ಕೊಹ್ಲಿಯ ವಿಕೆಟ್​ ಪಡೆಯಲು ದಕ್ಷಿಣ ಆಫ್ರಿಕಾ ಬೌಲರ್​ಗಳಿಗೆ ಸಲಹೆ ನೀಡಿದ ಕುಚಿಕು ಗೆಳೆಯ - Vistara News

ಕ್ರಿಕೆಟ್

ಕೊಹ್ಲಿಯ ವಿಕೆಟ್​ ಪಡೆಯಲು ದಕ್ಷಿಣ ಆಫ್ರಿಕಾ ಬೌಲರ್​ಗಳಿಗೆ ಸಲಹೆ ನೀಡಿದ ಕುಚಿಕು ಗೆಳೆಯ

ವಿರಾಟ್​ ಕೊಹ್ಲಿಯ ವಿಕೆಟ್​ ಪಡೆಯಲು ದಕ್ಷಿಣ ಆಫ್ರಿಕಾ ಬೌಲರ್​ಗಳಿಗೆ ಎಬಿಡಿ ವಿಲಿಯರ್ಸ್ ತಂತ್ರವನ್ನು ಹೇಳಿಕೊಟ್ಟರೂ ಇವರಿಬ್ಬರ ನಡುವಣ ಸ್ನೇಹಕ್ಕೆ ಯಾವುದೇ ಅಡ್ಡಿಯಾಗದು.

VISTARANEWS.COM


on

virat kohli
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜೊಹಾನ್ಸ್​ಬರ್ಗ್​: ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮಂಗಳವಾರದಿಂದ ಆರಂಭಗೊಳ್ಳಲಿರುವ ಬಾಕ್ಸಿಂಗ್​ ಡೇ ಟೆಸ್ಟ್​(Boxing Day Test) ಪಂದ್ಯಕ್ಕೆ ಎಲ್ಲ ಸಿದ್ಧತೆಗಳನ್ನು ನಡೆಸುತ್ತಿವೆ. ಈ ಮಧ್ಯೆ ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್(AB de Villiers)​ ಅವರು ವಿರಾಟ್ ಕೊಹ್ಲಿಯ(Virat Kohli) ವಿಕೆಟ್​ ಪಡೆಯುವ ತಂತ್ರವನ್ನು ತಮ್ಮ ದೇಶದ ಆಟಗಾರರಿಗೆ ತಿಳಿಸಿದ್ದಾರೆ.

ವಿರಾಟ್​ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್​ ಕುಚಿಕು ಗೆಳೆಯರು. ಕೊಹ್ಲಿಯ ಯಾವುದೇ ಸಾಧನೆ ಇರಲಿ ಮೊದಲು ಹಾರೈಸುವುದು ವಿಲಿಯರ್ಸ್​. ಆದರೆ, ಅಚ್ಚರಿ ಎಂಬಂತೆ ಎಬಿಡಿ ಅವರು ಟೆಸ್ಟ್​ ಸರಣಿಯಲ್ಲಿ ಕೊಹ್ಲಿಯ ವಿಕೆಟ್​ ಹೇಗೆ ಪಡೆಯಬೇಕೆಂಬುದನ್ನು ದಕ್ಷಿಣ ಆಫ್ರಿಕಾ ಆಟಗಾರರಿಗೆ ತಿಳಿಸಿಕೊಟ್ಟಿದ್ದಾರೆ. ಕೊಹ್ಲಿಯ ವಿಕೆಟ್​ ಪಡೆಯಲು ಎಬಿಡಿ ತಂತ್ರವನ್ನು ಹೇಳಿಕೊಟ್ಟರೂ ಇವರಿಬ್ಬರ ಸ್ನೇಹಕ್ಕೆ ಯಾವುದೇ ಅಡ್ಡಿಯಾಗದು.

ಕೊಹ್ಲಿ ವಿಕೆಟ್​ ಪಡೆಯುವುದು ಹೇಗೆ?

ಬಾಕ್ಸಿಂಗ್ ಟೆಸ್ಟ್ ಪಂದ್ಯದ ಕುರಿತು ಪಿಟಿಐ ಜತೆ ಮಾತನಾಡುವ ವೇಳೆ ಎಬಿಡಿ ಕೊಹ್ಲಿಯ ವಿಕೆಟ್​ ಪಡೆಯುವುದು ಗೇಗೆ ಎನ್ನುವ ಸಲಹೆಯನ್ನು ತಂಡದ ಸಹ ಆಟಗಾರರಿಗೆ ತಿಳಿಸಿಕೊಟ್ಟಿದ್ದಾರೆ. ಆಫ್​​ ಸ್ಟಂಪ್ ಜಾಗದಲ್ಲಿ ಪದೇಪದೆ ಬೌಲಿಂಗ್​ ನಡೆಸಿದರೆ ಇದು ಕೊಹ್ಲಿಗೆ ತಪ್ಪು ಮಾಡಲು ಪ್ರೇರೇಪಿಸುತ್ತದೆ. ಈ ಮೂಲಕ ಅವರ ವಿಕೆಟ್​ ಪಡೆಯಬಹುದು ಎಂದು ಎಬಿಡಿ ಹೇಳಿದ್ದಾರೆ.

“ಕೊಹ್ಲಿಯಂತಹ ಸ್ಟಾರ್​ ಹಾಗೂ ಅನುಭವಿ ಆಟಗಾರರನ ವಿಕೆಟ್ ಪಡೆಯಲು ಇರುವ ಒಂದು ಸರಳ ಸೂತ್ರವೆಂದರೆ, ಅವರಿಗೆ ಆಫ್​ ಸ್ಟಂಪ್ ಬೌಲಿಂಗ್​ ನಡಸುವುದು. ಲೈನ್ ಆಂಡ್ ಲೆನ್ತ್​ನಲ್ಲಿ ಬೌಲಿಂಗ್​ ಮಾಡಿ ಅವರನ್ನು ಔಟ್​ ಮಾಡುವುದು ಅಷ್ಟು ಸುಲಭವಲ್ಲ. ಅವರು ಇದುವರೆಗೆ ಔಟ್​ ಆಗಿರುವ ನಿದರ್ಶನಗಳನ್ನು ನೋಡಿದರೆ ಇದು ನಿಮಗೆ ತಿಳಿಯುತ್ತದೆ. ವಿಕೆಟ್​ನಿಂದ ಹೊರ ಹೋಗುವ ಚೆಂಡಿಗೆ ಹೆಚ್ಚು ಬಾರಿ ಬ್ಯಾಟ್​ ತಾಗಿಸಿ ವಿಕೆಟ್​ ಕೈಚೆಲ್ಲಿದ್ದಾರೆ. ಆದ್ದರಿಂದ ನಮ್ಮ ತಂಡದ ಬೌಲರ್​ಗಳು ಕೊಹ್ಲಿಗೆ ಆಫ್​ ಸ್ಟಂಪ್​ನಲ್ಲಿ ಬೌಲಿಂಗ್​ ಮಾಡಿದರೆ ಉತ್ತಮ” ಎಂದು ಡಬಿಡಿ ಹೇಳಿದ್ದಾರೆ.

ಪಂದ್ಯಕ್ಕೆ ಮಳೆ ಭೀತಿ

ಇತ್ತಂಡಗಳ ನಡುವಣ ಈ ಮೊದಲ ಟೆಸ್ಟ್​ ಪಂದ್ಯಕ್ಕೆ ಮಳೆ ಅಡಚಣೆಯ ಭೀತಿ ಕಾಡಿದೆ. ಪಂದ್ಯದ ಮೊದಲ ದಿನದಾಟಕ್ಕೆ ಶೇ. 96ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. 2ನೇ ದಿನಕ್ಕೆ ಮಳೆ ಭೀತಿ ಶೇ. 25ಕ್ಕೆ ತಗ್ಗಲಿದೆ. 3ನೇ ದಿನದಾಟದಲ್ಲಿ ಬೆಳಗ್ಗಿನ ಅವಧಿಗೆ ಮಾತ್ರ ಮಳೆ ಭೀತಿ ಇದೆ. 4 ಮತ್ತು 5ನೇ ದಿನದಾಟಗಳಲ್ಲಿ ಮಳೆ ಕಾಡುವ ಭೀತಿ ಏರಿಕೆ ಕಂಡು ಶೇ. 60ರಷ್ಟು ಇರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಒಟ್ಟಾರೆ ಪಂದ್ಯ ಸಂಪೂರ್ಣವಾಗಿ 5 ದಿನಗಳ ಕಾಲ ನಡೆಯುವು ಕಷ್ಟ ಸಾಧ್ಯ ಎನ್ನಲಾಗಿದೆ.

ಅಭ್ಯಾಸ ಆರಂ

ಏಕದಿನ ಸರಣಿಯಿಂದ ಹೊರಗುಳಿದಿದ್ದ ತಂಡದ ಪ್ರಧಾನ ಕೋಚಿಂಗ್​ ಸಿಬ್ಬಂದಿಗಳೆಲ್ಲ ಮತ್ತೆ ವಾಪಸ್​ ಆಗಿದ್ದು ಕೋಚ್​ ರಾಹುಲ್​ ದ್ರಾವಿಡ್​ ಮಾರ್ಗದರ್ಶನದಲ್ಲಿ ಟೀಮ್​ ಇಂಡಿಯಾ ಆಟಗಾರರು ಭಾನುವಾರ ಸೆಂಚುರಿಯನ್​ನಲ್ಲಿ ಅಭ್ಯಾಸ ನಡೆಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

Latest

IPL 2024 : ಪುತ್ರ ಅಕಾಯ್​ ಹುಟ್ಟಿದ ಬಳಿಕ ಮೊದಲ ಬಾರಿ ಕಾಣಿಸಿಕೊಂಡ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ

IPL 2024: ನಟಿ ಇತ್ತೀಚೆಗೆ ತನ್ನ ಹುಟ್ಟುಹಬ್ಬವನ್ನು ವಿರಾಟ್ ಮತ್ತು ಅವರ ಸಹ ಆರ್​​ಸಿಬಿ ಆಟಗಾರರೊಂದಿಗೆ ಆಚರಿಸಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಫಾಫ್ ಡು ಪ್ಲೆಸಿಸ್ ಹಂಚಿಕೊಂಡಿರುವ ಫೋಟೋದಲ್ಲಿ ಅನುಷ್ಕಾ ಶರ್ಮಾ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.

VISTARANEWS.COM


on

IPL 2024
Koo

ಬೆಂಗಳೂರು: ವಿರಾಟ್​ ಕೊಹ್ಲಿಯ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ತಮ್ಮ ಮಗ ಅಕಾಯ್ ಕೊಹ್ಲಿ (AkaI kohli) ಜನಿಸಿದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್​ (IPL 2024) ಪಂದ್ಯದ ವೇಳೆ ಗ್ಯಾಲರಿಯಲ್ಲಿದ್ದ ಅನುಷ್ಕಾ ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯ ನಡೆದಿದ್ದು, ಆರ್​ಸಿಬಿ ಗುಜರಾತ್​ ತಂಡವನ್ನು ಎದುರಿಸುತ್ತಿದೆ.

ನಟಿ ಸ್ಟ್ಯಾಂಡ್ ಗಳಲ್ಲಿ ಕುಳಿತಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ತನ್ನ ಪತಿ ಆಡುವುದನ್ನು ನೀಡಿ ಅವರು ನಗುತ್ತಿರುವುದನ್ನು ಕಾಣಬಹುದು.

ನಟಿ ಇತ್ತೀಚೆಗೆ ತನ್ನ ಹುಟ್ಟುಹಬ್ಬವನ್ನು ವಿರಾಟ್ ಮತ್ತು ಅವರ ಸಹ ಆರ್​​ಸಿಬಿ ಆಟಗಾರರೊಂದಿಗೆ ಆಚರಿಸಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಫಾಫ್ ಡು ಪ್ಲೆಸಿಸ್ ಹಂಚಿಕೊಂಡಿರುವ ಫೋಟೋದಲ್ಲಿ ಅನುಷ್ಕಾ ಶರ್ಮಾ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ನಟಿ ಮೇ 1ರಂದು ಬುಧವಾರ ತನ್ನ 36 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅನುಷ್ಕಾ ತನ್ನ ಹುಟ್ಟುಹಬ್ಬದಂದು ಬೆಂಗಳೂರಿನಲ್ಲಿದ್ದರು ಮತ್ತು ಆತ್ಮೀಯ ಪಾರ್ಟಿ ಆಯೋಜಿಸಿದ್ದರು ಎಂದು ಕ್ರಿಕೆಟಿಗರು ಬಹಿರಂಗಪಡಿಸಿದ್ದರು.

ಅನುಷ್ಕಾ ಅವರ ಹುಟ್ಟುಹಬ್ಬದಂದು, ವಿರಾಟ್ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್​ನಲ್ಲಿ ತಮ್ಮ ಹೆಂಡತಿಯ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದರು. ಅವರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವ ಟಿಪ್ಪಣಿಯನ್ನು ಬರೆದಿದ್ದರು. “ನಿನು ನನಗೆ ಸಿಗದಿದ್ದರೆ ನಾನು ಸಂಪೂರ್ಣವಾಗಿ ಕಳೆದುಹೋಗುತ್ತಿದ್ದೆ. ಹುಟ್ಟುಹಬ್ಬದ ಶುಭಾಶಯಗಳು” ಎಂದು ಬರೆದು ಕೆಂಪು ಹೃದಯದ ಎಮೋಜಿಗಳನ್ನು ಹಾಕಿದ್ದರು.

ಇದನ್ನೂ ಓದಿ: IPL 2024 : ಭಾರೀ ಭದ್ರತಾ ಲೋಪ; ಎಸ್​ಆರ್​​ಎಚ್​ ವಿದೇಶಿ ಆಟಗಾರನ ಮೇಲೆ ಮುಗಿಬಿದ್ದ ಸಾರ್ವಜನಿಕರು!

ವಿರಾಟ್ ಮತ್ತು ಅನುಷ್ಕಾ 2013 ರಲ್ಲಿ ಶಾಂಪೂ ಬ್ರಾಂಡ್​ನ ಜಾಹೀರಾತಿನ ಚಿತ್ರೀಕರಣಕ್ಕಾಗಿ ಮೊದಲ ಬಾರಿಗೆ ಭೇಟಿಯಾಗಿದ್ದರು. ಅವರು 2017 ರಲ್ಲಿ ಇಟಲಿಯ ಟಸ್ಕನಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮದುವೆಯಾಗಿದ್ದರು. 2021 ರಲ್ಲಿ, ಅವರು ತಮ್ಮ ಮೊದಲ ಮಗು ವಮಿಕಾಳನ್ನು ಸ್ವಾಗತಿಸಿದ್ದರು. ಈ ವರ್ಷದ ಆರಂಭದಲ್ಲಿ ಅನುಷ್ಕಾ ಮತ್ತು ವಿರಾಟ್ ತಮ್ಮ ಎರಡನೇ ಮಗು ಅಕಾಯ್​​ ಕೊಹ್ಲಿಯ ಆಗಮನವನ್ನು ಘೋಷಿಸಿದ್ದರು.

ಅನುಷ್ಕಾ ಶರ್ಮಾ ಮುಂದಿನ ಚಿತ್ರ ಚಕ್ಡಾ ಎಕ್ಸ್​ಪ್ರೆಸ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಕ್ಡಾ ಎಕ್ಸ್​​ಪ್ರೆಸ್​ ಕ್ರಿಕೆಟಿಗ ಜೂಲನ್ ಗೋಸ್ವಾಮಿ ಅವರ ಜೀವನಾಧಾರಿತ ಚಿತ್ರ. ಈ ಚಿತ್ರವು ಸುಮಾರು ೪ ವರ್ಷಗಳ ನಂತರ ಅವರು ಚಲನಚಿತ್ರಕ್ಕೆ ಮರಳಿದ್ದಾರೆ. ಅವರು ಕೊನೆಯ ಬಾರಿಗೆ ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ಝೀರೋ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

Continue Reading

Latest

IPL 2024 : ಭಾರೀ ಭದ್ರತಾ ಲೋಪ; ಎಸ್​ಆರ್​​ಎಚ್​ ವಿದೇಶಿ ಆಟಗಾರನ ಮೇಲೆ ಮುಗಿಬಿದ್ದ ಸಾರ್ವಜನಿಕರು!

IPL 2024: ಕ್ರಿಕೆಟಿಗರನ್ನು ಭದ್ರತಾ ಸಿಬ್ಬಂದಿ ಸುತ್ತುವರಿದಿರುತ್ತಾರೆ. ಈ ಮೂಲಕ ಆಟಗಾರರನ್ನು ಅಭಿಮಾನಿಗಳಿಂದ ಸುರಕ್ಷಿತವಾಗಿರಿಸುತ್ತಾರೆ. ಆದಾಗ್ಯೂ, ಹೆನ್ರಿಕ್ ಕ್ಲಾಸೆನ್ ಮತ್ತು ಉನಾದ್ಕಟ್ ಭಾರಿ ಸಂಖ್ಯೆಯ ಅಭಿಮಾನಿಗಳನ್ನು ಎದುರಿಸಲು ಹೆಣಗಾಡಿದರು. ಅಲ್ಲದೆ ಸುತ್ತಲೂ ಯಾವುದೇ ಭದ್ರತಾ ಸಿಬ್ಬಂದಿ ಕಾಣಿಸಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ. ಎಸ್ಆರ್​ಎಚ್​​ ತಾರೆಯರು ಅಭಿಮಾನಿಗಳಿಂದ ದೂರವಿರಲು ತಮ್ಮ ಗರಿಷ್ಠ ಪ್ರಯತ್ನವನ್ನು ಮಾಡುತ್ತಿರುವುದನ್ನು ಕಾಣಬಹುದು.

VISTARANEWS.COM


on

IPL 2024
Koo

ಹೈದರಾಬಾದ್​: ಭಾರತದಲ್ಲಿ ಕ್ರಿಕೆಟಿಗರ ಕ್ರೇಜ್ ದೊಡ್ಡ ಮಟ್ಟಿಗಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟ್ ತಾರೆಗಳನ್ನು ಭೇಟಿಯಾಗಲು ಹಾಗೂ ಮಾತನಾಡಿಸಲು ಪ್ರಯತ್ನಿಸುತ್ತಾರೆ. ಅದಕ್ಕಾಗಿ ಯಾವುದೇ ಅಪಾಯಗಳನ್ನು ತಂದೊಡ್ಡುತ್ತಾರೆ. ಇದು ಕೆಲವೊಂದು ಬಾರಿ ಅನಾಹುತಗಳಿಗೂ ಕಾರಣವಾಗುತ್ತವೆ. ಅಂತೆಯೇ ಇತ್ತೀಚೆಗೆ, ಸನ್​ರೈಸರ್ಸ್​ ಹೈದರಾಬಾದ್ ತಂಡದ ಹೆನ್ರಿಚ್​ ಕ್ಲಾಸೆನ್ ಇಂಥದ್ದೇ ಸಮಸ್ಯೆಗೆ ಒಳಗಾದರು. ಶಾಪಿಂಗ್ ಮಾಲ್​ವೊಂದರಲ್ಲಿ ಉಂಟಾದ ಭದ್ರತಾ ಲೋಪದಿಂದಾಗಿ ಅಭಿಮಾನಿಗಳ ಮಧ್ಯೆ ಸಿಕ್ಕಿಹಾಕಿಕೊಂಡು ಮಾನಸಿಕ ಹಾಗೂ ದೈಹಿಕ ಹಿಂಸೆ ಎದುರಿಸಿದರು.

ಹೆನ್ರಿಕ್ ಕ್ಲಾಸೆನ್ ಮತ್ತು ಅವರ ಎಸ್ಆರ್​ಎಚ್​​ ತಂಡದ ಸಹ ಆಟಗಾರ ಜಯದೇವ್ ಉನಾದ್ಕಟ್ ಕೂಡ ಜನ ಸಾಗರದ ನಡುವೆ ಸಿಲುಕಿ ಹಾಕಿಕೊಂಡರು. ಅವರಿಬ್ಬರು ಪ್ರಚಾರ ಕಾರ್ಯಕ್ರಮವೊಂದರ ಹಿನ್ನೆಲೆಯಲ್ಲಿ ಅಲ್ಲಿಗೆ ಹೋಗಿದ್ದರು.

ಸಾಮಾನ್ಯವಾಗಿ, ಕ್ರಿಕೆಟಿಗರನ್ನು ಭದ್ರತಾ ಸಿಬ್ಬಂದಿ ಸುತ್ತುವರಿದಿರುತ್ತಾರೆ. ಈ ಮೂಲಕ ಆಟಗಾರರನ್ನು ಅಭಿಮಾನಿಗಳಿಂದ ಸುರಕ್ಷಿತವಾಗಿರಿಸುತ್ತಾರೆ. ಆದಾಗ್ಯೂ, ಹೆನ್ರಿಕ್ ಕ್ಲಾಸೆನ್ ಮತ್ತು ಉನಾದ್ಕಟ್ ಭಾರಿ ಸಂಖ್ಯೆಯ ಅಭಿಮಾನಿಗಳನ್ನು ಎದುರಿಸಲು ಹೆಣಗಾಡಿದರು. ಅಲ್ಲದೆ ಸುತ್ತಲೂ ಯಾವುದೇ ಭದ್ರತಾ ಸಿಬ್ಬಂದಿ ಕಾಣಿಸಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ. ಎಸ್ಆರ್​ಎಚ್​​ ತಾರೆಯರು ಅಭಿಮಾನಿಗಳಿಂದ ದೂರವಿರಲು ತಮ್ಮ ಗರಿಷ್ಠ ಪ್ರಯತ್ನವನ್ನು ಮಾಡುತ್ತಿರುವುದನ್ನು ಕಾಣಬಹುದು.

ಕೋಪಗೊಂಡಿದ್ದ ಕ್ಲಾಸೆನ್​

ಉನಾದ್ಕಟ್ ಶಾಂತವಾಗಿ ಕಾಣುತ್ತಿದ್ದರೂ, ಹೆನ್ರಿಚ್​​ ಕ್ಲಾಸೆನ್ ಖಂಡಿತವಾಗಿಯೂ ನಿರಾಶೆಗೊಂಡಿದ್ದರು. ಅವರ ಕ್ರಿಯೆಗಳು ಅವರ ಭಾವನೆಗಳನ್ನು ಸ್ಪಷ್ಟಪಡಿಸಿದವು. ದಕ್ಷಿಣ ಆಫ್ರಿಕಾದ ತಾರೆ ಕೈ ಸನ್ನೆಯಿಂದ ಅಭಿಮಾನಿಗಳನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದರು. ಆದರೆ ಅದರಿಂದ ಲಾಭವಾಗಿರಲಿಲ್ಲ . ಅಭಿಮಾನಿಗಳು ಕ್ಲಾಸೆನ್ ಹೆಸರನ್ನು ನಿರಂತರವಾಗಿ ಕೂಗುತ್ತಿದ್ದರು. ಕ್ರಿಕೆಟ್ ತಾರೆಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ತಮ್ಮಿಂದ ಸಾಧ್ಯವಾದ ಎಲ್ಲವನ್ನೂ ಅವರು ಮಾಡುತ್ತಿದ್ದರು.

ಇದನ್ನೂ ಓದಿ: Champions Trophy : ಭಾರತ ಕ್ರಿಕೆಟ್​ ತಂಡಕ್ಕೆ ಬೆದರಿಕೆ ಒಡ್ಡಿದ ಪಾಕಿಸ್ತಾನದ ಮಾಜಿ ಆಟಗಾರ

ಅಭಿಮಾನಿಗಳ ಗುಂಪಿನ ನಡುವಿನಿಂದ ಹಾದುಹೋಗುವಾಗ ಇಬ್ಬರೂ ಕ್ರಿಕೆಟಿಗರನ್ನು ನಿರಂತರವಾಗಿ ತಳ್ಳಲಾಯಿತು. ಮೈ ಮೇಲೆ ಕೈ ಹಾಕಲಾಯಿತು. ಕೊನೆಗೂ ಅವರು ಭಾರಿ ಜನಸಮೂಹದಿಂದ ಸುರಕ್ಷಿತವಾಗಿ ಹೊರಬರುವಲ್ಲಿ ಯಶಸ್ವಿಯಾದರು.

ಹೆನ್ರಿಚ್​ ಕ್ಲಾಸೆನ್ ಮತ್ತು ಜಯದೇವ್ ಉನಾದ್ಕಟ್ ಇಬ್ಬರೂ ಗುರುವಾರ (ಮೇ 2) ಹೈದರಾಬಾದ್​ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಎಸ್ಆರ್​​ಎಚ್​ ವಿರುದ್ಧ ಮುಖಾಮುಖಿಯಾದಾಗ ಆಡಿದ್ದರು. ಎಸ್ಆರ್​ಎಚ್​​ ಈ ಪಂದ್ಯವನ್ನು ಒಂದು ರನ್ನಿಂದ ಗೆದ್ದು ಪ್ಲೇಆಫ್ ಸ್ಥಾನಕ್ಕಾಗಿ ಪೈಪೋಟಿಯಲ್ಲಿ ಉಳಿಯಿತು. ಆ ಪಂದ್ಯದಲ್ಲಿ ಕ್ಲಾಸೆನ್ ಕೇವಲ 19 ಎಸೆತಗಳಲ್ಲಿ ಅಜೇಯ 42 ರನ್ ಗಳಿಸುವ ಮೂಲಕ ಎಸ್ಆರ್ಹೆಚ್ ಪರ ನಿರ್ಣಾಯಕ ಇನ್ನಿಂಗ್ಸ್ ಆಡಿದ್ದರು. ಮತ್ತೊಂದೆಡೆ, ಉನಾದ್ಕಟ್ ಎರಡು ಓವರ್​ಗಳನ್ನು ಎಸೆದರೂ ಯಾವುದೇ ವಿಕೆಟ್ ಪಡೆದಿರಲಿಲ್ಲ.

Continue Reading

ಪ್ರಮುಖ ಸುದ್ದಿ

Champions Trophy : ಭಾರತ ಕ್ರಿಕೆಟ್​ ತಂಡಕ್ಕೆ ಬೆದರಿಕೆ ಒಡ್ಡಿದ ಪಾಕಿಸ್ತಾನದ ಮಾಜಿ ಆಟಗಾರ

Champions Trophy :ಭಾರತ ತಂಡ ಪ್ರಯಾಣ ಮಾಡದ ಹಿನ್ನೆಲೆಯಲ್ಲಿ ಪಂದ್ಯದ ತಾಣ ಬದಲಾಯಿಸುವ ಬಗ್ಗೆ ಅಥವಾ ಹೈಬ್ರಿಡ್ ಮಾದರಿ ಪರಿಗಣಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಅರ್ಹತಾ ಸುತ್ತಿನ ಪಂದ್ಯಗಳನ್ನು ಪ್ರತ್ಯೇಕವಾಗಿ ಒಂದು ನಗರದಲ್ಲಿ ನಿಗದಿಪಡಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗೆ ಪ್ರಸ್ತಾಪಿಸಿದೆ ಎಂದು ಹೇಳಲಾಗಿದೆ.

VISTARANEWS.COM


on

Champions Trophy
Koo

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ (Champions Trophy) ಟ್ರೋಫಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದರೆ ಭಾರತವು ಐಸಿಸಿಗೆ ತಾರ್ಕಿಕ ಉತ್ತರ ನೀಡಬೇಕಾಗುತ್ತದೆ. ಅಲ್ಲದೆ, ಐಸಿಸಿ ಪಂದ್ಯಾವಳಿಯಲ್ಲಿ ಭಾಗವಹಿಸದಿರುವ ನಿರ್ಧಾರವು ಭಾರತ ಕ್ರಿಕೆಟ್​ ತಂಡಕ್ಕೆ (Indian Cricket Team) ಹಿನ್ನಡೆಯನ್ನುಂಟು ಮಾಡುತ್ತದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ (Rashid Latif) ಹೇಳಿದ್ದಾರೆ. ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಭಾಗವಹಿಸುವುದಿಲ್ಲ ಎಂದು ಮೂಲಗಳು ಹೇಳಿರುವ ಹಿನ್ನೆಲೆಯಲ್ಲಿ ಲತೀಫ್​ ಭಾರತ ತಂಡವನ್ನು ಬ್ಲ್ಯಾಕ್​ಮೇಲ್ ಮಾಡಲು ಮುಂದಾಗಿದೆ.

ಭಾರತ ತಂಡ ಪ್ರಯಾಣ ಮಾಡದ ಹಿನ್ನೆಲೆಯಲ್ಲಿ ಪಂದ್ಯದ ತಾಣ ಬದಲಾಯಿಸುವ ಬಗ್ಗೆ ಅಥವಾ ಹೈಬ್ರಿಡ್ ಮಾದರಿ ಪರಿಗಣಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಅರ್ಹತಾ ಸುತ್ತಿನ ಪಂದ್ಯಗಳನ್ನು ಪ್ರತ್ಯೇಕವಾಗಿ ಒಂದು ನಗರದಲ್ಲಿ ನಿಗದಿಪಡಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗೆ ಪ್ರಸ್ತಾಪಿಸಿದೆ ಎಂದು ಹೇಳಲಾಗಿದೆ. ಇವೆಲ್ಲದರಿಂದ ದಿಕ್ಕೆಟ್ಟಿರುವ ಪಾಕಿಸ್ತಾನದ ಆಟಗಾರ ಅನಗತ್ಯ ಹೇಳಿಕೆಗಳನ್ನು ನೀಡುತ್ತಿದ್ದಾರೆ.

“ನೀವು ದ್ವಿಪಕ್ಷೀಯ ಸರಣಿಯನ್ನು ನಿರಾಕರಿಸಬಹುದು. ಆದರೆ ಐಸಿಸಿ ಟೂರ್ನಿಗಳನ್ನು ನಿರಾಕರಿಸುವುದು ಕಷ್ಟ. ಐಸಿಸಿ ತನ್ನ ಯೋಜನೆಯನ್ನು ರೂಪಿಸಿದಾಗ ತಂಡಗಳಿಗೆ ತಾವು ಎಲ್ಲಿ ಆಡಬೇಕೆಂದು ತಿಳಿದಿರುತ್ತದೆ. ಉದಾಹರಣೆಗೆ ವಿಶ್ವಕಪ್ ಆಡಲು ಭಾರತಕ್ಕೆ ಹೋಗಬೇಕು ಎಂದು ಪಾಕಿಸ್ತಾನಕ್ಕೆ ತಿಳಿದಿತ್ತು ಮತ್ತು ಅದಕ್ಕೆ ಅನುಗುಣವಾಗಿ ಒಪ್ಪಂದಗಳಿಗೆ ಸಹಿ ಹಾಕಿತ್ತು ಎಂದು ರಶೀದ್ ಲತೀಫ್ ಹೇಳಿದ್ದಾರೆ.

ಇದನ್ನೂ ಓದಿ: IPL 2024 : ಹಾರ್ದಿಕ್​ ಪಾಂಡ್ಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ಇರ್ಫಾನ್ ಪಠಾಣ್​​

ಐಸಿಸಿ ಟೂರ್ನಿಗಳನ್ನು ನಿರಾಕರಿಸುವುದು ಸ್ವಲ್ಪ ಕಷ್ಟದ ವಿಷಯ. 1996 ರ ವಿಶ್ವಕಪ್​​ನಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ಶ್ರೀಲಂಕಾಕ್ಕೆ ಹೋಗಲು ನಿರಾಕರಿಸಿದವು. ಇಡೀ ಗುಂಪು ಹಂತ ಬದಲಾಯಿತು ಮತ್ತು ಶ್ರೀಲಂಕಾ ಚಾಂಪಿಯನ್ ಆಯಿತು. ಇದು ಬಹಳ ದೊಡ್ಡ ತಪ್ಪು. ಭಾರತ ಅಥವಾ ಪಾಕಿಸ್ತಾನ ಜತೆಯಾಗಿ ಹೋಗದಿರುವುದು ತಪ್ಪು. ಸರ್ಕಾರದ ಮಟ್ಟದಲ್ಲಿ ಯಾವುದೇ ಸಂದರ್ಭಗಳು ಸಂಭವಿಸಿದರೆ ಬರದಿರುವುದಕ್ಕೆ ಕಾರಣ ನೀಡಬೇಕಾಗುತ್ತದೆ. ಪಾಕಿಸ್ತಾನದ ಪರಿಸ್ಥಿತಿಗಳು ಸರಿಯಾಗಿಲ್ಲ ಇತ್ಯಾದಿಗಳನ್ನು ಉಲ್ಲೇಖಿಸಿ ನೀವು ದ್ವಿಪಕ್ಷೀಯ ಸರಣಿಯನ್ನು ನಿರಾಕರಿಸಬಹುದು/ ನನ್ನ ಅಭಿಪ್ರಾಯದಲ್ಲಿ, ಐಸಿಸಿ ಪಂದ್ಯಾವಳಿಯನ್ನು ನಿರಾಕರಿಸುವುದು ಹಿನ್ನಡೆಯನ್ನುಂಟು ಮಾಡುತ್ತದೆ,” ಎಂದು ಮಾಜಿ ವಿಕೆಟ್ ಕೀಪರ್ ಬ್ಯಾಟರ್​ ಹೇಳಿದ್ದಾರೆ

ಲಭ್ಯವಿರುವ ಮಾಹಿತಿಯ ಪ್ರಕಾರ, ಪಿಸಿಬಿ ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್ ಅನ್ನು ಚಾಂಪಿಯನ್ಸ್​ ಟ್ರೋಫಿಯ ಸ್ಥಳಗಳಾಗಿ ಆಯ್ಕೆ ಮಾಡಿದೆ. ಲಾಹೋರ್ ಅಂತಿಮ ಪಂದ್ಯಕ್ಕೆ ಆತಿಥ್ಯ ವಹಿಸುತ್ತದೆ.

Continue Reading

ಕ್ರಿಕೆಟ್

IPL 2024 : ಹಾರ್ದಿಕ್​ ಪಾಂಡ್ಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ಇರ್ಫಾನ್ ಪಠಾಣ್​​

IPL 2024: ವಾಂಖೆಡೆಯಲ್ಲಿ 12 ವರ್ಷಗಳ ನಂತರ ಕೋಲ್ಕತಾ ನೈಟ್ ರೈಡರ್ಸ್ ಆತಿಥೇಯ ತಂಡದ ವಿರುದ್ಧ 24 ರನ್​ಗಳ ಭರ್ಜರಿ ಗೆಲುವು ದಾಖಲಿಸಿದ ನಂತರ, ಇರ್ಫಾನ್ ಪಠಾಣ್ ಹಾರ್ದಿಕ್ ಪಾಂಡ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಾಂಡ್ಯ ಅವರನ್ನು ಟೀಕಿಸುವ ವೀಡಿಯೊ ವೈರಲ್ ಆಗುವ ಮೊದಲು, ಭಾರತದ ಮಾಜಿ ಆಲ್ರೌಂಡರ್​ ಎಕ್ಸ್​ನಲ್ಲಿ ಸರಣಿ ಟ್ವೀಟ್​ಗಳನ್ನು ಮಾಡಿದ್ದರು.

VISTARANEWS.COM


on

Hardik Pandya
Koo

ನವದೆಹಲಿ: ಐಪಿಎಲ್​ ಪಂದ್ಯದಲ್ಲಿ (IPL 2024) ಕೆಕೆಆರ್ ವಿರುದ್ಧ 24 ರನ್​ಗಳ ಸೋಲಿನ ಹಿನ್ನೆಲೆಯಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರ ಕಳಪೆ ನಾಯಕತ್ವಕ್ಕಾಗಿ ಭಾರತದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ 12 ವರ್ಷಗಳ ನಂತರ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ತವರಿನಲ್ಲಿ ಮೊದಲ ಗೆಲುವನ್ನು ಪಡೆಯಲು ಹೆಚ್ಚು ದೃಢನಿಶ್ಚಯದಿಂದ ಆಡಿದ ತಂಡದಂತೆ ಕಾಣುತ್ತಿತ್ತು. ಮೊದಲ ಇನ್ನಿಂಗ್ಸ್​ನಲ್ಲಿ ಉತ್ತಮ ಆರಂಭ ಪಡೆದ ನಂತರ ಲಾಭ ಪಡೆಯಲು ಸಾಧ್ಯವಾಗದ ಕಾರಣ ಮುಂಬೈ ಸೋಲಿಗೆ ಹೆಚ್ಚಿನ ದೂಷಣೆ ಹಾರ್ದಿಕ್ ಪಾಂಡ್ಯ ಅವರತ್ತ ತಿರುಗಿದೆ.

ವಾಂಖೆಡೆಯಲ್ಲಿ ಕೆಕೆಆರ್ ಮೊದಲು ಬ್ಯಾಟಿಂಗ್ ಮಾಡಿದಾಗ, ಹಾರ್ದಿಕ್ ಪಾಂಡ್ಯ ಮತ್ತು ಇತರ ಎಂಐ ಬೌಲರ್​ಗಳು ಪವರ್​​ಪ್ಲೇನಲ್ಲಿ ಕೆಕೆಆರ್ ತಂಡ ರನ್ ಹರಿವನ್ನು ನಿಯಂತ್ರಿಸಲು ಅದ್ಭುತವಾಗಿ ಕೆಲಸ ಮಾಡಿದರು. ಮೊದಲ ಓವರ್​ನ 4 ನೇ ಎಸೆತದಲ್ಲಿ ಫಿಲ್ ಸಾಲ್ಟ್ ಅವರನ್ನು ಕೇವಲ 5 ರನ್​​ಗಳಿಗೆ ಔಟ್ ಮಾಡುವ ಮೂಲಕ ತುಸಾರಾ ಉತ್ತಮ ಅರಂಭ ತಂದರು. ತಮ್ಮ ಮುಂದಿನ ಓವರ್ನಲ್ಲಿ, ತುಸಾರ 3 ನೇ ಕ್ರಮಾಂಕದ ಬ್ಯಾಟ್ಸ್ಮನ್ ಆಂಗ್ರಿಶ್ ರಘುವಂಶಿ ಅವರ ವಿಕೆಟ್ ಅನ್ನು 13 ರನ್​ಗಳಿಗೆ ಪಡೆದರು, 4 ಎಸೆತಗಳ ನಂತರ, ಅವರು ಶ್ರೇಯಸ್ ಅಯ್ಯರ್ ಅವರನ್ನು 4 ಎಸೆತಗಳಲ್ಲಿ 6 ರನ್​ಗಳಿಗೆ ಔಟ್ ಮಾಡಿದರು.

ಹಾರ್ದಿಕ್ ಪಾಂಡ್ಯ 8 ಎಸೆತಗಳಲ್ಲಿ 8 ರನ್ ಗಳಿಸಿದ್ದ ಸುನಿಲ್ ನರೈನ್ ಅವರನ್ನು ಕ್ಲೀನ್ ಬೌಲ್ ಮಾಡಿದರೆ, ಅನುಭವಿ ಪಿಯೂಷ್ ಚಾವ್ಲಾ 9 ರನ್ ಗಳಿಸಿ ಡೇಂಜರ್ ಮ್ಯಾನ್ ರಿಂಕು ಸಿಂಗ್ ಅವರನ್ನು ಔಟ್​​ ಮಾಡಿದರು. 7ನೇ ಓವರ್​​ನ ಮೊದಲ ಎಸೆತದ ವೇಳೆಗೆ ಕೋಲ್ಕತಾ 5 ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿತ್ತು. ಆದರೆ ಆ ಬಳಿಕ ಅನನುಭವಿ ನಮನ್ ಧೀರ್ ಅವರನ್ನು ಬೌಲಿಂಗ್​ಗೆ ಕರೆತರುವ ಪಾಂಡ್ಯ ಅವರ ನಿರ್ಧಾರ ಕೈಕೊಟ್ಟಿತು. ವೆಂಕಟೇಶ್ ಅಯ್ಯರ್ ಮತ್ತು ಮನೀಶ್ ಪಾಂಡೆ ಅವರಿಗೆ 83 ರನ್​ಗಳ ಜೊತೆಯಾಟವನ್ನು ನೀಡಿತು.

57/5 ಸ್ಕೋರ್ ಮಾಡಿದ್ದ ನೈಟ್ ರೈಡರ್ಸ್ ಅಂತಿಮವಾಗಿ 169 ರನ್ ಗಳಿಸಿತು. ನಂತರ ಗುರಿ ಬೆನ್ನಟ್ಟಲು ವಿಫಲವಾದ ಮುಂಬೈ 18.5 ಓವರ್​ಗಳಲ್ಲಿ 145 ರನ್​ಗಳಿಗೆ ಆಲೌಟ್ ಆಯಿತು.

ನಿರಾಶೆ ವ್ಯಕ್ತಪಡಿಸಿದ ಇರ್ಫಾನ್ ಪಠಾಣ್

ವಾಂಖೆಡೆಯಲ್ಲಿ 12 ವರ್ಷಗಳ ನಂತರ ಕೋಲ್ಕತಾ ನೈಟ್ ರೈಡರ್ಸ್ ಆತಿಥೇಯ ತಂಡದ ವಿರುದ್ಧ 24 ರನ್​ಗಳ ಭರ್ಜರಿ ಗೆಲುವು ದಾಖಲಿಸಿದ ನಂತರ, ಇರ್ಫಾನ್ ಪಠಾಣ್ ಹಾರ್ದಿಕ್ ಪಾಂಡ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಾಂಡ್ಯ ಅವರನ್ನು ಟೀಕಿಸುವ ವೀಡಿಯೊ ವೈರಲ್ ಆಗುವ ಮೊದಲು, ಭಾರತದ ಮಾಜಿ ಆಲ್ರೌಂಡರ್​ ಎಕ್ಸ್​ನಲ್ಲಿ ಸರಣಿ ಟ್ವೀಟ್​ಗಳನ್ನು ಮಾಡಿದ್ದರು. ಮುಂಬೈ ಇಂಡಿಯನ್ಸ್ ನಾಯಕನ ಪೆದ್ದ ನಡೆಗಳನ್ನು ಪ್ರಶ್ನಿಸಿದ್ದರು.

ಇರ್ಫಾನ್ ಪಠಾಣ್ ಅವರು ಮುಂಬೈನ ಪ್ರಯಾಣವು ಕೊನೆಗೊಂಡಿದೆ. ಅವರು ಹೊರಗಡೆ ಎಷ್ಟು ಪ್ರಬಲವಾಗಿ ಕಾಣುತ್ತಿದ್ದರೂ ತಂಡವನ್ನು ಉತ್ತಮವಾಗಿ ನಿರ್ವಹಿಸಿಲ್ಲ ಎಂದು ಹೇಳುವ ಮೂಲಕ ವೀಡಿಯೊವನ್ನು ಪ್ರಾರಂಭಿಸಿದರು. ಹಾರ್ದಿಕ್ ಪಾಂಡ್ಯ ವಿರುದ್ಧದ ಪ್ರಶ್ನೆಗಳು ಮತ್ತು ಟೀಕೆಗಳು ಸರಿಯಾಗಿವೆ ಎಂದು ಹೇಳಿದರು.

“ಮುಂಬೈ ಇಂಡಿಯನ್ಸ್​ ಕಥೆ ಇಲ್ಲಿಗೆ ಕೊನೆಗೊಳ್ಳುತ್ತದೆ. ಈ ತಂಡವು ಕಾಗದದ ಮೇಲೆ ತುಂಬಾ ಉತ್ತಮವಾಗಿತ್ತು, ಆದರೆ ಅದನ್ನು ನಿರ್ವಹಿಸಲಾಗಲಿಲ್ಲ. ಹಾರ್ದಿಕ್ ಪಾಂಡ್ಯ ನಾಯಕತ್ವದ ಬಗ್ಗೆ ಎದ್ದ ಪ್ರಶ್ನೆಗಳು ಸಂಪೂರ್ಣವಾಗಿ ಸರಿಯಾಗಿವೆ. ನೀವು ಕೆಕೆಆರ್ ಅನ್ನು 57/5 ಕ್ಕೆ ಸೀಮಿತಗೊಳಿಸಿದಾಗ, ನೀವು ನಮನ್ ಧಿರ್​ಗೆ ಸತತ ಮೂರು ಓವರ್​ಗಳನ್ನು ನೀಡಿದ ತಪ್ಪು ಮಾಡಿದ್ದೀರಿ. ನೀವು ನಿಮ್ಮ ಮುಖ್ಯ ಬೌಲರ್​ಗಳನ್ನು ಇಳಿಸಬೇಕಾಗಿತ್ತು. ಆರನೇ ಬೌಲರ್​ಗೆ ಮೂರು ಓವರ್​​ ನೀಡಿದ್ದೀರಿ” ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.

ತಂಡದ ಮರು ರಚನೆಗೆ ಸಲಹೆ

ಮುಂಬೈ ಇಂಡಿಯನ್ಸ್ ತಂಡದ ಮ್ಯಾನೇಜ್ಮೆಂಟ್​​ ಇರ್ಫಾನ್ ಪಠಾಣ್ ನೀಡಿದ ಅತ್ಯುತ್ತಮ ಸಲಹೆಯೆಂದರೆ, ಹಾರ್ದಿಕ್ ಪಾಂಡ್ಯ ತಮ್ಮ ನಾಯಕ ಎಂದು ಆಟಗಾರರನ್ನು ಒಪ್ಪಿಕೊಳ್ಳುವಂತೆ ಮಾಡುವುದು. 2007 ರ ಐಸಿಸಿ ಟಿ 20 ವಿಶ್ವಕಪ್ ಫೈನಲ್​​ನ ಮ್ಯಾನ್ ಆಫ್ ದಿ ಮ್ಯಾಚ್ ವಿನ್ನರ್ ಮುಂಬೈ ಇಂಡಿಯನ್ಸ್ ತಂಡವನ್ನು ಒಟ್ಟಾಗಿ ಕರೆಯೊಯ್ಯುತ್ತಿಲ್ಲ. ಇದು ಅವರು ಮುಂದೆ ಸುಧಾರಿಸಬೇಕಾದ ವಿಷಯವಾಗಿದೆ ಎಂದು ಹೇಳಿದ್ದಾರೆ.

“ನಾಯಕತ್ವವು ಆಟದಲ್ಲಿ ದೊಡ್ಡ ಪರಿಣಾಮ ಬೀರುತ್ತದೆ. ಮುಂಬೈ ಇಂಡಿಯನ್ಸ್ ಸಂಘಟಿತ ತಂಡದಂತೆ ಕಾಣುತ್ತಿಲ್ಲ, ಮ್ಯಾನೇಜ್ಮೆಂಟ್ ಇದನ್ನು ಪರಿಗಣಿಸಬೇಕಾಗಿದೆ. ಆಟಗಾರರು ನಾಯಕನನ್ನು ಗೌರವಿಸಬೇಕು ಮತ್ತು ಸ್ವೀಕರಿಸಬೇಕು. ನಾವು ಅದನ್ನು ಮೈದಾನದಲ್ಲಿ ನೋಡಲಿಲ್ಲ” ಎಂದು ಪಠಾಣ್ ಮುಕ್ತಾಯಗೊಳಿಸಿದರು.

Continue Reading
Advertisement
Bangalore To Belagavi Train
ಕರ್ನಾಟಕ29 seconds ago

Bangalore To Belagavi Train: ಮೇ 6ರಂದು ಬೆಂಗಳೂರು-ಬೆಳಗಾವಿ ವಿಶೇಷ ರೈಲು ಸಂಚಾರ

IPL 2024
Latest5 mins ago

IPL 2024 : ಪುತ್ರ ಅಕಾಯ್​ ಹುಟ್ಟಿದ ಬಳಿಕ ಮೊದಲ ಬಾರಿ ಕಾಣಿಸಿಕೊಂಡ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ

Jai Shri Ram Slogan
ಕರ್ನಾಟಕ54 mins ago

Jai Shri Ram Slogan: ಜೈ ಶ್ರೀರಾಮ್ ಘೋಷಣೆ ಕೂಗಿದ್ರೆ ಬೂಟುಗಾಲಲ್ಲಿ ಒದೆಯಿರಿ ಎಂದಿದ್ದ ಕೈ ಮುಖಂಡ ಅಮಾನತು

Paytm
ಪ್ರಮುಖ ಸುದ್ದಿ1 hour ago

Paytm : ಪೇಟಿಎಂ ಸಿಒಒ ಭವೇಶ್ ಗುಪ್ತಾ ಏಕಾಏಕಿ ರಾಜೀನಾಮೆ

Ballari DC Prashanth kumar Mishra pressmeet about MLC election
ಬಳ್ಳಾರಿ1 hour ago

MLC Election: ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ; ಮೇ 9ಕ್ಕೆ ಅಧಿಸೂಚನೆ ಪ್ರಕಟ

HD Revanna
ಕರ್ನಾಟಕ1 hour ago

HD Revanna: ಫಲಿಸಲಿಲ್ಲ ಜ್ಯೋತಿಷಿ ಭವಿಷ್ಯ, ಹೋಮ; ರೇವಣ್ಣರನ್ನು ‘ನಿಂಬೆಹಣ್ಣೂ’ ಕಾಪಾಡಲಿಲ್ಲ!

IPL 2024
Latest2 hours ago

IPL 2024 : ಭಾರೀ ಭದ್ರತಾ ಲೋಪ; ಎಸ್​ಆರ್​​ಎಚ್​ ವಿದೇಶಿ ಆಟಗಾರನ ಮೇಲೆ ಮುಗಿಬಿದ್ದ ಸಾರ್ವಜನಿಕರು!

Ballari DC Prashanth kumar Mishra pressmeet about lok sabha election
ಬಳ್ಳಾರಿ2 hours ago

Lok Sabha Election 2024: ಪಾರದರ್ಶಕ ಚುನಾವಣೆಗೆ ಬಳ್ಳಾರಿ ಜಿಲ್ಲಾಡಳಿತ ಸಜ್ಜು

Shivamogga BJP
ಶಿವಮೊಗ್ಗ2 hours ago

Lok Sabha Election 2024: ಶಿವಮೊಗ್ಗದಲ್ಲಿ ಪ್ರಚಾರದ ವೇಳೆ ಕಿರಿಕ್; ಬಿಜೆಪಿ ವಾಹನ ಹಿಮ್ಮೆಟ್ಟಿಸಿದ ಈಶ್ವರಪ್ಪ ಅಭಿಮಾನಿಗಳು

HD Revanna
ಕರ್ನಾಟಕ2 hours ago

HD Revanna: ರೇವಣ್ಣ ಬಂಧನ ಬೆನ್ನಲ್ಲೇ ಕುಮಾರಸ್ವಾಮಿ ಮೀಟಿಂಗ್;‌ ಮಗನ ಬಳಿಕ ತಂದೆಯೂ ಅಮಾನತು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ17 hours ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ1 day ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ2 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ2 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ3 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ5 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20245 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ6 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20246 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

ಟ್ರೆಂಡಿಂಗ್‌