IPL 2023: Navin-ul-Haq praises Gautam Gambhir as an extraordinary coach IPL 2023 : ಗೌತಮ್​ ಗಂಭೀರ್​ ಅಸಾಮಾನ್ಯ ಕೋಚ್​ ಎಂದು ಹೊಗಳಿದ ನವಿನ್​ ಉಲ್​ ಹಕ್​! Vistara News
Connect with us

ಕ್ರಿಕೆಟ್

IPL 2023 : ಗೌತಮ್​ ಗಂಭೀರ್​ ಅಸಾಮಾನ್ಯ ಕೋಚ್​ ಎಂದು ಹೊಗಳಿದ ನವಿನ್​ ಉಲ್​ ಹಕ್​!

ಗಂಭೀರ್​ ಮತ್ತು ಕೊಹ್ಲಿ ಗಲಾಟೆಯ ಬಳಿಕ ಸುದ್ದಿಯಲ್ಲಿದ್ದ ಅಫಘಾನಿಸ್ತಾನ ಬೌಲರ್​ ಲಕ್ನೊ ಸೂಪರ್​ ಜೈಂಟ್ಸ್ ತಂಡದ ಮಾರ್ಗದರ್ಶರಿಗೆ ಮತ್ತೊಂದು ಬಾರಿ ಹೊಗಳಿಕೆ ಸಲ್ಲಿಸಿದ್ದಾರೆ.

VISTARANEWS.COM


on

IPL 2023 Navin ul Haq praises Gautam Gambhir as an extraordinary coach
Koo

ಲಖನೌ: ಗೌತಮ್​ ಗಂಭೀರ್ ಮತ್ತು ವಿರಾಟ್ ಕೊಹ್ಲಿಯ ನಡುವಿನ ಗಲಾಟೆಯ ವೇಳೆ ಮುನ್ನೆಲೆಗೆ ಬಂದವರು ಲಕ್ನೊ ಸೂಪರ್​ ಜೈಂಟ್ಸ್​ ತಂಡದ ವೇಗದ ಬೌಲರ್​ ನವಿನ್​ ಉಲ್ ಹಕ್​. ಅಪಘಾನಿಸ್ತಾನದ ಈ ಯುವ ಬೌಲರ್​ ವಿರಾಟ್​ ಕೊಹ್ಲಿಯ ಜತೆ ಮೈದಾನದಲ್ಲಿ ಹಾಗೂ ಪಂದ್ಯದ ಬಳಿಕವೂ ಜಗಳವಾಡಿದ್ದರು. ಶತ್ರುವಿನ ಶತ್ರು ಮಿತ್ರ ಎಂಬಂತೆ ಆ ಬಳಿಕ ಗಂಭೀರ್ ಹಾಗೂ ನವಿನ್​ ಸಾಕಷ್ಟು ಹತ್ತಿರವಾಗಿದ್ದರು. ಕೊಹ್ಲಿಯನ್ನು ವಿರೋಧಿಸಲು ತಮಗೊಬ್ಬರ ನೆರವು ಇದೆ ಎಂದು ಗೊತ್ತಾಗಿದ್ದೇ ತಂಡ ನವಿನ್​ ಉಲ್​ ಹಕ್​, ಸೋಶಿಯಲ್​ ಮೀಡಿಯಾಗಳಲ್ಲೂ ಕೊಹ್ಲಿಯನ್ನು ಕೆಣಕುತ್ತಿದ್ದರು. ಕೊಹ್ಲಿ ಔಟಾದಾದ ಮಾವಿನ ಹಣ್ಣಿ ಚಿತ್ರ ಹಾಕಿ ಸಂಭ್ರಮಿಸಿದ್ದು, ಆರ್​ಸಿಬಿ ಲೀಗ್ ಹಂತದಲ್ಲೇ ಹೊರ ಬಿದ್ದಾಗ ಇನ್​ಸ್ಟಾಗ್ರಾಮ್​ನಲ್ಲಿ ತಮಾಷೆ ಮಾಡಿದ್ದೆಲ್ಲವೂ ಸುದ್ದಿಯಾಗಿತ್ತು. ಇದೀಗ ಲಕ್ನೊ ತಂಡದ ಐಪಿಎಲ್​ ಅಭಿಯಾನ ಕೊನೆಗೊಂಡಿದೆ. ಈ ರೀತಿಯಾಗಿ ವಾಪಸ್​ ತೆರಳಲು ಮುಂದಾಗಿರು ಅವರು ಮೆಂಟರ್​ ಗೌತಮ್​ ಗಂಭೀರ್ ಅವರನ್ನು ಬಾಯ್ತುಂಬಾ ಹೊಗಳಿದ್ದಾರೆ.

“ಮಾರ್ಗದರ್ಶಕ, ತರಬೇತುದಾರ, ಆಟಗಾರ ಅಥವಾ ಯಾರಾದರೂ ನಾನು ಮೈದಾನದಲ್ಲಿ ಪ್ರತಿಯೊಬ್ಬನ ಪರವಾಗಿ ನಿಲ್ಲುತ್ತೇನೆ. ಪ್ರತಿಯೊಬ್ಬರಿಂದಲೂ ನಾನು ಅದನ್ನೇ ನಿರೀಕ್ಷಿಸುತ್ತೇನೆ. ಅಂತೆಯೇ ಗೌತಮ್​ ಗಂಭೀರ್​ ಭಾರತ ಕ್ರಿಕೆಟ್​​ನ ದಂತಕಥೆಯಾಗಿದ್ದಾರೆ. ಅವರಿಗೆ ಭಾರತದಲ್ಲಿ ಅಪಾರ ಗೌರವವಿದೆ. ಅವರು ಭಾರತೀಯ ಕ್ರಿಕೆಟ್​​ಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಒಬ್ಬ ಮಾರ್ಗದರ್ಶಕನಾಗಿ, ತರಬೇತುದಾರನಾಗಿ, ಕ್ರಿಕೆಟ್​​ ದಂತಕಥೆಯಾಗಿ ನಾನು ಅವರನ್ನು ತುಂಬಾ ಗೌರವಿಸುತ್ತೇನೆ. ಅವರಿಂದ ಅನೇಕ ವಿಷಯಗಳನ್ನು ಕಲಿತಿದ್ದೇನೆ. ಮೈದಾನದ ಒಳಗೆ ಮತ್ತು ಹೊರಗೆ ನನ್ನ ಕ್ರಿಕೆಟ್ ಅನ್ನು ನಾನು ನಿರ್ವಹಿಸಬೇಕು ಎಂಬುದನ್ನು ಅವರಿಂದ ಕಲಿತಿದ್ದೇನೆ ಎಂಬುದಾಗಿ ನವಿನ್​ ಉಲ್​ ಹಕ್​ ಹೇಳಿದ್ದಾರೆ.

ನನ್ನ ವೈಯಕ್ತಿಕ ಪ್ರದರ್ಶನಕ್ಕೆ ಎರಡನೇ ಸ್ಥಾನ

ಮುಂಬೈ ವಿರುದ್ಧದ ಪಂದ್ಯದಲ್ಲಿ ನವೀನ್ 9.50ರ ಸರಾಸರಿಯಲ್ಲಿ 38 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಇದಲ್ಲದೆ, ಪ್ರಸ್ತುತ ಋತುವಿನಲ್ಲಿ ಫ್ರಾಂಚೈಸಿಗಾಗಿ ಆಡಿದ 8 ಪಂದ್ಯಗಳಲ್ಲಿ ವೇಗಿ 11 ವಿಕೆಟ್​​ಗಳನ್ನು ಪಡೆದಿದ್ದಾರೆ. ಆದರೆ ತಮ್ಮ ವೈಯಕ್ತಿಕ ಪ್ರದರ್ಶನಗಳಿಗಿಂತ ತಂಡಗಳ ಗೆಲುವುಗಳು ಮುಖ್ಯ ಎಂದು ನವೀನ್ ಒಪ್ಪಿಕೊಂಡಿದ್ದಾರೆ.

ಪ್ರಾಮಾಣಿಕವಾಗಿ ಹೇಳುವುದಾದರೆ, ಇದು ನನ್ನ ಉತ್ತಮ ಸೀಸನ್​​. ನಾವು ತಂಡವಾಗಿ ಇನ್ನೂ ಉತ್ತಮವಾಗಿ ಮಾಡಬಹುದಿತ್ತು. ವೈಯಕ್ತಿಕ ಪ್ರದರ್ಶನಗಳು ಲೆಕ್ಕಕ್ಕೆ ಬರುವುದಿಲ್ಲ. ಅಂತಿಯಮವಾಗಿ ಟ್ರೋಫಿಯನ್ನು ಗೆಲ್ಲುವುದು ನಮ್ಮ ತಂಡದ ಗುರಿಯಾಗಿತ್ತು. ನನ್ನ ವೈಯಕ್ತಿಕ ಪ್ರದರ್ಶನ ಎರಡನೇ ಸ್ಥಾನದಲ್ಲಿದೆ. ಇದು ನನಗೆ ಉತ್ತಮ ಋತುವಾಗಿತ್ತು, ನಾನು ಈ ಐಪಿಎಲ್​ನಿಂದ ಕೆಲವು ವಿಷಯಗಳನ್ನು ಕಲಿತಿದ್ದೇನೆ, “ಎಂದು ಅವರು ನವಿನ್ ಹೇಳಿದ್ದಾರೆ.

ಇದನ್ನೂ ಓದಿ : IPL 2023 : ಎಲ್ಲ ಐಪಿಎಲ್​ ಟೀಮ್​ಗಿಂತ ಅಧಿಕ ಆದಾಯ ಗಳಿಸಿದ ಗುಜರಾತ್​ ಟೈಟನ್ಸ್​, ಹೇಗೆ ಸಾಧ್ಯ?

ಲಕ್ನೊ ಸೂಪರ್ ಜೈಂಟ್ಸ್​ ತಂಡ ಐಪಿಎಲ್​ನ ಎಲಿಮಿನೇಟರ್​ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ 82 ರನ್​ಗಳ ಹೀನಾಯ ಸೋಲಿಗೆ ಒಳಗಾಗಿತ್ತು. ಮೇ 26ರಂದು ನಡೆಯಲಿರುವ ಕ್ವಾಲಿಫೈಯರ್ 2ರಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಹಾಗ ಐದು ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್ ನಡುವೆ ಪಂದ್ಯ ನಡೆಯಲಿದೆ . ಐದು ಬಾರಿ ಪ್ರಶಸ್ತಿ ಗೆದ್ದಿರುವ ತಂಡಗಳು ಫೈನಲ್​ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ಗುರಿ ಹೊಂದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ಕ್ರಿಕೆಟ್

IPL 2023 : ಶುಭ್​ಮನ್​ ಶತಕ ಆನ್​ಲೈನ್​ ವೀಕ್ಷಣೆಯಲ್ಲೂ ದಾಖಲೆ, ಎಷ್ಟಿತ್ತು ವೀಕ್ಷಕರ ಸಂಖ್ಯೆ?

ಶುಬ್ಮನ್ ಗಿಲ್ ಅವರ ಶತಕದ ನೆರವಿನಿಂದ ಗುಜರಾತ್ ಟೈಟನ್ಸ್ ತಂಡ 2023ರ ಐಪಿಎಲ್ ಕ್ವಾಲಿಫೈಯರ್ 2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 62 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಶತಕವು ಜಿಯೋ ಸಿನೆಮಾದಲ್ಲಿ ವೀಕ್ಷಕರ ಸಂಖ್ಯೆಯಲ್ಲಿ ಹೊಸ ವಿಶ್ವ ದಾಖಲೆ ಸೃಷ್ಟಿಸಿತು.

VISTARANEWS.COM


on

Shubman Gill century celebration
Koo

ಅಹಮದಾಬಾದ್​​: ಐಪಿಎಲ್ 2023ರಲ್ಲಿ ಗುಜರಾತ್ ಟೈಟನ್ಸ್ ತಂಡದ ಆರಂಭಿಕ ಬ್ಯಾಟರ್​​ ಶುಭ್​ಮನ್ ಗಿಲ್​ ತಮ್ಮ ಬ್ಯಾಟಿಂಗ್ ವೈಭವ ಮುಂದುವರಿಸಿದ್ದಾರೆ. ಕಳೆದ ನಾಲ್ಕು ಇನಿಂಗ್ಸ್​ಗಳಲ್ಲಿ ಮೂರನೇ ಐಪಿಎಲ್ ಶತಕವನ್ನು ಬಾರಿಸಿದ್ದಾರೆ. ಅಂತೆಯೇ ಕ್ವಾಲಿಫೈಯರ್​ 2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 129ರನ್ ಗಳಿಸುವ ಮೂಲಕ ಗಿಲ್ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಅವರ ಶತಕದ ನೆರವಿನಿಂದ ಗುಜರಾತ್​ ತಂಡ ಮೊದಲು ಬ್ಯಾಟ್​ ಮಾಡಿ 233 ರನ್ ಬಾರಿಸಿತ್ತು. ಅಂತೆಯೇ ಮುಂಬೈ ವಿರುದ್ದ 62 ರನ್​ಗಳ ವಿಜಯ ದಾಖಲಿಸಿ ಫೈನಲ್​ಗೇರಿತು.

ಇದೇ ವೇಳೆ ಐಪಿಎಲ್​ನ ಆನ್​ಲೈನ್ ಸ್ಟ್ರೀಮಿಂಗ್ ಹಕ್ಕನ್ನು ಹೊಂದಿರುವ ಜಿಯೋ ಸಿನಿಮಾ ಕೂಡ ಹೊಸ ದಾಖಲೆ ಸೃಷ್ಟಿಸಿತು. ಗಿಲ್​ ಶತಕ ಬಾರಿಸಿದ ಈ ಪಂದ್ಯವನ್ನು ಏಕಕಾಲಿಕ್ಕೆ 2.57 ಕೋಟಿ ಮಂದಿ ವೀಕ್ಷಿಸಿದ್ದರು. ಇದು ಐಪಿಎಲ್ ಇತಿಹಾಸದಲ್ಲಿಯೇ ದಾಖಲೆಯಾಗಿದೆ. ಶುಭ್​ಮನ್ ಅವರ ಶತಕಕ್ಕೆ ದಾಖಲೆಯ ಮಂದಿ ವೀಕ್ಷಕರಾದರು ಎಂದು ಜಿಯೋ ಸಿನಿಮಾ ಹೇಳಿದೆ.

ವೀಕ್ಷಕರ ಸಂಖ್ಯೆ ಗುಜರಾತ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ನಡುವಿನ ಕ್ವಾಲಿಫೈಯರ್ ಪಂದ್ಯ ಮತ್ತು 2019ರ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್​ ಪಂದ್ಯದ ದಾಖಲೆಯನ್ನು ಮೀರಿಸಿದೆ.

ಮಂಗಳವಾರ ರಾತ್ರಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಕ್ವಾಲಿಫೈಯರ್ 1 ಪಂದ್ಯದಲ್ಲಿ ಗಿಲ್ ಅವರ ಶತಕದ ವೈಭವವನ್ನು ಜಿಯೋಸಿನಿಮಾ ಅವರ ವಿಶ್ವ ದಾಖಲೆಯನ್ನು ಸರಿಗಟ್ಟಿತು ಎಂದು ಜಿಯೊ ಸಿನಿಮಾ ತಿಳಿಸಿದೆ.

ವಯಾಕಾಮ್ 18 ಸ್ಪೋರ್ಟ್ಸ್ ಸಿಇಒ ಅನಿಲ್ ಜಯರಾಜ್ ಕೂಡ ಈ ಕುರಿತು ಮಾತನಾಡಿ. “ಡಿಜಿಟಲ್ ವೇದಿಕೆಯಲ್ಲಿ ಸಮಕಾಲೀನ ವೀಕ್ಷಕರ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ಜಿಯೋ ಸಿನೆಮಾ ಒಂದು ಮೈಲಿಗಲ್ಲನ್ನು ಸ್ಥಾಪಿಸಿದೆ” ಎಂದು ಹೇಳಿದ್ದಾರೆ.

ಐಪಿಎಲ್​ 2023ರ ಆರಂಭಿಕ ಏಳು ವಾರಗಳಲ್ಲಿ 1500 ಕೋಟಿ ವೀಡಿಯೊ ವೀಕ್ಷಣೆಗಳನ್ನು ದಾಖಲಿಸುವ ಮೂಲಕ ಡಿಜಿಟಲ್ ಕ್ರೀಡಾ ಜಗತ್ತಿನಲ್ಲಿ ಇದು ಜಾಗತಿಕ ಮೈಲುಗಲ್ಲು ಸ್ಥಾಪಿಸಿದೆ. ಇತ್ತೀಚೆಗೆ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ 2.5 ಕೋಟಿ ವೀಕ್ಷಕರ ದಾಖಲೆ ಸೃಷ್ಟಿಯಾಗಿತ್ತು. ಈ ಮೂಲಕ ಜಿಯೊ ಸಿನಿಮಾ ಹಲವಾರು ಮೈಲುಗಲ್ಲುಗಳನ್ನು ದಾಟುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : IPL 2023 : ಆರ್​ಸಿಬಿ ಸೋಲುತ್ತಿದ್ದಂತೆ ವಿರಾಟ್ ಕೊಹ್ಲಿಯನ್ನು ಅಪಹಾಸ್ಯ ಮಾಡಿದ ನವಿನ್​ ಉಲ್ ಹಕ್​!

ಜಿಯೋ ಸಿಸಿಮಾದ ಟಾಟಾ ಐಪಿಎಲ್ 2023 ಪ್ರಸ್ತುತಿಯು ನಿರಂತರವಾಗಿ ಹೊಸ ಸಾಧನೆ ಮಾಡುತ್ತಿದೆ. ಋತುವಿನಾದ್ಯಂತ ಪ್ರತಿ ವಾರ ದಾಖಲೆಗಳ ಮೇಲೆ ದಾಖಲೆಗಳನ್ನು ಮುರಿದಿದೆ. ಇದು ಕ್ರಿಕೆಟ್ ಅಭಿಮಾನಿಗಳ ಆದ್ಯತೆಯ ಬದಲಾವಣೆಯ ಪುರಾವೆಯಾಗಿದೆ. ಏಪ್ರಿಲ್ 17 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಎಂಎಸ್ ಧೋನಿ ನೇತೃತ್ವದ ಸಿಎಸ್​ಕೆ ತಂಡ ಆಡುವಾಗ 2.4 ಕೋಟಿ ವೀಕ್ಷಕರು ಪಂದ್ಯ ವೀಕ್ಷಿಸಿದ್ದರು ಎಂಬುದಾಗಿಯೂ ಜಿಯೋ ಸಿನಿಮಾ ಹೇಳಿದೆ.

Continue Reading

ಕ್ರಿಕೆಟ್

Virat Kohli : ಕಾರ್ಯಕ್ರಮದ ವೇದಿಕೆಯಲ್ಲೇ ಪತ್ನಿ ಅನುಷ್ಕಾ ಜತೆ ವಾಗ್ವಾದ ನಡೆಸಿದ ವಿರಾಟ್​ ಕೊಹ್ಲಿ!

ಪೂಮಾ ಕಂಪನಿಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿರಾಟ್​ ಕೊಹ್ಲಿಯ ಮೈದಾನದಲ್ಲಿನ ವರ್ತನೆಯನ್ನು ಪತ್ನಿ ಅನುಷ್ಕಾ ತೋರಿಸಿಕೊಟ್ಟರು.

VISTARANEWS.COM


on

Virat kohli and wife anushka Sharma
Koo

ಬೆಂಗಳೂರು: ಮೈದಾನದ ಹೊರಗೆ ಹಾಗೂ ಒಳಗೆ ಅಭಿಮಾನಿಗಲ ಪಾಲಿನ ನೆಚ್ಚಿನ ಕ್ರಿಕೆಟಿಗ. ಅವರು ಎಲ್ಲೇ ಇದ್ದರೂ ಟಾಕ್​ ಆಫ್​ ದಿ ಟೌನ್​ ಎನಿಸಿಕೊಳ್ಳುತ್ತಾರೆ. ಅವರು ಕ್ರಿಕೆಟ್​ ಆಡುವಾಗ, ಪತ್ನಿಯೊಂದಿಗೆ ಪ್ರವಾಸದಲ್ಲಿದ್ದಾಗ, ಜಾಹೀರಾತು ಕಾರ್ಯಕ್ರಮಗಳಲ್ಲಿದ್ದಾಗ ಅವರಾಡುವ ಪ್ರತಿಯೊಂದು ಮಾತುಗಳಿಗೂ ಅಭಿಮಾನಿಗಳು ತಲೆದೂಗುತ್ತಾರೆ. ಇದೇ ಕಾರಣಕ್ಕೆ ವಿರಾಟ್​ ಕೊಹ್ಲಿ ಏಷ್ಯಾದಲ್ಲಿಯೇ ಅತಿ ಹೆಚ್ಚು ಇನ್​ಸ್ಟಾಗ್ರಾಮ್​ ಫಾಲೋಯರ್​ಗಳನ್ನು ಹೊಂದಿರುವ ಆಟಗಾರ ಎನಿಸಿದ್ದು. ಕೆಲವು ದಿನಗಳ ಹಿಂದೆ ಅವರ ಪಾಲೋಯರ್​ಗಳ ಸಂಖ್ಯೆ 25 ಕೋಟಿ ದಾಟಿದೆ. ಈ ಮೂಲಕ ಇಷ್ಟೊಂದು ಅಭಿಮಾನಿಗಳನ್ನು ಹೊಂದಿರುವ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವೆಲ್ಲದರ ನಡುವೆ ವಿರಾಟ್​ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಅವರು ಪೂಮಾ ಕಂಪನಿಯ ಕಾರ್ಯಕ್ರಮದಲ್ಲಿ ಪರಸ್ಪರ ತಮಾಷೆಗಾಗಿ ಜಗಳವಾಡಿದ್ದು ಸುದ್ದಿಯಾಗಿದೆ. ಈ ವಿಡಿಯೊ ಎಲ್ಲೆಡೆ ವೈರಲ್​ ಆಗಿದೆ.

ಸ್ಟಾರ್ ದಂಪತಿ ಕಳೆದ ತಿಂಗಳು ಪೂಮಾದ ‘ಲೆಟ್ ಥೆರ್ ಬಿ ಸ್ಪೋರ್ಟ್ಸ್’ ಅಭಿಯಾನದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ತಮ್ಮ ಅಭಿಮಾನಿಗಳೊಂದಿಗೆ ಚಿಟ್​ಚಾಟ್​ ನಡೆಸಿದರು. ಕೆಲವೊಂದು ವಿನೋದಗಳಲ್ಲೂ ಪಾಲ್ಗೊಂಡರು. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಹಿಟ್ ಆಗಿದೆ. ಅಭಿಮಾನಿಗಳು ಅವುಗಳನ್ನು ಉತ್ಸಾಹದಿಂದ ಹಂಚಿಕೊಳ್ಳುತ್ತಿದ್ದಾರೆ. ವೀಡಿಯೊದಲ್ಲಿ ಅನುಷ್ಕಾ ಶರ್ಮಾ ಅವರು ವಿರಾಟ್​ ಕೊಹ್ಲಿ ಮೈದಾನದಲ್ಲಿ ಯಾವ ರೀತಿ ಆಕ್ರಮಣಕಾರಿ ಭಾವ ತೋರುತ್ತಾರೆ ಎಂದು ಗೇಲಿ ಮಾಡಿದ್ದಾರೆ. ವಿರಾಟ್​ ಕೊಹ್ಲಿ ಎದುರಾಳಿ ತಂಡದ ವಿಕೆಟ್ ಪತನಗೊಂಡಾಗ ಬೌಲರ್​ಗಿಂತ ಹೆಚ್ಚು ಸಂಭ್ರಮಿಸುತ್ತಾರೆ ಎಂಬುದಾಗಿಯೂ ಅನುಷ್ಕಾ ಹೇಳುತ್ತಾರೆ.

ಏಪ್ರಿಲ್ 23, 2023 ರಂದು ಬೆಂಗಳೂರಿನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದರು. ಇಂಥ ಸಂದರ್ಭವನ್ನು ವಿರಾಟ್​ ಕೊಹ್ಲಿ ಪಂದ್ಯದ ನಡುವೆ ಸ್ಲೆಜಿಂಗ್ ಮಾಡಲೂ ವಿರಾಟ್​ ಕೊಹ್ಲಿ ಯಾವ ರೀತಿ ಬಳಸುತ್ತಾರೆ ಎಂಬುದನ್ನೂ ಅನುಷ್ಕಾ ಶರ್ಮಾ ತೋರಿಸಿದ್ದಾರೆ.

“ಆಜ್ ತೋ ರನ್ ಬನಾ ಲೇ ಕೊಹ್ಲಿ (ಇಂದು ಏಪ್ರಿಲ್ 24, ಕನಿಷ್ಠ ಅಷ್ಟಾದೂ ರನ್ ಗಳಿಸು ಕೊಹ್ಲಿ) ಎಂದು ಅನುಷ್ಕಾ ಸ್ಲೆಜ್​ ಮಾಡುತ್ತಾರೆ. ಆದರೆ ಇದಕ್ಕೆ ವಿರಾಟ್​ ಕೂಡ ಪ್ರತ್ಯುತ್ತರ ನೀಡುತ್ತಾರೆ. ಕಳೆದ ಮೂರು ತಿಂಗಳಿಂದ ಆಡಿರುವ ಪಂದ್ಯಗಳಿಗಿಂತ ಹೆಚ್ಚು ನಾನು ಆಡಿದ್ದೇನೆ ಎಂದು ಹೇಳುತ್ತಾರೆ. (ಅನುಷ್ಕಾ ಶರ್ಮಾ ಅವರು ಭಾರತ ಮಹಿಳೆಯರ ತಂಡದ ಮಾಜಿ ವೇಗದ ಬೌಲರ್​ ಜೂಲನ್​ ಗೋಸ್ವಾಮಿ ಅವರ ಜೀವನ ಕತೆಯನ್ನು ಆಧರಿಸಿದ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದರು. ಅದಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಆಡಿದ್ದೇನೆ ಎಂಬುದೇ ವಿರಾಟ್​ ಕೊಹ್ಲಿಯ ಮಾತಿನ ಅರ್ಥ.

ಇದನ್ನೂ ಓದಿ : IPL 2023: ತಂಡವನ್ನು ಸೋಲಿಸಿದರೂ ಎದುರಾಳಿ ತಂಡದ ಆಟಗಾರನಿಗೆ ಜೆರ್ಸಿ ನೀಡಿ ಗೌರವಿಸಿದ ವಿರಾಟ್​ ಕೊಹ್ಲಿ

ವಿರಾಟ್ ಕೊಹ್ಲಿ ಹಾಲಿ ಐಪಿಎಲ್​ ಋತುವಿನ ಒಂದೆರಡು ವೈಫಲ್ಯಗಳನ್ನು ಕಂಡಿದ್ದರೂ, ಉಳಿದಂತೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಕಳೆದ ಎರಡು ತಿಂಗಳುಗಳಿಂದ ಟಿ20 ಮಾದರಿಯ ಅದ್ಭುತ ಫಾರ್ಮ್ನಲ್ಲಿದ್ದಾರೆ ಅವರು. ಐಪಿಎಲ್​ನ 14 ಇನಿಂಗ್ಸ್​​ಗಳಲ್ಲಿ 53ರ ಸರಾಸರಿಯಂತೆ ಮತ್ತು 140 ಸ್ಟ್ರೈಕ್​ರೇಟ್​ನಲ್ಲಿ 639 ರನ್ ಗಳಿಸಿದ್ದಾರೆ. ಅವರು ಈ ಋತುವಿನ ಲೀಗ್​ನ ಹಂತದಲ್ಲಿ ಗರಿಷ್ಠ ರನ್​ ಗಳಿಸಿದವರ ಪಟ್ಟಿಯಲ್ಲಿ ಮೂರನೆಯವರು. ಆರ್​ಸಿಬಿ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಫಾಫ್ ಡು ಪ್ಲೆಸಿಸ್ ಮೊದಲ ಸ್ಥಾನ ಪಡೆದಿದ್ದಾರೆ.

ಕೊಹ್ಲಿಯ ಅತ್ಯುತ್ತಮ ಫಾರ್ಮ್ ಹೊರತಾಗಿಯೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್​ ಪ್ರವೇಶಿಸಲು ವಿಫಲವಾಯಿತು. ಆಡಿದ ಹದಿನಾಲ್ಕು ಪಂದ್ಯಗಳಲ್ಲಿ ಏಳರಲ್ಲಿ ಗೆದ್ದು ಏಳರಲ್ಲಿ ಸೋತು ಹದಿನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಪಡೆಯಿತು. ಜೂನ್ 7 ರಂದು ಲಂಡನ್​ನ ಓವಲ್​ನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ ಫೈನಲ್​​ಗೆ ಅವರೀಗ ತಯಾರಿ ನಡೆಸುತ್ತಿದ್ದಾರೆ.

Continue Reading

ಕ್ರಿಕೆಟ್

IPL 2023 : ಸಿಎಸ್​ಕೆ ತಂಡ ಚಾಂಪಿಯನ್ ಆದರೆ ಈ ಮೂರು ದಾಖಲೆಗಳು ಗ್ಯಾರಂಟಿ; ಯಾವೆಲ್ಲ ಅವು?

ಅಹಮದಾಬಾದ್​ನ ನರೆಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಗುಜರಾತ್​ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಫೈನಲ್ ಪಂದ್ಯ ನಡೆಯಲಿದೆ.

VISTARANEWS.COM


on

Chennai Super Kings Team
Koo

ಅಹಮದಾಬಾದ್​: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮಂಗಳವಾರ (ಮೇ 23ರಂದು) ನಡೆದ ಐಪಿಎಲ್ 2023ರ ಕ್ವಾಲಿಫೈಯರ್ 1 ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ಟೈಟನ್ಸ್ ತಂಡವನ್ನು 15 ರನ್​ಗಳಿಂದ ಸೋಲಿಸಿತು. ಈ ಮೂಲಕ ದುಬೈನಲ್ಲಿ ನಡೆದಿದ್ದ 2021ರ ಋತುವಿನ ಐಪಿಎಲ್​ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿದ ಬಳಿಕ ಮತ್ತೊಂದು ಬಾರಿ ಫೈನಲ್​ಗೇರಿತು.

ಕ್ವಾಲಿಫೈಯರ್ 1ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ವಿರುದ್ಧ ಇದುವರೆಗೆ ಆಡಿರುವ ಒಟ್ಟು ನಾಲ್ಕು ಪಂದ್ಯಗಳಲ್ಲಿ ಗಳಿಸಿದ ಮೊದಲ ಗೆಲುವಾಗಿದೆ. ಮಾರ್ಚ್ 31ರಂದು ಅಹಮದಾಬಾದ್​​ನಲ್ಲಿ ನಡೆದ ಐಪಿಎಲ್ 2023ರ ಉದ್ಘಾಟನಾ ಪಂದ್ಯದಲ್ಲಿ ಇತ್ತಂಡಗಳು ಮುಖಾಮುಖಿಯಾಗಿದ್ದರು. ಅದರಲ್ಲಿ ಪಾಂಡ್ಯ ಬಳಗ ಐದು ವಿಕೆಟ್​​ಗಳಿಂದ ವಿಜಯ ಸಾಧಿಸಿತ್ತು. ಏತನ್ಮಧ್ಯೆ ಸಿಎಸ್​ಕೆ ತಂಡ 2011ರ ಋತುವಿನಲ್ಲಿ ಅಳವಡಿಸಲಾದ ಪ್ಲೇಆಫ್ ಮಾದರಿಯಲ್ಲಿ ಇದುವರೆಗೆ ಸಿಎಸ್​ಕೆ ತಂಡ ಐದು ಬಾರಿ ಕ್ವಾಲಿಫೈಯರ್ 1ರಲ್ಲಿ ಗೆಲುವು ದಾಖಲಿಸಿದಂತಾಗಿದೆ.

ಸಿಎಸ್​ಕೆ ತಂಡ ಇದುವರೆಗೆ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದ್ದರೂ, ಐಪಿಎಲ್ ಫೈನಲ್​ನಲ್ಲಿ ಐದು ಬಾರಿ ಸೋತಿದೆ. ಮೂರು ಬಾರಿ ಮುಂಬಯಿ ಇಂಡಿಯನ್ಸ್ ತಂಡ ತಲಾ ಒಂದು ಸಲ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತಿದೆ. ಇವೆಲ್ಲದರ ನಡುವೆ ಭಾನುವಾರ ನಡೆಯುವ ಫೈನಲ್​ ಪಂದ್ಯದಲ್ಲಿ ಗುಜರಾತ್​ ವಿರುದ್ಧ ಗೆದ್ದು ಚಾಂಪಿಯನ್​ ಪಟ್ಟ ಅಲಂಕರಿಸಿದರೆ ಸಿಎಸ್​ಕೆ ತಂಡ ಮೂರು ದಾಖಲೆಗಳನ್ನು ಸೃಷ್ಟಿಸಲಿದೆ. ಅವುಗಳ ವಿವರ ಇಲ್ಲಿದೆ.

ಸರಿಗಟ್ಟಲಿದೆ ಮುಂಬಯಿ ದಾಖಲೆ

ಭಾನುವಾರ ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದರೆ, ಐದು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ತಂಡವಾಗಿ ಹೊರಹೊಮ್ಮಲಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ದಾಖಲೆ ಸರಿಗಟ್ಟಲಿದೆ ಸಿಎಸ್​ಕೆ ತಂಡ ಇದವರೆಗೆ ನಾಲ್ಕು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದರೆ ಮುಂಬೈ ಇಂಡಿಯನ್ಸ್ ಐದು ಪ್ರಶಸ್ತಿಗಳನ್ನು ಗೆದ್ದಿದೆ. 2010, 2011, 2018 ಮತ್ತು 2021ರಲ್ಲಿ ಸೂಪರ್ ಕಿಂಗ್ಸ್ ಐಪಿಎಲ್ ಗೆದ್ದಿದ್ದರೆ, ಮುಂಬೈ ಇಂಡಿಯನ್ಸ್ 2013, 2015, 2017, 2019 ಮತ್ತು 2020ರಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಈ ಗೆಲುವಿನೊಂದಿಗೆ ಎಂಎಸ್ ಧೋನಿಯೂ ಮುಂಬೈ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಅತ್ಯಂತ ಯಶಸ್ವಿ ನಾಯಕ ಎಂಬ ಗೌರವ ಪಡೆದುಕೊಳ್ಳಲಿದ್ದಾರೆ.

ಇದನ್ನೂ ಓದಿ : IPL 2023 : ಕ್ವಾಲಿಫೈಯರ್​ 1ರಲ್ಲಿ ಗೆಲ್ಲುವವರು ಯಾರು? ಸಿಎಸ್​ಕೆ ಅಥವಾ ಗುಜರಾತ್​?

ಐಪಿಎಲ್ ಗೆದ್ದ ಅತಿ ಹಿರಿಯ ನಾಯಕ

ಸಿಎಸ್​ಕೆ ನಾಯಕ ಎಂಎಸ್ ಧೋನಿ ಆರಂಭದಿಂದಲೂ ಸಿಎಸ್​ಕೆ ನಾಯಕರಾಗಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧ ಫೈನಲ್ ಪಂದ್ಯವನ್ನು ಗೆದ್ದರೆ, ಎಂಎಸ್ ಧೋನಿ ಐಪಿಎಲ್ ಇತಿಹಾಸದಲ್ಲಿ ಚಾಂಪಿಯನ್​ ಪಟ್ಟ ಗಳಿಸಿದ ಹಿರಿಯ ನಾಯಕ ಎನಿಸಿಕೊಳ್ಳಲಿದ್ದಾರೆ. ಧೋನಿಗೆ ಈಗ 41 ನೇ ವರ್ಷ. ಈ ಮೂಲಕ ಮತ್ತೊಂದು ಹೊಸ ದಾಖಲೆ ಸೃಷ್ಟಿಸಲಿದ್ದಾರೆ.

ಋತುರಾಜ್​ಗೂ ದಾಖಲೆಯ ಅವಕಾಶ

ಫೈನಲ್​ ಪಂದ್ಯದಲ್ಲಿ ಗಾಯಕ್ವಾಡ್ 36 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದರೆ ಮತ್ತು ಸಿಎಸ್​ಕೆ ತಂಡ ಟ್ರೋಫಿಯನ್ನು ಗೆದ್ದರೆ, ಅವರು ಪ್ರಶಸ್ತಿ ಗೆದ್ದ ವರ್ಷದಲ್ಲಿ 600+ ರನ್ ಗಳಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಐಪಿಎಲ್ 2021ರಲ್ಲಿ ಋತುರಾಜ್​ 635 ರನ್​ ಪೇರಿಸಿದ್ದರು. ಹಾಲಿ ಋತುವಿನಲ್ಲಿ 564* ರನ್ ಗಳಿಸಿದ್ದಾರೆ.

Continue Reading

ಕ್ರಿಕೆಟ್

IPL 2023 : ಫೈನಲ್​ ಪಂದ್ಯದಲ್ಲಿ ಸೃಷ್ಟಿಯಾಗಲಿರುವ ಕೆಲವು ದಾಖಲೆಗಳ ವಿವರ ಹೀಗಿದೆ ನೋಡಿ

ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿಗೆ ಇದು ಐಪಿಎಲ್​ನ 250ನೇ ಪಂದ್ಯವಾಗಿದೆ.

VISTARANEWS.COM


on

hardik Pandya and Mahendra singh Dhoni
Koo

ಅಹಮದಾಬಾದ್​ : 70 ಲೀಗ್ ಪಂದ್ಯಗಳು ಮತ್ತು ಮೂರು ಪ್ಲೇಆಫ್ ಮುಖಾಮುಖಿಗಳ ನಂತರ ಎಲ್ಲರ ಗಮನ ಇಂಡಿಯನ್ ಪ್ರೀಮಿಯರ್ ಲೀಗ್​​ನ (IPL 2023) ಮೆಗಾ ಫೈನಲ್​ ಕಡೆಗೆ ನೆಟ್ಟಿದೆ. ಅಹಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಭಾನುವಾರ (ಮೇ 28ರಂದು) ಫೈನಲ್ ಹಣಾಹಣಿ ನಡೆಯಲಿದೆ. ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಈ ಪಂದ್ಯದ ವೇಳೆ ಕೆಲವು ಆಟಗಾರರ ವೈಯಕ್ತಿಕ ದಾಖಲೆಗಳನ್ನು ಹಾಗೂ ಮೈಲುಗಲ್ಲುಗಳನ್ನು ಸೃಷ್ಟಿಸಲಿದ್ದಾರೆ. ಅವುಗಳು ಇಂತಿವೆ.

  • 05- ಗುಜರಾತ್ ಟೈಟನ್ಸ್​ ಹಾಗೂ ಐಪಿಎಲ್​ನಲ್ಲಿ ಐದನೇ ಬಾರಿ ಎದುರಾಗುತ್ತಿವೆ. ಮೂರು ಬಾರಿ ಟೈಟನ್ಸ್ ತಂಡ ಗೆದ್ದಿದ್ದರೆ ಒಂದು ಬಾರಿ ಚೆನ್ನೈ ತಂಡ ಗೆಲುವು ಸಾಧಿಸಿದೆ. ಐದನೇ ಬಾರಿಯ ಗೆಲುವು ಯಾರಿಗೆ ಎಂಬುದು ಈ ಪಂದ್ಯದ ಬಳಿಕ ಗೊತ್ತಾಗಲಿದೆ.
  • 06- ಅಜಿಂಕ್ಯ ರಹಾನೆ ಐಪಿಎಲ್​ನಲ್ಲಿ ಒಟ್ಟಾರೆ 94 ಸಿಕ್ಸರ್ ಬಾರಿಸಿದ್ದಾರೆ. 100 ಗುರಿ ತಲುಪಲು ಅವರು ಈ ಪಂದ್ಯದಲ್ಲ ಆರು ಸಿಕ್ಸರ್​ ಬಾರಿಸಬೇಕಾಗಿದೆ.
  • 16- ಅಜಿಂಕ್ಯ ರಹಾನೆ ಟಿ20 ಮಾದರಿ ಕ್ರಿಕೆಟ್​ನಲ್ಲಿ ಒಟ್ಟು 5939 ರನ್ ಬಾರಿಸಿದ್ದಾರೆ. 6000 ರನ್​ಗಳ ಮೈಲುಗಲ್ಲು ದಾಖಲು 61 ರನ್​ಗಳ ಕೊರತೆ ಎದುರಿಸುತ್ತಿದ್ದಾರೆ.
  • 02- ಟಿ20 ಕ್ರಿಕೆಟ್​​ನಲ್ಲಿ 150 ವಿಕೆಟ್​​ಗಳನ್ನು ಪಡೆಯಲು ಹಾರ್ದಿಕ್ ಪಾಂಡ್ಯ (148) ಅವರಿಗೆ ಎರಡು ವಿಕೆಟ್​​ಗಳ ಅಗತ್ಯವಿದೆ.
  • 04- ಚೆನ್ನೈ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ ಅಂಬಾಟಿ ರಾಯುಡು ಟಿ20 ಮಾದರಿಯಲ್ಲಿ 496 ಫೋರ್​ಗಳನ್ನು ಬಾರಿಸಿದ್ದಾರೆ. 500 ಸಾಧನೆ ಮಾಡಲು 4 ಫೋರ್​ಗಳು ಬೇಕಾಗಿವೆ.
  • 01- ಸಿಎಸ್​​ಕೆ ನಾಯಕ ಎಂ.ಎಸ್.ಧೋನಿ ಐಪಿಎಲ್​ನಲ್ಲಿ 349 ಫೋರ್​​ಗಳನ್ನು ಬಾರಿಸಿದ್ದಾರೆ. 350ರ ಗಡಿ ದಾಟಲು ಒಂದು ಫೋರ್​ನ ಅಗತ್ಯವಿದೆ.
  • 02- ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಆಲ್​ರೌಂಡರ್ ರವೀಂದ್ರ ಜಡೇಜಾ ಐಪಿಎಲ್​ನಲ್ಲಿ 98 ಸಿಕ್ಸರ್​ಗಳನ್ನು ಬಾರಿಸಿದ್ದು, 100 ಸಿಕ್ಸರ್​ಗಳನ್ನು ಬಾರಿಸಲು 2 ಸಿಕ್ಸರ್ ಬೇಕಾಗಿದೆ.
  • 02- ಗುಜರಾತ್ ಟೈಟನ್ಸ್ ಪರ ಮೊಹಮ್ಮದ್ ಶಮಿ ಇದುವರೆಗೆ 48 ವಿಕೆಟ್​ಗಳನ್ನು ಕಬಳಿಸಿದ್ದಾರೆ. 50 ವಿಕೆಟ್ ಕಬಳಿಸಲು ಅವರಿಗೆ 2 ವಿಕೆಟ್ ಅಗತ್ಯವಿದೆ.
  • 04- ರಶೀದ್ ಖಾನ್ ಗುಜರಾತ್ ತಂಡದ ಪರ 46 ವಿಕೆಟ್​ ಉರುಳಿಸಿದ್ದರು. 50 ವಿಕೆಟ್ ಪೂರೈಸಲು 4 ವಿಕೆಟ್ ಅಗತ್ಯವಿದೆ.
  • 08- ರವೀಂದ್ರ ಜಡೇಜಾ ಐಪಿಎಲ್​ನಲ್ಲಿ 192 ಫೋರ್​​ಗಳನ್ನು ಬಾರಿಸಿದ್ದಾರೆ. 200 ಫೋರ್​ಗಳನ್ನು ಪೂರ್ಣಗೊಳಿಸಲು ಎಂಟು ಫೋರ್​ಗಳ ಅಗತ್ಯವಿದೆ.
  • 11- ಸಿಎಸ್​ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಎಗ ಐಪಿಎಲ್​ನಲ್ಲಿ 11 ಬಾರಿ ಫೈನಲ್ ತಲುಪಿದ ಹೆಗ್ಗಳಿಕೆ ಸಿಗಲಿದೆ.
  • 01- ಸಿಎಸ್​ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಸಿಎಸ್​ಕೆ ಪರ 249 ಪಂದ್ಯಗಳಲ್ಲಿ ಆಡಿದ್ದು 250ನೇ ಐಪಿಎಲ್ ಪಂದ್ಯದಲ್ಲಿ ಕಾಣಿಸಿಕೊಳ್ಳಲು ಒಂದು ಪಂದ್ಯ ಬಾಕಿ ಇದೆ.
  • 49- ಗುಜರಾತ್​ ತಂಡದ ಬ್ಯಾಟರ್​ ಶುಭ್​ಮನ್​ ಗಿಲ್​ಗೆ ಐಪಿಎಲ್​ನಲ್ಲಿ 900 ರನ್​ಗಳ ಗಡಿ ದಾಟಲು 49 ರನ್​ಗಳ ಅಗತ್ಯವಿದೆ.
  • 123- ಐಪಿಎಲ್​ನಲ್ಲಿ ಋತು ಒಂದರಲ್ಲಿ ಅತಿ ಹೆಚ್ಚು ರನ್​ ಬಾರಿಸಿದ ಆಟಗಾರ ಎಂಬ ದಾಖಲೆ ಮಾಡಲು ಶುಭ್​ಮನ್​ ಗಿಲ್​​ಗೆ (851) ಗೆ 123 ರನ್​ಗಳ ಅಗತ್ಯವಿದೆ.
  • 01- ಗುಜರಾತ್​ ತಂಡದ ಬೌಲರ್​ ಅಲ್ಜಾರಿ ಜೋಸೆಫ್ ಟಿ20 ಕ್ರಿಕೆಟ್​ನಲ್ಲಿ ಇದುವರೆಗೆ 99 ವಿಕೆಟ್​ ಉರುಳಿಸಿದ್ದು. 00ರ ಸಾಧನೆ ಮಾಡಲು ಒಂದು ವಿಕೆಟ್​ ಬೇಕಾಗಿದೆ.
  • 03- ಗುಜರಾತ್ ಬೌಲರ್​ ಮೋಹಿತ್ ಶರ್ಮಾ ಟಿ20 ಕ್ರಿಕೆಟ್​ನಲ್ಲಿ 147 ವಿಕೆಟ್​ ಪಡೆದಿದ್ದು. 150 ವಿಕೆಟ್​​ಗಳನ್ನು ಪೂರೈಸಲು 3 ವಿಕೆಟ್​ಗಳ ಅಗತ್ಯವಿದೆ.
  • 01- ಚೆನ್ನೈ ತಂಡದ ಬೌಲರ್​ ದೀಪಕ್ ಚಾಹರ್​ ಟಿ20 ಮಾದರಿಯಲ್ಲಿ 149 ವಿಕೆಟ್​ಗಳನ್ನು ಉರುಳಿಸಿದ್ದು. 150ರ ಮೈಲುಗಲ್ಲು ಸ್ಥಾಪಿಸಲು ಒಂದು ವಿಕೆಟ್ ದೂರದಲ್ಲಿದ್ದಾರೆ.
  • 05- ಐಪಿಎಲ್​​ನಲ್ಲಿ 100 ಫೋರ್​​ಗಳ ಸಾಧನೆ ಮಾಡಲು ಸಿಎಸ್​ಕೆ ಆರಂಭಿಕ ಬ್ಯಾಟರ್​ ಡೆವೊನ್ ಕಾನ್ವೆಗೆ (95) ಐದು ಫೋರ್​​ಗಳ ಅಗತ್ಯವಿದೆ.
  • 01- ಗುಜರಾತ್ ತಂಡದ ಬೌಲರ್​ ಮೋಹಿತ್ ಶರ್ಮಾ (99) ಅವರಿಗೆ ಐಪಿಎಲ್​ನ 100ನೇ ಪಂದ್ಯದಲ್ಲಿ ಕಾಣಿಸಿಕೊಳ್ಳುವುದಕ್ಕೆ ಇನ್ನೊಂದು ಪಂದ್ಯ ಬಾಕಿ ಇದೆ.
Continue Reading
Advertisement
Adheenams handover the Sengol to Narendra Modi
ದೇಶ4 mins ago

New Parliament Building: ಮೋದಿಗೆ ಸೆಂಗೋಲ್‌ ಹಸ್ತಾಂತರಿಸಿದ ಸ್ವಾಮೀಜಿಗಳು; ಭಾನುವಾರ ಸಂಸತ್‌ನಲ್ಲಿ ಪ್ರತಿಷ್ಠಾಪನೆ

Shubman Gill century celebration
ಕ್ರಿಕೆಟ್12 mins ago

IPL 2023 : ಶುಭ್​ಮನ್​ ಶತಕ ಆನ್​ಲೈನ್​ ವೀಕ್ಷಣೆಯಲ್ಲೂ ದಾಖಲೆ, ಎಷ್ಟಿತ್ತು ವೀಕ್ಷಕರ ಸಂಖ್ಯೆ?

to new parliament inauguration and more news
ಕರ್ನಾಟಕ16 mins ago

ವಿಸ್ತಾರ TOP 10 NEWS: ಸಿದ್ದರಾಮಯ್ಯ ಸಂಪುಟ ಭರ್ತಿಯಿಂದ, ಉದ್ಘಾಟನೆಗೆ ಸಜ್ಜಾದ ಸಂಸತ್‌ ಭವನದವರೆಗಿನ ಪ್ರಮುಖ ಸುದ್ದಿಗಳಿವು

Virat kohli and wife anushka Sharma
ಕ್ರಿಕೆಟ್37 mins ago

Virat Kohli : ಕಾರ್ಯಕ್ರಮದ ವೇದಿಕೆಯಲ್ಲೇ ಪತ್ನಿ ಅನುಷ್ಕಾ ಜತೆ ವಾಗ್ವಾದ ನಡೆಸಿದ ವಿರಾಟ್​ ಕೊಹ್ಲಿ!

Cauvery 2.0 software launched at Koratagere
ಕರ್ನಾಟಕ39 mins ago

Koratagere News: ಕೊರಟಗೆರೆಯ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಕಾವೇರಿ 2.0 ತಂತ್ರಾಂಶ ಉದ್ಘಾಟನೆ

Bahuroopi Prakashana Programme
ಕರ್ನಾಟಕ46 mins ago

Bahuroopi Prakashana: ಸರ್ಕಾರ ಪುಸ್ತಕೋದ್ಯಮ ಬೆಂಬಲಿಸಲಿ: ಪೊನ್ ವಾಸುದೇವನ್

Dilapidated school room
ಕರ್ನಾಟಕ48 mins ago

Education Department: ಶಿಥಿಲ ಶಾಲಾ ಕೊಠಡಿಗಳ ಬಳಕೆ ಬೇಡ: ಶಿಕ್ಷಣ ಇಲಾಖೆ ಸುತ್ತೋಲೆ

BBMP school
ಕರ್ನಾಟಕ55 mins ago

Bbmp Teachers: ಜೂನ್‌ 1ರಿಂದ ಬಿಬಿಎಂಪಿ ಶಾಲೆಗಳಲ್ಲಿ ಶಿಕ್ಷಕರು ಗೈರು; ಮಕ್ಕಳ ಗತಿಯೇನು?

Foundation laying programme of new parliament building
ಕರ್ನಾಟಕ1 hour ago

New Parliament Building : ನೂತನ ಸಂಸತ್‌ ಭವನ ಉದ್ಘಾಟನೆಗೆ ಶೃಂಗೇರಿ ಪುರೋಹಿತರು

Laxmi Hebbalkar Shashikala jolle and leelavati r prasad
ಕರ್ನಾಟಕ1 hour ago

Karnataka Cabinet expansion: ಮೊದಲ, 2ನೇ ಬಾರಿಗೇ ಸಚಿವಗಿರಿ ಪಡೆದ ಬೆಳಗಾವಿ ಶಾಸಕಿಯರಿವರು!

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ16 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ3 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ5 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Teacher Transfer
ನೌಕರರ ಕಾರ್ನರ್7 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

Laxmi Hebbalkar oath taking as a minister
ಕರ್ನಾಟಕ3 hours ago

Laxmi Hebbalkar: ಸಚಿವೆಯಾಗುವುದರ ಜತೆಗೆ ಅಜ್ಜಿಯೂ ಆದ ಲಕ್ಷ್ಮಿ ಹೆಬ್ಬಾಳ್ಕರ್‌; ಒಂದೇ ದಿನ 2 ಸಿಹಿ ಸುದ್ದಿ!

HD Kumaraswamy in JDS Meeting
ಕರ್ನಾಟಕ1 day ago

H.D. Kumaraswamy: ಜೆಡಿಎಸ್‌ ವಿಸರ್ಜನೆ ಹೇಳಿಕೆಗೆ ಬದ್ಧ ಎಂದ ಎಚ್‌.ಡಿ. ಕುಮಾರಸ್ವಾಮಿ!

induction stoves
ಕರ್ನಾಟಕ1 day ago

Congress Guarantee: ಬಿಪಿಎಲ್ ಕಾರ್ಡ್‌ಗೆ ಮುಗಿಬಿದ್ದ ಜನ; ಇಂಡಕ್ಷನ್‌ ಸ್ಟವ್‌ಗೆ ಹೆಚ್ಚಿದ ಬೇಡಿಕೆ

Viral Video, Teacher and Principal are quarrel in front of School children
ದೇಶ1 day ago

Viral Video: ಶಾಲಾ ಮಕ್ಕಳ ಎದುರೇ ಹೊಡೆದಾಡಿಕೊಂಡ ಪ್ರಿನ್ಸಿಪಾಲ್, ಟೀಚರ್! ಇಲ್ಲಿದೆ ನೋಡಿ ವಿಡಿಯೋ

Horoscope Today
ಪ್ರಮುಖ ಸುದ್ದಿ2 days ago

Horoscope Today : ಮಕರ ರಾಶಿಯವರಿಗೆ ಕೌಟುಂಬಿಕವಾಗಿ ಶುಭ ಫಲ; ಇಂದಿನ ಭವಿಷ್ಯ ಇಲ್ಲಿದೆ

HD Kumaraswamy said he will take up the issue of congress guarantee
ಕರ್ನಾಟಕ2 days ago

Congress Guarantee: ನಾವು ಕಡುಬು ತಿನ್ನೋಕ ರಾಜಕಾರಣ ಮಾಡ್ತಿರೋದು?: ಎಚ್‌.ಡಿ. ಕುಮಾರಸ್ವಾಮಿ ಆಕ್ರೋಶ

Beware if the Congress Guarantee card is conditioned and Pratap Simha says he will fight from June 1
ಕರ್ನಾಟಕ2 days ago

Congress Guarantee: ಗ್ಯಾರಂಟಿ ಕಾರ್ಡ್‌ಗೆ ಕಂಡೀಷನ್ ಹಾಕಿದ್ರೆ ಹುಷಾರ್‌; ಜೂನ್‌ 1ರಿಂದ ಹೋರಾಟವೆಂದ ಪ್ರತಾಪ್‌ ಸಿಂಹ

Electricity bill man hit bescom staff
ಕರ್ನಾಟಕ3 days ago

Electricity Bill: ಕರೆಂಟ್‌ ಬಿಲ್‌ ಕಿರಿಕ್‌; ಬಾಕಿ ಬಿಲ್‌ ಕಟ್ಟು ಎಂದಿದ್ದಕ್ಕೆ ಚಪ್ಪಲಿಯಿಂದಲೇ ಹೊಡೆದವ ಅರೆಸ್ಟ್‌

karnataka politics it takes time to implement guarantee schemes says minister priyank kharge
ಕರ್ನಾಟಕ3 days ago

Saffronisation issue : ಬಿಜೆಪಿಯವರಿಗೆ ತೊಂದರೆ ಇದ್ರೆ ಪಾಕಿಸ್ತಾನಕ್ಕೆ ಹೋಗಲಿ; ಪ್ರಿಯಾಂಕ್‌ ಖರ್ಗೆ ವಿವಾದಿತ ಹೇಳಿಕೆ

horoscope today
ಪ್ರಮುಖ ಸುದ್ದಿ4 days ago

Horoscope Today : ಪಂಚಮಿಯ ದಿನ ಪಂಚ ರಾಶಿಯವರಿಗೆ ಶುಭ ಫಲ; ಇಲ್ಲಿದೆ ಇಂದಿನ ದಿನ ಭವಿಷ್ಯ

ಟ್ರೆಂಡಿಂಗ್‌

error: Content is protected !!