IPL 2024 : ಗೆಲುವಿನ ನಡುವೆಯೂ ಬೇಸರ; ಶುಭ್​ಮನ್ ಗಿಲ್​ಗೆ 24 ಲಕ್ಷ ರೂಪಾಯಿ ದಂಡ - Vistara News

ಕ್ರೀಡೆ

IPL 2024 : ಗೆಲುವಿನ ನಡುವೆಯೂ ಬೇಸರ; ಶುಭ್​ಮನ್ ಗಿಲ್​ಗೆ 24 ಲಕ್ಷ ರೂಪಾಯಿ ದಂಡ

IPL 2024: 2008 ರಲ್ಲಿ, ಐಪಿಎಲ್ ದಂತಕಥೆ ಬ್ರೆಂಡನ್ ಮೆಕಲಮ್ ಕೆಕೆಆರ್ ಪರ ಆರ್​ಸಿಬಿ ವಿರುದ್ಧ ಲೀಗ್​ನ ಮೊದಲ ಶತಕವನ್ನು ಗಳಿಸಿದ್ದರು. ಮೆಕಲಮ್ 158 ರನ್ ಗಳಿಸಿ ಶ್ರೀಮಂತ ಕ್ರಿಕೆಟ್ ಲೀಗ್​ನ ಯುಗವನ್ನು ಪ್ರಾರಂಭಿಸಿದ್ದರು. ಅಂದಿನಿಂದ ಇನ್ನೂ ಅನೇಕ ಆಟಗಾರರು ಶತಕಗಳನ್ನು ಗಳಿಸಿದ್ದಾರೆ. ಆದರೆ ಶುಬ್ಮನ್ ಗಿಲ್ ಐಪಿಎಲ್​ಗೆ ವಿಶೇಷ 100 ನೇ ಶತಕವಾಗಿದೆ.

VISTARANEWS.COM


on

IPL 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಐಪಿಎಲ್​ 2024ರ (IPL 2024) ನಿಯಮ ಉಲ್ಲಂಘಿಸಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಗುಜರಾತ್ ಟೈಟಾನ್ಸ್ ನಾಯಕ ಶುಬ್ಮನ್ ಗಿಲ್​​ಗೆ (Shubhman Gill) ಸಿಎಸ್​ಕೆ (Chennai Super Kings) ವಿರುದ್ಧದ ಪಂದ್ಯದ ಶುಲ್ಕದಿಂದ 24 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ. ಇದು ಗುಜರಾತ್ ಟೈಟಾನ್ಸ್ ಮತ್ತು ಶುಭ್ಮನ್ ಗಿಲ್ ಅವರ ನಿಧಾನಗತಿಯ ಓವರ್ ರೇಟ್​​ಗೆ ಸಂಬಂಧಿಸಿದ ಎರಡನೇ ಅಪರಾಧ. ಹೀಗಾಗಿ ಫ್ರಾಂಚೈಸಿ ನಾಯಕನಿಗೆ 24 ಲಕ್ಷ ದಂಡ ವಿಧಿಸಲಾಗಿದೆ. ಇದು ತಂಡದ ಎರಡನೇ ಅಪರಾಧವಾಗಿದೆ. ಹೀಗಾಗಿ ಅಹಮದಾಬಾದ್​ನಲ್ಲಿ ಆಡಿದ ಎಲ್ಲ ಆಟಗಾರರಿಗೂ ದಂಡ ಬಿದ್ದಿದೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ 2023 ಪಂದ್ಯ ಶುಬ್ಮನ್ ಗಿಲ್​ಗೆ ಡಬಲ್ ಸಂತೋಷವನ್ನು ನೀಡಿತು. ವೃದ್ಧಿಮಾನ್ ಸಹಾ ಅವರ ಕಳಪೆ ಫಾರ್ಮ್ ನಿಂದಾಗಿ ಅವರನ್ನು ಕೈಬಿಡಲಾಯಿತು. ಹೀಗಾಗಿ ಗಿಲ್​ ಸಾಯಿ ಸುದರ್ಶನ್ ಜತೆಗೆ ಇನಿಂಗ್ಸ್ ಆರಂಭಿಸಿದ್ದರು. ಇಬ್ಬರೂ ಸಿಎಸ್​ಕೆ ಬೌಲರ್​ಗಳಿಗೆ ಯಾವುದೇ ಅವಕಾಶವನ್ನು ನೀಡಲಿಲ್ಲ. ಇಬ್ಬರೂ ಶತಕ ಬಾರಿಸಿದರು. ಗಿಲ್​ಗೆ ಇದು ಒಟ್ಟು ನಾಲ್ಕನೇ ಐಪಿಎಲ್ ಶತಕ ಹಾಗೂ ಒಟ್ಟಾರೆ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 100 ನೇ ಶತಕವಾಗಿದೆ.

2008 ರಲ್ಲಿ, ಐಪಿಎಲ್ ದಂತಕಥೆ ಬ್ರೆಂಡನ್ ಮೆಕಲಮ್ ಕೆಕೆಆರ್ ಪರ ಆರ್​ಸಿಬಿ ವಿರುದ್ಧ ಲೀಗ್​ನ ಮೊದಲ ಶತಕವನ್ನು ಗಳಿಸಿದ್ದರು. ಮೆಕಲಮ್ 158 ರನ್ ಗಳಿಸಿ ಶ್ರೀಮಂತ ಕ್ರಿಕೆಟ್ ಲೀಗ್​ನ ಯುಗವನ್ನು ಪ್ರಾರಂಭಿಸಿದ್ದರು. ಅಂದಿನಿಂದ ಇನ್ನೂ ಅನೇಕ ಆಟಗಾರರು ಶತಕಗಳನ್ನು ಗಳಿಸಿದ್ದಾರೆ. ಆದರೆ ಶುಬ್ಮನ್ ಗಿಲ್ ಐಪಿಎಲ್​ಗೆ ವಿಶೇಷ 100 ನೇ ಶತಕವಾಗಿದೆ.

ಇದನ್ನೂ ಓದಿ: Rishabh Pant : 2024ರ ಟಿ20 ವಿಶ್ವಕಪ್​ಗೆ ಮುನ್ನ ರಿಷಭ್​ ಪಂತ್​​ಗೆ ನಿಷೇಧ, 30 ಲಕ್ಷ ರೂ. ದಂಡ

ಗಿಲ್​ ಇನ್ನಿಂಗ್ಸ್ 9 ಬೌಂಡರಿಗಳು ಮತ್ತು 6 ಸಿಕ್ಸರ್​ಗಳನ್ನು ಒಳಗೊಂಡಿತ್ತು. ಅವರ ಶತಕ ಪೂರ್ಣಗೊಂಡ ಸ್ವಲ್ಪ ಸಮಯದ ನಂತರ ಸಾಯಿ ಸುದರ್ಶನ್ ತಮ್ಮ ಮೊದಲ ಐಪಿಎಲ್ ಶತಕ ಪೂರ್ಣಗೊಳಿಸಿದರು. ಮೂಲತಃ ತಮಿಳುನಾಡಿನವರಾದ ಎಡಗೈ ಬ್ಯಾಟ್ಸ್ಮನ್, ಲೀಗ್​​ನ 101 ನೇ ಶತಕ ಬಾರಿಸಿದರು. ವಎಲ್ಲಕ್ಕಿಂತ ಮುಖ್ಯವಾಗಿ ಅವರು ಮೊದಲ ವಿಕೆಟ್​ಗೆ ಶುಭ್ಮನ್ ಗಿಲ್ ಅವರೊಂದಿಗೆ 210 ರನ್​ಗಳ ರೋಚಕ ಜೊತೆಯಾಟ ನೀಡಿದರು.

ಗಿಲ್ 55 ಎಸೆತಗಳಲ್ಲಿ 104 ರನ್ ಗಳಿಸಿ ಕ್ರೀಸ್ ತೊರೆದರೆ, ಸುದರ್ಶನ್ ಅದೇ ಓವರ್ನಲ್ಲಿ 51 ಎಸೆತಗಳಲ್ಲಿ 103 ರನ್ ಗಳಿಸಿದರು. ಅವರ ಪ್ರಯತ್ನಗಳ ಪರಿಣಾಮವಾಗಿ, ಜಿಟಿ 232 ರನ್​ಗಳ ರನ್​ ಶಿಖರ ದಾಖಲಿಸಿತು. ಹೀಗಾಗಿ ಪಂದ್ಯವನ್ನು ಸಿಎಸ್​ಕೆ 35 ರನ್​ಗಳಿಂದ ಕಳೆದುಕೊಂಡಿತು.

231 ರನ್ ಗಳಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಗಿಲ್
ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಮಾತನಾಡಿದ ಶುಬ್ಮನ್ ಗಿಲ್, ತಮ್ಮ ತಂಡವು ಇನ್ನೂ 10-15 ರನ್​ಗಳ ಕೊರತೆ ಎದುರಿಸಿತು ಎಂದು ಹೇಳಿದ್ದಾರೆ. 231 ರನ್ ಗಳಿಸುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಿಲ್ ಅವರು ಒಟ್ಟು 250 ರನ್​ಗಳನ್ನು ಎದುರು ನೋಡುತ್ತಿದ್ದರು. ಆದರೆ ಡೆತ್ ಓವರ್​ಗಳಲ್ಲಿ ಸಿಎಸ್​ಕೆ ಪುನರಾಗಮನವು ಅವರನ್ನು 230 ರನ್​​ಗಳಿಗೆ ಸೀಮಿತಗೊಳಿಸಿತು ಎಂದು ಹೇಳಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

T20 World Cup 2024: ಟಿ-20 ಸ್ವಯಂವರದ ಮಂಟಪದಲ್ಲಿ ವಿಶ್ವಸುಂದರಿಗೆ ಮಾಲೆ ತೊಡಿಸಿದ ರೋಹಿತ್ ಬಳಗ

T20 World Cup 2024: ಐಸಿಸಿ ಟಿ-20 ಕ್ರಿಕೆಟ್ ಸ್ವಯಂವರದ ಅವಿಸ್ಮರಣೀಯ ದೃಶ್ಯಗಳನ್ನು ನೋಡಲು ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿತ್ತು. ಇತ್ತ ಭಾರತದ ಪ್ರತಿಯೊಬ್ಬ ಅಭಿಮಾನಿಯ ಹೃದಯಬಡಿತದಲ್ಲೂ ಏರುಪೇರು ನಡೆದೇ ಇತ್ತು. ಅದೊಂದು ಮಹೋನ್ನತ ಕ್ಷಣಕ್ಕೆ ಸಾಕ್ಷಿಯಾಗಿತ್ತು ಕೆರೆಬಿಯನ್ ನಾಡಿನ ಬಾರ್ಬೊಡಸ್‍ನ ಕೆನ್ಸಿಂಗ್ಟನ್ ಓವಲ್ ಅಂಗಣ.

VISTARANEWS.COM


on

T20 World Cup 2024
Koo

ಸನತ್ ರೈ, ಬೆಂಗಳೂರು

2024ರ ಜೂನ್ 29. ಭಾರತೀಯ ಕಾಲಮಾನ ರಾತ್ರಿ 8 ಗಂಟೆ., ಟಿ-20 ವಿಶ್ವಕಪ್ ಟೂರ್ನಿಯ (T20 World Cup 2024) ಅಶ್ವಮೇಧ ಯಾಗದ ಕೊನೆಯ ಪರ್ವ. ವಿಜಯಲಕ್ಷ್ಮಿ ಸ್ವಯಂವರದ ತಹತಹಿಕೆ ಭಾರತೀಯ ಮಕ್ಕಳ ಹೃದಯದ ಭಾವಕೋಶದಲ್ಲಿ ಅವ್ಯಾಹತವಾಗಿ ಪುಟಿಯುತ್ತಲೇ ಇತ್ತು.. ಸತತ ಗೆಲುವಿನ ನಾಗಾಲೋಟದಲ್ಲಿದ್ದ ವಿಶ್ವದ ಬಲಿಷ್ಠ ಎರಡು ತಂಡಗಳು ಅಂತಿಮ ಹಂತದ ಸಿದ್ಧತೆ ಮಾಡಿಕೊಂಡಿದ್ದವು. ನಾಲ್ಕನೇ ಬಾರಿ ಚಂಚಲೆ ಚೆಲುವೆಯನ್ನು ಒಲಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದರು ಭಾರತದ ರೋಹಿತ್ ಶರ್ಮಾ ಹುಡುಗರು.

ಇನ್ನೊಂದೆಡೆ ಐಸಿಸಿ ಅಖಾಡದಲ್ಲಿ ಯಾವತ್ತೂ ಭಗ್ನ ಪ್ರೇಮಿಗಳಾಗಿದ್ದ ದಕ್ಷಿಣ ಆಫ್ರಿಕಾ ಹುಡುಗರು ಇದೇ ಮೊದಲ ಬಾರಿ ವಿಶ್ವ ಸುಂದರಿಯ ಸ್ವಯಂವರದ ಮಂಟಪದ ಕೊನೆಯ ಮೆಟ್ಟಿಲು ಹತ್ತಿ ನಿಂತಿದ್ದರು. ಐಸಿಸಿ ಟಿ-20 ಕ್ರಿಕೆಟ್ ಸ್ವಯಂವರದ ಅವಿಸ್ಮರಣೀಯ ದೃಶ್ಯಗಳನ್ನು ನೋಡಲು ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿತ್ತು. ಇತ್ತ ಭಾರತದ ಪ್ರತಿಯೊಬ್ಬ ಅಭಿಮಾನಿಯ ಹೃದಯಬಡಿತದಲ್ಲೂ ಏರುಪೇರು ನಡೆದೇ ಇತ್ತು. ಅದೊಂದು ಮಹೋನ್ನತ ಕ್ಷಣಕ್ಕೆ ಸಾಕ್ಷಿಯಾಗಿತ್ತು ಕೆರೆಬಿಯನ್ ನಾಡಿನ ಬಾರ್ಬೊಡಸ್‍ನ ಕೆನ್ಸಿಂಗ್ಟನ್ ಓವಲ್ ಅಂಗಣ.

ಹೌದು, ಈ ಬಾರಿ ಟಿ-20 ವಿಶ್ವಕಪ್ ಟ್ರೋಫಿಗೆ ಗೆಲುವಿನ ಮಾಲೆ ಹಾಕಿ ಭಾರತಾಂಬೆಯ ಪಾದದಡಿಯಲ್ಲಿಡಲು ರೋಹಿತ್ ಹುಡುಗರು ಭೀಷ್ಮ ಶಪಥ ಮಾಡಿದ್ದರು. ಸಮರ್ಥ ನಾಯಕ ರೋಹಿತ್, ಗುರು ದ್ರಾವಿಡಾಚಾರ್ಯರಿಗೆ ಗೆಲುವೊಂದೇ ಉಡುಗೊರೆ ಅನ್ನುವುದು ತಂಡದ ಎಲ್ಲಾ ಆಟಗಾರರ ಅಂಬೋಣವಾಗಿತ್ತು.

ಹತ್ತು ವರ್ಷಗಳ ಹಿಂದೆ ಸ್ವಯಂವರ ಮಂಟಪದಿಂದ ಹೊರದಬ್ಬಿದ್ದ ಚಂಚಲ ಚೆಲುವೆ, ಎರಡು ಬಾರಿ ಮದರಂಗಿ ಶಾಸ್ತ್ರದ ವೇಳೆಯಲ್ಲೇ ಕೈಕೊಟ್ಟಿದ್ದಳು (ಸೆಮಿಫೈನಲ್ ನಿರ್ಣಾಯಕ ಘಟ್ಟದಲ್ಲಿ). ಆದ್ರೆ ಈ ಬಾರಿ ಗುರು ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ರೋಹಿತ್ ಹುಡುಗರು ಪಕ್ಕಾ ರಣತಂತ್ರ ಹಣೆದು ಅಂತಿಮ ಅಂಕಣಕ್ಕೆ ಕಂಕಣ ಕಟ್ಟಿಕೊಂಡು ಇಳಿದಿದ್ದರು.

ಬ್ಯಾಟಿಂಗ್ ಆಯ್ಕೆ

ಮಹತ್ವದ ಟಾಸ್ ಗೆದ್ದ ರೋಹಿತ್ ಹಿಂದು ಮುಂದು ಯೋಚನೆ ಮಾಡದೇ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ್ರು. ಯಾಕಂದ್ರೆ ಬ್ಯಾಟಿಂಗ್ ಶಕ್ತಿ ಮತ್ತು ಬೌಲಿಂಗ್ ಯುಕ್ತಿಯ ಮೇಲೆ ರೋಹಿತ್ ಅಪಾರ ನಂಬಿಕೆಯನ್ನಿಟ್ಟುಕೊಂಡಿದ್ದರು. ಮಿನುಗು ತಾರೆಯಂತೆ ಹೊಳೆಯುವ ಚೆಂದುಳ್ಳಿ ಚೆಲುವೆಯ ಕೊರಳಿಗೆ ಮಾಲೆ ಹಾಕಲು ಗುರು ದ್ರಾವಿಡ್ ಕೊಟ್ಟ ದಾರದಲ್ಲಿ ಪುಷ್ಪಮಾಲೆಗಳ ಪೋಣಿಸಲು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಶುರು ಮಾಡಿದ್ರು.

ಆರಂಭದಲ್ಲೇ ವಿರಾಟ್ ಕೊಹ್ಲಿ ಮಲ್ಲಿಗೆಯ ಕಂಪನ್ನು ಪಸರಿಸಿದ್ರು. ಒಂದರೆಗಳಿಗೆಯೂ ಮೈಮರೆಯಲಿಲ್ಲ. ತಾಳ್ಮೆ, ಏಕಾಗ್ರತೆಯೊಂದಿಗೆ ಘಮಘಮಿಸುವ ಬ್ಯಾಟಿಂಗ್ ವೈಖರಿಗೆ ಅಭಿಮಾನಿಗಳು ಕೂಡ ಮೈಮರೆತು ಕುಣಿದಾಡಿದರು. ಆದ್ರೆ ದುರದೃಷ್ಟವಶಾತ್ ಗುಲಾಬಿ ಹೂವಿನಂತೆ ಆಕರ್ಷಿಸುವ ರೋಹಿತ್ ಬ್ಯಾಟಿಂಗ್ ಅಂತಿಮ ಹಣಾಹಣಿಯಲ್ಲಿ ಹೆಚ್ಚು ಸುವಾಸನೆ ಬೀರಲಿಲ್ಲ. ಕೇಶವ್ ಮಹಾರಾಜ್ ಎಂಬ ಹರಿಣಪಾಳೆಯದ ಪತಂಗವೊಂದು ಗುಲಾಬಿಯ ಮಕರಂದವನ್ನು ಹೀರುತ್ತಿದ್ದಂತೆ ರೋಹಿತ್ ಪೋಣಿಸುವಿಕೆ ಮುಗಿದಂತಾಯ್ತು. ಹಿಟ್ ಮ್ಯಾನ್, ಗೆಲುವಿನ ಮಾಲೆಗೆ 9 (ರನ್) ಗುಲಾಬಿ ಪೋಣಿಸಿ ಪೆವಿಲಿಯನ್‍ನತ್ತ ಹೆಜ್ಜೆ ಹಾಕಿದಾಗ ಇಡೀ ಓವಲ್ ಅಂಗಳ ಒಂದು ಕ್ಷಣ ಸ್ತಬ್ದಗೊಂಡಿತ್ತು. ಮರು ಕ್ಷಣದಲ್ಲೇ (ಕೇಶವ್ ಮಹಾರಾಜ್) ಪತಂಗದ ಚೆಲ್ಲಾಟಕ್ಕೆ ಶೂನ್ಯ ಸುತ್ತಿದ ರಿಷಬ್ ಪಂತ್ ಸುಗಂಧ ರಾಜನಂತೆ ಬ್ಯಾಟಿಂಗ್‍ನಲ್ಲಿ ಪರಿಮಳ ಬೀರಲಿಲ್ಲ. ಹಿಂದೆಯೇ ಕೇವಲ 3 (ರನ್) ಸೂರ್ಯಕಾಂತಿಗಳಷ್ಟೇ ಮಾಲೆಗೆ ಪೋಣಿಸಿದ ಸೂರ್ಯಕುಮಾರ್ ಬಂದ ದಾರಿಗೆ ಸುಂಕವಿಲ್ಲದೆ ಹಿಂತಿರುಗಿದ್ರು. ಜೇನುನೋಣದಂತೆ ದಾಳಿ ಮಾಡಿದ ರಬಾಡ ಸ್ಕೈ ವಿಕೆಟ್ ಉರುಳಿಸಿ ಟೀಮ್ ಇಂಡಿಯಾದ ಅಭಿಮಾನಿಗಳ ಹೃದಯವನ್ನು ಘಾಸಿ ಮಾಡಿದ್ದರು. ಹೀಗೆ, ದುಂಬಿ, ಪತಂಗ, ಜೇಣುನೋಣದ ಆಕ್ರಮಣಕ್ಕೆ ಟೀಮ್ ಇಂಡಿಯಾದ ಗೆಲುವಿನ ಮಾಲೆಗೆ ಹೂ ಪೋಣಿಸುವ ಕಾರ್ಯ ನಿಧಾನವಾಗಿ ಸಾಗುತ್ತಿತ್ತು.

ಇದನ್ನೂ ಓದಿ: Afghanistan cricket : ನಮಗೂ ಒಂದು ತಂಡ ರಚಿಸಿ ಎಂದು ಐಸಿಸಿಗೆ ಪತ್ರ ಬರೆದ ಅಫಘಾನಿಸ್ತಾನದ ಮಹಿಳಾ ಕ್ರಿಕೆಟಿಗರು

ಆದ್ರೂ ಮಲ್ಲಿಗೆಯ ಕಂಪಿನಂತೆ ಬ್ಯಾಟ್ ಬೀಸುತ್ತಿದ್ದ ಕೊಹ್ಲಿಗೆ ಅಕ್ಸರ್ ಪಟೇಲ್ ಸಾಥ್ ನೀಡಿದ್ರು. ಲಯ ಪಡೆದುಕೊಂಡ ವಿರಾಟ್ ಕೊಹ್ಲಿ ಗೆಲುವಿನ ಹಾರಕ್ಕೆ ಮಲ್ಲಿಗೆಯನ್ನು ಪೋಣಿಸಿಕೊಂಡು ಹೋದ್ರೆ, ಇತ್ತ ಅಕ್ಸರ್ ಪಟೇಲ್ ಹೆಚ್ಚು ಸುವಾಸನೆ ಇಲ್ಲದ ಕನಕಾಂಬರ ಹೂವಿನಂತೆ ಯಾರು ಕೂಡ ಊಹೆ ಮಾಡದ ರೀತಿಯಲ್ಲಿ ಬ್ಯಾಟ್ ಬೀಸಿದ್ರು. ವಿರಾಟನ ಮಲ್ಲಿಗೆಯ ಜೊತೆಗೆ ಅಕ್ಸರ್ ಪಟೇಲ್ ಕನಕಾಂಬರವನ್ನು ಪೋಣಿಸಿ ಗೆಲುವಿನ ಹಾರದ ಅಲಂಕಾರವನ್ನು ಹೆಚ್ಚಿಸಿದ್ರು. ಆದ್ರೆ 47 (ರನ್) ಕನಕಾಂಬರ ಹೂಗಳನ್ನು ಗೆಲುವಿನ ಹಾರಕ್ಕೆ ಸೇರಿಸಿ ಮರಳಿ ಪೆವಿಲಿಯನ್ ಸೇರಿಕೊಂಡ್ರು.

ಇನ್ನೊಂದೆಡೆ ವಿರಾಟನ ಮಲ್ಲಿಗೆಯ ಸುವಾಸನೆ ಜೊತೆ ಸೇವಂತಿ ಹೂವಿನಂತೆ ಘಮ್ಮಂತ ಪಸರಿಸಿದ್ದು ಶಿವಂ ದುಬೆ. ಅದರಲ್ಲೂ ಕಿಂಗ್ ಕೊಹ್ಲಿ, ಬೆಳಂದಿಗಳ ಚಂದಿರನ ಬೆಳಕಿನಲ್ಲಿ ಫಳಫಳನೆ ಹೊಳೆವ ಮಲ್ಲಿಗೆಯಂತೆ ಕಂಗೊಳಿಸುತ್ತಿದ್ದರು. ಅಷ್ಟರಲ್ಲೇ ಜಾನ್ಸೆನ್ ಎಂಬ ದುಂಬಿ ಮಲ್ಲಿಗೆ ಪೋಣಿಸುತ್ತಿದ್ದ ವಿರಾಟನ ಏಕಾಗ್ರತೆಗೆ ಭಂಗವನ್ನುಂಟು ಮಾಡಿತು. ಅಷ್ಟೊತ್ತಿಗಾಗಲೇ 76 (ರನ್) ಮಲ್ಲಿಗೆ ಹೂಗಳು ಭಾರತದ ಗೆಲುವಿನ ಹಾರದಲ್ಲಿ ಸೇರಿಕೊಂಡಿದ್ದವು.

ಬಳಿಕ ಸೇವಂತಿಯ (ಶಿವಂ ದುಬೆ) ಜೊತೆ ಹಾರ್ದಿಕ್ ಪಾಂಡ್ಯ ಎಂಬ ಕೆಂಡ ಸಂಪಿಗೆಯೂ ಸ್ವಯಂವರ ಮಾಲೆಗೆ ಇನ್ನಷ್ಟು ಮೆರಗು ನೀಡಿತು. 27 ಸೇವಂತಿ ಹೂ ಪೋಣಿಸಿ ಹೂ ಮಾಲೆಗೆ ಶೃಂಗಾರ ಹೆಚ್ಚಿಸಿದ ಶಿವಂ ದುಬೆಗೆ ಮಕರಂದ ಹೀರುವ ಚತುರ ಸನ್ ಬರ್ಡ ಹಕ್ಕಿಯಂತೆ ಆನ್ರಿಚ್ ನೋರ್ಟೆಜೆ ಕುಟುಕಿದ್ರು.
ಅಂತಿಮವಾಗಿ ಪಾಂಡ್ಯ ಅವರ 5* (ರನ್) ಕೆಂಡ ಸಂಪಿಗೆಯ ಜೊತೆ ಸುಂದರ ಮಾಲೆಗೆ ಕೇವಲ 2 ಜಾಜಿ ಮಲ್ಲಿಗೆ ಹೂ ಪೋಣಿಸಿದ ರವೀಂದ್ರ ಜಡೇಜಾಗೂ ಸನ್‍ಬರ್ಡ ನೊರ್ಟೆಜೆ ಅಡ್ಡಿಯನ್ನುಂಟು ಮಾಡಿದ್ರು. ಅಷ್ಟರಲ್ಲಾಗಲೇ ರೋಹಿತ್ ಹುಡುಗರು 176 ಮಾರುದ್ದದ ಹೂಮಾಲೆಯನ್ನು ತಯಾರಿಸಿ ಇಟ್ಟಿದ್ದರು.
*
ಮುಂದಿನ ಪಾರಿ ನೀಲಿ ಜೆರ್ಸಿ ಹುಡುಗರ ಬೌಲಿಂಗ್ ಪಡೆಯದ್ದಾಗಿತ್ತು. ತಮ್ಮ ಪಾಲಿನ ಪುಷ್ಪಗಳನ್ನು ಸುಮಮಾಲೆಗೆ ಪೋಣಿಸಲು ಬುಮ್ರಾ ನೇತೃತ್ವದ ಬೌಲಿಂಗ್ ಸೈನಿಕರು ಸಿದ್ಧರಾಗಿದ್ದರು.

ವಿಶ್ವ ಕ್ರಿಕೆಟ್ ಬೌಲಿಂಗ್ ನ ನಾಯಕ ಶಿರೋಮಣಿ ಜಸ್ಪ್ರಿತ್ ಬೂಮ್ರಾ ಎರಡು (ವಿಕೆಟ್) ಗೊಂಚಲು ಚೆಂಡು ಹೂಗಳನ್ನು ಕಿತ್ತುಕೊಂಡು ಕೈ ಜಾರುತ್ತಿದ್ದ ವಿಜಯ ಮಾಲೆಗೆ ಮೆರಗು ನೀಡಿದ್ರು. ಇನ್ನೊಂದೆಡೆ ಅರ್ಶಾದೀಪ್ ಸಿಂಗ್ ಕೂಡ ಎರಡು (ವಿಕೆಟ್) ಗೊಂಚಲು ತುಳಸಿದಳಗಳನ್ನು ಪೋಣಿಸಿ ಗೆಲುವಿನ ಮಾಲೆಯ ಅಂದವನ್ನು ಹೆಚ್ಚಿಸಿದ್ರು. ಹಾಗೇ ಕುಲದೀಪ್ ಯಾದವ್ ಮೂರು (ಕ್ಯಾಚ್) ಗಂಟು ಪಾರಿಜಾತ ಹೂಗಳನ್ನು ಗೆಲುವಿನ ಹಾರಕ್ಕೆ ಪೋಣಿಸಿ ಸುವಾಸನೆಯನ್ನು ಇಮ್ಮಡಿಗೊಳಿಸಿದ್ರು. ಮತ್ತೊಂದೆಡೆ ಬ್ಯಾಟಿಂಗ್ ನಲ್ಲಿ ಶೂನ್ಯ ಸುತ್ತಿದ್ದ ರಿಷಬ್ ಪಂತ್ ಕೂಡ ಎರಡು (ಕ್ಯಾಚ್) ಸುಗಂಧರಾಜ ಹೂ ಸೇರಿಸಿ ಪರಿಮಳ ಹೆಚ್ಚಿಸಿದ್ರು. ಜೊತೆಗೆ ಅಕ್ಸರ್ ಪಟೇಲ್ 1 (ವಿಕೆಟ್) ಗಂಟು ಕನಕಾಂಬರ ಹೂ ಪೋಣಿಸಿ ದೃಷ್ಟಿ ಬೊಟ್ಟು ಇಟ್ರು. ಮಗದೊಂದು ಕಡೆ ಕಳೆಗುಂದಿದ್ದ ಸೂರ್ಯಕಾಂತಿ ಪುಷ್ಪ, ಉಗ್ರ ಸೂರ್ಯನ ಪ್ರಖರತೆಗೆ ನಾಚಿನೀರಾಗಿ ಹೋಯ್ತು. ಸೂರ್ಯನ ತೇಜೋಪುಂಜದ ಪ್ರಭಾವಳಿಗೆ ಸೂರ್ಯಕಾಂತಿ ಕೂಡ ಸದ್ದಿಲ್ಲದೆ ಬಂದು ಗೆಲುವಿನ ಹಾರ ಸೇರಿಕೊಂಡಿತ್ತು.

ಸೂರ್ಯಕುಮಾರ್ ಕ್ಯಾಚ್​

ಗೆಲುವಿನ ಹಾರ ಕಟ್ಟುವಲ್ಲಿ ಲಯ ತಪ್ಪಿದ್ದ ರೋಹಿತ್ ಹುಡುಗರನ್ನು ಸುಗ್ಗಿಯ ಸಂಕ್ರಾಂತಿ ಮಾಡುವಂತೆ ಮಾಡಿದ್ದು ಕೂಡ ಸೂರ್ಯನೇ. ಚಿಗರೆಯಂತೆ ಜಿಗಿದು ಸಮಯ ಪ್ರಜ್ಞೆಯಿಂದ ಸೂರ್ಯಕಾಂತಿಯನ್ನು (ಕ್ಯಾಚ್) ಹಿಡಿದು ಅಂದವಾದ ಮಾಲೆಗೆ ಹೊಳಪು ನೀಡಿದ್ರು. ಹೂವಿನ ಮಾಲೆಯ ಅಂದವನ್ನು ಹೆಚ್ಚಿಸಲು ಪಾಂಡ್ಯ ಮತ್ತೆ ಮೂರು (ವಿಕೆಟ್) ಕೆಂಡಸಂಪಿಗೆಯನ್ನು ಸೇರಿಸಿದ್ರು. ಕೊನೆಗೆ ಗೆಲುವಿನ ಮಾಲೆಗೆ ದಾರ ಕೊಟ್ಟಿದ್ದ ಗುರು ರಾಹುಲ್ ದ್ರಾವಿಡ್ ಆಚಾರ್ಯ ಬ್ರಹ್ಮಕಮಲವನ್ನು ಪೋಣಿಸಿ ಫಿನಿಶಿಂಗ್ ಟಚ್ ನೀಡಿಬಿಟ್ಟರು.

ಅಂತಿಮವಾಗಿ ಬಗೆ ಬಗೆಯ ಅಂದ ಚೆಂದದ ಸುಂದರ ಹೂ ಮಾಲೆಯನ್ನು ಚಂಚಲ ಚೆಲುವೆಯ ಕೊರಳಿಗೆ ಟೀಮ್ ಇಂಡಿಯಾ ಹುಡುಗರು ಹಾಕಿ ನಲಿದರು. ವೈಯ್ಯಾರದಿಂದ ಬೀಗುತ್ತಿದ್ದ ಐಸಿಸಿ ಟಿ-20ಯ ಪಟ್ಟದರಸಿಯನ್ನು ಒಲಿಸಿಕೊಂಡಾಗಿನ ಕ್ಷಣ ಇತಿಹಾಸ ಪುಟಗಳಲ್ಲಿ ಶಾಶ್ವತವಾಗಿ ನೆನಪಿನಲ್ಲಿರುತ್ತದೆ.

ಗೆಲುವಿನ ಸಂಭ್ರಮ.. ಸಡಗರ.. ಕಣ್ಣೀರು, ಭಾವುಕ, ಆನಂದಭಾಷ್ಪ, ಉತ್ಸಾಹ, ಉನ್ಮಾದ, ವಿದಾಯ, ಹತಾಶೆ, ಸೋಲು, ಬೇಸರ.. ಅಬ್ಬಾಬ್ಬಾ.. ಬಣ್ಣಿಸಲು ಪದಗಳಿಲ್ಲ

Continue Reading

ಪ್ರಮುಖ ಸುದ್ದಿ

Afghanistan cricket : ನಮಗೂ ಒಂದು ತಂಡ ರಚಿಸಿ ಎಂದು ಐಸಿಸಿಗೆ ಪತ್ರ ಬರೆದ ಅಫಘಾನಿಸ್ತಾನದ ಮಹಿಳಾ ಕ್ರಿಕೆಟಿಗರು

Afghanistan cricket: 2010 ರಲ್ಲಿ ರಚಿಸಲಾದ ಮಹಿಳಾ ತಂಡವನ್ನು ತಾಲಿಬಾನ್ ಅಪಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ 2021 ರಲ್ಲಿ ವಿಸರ್ಜಿಸಿಗ್ತು. ತಾಲಿಬಾನ್ ಆಡಳಿತವು ಮಹಿಳೆಯರು ಯಾವುದೇ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗುವುದನ್ನು ನಿಷೇಧಿಸಿದೆ. ಇದರ ಪರಿಣಾಮವಾಗಿ, ಅಫ್ಘಾನಿಸ್ತಾನವು ರಾಷ್ಟ್ರೀಯ ಮಹಿಳಾ ತಂಡವನ್ನು ಹೊಂದಿಲ್ಲ.

VISTARANEWS.COM


on

Afghanistan cricket
Koo

ಬೆಂಗಳೂರು: ಅಫ್ಘಾನಿಸ್ತಾನದ 17 ಮಹಿಳಾ ಆಟಗಾರರು ಆಸ್ಟ್ರೇಲಿಯಾ ಮೂಲದ ನಿರಾಶ್ರಿತರ ತಂಡವೊಂದನ್ನು (Afghanistan cricket) ರಚಿಸಲು ಸಹಾಯ ಮಾಡುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಗೆ (ICC) ಮನವಿ ಮಾಡಿಎ. 2020ರಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ACB) ಆಟಗಾರ್ತಿಯರಿಗೆ ಗುತ್ತಿಗೆ ನೀಡಿತ್ತು. 2010 ರಲ್ಲಿ ರಚಿಸಲಾದ ಮಹಿಳಾ ತಂಡವನ್ನು ತಾಲಿಬಾನ್ ಅಪಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ 2021 ರಲ್ಲಿ ವಿಸರ್ಜಿಸಿಗ್ತು. ತಾಲಿಬಾನ್ ಆಡಳಿತವು ಮಹಿಳೆಯರು ಯಾವುದೇ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗುವುದನ್ನು ನಿಷೇಧಿಸಿದೆ. ಇದರ ಪರಿಣಾಮವಾಗಿ, ಅಫ್ಘಾನಿಸ್ತಾನವು ರಾಷ್ಟ್ರೀಯ ಮಹಿಳಾ ತಂಡವನ್ನು ಹೊಂದಿಲ್ಲ.

ಆಟಗಾರರು ಈಗ ತಮ್ಮ ವೃತ್ತಿಜೀವನವನ್ನು ಪುನರ್​ಸ್ಥಾಪಿಸಲು ಐಸಿಸಿಯನ್ನು ಸಂಪರ್ಕಿಸಿದ್ದಾರೆ. ಕಳೆದ ವಾರ, ಅವರು ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರಿಗೆ ಪತ್ರ ಬರೆದು ತಮಗೆ ಮಂಡಳಿಯಿಂದ “ಬೆಂಬಲ ಮತ್ತು ಮಾರ್ಗದರ್ಶನ” ನೀಡುವಂತೆ ಮನವಿ ಮಾಡಿದ್ದಾರೆ. ಅಫ್ಘಾನಿಸ್ತಾನದ ಸರ್ಕಾರದ ನೀತಿಗಳಿಂದಾಗಿ ತಮ್ಮನ್ನು ಅಫ್ಘಾನಿಸ್ತಾನ ರಾಷ್ಟ್ರೀಯ ತಂಡ ಎಂದು ಕರೆಯಲು ಅಥವಾ ಎಸಿಬಿ ಬ್ಯಾನರ್ ಅಡಿಯಲ್ಲಿ ಆಡಲು ಸಾಧ್ಯವಿಲ್ಲ ಎಂದು ಆಟಗಾರರು ಪತ್ರದಲ್ಲಿ ಒಪ್ಪಿಕೊಂಡಿದ್ದಾರೆ. ಆದಾಗ್ಯೂ, ಅವರು ಆಡಲು ಬಯಸಿದ್ದು ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಮೂಲದ ಈಸ್ಟ್ ಏಷ್ಯನ್ ಕ್ರಿಕೆಟ್ ಕಚೇರಿಯಿಂದ ನಿರಾಶ್ರಿತರ ತಂಡವಾಗಿ ಆಡಳಿತ ನಡೆಸುವಂತೆ ಕೇಳಿಕೊಂಡಿದ್ದಾರೆ.

“ಕ್ರಿಕೆಟ್ ಆಡುವ ಕನಸು ಕಾಣುವ ಆದರೆ ಅಫ್ಘಾನಿಸ್ತಾನದಲ್ಲಿ ಆಡಲು ಸಾಧ್ಯವಾಗದ ಎಲ್ಲಾ ಅಫ್ಘಾನ್ ಮಹಿಳೆಯರನ್ನು ಪ್ರತಿನಿಧಿಸಲು” ಐಸಿಸಿ ಸಹಾಯ ಮಾಡಬೇಕು ಎಂದು ಆಟಗಾರರು ಮನವಿ ಮಾಡಿದ್ದಾರೆ.

ಐಸಿಸಿಗೆ ಅಫ್ಘಾನಿಸ್ತಾನ ಮಹಿಳಾ ಆಟಗಾರ್ತಿಯರು ಬರೆದ ಪತ್ರದಲ್ಲಿ ಏನಿದೆ?

ಅಫ್ಘಾನಿಸ್ತಾನ ಮಹಿಳಾ ತಂಡದಲ್ಲಿ ಈ ಹಿಂದೆ ಗುತ್ತಿಗೆ ಪಡೆದ ಆಟಗಾರ್ತಿಯರಾದ ನಾವು, ಐಸಿಸಿ ಪುರುಷರ ಟಿ 20 ವಿಶ್ವಕಪ್​ನಲ್ಲಿ ಅಫ್ಘಾನಿಸ್ತಾನದ ಸಾಧನೆಗಳಿಂದ ಹೆಮ್ಮೆಪಡುತ್ತೇವೆ/ ಸೆಮಿಫೈನಲ್ ತಲುಪಿದ ರಶೀದ್ ಖಾನ್ ಮತ್ತು ಅವರ ತಂಡವನ್ನು ಅಭಿನಂದಿಸಲು ಬಯಸುತ್ತೇವೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಮಹಿಳೆಯರಾಗಿರುವ ನಮಗೆ ಪುರುಷ ಕ್ರಿಕೆಟಿಗರಂತೆ ನಮ್ಮ ದೇಶವನ್ನು ಪ್ರತಿನಿಧಿಸಲು ಸಾಧ್ಯವಿಲ್ಲ ಎಂಬುದು ತೀವ್ರ ದುಃಖದ ವಿಷಯ. ಅಫ್ಘಾನ್ ಮಹಿಳೆಯರ ಪ್ರತಿಭೆಯನ್ನು ಜಗತ್ತಿಗೆ ತೋರಿಸಲು ಮತ್ತು ಐಸಿಸಿಯ ನಾಯಕತ್ವ ಮತ್ತು ಆರ್ಥಿಕ ಬೆಂಬಲದ ಮೂಲಕ ಅವಕಾಶ ನೀಡಬೇಕು. ಹಾಗಾದರೆ ಸಾಧಿಸಬಹುದಾದ ಉತ್ತಮ ವಿಜಯಗಳನ್ನು ಸಾಧಿಸಬಹುದ. ಕ್ರಿಕೆಟ್ ಅನ್ನು ಪ್ರೀತಿಸುವ ಹುಡುಗಿಯರು ಮತ್ತು ಮಹಿಳೆಯರನ್ನು ನೇಮಕ ಮಾಡಲು ಮತ್ತು ತರಬೇತಿ ನೀಡುವಂತೆ ನಾವು ಕೋರುತ್ತೇವೆ.

ಇದನ್ನೂ ಓದಿ: IND vs SA : ಭಾರತ ವಿರುದ್ಧ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಪ್ರಕಟ

ನಿರಾಶ್ರಿತರ ತಂಡವನ್ನು ಹೊಂದುವಲ್ಲಿ ನಮ್ಮ ಗುರಿಗಳು ನಮ್ಮ ಪ್ರತಿಭೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಪ್ರದರ್ಶಿಸುವುದು. ಅಫ್ಘಾನಿಸ್ತಾನದಲ್ಲಿ ಉಳಿದಿರುವ ಮಹಿಳೆಯರಿಗೆ ಭರವಸೆ ನೀಡುವುದು ಮತ್ತು ಅಫ್ಘಾನಿಸ್ತಾನದ ಮಹಿಳೆಯರು ಎದುರಿಸುತ್ತಿರುವ ಸವಾಲುಗಳತ್ತ ಗಮನ ಸೆಳೆಯುವುದು ಇದರ ಉದ್ದೇಶ ಎಂದು ಪತ್ರದಲ್ಲಿ ಬರೆಯಲಾಗಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ಅಫ್ಘಾನಿಸ್ತಾನ ಪುರುಷರ ತಂಡದ ಅದ್ಭುತ ಪ್ರದರ್ಶನದ ಕೆಲವೇ ದಿನಗಳ ನಂತರ ಈ ಪತ್ರ ಬಂದಿದೆ. ರಶೀದ್ ಖಾನ್ ಅಂಡ್ ಕೋ ಈ ಸ್ಪರ್ಧೆಯಲ್ಲಿ ಐತಿಹಾಸಿಕ ಅಭಿಯಾನವನ್ನು ಆನಂದಿಸುವ ಮೂಲಕ ಕ್ರಿಕೆಟ್ ಜಗತ್ತನ್ನು ದಿಗ್ಭ್ರಮೆಗೊಳಿಸಿತು. ಅವರು ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶವನ್ನು ಸೋಲಿಸಿ ಸೆಮಿಫೈನಲ್ ಗೆ ಅರ್ಹತೆ ಪಡೆದರು.

Continue Reading

ಪ್ರಮುಖ ಸುದ್ದಿ

IND vs SA : ಭಾರತ ವಿರುದ್ಧ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಪ್ರಕಟ

IND vs SA : ಲ್ಲಾ ಮೂರು ಪಂದ್ಯಗಳು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದೆ. ಏಕದಿನ ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ಏಕೈಕ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಲಾದ ತಮ್ಮ ತಂಡದಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ. ಮೂರು ಪಂದ್ಯಗಳ ಏಕ ದಿನ ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಸಾಧನೆ ಮಾಡಿದ್ದರೆ, ಏಕೈಕ ಟೆಸ್ಟ್​ನಲ್ಲಿ ಭಾರತವೇ ಗೆದ್ದಿದೆ.

VISTARANEWS.COM


on

IND vs SA
Koo

ಬೆಂಗಳೂರು: ಆತಿಥೇಯ ಭಾರತ ಮಹಿಳೆಯ ಕ್ರಿಕೆಟ್​ ತಂಡದ ವಿರುದ್ಧದ ಮೂರು ಪಂದ್ಯಗಳ ಟಿ 20 ಐ ಸರಣಿಗೆ (IND vs SA ) ದಕ್ಷಿಣ ಆಫ್ರಿಕಾ ಕ್ರಿಕೆಟ್​ ಸಂಸ್ಥೆ ಸೋಮವಾರ (ಜುಲೈ 1) ತನ್ನ ತಂಡವನ್ನು ಪ್ರಕಟಿಸಿದೆ. ಜುಲೈ 5 ರಿಂದ 9 ರವರೆಗೆ ಪಂದ್ಯಗಳು ನಡೆಯಲಿವೆ. ಎಲ್ಲಾ ಮೂರು ಪಂದ್ಯಗಳು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದೆ. ಏಕದಿನ ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ಏಕೈಕ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಲಾದ ತಮ್ಮ ತಂಡದಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ. ಮೂರು ಪಂದ್ಯಗಳ ಏಕ ದಿನ ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಸಾಧನೆ ಮಾಡಿದ್ದರೆ, ಏಕೈಕ ಟೆಸ್ಟ್​ನಲ್ಲಿ ಭಾರತವೇ ಗೆದ್ದಿದೆ.

ಕ್ಲೋಯಿ ಟ್ರಯಾನ್ ದಕ್ಷಿಣ ಆಫ್ರಿಕಾ ತಂಡಕ್ಕೆ ತಂಡಕ್ಕೆ ಸೇರಿದ ಆಟಗಾರ್ತಿ. ಬೆನ್ನುನೋವಿನಿಂದ ಚೇತರಿಸಿಕೊಂಡ ನಂತರ ಟ್ರಿಯಾನ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ಅವರು ಈಗಾಗಲೇ ಭಾರತಕ್ಕೆ ಆಗಮಿಸಿದ್ದಾರೆ ಮತ್ತು ಚೆನ್ನೈನಲ್ಲಿ ನೆಟ್ ಅಭ್ಯಾಸ ನಡೆಸುತ್ತಿದ್ದಾರೆ. ಪ್ರವಾಸಿ ತಂಡ ಏಕ ದಿನ ಪಂದ್ಯವಾಡಿದ ಡೆಲ್ಮಿ ಟಕರ್ ಮತ್ತು ನೊಂಡುಮಿಸೊ ಶಂಗಾಸೆ ಅವರನ್ನು ಟಿ 20 ಪಂದ್ಯಗಳಿಗೆ ಸೇರಿಸದಿರಲು ನಿರ್ಧರಿಸಿದ್ದಾರೆ. ಆಲ್​ರೌಂಡರ್​ಗಳು ಟೆಸ್ಟ್ ಮತ್ತು ಏಕದಿನ ಪಂದ್ಯಗಳಿಗೆ ತಂಡದ ಭಾಗವಾಗಿದ್ದರು ಅವರು ಮನೆಗೆ ಮರಳಲಿದ್ದಾರೆ. ವಿಕೆಟ್ ಕೀಪರ್ ಮೈಕ್ ಡಿ ರೈಡರ್ ಕೂಡ ಟಿ 20 ಐ ತಂಡದ ಭಾಗವಾಗಿದ್ದಾರೆ. ಕಳೆದ ತಿಂಗಳು ಅವರು ಭಾರತ ವಿರುದ್ಧದ ಮೂರು ಏಕದಿನ ಪಂದ್ಯಗಳಲ್ಲಿ ಎರಡರಲ್ಲಿ ಆಡಿದ್ದರು.

ಟಿ20 ಸರಣಿಗೆ ಆಯ್ಕೆಯಾಗಿರುವ 15 ಆಟಗಾರರ ತಂಡದೊಂದಿಗೆ ನಾವು ಉತ್ಸುಕರಾಗಿದ್ದೇವೆ. ಗಾಯದಿಂದ ಚೇತರಿಸಿಕೊಂಡ ಕ್ಲೋಯ್ ಅವರನ್ನು ನಾವು ತಂಡಕ್ಕೆ ಸೇರಿಸಿದ್ದೇವೆ. ಅವರು ತಂಡಕ್ಕೆ ಸಾಕಷ್ಟು ಅನುಭವ ಹೊಂದಿದ್ದಾರೆ. ಅವರನ್ನು ಮತ್ತೆ ಅಂಗಣದಲ್ಲಿ ನೋಡಲು ನಾವು ಕಾಯಲು ಸಾಧ್ಯವಿಲ್ಲ ಎಂದು ದಕ್ಷಿಣ ಆಫ್ರಿಕಾ ಮಹಿಳಾ ತಂಡದ ಮಧ್ಯಂತರ ಮುಖ್ಯ ಕೋಚ್ ದಿಲ್ಲಾನ್ ಡು ಪ್ರೀಜ್ ಹೇಳಿದ್ದಾರೆ.

ಇದನ್ನೂ ಓದಿ: Virat Kohli : ಶುಭಾಶಯ ಕೋರಿದ ನರೇಂದ್ರ ಮೋದಿಗೆ ಪ್ರತಿಕ್ರಿಯೆ ಕೊಟ್ಟ ಕೊಹ್ಲಿ; ಇಲ್ಲಿದೆ ಅದರ ವಿವರ

ನಾವು ಭಾರತ ವಿರುದ್ಧ ಕೊನೆಯ ಮೂರು ಟಿ 20 ಪಂದ್ಯಗಳನ್ನು ಆಡಿದ್ದೇವೆ. ನಾವು ತವರಿಗೆ ಮರಳುವ ಮೊದಲು ಮತ್ತು ಬಾಂಗ್ಲಾದೇಶದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್​​ಗಾಗಿ ನಮ್ಮ ಅಂತಿಮ ಸಿದ್ಧತೆ ಪ್ರಾರಂಭಿಸಲಿದ್ದೇವೆ ಎಂದು ಡು ಪ್ರೀಜ್ ಹೇಳಿದರು.

ದಕ್ಷಿಣ ಆಫ್ರಿಕಾ ಮೇಲೆ ಸರಣಿ ಗೆಲುವು

ಏಕದಿನ ಮತ್ತು ಏಕೈಕ ಟೆಸ್ಟ್ ಪಂದ್ಯವನ್ನು ಸೋತ ನಂತರ ದಕ್ಷಿಣ ಆಫ್ರಿಕಾ ಮುಂಬರುವ ಟಿ 20 ಐ ಸರಣಿಯನ್ನು ಗೆಲ್ಲಲು ಮುಂದಾಗಿದೆ. ಆ ತಂಡ ಪ್ರವಾಸದಲ್ಲಿ ಇನ್ನೂ ಒಂದು ಪಂದ್ಯವನ್ನು ಗೆದ್ದಿಲ್ಲ ಮತ್ತು ಮುಂಬರುವ ಸರಣಿಯಲ್ಲಿ ಸೋಲಿನ ಸರಣಿಯನ್ನು ಮುರಿಯು ಭರವಸೆಯಲ್ಲಿದ್ದಾರೆ. ಏಕದಿನ ಸರಣಿಯನ್ನು 3-0 ಅಂತರದಿಂದ ಗೆದ್ದಿದ್ದ ಭಾರತ, ಟೆಸ್ಟ್​​ನಲ್ಲೂ 10 ವಿಕೆಟ್​ಗಳ ಭರ್ಜರಿ ಗೆಲುವು ಕಂಡಿತ್ತು.

ಭಾರತ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ತಂಡ:

ಲಾರಾ ವೊಲ್ವಾರ್ಡ್ (ನಾಯಕಿ), ಅನ್ನೆಕ್ ಬಾಷ್, ತಜ್ಮಿನ್ ಬ್ರಿಟ್ಸ್, ನಾಡಿನ್ ಡಿ ಕ್ಲೆರ್ಕ್, ಅನಾರಿ ಡಿರ್ಕ್ಸೆನ್, ಮೈಕ್ ಡಿ ರೀಡರ್, ಸಿನಾಲೊ ಜಫ್ತಾ, ಮಾರಿಜಾನೆ ಕಾಪ್, ಅಯಬೊಂಗಾ ಖಾಕಾ, ಮಸಾಬಟಾ ಕ್ಲಾಸ್, ಸುನೆ ಲೂಸ್, ಎಲಿಸ್-ಮೇರಿ ಮಾರ್ಕ್ಸ್, ನೊಂಕುಲುಲೆಕೊ ಮಲಾಬಾ, ತುಮಿ ಸೆಖುಖುನೆ, ಕ್ಲೋಯ್ ಟ್ರಿಯಾನ್.

Continue Reading

ಕ್ರಿಕೆಟ್

Virat Kohli : ಶುಭಾಶಯ ಕೋರಿದ ನರೇಂದ್ರ ಮೋದಿಗೆ ಪ್ರತಿಕ್ರಿಯೆ ಕೊಟ್ಟ ಕೊಹ್ಲಿ; ಇಲ್ಲಿದೆ ಅದರ ವಿವರ

Virat Kohli: “ಪ್ರೀತಿಯ ನರೇಂದ್ರ ಮೋದಿ ಸರ್, ನಿಮ್ಮ ಪ್ರೀತಿಯ ಮಾತುಗಳಿಗೆ ಮತ್ತು ನಿಮ್ಮ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು. ಕಪ್ ಗೆದ್ದ ಈ ತಂಡದ ಭಾಗವಾಗಿರುವುದು ಒಂದು ಸೌಭಾಗ್ಯ . ಇದು ಇಡೀ ರಾಷ್ಟ್ರಕ್ಕೆ ಸಂತೋಷ ನೀಡಿದ ಈ ಕ್ಷಣದ ಸಂಭ್ರಮ ನಮಗಿದೆ ಎಂದು ಬರೆದುಕೊಂಡಿದ್ದಾರೆ.

VISTARANEWS.COM


on

Virat Kohli
Koo

ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ (T20 World Cup 2024 ಚಾಂಪಿಯನ್​ ಪಟ್ಟ ಅಲಂಕರಿಸಿದ್ದ ಭಾರತ ತಂಡದ ಆಟಗಾರರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿದ ಶುಭಾಶಯ ತಿಳಿಸಿದ್ದರು. ಇದೇ ವೇಳೆ ಟಿ20 ಮಾದರಿಯಲ್ಲಿ ನಿವೃತ್ತಿ ಪಡೆದ ಕೊಹ್ಲಿ, ಹಾಗೂ ರೋಹಿತ್​ಗೂ ವಿಶೇಷ ಹಾರೈಕೆಗಳನ್ನು ತಿಳಿಸಿದ್ದರು. ಆ ಸಂದೇಶಕ್ಕೆ ವಿರಾಟ್ ಕೊಹ್ಲಿ (Virat Kohli) ಪ್ರತಿಕ್ರಿಯೆ ನೀಡಿದ್ದು, ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಫೈನಲ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್ ಗಳಿಂದ ಮಣಿಸಿದ ಭಾರತ ಇತಿಹಾಸದಲ್ಲಿ ಎರಡನೇ ಬಾರಿಗೆ ಟಿ 20 ವಿಶ್ವಕಪ್ ಅನ್ನು ಗೆದ್ದುಕೊಂಡಿತು. 2007 ರಲ್ಲಿ ಉದ್ಘಾಟನಾ ಆವೃತ್ತಿಯನ್ನು ಗೆದ್ದ ನಂತರ ಮೊದಲ ಬಾರಿಗೆ ಈ ಟ್ರೋಫಿ ಗೆದ್ದಿತು. ಸೆಮಿಫೈನಲ್ ತನಕ ಬ್ಯಾಟಿಂಗ್​ನಲ್ಲಿ ಹೆಣಗಾಡುತ್ತಿದ್ದ ವಿರಾಟ್ ಕೊಹ್ಲಿ, ಫೈನಲ್​​ನಲ್ಲಿ ನಿರ್ಣಾಯಕ ಅರ್ಧ ಶತಕ ಬಾರಿಸಿದ್ದರು.

ಭಾರತ 5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 34 ರನ್ ಗಳಿಸಿತ್ತು. ಆದರೆ ಮಾಜಿ ನಾಯಕ ಕೊಹ್ಲಿ 76 ರನ್ ಗಳ ನೆರವಿನಿಂದ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಉತ್ತರವಾಗಿ ದಕ್ಷಿಣ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ವಿಜಯದ ನಂತರ, ಪ್ರಧಾನಿ ಮೋದಿ ಟೀಮ್ ಇಂಡಿಯಾ ಸದಸ್ಯರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದರು. ಸ್ಮರಣೀಯ ವಿಜಯಕ್ಕಾಗಿ ಅವರನ್ನು ಅಭಿನಂದಿಸಿದ್ದರು.

ಮೋದಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ವಿಶೇಷ ಸಂದೇಶಗಳನ್ನು ಪೋಸ್ಟ್ ಮಾಡಿದ್ದರು. ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಪಂದ್ಯದ ನಂತರ ಟಿ 20 ಯಿಂದ ನಿವೃತ್ತಿ ಘೋಷಿಸಿದರು, ಆದರೆ ಪಂದ್ಯಾವಳಿಯು ದ್ರಾವಿಡ್ ಅವರ ಕೊನೆಯ ಕೋಚಿಂಗ್​​ ನೇಮಕವಾಗಿತ್ತು. ಫೈನಲ್​​ನಲ್ಲಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್​​ಗಾಗಿ ಕೊಹ್ಲಿಯನ್ನು ಪ್ರಧಾನಿ ಶ್ಲಾಘಿಸಿದ್ದರು. ಎಕ್ಸ್ ಮೂಲಕ ವಿಶೇಷ ಸಂದೇಶ ಪೋಸ್ಟ್ ಮಾಡಿದ್ದರು.

ಪ್ರಧಾನಿ ಮೋದಿಯವರ ಸಂದೇಶಕ್ಕೆ ಕೊಹ್ಲಿ ಸೋಮವಾರ (ಜುಲೈ 1) ಉತ್ತರಿಸಿದ್ದಾರೆ. ಎಕ್ಸ್ ನಲ್ಲಿ, ಭಾರತದ ಬ್ಯಾಟಿಂಗ್ ಸೂಪರ್ ಸ್ಟಾರ್ ತಮ್ಮನ್ನು ಪ್ರೋತ್ಸಾಹಿಸಿದ್ದಕ್ಕಾಗಿ ಪ್ರಧಾನಿಗೆ ಧನ್ಯವಾದ ಅರ್ಪಿಸಿದ್ದಾರೆ.

ಪ್ರೀತಿಯ ನರೇಂದ್ರ ಮೋದಿ ಸರ್, ನಿಮ್ಮ ಪ್ರೀತಿಯ ಮಾತುಗಳಿಗೆ ಮತ್ತು ನಿಮ್ಮ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು. ಕಪ್ ಗೆದ್ದ ಈ ತಂಡದ ಭಾಗವಾಗಿರುವುದು ಒಂದು ಸೌಭಾಗ್ಯ . ಇದು ಇಡೀ ರಾಷ್ಟ್ರಕ್ಕೆ ಸಂತೋಷ ನೀಡಿದ ಈ ಕ್ಷಣದ ಸಂಭ್ರಮ ನಮಗಿದೆ ಎಂದು ಬರೆದುಕೊಂಡಿದ್ದಾರೆ.

ವಿರಾಟ್ ಕೊಹ್ಲಿಯ ಅದ್ಭುತ ಟಿ 20 ಐ ವೃತ್ತಿಜೀವನ

ಟಿ20 ಕ್ರಿಕೆಟ್​​ನಲ್ಲಿ ಅತ್ಯಂತ ಬಲಿಷ್ಠ ಬ್ಯಾಟರ್​ಗಳಲ್ಲಿ ಒಬ್ಬರಾಗಿ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದ್ದಾರೆ. 2010 ರಲ್ಲಿ ಆಟದ ಕಿರು ಸ್ವರೂಪದಲ್ಲಿ ಪಾದಾರ್ಪಣೆ ಮಾಡಿದ ಬ್ಯಾಟಿಂಗ್ ದಿಗ್ಗಜ 2012 ರಲ್ಲಿ ಮೊದಲ ಟಿ 20 ವಿಶ್ವಕಪ್​​ನಲ್ಲಿ ಆಡಿದ್ದರು.

ಇದನ್ನೂ ಓದಿ: ZIM v IND 2024: ಭಾರತ ವಿರುದ್ಧ ಟಿ20 ಸರಣಿಗೆ ಜಿಂಬ್ವಾಬ್ವೆ ತಂಡ ಪ್ರಕಟ, ಸಿಕಂದರ್​ ನಾಯಕ

ಬ್ಯಾಟಿಂಗ್ ಘಟಕದ ಮುಖ್ಯ ಆಧಾರವಾಗುವ ಜತೆಗೆ ಟಿ 20 ಐ ತಂಡದ ಅವಿಭಾಜ್ಯ ಸದಸ್ಯರಾಗಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ವಿರಾಟ್ ಕೊಹ್ಲಿ ಒಟ್ಟು 125 ಟಿ 20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಈ ಸ್ವರೂಪದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದವರು. ರೋಹಿತ್ ಶರ್ಮಾ ಮಾತ್ರ ಟಿ20ಐನಲ್ಲಿ ಅವರಿಗಿಂತ ಹೆಚ್ಚು ರನ್ ಗಳಿಸಿದ್ದಾರೆ.

125 ಪಂದ್ಯಗಳನ್ನಾಡಿರುವ ಕೊಹ್ಲಿ 48.69ರ ಸರಾಸರಿಯಲ್ಲಿ 4188 ರನ್ ಗಳಿಸಿದ್ದಾರೆ. ಅವರು ಟಿ 20 ಪಂದ್ಯಗಳಲ್ಲಿ ಒಂದು ಶತಕ ಮತ್ತು 38 ಅರ್ಧಶತಕಗಳನ್ನು ಬಾರಿಸಿದ್ದಾರೆ. ಟಿ 20 ವಿಶ್ವಕಪ್​ನಲ್ಲಿ ದಾಖಲೆಯೂ ಅಷ್ಟೇ ಪ್ರಭಾವಶಾಲಿಯಾಗಿದೆ. ಕೊಹ್ಲಿ ಪ್ರಸ್ತುತ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. 35 ಪಂದ್ಯಗಳಲ್ಲಿ 15 ಅರ್ಧಶತಕಗಳ ಸಹಾಯದಿಂದ 1292 ರನ್ ಗಳಿಸಿದ್ದಾರೆ.

Continue Reading
Advertisement
karnataka weather Forecast
ಮಳೆ2 mins ago

Karnataka Weather : ರಾಜ್ಯದ ಇಲ್ಲೆಲ್ಲ ವಿಪರೀತ ಮಳೆ; ಯೆಲ್ಲೋ ಅಲರ್ಟ್‌ ಘೋಷಣೆ

Mosquito Repellents
ಆರೋಗ್ಯ32 mins ago

Mosquito Repellents: ರಾಸಾಯನಿಕದ ಅಪಾಯ ಏಕೆ? ಸೊಳ್ಳೆ ಓಡಿಸಲು ಇಲ್ಲಿವೆ 10 ನೈಸರ್ಗಿಕ ವಿಧಾನಗಳು!

Karnataka Tour
ಪ್ರವಾಸ42 mins ago

Karnataka Tour: ಮಳೆಗಾಲದಲ್ಲಿ ಭೇಟಿ ನೀಡಬಹುದಾದ ಕರ್ನಾಟಕದ 15 ರಮಣೀಯ ತಾಣಗಳು

dina Bhavishya
ಭವಿಷ್ಯ2 hours ago

Dina Bhavishya : ಈ ರಾಶಿಯವರಿಗೆ ದಿಢೀರ್ ಧನಾಗಮನದಿಂದ ಸಂತೋಷ ಇಮ್ಮಡಿ

T20 World Cup 2024
ಪ್ರಮುಖ ಸುದ್ದಿ7 hours ago

T20 World Cup 2024: ಟಿ-20 ಸ್ವಯಂವರದ ಮಂಟಪದಲ್ಲಿ ವಿಶ್ವಸುಂದರಿಗೆ ಮಾಲೆ ತೊಡಿಸಿದ ರೋಹಿತ್ ಬಳಗ

GST Collection
ಪ್ರಮುಖ ಸುದ್ದಿ7 hours ago

GST Collection : ಜೂನ್​ನಲ್ಲಿ 1.74 ಲಕ್ಷ ಕೋಟಿ ರೂಪಾಯಿ ಜಿಎಸ್​ಟಿ ಸಂಗ್ರಹ, ಶೇಕಡಾ 8 ಏರಿಕೆ

2nd National Pediatric Stroke Conclave 2024 inauguration in Bengaluru
ಕರ್ನಾಟಕ7 hours ago

Bengaluru News: ಬೆಂಗಳೂರಿನಲ್ಲಿ 2ನೇ ರಾಷ್ಟ್ರೀಯ ಮಕ್ಕಳ ಪಾರ್ಶ್ವವಾಯುವಿನ ಶೃಂಗ 2024ಕ್ಕೆ ಚಾಲನೆ

Maharashtra Politics
ಪ್ರಮುಖ ಸುದ್ದಿ7 hours ago

Maharashtra Politics : ವಿಧಾನ ಪರಿಷತ್​ನಲ್ಲಿ ಬಿಜೆಪಿಯನ್ನು ಸೋಲಿಸಿದ ಉದ್ಧವ್​ ಠಾಕ್ರೆಯ ಶಿವಸೇನೆ

Press Day and Pratibha Puraskara programme in Ballari
ಬಳ್ಳಾರಿ7 hours ago

Press Day: ಮಾಧ್ಯಮ ಕ್ಷೇತ್ರಕ್ಕೆ ಬಳ್ಳಾರಿಯ ಕೊಡುಗೆ ಅಪಾರ: ಡಾ.ಕರಿಯಪ್ಪ ಮಾಳಿಗಿ

Manufacturing of auto parts in the state Increased propensity for capital investment
ಕರ್ನಾಟಕ7 hours ago

Foreign Investment: ರಾಜ್ಯದಲ್ಲಿ ವಾಹನ ಬಿಡಿಭಾಗ ತಯಾರಿಕೆ; ಬಂಡವಾಳ ಹೂಡಿಕೆಗೆ ದ.ಕೊರಿಯಾ ಒಲವು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ13 hours ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ2 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು2 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ3 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ3 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ4 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು5 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

ಟ್ರೆಂಡಿಂಗ್‌