Wrestlers Protest: ಪೊಲೀಸ್‌ ವ್ಯಾನ್‌ನಲ್ಲಿ ನಗುತ್ತ ಸೆಲ್ಫಿಗೆ ಪೋಸ್‌ ಕೊಟ್ಟರೇ ಫೋಗಟ್‌ ಸಹೋದರಿಯರು? ಇಲ್ಲಿದೆ ನಿಜಾಂಶ - Vistara News

ಕ್ರೀಡೆ

Wrestlers Protest: ಪೊಲೀಸ್‌ ವ್ಯಾನ್‌ನಲ್ಲಿ ನಗುತ್ತ ಸೆಲ್ಫಿಗೆ ಪೋಸ್‌ ಕೊಟ್ಟರೇ ಫೋಗಟ್‌ ಸಹೋದರಿಯರು? ಇಲ್ಲಿದೆ ನಿಜಾಂಶ

Wrestlers Protest: ಬಂಧನದ ಬಳಿಕ ಕುಸ್ತಿಪಟು ವಿನೇಶ್ ಫೋಗಟ್ ಮತ್ತು ಅವರ ಸೋದರಿ​ ಸಂಗೀತಾ ಫೋಗಟ್​​ ಅವರು ಪೊಲೀಸ್‌ ವ್ಯಾನ್‌ನಲ್ಲಿ ನಗುತ್ತ ಸೆಲ್ಫಿ ತೆಗೆದುಕೊಂಡ ಫೋಟೊ ವೈರಲ್‌ ಆಗಿದೆ. ಆದರೆ, ಇದು ನಕಲಿ ಎಂಬುದು ಬಳಿಕ ಗೊತ್ತಾಗಿದೆ.

VISTARANEWS.COM


on

Vinesh Phogat And Sangeeta Phogat
ವೈರಲ್‌ ಆದ ನಕಲಿ ಫೋಟೊ.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್​ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರೆಸಿ, ಬ್ರಿಜ್ ಭೂಷಣ್​​ರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಬೇಕು, ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮಂಪರು ಪರೀಕ್ಷೆಗೆ ಒಳಪಡಿಸಬೇಕು, ಒಟ್ನಲ್ಲಿ ನಮಗೆ ನ್ಯಾಯ ಬೇಕು ಎಂದು ಆಗ್ರಹಿಸಿ ದೆಹಲಿಯ ಜಂತರ್​ಮಂತರ್​ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು (Wrestlers Protest) ಇಂದು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಬಂಧನದ ಬಳಿಕ ಕುಸ್ತಿಪಟು ವಿನೇಶ್ ಫೋಗಟ್ ಮತ್ತು ಅವರ ಸೋದರಿ​ ಸಂಗೀತಾ ಫೋಗಟ್​​ ಅವರು ಪೊಲೀಸ್‌ ವ್ಯಾನ್‌ನಲ್ಲಿ ನಗುತ್ತ ಸೆಲ್ಫಿ ತೆಗೆದುಕೊಂಡ ಫೋಟೊ ವೈರಲ್‌ ಆಗಿದೆ. ಆದರೆ, ಆ ಫೋಟೊ ತಿರುಚಿದ್ದು ಎಂಬುದು ಬಳಿಕ ಗೊತ್ತಾಗಿದೆ.

ವಿನೇಶ್‌ ಫೋಗಟ್‌, ಸಂಗೀತಾ ಫೋಗಟ್‌ ಸೇರಿ ಹಲವು ಕುಸ್ತಿಪಟುಗಳು ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಹಾಗಾಗಿಯೇ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ಅದಲ್ಲದೆ, ಪೊಲೀಸರು ಬಂಧಿಸಿದ ಬಳಿಕ ಅವರು ನಗುತ್ತ ಸೆಲ್ಫಿ ತೆಗೆಸಿಕೊಂಡಿದ್ದಾರೆ. ಇದು ಟೂಲ್‌ಕಿಟ್‌ನ ಒಂದು ಭಾಗ ಎಂಬ ಆರೋಪ ಕೇಳಿಬಂದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಫೋಗಟ್‌ ಸಹೋದರಿಯರು ಪೊಲೀಸ್‌ ವಾಹನದಲ್ಲಿ ನಗುತ್ತ ಇರುವ ಫೋಟೊ ಹರಿದಾಡಿತ್ತು.

ಬಜರಂಗ್‌ ಪುನಿಯಾ ಸ್ಪಷ್ಟನೆ ಏನು?

ವಿನೇಶ್‌ ಫೋಗಟ್‌ ಹಾಗೂ ಸಂಗೀತಾ ಫೋಗಟ್‌ ಅವರ ಫೋಟೊ ವೈರಲ್‌ ಆಗುತ್ತಲೇ ಮತ್ತೊಬ್ಬ ಕುಸ್ತಿಪಟು ಬಜರಂಗ್‌ ಪುನಿಯಾ ಸ್ಪಷ್ಟನೆ ನೀಡಿದ್ದಾರೆ. ವಿನೇಶ್‌ ಫೋಗಟ್‌ ಹಾಗೂ ಸಂಗೀತಾ ಫೋಗಟ್‌ ಅವರು ನಗುತ್ತ ಇರುವ ನಕಲಿ ಫೋಟೊವನ್ನು ಐಟಿ ಸೆಲ್‌ನ ಮಂದಿ ವೈರಲ್‌ ಮಾಡಿದ್ದಾರೆ. ಆದರೆ, ಅದು ನಕಲಿ ಫೋಟೊ. ಅಸಲಿ ಫೋಟೊ ಇಲ್ಲಿದೆ ಎಂದು ಟ್ವೀಟ್‌ ಮಾಡಿದ್ದಾರೆ. ಆ ಮೂಲಕ ಪರೋಕ್ಷವಾಗಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಅಸಲಿ ಯಾವುದು, ನಕಲಿ ಯಾವುದು?

ತಿಂಗಳುಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ಪ್ರತಿಭಟನೆಗೆ ದೆಹಲಿ ಸುತ್ತಲಿನ ರಾಜ್ಯಗಳ ರೈತರು, ವಿವಿಧ ಕ್ಷೇತ್ರದ ಮುಖಂಡರು ಸಾಥ್​ ಕೊಟ್ಟಿದ್ದಾರೆ. ನೂತನ ಸಂಸತ್ ಭವನದ ಉದ್ಘಾಟನೆ ದಿನವಾದ ಇಂದು ಪ್ರತಿಭಟನಾಕಾರರೆಲ್ಲ ಸೇರಿ ಮಹಿಳಾ ಸಮ್ಮಾನ್​ ಮಹಾಪಂಚಾಯತ್​ ಹಮ್ಮಿಕೊಂಡಿದ್ದರು. ಅದರ ಭಾಗವಾಗಿ, ರಾಷ್ಟ್ರಧ್ವಜವನ್ನು ಹಿಡಿದು ಹೊಸ ಸಂಸತ್ ಭವನದತ್ತ ಮೆರವಣಿಗೆ ಹೊರಟಿದ್ದರು. ಜಂತರ್​ಮಂತರ್​ ಸುತ್ತ ಪೊಲೀಸರು ಹಾಕಿದ್ದ ಬ್ಯಾರಿಕೇಡ್​ಗಳನ್ನು ಅವರು ಜಂಪ್ ಮಾಡಿದ್ದಾರೆ. ಆಗ ಪೊಲೀಸರು ಅವರನ್ನೆಲ್ಲ ತಡೆದಿದ್ದಾರೆ. ಈ ವೇಳೆ ನೂಕು ನುಗ್ಗಲು ಉಂಟಾಯಿತು. ಕುಸ್ತಿಪಟು ವಿನೇಶ್ ಫೋಗಟ್ ಮತ್ತು ಅವರ ಸೋದರಿ​ ಸಂಗೀತಾ ಫೋಗಟ್​​ ಒಬ್ಬರ ಮೇಲೊಬ್ಬರು ಬಿದ್ದರು. ಈ ವೇಳೆ ರಾಷ್ಟ್ರಧ್ವಜವೂ ನೆಲಕ್ಕೆ ಬಿದ್ದ ಫೋಟೋ ವೈರಲ್ ಆಗುತ್ತಿದೆ.

ಇದನ್ನೂ ಓದಿ: Wrestlers Protest: ಕುಸ್ತಿಪಟುಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ ವಿಶ್ವ ಚಾಂಪಿಯನ್‌ ಕವಾಯ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

IPL 2024 : ಸಿಎಸ್​ಕೆ ತಂಡಕ್ಕೆ ಮತ್ತೊಂದು ಆಘಾತ; ಮುಸ್ತಾಫಿಜುರ್​ಗೂ ಗಾಯ

IPL 2024 : ಸಿಎಸ್​ಕೆಯಲ್ಲಿ ಈಗಾಗಲೇ ಡೆವೋನ್ ಕಾನ್ವೆ, ಮಹೀಶ್ ಪತಿರಾಣಾ ಸೇರಿದಂತೆ ಹಲವು ಆಟಗಾರರು ಗಾಯಗೊಂಡಿದ್ದಾರೆ.

VISTARANEWS.COM


on

Mustafizur Rahman
Koo

ನವದೆಹಲಿ: ಐಪಿಎಲ್ 2024 ಕ್ಕೆ (IPL 2024) ನಾಲ್ಕು ದಿನಗಳು ಬಾಕಿ ಇರುವಾಗ, ಹಾಲಿ ಚಾಂಪಿಯನ್ ಸಿಎಸ್​ಕೆಗೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ. ಇತ್ತೀಚೆಗೆ ಖರೀದಿಸಿದ ಮುಸ್ತಾಫಿಜುರ್ ರಹಮಾನ್ ಶ್ರೀಲಂಕಾ ವಿರುದ್ಧದ 3 ನೇ ಏಕದಿನ ಪಂದ್ಯದಲ್ಲಿ ಗಾಯಗೊಂಡು ಮೈದಾನದಿಂದ ಹೊರಗುಳಿಯಬೇಕಾಯಿತು. ಚಟ್ಟೋಗ್ರಾಮ್​​ನ ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವೆ ಮೂರನೇ ಏಕದಿನ ಪಂದ್ಯ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ. 42ನೇ ಓವರ್​ನಲ್ಲಿ ರೆಹಮಾನ್ ಸೆಳೆತದಿಂದ ಬಳಲುತ್ತಿದ್ದರು ಮತ್ತು ಆ ಓವರ್​ನ ಕೊನೇ ಎಸೆತವನ್ನು ಎಸೆದ ನಂತರ ನೆಲಕ್ಕೆ ಕುಸಿದುಬಿದ್ದರು. ರೆಹಮಾನ್ 9 ಓವರ್ ಗಳಲ್ಲಿ 39 ರನ್ ನೀಡಿ 2 ವಿಕೆಟ್ ಪಡೆದಿದ್ದರು.

48ನೇ ಓವರ್​ನಲ್ಲಿ ರೆಹಮಾನ್ ತಮ್ಮ ಅಂತಿಮ ಓವರ್ ಎಸೆಯಲು ಮರಳಿದರು. ಆದರೆ ಅವರ ಮೊದಲ ಪ್ರಯತ್ನದಲ್ಲಿ ಅವರು ಮೊದಲ ಎಸೆತವನ್ನು ಎಸೆಯಲು ವಿಫಲರಾದರು. ಕಡಿಮೆ ರನ್-ಅಪ್​ನೊಂದಿಗೆ ಬೌಲಿಂಗ್ ಮಾಡುವ ಪ್ರಯತ್ನದಲ್ಲಿ ವೈಡ್ ಬಾಲ್ ಎಸೆದ ನಂತರ ಪ್ರಯತ್ನ ಕೈಬಿಟ್ಟರು. ಇನ್ನು ಮುಂದೆ ಆಡಲು ಸಾಧ್ಯವಿಲ್ಲ ಎಂದು ನಿರ್ಧರಿಸಿದರು. ರೆಹಮಾನ್ ಬದಲಿಗೆ ಸೌಮ್ಯ ಸರ್ಕಾರ್ ಓವರ್ ಎಸೆದು, ಮಹೇಶ್ ದೀಕ್ಷಾ ಅವರ ವಿಕೆಟ್ ಪಡೆದರು ಮತ್ತು ಕೇವಲ ಐದು ರನ್​ಗಳನ್ನು ಬಿಟ್ಟುಕೊಟ್ಟರು.

Mumbai Indians : ಮುಂಬಯಿ ಇಂಡಿಯನ್ಸ್​ ತಂಡಕ್ಕೆ ವೇಗದ ಬೌಲರ್ ಸೇರ್ಪಡೆ

ರೆಹಮಾನ್ ಅವರ ಇತ್ತೀಚಿನ ಫಿಟ್ನೆಸ್​ ಕಾಳಜಿಯು ಅವರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ಸಿಎಸ್ಕೆ ಯೋಜನೆಗಳಿಗೆ ದೊಡ್ಡ ಹೊಡೆತವಾಗಿದೆ. ರೆಹಮಾನ್ ಅವರನ್ನು ಐಪಿಎಲ್ ಹರಾಜಿನಲ್ಲಿ ಸಿಎಸ್​ಕೆ ಅವರ ಮೂಲ ಬೆಲೆ 2 ಕೋಟಿ ರೂ.ಗೆ ಖರೀದಿಸಿತು. ಇತ್ತೀಚೆಗೆ ಹೆಬ್ಬೆರಳು ಮುರಿದು 8 ವಾರಗಳ ಕಾಲ ಹೊರಗುಳಿದಿದ್ದ ನ್ಯೂಜಿಲೆಂಡ್ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಅವರ ಸೇವೆಯನ್ನು ಸಿಎಸ್ಕೆ ಈಗಾಗಲೇ ಕಳೆದುಕೊಂಡಿದೆ. ಅಷ್ಟೇ ಅಲ್ಲ, ಸಿಎಸ್​ಕೆಯ ಶ್ರೀಲಂಕಾದ ವೇಗಿ ಮಥೀಶಾ ಪತಿರಾನಾ ಕೂಡ ಮುಂಬರುವ ಪಂದ್ಯಾವಳಿಯ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ.

Continue Reading

ಪ್ರಮುಖ ಸುದ್ದಿ

Mumbai Indians : ಮುಂಬಯಿ ಇಂಡಿಯನ್ಸ್​ ತಂಡಕ್ಕೆ ವೇಗದ ಬೌಲರ್ ಸೇರ್ಪಡೆ

Mumbai Indians : ಜೇಸನ್ ಬೆಹ್ರೆನ್ಡಾರ್ಫ್ ಗಾಯಗೊಂಡು ಮುಂಬರುವ ಆವೃತ್ತಿಯ ಐಪಿಎಲ್​ನಿಂದ ಹೊರಗುಳಿದಿದ್ದಾರೆ.

VISTARANEWS.COM


on

Luke wood
Koo

ನವದೆಹಲಿ: ಆಸ್ಟ್ರೇಲಿಯಾ ರಾಷ್ಟ್ರೀಯ ಕ್ರಿಕೆಟ್ ತಂಡದ ಎಡಗೈ ವೇಗಿ ಜೇಸನ್ ಬೆಹ್ರೆನ್ಡಾರ್ಫ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಿಂದ ಹೊರಗುಳಿದಿದ್ದಾರೆ. ಮುಂಬರುವ ಆವೃತ್ತಿಯ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಪರ ಪ್ಲೇಯಿಂಗ್ ಇಲೆವೆನ್​ನಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಿದ್ದ ಆಟಗಾರರಲ್ಲಿ ಬೆಹ್ರೆನ್ಡಾರ್ಫ್ ಕೂಡ ಒಬ್ಬರು. ಕಳೆದ ವರ್ಷ ಅವರು 12 ಪಂದ್ಯಗಳಲ್ಲಿ 27.64 ಸರಾಸರಿ, 9.21 ಎಕಾನಮಿ ಮತ್ತು 18.00 ಸ್ಟ್ರೈಕ್ ರೇಟ್​ನೊಂದಿಗೆ 14 ವಿಕೆಟ್​ಗಳನ್ನು ಉರುಳಿಸಿದ್ದರು. ಅವರ ಬದಲಿಗೆ ಇದೀಗ ಲ್ಯೂಕ್ ವುಡ್ ತಂಡ ಸೇರಿಕೊಂಡಿದ್ದಾರೆ.

ಬೆಹ್ರೆನ್ಡಾರ್ಫ್ ಅನುಪಸ್ಥಿತಿಯು ಮುಂಬೈ ಇಂಡಿಯನ್ಸ್ ಬೌಲಿಂಗ್ ವಿಭಾಗಕ್ಕೆ ಎರಡನೇ ಹೊಡೆತವಾಗಿದೆ. ಏಕೆಂದರೆ ಶ್ರೀಲಂಕಾ ರಾಷ್ಟ್ರೀಯ ಕ್ರಿಕೆಟ್ ತಂಡದ ಎಡಗೈ ವೇಗಿ ದಿಲ್ಶಾನ್ ಮಧುಶಂಕಾ ಕೂಡ ಐಪಿಎಲ್ 2024 ರ ಮೊದಲ ಕೆಲವು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಶ್ರೀಲಂಕಾದ ಸ್ಟಾರ್ ಆಟಗಾರ ದಿಲ್ಶಾನ್ ಮಧುಶಂಕಾ ಎಡಗೈ ಸ್ನಾಯುಸೆಳೆತದ ಗಾಯದಿಂದ ಬಳಲುತ್ತಿದ್ದು, 4-6 ವಾರಗಳ ಕಾಲ ಆಟದಿಂದ ಹೊರಗುಳಿಯುವ ನಿರೀಕ್ಷೆಯಿದೆ.

ಜೇಸನ್ ಬೆಹ್ರೆನ್ಡಾರ್ಫ್ ಅನುಪಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್ (Mumbai Indians) 28 ವರ್ಷದ ಇಂಗ್ಲೆಂಡ್ ರಾಷ್ಟ್ರೀಯ ಕ್ರಿಕೆಟ್ ತಂಡದ ಎಡಗೈ ವೇಗಿ ಲ್ಯೂಕ್ ವುಡ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ವೇಗಿ ಇತ್ತೀಚೆಗೆ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) 2024ರಲ್ಲಿ ಬಾಬರ್ ಅಜಮ್ ನೇತೃತ್ವದ ಪೇಶಾವರ್ ಝಲ್ಮಿ ಪರ ಆಡಿದ್ದರು.

ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) 2024ರಲ್ಲಿ 11 ಪಂದ್ಯಗಳಲ್ಲಿ, ಲ್ಯೂಕ್ ವುಡ್ 29.08 ಸರಾಸರಿ, 8.24 ಎಕಾನಮಿ ಮತ್ತು 21.16 ಸ್ಟ್ರೈಕ್ ರೇಟ್ನೊಂದಿಗೆ 12 ವಿಕೆಟ್​ಗಳನ್ನು ಉರುಳಿಸಿದ್ದಾರೆ. ಲ್ಯೂಕ್ ವುಡ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯನ್ನು 50 ಲಕ್ಷ ರೂ.ಗೆ ಸೇರಿಕೊಳ್ಳಲಿದ್ದಾರೆ.

ಮುಂಬರುವ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (IPL2024 ) ಗಾಗಿ ಗಾಯಗೊಂಡ ಜೇಸನ್ ಬೆಹ್ರೆನ್ಡಾರ್ಫ್ ಬದಲಿಗೆ ಮುಂಬೈ ಇಂಡಿಯನ್ಸ್ (ಎಂಐ) ಲ್ಯೂಕ್ ವುಡ್ ಅವರನ್ನು ಹೆಸರಿಸಿದೆ. ಎಡಗೈ ವೇಗಿ – ವುಡ್ ಇಂಗ್ಲೆಂಡ್ ಪರ 5 ಟಿ 20 ಪಂದ್ಯಗಳನ್ನು ಆಡಿದ್ದಾರೆ, ಜೊತೆಗೆ 2 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು ಅವರ ಬಳಿ 8 ಟಿ 20 ಐ ವಿಕೆಟ್ ಗಳಿವೆ. ವುಡ್ 50 ಲಕ್ಷ ರೂ.ಗೆ ಮುಂಬೈ ಇಂಡಿಯನ್ಸ್ ಸೇರಲಿದ್ದಾರೆ, “ಎಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಅಧಿಕೃತ ಮಾಧ್ಯಮ ಪ್ರಕಟಣೆ ತಿಳಿಸಿದೆ.

ಟಿ 20 ಕ್ರಿಕೆಟ್​​ ಲ್ಲಿ 140 ಪಂದ್ಯಗಳನ್ನು ಆಡಿರುವ ವುಡ್ 25.87 ಸರಾಸರಿಯಲ್ಲಿ 147 ವಿಕೆಟ್​ಗಳನ್ನು ಪಡೆದಿದ್ದಾರೆ, 8.45 ಎಕಾನಮಿ ಮತ್ತು 18.3 ಸ್ಟ್ರೈಕ್ ರೇಟ್, 50 ರನ್​ಗೆ 5 ವಿಕೆಟ್​ ಪಡೆದ ಅತ್ಯುತ್ತಮ ಬೌಲಿಂಗ್ ಅಂಕಿಅಂಶ ಹೊಂದಿದ್ದಾರೆ.

ಹಾರ್ದಿಕ್ ನಾಯಕ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. 5 ಬಾರಿ ಐಪಿಎಲ್ ವಿಜೇತ ನಾಯಕ ರೋಹಿತ್ ಶರ್ಮಾ ಅವರನ್ನು ತೆಗೆದುಹಾಕುವ ಮೂಲಕ ಫ್ರಾಂಚೈಸಿ ಅವರನ್ನು ನಾಯಕನನ್ನಾಗಿ ನೇಮಿಸಿದೆ.

ಇದನ್ನೂ ಓದಿ : IPL 2024 : ಆರ್​ಸಿಬಿ ತಂಡಕ್ಕೆ ಸವಾಲೆಸೆದ ವಿಜಯ್​ ಮಲ್ಯ; ಏನದು ಚಾಲೆಂಜ್​​?

ಮುಂಬೈ ಇಂಡಿಯನ್ಸ್ (ಎಂಐ) ಕಳೆದ ಕೆಲವು ಋತುಗಳಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಫೈನನ್​ಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡವನ್ನು ಸೋಲಿಸಿದ ನಂತರ 2020ರ ನಂತರ ಟ್ರೋಫಿ ಗೆದ್ದಿಲ್ಲ.

ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಮುಖ್ಯ ಕೋಚ್ ಮಾರ್ಕ್ ಬೌಷರ್ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ವಿಷಯಗಳ ಬಗ್ಗೆ ಮಾತನಾಡಿದರು. ಸಂವಾದದ ಸಮಯದಲ್ಲಿ, ಹಾರ್ದಿಕ್ ಪಾಂಡ್ಯ ತಮ್ಮ ಮತ್ತು ರೋಹಿತ್ ಶರ್ಮಾ ನಡುವೆ ಎಲ್ಲವೂ ಸರಿಯಾಗಿದೆ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಲ್ಲಿ ತಂಡವನ್ನು ಮುನ್ನಡೆಸುವಾಗ ಮಾಜಿ ಮುಂಬೈ ಇಂಡಿಯನ್ಸ್ ನಾಯಕನ ಮಾರ್ಗದರ್ಶನವನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ, ರೋಹಿತ್ ಶರ್ಮಾ ಮಾರ್ಚ್ 18 ರ ಸೋಮವಾರ ಫ್ರಾಂಚೈಸಿಗೆ ಸೇರಿದರು.

Continue Reading

ಪ್ರಮುಖ ಸುದ್ದಿ

IPL 2024 : ಆರ್​ಸಿಬಿ ತಂಡಕ್ಕೆ ಸವಾಲೆಸೆದ ವಿಜಯ್​ ಮಲ್ಯ; ಏನದು ಚಾಲೆಂಜ್​​?

IPL 2024 : ಐಪಿಎಲ್​ಗೆ ಸಿದ್ಧಗೊಳ್ಳುತ್ತಿರುವ ಆರ್​ಸಿಬಿ ತಂಡಕ್ಕೆ ಮುಂದಿನ ಕನಸನ್ನು ವಿಜಯ್​ ಮಲ್ಯ ಬಿತ್ತಿದ್ದಾರೆ.

VISTARANEWS.COM


on

Vijay Malya
Koo

ನವದೆಹಲಿ: ಭಾನುವಾರ ರಾತ್ರಿ ಮುಕ್ತಾಯಗೊಂಡ ಮಹಿಳಾ ಪ್ರೀಮಿಯರ್ ಲೀಗ್ (WPL 2024) ನಲ್ಲಿ ಮಹಿಳಾ ತಂಡದ ಗೆಲುವಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ (RCB Team) ಅಭಿಮಾನಿಗಳಿಗೆ ಪುರುಷರ ತಂಡವೂ ಪ್ರಶಸ್ತಿ ಗೆಲ್ಲುವ ಆಶಾವಾದ ಸೃಷ್ಟಿಯಾಗಿದೆ. ಇದೇ ವೇಳೆ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ (Vijay Malya) ಫ್ರಾಂಚೈಸಿಯ ಪುರುಷರ ತಂಡಕ್ಕೆ (IPL 2024) ವಿಶೇಷ ಸವಾಲೊಂದನ್ನು ಒಡ್ಡಿದ್ದಾರೆ.

ಸ್ಮೃತಿ ಮಂದಾನ ನಾಯಕತ್ವದ ಆರ್​ಸಿಬಿ ಫೈನಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎಂಟು ವಿಕೆಟ್​​ಗಳಿಂದ ಸೋಲಿಸಿ ಡಬ್ಲ್ಯುಪಿಎಲ್​​ನ ಎರಡನೇ ಆವೃತ್ತಿಯನ್ನು ಗೆದ್ದುಕೊಂಡಿತು. ಇದು ಫ್ರಾಂಚೈಸಿಗೆ ಮೊದಲ ಪ್ರಶಸ್ತಿಯಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ 19 ಓವರ್​ಗಳಲ್ಲಿ ಕೇವಲ 113 ರನ್​ಗಳಿಗೆ ಆಲೌಟ್ ಆಯಿತು. ಡೆಲ್ಲಿ ಪರ ಆರಂಭಿಕರಾದ ಮೆಗ್ ಲ್ಯಾನಿಂಗ್ ಮತ್ತು ಶಫಾಲಿ ವರ್ಮಾ ಮೊದಲ ವಿಕೆಟ್​ಗೆ 64 ರನ್​ಗಳ ಜೊತೆಯಾಟ ನೀಡಿದರು.

ಸೋಫಿ ಮೊಲಿನೆಕ್ಸ್ ಒಂದು ಓವರ್​ನಲ್ಲಿ ಮೂರು ವಿಕೆಟ್ಗಳನ್ನು ಪಡೆದು ಡೆಲ್ಲಿಯನ್ನು 3 ವಿಕೆಟ್ಗೆ 64 ಕ್ಕೆ ಇಳಿಸಿದರು. ಆ ಹಿನ್ನಡೆಯಿಂದ ಚೇತರಿಸಿಕೊಳ್ಳಲು ಸಾಧ್ಯವಾಗದ ಡೆಲ್ಲಿ 113 ರನ್​​ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಆರ್​ಸಿಬಿ ಮೂರು ಎಸೆತಗಳು ಬಾಕಿ ಇರುವಾಗ ಮೊತ್ತವನ್ನು ಬೆನ್ನಟ್ಟಿತು. ಸ್ಮೃತಿ ಮಂದಾನ (31), ಸೋಫಿ ಡಿವೈನ್ (32) ಮತ್ತು ಎಲಿಸ್ ಪೆರ್ರಿ (35*) ಉತ್ತಮ ಆಟ ಪ್ರದರ್ಶಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ವಿಜಯ್ ಮಲ್ಯ ಸವಾಲಿನ ಸಂದೇಶ

ಆರ್​ಸಿಬಿ ಡಬ್ಲ್ಯುಪಿಎಲ್ ಗೆದ್ದ ಕೂಡಲೇ, ವಿಜಯ್ ಮಲ್ಯ ಎಕ್ಸ್ (ಹಿಂದೆ ಟ್ವಿಟರ್) ಮೂಲಕ ಶುಭಾಶಯಗಳನ್ನು ಕೋರಿದರು. ಮುಂಬರುವ ಐಪಿಎಲ್ 2024 ರಲ್ಲಿ ಪುರುಷರ ತಂಡವು ಇದೇ ಯಶಸ್ಸನ್ನು ಪುನರಾವರ್ತಿಸಲು ಸಾಧ್ಯವಾದರೆ ಅದು ಅದ್ಭುತವಾಗಿರುತ್ತದೆ ಎಂದು ಹೇಳಿದರು. ಐಪಿಎಲ್ ಗೆಲ್ಲುವುದು ಪುರುಷರ ತಂಡಕ್ಕೆ ಬಹಳ ಸಮಯದಿಂದ ಬಾಕಿ ಉಳಿದಿದೆ ಎಂದು ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ.

ಡಬ್ಲ್ಯುಪಿಎಲ್ ಗೆದ್ದ ಆರ್​ಸಿಬಿ ಮಹಿಳಾ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಆರ್​​ಸಿಬಿ ಪುರುಷರ ತಂಡವು ದೀರ್ಘಕಾಲದಿಂದ ಬಾಕಿ ಉಳಿದಿರುವ ಐಪಿಎಲ್ ಅನ್ನು ಗೆದ್ದರೆ ಅದು ಅದ್ಭುತ ದ್ವಿಗುಣವಾಗಲಿದೆ. ಶುಭವಾಗಲಿ. ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : Virat kohli : ಕಿಂಗ್ ಇಸ್​ ಬ್ಯಾಕ್​, ಅಭ್ಯಾಸದ ವೇಳೆ ಅಬ್ಬರಿಸಿದ ಕೊಹ್ಲಿ

ಆರ್​ಸಿಬಿಗೆ ಈ ವರ್ಷ ಎಲ್ಲಾ ರೀತಿಯಲ್ಲೂ ಹೋಗಲು ಕಪ್ ಗೆಲ್ಲಲು ಅವಕಾಶವಿದೆ. ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್​, ರಜತ್ ಪಾಟಿದಾರ್, ಲಾಕಿ ಫರ್ಗುಸನ್ ಮತ್ತು ಹಲವಾರು ದೊಡ್ಡ ಹೆಸರುಗಳು ತಂಡದಲ್ಲಿವೆ.

ಆರ್​ಸಿಬಿ ಈ ಹಿಂದೆ ಮೂರು ಬಾರಿ ಫೈನಲ್​ಗೆ ಅರ್ಹತೆ ಪಡೆದಿತ್ತು. ಆದರೆ ಪ್ರತಿ ಬಾರಿಯೂ ಫಲಿತಾಂಶ ವಿರುದ್ಧವಾಗಿ ಬಂದಿತ್ತು. 2016ರಲ್ಲಿ ವಿರಾಟ್ ಕೊಹ್ಲಿ 973 ರನ್ ಬಾರಿಸಿದ್ದರು. ಕೊಹ್ಲಿ ಆ ಋತುವನ್ನು ಪುನರಾವರ್ತಿಸುತ್ತಾರೆ ಮತ್ತು ಪ್ರಶಸ್ತಿ ಗೆಲ್ಲಿಸಿಕೊಡುತ್ತಾರೆ ಎಂಬ ಆಶಯ ಅಭಿಮಾನಿಗಳದ್ದು.

Continue Reading

ಪ್ರಮುಖ ಸುದ್ದಿ

Virat kohli : ಕಿಂಗ್ ಇಸ್​ ಬ್ಯಾಕ್​, ಅಭ್ಯಾಸದ ವೇಳೆ ಅಬ್ಬರಿಸಿದ ಕೊಹ್ಲಿ

Virat kohli : ಕೊಹ್ಹಿ ಭಾನುವಾರ ಬೆಂಗಳೂರಿಗೆ ಬಂದು ಇಳಿದಿದ್ದರು. ಸೋಮವಾರ ಎಂದಿನಂತೆ ಅಭ್ಯಾಸ ನಡೆಸಿದರು.

VISTARANEWS.COM


on

Virat kohi 112
Koo

ಬೆಂಗಳೂರು: ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ಅಭಿಮಾನಿಗಳು ಡಬ್ಲ್ಯಪಿಎಲ್​​ (WPL 2024) ಟ್ರೋಫಿ ಗೆಲುವಿನ ಸಂಭ್ರಮದಲ್ಲಿರುವ ನಡುವೆಯೇ ಅವರಿಗೆ ಮತ್ತೊಂದು ಶುಭ ಸುದ್ದಿ ಬಂದಿದೆ. ಅವರೆಲ್ಲರ ಆರಾಧ್ಯ ದೈವ ವಿರಾಟ್ ಕೊಹ್ಲಿ (Virat kohli ) ಮತ್ತೆ ಮೈದಾನಕ್ಕೆ ಇಳಿದಿದ್ದಾರೆ. ಭಾನುವಾರವಷ್ಟೇ ವಿಮಾನದ ಮೂಲಕ ಬೆಂಗಳೂರಿಗೆ ಬಂದಿದ್ದ ಅವರು ಸೋಮವಾರ ಅಭ್ಯಾಸಕ್ಕೆ ಇಳಿದಿದ್ದಾರೆ. ನೆಟ್​ ಪ್ರಾಕ್ಟೀಸ್ ವೇಳೆ ಅಬ್ಬರಿಸಿದ್ದಾರೆ.

ಅವರ ಎರಡನೇ ಮಗುವಿನ ಜನನದಿಂದಾಗಿ ಅವರು ಇಂಗ್ಲೆಂಡ್ ತವರು ಟೆಸ್ಟ್​ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರಿಂದ, ಕೆಲವು ಮಾಧ್ಯಮಗಳು ಅವರು ಐಪಿಎಲ್​ನಲ್ಲಿ ಭಾಗವಹಿಸುವುದಿಲ್ಲ ಎಂದು ಬರೆದಿದ್ದವು. ಆದಾಗ್ಯೂ, ಬ್ಯಾಟಿಂಗ್ ಮಾಂತ್ರಿಕ ಭಾನುವಾರ ಬೆಳಿಗ್ಗೆ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಎಲ್ಲಾ ವದಂತಿಗಳಿಗೆ ತೆರೆ ಬಿತ್ತು

ಏತನ್ಮಧ್ಯೆ, ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಆರ್​ಸಿಬಿಯ ಪಂದ್ಯಾವಳಿಯ ಆರಂಭಿಕ ಪಂದ್ಯಕ್ಕೆ ಮುಂಚಿತವಾಗಿ ಕೊಹ್ಲಿ ಅಭ್ಯಾಸವನ್ನು ಪ್ರಾರಂಭಿಸಿದ್ದಾರೆ.

ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ (ಈ ಹಿಂದೆ ಟ್ವಿಟರ್) ನಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಕೊಹ್ಲಿ ತಮ್ಮ ಆರ್​ಸಿಬಿ ತಂಡದ ಆಟಗಾರರೊಂದಿಗೆ ಆಕ್ರಮಣಕಾರಿ ಫೀಲ್ಡಿಂಗ್ ಸೆಷನ್ನಲ್ಲಿ ಭಾಗವಹಿಸುತ್ತಿರುವುದನ್ನು ಕಾಣಬಹುದು. ಭಾರತೀಯ ಸೂಪರ್​ ಸ್ಟಾರ್​ ಕೊಹ್ಲಿ ಜತೆಗೆ ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಕೂಡ ತಮ್ಮ ಫೀಲ್ಡಿಂಗ್ ಕೌಶಲ್ಯಗಳ ಮೇಲೆ ಕೆಲಸ ಮಾಡಿದರು.

ನಂಬಿಕಸ್ಥ ಆಟಗಾರ

ಬ್ಯಾಟಿಂಗ್ ಹೊರತಾಗಿ, ಕೊಹ್ಲಿ ಅವರ ನಂಬಲಾಗದ ಫೀಲ್ಡಿಂಗ್ ಗುಣಲಕ್ಷಣಗಳಿಗಾಗಿ, ವಿಶೇಷವಾಗಿ ಔಟ್​ಫೀಲ್ಡ್​​ನಲ್ಲಿ ಪ್ರಶಂಸಗೆ ಒಳಗಾಗಿದ್ದಾರೆ. ಬೆಂಗಳೂರು ಮೂಲದ ಫ್ರಾಂಚೈಸಿ ಪರ ಅವರು 37.25ರ ಸರಾಸರಿಯಲ್ಲಿ 7263 ರನ್ ಗಳಿಸಿದ್ದು, 130.02ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಮುಂಬರುವ ಐಪಿಎಲ್ ಋತುವಿನಲ್ಲಿ, ನಾಯಕ ಫಾಫ್ ಡು ಪ್ಲೆಸಿಸ್ ಅವರೊಂದಿಗೆ ಕೊಹ್ಲಿ ಬ್ಯಾಟಿಂಗ್ ಆರಂಭಿಸುವ ಸಾಧ್ಯತೆಯಿದೆ. ಇವರಿಬ್ಬರು ಪವರ್ ಪ್ಲೇನಲ್ಲಿ ತಮ್ಮ ತಂಡಕ್ಕೆ ಉತ್ತಮ ಆರಂಭವನ್ನು ನೀಡುವ ನಿರೀಕ್ಷೆಯಿದೆ.

ಆರ್ಸಿಬಿ ತಮ್ಮ ತಂಡದಲ್ಲಿ ಗ್ರೀನ್ ಅನ್ನು ಹೊಂದಿರುವುದರಿಂದ, ಕೊಹ್ಲಿಯನ್ನು ಮೂರನೇ ಕ್ರಮಾಂಕದಲ್ಲಿ ಇಳಿಸುವ ಮೂಲಕ ಆಸ್ಟ್ರೇಲಿಯಾದ ಪ್ರತಿಭೆಯೊಂದಿಗೆ ಓಪನಿಂಗ್ ಮಾಡಲು ನಿರ್ಧರಿಸಬಹುದು.

Continue Reading
Advertisement
Benefits of Kasoori Methi
ಆರೋಗ್ಯ10 mins ago

Benefits of Kasoori Methi: ಕಸೂರಿ ಮೇಥಿ ರುಚಿ ಹೆಚ್ಚಿಸಲು ಮಾತ್ರವಲ್ಲ, ಆರೋಗ್ಯ ವೃದ್ಧಿಗೂ ಸೂಕ್ತ

varanasi nandi
ಅಂಕಣ30 mins ago

ನನ್ನ ದೇಶ ನನ್ನ ದನಿ ಅಂಕಣ: ಸತ್ಯಂ ಶಿವಂ ಸುಂದರಂ

Raja Marga human robots
ಸ್ಫೂರ್ತಿ ಕತೆ45 mins ago

Raja Marga Column : ಭಾವನೆಗಳೇ ಇಲ್ಲದ ರೋಬೋಟ್‌ನಂಥ ಮನುಷ್ಯರ ಜತೆ ಬದುಕೋದಾದರೂ ಹೇಗೆ?

Supreme Court
ದೇಶ52 mins ago

CAA: ಸಿಎಎ ವಿರೋಧಿಸಿ ಸಲ್ಲಿಸಿದ 230ಕ್ಕೂ ಅಧಿಕ ಅರ್ಜಿಗಳ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ

Fruits and Vegetables Spilling from Paper Bag
ಆರೋಗ್ಯ1 hour ago

Health Tips: ಈ ಹಣ್ಣು ಮತ್ತು ತರಕಾರಿಗಳನ್ನು ಎಂದಿಗೂ ಜೊತೆಯಾಗಿ ಇಡಲೇಬಾರದು!

Rain alert issued for Ramanagara and Kalaburagi Rising temperature in coastal areas
ಮಳೆ2 hours ago

Karnataka Weather : ರಾಜ್ಯದಲ್ಲಿಂದು ಬಿಸಿಲು, ಮಳೆ, ಗಾಳಿ ಒಟ್ಟೊಟ್ಟಿಗೆ ದಾಳಿ

dina Bhavishya
ಭವಿಷ್ಯ3 hours ago

Dina Bhavishya : ಈ ರಾಶಿಯವರು ಎಚ್ಚರ ವಹಿಸಿ; ಅಮೂಲ್ಯವಾದ ವಸ್ತುವೊಂದು ಕೈ ತಪ್ಪಬಹುದು

Ukrainian minister
ದೇಶ7 hours ago

Ukrainian Minister: ಶೀಘ್ರ ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ಭಾರತಕ್ಕೆ ಭೇಟಿ; ಉದ್ದೇಶವೇನು?

Techie couple assaulted over parking issue in Bengaluru
ಕರ್ನಾಟಕ8 hours ago

Assault Case: ಬೆಂಗಳೂರಲ್ಲಿ ಪಾರ್ಕಿಂಗ್‌ ವಿಚಾರಕ್ಕೆ ಟೆಕ್ಕಿ ದಂಪತಿ ಮೇಲೆ ಹಲ್ಲೆ

Banaglore incident
ಪ್ರಮುಖ ಸುದ್ದಿ8 hours ago

ವಿಸ್ತಾರ ಸಂಪಾದಕೀಯ: ಬೆಂಗಳೂರು ರೌಡಿಗಳ ಸಾಮ್ರಾಜ್ಯ ಆಗದಿರಲಿ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina Bhavishya
ಭವಿಷ್ಯ3 hours ago

Dina Bhavishya : ಈ ರಾಶಿಯವರು ಎಚ್ಚರ ವಹಿಸಿ; ಅಮೂಲ್ಯವಾದ ವಸ್ತುವೊಂದು ಕೈ ತಪ್ಪಬಹುದು

Tejaswi Surya About Hanuman Chalisa Issue
ಬೆಂಗಳೂರು14 hours ago

ಹನುಮಾನ್‌ ಚಾಲೀಸಾ ಕೇಸ್‌; ಆರೋಪಿಗಳು ಅರೆಸ್ಟ್ ಆಗದಿದ್ದರೆ ಪ್ರತಿಭಟನೆ- ತೇಜಸ್ವಿ ಸೂರ್ಯ ಎಚ್ಚರಿಕೆ

read your daily horoscope predictions for march 18 2024
ಭವಿಷ್ಯ1 day ago

Dina Bhavishya : ಈ ದಿನ ನೀವೂ ಮೋಸ ಹೋಗುವುದು ಗ್ಯಾರಂಟಿ; ಬೆನ್ನ ಹಿಂದೆಯೇ ನಡೆಯುತ್ತೆ ಪಿತೂರಿ

Lok Sabha Election 2024 Congress finalises list of 13 seats
Lok Sabha Election 20242 days ago

Lok Sabha Election 2024: ಕಾಂಗ್ರೆಸ್‌ನಲ್ಲಿ 13 ಕ್ಷೇತ್ರಗಳ ಪಟ್ಟಿ ಫೈನಲ್!‌ ಸಂಭಾವ್ಯ ಅಭ್ಯರ್ಥಿಗಳ ಲಿಸ್ಟ್‌ ಇಲ್ಲಿದೆ

dina Bhvishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಅತ್ತೆ ಮನೆಯಿಂದ ಸಿಗಲಿದೆ ಭರಪೂರ ಉಡುಗೊರೆ

Dina Bhavishya
ಭವಿಷ್ಯ3 days ago

Dina Bhavishya : ಇವತ್ತು ಈ ರಾಶಿಯವರು ಮೌನದಿಂದ ಇರುವುದು ಒಳಿತು

Lok Sabha Election 2024 Is Operation JDS Worker Behind DK Brothers Breakfast Meeting
Lok Sabha Election 20244 days ago

Lok Sabha Election 2024: ಡಿಕೆ ಬ್ರದರ್ಸ್‌ ಬ್ರೇಕ್‌ಫಾಸ್ಟ್‌ ಮೀಟಿಂಗ್ ಹಿಂದೆ ‘ಆಪರೇಷನ್‌ ಜೆಡಿಎಸ್‌ ಕಾರ್ಯಕರ್ತ’?

read your daily horoscope predictions for march 15 2024
ಭವಿಷ್ಯ4 days ago

Dina Bhavishya : ಕೆಲವು ರಹಸ್ಯ ವಿಷಯಗಳು ಈ ರಾಶಿಯವರಿಗೆ ಅಚ್ಚರಿ ತರಲಿದೆ

Lok Sabha Election 2024 Yaduveer talks about entering politics and Yaduveer Krishnadatta Chamaraja Wadiyar meets BY Vijayendra
ಕರ್ನಾಟಕ4 days ago

‌Lok Sabha Election 2024: ಮೆಣಸಿನಕಾಯಿಯನ್ನು ಜೀರ್ಣಿಸಿಕೊಳ್ತೇನೆ; ನನ್ನ ಮೇಲೆ ರಾಜಸ್ಥಾನದ ಪ್ರಭಾವ ಇಲ್ಲ: ಯದುವೀರ್

Different Danny Filed Case Against Ravi Varma
ಬೆಂಗಳೂರು5 days ago

Different Danny : ಫೈಟ್‌ ಮಾಸ್ಟರ್ಸ್‌ ಫೈರ್‌ ಫೈಟಿಂಗ್‌; ರವಿವರ್ಮ ವಿರುದ್ಧ ಡಿಫರೆಂಟ್‌ ಡ್ಯಾನಿ ಸಮರ

ಟ್ರೆಂಡಿಂಗ್‌