Ishan Kishan: ಟೀಮ್​ ಇಂಡಿಯಾದಲ್ಲಿ ಇಶಾನ್ ಕಿಶನ್​ಗೆ ಬಾಗಿಲು ಬಂದ್​? - Vistara News

ಕ್ರಿಕೆಟ್

Ishan Kishan: ಟೀಮ್​ ಇಂಡಿಯಾದಲ್ಲಿ ಇಶಾನ್ ಕಿಶನ್​ಗೆ ಬಾಗಿಲು ಬಂದ್​?

Ishan Kishan: ಕಳೆದ ವರ್ಷ ನವೆಂಬರ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಸರಣಿಯ ಮೂರನೇ ಟಿ20 ಸಂದರ್ಭದಲ್ಲಿ ಕಿಶನ್ ಕೊನೆಯದಾಗಿ ಭಾರತಕ್ಕಾಗಿ ಆಡಿದ್ದರು.

VISTARANEWS.COM


on

Ishan Kishan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಣಜಿ ಆಡಲು ಅಸಡ್ಡೆ ತೋರಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದ ಇಶಾನ್​ ಕಿಶನ್​(Ishan Kishan) ಅವರು ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ, ಅವರಿಗೆ ಮತ್ತೆ ನಿರಾಸೆಯಾಗಿದೆ. ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ. ಇದೀಗ ಇಶಾನ್​ಗೆ ಸಂಪೂರ್ಣವಾಗಿ ಟೀಮ್​ ಇಂಡಿಯಾದ(Team India) ಬಾಗಿಲು ಬಂದ್​ ಆದಂತಿದೆ.

ಕಳೆದ ವರ್ಷ ನವೆಂಬರ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಸರಣಿಯ ಮೂರನೇ ಟಿ20 ಸಂದರ್ಭದಲ್ಲಿ ಕಿಶನ್ ಕೊನೆಯದಾಗಿ ಭಾರತಕ್ಕಾಗಿ ಆಡಿದ್ದರು. ನಂತರದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆಯಾಗಿದ್ದರೂ ಕೂಡ ಅಂತಿಮ ಹಂತದಲ್ಲಿ ವೈಯಕ್ತಿಕ ಕಾರಣಗಳಿಂದಾಗಿ ಟೆಸ್ಟ್ ಸರಣಿಯಿಂದ ಹೊರಗುಳಿದರು. ಸ್ವಲ್ಪ ವಿರಾಮವನ್ನು ತೆಗೆದುಕೊಂಡ ಇಶಾನ್​ಗೆ ಅಂದಿನ ಕೋಚ್​ ದ್ರಾವಿಡ್​ ಮತ್ತು ಆಯ್ಕೆ ಸಮಿತಿ ರಣಜಿ ಟ್ರೋಫಿ ಪಂದ್ಯಗಳಲ್ಲಿ ಆಡುವಂತೆ ಸೂಚನೆ ನೀಡಿತ್ತು. ಆದರೆ ಇದನ್ನು ಇಶಾನ್​ ಕಡೆಗಣಿಸಿದ್ದರು. ಈ ಕಾರಣದಿಂದ ಬಿಸಿಸಿಐ ಅವರನ್ನು ಕೇಂದ್ರೀಯ ಗುತ್ತಿಗೆಯಿಂದಲೂ ಕೈಬಿಟ್ಟಿತ್ತು.

ತಂಡಕ್ಕೆ ಆಯ್ಕೆ ಮಾಡದಿರುವುದ ಕುರಿತು ಕೆಲ ದಿನಗಳ ಹಿಂದೆ ಪ್ರತಿಕ್ರಿಯೆ ನೀಡಿದ್ದ ಇಶಾನ್​, “ನಾನು ಬ್ರೇಕ್ ಪಡೆದಿದ್ದೆ, ನನ್ನ ಪ್ರಕಾರ ಇದು ಸಾಮಾನ್ಯ. ತಂಡಕ್ಕೆ ಕಮ್ ಬ್ಯಾಕ್ ಮಾಡಬೇಕಾದರೆ ದೇಶೀಯ ಕ್ರಿಕೆಟ್​ನಲ್ಲಿ ಪ್ರದರ್ಶನ ನೀಡಬೇಕು ಎಂಬ ನಿಯಮವಿದೆ ಎನ್ನುವುದು ನನಗೆ ತಿಳಿದಿದೆ. ಆದರೆ, ಅಂದು ನಾನು ಆಡುವ ಮನಸ್ಥಿತಿಯಲ್ಲಿ ಇರಲಿಲ್ಲ. ಹಿಗಾಗಿಯೇ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಬ್ರೇಕ್ ಪಡೆದಿದ್ದೆ. ಉತ್ತಮ ಫಾರ್ಮ್​ನಲ್ಲಿರುವಾಗ ಅಂತಾರಾಷ್ಟ್ರೀಯ ಕ್ರಿಕೆಟ್​ ಬಿಟ್ಟು ದೇಶೀಯ ಕ್ರಿಕೆಟ್​ನಲ್ಲಿ ಆಡಬೇಕು ಎನ್ನುವುದರಲ್ಲಿ ಯಾವುದೇ ಅರ್ಥವಿಲ್ಲ” ಎಂದು ಇಂಡಿಯನ್ ಎಕ್ಸ್ ಪ್ರೆಸ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಇದನ್ನೂ ಓದಿ Ishan Kishan : ನನ್ನನ್ನು ಹೊರಗಿಟ್ಟಿರುವ ತೀರ್ಮಾನ ಮೂರ್ಖತನದ್ದು; ಜಯ್​ ಶಾಗೆ ಟಾಂಗ್​ ಕೊಟ್ಟ ಇಶಾನ್​ ಕಿಶನ್​

ಇಶಾನ್​ ಅವರಂತೆಯೇ ದೇಶೀಯ ಕ್ರಿಕೆಟ್​ ಆಡದೆ ಬಿಸಿಸಿಐ ಕೇಂದ್ರೀಯ ಗುತ್ತಿಗೆಯಿಂದ ಹೊರಬಿದ್ದ ಶ್ರೇಯಸ್​ ಅಯ್ಯರ್​ ಮತ್ತೆ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಆದರೆ ಇಶಾನ್​ಗೆ ಅವಕಾಶ ಲಭಿಸಿಲ್ಲ. ಭಾರತ ಪರ ದ್ವಿಶತಕ ಬಾರಿಸಿರುವ ಇಶಾನ್​ಗೆ ಮುಂದಿನ ಸರಣಿಯಲ್ಲಾದರೂ ಅವಕಾಶ ನೀಡಬೇಕು ಎನ್ನುವುದು ಕ್ರಿಕೆಟ್​ ಅಭಿಮಾನಿಗಳ ಒತ್ತಾಯವಾಗಿದೆ. ಒಂದೊಮ್ಮೆ ಅವರಿಗೆ ಮುಂದಿನ ಕೆಲವು ಸರಣಿಯಲ್ಲಿಯೂ ಅವಕಾಶ ನೀಡದೇ ಹೋದರೆ ಅವರು ಮಾನಸಿಕವಾಗಿ ಕುಗ್ಗಿ ತಮ್ಮ ಕ್ರಿಕೆಟ್​ ಭವಿಷ್ಯವನ್ನೇ ಕಳೆದುಕೊಳ್ಳಬಹುದು ಎಂದು ಕೆಲ ಕ್ರಿಕೆಟ್​ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ಲಂಕಾ ಸರಣಿಗೆ ಭಾರತ ತಂಡ

ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪ ನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (ವಿ.ಕೀ ), ಸಂಜು ಸ್ಯಾಮ್ಸನ್ (ವಿ.ಕೀ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ , ಅರ್ಶದೀಪ್​ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್​ ಸಿರಾಜ್.

ಇದನ್ನೂ ಓದಿ Team India Srilanka Tour : ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ, ಸೂರ್ಯಕುಮಾರ್​ಗೆ ಟಿ20 ನಾಯಕತ್ವ

ಏಕದಿನ ತಂಡ: ರೋಹಿತ್ ಶರ್ಮ (ನಾಯಕ), ಶುಭಮನ್ ಗಿಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ (ವಿ.ಕೀ), ರಿಷಬ್ ಪಂತ್ (ವಿ.ಕೀ), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Paris Olympics 2024 : ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲಿರುವ 117 ಭಾರತೀಯ ಕ್ರೀಡಾಪಟುಗಳ ಸಂಪೂರ್ಣ ವಿವರ ಇಲ್ಲಿದೆ

Paris Olympics 2024 :

VISTARANEWS.COM


on

Paris Olympics 2024
Koo

ಬೆಂಗಳೂರು: ಜುಲೈ 26 ರಿಂದ ಪ್ರಾರಂಭವಾಗುವ ಪ್ಯಾರಿಸ್ ಒಲಿಂಪಿಕ್ಸ್​​ಗೆ (Paris Olympics 2024) ಭಾರತ 117 ಕ್ರೀಡಾಪಟುಗಳನ್ನು ಕಳುಹಿಸಿದೆ. 2021 ರಲ್ಲಿ 121 ಕ್ರೀಡಾಪಟುಗಳು ಟೋಕಿಯೊಗೆ ಹೋದ ನಂತರ ಇದು ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದಎರಡನೇ ಅತಿದೊಡ್ಡ ನಿಯೋಗವಾಗಿದೆ. 47 ಮಹಿಳಾ ಮತ್ತು 70 ಪುರುಷ ಕ್ರೀಡಾಪಟುಗಳು ಭಾರತೀಯ ತಂಡದ ಭಾಗವಾಗಿದ್ದಾರೆ.

ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್​ಗಳು 29 ಕ್ರೀಡಾಪಟುಗಳೊಂದಿಗೆ ಅತಿದೊಡ್ಡ ಪ್ರಾತಿನಿಧ್ಯ ಹೊಂದಿದ್ದರೆ, ಶೂಟರ್​ಗಳು 21 ಕ್ರೀಡಾಪಟುಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ವೇಟ್​ಲಿಫ್ಟಿಂಗ್ನಲ್ಲಿ 2021 ರ ಟೋಕಿಯೊ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನು ಮಾತ್ರ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಈಕ್ವೆಸ್ಟ್ರಿಯನ್, ಜೂಡೋ ಮತ್ತು ರೋಯಿಂಗ್ ಸಹ ಒಬ್ಬ ಕ್ರೀಡಾಪಟುವನ್ನು ಹೊಂದಿದೆ.

ಒಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ರೀಡಾಪಟುಗಳಷ್ಟೇ ಸಹಾಯಕ ಸಿಬ್ಬಂದಿಯೂ ಒಲಿಂಪಿಕ್ಸ್​ಗೆ ಕ್ರೀಡಾಕೂಟಕ್ಕೆ ತೆರಳಿದ್ದಾರೆ. 67 ತರಬೇತುದಾರರು ಮತ್ತು 72 ಇತರ ಸಹಾಯಕ ಸಿಬ್ಬಂದಿ ಪ್ಯಾರಿಸ್​ಗೆ ಪ್ರಯಾಣಿಸಲಿದ್ದಾರೆ.

ಭಾರತೀಯ ಕ್ರೀಡಾಪಟುಗಳ ಒಟ್ಟು ವಿವರ

  • ಆರ್ಚರಿ – 6 ಕ್ರೀಡಾಪಟುಗಳು
  • ಅಥ್ಲೆಟಿಕ್ಸ್ – 29 ಕ್ರೀಡಾಪಟುಗಳು
  • ಬ್ಯಾಡ್ಮಿಂಟನ್ – 7 ಕ್ರೀಡಾಪಟುಗಳು
  • ಬಾಕ್ಸಿಂಗ್ – 6 ಕ್ರೀಡಾಪಟುಗಳು
  • ಈಕ್ವೆಸ್ಟ್ರಿಯನ್ – 1 ಕ್ರೀಡಾಪಟು
  • ಗಾಲ್ಫ್ – 4 ಕ್ರೀಡಾಪಟುಗಳು
  • ಹಾಕಿ – 19 ಕ್ರೀಡಾಪಟುಗಳು
  • ಜೂಡೋ – 1 ಕ್ರೀಡಾಪಟು
  • ರೋಯಿಂಗ್ – 1 ಕ್ರೀಡಾಪಟುಗಳು
  • ಶೂಟಿಂಗ್ – 21 ಕ್ರೀಡಾಪಟುಗಳು
  • ಈಜು – 2 ಕ್ರೀಡಾಪಟು
  • ನೌಕಾಯಾನ – 2 ಕ್ರೀಡಾಪಟುಗಳು
  • ಟೇಬಲ್ ಟೆನಿಸ್ – 8 ಕ್ರೀಡಾಪಟುಗಳು
  • ಟೆನಿಸ್ – 3 ಕ್ರೀಡಾಪಟುಗಳು
  • ವೇಟ್ ಲಿಫ್ಟಿಂಗ್ – 1 ಕ್ರೀಡಾಪಟು
  • ಕುಸ್ತಿ – 6 ಕ್ರೀಡಾಪಟುಗಳು

ಚೆಫ್​ ಡಿ ಮಿಷನ್​ ಗಗನ್​ ನಾರಂಗ್, ಇಬ್ಬರು ಉಪ ಚೆಫ್ ಡಿ ಮಿಷನ್, ಪ್ರೆಸ್ ಅಟ್ಯಾಚ್, ಇಬ್ಬರು ಪ್ರಧಾನ ಕಚೇರಿ ಅಧಿಕಾರಿಗಳು ಮತ್ತು ಐದು ವೈದ್ಯಕೀಯ ತಂಡದ ಸದಸ್ಯರು ಸೇರಿದಂತೆ 21 ಅಧಿಕಾರಿಗಳನ್ನು ಗೇಮ್ಸ್ ವಿಲೇಜ್​​ನಲ್ಲಿ ಉಳಿದುಕೊಂಡಿದ್ದಾರೆ. ಉಳಿದ 10 ಅಧಿಕಾರಿಗಳಿಗೆ (ಎಂಟು ವೈದ್ಯಕೀಯ ತಂಡದ ಸದಸ್ಯರು, ಸಾಮಾಜಿಕ ಮಾಧ್ಯಮ ಅಟ್ಯಾಚ್ ಮತ್ತು ತಂಡದ ಅಧಿಕಾರಿ) ಗೇಮ್ಸ್ ವಿಲೇಜ್​​ನ ಹೊರಗಿನ ಹೋಟೆಲ್​​ಗಳಲ್ಲಿ ಉಳಿದುಕೊಳ್ಳಲಿದ್ದಾರೆ.

ಇದನ್ನೂ ಓದಿ: Paris Olympics 2024 : ಪ್ಯಾರಿಸ್ ಒಲಿಂಪಿಕ್ಸ್ ಭದ್ರತೆಗಾಗಿ ಭಾರತೀಯ ಸೇನೆಯ ಶ್ವಾನದಳ!

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತೀಯ ಕ್ರೀಡಾಪಟುಗಳ ಸಂಪೂರ್ಣ ಪಟ್ಟಿ

ಅಥ್ಲೆಟಿಕ್ಸ್

  1. ಸರ್ವೇಶ್ ಕುಶಾರೆ: ಪುರುಷರ ಹೈಜಂಪ್
  2. ನೀರಜ್ ಚೋಪ್ರಾ: ಪುರುಷರ ಜಾವೆಲಿನ್ ಥ್ರೋ
  3. ಕಿಶೋರ್ ಕುಮಾರ್ ಜೆನಾ: ಪುರುಷರ ಜಾವೆಲಿನ್ ಥ್ರೋ
  4. ಅವಿನಾಶ್ ಸಾಬ್ಲೆ: ಪುರುಷರ 3000 ಮೀಟರ್ ಸ್ಟೀಪಲ್​ಚೇಸ್
  5. ಪಾರುಲ್ ಚೌಧರಿ: ಮಹಿಳೆಯರ 3000 ಮೀಟರ್ ಸ್ಟೀಪಲ್​ಚೇಸ್
  6. ಅಕ್ಷದೀಪ್ ಸಿಂಗ್: ಪುರುಷರ 20 ಕಿ.ಮೀ ರೇಸ್ವಾಕ್
  7. ವಿಕಾಸ್ ಸಿಂಗ್: ಪುರುಷರ 20 ಕಿ.ಮೀ ರೇಸ್ವಾಕ್
  8. ತಜಿಂದರ್​ಪಾಲ್ ಸಿಂಗ್ ತೂರ್: ಪುರುಷರ ಶಾಟ್ ಪುಟ್
  9. ಪರಮ್​ಜಿತ್​ ಬಿಶ್ತ್: ಪುರುಷರ 20 ಕಿ.ಮೀ ರೇಸ್​ವಾಕ್
  10. ಸೂರಜ್ ಪನ್ವಾರ್: ಪುರುಷರ 20 ಕಿ.ಮೀ ರೇಸ್​ವಾಕ್​​ ಮಿಶ್ರ ರಿಲೇ
  11. ಪ್ರಿಯಾಂಕಾ ಗೋಸ್ವಾಮಿ: ಮಿಶ್ರ ಮ್ಯಾರಥಾನ್ ರೇಸ್​ವಾಕ್​​
  12. ಮುಹಮ್ಮದ್ ಅಜ್ಮಲ್ ವರಿಯತೋಡಿ: ಪುರುಷರ 4*400 ಮೀಟರ್ ರಿಲೇ
  13. ಸಂತೋಷ್ ಕುಮಾರ್ ತಮಿಳರಸನ್: ಪುರುಷರ 4×400 ಮೀಟರ್ ರಿಲೇ
  14. ರಾಜೇಶ್ ರಮೇಶ್: ಪುರುಷರ 4×400 ಮೀಟರ್ ರಿಲೇ
  15. ಅಮೋಜ್ ಜೇಕಬ್: ಪುರುಷರ 4×400 ಮೀಟರ್ ರಿಲೇ
  16. ಮೊಹಮ್ಮದ್ ಅನಾಸ್ ಯಹಿಯಾ: ಪುರುಷರ 4×400 ಮೀಟರ್ ರಿಲೇ
  17. ಅಬ್ದುಲ್ಲಾ ಅಬೂಬಕ್ಕರ್: ಪುರುಷರ ಟ್ರಿಪಲ್ ಜಂಪ್
  18. ಪ್ರವೀಣ್ ಚಿತ್ರವೇಲ್: ಪುರುಷರ ಟ್ರಿಪಲ್ ಜಂಪ್
  19. ಜೆಸ್ವಿನ್ ಆಲ್ಡ್ರಿನ್: ಪುರುಷರ ಲಾಂಗ್ ಜಂಪ್
  20. ಅನ್ನು ರಾಣಿ: ಮಹಿಳಾ ಜಾವೆಲಿನ್ ಥ್ರೋ
  21. ಪಹಲ್ ಕಿರಣ್: ಮಹಿಳೆಯರ 400 ಮೀಟರ್, ಮಹಿಳೆಯರ 4×400 ಮೀಟರ್ ರಿಲೇ
  22. ಜ್ಯೋತಿ ಯರ್ರಾಜಿ: ಮಹಿಳೆಯರ 100 ಮೀಟರ್ ಹರ್ಡಲ್ಸ್
  23. ಅಂಕಿತಾ: ಮಹಿಳೆಯರ 5000 ಮೀ.
  24. ಜ್ಯೋತಿಕಾ ಶ್ರೀ ದಂಡಿ: ಮಹಿಳೆಯರ 4*400 ಮೀಟರ್ ರಿಲೇ
  25. ಪೂವಮ್ಮ ರಾಜು ಮಾಚೆಟ್ಟಿರ: ಮಹಿಳೆಯರ 4*400 ಮೀಟರ್ ರಿಲೇ
  26. ಶುಭಾ ವೆಂಕಟೇಶನ್: ಮಹಿಳೆಯರ 4×400 ಮೀಟರ್ ರಿಲೇ
  27. ವಿದ್ಯಾ ರಾಮ್​​ರಾಜ್: ಮಹಿಳೆಯರ 4×400 ಮೀಟರ್ ರಿಲೇ
  28. ಪ್ರಾಚಿ: ಮೀಸಲು ಕ್ರೀಡಾಪಟು
  29. ಮಿಜೋ ಚಾಕೋ: ಮೀಸಲು ಕ್ರೀಡಾಪಟು
  30. ಆರ್ಚರಿ ಸ್ಪರ್ಧಿಗಳು
  31. ಧೀರಜ್ ಬೊಮ್ಮದೇವರ
  32. ತರುಣ್​​ದೀಪ್ ರಾಯ್​
  33. ಪ್ರವೀಣ್ ಜಾಧವ್
  34. ದೀಪಿಕಾ ಕುಮಾರಿ
  35. ಭಜನ್ ಕೌರ್
  36. ಅಂಕಿತಾ ಭಕತ್
  37. ಬ್ಯಾಡ್ಮಿಂಟನ್
  38. ಪಿ.ವಿ.ಸಿಂಧು: ಮಹಿಳಾ ಸಿಂಗಲ್ಸ್
  39. ಅಶ್ವಿನಿ ಪೊನ್ನಪ್ಪ: ಮಹಿಳಾ ಡಬಲ್ಸ್
  40. ತನಿಶಾ ಕ್ರಾಸ್ಟೊ: ಮಹಿಳಾ ಡಬಲ್ಸ್
  41. ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ: ಪುರುಷರ ಡಬಲ್ಸ್
  42. ಚಿರಾಗ್ ಶೆಟ್ಟಿ: ಪುರುಷರ ಡಬಲ್ಸ್
  43. ಎಚ್ಎಸ್ ಪ್ರಣಯ್: ಪುರುಷರ ಸಿಂಗಲ್ಸ್
  44. ಲಕ್ಷ್ಯ ಸೇನ್: ಪುರುಷರ ಸಿಂಗಲ್ಸ್
  1. ಬಾಕ್ಸಿಂಗ್
  2. ನಿಖಾತ್ ಝರೀನ್: ಮಹಿಳೆಯರ 50 ಕೆ.ಜಿ
  3. ಪ್ರೀತಿ ಪವಾರ್: ಮಹಿಳೆಯರ 54 ಕೆ.ಜಿ
  4. ಜೈಸ್ಮಿನ್ ಲಂಬೋರಿಯಾ: ಮಹಿಳೆಯರ 57 ಕೆ.ಜಿ
  5. ಲೊವ್ಲಿನಾ ಬೊರ್ಗೊಹೈನ್: ಮಹಿಳೆಯರ 75 ಕೆ.ಜಿ
  6. ಅಮಿತ್ ಪಂಗಲ್: ಪುರುಷರ 51 ಕೆ.ಜಿ
  7. ನಿಶಾಂತ್ ದೇವ್: ಪುರುಷರ 71 ಕೆ.ಜಿ
  8. ಈಕ್ವೆಸ್ಟ್ರಿಯನ್​​
  9. ಅನುಷ್ ಅಗರ್ವಾಲ್: ಇಂಡಿವಿಜುವಲ್ ಡ್ರೆಸೇಜ್​
  10. ಗಾಲ್ಫ್
  11. ಶುಭಂಕರ್ ಶರ್ಮಾ: ವೈಯಕ್ತಿಕ
  12. ಗಗನ್ಜೀತ್ ಭುಲ್ಲರ್: ನನ್ನ ವೈಯಕ್ತಿಕ
  13. ಅದಿತಿ ಅಶೋಕ್: ಮಹಿಳಾ ವೈಯಕ್ತಿಕ
  14. ದೀಕ್ಷಾ ದಾಗರ್: ಮಹಿಳಾ ವೈಯಕ್ತಿಕ

ಪುರುಷರ ಹಾಕಿ ತಂಡ

  1. ಪಿ.ಆರ್.ಶ್ರೀಜೇಶ್
  2. ಹರ್ಮನ್ಪ್ರೀತ್ ಸಿಂಗ್
  3. ಜರ್ಮನ್ಪ್ರೀತ್ ಸಿಂಗ್
  4. ಹಾರ್ದಿಕ್ ಸಿಂಗ್
  5. ವಿವೇಕ್ ಸಾಗರ್ ಪ್ರಸಾದ್
  6. ಮನ್ದೀಪ್ ಸಿಂಗ್
  7. ಶಂಶೇರ್ ಸಿಂಗ್
  8. ಅಭಿಷೇಕ
  9. ಲಲಿತ್ ಕುಮಾರ್ ಉಪಾಧ್ಯಾಯ
  10. ಪ್ರಿನ್ಸ್ ಪಾಲ್
  11. ಸುಖ್ಜೀತ್ ಸಿಂಗ್
  12. ಅಮಿತ್ ರೋಹಿದಾಸ್
  13. ಗುರ್ಜಂತ್ ಸಿಂಗ್
  14. ಮನ್ಪ್ರೀತ್ ಸಿಂಗ್
  15. ಸುಮಿತ್
  16. ನೀಲಕಂಠ ಸಿಂಗ್
  17. ಸಂಜಯ್
  18. ಜುಗ್ರಾಜ್ ಸಿಂಗ್
  19. ಕೃಷ್ಣ ಪಾಠಕ್

ಜೂಡೋ

ತುಲಿಕಾ ಮಾನ್: ಮಹಿಳೆಯರ 78 ಕೆಜಿ+ ವಿಭಾಗ

ರೋಯಿಂಗ್

    ಬಲರಾಜ್ ಪನ್ವಾರ್: ಪುರುಷರ ಸಿಂಗಲ್ ಸ್ಕಲ್ಸ್

      ಸೇಯ್ಲಿಂಗ್​

      1. ವಿಷ್ಣು ಸರವಣನ್: ಪುರುಷರ ದೋಣಿ
      2. ನೇತ್ರಾ ಕುಮನನ್: ಮಹಿಳಾ ದೋಣಿ

      ಶೂಟಿಂಗ್

      1. ಸರಬ್ಜೋತ್ ಸಿಂಗ್: ಪುರುಷರ 10 ಮೀಟರ್ ಏರ್ ಪಿಸ್ತೂಲ್
      2. ಅರ್ಜುನ್ ಸಿಂಗ್ ಚೀಮಾ: ಪುರುಷರ 10 ಮೀಟರ್ ಏರ್ ಪಿಸ್ತೂಲ್
      3. ಅರ್ಜುನ್ ಬಬುಟಾ: ಪುರುಷರ 10 ಮೀಟರ್ ಏರ್ ರೈಫಲ್
      4. ಸಂದೀಪ್ ಸಿಂಗ್: ಪುರುಷರ 10 ಮೀಟರ್ ಏರ್ ರೈಫಲ್
      5. ಐಶ್ವರಿ ಪ್ರತಾಪ್ ತೋಮರ್: ಪುರುಷರ 50 ಮೀಟರ್ ರೈಫಲ್ 3ಪಿ
      6. ಸ್ವಪ್ನಿಲ್ ಕುಸಲೆ: ಪುರುಷರ 50 ಮೀಟರ್ ರೈಫಲ್ 3ಪಿ
      7. ಅನೀಶ್ ಭನ್ವಾಲಾ: ಪುರುಷರ 25 ಮೀಟರ್ ರ್ಯಾಪಿಡ್ ಫೈರ್ ಪಿಸ್ತೂಲ್
      8. ವಿಜಯ್​ವೀರ್ ಸಿಧು: ಪುರುಷರ 25 ಮೀಟರ್ ರ್ಯಾಪಿಡ್ ಫೈರ್ ಪಿಸ್ತೂಲ್
      9. ಅನಂತ್ ಜೀತ್ ಸಿಂಗ್ ನರುಕಾ: ಪುರುಷರ ಸ್ಕೀಟ್
      10. ಪೃಥ್ವಿರಾಜ್ ತೊಂಡೈಮನ್: ಪುರುಷರ ಬಲೆ
      11. ಮನು ಭಾಕರ್: ಮಹಿಳೆಯರ 25 ಮೀಟರ್ ಪಿಸ್ತೂಲ್, 10 ಮೀ ಪಿಸ್ತೂಲ್
      12. ಇಶಾ ಸಿಂಗ್: ಮಹಿಳೆಯರ 25 ಮೀಟರ್ ಪಿಸ್ತೂಲ್
      13. ರಾಜೇಶ್ವರಿ ಕುಮಾರಿ: ಮಹಿಳಾ ಬಲೆ
      14. ಶ್ರೇಯಸಿ ಸಿಂಗ್: ಮಹಿಳಾ ಬಲೆ
      15. ಎಲವೇನಿಲ್ ವಲರಿವನ್: ಮಹಿಳೆಯರ 10 ಮೀಟರ್ ಏರ್ ರೈಫಲ್
      16. ರಮಿತಾ: ಮಹಿಳೆಯರ 10 ಮೀಟರ್ ಏರ್ ರೈಫಲ್
      17. ಸಿಫ್ಟ್ ಕೌರ್ ಸಾಮ್ರಾ: ಮಹಿಳೆಯರ 50 ಮೀಟರ್ ರೈಫಲ್ 3ಪಿ
      18. ಅಂಜುಮ್ ಮೌದ್ಗಿಲ್: ಮಹಿಳೆಯರ 50 ಮೀಟರ್ ರೈಫಲ್ 3ಪಿ
      19. ರೈಜಾ ಧಿಲ್ಲಾನ್: ಮಹಿಳಾ ಸ್ಕೀಟ್
      20. ಮಹೇಶ್ವರಿ ಚೌಹಾಣ್: ಮಹಿಳಾ ಸ್ಕೀಟ್
      21. ರಿದಮ್ ಸಾಂಗ್ವಾನ್: ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್.
      22. ಈಜು
      1. ಶ್ರೀಹರಿ ನಟರಾಜ್: ಪುರುಷರ 100 ಮೀಟರ್ ಬ್ಯಾಕ್​ಸ್ಟ್ರೋಕ್​
      2. ಧಿಂಧಿ ದೇಸಿಂಘು: ಮಹಿಳೆಯರ 200 ಮೀಟರ್ ಫ್ರೀಸ್ಟೈಲ್​

      ಟೇಬಲ್ ಟೆನ್ನಿಸ್

      1. ಮಣಿಕಾ ಬಾತ್ರಾ
      2. ಶ್ರೀಜಾ ಅಕುಲಾ
      3. ಅರ್ಚನಾ ಗಿರೀಶ್ ಕಾಮತ್
      4. ಐಹಿಕಾ ಮುಖರ್ಜಿ (ಮೀಸಲು ಆಟಗಾರ್ತಿ )
      5. ಶರತ್ ಕಮಲ್
      6. ಹರ್ಮೀತ್ ದೇಸಾಯಿ
      7. ಮಾನವ್ ಠಕ್ಕರ್
      8. ಜಿ ಸತ್ಯನ್

      ಟೆನಿಸ್

      1. ರೋಹನ್ ಬೋಪಣ್ಣ: ಪುರುಷರ ಡಬಲ್ಸ್
      2. ಶ್ರೀರಾಮ್ ಬಾಲಾಜಿ: ಪುರುಷರ ಡಬಲ್ಸ್
      3. ಸುಮಿತ್ ನಗಾಲ್: ಪುರುಷರ ಸಿಂಗಲ್ಸ್
      4. ವೇಟ್ ಲಿಫ್ಟಿಂಗ್
      1. ಮೀರಾಬಾಯಿ ಚಾನು: ಮಹಿಳೆಯರ 49 ಕೆಜಿ

      ಕುಸ್ತಿ

      1. ಆಂತಿಮ್ ಪಂಗಾಲ್: ಮಹಿಳೆಯರ 53 ಕೆಜಿ
      2. ವಿನೇಶ್ ಫೋಗಟ್: ಮಹಿಳೆಯರ 50 ಕೆಜಿ
      3. ಅಂಶು ಮಲಿಕ್: ಮಹಿಳೆಯರ 57 ಕೆಜಿ
      4. ನಿಶಾ: ಮಹಿಳೆಯರ 68 ಕೆಜಿ
      5. ರಿತಿಕಾ ಹೂಡಾ: ಮಹಿಳೆಯರ 76 ಕೆಜಿ
      6. ಅಮನ್ ಸೆಹ್ರಾವತ್: ಪುರುಷರ 57 ಕೆಜಿ

      ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಮತ್ತು ಶರತ್ ಕಮಲ್ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತದ ಧ್ವಜಧಾರಿಗಳಾಗಿದ್ದಾರೆ. ನೀರಜ್ ಚೋಪ್ರಾ ತಮ್ಮ ಚಿನ್ನದ ಪದಕ ಉಳಿಸಿಕೊಳ್ಳುವ ಸಾಧ್ಯತೆಗಳು ಇರುವುದರಿಂದ ಎಲ್ಲರ ಕಣ್ಣುಗಳು ಅವರ ಮೇಲೆ ನೆಟ್ಟಿವೆ. ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಪ್ಯಾರಿಸ್​​ನಲ್ಲಿ ಚಿನ್ನದ ಪದಕ ಗೆಲ್ಲುವ ನೆಚ್ಚಿನ ಆಟಗಾರರು.

        Continue Reading

        ಕ್ರಿಕೆಟ್

        Suryakumar Yadav: ಸೂರ್ಯಕುಮಾರ್​ಗೆ ನಾಯಕತ್ವ ಒಲಿದದ್ದು ಕಾಪು ಮಾರಿಯಮ್ಮನ ಆಶೀರ್ವಾದದಿಂದ!

        Suryakumar Yadav: ಸೂರ್ಯಕುಮಾರ್‌ ಯಾದವ್​ ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿ ಸರಣಿ ಗೆದ್ದಿದ್ದರು. ಸೂರ್ಯಕುಮಾರ್ ಯಾದವ್ ಕಾರ್ಯವೈಖರಿ ಬಗ್ಗೆಯೂ ಬಿಸಿಸಿಐ ಹಾಗೂ ಆಯ್ಕೆ ಸಮಿತಿಗೆ ಸಮಾಧಾನವಿದ್ದು, ಅವರನ್ನೇ ನಾಯಕನನ್ನಾಗಿ ಮುಂದುವರಿಸುವ ಸಾಧ್ಯತೆ ಅಧಿಕವಾಗಿದೆ.

        VISTARANEWS.COM


        on

        Suryakumar Yadav
        Koo

        ಮುಂಬಯಿ: ಟೀಮ್​ ಇಂಡಿಯಾದ ಹಾರ್ಡ್​ ಹಿಟ್ಟರ್​ ಸೂರ್ಯಕುಮಾರ್​ ಯಾದವ್(Suryakumar Yadav) ಪತ್ನಿ​ ದೇವಿಶಾ ಶೆಟ್ಟಿ ಜತೆಗೂಡಿ ಜುಲೈ 8ರಂದು ಕಾಪು ಶ್ರೀ ಹೊಸ ಮಾರಿಗುಡಿ(Hosa Marigudi Kaup) ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿದ್ದರು. ಈ ಸಂದರ್ಭ ದೇವಸ್ಥಾನದ ಅರ್ಚಕರು ಸೂರ್ಯಕುಮಾರ್​ ಅವರಿಗೆ ನಾಯಕರಾಗುವ ಭಾಗ್ಯ ದೊರಕಲಿ ಎಂದು ಹಾರೈಸಿ ಪ್ರಸಾದ ನೀಡಿದ್ದರು. ಇದೀಗ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಸೂರ್ಯಕುಮಾರ್​ ನಾಯಕನಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ ಟಿ20ಗೆ ಖಾಯಂ ನಾಯಕನಾಗಿ ಮುಂದುವರಿಯಲಿದ್ದಾರೆ ಎನ್ನಲಾಗಿದೆ. ಸೂರ್ಯ ಅವರಿಗೆ ನಾಯಕತ್ವ ಒಲಿದದ್ದು ಕಾಪು ಮಾರಿಗುಡಿಯ ಮಾರಿಯಮ್ಮ ದೇವಿಯ ಆಶೀರ್ವಾದದಿಂದಲೇ ಎಂದು ಕೆಲ ನೆಟ್ಟಗರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

        ಹೊಸ ಮಾರಿಗುಡಿಯ ಮಾರಿಯಮ್ಮ ದೇವಿಯ ದರ್ಶನ ಪಡೆದಿದ್ದ ಸೂರ್ಯಕುಮಾರ್​ ಮುಖಮಂಟಪದ ಶಿಲಾಸ್ತಂಭ ಸಹಿತ ಸ್ವರ್ಣ ಗದ್ದುಗೆಗೆ ಸ್ವರ್ಣ ಸಮರ್ಪಿಸಿದ್ದರು. ಇದೇ ವೇಳೆ ಸೂರ್ಯ ಪತ್ನಿ, ನೂತನ ದೇಗುಲ ಉದ್ಘಾಟನೆಯ ವೇಳೆ ಬಿಡುವುದ್ದರೆ ಸೂರ್ಯ ಖಂಡಿತವಾಗಿಯೂ ಇಲ್ಲಿಗೆ ಬರಲಿದ್ದಾರೆ ಎಂದು ಹೇಳಿದ್ದರು. ದೇವಿಶಾ ಶೆಟ್ಟಿ ಅವರು ಉಡುಪಿಯ ಕಾಪು ಮೂಲದವರಾಗಿದ್ದಾರೆ. ಸದ್ಯ ಮುಂಬೈನಲ್ಲೇ ನೆಲೆಸಿದ್ದಾರೆ.

        ಕಳೆದ ಒಂದು ವರ್ಷಗಳಿಂದ ರೋಹಿತ್​ ಬಳಿಕ ಹಾರ್ದಿಕ್‌ ಪಾಂಡ್ಯರನ್ನೇ(Hardik Pandya) ಭವಿಷ್ಯದ ನಾಯಕ ಎಂದು ಬಿಂಬಿಸಲಾಗಿತ್ತು. ಆದರೆ, ಲಂಕಾ ಸರಣಿಗೆ ಸೂರ್ಯಕುಮಾರ್​ಗೆ ನಾಯಕತ್ವ ನೀಡಲಾಗಿದೆ. ಹೌದು, ಪಾಂಡ್ಯ ಅವರಿಗೆ ನಾಯಕತ್ವ ನೀಡದಿರಲು ಪ್ರಮುಖ ಕಾರಣ ಅವರ ಫಿಟ್ನೆಸ್‌ ಸಮಸ್ಯೆ. ಪಾಂಡ್ಯ ತಮ್ಮ 8 ವರ್ಷಗಳ ಕ್ರಿಕೆಟ್​ ವೃತ್ತಿಬದುಕಿನಲ್ಲಿ ಹಲವು ಬಾರಿ ಗಾಯದ ಸಮಸ್ಯೆಗೆ ತುತ್ತಾಗಿ ತಂಡದಿಂದ ಹೊರಗುಳಿದಿದ್ದರು. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಪದೇಪದೆ ಗಾಯಕ್ಕೆ ತುತ್ತಾಗುವ ಕಾರಣ ಪಾಂಡ್ಯ ನೇಮಕಕ್ಕೆ ಬಿಸಿಸಿಐನ ಕೆಲ ಪ್ರಮುಖ ಅಧಿಕಾರಿಗಳು ಹಾಗೂ ಆಯ್ಕೆ ಸಮಿತಿಯ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

        ಇದನ್ನೂ ಓದಿ Team India Srilanka Tour : ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ, ಸೂರ್ಯಕುಮಾರ್​ಗೆ ಟಿ20 ನಾಯಕತ್ವ

        ಸೂರ್ಯಕುಮಾರ್‌ ಯಾದವ್​ ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿ ಸರಣಿ ಗೆದ್ದಿದ್ದರು. ಸೂರ್ಯಕುಮಾರ್ ಯಾದವ್ ಕಾರ್ಯವೈಖರಿ ಬಗ್ಗೆಯೂ ಬಿಸಿಸಿಐ ಹಾಗೂ ಆಯ್ಕೆ ಸಮಿತಿಗೆ ಸಮಾಧಾನವಿದ್ದು, ಅವರನ್ನೇ ನಾಯಕನನ್ನಾಗಿ ಮುಂದುವರಿಸುವ ಸಾಧ್ಯತೆ ಅಧಿಕವಾಗಿದೆ.

        ಟಿ20 ತಂಡ

        ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪ ನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (ವಿ.ಕೀ ), ಸಂಜು ಸ್ಯಾಮ್ಸನ್ (ವಿ.ಕೀ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ , ಅರ್ಶದೀಪ್​ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್​ ಸಿರಾಜ್.

        Continue Reading

        ಕ್ರೀಡೆ

        Virat Kohli: ಬಿಸಿಸಿಐ ಅಧಿಕಾರಿಗಳನ್ನು ಸಂಪರ್ಕಿಸಿ ಕೋಚ್​ ಗಂಭೀರ್​ ವಿಚಾರದಲ್ಲಿ ಕೊಹ್ಲಿ ಕೊಟ್ಟ ಆಶ್ವಾಸನೆ ಏನು?

        Virat Kohli: ಕ್ರಿಕ್​ಇನ್ಫೋ ವರದಿಯ ಪ್ರಕಾರ, ವಿರಾಟ್​ ಕೊಹ್ಲಿ ಅವರು ಬಿಸಿಸಿಐ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಈ ಮೊದಲು ಗಂಭೀರ್ ಜತೆಗೆ ನಡೆಸಿದ ಕಿತ್ತಾಟಗಳನ್ನು ಮರೆತು ಅವರೊಂದಿಗೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವುದಾಗಿ ಹೇಳಿರುವುದಾಗಿ ತಿಳಿದುಬಂದಿದೆ.

        VISTARANEWS.COM


        on

        Virat Kohli
        Koo

        ಮುಂಬಯಿ: ರಾಹುಲ್​ ದ್ರಾವಿಡ್(rahul dravid)​ ಅವರ ನಿರ್ಗಮನದಿಂದ ತೆರವಾದ ಭಾರತ ಕ್ರಿಕೆಟ್ ತಂಡ ಮುಖ್ಯ ಕೋಚ್​ ಹುದ್ದೆಗೆ(Team India Coach) ಗೌತಮ್​ ಗಂಭೀರ್​(Gautam Gambhir) ಆಯ್ಕೆಯಾಗಿದ್ದು ತಮ್ಮ ಕೆಲಸ ಕಾರ್ಯವನ್ನು ಆರಂಭಿಸಿದ್ದಾರೆ. ಗಂಭೀರ್​ ಕೋಚ್​ ಆಗುತ್ತಿದ್ದಂತೆಯೇ ಕೆಲ ನೆಟ್ಟಿಗರು ಗಂಭೀರ್​ ಮತ್ತು ಕೊಹ್ಲಿ ನಡುವಣ ಆನ್ ಫೀಲ್ಡ್ ಜಗಳ ಮತ್ತೆ ಶುರುವಾಗಿ ಇದು ತಂಡಕ್ಕೆ ಭಾದಿಸಲಿದೆ ಎಂದು ಹೇಳಲಾಗಿತ್ತು. ಅಲ್ಲದೆ ಗಂಭೀರ್​ ಅವರನ್ನು ಕೋಚ್​ ಆಗಿ ಆಯ್ಕೆ ಮಾಡುವ ಮುನ್ನ ವಿರಾಟ್​ ಕೊಹ್ಲಿ(virat kohli) ಜತೆ ಬಿಸಿಸಿಐ ಅಭಿಪ್ರಾಯ ಕೇಳಿಲ್ಲ ಎಂಬ ಮಾತುಗಳು ಕೇಳಿಬಂದಿತ್ತು. ಇದೀಗ ಕೊಹ್ಲಿಯೇ ಬಿಸಿಸಿಐ(BCCI) ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ.

        ಕ್ರಿಕ್​ಇನ್ಫೋ ವರದಿಯ ಪ್ರಕಾರ, ವಿರಾಟ್​ ಕೊಹ್ಲಿ ಅವರು ಬಿಸಿಸಿಐ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಈ ಮೊದಲು ಗಂಭೀರ್ ಜತೆಗೆ ನಡೆಸಿದ ಕಿತ್ತಾಟಗಳನ್ನು ಮರೆತು ಅವರೊಂದಿಗೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವುದಾಗಿ ಹೇಳಿರುವುದಾಗಿ ತಿಳಿದುಬಂದಿದೆ.

        ವಿರಾಟ್​ ಕೊಹ್ಲಿ ಮತ್ತು ಗಂಭೀರ್​ ಐಪಿಎಲ್​ ವೇಳೆ ಹಾವು ಮುಂಗುಸಿಯಂತೆ ಕಿತ್ತಾಡಿಕೊಳ್ಳುತ್ತಿದ್ದರು. ಕಳೆದ ವರ್ಷದ ಐಪಿಎಲ್​ ವೇಳೆ ಕೈ ಕೈ ಮಿಲಾಯಿಸುವ ಹಂತಕ್ಕೂ ಇಬರಿಬ್ಬರ ಜಗಳ ಮುಂದುವರಿದಿತ್ತು. ಕೊಹ್ಲಿಯ ವಿರುದ್ಧ ಹಲವು ಬಾರಿ ಬಹಿರಂಗವಾಗಿ ಮುನಿಸನ್ನು ಪ್ರದರ್ಶಿಸಿದ್ದರು. ಹೀಗಿರುವಾಗ ಇವರಿಬ್ಬರ ಜಗಳ ಮತ್ತೆ ಮುಂದುವರಿದರೆ ತಂಡದ ಒಗ್ಗಟ್ಟು ಇಲ್ಲದಂತಾಗಬಹುದೆಂದು ಆತಂಕ ವ್ಯಕ್ತಪಡಿಸಿದ್ದರು.

        ಪ್ರತಿ ಐಪಿಎಲ್​ನಲ್ಲಿ ಕಚ್ಚಾಟ ನಡೆಸುತ್ತಿದ್ದ ಕೊಹ್ಲಿ ಮತ್ತು ಗಂಭೀರ್​ ಈ ಬಾರಿಯ ಐಪಿಎಲ್​ನಲ್ಲಿ ಅತ್ಯಂತ ಆತ್ಮೀಯವಾಗಿ ಕಂಡುಬಂದಿದ್ದರು. ಇಬ್ಬರು ಕೂಡ ತಮ್ಮ ಅಹಂ ಮತ್ತು ಮುನಿಸನ್ನು ಮರೆತಿರುವಂತೆ ಕಂಡುಬಂದಿದ್ದರು. ಆದರೂ ಕೂಡ ಕೊಹ್ಲಿ ಕೆಲ ಪಂದ್ಯಗಳಲ್ಲಿ ಆಡದೇ ಇದ್ದಾಗ ಇವರಿಬ್ಬರ ಮಧ್ಯೆ ಮತ್ತೆ ಜಗಳ ಆರಂಭಗೊಳ್ಳುವ ಸಾಧ್ಯತೆ ಇದೆ ಎನ್ನುವುದು ಅಭಿಮಾನಿಗಳ ಆತಂಕವಾಗಿತ್ತು. ಇದೀಗ ಕೊಹ್ಲಿಯೇ ಸ್ವತಃ ಬಿಸಿಸಿಐಗೆ ಎಲ್ಲ ದ್ವೇಷವನ್ನು ಬದಿಗಿಟ್ಟು ತಂಡದ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೋಚ್ ಜತೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳುವುದಾಗಿ ಹೇಳಿದ್ದಾರೆಂದು ವರದಿಯಾಗಿದೆ.

        ಇದನ್ನೂ ಓದಿ Virat Kohli: ಮೊದಲ ಬಾರಿಗೆ ಮಗ ಅಕಾಯ್ ಜತೆ ಕಾಣಿಸಿಕೊಂಡ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

        ಟಿ20 ವಿಶ್ವಕಪ್​ ಬಳಿಕ ಲಂಡನ್​ಗೆ ತೆರಳಿ ಕುಟುಂಬದ ಜತೆ ಕಾಲ ಕಳೆಯುತ್ತಿದ್ದ ವಿರಾಟ್​ ಕೊಹ್ಲಿ ಲಂಕಾ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಕೊಹ್ಲಿ ಜತೆ ರೋಹಿತ್​ ಕೂಡ ವಿಶ್ರಾಂತಿ ಪಡೆಯಲು ನಿರ್ದರಿಸಿದ್ದಾರೆ ಎನ್ನಲಾಗಿತ್ತು. ಆದರೆ, ಗಂಭೀರ್​ ಎಲ್ಲ ಹಿರಿಯ ಆಟಗಾರರರು ಕೂಡ ಈ ಸರಣಿಯಲ್ಲಿ ಆಡುವಂತೆ ಸೂಚನೆ ನೀಡಿದ್ದರು. ಗುರುವಾರ ತಂಡ ಪ್ರಕಟಗೊಳ್ಳುವ ವೇಳೆ ಅಚ್ಚರಿ ಎಂಬಂತೆ ಎಲ್ಲ ಹಿರಿಯ ಆಟಗಾರರು ಕೂಡ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

        Continue Reading

        ಕ್ರೀಡೆ

        England vs West Indies: ವೇಗದ ಅರ್ಧಶತಕ ಸಿಡಿಸಿ ವಿಶ್ವ ದಾಖಲೆ ಬರೆದ ಇಂಗ್ಲೆಂಡ್

        England vs West Indies: ಆರಂಭಿಕರಾದ ಬೆನ್ ಡಕೆಟ್ ಹಾಗೂ ಓಲಿ ಪೋಪ್‌ ಆಕ್ರಮಣಕಾರಿ ಆಟದ ನೆರವಿನಿಂದ ಇಂಗ್ಲೆಂಡ್​ ಬೃಹತ್​ ಮೊತ್ತ ದಾಖಲಿಸಿತು. ಪೋಪ್ 167 ಎಸೆತಗಳಲ್ಲಿ 15 ಬೌಂಡರಿ, 1 ಸಿಕರ್‌ನೊಂದಿಗೆ 121 ರನ್ ಸಿಡಿಸಿದರು.

        VISTARANEWS.COM


        on

        England vs West Indies
        Koo

        ನಾಟಿಂಗ್‌ಹ್ಯಾಮ್: ಪ್ರವಾಸಿ ವೆಸ್ಟ್​ ಇಂಡೀಸ್(England vs West Indies)​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಇನಿಂಗ್ಸ್​ ಗೆಲುವು ಸಾಧಿಸಿದ್ದ ಇಂಗ್ಲೆಂಡ್​ ತಂಡ ಇದೀಗ ದ್ವಿತೀಯ ಟೆಸ್ಟ್​ನಲ್ಲಿಯೂ ಹಿಡಿತ ಸಾಧಿಸಿದೆ. ಮೊದಲ ದಿನವೇ 416 ರನ್‌ ಗಳಿಸಿದೆ. ಜತೆಗೆ ಇದೇ ಪಂದ್ಯದಲ್ಲಿ ಇಂಗ್ಲೆಂಡ್ ವಿಶ್ವ​ ದಾಖಲೆಯೊಂದನ್ನು ನಿರ್ಮಿಸಿದೆ.

        ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಇಂಗ್ಲೆಂಡ್​ ಮೊದಲ ಓವರ್‌ನಲ್ಲೇ ಜ್ಯಾಕ್ ಕ್ರಾಲಿ(0) ವಿಕೆಟ್ ಕಳೆದುಕೊಂಡರೂ ಕೂಡ ಕೇವಲ 4.2 ಓವರ್ ಗಳಲ್ಲೇ 50 ರನ್ ಪೂರ್ಣಗೊಳಿಸಿದ ಇಂಗ್ಲೆಂಡ್, ಟೆಸ್ಟ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ತನ್ನದೇ ದಾಖಲೆಯನ್ನು 30 ವರ್ಷಗಳ ಬಳಿಕ ಉತ್ತಮಗೊಳಿಸಿದೆ. 1994ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ 4.3 ಓವರ್‌ಗಳಲ್ಲಿ 50 ರನ್ ಪೂರ್ಣಗೊಳಿಸಿತ್ತು. ವೇಗದ ಅರ್ಧಶತಕ ದಾಖಲೆಯ ಪಟ್ಟಿಯಲ್ಲಿ ಅಗ್ರ-3 ಸ್ಥಾನದಲ್ಲಿ ಇಂಗ್ಲೆಂಡ್ ತಂಡವೇ ಕಾಣಿಸಿಕೊಂಡಿದೆ. ಇಂಗ್ಲೆಂಡ್ ತಂಡವು 1994ರಲ್ಲಿ ದಕ್ಷಿಣ ಆಫ್ರಿಕಾ ಎದುರು 4.3 ಓವರ್‌ನಲ್ಲಿ ಅರ್ಧಶತಕ ಪೂರೈಸಿತ್ತು. ಇದಾದ ಬಳಿಕ ಇಂಗ್ಲೆಂಡ್ ತಂಡವು 2002ರಲ್ಲಿ ಶ್ರೀಲಂಕಾ ಎದುರು 5 ಓವರ್‌ನಲ್ಲಿ ಅರ್ಧಶತಕ ಪೂರೈಸಿತ್ತು. ಭಾರತ 2008ರಲ್ಲಿ ಇಂಗ್ಲೆಂಡ್ ಎದುರು 5.3 ಓವರ್‌ಗಳಲ್ಲಿ ಅರ್ಧಶತಕ ಬಾರಿಸಿ 5ನೇ ಸ್ಥಾನ ಪಡೆದಿದೆ.

        ಆರಂಭಿಕರಾದ ಬೆನ್ ಡಕೆಟ್ ಹಾಗೂ ಓಲಿ ಪೋಪ್‌ ಆಕ್ರಮಣಕಾರಿ ಆಟದ ನೆರವಿನಿಂದ ಇಂಗ್ಲೆಂಡ್​ ಬೃಹತ್​ ಮೊತ್ತ ದಾಖಲಿಸಿತು. ಪೋಪ್ 167 ಎಸೆತಗಳಲ್ಲಿ 15 ಬೌಂಡರಿ, 1 ಸಿಕರ್‌ನೊಂದಿಗೆ 121 ರನ್ ಸಿಡಿಸಿದರು. ಬೆನ್ ಡಕೆಟ್ 59 ಎಸೆತಗಳಲ್ಲಿ 14 ಬೌಂಡರಿಗಳೊಂದಿಗೆ 71 ರನ್ ಬಾರಿಸಿದರು. ನಾಯಕ ಬೆನ್ ಸ್ಟೋಕ್ಸ್ 69 ರನ್ ಗಳಿಸಿ ನಿರ್ಗಮಿಸಿದರು. ಅಲ್ಟಾರಿ ಜೋಸೆಫ್ 3 ವಿಕೆಟ್ ಕಿತ್ತರು. ವಿಂಡೀಸ್​ ಮೊದಲ ಇನಿಂಗ್ಸ್​ ಬ್ಯಾಟಿಂಗ್​ ಆರಂಭಿಸಬೇಕಿದೆ.

        ಇದನ್ನೂ ಓದಿ James Anderson: 22 ವರ್ಷಗಳ ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಿದ ಜೇಮ್ಸ್​ ಆ್ಯಂಡರ್ಸನ್; ಭಾವನಾತ್ಮಕವಾಗಿ ಹಾರೈಸಿದ ಸಚಿನ್

        ಟೆಸ್ಟ್​ನಲ್ಲಿ ವೇಗದ ಅರ್ಧಶತಕ


        ಇಂಗ್ಲೆಂಡ್​- 4.2 ಓವರ್, ಎದುರಾಳಿ; ವೆಸ್ಟ್​ ಇಂಡೀಸ್​​

        ಇಂಗ್ಲೆಂಡ್- 4.3 ಓವರ್​, ಎದುರಾಳಿ; ದಕ್ಷಿಣ ಆಫ್ರಿಕಾ

        ಇಂಗ್ಲೆಂಡ್​, 5.0​​​ ಓವರ್​, ಎದುರಾಳಿ; ಶ್ರೀಲಂಕಾ

        ಶ್ರೀಲಂಕಾ-5.2 ಓವರ್​, ಎದುರಾಳಿ; ಪಾಕಿಸ್ತಾನ

        ಭಾರತ-5.3 ಓವರ್​, ಎದುರಾಳಿ; ಇಂಗ್ಲೆಂಡ್​

        ಮೊದಲ ಟೆಸ್ಟ್​ ಆಡುವ ಮೂಲಕ ಇಂಗ್ಲೆಂಡ್​ ತಂಡದ ಹಿರಿಯ ವೇಗಿ ಜೇಮ್ಸ್​ ಆ್ಯಂಡರ್ಸನ್(James Anderson)​ ಅವರು ತಮ್ಮ 22 ವರ್ಷಗಳ ಸುದೀರ್ಘ ಅಂತಾರಾಷ್ಟೀಯ ಕ್ರಿಕೆಟ್‌ ವೃತ್ತಿ ಬದುಕಿಗೆ ತೆರೆ ಎಳೆದಿದ್ದರು. ಈ ಪಂದ್ಯವನ್ನು ಇಂಗ್ಲೆಂಡ್​ ಇನಿಂಗ್ಸ್​ ಹಾಗೂ 114 ರನ್​ಗಳಿಂದ ಗೆದ್ದು ಬೀಗಿತು. ಆ್ಯಂಡರ್ಸನ್​ಗೂ ಗೆಲುವಿನ ವಿದಾಯ ಲಭಿಸಿತ್ತು. ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ 41 ವರ್ಷದ ಆ್ಯಂಡರ್ಸನ್, ವಿದಾಯಕ್ಕೆ ಸಚಿನ್​ ತೆಂಡೂಲ್ಕರ್(Sachin Tendulkar) ಭಾವನಾತ್ಮಕ​ ಟ್ವೀಟ್​ ಮೂಲಕ ಶುಭ ಹಾರೈಸಿದ್ದರು.

        ಆ್ಯಂಡರ್ಸನ್​ ಇಂಗ್ಲೆಂಡ್‌ ಪರ ಅತಿ ಹೆಚ್ಚು ವಿಕೆಟ್‌ ಪಡೆದ, ಟೆಸ್ಟ್ ಕ್ರಿಕೆಟ್‌ನಲ್ಲಿ 700ಕ್ಕೂ ಅಧಿಕ ವಿಕೆಟ್‌ ಪಡೆದ ವಿಶ್ವದ ಮೊದಲ ವೇಗಿ ಹಾಗೂ ಒಟ್ಟಾರೆ ಮೂರನೇ ಬೌಲರ್‌ ಎನಿಸಿಕೊಂಡಿದ್ದಾರೆ. ವಿದಾಯ ಪಂದ್ಯದಲ್ಲೇ ಆ್ಯಂಡರ್ಸನ್​ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದು ಕೂಡ ವಿಶೇಷ. ದ್ವಿತೀಯ ಇನಿಂಗ್ಸ್​ನಲ್ಲಿ 10 ಓವರ್​ ಪೂರ್ತಿಗೊಳಿಸುವ ಮೂಲಕ ಜೇಮ್ಸ್​ ಆ್ಯಂಡರ್ಸನ್ 40 ಸಾವಿರ ಚೆಂಡೆಸೆದ ದಾಖಲೆ ನಿರ್ಮಿಸಿದರು. ಈ ದಾಖಲೆ ಮಾಡಿದ ವಿಶ್ವದ ಮೊದಲ ವೇಗಿ ಎನಿಸಿಕೊಂಡರು.

        Continue Reading
        Advertisement
        Keshav Prasad Maurya
        ದೇಶ2 mins ago

        Keshav Prasad Maurya: ʼಮಾನ್ಸೂನ್‌ ಆಫರ್‌ʼ ಕೊಟ್ಟ ಅಖಿಲೇಶ್‌ ಯಾದವ್‌ಗೆ ಬಿಜೆಪಿ ಟಾಂಗ್‌

        karnataka Weather Forecast
        ಮಳೆ3 mins ago

        Karnataka Weather : ವಾಯುಭಾರ ಕುಸಿತ ಎಫೆಕ್ಟ್‌; ವಾರಾಂತ್ಯದಲ್ಲಿ ಭಾರಿ ಮಳೆ ಎಚ್ಚರಿಕೆ, ಶಾಲೆಗಳಿಗೆ ರಜೆ ಘೋಷಣೆ

        Salman Khan-Akshay Kumar
        Latest5 mins ago

        Salman Khan-Akshay Kumar: ಸಲ್ಮಾನ್ ಖಾನ್ – ಅಕ್ಷಯ್ ಕುಮಾರ್ ಜೋಡಿಯಾಗಿ ನಟಿಸಿದ 4 ಅತ್ಯುತ್ತಮ ಚಿತ್ರಗಳಿವು!

        Bengaluru power cut July 20th power outage in many parts of Bengaluru
        ಬೆಂಗಳೂರು9 mins ago

        Bengaluru Power Cut: ಬೆಂಗಳೂರಿನ ಹಲವೆಡೆ ನಾಳೆ ಕರೆಂಟ್‌ ಇರಲ್ಲ!

        Congress creates colorful stories only during elections Minister Pralhad Joshi alleges
        ಕರ್ನಾಟಕ13 mins ago

        Pralhad Joshi: ಚುನಾವಣೆ ವೇಳೆ ಮಾತ್ರ ಕಾಂಗ್ರೆಸ್ ಬಣ್ಣ ಬಣ್ಣದ ಕಥೆ ಕಟ್ಟುತ್ತದೆ: ಪ್ರಲ್ಹಾದ್‌ ಜೋಶಿ

        Natasha ponawala jeweled kurta
        ಫ್ಯಾಷನ್25 mins ago

        Natasha ponawala jewelled kurta: ರಿಯಲ್‌ ಜ್ಯುವೆಲ್ಡ್ ಕುರ್ತಾ ಧರಿಸಿದ್ದ ಏಕೈಕ ಫ್ಯಾಷನ್‌ ಐಕಾನ್‌ ನತಾಶಾರ ‘ಮೊಗಲ್‌ ರಾಣಿ’ ಲುಕ್‌!

        Kubusa Kannada film release on 26th July
        ಕರ್ನಾಟಕ26 mins ago

        Kannada New Movie: ಜು.26ರಂದು ’ಕುಬುಸʼ ಚಿತ್ರ ರಾಜ್ಯಾದ್ಯಂತ ಬಿಡುಗಡೆ

        Paris Olympics 2024
        ಪ್ರಮುಖ ಸುದ್ದಿ39 mins ago

        Paris Olympics 2024 : ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲಿರುವ 117 ಭಾರತೀಯ ಕ್ರೀಡಾಪಟುಗಳ ಸಂಪೂರ್ಣ ವಿವರ ಇಲ್ಲಿದೆ

        Karnataka Rain
        ಮಳೆ53 mins ago

        Karnataka Rain : ಉಕ್ಕಿ ಹರಿಯುತ್ತಿದ್ದ ಹೊಳೆಯಲ್ಲಿ ಕೊಚ್ಚಿ ಹೋದ ಕಾರ್ಮಿಕ; ಮನೆಯ ಗೋಡೆ ಕುಸಿದು ಗೃಹಿಣಿ ಸಾವು

        Kiran Kumar
        ಕರ್ನಾಟಕ1 hour ago

        ವಿಸ್ತಾರ ನ್ಯೂಸ್‌ ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಯಿಂದ ಕಿರಣ್‌ ಕುಮಾರ್‌ ಡಿ ಕೆ ಅಮಾನತು

        Sharmitha Gowda in bikini
        ಕಿರುತೆರೆ10 months ago

        Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

        Kannada Serials
        ಕಿರುತೆರೆ9 months ago

        Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

        Bigg Boss- Saregamapa 20 average TRP
        ಕಿರುತೆರೆ9 months ago

        Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

        galipata neetu
        ಕಿರುತೆರೆ8 months ago

        Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

        Kannada Serials
        ಕಿರುತೆರೆ10 months ago

        Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

        Kannada Serials
        ಕಿರುತೆರೆ10 months ago

        Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

        Bigg Boss' dominates TRP; Sita Rama fell to the sixth position
        ಕಿರುತೆರೆ9 months ago

        Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

        geetha serial Dhanush gowda engagement
        ಕಿರುತೆರೆ7 months ago

        Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

        varun
        ಕಿರುತೆರೆ8 months ago

        Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

        Kannada Serials
        ಕಿರುತೆರೆ10 months ago

        Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

        karnataka Rain
        ಮಳೆ5 hours ago

        Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

        Karnataka Rain
        ಮಳೆ6 hours ago

        Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

        Karnataka Rain
        ಮಳೆ1 day ago

        Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

        Uttara Kannada Landslide
        ಮಳೆ1 day ago

        Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

        Karnataka Rain
        ಮಳೆ3 days ago

        Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

        karnataka Rain
        ಮಳೆ3 days ago

        Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

        karnataka Weather Forecast
        ಮಳೆ4 days ago

        Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

        karnataka Rain
        ಮಳೆ4 days ago

        Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

        karnataka weather Forecast
        ಮಳೆ5 days ago

        Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

        Karnataka Rain
        ಮಳೆ5 days ago

        Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

        ಟ್ರೆಂಡಿಂಗ್‌