FIFA World Cup | ವಿಶ್ವ ಕಪ್​ ಉದ್ಘಾಟನೆಗೆ ಸಾಕ್ಷಿಯಾಗಲಿದ್ದಾರೆ ಉಪರಾಷ್ಟ್ರಪತಿ ಜಗದೀಪ್ ಧನಕರ್ - Vistara News

Latest

FIFA World Cup | ವಿಶ್ವ ಕಪ್​ ಉದ್ಘಾಟನೆಗೆ ಸಾಕ್ಷಿಯಾಗಲಿದ್ದಾರೆ ಉಪರಾಷ್ಟ್ರಪತಿ ಜಗದೀಪ್ ಧನಕರ್

ಕತಾರ್​ನಲ್ಲಿ ನಡೆಯಲಿರುವ ವಿಶ್ವದ ಪ್ರತಿಷ್ಠಿತ ಫಿಫಾ ಫುಟ್ಬಾಲ್​ ವಿಶ್ವಕಪ್​ ಟೂರ್ನಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಪಾಲ್ಗೊಳಲಿದ್ದಾರೆ.

VISTARANEWS.COM


on

Dhankhar arrives in Doha to attend FIFA World Cup opening ceremony
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದೋಹಾ: ಕಾಲ್ಚೆಂಡಿನ ಕಲರವ ಫಿಪಾ ಫುಟ್ಬಾಲ್​ ವಿಶ್ವ ಕಪ್ ಟೂರ್ನಿ(Fifa World Cup) ಆರಂಭಕ್ಕೆ ಕತಾರ್​ನಲ್ಲಿ ಕ್ಷಣಗಣನೆ ಆರಂಭವಾಗಿದ್ದು ಭಾರತೀಯ ಕಾಲಮಾನದ ಪ್ರಕಾರ ಸಂಜೆ 7 ಗಂಟೆಗೆ ಅಧಿಕೃತ ಚಾಲನೆ ದೊರೆಯಲಿದೆ. ಈ ಐತಿಹಾಸಿಕ ಸಮಾರಂಭಕ್ಕೆ ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಕೂಡ ಸಾಕ್ಷಿಯಾಗಲಿದ್ದಾರೆ.

ಈಗಾಗಲೇ ಕತಾರ್​ ತಲುಪಿರುವ ಜಗದೀಪ್ ಧನಕರ್ ಅವರಿಗೆ ಭವ್ಯ ಸ್ವಾಗತ ದೊರಕ್ಕಿದ್ದು, ಉದ್ಘಾಟನಾ ಸಮಾರಂಭದ ಜತೆಗೆ ಆತಿಥೇಯ ಕತಾರ್​ ಮತ್ತು ಈಕ್ವೆಡಾರ್ ವಿರುದ್ಧದ ಉದ್ಘಾಟನಾ ಪಂದ್ಯವನ್ನು ಅವರು ವೀಕ್ಷಿಸಲಿದ್ದಾರೆ ಎಂದು ಕತಾರ್​ನ ಭಾರತೀಯ ರಾಯಭಾರ ಕಚೇರಿ ಮಾಹಿತಿ ನೀಡಿದೆ.

ಕತಾರ್​ ವಿಶ್ವ ಕಪ್​ ಟೂರ್ನಿಯ ಉದ್ಘಾಟನಾ ಕಾರ್ಯಕ್ರಮದ ಬಳಿಕ ಎರಡು ದಿನದ ಕಾರ್ಯಕ್ರಮದಲ್ಲಿ ಜಗದೀಪ್ ಧನಕರ್ ಅವರು ಕತಾರ್‌ನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇದನ್ನೂ ಓದಿ | Fifa World Cup 2022 | ಫಿಫಾ ವಿಶ್ವ ಕಪ್​ನ ಬಹುಮಾನ ಮೊತ್ತದ ವಿವರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: ರೈಲು ಚಲಿಸುತ್ತಿರುವಾಗಲೇ ಹೇಗೆ ಮೊಬೈಲ್‌ ಎಗರಿಸುತ್ತಾರೆ ನೋಡಿ!

ಚಲಿಸುತ್ತಿರುವ ರೈಲಿನಲ್ಲಿದ್ದ ಪ್ರಯಾಣಿಕನ ಮೊಬೈಲ್ ಕಿತ್ತುಕೊಂಡು ಯುವಕನೊಬ್ಬ ಓಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು ಸಾಕಷ್ಟು ನೆಟ್ಟಿಗರು ಇದಕ್ಕೆ ಕಾಮೆಂಟ್ ಮಾಡಿದ್ದಾರೆ. ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಹೇಗೆ ಎಚ್ಚರಿಕೆಯಿಂದ ಇರಬೇಕು ಎನ್ನುವುದನ್ನು ಈ ವಿಡಿಯೊ ಸಾರಿ ಹೇಳುತ್ತದೆ.

VISTARANEWS.COM


on

By

Viral Video
Koo

ನವದೆಹಲಿ: ಚಲಿಸುತ್ತಿರುವ ರೈಲಿನ (train) ಪಕ್ಕದಲ್ಲಿ ಸ್ಟೇಷನ್ ಪ್ಲಾಟ್‌ಫಾರ್ಮ್‌ನಲ್ಲಿ (Platform) ನಡೆದುಕೊಂಡು ಹೋಗುತ್ತಿದ್ದ ಯುವಕನೊಬ್ಬ ಪ್ರಯಾಣಿಕರ ಮೊಬೈಲ್ (mobile) ಕಿತ್ತುಕೊಂಡು ಹೋಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral Video) ಆಗಿದ್ದು, ಈ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.

ಬಸ್, ರೈಲು ಅಥವಾ ಮೆಟ್ರೋದಲ್ಲಿ ಪ್ರಯಾಣಿಸುವಾಗ ಕಳ್ಳರ ಬಗ್ಗೆ ಎಚ್ಚರದಿಂದಿರಿ ಎಂದು ಕೆಲವರು ಹೇಳುವುದನ್ನು ನೋಡಿರಬೇಕು. ಜೇಬುಗಳ್ಳರ ಬಗ್ಗೆ ಎಚ್ಚರದಿಂದಿರಿ ಎಂಬ ಎಚ್ಚರಿಕೆಯನ್ನು ಸಾಮಾನ್ಯವಾಗಿ ಎಲ್ಲೆಡೆ ಪೋಸ್ಟ್ ಮಾಡಲಾಗುತ್ತದೆ ಅಥವಾ ಕೆಲವು ಸ್ಥಳಗಳಲ್ಲಿ ಪ್ರಕಟಿಸಲಾಗುತ್ತದೆ. ಎಷ್ಟೇ ಎಚ್ಚರಿಕೆ ವಹಿಸಿದ್ದರೂ ಕಳ್ಳರೂ ಬುದ್ದಿವಂತರಾಗಿದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಈ ದಿನಗಳಲ್ಲಿ ರೈಲ್ವೇ ಸಿಬ್ಬಂದಿ ಮತ್ತು ರೈಲ್ವೇ ರಕ್ಷಣಾ ಪಡೆ ಸಿಬ್ಬಂದಿ ಕೂಡ ರೈಲ್ವೇ ನಿಲ್ದಾಣಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಜಾಗರೂಕರಾಗಿದ್ದಾರೆ. ನಿಲ್ದಾಣಗಳಲ್ಲಿ ಮತ್ತು ರೈಲುಗಳ ಒಳಗೆ ಅಪರಾಧಗಳನ್ನು ತಡೆಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಆದರೆ ಹಲವು ಬಾರಿ ಅಪರಾಧಿಗಳು ಎಷ್ಟು ಜಾಣ್ಮೆಯಿಂದ ಅಪರಾಧ ಎಸಗುತ್ತಾರೆ ಎಂದರೆ ರೈಲ್ವೆ ಸಿಬ್ಬಂದಿಗೂ ಸುಳಿವು ಸಿಗುವುದಿಲ್ಲ.

ರೈಲು ನಿಲ್ದಾಣದಲ್ಲಿ ರೈಲು ನಿಲುಗಡೆಯಾದಾಗ ಫೋನ್‌ಗಳೊಂದಿಗೆ ಕಿಟಕಿಯ ಬಳಿ ಕುಳಿತುಕೊಳ್ಳಬೇಡಿ ಅಥವಾ ಚಾರ್ಜಿಂಗ್‌ನಲ್ಲಿ ಇರಿಸಬೇಡಿ ಎಂದು ಅಧಿಕಾರಿಗಳು ಯಾವಾಗಲೂ ಎಚ್ಚರಿಸುತ್ತಾರೆ. ಮಹಿಳೆಯರು ಆಭರಣಗಳನ್ನು ಧರಿಸಿದರೆ ಕಿಟಕಿಯ ಹತ್ತಿರ ಕುಳಿತುಕೊಳ್ಳಬಾರದು ಎಂದು ಹೇಳಲಾಗುತ್ತದೆ. ಕಳ್ಳರು ಇವುಗಳನ್ನು ಕಸಿದುಕೊಂಡು ಓಡಿ ಹೋಗುವುದೇ ಇದಕ್ಕೆ ಕಾರಣ.

ವೈರಲ್ ಆಗಿರುವ ಈ ವಿಡಿಯೋದಲ್ಲಿ ಕಿತ್ತಳೆ ಬಣ್ಣದ ಟೀ ಶರ್ಟ್ ಧರಿಸಿದ್ದ ಹುಡುಗನೊಬ್ಬ ಚಲಿಸುತ್ತಿರುವ ರೈಲಿನ ಪಕ್ಕದ ಪ್ಲಾಟ್‌ಫಾರ್ಮ್‌ನಲ್ಲಿ ನಿಧಾನವಾಗಿ ನಡೆದುಕೊಂಡು ಹೋಗುತ್ತಿದ್ದಾನೆ. ಎಲ್ಲವೂ ಸಾಮಾನ್ಯವಾಗಿದೆ ಎಂದು ಆ ಕ್ಷಣದಲ್ಲಿ ಭಾಸವಾದರೂ ಸ್ವಲ್ಪ ಸಮಯದ ಬಳಿಕ ಹುಡುಗ ಚಲಿಸುತ್ತಿರುವ ರೈಲಿನಿಂದ ಪ್ರಯಾಣಿಕನ ಫೋನ್ ಅನ್ನು ಇದ್ದಕ್ಕಿದ್ದಂತೆ ಕಿತ್ತುಕೊಂಡು ಓಡಿ ಹೋಗಿದ್ದಾನೆ.

ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಇಂತಹ ಪರಿಸ್ಥಿತಿಯಲ್ಲಿ ಏನನ್ನಾದರೂ ಮಾಡುವ ಬದಲು ವಿಡಿಯೋವನ್ನು ರೆಕಾರ್ಡ್ ಮಾಡಿರುವ ವ್ಯಕ್ತಿಯನ್ನು ದೂಷಿಸಿದ್ದಾರೆ.
ಇದರ ವಿಡಿಯೋವನ್ನು ಇನ್ ಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಗಿದ್ದು, ಇದರಲ್ಲಿ ಯುವಕನೊಬ್ಬ ಚಲಿಸುವ ರೈಲಿನಿಂದ ಪ್ರಯಾಣಿಕರ ಮೊಬೈಲ್ ಅನ್ನು ಕಸಿದುಕೊಳ್ಳುತ್ತಿರುವುದನ್ನು ನೋಡಬಹುದು.

ನಿಲ್ದಾಣದಿಂದ ರೈಲು ಪ್ರಾರಂಭವಾಗಿ ನಿಧಾನ ವೇಗದಲ್ಲಿ ಚಲಿಸುತ್ತಿರುವಾಗಲೇ ಯುವಕ ರೈಲಿನ ಪಕ್ಕದ ಪ್ಲಾಟ್‌ಫಾರ್ಮ್‌ನಲ್ಲಿ ನಡೆಯಲು ಪ್ರಾರಂಭಿಸುತ್ತಾನೆ. ರೈಲಿನ ವೇಗ ಹೆಚ್ಚಿದ ತಕ್ಷಣ ಕೈ ಒಳಗೆ ಹಾಕಿ ಪ್ರಯಾಣಿಕರೊಬ್ಬರ ಫೋನ್ ಕಿತ್ತುಕೊಂಡು ಓಡಿ ಹೋದ. ಈ ಘಟನೆ ಎಲ್ಲಿ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಆದರೆ ಹ್ಯಾಶ್‌ಟ್ಯಾಗ್‌ಗಳಲ್ಲಿ ಬಳಕೆದಾರರು ಸತ್ನಾ ಮತ್ತು ರೇವಾ ಎಂದು ನಮೂದಿಸಿದ್ದಾರೆ.

ಅಂತರ್ಜಾಲದಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಈ ವರೆಗೆ 4 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ವಿಡಿಯೋ ನೋಡಿದ ಕೆಲವರು ತಮ್ಮ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.


ವಿಡಿಯೋ ರೆಕಾರ್ಡ್ ಮಾಡುವ ವ್ಯಕ್ತಿಯನ್ನು ಹಲವರು ಪ್ರಶ್ನಿಸುತ್ತಿದ್ದು, ಯಾಕೆ ಸಹಾಯ ಮಾಡಲಿಲ್ಲ, ಕಳ್ಳನನ್ನು ಏಕೆ ಹಿಡಿಯಲಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: Virat Kohli: ಸಿಕ್ಸ್​ ಪ್ಯಾಕ್​ ತೋರಿಸಿ ಡ್ಯಾನ್ಸ್​ ಮಾಡಿದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

ಒಬ್ಬ ಬಳಕೆದಾರರು, ಹೊಸ ಭಯ ಅನ್ಲಾಕ್ ಆಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಕ್ಯಾಮರಾಮನ್‌ನಿಗೂ ಕಳ್ಳತನದಲ್ಲಿ ಕೈ ಇದೆ ಎಂದು ತೋರುತ್ತಿದೆ ಎಂದಿದ್ದಾರೆ. ಮೂರನೆಯವ, ಬ್ರೂ ನನಗೆ ಅದೇ ಅನುಭವವಾಗಿತ್ತು ಮತ್ತು ಇದು ನನಗೆ ತುಂಬಾ ಆಘಾತಕಾರಿ ಕ್ಷಣವಾಗಿತ್ತು. ಆದರೆ ಕೊನೆಯಲ್ಲಿ ನಾನು ಪ್ಲಾಟ್‌ಫಾರ್ಮ್‌ನಲ್ಲಿ ಓಡುತ್ತಿರುವ ರೈಲಿನಿಂದ ಜಿಗಿದ ಕಾರಣ ನನ್ನ ಫೋನ್ ಅನ್ನು ಹಿಂತಿರುಗಿಸಿದ ಎಂದು ಹೇಳಿದ್ದಾರೆ.

Continue Reading

ದೇಶ

Bhavya Narasimhamurthy: ಕಾಂಗ್ರೆಸ್‌ ವಕ್ತಾರೆ ಭವ್ಯಾ ನರಸಿಂಹಮೂರ್ತಿ ಈಗ ಸೇನಾಧಿಕಾರಿ!

ಪ್ರಾದೇಶಿಕ ಸೇನೆಯಲ್ಲಿ ಕಮಿಷನ್‌ಡ್ ಆಫೀಸರ್ ಆಗಿ ನಿಯೋಜನೆಯಾಗಿರುವ ಭವ್ಯಾ ನರಸಿಂಹಮೂರ್ತಿ (Bhavya Narasimhamurthy) ಅವರು. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಭಾರತೀಯ ಸೇನೆ ಸಮವಸ್ತ್ರದಲ್ಲಿ ತರಬೇತಿ ಪಡೆಯುತ್ತಿರುವ ಚಿತ್ರಗಳನ್ನು ಹಂಚಿಕೊಂಡಿರುವ ಅವರು ಇದು ನನ್ನ ಜೀವನದ ಹೆಮ್ಮೆಯ ಸಂದರ್ಭ ಎಂದು ಹೇಳಿದ್ದಾರೆ.

VISTARANEWS.COM


on

By

Bhavya Narasimhamurthy
Koo

ಅಖಿಲ ಭಾರತ ಕಾಂಗ್ರೆಸ್ ಸಮಿತಿ (All India Congress Committee) ರಾಷ್ಟ್ರೀಯ ಸಂಯೋಜಕಿ ಹಾಗೂ ಕರ್ನಾಟಕ ಕಾಂಗ್ರೆಸ್ (congress) ವಕ್ತಾರರಾದ ಭವ್ಯಾ ನರಸಿಂಹಮೂರ್ತಿ (Bhavya Narasimhamurthy) ಅವರು ದಕ್ಷಿಣ ಭಾರತದಿಂದ (south india) ಪ್ರಾದೇಶಿಕ ಸೇನೆಗೆ (Territorial Army officer) ಆಯ್ಕೆಯಾದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಡೈರೆಕ್ಟರೇಟ್ ಜನರಲ್ ಟೆರಿಟೋರಿಯಲ್ ಆರ್ಮಿ 2022ರಲ್ಲಿ ನಡೆಸಿದ ಟೆರಿಟೋರಿಯಲ್ ಆರ್ಮಿ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದ ಏಕೈಕ ಮಹಿಳಾ ಅಭ್ಯರ್ಥಿಯಾದ ಭವ್ಯಾ ಅವರ ಮಿಲಿಟರಿ ವೃತ್ತಿ ಜೀವನದ ಪ್ರಯಾಣ ಇದರೊಂದಿಗೆ ಪ್ರಾರಂಭವಾಯಿತು.

2024ರ ಮೇನಲ್ಲಿ ಭವ್ಯಾ ಅವರನ್ನು ಇಂಡೋ-ಪಾಕ್ ನಿಯಂತ್ರಣ ರೇಖೆಯ (LOC) ಬಳಿ ಇರುವ ಸೇನಾ ಘಟಕಕ್ಕೆ ನಿಯೋಜಿಸಲಾಯಿತು. ಅವರ ಪೋಸ್ಟಿಂಗ್ ಸಮಯದಲ್ಲಿ ಅವರು ಕಠಿಣ ತರಬೇತಿಯನ್ನು ಪಡೆದರು ಮತ್ತು ಅನಂತರ ಟೆರಿಟೋರಿಯಲ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡರು. ಅವರ ಸೇರ್ಪಡೆಯು ಒಂದು ಅದ್ಭುತ ಕ್ಷಣವನ್ನು ಸೂಚಿಸುತ್ತದೆ. ಯಾಕೆಂದರೆ ಅವರು ಪ್ರಾದೇಶಿಕ ಸೈನ್ಯದಲ್ಲಿ ಈ ಶ್ರೇಣಿಯನ್ನು ಪಡೆದ ದಕ್ಷಿಣ ಭಾರತದ ಮೊದಲ ಮಹಿಳೆಯಾಗಿದ್ದಾರೆ.


ಪ್ರಾದೇಶಿಕ ಸೇನೆಯಲ್ಲಿ ಭಾರತೀಯ ನಾಗರಿಕರು ತಮ್ಮ ನಾಗರಿಕ ವೃತ್ತಿಯೊಂದಿಗೆ ಭಾರತೀಯ ಸೇನೆಯ ಭಾಗವಾಗಿ ತಮ್ಮ ದೇಶಕ್ಕೆ ಸೇವೆ ಸಲ್ಲಿಸಲು ಅವಕಾಶವಿದೆ. ಪ್ರಸ್ತುತ ಟೆರಿಟೋರಿಯಲ್ ಆರ್ಮಿಯಲ್ಲಿರುವ ಕೆಲವು ಪ್ರಮುಖ ವ್ಯಕ್ತಿಗಳಲ್ಲಿ ಕ್ರಿಕೆಟಿಗ ಎಂ.ಎಸ್. ಧೋನಿ, ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್, ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಸೇರಿದ್ದಾರೆ.


ಪ್ರಾದೇಶಿಕ ಸೇನೆಯಲ್ಲಿ ಕಮಿಷನ್ಡ್‌ ಆಫೀಸರ್ ಆಗಿ ನಿಯೋಜನೆಯಾಗಿರುವ ಭವ್ಯಾ ನರಸಿಂಹಮೂರ್ತಿ ಅವರು ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಭಾರತೀಯ ಸೇನೆ ಸಮವಸ್ತ್ರದಲ್ಲಿ ತರಬೇತಿ ಪಡೆಯುತ್ತಿರುವ ಚಿತ್ರಗಳನ್ನು ಹಂಚಿಕೊಂಡಿರುವ ಅವರು ಇದು ನನ್ನ ಜೀವನದ ಹೆಮ್ಮೆಯ ಸಂದರ್ಭ ಎಂದು ಹೇಳಿದ್ದಾರೆ. ರಾಜಕಾರಣಿಯಾಗಿ ಮತ್ತು ಸೇನಾ ಅಧಿಕಾರಿಯಾಗಿ ನಾನು ಈ ಮೂಲಕ ನನ್ನ ದೇಶಕ್ಕೆ ಸೇವೆ ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Education News : ನೀಟ್ ಪರೀಕ್ಷೆ ಬಳಿಕ ಎಂಜಿನಿಯರ್ ಸೀಟು ಹಂಚಿಕೆ; 1.24 ಲಕ್ಷ ಸೀಟುಗಳು ಲಭ್ಯ, ಆನ್ ಲೈನ್ ಪ್ರಕ್ರಿಯೆ

ಏನಿದು ಪ್ರಾದೇಶಿಕ ಸೇನೆ?

ಪ್ರಾದೇಶಿಕ ಸೇನೆ ಎನ್ನುವುದು ನಿರಂತರ ಸೇವೆಯಲ್ಲಿರುವ ಸೈನ್ಯವಲ್ಲ. ಭಾರತದ ನಾಗರಿಕರಿಗೆ ತಮ್ಮ ವೃತ್ತಿಯೊಂದಿಗೆ ಭಾರತೀಯ ಸೇನೆಯ ಭಾಗವಾಗಿ ದೇಶ ಸೇವೆ ಮಾಡುವ ಅವಕಾಶವನ್ನು ಕಲ್ಪಿಸಲಾಗುತ್ತದೆ. ವರ್ಷದಲ್ಲಿ ಎರಡು ತಿಂಗಳ ಕಾಲ ಪ್ರಾದೇಶಿಕ ಸೇನೆಯಲ್ಲಿ ಆಯ್ಕೆಯಾದವರು ಕಾರ್ಯ ನಿರ್ವಹಿಸಬೇಕಾಗುತ್ತದೆ.

Continue Reading

ಪ್ರವಾಸ

Muthyala Maduvu Waterfalls: ಜಲರಾಶಿಯಿಂದ ತುಂಬಿಕೊಂಡು ಕಣ್ಮನ ಸೆಳೆಯುತ್ತಿರುವ ಮುತ್ಯಾಲಮಡುವು ಜಲಪಾತ

ಧುಮ್ಮಿಕ್ಕಿ ಹರಿಯುತ್ತಿರೋ ಮುತ್ಯಾಲಮಡು ಜಲಪಾತ (Muthyala Maduvu Waterfalls) ಕಾಣಲು ಬೆಂಗಳೂರು ನಗರವಾಸಿಗಳು ಸೇರಿದಂತೆ ದೂರದೂರದಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ. ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಿಂದ ಈ ಪ್ರವಾಸಿತಾಣದ ಸೊಬಗು ಮತ್ತಷ್ಟು ಹೆಚ್ಚಾಗಿದೆ.

VISTARANEWS.COM


on

By

Muthyala Maduvu Waterfalls
Koo

ವರದಿ: ಅಂಬರೀಷ್, ಆನೇಕಲ್

ಆನೇಕಲ್(ಬೆಂಗಳೂರು): ಹಚ್ಚ ಹಸುರಿನ ಗಿಡ ಮರಗಳ ನಡುವೆ ಧುಮ್ಮಿಕ್ಕುತ್ತಿರುವ ಬೆಂಗಳೂರು (bengaluru) ಹೊರವಲಯದಲ್ಲಿರುವ ಆನೇಕಲ್ (anekal) ತಾಲೂಕಿನ ಮುತ್ಯಾಲಮಡುವು ಜಲಪಾತ (Muthyala Maduvu Waterfalls) ಈಗ ಪ್ರವಾಸಿಗರನ್ನು ಸೆಳೆಯುತ್ತಿದೆ. ಕಳೆದ ಕೆಲವು ದಿನಗಳಿಂದ ಬೆಂಗಳೂರು ಸುತ್ತಮುತ್ತ ನಿರಂತರ ಮಳೆಯಾಗುತ್ತಿರುವ ಜಲರಾಶಿಯಿಂದ ಮೈತುಂಬಿಕೊಂಡಿರುವ ಎಲ್ಲರ ಕಣ್ಮನ ಸೆಳೆಯುತ್ತಿದೆ.

ಧುಮ್ಮಿಕ್ಕಿ ಹರಿಯುತ್ತಿರೋ ಮುತ್ಯಾಲಮಡುವು ಜಲಪಾತ ಕಾಣಲು ಬೆಂಗಳೂರು ನಗರವಾಸಿಗಳು ಸೇರಿದಂತೆ ದೂರದೂರದಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ. ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಿಂದ ಈ ಪ್ರವಾಸಿತಾಣದ ಸೊಬಗು ಮತ್ತಷ್ಟು ಹೆಚ್ಚಾಗಿದೆ.

ಪ್ರವಾಸಿಗರ ಹಾಟ್​ ಸ್ಪಾಟ್​ ಆಗಿರುವ ಮುತ್ಯಾಲಮಡುವು ಫಾಲ್ಸ್ ಸುಮಾರು 300 ಅಡಿ ಎತ್ತರದಿಂದ ಕಣಿವೆಯತ್ತ ಹರಿದು ಬರುತ್ತದೆ. ಹಾಲ್ನೊರೆಯಂತೆ ಕಾಣುವ ಜಲಪಾತದ ಸೌಂದರ್ಯ ರಾಶಿ ಎಲ್ಲರ ಕಣ್ಮನ ಸೆಳೆಯುತ್ತಿದೆ.
ಜಲಪಾತದ ಸೌಂದರ್ಯ ಕಂಡು ಪ್ರವಾಸಿಗರು ಫುಲ್ ಖುಷ್ ಆಗಿದ್ದು, ಅನೇಕರು ಸುರಿಯುವ ಮಳೆಯ ನಡುವೆಯೂ ನೀರಿನಲ್ಲಿ ಮಿಂದೇಳುತ್ತಿದ್ದಾರೆ. ಜಲಪಾತದ ರಮಣೀಯ ಸೊಬಗನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

ಆನೇಕಲ್ ನಿಂದ ಸುಮಾರು 5 ಕಿ.ಮೀ ಮತ್ತು ಬೆಂಗಳೂರಿನಿಂದ 40 ಕಿ.ಮೀ. ದೂರದಲ್ಲಿರುವ ಮುತ್ಯಾಲಮಡು ಇರುವ ಸ್ಥಳವನ್ನು ಪರ್ಲ್ ವ್ಯಾಲಿ ಎಂದೂ ಕರೆಯುತ್ತಾರೆ.


ಮುತ್ತಿನ ಕಣಿವೆ

ಈ ಸ್ಥಳವು ಜಲಪಾತ ಮತ್ತು ಪರ್ವತ ಶ್ರೇಣಿಗಳಿಗೆ ಹೆಸರುವಾಸಿಯಾಗಿದೆ. ಜಲಪಾತದ ನೀರು ಸಸ್ಯಗಳ ನಡುವೆ ಕೆಳಗೆ ಇಳಿಯುವಾಗ ಮುತ್ತುಗಳ ಸರಮಾಲೆಯಂತೆ ಕಾಣುವುದರಿಂದ ಇದನ್ನು ಪರ್ಲ್ ವ್ಯಾಲಿ ಅಥವಾ ಮುತ್ತಿನ ಕಣಿವೆ ಎನ್ನಲಾಗುತ್ತದೆ.


ಪ್ರವಾಸಿಗರ ಆಕರ್ಷಣೆ

ಜಲಪಾತದ ಸಮೀಪದಲ್ಲಿ ಒಂದು ಶಿವನ ದೇವಾಲಯವಿದೆ. ಇಲ್ಲಿ ಪ್ರತಿದಿನ ಬೆಳಗ್ಗೆ ಪೂಜೆ ನಡೆಯುತ್ತದೆ. ಜಲಪಾತದಿಂದಾಗಿ ಈ ಸ್ಥಳವು ವಿವಿಧ ಜಾತಿಯ ಪಕ್ಷಿಗಳ ಆಶ್ರಯತಾಣವಾಗಿದೆ.

ಸಾಕಷ್ಟು ಪರ್ವತ ರೋಹಿಗಳು, ಟ್ರೆಕ್ಕಿಂಗ್ ಉತ್ಸಾಹಿಗಳೂ ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಸಮೀಪದ ಮತ್ತೊಂದು ಪ್ರವಾಸಿ ಆಕರ್ಷಣೆ ತಟ್ಟೆಕೆರೆ ಸರೋವರ.

ತೆರೆದ ಅರಣ್ಯ ಪ್ರದೇಶ ಮತ್ತು ನಗರಕ್ಕೆ ಸಮೀಪವಾಗಿರುವುದರಿಂದ ಎಲ್ಲರಿಗೂ ಇಲ್ಲಿ ಪ್ರವೇಶವಿದೆ. ಚಾರಣ ಪ್ರಿಯರಿಗೆ ಸೂಕ್ತ ಅವಕಾಶವೂ ಇಲ್ಲಿದೆ.


ಭೇಟಿಗೆ ಯಾವ ಸಮಯ ಸೂಕ್ತ ?

ಮುತ್ಯಾಲಮಡುವು ಜಲಪಾತಕ್ಕೆ ಭೇಟಿ ನೀಡಲು ಸೂಕ್ತ ಸಮಯ ಬೆಳಗ್ಗೆ 6ರಿಂದ ಸಂಜೆ 7ರವರೆಗೆ. ನವೆಂಬರ್ ವರೆಗೆ ಇಲ್ಲಿ ಜಲಧಾರೆ ತುಂಬಿ ಹರಿಯುವುದರಿಂದ ಈ ಸಂದರ್ಭದಲ್ಲಿ ಭೇಟಿ ನೀಡಬಹುದು.

ಇದನ್ನೂ ಓದಿ: Konark Tourist Destination: ರಜೆಯಲ್ಲಿ ಕೋನಾರ್ಕ್‌ಗೆ ಹೋದಾಗ ಈ ಅದ್ಭುತ ಸ್ಥಳಗಳಿಗೆ ಭೇಟಿ ನೀಡಲು ಮರೆಯಬೇಡಿ

ಬೆಂಗಳೂರಿನಿಂದ ಎಷ್ಟು ದೂರ?

ಮುತ್ಯಾಲಮಡುವು ಜಲಪಾತ ಪ್ರದೇಶಕ್ಕೆ ಪ್ರವೇಶ ಶುಲ್ಕ ಕನಿಷ್ಠ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ. ಬೆಂಗಳೂರಿನಿಂದ ಮುತ್ಯಾಲಮಡು ಜಲಪಾತಕ್ಕೆ ಹೊಸೂರು ರಸ್ತೆ ಮೂಲಕ 1.16 ಗಂಟೆ ಪ್ರಯಾಣವಿದೆ. ಎಲೆಕ್ಟ್ರಾನಿಕ್ ಸಿಟಿಯಿಂದ ಮುತ್ಯಾಲಮಡುವು ಜಲಪಾತಕ್ಕೆ ಬನ್ನೇರುಘಟ್ಟ ಮುಖ್ಯ ರಸ್ತೆ/ ಜಿಗಣಿ – ಆನೇಕಲ್ ರಸ್ತೆ ಮೂಲಕ 45 ನಿಮಿಷದ ಪ್ರಯಾಣವಿದೆ.

Continue Reading

ಆರೋಗ್ಯ

Health Tips For Rainy Season: ಮಳೆಗಾಲ ಶುರುವಾಗಿದೆ, ಅನಾರೋಗ್ಯಕ್ಕೆ ತುತ್ತಾಗದಿರಲು ಈ ಸಲಹೆ ಪಾಲಿಸಿ

ಮಳೆಗಾಲದಲ್ಲಿ ಆರೋಗ್ಯವನ್ನು (Health Tips For Rainy Season) ಕಾಪಾಡಿಕೊಳ್ಳುವುದು ಬಹುಮುಖ್ಯ,. ಇದಕ್ಕಾಗಿ ಕೆಲವೊಂದು ಸಲಹೆಗಳನ್ನು ಪಾಲಿಸುವುದು ಒಳ್ಳೆಯದು. ಆಹಾರ ಮತ್ತು ಆರೋಗ್ಯದ ಕಾಳಜಿ ಹೆಚ್ಚಾಗಿದ್ದರೆ ಈ ಬಾರಿ ಮಳೆಗಾಲವನ್ನು ಸಂತೋಷದಿಂದ ಕಳೆಯಬಹುದು. ಮಳೆಗಾಲದಲ್ಲಿ ಆರೋಗ್ಯವಾಗಿರಲು ಏನು ಮಾಡಬೇಕು? ಇಲ್ಲಿದೆ ಉಪಯುಕ್ತ ಸಲಹೆ.

VISTARANEWS.COM


on

By

Man
Koo

ಮಳೆ ಆರಂಭವಾದಾಗ ಬಿಸಿಬಿಸಿ ಪಕೋಡ, ಚಹಾ, ಕಾಫಿ ಎಲ್ಲವೂ ನೆನಪಾಗುತ್ತದೆ. ಆದರೆ ಮಳೆಗಾಲ (Health Tips For Rainy Season) ಎಂದರೆ ನಾವು ಆರೋಗ್ಯದ (health) ಜೊತೆಜೊತೆಗೆ ಆಹಾರದ (food) ಬಗ್ಗೆಯೂ ಎಚ್ಚರವಹಿಸಬೇಕು. ಮಳೆಗಾಲ (Rainy Season) ಪ್ರಕೃತಿಯಲ್ಲಿ ಉಲ್ಲಾಸಕರ ಅನುಭವವನ್ನು ತುಂಬುವ ಸಮಯ. ಈ ಋತು ಎಲ್ಲರಿಗೂ ಅಚ್ಚುಮೆಚ್ಚಿನದ್ದಾಗಿದೆ.

ಮಳೆಗಾಲದ ಸಮಯದಲ್ಲಿ ಆರೋಗ್ಯದ ಬಗ್ಗೆ ಜಾಗೃತರಾಗಿದ್ದರೆ ರೋಗ ಮತ್ತು ಸೋಂಕುಗಳಿಂದ ದೂರವಿರಬಹುದು. ಇದಕ್ಕೆ ಸಹಾಯ ಮಾಡಲು ಟಾಪ್ 10 ಸಲಹೆಗಳು ಇಲ್ಲಿವೆ.

ಆರೋಗ್ಯದ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆರೋಗ್ಯ ಸೇವೆಗಳ ತಜ್ಞರು ಹೇಳುವ ಮಳೆಗಾಲದಲ್ಲಿ ಪಾಲಿಸಬೇಕಾದ ಕೆಲವು ವಿಚಾರಗಳ ಬಗ್ಗೆ ತಿಳಿದುಕೊಳ್ಳೋಣ.


ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ

ಇದು ಮಳೆಗಾಲದಲ್ಲಿ ನಾವು ತೆಗೆದುಕೊಳ್ಳಬೇಕಾದ ಮೊದಲ ಹೆಜ್ಜೆ. ರೋಗನಿರೋಧಕ ಶಕ್ತಿಯ ಕೊರತೆಯಿಂದಾಗಿ ಮಳೆಗಾಲದಲ್ಲಿ ಹೆಚ್ಚಿನ ರೋಗ ಮತ್ತು ಸೋಂಕುಗಳು ಹರಡುತ್ತವೆ. ಅಲ್ಲದೇ ವಾತಾವರಣದಲ್ಲಿ ಅತಿಯಾದ ತೇವಾಂಶದ ಪರಿಣಾಮವಾಗಿ ಕೆಮ್ಮು, ಶೀತ ಮತ್ತು ಜ್ವರ ಕಾಣಿಸಿಕೊಳ್ಳುತ್ತದೆ. ಮಳೆಗಾಲದಲ್ಲಿ ಸಂರಕ್ಷಿತವಾಗಿರಲು ಸೂಪ್‌ಗೆ ಬೆಳ್ಳುಳ್ಳಿಯನ್ನು ಸೇರಿಸುವುದು ಮತ್ತು ಚಹಾಕ್ಕೆ ಶುಂಠಿಯನ್ನು ಸೇರಿಸುವುದು ಮೊದಲಾದವುಗಳನ್ನು ಪ್ರಯತ್ನಿಸಬಹುದು.

ಕಹಿ ತರಕಾರಿಗಳನ್ನು ಸೇವಿಸಿ

ತಜ್ಞರು ಸೂಚಿಸುವಂತೆ ಇದು ಅತ್ಯಗತ್ಯ ಸಲಹೆಯಾಗಿದೆ. ಕೆಲವು ಸಂಸ್ಕೃತಿಯಲ್ಲಿ ಹಾಗಲಕಾಯಿಯಂತಹ ತರಕಾರಿಗಳನ್ನು ತಿನ್ನುವುದು ವಿಶೇಷವಾಗಿ ಮಳೆಗಾಲದಲ್ಲಿ ಸಂಪ್ರದಾಯದ ಒಂದು ಭಾಗವಾಗಿದೆ. ಅಂತಹ ತರಕಾರಿಗಳಿಂದ ನೀವು ಪಡೆಯುವ ಹಲವಾರು ಪ್ರಯೋಜನಗಳಿವೆ ಮತ್ತು ಆದ್ದರಿಂದ ನಿಮ್ಮ ದೈನಂದಿನ ಊಟದಲ್ಲಿ ಅದನ್ನು ಸೇರಿಸಿಕೊಳ್ಳಬೇಕು.

ಕುದಿಸಿದ ನೀರು ಕುಡಿಯಿರಿ

ಮಳೆಗಾಲದಲ್ಲಿ ಕಲುಷಿತ ನೀರಿನಿಂದ ಹಲವಾರು ರೋಗಗಳು ಬರಬಹುದು. ಆದ್ದರಿಂದ ಶುದ್ಧ ಮತ್ತು ಸುರಕ್ಷಿತ ನೀರನ್ನು ಮಾತ್ರ ಕುಡಿಯುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕೆಲವೊಂದು ಕಾಯಿಲೆಗಳನ್ನು ತೊಡೆದುಹಾಕಲು ಮನೆಯಲ್ಲಿ ಕುದಿಸಿ ಆರಿಸಿದ ನೀರು ಬಳಸುವುದು ಉತ್ತಮ ಮಾರ್ಗವಾಗಿದೆ.


ಹಾಲಿನ ಉತ್ಪನ್ನಗಳನ್ನು ಸೇವಿಸಿ

ಮಳೆಗಾಲದಲ್ಲಿ ಹಾಲು ಅಜೀರ್ಣವನ್ನು ಉಂಟುಮಾಡಬಹುದು. ಇದಕ್ಕೆ ಪರ್ಯಾಯವಾಗಿ ಕಾಟೇಜ್ ಚೀಸ್, ತಾಜಾ ಮೊಸರು ಮತ್ತು ಮಜ್ಜಿಗೆಯಂತಹ ಇತರ ಡೈರಿ ಉತ್ಪನ್ನಗಳನ್ನು ಆಯ್ಕೆ ಮಾಡಬಹುದು. ಈ ಉತ್ಪನ್ನಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಗಿಡಮೂಲಿಕೆ ಚಹಾಗಳನ್ನು ಸೇರಿಸಿ

ಗಿಡಮೂಲಿಕೆಯ ಚಹಾ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಉತ್ತಮ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಸಾಮಾನ್ಯ ಚಹಾಕ್ಕೆ ಬದಲಾಗಿ ಗಿಡಮೂಲಿಕೆ ಚಹಾಗಳಿಗೆ ಬದಲಾಯಿಸುವ ಸಮಯ. ಇದು ರೋಗನಿರೋಧಕ ಶಕ್ತಿ ಮತ್ತು ಹಸಿವನ್ನು ಹೆಚ್ಚಿಸುವುದು. ಒಂದೆರಡು ದಿನಗಳಲ್ಲೇ ಇದರ ಪರಿಣಾಮ ಗಮನಿಸಬಹುದು.

ಹಣ್ಣುಗಳ ಆಯ್ಕೆ ಮಾಡುವಾಗ ಜಾಗರೂಕರಾಗಿರಿ

ಎಲ್ಲಾ ಹಣ್ಣುಗಳನ್ನು ತಿನ್ನುವುದು ಉತ್ತಮ ಅಭ್ಯಾಸವಾಗಿದೆ. ಯಾಕೆಂದರೆ ಪ್ರತಿಯೊಂದರಿಂದಲೂ ಬಹು ಪೋಷಕಾಂಶಗಳೊಂದಿಗೆ ಪೂರ್ಣ ಪೋಷಣೆಯನ್ನು ಪಡೆಯುತ್ತೀರಿ. ಆದರೂ ಮಳೆಗಾಲದಲ್ಲಿ ಕಲ್ಲಂಗಡಿ ಸೇರಿದಂತೆ ಕೆಲವು ನಿರ್ದಿಷ್ಟ ಹಣ್ಣುಗಳನ್ನು ತ್ಯಜಿಸುವುದು ಒಳ್ಳೆಯದು. ಪೇರಳೆ, ಮಾವಿನ ಹಣ್ಣು, ಸೇಬು, ದಾಳಿಂಬೆ ಮೊದಲಾದ ಹಣ್ಣುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು.

ಮಸಾಲೆಯುಕ್ತ ಆಹಾರದಿಂದ ದೂರವಿರಿ

ಮಸಾಲೆಯುಕ್ತ ಆಹಾರಕ್ಕಾಗಿ ಹಂಬಲಿಸುತ್ತಿದ್ದರೆ ಮಳೆಗಾಲದಲ್ಲಿ ಅದನ್ನು ಸೇವಿಸುವುದನ್ನು ನಿರ್ಬಂಧಿಸಬೇಕಾದ ಸಮಯವಾಗಿದೆ. ಇಂತಹ ಆಹಾರಗಳು ಚರ್ಮದ ಅಲರ್ಜಿ ಮತ್ತು ಕಿರಿಕಿರಿಯನ್ನು ಉಂಟು ಮಾಡುತ್ತದೆ. ಬದಲಾಗಿ ಆರೋಗ್ಯಕರ ಸೂಪ್‌ ಮತ್ತು ಕಡಿಮೆ ಅಥವಾ ಮಧ್ಯಮ ಮಸಾಲೆಯುಕ್ತ ಬೆಚ್ಚಗಿನ ಆಹಾರವನ್ನು ಸೇವಿಸಿ.

ನೀರು ನಿಲ್ಲದಂತೆ ಮಾಡಿ

ಮನೆಯ ಸುತ್ತಮುತ್ತ ಮಳೆಯಿಂದ ನಿಂತ ನೀರು ತೀವ್ರ ರೋಗಗಳಿಗೆ ಕಾರಣವಾಗಬಹುದು. ಆದ್ದರಿಂದ ಬಳಕೆಯಾಗದ ಟ್ಯಾಂಕ್, ವಾಟರ್ ಕೂಲರ್ ಮತ್ತು ಹೂವಿನ ಕುಂಡಗಳೊಳಗೆ ನೀರು ನಿಲ್ಲದಂತೆ ಮಾಡಿ. ನೀರಿನ ಮೇಲ್ಮೈಗಳನ್ನು ಸ್ವಚ್ಛವಾಗಿ ಮತ್ತು ಶುಷ್ಕವಾಗಿ ಇಟ್ಟುಕೊಳ್ಳುವುದು ಅಪಾರ ಪ್ರಯೋಜನವನ್ನು ನೀಡುತ್ತದೆ.

ಇದನ್ನೂ ಓದಿ: Hair Growth Tips: ಕೂದಲು ಉದುರುವುದಕ್ಕೆ ಬೀಟಾ ಕ್ಯಾರೊಟಿನ್‌ ಮದ್ದು!


ಸೊಳ್ಳೆ ನಿವಾರಕವನ್ನು ಬಳಸಿ

ಮಳೆಗಾಲದಲ್ಲಿ ಸೊಳ್ಳೆಗಳು ವೇಗವಾಗಿ ಬೆಳೆಯುತ್ತವೆ ಮತ್ತು ಇವು ದೊಡ್ಡ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಈ ಸಮಯದಲ್ಲಿ ರೂಮ್ ಫ್ರೆಶ್ನರ್, ಸೌಮ್ಯವಾದ ಮಾರ್ಜಕ ಮತ್ತು ಸುಗಂಧ ದ್ರವ್ಯಗಳಂತಹ ಸೊಳ್ಳೆ ನಿವಾರಕಗಳು ಅತ್ಯಗತ್ಯವಾಗಿರುತ್ತದೆ.

ಛತ್ರಿ ಮತ್ತು ರೈನ್‌ಕೋಟ್‌ಗಳನ್ನು ಒಯ್ಯಿರಿ

ಮನೆಯಿಂದ ಹೊರಗೆ ಹೋಗುವಾಗ ಮಳೆಗಾಲದಲ್ಲಿ ಅಗತ್ಯವಿರುವ ಛತ್ರಿ ಅಥವಾ ರೈನ್ ಕೋಟ್ ಅಥವಾ ಎರಡನ್ನೂ ಒಯ್ಯಲು ಪ್ರಯತ್ನಿಸಿ. ಶೀತ, ಕೆಮ್ಮು, ಜ್ವರ ಮತ್ತು ಜ್ವರದಂತಹ ಕಾಯಿಲೆಗಳನ್ನು ತಪ್ಪಿಸಲು ನಿಮ್ಮನ್ನು ಶುಷ್ಕ, ತಾಜಾ ಮತ್ತು ಸ್ವಚ್ಛವಾಗಿರಿಸಿಕೊಳ್ಳುವುದು ಉತ್ತಮ ಮಾರ್ಗವಾಗಿದೆ.

Continue Reading
Advertisement
Aam Panna Recipe
ಆಹಾರ/ಅಡುಗೆ4 mins ago

Aam Panna Recipe: ಆಮ್‌ ಪನ್ನಾ! ಮಾವಿನಕಾಯಿಯ ಅದ್ಭುತ ಪೇಯ ಇದು; ನೀವೂ ಮಾಡಿ ನೋಡಿ

Arvind Kejriwal
ದೇಶ23 mins ago

Arvind Kejriwal: ತಿಹಾರ್‌ ಜೈಲಿಗೆ ಮರಳಿದ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌; ಜೂ. 5ರಂದು ಮತ್ತೆ ಜಾಮೀನು ಅರ್ಜಿ ವಿಚಾರಣೆ

GST Collection
ವಾಣಿಜ್ಯ24 mins ago

GST Collection: ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ನಂ. 2; ಇಲ್ಲಿ ಸಂಗ್ರಹವಾಗಿದ್ದು ಎಷ್ಟು?

Kamal Haasan gives a fiery speech at Indian 2 event
ಕಾಲಿವುಡ್24 mins ago

Kamal Haasan: ತಮಿಳಿಗನೊಬ್ಬ ದೇಶ ಆಳುವ ದಿನ ಏಕೆ ಬರಬಾರದು? ಕಮಲ್‌ ಹಾಸನ್‌ ಪ್ರಶ್ನೆ!

CET Ranking
ಬೆಂಗಳೂರು32 mins ago

CET Ranking : ಸಿಇಟಿ ರ‍್ಯಾಂಕಿಂಗ್‌ನಲ್ಲಿ ಎಂಜಿನಿಯರಿಂಗ್‌ನ 10 ಟಾಪರ್ಸ್‌ಗಳು ಬೆಂಗಳೂರಿನ ವಿದ್ಯಾರ್ಥಿಗಳು!

Bangalore Central ElectionWill PC Mohan's unbeaten run continue in Bengaluru Central Lok Sabha constituency?
ಪ್ರಮುಖ ಸುದ್ದಿ33 mins ago

Bangalore Central Election : ಮನ್ಸೂರ್ ಅಲಿ ಖಾನ್ ವಿರುದ್ಧ ಗೆದ್ದು ಅಜೇಯ ಓಟ ಮುಂದುವರಿಸುವರೇ ಪಿ. ಸಿ ಮೋಹನ್​

Denim Tube Tops Fashion
ಫ್ಯಾಷನ್34 mins ago

Denim Tube Tops Fashion: ಡೆನಿಮ್‌ನಲ್ಲೂ ಬಂತು ಟ್ಯೂಬ್‌ ಟಾಪ್ ಫ್ಯಾಷನ್‌!

Viral Video
ವೈರಲ್ ನ್ಯೂಸ್37 mins ago

Viral Video: ರೈಲು ಚಲಿಸುತ್ತಿರುವಾಗಲೇ ಹೇಗೆ ಮೊಬೈಲ್‌ ಎಗರಿಸುತ್ತಾರೆ ನೋಡಿ!

Kotee Movie in Davanagere Release event
ಸಿನಿಮಾ42 mins ago

Dolly Dhananjay: ದಾವಣಗೆರೆಯಲ್ಲಿ ‘ಕೋಟಿ’ ಅಬ್ಬರ; ಜೂನ್ 14ರಂದು ಸಿನಿಮಾ ತೆರೆಗೆ!

Paris Olympics 2024
ಕ್ರೀಡೆ42 mins ago

Paris Olympics 2024: ಕೊನೆಗೂ ಪ್ಯಾರಿಸ್​ ಒಲಿಂಪಿಕ್ಸ್​ ಟಿಕೆಟ್​ ಪಡೆದ ಬಾಕ್ಸರ್​ ಅಮಿತ್‌ ಪಂಘಲ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ7 hours ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 day ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ3 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು5 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ6 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ7 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ2 weeks ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌