Jasprit Bumrah: ಹಾರ್ದಿಕ್​ ಪಾಂಡ್ಯ ದಾಖಲೆ ಮೇಲೆ ಕಣ್ಣಿಟ್ಟ ಜಸ್​ಪ್ರೀತ್​ ಬುಮ್ರಾ - Vistara News

ಕ್ರಿಕೆಟ್

Jasprit Bumrah: ಹಾರ್ದಿಕ್​ ಪಾಂಡ್ಯ ದಾಖಲೆ ಮೇಲೆ ಕಣ್ಣಿಟ್ಟ ಜಸ್​ಪ್ರೀತ್​ ಬುಮ್ರಾ

VISTARANEWS.COM


on

Jasprit Bumrah press conference
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಡಬ್ಲಿನ್​: ಐರ್ಲೆಂಡ್(Ireland vs India, 1st T20)​ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಘಾತಕ ಬೌಲಿಂಗ್​ನೊಂದಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ನಾಯಕ ಜಸ್​ಪ್ರೀತ್​ ಬುಮ್ರಾ(Jasprit Bumrah) ಅವರು ಆರ್​.ಅಶ್ವಿನ್(Ravichandran Ashwin)​ ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಭಾರತ ಪರ ಅತಿ ಹೆಚ್ಚು ಟಿ20 ವಿಕೆಟ್​ ಗಳಿಸಿದವರ ಪಟ್ಟಿಯಲ್ಲಿ ಆರ್​. ಅಶ್ವಿನ್​ ಅವರೊಂದಿಗೆ ಜಂಟಿಯಾಗಿ ನಾಲ್ಕನೇ ಸ್ಥಾನ ಪಡೆದರು.

ಆಫ್‌ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು 65 ಟಿ20 ಪಂದ್ಯಗಳನ್ನು ಆಡಿ 72 ವಿಕೆಟ್​ಗಳನ್ನು ಕೆಡವಿದ್ದಾರೆ. ಜಸ್​ಪ್ರೀತ್​ ಬುಮ್ರಾ ಸದ್ಯ 61 ಪಂದ್ಯಗಳನ್ನು ಆಡಿ ಈ ಮೈಲುಗಲ್ಲು ತಲುಪಿದ್ದಾರೆ. 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವ ಕಪ್ ಟೂರ್ನಿಯಲ್ಲಿ ಆಡಿದ ಬಳಿಕ ಅಶ್ವಿನ್​ ಭಾರತ ತಂಡದ ಪರ ಟಿ20 ಪಂದ್ಯವನ್ನಾಡಿಲ್ಲ. ಕೇವಲ ಟೆಸ್ಟ್​ ಸರಣಿಯಲ್ಲಿ ಮಾತ್ರ ಅವರು ಭಾರತ ಪರ ಆಡುತ್ತಿದ್ದಾರೆ.

ಚಹಲ್​ಗೆ ಅಗ್ರಸ್ಥಾನ

ಟೀಮ್​ ಇಂಡಿಯಾ ಪರ ಅತ್ಯಧಿಕ ವಿಕೆಟ್​ ಕಿತ್ತವರ ಪಟ್ಟಿಯಲ್ಲಿ ಸ್ಪಿನ್ನರ್​ ಯಜುವೇಂದ್ರ ಚಹಲ್(Yuzvendra Chahal)​ ಮೊದಲ ಸ್ಥಾನ ಪಡೆದಿದ್ದಾರೆ. ಅವರು 80 ಟಿ20 ಪಂದ್ಯಗಳನ್ನು ಆಡಿ 96 ವಿಕೆಟ್​ ಪಡೆದಿದ್ದಾರೆ. 25ಕ್ಕೆ 6 ವಿಕೆಟ್​ ಪಡೆದದ್ದು ಅವರ ವೈಯಕ್ತಿಕ ಉತ್ತಮ ಬೌಲಿಂಗ್​ ದಾಖಲೆಯಾಗಿದೆ. ಭುವನೇಶ್ವರ್​ ಕುಮಾರ್​ 90 ವಿಕೆಟ್​ ಪಡೆದು ದ್ವಿತೀತ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನ ಹಾರ್ದಿಕ್​ ಪಾಂಡ್ಯ ಪಾಲಾಗಿದೆ. 73 ವಿಕೆಟ್ ಕಿತ್ತಿದ್ದಾರೆ.​

2 ವಿಕೆಟ್​ ಪಡೆದರೆ ಪಾಂಡ್ಯ ದಾಖಲೆ ಪತನ

ಜಸ್​ಪ್ರೀತ್​ ಬುಮ್ರಾ ಅವರು ದ್ವಿತೀಯ ಪಂದ್ಯದಲ್ಲಿ ಎರಡು ವಿಕೆಟ್​ ಪಡೆದರೆ ಹಾರ್ದಿಕ್​ ಪಾಂಡ್ಯರ(hardik pandya) 73 ವಿಕೆಟ್​ಗಳ ಸಾಧನೆಯನ್ನು ಮೀರಿ ನಿಲ್ಲಲಿದ್ದಾರೆ. ಜತೆಗೆ ಮೂರನೇ ಸ್ಥಾನಕ್ಕೂ ಏರಲಿದ್ದಾರೆ. ಮೊದಲ ಪಂದ್ಯದಲ್ಲಿ ಬುಮ್ರಾ 4 ಓವರ್​ ಎಸೆದು 24ರನ್​ ವೆಚ್ಚದಲ್ಲಿ 2 ವಿಕೆಟ್​ ಪಡೆದು ಗ್ರೇಟ್​ ಕಮ್​ಬ್ಯಾಕ್​ ಮಾಡಿದರು. ಈ ಎರಡು ವಿಕೆಟ್​ಗಳು ಮೊದಲ ಓವರ್​ನಲ್ಲಿ ಪತನಗೊಂಡಿತು.

ಇದನ್ನೂ ಓದಿ Jasprit Bumrah: 11 ತಿಂಗಳ ಬಳಿಕ ಮೈದಾನಕ್ಕಿಳಿದ ಬುಮ್ರಾ; ಜಿಗಿಯಲು ಹೋಗಿ ಸ್ವಲ್ಪದರಲ್ಲೇ ಪಾರು

ಬುಮ್ರಾ ದಾಖಲೆ ಮುರಿಯಲು ಸಜ್ಜಾದ ಅರ್ಶ್​ದೀಪ್

ಎಡಗೈ ವೇಗಿ ಅರ್ಶ್​ದೀಪ್​ ಸಿಂಗ್(arshdeep singh)​ ಅವರು ಬುಮ್ರಾ ದಾಖಲೆಯನ್ನು ಮುರಿಯುವತ್ತ ಚಿತ್ತ ನೆಟ್ಟಿದ್ದಾರೆ. ಇನ್ನೊಂದು ವಿಕೆಟ್​ ಕೆಡವಿದರೆ ಟಿ20 ಕ್ರಿಕೆಟ್​ನಲ್ಲಿ ಅತ್ತಿ ವೇಗವಾಗಿ 50 ವಿಕೆಟ್​ ಪೂರ್ತಿಗೊಳಿಸಿದ ಮೊದಲ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಈ ಮೂಲಕ ಬುಮ್ರಾ ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ಮೊದಲ ಪಂದ್ಯದಲ್ಲಿಯೇ 2 ವಿಕೆಟ್​ ಈ ದಾಖಲೆ ನಿರ್ಮಿಸುವ ಈ ಅವಕಾಶವಿತ್ತು. ಆದರೆ ಈ ಪಂದದಲ್ಲಿ ಒಂದು ವಿಕೆಟ್​ ಮಾತ್ರ ಕೀಳಲು ಸಾಧ್ಯವಾಗಿತ್ತು. ಭಾನುವಾರ ನಡೆಯುವ ದ್ವಿತೀಯ ಪಂದ್ಯದಲ್ಲಿ ಒಂದು ವಿಕೆಟ್​ ಪಡೆದರೆ ಈ ಮೈಲುಗಲ್ಲು ತಲುಪಲಿದ್ದಾರೆ. ಜತೆಗೆ 50 ವಿಕೆಟ್‌ಗಳನ್ನು ಪೂರ್ತಿಗೊಳಿಸಿದ 5ನೇ ಭಾರತೀಯ ಆಟಗಾರ(Team India Cricket Player) ಎನಿಸಿಕೊಳ್ಳಲಿದ್ದಾರೆ. ಭುವನೇಶ್ವರ್ ಕುಮಾರ್, ಜಸ್​ಪ್ರೀತ್​ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ಜೂಲನ್ ಗೋಸ್ವಾಮಿ ಉಳಿದ ನಾಲ್ವರು ಈ ಸಾಧನೆ ಮಾಡಿದ ಭಾರತೀಯ ಆಟಗಾರರಾಗಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

T20 World Cup : ವಿಶ್ವ ಕಪ್​ಗೆ ತಂಡ ಪ್ರಕಟಿಸಿದ ಶ್ರೀಲಂಕಾ, ಸಿಎಸ್​​ಕೆ ಆಟಗಾರನಿಗೂ ಚಾನ್ಸ್​​

T20 World Cup: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಶ್ರೀಲಂಕಾ ‘ಡಿ’ ಗುಂಪಿನಲ್ಲಿದೆ. ‘ಡಿ’ ಗುಂಪಿನಲ್ಲಿರುವ ಇತರ ತಂಡಗಳೆಂದರೆ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ನೆದರ್ಲೆಂಡ್ಸ್ ಮತ್ತು ನೇಪಾಳ. ಇದರರ್ಥ ಶ್ರೀಲಂಕಾ ಮಾತ್ರ ಈ ಗುಂಪಿನಲ್ಲಿ ಮಾಜಿ ಟಿ20 ವಿಶ್ವಕಪ್ ವಿಜೇತರು. ದ್ವೀಪರಾಷ್ಟ್ರ 2014 ದಿಂದ ಇಲ್ಲಿಯವರೆಗೆ ಏಕೈಕ ಟಿ 20 ವಿಶ್ವಕಪ್ ಪ್ರಶಸ್ತಿ ಗೆದ್ದಿದೆ.

VISTARANEWS.COM


on

T20 World Cup 2024
Koo

ಬೆಂಗಳೂರು: ಶ್ರೀಲಂಕಾ ಕ್ರಿಕೆಟ್​ ಮಂಡಳಿ ಗುರುವಾರ (ಮೇ 9) ಮುಂಬರುವ ಐಸಿಸಿ ಟಿ 20 ವಿಶ್ವಕಪ್ 2024 ಗಾಗಿ (T20 World Cup 2024) 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಲೆಗ್ ಸ್ಪಿನ್ ಆಲ್ರೌಂಡರ್ ವನಿಂದು ಹಸರಂಗ (Wanindu Hasaranga) ಶ್ರೀಲಂಕಾ ತಂಡವನ್ನು ಮುನ್ನಡೆಸಲಿದ್ದು, ಚರಿತ್ ಅಸಲಂಕಾ (Charit Asalanka) ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಇದೇ ವೇಳೆ ಐಪಿಎಲ್​ನಲ್ಲಿ ಚೆನ್ನೈ ಪರ ಮಿಂಚಿದ್ದ ಮಹೀಶ್​ ಪತಿರಾನಾ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಶ್ರೀಲಂಕಾ ‘ಡಿ’ ಗುಂಪಿನಲ್ಲಿದೆ. ‘ಡಿ’ ಗುಂಪಿನಲ್ಲಿರುವ ಇತರ ತಂಡಗಳೆಂದರೆ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ನೆದರ್ಲೆಂಡ್ಸ್ ಮತ್ತು ನೇಪಾಳ. ಇದರರ್ಥ ಶ್ರೀಲಂಕಾ ಮಾತ್ರ ಈ ಗುಂಪಿನಲ್ಲಿ ಮಾಜಿ ಟಿ20 ವಿಶ್ವಕಪ್ ವಿಜೇತರು. ದ್ವೀಪರಾಷ್ಟ್ರ 2014 ದಿಂದ ಇಲ್ಲಿಯವರೆಗೆ ಏಕೈಕ ಟಿ 20 ವಿಶ್ವಕಪ್ ಪ್ರಶಸ್ತಿ ಗೆದ್ದಿದೆ.

ಅನುಭವಿಗಳಿಗೆ ಅವಕಾಶ


ಶ್ರೀಲಂಕಾ ತಂಡದಲ್ಲಿ ಅನುಭವಿ ಆಲ್ರೌಂಡರ್ ಹಾಗೂ ಮಾಜಿ ನಾಯಕ ಏಂಜೆಲೊ ಮ್ಯಾಥ್ಯೂಸ್ ಸ್ಥಾನ ಪಡೆದಿದ್ದಾರೆ. ಈ ವರ್ಷದ ಜನವರಿಯಲ್ಲಿ, ಲಂಕಾ ಮ್ಯಾನೇಜ್ಮೆಂಟ್​​ ಮ್ಯಾಥ್ಯೂಸ್ ಅವರನ್ನು ಮೂರು ವರ್ಷಗಳ ಸುದೀರ್ಘ ಅಂತರದ ನಂತರ ಟಿ 20 ಐ ತಂಡಕ್ಕೆ ಮರಳಿ ಕರೆಸಿಕೊಂಡಿತ್ತು. ಪ್ರಸ್ತುತ ಶ್ರೀಲಂಕಾ ತಂಡದಲ್ಲಿ 2014 ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಏಕೈಕ ಆಟಗಾರ ಮ್ಯಾಥ್ಯೂಸ್. ಅನುಭವಿ ಆಲ್ರೌಂಡರ್ ತಮ್ಮ ಆರನೇ ಟಿ 20 ವಿಶ್ವಕಪ್ ಆಡಲು ಸಜ್ಜಾಗುತ್ತಿದ್ದಾರೆ.

ಪ್ರಸ್ತುತ ಏಕದಿನ ನಾಯಕ ಕುಸಾಲ್ ಮೆಂಡಿಸ್ ಮತ್ತು ಟೆಸ್ಟ್ ನಾಯಕ ಧನಂಜಯ ಡಿ ಸಿಲ್ವಾ ಅವರೊಂದಿಗೆ ಮಾಜಿ ಸೀಮಿತ ಓವರ್ಗಳ ನಾಯಕ ದಸುನ್ ಶನಕಾ ತಂಡದಲ್ಲಿರುವುದರಿಂದ ಶ್ರೀಲಂಕಾ ತಂಡದಲ್ಲಿ ನಾಯಕತ್ವದ ಕೊರತೆಯಿಲ್ಲ.

ಇದನ್ನೂ ಓದಿ: Womens Cricket Team : ಬಾಂಗ್ಲಾ ವಿರುದ್ಧ 5-0 ಕ್ಲೀನ್​ ಸ್ವೀಪ್ ಸಾಧನೆ ಮಾಡಿದ ಭಾರತದ ವನಿತೆಯರು

2014 ರ ಟಿ 20 ವಿಶ್ವಕಪ್ ವಿಜೇತರ ವೇಗದ ದಾಳಿಯನ್ನು ಮಥೀಶಾ ಪತಿರಾನಾ ಮತ್ತು ದಿಲ್ಶಾನ್ ಮಧುಶಂಕಾ ಮುನ್ನಡೆಸಲಿದ್ದಾರೆ ಮತ್ತು ದುಷ್ಮಂತ ಚಮೀರಾ ಮತ್ತು ನುವಾನ್ ತುಷಾರಾ ಅವರೊಂದಿಗೆ ಇರಲಿದ್ದಾರೆ. ಸ್ಪಿನ್ ವಿಭಾಗವನ್ನು ಮಹೇಶ್ ದೀಕ್ಷಾ ಮತ್ತು ದುನಿತ್ ವೆಲ್ಲಾಗೆ ನೋಡಿಕೊಳ್ಳಲಿದ್ದು, ಧನಂಜಯ ಡಿ ಸಿಲ್ವಾ ಕೂಡ ಉತ್ತಮ ಆಯ್ಕೆಯಾಗಿದ್ದಾರೆ.

ಜೂನ್ 3 ರಂದು ನ್ಯೂಯಾರ್ಕ್​​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾ ತನ್ನ ಅಭಿಯಾನ ಪ್ರಾರಂಭಿಸಲಿದೆ. ಜೂನ್ 7 ರಂದು ಡಲ್ಲಾಸ್​ನಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದ್ದು, ಜೂನ್ 11 ಮತ್ತು 16 ರಂದು ಕ್ರಮವಾಗಿ ನೇಪಾಳ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧ ಸೆಣಸಲಿದೆ.

ಶ್ರೀಲಂಕಾ ತಂಡ ಈ ರೀತಿ ಇದೆ

ವನಿಂದು ಹಸರಂಗ (ನಾಯಕ), ಚರಿತ್ ಅಸಲಂಕಾ (ಉಪನಾಯಕ), ಕುಸಲ್ ಮೆಂಡಿಸ್, 10ನೇ ನಿಸ್ಸಾಂಕಾ, ಕಮಿಂಡು ಮೆಂಡಿಸ್, ಸದೀರಾ ಸಮರವಿಕ್ರಮ, ಏಂಜೆಲೊ ಮ್ಯಾಥ್ಯೂಸ್, ದಸುನ್ ಶನಕಾ, ಧನಂಜಯ ಡಿ ಸಿಲ್ವಾ, ಮಹೀಶ್ ತೀಕ್ಷಾ, ದುನಿತ್ ವೆಲ್ಲಾಲಾಜ್, ದುಷ್ಮಂತ ಚಮೀರಾ, ನುವಾನ್ ತುಷಾರ, ಮತೀಶಾ ಪತಿರಾನಾ, ದಿಲ್ಶಾನ್ ಮಧುಶಂಕಾ.

ಮೀಸಲು ಆಟಗಾರರು: ಅಸಿತಾ ಫರ್ನಾಂಡೊ, ವಿಜಯಕಾಂತ್ ವಿಯಾಕಾಂತ್, ಭಾನುಕಾ ರಾಜಪಕ್ಸೆ, ಜನಿತ್ ಲಿಯಾನಗೆ

Continue Reading

ಕ್ರೀಡೆ

Womens Cricket Team : ಬಾಂಗ್ಲಾ ವಿರುದ್ಧ 5-0 ಕ್ಲೀನ್​ ಸ್ವೀಪ್ ಸಾಧನೆ ಮಾಡಿದ ಭಾರತದ ವನಿತೆಯರು

VISTARANEWS.COM


on

women's Cricket team
Koo

ಬೆಂಗಳೂರು: ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ವಿರುದ್ಧದ 5 ಪಂದ್ಯಗಳ ಟಿ 20 ಸರಣಿಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು (Womens Cricket Team) ಎಲ್ಲಾ ಪಂದ್ಯಗಳನ್ನು ಗೆದ್ದು 0-5 ಅಂತರದ ಗೆಲುವು ಸಾಧಿಸಿದೆ. ಪ್ರವಾಸಿ ಭಾರತ ತಂಡ ಈ ಮೂಲಕ ಆತಿಥೇಯ ತಂಡಕ್ಕೆ ಭರ್ಜರಿ ಮುಖಭಂಗ ಮಾಡಿದೆ/. ಈ ವರ್ಷದ ಕೊನೆಯಲ್ಲಿ ಬಾಂಗ್ಲಾದೇಶದಲ್ಲಿ ನಡೆಯಲಿರುವ ಮಹಿಳಾ ಟಿ 20 ವಿಶ್ವಕಪ್​​ಗೆ ತಯಾರಿ ನಡೆಸುತ್ತಿರುವ ಭಾರತಕ್ಕೆ ಈ ಸರಣಿ ವಿಶೇಷವಾಗಿ ಮಹತ್ವದ್ದಾಗಿದೆ.

ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ನಿಗದಿತ 20 ಒವರ್​ಗಳಲ್ಲಿ 5 ವಿಕೆಟ್​​ ನಷ್ಟಕ್ಕೆ 156 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಬಾಂಗ್ಲಾ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 6 ವಿಕೆಟ್​ಗೆ 135 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ಐದನೇ ಓವರ್​ನಲ್ಲಿ ಶಫಾಲಿ ವರ್ಮಾ ಅವರ ವಿಕೆಟ್ ಕಳೆದುಕೊಂಡಿತು. ನಂತರ ಉಪನಾಯಕಿ ಸ್ಮೃತಿ ಮಂದಾನ ಮತ್ತು ದಯಾಳನ್ ಹೇಮಲತಾ ಅವರು 8 ಓವರ್ ಗಳಲ್ಲಿ ಸ್ಕೋರ್ ಅನ್ನು 62-2 ಕ್ಕೆ ಕೊಂಡೊಯ್ದರು, ಸ್ಮೃತಿ ಓವರ್ ನ ಕೊನೆಯ ಎಸೆತದಲ್ಲಿ ಔಟಾದರು.

ಇದನ್ನೂ ಓದಿ: IPL 2024 : ಲಕ್ನೊ ತಂಡದ ನಾಯಕನ ಸ್ಥಾನದಿಂದ ರಾಹುಲ್ ಔಟ್​?

ಭಾರತದ ನಾಯಕಿ ಹರ್ಮನ್ ಪ್ರೀತ್ ಕೌರ್ ಮತ್ತು ಹೇಮಲತಾ 60 ರನ್ ಗಳ ಜೊತೆಯಾಟವನ್ನು ನಿರ್ಮಿಸಿದರು, ಆದರೆ ಭಾರತವು ಸತತ ಎಸೆತಗಳಲ್ಲಿ ಎರಡೂ ವಿಕೆಟ್ ಗಳನ್ನು ಕಳೆದುಕೊಂಡಿತು. ಸಜನಾ ಸಜೀವನ್ ಕೂಡ ಅಗ್ಗವಾಗಿ ಔಟಾದರು. ಈ ವೇಳೆ ಭಾರತವು 124 ರನ್​ಗೆ 5 ವಿಕೆಟ್ ಕಳೆದುಕೊಂಡಿತು. ರಿಚಾ ಘೋಷ್ ಅವರ ನಿರ್ಣಾಯಕ ಹಂತದಲ್ಲಿ 21 ಎಸೆತಗಳಲ್ಲಿ 28 ರನ್ ಗಳಿಸುವ ಮೂಲಕ ತಂಡವನ್ನು 156 ರನ್​ಗಳತ್ತ ಮುನ್ನಡೆಸಿದರು. ಬಾಂಗ್ಲಾ ಪರ ಶೊರಿಫಾ ಖತುನ್ (28ಕ್ಕೆ 2) ಹಾಗೂ ನಹೀದಾ ಅಕ್ತರ್ (27ಕ್ಕೆ 2) ತಲಾ 2 ವಿಕೆಟ್ ಪಡೆದರು.

ಬಾಂಗ್ಲಾ ಬ್ಯಾಟರ್​ಗಳನ್ನು ಕಾಡಿದ ರಾಧಾ

ಭಾರತೀಯ ಬೌಲರ್​ಗಳು ನಿಯಮಿತವಾಗಿ ವಿಕೆಟ್​ಗಳನ್ನು ಉರುಳಿಸಿದ ಕಾರಣ ಬಾಂಗ್ಲಾದೇಶದ ಬ್ಯಾಟರ್​ಗಳಿಗೆ ಚೇತರಿಸಿಕೊಳ್ಳುವುದಕ್ಕೆ ಅವಕಾಶ ಸಿಗಲಿಲ್ಲ. ಇದು ಆತಿಥೇಯರ ಮೇಲೆ ಒತ್ತಡ ಹೇರಿತು. ಮೂರು ಬೌಂಡರಿಗಳನ್ನು ಹೊಡೆದ ನಂತರ ಅಪಾಯಕಾರಿಯಾಗಿ ಕಾಣುತ್ತಿದ್ದ ಶೋಭನಾ ಮೊಸ್ತಾರಿ ಅವರನ್ನು ಟಿಟಾಸ್ ಸಧು ತನ್ನ ಎರಡನೇ ಓವರ್​ನಲ್ಲಿ ಔಟ್ ಮಾಡಿದರು. ರಾಧಾ ಯಾದವ್ ತಮ್ಮ ಮೊದಲ ಓವರ್​ನಲ್ಲಿ ದಿಲಾರಾ ಅಕ್ಟರ್ ಅವರನ್ನು ಔಟ್ ಮಾಡುವ ಮೂಲಕ ಪ್ರಭಾವ ಬೀರಿದರು.

9 ನೇ ಓವರ್​ನಲ್ಲಿ ಬಾಂಗ್ಲಾದೇಶದ ನಾಯಕಿನಿಗರ್ ಸುಲ್ತಾನಾ ಮತ್ತು ರುಬಿಯಾ ಹೈದರ್ ಅವರ ವಿಕೆಟ್​​ಗಳನ್ನು ಪಡೆದ ರಾಧಾ ಬಾಂಗ್ಲಾದೇಶವನ್ನು 48 ರನ್​ಗಳಿಗೆ 5 ವಿಕೆಟ್​ ಕಳೆದುಕೊಳ್ಳುವಂತೆ ನೋಡಿಕೊಂಡರು. ರಿತು ಮೋನಿ ಅವರ ಹೋರಾಟದ ಇನಿಂಗ್ಸ್​ ಹೊರತಾಗಿಯೂ ಬಾಂಗ್ಲಾದೇಶವು 21 ರನ್​ಗಳಿಂದ ಸೋತಿತು. ಕಳೆದ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ ಆಶಾ ಶೋಭನಾ ಭಾರತದ ಪರ 2 ವಿಕೆಟ್ ಪಡೆದರು.

ಸಿಲ್ಹೆಟ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ರಾಧಾ ಯಾದವ್ 3 ವಿಕೆಟ್ ಪಡೆದು ಮಿಂಚಿದರು. ರಾಧಾ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು ಮತ್ತು ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಸರಣಿಯ ಆಟಗಾರ್ತಿ ಪ್ರಶಸ್ತಿಯನ್ನೂ ಪಡೆದರು.

ಸಂಕ್ಷಿಪ್ತ ಸ್ಕೋರ್: ಭಾರತ ಮಹಿಳಾ ತಂಡ: 156/5 (20 ಓವರ್ )[ಹೇಮಲತಾ 37(28), ಸ್ಮೃತಿ ಮಂದಾನ 33(25); ರಬೆಯಾ ಖಾನ್ 2/28 (4), ನಹೀದಾ ಅಕ್ಟರ್ 2/27 (4)]

ಬಾಂಗ್ಲಾದೇಶ ಮಹಿಳಾ ತಂಡ : 135-6 (20 ಓವರ್ ಗಳು) [ರಿತು ಮೋನಿ 37(33), ಶೋರಿಫಾ ಖತುನ್ 28(21); ರಾಧಾ ಯಾದವ್ 3/24 (4), ಆಶಾ ಶೋಭನಾ 2/25 (4)] 21 ರನ್ ಗಳಿಂದ.

Continue Reading

ಕ್ರೀಡೆ

IPL 2024 : ಲಕ್ನೊ ತಂಡದ ನಾಯಕನ ಸ್ಥಾನದಿಂದ ರಾಹುಲ್ ಔಟ್​?

IPL 2024: ಎಸ್ಆರ್​ಎಚ್​​ ವಿರುದ್ಧ 62 ಎಸೆತಗಳು ಬಾಕಿ ಇರುವಾಗ 10 ವಿಕೆಟ್​ಗಳಿಂದ ಸೋತ ನಂತರ ಎಲ್ಎಸ್​ಜಿ ಮಾಲೀಕ ಸಂಜೀವ್ ಗೋಯೆಂಕಾ. ಕೆಎಲ್ ರಾಹುಲ್ ಅವರೊಂದಿಗೆ ಆಕ್ರೋಶಭರಿತ ಚರ್ಚೆ ನಡೆಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ವರದಿ ಹೊರಬಂದಿದೆ.

VISTARANEWS.COM


on

KL Rahul
Koo

ಬೆಂಗಳೂರು: ಕನ್ನಡಿಗ ಕೆ. ಎಲ್ ರಾಹುಲ್ ಅವರ ಕ್ರಿಕೆಟ್​ ವೃತ್ತಿ ಜೀವನ ಸಾಂಗವಾಗಿ ನಡೆಯುತ್ತಿಲ್ಲ. ವಾರದ ಹಿಂದೆ ಟಿ 20 ವಿಶ್ವಕಪ್ ಸ್ಥಾನ ಕಳೆದುಕೊಂಡಿದ್ದ ಅವರು ಈಗ ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ನಾಯಕತ್ವವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ಐಪಿಎಲ್ ಪ್ಲೇಆಫ್ ಅವಕಾಶದಿಂದ ಬಹುತೇಕ ವಂಚಿತರಾಗಿರುವ ಲಕ್ನೋ ತಂಡ ಮುಂದಿನೆರಡು ಪಂದ್ಯಗಳಿಗೆ ತಮ್ಮ ನಾಯಕನನ್ನು ವಜಾಗೊಳಿಸುವ ಸಾಧ್ಯತೆಯಿದೆ.

ಎಸ್ಆರ್​ಎಚ್​​ ವಿರುದ್ಧ 62 ಎಸೆತಗಳು ಬಾಕಿ ಇರುವಾಗ 10 ವಿಕೆಟ್​ಗಳಿಂದ ಸೋತ ನಂತರ ಎಲ್ಎಸ್​ಜಿ ಮಾಲೀಕ ಸಂಜೀವ್ ಗೋಯೆಂಕಾ. ಕೆಎಲ್ ರಾಹುಲ್ ಅವರೊಂದಿಗೆ ಆಕ್ರೋಶಭರಿತ ಚರ್ಚೆ ನಡೆಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ವರದಿ ಹೊರಬಂದಿದೆ.

ಐಪಿಎಲ್ 2025 ರ ಮೆಗಾ ಹರಾಜಿಗೆ ಮುಂಚಿತವಾಗಿ ತಂಡವು ಕೆಎಲ್ ರಾಹುಲ್ ಅವರನ್ನು ಉಳಿಸಿಕೊಳ್ಳುವುದಿಲ್ಲ ಎಂದು ತಿಳಿದುಬಂದಿದೆ. ಇದರಿಂದಾಗಿ ಲಕ್ನೋ ಫ್ರಾಂಚೈಸಿಯೊಂದಿಗಿನ ಅವರ ಮೂರು ವರ್ಷಗಳ ಸುದೀರ್ಘ ಅವಧಿ ಕೊನೆಗೊಳ್ಳುತ್ತದೆ. ಆದಾಗ್ಯೂ, ಕೆಎಲ್ ತಮ್ಮ ಬ್ಯಾಟಿಂಗ್ ಕಡೆಗೆ ಹೆಚ್ಚು ಗಮನ ಹರಿಸುವ ಕಾರಣದೊಂದಿಗೆ ನಾಯಕತ್ವದಿಂದ ಕೆಳಗಿಳಿಯುವ ಸಾಧ್ಯತೆಯಿದೆ ಎಂದು ಸೂಚಿಸುವ ವದಂತಿಗಳು ಹಬ್ಬಿವೆ . ಇದು ಸಂಭವಿಸಿದಲ್ಲಿ, ಎಲ್ಎಸ್​ಜಿ ಉಪನಾಯಕ ನಿಕೋಲಸ್ ಪೂರನ್ ಉಳಿದ ಪಂದ್ಯಗಳಿಗೆ ನಾಯಕತ್ವದ ಪಾತ್ರ ವಹಿಸಿಕೊಳ್ಳುವ ಸಾಧ್ಯತೆಯಿದೆ.

ಇದನ್ನೂ ಓದಿ: IPL 2024 : ಸ್ಟೊಯ್ನಿಸ್ ಕಪಾಳಕ್ಕೆ ಬಾರಿಸಿದ ಕೋಚ್​​ ಕ್ಲೂಸ್ನರ್​; ಇಲ್ಲಿದೆ ವಿಡಿಯೊ

ಡಿಸಿ ವಿರುದ್ಧದ ಮುಂದಿನ ಪಂದ್ಯಕ್ಕೆ ಮೊದಲು ಐದು ದಿನಗಳ ಅಂತರವಿದೆ. ಸದ್ಯಕ್ಕೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ, ಆದರೆ ರಾಹುಲ್ ಉಳಿದ ಎರಡು ಪಂದ್ಯಗಳಿಗೆ ತಮ್ಮ ಬ್ಯಾಟಿಂಗ್ ಮೇಲೆ ಗಮನ ಹರಿಸಲು ಯೋಜಿಸಿದರೆ, ಮ್ಯಾನೇಜ್ಮೆಂಟ್ ಅವಕಾಶ ಕೊಡುತ್ತದೆ ಎಂದು ತಿಳಿದುಬಂದಿದೆ.

ಪ್ಯಾಟ್ ಕಮಿನ್ಸ್ ನೇತೃತ್ವದ ಎಸ್ಆರ್​ಎಚ್​​ ವಿರುದ್ಧದ ಇತ್ತೀಚಿನ ಪಂದ್ಯದ ಬಗ್ಗೆ ಮಾತನಾಡುತ್ತಾ, ಎಲ್ಎಸ್​ಜಿ ಅವಮಾನಕರ ಸೋಲನ್ನು ಎದುರಿಸಿತು. ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಏಕಾಂಗಿಯಾಗಿ 167 ರನ್​ಗಳ ಜೊತೆಯಾಟದ ಮೂಲಕ 10 ಓವರ್​​ಗಳಲ್ಲಿ 165 ರನ್​ಗಳ ಮೊತ್ತವನ್ನು ಬೆನ್ನಟ್ಟಲು ನೆರವು ನೀಡಿದರು.

ಪಂದ್ಯದಲ್ಲಿ ಕೆಎಲ್ ರಾಹುಲ್ 33 ಎಸೆತಗಳಲ್ಲಿ 29 ರನ್ ಮಾತ್ರ ಗಳಿಸಿದ್ದರು. ಕೆಎಲ್ ರಾಹುಲ್ ಈವರೆಗೆ 11 ಪಂದ್ಯಗಳಿಂದ ಒಟ್ಟು 460 ರನ್ ಗಳಿಸಿದ್ದರೂ, ಅವರ ಸ್ಟ್ರೈಕ್ ರೇಟ್ ಸಾಕಷ್ಟು ಕುಗ್ಗಿದೆ. ಅದು ಅವರ ಹಿಂಬಡ್ತಿಗೆ ಸಂಭಾವ್ಯ ಕಾರಣವಾಗಿರಬಹುದು.

Continue Reading

ಪ್ರಮುಖ ಸುದ್ದಿ

IPL 2024 : ಸ್ಟೊಯ್ನಿಸ್ ಕಪಾಳಕ್ಕೆ ಬಾರಿಸಿದ ಕೋಚ್​​ ಕ್ಲೂಸ್ನರ್​; ಇಲ್ಲಿದೆ ವಿಡಿಯೊ

IPL 2024: ಹಿಂದಿನ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಭಾರಿ ಸೋಲಿನ ನಂತರ ಲಕ್ನೋ ಸೂಪರ್ ಜೈಂಟ್ಸ್​ ತಂಡಕ್ಕೆ ಇದು​​ ಇದು ನಿರ್ಣಾಯಕ ಪಂದ್ಯವಾಗಿತ್ತು. ಕೆಎಲ್ ರಾಹುಲ್ ನೇತೃತ್ವದ ತಂಡವು ತಮ್ಮ ತವರಿನ ಪಂದ್ಯವನ್ನು 98 ರನ್ ಗಳಿಂದ ಕಳೆದುಕೊಂಡಿತು. ಕೋಲ್ಕತಾ ನೈಟ್ ರೈಡರ್ಸ್ 235 ರನ್​ಗಳ ಬೃಹತ್ ಮೊತ್ತವನ್ನು ಗಳಿಸಿದ ನಂತರ ಎಲ್ಎಸ್​​ಜೆ ಕೇವಲ 137 ರನ್​ಗಳಗಿಎ ಆಲೌಟ್ ಆಗಿತ್ತು.

VISTARANEWS.COM


on

IPL 2024
Koo

ಹೈದರಾಬಾದ್​: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ (IPL 2024) ಮುಕ್ತಾಯಗೊಂಡ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೆ ಮೊದಲು ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಸಹಾಯಕ ಕೋಚ್ ಲ್ಯಾನ್ಸ್ ಕ್ಲೂಸ್ನರ್ ತಮ್ಮ ಆಟಗಾರರನ್ನು ಪ್ರೇರೇಪಿಸಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದರು. ಈ ವೇಳೆ ಅವರು ತಮ್ಮ ತಂಡದ ಆಟಗಾರ ಆಸ್ಟ್ರೇಲಿಯಾದ ಆಲ್​ರೌಂಡರ್​​ ಮಾರ್ಕ್​ ಸ್ಟೊಯ್ನಿಸ್​ ಕೆನ್ನೆ ಮೇಲೆ ತಮಾಷೆಗೆ ಬಾರಿಸಿರುವ ಸುದ್ದಿ ವೈರಲ್ ಆಗಿದೆ.

ಹಿಂದಿನ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಭಾರಿ ಸೋಲಿನ ನಂತರ ಲಕ್ನೋ ಸೂಪರ್ ಜೈಂಟ್ಸ್​ ತಂಡಕ್ಕೆ ಇದು​​ ಇದು ನಿರ್ಣಾಯಕ ಪಂದ್ಯವಾಗಿತ್ತು. ಕೆಎಲ್ ರಾಹುಲ್ ನೇತೃತ್ವದ ತಂಡವು ತಮ್ಮ ತವರಿನ ಪಂದ್ಯವನ್ನು 98 ರನ್ ಗಳಿಂದ ಕಳೆದುಕೊಂಡಿತು. ಕೋಲ್ಕತಾ ನೈಟ್ ರೈಡರ್ಸ್ 235 ರನ್​ಗಳ ಬೃಹತ್ ಮೊತ್ತವನ್ನು ಗಳಿಸಿದ ನಂತರ ಎಲ್ಎಸ್​​ಜೆ ಕೇವಲ 137 ರನ್​ಗಳಗಿಎ ಆಲೌಟ್ ಆಗಿತ್ತು.

ಈ ಸೋಲು ಅವರನ್ನು ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ನಾಲ್ಕು ಸ್ಥಾನಗಳಿಂದ ಕೆಳಕ್ಕೆ ಇಳಿಯುವಂತೆ ಮಾಡಿತ್ತು. ಅವರ ನೆಟ್ ರನ್ ರೇಟ್ ಅನ್ನು ಹಾಳುಮಾಡಿತು. ಎಸ್​​ಆರ್​ಎ್​್ ವಿರುದ್ಧ ಆಟಗಾರರು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡುವುದನ್ನು ಖಚಿತಪಡಿಸಿಕೊಳ್ಳಲು, ಲ್ಯಾನ್ಸ್ ಕ್ಲೂಸ್ನರ್ ಆಟದ ಪ್ರಾರಂಭಕ್ಕೆ ಸ್ವಲ್ಪ ಅವರನ್ನು ಪ್ರೇರೇಪಿಸಲು ನಿರ್ಧರಿಸಿದರು. ಆದರೆ, ಈ ಪಂದ್ಯದಲ್ಲಿಯೂ ಸೋತ ಲಕ್ನೊ ಭಾರೀ ಹಿನ್ನಡೆಗೆ ಒಳಗಾಯಿತು.

ಇದನ್ನೂ ಓದಿ:

ಆದರೆ, ಪಂದ್ಯಕ್ಕಿಂತ ಮೊದಲು ದಕ್ಷಿಣ ಆಫ್ರಿಕಾದ ಮಾಜಿ ಆಲ್ರೌಂಡರ್ ತಂಡದ ಗುಂಪಿನ ಮಧ್ಯದಲ್ಲಿ ನಿಂತು ಆಟಗಾರರಿಗೆ ಭಾಷಣ ಮಾಡುತ್ತಿರುವುದು ವಿಡಿಯೊದಲ್ಲಿ ಕಂಡು ಬಂತು. ಲ್ಯಾನ್ಸ್ ಕ್ಲೂಸ್ನರ್ ಅವರ ಭಾಷಣದಿಂದ ಎಲ್ಎಸ್​ಜಿ ಆಟಗಾರರು ಸ್ಪಷ್ಟವಾಗಿ ಭಾವಪರವಶರಾಗಿದ್ದರು. ಈ ವೇಲೆ ಮಾರ್ಕಸ್ ಸ್ಟೋಯ್ನಿ ಸ್​ಗೆ ನಗು ತಡೆಯಲಾಗಲಿಲ್ಲ. ನಂತರ ಲ್ಯಾನ್ಸ್ ಕ್ಲೂಸ್ನರ್ ತಮ್ಮ ಭಾಷಣವನ್ನು ಮುಂದುವರಿಸುವ ಮೊದಲು ಆಸ್ಟ್ರೇಲಿಯಾದ ಆಟಗಾರನಿಗೆ ತಮಾಷೆಯಾಗಿ ಕಪಾಳಮೋಕ್ಷ ಮಾಡಿದರು.

ಲ್ಯಾನ್ಸ್ ಕ್ಲೂಸ್ನರ್ ಭಾಷಣ ಇಂತಿದೆ

ಲ್ಯಾನ್ಸ್ ಕ್ಲೂಸ್ನರ್ ಅವರ ಭಾಷಣವು ಹೆಚ್ಚಿನ ವ್ಯತ್ಯಾಸವನ್ನುಂಟುಮಾಡಲಿಲ್ಲ, ಏಕೆಂದರೆ ಎಸ್ಆರ್ಹೆಚ್ ಲಕ್ನೋ ಮೂಲದ ತಂಡವನ್ನು 10 ವಿಕೆಟ್​ಗಳಿಂದ ಸೋಲಿಸಿ ಪಾಯಿಂಟ್ಸ್ ಟೇಬಲ್​​ನಲ್ಲಿ ಮೂರನೇ ಸ್ಥಾನಕ್ಕೆ ಏರಿತು. ಲಕ್ನೊ ಮೊದಲು ಬ್ಯಾಟ್ ಮಾಡಿ 164 ರನ್​ ಬಾರಿಸಿತು. ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ 10 ಓವರ್​ಗಳಲ್ಲಿ ಈ ಮೊತ್ತವನ್ನು ಎಸ್​ಆರ್​ಎಚ್​​ ಬೆನ್ನಟ್ಟಿತು. ಹೆಡ್ ಕೇವಲ 30 ಎಸೆತಗಳಲ್ಲಿ 89 ರನ್ ಗಳಿಸಿದರೆ, ಶರ್ಮಾ 28 ಎಸೆತಗಳಲ್ಲಿ ಅಜೇಯ 75 ರನ್ ಗಳಿಸಿದರು.

Continue Reading
Advertisement
Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ19 mins ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

T20 World Cup 2024
ಪ್ರಮುಖ ಸುದ್ದಿ23 mins ago

T20 World Cup : ವಿಶ್ವ ಕಪ್​ಗೆ ತಂಡ ಪ್ರಕಟಿಸಿದ ಶ್ರೀಲಂಕಾ, ಸಿಎಸ್​​ಕೆ ಆಟಗಾರನಿಗೂ ಚಾನ್ಸ್​​

ಉತ್ತರ ಕನ್ನಡ33 mins ago

SSLC Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾರ್ವಭೌಮ ಗುರುಕುಲಕ್ಕೆ ಶೇ.100 ಫಲಿತಾಂಶ

Yallapur Vishwadarshana Group of institutions performed well in SSLC Result 2024
ಉತ್ತರ ಕನ್ನಡ53 mins ago

SSLC Result 2024: ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಮೂಹ ಪ್ರೌಢಶಾಲೆಗಳ ಉತ್ತಮ ಸಾಧನೆ

women's Cricket team
ಕ್ರೀಡೆ57 mins ago

Womens Cricket Team : ಬಾಂಗ್ಲಾ ವಿರುದ್ಧ 5-0 ಕ್ಲೀನ್​ ಸ್ವೀಪ್ ಸಾಧನೆ ಮಾಡಿದ ಭಾರತದ ವನಿತೆಯರು

Mother passed SSLC exam with her son in Hassan
ಕರ್ನಾಟಕ1 hour ago

SSLC Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಗನ ಜತೆ ತಾಯಿಯೂ ಪಾಸ್!

Failed in SSLC Exam Student suicide in mandya
ಮಂಡ್ಯ1 hour ago

SSLC Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲ್‌; ನೇಣಿಗೆ ಶರಣಾದ ವಿದ್ಯಾರ್ಥಿ

Ranveer Singh
Latest2 hours ago

Ranveer Singh: 2 ಕೋಟಿ ರೂ. ಮೌಲ್ಯದ ವಜ್ರದ ನೆಕ್ಲೇಸ್ ಧರಿಸಿ ಗಮನ ಸೆಳೆದ ರಣವೀರ್ ಸಿಂಗ್

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ2 hours ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Racial Comments
ಪ್ರಮುಖ ಸುದ್ದಿ2 hours ago

Racist Comment : ಭಾರತದಲ್ಲಿ ನೀಗ್ರೊಗಳಿದ್ದಾರೆ…; ಇದೀಗ ಬಂಗಾಳ ಕಾಂಗ್ರೆಸ್​​ ಅಧ್ಯಕ್ಷರ ಸರದಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ19 mins ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ2 hours ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ2 hours ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ9 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ9 hours ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ9 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 78 schools get zero results in SSLC exams
ಬೆಂಗಳೂರು10 hours ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

SSLC Result 2024 SSLC students get 20 percent grace marks but result is very poor
ಶಿಕ್ಷಣ10 hours ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

SSLC Exam Result 2024 Announce
ಬೆಂಗಳೂರು11 hours ago

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

ಟ್ರೆಂಡಿಂಗ್‌