Rishabh Pant | 16ನೇ ಆವೃತ್ತಿಯ ಐಪಿಎಲ್​ನಿಂದ ರಿಷಭ್​ ಪಂತ್​ ಔಟ್​; ಖಚಿತಪಡಿಸಿದ ಡೆಲ್ಲಿ ಕ್ಯಾಪಿಟಲ್ಸ್‌! - Vistara News

ಕ್ರಿಕೆಟ್

Rishabh Pant | 16ನೇ ಆವೃತ್ತಿಯ ಐಪಿಎಲ್​ನಿಂದ ರಿಷಭ್​ ಪಂತ್​ ಔಟ್​; ಖಚಿತಪಡಿಸಿದ ಡೆಲ್ಲಿ ಕ್ಯಾಪಿಟಲ್ಸ್‌!

16ನೇ ಆವೃತ್ತಿಯ ಐಪಿಎಲ್​ನಿಂದ ರಿಷಭ್​ ಪಂತ್​ ಹೊರಗುಳಿಯುವ ಕಾರಣದಿಂದ ಶೀಘ್ರದಲ್ಲೇ ತಂಡಕ್ಕೆ ನೂತನ ನಾಯಕನನ್ನು ನೇಮಿಸಲಾಗುವುದು ಎಂದು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ತಿಳಿಸಿದೆ.

VISTARANEWS.COM


on

pant and ganguly
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಟೀಮ್​ ಇಂಡಿಯಾ ಆಟಗಾರ ರಿಷಭ್​ ಪಂತ್(Rishabh Pant) 2023ರ ಐಪಿಎಲ್‌ನಿಂದ ಹೊರಗುಳಿಯಲಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ಖಚಿತಪಡಿಸಿದೆ. ಡೆಲ್ಲಿ ಕ್ಯಾಪಿಟಲ್ಸ್‌ನ ಕ್ರಿಕೆಟ್‌ ನಿರ್ದೇಶಕ ಸೌರವ್ ಗಂಗೂಲಿ ಈ ವಿಚಾರವನ್ನು ಖಚಿತಪಡಿಸಿದ್ದಾರೆ.

“ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್​ ಪಂತ್ 16ನೇ ಆವೃತ್ತಿಯ ಐಪಿಎಲ್​ನಿಂದ ಸಂಪೂರ್ಣವಾಗಿ ಹೊರಗುಳಿಯಲಿದ್ದಾರೆ. ಪಂತ್​ ಅಲಭ್ಯದಲ್ಲಿ ತಂಡಕ್ಕೆ ಹೊಸ ನಾಯಕನನ್ನು ಶೀಘ್ರದಲ್ಲೇ ಆಯ್ಕೆ ಮಾಡಲಾಗುವುದು” ಎಂದು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ತಿಳಿಸಿದೆ.

ಈ ಬಗ್ಗೆ ಮಾತನಾಡಿರುವ ಸೌರವ್ ಗಂಗೂಲಿ, “2023ರ ಐಪಿಎಲ್‌ಗೆ ರಿಷಭ್​ ಪಂತ್ ಲಭ್ಯವಿರುವುದಿಲ್ಲ. ನಾನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜತೆ ಸಂಪರ್ಕದಲ್ಲಿದ್ದೇನೆ, ನಾವು ಈ ಬಾರಿ ತಂಡ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ. ಪಂತ್ ಗಾಯಗೊಂಡು ಹೊರಗುಳಿಯುತ್ತಿರುವುದು ತಂಡಕ್ಕೆ ಅಪಾರ ನಷ್ಟ. ಅವರು ಶೀಘ್ರ ಗುಣಮುಖರಾಗಿ ಮತ್ತೆ ಕ್ರಿಕೆಟ್​ ಆಡುವಂತಾಗಲಿ” ಎಂದು ಗಂಗೂಲಿ ತಿಳಿಸಿದ್ದಾರೆ.

ಸದ್ಯ ಪಂತ್​ ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಂತ್​ ಪೂರ್ಣ ಪ್ರಮಾಣದ ಚೇತರಿಕೆಗೆ ಕನಿಷ್ಠ 6-9 ತಿಂಗಳು ಬೇಕಾಗಬಹುದು ಎಂದು ವೈದ್ಯರು ಈಗಾಗಲೇ ತಿಳಿಸಿದ್ದಾರೆ. ಆದ್ದರಿಂದ ಪಂತ್​ ಈ ವರ್ಷ ಕ್ರಿಕೆಟ್​ನಿಂದ ದೂರ ಉಳಿಯುವುದು ಖಚಿತವಾದಂತಿದೆ.

ಇದನ್ನೂ ಓದಿ | Rishabh Pant | ಪಂತ್​ ದಾಖಲಾಗಿರುವ ಕೋಕಿಲಾ ಬೆನ್​ ಆಸ್ಪತ್ರೆಯ ಚಿತ್ರ ಪ್ರಕಟಿಸಿದ ಊರ್ವಶಿಯ ತಾಯಿ; ಕಾನೂನು ಕ್ರಮ ಕೈಗೊಳ್ಳಿ ಎಂದರು ನೆಟ್ಟಿಗರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

MS Dhoni : ಧೋನಿ ಮುಟ್ಟಿದ್ದೆಲ್ಲ ದಾಖಲೆ, ಲಕ್ನೊ ವಿರುದ್ಧವೂ ಮತ್ತೊಂದು ರೆಕಾರ್ಡ್​​

MS Dhoni: ಈ ಮೂಲಕ ಐಪಿಎಲ್ ಇತಿಹಾಸದಲ್ಲಿ 257ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ. ಒಟ್ಟಾರೆಯಾಗಿ, 42 ವರ್ಷದ ಧೋನಿ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಸುಮಾರು 40 ರ ಅದ್ಭುತ ಸರಾಸರಿಯಲ್ಲಿ 5,169 ರನ್ ಗಳಿಸಿದ್ದಾರೆ.

VISTARANEWS.COM


on

MS Dhoni
Koo

ಲಖನೌ: ಐಪಿಎಲ್ 2024 ರ 34 ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ಸಿಎಸ್​ಕೆ ತಂಡ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಕೇವಲ ಒಂಬತ್ತು ಎಸೆತಗಳಲ್ಲಿ ಅಜೇಯ 28 ರನ್ ಗಳಿಸಿದ್ದರು. ಮೊಹ್ಸಿನ್ ಖಾನ್ ಮತ್ತು ಯಶ್ ಠಾಕೂರ್ ಅವರ ಎರಡು ದೊಡ್ಡ ಓವರ್​ಗಳಲ್ಲಿ ಅವರು ಅಬ್ಬರಿಸಿದ್ದರು. ಹೀಗಗಿ ಸಿಎಸ್​ಕೆ 176 ರನ್​ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು. ವಿಶೇಷವೆಂದರೆ, ಎಂಎಸ್ ಧೋನಿ ಲಕ್ನೋದ ಏಕನಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ತಮ್ಮ ಇನಿಂಗ್ಸ್​ ಫಿನಿಶ್ ಮಾಡುವ ಸಮಯದಲ್ಲಿ ಗಮನಾರ್ಹ ಐಪಿಎಲ್ ಬ್ಯಾಟಿಂಗ್ ದಾಖಲೆ ನಿರ್ಮಿಸಿದ್ದರು.

2008 ರಲ್ಲಿ ಐಪಿಎಲ್​​ಗೆ ಪಾದಾರ್ಪಣೆ ಮಾಡಿದ ಎಂಎಸ್ ಧೋನಿ, 2024 ರಲ್ಲಿ ಎಲ್ಎಸ್​ಜಿ ವಿರುದ್ಧ ಒಂಬತ್ತು ಎಸೆತಗಳಲ್ಲಿ 28* ರನ್ ಗಳಿಸುವ ಮೂಲಕ ವಿಕೆಟ್ ಕೀಪರ್-ಬ್ಯಾಟರ್​​ ಆಗಿ ತಮ್ಮ ಪಂದ್ಯಾವಳಿಯ ವೃತ್ತಿಜೀವನದ 5,000 ನೇ ರನ್ ಗಳಿಸಿದರು.

ಈ ಮೂಲಕ ಐಪಿಎಲ್ ಇತಿಹಾಸದಲ್ಲಿ 257ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ. ಒಟ್ಟಾರೆಯಾಗಿ, 42 ವರ್ಷದ ಧೋನಿ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಸುಮಾರು 40 ರ ಅದ್ಭುತ ಸರಾಸರಿಯಲ್ಲಿ 5,169 ರನ್ ಗಳಿಸಿದ್ದಾರೆ.

ಇದಕ್ಕೂ ಮುನ್ನ ಸಿಎಸ್​ಕೆ ಆರಂಭಿಕ ಬ್ಯಾಟರ್​ ಅಜಿಂಕ್ಯ ರಹಾನೆ 36 ರನ್ ಗಳಿಸಿದರು. ಆದರೆ ರಚಿನ್ ರವೀಂದ್ರ, ನಾಯಕ ಋತುರಾಜ್ ಗಾಯಕ್ವಾಡ್ ಮತ್ತು ಶಿವಂ ದುಬೆ ಬೇಗ ಔಟಾದರು. ರವೀಂದ್ರ ಜಡೇಜಾ ಅರ್ಧಶತಕ ಬಾರಿಸಿ ರನ್​ ಗಳಿಸುವ ಜವಾಬ್ದಾರಿ ವಹಿಸಿಕೊಂಡರು. ಸಹ ಆಲ್ರೌಂಡರ್ ಮೊಯಿನ್ ಅಲಿ ಅವರಿಂದ ಹೆಚ್ಚಿನ ಸಹಾಯ ಸಿಕ್ಕಿತು.

ಇದನ್ನೂ ಓದಿ: MS Dhoni : ಸಿಎಸ್​ಕೆ ವಾರ್ಷಿಕೋತ್ಸವದಂದೇ 101 ಮೀಟರ್ ಸಿಕ್ಸರ್ ಬಾರಿಸಿದ ಧೋನಿ!

ಇನ್ನಿಂಗ್ಸ್ ನಲ್ಲಿ ಕೇವಲ ಎರಡು ಓವರ್ ಗಳು ಬಾಕಿ ಇರುವಾಗ ಮೊಯೀನ್ ಅವರನ್ನು ಆಯುಷ್ ಬದೋನಿ ಕ್ಯಾಚ್ ಹಿಡಿದು ಔಟ್ ಮಾಡಿದರು. ಎಂಎಸ್ ಧೋನಿ ಸಿಎಸ್ ಕೆ ತಂಡವನ್ನು 141-6 ರಿಂದ 176 ರನ್ ಗಳಿಗೆ ಮುನ್ನುಗ್ಗಿಸಿದರು.

KL Rahul : ಐಪಿಎಲ್​ನಲ್ಲಿ ಧೋನಿಯ ದಾಖಲೆಯೊಂದನ್ನು ಮುರಿದ ಕೆ. ಎಲ್ ರಾಹುಲ್​

ಲಕ್ನೋ: ಇಲ್ಲಿನ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. 176 ರನ್​ಗಳ ಗುರಿ ಬೆನ್ನತ್ತಿದ ಕೆ. ಎಲ್​ ರಾಹುಲ್ (KL Rahul) 53 ಎಸೆತಗಳಲ್ಲಿ 82 ರನ್ ಸಿಡಿಸಿ ಔಟಾದರು. ಈ ಮೂಲಕ ಐಪಿಎಲ್​ನಲ್ಲಿ ಹೊಸ ದಾಖಲೆ ಮಾಡಿದರು. ಅವರು ಅತಿ ಹೆಚ್ಚು 50+ ರನ್ ಗಳಿಸಿದ ವಿಕೆಟ್ ಕೀಪರ್ ಆಗಿ ಎಂಎಸ್ ಧೋನಿಯ (MS Dhoni) ದಾಖಲೆಯನ್ನು ಮುರಿದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಕೆಎಲ್ ರಾಹುಲ್ ಭರ್ಜರಿ ಅರ್ಧಶತಕ ಬಾರಿಸುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡ ಗೆಲುವಿನ ನಗೆ ಬೀರಿತು. ಎಲ್ಎಸ್​ಜಿ ನಾಯಕ ಆಕ್ರಮಣಕಾರಿ ಇನ್ನಿಂಗ್ಸ್ ಪ್ರಾರಂಭಿಸಿದರು. ಅವರ 82 ರನ್ ಗಳು ಎಲ್​​ಎಸ್​​ಜಿ ಗೆಲುವಿನಲ್ಲಿ ಪ್ರಮುಖ ಅಂಶವಾಗಿದೆ. ರವೀಂದ್ರ ಜಡೇಜಾ ಅವರ ಅದ್ಭುತ ಕ್ಯಾಚ್​ನಿಂದಾಗಿ ಔಟ್ ಆಗುವ ಮೊದಲು ಅವರು 9 ಬೌಂಡರಿಗಳು ಮತ್ತು 3 ಸಿಕ್ಸರ್​ಗಳನ್ನು ಬಾರಿಸಿದ್ದರು.

Continue Reading

ಕ್ರೀಡೆ

IPL 2024 : ಬಿಸಿಸಿಐ ನಿಯಮ ಉಲ್ಲಂಘನೆ; ಋತುರಾಜ್​, ರಾಹುಲ್​ಗೆ ದಂಡ

IPL 2024: ಸಿಎಸ್​ಕೆ ಗಳಿಸಿದ 176 ರನ್​ಗಳ ಗುರಿ ಬೆನ್ನಟ್ಟಿದ ಎಲ್ಎಸ್​ಜಿ 8 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿದೆ. ಆರಂಭಿಕ ಆಟಗಾರರಾದ ಕ್ವಿಂಟನ್ ಡಿ ಕಾಕ್ (54) ಮತ್ತು ಕೆಎಲ್ ರಾಹುಲ್ (82) ಉತ್ತಮ ಜೊತೆಯಾಟದೊಂದಿಗೆ ಅಡಿಪಾಯ ಹಾಕಿದ್ದರು. ನಿಕೋಲಸ್ ಪೂರನ್ ಅಜೇಯ 23* ರನ್ ಗಳಿಸಿ ಗೆಲುವಿಗೆ ಕಾರಣರಾದರು.

VISTARANEWS.COM


on

IPL 2024
Koo

ಲಖನೌ: ಬಿಸಿಸಿಐನ ಕೆಲವು ನಿಯಮಗಳು ಐಪಿಎಲ್​ ಪಂದ್ಯವನ್ನು ನಿಗದಿತ ಸಮಯದಲ್ಲಿ ಮುಗಿಸಲು ಪ್ರೇರಣೆ ನೀಡುತ್ತದೆ. ಆದರೆ, ಪಂದ್ಯದ ಪರಿಸ್ಥಿತಿಯ ಕಾರಣಕ್ಕೆ ನಾಯಕರಿಗೆ ತಮ್ಮ ಪಾಲಿನ ಓವರ್​ಗಳನ್ನು ನಿಗದಿತ ಸಮಯದಲ್ಲಿ ಮುಗಿಸಲು ಸಾಧ್ಯವಾಗುತ್ತಿಲ್ಲ. ಅಂಥವರಿಗೆ ದಂಡ ಶಿಕ್ಷೆ ನೀಡುತ್ತಿದೆ ಬಿಸಿಸಿಐ. ಅಂತೆಯೇ ಇಂಡಿಯನ್ ಪ್ರೀಮಿಯರ್ ಲೀಗ್ 2024 ರ (IPL 2024) 34 ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ ) ನಡುವಿನ ಮುಖಾಮುಖಿಯಲ್ಲೂ ಇದೇ ನಡೆದಿದೆ. ಕನಿಷ್ಠ ಓವರ್ ರೇಟ್​ಗೆ ಸಂಬಂಧಿಸಿದ ಐಪಿಎಲ್​​ನ ನಿಯಮ ಉಲ್ಲಂಘಿಸಿದ್ದಕ್ಕಾಗಿ ಕೆಎಲ್ ರಾಹುಲ್ (ಲಕ್ನೊ ಸೂಪರ್​ ಜೈಂಟ್ಸ್ ನಾಯಕ) ಮತ್ತು ಋತುರಾಜ್ ಗಾಯಕ್ವಾಡ್ (ಚೆನ್ನೈ ಸೂಪರ್ ಕಿಂಗ್ಸ್​ ನಾಯಕ ) ಇಬ್ಬರಿಗೂ ಬಿಸಿಸಿಐ ದಂಡ ವಿಧಿಸಿದೆ.

ಸಿಎಸ್​ಕೆ ಗಳಿಸಿದ 176 ರನ್​ಗಳ ಗುರಿ ಬೆನ್ನಟ್ಟಿದ ಎಲ್ಎಸ್​ಜಿ 8 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿದೆ. ಆರಂಭಿಕ ಆಟಗಾರರಾದ ಕ್ವಿಂಟನ್ ಡಿ ಕಾಕ್ (54) ಮತ್ತು ಕೆಎಲ್ ರಾಹುಲ್ (82) ಉತ್ತಮ ಜೊತೆಯಾಟದೊಂದಿಗೆ ಅಡಿಪಾಯ ಹಾಕಿದ್ದರು. ನಿಕೋಲಸ್ ಪೂರನ್ ಅಜೇಯ 23* ರನ್ ಗಳಿಸಿ ಗೆಲುವಿಗೆ ಕಾರಣರಾದರು.

ಎಲ್ಎಸ್​ಜಿ ಪಂದ್ಯದ ಮೇಲೆ ಪ್ರಾಬಲ್ಯ ಸಾಧಿಸಿದರೂ, ಅವರ ಓವರ್ ರೇಟ್ ಐಪಿಎಲ್​ನ ಸಮಯದ ಮಿತಿಗಿಂತ ಕಡಿಮೆಯಾಗಿತ್ತು. ಅದರ ಪರಿಣಾಮವಾಗಿ, ನಾಯಕ ಕೆಎಲ್ ರಾಹುಲ್​ಗೆ 12 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ. ಇದು ನೀತಿ ಸಂಹಿತೆಯ ಅಡಿಯಲ್ಲಿ ಹಾಲಿ ಆವೃತ್ತಿಯಲ್ಲಿ ರಾಹುಲ್​ಗೆ ಮೊದಲ ದಂಡ.

ಸಿಎಸ್​ಕೆ ಕೂಡ ತಮ್ಮ ಬ್ಯಾಟಿಂಗ್ ಇನ್ನಿಂಗ್ಸ್​ನಲ್ಲಿ ಅಗತ್ಯ ಓವರ್ ರೇಟ್ ಕಾಯ್ದುಕೊಂಡಿದೆ. ನಾಯಕ ಋತುರಾಜ್ ಗಾಯಕ್ವಾಗೂ ಅದೇ (12 ಲಕ್ಷ ರೂ.) ದಂಡ ವಿಧಿಸಲಾಗಿದೆ ಏಕೆಂದರೆ ಇದು ಸಿಎಸ್​ಕೆ ಮೊದಲ ಅಪರಾಧವಾಗಿದೆ.

ಐಪಿಎಲ್ 2024ರಲ್ಲಿ ವೇಗ ಕಾಯ್ದುಕೊಳ್ಳುವುದು

ಬಿಸಿಸಿಐನ ನೀತಿ ಸಂಹಿತೆಯು ಪಂದ್ಯದುದ್ದಕ್ಕೂ ವೇಗ ಆಟಕ್ಕೆ ಒತ್ತು ನೀಡುತ್ತದೆ. ನಿಧಾನಗತಿಯ ಓವರ್ ರೇಟ್ ಆಟದ ಖುಷಿಗೆ ಅಡ್ಡಿಪಡಿಸುತ್ತದೆ. ಅದೇ ರೀತಿ ಎರಡನೇ ಬ್ಯಾಟಿಂಗ್ ಮಾಡುವ ತಂಡಕ್ಕೆ ಅನಾನುಕೂಲತೆಯನ್ನುಂಟು ಮಾಡುತ್ತದೆ. ಈ ದಂಡಗಳು ತಮ್ಮ ತಂಡಗಳು ನಿಗದಿತ ಓವರ್ ರೇಟ್ಗೆ ಬದ್ಧವಾಗಿರುವುದನ್ನು ಖಚಿತಪಡಿಸುತ್ತದೆ.

ಇದನ್ನೂ ಓದಿ: MS Dhoni : ಸಿಎಸ್​ಕೆ ವಾರ್ಷಿಕೋತ್ಸವದಂದೇ 101 ಮೀಟರ್ ಸಿಕ್ಸರ್ ಬಾರಿಸಿದ ಧೋನಿ!

ಐಪಿಎಲ್ ತನ್ನ ರೋಮಾಂಚಕಾರಿ ಫಲಿತಾಂಶಗಳೊಂದಿಗೆ ಮುಂದುವರಿದಿದೆ. ಎಲ್ಎಸ್​ಜಿ ಮತ್ತು ಸಿಎಸ್ಕೆ ಎರಡೂ ಈ ಹಿನ್ನಡೆಯಿಂದ ಪುಟಿದೇಳಲು ಎದುರು ನೋಡುತ್ತಿವೆ. ಆದಾಗ್ಯೂ, ಹೆಚ್ಚಿನ ದಂಡಗಳನ್ನು ತಪ್ಪಿಸಲು ಇಬ್ಬರೂ ನಾಯಕರು ಮುಂದಿನ ಪಂದ್ಯಗಳಲ್ಲಿ ವೇಗವನ್ನು ಕಾಪಾಡಿಕೊಳ್ಳುವ ಬಗ್ಗೆಯೂ ಗಮನ ಹರಿಸಬೇಕಾಗಿದೆ.

Continue Reading

ಪ್ರಮುಖ ಸುದ್ದಿ

MS Dhoni : ಸಿಎಸ್​ಕೆ ವಾರ್ಷಿಕೋತ್ಸವದಂದೇ 101 ಮೀಟರ್ ಸಿಕ್ಸರ್ ಬಾರಿಸಿದ ಧೋನಿ!

MS Dhoni: ಎಲ್ಎಸ್​ಜಿ ವಿರುದ್ಧದ ಪಂದ್ಯದಲ್ಲಿ ಧೋನಿ 9 ಎಸೆತಗಳಲ್ಲಿ 2 ಬೌಂಡರಿ ಮತ್ತು ಅಷ್ಟೇ ಸಿಕ್ಸರ್​ಗಳೊಂದಿಗೆ 28 ರನ್ ಗಳಿಸಿ ಔಟಾಗದೆ ಉಳಿದರು. ಸೂಪರ್ ಕಿಂಗ್ಸ್ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. 18 ನೇ ಓವರ್​ನಲ್ಲಿ ರವಿ ಬಿಷ್ಣೋಯ್ ಮೊಯಿನ್ ಅಲಿಯನ್ನು ಔಟ್ ಮಾಡಿದ ನಂತರ 8 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ 42 ವರ್ಷದ ಧೋನಿ ಪರಿಣಾಮ ಬೀರಿದರು. ಕೆಲವು ಶಕ್ತಿಯುತ ಸ್ಟ್ರೋಕ್​​ಗಳೊಂದಿಗೆ ಇನ್ನಿಂಗ್ಸ್​​ಗೆ ವೇಗ ನೀಡಿದರು.

VISTARANEWS.COM


on

MS Dhoni
Koo

ಲಖನೌ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಲ್ಲಿ ಋತುರಾಜ್ ಗಾಯಕ್ವಾಡ್​ಗೆ ನಾಯಕತ್ವ ಹಸ್ತಾಂತರಿಸಿದಾಗಿನಿಂದ ಎಂಎಸ್ ಧೋನಿ (MS Dhoni) ಸ್ವಾತಂತ್ರ್ಯದಿಂದ ಬ್ಯಾಟಿಂಗ್ ಮಾಡುತ್ತಿದ್ದಾರೆ. ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಏಪ್ರಿಲ್ 19 ರ ಶುಕ್ರವಾರ ಕೆಎಲ್ ರಾಹುಲ್ ಅವರ ಎಲ್ಎಸ್​ಜಿ ವಿರುದ್ಧದ ಪಂದ್ಯದಲ್ಲಿ ಅವರು ಅದ್ಭುತ ಫಾರ್ಮ್​ನಲ್ಲಿದ್ದಂತೆ ಕಂಡರು. ಅವರು 101 ಮೀಟರ್ ಸಿಕ್ಸರ್ ಬಾರಿಸಿ ಪ್ರೇಕ್ಷಕರನ್ನು ರಂಜಿಸಿದರು.

ಇದು ಐಪಿಎಲ್​​ನಲ್ಲಿ ಸಿಎಸ್​ಕೆ ಮತ್ತು ಧೋನಿ ತಂಡದ 16 ನೇ ವಾರ್ಷಿಕೋತ್ಸವವೂ ಆಗಿತ್ತು. ಏಪ್ರಿಲ್ 19, 2008 ರಂದು ಮೊಹಾಲಿಯ ಪಿಸಿಎ ಕ್ರೀಡಾಂಗಣದಲ್ಲಿ ನಡೆದ ತನ್ನ ಮೊದಲ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಸೂಪರ್ ಕಿಂಗ್ಸ್ 33 ರನ್​​ಗಳಿಂ ಸೋಲಿಸಿತು. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಧೋನಿ 2 ರನ್ ಗಳಿಸಿ ಜೇಮ್ಸ್ ಹೋಪ್ಸ್ ಅವರನ್ನು ಮುಂದೆ ಸಿಲುಕಿಸಿದರು.

ಎಲ್ಎಸ್​ಜಿ ವಿರುದ್ಧದ ಪಂದ್ಯದಲ್ಲಿ ಧೋನಿ 9 ಎಸೆತಗಳಲ್ಲಿ 2 ಬೌಂಡರಿ ಮತ್ತು ಅಷ್ಟೇ ಸಿಕ್ಸರ್​ಗಳೊಂದಿಗೆ 28 ರನ್ ಗಳಿಸಿ ಔಟಾಗದೆ ಉಳಿದರು. ಸೂಪರ್ ಕಿಂಗ್ಸ್ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. 18 ನೇ ಓವರ್​ನಲ್ಲಿ ರವಿ ಬಿಷ್ಣೋಯ್ ಮೊಯಿನ್ ಅಲಿಯನ್ನು ಔಟ್ ಮಾಡಿದ ನಂತರ 8 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ 42 ವರ್ಷದ ಧೋನಿ ಪರಿಣಾಮ ಬೀರಿದರು. ಕೆಲವು ಶಕ್ತಿಯುತ ಸ್ಟ್ರೋಕ್​​ಗಳೊಂದಿಗೆ ಇನ್ನಿಂಗ್ಸ್​​ಗೆ ವೇಗ ನೀಡಿದರು.

ಕೊನೆಯ ಓವರ್​ನಲ್ಲಿ ಧೋನಿ ಎಡಗೈ ವೇಗಿ ಮೊಹ್ಸಿನ್ ಖಾನ್ ಅವರ ಮೇಲೆ ದಾಳಿ ನಡೆಸಿದರು. ಡೀಪ್​ ಕವರ್ ಮೂಲಕ ನಾಲ್ಕು ರನ್ ಗಳಿಸಿದರು, ನಂತರ 101 ಮೀಟರ್ ಉದ್ದದ ಬೃಹತ್ ಸಿಕ್ಸರ್ ಬಾರಿಸಿದರು. ಕೊನೆಯ ಓವರ್​ನಲ್ಲಿ ಸಿಎಸ್​ಕೆಗೆ 19 ರನ್ ಗಳಿಸಲು ಅವರು ನೆರವಾದರು.

ಇದನ್ನೂ ಓದಿ: MS Dhoni : ಧೋನಿ ಆಡಲು ಇಳಿದಾಗ ಸ್ಟೇಡಿಯಮ್​ನಲ್ಲಿ ಶಬ್ದ ಮಾಲಿನ್ಯ; ಡಿಕಾಕ್ ಹೆಂಡತಿಯ ಪೋಸ್ಟ್​ ವೈರಲ್​

ಐಪಿಎಲ್​​ನ 20 ನೇ ಓವರ್​ನಲ್ಲಿ ಧೋನಿ ಇದುವರೆಗೆ 65 ಸಿಕ್ಸರ್​ಗಳನ್ನು ಬಾರಿಸಿದ್ದಾರೆ. ಇದು ಅವರು ಎಷ್ಟು ಪ್ರಾಬಲ್ಯ ಮತ್ತು ಕ್ರೂರವಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಪ್ರಸ್ತುತ ನಡೆಯುತ್ತಿರುವ ಟಿ 20 ಲೀಗ್​ನಲ್ಲಿ ಧೋನಿ 5 ಇನ್ನಿಂಗ್ಸ್​​ಗಳಿಂದ 255.88 ಸ್ಟ್ರೈಕ್ ರೇಟ್​​ನಲ್ಲಿ 87 ರನ್ ಗಳಿಸಿದ್ದಾರೆ. ಐಪಿಎಲ್​ನಲ್ಲಿ ವಿಕೆಟ್ ಕೀಪರ್ ಆಗಿ 5000 ರನ್ ಪೂರೈಸಿದ್ದಾರೆ.

Continue Reading

ಪ್ರಮುಖ ಸುದ್ದಿ

MS Dhoni : ಧೋನಿ ಆಡಲು ಇಳಿದಾಗ ಸ್ಟೇಡಿಯಮ್​ನಲ್ಲಿ ಶಬ್ದ ಮಾಲಿನ್ಯ; ಡಿಕಾಕ್ ಹೆಂಡತಿಯ ಪೋಸ್ಟ್​ ವೈರಲ್​

MS Dhoni: ಸಶಾ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ವಾಚ್​​ನ ಚಿತ್ರವನ್ನು ಹಂಚಿಕೊಂಡಿದ್ದು, ತನ್ನ ಸ್ಮಾರ್ಟ್ ವಾಚ್​​ನಲ್ಲಿ ತೋರಿಸಿರುವಂತೆ ಧ್ವನಿ ಮಟ್ಟವು 95 ಡೆಸಿಬಲ್​​ಗಳನ್ನು ದಾಟಿತ್ತು ಎಂದು ಬಹಿರಂಗಪಡಿಸಿದೆ. ಆದಾಗ್ಯೂ, ನಂತರದ ಸಂದೇಶವು ಎಲ್ಲರ ಗಮನ ಸೆಳೆಯಿತು. ಈ ಶಬ್ದದ ಮಟ್ಟದಲ್ಲಿ ಕೇವಲ 10 ನಿಮಿಷಗಳು ಕಳೆದರೆ ತಾತ್ಕಾಲಿಕ ಶ್ರವಣ ದೋಷ ಉಂಟಾಗಬಹುದು ಎಂದು ಸ್ಮಾರ್ಟ್ ವಾಚ್ ಅಲರ್ಟ್​ ನೀಡಿತ್ತು.

VISTARANEWS.COM


on

MS Dhoni
Koo

ಲಖನೌ: ಲಕ್ನೊ ಸೂಪರ್​ ಜೈಂಟ್ಸ್​ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ನಡುವಿನ ಪಂದ್ಯದ (IPL 2024) ವೇಳೆ ಎಂಎಸ್ ಧೋನಿ (MS Dhoni) ಬ್ಯಾಟಿಂಗ್​ಗೆ ಬಂದಾಗ ಲಕ್ನೋದ ಎಕಾನಾ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಅಬ್ಬರ ಏಕಾಏಕಿ ಜಾಸ್ತಿಯಾಗಿತ್ತು . ಅದು ಎಷ್ಟರ ಮಟ್ಟಿಗೆ ಎಂದರೆ ಆ್ಯಪಲ್​ ವಾಚ್​ ಶಬ್ದ ಮಾಲಿನ್ಯ ಮಿತಿಮೀರಿದೆ ಎಂದು ಅಲರ್ಟ್​ ಕೊಡುವ ತನಕ. ಈ ಮಾಹಿತಿಯನ್ನು ಲಕ್ನೊ ತಂಡದ ವಿಕೆಟ್​ ಕೀಪಿಂಗ್ ಬ್ಯಾಟರ್​ ಕ್ವಿಂಟನ್ ಡಿ ಕಾಕ್ ಅವರ ಪತ್ನಿ ಸಶಾ ಅವರು ಏಪ್ರಿಲ್ 19, ಶುಕ್ರವಾರ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರಕಟಿಸಿದ್ದಾರೆ. ಧೋನಿ ಸ್ಟೇಡಿಯಮ್​​ಗೆ ಬ್ಯಾಟಿಂಗ್​ಗಾಗಿ ನಡೆದಾಗ ಕ್ರೀಡಾಂಗಣದಲ್ಲಿದ್ದ ಧ್ವನಿ ಮಟ್ಟವನ್ನು ಬಹಿರಂಗಪಡಿಸಿದ್ದಾರೆ.

ಸಶಾ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ವಾಚ್​​ನ ಚಿತ್ರವನ್ನು ಹಂಚಿಕೊಂಡಿದ್ದು, ತನ್ನ ಸ್ಮಾರ್ಟ್ ವಾಚ್​​ನಲ್ಲಿ ತೋರಿಸಿರುವಂತೆ ಧ್ವನಿ ಮಟ್ಟವು 95 ಡೆಸಿಬಲ್​​ಗಳನ್ನು ದಾಟಿತ್ತು ಎಂದು ಬಹಿರಂಗಪಡಿಸಿದೆ. ಆದಾಗ್ಯೂ, ನಂತರದ ಸಂದೇಶವು ಎಲ್ಲರ ಗಮನ ಸೆಳೆಯಿತು. ಈ ಶಬ್ದದ ಮಟ್ಟದಲ್ಲಿ ಕೇವಲ 10 ನಿಮಿಷಗಳು ಕಳೆದರೆ ತಾತ್ಕಾಲಿಕ ಶ್ರವಣ ದೋಷ ಉಂಟಾಗಬಹುದು ಎಂದು ಸ್ಮಾರ್ಟ್ ವಾಚ್ ಅಲರ್ಟ್​ ನೀಡಿತ್ತು.

ಅಬ್ಬರದ ವಾತಾವರಣ. ಶಬ್ದ ಮಟ್ಟವು 95 ಡೆಸಿಬಲ್ ಗಳನ್ನು ದಾಟಿದೆ. ಈ ಮಟ್ಟದಲ್ಲಿ ಕೇವಲ 10 ನಿಮಿಷಗಳು ತಾತ್ಕಾಲಿಕ ಶ್ರವಣ ನಷ್ಟಕ್ಕೆ ಕಾರಣವಾಗಬಹುದು” ಎಂದು ಸಾಶಾ ಡಿ ಕಾಕ್ ತಮ್ಮ ಸ್ಮಾರ್ಟ್ ವಾಚ್ ನಲ್ಲಿನ ಅಲರ್ಟ್​ ಅನ್ನು ಬಹಿರಂಗ ಮಾಡಿದ್ದಾರ. ಧೋನಿ ಮತ್ತೊಂದು ಸುಂಟರಗಾಳಿ ಸಿಕ್ಸರ್​ಗಳೊಂದಿಗೆ ಏಕಾನಾ ಕ್ರೀಡಾಂಗಣದಲ್ಲಿ ಪ್ರೇಕ್ಷಕರನ್ನು ಸಂಪೂರ್ಣವಾಗಿ ರಂಜಿಸಿದರು.

ಎಲ್ಎಸ್​ಜಿ ಮತ್ತು ಸಿಎಸ್​​ಕೆ ಮುಖಾಮುಖಿಯಲ್ಲಿ ಧೋನಿಯ ಪ್ರದರ್ಶನ ಹೇಗಿತ್ತು?


ಸಿಎಸ್​ಕೆ 17.5 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿತ್ತು. ಧೋನಿ ಕೇವಲ 9 ಎಸೆತಗಳಲ್ಲಿ 28 ರನ್ ಗಳಿಸಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು. ಸಿಎಸ್​ಕೆ ತಂಡ 176 ರನ್​ ಗಳಿಸಲು ನೆರವಾದರು.

ಸಿಎಸ್​ಕೆ ಸ್ಟಾರ್ ಬೌಂಡರಿ ಮೂಲಕ ಇನಿಂಗ್ಸ್ ಆರಂಭಿಸಿದರು. ನಂತರ ಸಿಕ್ಸರ್ ಮೂಲಕ ರಂಜಿಸಿದರು. ಯಶ್ ಠಾಕೂರ್ ಅವರ ಅಂತಿಮ ಓವರ್​ನಲ್ಲಿ ಧೋನಿ ವಿಕೆಟ್​ಗಳ ನಡುವೆ ಓಡುವುದು ಸಹ ಸಂವೇದನಾಶೀಲವಾಗಿತ್ತು. ನಂತರ ಧೋನಿ 101 ಮೀಟರ್ ಸಿಕ್ಸರ್ ಬಾರಿಸಿ ಪ್ರೇಕ್ಷಕರನ್ನು ತಮ್ಮ ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದರು. ಅವರು ತಮ್ಮ ದಿನದ ಕೆಲಸವನ್ನು ಮುಗಿಸಲು ಇನ್ನೂ ಒಂದೆರಡು ಬೌಂಡರಿಗಳನ್ನು ಹೊಡೆಯುತ್ತಿದ್ದರು.

Continue Reading
Advertisement
Modi in Karnataka Here live video of Modi rally in Chikkaballapur
Lok Sabha Election 20244 mins ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Modi in Karnataka today Cm Siddaramaiah asks 11 questions to PM Modi
Lok Sabha Election 20248 mins ago

Modi in Karnataka: ಇಂದು ಕರ್ನಾಟಕಕ್ಕೆ ಮೋದಿ; ಪ್ರಧಾನಿಗೆ 11 ಪ್ರಶ್ನೆ ಕೇಳಿದ ಸಿಎಂ ಸಿದ್ದರಾಮಯ್ಯ

Uttarakaanda Movie bande kaaka rangayana Raghu
ಸ್ಯಾಂಡಲ್ ವುಡ್29 mins ago

Uttarakaanda Movie: ‘ಬಂಡೆ ಕಾಕಾ’ ನಾಗಿ ‘ಉತ್ತರಕಾಂಡ’ದಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಂಗಾಯಣ ರಘು

India Economy
ಪ್ರಮುಖ ಸುದ್ದಿ32 mins ago

Indian Economy : ಭಾರತದ ಆರ್ಥಿಕತೆ ಚೀನಾಕ್ಕಿಂತ ವೇಗವಾಗಿ ಬೆಳೆಯುತ್ತಿದೆ ಎಂದ ಐಎಮ್​ಎಫ್​

ರಾಜಕೀಯ35 mins ago

Neha Murder Case: ನೇಹಾ ಕೊಲೆ ಪ್ರಕರಣ ರಾಜಕೀಯಕ್ಕೆ ಬಳಕೆ; ಕೊಲೆಗಾರನಿಗೆ ಉಗ್ರ ಶಿಕ್ಷೆ ಎಂದ ಸಿದ್ದರಾಮಯ್ಯ

Road Accident in karnataka
ಕೊಡಗು38 mins ago

Road Accident : ಯಮ ರೂಪಿ ಕೆಎಸ್‌ಆರ್‌ಟಿಸಿ ಬಸ್‌ಗೆ ಸ್ಕೂಟರ್‌ ಸವಾರ ಸಾವು, ಬಾಲಕ ಗಂಭೀರ

Gut Health
ಲೈಫ್‌ಸ್ಟೈಲ್52 mins ago

Gut Health: ನಿಮ್ಮ ಕರುಳಿನ ಆರೋಗ್ಯಕ್ಕಾಗಿ ಬೇಸಿಗೆಯಲ್ಲಿ ಈ ಡ್ರಿಂಕ್ಸ್ ಸೇವಿಸಿ

Viral news
ವೈರಲ್ ನ್ಯೂಸ್54 mins ago

Viral news: ಚುನಾವಣೆಗೆ ಮೊದಲೇ 19 ಲಕ್ಷ ಇವಿಎಂ ಕಾಣೆಯಾಗಿದ್ದು ನಿಜವೇ? ಏನಿದರ ಅಸಲಿಯತ್ತು ?

Manjummel Boys ott malayalam to premiere on may
ಮಾಲಿವುಡ್58 mins ago

Manjummel Boys: ಕನ್ನಡದಲ್ಲೂ ಬರಲಿದೆ ʻಮಂಜುಮ್ಮೆಲ್ ಬಾಯ್ಸ್ʼ? ಒಟಿಟಿಗೆ ಯಾವಾಗ?

China Missile
ವಿದೇಶ1 hour ago

China Missile : ಪಾಕಿಸ್ತಾನಕ್ಕೆ ಗುಟ್ಟಾಗಿ ಕ್ಷಿಪಣಿ ಕಳುಹಿಸಿದ ಚೀನಾದ ಎರಡು ಕಂಪನಿಗಳಿಗೆ ಅಮೆರಿಕದ ನಿರ್ಬಂಧ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Modi in Karnataka Here live video of Modi rally in Chikkaballapur
Lok Sabha Election 20244 mins ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ2 hours ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ3 hours ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ9 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ23 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ1 day ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20245 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

ಟ್ರೆಂಡಿಂಗ್‌