಗೆದ್ದಿದ್ದಾರೆ!

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಕಂಚಿನ ಪದಕ ಗೆದ್ದ ನಂತರ ಉಕ್ರೇನಿಯನ್ ಕುಸ್ತಿಪಟು ಝಾನ್ ಬೆಲೆನಿಕ್ ಅವರು ಅಲ್ಲಿನ ಸಂಸದರು. ಅಂದ ಹಾಗೆ ಅವರು ಇದೇ ಮೊದಲ ಬಾರಿಗೆ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸುತ್ತಿರುವುದಲ್ಲ. ಟೋಕಿಯೊ ಒಲಿಂಪಿಕ್ಸ್ 2021 ಮತ್ತು ರಿಯೋ ಒಲಿಂಪಿಕ್ಸ್ 2016 ರಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ವಿಜೇತ ಗೆದ್ದವರು. ಅಂದ ಹಾಗೆ ಅವರೀಗ ಮೂರನೇ ಪದಕ ಗೆದ್ದು ನಿವೃತ್ತಿ ಹೇಳಿದ್ದಾರೆ. ಇನ್ನು ಮುಂದೆ ತಮ್ಮ ರಾಜಕೀಯ ವೃತ್ತಿಜೀವನದ ಮೇಲೆ ಹೆಚ್ಚು ಗಮನ ಹರಿಸುವೆ ಎಂದಿದ್ದಾರೆ.

VISTARANEWS.COM


on

Paris Olympics 2024
Koo

ಬೆಂಗಳೂರು : ಭಾರತದಲ್ಲಿ ಕ್ರೀಡಾಕ್ಷೇತ್ರದಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ಜೋರಾಗಿದೆ. ಪ್ರತಿಭೆಗಳಿಗಿಂತ ಪ್ರಭಾವಿಗಳೇ ಹೆಚ್ಚು ಮೆರೆಯುತ್ತಾರೆ. ಕ್ರೀಡಾ ಸಂಸ್ಥೆಗಳಲ್ಲಿ ಕುಳಿತಿರುವವರಲ್ಲಿ ಬಹುತೇಕರು ರಾಜಕೀಯ ಪಕ್ಷಗಳ ಕೃಪಕಟಾಕ್ಷವನ್ನು ಹೊಂದಿರುವವರು ಅಥವಾ ನೇರ ಸಂಬಂಧ ಹೊಂದಿರುವವರು. ಅವರು ಆಗಬಾರದು ಎಂಬ ನಿಯಮವೇನೂ ಇಲ್ಲ. ಆದರೆ, ಅವರ ರಾಜಕೀಯ ಮನಸ್ಥಿತಿಯನ್ನು ಕ್ರೀಡಾಕ್ಷೇತ್ರದಲ್ಲಿ ತೋರಿಸುವ ಕಾರಣ ಜಾಗತಿಕವಾಗಿ ಕ್ರೀಡೆಯಲ್ಲಿ ಭಾರತ ಹಿಂದುಳಿಯುತ್ತಿದೆ ಎಂಬ ವಾದವಿದೆ. ಆದರೆ, ಕೆಲವು ಪಾಶ್ಚಿಮಾತ್ಯ ದೇಶಗಳು ಅಥವಾ ನೈಜ ಕ್ರೀಡಾ ಪ್ರೋತ್ಸಾಹಕ ದೇಶಗಳು ಇಂಥದ್ದಕ್ಕೆಲ್ಲ ಅವಕಾಶ ಕೊಡುವುದಿಲ್ಲ. ಇನ್ನೂ ಹೆಚ್ಚೆಂದರೆ ಕೆಲವು ದೇಶಗಳಲ್ಲಿ ರಾಜಕಾರಣ ಮಾಡುತ್ತಿರುವ ಮಂದಿಯೇ ಅಂತಾರಾಷ್ಟ್ರೀಯ ಕ್ರೀಡಾಪಟುಗಳು. ಅವರೇ ಒಲಿಂಪಿಕ್ಸ್​ನಲ್ಲಿ ಪದಕ (Paris Olympics 2024) ಗೆಲ್ಲುತ್ತಾರೆ. ಅದಕ್ಕೊಂದು ಸೂಕ್ತ ಉದಾಹರಣೆ ಇಲ್ಲಿದೆ.

ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಕಂಚಿನ ಪದಕ ಗೆದ್ದ ನಂತರ ಉಕ್ರೇನಿಯನ್ ಕುಸ್ತಿಪಟು ಝಾನ್ ಬೆಲೆನಿಕ್ ಅವರು ಅಲ್ಲಿನ ಸಂಸದರು. ಅಂದ ಹಾಗೆ ಅವರು ಇದೇ ಮೊದಲ ಬಾರಿಗೆ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸುತ್ತಿರುವುದಲ್ಲ. ಟೋಕಿಯೊ ಒಲಿಂಪಿಕ್ಸ್ 2021 ಮತ್ತು ರಿಯೋ ಒಲಿಂಪಿಕ್ಸ್ 2016 ರಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ವಿಜೇತ ಗೆದ್ದವರು. ಅಂದ ಹಾಗೆ ಅವರೀಗ ಮೂರನೇ ಪದಕ ಗೆದ್ದು ನಿವೃತ್ತಿ ಹೇಳಿದ್ದಾರೆ. ಇನ್ನು ಮುಂದೆ ತಮ್ಮ ರಾಜಕೀಯ ವೃತ್ತಿಜೀವನದ ಮೇಲೆ ಹೆಚ್ಚು ಗಮನ ಹರಿಸುವೆ ಎಂದಿದ್ದಾರೆ.

ಪುರುಷರ 85 ಕೆಜಿ ಗ್ರೀಕೋ-ರೋಮನ್ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ 33 ವರ್ಷದ ಬೆಲೆನಿಕ್​ ಸೈನಾ ಪೋಲೆಂಡ್​ನ ಅರ್ಕಾಡಿಯಸ್ಜ್ ಕುಲಿನಿಜ್ ಅವರನ್ನು 3-1 ಅಂತರದಿಂದ ಸೋಲಿಸಿದ್ದಾರೆ. ಅಂದ ಹಾಗೆ ಬೆಲೆನಿಕ್ 2019 ರಲ್ಲಿ ಉಕ್ರೇನಿಯನ್ ಸಂಸತ್​ ಸದಸ್ಯರಾದರು. ಅಂದ ಹಾಗೆ ಅಲ್ಲಿನ ಸಂಸತ್​ನ ಮೊದಲ ಕಪ್ಪು ವರ್ಣದ ಸದಸ್ಯ.

ಇದನ್ನೂ ಓದಿ: Claudia Mancinelli : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಕಂಡ ಈ ಸುಂದರಿ ಜಿಮ್ನಾಸ್ಟಿಕ್​ ಕೋಚ್​​ ಈಗ ಇಂಟರ್ನೆಟ್​ ಸೆನ್ಷೇಷನ್​

ಪ್ಯಾರಿಸ್ 2024 ನಲ್ಲಿ ಕಂಚಿನ ಪದಕ ಗೆದ್ದ ನಂತರ, ಬೆಲೆನುಯಿಕ್ ರಷ್ಯಾದೊಂದಿಗಿನ ಯುದ್ಧದ ಕಾರಣ ಉಕ್ರೇನ್ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. “ಇಂದು, ನಾನು ಪದಕವನ್ನು ತೆಗೆದುಕೊಳ್ಳಲು ಸಾಧ್ಯವಾಯಿತು ಎಂದು ನನಗೆ ತುಂಬಾ ಸಂತೋಷವಾಗಿದೆ. ಆದರೆ ನನಗೆ, ಉಕ್ರೇನಿಯನ್ ಪ್ರಜೆಯಾಗಿ ಉಕ್ರೇನಿಯನ್ ಕ್ರೀಡಾಪಟುವಾಗಿ, ಭವಿಷ್ಯದಲ್ಲಿ ಉಕ್ರೇನ್ ಇರುವುದು ಬಹಳ ಮುಖ್ಯ. ಏಕೆಂದರೆ ದುರದೃಷ್ಟವಶಾತ್ ನಮ್ಮ ಭವಿಷ್ಯದ ಬಗ್ಗೆ ನಮಗೆ ತಿಳಿದಿಲ್ಲ” ಎಂದು ಬೆಲೆನುಯಿಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕುಸ್ತಿ ಸುಂದರವಾದ ವೃತ್ತಿಜೀವನವಾಗಿತ್ತು, ಮತ್ತು ಪ್ರತಿಯೊಬ್ಬರೂ ತಮ್ಮ ವೃತ್ತಿಜೀವನದ ಭವ್ಯವಾದ ಅಂತ್ಯವನ್ನು ಹೊಂದಬೇಕೆಂದು ನಾನು ಬಯಸುತ್ತೇನೆ. ಅದಕ್ಕಾಗಿಯೇ ಈ ಪದಕ ನನಗೆ ತುಂಬಾ ಅಮೂಲ್ಯವಾಗಿದೆ. ನಾನು ಅದನ್ನು ನನ್ನ ದೇಶದ ಪ್ರಜೆಗಳೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಈಗ ಯುದ್ಧದಲ್ಲಿರುವ ಸೈನಿಕರಿಗೆ ನಾನು ಅದನ್ನು ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.

ಝಾನ್ ಬೆಲೆನಿಕ್ ಯಾರು?

ಮೂರು ಬಾರಿ ಒಲಿಂಪಿಕ್ ಪದಕ ವಿಜೇತರಾದ ಬೆಲೆನುಯಿಕ್ 1991ರಲ್ಲಿ ಕಿಯೇವ್​​ನ್ಲಿ ರುವಾಂಡಾದ ತಂದೆ ಮತ್ತು ಉಕ್ರೇನಿಯನ್ ತಾಯಿಗೆ ಜನಿಸಿದರು. ಅವರು ಒಂಬತ್ತು ವರ್ಷದವರಿದ್ದಾಗ 2000ರಲ್ಲಿ ಕುಸ್ತಿ ಕ್ಷೇತ್ರಕ್ಕೆ ಪ್ರವೇಶಿಸಿದ್ದರು. 2019 ರಲ್ಲಿ, ಉಕ್ರೇನಿಯನ್ ಸಂಸದೀಯ ಚುನಾವಣೆಯ ಸಮಯದಲ್ಲಿ, ಬೆಲೆನುಯಿಕ್ ಸರ್ವೆಂಟ್ ಆಫ್ ದಿ ಪೀಪಲ್ ರಾಜಕೀಯ ಪಕ್ಷದ ಸದಸ್ಯರಾಗಿ ಆಯ್ಕೆಯಾದರು.

ತನ್ನ ಕುಸ್ತಿ ವೃತ್ತಿಜೀವನದ ಹೊರತಾಗಿ, ಬೆಲೆನುಯಿಕ್ ಉಕ್ರೇನ್ ರಾಷ್ಟ್ರೀಯ ಒಲಿಂಪಿಕ್ ಸಮಿತಿಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಹೊಸ ಅಧ್ಯಕ್ಷ ವಡಿಮ್ ಗುಟ್ಜೆಟ್ ಅವರೊಂದಿಗಿನ ವಿವಾದದ ಹಿನ್ನೆಲೆಯಲ್ಲಿ 2023 ರಲ್ಲಿ ಹುದ್ದೆಗೆ ರಾಜೀನಾಮೆ ನೀಡಿದರು. ಬೆಲೆನುಯಿಕ್ ಎರಡು ಬಾರಿ ವಿಶ್ವ ಕುಸ್ತಿ ಚಾಂಪಿಯನ್ ಆಗಿದ್ದು, ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

Continue Reading

ಕ್ರಿಕೆಟ್

Urvashi Rautela: ರಿಷಭ್​ ಪಂತ್​ ಮೇಲೆ ಊರ್ವಶಿಗೆ ಮತ್ತೆ ಪ್ಯಾರ್‌ಗೆ ಆಗ್ಬಿಟ್ಟೈತೆ​; ಇನ್​ಸ್ಟಾಗ್ರಾಮ್​ ಸ್ಟೋರಿಯಿಂದ ಬಯಲು

Urvashi Rautela: ಊರ್ವಶಿ ರೌಟೆಲಾ ಅವರು ಟಿ20 ವಿಶ್ವಕಪ್​ನಲ್ಲಿ ರಿಷಭ್​ ಪಂತ್​ ಅವರು ಐರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ರಿವರ್ಸ್​ ಸ್ವೀಪ್​ ಮೂಲಕ ಸಿಕ್ಸರ್​ ಬಾರಿಸಿದ ವಿಡಿಯೋವನ್ನು ಎಡಿಟ್​ ಮಾಡಿ ತನ್ನ ಫೋಟೊವನ್ನು ಹಾಕಿ ತಾನು ಸಿಕ್ಸರ್​ ಬಾರಿಸಿದಂತೆ ವಿಡಿಯೊ ಹಂಚಿಕೊಂಡಿದ್ದಾರೆ. ಇದನ್ನು ಕಂಡ ನಟ್ಟಿಗರು ಮತ್ತೆ ಈ ಜೋಡಿ ಒಂದಾಗಲಿದ್ದಾರೆ ಎಂದು ಕಮೆಂಟ್​ ಮಾಡಿದ್ದಾರೆ.

VISTARANEWS.COM


on

Urvashi Rautela
Koo

ಮುಂಬಯಿ: ಬಾಲಿವುಡ್‌ ನಟಿ ಊರ್ವಶಿ ರೌಟೆಲಾ (Urvashi Rautela)ಗೆ ಮತ್ತೆ ಟೀಮ್​ ಇಂಡಿಯಾ ಆಟಗಾರ ರಿಷಭ್​ ಪಂತ್(Rishabh Pant)​ ಮೇಲೆ ಪ್ರೀತಿ​ ಆದಂತಿದೆ. ಹೌದು, ಊರ್ವಶಿ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಾಕಿದ ಸ್ಟೋರಿಯನ್ನು ನೋಡುವಾಗ ಪಂತ್​ ಮೇಲೆ “ಪ್ಯಾರ್‌ಗೆ ಆಗ್ಬಿಟ್ಟೈತೆ” ಎಂಬಂತೆ ಕಾಣುತ್ತಿದೆ.

ರಿಷಭ್​ ಪಂತ್ ಮತ್ತು ಊರ್ವಶಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕೆಲ ವರ್ಷಗಳ ಹಿಂದೆ ಬಾರೀ ಸದ್ದು ಮಾಡಿತ್ತು. ಪಂತ್​ ಹೋದಲೆಲ್ಲ ಇವರು ಕೂಡ ಹೋಗುತ್ತಿದ್ದರು. ಆದರೆ, ಇದ್ದಕ್ಕಿದಂತೆ ಒಂದು ಬಾರಿ ಊರ್ವಶಿ ಅವರು ತಮ್ಮ ಸಿನೆಮಾದ ಕುರಿತ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುವಾಗ, ಆರ್‌ಪಿ ಎಂಬುವರು ನನಗೆ ಹೋಟೆಲ್‌ ಲಾಬಿಯಲ್ಲಿ ಗಂಟೆಗಟ್ಟಲೆ ಕಾಯುತ್ತಿದ್ದರು. ನಾನು ಫೋನ್‌ ನೋಡುವಾಗ ಹಲವು ಮಿಸ್ಡ್‌ ಕಾಲ್‌ಗಳು ಇರುತ್ತಿದ್ದವು ಎಂದು ಹೇಳಿದ್ದರು.

ತಕ್ಷಣವೇ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದ ರಿಷಭ್‌, ಹೆಸರು ಗಳಿಸಲು ಬಾಯಿಗೆ ಬಂದದ್ದನ್ನೆಲ್ಲ ಮಾತನಾಡಬಾರದು ಎಂದು ಪೋಸ್ಟ್‌ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಊರ್ವಶಿ “ಬ್ಯಾಟ್‌ ಮತ್ತು ಬಾಲ್‌ನಲ್ಲಿ ಮಾತ್ರ ಆಡು ಮಗುವೆ. ನಿನ್ನಿಂದ ಕೆಟ್ಟು ಹೋಗುವುದಕ್ಕೆ ನಾನು ಮುನ್ನಿ ಅಲ್ಲ,” ಎಂದಿದ್ದರು. ಈ ಒಂದು ಘಟನೆ ಬಳಿಕ ಇವರಿಬ್ಬರ ಪ್ರೀತಿ ಬ್ರೇಕ್​ ಆಪ್​ ಆಗಿತ್ತು. ಇದೀಗ ಮತ್ತೆ ಒಂದಾಗುವಂತೆ ಕಾಣುತ್ತಿದೆ.

ಊರ್ವಶಿ ರೌಟೆಲಾ ಅವರು ಟಿ20 ವಿಶ್ವಕಪ್​ನಲ್ಲಿ ರಿಷಭ್​ ಪಂತ್​ ಅವರು ಐರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ರಿವರ್ಸ್​ ಸ್ವೀಪ್​ ಮೂಲಕ ಸಿಕ್ಸರ್​ ಬಾರಿಸಿದ ವಿಡಿಯೋವನ್ನು ಎಡಿಟ್​ ಮಾಡಿ ತನ್ನ ಫೋಟೊವನ್ನು ಹಾಕಿ ತಾನು ಸಿಕ್ಸರ್​ ಬಾರಿಸಿದಂತೆ ವಿಡಿಯೊ ಹಂಚಿಕೊಂಡಿದ್ದಾರೆ. ಇದನ್ನು ಕಂಡ ನಟ್ಟಿಗರು ಮತ್ತೆ ಈ ಜೋಡಿ ಒಂದಾಗಲಿದ್ದಾರೆ ಎಂದು ಕಮೆಂಟ್​ ಮಾಡಿದ್ದಾರೆ.

2022ರಲ್ಲಿ ಪಂತ್​ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡ ವೇಳೆ ಶೀಘ್ರ ಗುಣಮುಖರಾಗಲಿ ಎಂದು ಊರ್ವಶಿ ಅವರು ಪ್ರಾರ್ಥಿಸಿದ್ದರು. ಈ ಕುರಿತು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್​ ಹಾಕಿದ್ದರು. ಬಳಿಕ ಮುಂಬೈಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುವ ವೇಳೆ ಪಂತ್​ ದೇಶದ ಆಸ್ತಿ, ಗುಣಮುಖರಾಗಿ ಮತ್ತೆ ಕ್ರಿಕೆಟ್​ ಆಡುವಂತಾಗಲಿ ಎಂದು ಹೇಳಿದ್ದರು.

ಇದನ್ನೂ ಓದಿ Rishabh Pant: ಡೆಲ್ಲಿ ತೊರೆದು ಮುಂದಿನ ಐಪಿಎಲ್​ನಲ್ಲಿ ಈ ಫ್ರಾಂಚೈಸಿ ಪರ ಆಡಲಿದ್ದಾರೆ ರಿಷಭ್​ ಪಂತ್​

ಕಳೆದ ವರ್ಷ ನಡೆದಿದ್ದ ಏಷ್ಯಾಕಪ್​(Asia cup 2023) ವೇಳೆ ಊರ್ವಶಿ ರೌಟೇಲಾ ಪಾಕಿಸ್ತಾನ ಆಟಗಾರ ನಸೀಮ್ ಶಾ ಅವರು ಸಹ ಆಟಗಾರರೊಂದಿಗಿರುವ ಫೋಟೊವನ್ನು ತಮ್ಮ ಸಾಮಾಜಿಕ ಜಾಲತಾಣವಾದ ಇನ್​ಸ್ಟಾಗ್ರಾಮ್​ನಲ್ಲಿ ಹಾಕಿದ್ದರು. ದುಬೈನಲ್ಲಿ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯಕ್ಕೆ ಹಾಜರಾಗಿದ್ದರು. ಅಲ್ಲದೆ ನಸೀಮ್ ಶಾ ಅವರ ದೊಡ್ಡ ಅಭಿಮಾನಿ ಎಂದು ಪೋಸ್ಟ್​ ಕೂಡ ಹಾಕಿದ್ದರು. ಇದು ಮಾತ್ರವಲ್ಲದೆ ನಸೀಮ್‌ ಶಾ ಅವರ ಹುಟ್ಟುಹಬ್ಬಕ್ಕೂ ಶುಭಾಶಯ ಕೋರಿದ್ದರು. ಶುಭಾಶಯದ ಜತೆಗೆ ಡಿಎಸ್‌ಪಿ ಗೌರವ ಪಡೆದಿದ್ದಕ್ಕೂ ನಸೀಮ್ ಶಾ ಅವರಿಗೆ ಊರ್ವಶಿ ಅಭಿನಂದಿಸಿದ್ದರು. ಇದಕ್ಕೆ ನಸೀಮ್ ಶಾ, ‘ಧನ್ಯವಾದಗಳು’ ಎಂದು ಪ್ರತಿಕ್ರಿಕೆ ನೀಡಿದ್ದರು. ಈ ವೇಳೆ ನೆಟ್ಟಿಗರು ಇವರಿಬ್ಬರ ಮಧ್ಯೆ ಪ್ರೇಮಾಂಕುರ ಆಗಿದೆ ಎಂದಿದ್ದರು. ಇದೀಗ ಮತ್ತೆ  ಪಂತ್​ ಜತೆ ಪ್ರೀತಿಯ ಬಲೆಯಲ್ಲಿ ಬಿದ್ದಿರುವ ಅನುಮಾನ ಹುಟ್ಟಿಕೊಂಡಿದೆ.

Continue Reading
Advertisement
PR Sreejesh
ಕ್ರೀಡೆ16 mins ago

PR Sreejesh : ಮಲ್ಲು ಸ್ಟೈಲಲ್ಲಿ ಮುಂಡು ಉಟ್ಟು ಐಫೆಲ್ ಟವರ್ ಮುಂದೆ ಫೋಟೋ ತೆಗಿಸಿಕೊಂಡ ಪಿ.ಆರ್​ ಶ್ರೀಜೇಶ್​​

Vinesh Phogat
ಕ್ರೀಡೆ38 mins ago

Vinesh Phogat : ವಿನೇಶ್​ಗೆ ಬೆಳ್ಳಿಯ ಪದಕ ನೀಡಬೇಕು; ಸೌರವ್​ ಗಂಗೂಲಿ ಆಗ್ರಹ

Tungabhadra Dam
ಕರ್ನಾಟಕ40 mins ago

Tungabhadra Dam: ತುಂಗಭದ್ರಾ ಡ್ಯಾಂ ಗೇಟು ದುರಸ್ತಿಗೆ ಉನ್ನತ ಮಟ್ಟದ ತಂತ್ರಜ್ಞರ ತಂಡ: ಡಿ.ಕೆ. ಶಿವಕುಮಾರ್

Paris Olympics 2024
ಕ್ರೀಡೆ1 hour ago

Paris Olympics 2024 : ನಮ್ಮ ರಾಜಕಾರಣಿಗಳು ಕ್ರೀಡಾಕ್ಷೇತ್ರದಲ್ಲೂ ರಾಜಕೀಯ ಮಾಡ್ತಾರೆ; ಉಕ್ರೇನ್​ ಸಂಸದ ದೇಶಕ್ಕಾಗಿ ಪದಕಗಳನ್ನು ಗೆದ್ದಿದ್ದಾರೆ!

Yakshagana Dance
ಬೆಂಗಳೂರು2 hours ago

Yakshagana Dance : ಯಕ್ಷಗಾನ ಕಲೆ ಪುರುಷರಿಗಷ್ಟೇ ಸೀಮಿತವಲ್ಲ: ಡಾ. ಧರಣೀದೇವಿ ಮಾಲಗತ್ತಿ

Road Accident
ಕರ್ನಾಟಕ2 hours ago

Road Accident: ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿ ಟೆಂಪೋಗೆ ಕ್ಯಾಂಟರ್‌ ಡಿಕ್ಕಿ; ಮೂವರ ದುರ್ಮರಣ, ಐವರ ಸ್ಥಿತಿ ಗಂಭೀರ

Bomb threat
ಪ್ರಮುಖ ಸುದ್ದಿ2 hours ago

Bomb threat : ಏರ್​ಪೋರ್ಟ್​​ ಬ್ಯಾಗ್ ಚೆಕಿಂಗ್​ ವೇಳೆ ತಮಾಷೆಗೆ ‘ಬಾಂಬ್​ ಇದೆ’ ಅಂದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು!

theft Case
ಬೆಂಗಳೂರು2 hours ago

Theft Case : ಲಡ್ಡು ಬಂದು ಬಾಯಿಗೆ ಬಿತ್ತು! ಕೀ ಸಮೇತ ಸ್ಕೂಟರ್‌ ಬಿಟ್ಟು ಹೋದ ಮಹಿಳೆ, ಕ್ಷಣಾರ್ಧದಲ್ಲೇ ಎಗರಿಸಿದ ಚಾಲಾಕಿ

Tungabhadra Dam
ಪ್ರಮುಖ ಸುದ್ದಿ3 hours ago

Tungabhadra Dam: ಟಿಬಿ ಡ್ಯಾಂ ನಿರ್ವಹಣೆಯಲ್ಲಿ ನಿರ್ಲಕ್ಷ್ಯ; ಶೀಘ್ರ ಕ್ರಸ್ಟ್ ಗೇಟ್ ದುರಸ್ತಿಗೆ ವಿಜಯೇಂದ್ರ ಆಗ್ರಹ

veg vs non veg
ಪ್ರಮುಖ ಸುದ್ದಿ3 hours ago

veg vs non veg : ಮಕ್ಕಳ ಬಾಕ್ಸ್​​ನಲ್ಲಿ ಮಾಂಸಾಹಾರ ಕಳುಹಿಸಬಾರದು; ವಿವಾದ ಸೃಷ್ಟಿಸಿದ ಶಾಲೆಯ ನೋಟಿಸ್​​

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ3 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ3 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು5 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ5 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌