Paris Olympics 2024 : ಒಲಿಂಪಿಕ್ಸ್​ನ ಕ್ವಾರ್ಟರ್​ ಫೈನಲ್​ಗೇರಿದ ಭಾರತ ಮಹಿಳೆಯರ ಟೇಬಲ್ ಟೆನಿಸ್​ ತಂಡ - Vistara News

ಕ್ರೀಡೆ

Paris Olympics 2024 : ಒಲಿಂಪಿಕ್ಸ್​ನ ಕ್ವಾರ್ಟರ್​ ಫೈನಲ್​ಗೇರಿದ ಭಾರತ ಮಹಿಳೆಯರ ಟೇಬಲ್ ಟೆನಿಸ್​ ತಂಡ

Paris Olympics 2024 : ಭಾರತ ತಂಡ ಎರಡು ಪಂದ್ಯಗಳನ್ನು ಗೆದ್ದು 2-0 ಮುನ್ನಡೆ ಸಾಧಿಸಿತು. ರೊಮೇನಿಯಾ ಮುಂದಿನ ಎರಡು ಪಂದ್ಯಗಳನ್ನು ಗೆದ್ದಿತು. ಐದನೇ ಪಂದ್ಯದಲ್ಲಿ ಬಾತ್ರಾ 11-5, 11-9, 11-9 ಸೆಟ್ ಗಳಿಂದ ಆದಿನಾ ಡಯಾಕೊನು ಅವರನ್ನು ಸೋಲಿಸಿದರು. ಮಹಿಳಾ ಟೇಬಲ್ ಟೆನಿಸ್ ಕ್ವಾರ್ಟರ್ ಫೈನಲ್​​ನಲ್ಲಿ ಭಾರತ ಯುಎಸ್ಎ ಅಥವಾ ಜರ್ಮನಿಯನ್ನು ಎದುರಿಸಲಿದೆ.

VISTARANEWS.COM


on

Paris Olympics 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ಯಾರಿಸ್: ಭಾರತದ ಮಹಿಳೆಯರ ಟೇಬಲ್​ ಟೆನಿಸ್ ತಂಡ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ (Paris Olympics 2024) ಕ್ವಾರ್ಟರ್​ಫೈನಲ್​ಗೇರಿದೆ. ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರೊಮೇನಿಯಾ ವಿರುದ್ಧ 3-2 ಅಂತರದಲ್ಲಿ ಜಯ ಸಾಧಿಸುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಮುನ್ನಡೆ ಸಾಧಿಸಿದೆ. ಅನುಭವಿ ಆಟಗಾರ್ತಿ ಮಣಿಕಾ ಭಾತ್ರಾ ಭಾರತದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು. ಶ್ರೀಜಾ ಅಕುಲಾ-ಅರ್ಚನಾ ಕಾಮತ್ ಮತ್ತು ಮಣಿಕಾ ಬಾತ್ರಾ ಅವರಿದ್ದ ತಂಡವು ಈ ಸಾಧನೆ ಮಾಡಿದೆ.

ಭಾರತ ತಂಡ ಎರಡು ಪಂದ್ಯಗಳನ್ನು ಗೆದ್ದು 2-0 ಮುನ್ನಡೆ ಸಾಧಿಸಿತು. ರೊಮೇನಿಯಾ ಮುಂದಿನ ಎರಡು ಪಂದ್ಯಗಳನ್ನು ಗೆದ್ದಿತು. ಐದನೇ ಪಂದ್ಯದಲ್ಲಿ ಬಾತ್ರಾ 11-5, 11-9, 11-9 ಸೆಟ್ ಗಳಿಂದ ಆದಿನಾ ಡಯಾಕೊನು ಅವರನ್ನು ಸೋಲಿಸಿದರು. ಮಹಿಳಾ ಟೇಬಲ್ ಟೆನಿಸ್ ಕ್ವಾರ್ಟರ್ ಫೈನಲ್​​ನಲ್ಲಿ ಭಾರತ ಯುಎಸ್ಎ ಅಥವಾ ಜರ್ಮನಿಯನ್ನು ಎದುರಿಸಲಿದೆ.

ಅರ್ಚನಾ ಕಾಮತ್ ಮತ್ತು ಶ್ರೀಜಾ ಅಕುಲಾ ಜೋಡಿ ರೊಮೇನಿಯಾದ ಆದಿನಾ ಡಯಾಕೊನು ಮತ್ತು ಎಲಿಜಾಬೆಟಾ ಸಮರಾ ಅವರನ್ನು ಎದುರಿಸುವುದರೊಂದಿಗೆ ಸ್ಪರ್ಧೆಯು ಭಾರತಕ್ಕೆ ಉತ್ತಮ ಆರಂಭದೊಂದಿಗೆ ಪ್ರಾರಂಭವಾಯಿತು. ಭಾರತದ ಜೋಡಿ 11-9, 12-10, 11-7 ನೇರ ಸೆಟ್​​ ಳಲ್ಲಿ ಪಂದ್ಯವನ್ನು ಗೆದ್ದುಕೊಂಡಿತು. ಈ ಗೆಲುವಿನೊಂದಿಗೆ ಭಾರತ 1-0 ಮುನ್ನಡೆ ಸಾಧಿಸಿತು. ಭಾರತದ ಸ್ಟಾರ್ ಆಟಗಾರ್ತಿ ಮಣಿಕಾ ಬಾತ್ರಾ ರೊಮೇನಿಯಾದ ಬರ್ನಡೆಟ್ ಸ್ಜೋಕ್ಸ್ ವಿರುದ್ಧ ಸೆಣಸಿದರು. ಬಾತ್ರಾ 11-5, 11-7, 11-7 ಅಂತರದಲ್ಲಿ ಗೆಲುವು ಸಾಧಿಸಿದರು. ಅವರ ಉತ್ತಮ ಪ್ರದರ್ಶನವು ಭಾರತದ ಮುನ್ನಡೆಯನ್ನು 2-0 ಕ್ಕೆ ವಿಸ್ತರಿಸಿತು.

ಇದನ್ನೂ ಓದಿ: Rohit Sharma : ಸಿಕ್ಸರ್​ಗಳನ್ನು ಬಾರಿಸುವಲ್ಲಿ ಮತ್ತೊಂದು ದಾಖಲೆ ಸೃಷ್ಟಿಸಿದ ರೋಹಿತ್ ಶರ್ಮಾ

ಅಕುಲಾ ಸಮರಾ ವಿರುದ್ಧದ ಪಂದ್ಯದಲ್ಲಿ 8-11, 11-4, 7-11, 11-6, 11-8 ಅಂತರದಲ್ಲಿ ಸೋಲನುಭವಿಸಿದರು. ರೊಮೇನಿಯಾದ ಈ ಗೆಲುವು ಅವರನ್ನು ಸ್ಪರ್ಧೆಯಲ್ಲಿ ಜಿವಂತವಾಗಿ ಉಳಿಸಿಕೊಳ್ಳಿತು. ಭಾರತದ ಮುನ್ನಡೆಯನ್ನು 2-1 ಕ್ಕೆ ಇಳಿಸಿತು. ರೊಮೇನಿಯಾದ ಸ್ಜೋಕ್ಸ್ 11–5, 8–11, 11–7, 11–9ರಲ್ಲಿ ಕಾಮತ್ ಅವರನ್ನು ಮಣಿಸಿತು. ಈ ಫಲಿತಾಂಶವು ಸ್ಕೋರ್​ಗಳನ್ನು 2-2 ರಲ್ಲಿ ಸಮಗೊಳಿಸಿತ . ಹೀಗಾಗಿ ನಿರ್ಣಾಯಕ ಅಂತಿಮ ಪಂದ್ಯಕ್ಕೆ ವೇದಿಕೆ ಕಲ್ಪಿಸಿತು. ಹಿನ್ನಡೆ ಹೊರತಾಗಿಯೂ, ಭಾರತದ ತಂಡವು ಏಕಾಗ್ರತೆ ಮತ್ತು ದೃಢನಿಶ್ಚಯವನ್ನು ಉಳಿಸಿಕೊಂಡಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

A R Rahman : ಒಲಿಂಪಿಕ್ಸ್ ನಡುವೆಯೇ ವೈರಲ್ ಆಯ್ತು ಎಆರ್​ ರೆಹಮಾನ್ ಸಂಗೀತದ’ ತಾಲ್​ ಸೆ ತಾಲ್​’ ಹಾಡು; ಪ್ರತಿಕ್ರಿಯೆ ನೀಡಿದ ಚಿತ್ರ ನಿರ್ದೇಶಕ

A R Rahman: ತಾಲ್​​ನಂಥ ಹಿಂದಿ ಚಲನಚಿತ್ರ ಥೀಮ್ ಮ್ಯೂಸಿಕ್ ಅಪ್ರತಿಮ ಹಾಗೂ ಇದು ಅಪರೂಪ ಎಂದು ಸುಭಾಷ್ ಸೋಮವಾರ ಟ್ವೀಟ್ ಮಾಡಿದ್ದಾರೆ. ಐಶ್ವರ್ಯಾ ರೈ, ಅಕ್ಷಯ್ ಖನ್ನಾ ಮತ್ತು ಅನಿಲ್ ಕಪೂರ್ ನಟಿಸಿದ 1999ರ ಚಿತ್ರದ ನಿರ್ದೇಶಕ ಸುಭಾಷ್ ಘಾಯ್​​, “ಇದನ್ನು ವರ್ಲ್ಡ್ ಅಕ್ವಾಟಿಕ್ಸ್ ದೋಹಾ 2024ರಲ್ಲಿ ಬಳಸಲಾಗಿದೆ. ಇದು ಯುಎಸ್ಎ ಆರ್ಟಿಸ್ಟಿಕ್ ಈಜು ತಂಡಕ್ಕೆ ಈ ಹಾಡು ಸ್ಫೂರ್ತಿ ನೀಡಿತ್ತು. ಹೀಗಾಗಿ ನಾನು ಧನ್ಯ ಎಲ್ಲರಿಗೂ ಧನ್ಯವಾದಗಳು ಎಂದು ಬರೆದುಒಂಡಿದ್ದಾರೆ.

VISTARANEWS.COM


on

A R Rahman
Koo

ಬೆಂಗಳೂರು: ಎ. ಆರ್​ ರೆಹಮಾನ್ (A R Rahman) ಸಂಗೀತದ ‘ತಾಲ್​ ಸೆ ತಾಲ್​’ ಹಾಡಿಗೆ ಅಮೆರಿಕದ ಈಜುಪಟುಗಳು ಆರ್ಟಿಸ್ಟಿಕ್ ಸ್ವಿಮ್ಮಿಂಗ್​ ಸ್ಪರ್ಧೆಯಲ್ಲಿ ಬಳಸಿರುವ ವಿಡಿಯೊ ಈಗ ವೈರಲ್​ ಆಗಿದೆ. ಆದರೆ ಅದು ಹಳೆಯ ವಿಡಿಯೊ ಎಂಬುದು ಈಗ ಗೊತ್ತಾಗಿದೆ. ಈ ಬಗ್ಗೆ ಸಿನಿಮಾದ ನಿರ್ದೇಶಕ ಸುಭಾಷ್ ಘಾಯ್ ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. 2024ರ ವರ್ಲ್ಡ್ ಅಕ್ವಾಟಿಕ್ಸ್ ದೋಹಾ 2024ರಲ್ಲಿ ಸಿನಿಮಾದ ತಾಲ್ ಸೆ ತಾಲ್​ ಹಾಡನ್ನು ಬಳಸಲಾಗಿದೆ. ಮೂಲ ತಾಲ್ ಹಾಡಿನಲ್ಲಿ ಐಶ್ವರ್ಯಾ ರೈ ನೃತ್ಯ ಮಾಡಿದ್ದರೆ ಅಲ್ಕಾ ಯಾಗ್ನಿಕ್ ಮತ್ತು ಉದಿತ್ ನಾರಾಯಣ್ ಹಾಡಿದ್ದರು.

ತಾಲ್​​ನಂಥ ಹಿಂದಿ ಚಲನಚಿತ್ರ ಥೀಮ್ ಮ್ಯೂಸಿಕ್ ಅಪ್ರತಿಮ ಹಾಗೂ ಇದು ಅಪರೂಪ ಎಂದು ಸುಭಾಷ್ ಸೋಮವಾರ ಟ್ವೀಟ್ ಮಾಡಿದ್ದಾರೆ. ಐಶ್ವರ್ಯಾ ರೈ, ಅಕ್ಷಯ್ ಖನ್ನಾ ಮತ್ತು ಅನಿಲ್ ಕಪೂರ್ ನಟಿಸಿದ 1999ರ ಚಿತ್ರದ ನಿರ್ದೇಶಕ ಸುಭಾಷ್ ಘಾಯ್​​, “ಇದನ್ನು ವರ್ಲ್ಡ್ ಅಕ್ವಾಟಿಕ್ಸ್ ದೋಹಾ 2024ರಲ್ಲಿ ಬಳಸಲಾಗಿದೆ. ಇದು ಯುಎಸ್ಎ ಆರ್ಟಿಸ್ಟಿಕ್ ಈಜು ತಂಡಕ್ಕೆ ಈ ಹಾಡು ಸ್ಫೂರ್ತಿ ನೀಡಿತ್ತು. ಹೀಗಾಗಿ ನಾನು ಧನ್ಯ ಎಲ್ಲರಿಗೂ ಧನ್ಯವಾದಗಳು ಎಂದು ಬರೆದುಒಂಡಿದ್ದಾರೆ.

ವಿಶ್ವ ಅಕ್ವಾಟಿಕ್ಸ್ ಚಾಂಪಿಯನ್ಶಿಪ್ 2024 ಫೆಬ್ರವರಿ 2-18 ರ ನಡುವೆ ದೋಹಾದಲ್ಲಿ ನಡೆಯಿತು, ಹಲವಾರು ಕ್ರೀಡಾಪಟುಗಳು ಪ್ಯಾರಿಸ್ 2024 ಒಲಿಂಪಿಕ್ ಕೋಟಾ ಸ್ಥಾನಗಳನ್ನು ಇಲ್ಲಿ ಪಡೆದುಕೊಂಡಿದ್ದಾರೆ.

ಈಜು ತಂಡ ಪ್ರದರ್ಶನ ವೀಕ್ಷಿಸಿ

ಭಾನುವಾರ ಫ್ಯಾನ್ ಪೇಜ್ ಹಂಚಿಕೊಂಡ ವೀಡಿಯೊದಲ್ಲಿ, ಯುಎಸ್ ಮಹಿಳಾ ಈಜುಗಾರ್ತಿಯರ ಗುಂಪು ತಾಲ್ ಸೆ ತಾಲ್​​​ನ ವಾದ್ಯ ಆವೃತ್ತಿಯನ್ನು ನುಡಿಸುತ್ತಿದ್ದಂತೆ ನೀರೊಳಗಿನ ಅದ್ಭುತ ಸಿಂಕ್ರೊನೈಸೇಶನ್ ಅನ್ನು ಪ್ರದರ್ಶಿಸಿತು. “ತಾಲ್ ಸೆ ತಾಲ್ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೂಕ್ತ. ಎ.ಆರ್.ರೆಹಮಾನ್ ನಿಜವಾಗಿಯೂ ಭಾರತೀಯ ಸಂಗೀತದ ಮುಖ” ಎಂದು ಎಕ್ಸ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

Paris Olympics 2024 : ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಅವ್ಯವಸ್ಥೆ; ಬೀದಿ ಬದಿ ಮಲಗಿ ನಿದ್ದೆ ಮಾಡಿದ ಚಿನ್ನದ ಪದಕ ವಿಜೇತ ಈಜುಪಟು

ಇದು ಎಲ್ಲಾ ಭಾರತೀಯರಿಗೆ ಮತ್ತು ಖಂಡಿತವಾಗಿಯೂ ಭಾರತೀಯ ಸಂಗೀತಕ್ಕೆ ಹೆಮ್ಮೆಯ ಕ್ಷಣ ಎಂದು ಇನ್ನೊಬ್ಬರು ಹೇಳಿದರು. “ಇದು ಹಳೆಯ ವೀಡಿಯೊ, ಆದರೆ ಸುಂದರವಾಗಿದೆ” ಎಂದು ವ್ಯಕ್ತಿಯೊಬ್ಬರು ಹೇಳಿದರು. ಕೆಲವರು ವೀಡಿಯೊದ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಇದು ನಕಲಿ ವೀಡಿಯೊ, ಇದಕ್ಕೆ ಭಾರತೀಯ ಸಂಗೀತವನ್ನು ಸೇರಿಸಲಾಗಿದೆ. ಅದನ್ನು ಸಂಪಾದಿಸಲಾಗಿದೆಯೇ ಹೊರತು ಮೂಲವಲ್ಲ.”

ನಾಟಕ ತಾಲ್ ನಲ್ಲಿ ಐಶ್ವರ್ಯಾ, ಅನಿಲ್, ಅಕ್ಷಯ್ ಮುಖ್ಯ ಪಾತ್ರಗಳಲ್ಲಿ ಮತ್ತು ಅಮರೀಶ್ ಪುರಿ ಮತ್ತು ಅಲೋಕ್ ನಾಥ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ನಂತರ ತಮಿಳಿಗೆ ಡಬ್ ಮಾಡಲಾಯಿತು ಮತ್ತು ಅದಕ್ಕೆ ಥಾಲಂ ಎಂದು ಹೆಸರಿಸಲಾಯಿತು. ತಾಲ್ ಚಿತ್ರಕ್ಕಾಗಿ ಅನಿಲ್, ಎ.ಆರ್.ರೆಹಮಾನ್, ಅಲ್ಕಾ ಯಾಗ್ನಿಕ್ ಮತ್ತು ಆನಂದ್ ಬಕ್ಷಿ ತಲಾ 2000 ರಲ್ಲಿ ಫಿಲ್ಮ್​ಫೇರ್​ ಪ್ರಶಸ್ತಿಯನ್ನು ಪಡೆದರು.

Continue Reading

ಕ್ರೀಡೆ

Paris Olympics 2024 : ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಅವ್ಯವಸ್ಥೆ; ಬೀದಿ ಬದಿ ಮಲಗಿ ನಿದ್ದೆ ಮಾಡಿದ ಚಿನ್ನದ ಪದಕ ವಿಜೇತ ಈಜುಪಟು

Paris Olympics 2024 : ಸೌದಿ ಅರೇಬಿಯಾದ ರೋವರ್ ಹುಸೇನ್ ಅಲಿರೆಜಾ ಹಂಚಿಕೊಂಡಿರುವ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ, ಸೆಕಾನ್ ಉದ್ಯಾನವನದಲ್ಲಿ ಮಲಗಿರುವುದು ಕಂಡುಬಂದಿದೆ. ಇಟಾಲಿಯನ್ ಈಜುಗಾರ ನೆಲದ ಮೇಲೆ ಟವೆಲ್ ಹಾಸಿ ಮಲಗಿದ್ದಾರೆ. ಪುರುಷರ 4×100 ಮೀಟರ್ ಮೆಡ್ಲೆ ರಿಲೇಯಲ್ಲಿ ಕಂಚಿನಪದಕ ಗೆಲ್ಲುವ ಮೊದಲಿನ ಚಿತ್ರವೇ ಎಂಬುದು ಖಾತರಿಯಾಗಿಲ್ಲ. ಒಂದು ವೇಳೆ ಚಿನ್ನದಿಂದ ಕಂಚಿಗೆ ಇಳಿದಿದ್ದರೆ ವ್ಯವಸ್ಥೆಯ ಬಗ್ಗೆ ಆಕ್ಷೇಪ ಉಂಟಾಗುವುದು ಖಾತರಿ.

VISTARANEWS.COM


on

Paris Olympics 2024
Koo

ಬೆಂಗಳೂರು: ಪ್ಯಾರಿಸ್​ ಒಲಿಂಪಿಕ್ (Paris Olympics 2024) ಚಿನ್ನದ ಪದಕ ವಿಜೇತ ಮತ್ತು ಇಟಾಲಿಯನ್ ಈಜುಗಾರ ಥಾಮಸ್ ಸೆಕಾನ್ ಸುದ್ದಿಯಲ್ಲಿದ್ದಾರೆ. ಚಿನ್ನ ಗೆದ್ದು ಸಂಭ್ರಮಿಸಿದ ಖ್ಯಾತಿ ಪಡೆದುಕೊಂಡಿರುವ ಅವರೀಗ ಅನಗತ್ಯ ಕಾರಣವೊಂದಕ್ಕೆ ಸುದ್ದಿಗೆ ಗ್ರಾಸವಾಗಿದ್ದಾರೆ. ಒಲಿಂಪಿಕ್ಸ್​ನ ಕ್ರೀಡಾಗ್ರಾಮದಲ್ಲಿನ ಅವ್ಯವಸ್ಥೆಯನ್ನು ವಿರೋಧಿಸಿ ಅವರು ಉದ್ಯಾನವನದಲ್ಲಿ ನೆಲದ ಮೇಲೆ ಮಲಗಿರುವುದು ಕಂಡುಬಂದಿದೆ. 100 ಮೀಟರ್ ಬ್ಯಾಕ್​ಸ್ಟ್ರೋಕ್​ ಸ್ಪರ್ಧೆಯಲ್ಲಿ ಚಿನ್ನ ಮತ್ತು ಪುರುಷರ 4×100 ಮೀಟರ್ ಫ್ರೀಸ್ಟೈಲ್ ರಿಲೇಯಲ್ಲಿ ಕಂಚು ಗೆಲ್ಲುವ ಮೂಲಕ ಸೆಕಾನ್ ಈ ವರ್ಷ ಕ್ರೀಡಾಕೂಟದಲ್ಲಿ 2 ಪದಕಗಳನ್ನು ಗೆದ್ದಿದ್ದರು. ಆದಾಗ್ಯೂ ಅವರಿಗೆ ಉಳಿದುಕೊಳ್ಳುವುದಕ್ಕೆ ಉತ್ತಮ ವ್ಯವಸ್ಥೆ ಸಿಗದೇ ಸಮಸ್ಯೆ ಎದುರಿಸಿದರು.

ಸೌದಿ ಅರೇಬಿಯಾದ ರೋವರ್ ಹುಸೇನ್ ಅಲಿರೆಜಾ ಹಂಚಿಕೊಂಡಿರುವ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ, ಸೆಕಾನ್ ಉದ್ಯಾನವನದಲ್ಲಿ ಮಲಗಿರುವುದು ಕಂಡುಬಂದಿದೆ. ಇಟಾಲಿಯನ್ ಈಜುಗಾರ ನೆಲದ ಮೇಲೆ ಟವೆಲ್ ಹಾಸಿ ಮಲಗಿದ್ದಾರೆ. ಪುರುಷರ 4×100 ಮೀಟರ್ ಮೆಡ್ಲೆ ರಿಲೇಯಲ್ಲಿ ಕಂಚಿನಪದಕ ಗೆಲ್ಲುವ ಮೊದಲಿನ ಚಿತ್ರವೇ ಎಂಬುದು ಖಾತರಿಯಾಗಿಲ್ಲ. ಒಂದು ವೇಳೆ ಚಿನ್ನದಿಂದ ಕಂಚಿಗೆ ಇಳಿದಿದ್ದರೆ ವ್ಯವಸ್ಥೆಯ ಬಗ್ಗೆ ಆಕ್ಷೇಪ ಉಂಟಾಗುವುದು ಖಾತರಿ.

ಕ್ರೀಡಾ ಗ್ರಾಮದೊಳಗಿನ ಜೀವನ ಪರಿಸ್ಥಿತಿಗಳ ಬಗ್ಗೆ ಸೆಕಾನ್ ದೂರು ನೀಡಿದ್ದರು. ಅಲ್ಲಿ ಹವಾನಿಯಂತ್ರಣವಿಲ್ಲ ಮತ್ತು ಆಹಾರವು ಕೆಟ್ಟದಾಗಿದೆ ಎಂದು ಹೇಳಿದ್ದರು. ಈ ಕಾರಣಕ್ಕಾಗಿ ಅನೇಕ ಕ್ರೀಡಾಪಟುಗಳು ಒಲಿಂಪಿಕ್ಸ್ ಗ್ರಾಮದಿಂದ ಹೊರಹೋಗಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. ಶಾಖ ಮತ್ತು ಶಬ್ದದಿಂದಾಗಿ ಮಧ್ಯಾಹ್ನ ಕಿರು ನಿದ್ದೆ ಮಾಡಲು ಹೆಣಗಾಡುತ್ತಿದ್ದೇನೆ ಎಂದು ಸೆಕಾನ್ ಹೇಳಿದರು.

“ಗ್ರಾಮದಲ್ಲಿ ಹವಾನಿಯಂತ್ರಣ ವ್ಯವಸ್ಥೆಯಿಲ್ಲ , ಆ ಪ್ರದೇಶವಿಡೀ ಬಿಸಿಯಾಗಿದೆ, ಆಹಾರವು ಕೆಟ್ಟದಾಗಿದೆ.” ಎಂದು ಸೆಕಾನ್ ದೂರಿದ್ದರು. ಅನೇಕ ಕ್ರೀಡಾಪಟುಗಳು ಈ ಕಾರಣಕ್ಕಾಗಿ ಹೊರಗೆ ಹೋಗಿದ್ದಾರೆ. ಇದು ಒಂದು ನೆಪವಲ್ಲ, ಇದು ಬಹುಶಃ ಎಲ್ಲರಿಗೂ ತಿಳಿದಿಲ್ಲದ ವಾಸ್ತವವಾಗಿದೆ.” ಎಂದು ಸೆಕಾನ್ ಹೇಳಿದ್ದಾರೆ.

ಇದನ್ನೂ ಓದಿ: Paris Olympics 2024 : ಪದಕದ ಸ್ಪರ್ಧೆಗೆ ಅರ್ಹತೆ ಗಿಟ್ಟಿಸಿದ ಭಾರತದ ಶೂಟಿಂಗ್​ ಸ್ಕೀಟ್ ಮಿಶ್ರ ತಂಡ

“ನಾನು ಫೈನಲ್ ತಲುಪಲಿಲ್ಲ ಎಂದು ನನಗೆ ನಿರಾಶೆಯಾಗಿದೆ. ನಾನು ತುಂಬಾ ದಣಿದಿದ್ದೆ. ರಾತ್ರಿ ಮತ್ತು ಮಧ್ಯಾಹ್ನ ಮಲಗುವುದು ಕಷ್ಟ.” “ಸಾಮಾನ್ಯವಾಗಿ ನಾನು ಮನೆಯಲ್ಲಿದ್ದಾಗ, ನಾನು ಯಾವಾಗಲೂ ಮಧ್ಯಾಹ್ನ ಮಲಗುತ್ತೇನೆ. ಇಲ್ಲಿ ನಾನು ಶಾಖ ಮತ್ತು ಶಬ್ದ ಮಾಲಿನ್ಯದ ನಡುವೆ ನಿಜವಾಗಿಯೂ ಹೆಣಗಾಡುತ್ತೇನೆ” ಎಂದು ಸೆಕೂನ್ ಹೇಳಿದ್ದಾರೆ.

ಸೆಕಾನ್ ಹೊರತುಪಡಿಸಿ, ಕೊಕೊ ಗೌಫ್ ಕೂಡ ಒಲಿಂಪಿಕ್ ಗ್ರಾಮದೊಳಗಿನ ಪರಿಸ್ಥಿತಿಗಳ ಬಗ್ಗೆ ದೂರು ನೀಡಿದ್ದರು. ಗೌಫ್ ಹೊರತುಪಡಿಸಿ ಇಡೀ ಯುಎಸ್ ಟೆನಿಸ್ ತಂಡವು ಬೇರೆಡೆ ಪರ್ಯಾಯ ವಸತಿಗಾಗಿ ಗ್ರಾಮವನ್ನು ತೊರೆದಿತ್ತು. ಪ್ಯಾರಿಸ್ ಒಲಿಂಪಿಕ್ ಗೇಮ್ಸ್ ವಿಲೇಜ್ನಲ್ಲಿ ಸ್ಪರ್ಧಿಸುತ್ತಿರುವ ಕ್ರೀಡಾಪಟುಗಳಿಗೆ ಭಾರತೀಯ ಕ್ರೀಡಾ ಸಚಿವಾಲಯವು 40 ಪೋರ್ಟಬಲ್ ಹವಾನಿಯಂತ್ರಣಗಳನ್ನು ಕಳುಹಿಸಿದೆ.

Continue Reading

ಪ್ರಮುಖ ಸುದ್ದಿ

Paris Olympics 2024 : ಪದಕದ ಸ್ಪರ್ಧೆಗೆ ಅರ್ಹತೆ ಗಿಟ್ಟಿಸಿದ ಭಾರತದ ಶೂಟಿಂಗ್​ ಸ್ಕೀಟ್ ಮಿಶ್ರ ತಂಡ

Paris Olympics 2024 : ಈ ಸ್ಪರ್ಧೆಯಲ್ಲಿ ಮೊದಲ ಮತ್ತು ಎರಡನೇ ಸ್ಥಾನ ಪಡೆದ ನಂತರ ಇಟಲಿ ಮತ್ತು ಅಮೆರಿಕೆ ಚಿನ್ನದ ಪದಕಕ್ಕಾಗಿ ಸ್ಪರ್ಧಿಸಲಿವೆ. ಇಟಲಿ 149 ಅಂಕ ಪಡೆದು ಅಗ್ರಸ್ಥಾನ ಗಿಟ್ಟಿಸಿದರೆ ಅಮೆರಿಕ ಒಂದು ಅಂಕ ಹಿಂದಕ್ಕೆ ಉಳಿಯಿತು. ಭಾರತದ ಪರ ಮಹೇಶ್ವರಿ ಮತ್ತು ಅನಂತ್​ಜೀತ್​​ ಉತ್ತಮ ಫಾರ್ಮ್​ನಲ್ಲಿದ್ದು ಅವರು ಕಂಚಿನ ಪದಕದ ಹಣಾಹಣಿಗೆ ಅರ್ಹತೆ ಪಡೆದುಕೊಂಡರು.

VISTARANEWS.COM


on

Paris Olympics 2024
Koo

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ (Paris Olympics 2024) ಭಾರತದ ಶೂಟಿಂಗ್​ (Olympics Shooting) ಸ್ಕೀಟ್ ಮಿಶ್ರ ತಂಡದ ಸದಸ್ಯರಾದ ಮಹೇಶ್ವರಿ ಚೌಹಾಣ್ ಮತ್ತು ಅನಂತಜೀತ್ ಸಿಂಗ್ ಕಂಚಿನ ಪದಕದ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ. ಸೋಮವಾರ ನಡೆದ ಅರ್ಹತಾ ಸುತ್ತಿನಲ್ಲಿ ಭಾರತದ ಜೋಡಿ 4 ನೇ ಸ್ಥಾನ ಪಡೆಯಿತು. ಚೀನಾದೊಂದಿಗೆ ಅಂಕಗಳ ಸಮಬಲ ಸಾಧಿಸಿದ ಭಾರತ ಅರ್ಹತೆ ಪಡೆದುಕೊಂಡಿತು. ಎರಡೂ ತಂಡಗಳು 146 ಅಂಕಗಳನ್ನು ಗಳಿಸಿದ್ದವು.

ಈ ಸ್ಪರ್ಧೆಯಲ್ಲಿ ಮೊದಲ ಮತ್ತು ಎರಡನೇ ಸ್ಥಾನ ಪಡೆದ ನಂತರ ಇಟಲಿ ಮತ್ತು ಅಮೆರಿಕೆ ಚಿನ್ನದ ಪದಕಕ್ಕಾಗಿ ಸ್ಪರ್ಧಿಸಲಿವೆ. ಇಟಲಿ 149 ಅಂಕ ಪಡೆದು ಅಗ್ರಸ್ಥಾನ ಗಿಟ್ಟಿಸಿದರೆ ಅಮೆರಿಕ ಒಂದು ಅಂಕ ಹಿಂದಕ್ಕೆ ಉಳಿಯಿತು. ಭಾರತದ ಪರ ಮಹೇಶ್ವರಿ ಮತ್ತು ಅನಂತ್​ಜೀತ್​​ ಉತ್ತಮ ಫಾರ್ಮ್​ನಲ್ಲಿದ್ದು ಅವರು ಕಂಚಿನ ಪದಕದ ಹಣಾಹಣಿಗೆ ಅರ್ಹತೆ ಪಡೆದುಕೊಂಡರು.

ಮಹೇಶ್ವರಿ ಮತ್ತು ಅನಂತಜೀತ್ ತಮ್ಮ ಮೊದಲ ಸುತ್ತುಗಳಲ್ಲಿ ಮೊದಲ 4 ಸರಣಿಗಳಲ್ಲಿ ತಪ್ಪುಗಲೇ ಇಲ್ಲದೆ ಪ್ರದರ್ಶನ ನೀಡಿದರು. ಮೊದಲ ಸುತ್ತಿನ ಅಂತಿಮ ಸರಣಿಯಲ್ಲಿ ಮಹೇಶ್ವರಿ ಒಂದು ಶಾಟ್ ತಪ್ಪಿಸಿಕೊಂಡರು. ಆದರೆ ಅನಂತ್ಜೀತ್ ಆವೇಗವನ್ನು ಕಾಯ್ದುಕೊಂಡರು. ಅವರು ಪೂರ್ಣ 29 ಅಂಕಗಳನ್ನು ಗಳಿಸುವ ಮೂಲಕ ತಂಡಕ್ಕೆ 49 ಅಂಕಗಳನ್ನು ತಂದುಕೊಟ್ಟರು.

ಎರಡನೇ ಸುತ್ತಿನಲ್ಲಿ ಮಹೇಶ್ವರಿ ಪರಿಪೂರ್ಣ 25 ಅಂಕಗಳನ್ನು ಗಳಿಸಿದರು. ಅನಂತ್​ಜಿತ್​ ತಮ್ಮ 25 ಶಾಟ್​ಗಳಿಂದ ಕೇವಲ 23 ಅಂಕಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಈ ಸಮಯದಲ್ಲಿ, ಅವರು ಅಗ್ರ ತಂಡಗಳೊಂದಿಗೆ ಸ್ಪರ್ಧಿಸುತ್ತಿದ್ದರು. ಎರಡನೇ ಇಟಾಲಿಯನ್ ತಂಡವಾದ ಮಾರ್ಟಿನಾ ಬಾರ್ಟೊಲೊಮಿ ಮತ್ತು ತಮ್ಮರೊ ಕಸ್ಸಾಂಡ್ರೊ ಅವರ ಸವಾಲು ಎದುರಿಸಿದ್ದರು.

ಇದನ್ನೂ ಓದಿ: Manu Bhaker : ಪ್ಯಾರಿಸ್​ ಒಲಿಂಪಿಕ್ಸ್​​ ಸಮಾರೋಪದಲ್ಲಿ ಮನು ಭಾಕರ್​​ ತ್ರಿವರ್ಣ ಧ್ವಜಧಾರಿ

ಅಂತಿಮ ಸುತ್ತಿನಲ್ಲಿ ಮಹೇಶ್ವರಿ 25 ಅಂಕಗಳನ್ನು ಗಳಿಸಿ ಮೂರು ಸುತ್ತುಗಳನ್ನು ಮುಗಿಸಿದರು. ಅನಂತ್ಜೀತ್ ತಮ್ಮ ಒಂದು ಶಾಟ್ ತಪ್ಪಿಸಿಕೊಂಡರು. ಅವರು 24 ಅಂಕ ಗಳಿಸುವ ಮೂಲಕ ತಂಡ 49 ಅಂಕ ಗಳಿಸಿತು. ಬಾರ್ಟೊಲೊಮಿ ಮತ್ತು ಕಸ್ಸಾಂಡ್ರೊ 144 ಅಂಕಗಳನ್ನು ಗಳಿಸಿದರೆ ಭಾರತದ ಜೋಡಿ 146 ಅಂಕಗಳನ್ನು ಗಳಿಸಿತು.

ಕ್ವಾರ್ಟರ್​ ಫೈನಲ್​ಗೇರಿದ ಭಾರತ ಮಹಿಳೆಯರ ಟೇಬಲ್ ಟೆನಿಸ್​ ತಂಡ

ಪ್ಯಾರಿಸ್: ಭಾರತದ ಮಹಿಳೆಯರ ಟೇಬಲ್​ ಟೆನಿಸ್ ತಂಡ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ (Paris Olympics 2024) ಕ್ವಾರ್ಟರ್​ಫೈನಲ್​ಗೇರಿದೆ. ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರೊಮೇನಿಯಾ ವಿರುದ್ಧ 3-2 ಅಂತರದಲ್ಲಿ ಜಯ ಸಾಧಿಸುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಮುನ್ನಡೆ ಸಾಧಿಸಿದೆ. ಅನುಭವಿ ಆಟಗಾರ್ತಿ ಮಣಿಕಾ ಭಾತ್ರಾ ಭಾರತದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು. ಶ್ರೀಜಾ ಅಕುಲಾ-ಅರ್ಚನಾ ಕಾಮತ್ ಮತ್ತು ಮಣಿಕಾ ಬಾತ್ರಾ ಅವರಿದ್ದ ತಂಡವು ಈ ಸಾಧನೆ ಮಾಡಿದೆ.

ಭಾರತ ತಂಡ ಎರಡು ಪಂದ್ಯಗಳನ್ನು ಗೆದ್ದು 2-0 ಮುನ್ನಡೆ ಸಾಧಿಸಿತು. ರೊಮೇನಿಯಾ ಮುಂದಿನ ಎರಡು ಪಂದ್ಯಗಳನ್ನು ಗೆದ್ದಿತು. ಐದನೇ ಪಂದ್ಯದಲ್ಲಿ ಬಾತ್ರಾ 11-5, 11-9, 11-9 ಸೆಟ್ ಗಳಿಂದ ಆದಿನಾ ಡಯಾಕೊನು ಅವರನ್ನು ಸೋಲಿಸಿದರು. ಮಹಿಳಾ ಟೇಬಲ್ ಟೆನಿಸ್ ಕ್ವಾರ್ಟರ್ ಫೈನಲ್​​ನಲ್ಲಿ ಭಾರತ ಯುಎಸ್ಎ ಅಥವಾ ಜರ್ಮನಿಯನ್ನು ಎದುರಿಸಲಿದೆ.

Continue Reading

ಕ್ರಿಕೆಟ್

Manu Bhaker : ಪ್ಯಾರಿಸ್​ ಒಲಿಂಪಿಕ್ಸ್​​ ಸಮಾರೋಪದಲ್ಲಿ ಮನು ಭಾಕರ್​​ ತ್ರಿವರ್ಣ ಧ್ವಜಧಾರಿ

Manu Bhaker : ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಅವರನ್ನು ಶ್ಲಾಘಿಸಿದ್ದಾರೆ. ಮನು ಕೂಡ ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದು ಜವಾಬ್ದಾರಿ ನೀಡಿರುವುದಕ್ಕೆ ಗೌರವವಿದೆ ಎಂದು ಹೇಳಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ 2024ರ ಸಮಾರೋಪ ಸಮಾರಂಭ ಆಗಸ್ಟ್ 11ರಂದು ನಡೆಯಲಿದೆ. ಒಲಿಂಪಿಕ್ಸ್​​ನಲ್ಲಿ ಎರಡು ಪದಕಗಳನ್ನು ಗೆದ್ದ ಪಿ.ವಿ.ಸಿಂಧು ಮತ್ತು ನಾರ್ಮನ್ ಪ್ರಿಚರ್ಡ್ ಸೇರಿದಂತೆ ಎಲೈಟ್ ಪಟ್ಟಿಗೆ 22 ವರ್ಷದ ಮನು ಸೇರಿದ್ದಾರೆ.

VISTARANEWS.COM


on

Paris Olympics 2024
Koo

ಬೆಂಗಳೂರು: ಶೂಟಿಂಗ್​ನಲ್ಲಿ ಎರಡು ಪದಕಗಳನ್ನು ಗೆದ್ದಿರುವ ಶೂಟರ್ ಮನು ಭಾಕರ್ (Manu Bhaker) 2024 ರ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಭಾರತದ ಧ್ವಜಧಾರಿಯಾಗಿರಲಿದ್ದಾರೆ. ಪ್ಯಾರಿಸ್​​ನಲ್ಲಿ ನಡೆದ ಕ್ರೀಡಾಕೂಟದ ಒಂದೇ ಆವೃತ್ತಿಯಲ್ಲಿ ಎರಡು ಒಲಿಂಪಿಕ್ ಪದಕಗಳನ್ನು ಗೆಲ್ಲುವ ಮೂಲಕ 22 ವರ್ಷದ ಆಟಗಾರ್ತಿ ಇತಿಹಾಸ ನಿರ್ಮಿಸಿದ್ದಾರೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಪದಕಗಳ ಖಾತೆ ತೆರೆದಿದ್ದರು. ಸರಬ್ಜೋತ್ ಸಿಂಗ್ ಅವರೊಂದಿಗೆ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಅವರು ಮತ್ತೊಂದು ಕಂಚಿನ ಪದಕ ಗೆದ್ದಿದ್ದಾರೆ. ಅದೇ ರೀತಿ ಮೂರು ಒಲಿಂಪಿಕ್ ಪದಕಗಳನ್ನು ಗೆದ್ದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಇತಿಹಾಸ ನಿರ್ಮಿಸುವ ಹೊಸ್ತಿಲಲ್ಲಿದ್ದರು. ಆದರೆ ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕೂದಲೆಳೆಯ ಅಂತರದಲ್ಲಿ ವಂಚಿತರಾದರು.

ಭಾರತದ ಒಲಿಂಪಿಕ್ ಅಸೋಸಿಯೇಷನ್​ ಅಧಿಕಾರಿಯೊಬ್ಬರು ಮನು ಭಾಕರ್​ ಭಾರತದ ಧ್ವಜಧಾರಿಯಾಗಿರುವ ಬಗ್ಗೆ ಬಹಿರಂಗಪಡಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಅವರನ್ನು ಶ್ಲಾಘಿಸಿದ್ದಾರೆ. ಮನು ಕೂಡ ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದು ಜವಾಬ್ದಾರಿ ನೀಡಿರುವುದಕ್ಕೆ ಗೌರವವಿದೆ ಎಂದು ಹೇಳಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ 2024ರ ಸಮಾರೋಪ ಸಮಾರಂಭ ಆಗಸ್ಟ್ 11ರಂದು ನಡೆಯಲಿದೆ. ಒಲಿಂಪಿಕ್ಸ್​​ನಲ್ಲಿ ಎರಡು ಪದಕಗಳನ್ನು ಗೆದ್ದ ಪಿ.ವಿ.ಸಿಂಧು ಮತ್ತು ನಾರ್ಮನ್ ಪ್ರಿಚರ್ಡ್ ಸೇರಿದಂತೆ ಎಲೈಟ್ ಪಟ್ಟಿಗೆ 22 ವರ್ಷದ ಮನು ಸೇರಿದ್ದಾರೆ.

ಇದನ್ನೂ ಓದಿ:Graham Thorpe : ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಗ್ರಹಾಂ ಥಾರ್ಪ್ ನಿಧನ

ಮನು ಅವರನ್ನು ಧ್ವಜಧಾರಿಯಾಗಿ ಆಯ್ಕೆ ಮಾಡಲಾಗಿದೆ. ಅವರು ಒಲಿಂಪಿಕ್ಸ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ಮತ್ತು ಗೌರವಕ್ಕೆ ಅರ್ಹರಾಗಿದ್ದಾರೆ” ಎಂದು ಐಒಎ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ತಂಡದಲ್ಲಿ ಎಲ್ಲರೂ ಅರ್ಹರಾಗಿದ್ದಾರೆ. ಆದರೆ ನನ್ನನ್ನು ಕೇಳಿದರೆ ಅದು ನಿಜವಾದ ಗೌರವ ಎಂದು ಅಂದುಕೊಳ್ಳುತ್ತೇನೆ” ಎಂದು ಮನು ಪಿಟಿಐಗೆ ತಿಳಿಸಿದ್ದಾರೆ. ಮನು ಆಗಸ್ಟ್ 6, ಮಂಗಳವಾರ ಭಾರತಕ್ಕೆ ಮರಳಲಿದ್ದು, ತನ್ನ ಎರಡು ಕಂಚಿನ ಪದಕಗಳನ್ನು ಮನೆಗೆ ತರಲಿದ್ದಾರೆ. ಭಾನುವಾರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಅವರು ಅದೇ ವಾರ ಪ್ಯಾರಿಸ್ ಗೆ ಮರಳಲಿದ್ದಾರೆ.

ಟೇಬಲ್ ಟೆನಿಸ್​ ತಂಡ ಕ್ವಾರ್ಟರ್​​ಫೈನಲ್​ಗೆ

ಪ್ಯಾರಿಸ್: ಭಾರತದ ಮಹಿಳೆಯರ ಟೇಬಲ್​ ಟೆನಿಸ್ ತಂಡ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ (Paris Olympics 2024) ಕ್ವಾರ್ಟರ್​ಫೈನಲ್​ಗೇರಿದೆ. ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರೊಮೇನಿಯಾ ವಿರುದ್ಧ 3-2 ಅಂತರದಲ್ಲಿ ಜಯ ಸಾಧಿಸುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಮುನ್ನಡೆ ಸಾಧಿಸಿದೆ. ಅನುಭವಿ ಆಟಗಾರ್ತಿ ಮಣಿಕಾ ಭಾತ್ರಾ ಭಾರತದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು. ಶ್ರೀಜಾ ಅಕುಲಾ-ಅರ್ಚನಾ ಕಾಮತ್ ಮತ್ತು ಮಣಿಕಾ ಬಾತ್ರಾ ಅವರಿದ್ದ ತಂಡವು ಈ ಸಾಧನೆ ಮಾಡಿದೆ.

ಭಾರತ ತಂಡ ಎರಡು ಪಂದ್ಯಗಳನ್ನು ಗೆದ್ದು 2-0 ಮುನ್ನಡೆ ಸಾಧಿಸಿತು. ರೊಮೇನಿಯಾ ಮುಂದಿನ ಎರಡು ಪಂದ್ಯಗಳನ್ನು ಗೆದ್ದಿತು. ಐದನೇ ಪಂದ್ಯದಲ್ಲಿ ಬಾತ್ರಾ 11-5, 11-9, 11-9 ಸೆಟ್ ಗಳಿಂದ ಆದಿನಾ ಡಯಾಕೊನು ಅವರನ್ನು ಸೋಲಿಸಿದರು. ಮಹಿಳಾ ಟೇಬಲ್ ಟೆನಿಸ್ ಕ್ವಾರ್ಟರ್ ಫೈನಲ್​​ನಲ್ಲಿ ಭಾರತ ಯುಎಸ್ಎ ಅಥವಾ ಜರ್ಮನಿಯನ್ನು ಎದುರಿಸಲಿದೆ.

Continue Reading
Advertisement
Viral Video
Latest2 mins ago

Viral Video: ಎಸ್ಕಲೇಟರ್ ಮೇಲೆ ಮಗುವನ್ನು ನಿಲ್ಲಿಸಲು ತಾಯಿಯ ಕಸತ್ತು; ಮುಂದೇನಾಯ್ತು ನೋಡಿ

Martin Trailer
ಸಿನಿಮಾ6 mins ago

Martin Trailer: ಪ್ಯಾನ್‌ ವರ್ಲ್ಸ್‌ ಮಾರ್ಟಿನ್‌ ಸಿನಿಮಾ ಟ್ರೈಲರ್‌ ಔಟ್;‌ ಪಾಕ್‌ನಲ್ಲಿ ಧ್ರುವ ಸರ್ಜಾ ಆ್ಯಕ್ಷನ್‌ಗೆ ಫ್ಯಾನ್ಸ್‌ ಫಿದಾ!

A R Rahman
ಪ್ರಮುಖ ಸುದ್ದಿ8 mins ago

A R Rahman : ಒಲಿಂಪಿಕ್ಸ್ ನಡುವೆಯೇ ವೈರಲ್ ಆಯ್ತು ಎಆರ್​ ರೆಹಮಾನ್ ಸಂಗೀತದ’ ತಾಲ್​ ಸೆ ತಾಲ್​’ ಹಾಡು; ಪ್ರತಿಕ್ರಿಯೆ ನೀಡಿದ ಚಿತ್ರ ನಿರ್ದೇಶಕ

Rescue the injured national bird Peacock at gangavathi
ಕೊಪ್ಪಳ17 mins ago

Koppala News: ವಿದ್ಯುತ್‌ ತಂತಿಗೆ ತಗುಲಿ ಗಾಯಗೊಂಡಿದ್ದ ನವಿಲಿನ ರಕ್ಷಣೆ

Free eye checkup and surgery camp at Hagaribommanahalli
ವಿಜಯನಗರ19 mins ago

Vijayanagara News: ಹಗರಿಬೊಮ್ಮನಹಳ್ಳಿಯಲ್ಲಿ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರ

KAS prelims exam
ಕರ್ನಾಟಕ23 mins ago

KAS Prelims Exam: ಕೆಎಎಸ್‌ ಪೂರ್ವಭಾವಿ ಪರೀಕ್ಷೆ ಮತ್ತೆ ಮುಂದೂಡಿಕೆ; ಆಗಸ್ಟ್‌ 27ಕ್ಕೆ ನಿಗದಿ

Golden Star Ganesh starring Krishnam Pranaya Sakhi movie release on August 15
ಕರ್ನಾಟಕ27 mins ago

Kannada New Movie: ಸೂಪರ್‌ ಹಿಟ್‌ ಹಾಡುಗಳ ʼಕೃಷ್ಣಂ ಪ್ರಣಯ ಸಖಿʼ ಬಿಡುಗಡೆ ಯಾವಾಗ?

Paris Olympics saree fashion
ಫ್ಯಾಷನ್32 mins ago

Paris Olympics Saree Fashion: ಪ್ಯಾರಿಸ್‌ ಒಲಂಪಿಕ್ಸ್‌ನಲ್ಲಿ ವೈವಿಧ್ಯಮಯ ಇಂಡೋ-ವೆಸ್ಟರ್ನ್‌ ಸೀರೆಗಳಲ್ಲಿ ಕಾಣಿಸಿಕೊಂಡ ತಾಪ್ಸಿ ಪನ್ನು!

Beetroot
ಆರೋಗ್ಯ51 mins ago

Beetroot Side Effects: ಬೀಟ್‌ರೂಟ್‌ ಎಲ್ಲರಿಗೂ ಒಳ್ಳೆಯದಲ್ಲ! ಯಾರು ಇದನ್ನು ತಿನ್ನಬಾರದು ಗೊತ್ತೇ?

Woman Harassed
ಕರ್ನಾಟಕ1 hour ago

Woman Harassed: ರಸ್ತೆಯಲ್ಲಿ ಮಹಿಳೆಯನ್ನು ಹಗ್ ಮಾಡಿ ಕಿಸ್ ಕೊಟ್ಟಿದ್ದ ಕಾಮುಕ ಅರೆಸ್ಟ್

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ1 day ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ4 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ4 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ4 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ6 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ6 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ1 week ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ1 week ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌