IND vs PAK | ಶಹೀನ್ ಅಫ್ರಿದಿ ಎದುರು ಸಿಕ್ಕರು, ಭಾರತ ತಂಡದ ಆಟಗಾರರು ನಕ್ಕರು, ವೈರಲ್ ಆಗಿದೆ ವಿಡಿಯೊ Vistara News
Connect with us

ಕ್ರಿಕೆಟ್

IND vs PAK | ಶಹೀನ್ ಅಫ್ರಿದಿ ಎದುರು ಸಿಕ್ಕರು, ಭಾರತ ತಂಡದ ಆಟಗಾರರು ನಕ್ಕರು, ವೈರಲ್ ಆಗಿದೆ ವಿಡಿಯೊ

ಗಾಯಗೊಂಡಿರುವ ಪಾಕಿಸ್ತಾನ ತಂಡದ ಬೌಲರ್‌ ಶಹೀನ್‌ ಶಾ ಅಫ್ರಿದಿ (IND vs PAK) ಭಾರತ ತಂಡದ ಆಟಗಾರರ ಸಂಭಾಷಣೆ ವಿವರಣೆ ಇಲ್ಲಿದೆ..

VISTARANEWS.COM


on

ind vs pak
Koo

ದುಬೈ : ಭಾರತ ಹಾಗೂ ಪಾಕಿಸ್ತಾನ (IND vs PAK) ತಂಡಗಳ ನಡುವಿನ ಹೈವೋಲ್ಟೇಜ್‌ ಪಂದ್ಯ ಭಾನುವಾರ ನಡೆಯಲಿದ್ದು, ಇತ್ತಂಡಗಳ ಆಟಗಾರರು ದುಬೈನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಅಚ್ಚರಿಯೆಂದರೆ ಪಾಕಿಸ್ತಾನದ ವೇಗದ ಬೌಲರ್‌ ಶಹೀನ್‌ ಅಫ್ರಿದಿ ಈ ಟೂರ್ನಿಗೆ ಅಲಭ್ಯರಾಗಿದ್ದರೂ ಪಾಕಿಸ್ತಾನ ತಂಡದ ಜತೆ ದುಬೈಗೆ ಬಂದಿದ್ದಾರೆ. ಅಂತೆಯೇ ಗುರುವಾರ ಅಭ್ಯಾಸಕ್ಕಾಗಿ ಹೊರಟಿದ್ದ ಭಾರತ ತಂಡದ ಆಟಗಾರರಿಗೆ ಶಹೀನ್‌ ಅಫ್ರಿದಿ ಎದುರು ಸಿಕ್ಕಿದ್ದಾರೆ. ಈ ವೇಳೆ ಅವರೇನು ಮಾಡಿದರು? ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಅದರ ವಿಡಿಯೊವನ್ನು ತನ್ನ ಯೂಟ್ಯೂಬ್ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದೆ.

ಕಾಲು ನೋವಿನ ಸಮಸ್ಯೆಗೆ ಒಳಗಾಗಿರುವ ಶಹೀನ್‌ ಪ್ರಾಕ್ಟೀಸ್‌ ಮೈದಾನದ ಬದಿಯಲ್ಲಿ ಕುಳಿತಿದ್ದರು. ಕಿವಿಗೆ ಹೆಡ್‌ಫೋನ್ ಹಾಕಿಕೊಂಡು ಕುಳಿತಿದ್ದ ಅವರನ್ನು ಭಾರತ ತಂಡದ ಸ್ಪಿನ್ನರ್‌ ಯಜ್ವೇಂದ್ರ ಚಹಲ್ ಕರೆದಿದ್ದಾರೆ. ತಕ್ಷಣ ಎದ್ದ ಶಹೀನ್‌ ಅವರ ಬಳಿಗೆ ಹೋಗಿದ್ದು, ಇಬ್ಬರೂ ಪರಸ್ಪರ ಕುಶಲೋಪರ ವಿಚಾರಿಸಿದ್ದಾರೆ. ತಮಾಷೆ ಮಾಡಿ ನಕ್ಕಿದ್ದಾರೆ. ನಂತರ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಎದುರಾದರು. ಅವರು ಕರೆದು ಹಸ್ತಲಾಘವ ಮಾಡಿದರಲ್ಲದೆ, ಕಾಲಿನ ಸಮಸ್ಯೆ ಬಗ್ಗೆ ವಿಚಾರಿಸಿ ಗುಡ್‌ ಲಕ್‌ ಹೇಳಿದರು.’

ನಂತರ ಎದುರಾದವರು ವಿಕೆಟ್‌ಕೀಪರ್‌ ಬ್ಯಾಟರ್‌ ರಿಷಭ್‌ ಪಂತ್‌, ಅವರಿಬ್ಬರೂ ತಮಾಷೆ ಮಾಡಲು ಆರಂಭಿಸಿದರು. ಈ ವೇಳೆ ಶಹೀನ್ ನಾನೂ ಬ್ಯಾಟ್ಸ್‌ಮನ್ ಆಗಿ ಒಂದು ಕೈಯಲ್ಲಿ ಸಿಕ್ಸರ್ ಹೊಡೆಯಬೇಕು ಎಂಬ ಚಿಂತನೆ ಮಾಡುತ್ತಿದ್ದೇನೆ ಎಂದು ಹೇಳಿದರು. ಮುಂದಕ್ಕೆ ಸಾಗಿದ ಶಹೀನ್‌ಗೆ ಕನ್ನಡಿಗ ಕೆ. ಎಲ್‌ ರಾಹುಲ್‌ ಎದುರಾದರು. ಅವರೂ ಕಾಲಿನ ಗಾಯದ ಬಗ್ಗೆ ವಿಚಾರಿದ್ದಾರೆ.

ವಿಡಿಯದಲ್ಲಿ ಭಾರತದ ಕೋಚಿಂಗ್‌ ಸಿಬ್ಬಂದಿ ಜತೆ ಪಾಕಿಸ್ತಾನದ ತರಬೇತುದಾದರು ಮಾತನಾಡುವ ದೃಶ್ಯಗಳೂ ಇವೆ. ಅಂತೆಯೇ ಶ್ರೀಲಂಕಾ ಕ್ರಿಕೆಟಿಗರ ಜತೆಗಿನ ಸಂಭಾಷಣೆಯನ್ನೂ ಸೇರಿಸಲಾಗಿದೆ.

ಇದನ್ನೂ ಓದಿ | Asia Cup 2022 | ಶಹೀನ್‌ ಶಾ ಅಫ್ರಿದಿ ಜಾಗಕ್ಕೆ ವಿವಾದಿತ ಬೌಲರ್‌ಗೆ ಸ್ಥಾನ ಕೊಟ್ಟ ಪಾಕಿಸ್ತಾನ ತಂಡ

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Yuzvendra Chahal: ಅಶ್ವಿನ್​ಗೆ ಮೆಚ್ಚುಗೆ ಸೂಚಿಸಿ ಆಯ್ಕೆ ಸಮಿತಿಗೆ ಟಾಂಗ್​ ಕೊಟ್ಟ ಚಹಲ್

ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ವಿಕೆಟ್​ ಕಿತ್ತ ಸಾಧನೆಗೆ ಆರ್​.ಅಶ್ವಿನ್(Ravichandran Ashwin)​ ಪಾತ್ರರಾದರು. ಅವರು 144 ಕಿತ್ತು ಅನಿಲ್​ ಕುಂಬ್ಳೆ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು.

VISTARANEWS.COM


on

Edited by

yajurveda chahal
Koo

ಮುಂಬಯಿ: ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಅಮೋಘ ಬೌಲಿಂಗ್​ ಪ್ರದರ್ಶನ ತೋರಿ ಹಲವು ದಾಖಲೆ ಬರೆದ ಆರ್​.ಅಶ್ವಿನ್​ಗೆ(Ravichandran Ashwin) ಟೀಮ್​ ಇಂಡಿಯಾದ ಸ್ಪಿನ್ನರ್​ ಯಜುವೇಂದ್ರ ಚಹಲ್(Yuzvendra Chahal)​ ಟ್ವೀಟ್​ ಮೂಲಕ ಶ್ಲಾಘಿಸಿದ್ದಾರೆ. ಈ ಮೂಲಕ ಆಯ್ಕೆ ಸಮಿತಿಗೆ ಟಾಂಗ್​ ನೀಡಿದ್ದಾರೆ.

ಆರ್​.ಅಶ್ವಿನ್​ ಮತ್ತು ಯಜುವೇಂದ್ರ ಚಹಲ್​ ಅವರು ಈ ಬಾರಿಯ ವಿಶ್ವಕಪ್​ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಆಸೀಸ್​ ವಿರುದ್ಧದ ದ್ವಿತೀಯ ಪಂದ್ಯದಲ್ಲಿ ಅಶ್ವಿನ್ ಅವರು ಮೂರು ವಿಕೆಟ್​ ಪಡೆಯುತ್ತಿದ್ದಂತೆ ಟ್ವಿಟ್​ ಮಾಡಿದ ಚಹಲ್​ ಲೆಜೆಂಡರಿ ಆಟಗಾರ ಎಂದು ಹೇಳಬೇಕಿಲ್ಲ. ಅಶ್ವಿನ್ ಅವರ ಹೆಸರು ಕೇಳಿದರೆ ಸಾಕಾಗುತ್ತದೆ ಎಂದು ಬರೆದು ಆಯ್ಕೆ ಸಮಿತಿಗೆ ಪರೋಕ್ಷವಾಗಿ ಕುಟುಕಿದ್ದಾರೆ. ಈ ಟ್ವೀಟ್​ನ ಹಿಂದಿರುವ ಅರ್ಥವೆಂದರೆ, ಉತ್ತಮ ಆಟಗಾರರನ್ನು ಆಯ್ಕೆ ಸಮಿತಿ ಈ ಬಾರಿ ವಿಶ್ವಕಪ್​ ಟೂರ್ನಿಗೆ ಕಡೆಗಣಿಸಿದಂತಿದೆ ಎನ್ನುವಂತಿದೆ.

ದಾಖಲೆ ಬರೆದ ಅಶ್ವಿನ್​

ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ವಿಕೆಟ್​ ಕಿತ್ತ ಸಾಧನೆಗೆ ಆರ್​.ಅಶ್ವಿನ್(Ravichandran Ashwin)​ ಪಾತ್ರರಾದರು. ಅವರು 144 ಕಿತ್ತು ಅನಿಲ್​ ಕುಂಬ್ಳೆ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಕುಂಬ್ಳೆ ಆಸೀಸ್​ ವಿರುದ್ಧ 142 ವಿಕೆಟ್​ ಕಿತ್ತದ್ದು ಇದುವರೆಗಿನ ದಾಖಲೆಯಾಗಿತ್ತು. ಅಶ್ವಿನ್​ ಈ ಪಂದ್ಯದಲ್ಲಿ 41 ರನ್​ ನೀಡಿ 3 ವಿಕೆಟ್​ ಪಡೆದರು.

ಕೆಲ ದಿನಗಳ ಹಿಂದೆ ಚಹಲ್​ ಅವರು ವಿಶ್ವಕಪ್​ಗೆ ಆಯ್ಕೆಯಾಗದ ಕುರಿತು, “ಕೆಲವು ವಿಷಯಗಳು ನಮ್ಮ ಕೈಯಲ್ಲಿಲ್ಲ, ಆದ್ದರಿಂದ ನಾನು ಅದರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ನನ್ನ ಗಮನವು ಅತ್ಯುತ್ತಮ ಪ್ರದರ್ಶನವನ್ನು ನೀಡುವುದು ಮತ್ತು ನಾನು ಆಟವನ್ನು ಆಡುವವರೆಗೂ ಉತ್ತಮ ಪ್ರದರ್ಶನ ನೀಡುವುದು. ಯಾವುದೇ ಪಂದ್ಯವಾಗಿರಲಿ, ನನ್ನ ಗುರಿ ಶೇಕಡಾ 100 ಉತ್ತಮ ಪ್ರದರ್ಶನ ನೀಡುವುದು. ಆಯ್ಕೆ ನಮ್ಮ ಕೈಯಲ್ಲಿಲ್ಲ “ಎಂದು ಹೇಳಿದ್ದರು.

ಇದನ್ನೂ ಓದಿ Yuzvendra Chahal : ವಿಶ್ವ ಕಪ್​ನಲ್ಲಿ ಸಿಗದ ಸ್ಥಾನ, ಟೆಸ್ಟ್​ ಕ್ರಿಕೆಟ್​ನತ್ತ ಗಮನಹರಿಸಿದ ಲೆಗ್​ ಸ್ಪಿನ್ನರ್​​

ಸರಣಿ ಗೆದ್ದ ಭಾರತ

ಭಾರತ ತಂಡ ಡಕ್​ವರ್ತ್​ ನಿಯಮದ ಅನ್ವಯ 99 ರನ್​ಗಳ ಗೆಲುವು ಸಾಧಿಸಿ ಸರಣಿಯನ್ನು ವಶಪಡಿಸಿಕೊಂಡಿತು. ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಭಾರತ ಶ್ರೇಯಸ್​ ಅಯ್ಯರ್(105)​ ಮತ್ತು ಶುಭಮನ್​ ಗಿಲ್(104)​ ಅವರ ಆಕರ್ಷಕ ಶತಕ, ಆ ಬಳಿಕ ನಾಯಕ ಕೆ.ಎಲ್​ ರಾಹುಲ್(52) ಹಾಗೂ ಸೂರ್ಯಕುಮಾರ್​ ಯಾದವ್​(72*)​ ಅವರ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 399 ರನ್​ ಪೇರಿಸಿ ಸವಾಲೊಡ್ಡಿತು. ಆಸೀಸ್​ ಬೃಹತ್​ ಮೊತ್ತವನ್ನು ಬೆನ್ನಟ್ಟುವ​​ ವೇಳೆ ಪಂದ್ಯಕ್ಕೆ ಮಳೆಯಿಂದ ಹಲವು ಬಾರಿ ಅಡಚಣೆಯಾಗಿತು. ಹೀಗಾಗಿ ಡಕ್ವರ್ತ್-ಲೂಯಿಸ್ ನಿಯಮವನ್ನು ಜಾರಿಗೆ ತರಲಾಯಿತು. ಅದರಂತೆ ಈ ನಿಯಮದನ್ವಯ ಆಸೀಸ್​ ತಂಡಕ್ಕೆ 33 ಓವರ್​ಗಳಲ್ಲಿ 317 ರನ್​ಗಳ ಗುರಿ ನೀಡಲಾಯಿತು. ಆದರೆ ಆಸೀಸ್​ 28.2 ಓವರ್​ಗಳಲ್ಲಿ 217 ರನ್​ಗಳಿಗೆ ಸರ್ವ ಪತನ ಕಂಡು ಹೀನಾಯ ಸೋಲು ಅನುಭವಿಸಿತು.

Continue Reading

ಕ್ರಿಕೆಟ್

IND vs AUS: ಕೊಹ್ಲಿ ಬ್ಯಾಟಿಂಗ್​ ಕ್ರಮಾಂಕದ ಮೇಲೆ ಕಣ್ಣಿಟ್ಟ ಶ್ರೇಯಸ್​ ಅಯ್ಯರ್​

ಶ್ರೇಯಸ್​ ಅಯ್ಯರ್(Shreyas Iyer)​ ಅವರು ವಿಶ್ವಕಪ್​ನಲ್ಲಿ ಮೂರನೇ ಕ್ರಮಾಂಕದಲ್ಲಿ ಆಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

VISTARANEWS.COM


on

Edited by

Shreyas Iyer during India’s Asia Cup match against Nepal at Pallekele recently
Koo

ಇಂದೋರ್​: ಪದೇಪದೆ ಬೆನ್ನುನೋವಿಗೆ ತುತ್ತಾಗಿ ತಂಡದದಿಂದ ಹೊರಗುಳಿಯುತ್ತಿದ್ದ ಶ್ರೇಯಸ್​ ಅಯ್ಯರ್(Shreyas Iyer)​ ಆಸ್ಟ್ರೇಲಿಯಾ(IND vs AUS) ವಿರುದ್ಧದ ದ್ವಿತೀಯ ಪಂದ್ಯದಲ್ಲಿ ಪ್ರಚಂಡ ಬ್ಯಾಟಿಂಗ್​ ನಡೆಸಿ ಶತಕ ಬಾರಿಸಿ ಸಂಭ್ರಮಿಸಿದರು. ಈ ಮೂಲಕ ವಿಶ್ವಕಪ್​ಗೆ ಒಂದು ವಾರ ಬಾಕಿ ಇರುವಾಗ ಗ್ರೇಟೆಸ್ಟ್​ ಕಮ್​ಬ್ಯಾಕ್​ ಮಾಡಿದರು.

ಪಂದ್ಯದ ಬಳಿಕ ಮಾತನಾಡಿದ ಅಯ್ಯರ್​, ಬಹಳ ದಿನಗಳ ಬಳಿಕ ತೋರಿದ ಈ ಪ್ರದರ್ಶನದಿಂದ ವಿಶ್ವಕಪ್​ಗೂ ಮುನ್ನ ನನ್ನಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮೂಡಿದೆ ಎಂದು ಹೇಳಿದರು. ಇದೇ ವೇಳೆ ವಿಶ್ವಕಪ್​ನಲ್ಲಿ ಮೂರನೇ ಕ್ರಮಾಂಕದಲ್ಲಿ ಆಡುವ ಇಂಗಿತವನ್ನು ವ್ಯಕ್ತಪಡಿಸಿದರು. “ನನ್ನ ಯೋಜನೆ ಕೊಹ್ಲಿ ಅವರು ಆಡುವ ಮೂರನೇ ಕ್ರಮಾಂಕ. ಆದರೆ ನನಗೆ ತಿಳಿದಿದೆ. ಈ ಸ್ಥಾನ ನನಗೆ ಸಿಗುವುದಿಲ್ಲ ಎಂದು, ಏಕೆಂದರೆ ವಿರಾಟ್ ಈ ಕ್ರಮಾಂಕದಲ್ಲಿ ಬ್ಯಾಟ್​ ಬೀಸುತ್ತಾರೆ. ಹೀಗಾಗಿ ಈ ಸ್ಥಾನವನ್ನು ಪಡೆಯಲು ಯಾವುದೇ ಅವಕಾಶವಿಲ್ಲ. ಆದ್ದರಿಂದ ನಾನು ಯಾವುದೇ ಕ್ರಮಾಂಕ ನೀಡಿದರೂ ಬ್ಯಾಟ್​ ಬೀಸಬಲ್ಲ” ಎಂದು ಹೇಳಿದರು.

ಆಸೀಸ್​ ವಿರುದ್ಧದ ಪಂದ್ಯದಲ್ಲಿ ಅಯ್ಯರ್​ 90 ಎಸೆತ ಎದುರಿಸಿ 11 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 105 ರನ್​ ಬಾರಿಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರಬಹಿಸಿದರು. ಅವರ ಈ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗಿಲ್ ಜತೆ​ ಸೇರಿಕೊಂಡು ದ್ವಿತೀಯ ವಿಕೆಟ್​ಗೆ ಭರ್ತಿ 200 ರನ್​ಗಳ ಜತೆಯಾಟನ್ನೂ ನಡೆಸಿದ್ದರು. 

ಗ್ರೇಟ್​ ಕಮ್​ಬ್ಯಾಕ್​

​ಆಸೀಸ್​ ವಿರುದ್ಧದ ಟೆಸ್ಟ್​ ಸರಣಿಯ ವೇಳೆ ಅಯ್ಯರ್​ ಬೆನ್ನು ನೋವಿನ ಸಮಸ್ಯೆಗೆ ಸಿಲುಕಿ 6 ತಿಂಗಳ ಕಾಲ ಕ್ರಿಕೆಟ್​ ನಿಂದ ದೂರ ಉಳಿದಿದ್ದರು. ಇದಾದ ಬಳಿಕ ಅವರು ಐಪಿಎಲ್​ನಿಂದಲೂ ದೂರ ಉಳಿದಿದ್ದರು. ಶಸ್ತ್ರಚಿಕಿತ್ಸಗೆ ಒಳಗಾಗಿದ್ದ ಬಳಿಕ ಬೆಂಗಳೂರಿನ ರಾಷ್ಟ್ರೀಯ ಅಕಾಡೆಮಿಯಲ್ಲಿ ಪುನಶ್ಚೇತನದಲ್ಲಿ ಗುಣಮುಖರಾಗಿದ್ದರು. ಹೀಗಾಗಿ ಅವರನ್ನು ಏಷ್ಯಾ ಕಪ್​ ಜತೆಗೆ ವಿಶ್ವಕಪ್​ ತಂಡದಲ್ಲಿಯೂ ಅವಕಾಶ ನೀಡಲಾಗಿತ್ತು. ವಿಶ್ವಕಪ್​ಗೆ ಒಂದು ವಾರ ಇರುವಾಗ ಬಲಿಷ್ಠ ಆಸೀಸ್​ ವಿರುದ್ಧ ಶತಕ ಬಾರಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅವರ ಬ್ಯಾಟಿಂಗ್​ ಫಾರ್ಮ್​ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಹೆಚ್ಚು ನೆರವಾಗಲಿದೆ. ಅಯ್ಯರ್​ ಮಾತ್ರವಲ್ಲದೆ ವಿಶ್ವಕಪ್​ನಲ್ಲಿ ಸ್ಥಾನ ಪಡೆದ ಎಲ್ಲ ಆಟಗಾರರು ಕೂಡ ಉತ್ತಮ ಪ್ರದರ್ಶನ ತೋರುವ ಮೂಲಕ ವಿಶ್ವಕಪ್​ ಗೆಲ್ಲುವ ಬರವಸೆ ಮೂಡಿಸಿದ್ದಾರೆ.

ಇದನ್ನೂ ಓದಿ IND vs AUS: ಆಸೀಸ್​ ವಿರುದ್ಧದ ಅಂತಿಮ ಪಂದ್ಯಕ್ಕೆ ಶುಭಮನ್​ ಗಿಲ್,ಶಾರ್ದೂಲ್ ಅಲಭ್ಯ

ನಂಬಿಕೆಯ ಆಟಗಾರ

ಮಧ್ಯಮ ಕ್ರಮಾಂಕದ ಬ್ಯಾಟರ್‌ ಶ್ರೇಯಸ್​ ಅಯ್ಯರ್​ ಭರವಸೆಯ ಪ್ರತಿಭಾನ್ವಿತ ಆಟಗಾರ. ಇದುವರೆಗೆ ಟೀಮ್ ಇಂಡಿಯಾ ಪರ 10 ಟೆಸ್ಟ್, 45 ಏಕದಿನ ಮತ್ತು 49 ಟಿ20 ಪಂದ್ಯಗಳನ್ನು ಆಡಿದ್ದಾರೆ. 2017ರಲ್ಲಿ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 50 ಓವರ್‌ಗಳ ಸ್ವರೂಪದಲ್ಲಿ, ಅವರು 46.13 ಸರಾಸರಿಯಲ್ಲಿ 1753 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದರು.

Continue Reading

ಕ್ರಿಕೆಟ್

Asian Games 2023: ಐತಿಹಾಸಿಕ ಚಿನ್ನ ಗೆದ್ದ ಭಾರತ ಮಹಿಳಾ ಕ್ರಿಕೆಟ್​ ತಂಡ; ಲಂಕಾ ವಿರುದ್ಧ ರೋಚಕ ಜಯ

ಭಾರತ ಮಹಿಳಾ ಕ್ರಿಕೆಟ್​ ತಂಡ ಏಷ್ಯನ್​ ಗೇಮ್ಸ್​(Asian Games 2023) ಕ್ರೀಡಾಕೂಟದಲ್ಲಿ ಐತಿಹಾಸಿಕ ಚಿನ್ನದ ಪದಕ ಜಯಿಸಿ ಮರೆದಾಡಿದೆ.

VISTARANEWS.COM


on

Edited by

Titas Sadhu picked up three wickets inside the powerplay
Koo

ಹ್ಯಾಂಗ್‌ಝೂ: ಇದೇ ಮೊದಲ ಬಾರಿಗೆ ಏಷ್ಯನ್​ ಗೇಮ್ಸ್​(Asian Games 2023) ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದ ಭಾರತ ಮಹಿಳಾ ಕ್ರಿಕೆಟ್​ ತಂಡ ಮೊದಲ ಪ್ರಯತ್ನದಲ್ಲೇ ಐತಿಹಾಸಿಕ ಚಿನ್ನದ ಪದಕ ಜಯಿಸಿ ಮರೆದಾಡಿದೆ. ಅಲ್ಪ ಮೊತ್ತವನ್ನು ಸಂಘಟಿತ ಬೌಲಿಂಗ್​ ದಾಳಿಯ ಮೂಲಕ ನಿಯಂತ್ರಿಸಿ ಲಂಕಾ ವಿರುದ್ಧ ರೋಚಕ 19 ರನ್​ಗಳ ಗೆಲುವು ಸಾಧಿಸಿದೆ.

ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ 16 ರನ್​ ಗಳಿಸುವಷ್ಟರಲ್ಲಿ ಮೊದಲ ವಿಕೆಟ್​​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಹಾರ್ಡ್​ ಹಿಟ್ಟರ್​ ಶಫಾಲಿ ವರ್ಮ 9 ರನ್​ಗೆ ಆಟ ಮುಗಿಸಿದರು. ಆದರೆ ದ್ವಿತೀಯ ವಿಕೆಟ್​ಗೆ ಆಡಲಿಳಿದ ಜೆಮಿಮಾ ರೋಡ್ರಿಗಸ್​ ಅವರು ಸ್ಮೃತಿ ಮಂಧಾನ ಜತೆ ಸೇರಿಕೊಂಡು ತಾಳ್ಮೆಯುತ ಆಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಮಂಧಾನ ಮತ್ತು ರೋಡ್ರಿಗಸ್ ದ್ವಿತೀಯ ವಿಕೆಟ್​ಗೆ 73 ರನ್​ಗಳ ಜತೆಯಾಟ ನಡೆಸಿತು. ಉಭಯ ಆಟಗಾರ್ತಿಯರ ಈ ಅತ್ಯಮೂಲ್ಯ ಜತೆಯಾಟದ ನೆರೆವಿನಿಂದ ಭಾರತ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 116 ರನ್​ ಬಾರಿಸಿತು.

ಸುಲಭ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾಗೆ ಟಿಟಾಸ್ ಸಾಧು ತಾನೆಸೆದ ಮೊದಲ ಓವರ್​ನಲ್ಲಿಯೇ ಅವಳಿ ಆಘಾತವಿಕ್ಕಿದರು. ಬ್ಯಾಕ್​ಟು ಬ್ಯಾಕ್​ 2 ವಿಕೆಟ್​ ಕೆಡವಿ ಲಂಕಾಗೆ ಶಾಕ್​ ನೀಡಿದರು. ಇದು ಮೇಡನ್​ ಓವರ್​ ಕೂಡ ಆಯಿತು. ಇಲ್ಲಿಗೆ ಸುಮ್ಮನಾಗದ ಅವರು ಮುಂದಿನ ಓವರ್​ನಲ್ಲಿ ನಾಯಕಿ ಚಾಮರಿ ಅಟಪಟ್ಟು ವಿಕೆಟ್​ ಕಿಳುವಲ್ಲಿ ಯಶಸ್ವಿಯಾದರು. ಲಂಕಾ 14 ರನ್​ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ರೋಚಕ ಗೆಲುವು ಸಾಧಿಸಿದ ಭಾರತ

ಲಂಕಾ ಆರಂಭಿಕ ಆಘಾತ ಕಂಡರೂ ಮಧ್ಯಮ ಕ್ರಮಾಂಕದ ಆಟಗಾರ್ತಿಯರಾದ ಹಾಸಿನಿ ಪೆರೇರಾ(25) ಮತ್ತು ನೀಲಾಕ್ಷಿ ಡಿ ಸಿಲ್ವಾ(23) ಉತ್ತಮ ಹೋರಾಟವೊಂದನ್ನು ಸಂಘಟಿಸಿ ಒಂದು ಹಂತದಲ್ಲಿ ಭಾರತದ ಗೆಲುವನ್ನು ಕಸಿಯುವ ಸೂಚನೆ ನೀಡಿದರು. ಇನ್ನೇನು ಲಂಕಾ ಗೆದ್ದೇ ಬಿಟ್ಟಿತು ಎನ್ನುವಷ್ಟರಲ್ಲಿ ಘಾತಕ ಬೌಲಿಂಗ್​ ದಾಳಿ ನಡೆಸಿದ ರಾಜೇಶ್ವರಿ ಗಾಯಕ್ವಾಡ್​ ಮತ್ತು ಪೂಜಾ ವಸ್ತ್ರಾಕರ್​ ಉಭಯ ಆಟಗಾರ್ತಿಯರ ವಿಕೆಟ್​ ಕೀಳುವಲ್ಲಿ ಯಶಸ್ವಿಯಾದರು. ಇಲ್ಲಿಂದ ಭಾರತದ ಕೈ ಮೇಲಾಯಿತು. 2 ವಿಕೆಟ್​ ಕೈಯಲ್ಲಿದ್ದರೂ ಲಂಕಾಗೆ ರನ್​ ಗಳಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ತನ್ನ ಪಾಲಿನ ಆಟದಲ್ಲಿ 8 ವಿಕೆಟ್​ ಕಳೆದುಕೊಂಡು 97 ರನ್​ ಗಳಿಶಲಷ್ಟೇ ಶಕ್ತವಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಕೌರ್​ ಪಡೆ ರೋಚಕ ಗೆಲುವು ಸಾಧಿಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿತು. ಬಾಂಗ್ಲಾದೇಶ ಕಂಚು ಗೆದಿತು. ಸೋಮವಾರ ಭಾರತಕ್ಕೆ ಲಭಿಸಿದ 2ನೇ ಚಿನ್ನದ ಪದಕ ಇದಾಗಿದೆ. ಇದಕ್ಕೂ ಮುನ್ನ ಶೂಟಿಂಗ್​ನಲ್ಲಿ ಪುರುಷರ ತಂಡ ಚಿನ್ನದ ಪದಕ ಖಾತೆಯನ್ನು ತೆರೆದಿತ್ತು.

ಇದನ್ನೂ ಓದಿ Asian Games 2023: ಏಷ್ಯನ್​ ಗೇಮ್ಸ್​ನಲ್ಲಿ ಮುಂದುವರಿದ ಶೂಟರ್​ಗಳ ಪದಕ ಬೇಟೆ

ಮೂರನೇ ಬಾರಿ ಕ್ರಿಕೆಟ್​ ಸ್ಪರ್ಧೆ

ಕ್ರಿಕೆಟ್‌ ಸ್ಪರ್ಧೆ ಏಷ್ಯನ್​ ಗೇಮ್ಸ್​ ಕ್ರೀಡಾಕೂಡದಲ್ಲಿ ಪದಕ ಸ್ಪರ್ಧೆಯಾಗಿ ಕೇವಲ ಎರಡು ಸಲ ಮಾತ್ರ ನಡೆದಿತ್ತು. 2010 (ಗ್ವಾಂಗ್‌ಝೂ) ಮತ್ತು 2014 (ಇಂಚಿಯಾನ್‌)ರ ನಡೆದಿದ್ದ ಟೂರ್ನಿಯಲ್ಲಿ ಕ್ರಮವಾಗಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಪುರುಷರ ತಂಡ ಚಿನ್ನದ ಪದಕ ಗೆದ್ದಿತ್ತು. ಮಹಿಳೆಯರ ವಿಭಾಗದಲ್ಲಿ ಪಾಕಿಸ್ತಾನ ಎರಡೂ ಆವೃತ್ತಿಯಲ್ಲಿ ಚಿನ್ನ ಗೆದ್ದು ಮೆರೆದಾಡಿತ್ತು. ಮೂರನೇ ಬಾರಿ ನಡೆದ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ತನ್ನ ಚೊಚ್ಚಲ ಪ್ರಯತ್ನದಲ್ಲೇ ಚಿನ್ನ​ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ.

ಹರ್ಮನ್‌ಪ್ರೀತ್‌ ಕೌರ್‌ ವಿಫಲ

ಭಾರತ ಪರ ಸ್ಮೃತಿ ಮಂಧಾನ (46) ಮತ್ತು ಜೆಮಿಮಾ ರೋಡ್ರಿಗಸ್(42) ಹೊರತುಪಡಿಸಿ ಉಳಿದ ಯಾವುದೇ ಆಟಗಾರ್ತಿಯರು ಕೂಡ ಎರಡಂಕಿ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಲಿಲ್ಲ. ಎಲ್ಲರದ್ದು ಸಿಂಗಲ್​ ಡಿಜಿಡ್​. ಬಾಂಗ್ಲಾದೇಶ ವಿರುದ್ಧ ಸರಣಿಯಲ್ಲಿ ಅಂಪೈರ್​ಗಳ ಗುಣಮಟ್ಟದ ಬಗ್ಗೆ ಬಹಿರಂಗವಾಗಿಯೇ ಟೀಕೆ ವ್ಯಕ್ತಪಡಿಸಿ ಎರಡು ಪಂದ್ಯಗಳ ನಿಷೇಧಕ್ಕೆ ಒಳಗಾಗಿದ್ದ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಫೈನಲ್​ ಪಂದ್ಯದಲ್ಲಿ ಕಣಕ್ಕಿಳಿದರೂ ತಂಡಕ್ಕೆ ಯಾವುದೇ ಪ್ರಯೋಜನವಾಗಲಿಲ್ಲ. ಅವರು ಕೇವಲ 2 ರನ್​ ಗಳಿಸಿ ನಿರಾಸೆ ಮೂಡಿಸಿದರು.

Continue Reading

ಕ್ರಿಕೆಟ್

ಅಂತಿಮ ಏಕದಿನ ಪಂದ್ಯದಿಂದ ಹೊರಬಿದ್ದ ಅಕ್ಷರ್​ ಪಟೇಲ್​; ವಿಶ್ವಕಪ್​ಗೂ ಅನುಮಾನ

ಏಷ್ಯಾಕಪ್​ ವೇಳೆ ಗಾಯಗೊಂಡ ಅಕ್ಷರ್​ ಪಟೇಲ್(Axar Patel)​ ಅವರು ಆಸ್ಟ್ರೇಲಿಯಾ(IND vs AUS) ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಿಂದ ಹೊರಬಿದ್ದಿದ್ದಾರೆ ಎಂದು ತಿಳಿದುಬಂದಿದೆ.

VISTARANEWS.COM


on

Edited by

Axar Patel ruled out
Koo

ಬೆಂಗಳೂರು: ಆಸ್ಟ್ರೇಲಿಯಾ(IND vs AUS) ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಬುಧವಾರ ರಾಜ್​ಕೋಟ್​ನಲ್ಲಿ(Rajkot) ನಡೆಯಲಿದೆ. ಮೊದಲೆರಡು ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ, ಜಸ್​ಪ್ರೀತ್​ ಬುಮ್ರಾ ಸೇರಿ ಕೆಲ ಆಟಗಾರರು ಈಗಾಗಲೇ ತಂಡ ಸೇರಿಕೊಂಡಿದ್ದಾರೆ. ಆದರೆ ಏಷ್ಯಾಕಪ್​ ವೇಳೆ ಗಾಯಗೊಂಡ ಅಕ್ಷರ್​ ಪಟೇಲ್(Axar Patel)​ ಈ ಪಂದ್ಯದಿಂದ ಹೊರಬಿದ್ದಿರುವುದಾಗಿ ಕ್ರಿಕ್​ಬಜ್​ ವರದಿ ಮಾಡಿದೆ.

ಕ್ರಿಕ್​ಬಜ್​ ವರದಿಯ ಪ್ರಕಾರ ಅಕ್ಷರ್​ ಪಟೇಲ್ ಅವರು ಮೊಣಕೈ ಗಾಯದಿಂದ ಸಂಪೂರ್ಣ ಚೇತರಿಕೆ ಕಾಣದ ಕಾರಣ ಆಸೀಸ್​ ವಿರುದ್ಧದ ಅಂತಿಮ ಪಂದ್ಯದಿಂದ ಹೊರಬಿದ್ದಿದ್ದು ಸದ್ಯ ಅವರು ಬೆಂಗಳೂರಿನಲ್ಲಿರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದೆ. ಅಕ್ಷರ್​ ಅವರು ಫಿಟ್​ನೆಸ್​ ಪಾಸ್​ ಆದ ಬಳಿಕ ವಿಶ್ವಕಪ್​ ತಂಡಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ.

ಏಷ್ಯಾಕಪ್​ ವೇಳೆ ಗಾಯ

ಏಷ್ಯಾಕಪ್​ನ ಬಾಂಗ್ಲಾದೇಶ ವಿರುದ್ಧದ ಅಂತಿಮ ಸೂಪರ್ 4 ಪಂದ್ಯದಲ್ಲಿ ಆಲ್ ರೌಂಡರ್ ಅಕ್ಷರ್ ಪಟೇಲ್ ಗಾಯಗೊಂಡಿದ್ದರು. ಗಾಯದ ಮಧ್ಯೆಯೂ ಅವರು ಅಸಾಮಾನ್ಯ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ಮಿಂಚಿದ್ದರು. ಮೊಣಕೈ ಮತ್ತು ಸ್ನಾಯು ಸೆಳೆತದ ಗಾಯದಿಂದ ಬಳಲಿದ ಅವರು ಟೂರ್ನಿಯಿಂದ ಹೊರಬಿದ್ದಿದ್ದರು. ಒಂದೊಮ್ಮೆ ಅಕ್ಷರ್​ ಪಟೇಲ್​ ಅವರು ಗಾಯದಿಂದ ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದರೆ, ಆಗ ಅವರ ಸ್ಥಾನಕ್ಕೆ ಅಶ್ವಿನ್​ ಆಯ್ಕೆಯಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಅಶ್ವಿನ್​ಗೆ ಆಸೀಸ್​ ಸರಣಿಯಲ್ಲಿ ದಿಢೀರ್ ಅವಕಾಶ ನೀಡಿದಂತೆ ತೋರುತ್ತಿದೆ. ಇನ್ನೊಂದೆಡೆ ವಾಷಿಂಗ್ಟನ್​​ ಸುಂದರ್​ ಕೂಡ ಈ ರೇಸ್​ನಲ್ಲಿದ್ದಾರೆ.

ಗಿಲ್​-ಶಾರ್ದೂಲ್​ಗೆ ವಿಶ್ರಾಂತಿ

ಟೀಮ್​ ಇಂಡಿಯಾದ ಯುವ ಆಟಗಾರ ಶುಭಮನ್​ ಗಿಲ್(Shubman Gill)​ ಮತ್ತು ಆಲ್​ರೌಂಡರ್​ ಶಾರ್ದೂಲ್​ ಠಾಕೂರ್(Shardul Thakur)​ ಅವರಿಗೆ, ಆಸೀಸ್​ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ(IND vs AUS) ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿದೆ ಎಂದು ವರದಿಯಾಗಿದೆ. ಈಗಾಗಲೇ ಭಾರತ ತಂಡ ಸರಣಿಯನ್ನು ವಶಪಡಿಸಿಕೊಂಡಿರುವ ಕಾರಣ ಬುಧವಾರ ನಡೆಯುವ ಪಂದ್ಯ ಅಷ್ಟಾಗಿ ಮಹತ್ವ ಪಡೆದಿಲ್ಲ. ವಿಶ್ವಕಪ್​ಗೆ(ODI world cup) ಇನ್ನೊಂದು ವಾರ ಇರುವ ಕಾರಣ ಉಭಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಇಂಡಿಯನ್​ ಎಕ್ಸ್​ಪ್ರೆಸ್​ ವರದಿ ಮಾಡಿದೆ.

ಇದನ್ನೂ ಓದಿ World Record: ಸಿಕ್ಸರ್​ಗಳ ಮೂಲಕವೇ ವಿಶ್ವ ದಾಖಲೆ ಬರೆದ ಟೀಮ್​ ಇಂಡಿಯಾ

ವಿಶ್ವಕಪ್​ ಟೂರ್ನಿಯ ಹಿನ್ನಲೆ ಮೊದಲ ಎರಡು ಪಂದ್ಯಗಳಿಗೆ ವಿಶ್ರಾಂತಿ ಪಡೆದಿದ್ದ ತಂಡದ ಖಾಯಂ ನಾಯಕ ರೋಹಿತ್​ ಶರ್ಮ ಮತ್ತು ಅನುಭವಿ ವಿರಾಟ್​ ಕೊಹ್ಲಿ, ಜಸ್​ಪ್ರೀತ್​ ಬುಮ್ರಾ ಹಾಗೂ ಉಪನಾಯಕ ಹಾರ್ದಿಕ್​ ಪಾಂಡ್ಯ ಅಂತಿಮ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಗಾಯಕ್ವಾಡ್​, ಸೂರ್ಯಕುಮಾರ್, ಆರ್​ ಅಶ್ವಿನ್​ ಅಂತಿಮ ಪಂದ್ಯದಿಂದ ಹೊರಗುಳಿಯುವ ಸಾ​ಧ್ಯತೆ ಇದೆ.

ಭಾರತ ವಿಶ್ವಕಪ್​ ತಂಡ

ರೋಹಿತ್‌ ಶರ್ಮಾ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ.ಎಲ್‌.ರಾಹುಲ್‌, ಹಾರ್ದಿಕ್‌ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್‌ಪ್ರಿತ್‌ ಬುಮ್ರಾ, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಮೊಹಮ್ಮದ್‌ ಶಮಿ, ಇಶಾನ್‌ ಕಿಶನ್‌, ಶಾರ್ದೂಲ್‌ ಠಾಕೂರ್‌, ಅಕ್ಷರ್​ ಪಟೇಲ್‌, ಸೂರ್ಯಕುಮಾರ್‌ ಯಾದವ್​.

Continue Reading
Advertisement
Surjewala and KN Rajanna
ಕರ್ನಾಟಕ12 mins ago

Congress Politics : ಕೆ.ಎನ್‌. ರಾಜಣ್ಣಗೆ ಖಡಕ್‌ ವಾರ್ನಿಂಗ್‌ ಕೊಟ್ಟ ಸುರ್ಜೇವಾಲ!

protest against Actor Darshan
ಪ್ರಮುಖ ಸುದ್ದಿ21 mins ago

Actor Darshan : ನಾವಷ್ಟೇ ಕಾಣ್ಸೋದಾ? ಹೇಳಿಕೆಯಿಂದ ರೈತರ ಕೆಂಗಣ್ಣಿಗೆ ಗುರಿಯಾದ ನಟ ದರ್ಶನ್‌; ಕ್ಷಮೆ ಯಾಚನೆಗೆ ಆಗ್ರಹ

CM Siddaramaiah and HD Devegowda infront of KRS Dam
ಕರ್ನಾಟಕ46 mins ago

Cauvery water dispute : ದೇವೇಗೌಡರ ನೋಡಿ ಕಲಿಯಲು ಬಿಜೆಪಿಗೆ ಸಲಹೆ ನೀಡಿದ ಸಿಎಂ ಸಿದ್ದರಾಮಯ್ಯ!

Chamarajanagara bandh on Sep 27
ಕರ್ನಾಟಕ51 mins ago

Cauvery Protest : ಸೆ. 27ಕ್ಕೆ ಚಾಮರಾಜನಗರ ಬಂದ್‌, ಸಿಎಂ ಸಿದ್ದರಾಮಯ್ಯ ಭೇಟಿಯ ದಿನವೇ ಬಿಸಿ ಮುಟ್ಟಿಸಲು ಪ್ಲ್ಯಾನ್‌

Pooja Hegde
South Cinema1 hour ago

Pooja Hegde: ಖ್ಯಾತ ಕ್ರಿಕೆಟಿಗನ ಜತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಪೂಜಾ ಹೆಗ್ಡೆ?

PM Narendra Modi
ದೇಶ1 hour ago

PM Narendra Modi: ಮಹಿಳಾ ಮೀಸಲು ಜಾರಿ ಮಾಡಿದ್ದು ಯಾರು? ಮಹಿಳೆಯರು ನೆನಪಿಟ್ಟುಕೊಳ್ಳಬೇಕು ಎಂದ ಮೋದಿ

CM Siddaramaiah infront of chamarajanagar male mahadeshwara hills
ಕರ್ನಾಟಕ1 hour ago

CM Siddaramaiah : 2ನೇ ಅವಧಿಗೆ ಚಾಮರಾಜನಗರಕ್ಕೆ ಸಿಎಂ ಭೇಟಿ; ಮೌಢ್ಯಕ್ಕೆ ಸೆಡ್ಡು ಹೊಡೆದ ಸಿದ್ದರಾಮಯ್ಯ

Bangalore police bandh september 26
ಕರ್ನಾಟಕ1 hour ago

Bangalore Bandh : ಬಲವಂತದಿಂದ ಬಂದ್‌ ಮಾಡಿಸುವಂತಿಲ್ಲ; ಮೆರವಣಿಗೆಗೆ ಅವಕಾಶವಿಲ್ಲ, ಸೆಕ್ಷನ್‌ ಜಾರಿ ಎಂದ ಕಮಿಷನರ್‌

coast guard
ಉದ್ಯೋಗ1 hour ago

Indian Coast Guard: 290 ನಾವಿಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಅಪ್ಲೈ ದಿನಾಂಕ ವಿಸ್ತರಣೆ

School Colleges Closed in Bangalore on sep 26
ಕರ್ನಾಟಕ1 hour ago

Bangalore bandh : ರಾಜಧಾನಿಯ ಎಲ್ಲ ಶಾಲೆ, ಕಾಲೇಜುಗಳಿಗೆ ನಾಳೆ ರಜೆ ಘೋಷಣೆ; ಬೆಂಗಳೂರು ಬಂದ್‌ ಕಾರಣ

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ7 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ11 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

At the Janata Darshan event MP S Muniswamy MLA SN Narayanaswamy is fighting
ಕರ್ನಾಟಕ3 hours ago

Janata Darshan : ವೇದಿಕೆಯಲ್ಲಿ ಭೂ ಗಲಾಟೆ; ಹೊಡೆದಾಟಕ್ಕೆ ಮುಂದಾದ ಶಾಸಕ-ಸಂಸದ

Davanagere bandh
ಕರ್ನಾಟಕ5 hours ago

Davanagere bandh : ಭದ್ರಾ ನೀರಿಗಾಗಿ ಬೀದಿಗಿಳಿಯಲಿಲ್ಲ ಭತ್ತ ಬೆಳೆಗಾರರು!

HD Devegowda Press meet
ಕರ್ನಾಟಕ7 hours ago

Cauvery water dispute : ಜಲ ಶಕ್ತಿ ಇಲಾಖೆಯಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಲಿ, ಮೋದಿ ಮಧ್ಯ ಪ್ರವೇಶಿಸಲಿ: ಎಚ್.ಡಿ. ದೇವೇಗೌಡ

Farmers protest Mundargi bandh
ಕರ್ನಾಟಕ8 hours ago

Mundargi Bandh : ಬರ ಪೀಡಿತ ತಾಲೂಕು ಘೋಷಣೆಗೆ ಒತ್ತಾಯಿಸಿ ಮುಂಡರಗಿ ಬಂದ್!

Dina bhavishya
ಪ್ರಮುಖ ಸುದ್ದಿ15 hours ago

Dina Bhavishya : ಈ ರಾಶಿಯವರಿಗೆ ಇಂದು ಹೂಡಿಕೆ ಬೇಡ! ಕೆಲ ವಿಷಯದಲ್ಲಿ ಇರಲಿ ಗೌಪ್ಯತೆ

Actor padhmini Kirk
ಕರ್ನಾಟಕ1 day ago

Viral News : ಕಿರುತೆರೆ ನಟಿ ಕಿರಿಕ್‌; ಕೆಲಸ ಕಳೆದುಕೊಂಡ ಓಲಾ ಆಟೋ ಡ್ರೈವರ್‌!

dina bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಕೋಪವೇ ಮುಳುವು!

Dina bhavishya
ಪ್ರಮುಖ ಸುದ್ದಿ3 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ದಿನದ ಮಟ್ಟಿಗೆ ಈ ರಾಶಿಯವರು ಹೂಡಿಕೆ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ6 days ago

Dina Bhavishya : ನಂಬಿದ ವ್ಯಕ್ತಿಗಳು ಮೋಸ ಮಾಡ್ತಾರೆ ಹುಷಾರ್‌!

ಟ್ರೆಂಡಿಂಗ್‌