IND VS AUS: ಆಸೀಸ್​ ವಿರುದ್ಧದ ದ್ವಿತೀಯ ಟೆಸ್ಟ್​ಗೂ ಶ್ರೇಯಸ್​ ಅಯ್ಯರ್​ ಅನುಮಾನ - Vistara News

ಕ್ರಿಕೆಟ್

IND VS AUS: ಆಸೀಸ್​ ವಿರುದ್ಧದ ದ್ವಿತೀಯ ಟೆಸ್ಟ್​ಗೂ ಶ್ರೇಯಸ್​ ಅಯ್ಯರ್​ ಅನುಮಾನ

ಆಸ್ಟ್ರೇಲಿಯಾ ವಿರುದ್ಧ ದೆಹಲಿಯಲ್ಲಿ ನಡೆಯುವ ದ್ವಿತೀಯ ಟೆಸ್ಟ್ ಪಂದ್ಯದಿಂದ ಶ್ರೇಯಸ್​ ಅಯ್ಯರ್​ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ.

VISTARANEWS.COM


on

shreyas iyer
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಬೆನ್ನು ನೋವಿನಿಂದ ಸಂಪೂರ್ಣವಾಗಿ ಗುಣಮುಖರಾಗದ ಕಾರಣದಿಂದಾಗಿ ಶ್ರೇಯಸ್​ ಅಯ್ಯರ್(shreyas iyer)​ ಆಸ್ಟ್ರೇಲಿಯಾ ವಿರುದ್ಧದ(IND VS AUS) ಬಾರ್ಡರ್ ಗವಾಸ್ಕರ್ ಟ್ರೋಫಿಯ(border gavaskar trophy) ದ್ವಿತೀಯ ಟೆಸ್ಟ್​ ಪಂದಕ್ಕೂ ಅನುಮಾನ ಎನ್ನಲಾಗಿದೆ.

ನ್ಯೂಜಿಲ್ಯಾಂಡ್​ ವಿರುದ್ಧದ ಸರಣಿಗೂ ಮುನ್ನ ಶ್ರೇಯಸ್​ ಅಯ್ಯರ್​ ಅವರು ಬೆನ್ನು ನೋವಿನ ಗಾಯಕ್ಕೆ ತುತ್ತಾಗಿದ್ದರು. ಬಳಿಕ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಶಿಬಿರಕ್ಕೆ ಸೇರಿದ್ದರು. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿ ವೇಳೆಗೆ ತಂಡಕ್ಕೆ ಮರಳಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಸಂಪೂರ್ಣ ಫಿಟ್​ ಆಗದ ಕಾರಣದಿಂದ ಮೊದಲ ಪಂದ್ಯದಿಂದ ಅವರನ್ನು ಕೈಬಿಡಲಾಗಿತ್ತು. ದ್ವಿತೀಯ ಟೆಸ್ಟ್​ ಪಂದ್ಯಕ್ಕೆ ತಂಡ ಸೇರುವ ಸಾಧ್ಯತೆ ಇದೆ ಎಂದು ಬಿಸಿಸಿಐ ತಿಳಿಸಿತ್ತು. ಇದೀಗ ಅವರು ದ್ವಿತೀಯ ಪಂದ್ಯಕ್ಕೂ ಅನುಮಾನ ಎನ್ನಲಾಗಿದೆ.

ಇನ್ನೂ ಕೂಡ ತಂಡ ಸೇರದ ಶ್ರೇಯಸ್ ಅಯ್ಯರ್ ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ಪುನರ್ವಸತಿಯಲ್ಲಿದ್ದಾರೆ. ಒಂದು ವೇಳೆ ಅವರು ಟೆಸ್ಟ್ ಸರಣಿಯನ್ನು ತಪ್ಪಿಸಿಕೊಂಡರೆ ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಸರಣಿಯಲ್ಲಿ ತಂಡಕ್ಕೆ ಮರಳುವುದು ಖಚಿತವಾಗಿದೆ ಎಂದು ವರದಿಯಾಗಿದೆ.

2023 ಏಕ ದಿನ ವಿಶ್ವ ಕಪ್‌ ದೃಷ್ಟಿಯಲ್ಲಿ ಬಿಸಿಸಿಐ ಆಟಗಾರರ ಫಿಟ್ನೆಸ್‌ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದೆ. ಆದ್ದರಿಂದಲೇ ಸಂಪೂರ್ಣವಾಗಿ ಫಿಟ್‌ ಆಗದ ಹೊರತು ಆಟಗಾರರನ್ನು ಕಣಕ್ಕಿಳಿಸದಿರಲು ಬಿಸಿಸಿಐ ನಿರ್ಧರಿಸಿದೆ. ಇದೇ ಕಾರಣಕ್ಕೆ ಬುಮ್ರಾ ಅವರನ್ನು ಟೆಸ್ಟ್​ ಸರಣಿಯಿಂದ ದೂರ ಇಡಲು ಕಾರಣ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೀಡೆ

Pandya Brothers : ಪಾಂಡ್ಯ ಸಹೋದರರ ಮನೆಗೆ ಹೊಸ ಅತಿಥಿ ಆಗಮನ, ಖುಷಿಯಲ್ಲಿ ಕುಟುಂಬ

VISTARANEWS.COM


on

Pandya brothers
Koo

ಬೆಂಗಳೂರು: ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಐಪಿಎಲ್​ನ ಸ್ಟಾರ್ ಸಹೋದರರು (Pandya Brothers). ಹಾರ್ದಿಕ್ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿದ್ದರೆ, ಕೃನಾಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪ್ರಮುಖ ಸ್ಪಿನ್ ಆಲ್ರೌಂಡರ್ ಆಗಿದ್ದಾರೆ. ಸಹೋದರರು ಒಟ್ಟಿಗೆ ಕ್ರಿಕೆಟ್ ಆಡಲು ಪ್ರಾರಂಭಿಸಿದರು ಮತ್ತು ಬಹುತೇಕ ಏಕ ಕಾಲಕ್ಕೆ ಖ್ಯಾತಿ ಗಳಿಸಿದರು. ಇಬ್ಬರೂ ಒಂದು ಕಾಲದಲ್ಲಿ ಮುಂಬೈ ಇಂಡಿಯನ್ಸ್​ ಪರ ಆಡಿದ್ದರು. ನಂತರ ವಿವಿಧ ಫ್ರಾಂಚೈಸಿಗಳಿಗೆ ಹೋದರು. 2024 ರ ಋತುವಿಗೆ ಮುಂಚಿತವಾಗಿ, ಹಾರ್ದಿಕ್ ಮುಂಬೈ ಇಂಡಿಯನ್ಸ್​ಗೆ ನಾಯಕನಾಗಿ ಮರಳಿದರು. ಈ ಸಹೋದರರ ಮನೆಗೆ ಹೊಸ ಅತಿಥಿಯೊಬ್ಬ ಆಗಮಿಸಿದ್ದಾನೆ.

ಕೃನಾಲ್ ಪಾಂಡ್ಯ ಮತ್ತು ಅವರ ಪತ್ನಿ ಪಂಕುರಿ ಶರ್ಮಾ ಅವರ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಅದಕ್ಕೆ ವಾಯು ಎಂಬ ಹೆಸರಿಟ್ಟಿದ್ದಾರೆ. ಹೊಸ ಸದಸ್ಯನನ್ನು ಪಾಂಡ್ಯ ಕುಟುಂಬ ಶುಕ್ರವಾರ ಅದ್ಧೂರಿಯಿಂದ ಸ್ವಾಗತಿಸಿದೆ. ಆ ಚಿತ್ರಗಳನ್ನು ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಅಪ್​ಲೋಡ್​ ಮಾಡಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ಆಲ್​ರೌಂಡರ್​ ಕೃನಾಲ್ ಪಾಂಡ್ಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ತಮ್ಮ ಫ್ರಾಂಚೈಸಿಗಾಗಿ ಹೆಚ್ಚು ಎಕಾನಮಿಕಲ್​ ಆಗಿರುವ ನಾಲ್ಕು ಓವರ್​ಗಳನ್ನು ಎಸೆದಿದ್ದಾರೆ. ಲಕ್ನೋದ ಎಕಾನಾ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 33ರ ಹರೆಯದ ಪಾಂಡ್ಯ ಈ ಸಾಧನೆ ಮಾಡಿದ್ದಾರೆ.

ಪಾಂಡ್ಯ ನಾಲ್ಕು ಓವರ್​ಗಳಲ್ಲಿ 2.75 ಎಕಾನಮಿ ರೇಟ್​​ನಲ್ಲಿ 11 ರನ್​ ನೀಡಿ 3 ವಿಕೆಟ್​ ಪಡೆದಿದ್ದಾರೆ. ಸಾಯಿ ಸುದರ್ಶನ್, ಬಿ.ಆರ್.ಶರತ್ ಮತ್ತು ದರ್ಶನ್ ನಲ್ಕಂಡೆ ವಿಕೆಟ್​ಗಳನ್ನು ಉರುಳಿಸಿದ್ದಾರೆ.

ಇದನ್ನೂ ಓದಿ: Mohammad Shami : ಸರ್ಜರಿ ಗಾಯದ ನಡುವೆಯೂ ಮತದಾನ ಮಾಡಿದ ಮೊಹಮ್ಮದ್​ ಶಮಿ

ಇದು ಐಪಿಎಲ್​​ನಲ್ಲಿ ಎಲ್ಎಸ್ಜಿ ಬೌಲರ್ ಗಳಿಸಿದ ನಾಲ್ಕು ಓವರ್ಗಳ ಅತ್ಯಂತ ಎಕಾನಮಿ ಸ್ಪೆಲ್ ಆಗಿದೆ. 2022ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 4 ಓವರ್​ಗಳಲ್ಲಿ 11 ರನ್ಗೆ 2 ವಿಕೆಟ್ ಪಡೆದ ತಮ್ಮದೇ ದಾಖಲೆಯನ್ನು ಪಾಂಡ್ಯ ಮುರಿದರು. ಇಂಗ್ಲೆಂಡ್ ವೇಗದ ಬೌಲರ್ ಮಾರ್ಕ್ ವುಡ್ ಕಳೆದ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ಓವರ್​​ಗಳಲ್ಲಿ 14 ರನ್​ಗೆ 5 ವಿಕೆಟ್ ಪಡೆದಿದ್ದರು.

ಕೃನಾಲ್ ಗುಜರಾತ್​​ ವಿರುದ್ಧ ಆಡಲು ಇಷ್ಟಪಡುತ್ತಾರೆ ಅಂಕಿ ಅಂಶಗಳು ಅದನ್ನು ಸಾಬೀತುಪಡಿಸುತ್ತವೆ. ಐದು ಪಂದ್ಯಗಳಲ್ಲಿ, ಅವರು ಫ್ರಾಂಚೈಸಿ ವಿರುದ್ಧ 17.66 ಸರಾಸರಿಯಲ್ಲಿ ಮತ್ತು 5.3 ಎಕಾನಮಿ ರೇಟ್​​ನಲ್ಲಿ ಆರು ವಿಕೆಟ್​ ಪಡೆದಿದ್ದಾರೆ. ಜಿಟಿ ವಿರುದ್ಧ ಅವರು 20 ಸ್ಟ್ರೈಕ್ ರೇಟ್ ಸಹ ಕಾಯ್ದುಕೊಂಡಿದ್ದಾರೆ. ಜಿಟಿ ವಿರುದ್ಧ ಐದು ಇನ್ನಿಂಗ್ಸ್​ಗಳಲ್ಲಿ 17.00 ಸರಾಸರಿಯಲ್ಲಿ 51 ರನ್ ಗಳಿಸಿದ್ದಾರೆ. ಅಜೇ 23 ಅತ್ಯುತ್ತಮ ಸ್ಕೋರ್.

Continue Reading

ಪ್ರಮುಖ ಸುದ್ದಿ

Mohammad Shami : ಸರ್ಜರಿ ಗಾಯದ ನಡುವೆಯೂ ಮತದಾನ ಮಾಡಿದ ಮೊಹಮ್ಮದ್​ ಶಮಿ

Mohammad Shami: ಮೊಹಮ್ಮದ್ ಶಮಿ ಅವರನ್ನು ಶಸ್ತ್ರಚಿಕಿತ್ಸೆಗಾಗಿ ಯುನೈಟೆಡ್ ಕಿಂಗ್​ಡಮ್​​​ಗೆ ಕಳುಹಿಸಲಾಗಿತ್ತು. ಇದೀಗ ಹೆಚ್ಚಿನ ಪುನಶ್ಚೇತನಕ್ಕಾಗಿ ಶಮಿ ಭಾರತಕ್ಕೆ ಮರಳಿದ್ದಾರೆ. ವಿಶೇಷವೆಂದರೆ, ಗಾಯವು ಸರಿಯಾಗಿ ಗುಣವಾಗಲು ಕನಿಷ್ಠ 4-5 ತಿಂಗಳುಗಳು ಬೇಕಾಗುವುದರಿಂದ ವೇಗಿ ಮುಂಬರುವ ಟಿ 20 ವಿಶ್ವಕಪ್​ನಿಂದ ಹೊರಗುಳಿದಿದ್ದಾರೆ.

VISTARANEWS.COM


on

Mohammad Shami
Koo

ಲಖನೌ: ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ (Mohammad Shami) ಶುಕ್ರವಾರ (ಏಪ್ರಿಲ್​ 26ರಂದು) ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನದಲ್ಲಿ ಮತ ಚಲಾಯಿಸಿದರು. 2023 ರ ಐಸಿಸಿ ಏಕದಿನ ವಿಶ್ವಕಪ್​​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಮೊಹಮ್ಮದ್ ಶಮಿ, ಪಂದ್ಯಾವಳಿಯ ಸಮಯದಲ್ಲಿ ಹಿಮ್ಮಡಿ ಗಾಯದಿಂದ ಬಳಲುತ್ತಿದ್ದರು. ಇದೀಗ ಸರ್ಜರಿಗೆ ಒಳಗಾಗಿದ್ದು ಅದರ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದಾರೆ. ಈ ನಡುವೆ ಅವರು ಮತದಾನ ಮಾಡಿದ್ದಾರೆ.

ಮೊಹಮ್ಮದ್ ಶಮಿ ಅವರನ್ನು ಶಸ್ತ್ರಚಿಕಿತ್ಸೆಗಾಗಿ ಯುನೈಟೆಡ್ ಕಿಂಗ್​ಡಮ್​​​ಗೆ ಕಳುಹಿಸಲಾಗಿತ್ತು. ಇದೀಗ ಹೆಚ್ಚಿನ ಪುನಶ್ಚೇತನಕ್ಕಾಗಿ ಶಮಿ ಭಾರತಕ್ಕೆ ಮರಳಿದ್ದಾರೆ. ವಿಶೇಷವೆಂದರೆ, ಗಾಯವು ಸರಿಯಾಗಿ ಗುಣವಾಗಲು ಕನಿಷ್ಠ 4-5 ತಿಂಗಳುಗಳು ಬೇಕಾಗುವುದರಿಂದ ವೇಗಿ ಮುಂಬರುವ ಟಿ 20 ವಿಶ್ವಕಪ್​ನಿಂದ ಹೊರಗುಳಿದಿದ್ದಾರೆ.

ಮೊಹಮ್ಮದ್ ಶಮಿ ಮೈದಾನದಿಂದ ಹೊರಗಿರುವುದರಿಂದ ಅವರು ಭಾರತೀಯ ಪ್ರಜೆಯಾಗಿ ತಮ್ಮ ಕರ್ತವ್ಯವನ್ನು ಪೂರೈಸಲು ಮರೆಯಲಿಲ್ಲ. ನಡೆಯುತ್ತಿರುವ ಲೋಕಸಭಾ ಚುನಾವಣೆಯ ಎರಡನೇ ಹಂತದಲ್ಲಿ ಮತ ಚಲಾಯಿಸಲು ಮತಗಟ್ಟೆಗೆ ಬಂದಿದ್ದರು.

ಇದನ್ನೂ ಓದಿ: IPL 2024 : ಅಂಕಪಟ್ಟಿಯ ಅಗ್ರಸ್ಥಾನಿ ರಾಜಸ್ಥಾನ್​ಗೆ ಸವಾಲೊಡ್ಡುವುದೇ ಲಕ್ನೊ ಸೂಪರ್​ ಜೈಂಟ್ಸ್​​

ಶಮಿ ಅವರ ಕ್ಷೇತ್ರವಾದ ಅಮ್ರೋಹಾ ಸೇರಿದಂತೆ ಉತ್ತರ ಪ್ರದೇಶದ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯಿತು. , ಅವರು ಗಾಯದ ಹಿನ್ನಡೆಯಿಂದ ಬಳಲುತ್ತಿದ್ದರೂ ಮತ ಚಲಾಯಿಸಲು ಬಂದರು. ಪ್ರತಿಯೊಬ್ಬ ಭಾರತೀಯ ನಾಗರಿಕರು ತಮ್ಮ ಮತದಾನದ ಹಕ್ಕನ್ನು ಬಳಸಿಕೊಳ್ಳಬೇಕು ಮತ್ತು ತಮ್ಮ ಆಯ್ಕೆಯ ಸರ್ಕಾರವನ್ನು ಆಯ್ಕೆ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಹೊರಬರಬೇಕು ಎಂದು ಮೊಹಮ್ಮದ್ ಶಮಿ ಅಭಿಪ್ರಾಯಪಟ್ಟರು.

ವಿಶೇಷವೆಂದರೆ, ಸೆಪ್ಟೆಂಬರ್​ನಲ್ಲಿ ಬಾಂಗ್ಲಾದೇಶ ವಿರುದ್ಧ ನಿಗದಿಯಾಗಿರುವ ತವರು ಸರಣಿಯ ಸಮಯದಲ್ಲಿ ಶಮಿ ಈ ವರ್ಷದ ಕೊನೆಯಲ್ಲಿ ಮೈದಾನಕ್ಕೆ ಮರಳುವ ನಿರೀಕ್ಷೆಯಿಲ್ಲ. ಅವರ ಅನುಪಸ್ಥಿತಿಯು ಮುಂಬರುವ ಟಿ 20 ವಿಶ್ವಕಪ್​​ಗೆ ಭಾರತೀಯ ಸಂಯೋಜನೆಗೆ ಖಂಡಿತವಾಗಿಯೂ ಹಾನಿ ಮಾಡುತ್ತದೆ. ಏಕೆಂದರೆ ಆಯ್ಕೆದಾರರು ವೇಗದ ಬೌಲಿಂಗ್ ಆಯ್ಕೆಗಳ ಕೊರತೆಯನ್ನು ಹೊಂದಿದ್ದಾರೆ.

ಜಸ್ಪ್ರೀತ್ ಬುಮ್ರಾ ಬೌಲಿಂಗ್ ದಾಳಿಯನ್ನು ಮುನ್ನಡೆಸುವ ನಿರೀಕ್ಷೆಯಿದ್ದರೆ, ಅವರ ಉಳಿದ ಪಡೆಗಳನ್ನು ಇನ್ನೂ ನಿರ್ಧರಿಸಲಾಗಿಲ್ಲ.

Continue Reading

ಕ್ರೀಡೆ

IPL 2024 : ಅಂಕಪಟ್ಟಿಯ ಅಗ್ರಸ್ಥಾನಿ ರಾಜಸ್ಥಾನ್​ಗೆ ಸವಾಲೊಡ್ಡುವುದೇ ಲಕ್ನೊ ಸೂಪರ್​ ಜೈಂಟ್ಸ್​​

IPL 2024: ರಾಜಸ್ಥಾನ್ ರಾಯಲ್ಸ್ ಅತ್ಯಂತ ವಿನಾಶಕಾರಿ ಬ್ಯಾಟಿಂಗ್ ಲೈನ್ಅಪ್ ಹೊಂದಿರುವುದರಿಂದ ಕೆಎಲ್ ರಾಹುಲ್​​ಗೆ ತಮ್ಮ ಬೌಲರ್​ಗಳಿಂದ ಬಲವಾದ ನೆರವು ಬೇಕಾಗಿದೆ. ರವಿ ಬಿಷ್ಣೋಯ್ ಮತ್ತು ಕೃಣಾಲ್ ಪಾಂಡ್ಯ ಪಿಚ್​ನ ನಿಧಾನಗತಿಯ ಸ್ವರೂಪವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಬೇಕು.

VISTARANEWS.COM


on

IPL 2024
Koo

ಲಖನೌ: ಇಂಡಿಯನ್ ಪ್ರೀಮಿಯರ್ ಲೀಗ್ 2024ರ (IPL 2024) 44 ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (Lacknow super Gaints) ಮತ್ತು ರಾಜಸ್ಥಾನ್ ರಾಯಲ್ಸ್ (Rajastan Royals) ತಂಡಗಳು ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಅತ್ಯುತ್ತಮ ಫಾರ್ಮ್ ನಲ್ಲಿದ್ದು, ಪಂದ್ಯವು ರೋಚಕ ಫಲಿತಾಂಶನೀ ಭರವಸೆ ನೀಡುತ್ತಿದೆ. ಸೂಪರ್ ಜೈಂಟ್ಸ್ ತನ್ನ ಹಿಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿತ್ತು. ಹೀಗಾಗಿ ಆತ್ಮವಿಶ್ವಾಸದಿಂದ ಸಾಗಲಿದೆ. ಮತ್ತೊಂದೆಡೆ, ರಾಜಸ್ಥಾನ್ ರಾಯಲ್ಸ್ ಆಡಿದ ಎಂಟು ಪಂದ್ಯಗಳಲ್ಲಿ ಏಳರಲ್ಲಿ ಗೆದ್ದಿದೆ ಮತ್ತು ಪ್ರಸ್ತುತ ಪಾಯಿಂಟ್ಸ್ ಟೇಬಲ್​ನಲ್ಲಿ ಅಗ್ರಸ್ಥಾನದಲ್ಲಿದೆ.

ರಾಜಸ್ಥಾನ್ ತಮ್ಮ ಖಾತೆಗೆ ಮತ್ತೊಂದು ಗೆಲುವನ್ನು ಸೇರಿಸುವ ಮೂಲಕ ಮುಂಚೂಣಿ ಸ್ಥಾನ ಉಳಿಸಿಕೊಳ್ಳಲು ನೋಡಲಿದೆ. ಈ ಋತುವಿನ ಆರಂಭದಲ್ಲಿ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿರುವ ರಾಯಲ್ಸ್ ಆತ್ಮವಿಶ್ವಾಸದಲ್ಲಿದೆ. ಆದಾಗ್ಯೂ, ಲಕ್ನೋ ತವರಿನ ಅನುಕೂಲ ಹೊಂದಿರುತ್ತದೆ ಮತ್ತು ಪಾಯಿಂಟ್ಸ್ ಟೇಬಲ್​ನಲ್ಲಿ ತಮ್ಮ ಶ್ರೇಯಾಂಕ ಸುಧಾರಿಸಲು ಪ್ರಯತ್ನಿಸುತ್ತದೆ. ಎರಡೂ ಶಿಬಿರಗಳಲ್ಲಿನ ಬ್ಯಾಟರ್​ಗಳು ಉತ್ತಮ ಫಾರ್ಮ್​ನಲ್ಲಿರುವುದರಿಂದ ಇಲ್ಲಿ ಏಕಪಕ್ಷೀಯ ಫಲಿತಾಂಶದ ನಿರೀಕ್ಷೆ ಕಡಿಮೆ.

ಕಳೆದ ಪಂದ್ಯದಲ್ಲಿ, ಲಕ್ನೊ ತಂಡವು ದೊಡ್ಡ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟುವಲ್ಲಿ ಯಶಸ್ವಿಯಾಯಿತು ಹಾಗೂ ಆರು ವಿಕೆಟ್​​ಗಳಿಂದ ಗೆದ್ದಿತು. ಬ್ಯಾಟಿಂಗ್ ಲೈನ್ಅಪ್ ಉತ್ತಮ ಸ್ಥಿತಿಯಲ್ಲಿರುವಂತೆ ತೋರುತ್ತಿದ್ದರೂ ರಾಜಸ್ಥಾನ್ ರಾಯಲ್ಸ್ ಅತ್ಯಂತ ವಿನಾಶಕಾರಿ ಬ್ಯಾಟಿಂಗ್ ಲೈನ್ಅಪ್ ಹೊಂದಿರುವುದರಿಂದ ಕೆಎಲ್ ರಾಹುಲ್​​ಗೆ ತಮ್ಮ ಬೌಲರ್​ಗಳಿಂದ ಬಲವಾದ ನೆರವು ಬೇಕಾಗಿದೆ. ರವಿ ಬಿಷ್ಣೋಯ್ ಮತ್ತು ಕೃಣಾಲ್ ಪಾಂಡ್ಯ ಪಿಚ್​ನ ನಿಧಾನಗತಿಯ ಸ್ವರೂಪವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಬೇಕು.

ಇದನ್ನೂ ಓದಿ: IPL 2024 : ಡೆಲ್ಲಿ ಕ್ಯಾಪಿಟಲ್ಸ್​ ತಂಡ ಸೇರಿದ ಅಫಘಾನಿಸ್ತಾನ ತಂಡದ ಆಟಗಾರ

ರಾಜಸ್ಥಾನ್​ ತಂಡ ಬ್ಯಾಟಿಂಗ್ ಪ್ರದರ್ಶನವು ಎದುರಾಳಿಗಳ ಮೇಲೆ ಪ್ರಾಬಲ್ಯ ಸಾಧಿಸಲು ಸಹಾಯ ಮಾಡಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಹಿಂದಿನ ಪಂದ್ಯವನ್ನು ಒಂಬತ್ತು ವಿಕೆಟ್​​ಗಳಿಂದ ಗೆದ್ದಿದ್ದ ಅವರು ಪ್ರಸ್ತುತ ಪಾಯಿಂಟ್ಸ್ ಟೇಬಲ್​​ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಮುಂದಿನ ಸುತ್ತಿಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಅವರಿಗೆ ಇನ್ನೂ ಒಂದು ಜಯದ ಅಗತ್ಯವಿದೆ. ಸ್ಯಾಮ್ಸನ್ ಬಳಗವು ತಮ್ಮ ಗೆಲುವಿನ ಓಟ ಮುಂದುವರಿಸಬಹುದು. ಮುಂಬರುವ ಪಂದ್ಯದಲ್ಲೂ ಅವರು ತಮ್ಮ ಎದುರಾಳಿಗಳನ್ನು ಸೋಲಿಸುವ ಗುರಿ ಹೊಂದಿದ್ದಾರೆ.

ಎಕಾನಾ ಕ್ರಿಕೆಟ್ ಕ್ರೀಡಾಂಗಣ ಪಿಚ್ ವರದಿ

ತಮ್ಮ ಉತ್ತಮ ಸ್ಟ್ರೋಕ್​ಗಳನ್ನು ಆಯ್ಕೆ ಮಾಡುವ ಬ್ಯಾಟ್ಸ್ ಮನ್ ಗಳಿಗೆ ಪಿಚ್​ ಸೂಕ್ತವಾಗಿದೆ. ವಿಕೆಟ್ ಬ್ಯಾಟಿಂಗ್​ ಆರಂಭಕ್ಕೆ ಪ್ರಾರಂಭಿಸಲು ಕಠಿಣವಾಗಿರಬಹುದು. ಆದರೆ ಆಟವು ಮುಂದುವರಿದಂತೆ ಬ್ಯಾಟಿಂಗ್ ಪರಿಸ್ಥಿತಿಗಳು ಸುಧಾರಿಸುತ್ತವೆ. ಕೆಲವೊಮ್ಮೆ, ಚೆಂಡು ಬ್ಯಾಟರ್​ಗಳ ನಿರೀಕ್ಷೆಗಿಂತ ವೇಗದಲ್ಲಿ ಪುಟಿದೇಳುತ್ತದೆ. ಸ್ಪಿನ್ನರ್​ಗಳು ಈ ಸ್ಥಳದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ನೇರ ಬೌಂಡರಿಗಳು ದೂರವಿರುವುದರಿಂದ, ಬ್ಯಾಟರ್​ಗಳು ತಮ್ಮ ಶಾಟ್​​ಗಳನ್ನು ಸರಿಯಾಗಿ ನಿರ್ಧರಿಬೇಕಾಗುತ್ತದೆ. ಲಕ್ನೋದಲ್ಲಿ ಮಳೆ ಸೂಚನೆ ಇಲ್ಲ. ಇದು ಸಂಪೂರ್ಣ ಮತ್ತು ನ್ಯಾಯಯುತ ಸ್ಪರ್ಧೆಗೆ ಪರಿಸ್ಥಿತಿಗಳನ್ನು ಸೂಕ್ತವಾಗಿಸುತ್ತದೆ.

ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ಲಕ್ನೋ ಸೂಪರ್ ಜೈಂಟ್ಸ್: ಕ್ವಿಂಟನ್ ಡಿ ಕಾಕ್, ಕೆಎಲ್ ರಾಹುಲ್ (ನಾಯಕ/ ವಿಕೆಟ್ ಕೀಪರ್), ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ನಿಕೋಲಸ್ ಪೂರನ್, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ಮ್ಯಾಟ್ ಹೆನ್ರಿ, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಯಶ್ ಠಾಕೂರ್.

ರಾಜಸ್ಥಾನ್ ರಾಯಲ್ಸ್ : ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ/ ವಿಕೆಟ್ ಕೀಪರ್), ರಿಯಾನ್ ಪರಾಗ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಶಿಮ್ರಾನ್ ಹೆಟ್ಮೇಯರ್, ರೋವ್ಮನ್ ಪೊವೆಲ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಯಜುವೇಂದ್ರ ಚಾಹಲ್.

ಮುಖಾಮುಖಿ ದಾಖಲೆಗಳು

ಆಡಿದ ಪಂದ್ಯಗಳು- 4

  • ಲಕ್ನೋ ಸೂಪರ್ ಜೈಂಟ್ಸ್ ಗೆ ಜಯ- 1
  • ರಾಜಸ್ಥಾನ್ ರಾಯಲ್ಸ್ ಗೆಲುವು- 3

ಪಂದ್ಯದ ವಿವರ

  • ದಿನಾಂಕ ಶನಿವಾರ, ಏಪ್ರಿಲ್ 27, ಪಂದ್ಯ 44
  • ಸಮಯ: ಸಂಜೆ 7:30
  • ಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್ ವಿವರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್, ಜಿಯೋ ಸಿನೆಮಾ ಅಪ್ಲಿಕೇಶನ್ ಮತ್ತು ವೆಬ್​ಸೈಟ್​
Continue Reading

ಕ್ರೀಡೆ

Rinku Singh : ಹಠ ಹಿಡಿದು ಕೊಹ್ಲಿಯಿಂದ ಮತ್ತೊಂದು ಬ್ಯಾಟ್ ಪಡೆದುಕೊಂಡ ರಿಂಕು ಸಿಂಗ್​​

Rinku Singh: ಏಪ್ರಿಲ್ 21ರಂದು ರಿವರ್ಸ್ ಪಂದ್ಯಕ್ಕೆ ಮುಂಚಿತವಾಗಿ ರಿಂಕು ಅವರು ಕೊಹ್ಲಿ ಕೊಟ್ಟಿರುವ ಬ್ಯಾಟ್ ಮುರಿದು ಹೋಯಿತು ಎಂದು ಬಹಿರಂಗಪಡಿಸಿದ್ದರು. ಅವರು ಆರ್​ಸಿಬಿಯ ಸ್ಟಾರ್ ಆಟಗಾರನ ಬಳಿ ಮತ್ತೊಂದು ಬ್ಯಾಟ್​​ ಕಳುಹಿಸುವಂತೆ ವಿನಯದಿಂದ ಕೇಳಿದ್ದರು.

VISTARANEWS.COM


on

Rinku Singh
Koo

ಬೆಂಗಳೂರು: ಕೋಲ್ಕತಾ ನೈಟ್ ರೈಡರ್ಸ್ (KKR) ತಂಡದ ಸ್ಟಾರ್ ಬ್ಯಾಟರ್​ ರಿಂಕು ಸಿಂಗ್ (Rinku Singh) ಅಂತಿಮವಾಗಿ ವಿರಾಟ್ ಕೊಹ್ಲಿಯಿಂದ ಎರಡನೇ ಬಾರಿಗೆ ಬ್ಯಾಟ್ ಪಡೆದುಕೊಂಡಿದ್ದಾರೆ. ಮಾರ್ಚ್ 29 ರಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಐಪಿಎಲ್ 2024 (IPL 2024) ಋತುವಿನಲ್ಲಿ ಕೆಕೆಆರ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪಂದ್ಯದ ನಂತರ ರಿಂಕುಕೊಹ್ಲಿ ಯಿಂದ ಪ್ರೀತಿಯ ಸಂಕೇತವಾಗಿ ಅವರಿಗೆ ಬ್ಯಾಟ್ ಪಡೆದುಕೊಂಡಿದ್ದರು.

ಏಪ್ರಿಲ್ 21ರಂದು ರಿವರ್ಸ್ ಪಂದ್ಯಕ್ಕೆ ಮುಂಚಿತವಾಗಿ ರಿಂಕು ಅವರು ಕೊಹ್ಲಿ ಕೊಟ್ಟಿರುವ ಬ್ಯಾಟ್ ಮುರಿದು ಹೋಯಿತು ಎಂದು ಬಹಿರಂಗಪಡಿಸಿದ್ದರು. ಅವರು ಆರ್​ಸಿಬಿಯ ಸ್ಟಾರ್ ಆಟಗಾರನ ಬಳಿ ಮತ್ತೊಂದು ಬ್ಯಾಟ್​​ ಕಳುಹಿಸುವಂತೆ ವಿನಯದಿಂದ ಕೇಳಿದ್ದರು.

ಕೆಕೆಆರ್ ಇತ್ತೀಚೆಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ರಿಂಕು ಕೊಹ್ಲಿ ಉಡುಗೊರೆಯಾಗಿ ನೀಡಿದ ಮತ್ತೊಂದು ಬ್ಯಾಟ್ ಅನ್ನು ಹಿಡಿದಿರುವುದು ಕಂಡುಬಂದಿದೆ. ‘ರಿಂಕು ಭಾಯ್, ಬ್ಯಾಟ್ ಮಿಲಾ?’ ಎಂದು ಅಭಿಮಾನಿಯೊಬ್ಬರು ರಿಂಕು ಅವರನ್ನು ಕೇಳಿದ್ದಾರೆ. ರಿಂಕು ಬ್ಯಾಟ್ ತೋರಿಸಿ ‘ಮಿಲ್ ಗಯಾ’ ಎಂದು ಹೇಳಿದ್ದಾರೆ.

ಕೆಕೆಆರ್​ ತಂಡದ ಭರ್ಜರಿ ಅಭಿಯಾನ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಗಮನಾರ್ಹ ಪ್ರದರ್ಶನ ನೀಡುತ್ತಿದೆ. ರಾಜಸ್ಥಾನ್ ರಾಯಲ್ಸ್ ಆಡಿರುವ 7 ಪಂದ್ಯಗಳಲ್ಲಿ 10ರಲ್ಲಿ ಗೆಲುವು ಸಾಧಿಸಿರುವ ಭಾರತ, ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಈ ಋತುವಿನಲ್ಲಿ ಕೆಕೆಆರ್ ಮತ್ತು ಆರ್​​ಸಿಬಿ ಎರಡು ಬಾರಿ ಮುಖಾಮುಖಿಯಾದಾಗ ಎರಡು ಬಾರಿಯ ಚಾಂಪಿಯನ್ಸ್ ಎರಡೂ ಸಂದರ್ಭಗಳಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದರು.

ಇದನ್ನೂ ಓದಿ: IPL 2024 : ಡೆಲ್ಲಿ ಕ್ಯಾಪಿಟಲ್ಸ್​ ತಂಡ ಸೇರಿದ ಅಫಘಾನಿಸ್ತಾನ ತಂಡದ ಆಟಗಾರ

ಆರ್​ಸಿಬಿ ನಿರಾಶಾದಾಯಕ ಅಭಿಯಾನ ಮುಂದುವರಿಸಿದೆ. ಆದಾಗ್ಯೂ ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡವು ಪ್ರಸ್ತುತ 9 ಪಂದ್ಯಗಳಲ್ಲಿ 2 ಜಯಗಳೊಂದಿಗೆ ಹತ್ತು ತಂಡಗಳ ಪಾಯಿಂಟ್ಸ್ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿದೆ. ಹೈದರಾಬಾದ್​​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್ರೈಸರ್ಸ್ ಹೈದರಾಬಾದ್ ಗೆದ್ದು ಸ್ವಲ್ಯ ಚೈತನ್ಯ ಪಡೆದುಕೊಂಡಿದೆ.

ಕೋಲ್ಕತಾದ ಈಡನ್ ಗಾರ್ಡನ್ಸ್​​ನಲ್ಲಿ ಈ ಋತುವಿನಲ್ಲಿ ಕೆಕೆಆರ್ ಮತ್ತು ಆರ್​ಸಿಬಿ ಎರಡನೇ ಬಾರಿಗೆ ಮುಖಾಮುಖಿಯಾದಾಗ ಅದು ರೋಚಕ ಮುಖಾಮುಖಿಯಾಗಿತ್ತು. ಫಿಲ್ ಸಾಲ್ಟ್ ಅವರ 48 ಮತ್ತು ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ ನೆರವಿನಿಂದ ಕೆಕೆಆರ್ ಮೊದಲ ಇನ್ನಿಂಗ್ಸ್ ನಲ್ಲಿ 223 ರನ್ ಗಳ ಕಠಿಣ ಗುರಿಯನ್ನು ನಿಗದಿಪಡಿಸಿತು. ಆರ್​ಸಿಬಿ ಬ್ಯಾಟರ್​ಗಳ ದಿಟ್ಟ ಪ್ರಯತ್ನದ ಹೊರತಾಗಿಯೂ ಒಂದು ರನ್​ನಿಂದ ಬೆಂಗಳೂರು ಮೂಲದ ತಂಡ ಸೋತಿತು.

Continue Reading
Advertisement
Bike Accident
ಕರ್ನಾಟಕ13 mins ago

Bike Accident: ಮತದಾನ ಮಾಡಿ ತೆರಳುತ್ತಿದ್ದ ವೇಳೆ ಬೈಕ್‌ ಅಪಘಾತ; ಸ್ಥಳದಲ್ಲೇ ಇಬ್ಬರ ದುರ್ಮರಣ

lok sabha election
Lok Sabha Election 202417 mins ago

Lok Sabha Election : ಲೊಕಸಭಾ ಚುನಾವಣೆಯ ಎರಡನೇ ಹಂತದ 88 ಕ್ಷೇತ್ರಗಳಲ್ಲಿ ಶೇ 60.96 ಮತದಾನ

Hassan News
ಕರ್ನಾಟಕ38 mins ago

Hassan News: ಎರಡು ಗುಂಪುಗಳ ನಡುವೆ ಮಾರಾಮಾರಿ; ಕೈ ಕಾರ್ಯಕರ್ತನಿಗೆ ಗಂಭೀರ ಗಾಯ

Pandya brothers
ಕ್ರೀಡೆ57 mins ago

Pandya Brothers : ಪಾಂಡ್ಯ ಸಹೋದರರ ಮನೆಗೆ ಹೊಸ ಅತಿಥಿ ಆಗಮನ, ಖುಷಿಯಲ್ಲಿ ಕುಟುಂಬ

ಕರ್ನಾಟಕ1 hour ago

Lok Sabha Election 2024: ಕರ್ನಾಟಕದಲ್ಲಿ ದಾಖಲೆಯ ಮತದಾನ; ಕಳೆದ ಬಾರಿಗಿಂತ ಏರಿಕೆ, ಮಂಡ್ಯದಲ್ಲಿ ಅತಿ ಹೆಚ್ಚು!

Mohammad Shami
ಪ್ರಮುಖ ಸುದ್ದಿ2 hours ago

Mohammad Shami : ಸರ್ಜರಿ ಗಾಯದ ನಡುವೆಯೂ ಮತದಾನ ಮಾಡಿದ ಮೊಹಮ್ಮದ್​ ಶಮಿ

Narendra modi
ಪ್ರಮುಖ ಸುದ್ದಿ2 hours ago

Lok Sabha Election : ಎನ್​ಡಿಎಗೆ ಶುಭ ಶಕುನ : 2ನೇ ಹಂತದ ಮತದಾನದ ಬಳಿಕ ಪ್ರಧಾನಿ ಮೋದಿ ಹೀಗಿತ್ತು

Udupi Sri Krishna Temple
ಕರ್ನಾಟಕ3 hours ago

Udupi Sri Krishna Temple: ಮತದಾನದ ದಿನ ಕಮಲಾರೂಢನಾದ ಉಡುಪಿ ಕೃಷ್ಣ! ಇಲ್ಲಿದೆ ಫೋಟೊ ಝಲಕ್‌

IPL 2024
ಕ್ರೀಡೆ3 hours ago

IPL 2024 : ಅಂಕಪಟ್ಟಿಯ ಅಗ್ರಸ್ಥಾನಿ ರಾಜಸ್ಥಾನ್​ಗೆ ಸವಾಲೊಡ್ಡುವುದೇ ಲಕ್ನೊ ಸೂಪರ್​ ಜೈಂಟ್ಸ್​​

Lok Sabha Election 2024 2 villagers who boycotted voting cast their votes in evening
ಕರ್ನಾಟಕ3 hours ago

Lok Sabha Election 2024: ಮತದಾನ ಬಹಿಷ್ಕರಿಸಿದ್ದ 2 ಗ್ರಾಮದ ಜನ, ಸಂಜೆಗೆ ಮನವೊಲಿಕೆ; 7 ಗಂಟೆ ದಾಟಿದರೂ ಮುಗಿಯದ ಮತದಾನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ11 hours ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 202412 hours ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 202412 hours ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ18 hours ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ1 day ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ1 day ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ1 day ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20242 days ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ3 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

ಟ್ರೆಂಡಿಂಗ್‌