ಕೊಹ್ಲಿ ಅಭಿಮಾನಿಗಳಿಂದ ನವೀನ್​ ಉಲ್​ ಹಕ್​ಗೆ ಚಿಯರ್​ ಅಪ್​; ವಿಡಿಯೊ ವೈರಲ್​ - Vistara News

ಕ್ರಿಕೆಟ್

ಕೊಹ್ಲಿ ಅಭಿಮಾನಿಗಳಿಂದ ನವೀನ್​ ಉಲ್​ ಹಕ್​ಗೆ ಚಿಯರ್​ ಅಪ್​; ವಿಡಿಯೊ ವೈರಲ್​

ವಿರಾಟ್​ ಅವರ ಅಭಿಮಾನಿಗಳು ನವೀನ್​ ಉಲ್​ ಹಕ್​ಗೆ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಯಾವುದೇ ತೊಂದರೆ ನೀಡದೆ ಅವರಿಗೆ ಚಿಯರ್​ ಅಪ್​ ಮಾಡಿ ಪ್ರೋತ್ಸಾಹಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.

VISTARANEWS.COM


on

Naveen-ul-Haq
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಐಪಿಎಲ್‌ ಪಂದ್ಯದ ವೇಳೆ ಮೈದಾನದಲ್ಲಿಯೇ ಭಾರಿ ಸಂಘರ್ಷಕ್ಕೆ ಇಳಿದಿದ್ದ, ಅದಾದ ಬಳಿಕ ಎಲ್ಲಿಯೇ ಎದುರಾದರೂ ಮುಖ ತಿರುಗಿಸಿಕೊಂಡು ಹೋಗುತ್ತಿದ್ದ ವಿರಾಟ್‌ ಕೊಹ್ಲಿ (Virat Kohli) ಹಾಗೂ ಆಫ್ಘನ್‌ ವೇಗಿ ನವೀನ್‌ ಉಲ್‌ ಹಕ್‌ (Naveen Ul Haq) ಅವರು ಬುಧವಾರ (ಅಕ್ಟೋಬರ್‌ 11) ನಡೆದಿದ್ದ ಭಾರತ-ಅಫಘಾನಿಸ್ತಾನ (IND vs AFG) ಪಂದ್ಯದ ವೇಳೆ ಮೈದಾನದಲ್ಲಿಯೇ ರಾಜಿ ಮಾಡಿಕೊಂಡಿದ್ದಾರೆ. ಇದೀಗ ವಿರಾಟ್​ ಅವರ ಅಭಿಮಾನಿಗಳು ನವೀನ್​ ಉಲ್​ ಹಕ್​ಗೆ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಯಾವುದೇ ತೊಂದರೆ ನೀಡದೆ ಅವರಿಗೆ ಚಿಯರ್​ ಅಪ್​ ಮಾಡಿ ಪ್ರೋತ್ಸಾಹಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.

ಇಂಗ್ಲೆಂಡ್​ ವಿರುದ್ಧ ಭಾನುವಾರ ದೆಹಲಿಯ ಅರುಣ್​ ಜೇಟ್ಲಿ ಕ್ರಿಕೆಟ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಫೀಲ್ಡಿಂಗ್​ ನಡೆಸುತ್ತಿದ್ದ ನವೀನ್​ ಉಲ್​ ಹಕ್​ ಅವರನ್ನು ವಿರಾಟ್​ ಕೊಹ್ಲಿ ಅಭಿಮಾನಿಗಳು ನವೀನ್​ ಬಾಯ್​…ನವೀನ್​ ಬಾಯ್​ ಎಂದು ಕೂಗಿದ್ದಾರೆ. ಇದನ್ನು ಕೇಳಿ ಸಂತಸಗೊಂಡ ನವೀನ್​ ಥಂಬ್ಸ್ ಅಪ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. ಕೊಹ್ಲಿ ಜತೆ ರಾಜಿ ಮಾಡುವ ಮೊದಲು ಧರ್ಮಶಾಲದಲ್ಲಿ ನಡೆದಿದ್ದ ಪಂದ್ಯದಲ್ಲಿ ನವೀನ್​ಗೆ ಕೊಹ್ಲಿ ಅಭಿಮಾನಿಗಳು ಕೀಟಲೆ ಮಾಡಿದ್ದರು.

ಭಾರತ-ಆಫ್ಘನ್​ ಪಂದ್ಯದ ವೇಳೆ ಕೊಹ್ಲಿ ಮತ್ತು ನವೀನ್ ಇಬ್ಬರೂ ತಬ್ಬಿಕೊಂಡು, ಹ್ಯಾಂಡ್‌ ಶೇಕ್‌ ಮಾಡಿ, ಪಂದ್ಯದ ಬಳಿಕವೂ ನಗುನಗುತ್ತ ಮಾತನಾಡಿ ಎಲ್ಲ ಮುನಿಸನ್ನು ಮರೆತಿದ್ದರು. ಇಬ್ಬರ ಕ್ರೀಡಾಸ್ಫೂರ್ತಿಗೆ ಜನರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ರಾಜಿಯಾದ ಬೆನ್ನಲ್ಲೇ, ನವೀನ್‌ ಉಲ್‌ ಹಕ್‌ ಮಾತನಾಡಿ “ಕೊಹ್ಲಿ ನಿಜವಾಗಿಯೂ ಒಳ್ಳೆಯ ವ್ಯಕ್ತಿ” ಎಂದಿದ್ದರು.

ಇದನ್ನೂ ಓದಿ Virat Kohli : ಸಿಂಗಾಪುರದಲ್ಲಿ ವಿರಾಟ್​ ಕೊಹ್ಲಿಯ ಮೇಣದ ಪ್ರತಿಮೆ; ಎಲ್ಲಿ, ಏನು ಎಂಬ ವಿವರ ಇಲ್ಲಿದೆ

“ಕೊಹ್ಲಿ ನಿಜವಾಗಿಯೂ ತುಂಬ ಒಳ್ಳೆ ವ್ಯಕ್ತಿ ಹಾಗೂ ಅದ್ಭುತ ಆಟಗಾರ. ಮೈದಾನದಲ್ಲಿ ನಾವು ಕೈ ಕುಲುಕಿಸಿದೆವು. ಜಗಳ ಏನಿದ್ದರೂ ಮೈದಾನದಲ್ಲಿ ಮಾತ್ರ, ಮೈದಾನದ ಹೊರಗೆ ಯಾವುದೇ ಸಂಘರ್ಷ ಇರುವುದಿಲ್ಲ. ಆದರೆ, ಜನರೇ ನಮ್ಮ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಅಭಿಮಾನಿಗಳು ವೈರತ್ವ ಸಾಧಿಸುತ್ತಾರೆ. ಆದರೆ, ವಿರಾಟ್‌ ಕೊಹ್ಲಿ ನನ್ನ ಜತೆ ಮಾತನಾಡುತ್ತ ಇಲ್ಲಿಗೇ ಬಿಡೋಣ ಎಂದರೂ. ನಾನು ಕೂಡ ಬಿಡೋಣ ಎಂದೆ. ಆಗ ಇಬ್ಬರೂ ಕೈ ಕುಲುಕಿ, ತಬ್ಬಿಕೊಂಡೆವು” ಎಂದು ಪಂದ್ಯದ ಬಳಿಕ ನವೀನ್‌ ಉಲ್‌ ಹಕ್‌ ಹೇಳಿದ್ದರು.

ಐಪಿಎಲ್​ ವೇಳೆ ಕೊಹ್ಲಿ ಜತೆ ಕಿರಿಕ್​

ಮೇ 1ರಂದು ಲಕ್ನೋದ ಏಕಾನ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ವಿರಾಟ್​ ಕೊಹ್ಲಿ(virat kohli) ಮತ್ತು ನವೀನ್​ ಉಲ್​-ಹಕ್​ ಮಧ್ಯೆ ಮೈದಾನದಲ್ಲಿಯೇ ಕಿರಿಕ್​ ಆಗಿತ್ತು. ಬಳಿಕ ಪಂದ್ಯ ಮುಗಿದ ಬಳಿಕ ಗಂಭೀರ್​ ಅವರು ಇದೇ ವಿಚಾರವಾಗಿ ಕೊಹ್ಲಿ ಜತೆ ವಾಗ್ವಾದ ನಡೆಸಿದ್ದರು. ಈ ಘಟನೆ ನಡೆದ ಬಳಿಕ ನವೀನ್ ಅವರು ವಿರಾಟ್​ ಕೊಹ್ಲಿ ಮತ್ತು ಆರ್​ಸಿಬಿ ಸೋತ ಬಳಿಕ ಮಾವಿನ ಹಣ್ಣಿನ ಫೋಟೊ ಹಾಕಿ ಪರೋಕ್ಷವಾಗಿ ಟ್ರೋಲ್​ ಮಾಡಿದ್ದರು. ಇಲ್ಲಿಂದ ಆರಂಭಗೊಂಡ ಈ ಸಮರವನ್ನು ಮುಂದೆ ವಿರಾಟ್​ ಅಭಿಮಾನಿಗಳು ಮುಂದುವರಿಸಿದ್ದರು. ಈಗ ಉಭಯ ಆಟಗಾರರು ದೋಸ್ತಿಯಾಗಿದ್ದು ಈ ಗಲಾಟೆ ಇಲ್ಲಿಗೆ ಕೊನೆಗೊಂಡಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Team India stuck in Barbados: ಟೀಮ್​ ಇಂಡಿಯಾ ತವರಿಗೆ ವಾಪಸಾಗುವುದು ಮತ್ತಷ್ಟು ವಿಳಂಬ

Team India stuck in Barbados: ಗಂಟೆಗೆ 130 ಕಿ.ಮೀ.ಗೂ ವೇಗವಾಗಿ ಗಾಳಿ ಬೀಸುತ್ತಿರುವುದರಿಂದ ಪ್ರವಾಸಿಗರಿಗೆ ಒಳಾಂಗಣದಲ್ಲೇ ಉಳಿದುಕೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೇ ಬಾರ್ಬಡಾಸ್‌ನಲ್ಲಿ ನಿಷೇದಾಜ್ಞೆ ಜಾರಿ ಮಾಡಿದ್ದು, ಜನರಿಗೆ ಮನೆಗಳಿಂದ ಹೊರಬರದಂತೆ ಸೂಚಿಸಲಾಗಿದೆ.

VISTARANEWS.COM


on

Team India stuck in Barbados
Koo

ಬ್ರಿಜ್‌ಟೌನ್‌: ಟಿ20 ವಿಶ್ವಕಪ್‌ ಗೆದ್ದ ಬಳಿಕ ತವರಿಗೆ ಮರಳಲು ಸಜ್ಜಾಗಿ ನಿಂತಿರುವ ಟೀಮ್​ ಇಂಡಿಯಾ(Team India stuck in Barbados) ತವರಿಗೆ ವಾಪಸಾಗುವುದು ಮತ್ತಷ್ಟು ವಿಳಂಬಗೊಳ್ಳುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ. ಕೆರಿಬಿಯನ್‌ ರಾಷ್ಟ್ರದಲ್ಲಿ(Caribbean country) ಬೀಸುತ್ತಿರುವ ಭಾರೀ ಚಂಡಮಾರುತದ ಅಬ್ಬರ ಮತ್ತೆ ಹೆಚ್ಚಾಗಿರುವ ಕಾರಣ ಬಾರ್ಬಡೋಸ್​ನಲ್ಲಿ ವಿದ್ಯುತ್ ಮತ್ತು ನೀರು ಪೂರೈಕೆಗೆ ತೊಂದರೆಯಾಗಿದೆ. ಜತೆಗೆ ವಿಮಾನ ನಿಲ್ದಾಣಗಳು ಬಂದ್‌ ಆಗಿವೆ. ಹೀಗಾಗಿ ಆಟಗಾರರು ಭಾರತಕ್ಕೆ ಬರುವುದು ಇನ್ನೂ 2 ದಿನ ತಡವಾಗುವ ಸಾಧ್ಯತೆ ಕಂಡುಬಂದಿದೆ.

ಗಂಟೆಗೆ 130 ಕಿ.ಮೀ.ಗೂ ವೇಗವಾಗಿ ಗಾಳಿ ಬೀಸುತ್ತಿರುವುದರಿಂದ ಪ್ರವಾಸಿಗರಿಗೆ ಒಳಾಂಗಣದಲ್ಲೇ ಉಳಿದುಕೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೇ ಬಾರ್ಬಡಾಸ್‌ನಲ್ಲಿ ನಿಷೇದಾಜ್ಞೆ ಜಾರಿ ಮಾಡಿದ್ದು, ಜನರಿಗೆ ಮನೆಗಳಿಂದ ಹೊರಬರದಂತೆ ಸೂಚಿಸಲಾಗಿದೆ.

ಸದ್ಯ ಟೀಮ್​ ಇಂಡಿಯಾದ ಆಟಗಾರರು ಮತ್ತವರ ಕುಟುಂಬಸ್ಥರು, ಬಿಸಿಸಿಐ ಅಧಿಕಾರಿಗಳು ಸೇರಿ ಇಡೀ ತಂಡ ಬಾರ್ಬಡೋಸ್​ನ ಹೊಟೇಲ್‌ನಲ್ಲಿ ತಂಗಿದೆ. ಚಂಡಮಾರುತದ ಕಾರಣ, ಭಾರತೀಯ ಆಟಗಾರರಿರುವ ಹೊಟೇಲ್‌ ಸೇವೆಯಲ್ಲೂ ವ್ಯತ್ಯಯವಾಗಿದೆ ಎಂದು ವರದಿಯಾಗಿದೆ. ಟಿ 20 ವಿಶ್ವಕಪ್ ಫೈನಲ್​​ನಲ್ಲಿ ಭಾರತ ಗೆದ್ದ ಕೆಲವೇ ಗಂಟೆಗಳ ನಂತರ ಬೆರಿಲ್ ಚಂಡಮಾರುತವು ದ್ವೀಪ ರಾಷ್ಟ್ರಕ್ಕೆ ಅಪ್ಪಳಿಸಿತ್ತು.

ಇದನ್ನೂ ಓದಿ Team India Coach: ಟೀಮ್​ ಇಂಡಿಯಾ ಕೋಚ್​ ಆಯ್ಕೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಜಯ್‌ ಶಾ

ಟೀಂ ಇಂಡಿಯಾಗೆ ಐತಿಹಾಸಿಕ ಗೆಲುವು

ದಕ್ಷಿಣ ಆಫ್ರಿಕಾವನ್ನು 7 ರನ್ ಗಳಿಂದ ಮಣಿಸಿದ ಭಾರತ 2007ರ ಬಳಿಕ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಂತರ ಎರಡು ಬಾರಿ ಪಂದ್ಯಾವಳಿಯನ್ನು ಗೆದ್ದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ವಿರಾಟ್ ಕೊಹ್ಲಿ 76 ರನ್ ಗಳಿಸಿದರೆ, ಅಕ್ಷರ್ ಪಟೇಲ್ 47 ರನ್ ಗಳಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 169 ರನ್​ಗೆ ಹೋರಾಟ ಮುಗಿಸಿತು.

ವಿದಾಯ ಹೇಳಿದ ರೋಹಿತ್​– ಕೊಹ್ಲಿ


ಟಿ20 ವಿಶ್ವಕಪ್​ ಗೆದ್ದ ಬೆನ್ನಲ್ಲೇ ವಿರಾಟ್​ ಕೊಹ್ಲಿ, ರವೀಂದ್ರ ಜಡೇಜ ಮತ್ತು ರೋಹಿತ್​ ಶರ್ಮ ಅವರು ಟಿ20 ಕ್ರಿಕೆಟ್​ಗೆ ವಿದಾಯ ಘೋಷಿಸಿದರು. ನಾಯಕನಾಗಿ ಮತ್ತು ಆಟಗಾರನಾಗಿ 2 ಟಿ20 ವಿಶ್ವಕಪ್​ ಗೆದ್ದ ರೋಹಿತ್​ ಗೆಲುವಿನ ಬಳಿಕ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. ಈ ಮೂಲಕ ಸ್ಮರಣೀಯ ವಿದಾಯ ಪಡೆದರು. ಪಂದ್ಯದ ಬಳಿಕ ಮಾತನಾಡಿದ ರೋಹಿತ್​, “ಇದು ನನ್ನ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯ. ಚುಟುಕು ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಲು ಇದಕ್ಕಿಂತ ಸಕಾಲ ಇನ್ನೊಂದಿಲ್ಲ. ನಾನು ಮೊದಲು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದೇ ಟಿ20 ಆಡುವ ಮೂಲಕ. ನಾಕಯನಾಗಿ ನಾನು ಕಪ್ ಗೆಲ್ಲಬೇಕೆಂದು ಬಯಸಿದ್ದೆ. ಇದು ಸಾಕಾರಗೊಂಡಿದೆ” ಎಂದು ಹೇಳುವ ಮೂಲಕ ವಿದಾಯ ಹೇಳಿದರು. ಟಿ20ಯಲ್ಲಿ 159 ಪಂದ್ಯಗಳನ್ನು ಆಡಿರುವ ರೋಹಿತ್‌, 4231 ರನ್‌ ಗಳಿಸಿದ್ದು, 5 ಶತಕ ಹಾಗೂ 37 ಅರ್ಧಶತಕಗಳನ್ನು ಬಾರಿಸಿದ್ದಾರೆ.

ವಿರಾಟ್​ ಕೊಹ್ಲಿ ಅವರು ಈ ಸ್ಮರಣೀಯ ಗೆಲುವಿನ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿದರು. ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ವೇಳೆ ಕೊಹ್ಲಿ ತಮ್ಮ ನಿವೃತ್ತಿ ಘೋಷಿಸಿದರು. ‘ದೇವರು ದೊಡ್ಡವನು. ಭಾರತಕ್ಕಾಗಿ ಇದು ನನ್ನ ಕೊನೆಯ ಟಿ20 ಪಂದ್ಯವಾಗಿತ್ತು. ನಾವು ಆ ಕಪ್ ಎತ್ತಲು ಬಯಸಿದ್ದೆ. ಇದು ಸಾಕಾರಗೊಂಡಿದೆ. ಮುಂದಿನ ಪೀಳಿಗೆಗೆ ಟಿ20 ಆಟವನ್ನು ಮುಂದಕ್ಕೆ ಕೊಂಡೊಯ್ಯುವ ಸಮಯ ಇದು. ಅದ್ಭುತ ದಿನದಂದು ವಿದಾಯ ಹೇಳುವ ಸೌಭಾಗ್ಯ ನನಗೆ ಒದಗಿದ್ದು ನಿಜ್ಜಕ್ಕೂ ಸಂತಸ ತಂದಿದೆ” ಎಂದು ಹೇಳಿದರು.

Continue Reading

ಕ್ರೀಡೆ

Team India Coach: ಟೀಮ್​ ಇಂಡಿಯಾ ಕೋಚ್​ ಆಯ್ಕೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಜಯ್‌ ಶಾ

Team India Coach: ಈ ಹಿಂದೆ ಗೌತಮ್​ ಗಂಭೀರ್​ ಅವರು ಕೋಚ್​ ಆಗುವುದು ಖಚಿತ, ಈಗಾಗಲೇ ಬಿಸಿಸಿಐ ಅವರ ಹೆಸರನ್ನು ಅಂತಿಮಗೊಳಿಸಿದೆ ಎಂದು ವರದಿಯಾಗಿತ್ತು. ಇದೀಗ ಜಯ್​ ಶಾ ಅವರು ಗಂಭೀರ್‌(Gautam Gambhir) ಜತೆ ಡಬ್ಲ್ಯು.ವಿ. ರಾಮನ್‌ ಅವರ ಹೆಸರನ್ನು ಕೂಡ ಹೇಳಿರಿವುದು ಅಚ್ಚರಿಗೆ ಕಾರಣವಾಗಿದೆ.

VISTARANEWS.COM


on

Team India Coach
Koo

ಮುಂಬಯಿ: ಟೀಮ್​ ಇಂಡಿಯಾದ ಮುಂದಿನ ಕೋಚ್(Team India Coach)​ ಆಯ್ಕೆ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಮಹತ್ವದ ಮಾಹಿತಿ ನೀಡಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಗೆ ನೂತನ ಕೋಚ್​ ಭಾರತ ತಂಡದ ಜವಾಬ್ದಾರಿ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿ ಜುಲೈ 27ರಿಂದ ಆರಂಭಗೊಳ್ಳಲಿದೆ.

ಈ ಹಿಂದೆ ಗೌತಮ್​ ಗಂಭೀರ್​ ಅವರು ಕೋಚ್​ ಆಗುವುದು ಖಚಿತ, ಈಗಾಗಲೇ ಬಿಸಿಸಿಐ ಅವರ ಹೆಸರನ್ನು ಅಂತಿಮಗೊಳಿಸಿದೆ ಎಂದು ವರದಿಯಾಗಿತ್ತು. ಅಲ್ಲದೆ ಟಿ20 ವಿಶ್ವಕಪ್​ ಮುಗಿದ ಒಂದೆಡರು ದಿನಗಳಲ್ಲಿ ಕೋಚ್​ ಹೆಸರು ಘೋಷಣೆಯಾಗಲಿದೆ ಎನ್ನಲಾಗಿತ್ತು. ಆದರೆ, ಇದೀಗ ಜಯ್​ ಶಾ ಅವರು ಗಂಭೀರ್‌(Gautam Gambhir) ಜತೆ ಡಬ್ಲ್ಯು.ವಿ. ರಾಮನ್‌ ಅವರ ಹೆಸರನ್ನು ಕೂಡ ಹೇಳಿರಿವುದು ಅಚ್ಚರಿಗೆ ಕಾರಣವಾಗಿದೆ. ವಿ. ರಾಮನ್‌(WV Raman) ಭಾರತದ ಮಹಿಳಾ ಕ್ರಿಕೆಟ್‌ ತಂಡದ ಕೋಚ್‌ ಆಗಿ ಕರ್ತವ್ಯ ನಿರ್ವಹಿಸಿದ್ದ ಅನುಭವ ಹೊಂದಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ಜಯ್‌ ಶಾ, ಕೋಚ್‌ ಜತೆಗೆ ಬಿಸಿಸಿಐ ಆಯ್ಕೆಗಾರರ ನೇಮಕವೂ ಶೀಘ್ರದಲ್ಲೇ ನಡೆಯಲಿದೆ ಎಂದಿದ್ದಾರೆ. ಜತೆಗೆ ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ) ಈಗಾಗಲೇ ಸಂದರ್ಶನ ನಡೆಸಿ ಇಬ್ಬರ ಹೆಸರನ್ನು ಅಂತಿಮಗೊಳಿಸಿದೆ ಎಂದು ತಿಳಿಸಿದ್ದಾರೆ. ನೂತನ ಕೋಚ್​ಗೆ ಮುಂದಿನ ವರ್ಷ ನಡೆಯುವ ಚಾಂಪಿಯನ್ಸ್‌ ಟ್ರೋಫಿ ಮೊದಲ ಸವಾಲಾಗಲಿದೆ.

ಜಾಂಟಿ ರೋಡ್ಸ್ ಫೀಲ್ಡಿಂಗ್​ ಕೋಚ್

ದಕ್ಷಿಣ ಆಫ್ರಿಕಾದ ಈ ಮಾಜಿ ಆಟಗಾರ, ಕ್ರಿಕೆಟ್​ ಕಂಡ ಬೆಸ್ಟ್​ ಫೀಲ್ಡರ್​ ಜಾಂಟಿ ರೋಡ್ಸ್(Jonty Rhodes) ಅವರು ಭಾರತ ತಂಡದ ಫೀಲ್ಡಿಂಗ್​ ಕೋಚ್​(Jonty Rhodes ia’s New Fielding Coach) ಆಗಲಿದ್ದಾರೆ ಎಂದು ತಿಳಿದುಬಂದಿದೆ. ತಂಡದ ಇತರ ಕೋಚ್​ಗಳ ಆಯ್ಕೆಯಲ್ಲಿ ತನ್ನ ವ್ಯಕ್ತಿಗಳನ್ನು ನೇಮಿಸಿಕೊಳ್ಳುವ ಅವಕಾಶ ನೀಡಬೇಕೆಂದು ಗಂಭೀರ್​ ಅವರು ಬಿಸಿಸಿಐಗೆ ಬೇಡಿಕೆ ಇಟ್ಟಿದ್ದು ಈ ಬೇಡಿಕೆಯನ್ನು ಬಿಸಿಸಿಐ ಒಪ್ಪಿಕೊಂಡಿದೆ ಎನ್ನಲಾಗಿದೆ.

ಇದನ್ನೂ ಓದಿ Team India Captain : ರೋಹಿತ್ ಶರ್ಮಾ ನಂತರ ಟಿ20 ತಂಡದ ನಾಯಕ ಯಾರು? ಇಲ್ಲಿದೆ ಐದು ಮುಂಚೂಣಿ ಹೆಸರುಗಳು

ಗಂಭೀರ್​ ಅವರು ಜಾಂಟಿ ರೋಡ್ಸ್ ಜತೆ ಐಪಿಎಲ್​ನಲ್ಲಿ ಲಕ್ನೋ ತಂಡದ ಪರ ಜತೆಯಾಗಿ 2 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಇದೇ ಕಾಂಬಿನೇಷನ್​ನಲ್ಲಿ ಇದೀಗ ಟೀಮ್​ ಇಂಡಿಯಾದಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಕಂಡುಬಂದಿದೆ. 2019ರಲ್ಲಿಯೂ ಜಾಂಟಿ ರೋಡ್ಸ್ ಅವರು ಭಾರತದ ತಂಡದ ಫೀಲ್ಡಿಂಗ್​ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಭಾರತೀಯ ಮೂಲದ ಸಿಬ್ಬಂದಿಗೆ ಬಿಸಿಸಿಐ ಮಣೆ ಹಾಕಿತ್ತು. ಈ ಬಾರಿ ಗಂಭೀರ್​ ಅವರ ಅಭಯಹಸ್ತದಿಂದ ರೋಡ್ಸ್​ಗೆ ಅವಕಾಶ ಸಿಗುವ ಸಾಧ್ಯತೆ ಇದೆ

2022ರಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ರಾಹುಲ್​ ದ್ರಾವಿಡ್​ಗೆ ಕೋಚ್​ ಆಗಿ ಮೊದಲ ಸವಾಲಾಗಿತ್ತು. ಇಲ್ಲಿ ಕಪ್​ ಗೆಲ್ಲಲು ತಂಡ ವಿಫಲವಾಗಿತ್ತು. ಬಳಿಕ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ನಲ್ಲಿಯೂ ಭಾರತ ಫೈನಲ್​ನಲ್ಲಿ ಸೋಲು ಕಂಡಿತ್ತು. ನಿರ್ಗಮನದ ಹಂತದಲ್ಲಿ ಕೊನೆಗೂ ಕಪ್​ ಗೆದ್ದ ಖಷಿ ಅವರಿಗೆ ಲಭಿಸಿದೆ. ಜತೆಗೆ ಅವರ ಈ ಕನಸು ನೆರವೇರಲೆಂದು ಪ್ರಾರ್ಥಿಸಿಸಿದ ಕೊಟ್ಯಂತರ ಅಭಿಮಾನಿಗಳ ಹಾರೈಕೆ ಕೂಡ ಫಲಿಸಿದೆ. ಕೋಚ್​ ಹುದ್ದೆಯಿಂದ ಕೆಳಗಿಳಿದ ದ್ರಾವಿಡ್​ ಮುಂದಿನ ವರ್ಷ ಐಪಿಎಲ್​ನಲ್ಲಿ ಕೋಚಿಂಗ್​ ನಡೆಸುವ ಸಾಧ್ಯತೆ ಇದೆ.

Continue Reading

ಪ್ರಮುಖ ಸುದ್ದಿ

T20 World Cup 2024: ಟಿ-20 ಸ್ವಯಂವರದ ಮಂಟಪದಲ್ಲಿ ವಿಶ್ವಸುಂದರಿಗೆ ಮಾಲೆ ತೊಡಿಸಿದ ರೋಹಿತ್ ಬಳಗ

T20 World Cup 2024: ಐಸಿಸಿ ಟಿ-20 ಕ್ರಿಕೆಟ್ ಸ್ವಯಂವರದ ಅವಿಸ್ಮರಣೀಯ ದೃಶ್ಯಗಳನ್ನು ನೋಡಲು ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿತ್ತು. ಇತ್ತ ಭಾರತದ ಪ್ರತಿಯೊಬ್ಬ ಅಭಿಮಾನಿಯ ಹೃದಯಬಡಿತದಲ್ಲೂ ಏರುಪೇರು ನಡೆದೇ ಇತ್ತು. ಅದೊಂದು ಮಹೋನ್ನತ ಕ್ಷಣಕ್ಕೆ ಸಾಕ್ಷಿಯಾಗಿತ್ತು ಕೆರೆಬಿಯನ್ ನಾಡಿನ ಬಾರ್ಬೊಡಸ್‍ನ ಕೆನ್ಸಿಂಗ್ಟನ್ ಓವಲ್ ಅಂಗಣ.

VISTARANEWS.COM


on

T20 World Cup 2024
Koo

ಸನತ್ ರೈ, ಬೆಂಗಳೂರು

2024ರ ಜೂನ್ 29. ಭಾರತೀಯ ಕಾಲಮಾನ ರಾತ್ರಿ 8 ಗಂಟೆ., ಟಿ-20 ವಿಶ್ವಕಪ್ ಟೂರ್ನಿಯ (T20 World Cup 2024) ಅಶ್ವಮೇಧ ಯಾಗದ ಕೊನೆಯ ಪರ್ವ. ವಿಜಯಲಕ್ಷ್ಮಿ ಸ್ವಯಂವರದ ತಹತಹಿಕೆ ಭಾರತೀಯ ಮಕ್ಕಳ ಹೃದಯದ ಭಾವಕೋಶದಲ್ಲಿ ಅವ್ಯಾಹತವಾಗಿ ಪುಟಿಯುತ್ತಲೇ ಇತ್ತು.. ಸತತ ಗೆಲುವಿನ ನಾಗಾಲೋಟದಲ್ಲಿದ್ದ ವಿಶ್ವದ ಬಲಿಷ್ಠ ಎರಡು ತಂಡಗಳು ಅಂತಿಮ ಹಂತದ ಸಿದ್ಧತೆ ಮಾಡಿಕೊಂಡಿದ್ದವು. ನಾಲ್ಕನೇ ಬಾರಿ ಚಂಚಲೆ ಚೆಲುವೆಯನ್ನು ಒಲಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದರು ಭಾರತದ ರೋಹಿತ್ ಶರ್ಮಾ ಹುಡುಗರು.

ಇನ್ನೊಂದೆಡೆ ಐಸಿಸಿ ಅಖಾಡದಲ್ಲಿ ಯಾವತ್ತೂ ಭಗ್ನ ಪ್ರೇಮಿಗಳಾಗಿದ್ದ ದಕ್ಷಿಣ ಆಫ್ರಿಕಾ ಹುಡುಗರು ಇದೇ ಮೊದಲ ಬಾರಿ ವಿಶ್ವ ಸುಂದರಿಯ ಸ್ವಯಂವರದ ಮಂಟಪದ ಕೊನೆಯ ಮೆಟ್ಟಿಲು ಹತ್ತಿ ನಿಂತಿದ್ದರು. ಐಸಿಸಿ ಟಿ-20 ಕ್ರಿಕೆಟ್ ಸ್ವಯಂವರದ ಅವಿಸ್ಮರಣೀಯ ದೃಶ್ಯಗಳನ್ನು ನೋಡಲು ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿತ್ತು. ಇತ್ತ ಭಾರತದ ಪ್ರತಿಯೊಬ್ಬ ಅಭಿಮಾನಿಯ ಹೃದಯಬಡಿತದಲ್ಲೂ ಏರುಪೇರು ನಡೆದೇ ಇತ್ತು. ಅದೊಂದು ಮಹೋನ್ನತ ಕ್ಷಣಕ್ಕೆ ಸಾಕ್ಷಿಯಾಗಿತ್ತು ಕೆರೆಬಿಯನ್ ನಾಡಿನ ಬಾರ್ಬೊಡಸ್‍ನ ಕೆನ್ಸಿಂಗ್ಟನ್ ಓವಲ್ ಅಂಗಣ.

ಹೌದು, ಈ ಬಾರಿ ಟಿ-20 ವಿಶ್ವಕಪ್ ಟ್ರೋಫಿಗೆ ಗೆಲುವಿನ ಮಾಲೆ ಹಾಕಿ ಭಾರತಾಂಬೆಯ ಪಾದದಡಿಯಲ್ಲಿಡಲು ರೋಹಿತ್ ಹುಡುಗರು ಭೀಷ್ಮ ಶಪಥ ಮಾಡಿದ್ದರು. ಸಮರ್ಥ ನಾಯಕ ರೋಹಿತ್, ಗುರು ದ್ರಾವಿಡಾಚಾರ್ಯರಿಗೆ ಗೆಲುವೊಂದೇ ಉಡುಗೊರೆ ಅನ್ನುವುದು ತಂಡದ ಎಲ್ಲಾ ಆಟಗಾರರ ಅಂಬೋಣವಾಗಿತ್ತು.

ಹತ್ತು ವರ್ಷಗಳ ಹಿಂದೆ ಸ್ವಯಂವರ ಮಂಟಪದಿಂದ ಹೊರದಬ್ಬಿದ್ದ ಚಂಚಲ ಚೆಲುವೆ, ಎರಡು ಬಾರಿ ಮದರಂಗಿ ಶಾಸ್ತ್ರದ ವೇಳೆಯಲ್ಲೇ ಕೈಕೊಟ್ಟಿದ್ದಳು (ಸೆಮಿಫೈನಲ್ ನಿರ್ಣಾಯಕ ಘಟ್ಟದಲ್ಲಿ). ಆದ್ರೆ ಈ ಬಾರಿ ಗುರು ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ರೋಹಿತ್ ಹುಡುಗರು ಪಕ್ಕಾ ರಣತಂತ್ರ ಹಣೆದು ಅಂತಿಮ ಅಂಕಣಕ್ಕೆ ಕಂಕಣ ಕಟ್ಟಿಕೊಂಡು ಇಳಿದಿದ್ದರು.

ಬ್ಯಾಟಿಂಗ್ ಆಯ್ಕೆ

ಮಹತ್ವದ ಟಾಸ್ ಗೆದ್ದ ರೋಹಿತ್ ಹಿಂದು ಮುಂದು ಯೋಚನೆ ಮಾಡದೇ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ್ರು. ಯಾಕಂದ್ರೆ ಬ್ಯಾಟಿಂಗ್ ಶಕ್ತಿ ಮತ್ತು ಬೌಲಿಂಗ್ ಯುಕ್ತಿಯ ಮೇಲೆ ರೋಹಿತ್ ಅಪಾರ ನಂಬಿಕೆಯನ್ನಿಟ್ಟುಕೊಂಡಿದ್ದರು. ಮಿನುಗು ತಾರೆಯಂತೆ ಹೊಳೆಯುವ ಚೆಂದುಳ್ಳಿ ಚೆಲುವೆಯ ಕೊರಳಿಗೆ ಮಾಲೆ ಹಾಕಲು ಗುರು ದ್ರಾವಿಡ್ ಕೊಟ್ಟ ದಾರದಲ್ಲಿ ಪುಷ್ಪಮಾಲೆಗಳ ಪೋಣಿಸಲು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಶುರು ಮಾಡಿದ್ರು.

ಆರಂಭದಲ್ಲೇ ವಿರಾಟ್ ಕೊಹ್ಲಿ ಮಲ್ಲಿಗೆಯ ಕಂಪನ್ನು ಪಸರಿಸಿದ್ರು. ಒಂದರೆಗಳಿಗೆಯೂ ಮೈಮರೆಯಲಿಲ್ಲ. ತಾಳ್ಮೆ, ಏಕಾಗ್ರತೆಯೊಂದಿಗೆ ಘಮಘಮಿಸುವ ಬ್ಯಾಟಿಂಗ್ ವೈಖರಿಗೆ ಅಭಿಮಾನಿಗಳು ಕೂಡ ಮೈಮರೆತು ಕುಣಿದಾಡಿದರು. ಆದ್ರೆ ದುರದೃಷ್ಟವಶಾತ್ ಗುಲಾಬಿ ಹೂವಿನಂತೆ ಆಕರ್ಷಿಸುವ ರೋಹಿತ್ ಬ್ಯಾಟಿಂಗ್ ಅಂತಿಮ ಹಣಾಹಣಿಯಲ್ಲಿ ಹೆಚ್ಚು ಸುವಾಸನೆ ಬೀರಲಿಲ್ಲ. ಕೇಶವ್ ಮಹಾರಾಜ್ ಎಂಬ ಹರಿಣಪಾಳೆಯದ ಪತಂಗವೊಂದು ಗುಲಾಬಿಯ ಮಕರಂದವನ್ನು ಹೀರುತ್ತಿದ್ದಂತೆ ರೋಹಿತ್ ಪೋಣಿಸುವಿಕೆ ಮುಗಿದಂತಾಯ್ತು. ಹಿಟ್ ಮ್ಯಾನ್, ಗೆಲುವಿನ ಮಾಲೆಗೆ 9 (ರನ್) ಗುಲಾಬಿ ಪೋಣಿಸಿ ಪೆವಿಲಿಯನ್‍ನತ್ತ ಹೆಜ್ಜೆ ಹಾಕಿದಾಗ ಇಡೀ ಓವಲ್ ಅಂಗಳ ಒಂದು ಕ್ಷಣ ಸ್ತಬ್ದಗೊಂಡಿತ್ತು. ಮರು ಕ್ಷಣದಲ್ಲೇ (ಕೇಶವ್ ಮಹಾರಾಜ್) ಪತಂಗದ ಚೆಲ್ಲಾಟಕ್ಕೆ ಶೂನ್ಯ ಸುತ್ತಿದ ರಿಷಬ್ ಪಂತ್ ಸುಗಂಧ ರಾಜನಂತೆ ಬ್ಯಾಟಿಂಗ್‍ನಲ್ಲಿ ಪರಿಮಳ ಬೀರಲಿಲ್ಲ. ಹಿಂದೆಯೇ ಕೇವಲ 3 (ರನ್) ಸೂರ್ಯಕಾಂತಿಗಳಷ್ಟೇ ಮಾಲೆಗೆ ಪೋಣಿಸಿದ ಸೂರ್ಯಕುಮಾರ್ ಬಂದ ದಾರಿಗೆ ಸುಂಕವಿಲ್ಲದೆ ಹಿಂತಿರುಗಿದ್ರು. ಜೇನುನೋಣದಂತೆ ದಾಳಿ ಮಾಡಿದ ರಬಾಡ ಸ್ಕೈ ವಿಕೆಟ್ ಉರುಳಿಸಿ ಟೀಮ್ ಇಂಡಿಯಾದ ಅಭಿಮಾನಿಗಳ ಹೃದಯವನ್ನು ಘಾಸಿ ಮಾಡಿದ್ದರು. ಹೀಗೆ, ದುಂಬಿ, ಪತಂಗ, ಜೇಣುನೋಣದ ಆಕ್ರಮಣಕ್ಕೆ ಟೀಮ್ ಇಂಡಿಯಾದ ಗೆಲುವಿನ ಮಾಲೆಗೆ ಹೂ ಪೋಣಿಸುವ ಕಾರ್ಯ ನಿಧಾನವಾಗಿ ಸಾಗುತ್ತಿತ್ತು.

ಇದನ್ನೂ ಓದಿ: Afghanistan cricket : ನಮಗೂ ಒಂದು ತಂಡ ರಚಿಸಿ ಎಂದು ಐಸಿಸಿಗೆ ಪತ್ರ ಬರೆದ ಅಫಘಾನಿಸ್ತಾನದ ಮಹಿಳಾ ಕ್ರಿಕೆಟಿಗರು

ಆದ್ರೂ ಮಲ್ಲಿಗೆಯ ಕಂಪಿನಂತೆ ಬ್ಯಾಟ್ ಬೀಸುತ್ತಿದ್ದ ಕೊಹ್ಲಿಗೆ ಅಕ್ಸರ್ ಪಟೇಲ್ ಸಾಥ್ ನೀಡಿದ್ರು. ಲಯ ಪಡೆದುಕೊಂಡ ವಿರಾಟ್ ಕೊಹ್ಲಿ ಗೆಲುವಿನ ಹಾರಕ್ಕೆ ಮಲ್ಲಿಗೆಯನ್ನು ಪೋಣಿಸಿಕೊಂಡು ಹೋದ್ರೆ, ಇತ್ತ ಅಕ್ಸರ್ ಪಟೇಲ್ ಹೆಚ್ಚು ಸುವಾಸನೆ ಇಲ್ಲದ ಕನಕಾಂಬರ ಹೂವಿನಂತೆ ಯಾರು ಕೂಡ ಊಹೆ ಮಾಡದ ರೀತಿಯಲ್ಲಿ ಬ್ಯಾಟ್ ಬೀಸಿದ್ರು. ವಿರಾಟನ ಮಲ್ಲಿಗೆಯ ಜೊತೆಗೆ ಅಕ್ಸರ್ ಪಟೇಲ್ ಕನಕಾಂಬರವನ್ನು ಪೋಣಿಸಿ ಗೆಲುವಿನ ಹಾರದ ಅಲಂಕಾರವನ್ನು ಹೆಚ್ಚಿಸಿದ್ರು. ಆದ್ರೆ 47 (ರನ್) ಕನಕಾಂಬರ ಹೂಗಳನ್ನು ಗೆಲುವಿನ ಹಾರಕ್ಕೆ ಸೇರಿಸಿ ಮರಳಿ ಪೆವಿಲಿಯನ್ ಸೇರಿಕೊಂಡ್ರು.

ಇನ್ನೊಂದೆಡೆ ವಿರಾಟನ ಮಲ್ಲಿಗೆಯ ಸುವಾಸನೆ ಜೊತೆ ಸೇವಂತಿ ಹೂವಿನಂತೆ ಘಮ್ಮಂತ ಪಸರಿಸಿದ್ದು ಶಿವಂ ದುಬೆ. ಅದರಲ್ಲೂ ಕಿಂಗ್ ಕೊಹ್ಲಿ, ಬೆಳಂದಿಗಳ ಚಂದಿರನ ಬೆಳಕಿನಲ್ಲಿ ಫಳಫಳನೆ ಹೊಳೆವ ಮಲ್ಲಿಗೆಯಂತೆ ಕಂಗೊಳಿಸುತ್ತಿದ್ದರು. ಅಷ್ಟರಲ್ಲೇ ಜಾನ್ಸೆನ್ ಎಂಬ ದುಂಬಿ ಮಲ್ಲಿಗೆ ಪೋಣಿಸುತ್ತಿದ್ದ ವಿರಾಟನ ಏಕಾಗ್ರತೆಗೆ ಭಂಗವನ್ನುಂಟು ಮಾಡಿತು. ಅಷ್ಟೊತ್ತಿಗಾಗಲೇ 76 (ರನ್) ಮಲ್ಲಿಗೆ ಹೂಗಳು ಭಾರತದ ಗೆಲುವಿನ ಹಾರದಲ್ಲಿ ಸೇರಿಕೊಂಡಿದ್ದವು.

ಬಳಿಕ ಸೇವಂತಿಯ (ಶಿವಂ ದುಬೆ) ಜೊತೆ ಹಾರ್ದಿಕ್ ಪಾಂಡ್ಯ ಎಂಬ ಕೆಂಡ ಸಂಪಿಗೆಯೂ ಸ್ವಯಂವರ ಮಾಲೆಗೆ ಇನ್ನಷ್ಟು ಮೆರಗು ನೀಡಿತು. 27 ಸೇವಂತಿ ಹೂ ಪೋಣಿಸಿ ಹೂ ಮಾಲೆಗೆ ಶೃಂಗಾರ ಹೆಚ್ಚಿಸಿದ ಶಿವಂ ದುಬೆಗೆ ಮಕರಂದ ಹೀರುವ ಚತುರ ಸನ್ ಬರ್ಡ ಹಕ್ಕಿಯಂತೆ ಆನ್ರಿಚ್ ನೋರ್ಟೆಜೆ ಕುಟುಕಿದ್ರು.
ಅಂತಿಮವಾಗಿ ಪಾಂಡ್ಯ ಅವರ 5* (ರನ್) ಕೆಂಡ ಸಂಪಿಗೆಯ ಜೊತೆ ಸುಂದರ ಮಾಲೆಗೆ ಕೇವಲ 2 ಜಾಜಿ ಮಲ್ಲಿಗೆ ಹೂ ಪೋಣಿಸಿದ ರವೀಂದ್ರ ಜಡೇಜಾಗೂ ಸನ್‍ಬರ್ಡ ನೊರ್ಟೆಜೆ ಅಡ್ಡಿಯನ್ನುಂಟು ಮಾಡಿದ್ರು. ಅಷ್ಟರಲ್ಲಾಗಲೇ ರೋಹಿತ್ ಹುಡುಗರು 176 ಮಾರುದ್ದದ ಹೂಮಾಲೆಯನ್ನು ತಯಾರಿಸಿ ಇಟ್ಟಿದ್ದರು.
*
ಮುಂದಿನ ಪಾರಿ ನೀಲಿ ಜೆರ್ಸಿ ಹುಡುಗರ ಬೌಲಿಂಗ್ ಪಡೆಯದ್ದಾಗಿತ್ತು. ತಮ್ಮ ಪಾಲಿನ ಪುಷ್ಪಗಳನ್ನು ಸುಮಮಾಲೆಗೆ ಪೋಣಿಸಲು ಬುಮ್ರಾ ನೇತೃತ್ವದ ಬೌಲಿಂಗ್ ಸೈನಿಕರು ಸಿದ್ಧರಾಗಿದ್ದರು.

ವಿಶ್ವ ಕ್ರಿಕೆಟ್ ಬೌಲಿಂಗ್ ನ ನಾಯಕ ಶಿರೋಮಣಿ ಜಸ್ಪ್ರಿತ್ ಬೂಮ್ರಾ ಎರಡು (ವಿಕೆಟ್) ಗೊಂಚಲು ಚೆಂಡು ಹೂಗಳನ್ನು ಕಿತ್ತುಕೊಂಡು ಕೈ ಜಾರುತ್ತಿದ್ದ ವಿಜಯ ಮಾಲೆಗೆ ಮೆರಗು ನೀಡಿದ್ರು. ಇನ್ನೊಂದೆಡೆ ಅರ್ಶಾದೀಪ್ ಸಿಂಗ್ ಕೂಡ ಎರಡು (ವಿಕೆಟ್) ಗೊಂಚಲು ತುಳಸಿದಳಗಳನ್ನು ಪೋಣಿಸಿ ಗೆಲುವಿನ ಮಾಲೆಯ ಅಂದವನ್ನು ಹೆಚ್ಚಿಸಿದ್ರು. ಹಾಗೇ ಕುಲದೀಪ್ ಯಾದವ್ ಮೂರು (ಕ್ಯಾಚ್) ಗಂಟು ಪಾರಿಜಾತ ಹೂಗಳನ್ನು ಗೆಲುವಿನ ಹಾರಕ್ಕೆ ಪೋಣಿಸಿ ಸುವಾಸನೆಯನ್ನು ಇಮ್ಮಡಿಗೊಳಿಸಿದ್ರು. ಮತ್ತೊಂದೆಡೆ ಬ್ಯಾಟಿಂಗ್ ನಲ್ಲಿ ಶೂನ್ಯ ಸುತ್ತಿದ್ದ ರಿಷಬ್ ಪಂತ್ ಕೂಡ ಎರಡು (ಕ್ಯಾಚ್) ಸುಗಂಧರಾಜ ಹೂ ಸೇರಿಸಿ ಪರಿಮಳ ಹೆಚ್ಚಿಸಿದ್ರು. ಜೊತೆಗೆ ಅಕ್ಸರ್ ಪಟೇಲ್ 1 (ವಿಕೆಟ್) ಗಂಟು ಕನಕಾಂಬರ ಹೂ ಪೋಣಿಸಿ ದೃಷ್ಟಿ ಬೊಟ್ಟು ಇಟ್ರು. ಮಗದೊಂದು ಕಡೆ ಕಳೆಗುಂದಿದ್ದ ಸೂರ್ಯಕಾಂತಿ ಪುಷ್ಪ, ಉಗ್ರ ಸೂರ್ಯನ ಪ್ರಖರತೆಗೆ ನಾಚಿನೀರಾಗಿ ಹೋಯ್ತು. ಸೂರ್ಯನ ತೇಜೋಪುಂಜದ ಪ್ರಭಾವಳಿಗೆ ಸೂರ್ಯಕಾಂತಿ ಕೂಡ ಸದ್ದಿಲ್ಲದೆ ಬಂದು ಗೆಲುವಿನ ಹಾರ ಸೇರಿಕೊಂಡಿತ್ತು.

ಸೂರ್ಯಕುಮಾರ್ ಕ್ಯಾಚ್​

ಗೆಲುವಿನ ಹಾರ ಕಟ್ಟುವಲ್ಲಿ ಲಯ ತಪ್ಪಿದ್ದ ರೋಹಿತ್ ಹುಡುಗರನ್ನು ಸುಗ್ಗಿಯ ಸಂಕ್ರಾಂತಿ ಮಾಡುವಂತೆ ಮಾಡಿದ್ದು ಕೂಡ ಸೂರ್ಯನೇ. ಚಿಗರೆಯಂತೆ ಜಿಗಿದು ಸಮಯ ಪ್ರಜ್ಞೆಯಿಂದ ಸೂರ್ಯಕಾಂತಿಯನ್ನು (ಕ್ಯಾಚ್) ಹಿಡಿದು ಅಂದವಾದ ಮಾಲೆಗೆ ಹೊಳಪು ನೀಡಿದ್ರು. ಹೂವಿನ ಮಾಲೆಯ ಅಂದವನ್ನು ಹೆಚ್ಚಿಸಲು ಪಾಂಡ್ಯ ಮತ್ತೆ ಮೂರು (ವಿಕೆಟ್) ಕೆಂಡಸಂಪಿಗೆಯನ್ನು ಸೇರಿಸಿದ್ರು. ಕೊನೆಗೆ ಗೆಲುವಿನ ಮಾಲೆಗೆ ದಾರ ಕೊಟ್ಟಿದ್ದ ಗುರು ರಾಹುಲ್ ದ್ರಾವಿಡ್ ಆಚಾರ್ಯ ಬ್ರಹ್ಮಕಮಲವನ್ನು ಪೋಣಿಸಿ ಫಿನಿಶಿಂಗ್ ಟಚ್ ನೀಡಿಬಿಟ್ಟರು.

ಅಂತಿಮವಾಗಿ ಬಗೆ ಬಗೆಯ ಅಂದ ಚೆಂದದ ಸುಂದರ ಹೂ ಮಾಲೆಯನ್ನು ಚಂಚಲ ಚೆಲುವೆಯ ಕೊರಳಿಗೆ ಟೀಮ್ ಇಂಡಿಯಾ ಹುಡುಗರು ಹಾಕಿ ನಲಿದರು. ವೈಯ್ಯಾರದಿಂದ ಬೀಗುತ್ತಿದ್ದ ಐಸಿಸಿ ಟಿ-20ಯ ಪಟ್ಟದರಸಿಯನ್ನು ಒಲಿಸಿಕೊಂಡಾಗಿನ ಕ್ಷಣ ಇತಿಹಾಸ ಪುಟಗಳಲ್ಲಿ ಶಾಶ್ವತವಾಗಿ ನೆನಪಿನಲ್ಲಿರುತ್ತದೆ.

ಗೆಲುವಿನ ಸಂಭ್ರಮ.. ಸಡಗರ.. ಕಣ್ಣೀರು, ಭಾವುಕ, ಆನಂದಭಾಷ್ಪ, ಉತ್ಸಾಹ, ಉನ್ಮಾದ, ವಿದಾಯ, ಹತಾಶೆ, ಸೋಲು, ಬೇಸರ.. ಅಬ್ಬಾಬ್ಬಾ.. ಬಣ್ಣಿಸಲು ಪದಗಳಿಲ್ಲ

Continue Reading

ಪ್ರಮುಖ ಸುದ್ದಿ

Afghanistan cricket : ನಮಗೂ ಒಂದು ತಂಡ ರಚಿಸಿ ಎಂದು ಐಸಿಸಿಗೆ ಪತ್ರ ಬರೆದ ಅಫಘಾನಿಸ್ತಾನದ ಮಹಿಳಾ ಕ್ರಿಕೆಟಿಗರು

Afghanistan cricket: 2010 ರಲ್ಲಿ ರಚಿಸಲಾದ ಮಹಿಳಾ ತಂಡವನ್ನು ತಾಲಿಬಾನ್ ಅಪಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ 2021 ರಲ್ಲಿ ವಿಸರ್ಜಿಸಿಗ್ತು. ತಾಲಿಬಾನ್ ಆಡಳಿತವು ಮಹಿಳೆಯರು ಯಾವುದೇ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗುವುದನ್ನು ನಿಷೇಧಿಸಿದೆ. ಇದರ ಪರಿಣಾಮವಾಗಿ, ಅಫ್ಘಾನಿಸ್ತಾನವು ರಾಷ್ಟ್ರೀಯ ಮಹಿಳಾ ತಂಡವನ್ನು ಹೊಂದಿಲ್ಲ.

VISTARANEWS.COM


on

Afghanistan cricket
Koo

ಬೆಂಗಳೂರು: ಅಫ್ಘಾನಿಸ್ತಾನದ 17 ಮಹಿಳಾ ಆಟಗಾರರು ಆಸ್ಟ್ರೇಲಿಯಾ ಮೂಲದ ನಿರಾಶ್ರಿತರ ತಂಡವೊಂದನ್ನು (Afghanistan cricket) ರಚಿಸಲು ಸಹಾಯ ಮಾಡುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಗೆ (ICC) ಮನವಿ ಮಾಡಿಎ. 2020ರಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ACB) ಆಟಗಾರ್ತಿಯರಿಗೆ ಗುತ್ತಿಗೆ ನೀಡಿತ್ತು. 2010 ರಲ್ಲಿ ರಚಿಸಲಾದ ಮಹಿಳಾ ತಂಡವನ್ನು ತಾಲಿಬಾನ್ ಅಪಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ 2021 ರಲ್ಲಿ ವಿಸರ್ಜಿಸಿಗ್ತು. ತಾಲಿಬಾನ್ ಆಡಳಿತವು ಮಹಿಳೆಯರು ಯಾವುದೇ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗುವುದನ್ನು ನಿಷೇಧಿಸಿದೆ. ಇದರ ಪರಿಣಾಮವಾಗಿ, ಅಫ್ಘಾನಿಸ್ತಾನವು ರಾಷ್ಟ್ರೀಯ ಮಹಿಳಾ ತಂಡವನ್ನು ಹೊಂದಿಲ್ಲ.

ಆಟಗಾರರು ಈಗ ತಮ್ಮ ವೃತ್ತಿಜೀವನವನ್ನು ಪುನರ್​ಸ್ಥಾಪಿಸಲು ಐಸಿಸಿಯನ್ನು ಸಂಪರ್ಕಿಸಿದ್ದಾರೆ. ಕಳೆದ ವಾರ, ಅವರು ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರಿಗೆ ಪತ್ರ ಬರೆದು ತಮಗೆ ಮಂಡಳಿಯಿಂದ “ಬೆಂಬಲ ಮತ್ತು ಮಾರ್ಗದರ್ಶನ” ನೀಡುವಂತೆ ಮನವಿ ಮಾಡಿದ್ದಾರೆ. ಅಫ್ಘಾನಿಸ್ತಾನದ ಸರ್ಕಾರದ ನೀತಿಗಳಿಂದಾಗಿ ತಮ್ಮನ್ನು ಅಫ್ಘಾನಿಸ್ತಾನ ರಾಷ್ಟ್ರೀಯ ತಂಡ ಎಂದು ಕರೆಯಲು ಅಥವಾ ಎಸಿಬಿ ಬ್ಯಾನರ್ ಅಡಿಯಲ್ಲಿ ಆಡಲು ಸಾಧ್ಯವಿಲ್ಲ ಎಂದು ಆಟಗಾರರು ಪತ್ರದಲ್ಲಿ ಒಪ್ಪಿಕೊಂಡಿದ್ದಾರೆ. ಆದಾಗ್ಯೂ, ಅವರು ಆಡಲು ಬಯಸಿದ್ದು ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಮೂಲದ ಈಸ್ಟ್ ಏಷ್ಯನ್ ಕ್ರಿಕೆಟ್ ಕಚೇರಿಯಿಂದ ನಿರಾಶ್ರಿತರ ತಂಡವಾಗಿ ಆಡಳಿತ ನಡೆಸುವಂತೆ ಕೇಳಿಕೊಂಡಿದ್ದಾರೆ.

“ಕ್ರಿಕೆಟ್ ಆಡುವ ಕನಸು ಕಾಣುವ ಆದರೆ ಅಫ್ಘಾನಿಸ್ತಾನದಲ್ಲಿ ಆಡಲು ಸಾಧ್ಯವಾಗದ ಎಲ್ಲಾ ಅಫ್ಘಾನ್ ಮಹಿಳೆಯರನ್ನು ಪ್ರತಿನಿಧಿಸಲು” ಐಸಿಸಿ ಸಹಾಯ ಮಾಡಬೇಕು ಎಂದು ಆಟಗಾರರು ಮನವಿ ಮಾಡಿದ್ದಾರೆ.

ಐಸಿಸಿಗೆ ಅಫ್ಘಾನಿಸ್ತಾನ ಮಹಿಳಾ ಆಟಗಾರ್ತಿಯರು ಬರೆದ ಪತ್ರದಲ್ಲಿ ಏನಿದೆ?

ಅಫ್ಘಾನಿಸ್ತಾನ ಮಹಿಳಾ ತಂಡದಲ್ಲಿ ಈ ಹಿಂದೆ ಗುತ್ತಿಗೆ ಪಡೆದ ಆಟಗಾರ್ತಿಯರಾದ ನಾವು, ಐಸಿಸಿ ಪುರುಷರ ಟಿ 20 ವಿಶ್ವಕಪ್​ನಲ್ಲಿ ಅಫ್ಘಾನಿಸ್ತಾನದ ಸಾಧನೆಗಳಿಂದ ಹೆಮ್ಮೆಪಡುತ್ತೇವೆ/ ಸೆಮಿಫೈನಲ್ ತಲುಪಿದ ರಶೀದ್ ಖಾನ್ ಮತ್ತು ಅವರ ತಂಡವನ್ನು ಅಭಿನಂದಿಸಲು ಬಯಸುತ್ತೇವೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಮಹಿಳೆಯರಾಗಿರುವ ನಮಗೆ ಪುರುಷ ಕ್ರಿಕೆಟಿಗರಂತೆ ನಮ್ಮ ದೇಶವನ್ನು ಪ್ರತಿನಿಧಿಸಲು ಸಾಧ್ಯವಿಲ್ಲ ಎಂಬುದು ತೀವ್ರ ದುಃಖದ ವಿಷಯ. ಅಫ್ಘಾನ್ ಮಹಿಳೆಯರ ಪ್ರತಿಭೆಯನ್ನು ಜಗತ್ತಿಗೆ ತೋರಿಸಲು ಮತ್ತು ಐಸಿಸಿಯ ನಾಯಕತ್ವ ಮತ್ತು ಆರ್ಥಿಕ ಬೆಂಬಲದ ಮೂಲಕ ಅವಕಾಶ ನೀಡಬೇಕು. ಹಾಗಾದರೆ ಸಾಧಿಸಬಹುದಾದ ಉತ್ತಮ ವಿಜಯಗಳನ್ನು ಸಾಧಿಸಬಹುದ. ಕ್ರಿಕೆಟ್ ಅನ್ನು ಪ್ರೀತಿಸುವ ಹುಡುಗಿಯರು ಮತ್ತು ಮಹಿಳೆಯರನ್ನು ನೇಮಕ ಮಾಡಲು ಮತ್ತು ತರಬೇತಿ ನೀಡುವಂತೆ ನಾವು ಕೋರುತ್ತೇವೆ.

ಇದನ್ನೂ ಓದಿ: IND vs SA : ಭಾರತ ವಿರುದ್ಧ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಪ್ರಕಟ

ನಿರಾಶ್ರಿತರ ತಂಡವನ್ನು ಹೊಂದುವಲ್ಲಿ ನಮ್ಮ ಗುರಿಗಳು ನಮ್ಮ ಪ್ರತಿಭೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಪ್ರದರ್ಶಿಸುವುದು. ಅಫ್ಘಾನಿಸ್ತಾನದಲ್ಲಿ ಉಳಿದಿರುವ ಮಹಿಳೆಯರಿಗೆ ಭರವಸೆ ನೀಡುವುದು ಮತ್ತು ಅಫ್ಘಾನಿಸ್ತಾನದ ಮಹಿಳೆಯರು ಎದುರಿಸುತ್ತಿರುವ ಸವಾಲುಗಳತ್ತ ಗಮನ ಸೆಳೆಯುವುದು ಇದರ ಉದ್ದೇಶ ಎಂದು ಪತ್ರದಲ್ಲಿ ಬರೆಯಲಾಗಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ಅಫ್ಘಾನಿಸ್ತಾನ ಪುರುಷರ ತಂಡದ ಅದ್ಭುತ ಪ್ರದರ್ಶನದ ಕೆಲವೇ ದಿನಗಳ ನಂತರ ಈ ಪತ್ರ ಬಂದಿದೆ. ರಶೀದ್ ಖಾನ್ ಅಂಡ್ ಕೋ ಈ ಸ್ಪರ್ಧೆಯಲ್ಲಿ ಐತಿಹಾಸಿಕ ಅಭಿಯಾನವನ್ನು ಆನಂದಿಸುವ ಮೂಲಕ ಕ್ರಿಕೆಟ್ ಜಗತ್ತನ್ನು ದಿಗ್ಭ್ರಮೆಗೊಳಿಸಿತು. ಅವರು ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶವನ್ನು ಸೋಲಿಸಿ ಸೆಮಿಫೈನಲ್ ಗೆ ಅರ್ಹತೆ ಪಡೆದರು.

Continue Reading
Advertisement
Ms Universal Petite 2024
ಕರ್ನಾಟಕ1 min ago

Ms Universal Petite 2024: ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ಕನ್ನಡತಿ, ಶಿರಸಿ ಮೂಲದ ಡಾ. ಶ್ರುತಿಗೆ ಕಿರೀಟ

Parliament Sessions
ರಾಜಕೀಯ20 mins ago

Parliament Sessions: ಲೋಕಸಭೆಯಲ್ಲಿ ಇಂದು ಮೋದಿ ಭಾಷಣ; ರಾಹುಲ್‌ ಗಾಂಧಿ ಆರೋಪಗಳಿಗೆ ಪ್ರಧಾನಿ ಉತ್ತರವೇನು? ಇಲ್ಲಿದೆ Live

lovers fight hubli
ವೈರಲ್ ನ್ಯೂಸ್23 mins ago

Lovers Fight: ಫೋನ್‌ಗಾಗಿ ಕಿತ್ತಾಡಿದ ಪ್ರೇಮಿಗಳು, ಲವರ್‌ ಬಾಯ್‌ಗೆ ಸಾರ್ವಜನಿಕರ ಗೂಸಾ

Team India stuck in Barbados
ಕ್ರೀಡೆ27 mins ago

Team India stuck in Barbados: ಟೀಮ್​ ಇಂಡಿಯಾ ತವರಿಗೆ ವಾಪಸಾಗುವುದು ಮತ್ತಷ್ಟು ವಿಳಂಬ

Latest38 mins ago

Viral Video: ರಸ್ತೆ ಮೇಲೆಯೇ ಮಹಿಳೆಯ ವಶೀಕರಣ! 4.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಲೂಟಿ

Kalki 2898 AD
ಸಿನಿಮಾ39 mins ago

Kalki 2898 AD: ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದ ʼಕಲ್ಕಿʼ; ಬಿಡುಗಡೆಯಾದ 5ನೇ ದಿನ ಗಳಿಸಿದ್ದು ಬರೋಬ್ಬರಿ 84 ಕೋಟಿ ರೂ.

Anant Ambani
ಫ್ಯಾಷನ್45 mins ago

Anant Ambani: ಅನಂತ್ ಅಂಬಾನಿ ಬಳಿ ಇವೆ 300 ಕೋಟಿಯ ವಾಚ್‌ಗಳು! ಎಂಥೆಂಥ ಗಡಿಯಾರಗಳಿವೆ ನೋಡಿ!

Team India Coach
ಕ್ರೀಡೆ51 mins ago

Team India Coach: ಟೀಮ್​ ಇಂಡಿಯಾ ಕೋಚ್​ ಆಯ್ಕೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಜಯ್‌ ಶಾ

kannada marathi row
ಪ್ರಮುಖ ಸುದ್ದಿ1 hour ago

Kannada- Marathi Row: ಮಹಾರಾಷ್ಟ್ರ ಸದನದಲ್ಲಿ ಕನ್ನಡ ಪರ ದನಿ, ಗಡಿಯಲ್ಲಿ ಮರಾಠಿ ದಬ್ಬಾಳಿಕೆಗೆ ಪ್ರತಿಭಟನೆ

Food for Concentration
ಆರೋಗ್ಯ1 hour ago

Food for Concentration: ಈ ಆಹಾರಗಳ ಸೇವನೆಯಿಂದ ನಿಮ್ಮ ಏಕಾಗ್ರತೆ ಶಕ್ತಿಯೇ ಕುಂಠಿತವಾಗಬಹುದು!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ15 hours ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ2 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು2 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ3 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ3 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ4 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು5 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

ಟ್ರೆಂಡಿಂಗ್‌