IND vs ENG 4th Test: ರಾಂಚಿಯಲ್ಲಿ ಈಡೇರಿತೇ ಜುರೇಲ್ ಕನಸು? - Vistara News

ಕ್ರೀಡೆ

IND vs ENG 4th Test: ರಾಂಚಿಯಲ್ಲಿ ಈಡೇರಿತೇ ಜುರೇಲ್ ಕನಸು?

ಧೋನಿಯ ಅಪ್ಪಟ ಅಭಿಮಾನಿಯಾಗಿರುವ ಮತ್ತು ಅವರಂತೆ ಕ್ರಿಕೆಟ್​ನಲ್ಲಿ ಸಾಧನೆ ಮಾಡುವ ಗುರಿ ಹೊಂದಿರುವ ಜುರೇಲ್ ಅವರು​​ ಧೋನಿಯನ್ನು ಭೇಟಿಯಾಗುವ ನಿರೀಕ್ಷೆಯಲ್ಲಿದ್ದಾರೆ.

VISTARANEWS.COM


on

Dhruv Jurel
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಂಚಿ: ಇಂಗ್ಲೆಂಡ್​ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯದಲ್ಲಿ ಆಡುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಭಾರತ ತಂಡದ ಯುವ ವಿಕೆಟ್‌ ಕೀಪರ್ ಧ್ರುವ ಜುರೇಲ್(Dhruv Jurel) ನಾಲ್ಕನೇ ಪಂದ್ಯಕ್ಕೂ(IND vs ENG 4th Test) ಮುನ್ನ ಅಪಾರ ಉತ್ಸಾಹದಲ್ಲಿದ್ದಾರೆ. ಇದಕ್ಕೆ ಕಾರಣ ಈ ಪಂದ್ಯ ನಡೆಯುತ್ತಿರುವುದು ಧೋನಿಯ(MS Dhoni) ತವರಾದ ರಾಂಚಿಯಲ್ಲಿ(Ranchi).

ಧೋನಿಯ ಅಪ್ಪಟ ಅಭಿಮಾನಿಯಾಗಿರುವ ಮತ್ತು ಅವರಂತೆ ಕ್ರಿಕೆಟ್​ನಲ್ಲಿ ಸಾಧನೆ ಮಾಡುವ ಗುರಿ ಹೊಂದಿರುವ ಜುರೇಲ್ ಅವರು​​ ಧೋನಿಯನ್ನು ಭೇಟಿಯಾಗುವ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಬಿಸಿಸಿಐ ಡಾಟ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಮನ ಬಿಚ್ಚಿ ಮಾತನಾಡಿದ್ದಾರೆ.

‘ಮಹಿ ಭಾಯ್ ಅವರನ್ನು ಭೇಟಿಯಾಗುವುದು ನನ್ನ ಬಹುದಿನಗಳ ಕನಸಾಗಿತ್ತು. ಐಪಿಎಲ್ ಸಂದರ್ಭದಲ್ಲಿ ಒಂದು ಬಾರಿ ಭೇಟಿಯಾಗಿದ್ದೆ. ಇದಾದ ಬಳಿಕ ಅವರನ್ನು ಭೇಟಿ ಮಾಡಿಲ್ಲ. ಅಂದು ಅವರು ನೀಡಿದ ಸಲಹೆಯಿಂದ ನಾನು ಟೀಮ್​ ಇಂಡಿಯಾ ಪರ ಆಡುವಂತಾಗಿದ್ದೇನೆ. ಇದೀಗ ಟೀಮ್​ ಇಂಡಿಯಾ ಜೆರ್ಸಿಯಲ್ಲಿ ಅವರನ್ನು ಭೇಟಿಯಾಗುವ ಆಸೆಯನ್ನು ಹೋಂದಿದ್ದೇನೆ. ಅವರಿಂದ ಮತ್ತಷ್ಟು ಕಲಿಯುವ ಆಸೆ ಇದೆ’ ಎಂದು ಜುರೇಲ್ ಹೇಳಿದ್ದಾರೆ.

‘ಐಪಿಎಲ್ ಪಂದ್ಯದ ಸಂದರ್ಭದಲ್ಲಿ ಧೋನಿ ಅವರಲ್ಲಿ ಮೊದಲ ಬಾರಿ ಮಾತನಾಡಿದ್ದೆ. ಅದು ನನ್ನ ಕನಸು ನನಸಾದ ಕ್ಷಣವಾಗಿತ್ತು. ಧೋನಿಯ ಮುಂದೆ ನಿಂತು ನಾನು ಮಾತನಾಡುತ್ತಿರುವೆ ಎಂಬುದನ್ನೇ ನಂಬಲಾಗಿರಲಿಲ್ಲ. ಅವರೊಂದಿಗೆ ಫೋಟೊ ತೆಗೆಸಿಕೊಂಡಿದ್ದೆ. ಏಕಾಗ್ರತೆಯಿಂದ ಕ್ರಿಕೆಟ್​ ಆಡು ಎಂದಷ್ಟೇ ಆ ಸಂದರ್ಭದಲ್ಲಿ ಧೋನಿ ಸಲಹೆ ಕೊಟ್ಟಿದ್ದರು’ ಎಂದು ಜುರೇಲ್ ನೆನಪಿಸಿಕೊಂಡರು.

ಇದನ್ನೂ ಓದಿ IND vs ENG 4th Test: ರಾಂಚಿಯಲ್ಲಿ ಭಾರತದ ಟೆಸ್ಟ್​ ದಾಖಲೆ ಹೇಗಿದೆ?

ಜುರೇಲ್ ಅವರು ಪದಾರ್ಪಣ ಪಂದ್ಯದಲ್ಲಿ ಮೊದಲ ಇನಿಂಗ್ಸ್​ನಲ್ಲಿ ಬ್ಯಾಟಿಂಗ್ ನಡೆಸಿ 46 ರನ್ ಗಳಿಸಿದ್ದರು. ವಿಕೆಟ್​ ಕೀಪಿಂಗ್​ನಲ್ಲಿಯೂ ಗಮನಸೆಳೆದು ಧೋನಿಯ ಶೈಲಿಯಲ್ಲೇ ಬೆನ್ ಡಕೆಟ್​ ಅವರುನ್ನು ಕ್ಷಣ ಮಾತ್ರದಲ್ಲಿ ರನೌಟ್​ ಮಾಡಿದ್ದರು. ಜುರೇಲ್​ ಅವರ ಬ್ಯಾಟಿಂಗ್​ ಶೈಲಿಯನ್ನು ಗಮನಿಸುವಾಗ ವಿರಾಟ್​ ಕೊಹ್ಲಿಯ ಬ್ಯಾಟಿಂಗ್​ ಕಣ್ಣ ಮುಂದೆ ಬರುತ್ತದೆ. ಕೊಹ್ಲಿ ಯಾವ ರೀತಿ ಡಿಫೆನ್ಸ್​, ಮತ್ತು ಕವರ್​ ಡ್ರೈವ್​ ಹೊಡೆಯುತ್ತಾರೋ ಅದೇ ರೀತಿಯಲ್ಲಿ ಜುರೇಲ್​ ಬ್ಯಾಟಿಂಗ್​ ನಡೆಸುತ್ತಿದ್ದಾರೆ.

ಕೇವಲ ಜುರೇಲ್​ ಮಾತ್ರವಲ್ಲಿ ಶುಭಮನ್​ ಗಿಲ್ ಕೂಡಾ ಧೋನಿಯನ್ನು ಭೇಟಿ ಮಾಡುವ ಬಯಕೆ ವ್ಯಕ್ತಪಡಿಸಿದ್ದಾರೆ. ‘ರಾಂಚಿಗೆ ಬಂದಾಗಲೆಲ್ಲಾ ಧೋನಿ ನೆನಪು ಕಾಡುತ್ತದೆ. ನಾವು ಧೋನಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ’ ಎಂದು ಹೇಳಿದ್ದಾರೆ. ಈ ಹಿಂದೆ ಭಾರತ ತಂಡ ರಾಂಚಿಯಲ್ಲಿ ಕ್ರಿಕೆಟ್​ ಆಡಲು ಬಂದಾಗ ಧೋನಿ ಅಚ್ಚರಿ ಎಂಬಂತೆ ಡ್ರೆಸ್ಸಿಂಗ್​ ರೂಮ್​ಗೆ ಭೇಟಿ ನೀಡಿ ಆಟಗಾರರನ್ನು ಮಾತನಾಡಿಸಿದ್ದರು. ಈ ಬಾರಿಯೂ ಧೋನಿ ಭೇಟಿ ನೀಡಿ ಜುರೇಲ್​ ಆಸೆಯನ್ನು ತೀರಿಸಿಯಾರೇ ಎನ್ನುವುದನ್ನು ಕಾದು ನೋಡಬೇಕಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IPL 2024 : ಮಳೆಯಿಂದ ಪಂದ್ಯ ರದ್ದು, ಕೆಕೆಆರ್​, ಆರ್​ಆರ್​ ಬಳಿಕ ಪ್ಲೇಆಫ್​ಗೇರಿದ ಎಸ್​ಆರ್​ಎಚ್​​

VISTARANEWS.COM


on

IPL 2024
Koo

ಹೈದರಾಬಾದ್​​: ಇಲ್ಲಿ ಗುರುವಾರ ನಿಗದಿಯಾಗಿದ್ದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಸನ್​ರೈಸರ್ಸ್​​ ಹೈದರಾಬಾದ್​ (Sunrisers Hyderabad) ತಂಡ ಬೆವರು ಸುರಿಸದೇ 2024ನೇ ಆವೃತ್ತಿಯ (IPL 2024) ಐಪಿಎಲ್​ನ ಪ್ಲೇಆಫ್​​ಗೆ ಪ್ರವೇಶಿಸಿತು. ಕೋಲ್ಕತಾ ಮತ್ತು ರಾಜಸ್ಥಾನದ ನಂತರ ಐಪಿಎಲ್ 2024 ರ ಪ್ಲೇಆಫ್​​ಗೆ ಅರ್ಹತೆ ಪಡೆದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಎಸ್​ಆರ್​ಎಚ್​ ಪಾತ್ರವಾಯಿತು. ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ (ಮೇ 16) ಗುಜರಾತ್ ವಿರುದ್ಧ ಸೆಣಸಬೇಕಾಗಿತ್ತು. ಆದರೆ ಪಂದ್ಯ ಟಾಸ್​ ಕೂಡ ಕಾಣದೆ ಮಳೆಯಿಂದಾಗಿ ರದ್ದಾಯಿತು. ಹೀಗಾಗಿ 2016ರ ಚಾಂಪಿಯನ್ಸ್ ತಂಡ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವುದನ್ನು ಖಚಿತಪಡಿಸಿಕೊಂಡಿತು.

2020ರ ಬಳಿಕ ಇದೇ ಮೊದಲ ಬಾರಿಗೆ ಸನ್ರೈಸರ್ಸ್ ಪ್ಲೇ ಆಫ್ ಹಂತ ತಲುಪಿದೆ. ಮಾಜಿ ಚಾಂಪಿಯನ್​ಗಳು ​2021, 2022 ಮತ್ತು 2023 ರಲ್ಲಿ ಕ್ರಮವಾಗಿ 8, 8 ಮತ್ತು 10 ನೇ ಸ್ಥಾನಗಳನ್ನು ಪಡೆದುಕೊಂಡಿದ್ದರು. ವಿಶ್ವ ಟೆಸ್ಟ್ ಚಾಂಪಿಯನ್​ ​ಷಿಪ್​​ ಮತ್ತು ಏಕದಿನ ವಿಶ್ವಕಪ್ ಗೆಲುವಿನ ನಂತರ ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿರುವ ನಾಯಕ ಪ್ಯಾಟ್ ಕಮಿನ್ಸ್, ಐಪಿಎಲ್ 2024 ರಲ್ಲಿ ನಿರ್ಭೀತ ಬ್ರಾಂಡ್ ಕ್ರಿಕೆಟ್ ಆಡುತ್ತಿದ್ದಾರೆ.

ಪಂದ್ಯಕ್ಕೆ ಮುಂಚಿತವಾಗಿ ನಿರಂತರವಾಗಿ ಮಳೆ ಸುರಿಯಿತು. 10 ಗಂಟೆ ದಾಟಿದರೂ ಪಿಚ್​ನಿಂದ ಟಾರ್ಪಾಲ್​ ತೆಗೆಯಲು ಸಾಧ್ಯವಾಗಲಿಲ್ಲ. ನಾಯಕರಾದ ಪ್ಯಾಟ್ ಕಮಿನ್ಸ್ ಮತ್ತು ಶುಬ್ಮನ್ ಗಿಲ್ ಪಿಚ್ ಅನ್ನು ಅನೇಕ ಬಾರಿ ಪರಿಶೀಲನೆ ನಡೆಸಿದರು. ಆದರೆ ಅವರು ತಮ್ಮ ತರಬೇತಿ ಕಿಟ್​​ ಧರಿಸಿದರೇ ಹೊರತು ಮ್ಯಾಚ್​ ಕಿಟ್​ ಧರಿಸಲಿಲ್ಲ. . ಮಳೆಯ ಹೊರತಾಗಿಯೂ, ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ತವರು ತಂಡವನ್ನು ಹುರಿದುಂಬಿಸಲು ದೊಡ್ಡ ಪ್ರಮಾಣದ ಪ್ರೇಕ್ಷಕರು ಇದ್ದರು. ಎಸ್ಆರ್​ಎಚ್​ ಪ್ಲೇಆಫ್​ ಪ್ರವೇಶಿಸುತ್ತಿದ್ದಂತೆ ಅಭಿಮಾನಿಗಳಿಗಾಗಿ ಲಘು ಪ್ರದರ್ಶನ ಮತ್ತು ಸಂಗೀತ ಆಯೋಜಿಸಲಾಗಿತ್ತು.

ಇದನ್ನೂ ಓದಿ: IPL 2024 : ವಾಂಖೆಡೆ ಸ್ಟೇಡಿಯಮ್​ನಲ್ಲಿ ಗುದ್ದಾಡಿಕೊಂಡ ಮುಂಬೈ ಇಂಡಿಯನ್ಸ್ ಆಟಗಾರರು; ಇಲ್ಲಿದೆ ವಿಡಿಯೊ

ಹೈದರಾಬಾದ್​​ನ ನಡೆದ ಪಂದ್ಯದಲ್ಲಿ ಒಂದು ಅಂಕ ಗಳಿಸುವ ಮೂಲಕ ಸನ್​ರೈಸರ್ಸ್​ ಹೈದರಾಬಾದ್​​ 13 ಪಂದ್ಯಗಳಿಂದ 15 ಅಂಕಗಳನ್ನು ಗಳಿಸಿದೆ. ಮೇ 19ರಂದು ಪಂಜಾಬ್ ವಿರುದ್ಧ ತವರಿನಲ್ಲಿ ಸೆಣಸಲಿರುವ ಪ್ಯಾಟ್ ಕಮಿನ್ಸ್ ಪಡೆಗೆ ಅಗ್ರ ಎರಡು ಸ್ಥಾನಗಳನ್ನು ಗಳಿಸುವ ಅವಕಾಶವಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೆಕೆಆರ್ ವಿರುದ್ಧ ಕ್ವಾಲಿಫೈಯರ್ 1ರಲ್ಲಿ ಆಡುವ ಅವಕಾಶ ಸಿಗಲಿದೆ. . ಎಸ್​ಆರ್​​ಎಚ್​​ ಅರ್ಹತೆಯು ದೆಹಲಿ ಮತ್ತು ಲಕ್ನೋದ ಪ್ಲೇಆಫ್ ಭರವಸೆಗಳನ್ನು ಕೊನೆಗೊಳಿಸಿತು. ಶನಿವಾರ ಬೆಂಗಳೂರಿನಲ್ಲಿ ಆರ್​​ಸಿಬಿ ಮತ್ತು ಸಿಎಸ್​ಕೆ ನಡುವಿನ ಬಹುನಿರೀಕ್ಷಿತ ಪಂದ್ಯದ ಕಿಚ್ಚನ್ನು ಹೆಚ್ಚಿಸಿತು.

ಗುಜರಾತ್ ಗೆ ನಿರಾಶಾದಾಯಕ ಅಭಿಯಾನ

ಮಳೆಯಿಂದಾಗಿ ಕೊನೆಯ ಎರಡು ಪಂದ್ಯಗಳನ್ನು ರದ್ದುಗೊಳಿಸಿದ ನಂತರ ಗುಜರಾತ್ ತನ್ನ ಋತುವನ್ನು ಕೊನೆಯ ನಾಲ್ಕರಲ್ಲಿ ಕೊನೆಗೊಳಿಸಬೇಕಾಯಿತು. ಅಹ್ಮದಾಬಾದ್​ನಲ್ಲಿ ಕೆಕೆಆರ್ ವಿರುದ್ಧ ಜಿಟಿಯ ಕೊನೆಯ ತವರು ಪಂದ್ಯವೂ ಕೆಟ್ಟ ಹವಾಮಾನದಿಂದಾಗಿ ರದ್ದಾಗಿತ್ತು. 2022 ರಲ್ಲಿ ಪ್ರಶಸ್ತಿ ಗೆದ್ದ ಮತ್ತು 2022 ರಲ್ಲಿ ರನ್ನರ್ ಅಪ್ ಸ್ಥಾನ ಪಡೆದ ಗುಜರಾತ್​ಗೆ ಇದು ನಿರಾಶಾದಾಯಕ ಅಭಿಯಾನ. ಏಕೆಂದರೆ ಹೊಸ ನಾಯಕ ಶುಭ್ಮನ್ ಗಿಲ್ ಅವರ ಅಡಿಯಲ್ಲಿ ತಂಡವು ಪ್ರತಿಭೆಯ ಕಿಡಿಗಳನ್ನು ಹೊಂದಿದ್ದರೂ ಉತ್ತಮ ಪ್ರದರ್ಶನ ನೀಡಲು ವಿಫಲಗೊಂಡಿತು.

ಸನ್ರೈಸರ್ಸ್ ತನ್ನ ಕೊನೆಯ ಲೀಗ್ ಪಂದ್ಯವನ್ನು ಗೆದ್ದು ಎರಡನೇ ಸ್ಥಾನಕ್ಕೆ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿದೆ. ನಾಲ್ಕು ಪಂದ್ಯಗಳ ಸೋಲಿನ ಹಾದಿಯಲ್ಲಿರುವ ರಾಜಸ್ಥಾನ್ ಭಾನುವಾರ ಗುವಾಹಟಿಯಲ್ಲಿ ಕೆಕೆಆರ್ ವಿರುದ್ಧ ತನ್ನ ಕೊನೆಯ ಪಂದ್ಯವನ್ನು ಕಳೆದುಕೊಳ್ಳಲಿ ಎಂದು ಅವರು ಪ್ರಾರ್ಥಿಸಬೇಕಾಗಿದೆ. ರಾಜಸ್ಥಾನ್ ತನ್ನ ಕೊನೆಯ ಲೀಗ್ ಪಂದ್ಯವನ್ನು ಗೆದ್ದರೆ, ಆ ತಂಡ ಎರಡನೇ ಸ್ಥಾನ ಪಡೆಯುತ್ತದೆ.

Continue Reading

ಪ್ರಮುಖ ಸುದ್ದಿ

IPL 2024 : ವಾಂಖೆಡೆ ಸ್ಟೇಡಿಯಮ್​ನಲ್ಲಿ ಗುದ್ದಾಡಿಕೊಂಡ ಮುಂಬೈ ಇಂಡಿಯನ್ಸ್ ಆಟಗಾರರು; ಇಲ್ಲಿದೆ ವಿಡಿಯೊ

IPL 2024 : ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ, ಇಶಾನ್ ಮತ್ತು ಡೇವಿಡ್ ಸ್ನೇಹಪರ ಕುಸ್ತಿ ಪ್ರದರ್ಶನದೊಂದಿಗೆ ತಮ್ಮ ತರಬೇತಿ ಸಮಯವನ್ನು ಸವಿಯುತ್ತಿರುವುದನ್ನು ಕಾಣಬಹುದು. ಕ್ರಿಕೆಟ್​ ನ ಅತ್ಯಂತ ರೋಚಕ ಸ್ಟೇಡಿಯಮ್​ ವಾಂಖೆಡೆ ಸ್ವಲ್ಪ ಸಮಯದವರೆಗೆ ಡಬ್ಲ್ಯುಡಬ್ಲ್ಯುಇ ರಿಂಗ್ ಆಗಿ ಮಾರ್ಪಟ್ಟಿತು.

VISTARANEWS.COM


on

IPL 2024
Koo

ಬೆಂಗಳೂರು: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ 2024ರ (IPL 2024 ) ಪಂದ್ಯಕ್ಕಾಗಿ ಅಭ್ಯಾಸ ನಡೆಸುತ್ತಿರುವ ಮುಂಬೈ ಇಂಡಿಯನ್ಸ್​ ತಂಡದ ಆಟಗಾರರಾದ ಟಿಮ್ ಡೇವಿಡ್ (Tim David) ಹಾಗೂ ಇಶಾನ್ ಕಿಶನ್ (Ishan Kishan)​ ತಮಾಷೆಗೆ ಕುಸ್ತಿಯಾಡಿದ ವಿಡಿಯೊಗಳು ವೈರಲ್ ಆಗಿವೆ. ಗ್ರೂಪ್ ಹಂತದ ತಮ್ಮ ಕೊನೇ ಪಂದ್ಯಕ್ಕೆ ಮೊದಲು ಮುಂಬೈ ಇಂಡಿಯನ್ಸ್ ಬ್ಯಾಟರ್​ಗಳು ಅಭ್ಯಾಸ ನಡೆಸುತ್ತಿದ್ದಾರೆ. ಈ ವೇಳೆ ಅವರು ತಮಾಷೆಗೆ ಕುಸ್ತಿಯಾಡಿದ್ದಾರೆ. ಅದಕ್ಕೆ ಕೀರನ್ ಪೊಲಾರ್ಡ್​ ಸಾಕ್ಷಿಯಅಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ, ಇಶಾನ್ ಮತ್ತು ಡೇವಿಡ್ ಸ್ನೇಹಪರ ಕುಸ್ತಿ ಪ್ರದರ್ಶನದೊಂದಿಗೆ ತಮ್ಮ ತರಬೇತಿ ಸಮಯವನ್ನು ಸವಿಯುತ್ತಿರುವುದನ್ನು ಕಾಣಬಹುದು. ಕ್ರಿಕೆಟ್​ ನ ಅತ್ಯಂತ ರೋಚಕ ಸ್ಟೇಡಿಯಮ್​ ವಾಂಖೆಡೆ ಸ್ವಲ್ಪ ಸಮಯದವರೆಗೆ ಡಬ್ಲ್ಯುಡಬ್ಲ್ಯುಇ ರಿಂಗ್ ಆಗಿ ಮಾರ್ಪಟ್ಟಿತು.

ವಿಡಿಯೊದಲ್ಲಿ ಕಾಣುತ್ತಿರುವಂತೆ ಕುಸ್ತಿಯನ್ನು ಇಶಾನ್ ಕಿಶನ್​ ಪ್ರಾರಂಭಿಸಿದ ಹಾಗಿದೆ. ಅವರು ತಮಾಷೆಯಾಗಿ ಡೇವಿಡ್ ಗೆ ತನ್ನ ತಲೆಯಿಂದ ಗುದ್ದಲು ಪ್ರಯತ್ನಿಸಿದ್ದರು. ಆದಾಗ್ಯೂ, ಆಸ್ಟ್ರೇಲಿಯಾದ ಆಟಗಾರ ಇಶಾನ್ ಅವರ ತಲೆಯನ್ನು ತನ್ನ ದೈತ್ಯ ತೋಳುಗಳಿಂದ ಲಾಕ್ ಮಾಡುವ ಮೂಲಕ ಅದರಿಂದ ತಪ್ಪಿಸಿಕೊಳ್ಳುತ್ತಾರೆ.

ಕುಸ್ತಿ ಇನ್ನೂ ಕೆಲವು ನಿಮಿಷಗಳ ಕಾಲ ಮುಂದುವರಿಯುತ್ತದೆ. ಇಬ್ಬರೂ ಆಟಗಾರರು ಅಂತಿಮವಾಗಿ ಪರಸ್ಪರರನ್ನು ನೆಲಕ್ಕೆ ಬೀಳಿಸುತ್ತಾರೆ. ಇದು ಎಂಐ ಶಿಬಿರದಲ್ಲಿ ಮೋಜಿನ ವಾತಾವರಣವನ್ನು ಸೃಷ್ಟಿಸಿತು. ಕೀರನ್ ಪೊಲಾರ್ಡ್ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಆಟಗಾರರು ಅವರಿಬ್ಬರ ಕುಸ್ತಿ ಚಲನೆಗಳನ್ನು ನೋಡಿ ಖುಷಿಪಟ್ಟರು.

ಇದನ್ನೂ ಓದಿ: Virat kohli : ಕೊಹ್ಲಿಯನ್ನು ಹೊಗಳಿದ ಜಗತ್​​ಪ್ರಸಿದ್ಧ ವೇಗದ ಓಟಗಾರ ಉಸೇನ್​ ಬೋಲ್ಟ್​​

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ 2024ರ ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದೆ. ಸತತ ಮೂರು ಸೋಲುಗಳೊಂದಿಗೆ ತಮ್ಮ ಅಭಿಯಾನವನ್ನು ಪ್ರಾರಂಭಿಸಿದ ನಂತರ ಅವರು ಪುನರಾಗಮನ ಮಾಡಿದರೂ ಬಳಿಕ ಕೊಟ್ಟ ಕಳಪೆ ಫಾರ್ಮ್ ಅಂತಿಮವಾಗಿ ಪಂದ್ಯಾವಳಿಯಿಂದ ಗುಂಪು ಹಂತದ ಹೊರಗುಳಿಯಲು ಕಾರಣವಾಯಿತು.

ಅಂತಿಮ ಪಂದ್ಯಕ್ಕೆ ತೆರಳುತ್ತಿರುವ ಎಂಐ ತಮ್ಮ ಹೆಮ್ಮೆಗಾಗಿ ಆಡಲು ಬಯಸುತ್ತದೆ. ಗೆಲುವಿನೊಂದಿಗೆ ತಮ್ಮ ಅಭಿಯಾನವನ್ನು ಉನ್ನತ ಮಟ್ಟದಲ್ಲಿ ಮುಗಿಸಲು ಬಯಸುತ್ತದೆ.

Continue Reading

ಪ್ರಮುಖ ಸುದ್ದಿ

Virat kohli : ಕೊಹ್ಲಿಯನ್ನು ಹೊಗಳಿದ ಜಗತ್​​ಪ್ರಸಿದ್ಧ ವೇಗದ ಓಟಗಾರ ಉಸೇನ್​ ಬೋಲ್ಟ್​​

VISTARANEWS.COM


on

Virat kohli
Koo

ನವದೆಹಲಿ: ಮಾಜಿ ಸ್ಪ್ರಿಂಟಿಂಗ್ ವಿಶ್ವ ಚಾಂಪಿಯನ್ ಉಸೇನ್ ಬೋಲ್ಟ್ (Usain Bolt) ಇತ್ತೀಚಿನ ತಾವು ನೀಡಿದ ಸಂದರ್ಶನವೊಂದರಲ್ಲಿ ಭಾರತದ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿಯನ್ನು (Virat kohli ) ವಿಶೇಷವಾಗಿ ಹೊಗಳಿದ್ದಾರೆ. ಜಮೈಕಾ ಮೂಲದ ಉಸೇನ್ ಬೋಲ್ಟ್, ಕ್ರಿಸ್ ಗೇಲ್ ಮತ್ತು ಯುವರಾಜ್ ಸಿಂಗ್ ಅವರೊಂದಿಗೆ ಐಸಿಸಿ ಟಿ 20 ವಿಶ್ವಕಪ್ 2024 ರ (T20 World Cup) ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಅವರಿಗೆ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ತಿಳಿದಿರುವುದು ವಿರಾಟ್ ಕೊಹ್ಲಿ ಬಗ್ಗೆ. ಹೀಗೆ ಕೊಹ್ಲಿ ಕ್ರೀಡಾ ಜಗತ್ತಿನಲ್ಲಿ ಪ್ರಭಾವಶಾಲಿ ಎಂದು ಬೋಲ್ಟ್​ ಉಲ್ಲೇಖಿಸಿದ್ದಾರೆ. ವಿಶ್ವಕಪ್​ಗೆ ಮುಂಚಿತವಾಗಿ ಅವರು ಭಾರತದ ಮಾಜಿ ನಾಯಕನ ಬಗ್ಗೆ ಇನ್ನೂ ಕೆಲವು ವಿಷಯಗಳನ್ನು ಹೇಳಿದ್ದಾರೆ.

ಇತ್ತೀಚೆಗೆ ಸುದ್ದಿಸಂಸ್ಥೆಯೊಂದರ ಜತೆ ಮಾತನಾಡಿದ ಉಸೇನ್ ಬೋಲ್ಟ್, ಕೆಲವು ವಿಶ್ವ ದರ್ಜೆಯ ಕ್ರಿಕೆಟಿಗರ ಹೊರತಾಗಿಯೂ ವಿರಾಟ್ ಕೊಹ್ಲಿ ಅವರೆಲ್ಲರಿಗಿಂತ ಅತ್ಯುತ್ತಮ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಆಧುನಿಕ ಕಾಲದ ಶ್ರೇಷ್ಠ ಆಟಗಾರ ಬಹುಶಃ ಈ ಸಮಯದಲ್ಲಿ ಅತ್ಯಂತ ಪ್ರಸಿದ್ಧ ಕ್ರಿಕೆಟಿಗ ಮತ್ತು ಅವರು ಬಹುಶಃ ಜೀವಿಸಿದ ಅತ್ಯಂತ ಪ್ರಸಿದ್ಧ ಕ್ರಿಕೆಟ್ ಆಟಗಾರ ಎಂದು ಹೇಳಿದ್ದಾರೆ.

ವಿಶ್ವಕಪ್​​ಗಾಗಿ ಜನರು ಯುಎಸ್ಎ ಮತ್ತು ವೆಸ್ಟ್ ಇಂಡೀಸ್​ನ ಕ್ರೀಡಾಂಗಣಗಳ ಕಡೆಗೆ ಗಮನ ಹರಿಸಿದ್ದಾರೆ. ಅದಕ್ಕೆ ಅರ್ಧದಷ್ಟು ಕಾರಣ ವಿರಾಟ್ ಕೊಹ್ಲಿ. ಅವರ ಉಪಸ್ಥಿತಿಯೇ ಇಲ್ಲಿ ದೊಡ್ಡದಾಗಿದೆ ಮತ್ತು ಕ್ರಿಕೆಟ್ ಕ್ಷೇತ್ರವಲ್ಲದ ಕ್ರೀಡಾಪಟುಗಳು ಅವರು ಮಾಡಿದ ಕಾರ್ಯಕ್ಕಾಗಿ ಅವರನ್ನು ಶ್ಲಾಘಿಸುತ್ತಿದ್ದಾರೆ. ಕೊಹ್ಲಿ ನಿಜವಾಗಿಯೂ ಅಂತಾರಾಷ್ಟ್ರೀಯ ಐಕಾನ್ ಎಂದು ಹೇಳುತ್ತಾರೆ. ಆ ಸಾಲಿನಲ್ಲಿ ಬೋಲ್ಟ್ ಕೂಡ ಇದ್ದಾರೆ.

ನಿವೃತ್ತರಾಗಲಿದ್ದರಾ ಕೊಹ್ಲಿ, ರೋಹಿತ್​

ವಿರಾಟ್ ಕೊಹ್ಲಿಗೆ ಈ ಟಿ 20 ವಿಶ್ವಕಪ್ ಹಿಂದೆಂದಿಗಿಂತಲೂ ಹೆಚ್ಚು ಮಹತ್ವದ್ದಾಗಿದೆ. ವಿಶ್ವಕಪ್ ಮುಗಿದ ನಂತರ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ಕಿರು ಸ್ವರೂಪದಿಂದ ನಿವೃತ್ತರಾಗಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ತಂಡದ ಹಿರಿಯ ಆಟಗಾರನಾಗಿ ಐಸಿಸಿ ಪಂದ್ಯಾವಳಿಯನ್ನು ಗೆಲ್ಲುವ ಭರವಸೆಯನ್ನು ಕೊಹ್ಲಿ ಇನ್ನೂ ಹೊಂದಿರುವುದರಿಂದ ಇದು ಈ ನಿರ್ದಿಷ್ಟ ಆವೃತ್ತಿಯನ್ನು ಇನ್ನಷ್ಟು ಮಹತ್ವದ್ದಾಗಿದೆ.

ಉಸೇನ್ ಬೋಲ್ಟ್ ತಮ್ಮ ಬಾಲ್ಯದ ಕ್ರಿಕೆಟ್ ಐಕಾನ್ ಗಳು ಇವರು

ವಿರಾಟ್ ಕೊಹ್ಲಿಯನ್ನು ಸ್ಟ್ಯಾಂಡ್ ಔಟ್ ಆಟಗಾರ ಎಂದು ಉಲ್ಲೇಖಿಸುವ ಮೊದಲು, ಉಸೇನ್ ಬೋಲ್ಟ್ ತಮ್ಮ ಬಾಲ್ಯದ ದಿನಗಳಲ್ಲಿ ಅವರು ನೋಡುತ್ತಿದ್ದ ಕ್ರಿಕೆಟಿಗರನ್ನು ಬಹಿರಂಗಪಡಿಸಿದ್ದಾರೆ. 8 ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತರಾದ ಅವರು ಬಾಲ್ಯದಲ್ಲಿ ವಾಸಿಮ್ ಅಕ್ರಮ್ ಅವರನ್ನು ಇಷ್ಟಪಟ್ಟಿದ್ದರು ಎಂದು ಒಪ್ಪಿಕೊಂಡರು. ಇದಕ್ಕೆ ಕಾರಣ ಎಡಗೈ ವೇಗದ ಬೌಲರ್ ಸ್ವಿಂಗ್ ಯಾರ್ಕರ್​ಗಳನ್ನು ಬೌಲಿಂಗ್ ಮಾಡುವ ಸಾಮರ್ಥ್ಯದಿಂದಾಗಿ.

ಬೋಲ್ಟ್ ನಂತರ ವೆಸ್ಟ್ ಇಂಡೀಸ್​ನ ಐಕಾನ್​ಗಳಾದ ಕರ್ಟ್ನಿ ವಾಲ್ಷ್ ಮತ್ತು ಕರ್ಟ್ಲಿ ಆಂಬ್ರೋಸ್ ಅವರನ್ನು ಅವರು ಮೆಚ್ಚಿದ ಇತರ ಇಬ್ಬರು ಬೌಲರ್​ಗಳು ಎಂದು ಹೆಸರಿಸಿದರು. ಸಚಿನ್ ತೆಂಡೂಲ್ಕರ್ ಮತ್ತು ಬ್ರಿಯಾನ್ ಲಾರಾ ನಡುವಿನ ಬ್ಯಾಟಿಂಗ್ ಪೈಪೋಟಿಯು ಅವರ ನೆಚ್ಚಿನ ಬೆಳವಣಿಗೆಗಳಲ್ಲಿ ಒಂದಾಗಿದೆ. ಅವರ ತಂದೆಯ ಕಾರಣದಿಂದಾಗಿ ವೆಸ್ಟ್ ಇಂಡೀಸ್ ತಂಡವನ್ನು ಅವರು ಬೆಂಬಲಿಸಿದ್ದರು.

“ನನ್ನ ತಂದೆಯಂತೆ ನಾನು ಯಾವಾಗಲೂ ವೆಸ್ಟ್ ಇಂಡೀಸ್ ತಂಡವನ್ನು ಬೆಂಬಲಿಸುತ್ತೇನೆ. ಆದರೆ ಹೌದು, ನಾನು ಸಚಿನ್ ತೆಂಡೂಲ್ಕರ್ ಅಭಿಮಾನಿಯೂ ಆಗಿದ್ದೇನೆ. ಅವರು ಮತ್ತು ಬ್ರಿಯಾನ್ ಲಾರಾ ಬೆಳೆಯುತ್ತಿರುವ ನನ್ನ ಜೀವನದ ಭಾಗವಾಗಿದ್ದರು. ಇದು ಒಂದು ದೊಡ್ಡ ಪೈಪೋಟಿಯಾಗಿತ್ತು.” – ಉಸೇನ್ ಬೋಲ್ಟ್ ಮುಕ್ತಾಯಗೊಳಿಸಿದರು.

Continue Reading

ಪ್ರಮುಖ ಸುದ್ದಿ

Rajat Patidar : ರಜತ್ ಪಾಟೀದಾರ್​ ಮುಂದಿನ ಆವೃತ್ತಿಗೆ ಆರ್​ಸಿಬಿಯಲ್ಲೇ ಇರಬೇಕು; ಮಾಜಿ ಆಟಗಾರನ ಸಲಹೆ

Rajat Patidar : ರಜತ್ ಪಾಟಿದಾರ್ ಅವರ ಪ್ರತಿಭೆಯ ಬಗ್ಗೆ ಯಾವುದೇ ಸಂದೇಹವಿಲ್ಲ ಮತ್ತು ಐಪಿಎಲ್ 2024 ರಲ್ಲಿ ಬ್ಯಾಟ್​ನೊಂದಿಗೆ ಅವರ ತಡವಾಗಿ ಬೆಳಕಿಗೆ ಬಂದಿದ್ದಾರೆ. ಅವರನ್ನು ಆರ್​​ಸಿಬಿಯ ಮೌಲ್ಯಯುತ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಆಯ್ಕೆಯನ್ನಾಗಿ ಮಾಡುತ್ತದೆ ಎಂದು ಸ್ಕಾಟ್ ಸ್ಟೈರಿಸ್ ಹೇಳಿದ್ದಾರೆ.

VISTARANEWS.COM


on

Rajat Patidar
Koo

ಬೆಂಗಳೂರು: ರಜತ್ ಪಾಟೀದಾರ್ (Rajat Patidar) ಆರ್​ಸಿಬಿ ಪರ ಕಳೆದ ಕೆಲವು ಪಂದ್ಯಗಳಲ್ಲಿ ಮಿಂಚುತ್ತಿದ್ದಾರೆ. ಅವರ ಅರ್ಧ ಶತಕಗಳು ತಂಡವನ್ನು ನಿರಂತರವಾಗಿ ಗೆಲ್ಲಿಸುತ್ತಿವೆ. ಆದರೆ, ಮುಂದಿನ ವರ್ಷ ನಡೆಯುವ ಐಪಿಎಲ್​ಗೆ ಮೊದಲು ಮೆಗಾ ಹರಾಜು ನಡೆಯಲಿದೆ. ಹೀಗಾಗಿ ಕೆಲವೊಂದಿಷ್ಟು ಆಟಗಾರರನ್ನು ಮಾತ್ರ ಉಳಿಸಿ ಉಳಿದವರನ್ನು ಬಿಡುಗಡೆ ಮಾಡಬೇಕಾಗುತ್ತದೆ. ಈ ವೇಳೆ ಪಾಟೀದಾರ್ ಕೈಬಿಡಬಾರದು ಎಂಬುದಾಗಿ ನ್ಯೂಜಿಲೆಂಡ್​ನ ಮಾಜಿ ಆಲ್ರೌಂಡರ್ ಸ್ಕಾಟ್ ಸ್ಟೈರಿಸ್ ಸಲಹೆ ಕೊಟ್ಟಿದ್ದಾರೆ. ಮುಂದಿನ ಋತುವಿಗೆ ಎರಡು ತಿಂಗಳ ಮೊದಲು ನಡೆಯಲಿರುವ ಮೆಗಾ ಹರಾಜಿಗೆ ಮುಂಚಿತವಾಗಿ ರಜತ್ ಪಾಟಿದಾರ್ ಅವರನ್ನು ಬಿಡುಗಡೆ ಮಾಡುವ ಅಪಾಯ ತೆಗೆದುಕೊಳ್ಳಬೇಡಿ ಎಂದು ಸ್ಟೈರಿಸ್ ಬೆಂಗಳೂರು ಮೂಲದ ಫ್ರಾಂಚೈಸಿಗೆ ಹೇಳಿದ್ದಾರೆ.

ರಜತ್ ಪಾಟಿದಾರ್ ಅವರ ಪ್ರತಿಭೆಯ ಬಗ್ಗೆ ಯಾವುದೇ ಸಂದೇಹವಿಲ್ಲ ಮತ್ತು ಐಪಿಎಲ್ 2024 ರಲ್ಲಿ ಬ್ಯಾಟ್​ನೊಂದಿಗೆ ಅವರ ತಡವಾಗಿ ಬೆಳಕಿಗೆ ಬಂದಿದ್ದಾರೆ. ಅವರನ್ನು ಆರ್​​ಸಿಬಿಯ ಮೌಲ್ಯಯುತ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಆಯ್ಕೆಯನ್ನಾಗಿ ಮಾಡುತ್ತದೆ ಎಂದು ಸ್ಕಾಟ್ ಸ್ಟೈರಿಸ್ ಹೇಳಿದ್ದಾರೆ. ಈ ಋತುವಿನಲ್ಲಿ ಆರ್​ಸಿಬಿಯ ಗೆಲುವಿನಲ್ಲಿ ಪಾಟೀದಾರ್ ನಿರ್ಣಾಯಕ ಭಾಗವಾಗಿದ್ದಾರೆ, ಏಕೆಂದರೆ ಮಹಾರಾಷ್ಟ್ರದ ಬ್ಯಾಟರ್​​ ಭರ್ಜರಿ ಹಿಟ್ಟಿಂಗ್ ಫಾರ್ಮ್​ನಲ್ಲಿದ್ದಾರೆ.

“ರಜತ್ ಪಾಟಿದಾರ್ ಅವರು ಅಗಾಧವಾಗಿ ಬೆಳೆದಿದ್ದಾರೆ. ಹೇಗಾದರೂ ಅವನಲ್ಲಿರುವ ಪ್ರತಿಭೆ ನಮಗೆ ತಿಳಿದಿತ್ತು. ಆದರೆ, ನಾನು ಆರ್​ಸಿಬಿಯ ಉಸ್ತುವಾರಿ ವಹಿಸಿದ್ದರೆ ಮತ್ತು ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಲು ನನಗೆ ಅವಕಾಶ ನೀಡಿದ್ದರೆ ಅವರನ್ನು ಉಳಿಸಿಕೊಳ್ಳುವೆ ಎಂದು ಎಂದು ಸ್ಟೈರಿಸ್ ಗುರುವಾರ ಜಿಯೋ ಸಿನೆಮಾಗೆ ತಿಳಿಸಿದರು.

“ರಜತ್ ಪಾಟಿದಾರ್ ಈ ನಾಲ್ವರಲ್ಲಿ ಒಬ್ಬರು. ಅವನ ಸುತ್ತಲಿನ ದೊಡ್ಡ ಹೆಸರುಗಳಲ್ಲಿ ಒಂದಾದ ಎಲ್ಲಾ ದೊಡ್ಡ ಹೆಸರುಗಳ ಬಗ್ಗೆ ಕೇಳಿ ಬರುತ್ತವೆ. ಆದರೆ, ನಾನು ಉಳಿಸಿಕೊಳ್ಳುವ ಹೆಸರುಗಳಲ್ಲಿ ಅವರು ಒಬ್ಬರು. ಅವರನ್ನು ಬಿಟ್ಟುಕೊಟ್ಟು ಹಿಂದಕ್ಕೆ ತಳ್ಳುವ ಅಪಾಯ ಇಲ್ಲ. ಅವರು ಪ್ರತಿ ವರ್ಷ ಉತ್ತಮವಾಗಿ ಆಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ, “ಎಂದು ಸ್ಟೈರಿಸ್​ ಹೇಳಿದ್ದಾರೆ.

2024 ರಲ್ಲಿ ಸ್ಪಿನ್-ಸ್ಲೇಯರ್

ಆರ್​ಸಿಬಿ ಹಲವು ವರ್ಷಗಳಿಂದ ರಜತ್ ಪಾಟಿದಾರ್ ಮೇಲೆ ಸಾಕಷ್ಟು ನಂಬಿಕೆಯನ್ನು ತೋರಿಸಿದೆ. ಐಪಿಎಲ್ 2022 ರಲ್ಲಿ ಶತಕ ಸೇರಿದಂತೆ 333 ರನ್ ಗಳಿಸುವ ಮೂಲಕ 30 ವರ್ಷದ ರಜತ್​ ಐಪಿಎಲ್​​ನಲ್ಲಿ ಹೆಸರು ಮಾಡಿದ್ದಾರೆ. ಆದಾಗ್ಯೂ, ಗಾಯದಿಂದಾಗಿ ಅವರು ಐಪಿಎಲ್ 2023 ಋತುವನ್ನು ಕೊನೆಯಲ್ಲಿ ತಪ್ಪಿಸಿಕೊಂಡರು. ಆದರೆ ಅವರನ್ನು 2024 ರ ಋತುವಿಗೆ ಫ್ರಾಂಚೈಸಿ ಉಳಿಸಿಕೊಂಡಿದೆ.

ಇದನ್ನೂ ಓದಿ: IPL 2024: ಸಿಎಸ್​​ಕೆ ಮಾಜಿ ಆಟಗಾರನಾಗಿದ್ದರೂ ಈ ಸಲ ಕೊಹ್ಲಿ ಗೆಲ್ಲಲಿ ಎಂದ ಸುರೇಶ್​ ರೈನಾ!

ವರ್ಷದ ಆರಂಭದಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಸರಣಿಯಲ್ಲಿ ಮಿಂಚಲು ಹೆಣಗಾಡುತ್ತಿದ್ದ ಪಾಟೀದಾರ್, ಐಪಿಎಲ್ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಅವರು ತಮ್ಮ ಕೊನೆಯ ಐದು ಇನ್ನಿಂಗ್ಸ್​ಗಳಲ್ಲಿ ನಾಲ್ಕು ಅರ್ಧಶತಕಗಳನ್ನು ಬಾರಿಸಿದ್ದಾರೆ, ಇದು ಆರ್​ಸಿಬಿ ಸತತ 5 ಪಂದ್ಯಗಳ ಗೆಲುವಿನ ಓಟದ ನಿರ್ಣಾಯಕ ಭಾಗವಾಗಿದೆ.

ಗ್ಲೆನ್ ಮ್ಯಾಕ್ಸ್ವೆಲ್ ಹೆಣಗಾಡುತ್ತಿರುವ ಹಾಳಿ ಋತುವಿನಲ್ಲಿ ರಜತ್ ಸ್ಪಿನ್ ವಿರುದ್ಧ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಆರ್​​ಸಿಬಿ ಪರ ಮಧ್ಯಮ ಓವರ್​ಗಳಲ್ಲಿ ಪ್ರಭಾವಶಾಲಿ ಆಟಗಾರ ಎಂದು ಸಾಬೀತುಪಡಿಸಿದ್ದಾರೆ. ಪಾಟಿದಾರ್ ಐಪಿಎಲ್ 2024 ರಲ್ಲಿ ಸ್ಪಿನ್ ವಿರುದ್ಧ 20 ಸಿಕ್ಸರ್​ಗಳನ್ನು ಗಳಿಸಿದ್ದಾರೆ ಮತ್ತು ಸ್ಪಿನ್ನರ್​ಗಳ ವಿರುದ್ಧ 224.69 ರನ್ ಗಳಿಸಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಐಪಿಎಲ್ 2024 ರ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ರಜತ್ ಪಾಟಿದಾರ್ ತಮ್ಮ ಉತ್ತಮ ಪ್ರದರ್ಶನ ಮುಂದುವರಿಸಬೇಕೆಂದು ಆರ್​ಸಿಬಿ ಬಯಸಿದೆ. ಪ್ಲೇಆಫ್​ ಪ್ರವೇಶಿಸಲು ಆರ್​ಸಿಬಿ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಗೆಲುವಿಗಿಂತ ಕಡಿಮೆಯಿಲ್ಲ.

Continue Reading
Advertisement
Sri Vedavyasa Jayanti programme at Bengaluru
ಬೆಂಗಳೂರು40 seconds ago

Bengaluru News: ಹರಿದಾಸ ಸಾಹಿತ್ಯ ಚಿಂತನೆಯಿಂದ ಬದುಕು ಸುಗಮ: ವಿ. ಅಪ್ಪಣ್ಣ ಆಚಾರ್ಯ

Opposition party leader r ashok latest statement in Mysuru
ಪ್ರಮುಖ ಸುದ್ದಿ2 mins ago

R Ashok: ಪೊಲೀಸ್‌ ಇಲಾಖೆ ಸತ್ತಿದೆಯೋ ಬದುಕಿದೆಯೋ ತಿಳಿಯುತ್ತಿಲ್ಲ: ಆರ್.ಅಶೋಕ್ ಆಕ್ರೋಶ

BJP district president N S Hegde pressmeet in Yallapur
ಉತ್ತರ ಕನ್ನಡ4 mins ago

Lok Sabha Election 2024: 2.5 ಲಕ್ಷ ಮತಗಳ ಅಂತರದಿಂದ ಕಾಗೇರಿ ಗೆಲುವು: ಬಿಜೆಪಿ ಜಿಲ್ಲಾಧ್ಯಕ್ಷರ ವಿಶ್ವಾಸ

IPL 2024
ಪ್ರಮುಖ ಸುದ್ದಿ7 mins ago

IPL 2024 : ಮಳೆಯಿಂದ ಪಂದ್ಯ ರದ್ದು, ಕೆಕೆಆರ್​, ಆರ್​ಆರ್​ ಬಳಿಕ ಪ್ಲೇಆಫ್​ಗೇರಿದ ಎಸ್​ಆರ್​ಎಚ್​​

Lady Constable
ದೇಶ2 hours ago

ಗಾಯಕನ ಹಾಡಿಗೆ ಮನಸೋತು ವೇದಿಕೆ ಮೇಲೆಯೇ ಕಿಸ್‌ ಕೊಟ್ಟ ಲೇಡಿ ಕಾನ್‌ಸ್ಟೆಬಲ್;‌ ಈಗ ಮುತ್ತು ತಂದಿದೆ ಕುತ್ತು!

DK Shivakumar in Uttar Pradesh and Strategy in Amethi and Rae Bareli
Lok Sabha Election 20242 hours ago

DK Shivakumar: ಉತ್ತರ ಪ್ರದೇಶದಲ್ಲಿ ಡಿಕೆಶಿ; ಅಮೇಥಿ, ರಾಯ್‌ ಬರೇಲಿಯಲ್ಲಿ ಮಾಡ್ತಾರಾ ಕಮಾಲ್?

IPL 2024
ಪ್ರಮುಖ ಸುದ್ದಿ2 hours ago

IPL 2024 : ವಾಂಖೆಡೆ ಸ್ಟೇಡಿಯಮ್​ನಲ್ಲಿ ಗುದ್ದಾಡಿಕೊಂಡ ಮುಂಬೈ ಇಂಡಿಯನ್ಸ್ ಆಟಗಾರರು; ಇಲ್ಲಿದೆ ವಿಡಿಯೊ

Virat kohli
ಪ್ರಮುಖ ಸುದ್ದಿ2 hours ago

Virat kohli : ಕೊಹ್ಲಿಯನ್ನು ಹೊಗಳಿದ ಜಗತ್​​ಪ್ರಸಿದ್ಧ ವೇಗದ ಓಟಗಾರ ಉಸೇನ್​ ಬೋಲ್ಟ್​​

Shah Rukh Khan
ದೇಶ3 hours ago

ಶಾರುಖ್‌ ಖಾನ್‌ ಜಾಹೀರಾತು ನೋಡಿ ಗುಟ್ಕಾ ತಿಂದ ಮಕ್ಕಳು; ನಟ ಸಾಯಲ್ಲ, ನಾವು ಸಾಯ್ತೀವಾ ಅಂದರು!

Rajat Patidar
ಪ್ರಮುಖ ಸುದ್ದಿ3 hours ago

Rajat Patidar : ರಜತ್ ಪಾಟೀದಾರ್​ ಮುಂದಿನ ಆವೃತ್ತಿಗೆ ಆರ್​ಸಿಬಿಯಲ್ಲೇ ಇರಬೇಕು; ಮಾಜಿ ಆಟಗಾರನ ಸಲಹೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ7 hours ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ9 hours ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು12 hours ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20242 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

ಟ್ರೆಂಡಿಂಗ್‌