Hardik Pandya : ನನ್ನ ಅಪರಾಧದಲ್ಲಿ ನೀನು ಪಾಲುದಾರ; ಪುತ್ರನಿಗೆ ಈ ರೀತಿ ಬರ್ತ್​​ಡೇ ವಿಶ್ ಮಾಡಿದ ಪಾಂಡ್ಯ - Vistara News

ಕ್ರೀಡೆ

Hardik Pandya : ನನ್ನ ಅಪರಾಧದಲ್ಲಿ ನೀನು ಪಾಲುದಾರ; ಪುತ್ರನಿಗೆ ಈ ರೀತಿ ಬರ್ತ್​​ಡೇ ವಿಶ್ ಮಾಡಿದ ಪಾಂಡ್ಯ

Hardik Pandya : ಸ್ಟಾರ್ ಆಲ್ರೌಂಡರ್ ತನ್ನ ಮಗನೊಂದಿಗೆ ಉತ್ತಮ ಬಂಧವನ್ನು ಹಂಚಿಕೊಳ್ಳುತ್ತಿರುತ್ತಾರೆ. ಆಗಾಗ್ಗೆ ಪುತ್ರನ ಜತೆಗಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಆದಾಗ್ಯೂ, ರೂಪದರ್ಶಿ ಮತ್ತು ನಟಿ ನತಾಶಾ ಸ್ಟಾಂಕೋವಿಕ್ ಜತೆ ವಿಚ್ಛೇದನ ಪಡೆದ ನಂತರ ಹಾರ್ದಿಕ್ ಈಗ ತಮ್ಮ ಮಗನೊಂದಿಗೆ ವಾಸಿಸುತ್ತಿಲ್ಲ.

VISTARANEWS.COM


on

Hardik Pandya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಆಲ್​ರೌಂಡರ್​​ ಹಾರ್ದಿಕ್ ಪಾಂಡ್ಯ (Hardik Pandya) ತಮ್ಮ ಪುತ್ರ ಅಗಸ್ತ್ಯ ಪಾಂಡ್ಯನ 4 ನೇ ಹುಟ್ಟುಹಬ್ಬದಂದು ಹುಟ್ಟುಹಬ್ಬದ ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ. ಹಾರ್ದಿಕ್ ಮತ್ತು ನತಾಶಾ ಸ್ಟಾಂಕೋವಿಕ್ ಅವರ ಮಗ ಜುಲೈ 30, 2020 ರಂದು ಜನಿಸಿದ್ದಾನೆ. ಅಂದಿನಿಂದ, ಅವರ ಜೀವನದ ಬೆಳಕಾಗಿದ್ದಾನೆ. ಹಾರ್ದಿಕ್ ವಿಶೇಷ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಅಗಸ್ತ್ಯ ತನ್ನ ತಂದೆ ಮಾಡುವುದನ್ನೇ ನಕಲು ಮಾಡುತ್ತಿರುವುದನ್ನು ಕಾಣಬಹುದು. ತಂದೆ-ಮಗ ಇಬ್ಬರೂ ಒಟ್ಟಿಗೆ ‘ಜೆಂಗಾ’ ಎಂಬ ಆಟವನ್ನು ಆಡುತ್ತಿದ್ದರು. ಅಗಸ್ತ್ಯನಿಂದ ಸುತ್ತುವರಿದಿದ್ದಾಗ ಹಾರ್ದಿಕ್ ನಗುತ್ತಿದ್ದರು. ಶೀರ್ಷಿಕೆಯಲ್ಲಿ, ಹಾರ್ದಿಕ್ ಅಗಸ್ತ್ಯ ನನ್ನು “ತನ್ನ ಅಪರಾಧದಲ್ಲಿ ಪಾಲುದಾರ” ಎಂದು ಕರೆದಿದ್ದಾರೆ.

“ನೀನು ಪ್ರತಿದಿನ ನನ್ನ ಮನದಲ್ಲಿ ಇರುತ್ತೀಯಾ. ನನ್ನ ಅಪರಾಧದಲ್ಲಿ ಪಾಲುದಾರನಾಗಿರುವ ನಿನಗೆ ಪ್ರೀತಿಯ ಆಗುಗೆ (ಅಗಸ್ತ್ಯ) ಜನ್ಮದಿನದ ಶುಭಾಶಯಗಳು. ಪದಗಳನ್ನು ಮೀರಿ ನಿಮ್ಮನ್ನು ಪ್ರೀತಿಸುತ್ತೇನೆ” ಎಂದು ಹಾರ್ದಿಕ್ ಪೋಸ್ಟ್​​ಗೆ ಶೀರ್ಷಿಕೆ ನೀಡಿದ್ದಾರೆ. ಸ್ಟಾರ್ ಆಲ್ರೌಂಡರ್ ತನ್ನ ಮಗನೊಂದಿಗೆ ಉತ್ತಮ ಬಂಧವನ್ನು ಹಂಚಿಕೊಳ್ಳುತ್ತಿರುತ್ತಾರೆ. ಆಗಾಗ್ಗೆ ಪುತ್ರನ ಜತೆಗಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಆದಾಗ್ಯೂ, ರೂಪದರ್ಶಿ ಮತ್ತು ನಟಿ ನತಾಶಾ ಸ್ಟಾಂಕೋವಿಕ್ ಜತೆ ವಿಚ್ಛೇದನ ಪಡೆದ ನಂತರ ಹಾರ್ದಿಕ್ ಈಗ ತಮ್ಮ ಮಗನೊಂದಿಗೆ ವಾಸಿಸುತ್ತಿಲ್ಲ.

ಹಾರ್ದಿಕ್-ನತಾಶಾ ವಿಚ್ಛೇದನ

ಹಾರ್ದಿಕ್ ಪಾಂಡ್ಯ ನಾಲ್ಕು ವರ್ಷಗಳ ಸಂಬಂಧದ ನಂತರ ಪತ್ನಿ ನತಾಶಾ ಸ್ಟಾಂಕೋವಿಕ್ ಅವರೊಂದಿಗೆ ಬೇರ್ಪಡುವುದಾಗಿ ಘೋಷಿಸಿದ್ದರು. ಹಲವು ತಿಂಗಳುಗಳ ಊಹಾಪೋಹಗಳ ನಂತರ ಹಾರ್ದಿಕ್ ಜುಲೈ 18 ರ ಗುರುವಾರ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ತಮ್ಮ ನಿರ್ಧಾರ ಪ್ರಕಟಿಸಿದರು. ನತಾಶಾ ಸ್ಟಾಂಕೋವಿಕ್ ದೇಶದಿಂದ ಹೊರಹೋಗಲು ನಿರ್ಧರಿಸಿದ್ದು, ಮಗ ಅಗಸ್ತ್ಯನೊಂದಿಗೆ ಸೆರ್ಬಿಯಾದಲ್ಲಿರುವ ತಮ್ಮ ಮನೆಗೆ ಮರಳಿದ್ದಾರೆ. ಅವರು ಇತ್ತೀಚೆಗೆ ಮಗ ಅಗಸ್ತ್ಯ ಅವರೊಂದಿಗೆ ತಮ್ಮ ದಿನದ ಚಿತ್ರಗಳನ್ನು ಹಂಚಿಕೊಂಡಿದ್ದರು. ಹಾರ್ದಿಕ್ ಆ ಪೋಸ್ಟ್​ಗೆ ಕಾಮೆಂಟ್​​ ನೀಡಿದ್ದಾರೆ. ಅವರು ಪೋಸ್ಟ್​ಗೆ ಕೆಂಪು ಹೃದಯ ಮತ್ತು ದುಷ್ಟ ಕಣ್ಣಿನ ಎಮೋಜಿಗಳನ್ನು ಹಾಕಿದ್ದರು.

ಇದನ್ನೂ ಓದಿ: Paris Olympics 2024 : ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದ ಈಜುಪಟುವಿಗೆ ಕೊರೊನಾ ಸೋಂಕು!

ಲಂಕಾದಲ್ಲಿದ್ದಾರೆ ಪಾಂಡ್ಯ

ಹಾರ್ದಿಕ್ ಪ್ರಸ್ತುತ ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಟಿ 20 ಐ ಸರಣಿಗಾಗಿ ಶ್ರೀಲಂಕಾದಲ್ಲಿದ್ದಾರೆ. ರೋಹಿತ್ ಶರ್ಮಾ ಭಾರತ ತಂಡದ ಚುಟುಕು ಮಾದರಿಗೆ ನಿವೃತ್ತಿ ಘೋಷಿಸಿದ ನಂತರ ಅವರ ಮತ್ತು ಸೂರ್ಯಕುಮಾರ್ ನಡುವೆ ಟಿ 20 ಐ ನಾಯಕತ್ವದ ರೇಸ್ ಇತ್ತು. ಆದಾಗ್ಯೂ, ಸೂರ್ಯಕುಮಾರ್ ಹಾರ್ದಿಕ್ ಅವರನ್ನು ಹಿಂದಿಕ್ಕಿ ಟಿ 20 ಐ ನಾಯಕರಾದರು. ಟಿ 20 ವಿಶ್ವಕಪ್ ವಿಜೇತ ತಂಡದ ಉಪನಾಯಕರಾಗಿದ್ದ ಹಾರ್ದಿಕ್ ಅವರ ಸ್ಥಾನಕ್ಕೆ ಶುಭ್ಮನ್ ಗಿಲ್ ಅವರನ್ನು ನೇಮಿಸಲಾಗಿದೆ. ಹಾರ್ದಿಕ್ ಲಂಕಾ ವಿರುದ್ಧದ ಎರಡನೇ ಪಂದ್ಯದಲ್ಲಿ ಕೇವಲ ಎರಡು ವಿಕೆಟ್ ಜತೆಗೆ ಒಂಬತ್ತು ಎಸೆತಗಳಲ್ಲಿ 22 ರನ್ ಗಳಿಸುವ ಮೂಲಕ ತಮ್ಮ ಆಲ್ರೌಂಡ್ ಪರಾಕ್ರಮವನ್ನು ಪ್ರದರ್ಶಿಸಿದರು. ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಹಾರ್ದಿಕ್ ಏಕದಿನ ಸರಣಿಯಲ್ಲಿ ಭಾಗವಹಿಸುತ್ತಿಲ್ಲ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Neeraj Chopra : ನಮಸ್ಕಾರ ಪ್ಯಾರಿಸ್​​; ಒಲಿಂಪಿಕ್ಸ್​ ಕ್ರೀಡಾಗ್ರಾಮ ತಲುಪಿದ ಚಿನ್ನದ ಹುಡುಗ ನೀರಜ್ ಚೋಪ್ರಾ

Neeraj Chopra: ಒಲಿಂಪಿಕ್ಸ್​​ನಲ್ಲಿ ಸತತವಾಗಿ ಚಿನ್ನದ ಪದಕಗಳನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಚೋಪ್ರಾ ಪಾತ್ರರಾಗುವ ಮೂಲಕ ಇತಿಹಾಸ ಸೃಷ್ಟಿಸಲಿದ್ದಾರೆ. ಟೋಕಿಯೊದಲ್ಲಿ ನಡೆದ ಹಿಂದಿನ ಆವೃತ್ತಿಯಲ್ಲಿ, 26 ವರ್ಷದ ನೀರಜ್​ 87.58 ಮೀಟರ್ ಎಸೆಯುವ ಮೂಲಕ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

VISTARANEWS.COM


on

Neeraj Chopra
Koo

ಪ್ಯಾರಿಸ್: ಭಾರತದ ಜಾವೆಲಿನ್ ಥ್ರೋ ಸ್ಟಾರ್​ ಹಾಗೂ ಚಿನ್ನದ ಹುಡುಗ ನೀರಜ್ ಚೋಪ್ರಾ (Neeraj Chopra) ಮಂಗಳವಾರ ಪ್ಯಾರಿಸ್ ನ ಒಲಿಂಪಿಕ್ ನ ಗೇಮ್ಸ್ ವಿಲೇಜ್ ಗೆ ತಲುಪಿದ್ದಾರೆ. ಆಗಸ್ಟ್ 6ರಂದು ಫ್ರಾನ್ಸ್ನ ಸ್ಟೇಡ್ ಡಿ ಫ್ರಾನ್ಸ್​ನಲ್ಲಿ ನಡೆಯಲಿರುವ ಪುರುಷರ ಗ್ರೂಪ್ ಎ ಜಾವೆಲಿನ್ ಥ್ರೋ ಅರ್ಹತಾ ಸುತ್ತಿನಲ್ಲಿ 26ರ ಹರೆಯದ ನೀರಜ್​ ಕಣಕ್ಕಿಳಿಯಲಿದ್ದಾರೆ. ವಿಶೇಷವೆಂದರೆ, ಟೋಕಿಯೊ 2020 ರ ಈವೆಂಟ್​​ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಹರಿಯಾಣ ಮೂಲದ ಅಥ್ಲೀಟ್ ಹಾಲಿ ಚಾಂಪಿಯನ್ ಆಗಿ ಸ್ಪರ್ಧೆಗೆ ಪ್ರವೇಶಿಸಿದ್ದಾರೆ.

ಕೂಟಕ್ಕೆ ಮುಂಚಿತವಾಗಿ, ಭಾರತದ ಚಿನ್ನದ ಹುಡುಗ ಪ್ಯಾರಿಸ್​​ನ ಒಲಿಂಪಿಕ್ ಗೇಮ್ಸ್ ವಿಲೇಜ್​ಗೆ ಆಗಮಿಸಿದ್ದು, ಟೋಕಿಯೊದಿಂದ ಅವರ ವೀರೋಚಿತ ಪ್ರದರ್ಶನವನ್ನು ಪುನರಾವರ್ತಿಸಲು ಉತ್ಸುಕರಾಗಿದ್ದಾರೆ. ಚೋಪ್ರಾ ಒಂದೆರಡು ಫೋಟೋಗಳಿಗೆ ಪೋಸ್ ನೀಡಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಮಾಹಿತಿ ಕೊಟ್ಟಿದ್ದಾರೆ.

ಒಲಿಂಪಿಕ್ಸ್​​ನಲ್ಲಿ ಸತತವಾಗಿ ಚಿನ್ನದ ಪದಕಗಳನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಚೋಪ್ರಾ ಪಾತ್ರರಾಗುವ ಮೂಲಕ ಇತಿಹಾಸ ಸೃಷ್ಟಿಸಲಿದ್ದಾರೆ. ಟೋಕಿಯೊದಲ್ಲಿ ನಡೆದ ಹಿಂದಿನ ಆವೃತ್ತಿಯಲ್ಲಿ, 26 ವರ್ಷದ ನೀರಜ್​ 87.58 ಮೀಟರ್ ಎಸೆಯುವ ಮೂಲಕ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಚೋಪ್ರಾ ಹಲವಾರು ಗಾಯಗಳಿಂದಾಗಿ ಹೋರಾಡಿದ ನಂತರ ಪ್ಯಾರಿಸ್​​ಗೆ ಸುಗಮ ಪ್ರಯಾಣ ಹೊಂದಿರಲಿಲ್ಲ. ಇದರಿಂದಾಗಿ ಅವರು ಪಂದ್ಯಾವಳಿಗೆ ಮುಂಚಿತವಾಗಿ ಹಲವಾರು ಸ್ಪರ್ಧೆಗಳಿಂದ ಹಿಂದೆ ಸರಿದಿದ್ದರು. ಗಾಯಗಳ ಹೊರತಾಗಿಯೂ ಚಿನ್ನದ ಪದಕ ವಿಜೇತರು ಈವೆಂಟ್​ಗೆ ಮುಂಚಿತವಾಗಿ ಸಾಕಷ್ಟು ವಿಶ್ರಾಂತಿ ಪಡೆದುಕೊಂಡಿದ್ದರು.

ಇದನ್ನೂ ಓದಿ: Paris Olympics 2024 : 7 ತಿಂಗಳ ಗರ್ಭಿಣಿಯಾಗಿದ್ದರೂ ಒಲಿಂಪಿಕ್ಸ್​ ಫೆನ್ಸಿಂಗ್​ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಪಂದ್ಯ ಗೆದ್ದ ಈಜಿಫ್ಟ್​​ನ ನಾದಾ ಹಫೀಜ್​

ಒಲಿಂಪಿಕ್ಸ್​​ನ ಮುಂಚಿತವಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಅವರು ಒಸ್ಟ್ರಾವಾ ಗೋಲ್ಡನ್ ಸ್ಪೈಕ್ 2024 ನಿಂದ ಹಿಂದೆ ಸರಿದಿದ್ದರು. 2024 ರ ಡೈಮಂಡ್ ಲೀಗ್ ಋತುವಿನ ದೋಹಾ ಲೆಗ್​ನಲ್ಲಿ 88.38 ಮೀಟರ್ ಎಸೆಯುವ ಮೂಲಕ ಅವರನ್ನು ಸೋಲಿಸಿದ ಜೆಕಿಯಾದ ಜಾಕುಬ್ ವಡ್ಲೆಜ್ಚ್ ಅವರಿಂದ ಭಾರತೀಯ ತಾರೆ ಮತ್ತೊಮ್ಮೆ ಕಠಿಣ ಸ್ಪರ್ಧೆ ಎದುರಿಸಲಿದ್ದಾರೆ.

ಒಲಿಂಪಿಕ್ಸ್​ಗೆ ಮುಂಚಿತವಾಗಿ, ಚೋಪ್ರಾ ತಮ್ಮ ಪ್ರಶಸ್ತಿ ಉಳಿಸಿಕೊಳ್ಳುವ ಒತ್ತಡದಲ್ಲಿದ್ದೇನೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಆದಾಗ್ಯೂ ಕ್ರೀಡಾ ವೈಭವದ ಭರವಸೆಯಲ್ಲಿದ್ದಾರೆ.

Continue Reading

ಪ್ರಮುಖ ಸುದ್ದಿ

Paris Olympics 2024 : 7 ತಿಂಗಳ ಗರ್ಭಿಣಿಯಾಗಿದ್ದರೂ ಒಲಿಂಪಿಕ್ಸ್​ ಫೆನ್ಸಿಂಗ್​ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಪಂದ್ಯ ಗೆದ್ದ ಈಜಿಫ್ಟ್​​ನ ನಾದಾ ಹಫೀಜ್​

Paris Olympics 2024 : ಗರ್ಭಧಾರಣೆಯ ಸಮಯ ಹಾಗೂ ಒಲಿಂಪಿಕ್ಸ್​ ಕಠಿಣ ಸವಾಲಾಗಿತ್ತು. ಜೀವನ ಮತ್ತು ಕ್ರೀಡೆಯ ನಡುವೆ ಸಮತೋಲನ ಕಾಪಾಡಿಕೊಳ್ಳಲು ಹೋರಾಡುವುದು ಶ್ರಮದಾಯಕವಾಗಿದೆ. 16 ನೇ ಸುತ್ತಿನಲ್ಲಿ ನನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಕ್ಕಾಗಿ ಹೆಮ್ಮೆ ಇದೆ ಎಂಬ ಕಾರಣಕ್ಕೆ ನಾನು ಈ ಪೋಸ್ಟ್ ಅನ್ನು ಬರೆಯುತ್ತಿದ್ದೇನೆ! ಹಫೀಜ್ ಹೇಳಿಕೊಂಡಿದ್ದಾರೆ.

VISTARANEWS.COM


on

Paris Olympics 2024
Koo

ಬೆಂಗಳೂರು: ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್​ನಲ್ಲಿ (Paris Olympics 2024) ಹಲವಾರು ಸ್ವಾರಸ್ಯಕರ ಘಟನೆಗಳು ನಡೆಯುತ್ತಿವೆ. ಜತೆಗೆ ಕೆಲವೊಂದು ಧೈರ್ಯಶಾಲಿ ಪ್ರಸಂಗಗಳೂ ವರದಿಯಾಗುತ್ತಿವೆ. ಅಂತೆಯೇ ಈಜಿಫ್ಟ್​​ನ ಫೆನ್ಸರ್ ನಾದಾ ಹಫೀಜ್ ಅವರು 7 ತಿಂಗಳ ಗರ್ಭಿಣಿಯಾಗಿದ್ದ ಹೊರತಾಗಿಯೂ ಜಾಗತಿಕ ಸ್ಪರ್ಧೆಯಲ್ಲಿ ಪಾಲ್ಗೊಂಡು ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿ ಅಚ್ಚರಿ ಮೂಡಿಸಿದ್ದಾರೆ. ಮಹಿಳೆಯರ ವೈಯಕ್ತಿಕ ಫೆನ್ಸಿಂಗ್ಸ್​ನಲ್ಲಿ ಹಫೀಜ್ ತನ್ನ ಮೊದಲ ಪಂದ್ಯವನ್ನು ಟಾರ್ಟಾಕೋವ್ಕಿ ವಿರುದ್ಧ 15-13 ಅಂತರದಿಂದ ಗೆದ್ದಿದ್ದರು. ಆದರೆ 16 ನೇ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ಜಿಯೊನ್ ಹಯೋಂಗ್ ವಿರುದ್ಧ ಸೋತರು. ತಮ್ಮ ನಿರ್ಗಮನದ ಬಳಿಕ ಭಾವುಕರಾದ ಅವರು ತನ್ನ ಕಠಿಣ ಪ್ರಯಾಣದ ಬಗ್ಗೆ ಮಾತನಾಡಿದ್ದಾರೆ. ಆದರೆ, ತಮ್ಮ ಗೆಲವು ಹೆಚ್ಚು ಮೌಲ್ಯಯುತ ಎಂದು ಹೇಳಿದ್ದಾರೆ.

ಜುಲೈ 29 ರಂದು ನಡೆದ ಸ್ಪರ್ಧೆಯಲ್ಲಿ ಹಯೋಂಗ್ ವಿರುದ್ಧ 15-7 ಅಂತರದಿಂದ ಸೋತ ನಂತರ ಹಫೀಜ್ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ತನ್ನ ಗರ್ಭಧಾರಣೆಯ ಸುದ್ದಿ ಬಹಿರಂಗಪಡಿಸಿದ್ದಾರೆ. ಇದು ಇಡೀ ವಿಶ್ವ ಅಥ್ಲೆಟಿಕ್ ಕ್ಷೇತ್ರದಲ್ಲಿ ವ್ಯಾಪಕ ಸಂಚಲನ ಉಂಟುಮಾಡಿತು. ಹಫೀಜ್ ಅವರ ಫೆನ್ಸಿಂಗ್ ಪ್ರೀತಿ ಮತ್ತು ಉತ್ಸಾಹದ ಬಗ್ಗೆ ಪ್ರಶಂಸೆಗೆ ಗಳಿಸಿದ್ದಾರೆ. ಹಯೋಂಗ್ ವಿರುದ್ಧದ ಪಂದ್ಯದಲ್ಲೂ ಹಫೀಜ್ ಸಾಕಷ್ಟು ಹೋರಾಟದ ಮನೋಭಾವ ತೋರಿದ್ದರು. ಆದರೆ ದಕ್ಷಿಣ ಕೊರಿಯಾದ ಆಟಗಾರ್ತಿಯನ್ನು ಸೋಲಿಸಲು ಅವರಿಗೆ ಸಾಧ್ಯವಾಗಲಿಲ್ಲ.

“ಹೋರಾಟದ ವೇದಿಕೆಯಲ್ಲಿ ಇಬ್ಬರು ಸ್ಪರ್ಧಿಗಳು ನಿಮಗೆ ಕಾಣುತ್ತಿದ್ದರು. ಆದರೆ ನಿಜವಾಗಿಯೂ ನಾವು ಮೂವರು! ನಾನು, ನನ್ನ ಪ್ರತಿಸ್ಪರ್ಧಿ ಮತ್ತು ನಮ್ಮ ಜಗತ್ತಿಗೆ ಇನ್ನೂ ಬರದ ನನ್ನ ಪುಟ್ಟ ಮಗು! ನನ್ನ ಮಗು ಮತ್ತು ನಾನು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಸಾಕಷ್ಟು ಸವಾಲುಗಳನ್ನು ಹೊಂದಿದ್ದೆವು ” ಎಂದು ಹಫೀಜ್ ಇನ್​ಸ್ಟಾಗ್ರಾಮ್​ ಪೋಸ್ಟ್​​ನಲ್ಲಿ ಬರೆದಿದ್ದಾರೆ.

ಗರ್ಭಧಾರಣೆಯ ಸಮಯ ಹಾಗೂ ಒಲಿಂಪಿಕ್ಸ್​ ಕಠಿಣ ಸವಾಲಾಗಿತ್ತು. ಜೀವನ ಮತ್ತು ಕ್ರೀಡೆಯ ನಡುವೆ ಸಮತೋಲನ ಕಾಪಾಡಿಕೊಳ್ಳಲು ಹೋರಾಡುವುದು ಶ್ರಮದಾಯಕವಾಗಿದೆ. 16 ನೇ ಸುತ್ತಿನಲ್ಲಿ ನನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಕ್ಕಾಗಿ ಹೆಮ್ಮೆ ಇದೆ ಎಂಬ ಕಾರಣಕ್ಕೆ ನಾನು ಈ ಪೋಸ್ಟ್ ಅನ್ನು ಬರೆಯುತ್ತಿದ್ದೇನೆ! ಹಫೀಜ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Sarabjot Singh : ಭಾರತಕ್ಕೆ 2ನೇ ಒಲಿಂಪಿಕ್ಸ್ ಪದಕ ತಂದುಕೊಟ್ಟ ಮನು ಭಾಕರ್ ಶೂಟಿಂಗ್ ಪಾಲುದಾರ ಸರಬ್ಜೋತ್ ಸಿಂಗ್​ ಹಿನ್ನೆಲೆ ಇಲ್ಲಿದೆ

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ತನ್ನ ಸ್ಫೂರ್ತಿದಾಯಕ ಪ್ರಯಾಣದುದ್ದಕ್ಕೂ ಪತಿಯಿಂದ ಪಡೆದ ಬೆಂಬಲ ಪಡೆದಿದ್ದೆ ಎಂಬುದನ್ನೂ ಅವರು ಹೇಳಿಕೊಂಡಿದ್ದಾರೆ.

“ನನ್ನ ಪತಿ ಇಬ್ರಾಹಿಂ ಮತ್ತು ನನ್ನ ಕುಟುಂಬದ ವಿಶ್ವಾಸವನ್ನು ಪಡೆದಿರುವುದು ನನ್ನ ಅದೃಷ್ಟ. ಈ ನಿರ್ದಿಷ್ಟ ಒಲಿಂಪಿಕ್ಸ್ ವಿಭಿನ್ನವಾಗಿತ್ತು. ಮೂರು ಬಾರಿ ಒಲಿಂಪಿಯನ್ ಆಗಿರುವ ನಾನು ಈ ಬಾರಿ ಪುಟ್ಟ ಒಲಿಂಪಿಯನ್ ಒಬ್ಬರನ್ನು ಹೊತ್ತೊಯ್ಯುತ್ತಿದ್ದೇನೆ ” ಎಂದು ಹಫೀಜ್ ಹೇಳಿದರು. 2016ರ ರಿಯೋ ಒಲಿಂಪಿಕ್ಸ್ ಹಾಗೂ 2021ರ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಈಜಿಪ್ಟ್ ತಂಡವನ್ನು ಪ್ರತಿನಿಧಿಸಿದ್ದರು

Continue Reading

ಪ್ರಮುಖ ಸುದ್ದಿ

Sarabjot Singh : ಭಾರತಕ್ಕೆ 2ನೇ ಒಲಿಂಪಿಕ್ಸ್ ಪದಕ ತಂದುಕೊಟ್ಟ ಮನು ಭಾಕರ್ ಶೂಟಿಂಗ್ ಪಾಲುದಾರ ಸರಬ್ಜೋತ್ ಸಿಂಗ್​ ಹಿನ್ನೆಲೆ ಇಲ್ಲಿದೆ

Sarabjot Singh: ಈ ಪದಕದ ಮೂಲಕ ಮನು ಇತಿಹಾಸ ಸೃಷ್ಟಿಸಿದರೆ, ಸರಬ್ಜೋತ್ ತನ್ನ ಶೂಟಿಂಗ್ ವೈಭವ ಶುರು ಮಾಡಿದರು. ಅವರಿಗೆ ಇದು ತಮ್ಮ ಚೊಚ್ಚಲ ಒಲಿಂಪಿಕ್ಸ್​ ಸ್ಪರ್ಧೆ. ಒಲಿಂಪಿಕ್ ಕ್ರೀಡಾಕೂಟದ ಆರಂಭಿಕ ದಿನವಾದ ಶನಿವಾರ, ಅವರು ಪುರುಷ ಸಪರ್ಧೆಯ ಫೈನಲ್​ಗೆ ಅರ್ಹತೆ ಪಡೆಯಲು ವಿಫಲರಾಗಿ ಒಂಬತ್ತನೇ ಸ್ಥಾನ ಪಡೆದರು. ಹೀಗಾಗಿ ಅವರಿಗೆ ಈ ಪದಕ ಸಮಾಧಾನ ತರಲಿದೆ.

VISTARANEWS.COM


on

Sarabjot Singh
Koo

ಪ್ಯಾರಿಸ್: ಭಾರತದ ಯುವ ಶೂಟಿಂಗ್ ಜೋಡಿ ಸರಬ್ಜೋತ್ ಸಿಂಗ್ (Sarabjot Singh) ಹಾಗೂ ಮನು ಭಾಕರ್​ (Manu Bhaker) ಮಂಗಳವಾರ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಮನು ಮತ್ತು ಸರಬ್ಜೋತ್ ಜೋಡಿ ದಕ್ಷಿಣ ಕೊರಿಯಾದ ಶೂಟರ್​ಗಳನ್ನು 16-10 ಅಂಕಗಳಿಂದ ಮಣಿಸಿ ಒಲಿಂಪಿಕ್ಸ್​​ನಲ್ಲಿ ಭಾರತಕ್ಕೆ ಎರಡನೇ ಪದಕ ತಂದುಕೊಟ್ಟರು . ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ನಂತರ ಮನು ಒಲಿಂಪಿಕ್ಸ್​ನ ಒಂದೇ ಆವೃತ್ತಿಯಲ್ಲಿ ಒಂದಕ್ಕಿಂತ ಹೆಚ್ಚು ಪದಕಗಳನ್ನು ಗೆದ್ದ ಸ್ವತಂತ್ರ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೇ ವೇಳೆ ಸರಬ್ಜೋತ್ ಅವರು ಗಗನ್ ನಾರಂಗ್ ಮತ್ತು ವಿಜಯ್ ಕುಮಾರ್ ನಂತರ ಶೂಟಿಂಗ್ ಪದಕ ಗೆದ್ದ ಭಾರತೀಯ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕುತೂಹಲಕಾರಿ ಕಾಕತಾಳಿಯವೆಂದರೆ ನಾರಂಗ್ ಕಂಚಿನ ಪದಕ ಸರಿಯಾಗಿ 12 ವರ್ಷಗಳ ಹಿಂದೆ ಅಂದರೆ ಜುಲೈ 30, 2012 ರಂದು ಭಾರತಕ್ಕೆ ಲಭಿಸಿತ್ತು.

ಭಾರತ 261.3 ಅಂಕಗಳನ್ನು ಗಳಿಸಿತು, ಅದರಲ್ಲಿ ಸರಬ್ಜೋತ್ 110.2 ಅಂಕಗಳನ್ನು ಗಳಿಸಿದರು, ಇದರಲ್ಲಿ ಎರಡು ಬಾರಿ 10.2 ಮತ್ತು ಮನು ಸ್ಪರ್ಧೆಯಲ್ಲಿ ಏಕೈಕ ಬಾರಿ 10.5 ಅಂಕಗಳನ್ನು ಗಳಿಸಿದರು. ಎಂಟನೇ ಪ್ರಯತ್ನದಲ್ಲಿ ಮನು 8.3 10ಕ್ಕಿಂತ ಕಡಿಮೆ ಅಂಕ ಗಳಿಸಿದಾಗ, ಸರಬ್ಜೋತ್ 10.2 ಅಂಕ ಗಳಿಸಿ ಭಾರತ ಮುನ್ನಡೆ ಕಾಯ್ದುಕೊಳ್ಳುವುದಕ್ಕೆ ನೆರವಾಗಿದ್ದರು.

ಈ ಪದಕದ ಮೂಲಕ ಮನು ಇತಿಹಾಸ ಸೃಷ್ಟಿಸಿದರೆ, ಸರಬ್ಜೋತ್ ತನ್ನ ಶೂಟಿಂಗ್ ವೈಭವ ಶುರು ಮಾಡಿದರು. ಅವರಿಗೆ ಇದು ತಮ್ಮ ಚೊಚ್ಚಲ ಒಲಿಂಪಿಕ್ಸ್​ ಸ್ಪರ್ಧೆ. ಒಲಿಂಪಿಕ್ ಕ್ರೀಡಾಕೂಟದ ಆರಂಭಿಕ ದಿನವಾದ ಶನಿವಾರ, ಅವರು ಪುರುಷ ಸಪರ್ಧೆಯ ಫೈನಲ್​ಗೆ ಅರ್ಹತೆ ಪಡೆಯಲು ವಿಫಲರಾಗಿ ಒಂಬತ್ತನೇ ಸ್ಥಾನ ಪಡೆದರು. ಹೀಗಾಗಿ ಅವರಿಗೆ ಈ ಪದಕ ಸಮಾಧಾನ ತರಲಿದೆ.

ಸರಬ್ಜೋತ್ ಸಿಂಗ್ ಅವರ ಅದ್ಭುತ ಪ್ರಯಾಣದ ಹಾದಿ ಇಲ್ಲಿದೆ

ಸರಬ್ಜೋತ್ ಹರಿಯಾಣದ ಅಂಬಾಲಾದ ಧೀನ್ ಗ್ರಾಮದವರು. ಅವರ ತಂದೆ ಜತೀಂದರ್ ಸಿಂಗ್ ರೈತ. ತಾಯಿ ಹರ್ದೀಪ್ ಕೌರ್ ಗೃಹಿಣಿ. ಅವರು ಚಂಡೀಗಢದ ಸೆಕ್ಟರ್ 10 ರ ಡಿಎವಿ ಕಾಲೇಜಿನಲ್ಲಿ ಅಧ್ಯಯನ ಮಾಡಿರುವ ಸರಬ್ಜೋತ್​ ಅಂಬಾಲಾ ಕಂಟೋನ್ಮೆಂಟ್​ನಲ್ಲಿರುವ ಎಆರ್ ಶೂಟಿಂಗ್ ಅಕಾಡೆಮಿಯಲ್ಲಿ ತರಬೇತುದಾರ ಅಭಿಷೇಕ್ ರಾಣಾ ಅವರ ಅಡಿಯಲ್ಲಿ ತರಬೇತಿ ಪಡೆದಿದ್ದಾರೆ.

2019 ರ ಜೂನಿಯರ್ ವಿಶ್ವ ಚಾಂಪಿಯನ್ಶಿಪ್ ಚಿನ್ನದ ಪದಕ ಗೆಲ್ಲುವ ಮೂಲಕ ಹಿರಿಯ ಶ್ರೇಣಿಗಳನ್ನು ಪ್ರವೇಶಿಸಿದ ಸರಬ್ಜೋತ್, 2023 ರಲ್ಲಿ ಏಷ್ಯನ್ ಗೇಮ್ಸ್ ತಂಡದ ಚಿನ್ನ ಮತ್ತು ಮಿಶ್ರ ತಂಡ ಬೆಳ್ಳಿ ಗೆದ್ದಿದ್ದರು. ಅವರು 2023ರ ಏಷ್ಯನ್ ಚಾಂಪಿಯನ್​ಶಿಪ್​​ನ ವೈಯಕ್ತಿಕ ಕಂಚಿನ ಪದಕವನ್ನು ಗೆದ್ದಿದ್ದರು. ಇದು ಪ್ಯಾರಿಸ್ ಒಲಿಂಪಿಕ್ಸ್​​ಗೆ ಅವರಿಗೆ ಅರ್ಹತೆ ಕೊಟ್ಟಿತ್ತು.

ಸರಬ್ಜೋತ್ ಆರಂಭದಲ್ಲಿ ಫುಟ್ಬಾಲ್ ಆಟಗಾರನಾಗಲು ಬಯಸಿದ್ದರು. ಆದರೆ ಬೇಸಿಗೆ ಶಿಬಿರದಲ್ಲಿ ಮಕ್ಕಳು ಆಟಿಕೆ ಪಿಸ್ತೂಲ್ ಬಳಲಿ ಗುರಿ ಹೊಡೆಯುವುದನ್ನು ನೋಡಿದ ಬಳಿಕ ಮನಸ್ಸು ಬದಲಾಯಿಸಿದ್ದರು. ಈ ಅನುಭವವು ಅವರ ಮನಸ್ಸಿನ ಮೇಲೆ ಪ್ರಮುಖ ಪರಿಣಾಮ ಬೀರಿತು. ಹೀಗಾಗಿ ಶೂಟಿಂಗ್ ಮುಂದುವರಿಸಲು ನಿರ್ಧರಿಸಿದರು.

ಶೂಟಿಂದ್ ದುಬಾರಿ. ಹೀಗಾಗಿ ತನ್ನ ತಂದೆಯ ಆರಂಭಿಕ ಹಿಂಜರಿಕೆಯ ಹೊರತಾಗಿಯೂ ಅದನ್ನೇ ವೃತ್ತಿಯಾಗಿ ಮುಂದುವರಿಸುವ ನಿರ್ಧಾರವನ್ನು ಬೆಂಬಲಿಸುವಂತೆ ತನ್ನ ಹೆತ್ತವರ ಮನವೊಲಿಸುವಲ್ಲಿ ಸರಬ್ಜೋತ್​ ಯಶಸ್ವಿಯಾಗಿದ್ದರು.

ಜಿಲ್ಲಾಮಟ್ಟದಿಂದ ಆರಂಭ

ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಗೆದ್ದ ನಂತರ, ಅವರು 2016ರಿಂದ ಅವರು ಅಭಿಷೇಕ್ ರಾಣಾ ಅವರ ಅಡಿಯಲ್ಲಿ ವೃತ್ತಿಪರ ತರಬೇತಿ ಪಡೆಯಲು ಪ್ರಾರಂಭಿಸಿದರು. ಡಿಸೆಂಬರ್ 2022 ರಲ್ಲಿ ಭೋಪಾಲ್​​ನ ಮಧ್ಯಪ್ರದೇಶ ರಾಜ್ಯ ಶೂಟಿಂಗ್ ಅಕಾಡೆಮಿ ಆಫ್ ಎಕ್ಸಲೆನ್ಸ್​ನಲ್ಲಿ ನಡೆದ ತಂಡ ಸ್ಪರ್ಧೆಯಲ್ಲಿ ಜಯಗಳಿಸಿದ ಸರಬ್ಜೋತ್ 2022 ರ ಡಿಸೆಂಬರ್​ನಲ್ಲಿ ನಡೆದ 65 ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್​ಶಿಪ್​ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದರು.

ಇದನ್ನೂ ಓದಿ: Dinesh Mongia : ಭಾರತ ತಂಡದ ಮಾಜಿ ಆಟಗಾರ ದಿನೇಶ್ ಮೋಂಗಿಯಾ ಗೋವಾ ಕ್ರಿಕೆಟ್​ ತಂಡದಲ್ಲಿ ಹೊಸ ಜವಾಬ್ದಾರಿ

2021 ರ ಜೂನಿಯರ್ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಸರಬ್ಜೋತ್ ತಂಡ ಮತ್ತು ಮಿಶ್ರ-ತಂಡ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದರು. ಮಾರ್ಚ್ 2023 ರಲ್ಲಿ ವಿಶ್ವಕಪ್​ನ ಮೊದಲ ಫೈನಲ್ ಪಂದ್ಯದಲ್ಲಿ 16-0 ಪರಿಪೂರ್ಣ ಸ್ಕೋರ್​ನೊಂದಿಗೆ ಚಿನ್ನದ ಪದಕವನ್ನು ಗಳಿಸುವ ಮೂಲಕ ಅವರು ಮತ್ತಷ್ಟು ಉತ್ತಮ ಸಾಧನೆ ಮಾಡಿದ್ದರು. ಸ್ಪರ್ಧೆಯುದ್ದಕ್ಕೂ, ಅವರು 585 ಅಂಕಗಳೊಂದಿಗೆ ಅಗ್ರ ಸ್ಕೋರರ್ ಆಗಿ ಹೊರಹೊಮ್ಮಿದರು ಮತ್ತು ಒಟ್ಟು 253.2 ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಪಡೆದಿದ್ದರು

Continue Reading

ಕ್ರಿಕೆಟ್

Richest Cricketers: ವಿಶ್ವದ ಟಾಪ್‌ 5 ಶ್ರೀಮಂತ ಕ್ರಿಕೆಟಿಗರಿವರು! ಎಷ್ಟಿದೆ ಇವರ ಆಸ್ತಿ?

ಕ್ರಿಕೆಟ್ ಆಡುವುದರ ಹೊರತಾಗಿ ವಿಶ್ವದ ಶ್ರೀಮಂತ ಕ್ರಿಕೆಟಿಗರು ಕೆಲವು ಬ್ರ್ಯಾಂಡ್‌ಗಳಲ್ಲಿ ಪ್ರಮುಖ ಹೆಸರು ಮತ್ತು ಹೆಚ್ಚುವರಿ ಆದಾಯವನ್ನೂ ಗಳಿಸುತ್ತಾರೆ. ಅದು ಅವರ ನಿವ್ವಳ ಮೌಲ್ಯವನ್ನು ಹೆಚ್ಚಿಸುತ್ತದೆ. ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ (Richest Cricketers) ಭಾರತದ ಮೂವರು ಕ್ರಿಕೆಟಿಗರೂ ಸೇರಿದ್ದಾರೆ. ವಿಶ್ವದ ಐವರು ಶ್ರೀಮಂತ ಕ್ರಿಕೆಟಿಗರ ಸಂಪತ್ತಿನ ಮಾಹಿತಿ ಇಲ್ಲಿದೆ.

VISTARANEWS.COM


on

By

Richest Cricketers
Koo

ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ (most popular sports) ಒಂದಾಗಿರುವ ಕ್ರಿಕೆಟ್ (cricket) ತನ್ನ ಅಪಾರ ಅಭಿಮಾನಿಗಳ ಕಾರಣದಿಂದಾಗಿ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಆದಾಯ ಗಳಿಸುವ ಕ್ಷೇತ್ರವಾಗಿ ಬೆಳೆದಿದೆ. ಇದರಲ್ಲಿ ಕೆಲವು ಆಟಗಾರರು (Richest Cricketers) ಸಾಕಷ್ಟು ಹೆಸರು ಮಾತ್ರವಲ್ಲ ಸಂಪತ್ತನ್ನು ಗಳಿಸಿದ್ದಾರೆ. ಪ್ರಪಂಚದಾದ್ಯಂತದ ಅಭಿಮಾನಿಗಳಲ್ಲಿ ಅಪಾರ ಜನಪ್ರಿಯತೆಯನ್ನು ಹೊಂದಿರುವ ಹಲವಾರು ಕ್ರಿಕೆಟಿಗರಲ್ಲಿ ಕೆಲವರು ಮಾತ್ರ ವಿಶ್ವದ ಶ್ರೀಮಂತ ಕ್ರಿಕೆಟಿಗರಿಗಾಗಿ (Cricketers) ಗುರುತಿಸಿಕೊಂಡಿದ್ದಾರೆ.

ಕ್ರಿಕೆಟ್ ಆಡುವುದರ ಹೊರತಾಗಿ ವಿಶ್ವದ ಶ್ರೀಮಂತ ಕ್ರಿಕೆಟಿಗರು ಕೆಲವು ಬ್ರ್ಯಾಂಡ್‌ಗಳಲ್ಲಿ ಪ್ರಮುಖ ಹೆಸರು ಮತ್ತು ಹೆಚ್ಚುವರಿ ಆದಾಯವನ್ನೂ ಗಳಿಸುತ್ತಾರೆ. ಅದು ಅವರ ನಿವ್ವಳ ಮೌಲ್ಯವನ್ನು ಹೆಚ್ಚಿಸುತ್ತದೆ. ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಭಾರತದ ಮೂವರು ಕ್ರಿಕೆಟಿಗರೂ ಸೇರಿದ್ದಾರೆ.

ಕೆಲವು ಕ್ರಿಕೆಟ್ ಆಟಗಾರರು ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರು, ಆದಾಯ ಗಳಿಸಿದ್ದರೆ ಇನ್ನು ಕೆಲವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್), ಬಿಗ್ ಬ್ಯಾಷ್ ಲೀಗ್ (ಬಿಬಿಎಲ್), ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಮತ್ತು ಮತ್ತೆ ಅನೇಕರು ಕ್ರಿಕೆಟ್ ಲೀಗ್‌ಗಳಲ್ಲಿ ದುಬಾರಿ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಇದರಲ್ಲಿ ವಿಶ್ವದ ಅಗ್ರ ಐದು ಶ್ರೀಮಂತ ಕ್ರಿಕೆಟಿಗರಾಗಿ ಗುರುತಿಸಿಕೊಂಡಿದ್ದಾರೆ. ಅವರು ಯಾರು, ಅವರ ಸಂಪತ್ತು ಎಷ್ಟಿದೆ ಗೊತ್ತೇ?

ವಿಶ್ವದ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಭಾರತದ ಮೂವರು ಕ್ರಿಕೆಟಿಗರು ಮೊದಲನೇ ಸ್ಥಾನದಲ್ಲಿದ್ದಾರೆ. ಅದರಲ್ಲೂ ಕ್ರಿಕೆಟ್ ದೇವರು ಸಚ್ಚಿನ್ ತೆಂಡೂಲ್ಕರ್ ವಿಶ್ವದ ಅತಿ ಹೆಚ್ಚು ಶ್ರೀಮಂತ ಕ್ರಿಕೆಟಿಗರಾಗಿದ್ದಾರೆ.

Richest Cricketers
Richest Cricketers


1. ಸಚಿನ್ ತೆಂಡೂಲ್ಕರ್

ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ವಿಶ್ವದ ಸಾರ್ವಕಾಲಿಕ ಶ್ರೀಮಂತ ಕ್ರಿಕೆಟಿಗ. ಭಾರತೀಯ ಶ್ರೇಷ್ಠ ಕ್ರಿಕೆಟಿಗರಾಗಿರುವ ಇವರು ಸುಮಾರು 172 ಮಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಇವರ ಸಂಪತ್ತಿನ ಮೌಲ್ಯ ಸುಮಾರು 1,440 ಕೋಟಿ ರೂ.

Richest Cricketers
Richest Cricketers


2. ಎಂ.ಎಸ್. ಧೋನಿ

ಭಾರತದ ಮಾಜಿ ನಾಯಕ ಎಂ.ಎಸ್. ಧೋನಿ ವಿಶ್ವದ ಎರಡನೇ ಶ್ರೀಮಂತ ಕ್ರಿಕೆಟಿಗರಾಗಿದ್ದಾರೆ. ಹಲವು ದೊಡ್ಡ ಬ್ರ್ಯಾಂಡ್‌ಗಳಲ್ಲಿ ಪ್ರಮುಖ ಹೆಸರು ಗಳಿಸಿದ್ದಾರೆ. ವಿಕೆಟ್‌ಕೀಪರ್-ಬ್ಯಾಟರ್ ಆಗಿ ಸುಮಾರು 127 ಮಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದು, ಇವರ ಸಂಪತ್ತಿನ ಮೌಲ್ಯ 1,063 ಕೋಟಿ ರೂ.

Richest Cricketers
Richest Cricketers


3. ವಿರಾಟ್ ಕೊಹ್ಲಿ

ಸಕ್ರಿಯ ಆಟಗಾರರ ಪೈಕಿ ಶ್ರೀಮಂತ ಕ್ರಿಕೆಟಿಗ, ಸ್ಟಾರ್ ಭಾರತೀಯ ಬ್ಯಾಟರ್ ವಿರಾಟ್ ಕೊಹ್ಲಿ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಕ್ರಿಕೆಟ್ ಆಡುವುದರ ಹೊರತಾಗಿ ಕೊಹ್ಲಿ ಹಲವು ಬ್ರ್ಯಾಂಡ್‌ಗಳಲ್ಲಿ ಹೆಸರನ್ನು ಮಾಡಿದ್ದಾರೆ. ಸುಮಾರು 122 ಮಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿರುವ ಇವರ ಸಂಪತ್ತಿನ ಮೌಲ್ಯ 1,021 ಕೋಟಿ ರೂ.

Richest Cricketers
Richest Cricketers


4. ರಿಕಿ ಪಾಂಟಿಂಗ್

ರಿಕಿ ಪಾಂಟಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಇವರು ಆಸ್ಟ್ರೇಲಿಯಾ ತಂಡಕ್ಕೆ ಎರಡು ಒಡಿಐ ವಿಶ್ವಕಪ್ ಪ್ರಶಸ್ತಿಗಳು ಮತ್ತು ಎರಡು ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಗೆಲ್ಲುವಲ್ಲಿ ಕಾರಣರಾದರು. ಸುಮಾರು 100 ಮಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ ನಾಲ್ಕನೇ ಶ್ರೀಮಂತ ಕ್ರಿಕೆಟಿಗರಾಗಿದ್ದಾರೆ. ಇವರ ಸಂಪತ್ತಿನ ಮೌಲ್ಯ ಸುಮಾರು 837 ಕೋಟಿ ರೂ.

ಇದನ್ನೂ ಓದಿ: Paris Olympics 2024 : ಕ್ರಿಕೆಟ್ ಕೆಲಸದಿಂದ ನಿರಾಳ; ಒಲಿಂಪಿಕ್ಸ್​​ವೀಕ್ಷಿಸಲು ತೆರಳಿದ ರಾಹುಲ್ ದ್ರಾವಿಡ್​

Richest Cricketers
Richest Cricketers


5. ಜಾಕ್ವೆಸ್ ಕಾಲಿಸ್

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ, ವಿಶ್ವದ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಜಾಕ್ವೆಸ್ ಕಾಲಿಸ್ ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಇವರು ಸುಮಾರು 586 ಕೋಟಿ ಮೊತ್ತದ ಸಂಪತ್ತನ್ನು ಹೊಂದಿದ್ದು, ಸುಮಾರು 70 ಮಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

Continue Reading
Advertisement
Custard Apple Benefits
Latest32 mins ago

Custard Apple Benefits: ಕ್ಯಾನ್ಸರ್‌ ಸೇರಿದಂತೆ ಹಲವು ರೋಗಗಳನ್ನು ತಡೆಯುವ ಶಕ್ತಿ ಸೀತಾಫಲಕ್ಕಿದೆ!

namma Metro
ಬೆಂಗಳೂರು38 mins ago

Namma Metro : ವಿದ್ಯುತ್‌ ಸರಬರಾಜು ವ್ಯವಸ್ಥೆಯಲ್ಲಿ ದೋಷ; ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ವ್ಯತ್ಯಯ

Martin Movie
ಕರ್ನಾಟಕ47 mins ago

Martin Movie: ಆ.4ಕ್ಕೆ ಮಾರ್ಟಿನ್ ಚಿತ್ರದ ಟ್ರೈಲರ್‌ 1 ರಿಲೀಸ್‌; ವಿಎಫ್‌ಎಕ್ಸ್‌ ವಂಚನೆ ಬಗ್ಗೆ ನಿರ್ಮಾಪಕ ಹೇಳಿದ್ದೇನು?

Neeraj Chopra
ಪ್ರಮುಖ ಸುದ್ದಿ50 mins ago

Neeraj Chopra : ನಮಸ್ಕಾರ ಪ್ಯಾರಿಸ್​​; ಒಲಿಂಪಿಕ್ಸ್​ ಕ್ರೀಡಾಗ್ರಾಮ ತಲುಪಿದ ಚಿನ್ನದ ಹುಡುಗ ನೀರಜ್ ಚೋಪ್ರಾ

Nirmala Sitharaman
ದೇಶ59 mins ago

Nirmala Sitharaman: ಕಾಂಗ್ರೆಸ್‌ ಅವಧಿ ಬಜೆಟ್‌ನಲ್ಲಿ 26 ರಾಜ್ಯಗಳ ಹೆಸರೇ ಇರಲಿಲ್ಲ; ನಿರ್ಮಲಾ ಸೀತಾರಾಮನ್‌ ಟಾಂಗ್

Paris Olympics 2024
ಪ್ರಮುಖ ಸುದ್ದಿ1 hour ago

Paris Olympics 2024 : 7 ತಿಂಗಳ ಗರ್ಭಿಣಿಯಾಗಿದ್ದರೂ ಒಲಿಂಪಿಕ್ಸ್​ ಫೆನ್ಸಿಂಗ್​ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಪಂದ್ಯ ಗೆದ್ದ ಈಜಿಫ್ಟ್​​ನ ನಾದಾ ಹಫೀಜ್​

karnataka Rain
ಮಳೆ2 hours ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Actor Shahrukh Khan
ಸಿನಿಮಾ2 hours ago

Actor Shahrukh Khan: ಅಮೆರಿಕದಲ್ಲಿ ಶಾರುಖ್ ಖಾನ್‌ಗೆ ಶಸ್ತ್ರಚಿಕಿತ್ಸೆ; ಬಾಲಿವುಡ್‌ ಬಾದ್‌ಶಾಗೆ ಕಾಡುತ್ತಿರುವ ಸಮಸ್ಯೆ ಏನು?

Girl
ದೇಶ2 hours ago

ಜಾಬ್‌ ಸಿಕ್ಕಿದೆ ಎಂದು ಗೆಳೆಯರಿಗೆ ಪಾರ್ಟಿ ಕೊಟ್ಟ ಯುವತಿ; ಕುಡಿದ ಸ್ನೇಹಿತರು ಆಕೆಯನ್ನೇ ರೇಪ್ ಮಾಡಿದರು!

Sarabjot Singh
ಪ್ರಮುಖ ಸುದ್ದಿ2 hours ago

Sarabjot Singh : ಭಾರತಕ್ಕೆ 2ನೇ ಒಲಿಂಪಿಕ್ಸ್ ಪದಕ ತಂದುಕೊಟ್ಟ ಮನು ಭಾಕರ್ ಶೂಟಿಂಗ್ ಪಾಲುದಾರ ಸರಬ್ಜೋತ್ ಸಿಂಗ್​ ಹಿನ್ನೆಲೆ ಇಲ್ಲಿದೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 hours ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ5 hours ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ6 hours ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ1 day ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ1 day ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ1 day ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ2 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ2 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ2 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ2 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌