IND vs SL: ಶ್ರೀಲಂಕಾ ವಿರುದ್ಧದ ಸರಣಿಗೆ ಮೊಹಮ್ಮದ್ ಶಮಿ ಆಯ್ಕೆ ಸಾಧ್ಯತೆ - Vistara News

ಕ್ರೀಡೆ

IND vs SL: ಶ್ರೀಲಂಕಾ ವಿರುದ್ಧದ ಸರಣಿಗೆ ಮೊಹಮ್ಮದ್ ಶಮಿ ಆಯ್ಕೆ ಸಾಧ್ಯತೆ

IND vs SL: ಮೊಹಮ್ಮದ್ ಶಮಿ ಭಾರತ ಪರ 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ಪಡೆದಿದ್ದಾರೆ. 101 ಏಕದಿನ ಪಂದ್ಯಗಳಲ್ಲಿ 195 ವಿಕೆಟ್ ಪಡೆದಿದ್ದಾರೆ. 23 ಟಿ20 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ.

VISTARANEWS.COM


on

IND vs SL
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಇದೇ ತಿಂಗಳಾಂತ್ಯದಲ್ಲಿ ಟಿ20 ಮತ್ತು ಏಕದಿನ ಸರಣಿಯನ್ನಾಡಲು ಟೀಮ್​ ಇಂಡಿಯಾ ಶ್ರೀಲಂಕಾ(IND vs SL) ಪ್ರವಾಸ ಕೈಗೊಳ್ಳಲಿದೆ. ಈ ಸರಣಿಗೆ ಮೊಹಮ್ಮದ್ ಶಮಿ(Mohammed Shami) ಕೂಡ ಆಯ್ಕೆಯಾಗುವ ಸಾಧ್ಯತೆ ಇದೆ. ವರದಿಗಳ ಪ್ರಕಾರ ಶಮಿ ಅವರು ಈ ಸರಣಿಯಲ್ಲಿ ಆಡುವ ಮೂಲಕ ಮತ್ತೆ ಭಾರತ ತಂಡಕ್ಕೆ ಕಮ್​ಬ್ಯಾಕ್​ ಮಾಡಲಿದ್ದಾರೆ ಎನ್ನಲಾಗಿದೆ.

ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ವೇಳೆ ಗಾಯಗೊಂಡಿದ್ದ ಶಮಿಗೆ ಲಂಡನ್​ನಲ್ಲಿ ಪಾದದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ವಿಶ್ವಕಪ್​ ಬಳಿಕ ಶಮಿ ಇದುವರೆಗೂ ಯಾವುದೇ ಕ್ರಿಕೆಟ್​ ಪಂದ್ಯ ಆಡಿಲ್ಲ. ಗಾಯದಿಂದ ಸಂಪೂರ್ಣ ಚೇತರಿಕೆ ಕಂಡಿರುವ ಶಮಿ ಈಗಾಗಲೇ ಬೌಲಿಂಗ್​ ಅಭ್ಯಾಸ ಕೂಡ ಆರಂಭಿಸಿದ್ದಾರೆ. ಬೌಲಿಂಗ್​ ಮತ್ತು ವ್ಯಾಯಾಮ ನಡೆಸುತ್ತಿರುವ ವಿಡಿಯೊವನ್ನು ಶಮಿ ಕೆಲವು ವಾರಗಳ ಹಿಂದೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದರು. ಗಾಯದಿಂದಾಗಿ ಶಮಿಗೆ ಈ ಬಾರಿ ಐಪಿಎಲ್​ ಸೇರಿ ಮಹತ್ವದ ಟಿ20 ವಿಶ್ವಕಪ್​ ಟೂರ್ನಿ ಕೈತಪ್ಪಿತ್ತು. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ವೇಳೆ ಗಾಯಗೊಂಡಿದ್ದ ಶಮಿ, ಈ ಗಾಯವನ್ನು ಮರೆಮಾಚಿ ವಿಶ್ವಕಪ್​ನಲ್ಲಿ ಅಮೋಘ ಬೌಲಿಂಗ್​ ಪ್ರದರ್ಶನ ತೋರಿದ್ದರು.

ಇದನ್ನೂ ಓದಿ Mohammed Shami : ಐಸಿಸಿ ಪ್ರಶಸ್ತಿಗೆ ಮೊಹಮ್ಮದ್ ಶಮಿಯ ಹೆಸರು ನಾಮನಿರ್ದೇಶನ

ಶ್ರೀಲಂಕಾ ವಿರುದ್ಧ ಭಾರತ 3 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿಯನ್ನಾಡಲಿದೆ. ಈ ಸರಣಿಗೆ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ, ಜಸ್​ಪ್ರೀತ್​ ಬುಮ್ರಾಗೆ ಬಿಸಿಸಿಐ ವಿಶ್ರಾಂತಿ ನೀಡ ಬಯಸಿದೆ ಎನ್ನಲಾಗಿದೆ. ಹೀಗಾಗಿ ಶಮಿ ಈ ಸರಣಿಗೆ ಆಯ್ಕೆಯಾಗುವ ಸಾಧ್ಯತೆ ಅಧಿಕವಾಗಿದೆ. ಮೊಹಮ್ಮದ್ ಶಮಿ ಭಾರತ ಪರ 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ಪಡೆದಿದ್ದಾರೆ. 101 ಏಕದಿನ ಪಂದ್ಯಗಳಲ್ಲಿ 195 ವಿಕೆಟ್ ಪಡೆದಿದ್ದಾರೆ. 23 ಟಿ20 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ.

ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಶಮಿ ಅವರು ತಮ್ಮ ಮೊನಚಾದ ಬೌಲಿಂಗ್​ ದಾಳಿಯ ಮೂಲಕ ಟೂರ್ನಿಯಲ್ಲಿಯೇ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದರು. ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್‌ ಉರುಳಿಸಿದ್ದರು. ಅವರ ಈ ಸಾಧನೆಯನ್ನು ಪರಿಗಣಿಸಿ ಅವರಿಗೆ ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Paris Olympics 2024: ಮೊಟ್ಟಮೊದಲ ಒಲಿಂಪಿಕ್ಸ್ ಕ್ರೀಡಾಕೂಟದ 10 ಕುತೂಹಲಕರ ಸಂಗತಿಗಳಿವು

Paris Olympics 2024: ಒಲಿಂಪಿಕ್ ಕ್ರೀಡಾಕೂಟವನ್ನು ವಿಶ್ವದ ಅತಿದೊಡ್ಡ ಕ್ರೀಡಾಕೂಟವೆಂದು ಪರಿಗಣಿಸಲಾಗಿದೆ. ಒಲಿಂಪಿಕ್ಸ್ ಕಲ್ಪನೆಯನ್ನು ಉತ್ತೇಜಿಸಲು ಪ್ರತಿ ವರ್ಷ ಜೂನ್ 23 ರಂದು ವಿಶ್ವ ಒಲಿಂಪಿಕ್ ದಿನವನ್ನು ಆಚರಿಸಲಾಗುತ್ತದೆ. ಮೊದಲ ಒಲಿಂಪಿಕ್ ಕ್ರೀಡಾಕೂಟ (First Olympic Games) ಹಲವು ಪ್ರಮುಖ ಸ್ಮರಣೀಯ ಘಟನೆಗಳಿಗೆ ಕಾರಣವಾಗಿತ್ತು.

VISTARANEWS.COM


on

By

Paris Olympics 2024
Koo

ಈ ಬಾರಿ ಪ್ಯಾರಿಸ್ ನಲ್ಲಿ ಜುಲೈ 26ರಿಂದ ಆಗಸ್ಟ್ 11ರವರೆಗೆ (Paris Olympics 2024) ಒಲಿಂಪಿಕ್ಸ್ ಕ್ರೀಡಾಕೂಟ (Olympic Games) ನಡೆಯಲಿದೆ. ಈಗಿನ ಒಲಿಂಪಿಕ್ಸ್ ಕ್ರೀಡಾಕೂಟವು ಸಾಕಷ್ಟು ಆಧುನೀಕರಣಗೊಂಡಿದೆ. ಮೊದಲ ಒಲಿಂಪಿಕ್ಸ್ ಕ್ರೀಡಾಕೂಟವು ಅಥೆನ್ಸ್ ನಲ್ಲಿ (Athens) 1896ರ ಏಪ್ರಿಲ್‌ 6ರಿಂದ 15ರವರೆಗೆ ಆಯೋಜಿಸಲಾಗಿತ್ತು. ಮೊದಲ ಒಲಿಂಪಿಕ್ ಕ್ರೀಡಾಕೂಟ (First Olympic Games) ಹಲವು ಪ್ರಮುಖ ಸ್ಮರಣೀಯ ಘಟನೆಗಳಿಗೆ ಕಾರಣವಾಗಿತ್ತು.

ಒಲಿಂಪಿಕ್ ಕ್ರೀಡಾಕೂಟವನ್ನು ವಿಶ್ವದ ಅತಿದೊಡ್ಡ ಕ್ರೀಡಾಕೂಟವೆಂದು ಪರಿಗಣಿಸಲಾಗಿದೆ. ಒಲಿಂಪಿಕ್ಸ್ ಕಲ್ಪನೆಯನ್ನು ಉತ್ತೇಜಿಸಲು ಪ್ರತಿ ವರ್ಷ ಜೂನ್ 23ರಂದು ವಿಶ್ವ ಒಲಿಂಪಿಕ್ ದಿನವನ್ನು ಆಚರಿಸಲಾಗುತ್ತದೆ. ಅಥೆನ್ಸ್‌ನಲ್ಲಿ ನಡೆದ ಮೊದಲ ಒಲಂಪಿಕ್ಸ್ ಉದ್ಘಾಟನೆ ಸ್ಪರ್ಧೆಗಳಲ್ಲಿ ಒಟ್ಟು 280 ಕ್ರೀಡಾಪಟುಗಳು ಭಾಗವಹಿಸಿದ್ದರು. ಅಥ್ಲೆಟಿಕ್ಸ್ ನಲ್ಲಿ 43 ಸ್ಪರ್ಧಿಗಳಿದ್ದರು.

ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಆಟಗಾರರು ಅನೇಕ ಸ್ಪರ್ಧಿಗಳನ್ನು ಸೋಲಿಸಿದ ಅನಂತರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅರ್ಹರಾಗುತ್ತಾರೆ. ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯವು ಆತಿಥೇಯ ರಾಷ್ಟ್ರದ ಅತಿದೊಡ್ಡ ಸಾಧನೆಯಾಗಿದೆ. ಅಮೆರಿಕ ಈವರೆಗೆ 9 ಬಾರಿ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಿದೆ. ಇದು ಇತರ ದೇಶಗಳಿಗಿಂತ ಹೆಚ್ಚಿನದಾಗಿದೆ. ಇದುವರೆಗೆ 6 ಒಲಿಂಪಿಕ್ ಕ್ರೀಡಾಕೂಟಗಳನ್ನು ಆಯೋಜಿಸಿದ ಫ್ರಾನ್ಸ್ ಅನಂತರದ ಸ್ಥಾನದಲ್ಲಿದೆ.

ಮೊದಲ ಒಲಿಂಪಿಕ್ ಕ್ರೀಡಾಕೂಟದ ಹತ್ತು ಪ್ರಮುಖ ಸಂಗತಿಗಳು

1. ಮೊದಲ ಒಲಂಪಿಕ್ಸ್ ಗ್ರೀಸ್ ದೇಶದ ಅಥೆನ್ಸ್‌ನಲ್ಲಿ 1896ರ ಏಪ್ರಿಲ್ 6ರಿಂದ 15ರವರೆಗೆ ನಡೆಯಿತು.

2. ಅಥೆನ್ಸ್‌ನಲ್ಲಿ ನಡೆದ ಒಲಿಂಪಿಕ್ಸ್ ಗೇಮ್ಸ್‌ ಅನ್ನು ಕಿಂಗ್ ಜಾರ್ಜ್ I ಉದ್ಘಾಟಿಸಿದ್ದರು.

3. ಮೊದಲ ಒಲಿಂಪಿಕ್ಸ್‌ನಲ್ಲಿ ಒಟ್ಟು 14 ದೇಶಗಳು ಭಾಗವಹಿಸಿವೆ.

First Olympic Games


4. 1896ರ ಏಪ್ರಿಲ್ 6ರಂದು ಅಮೆರಿಕನ್ ಆಟಗಾರ ಜೇಮ್ಸ್ ಕೊನೊಲಿ ಟ್ರಿಪಲ್ ಜಂಪ್ ಅನ್ನು ಗೆದ್ದು ಮೊದಲ ಒಲಿಂಪಿಕ್ ಚಾಂಪಿಯನ್ ಆದರು. ಎತ್ತರ ಜಿಗಿತದಲ್ಲಿ ದ್ವಿತೀಯ ಹಾಗೂ ಉದ್ದ ಜಿಗಿತದಲ್ಲಿ ತೃತೀಯ ಸ್ಥಾನವನ್ನು ಅವರು ಗಳಿಸಿದರು.

5. ಜರ್ಮನಿಯ ಕಾರ್ಲ್ ಶುಹ್ಮನ್ ಅವರು 1896ರಲ್ಲಿ ಅಥೆನ್ಸ್‌ನ ಸ್ಟಾರ್ ತಾರೆಯಾಗಿದ್ದರು. ಜಿಮ್ನಾಸ್ಟಿಕ್ಸ್, ಅಥ್ಲೆಟಿಕ್ಸ್, ವೇಟ್‌ಲಿಫ್ಟಿಂಗ್ ಮತ್ತು ಗ್ರೀಕೊ-ರೋಮನ್ ಕುಸ್ತಿಯಲ್ಲಿ ಸ್ಪರ್ಧಿಸಿ ಅವರು ಉದ್ಘಾಟನಾ ಆಧುನಿಕ ಕ್ರೀಡಾಕೂಟದಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದರು.

6. ಮೊದಲ ಒಲಿಂಪಿಕ್ಸ್ ನಲ್ಲಿ ಅಮೆರಿಕವು ಗರಿಷ್ಠ ಸಂಖ್ಯೆಯ 14 ಚಿನ್ನದ ಪದಕಗಳನ್ನು ಗೆದ್ದುಕೊಂಡಿತು.

7. ಮೊದಲ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಒಟ್ಟು 241 ಆಟಗಾರರು ಸ್ಪರ್ಧಿಸಿದ್ದರು.

7. ಅಥೆನ್ಸ್‌ನಲ್ಲಿ ಒಲಿಂಪಿಕ್ಸ್ ಅಂಗವಾಗಿ ಒಟ್ಟು 43 ಕಾರ್ಯಕ್ರಮಗಳನ್ನು ನಡೆಸಲಾಗಿತ್ತು.

8. ಒಲಿಂಪಿಕ್ಸ್‌ನಲ್ಲಿ ಮೊದಲ ಸ್ಥಾನ ಪಡೆದ ವಿಜೇತರಿಗೆ ಬೆಳ್ಳಿ ಪದಕ ಮತ್ತು ಆಲಿವ್ ಗುಚ್ಛ ನೀಡಲಾಯಿತು. ಎರಡನೇ ಸ್ಥಾನದಲ್ಲಿರುವವರಿಗೆ ತಾಮ್ರದ ಪದಕ, ಲಾರೆಲ್ ಗುಚ್ಛ ಮತ್ತು ಪ್ರಮಾಣಪತ್ರ ನೀಡಲಾಯಿತು.

First Olympic Games


9. ಪದಕದ ಮುಂಭಾಗದ ಭಾಗವು ಜೀಸಸ್‌ನ ಮುಖವನ್ನು ಹೊಂದಿದ್ದು, ಅವನು ಕೈಯಲ್ಲಿ ರೆಕ್ಕೆಯ ವಿಜಯದೊಂದಿಗೆ ಗ್ಲೋಬ್ ಅನ್ನು ಹಿಡಿದಿದ್ದಾನೆ. ಗ್ರೀಕ್ ಭಾಷೆಯಲ್ಲಿ “ಒಲಿಂಪಿಯಾ” ಎಂಬ ಶೀರ್ಷಿಕೆಯನ್ನು ಇದು ಒಳಗೊಂಡಿತ್ತು. ಹಿಂಭಾಗವು ಆಕ್ರೊಪೊಲಿಸ್ ಸೈಟ್ ಅನ್ನು ಗ್ರೀಕ್ ಭಾಷೆಯಲ್ಲಿ “1896ರಲ್ಲಿ ಅಥೆನ್ಸ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಒಲಿಂಪಿಕ್ ಕ್ರೀಡಾಕೂಟ” ಎಂಬ ಶೀರ್ಷಿಕೆಯೊಂದಿಗೆ ಹೊಂದಿತ್ತು.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್ ಯಾವಾಗ ಆರಂಭ? ಬೃಹತ್​ ಕ್ರೀಡಾಕೂಟಕ್ಕೆ ನಡೆಸಿರುವ ಸಿದ್ಧತೆಗಳೇನು?

10. ಅಥೆನ್ಸ್ 1896ರ ಒಲಿಂಪಿಕ್ ಕ್ರೀಡಾಕೂಟದ ಅಧಿಕೃತ ವರದಿಯು ಎರಡು ಭಾಗಗಳನ್ನು ಒಳಗೊಂಡಿತ್ತು. “ದ ಒಲಿಂಪಿಕ್ ಗೇಮ್ಸ್ ಇನ್ ಏನ್ಷಿಯಂಟ್ ಟೈಮ್ಸ್” ಶೀರ್ಷಿಕೆಯಲ್ಲಿ ಕ್ರೀಡಾಕೂಟದ ಮೊದಲು ಪ್ರಕಟವಾಯಿತು. 1896ರಲ್ಲಿ ಒಲಿಂಪಿಕ್ ಗೇಮ್ಸ್ ಕ್ರೀಡಾಕೂಟದ ಅನಂತರ ಪ್ರಕಟವಾಯಿತು.
ಎರಡು ಸಂಪುಟಗಳನ್ನು ಫ್ರೆಂಚ್-ಗ್ರೀಕ್ ಮತ್ತು ಇಂಗ್ಲಿಷ್-ಜರ್ಮನ್ ಎಂಬ ಎರಡು ದ್ವಿಭಾಷಾ ಆವೃತ್ತಿಗಳ ರೂಪದಲ್ಲಿ ನಾಲ್ಕು ಭಾಷೆಗಳಲ್ಲಿ ಪ್ರಕಟಿಸಲಾಯಿತು. ಈ ಅಧಿಕೃತ ವರದಿಯು ವಿವಿಧ ಹೊಸ ಆವೃತ್ತಿಗಳ ವಿಷಯವಾಗಿತ್ತು.

Continue Reading

ಪ್ರಮುಖ ಸುದ್ದಿ

Virat Kohli : ಹಣ, ಹೆಸರು ಬಂದ ತಕ್ಷಣ ಕೊಹ್ಲಿಗೆ ಅಹಂಕಾರ ಬಂತು; ಮಾಜಿ ಆಟಗಾರನ ಅರೋಪ

Virat Kohli : ನಂತರ 2017 ರಲ್ಲಿ, ಅವರು ಏಕದಿನ ಮತ್ತು ಟಿ 20 ಐ ತಂಡಗಳ ಉಸ್ತುವಾರಿ ವಹಿಸಿಕೊಂಡರು. 2021 ರ ಟಿ 20 ವಿಶ್ವಕಪ್ ನಂತರ, ಕೊಹ್ಲಿ ಒಂದರ ನಂತರ ಒಂದರಂತೆ ನಾಯಕತ್ವದಿಂದ ಕೆಳಗಿಳಿಯಲು ಪ್ರಾರಂಭಿಸಿದರು. ಭಾರತಕ್ಕಾಗಿ 22 ಟೆಸ್ಟ್, 36 ಏಕದಿನ ಮತ್ತು 10 ಟಿ 20 ಪಂದ್ಯಗಳನ್ನು ಆಡಿರುವ ಮಿಶ್ರಾ, ವಿರಾಟ್ ಮತ್ತು ರೋಹಿತ್ ಶರ್ಮಾ ಅವರ ಸ್ವಭಾವವನ್ನು ಹೋಲಿಕೆ ಮಾಡಿದ್ದಾರೆ.

VISTARANEWS.COM


on

Virat Kohli
Koo

ನವದೆಹಲಿ: ವಿರಾಟ್ ಕೊಹ್ಲಿ (Virat Kohli) ತಮ್ಮ ಆರಂಭಿಕ ದಿನಗಳಲ್ಲಿ ಹೇಗಿದ್ದರೋ ಅದಕ್ಕಿಂತ ಸಾಕಷ್ಟು ಬದಲಾಗಿದ್ದಾರೆ ಎಂದು ಹಿರಿಯ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಆರೋಪಿಸಿದ್ದಾರೆ. ಕೊಹ್ಲಿಯೊಂದಿಗೆ ಸಾಕಷ್ಟು ಅಂತರರಾಷ್ಟ್ರೀಯ ಕ್ರಿಕೆಟ್ ಆಡಿರುವ ಮಿಶ್ರಾ ದೆಹಲಿ ಕ್ರಿಕೆಟಿಗ ತನ್ನ ವೃತ್ತಿಜೀವನವು ಮುಂದುವರಿದಂತೆ ಖ್ಯಾತಿ ಮತ್ತು ಹಣ ಗಳಿಸಿದ ನಂತರ ಬದಲಾಗಿದ್ದಾನೆ ಎಂದು ಹೇಳಿದ್ದಾರೆ. 2014-15ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಎಂಎಸ್ ಧೋನಿ ನಿವೃತ್ತಿ ಘೋಷಿಸಿದಾಗ ಕೊಹ್ಲಿ ನಾಯಕತ್ವದ ಅವಕಾಶ ಪಡೆದಿದ್ದರು.

ನಂತರ 2017 ರಲ್ಲಿ, ಅವರು ಏಕದಿನ ಮತ್ತು ಟಿ 20 ಐ ತಂಡಗಳ ಉಸ್ತುವಾರಿ ವಹಿಸಿಕೊಂಡರು. 2021 ರ ಟಿ 20 ವಿಶ್ವಕಪ್ ನಂತರ, ಕೊಹ್ಲಿ ಒಂದರ ನಂತರ ಒಂದರಂತೆ ನಾಯಕತ್ವದಿಂದ ಕೆಳಗಿಳಿಯಲು ಪ್ರಾರಂಭಿಸಿದರು. ಭಾರತಕ್ಕಾಗಿ 22 ಟೆಸ್ಟ್, 36 ಏಕದಿನ ಮತ್ತು 10 ಟಿ 20 ಪಂದ್ಯಗಳನ್ನು ಆಡಿರುವ ಮಿಶ್ರಾ, ವಿರಾಟ್ ಮತ್ತು ರೋಹಿತ್ ಶರ್ಮಾ ಅವರ ಸ್ವಭಾವವನ್ನು ಹೋಲಿಕೆ ಮಾಡಿದ್ದಾರೆ.

ರೋಹಿತ್ ಬದಲಾಗಿಲ್ಲ. ಆದರೆ ಕೊಹ್ಲಿಯ ನಡವಳಿಕೆಯಲ್ಲಿ ತೀವ್ರ ಬದಲಾವಣೆಯಾಗಿದೆ ಎಂದು ಮಿಶ್ರಾ ಹೇಳಿದ್ದಾರೆ. ತಮ್ಮ ಕಾರ್ಯಕ್ರಮದಲ್ಲಿ ಯೂಟ್ಯೂಬರ್ ಶುಭಂಕರ್ ಮಿಶ್ರಾ ಅವರೊಂದಿಗೆ ಮಾತನಾಡುವಾಗ ಮಿಶ್ರಾ ಈ ಆರೋಪ ಮಾಡಿದ್ದಾರೆ

“ನಾನು ಸುಳ್ಳು ಹೇಳುವುದಿಲ್ಲ. ಒಬ್ಬ ಕ್ರಿಕೆಟಿಗನಾಗಿ, ನಾನು ಅವರನ್ನು ತುಂಬಾ ಗೌರವಿಸುತ್ತೇನೆ. ಆದರೆ ನಾನು ಮೊದಲಿನಂತೆ ಅವರೊಂದಿಗೆ ಅದೇ ಅಭಿಮಾನ ಹಂಚಿಕೊಳ್ಳುವುದಿಲ್ಲ. ವಿರಾಟ್ ಗೆ ಕಡಿಮೆ ಸ್ನೇಹಿತರು ಏಕೆ ಇದ್ದಾರೆ? ಅವರ ಮತ್ತು ರೋಹಿತ್ ಅವರ ಸ್ವಭಾವಗಳು ವಿಭಿನ್ನವಾಗಿವೆ. ರೋಹಿತ್ ಬಗ್ಗೆ ನಾನು ನಿಮಗೆ ಉತ್ತಮ ವಿಷಯ ಹೇಳುತ್ತೇನೆ. ನಾನು ಅವರನ್ನು ಮೊದಲ ದಿನ ಭೇಟಿಯಾದಾಗ ಮತ್ತು ಈಗ ನಾನು ಅವರನ್ನು ಭೇಟಿಯಾದಾಗ, ಅದೇ ರೋಹಿತ್ ಮುಂದಿರುತ್ತಾರೆ. ಆದ್ದರಿಂದ ನೀವು ಅವರೊಂದಿಗೆ ಉತ್ತಮ ಸಂಬಂಧ ಹೊಂದಬಹುದು. ಆದರೆ, ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುವ ಯಾರೊಂದಿಗಾದರೂ ಸಂಬಂಧ ಹೊಂದುವುದು ಸಾಧ್ಯವೇ ಎಂದು ಮಿಶ್ರಾ ಹೇಳಿದರು.

ಇದನ್ನೂ ಓದಿ: Jasprit Bumrah : ಬುಮ್ರಾ ಶೈಲಿಯಲ್ಲೇ ಬೌಲಿಂಗ್ ಮಾಡುವ ಪಾಕಿಸ್ತಾನದ ಬಾಲಕನ ವಿಡಿಯೊ ವೈರಲ್​

ವಿರಾಟ್ ಸಾಕಷ್ಟು ಬದಲಾಗುವುದನ್ನು ನಾನು ನೋಡಿದ್ದೇನೆ. ನಾವು ಮಾತನಾಡುವುದನ್ನು ಬಹುತೇಕ ನಿಲ್ಲಿಸಿದ್ದೆವು. ನೀವು ಖ್ಯಾತಿ ಮತ್ತು ಅಧಿಕಾರವನ್ನು ಪಡೆದಾಗ ಒಳ್ಳೆಯವರಾಗಬೇಕ. ನಾನು ಎಂದಿಗೂ ಅವರಲ್ಲಿ ಒಬ್ಬನಾಗಿರಲಿಲ್ಲ. ಕೊಹ್ಲಿ 14 ವರ್ಷದವನಿದ್ದಾಗಿನಿಂದಲೂ ನನಗೆ ಗೊತ್ತು. ಆತ ಹೆಚ್ಚು ಸಮೋಸಾ ತಿನ್ನುತ್ತಿದ್ದ. ಅವನಿಗೆ ಪ್ರತಿದಿನ ರಾತ್ರಿ ಪಿಜ್ಜಾ ಬೇಕಾಗಿತ್ತು. ಆದರೆ ನಾನು ಕಂಡಿರುವ ಕೊಹ್ಲಿ ಮತ್ತು ನಾಯಕ ವಿರಾಟ್ ಕೊಹ್ಲಿಯಲ್ಲಿ ಭಾರಿ ವ್ಯತ್ಯಾಸವಿದೆ. ಅವರು ನನ್ನನ್ನು ಭೇಟಿಯಾದಾಗಲೆಲ್ಲಾ ಬೇರೆ ರೀತಿ ಕಾಣುತ್ತಿದ್ದರು ಎಂದು ಮಿಶ್ರಾ ಹೇಳಿದ್ದಾರೆ.

ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆದ ಟಿ 20 ವಿಶ್ವಕಪ್ ಗೆದ್ದ ನಂತರ ಕೊಹ್ಲಿ ಇತ್ತೀಚೆಗೆ ಟಿ 20 ಯಿಂದ ನಿವೃತ್ತರಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಗೆದ್ದ ಫೈನಲ್ ನಲ್ಲಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ವಿಶ್ವಕಪ್, ಐಪಿಎಲ್ ಮತ್ತು ದ್ವಿಪಕ್ಷೀಯ ವ್ಯವಹಾರಗಳನ್ನು ಒಳಗೊಂಡ ಕ್ರಿಕೆಟ್​​ ಅಭಿಯಾನದ ನಂತರ ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಪ್ರಸ್ತುತ ವಿರಾಮದಲ್ಲಿದ್ದಾರೆ.

Continue Reading

ಕ್ರಿಕೆಟ್

Jasprit Bumrah : ಬುಮ್ರಾ ಶೈಲಿಯಲ್ಲೇ ಬೌಲಿಂಗ್ ಮಾಡುವ ಪಾಕಿಸ್ತಾನದ ಬಾಲಕನ ವಿಡಿಯೊ ವೈರಲ್​

Jasprit Bumrah : ಚಿಕ್ಕ ಮಕ್ಕಳು ಜಸ್ಪ್ರೀತ್ ಬುಮ್ರಾ ಅವರ ಕ್ರಮವನ್ನು ನಕಲು ಮಾಡಲು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. ಏಕೆಂದರೆ ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್​ನ ಮಕ್ಕಳು ಬುಮ್ರಾ ಅವರ ಬೌಲಿಂಗ್ ಕ್ರಮವನ್ನು ಅನುಕರಿಸುವ ವೀಡಿಯೊ ವೈರಲ್ ಆಗಿತ್ತು. ಬುಮ್ರಾ ಅವರ ವಿಶೇಷ ಬೌಲಿಂಗ್ ಶೈಲಿಯನ್ನು ಬೇರೆ ಬೇರೆ ರೀತಿಯಲ್ಲಿ ಅನುಕರಿಸುವುದಕ್ಕೆ ಕಾರಣ ಅವರ ಯಶಸ್ಸು. ಯಾಕೆಂದರೆ ಅವರು ಬೌಲಿಂಗ್​ನಲ್ಲಿ ಅತಿ ಹೆಚ್ಚು ವಿಕೆಟ್​ಗಳನ್ನು ಪಡೆಯುವ ಕಾರಣ ಮಕ್ಕಳು ಅದರ ಕಡೆಗೆ ಆಕರ್ಷಿತರಾಗಿದ್ದಾರೆ.

VISTARANEWS.COM


on

Jasprit Bumrah
Koo

ಬೆಂಗಳೂರು: ಮುಂಬೈ ಇಂಡಿಯನ್ ತಂಡದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಆಧುನಿಕ ಯುಗದ ಅತ್ಯುತ್ತಮ ವೇಗದ ಬೌಲರ್. ಅವರು ತಮ್ಮ ವೃತ್ತಿ ಜೀವನದ ಅತ್ಯುತ್ತಮ ಫಾರ್ಮ್​​ನಲ್ಲಿದ್ದಾರೆ. 2024 ರ ಟಿ 20 ವಿಶ್ವಕಪ್​​ನಲ್ಲಿ ಬುಮ್ರಾ ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಸಾಬೀತುಪಡಿಸಿದ್ದಾರೆ. ಅಲ್ಲಿ ಅವರು ತಮ್ಮ ಅದ್ಭುತ ಪ್ರದರ್ಶನಕ್ಕಾಗಿ ಪಂದ್ಯಾವಳಿಯ ಅತ್ಯುತ್ತಮ ಆಟಗಾರ ಪ್ರಶಸ್ತಿ ಗೆದ್ದಿದ್ದಾರೆ. ಮುಕ್ತಾಯಗೊಂಡ ಆ ಆವೃತ್ತಿಯಲ್ಲಿ ಜಸ್ಪ್ರೀತ್ 15 ವಿಕೆಟ್​ಗಳನ್ನು ಪಡೆದುಕೊಂಡಿದ್ದಾರೆ. ಬುಮ್ರಾ ಅವರ ಕ್ರೇಜ್ ಮತ್ತು ಜನಪ್ರಿಯತೆ ವೇಗವಾಗಿ ಬೆಳೆಯುತ್ತಿದೆ ಮತ್ತು ಅವರ ಅಭಿಮಾನಿ ಬಳಗವೂ ದೇಶದ ಗಡಿಗಳನ್ನು ದಾಟುತ್ತಿದೆ. ಬುಮ್ರಾ ಅವರ ಪ್ರಭಾವದ ಇತ್ತೀಚಿನ ಉದಾಹರಣೆಯನ್ನು ಪಾಕಿಸ್ತಾನದಲ್ಲಿ ಕಾಣಬಹುದು. ಅಲ್ಲಿ ಚಿಕ್ಕ ಮಗುವೊಂದು ಗಲ್ಲಿ ಕ್ರಿಕೆಟ್ ಪಂದ್ಯದಲ್ಲಿ ಬುಮ್ರಾ ಶೈಲಿಯನ್ನು ಅನುಕರಿಸಿದೆ. ಆ ವಿಡಿಯೊ ವೈರಲ್ ಆಗಿದೆ.

ಚಿಕ್ಕ ಮಕ್ಕಳು ಜಸ್ಪ್ರೀತ್ ಬುಮ್ರಾ ಅವರ ಕ್ರಮವನ್ನು ನಕಲು ಮಾಡಲು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. ಏಕೆಂದರೆ ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್​ನ ಮಕ್ಕಳು ಬುಮ್ರಾ ಅವರ ಬೌಲಿಂಗ್ ಕ್ರಮವನ್ನು ಅನುಕರಿಸುವ ವೀಡಿಯೊ ವೈರಲ್ ಆಗಿತ್ತು. ಬುಮ್ರಾ ಅವರ ವಿಶೇಷ ಬೌಲಿಂಗ್ ಶೈಲಿಯನ್ನು ಬೇರೆ ಬೇರೆ ರೀತಿಯಲ್ಲಿ ಅನುಕರಿಸುವುದಕ್ಕೆ ಕಾರಣ ಅವರ ಯಶಸ್ಸು. ಯಾಕೆಂದರೆ ಅವರು ಬೌಲಿಂಗ್​ನಲ್ಲಿ ಅತಿ ಹೆಚ್ಚು ವಿಕೆಟ್​ಗಳನ್ನು ಪಡೆಯುವ ಕಾರಣ ಮಕ್ಕಳು ಅದರ ಕಡೆಗೆ ಆಕರ್ಷಿತರಾಗಿದ್ದಾರೆ.

2022ರಲ್ಲಿ ಬುಮ್ರಾ ಕಷ್ಟದ ದಿನಗಳನ್ನು ಕಂಡಿದ್ದರು. ಅವರು ಬೆನ್ನುನೋವಿನಿಂದಾಗಿ ಬಹುತೇಕ ಪಂದ್ಯಗಳಿಂದ ಹೊರಗುಳಿದಿದ್ದರು. ಆ ಸಮಯದಲ್ಲಿ, ಹಲವಾರು ಪಂಡಿತರು ಮತ್ತು ಅಭಿಮಾನಿಗಳು ಅವರ ಬೌಲಿಂಗ್ ಕ್ರಮವನ್ನು ಟೀಕಿಸಿದ್ದರು. ಏಕೆಂದರೆ ಅದನ್ನು ಗಾಯದ ಸಾಧ್ಯತೆ ಎಂದು ಪರಿಗಣಿಸಿದ್ದಾರೆ. ಆದಾಗ್ಯೂ, ಬಲಗೈ ವೇಗಿ ತನ್ನ ಪುನರಾಗಮನದೊಂದಿಗೆ ತನ್ನ ಟೀಕಾಕಾರ ಬಾಯಿ ಮುಚ್ಚಿಸಿದ್ದಾರೆ. ಈ ಬಾರಿ ಪಂಡಿತರು ಅವರ ವಿಶೇಷ ಬೌಲಿಂಗ್ ಶೈಲಿಯೇ ಅವರಿಗೆ ವರದಾನ ಎಂದು ಹೇಳಿದ್ದಾರೆ.

ಐಸಿಸಿ ತಿಂಗಳ ಪ್ರಶಸ್ತಿ ಗೆದ್ದ ಜಸ್​ಪ್ರೀತ್​ ಬುಮ್ರಾ

ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅಮೋಘ ಬೌಲಿಂಗ್​ ಪ್ರದರ್ಶನ ತೋರಿದ ಟೀಮ್​ ಇಂಡಿಯಾದ ಸ್ಟಾರ್​ ವೇಗಿ ಜಸ್​ಪ್ರೀತ್​ ಬುಮ್ರಾ(Jasprit Bumrah)​ ಅವರು ಜೂನ್ ತಿಂಗಳ ಐಸಿಸಿ ಆಟಗಾರ(ICC Player Of The Month Award) ಗೌರವಕ್ಕೆ ಭಾಜನರಾಗಿದ್ದಾರೆ. ಇದೇ ವೇಳೆ ಭಾರತ ಮಹಿಳಾ ತಂಡದ ಆಟಗಾರ್ತಿ ಸ್ಮೃತಿ ಮಂಧಾನ(Smriti Mandhana) ಐಸಿಸಿ ಮಹಿಳಾ ಆಟಗಾರ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: Virat kohli : ಕೊಹ್ಲಿ ಜತೆಗಿನ ಮುನಿಸು ಕೊನೆಗೊಳಿಸಿದ್ದೇ ಗಂಭೀರ್​; ವಿರಾಟ್ ಅಹಂ ಬಿಡಲಿಲ್ಲ ಎಂದ ಮಾಜಿ ಸ್ಪಿನ್ನರ್​​

ಜೂನ್​ ತಿಂಗಳ ಐಸಿಸಿ ಆಟಗಾರ ಪಟ್ಟಿಯಲ್ಲಿ ಜಸ್​ಪ್ರೀತ್​ ಬುಮ್ರಾ ಜತೆ ರೋಹಿತ್ ಶರ್ಮಾ ಹಾಗೂ ಅಫಘಾನಿಸ್ತಾನದ ಆರಂಭಿಕ ಬ್ಯಾಟರ್ ರೆಹಮಾನುಲ್ಲಾ ಗುರ್ಬಾಜ್ ಕೂಡ ರೇಸ್​ನಲ್ಲಿದ್ದರು. ಆದರೆ ಇವರನ್ನು ಬುಮ್ರಾ ಹಿಂದಿಕ್ಕಿ ಪ್ರಶಸ್ತಿ ಗೆದ್ದಿದ್ದಾರೆ.

30 ವರ್ಷದ ಬುಮ್ರಾ ಟಿ20 ವಿಶ್ವಕಪ್​ ಟೂರ್ನಿಯಲ್ಲಿ 8.26ರ ಸರಾಸರಿಯಲ್ಲಿ ಒಟ್ಟು 15 ವಿಕೆಟ್‌ಗಳನ್ನು ಕಬಳಿಸಿದ್ದರು. ಅಲ್ಲದೆ ಸರಣಿಶ್ರೇಷ್ಠ ಪ್ರಶಸ್ತಿಯನ್ನೂ ಕೂಡ ತಮ್ಮದಾಗಿಸಿಕೊಂಡಿದ್ದರು. ಐರ್ಲೆಂಡ್ (3/6), ಪಾಕಿಸ್ತಾನ (3/14), ಇಂಗ್ಲೆಂಡ್ (2/12), ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ (2/18) ವಿಕೆಟ್​ ಕಿತ್ತಿದ್ದರು. ಫೈನಲ್​ ಪಂದ್ಯದಲ್ಲಿ ಶ್ರೇಷ್ಠ ಬೌಲಿಂಗ್​ ಪ್ರದರ್ಶನ ತೋರದೇ ಹೋಗಿದ್ದರೆ ಭಾರತ ಕಪ್​ ಗೆಲ್ಲುವುದು ಕೂಡ ಅಸಾಧ್ಯ ಎನ್ನುವಂತಿತ್ತು. 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್​ನಲ್ಲಿ ಬುಮ್ರಾ ಬೆನ್ನು ನೋವಿನ ಕಾರಣದಿಂದ ಆಡಿರಲಿಲ್ಲ.

Continue Reading

ಬೆಂಗಳೂರು

Grassroot Boxing: ಬೆಂಗಳೂರಿನಲ್ಲಿ ರೋಮಾಂಚನಗೊಳಿಸಿದ ಬಾಕ್ಸಿಂಗ್‌ ಪಂದ್ಯ

Grassroot Boxing: ಬೆಂಗಳೂರಿನಲ್ಲಿ ನಡೆದ ಅಪ್ರತಿಮ ಕ್ರೀಡಾಪಟುಗಳ ನಡುವಿನ ಬಿರುಸಿನ ಬಾಕ್ಸಿಂಗ್ ಪಂದ್ಯಗಳು ಕ್ರೀಡಾಭಿಮಾನಿಗಳಲ್ಲಿ ರೋಚಕತೆ ಮೂಡಿಸಿದವು. ಒಟ್ಟು 44 ಬಾಕ್ಸರ್‌ಗಳು ಈ ಅತ್ಯುನ್ನತ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದು, ಸ್ಪರ್ಧಿಗಳ ಪೈಕಿ 94 ಕೆಜಿ ವಿಭಾಗದಲ್ಲಿ ತಹೇರ್ ಖುರಾಮ್, 53.523 ಕೆಜಿ ಸ್ಪರ್ಧಿಗಳ ವಿಭಾಗದಲ್ಲಿ ಮಜರ್ ಹುಸೇನ್ ಮತ್ತು ವಿಕ್ರಂ ಸಿಂಗ್ ಜೇಷ್ಠ, 50.802 ಕೆಜಿ ಸ್ಪರ್ಧಿಗಳ ವಿಭಾಗದಲ್ಲಿ ಪ್ರದೀಶ್ ಎ, 52.163 ಕೆಜಿ ಸ್ಪರ್ಧಿಗಳ ವಿಭಾಗದಲ್ಲಿ ಮೊಹಮ್ಮದ್ ಶಮಿನ್ ಸೇರಿದಂತೆ ಹಲವಾರು ಸ್ಪರ್ಧಿಗಳು ಗೆಲುವಿನ ಕಿರಿಟವನ್ನು ಮುಡಿಗೇರಿಸಿಕೊಂಡರು.

VISTARANEWS.COM


on

Grassroot Boxing match in Bengaluru
Koo

ಬೆಂಗಳೂರು: ನಗರದಲ್ಲಿ ನಡೆದ ಅಪ್ರತಿಮ ಕ್ರೀಡಾಪಟುಗಳ ನಡುವಿನ ಬಿರುಸಿನ ಬಾಕ್ಸಿಂಗ್ ಪಂದ್ಯಗಳು (Grassroot Boxing) ಕ್ರೀಡಾಭಿಮಾನಿಗಳಲ್ಲಿ ರೋಚಕತೆ ಮೂಡಿಸಿದವು. ಭಾರತದ ಮೂಲೆಮೂಲೆಯ ಶ್ರೇಷ್ಠ ಬಾಕ್ಸರ್‌ಗಳು ನಗರದಲ್ಲಿ ಮುಖಾಮುಖಿಯಾಗಿದ್ದು, ಕ್ರೀಡಾ ಉತ್ಸಾಹಿಗಳಲ್ಲಿ ಸಂಚಲನ ಮೂಡಿಸಿತು.

ಗ್ರಾಸ್ರೂಟ್ ಬಾಕ್ಸಿಂಗ್ ಈ ಜಟ್ಟಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಅವರ ಬಾಕ್ಸಿಂಗ್ ದಾಖಲೆಗಳನ್ನು ಹೆಚ್ಚಿಸಲು ಅತ್ಯುತ್ತಮ ವೇದಿಕೆಯನ್ನು ರೂಪಿಸಿತ್ತು. ಈ ವೇದಿಕೆಯು ಕ್ರೀಡಾಪಟುಗಳನ್ನು ವೃತ್ತಿಪರ ಪಂದ್ಯಗಳಿಗೆ ಸಜ್ಜುಗೊಳಿಸುವುದರ ಜತೆಗೆ ಬಾಕ್ಸಿಂಗ್ ಪಂದ್ಯವನ್ನು ಭಾರತದಲ್ಲಿ ಪ್ರೋತ್ಸಾಹಿಸುವ ಆಶಯವನ್ನು ಹೊಂದಿದೆ.

44 ಬಾಕ್ಸರ್‌ಗಳು ಸ್ಪರ್ಧೆಯಲ್ಲಿ ಕಣಕ್ಕೆ

ಒಟ್ಟು 44 ಬಾಕ್ಸರ್‌ಗಳು ಈ ಅತ್ಯುನ್ನತ ಸ್ಪರ್ಧೆಯಲ್ಲಿ ಕಣಕ್ಕೆ ಇಳಿದಿದ್ದು, ಸ್ಪರ್ಧಿಗಳ ಪೈಕಿ 94 ಕೆಜಿ ವಿಭಾಗದಲ್ಲಿ ತಹೇರ್ ಖುರಾಮ್, 53.523 ಕೆಜಿ ಸ್ಪರ್ಧಿಗಳ ವಿಭಾಗದಲ್ಲಿ ಮಜರ್ ಹುಸೇನ್ ಮತ್ತು ವಿಕ್ರಂ ಸಿಂಗ್ ಜೇಷ್ಠ, 50.802 ಕೆಜಿ ಸ್ಪರ್ಧಿಗಳ ವಿಭಾಗದಲ್ಲಿ ಪ್ರದೀಶ್ ಎ, 52.163 ಕೆಜಿ ಸ್ಪರ್ಧಿಗಳ ವಿಭಾಗದಲ್ಲಿ ಮೊಹಮ್ಮದ್ ಶಮಿನ್ ಸೇರಿದಂತೆ ಹಲವಾರು ಸ್ಪರ್ಧಿಗಳು ಗೆಲುವಿನ ಕಿರಿಟವನ್ನು ಮುಡಿಗೇರಿಸಿಕೊಂಡರು.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್ ಯಾವಾಗ ಆರಂಭ? ಬೃಹತ್​ ಕ್ರೀಡಾಕೂಟಕ್ಕೆ ನಡೆಸಿರುವ ಸಿದ್ಧತೆಗಳೇನು?

ಈ ಕುರಿತು ಗ್ರಾಸ್ರೂಟ್ ವ್ಯವಸ್ಥಾಪಕ ಮುಜ್ತಬ ಕಮಲ್ ಮಾತನಾಡಿ, ಪ್ರತಿಭೆಗಳನ್ನು ಪ್ರೋತ್ಸಾಹಿಸುವುದೇ ನಮ್ಮ ಗುರಿ. ಅದಕ್ಕಾಗಿ ನಾವು ವೇದಿಕೆಯನ್ನು ಒದಗಿಸಲು ಸದಾ ಸಿದ್ಧ ಎಂದು ತಿಳಿಸಿದರು.

ಗ್ರಾಸ್ರೂಟ್ ಬಾಕ್ಸಿಂಗ್, ತಳಮಟ್ಟದಿಂದ ಪ್ರತಿಭೆಯನ್ನು ಪೋಷಿಸುವುದರೆಡೆಗೆ ಗಮನಹರಿಸುತ್ತಿದೆ. ಇದು ಯುವ ಮತ್ತು ಹವ್ಯಾಸಿ ಬಾಕ್ಸರ್‌ಗಳ ಕೌಶಲ್ಯಗಳನ್ನು ಗೌರವಿಸಲು ರೂಪಿಸಲಾಗಿದೆ. ಅಗತ್ಯ ಸಂಪನ್ಮೂಲಗಳು, ತರಬೇತಿ ಮತ್ತು ವೃತ್ತಿ ನಿರ್ಮಾಣ ಅವಕಾಶಗಳನ್ನು ಒದಗಿಸುವ ಮೂಲಕ, ತಳಮಟ್ಟದ ಉಪಕ್ರಮಗಳು ಜಾಗತಿಕ ವೇದಿಕೆಯಲ್ಲಿ ಸ್ಪರ್ಧಿಸಬಹುದಾದ ನುರಿತ ಕ್ರೀಡಾಪಟುಗಳ ತಂಡವನ್ನು ಬೆಳೆಸುವ ಗುರಿಯನ್ನು ಹೊಂದಿದೆ.

ಈ ಸ್ಪರ್ಧೆಯಲ್ಲಿನ ಗೆಲುವು ವಿಜೇತರಿಗೆ ಅಂತಾರಾಷ್ಟ್ರೀಯ ಮನ್ನಣೆಗೆ ಅವಕಾಶದ ಬಾಗಿಲು ತೆರೆಯುವಂತೆ ಮಾಡುತ್ತದೆ. ಈ ಮಾನ್ಯತೆ ಅವರ ಬಾಕ್ಸಿಂಗ್ ದಾಖಲೆಗಳನ್ನು ಹೆಚ್ಚಿಸುವುದು ಮಾತ್ರವಲ್ಲದೆ ಭವಿಷ್ಯದ ಅವಕಾಶಗಳು ಮತ್ತು ಜಾಗತಿಕ ಬಾಕ್ಸಿಂಗ್ ಸಮುದಾಯದಲ್ಲಿ ಗುರುತಿಸುವಿಕೆಗಾಗಿ ವೇದಿಕೆಯಾಗಲಿದೆ ಎಂದರು.

ಭಾರತೀಯ ವೃತ್ತಿಪರ ಬಾಕ್ಸಿಂಗ್ ಅನ್ನು ವಿಶ್ವ ವೇದಿಕೆಗೆಯೆಡೆಗೆ ಕೊಂಡೊಯ್ಯುವುದು ಇದರ ಉದ್ದೇಶವಾಗಿದೆ. ಭಾರತ ಮತ್ತು ಏಷ್ಯಾದಲ್ಲಿ ಕ್ರೀಡಾಪಟುಗಳ ನಿರ್ವಹಣೆ, ಪ್ರಚಾರಗಳು ಮತ್ತು ಒಟ್ಟಾರೆ ವೃತ್ತಿಪರ ಬಾಕ್ಸಿಂಗ್ ನಿರ್ವಹಣೆಯಲ್ಲಿ ಟ್ರಯಲ್‌ ಬ್ಲೇಜರ್ ಆಗಿರುವ ಗ್ರಾಸ್ರೂಟ್ ಬಾಕ್ಸಿಂಗ್, ದೇಶದ ಹಲವು ಅಸಾಧಾರಣ ಬಾಕ್ಸರ್‌ಗಳ ವೃತ್ತಿಜೀವನವನ್ನು ಯಶಸ್ವಿಯಾಗಿ ರೂಪಿಸಿದೆ.

ಇದನ್ನೂ ಓದಿ: Teachers Recruitment: 10 ಸಾವಿರ ಶಿಕ್ಷಕರ ನೇಮಕಕ್ಕೆ ಶೀಘ್ರದಲ್ಲೇ ಅಧಿಸೂಚನೆ: ಸಚಿವ ಮಧು ಬಂಗಾರಪ್ಪ

ಇಲ್ಲಿಯವರೆಗೆ ಗ್ರಾಸ್ರೂಟ್ ಬಾಕ್ಸಿಂಗ್ ಭಾರತ, ಯುಎಇ, ಥೈಲ್ಯಾಂಡ್ ಮತ್ತು ಉಗಾಂಡಾದಾದ್ಯಂತ 41 ವೃತ್ತಿಪರ ಬಾಕ್ಸಿಂಗ್ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಜಾಗತಿಕ ಮಟ್ಟದಲ್ಲಿ ಭಾರತೀಯ ವೃತ್ತಿಪರ ಬಾಕ್ಸರ್‌ಗಳ ಅಪಾರ ಸಾಮರ್ಥ್ಯದ ಬಗ್ಗೆ ದೃಢವಾದ ನಂಬಿಕೆಯೊಂದಿಗೆ, ಗ್ರಾಸ್ರೂಟ್ ಬಾಕ್ಸಿಂಗ್ ಅಥ್ಲೀಟ್ ನಿರ್ವಹಣೆಯಲ್ಲಿ ಮ್ಯಾಚ್ರೂಮ್, ಟಾಪ್ರಾಂಕ್, ಗೋಲ್ಡನ್ ಬಾಯ್ ಮತ್ತು ಕ್ರೀಡೆಯಲ್ಲಿನ ಇತರ ಪ್ರಮುಖ ಘಟಕಗಳನ್ನು ಒಳಗೊಂಡಂತೆ ವಿಶ್ವಾದ್ಯಂತ ಪ್ರಸಿದ್ಧ ಬಾಕ್ಸಿಂಗ್ ಪ್ರಚಾರ ಸಹಯೋಗವನ್ನು ಪ್ರಾರಂಭಿಸಿದೆ.

Continue Reading
Advertisement
BJP MLA
ಪ್ರಮುಖ ಸುದ್ದಿ15 mins ago

BJP MLA: ಡಿಗ್ರಿ ಉಪಯೋಗಕ್ಕೆ ಬರಲ್ಲ, ಪಂಕ್ಚರ್‌ ಅಂಗಡಿ ತೆರೆಯಿರಿ; ವಿದ್ಯಾರ್ಥಿಗಳಿಗೆ ಬಿಜೆಪಿ ಶಾಸಕ ಕರೆ!

Pani Puri Machine
Latest18 mins ago

Pani Puri Machine: ಬೆಂಗಳೂರಿಗೆ ಬಂದಿದೆ ಪಾನಿಪುರಿ ನೀಡುವ ಮೆಷಿನ್! ಇದು ಹೇಗಿದೆ ನೋಡಿ

Paris Olympics 2024
ಕ್ರೀಡೆ18 mins ago

Paris Olympics 2024: ಮೊಟ್ಟಮೊದಲ ಒಲಿಂಪಿಕ್ಸ್ ಕ್ರೀಡಾಕೂಟದ 10 ಕುತೂಹಲಕರ ಸಂಗತಿಗಳಿವು

goa ನನ್ನ ದೇಶ ನನ್ನ ದನಿ
ಅಂಕಣ25 mins ago

ನನ್ನ ದೇಶ ನನ್ನ ದನಿ ಅಂಕಣ: ಗೋವಾದಲ್ಲಿ ಹಿಂದೂಗಳ ಮೇಲಿತ್ತು ಜುಟ್ಟಿನ ತೆರಿಗೆ!

rain news kottigehara bus stand collapse
ಪ್ರಮುಖ ಸುದ್ದಿ43 mins ago

Rain News: ಮಳೆಯ ಅಬ್ಬರಕ್ಕೆ ಧಡಾರ್‌ ಎಂದು ನೆಲಕಚ್ಚಿದ ಕೊಟ್ಟಿಗೆಹಾರ ಬಸ್‌ ನಿಲ್ದಾಣ!

Char Dham Yatra 2024
ಪ್ರವಾಸ1 hour ago

Char Dham Yatra 2024: ಚಾರ್‌ಧಾಮ್‌, ಕೇದಾರನಾಥನ ದರ್ಶನ ಮಾಡುವ ಆಸೆ ಇದೆಯೆ? ಈ ಮಹತ್ವದ ಸಂಗತಿಗಳನ್ನು ತಿಳಿದುಕೊಂಡಿರಿ

karnataka weather Forecast
ಮಳೆ1 hour ago

Karnataka Weather : ಅಬ್ಬರಿಸುತ್ತಿರುವ ಮುಂಗಾರು; ಕರಾವಳಿ, ಮಲೆನಾಡಿನಲ್ಲಿ ಇಂದು ಸಹ ಜೋರು ಮಳೆ

Vastu Tips
ಧಾರ್ಮಿಕ1 hour ago

Vastu Tips: ವಾಸ್ತು ಪ್ರಕಾರ ಮಕ್ಕಳ ಅಧ್ಯಯನ ಕೊಠಡಿ ಹೀಗಿರಬೇಕು

Mosquito Repellent Plants
ಆರೋಗ್ಯ2 hours ago

Mosquito Repellent Plants: ನಿಮಗೆ ಗೊತ್ತೆ? ಈ 5 ಬಗೆಯ ಗಿಡಗಳು ಸೊಳ್ಳೆಗಳನ್ನು ಓಡಿಸುತ್ತವೆ!

Somanathapura Talakadu Madhyaranga Bharachukki Gaganachukki KSRTC Package Tour from Bengaluru
ಕರ್ನಾಟಕ2 hours ago

KSRTC Package Tour: ಸೋಮನಾಥಪುರ, ತಲಕಾಡು, ಮಧ್ಯರಂಗ, ಭರಚುಕ್ಕಿ, ಗಗನಚುಕ್ಕಿಗೆ ಕೆಎಸ್‌ಆರ್‌ಟಿಸಿ ಪ್ಯಾಕೇಜ್‌ ಟೂರ್‌; ದರವೆಷ್ಟು?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ14 hours ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ21 hours ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ1 day ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ3 days ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

ಟ್ರೆಂಡಿಂಗ್‌