ಇಂಡೋ-ಪಾಕ್ ಪಂದ್ಯ ಎಂದರೆ ವಿಶೇಷ ರೋಮಾಂಚನ; ಟಿ20 ವಿಶ್ವಕಪ್​ನಲ್ಲಿ ಹೇಗಿದೆ ಇತ್ತಂಡಗಳ ದಾಖಲೆ? - Vistara News

ಕ್ರಿಕೆಟ್

ಇಂಡೋ-ಪಾಕ್ ಪಂದ್ಯ ಎಂದರೆ ವಿಶೇಷ ರೋಮಾಂಚನ; ಟಿ20 ವಿಶ್ವಕಪ್​ನಲ್ಲಿ ಹೇಗಿದೆ ಇತ್ತಂಡಗಳ ದಾಖಲೆ?

ಉಭಯ ತಂಡಗಳು ಇದುವರೆಗೆ ಟಿ20 ಮಾದರಿಯಲ್ಲಿ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಗರಿಷ್ಠ 9 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

VISTARANEWS.COM


on

india vs pakistan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಎರಡೂ ದೇಶಗಳ ನಡುವಿನ ಹದಗೆಟ್ಟ ಸಂಬಂಧ ಹಾಗೂ ತ್ವೇಷಮಯ ವಾತಾವರಣದ ನಡುವೆ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ(IND vs PAK) ತಂಡಗಳ ವಿಶ್ವಕಪ್‌(india vs pak t20 world cup) ಆಗಿರಲಿ ಇತರ ಯಾವುದೇ ಟೂರ್ನಿಯ ಪಂದ್ಯವಾಗಿರಲಿ ಇದನ್ನು ನೋಡುವುದೇ ಒಂದು ರೋಮಾಂಚನ. ಇತ್ತಂಡಗಳ ಪಂದ್ಯ ಇದೆ ಎಂದರೆ ಸಾಕು ತಿಂಗಳ ಮುಂದೆಯೇ ಅಭಿಮಾನಿಗಳಲ್ಲಿ ಕಾತರ,ಕುತೂಹಲ ಎಲ್ಲವು ಮನೆ ಮಾಡಿರುತ್ತದೆ. ಇದೀಗ ಟಿ20 ವಿಶ್ವಕಪ್​ ಟೂರ್ನಿಯ(T20 World Cup 2024) ವೇಳಾಪಟ್ಟಿ(t20 world cup 2024 schedule) ಪ್ರಕಟಗೊಂಡಿದ್ದು ಬದ್ಧ ಎದುರಾಳಿಗಳು ಜೂನ್​ 9 ರಂದು ಮುಖಾಮುಖಿಯಾಗಲಿದ್ದಾರೆ.

ಭಾರತ ಮತ್ತು ಪಾಕ್​ ಪಂದ್ಯಗಳಲ್ಲಿ ಗೆಲುವಿನ ರೂವಾರಿಗಳು ಕ್ರಿಕೆಟಿನ ದೊಡ್ಡ ಹೀರೋಗಳಾಗಿ ಮೆರೆಯುತ್ತಾರೆ. ಹಾಗೆಯೇ ಕೆಲವು ವಿಲನ್‌ಗಳೂ ಹುಟ್ಟಿ ಕೊಳ್ಳುತ್ತಾರೆ. ಪಾಕಿಸ್ತಾನ ಸೋತರೆ ಅಲ್ಲಿ ಇವರ ಪ್ರತಿಕೃತಿ ದಹನವಾಗಲಿದೆ; ಮನೆಗೆ ಕಲ್ಲು ಬೀಳಲಿದೆ. ಇದರಿಂದ ಬಚಾವಾಗುವುದು ಪಾಕ್‌ ಕ್ರಿಕೆಟಿಗರ ಪಾಲಿಗೆ ಇನ್ನೂ ದೊಡ್ಡ ಸವಾಲು. ಒಟ್ಟಾರೆ ಇತ್ತಂಡಗಳ ಮತ್ತೊಂದು ಕ್ರಿಕೆಟ್ ಯುದಕ್ಕೆ ಜೂನ್​ ತನಕ ಕಾಯಬೇಕು.

ಟಿ20 ಮುಖಾಮುಖಿ

ಉಭಯ ತಂಡಗಳು ಇದುವರೆಗೆ ಟಿ20 ಮಾದರಿಯಲ್ಲಿ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಗರಿಷ್ಠ 9 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಭಾರತಕ್ಕೆ ಇದರಲ್ಲೊಂದು ಸೋಲು 2021ರಲ್ಲಿ ನಡೆದಿದ್ದ ವಿಶ್ವಕಪ್​ನಲ್ಲಿ ಎದುರಾಗಿತ್ತು. ಅದು ಕೂಡ 10 ವಿಕೆಟ್​ ಅಂತರದ ಹೀನಾಯ ಸೋಲಾಗಿತ್ತು.

ನ್ಯೂಯಾರ್ಕ್‌ನಲ್ಲಿ ಪಂದ್ಯ ನಡೆಸಲು ಕಾರಣವೇನು?

ಇತ್ತಂಡಗಳ ನಡುವಣ ಹೈವೋಲ್ಟೇಜ್ ಕದನಕ್ಕೆ ನ್ಯೂಯಾರ್ಕ್(NEW YORK) ಅಣಿಯಾಗಲಿದೆ. ಈ ಪಂದ್ಯಕ್ಕಾಗಿ 34,000 ಆಸನ ಸಾಮರ್ಥ್ಯವುಳ್ಳ ತಾತ್ಕಾಲಿಕ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಈ ಪಂದ್ಯವನ್ನು ನ್ಯೂಯಾರ್ಕ್‌ನಲ್ಲಿಯೇ ನಡೆಸಲು ಕಾರಣವೂ ಕೂಡ ಇದೆ. ಏಕೆಂದರೆ ಈ ಪ್ರದೇಶದಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಪಂದ್ಯ ಇಲ್ಲಿ ನಡೆಸಲಾಗುತ್ತಿದೆ. ಅಲ್ಲದೆ ಭಾರತದ ಬಹುತೇಕ ಲೀಗ್​ ಪಂದ್ಯ ಕೂಡ ಇದೇ ಮೈದಾನದಲ್ಲಿ ನಡೆಯಲಿದೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ; ಬದ್ಧ ಎದುರಾಳಿ ಭಾರತ-ಪಾಕ್​ ಪಂದ್ಯ ಯಾವಾಗ?

ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್‌ 9 ರಂದು ಪಾಕ್​ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ.


ಟೀಮ್​ ಇಂಡಿಯಾದ ವೇಳಾಪಟ್ಟಿ (ಗುಂಪು ಹಂತ)


ಜೂನ್ 5 – ಭಾರತ vs ಐರ್ಲೆಂಡ್, ನ್ಯೂಯಾರ್ಕ್

ಜೂನ್ 9- ಭಾರತ vs ಪಾಕಿಸ್ತಾನ, ನ್ಯೂಯಾರ್ಕ್

ಜೂನ್ 12- ಭಾರತ vs ಯುಎಸ್​ಎ, ನ್ಯೂಯಾರ್ಕ್

ಜೂನ್ 15- ಭಾರತ vs ಕೆನಡಾ, ಫ್ಲೋರಿಡಾ

ಸ್ವರೂಪ ಬದಲು

ಹಿಂದಿನ ಆವೃತ್ತಿಗಳಿಗಿಂತ 2024ರಲ್ಲಿ ನಡೆಯುವ ಟಿ20 ವಿಶ್ವಕಪ್​ ಟೂರ್ನಿ ವಿಭಿನ್ನ ಸ್ವರೂಪವನ್ನು ಹೊಂದಿದೆ. ಸೂಪರ್ 12 ತಂಡಗಳು ಸೇರಿ 20 ತಂಡಗಳನ್ನು ತಲಾ 5 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಿಂದ ಅಗ್ರ 2 ತಂಡಗಳು ಸೂಪರ್ 8ಗೆ ಅರ್ಹತೆ ಪಡೆಯುತ್ತವೆ. ಸೂಪರ್ 8 ತಂಡಗಳನ್ನು ತಲಾ ನಾಲ್ಕರ ಎರಡು ಗುಂಪುಗಳಾಗಿ ವಿಭಜಿಸಲಾಗುತ್ತದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್​ಗೆ ಅರ್ಹತೆ ಪಡೆಯಲಿವೆ. ಬಳಿಕ ಫೈನಲ್ ನಡೆಯಲಿದೆ. 2022ರ ಆವೃತ್ತಿಯಲ್ಲಿ 12 ತಂಡಗಳು ಭಾಗಿಯಾಗಿದ್ದವು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IPL 2024 : ಗುರಿ ಬಿಟ್ಟು ಬೇರೆ ಕಡೆಗೆ ಪ್ರಯಾಣಿಸಿದ ಕೆಕೆಆರ್​ ಆಟಗಾರರಿದ್ದ ವಿಮಾನ!

IPL 2024: ಕೋಲ್ಕತಾ ನೈಟ್ ರೈಡರ್ಸ್ ವಿಮಾನವು ರಾತ್ರಿ 8:50ಕ್ಕೆ ಕೋಲ್ಕೊತಾದ ಬದಲಿಗೆ ಗುವಾಹಟಿಯಲ್ಲಿ ಇಳಿಯುತ್ತಿದ್ದಂತೆ, ತಂಡದ ಮೂಲದಿಂದ ಮಾಹಿತಿ ಹೊರಗೆ ಬಂತು. ಲಕ್ನೋದಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಕೆಕೆಆರ್​​ನ ಚಾರ್ಟರ್ ವಿಮಾನವನ್ನು ಪ್ರತಿಕೂಲ ಹವಾಮಾನದಿಂದಾಗಿ ಗುವಾಹಟಿಗೆ ತಿರುಗಿಸಲಾಗಿದೆ. ವಿಮಾನವು ಪ್ರಸ್ತುತ ಗುವಾಹಟಿ ವಿಮಾನ ನಿಲ್ದಾಣದಲ್ಲಿ ನಿಂತಿದೆ” ಎಂದು ಫ್ರ್ಯಾಂಚೈಸ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

VISTARANEWS.COM


on

IPL 2024: KKR's Flight to Kolkata Unexpectedly Diverted Mid-Air
Koo

ಬೆಂಗಳೂರು: ಲಕ್ನೊ ಸೂಪರ್​ ಜೈಂಟ್ಸ್​ ತಂಡದ ವಿರುದ್ಧದ ಐಪಿಎಲ್​ ಪಂದ್ಯದ (IPL 2024) ಬಳಿಕ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡದ ಆಟಗಾರರು ಲಕ್ನೋದಿಂದ ಕೋಲ್ಕತ್ತಾಗೆ ಪ್ರಯಾಣಿಸುತ್ತಿದ್ದ ಪ್ರಯಾಣವು ಅನಿರೀಕ್ಷಿತವಾಗಿ ಬೇರೆ ಕಡೆಗೆ ಸಾಗಿದ ಪ್ರಸಂಗ ನಡೆದಿದೆ. ಪ್ರತಿಕೂಲ ಹವಾಮಾನದಿಂದಾಗಿ ಅವರು ಸಾಗುತ್ತಿದ್ದ ಚಾರ್ಟರ್ ವಿಮಾನವನ್ನು ಕೋಲ್ಕೊತಾದಲ್ಲಿ ಇಳಿಸಲು ಸಾಧ್ಯವಾಗದ ಕಾರಣ ಗುವಾಹಟಿಗೆ ತಿರುಗಿಸಲಾಗಿತ್ತು. ಈ ವಿಷಯವನ್ನು ಕೋಲ್ಕೊತಾ ನೈಟ್​ ರೈಡರ್ಸ್​ ತಂಡ ಹೇಳಿಕೊಂಡಿದೆ

ಯೋಜನೆಗಳ ಹಠಾತ್ ಬದಲಾವಣೆಯನ್ನು ತಂಡವು ಸೋಮವಾರ ಸಂಜೆ ಇನ್ಸ್ಟಾಗ್ರಾಮ್​ನಲ್ಲಿ ವಿವರಿಸಿತು. ಇದು ಅವರ ಮುಂದಿನ ಪಂದ್ಯಕ್ಕಾಗಿ ಕುತೂಹಲದಿಂದ ಕಾಯುತ್ತಿರುವ ಅಭಿಮಾನಿಗಳಲ್ಲಿ ಹಲವಾರು ಕೌತುಕಗಳನ್ನು ಹುಟ್ಟಿಕೊಳ್ಳುವಂತೆ ಮಾಡಿತು.

ಗುವಾಹಟಿಗೆ ತೆರಳಿದ ಕೆಕೆಆರ್ ಚಾರ್ಟರ್ ವಿಮಾನ

ಕೋಲ್ಕತಾ ನೈಟ್ ರೈಡರ್ಸ್ ವಿಮಾನವು ರಾತ್ರಿ 8:50ಕ್ಕೆ ಕೋಲ್ಕೊತಾದ ಬದಲಿಗೆ ಗುವಾಹಟಿಯಲ್ಲಿ ಇಳಿಯುತ್ತಿದ್ದಂತೆ, ತಂಡದ ಮೂಲದಿಂದ ಮಾಹಿತಿ ಹೊರಗೆ ಬಂತು. ಲಕ್ನೋದಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಕೆಕೆಆರ್​​ನ ಚಾರ್ಟರ್ ವಿಮಾನವನ್ನು ಪ್ರತಿಕೂಲ ಹವಾಮಾನದಿಂದಾಗಿ ಗುವಾಹಟಿಗೆ ತಿರುಗಿಸಲಾಗಿದೆ. ವಿಮಾನವು ಪ್ರಸ್ತುತ ಗುವಾಹಟಿ ವಿಮಾನ ನಿಲ್ದಾಣದಲ್ಲಿ ನಿಂತಿದೆ” ಎಂದು ಫ್ರ್ಯಾಂಚೈಸ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ವಲ್ಪ ಸಮಯದ ನಂತರ, ಕೋಲ್ಕತ್ತಾಗೆ ಮರಳಲು ಎಲ್ಲ ಅವಕಾಶಗಳು ಸಿಕ್ಕಿತು. ಬಳಿಕ ಅವರ ವಿಮಾನ ರಾತ್ರಿ 11:00 ಕ್ಕೆ ಕೋಲ್ಕೊತಾಗೆ ಮರಳಿತಿಉ.

ಎಲ್​ಎಸ್​ಜಿ ವಿರುದ್ಧ ಭರ್ಜರಿ ವಿಜಯ

ಲಕ್ನೋದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡವು ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ತಂಡವನ್ನು 98 ರನ್ಗಳಿಂದ ಸೋಲಿಸಿತ್ತು. ಈ ಗೆಲುವಿನೊಂದಿಗೆ ಕೆಕೆಆರ್ 11 ಪಂದ್ಯಗಳಿಂದ 16 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು ಮತ್ತು ಪ್ಲೇಆಪ್​​ನಲ್ಲಿ ಬಹುತೇಕ ಖಚಿತ ಸ್ಥಾನ ಭದ್ರಪಡಿಸಿತು.

ಗೌತಮ್ ಗಂಭೀರ್ ನಾಯಕತ್ವದಲ್ಲಿ 2014ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಕೆಕೆಆರ್, ಈ ಋತುವಿನಲ್ಲಿ ಎಂಟು ಗೆಲುವುಗಳನ್ನು ಪಡೆದಿದೆ. ಲೀಗ್ ಹಂತದ ಅಗ್ರ ಎರಡು ಸ್ಥಾನಗಳನ್ನು ತಲುಪಲು ಕೇವಲ ಮೂರು ಪಂದ್ಯಗಳು ಬಾಕಿ ಉಳಿದಿವೆ.

ಇದನ್ನೂ ಓದಿ: T20 World Cup : ಕೊಹ್ಲಿಯನ್ನು ಎದುರಿಸಲು ಪ್ಲ್ಯಾನ್​ ರೆಡಿ ಇದೆ ಎಂದ ಬಾಬರ್ ಅಜಮ್​

ಮೇ 11 ರಂದು ಈಡನ್ ಗಾರ್ಡನ್ಸ್​ನಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಮುಂದಿನ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇದು ಋತುವಿನ ಕೊನೆಯ ತವರು ಪಂದ್ಯವಾಗಿದೆ. ಅಲ್ಲಿ ಅವರು ತಮ್ಮ ಏಳು ತವರು ಪಂದ್ಯಗಳಲ್ಲಿ ಐದರಲ್ಲಿ ಗೆದ್ದ ನಂತರ ತಮ್ಮ ಪ್ರಾಬಲ್ಯ ಗಟ್ಟಿಗೊಳಿಸುವ ಗುರಿಯನ್ನು ಹೊಂದಿದ್ದಾರೆ.

ಕಳೆದ ತಿಂಗಳು ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ ಸೋಲುಗಳು ಈಡನ್ ಗಾರ್ಡನ್ಸ್ನಲ್ಲಿ ಅವರ ದಾಖಲೆಯಲ್ಲಿ ಏಕೈಕ ಕಳಂಕವಾಗಿದೆ.

ಮುಂಬೈ ನಂತರ, ನೈಟ್ ರೈಡರ್ಸ್ ಅಹಮದಾಬಾದ್ಗೆ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ, ನಂತರ ಗುವಾಹಟಿಯ ಬರ್ಸಪಾರಾ ಕ್ರೀಡಾಂಗಣದಲ್ಲಿ ರಾಜಸ್ಥಾನ ವಿರುದ್ಧ ಲೀಗ್ ಹಂತದ ಫೈನಲ್ ಪಂದ್ಯ ನಡೆಯಲಿದೆ.

Continue Reading

ಕ್ರೀಡೆ

T20 World Cup : ಕೊಹ್ಲಿಯನ್ನು ಎದುರಿಸಲು ಪ್ಲ್ಯಾನ್​ ರೆಡಿ ಇದೆ ಎಂದ ಬಾಬರ್ ಅಜಮ್​

T20 World Cup: ಪಾಕಿಸ್ತಾನ ವಿರುದ್ಧ 16 ಏಕದಿನ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 52.15ರ ಸರಾಸರಿಯಲ್ಲಿ 678 ರನ್ ಗಳಿಸಿದ್ದಾರೆ. ಟಿ20ಐನಲ್ಲಿ ಪಾಕಿಸ್ತಾನ ವಿರುದ್ಧ ಕೊಹ್ಲಿಯ ಪ್ರಾಬಲ್ಯವು ಪರಿಣಾಮಕಾರಿಯಾಗಿದೆ. ಅವರು 10 ಪಂದ್ಯಗಳಲ್ಲಿ 81.33 ಸರಾಸರಿಯಲ್ಲಿ 488 ರನ್ ಗಳಿಸಿದ್ದಾರೆ ಮತ್ತು ಐದು ಅರ್ಧಶತಕಗಳೊಂದಿಗೆ 123.85 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

VISTARANEWS.COM


on

t20 world cup
Koo

ಬೆಂಗಳೂರು: ಆಧುನಿಕ ಯುಗದ ಶ್ರೇಷ್ಠ ಬ್ಯಾಟರ್​ಗಳಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ ಯಾವಾಗಲೂ ಪಾಕಿಸ್ತಾನ ವಿರುದ್ಧ ಅದ್ಭುತ ಪ್ರದರ್ಶನ ನೀಡುತ್ತಾರೆ. ಹೀಗಾಗಿ ಅವರಿಗಾಗಿ ವಿಶೇಷ ರಣ ತಂತ್ರ ರೂಪಿಸುತ್ತಿದ್ದಾರೆ. ಕೊಹ್ಲಿ ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ ಇನ್ನೂ ಟೆಸ್ಟ್ ಪಂದ್ಯಗಳನ್ನು ಆಡಿಲ್ಲ. ಆದರೆ, ವೈಟ್-ಬಾಲ್ ಸ್ವರೂಪಗಳಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. ಹಾಗೆಯೇ ಮುಂದಿನ ಟಿ20 ವಿಶ್ವ ಕಪ್​ನಲ್ಲಿಯೂ (T20 World Cup) ಪಾರಮ್ಯ ಸಾಧಿಸುವ ಯೋಜನೆ ಹೊಂದಿದ್ದಾರೆ.

ಪಾಕಿಸ್ತಾನ ವಿರುದ್ಧ 16 ಏಕದಿನ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 52.15ರ ಸರಾಸರಿಯಲ್ಲಿ 678 ರನ್ ಗಳಿಸಿದ್ದಾರೆ. ಟಿ20ಐನಲ್ಲಿ ಪಾಕಿಸ್ತಾನ ವಿರುದ್ಧ ಕೊಹ್ಲಿಯ ಪ್ರಾಬಲ್ಯವು ಪರಿಣಾಮಕಾರಿಯಾಗಿದೆ. ಅವರು 10 ಪಂದ್ಯಗಳಲ್ಲಿ 81.33 ಸರಾಸರಿಯಲ್ಲಿ 488 ರನ್ ಗಳಿಸಿದ್ದಾರೆ ಮತ್ತು ಐದು ಅರ್ಧಶತಕಗಳೊಂದಿಗೆ 123.85 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಜೂನ್ 9 ರಂದು ನ್ಯೂಯಾರ್ಕ್​ನಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ 20 ವಿಶ್ವಕಪ್ 2024 ರಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿದ್ದು, ಮತ್ತೊಮ್ಮೆ ತಂಡಕ್ಕಾಗಿ ಪ್ರದರ್ಶನ ನೀಡುವ ಜವಾಬ್ದಾರಿ ಕೊಹ್ಲಿ ಹೆಗಲ ಮೇಲಿದೆ. ಇದು ಪಾಕಿಸ್ತಾನ ತಂಡದ ಚಿಂತೆಯನ್ನು ಹೆಚ್ಚಳ ಮಾಡಿದೆ. ಆದರೆ, ವಿರಾಟ್​ ತಮಗೆ ಏನೂ ಆಗಿಲ್ಲ ಎಂಬುದಾಗಿ ಹೇಳಿದ್ದಾರೆ. ಜತೆಗೆ ಕೊಹ್ಲಿಗಾಗಿ ರಣ ತಂತ್ರ ರೆಡಿಯಾಗಿದೆ ಎಂಬುದಾಗಿಯೂ ನುಡಿದಿದ್ದಾರೆ.

ಎಲ್ಲರಿಗೂ ಇದೆ ಯೋಜನೆ

ಒಂದು ತಂಡವಾಗಿ ನೀವು ಯಾವಾಗಲೂ ವಿಭಿನ್ನ ತಂಡಗಳ ವಿರುದ್ಧ ಮತ್ತು ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಯೋಜಿಸುತ್ತೀರಿ. ನಾವು ಕೇವಲ ಒಬ್ಬ ಆಟಗಾರನ ವಿರುದ್ಧ ಏನನ್ನೂ ಯೋಜಿಸುವುದಿಲ್ಲ. ನಾವು ಎಲ್ಲಾ 11 ಆಟಗಾರರಿಗಾಗಿ ಯೋಜಿಸಿದ್ದೇವೆ. ನ್ಯೂಯಾರ್ಕ್​​ನ ಪರಿಸ್ಥಿತಿಗಳ ಬಗ್ಗೆ ನಮಗೆ ಹೆಚ್ಚು ತಿಳಿದಿಲ್ಲ ನಾವು ಅದಕ್ಕೆ ಅನುಗುಣವಾಗಿ ಯೋಜಿಸುತ್ತೇವೆ. ವಿರಾಟ್ ಕೊಹ್ಲಿ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ನಾವು ಅವರ ವಿರುದ್ಧವೂ ಯೋಜನೆಗಳನ್ನು ಇಟ್ಟುಕೊಂಡಿದ್ದೇವೆ ಎಂದು ಐರ್ಲೆಂಡ್ ಪ್ರವಾಸಕ್ಕೆ ಮುಂಚಿತವಾಗಿ ಪತ್ರಿಕಾಗೋಷ್ಠಿಯಲ್ಲಿ ಬಾಬರ್ ಹೇಳಿದರು.

ಇದನ್ನೂ ಓದಿ: T20 World Cup : ಬುಮ್ರಾಗೆ ವಿಶ್ರಾಂತಿ ನೀಡಲು ನಿರಾಕರಿಸಿದ ಮುಂಬೈ ಇಂಡಿಯನ್ಸ್​; ವಿಶ್ವ ಕಪ್​ ಆಡಲು ಸಮಸ್ಯೆ

ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ 2022 ರ ಆವೃತ್ತಿಯ ಟಿ 20 ವಿಶ್ವಕಪ್​ನ್ಲಲಿ ಪಾಕಿಸ್ತಾನ ವಿರುದ್ಧ ಭಾರತದ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಮುಂಚೂಣಿ ಪಾತ್ರ ವಹಿಸಿದ್ದರು. 160 ರನ್​ಗಳ ಗುರಿ ಬೆನ್ನತ್ತಿದ ಮೆನ್ ಇನ್ ಬ್ಲೂ ತಂಡ 6.1 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 31 ರನ್ ಗಳಿಸಿತು. ಒತ್ತಡದ ಪರಿಸ್ಥಿತಿಯ ನಡುವೆ, ಕೊಹ್ಲಿ 53 ಎಸೆತಗಳಲ್ಲಿ 82* ರನ್ ಗಳಿಸಿದ್ದರು. ಮತ್ತು ಹಾರ್ದಿಕ್ ಪಾಂಡ್ಯ (37 ಎಸೆತಗಳಲ್ಲಿ 40 ರನ್) ಅವರೊಂದಿಗೆ 113 ರನ್​ಗಳ ಜೊತೆಯಾಟವನ್ನು ಹಂಚಿಕೊಂಡಿದ್ದರು.

Continue Reading

ಪ್ರಮುಖ ಸುದ್ದಿ

T20 World Cup : ಬುಮ್ರಾಗೆ ವಿಶ್ರಾಂತಿ ನೀಡಲು ನಿರಾಕರಿಸಿದ ಮುಂಬೈ ಇಂಡಿಯನ್ಸ್​; ವಿಶ್ವ ಕಪ್​ ಆಡಲು ಸಮಸ್ಯೆ

T20 World Cup: ವಾಂಖೆಡೆ ಕ್ರೀಡಾಂಗಣದಲ್ಲಿ ಎಸ್ಆರ್​ಎಚ್​​ ವಿರುದ್ಧ ಮುಂಬೈ ಇಂಡಿಯನ್ಸ್ ಗೆಲುವಿನ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಕೋಚ್​​ ಪೊಲಾರ್ಡ್, ಮುಂಬರುವ ಟಿ 20 ವಿಶ್ವಕಪ್​ಗೆ ಮುಂಚಿತವಾಗಿ ಬುಮ್ರಾಗೆ ವಿಶ್ರಾಂತಿ ನೀಡುವ ಬಗ್ಗೆ ಯಾವುದೇ ಚರ್ಚೆಯ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದರು. ಐಪಿಎಲ್ ಸೀಸನ್ ಮೇ 26 ರಂದು ಕೊನೆಗೊಳ್ಳಲಿದ್ದು, ಟಿ 20 ವಿಶ್ವಕಪ್ 2024 ಜೂನ್ 1 ರಂದು ಯುಎಸ್ಎ ಮತ್ತು ವೆಸ್ಟ್ ಇಂಡೀಸ್​​ನಲ್ಲಿ ಪ್ರಾರಂಭವಾಗಲಿದೆ.

VISTARANEWS.COM


on

T20 world Cup
Koo

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2024 ರ (T20 World Cup) ಉಳಿದ ಭಾಗಕ್ಕೆ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಅವರಿಗೆ ವಿಶ್ರಾಂತಿ ನೀಡಲಾಗುವುದಿಲ್ಲ ಎಂದು ಮುಂಬೈ ಇಂಡಿಯನ್ಸ್ (Mumbai Indian’s) ಬ್ಯಾಟಿಂಗ್ ಕೋಚ್ ಕೀರನ್ ಪೊಲಾರ್ಡ್ ಸೋಮವಾರ (ಮೇ 6) ಸುಳಿವು ನೀಡಿದ್ದಾರೆ. ಈ ಮೂಲಕ ಅವರು ಮುಂಬರುವ ವಿಶ್ವ ಕಪ್​​ಗೆ ತಯಾರಿ ನಡೆಸುವ ಉದ್ದೇಶದಿಂದ ಬುಮ್ರಾ ಅವರನ್ನು ಮುಂದಿನ ಪಂದ್ಯಗಳಿಗೆ ಆಡಿಸುವುದಿಲ್ಲ ಎಂಬ ಹೇಳಿಕೆಗಳನ್ನು ಅಲ್ಲಗೆಳೆದಿದ್ದಾರೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಎಸ್ಆರ್​ಎಚ್​​ ವಿರುದ್ಧ ಮುಂಬೈ ಇಂಡಿಯನ್ಸ್ ಗೆಲುವಿನ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಕೋಚ್​​ ಪೊಲಾರ್ಡ್, ಮುಂಬರುವ ಟಿ 20 ವಿಶ್ವಕಪ್​ಗೆ ಮುಂಚಿತವಾಗಿ ಬುಮ್ರಾಗೆ ವಿಶ್ರಾಂತಿ ನೀಡುವ ಬಗ್ಗೆ ಯಾವುದೇ ಚರ್ಚೆಯ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದರು. ಐಪಿಎಲ್ ಸೀಸನ್ ಮೇ 26 ರಂದು ಕೊನೆಗೊಳ್ಳಲಿದ್ದು, ಟಿ 20 ವಿಶ್ವಕಪ್ 2024 ಜೂನ್ 1 ರಂದು ಯುಎಸ್ಎ ಮತ್ತು ವೆಸ್ಟ್ ಇಂಡೀಸ್​​ನಲ್ಲಿ ಪ್ರಾರಂಭವಾಗಲಿದೆ. ಹೀಗಾಗಿ ವಿಶ್ವ ಕಪ್ ತಂಡಕ್ಕೆ ಆಯ್ಕೆಯಾಗಿರುವ ಆಟಗಾರರಿಗೆ ಫ್ರಾಂಚೈಸಿಗಳು ವಿಶ್ರಾಂತಿ ನೀಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ. ಆದರೆ, ಫ್ರಾಂಚೈಸಿಗಳು ಅಕ್ಕೆ ಒಪ್ಪಿಗೆ ನೀಡುತ್ತಿಲ್ಲ.

ಮುಂಬೈ ಇಂಡಿಯನ್ಸ್ ಆಡಿರುವ 12 ಪಂದ್ಯಗಳಲ್ಲಿ 8ರಲ್ಲಿ ಸೋತು ಐಪಿಎಲ್ 2024ರ ಪ್ಲೇಆಫ್ ರೇಸ್​ನಿಂದ ಹೊರಬಿದ್ದಿದೆ. ಅವರು ತಮ್ಮ ಉಳಿದ ಎರಡು ಪಂದ್ಯಗಳನ್ನು ಗೆಲ್ಲಬೇಕಾಗಿದೆ ಮತ್ತು ಅಂತಿಮ ನಾಲ್ಕು ಹಂತಕ್ಕೆ ಪ್ರವೇಶಿಸಲು ಇತರ ತಂಡಗಳ ಫಲಿತಾಂಶವನ್ನು ಅವಲಂಬಿಸಬೇಕಾಗಿದೆ.

ಇದನ್ನೂ ಓದಿ: MS Dhoni : ಮಹೇಂದ್ರ ಸಿಂಗ್​ ಧೋನಿಗೆ ಗಾಯ, ಆಂತರಿಕ ಮಾಹಿತಿ ಬಹಿರಂಗ

ಇಲ್ಲ ನಮ್ಮ ಬಳಿ ಯೋಜನೆ ಇಲ್ಲ

ಮುಂಬರುವ ಟಿ 20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಮುಂಬೈನ ಕೊನೆಯ ಎರಡು ಪಂದ್ಯಗಳಿಂದ ಬುಮ್ರಾಗೆ ವಿಶ್ರಾಂತಿ ನೀಡುವ ಯಾವುದೇ ಯೋಜನೆಗಳಿವೆಯೇ ಎಂದು ಕೇಳಿದಾಗ ನಾನು ಖಂಡಿತವಾಗಿಯೂ ಅದರ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಪೊಲಾರ್ಡ್ ಸುದ್ದಿಗಾರರಿಗೆ ತಿಳಿಸಿದರು.

ಅದು ನನ್ನ ಪಾತ್ರ ಮತ್ತು ಕಾರ್ಯ ಎಂದು ನಾನು ಭಾವಿಸುವುದಿಲ್ಲ. ಆದರೆ ಏನಾಗುತ್ತದೆ ಎಂದು ನೋಡೋಣ. ನಾವೆಲ್ಲರೂ ಇಡೀ ಐಪಿಎಲ್ ಆಡಲು ಇಲ್ಲಿದ್ದೇವೆ. ಕೆಲವೊಮ್ಮೆ ನಾವು ವಿಭಿನ್ನ ವಿಷಯಗಳ ಬಗ್ಗೆ ಯೋಚಿಸಿದಾಗ ಈ ಎಲ್ಲಾ ವಿಷಯಗಳು ತಂಡವನ್ನು ಆಯ್ಕೆ ಮಾಡುವ ಮೊದಲೇ ಪ್ರದರ್ಶನದ ಮೇಲೆ ಪರಿಣಾಮ ಬೀರಬಹುದು, ಎಂದು ಅವರು ಹೇಳಿದರು.

ಗರಿಷ್ಠ ಫಲಿತಾಂಶವೇ ಉದ್ದೇಶ

ಐಪಿಎಲ್ ಅನ್ನು ಉನ್ನತ ಮಟ್ಟದಲ್ಲಿ ಮುಗಿಸುವುದು ಎಂಐ ಶಿಬಿರದಲ್ಲಿ ಪ್ರಾಥಮಿಕ ಗಮನವಾಗಿದೆ ಎಂದು ಪೊಲಾರ್ಡ್ ಹೇಳಿದರು. “ನಮಗೆ ಮತ್ತು ನಮ್ಮ ಶಿಬಿರಕ್ಕೆ ಐಪಿಎಲ್ ಅನ್ನು ಮುಗಿಸುವುದು ಅತ್ಯಂತ ಮುಖ್ಯವಾದ ವಿಷಯವಾಗಿದೆ. ಅದರ ನಂತರ ಏನಾಗುತ್ತದೆ ಎಂದು ಆಮೇಲೆ ನೋಡೋಣ. ಅವರು ಐಪಿಎಲ್ ತೊರೆದು ಭಾರತೀಯ ತಂಡಕ್ಕೆ ಹೋದಾಗ ಅಲ್ಲಿಯೇ ಅವರಿಗೆ ಕೆಲವು ರಿಯಾಯಿತಿ ಇರುತ್ತದೆ ಎಂದು ನಾನು ಭಾವಿಸುತ್ತೇನೆ, “ಎಂದು ಹೇಳಿದರು.

ಈ ವರ್ಷದ ಆರಂಭದಲ್ಲಿ, ಆಸ್ಟ್ರೇಲಿಯಾದ ದಂತಕಥೆ ಗ್ಲೆನ್ ಮೆಕ್ಗ್ರಾತ್ ಅವರು ಜಸ್ಪ್ರೀತ್ ಬುಮ್ರಾ ಅವರ ಅಸಾಂಪ್ರದಾಯಿಕ ಬೌಲಿಂಗ್ ಕ್ರಮವು ಮತ್ತೊಂದು ಹೊಸ ಗಾಯಕ್ಕೆ ಕಾರಣವಾಗುವುದರಿಂದ ಅವರಿಗೆ ವಿಶ್ರಾಂತಿ ಅಗತ್ಯ ಎಂದು ಹೇಳಿದ್ದರು.

ಮಾರ್ಚ್ 2023 ರಲ್ಲಿ ಬೆನ್ನು ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಬುಮ್ರಾ ಆಟದಿಂದ ದೀರ್ಘ ವಿರಾಮ ಪಡೆದಿದ್ದರು. ಅವರು ಕಳೆದ ವರ್ಷ ಆಗಸ್ಟ್​ನಲ್ಲಿ ಆಟಕ್ಕೆ ಮರಳಿದ್ದರು ಮತ್ತು ಅಂದಿನಿಂದ ನಿಯಮಿತವಾಗಿ ಆಡುತ್ತಿದ್ದಾರೆ.

Continue Reading

ಪ್ರಮುಖ ಸುದ್ದಿ

MS Dhoni : ಮಹೇಂದ್ರ ಸಿಂಗ್​ ಧೋನಿಗೆ ಗಾಯ, ಆಂತರಿಕ ಮಾಹಿತಿ ಬಹಿರಂಗ

MS Dhoni: ‘ಯೆಲ್ಲೊ ಆರ್ಮಿ’ ಗೆ ಪೂರಕವಾಗಿರದ ವಿಷಯವೆಂದರೆ ಗಾಯದ ಸಮಸ್ಯೆಗಳು. ಋತುರಾಜ್​ ನೇತೃತ್ವದ ಶಿಬಿರವು ಈ ಋತುವಿನಲ್ಲಿ ಗಾಯಗಳ ಸರಮಾಲೆಯನ್ನು ಎದುರಿಸುತ್ತಿದೆ. ಪಂದ್ಯಾವಳಿಯ ಆರಂಭಿಕ ಹಂತದಲ್ಲಿ, ಅವರು ಗಾಯಗೊಂಡ ಡೆವೊನ್ ಕಾನ್ವೇ ಅವರನ್ನು ಕಳೆದುಕೊಂಡಿದ್ದರು. ನಂತರ ದೀಪಕ್ ಚಾಹರ್, ಮಥೀಶಾ ಪತಿರಾನಾ ಅವರ ಸೇವೆಯಿಂದ ವಂಚಿತವಾಯಿತು.

VISTARANEWS.COM


on

MS Dhoni
Koo

ಚೆನ್ನೈ: ಹೊಸ ನಾಯಕ ಋತುರಾಜ್ ಗಾಯಕ್ವಾಡ್ ಅವರ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಪ್ರಶಂಸನೀಯ ಅಭಿಯಾನ ನಡೆಸುತ್ತಿದೆ. ತಂಡವು ಹನ್ನೊಂದು ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದಿದೆ ಮತ್ತು 12 ಅಂಕಗಳೊಂದಿಗೆ ಪ್ರಸ್ತುತ ಪಾಯಿಂಟ್ಸ್ ಟೇಬಲ್​ನಲ್ಲಿ ಮೂರನೇ ಸ್ಥಾನದಲ್ಲಿದೆ. ಹೀಗಾಗಿ ಪ್ಲೇಆಫ್​ಗೆ ಪ್ರವೇಶ ಪಡೆಯುವ ಎಲ್ಲ ಅವಕಾಶಗಳನ್ನು ಹೊಂದಿದೆ. ಆದರೆ, ಧೋನಿಗೂ (MS Dhoni) ಗಾಯವಾಗಿದೆ ಎಂಬ ವಿಚಾರ ಆ ಬಳಗವನ್ನು ಆತಂಕ್ಕೆ ತಳ್ಳಿದೆ.

‘ಯೆಲ್ಲೊ ಆರ್ಮಿ’ ಗೆ ಪೂರಕವಾಗಿರದ ವಿಷಯವೆಂದರೆ ಗಾಯದ ಸಮಸ್ಯೆಗಳು. ಋತುರಾಜ್​ ನೇತೃತ್ವದ ಶಿಬಿರವು ಈ ಋತುವಿನಲ್ಲಿ ಗಾಯಗಳ ಸರಮಾಲೆಯನ್ನು ಎದುರಿಸುತ್ತಿದೆ. ಪಂದ್ಯಾವಳಿಯ ಆರಂಭಿಕ ಹಂತದಲ್ಲಿ, ಅವರು ಗಾಯಗೊಂಡ ಡೆವೊನ್ ಕಾನ್ವೇ ಅವರನ್ನು ಕಳೆದುಕೊಂಡಿದ್ದರು. ನಂತರ ದೀಪಕ್ ಚಾಹರ್, ಮಥೀಶಾ ಪತಿರಾನಾ ಅವರ ಸೇವೆಯಿಂದ ವಂಚಿತವಾಯಿತು. ಬಳಿಕ ಮುಸ್ತಾಫಿಜುರ್ ರಹಮಾನ್ ಪಂದ್ಯಾವಳಿಯ ಎರಡನೇ ಹಂತದಲ್ಲಿ ಗಾಯದಿಂದಾಗಿ ಐಪಿಎಲ್ 2024 ರಿಂದ ಹೊರಗುಳಿದಿದ್ದರು. ನಂತರ ತಂಡಕ್ಕೆ ಪ್ರವೇಶ ಪಡೆದರೂ ರಾಷ್ಟ್ರೀಯ ಬದ್ಧತೆಗಾಗಿ ತವರಿಗೆ ಮರಳಿದ್ದರು.

ಮಹತ್ವದ ಬೆಳವಣಿಗೆಯೊಂದರಲ್ಲಿ, ಎಂಎಸ್ ಧೋನಿ ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಸಮಯದಲ್ಲಿ ಸ್ವಲ್ಪ ಸಮಯದವರೆಗೆ ಗಾಯವನ್ನು ಎದುರಿಸಿದರು. ಆದರೆ ಲೆಜೆಂಡರಿ ಕ್ರಿಕೆಟಿಗ ಆಟವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ ಮತ್ತು ವಿರಾಮ ತೆಗೆದುಕೊಳ್ಳದಿರಲು ನಿರ್ಧರಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.

ಧೋನಿಗೆ ಆಗಿರುವ ಗಾಯದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ವೈದ್ಯರು ಧೋನಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂಬುದಾಗಿ ಹೇಳಲಾಗಿದೆ. ಸಿಎಸ್​ಕೆ ಮಾಜಿ ನಾಯಕನಿಗೆ ಐಪಿಎಲ್​​ನಿಂದ ವಿರಾಮ ತೆಗೆದುಕೊಳ್ಳಲು ಬಯಸಿಲ್ಲ. , ಬದಲಿಗೆ, ಪಂದ್ಯಾವಳಿಯ ಉಳಿದ ಭಾಗಕ್ಕೆ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ಅವರು ಔಷಧಗಳ ಮೂಲಕ ನೋವಿನಿಂದ ಮುಕ್ತಿ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.

ಆಟಕ್ಕೆ ಬದ್ಧತೆ

ಎಂಎಸ್ ಧೋನಿ ಗಾಯವನ್ನು ಎದುರಿಸುವ ಬದಲು ತಮ್ಮ ಆಟ ಮುಂದುವರಿಸಲು ಬಯಸುತ್ತಾರೆ ಎಂದು
ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಸಿಎಸ್​ಕೆ ಮಾಜಿ ನಾಯಕ ಈ ಪ್ರಸ್ತುತ ಐಪಿಎಲ್ ಋತುವಿನಲ್ಲಿ ಈ ಗಾಯವನ್ನು ಎದುರಿಸಿದ್ದಾರೆ. ಆದರೆ ದಂತಕಥೆ ನೋವಿನ ನಡುವೆಯೂ ಆಡಲು ಹಠಮಾರಿ ಮತ್ತು ದೃಢನಿಶ್ಚಯ ತೆಗೆದುಕೊಂಡಿರುವುದು ಅಚ್ಚರಿ.

ಇದನ್ನೂ ಓದಿ: ICC Ban : ಮ್ಯಾಚ್​ ಫಿಕಿ ವೆಸ್ಟ್ ಇಂಡೀಸ್​ ಆಟಗಾರನಿಗೆ ಐದು ವರ್ಷ ಬ್ಯಾನ್​

ಐಪಿಎಲ್ ಪ್ರಾರಂಭವಾದಾಗಿನಿಂದ ಎಂಎಸ್ ಧೋನಿ ಚರ್ಚೆಯ ವಿಷಯವಾಗಿದ್ದಾರೆ. ಈ ಆಟಗಾರ ಕೆಲವೊಂದು ಬಾರಿ ಗಮನಾರ್ಹ ಫಾರ್ಮ್​ ತೋರಿದ್ದಾರೆ. ಆದರೆ ತೀರಾ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬರುತ್ತಿದ್ದಾರೆ. ಇತ್ತೀಚೆಗೆ ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಧೋನಿ 9 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದರು.

ಈ ಕ್ರಮವನ್ನು ಭಾರತದ ಮಾಜಿ ಕ್ರಿಕೆಟಿಗರು ತೀವ್ರವಾಗಿ ಟೀಕಿಸಿದರು. ಎಂಎಸ್ ಧೋನಿ ಅವರ ಬ್ಯಾಟಿಂಗ್ ಕ್ರಮಾಂಕವು ಸಿಎಸ್​ಕೆ ಯಾವುದೇ ರೀತಿಯಲ್ಲಿ ಸಹಾಯ ಮಾಡುತ್ತಿಲ್ಲ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ. ಹರ್ಭಜನ್ ಸಿಂಗ್ ಸಿಎಸ್​ಕೆ ಹೆಚ್ಚುವರಿ ಬ್ಯಾಟರ್​​ ಮೂಲಕ ಆಡಬಹುದು ಎಂದು ಸಲಹೆ ನೀಡಿದೆ.

ಧೋನಿಯು ಅನುಭವಿಸುತ್ತಿರುವ ಗಾಯದ ಬಗ್ಗೆ ನಿಜವಾದ ವಿಚಾರ ಯಾರಿಗೂ ತಿಳಿದಿರಲಿಲ್ಲ. ಸಿಎಸ್ಕೆ ಮಾಜಿ ನಾಯಕ 11 ಪಂದ್ಯಗಳಲ್ಲಿ 224.49 ಸ್ಟ್ರೈಕ್ ರೇಟ್ನೊಂದಿಗೆ 110 ರನ್ ಗಳಿಸಿದ್ದಾರೆ.

Continue Reading
Advertisement
IPL 2024: KKR's Flight to Kolkata Unexpectedly Diverted Mid-Air
ಪ್ರಮುಖ ಸುದ್ದಿ57 seconds ago

IPL 2024 : ಗುರಿ ಬಿಟ್ಟು ಬೇರೆ ಕಡೆಗೆ ಪ್ರಯಾಣಿಸಿದ ಕೆಕೆಆರ್​ ಆಟಗಾರರಿದ್ದ ವಿಮಾನ!

Akshaya Tritiya 2024
ಧಾರ್ಮಿಕ2 mins ago

Akshaya Tritiya 2024: ಅಕ್ಷಯ ತೃತೀಯದಂದು ಚಿನ್ನ ಖರೀದಿಗೆ ಶುಭ ಮುಹೂರ್ತ ಯಾವುದು?

Kulgam
ದೇಶ12 mins ago

Kulgam: ಪೂಂಚ್‌ ದಾಳಿಗೆ ಸೇನೆ ಸೇಡು; ಒಬ್ಬ ಲಷ್ಕರ್‌ ಕಮಾಂಡರ್‌ ಸೇರಿ ಮೂವರು ಉಗ್ರರ ಖತಂ

Lok Sabha Election
Latest28 mins ago

Lok Sabha Election : ರಾಜಕೀಯಕ್ಕಾಗಿ ದ್ವೇಷ ಸೃಷ್ಟಿ; ಬಿಜೆಪಿ ವಿರುದ್ಧ ವಿಡಿಯೊ ಮೂಲಕ ಟೀಕೆ ಮಾಡಿದ ಸೋನಿಯಾ ಗಾಂಧಿ

guava leaves benefits
ಆರೋಗ್ಯ39 mins ago

Guava Leaves Benefits: ಕೇವಲ ಸೀಬೆ ಹಣ್ಣಲ್ಲ, ಎಲೆಯಿಂದಲೂ ಎಷ್ಟೊಂದು ಪ್ರಯೋಜನಗಳು!

t20 world cup
ಕ್ರೀಡೆ54 mins ago

T20 World Cup : ಕೊಹ್ಲಿಯನ್ನು ಎದುರಿಸಲು ಪ್ಲ್ಯಾನ್​ ರೆಡಿ ಇದೆ ಎಂದ ಬಾಬರ್ ಅಜಮ್​

Lok Sabha Election 2024
ಪ್ರಮುಖ ಸುದ್ದಿ1 hour ago

Lok Sabha Election 2024: ಸಂಜೆ 5ಗಂಟೆವರೆಗೆ ಶೇ.66.05 ವೋಟಿಂಗ್‌; ಚಿಕ್ಕೋಡಿಯಲ್ಲಿ ಅತಿ ಹೆಚ್ಚು

School Jobs
ಪ್ರಮುಖ ಸುದ್ದಿ1 hour ago

School Jobs: 25 ಸಾವಿರ ಶಿಕ್ಷಕರ ವಜಾ ಆದೇಶಕ್ಕೆ ಸುಪ್ರೀಂ ತಡೆ; ಮಮತಾ ಸರ್ಕಾರಕ್ಕೆ ಚಾಟಿ

Karnataka Weather Forecast
ಮಳೆ1 hour ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Akshaya Tritiya 2024
ಫ್ಯಾಷನ್1 hour ago

Akshaya Tritiya 2024: ಅಕ್ಷಯ ತೃತೀಯದಂದು ಬಂಗಾರ ಖರೀದಿಸುವವರಿಗೆ ಇಲ್ಲಿದೆ ಉಪಯುಕ್ತ ಟಿಪ್ಸ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ1 hour ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ3 hours ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ1 day ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ1 day ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ2 days ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

ಟ್ರೆಂಡಿಂಗ್‌