Arshdeep Singh : ಅರ್ಶ್​ದೀಪ್​ ಸಿಂಗ್​ಗೆ ಮಾಜಿ ಬೌಲರ್​ ಲಕ್ಷ್ಮೀಪತಿ ಬಾಲಾಜಿ ಕೊಟ್ಟ ಸಲಹೆಯೇನು? - Vistara News

ಕ್ರಿಕೆಟ್

Arshdeep Singh : ಅರ್ಶ್​ದೀಪ್​ ಸಿಂಗ್​ಗೆ ಮಾಜಿ ಬೌಲರ್​ ಲಕ್ಷ್ಮೀಪತಿ ಬಾಲಾಜಿ ಕೊಟ್ಟ ಸಲಹೆಯೇನು?

ಅರ್ಶ್​ದೀಪ್​ ಸಿಂಗ್​ (Arshdeep Singh) ಬೌಲಿಂಗ್​ ನಿಖರತೆಯನ್ನು ಅಭ್ಯಾಸ ಮಾಡುವ ಜತೆಗೆ ನೋಬಾಲ್​ ಹಾಕದೇ ಇರುವಂತೆಯೂ ನೋಡಿಕೊಳ್ಳಬೇಕು ಎಂದು ಬಾಲಾಜಿ ಹೇಳಿದ್ದಾರೆ.

VISTARANEWS.COM


on

Arshdeep Singh
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚೆನ್ನೈ : ಭಾರತ ತಂಡದ ವೇಗದ ಬೌಲರ್​ಗಳಾದ ಅರ್ಶ್​ದೀಪ್​ ಸಿಂಗ್ (Arshdeep Singh) ಹಾಗೂ ಉಮ್ರಾನ್​ ಮಲಿಕ್​ ಬೌಲಿಂಗ್​ ಎಕಾನಮಿ ವಿಚಾರಕ್ಕೆ ಚರ್ಚೆಗೆ ಹುಟ್ಟುಹಾಕಿದ್ದಾರೆ. ಅದರಲ್ಲೂ ಅರ್ಶ್​ದೀಪ್​ ಸಿಂಗ್​ ನೋ ಬಾಲ್ ಎಸೆತ ಎಸೆಯುವ ಮೂಲಕ ಟೀಕೆಗೆ ಒಳಗಾಗಿದ್ದಾರೆ. ನ್ಯೂಜಿಲ್ಯಾಂಡ್​ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅವರು ಕೊನೇ ಓವರ್​ನಲ್ಲಿ 27 ರನ್​ ಬಿಟ್ಟುಕೊಟ್ಟಿದ್ದರು. ಅದರಲ್ಲೊಂದು ನೋಬಾಲ್​ ಕೂಡ ಸೇರಿತ್ತು. ಹೀಗಾಗಿ ಹಿರಿಯ ಆಟಗಾರರನೇಕರು ಅರ್ಶ್​ದೀಪ್​ಗೆ ಸಲಹೆಗಳನ್ನು ಕೊಡುತ್ತಿದ್ದಾರೆ. ಅಂತೆಯೇ ಭಾರತ ತಂಡದ ಮಾಜಿ ಬೌಲರ್​ ಲಕ್ಷ್ಮೀಪತಿ ಬಾಲಾಜಿ ಕೂಡ ಅರ್ಶ್​ದೀಪ್​ ಸಿಂಗ್​ಗೆ ಬೌಲಿಂಗ್ ಸಲಹೆ ಕೊಟ್ಟಿದ್ದಾರೆ.

ಅರ್ಶ್​​ದೀಪ್​ ಸಿಂಗ್​ ತಮ್ಮ ನೋಬಾಲ್​ ಕಡಿಮೆಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ನೋಬಾಲ್​ನಂಥ ಸಮಸ್ಯೆಯನ್ನು ಸರಿಪಡಿಸುವುದು ಅಷ್ಟೊಂದು ಸುಲಭವಲ್ಲ. ಅವರು ರನ್​ಅಪ್​ ಎಷ್ಟು ಇರಬೇಕು ಎಂಬುದನ್ನು ನಿರ್ಧರಿಸಬೇಕಾಗಿದೆ. ಅದೇ ರೀತಿ ಅವರು ಒತ್ತಡದಲ್ಲಿ ಬೌಲಿಂಗ್​ ಮಾಡುವುದು ಹೇಗೆ ಎಂಬುದನ್ನೂ ಕಲಿತುಕೊಳ್ಳಬೇಕಾಗುತ್ತದೆ. ಒಂದು ವೇಳೆ ಇದೇ ರೀತಿಯಾಗಿ ನೋಬಾಲ್​ ಎಸೆಯಲು ಆರಂಭಿಸಿದರೆ ಇನ್ನಷ್ಟು ಒತ್ತಡಕ್ಕೆ ಬೀಳಲಿದ್ದಾರೆ ಎಂದು ಹೇಳಿದರು.

ಅರ್ಶ್​ದೀಪ್​ ಸಿಂಗ್​ ಫೂಟ್​ವರ್ಕ್​ ಹೆಚ್ಚಿಸಿಕೊಳ್ಳಬೇಕು. ಬೌಲಿಂಗ್​ ಕೋಚ್​ ನೆರವು ಪಡೆಯುವುದು ಅಗತ್ಯ. ಮುಂದಿನ ಪಂದ್ಯಗಳಲ್ಲಿ ಅವರು ವಿಶ್ವಾಸ ಮೂಡಿಸಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ | IND VS SL | ಅಂತಿಮ ಟಿ20 ಪಂದ್ಯದಿಂದ ಅರ್ಶ್​ದೀಪ್​ ಸಿಂಗ್​ಗೆ ಕೊಕ್​ ಸಾಧ್ಯತೆ; ಮುಕೇಶ್​ ಕುಮಾರ್​ಗೆ ಅವಕಾಶ?

ಫ್ರಂಟ್​ಫೂಟ್​ ನೊಬಾಲ್​ ದೊಡ್ಡ ಸಮಸ್ಯೆಯೇ ಆಗಿದೆ. ಹೀಗಾಗಿ ಅವರು ವಿಶ್ವಾಸ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಓಟದ ಲಯವನ್ನು ಹೆಚ್ಚಿಸಿಕೊಳ್ಳಬೇಕು. ಸರಿಯಾಗಿ ಎಲ್ಲಿ ಹೆಜ್ಜೆ ಇಡಬೇಕು ಎಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಬೇಕು ಎಂಬುದಾಗಿ ಬಾಲಾಜಿ ಹೇಳಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

SRH vs DC: ವಿಸ್ಫೋಟಕ ಬ್ಯಾಟಿಂಗ್​ ಮೂಲಕ ದಾಖಲೆ ಬರೆದ ಸನ್​ರೈಸರ್ಸ್ ತಂಡ

SRH vs DC: ವಿಕೆಟ್​ ನಷ್ಟವಿಲ್ಲದೆ 125 ರನ್​ ಬಾರಿಸುವ ಮೂಲಕ ಸನ್​ರೈರ್ಸ್​ ಹೈದರಾಬಾದ್(Sunrisers Hyderabad)​ ತಂಡ ಐಪಿಎಲ್​(IPL 2024) ಜತೆಗೆ ಟಿ20 ಕ್ರಿಕೆಟ್​ನಲ್ಲಿ ಪವರ್​ ಪ್ಲೇಯಲ್ಲಿ ಅತ್ಯಧಿಕ ರನ್​ ಬಾರಿಸಿದ ತಂಡವೆಂಬ ಹೆಗ್ಗಳಿಗೆ ಪಾತ್ರವಾಯಿತು.

VISTARANEWS.COM


on

SRH vs DC
Koo

ನವದೆಹಲಿ: ಶನಿವಾರದ ಐಪಿಎಲ್(IPL 2024) ಪಂದ್ಯದಲ್ಲಿ​ ಡೆಲ್ಲಿ ಕ್ಯಾಪಿಟಲ್ಸ್(SRH vs DC)​ ವಿರುದ್ಧ ರನ್​ ಮಳೆಯನ್ನೇ ಸುರಿಸಿದ ಸನ್​ರೈಸರ್ಸ್​ ಹೈದರಾಬಾದ್​(Sunrisers Hyderabad) ತಂಡ ಐಪಿಎಲ್​ನಲ್ಲಿ ಹಲವು ದಾಖಲೆಯನ್ನು ತನ್ನ ಹೆಸರಿಗೆ ಬರೆದಿದೆ. ಆರಂಭದಲ್ಲಿ ಪವರ್​ ಪ್ಲೇಯಲ್ಲಿ ಅತ್ಯಧಿಕ ರನ್​ ಗಳಿಸಿದ ತಂಡ ಎಂಬ ಹೆಗ್ಗಳಿಗೆ ಪಾತ್ರವಾದ ಬಳಿಕ 10 ಓವರ್​ನಲ್ಲಿ ಗರಿಷ್ಠ ರನ್​ ಪೇರಿಸಿದ ತನ್ನದೇ ದಾಖಲೆಯನ್ನು ತಿದ್ದಿ ಬರೆದಿದೆ.

10 ಓವರ್​ನಲ್ಲಿ ಗರಿಷ್ಠ ಮೊತ್ತ


ಹೈದರಾಬಾದ್​ ತಂಡ ಇದೇ ಆವೃತ್ತಿಯ ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ 10 ಓವರ್​ಗಳಲ್ಲಿ ಕೇವಲ 2 ವಿಕೆಟ್​ಗೆ 148 ರನ್​ ಬಾರಿಸುವ ಮೂಲಕ ಇದುವರೆಗಿನ ಐಪಿಎಲ್​ ಇತಿಹಾಸದಲ್ಲಿಯೇ 10 ಓವರ್​ಗೆ ಅ್ಯಧಿಕ ಮೊತ್ತ ಗಳಿಸಿದ ಮೊದಲ ತಂಡ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ, ಈ ದಾಖಲೆಯನ್ನು ಮತ್ತೆ ತಿದ್ದಿ ಬರೆದಿದೆ. ಡೆಲ್ಲಿ ವಿರುದ್ಧ 10 ಓವರ್​ಗೆ 4 ವಿಕೆಟ್​ಗೆ 158 ರನ್​ ಬಾರಿಸಿ ತನ್ನ ದಾಖಲೆಯನ್ನು ಮತ್ತಷ್ಟು ಉತ್ತಮಪಡಿಸಿಕೊಂಡಿತು. ಅಚ್ಚರಿ ಎಂದರೆ ಈ ಬಾರಿಯ ಐಪಿಎಲ್​ನಲ್ಲೇ 10 ಓವರ್​ನಲ್ಲಿ ಗರಿಷ್ಠ ರನ್​ ದಾಖಲೆ ನಿರ್ಮಾಣವಾದದ್ದು.

ಐಪಿಎಲ್​ನಲ್ಲಿ 10 ಓವರ್​ಗೆ ಅತಿ ಹೆಚ್ಚು ರನ್​ ಬಾರಿಸಿದ ತಂಡಗಳು


ಸನ್​ರೈಸರ್ಸ್​ ಹೈದರಾಬಾದ್​ 158/4. ಡೆಲ್ಲಿ ವಿರುದ್ಧ(2024)

ಸನ್​ರೈಸರ್ಸ್​ ಹೈದರಾಬಾದ್ 148/2. ಮುಂಬೈ ಇಂಡಿಯ್ಸ್​ ವಿರುದ್ಧ(2024)

ಮುಂಬೈ ಇಂಡಿಯನ್ಸ್​ 141/2. ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ(2024)

ಕೆಕೆಆರ್​ 135/1. ಡೆಲ್ಲಿ ವಿರುದ್ಧ (2024)

ಪವರ್​ ಪ್ಲೇಯಲ್ಲಿ ಅತ್ಯಧಿಕ ರನ್​ ಗಳಿಸಿದ ತಂಡ


ವಿಕೆಟ್​ ನಷ್ಟವಿಲ್ಲದೆ 125 ರನ್​ ಬಾರಿಸುವ ಮೂಲಕ ಸನ್​ರೈರ್ಸ್​ ಹೈದರಾಬಾದ್(Sunrisers Hyderabad)​ ತಂಡ ಐಪಿಎಲ್​(IPL 2024) ಜತೆಗೆ ಟಿ20 ಕ್ರಿಕೆಟ್​ನಲ್ಲಿ ಪವರ್​ ಪ್ಲೇಯಲ್ಲಿ ಅತ್ಯಧಿಕ ರನ್​ ಬಾರಿಸಿದ ತಂಡವೆಂಬ ಹೆಗ್ಗಳಿಗೆ ಪಾತ್ರವಾಯಿತು. ಇದಕ್ಕೂ ಮುನ್ನ ದಾಖಲೆ ಕೆಕೆಆರ್​ ತಂಡದ ಪರ ಇತ್ತು. ಕೆಕೆಆರ್​ ತಂಡ ಆರ್​ಸಿಬಿ ವಿರುದ್ಧ 2017ರಲ್ಲಿ ನೋಲಾಸ್​ಗೆ 105 ರನ್​ ಬಾರಿಸಿತ್ತು. ಈ ದಾಖಲೆ ಇದೀಗ ಪತನಗೊಂಡಿದೆ. ಪವರ್​ ಪ್ಲೇಯಲ್ಲಿ ಮೊದಲ ಬಾರಿಗೆ 100ರನ್​ ಗಡಿ ದಾಡಿದ ದಾಖಲೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಹೆಸರಿನಲ್ಲಿದೆ. 2014ರಲ್ಲಿ ಪಂಜಾಬ್​ ವಿರುದ್ಧ 2 ವಿಕೆಟ್​ಗೆ ಭರ್ತಿ 100ರನ್​ ಬಾರಿಸಿತ್ತು.

ಇದನ್ನೂ ಓದಿ IPL 2024: ಕ್ಯಾಚ್​ ಬಿಟ್ಟ ಹೂಡಾಗೆ ಬೆಸ್ಟ್​ ಫೀಲ್ಡರ್ ಅವಾರ್ಡ್​​; ಇದರ ಹಿಂದಿದೆ ಬಲವಾದ ಕಾರಣ

ಹೈದರಾಬಾದ್​- 125/0. ಡೆಲ್ಲಿ ವಿರುದ್ಧ(2024)

ಕೆಕೆಆರ್​-105/0. ಆರ್​ಸಿಬಿ ವಿರುದ್ಧ(2017)

ಚೆನ್ನೈ-100/2. ಪಂಜಾಬ್​ ವಿರುದ್ಧ(2014)

ಚೆನ್ನೈ-90/0. ಮುಂಬೈ ವಿರುದ್ಧ(2015)

ಕೆಕೆಆರ್​-88/1. ಡೆಲ್ಲಿ ವಿರುದ್ಧ(2024)

ಅಭಿಷೇಕ್​-ಹೆಡ್​ ಬೊಂಬಾಟ್​ ಬ್ಯಾಟಿಂಗ್​


ಎಡಗೈ ಬ್ಯಾಟರ್​ಗಳಾದ ಟ್ರಾವಿಸ್​ ಹೆಡ್​(Travis Head) ಮತ್ತು ಅಭಿಷೇಕ್​ ಶರ್ಮ(Abhishek Sharma) ಅವರ ವಿಸ್ಫೋಟಕ ಬ್ಯಾಟಿಂಗ್​ ಹೈದರಾಬಾದ್​ ತಂಡದ ಪ್ರಮುಖ ಹೈಲೆಟ್ಸ್​ ಆಗಿತ್ತು. ಅಭಿಷೇಕ್​ ಶರ್ಮ ಕೇವಲ 12 ಎಸೆತಗಳಲ್ಲಿ 6 ಸಿಕ್ಸರ್​ ಮತ್ತು 2 ಬೌಂಡರಿ ನೆರವಿನಿಂದ 46 ರನ್​ ಗಳಿಸಿ ಕುಲ್​ದೀಪ್​ ಯಾದವ್​ಗೆ ವಿಕೆಟ್​ ಒಪ್ಪಿಸಿದರು. ಅಭಿಷೇಕ್​ ಮತ್ತು ಹೆಡ್​ ಸೇರಿಕೊಂಡು ಮೊದಲ ವಿಕೆಟ್​ಗೆ 131 ರನ್​ ಜತೆಯಾಟ ನಡೆಸಿದರು. 16 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದ ಟ್ರಾವಿಸ್​ ಹೆಡ್​ 11 ಬೌಂಡರಿ ಮತ್ತು 6 ಸಿಕ್ಸರ್​ ನೆರವಿನಿಂದ 89 ರನ್​ ಬಾರಿಸಿದರು. ಎದುರಿಸಿದ್ದು ಕೇವಲ 32 ಎಸೆತ.

Continue Reading

ಕ್ರೀಡೆ

IPL 2024: ಟಿ20 ಕ್ರಿಕೆಟ್​ನಲ್ಲೇ ನೂತನ ದಾಖಲೆ ಬರೆದ ಸನ್​ರೈರ್ಸ್​ ಹೈದರಾಬಾದ್

IPL 2024: ಹೈದರಾಬಾದ್​ ತಂಡ ಪವರ್​ ಪ್ಲೇಯಲ್ಲಿ ವಿಕೆಟ್​ ನಷ್ಟವಿಲ್ಲದೆ 125 ರನ್​ ಬಾರಿಸಿತು. ಇದು ಟಿ20 ಕ್ರಿಕೆಟ್​ನಲ್ಲಿ ಪವರ್​ ಪ್ಲೇಯಲ್ಲಿ ದಾಖಲಾದ ಮೊದಲ ಅತ್ಯಧಿಕ ರನ್​ ಗಳಿಕೆಯಾಗಿದೆ.

VISTARANEWS.COM


on

IPL 2024
Koo

ನವದೆಹಲಿ: ಎಡಗೈ ಬ್ಯಾಟರ್​ಗಳಾದ ಟ್ರಾವಿಸ್​ ಹೆಡ್​(Travis Head) ಮತ್ತು ಅಭಿಷೇಕ್​ ಶರ್ಮ(Abhishek Sharma) ಅವರ ವಿಸ್ಫೋಟಕ ಬ್ಯಾಟಿಂಗ್​ನಿಂದ ಸನ್​ರೈರ್ಸ್​ ಹೈದರಾಬಾದ್(Sunrisers Hyderabad)​ ತಂಡ ಐಪಿಎಲ್​(IPL 2024) ಜತೆಗೆ ಟಿ20 ಕ್ರಿಕೆಟ್​ನಲ್ಲಿ ನೂತನ ದಾಖಲೆಯೊಂದನ್ನು ಬರೆದಿದೆ. ಪವರ್​ ಪ್ಲೇಯಲ್ಲಿ ಅತ್ಯಧಿಕ ರನ್​ ಬಾರಿಸಿದ ತಂಡವೆಂಬ ಹೆಗ್ಗಳಿಗೆ ಪಾತ್ರವಾಗಿದೆ.

ಇಲ್ಲಿನ ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಏರ್ಪಟ್ಟ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಹೈದರಾಬಾದ್​ ತಂಡಕ್ಕೆ ಆರಂಭಿಕರಾದ ಟ್ರಾವಿಸ್​ ಹೆಡ್​ ಮತ್ತು ಅಭಿಷೇಕ್​ ಶರ್ಮ ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿ ಅಮೋಘ ಆರಂಭ ಒದಗಿಸಿದರು. ಇವರ ಈ ಬ್ಯಾಟಿಂಗ್​ ಪರಾಕ್ರಮದಿಂದ ಹೈದರಾಬಾದ್​ ತಂಡ ಪವರ್​ ಪ್ಲೇಯಲ್ಲಿ ವಿಕೆಟ್​ ನಷ್ಟವಿಲ್ಲದೆ 125 ರನ್​ ಬಾರಿಸಿತು. ಇದು ಟಿ20 ಕ್ರಿಕೆಟ್​ನಲ್ಲಿ ಪವರ್​ ಪ್ಲೇಯಲ್ಲಿ ದಾಖಲಾದ ಮೊದಲ ಅತ್ಯಧಿಕ ರನ್​ ಗಳಿಕೆಯಾಗಿದೆ.

ಇದಕ್ಕೂ ಮುನ್ನ ದಾಖಲೆ ಕೆಕೆಆರ್​ ತಂಡದ ಪರ ಇತ್ತು. ಕೆಕೆಆರ್​ ತಂಡ ಆರ್​ಸಿಬಿ ವಿರುದ್ಧ 2017ರಲ್ಲಿ ನೋಲಾಸ್​ಗೆ 105 ರನ್​ ಬಾರಿಸಿತ್ತು. ಈ ದಾಖಲೆ ಇದೀಗ ಪತನಗೊಂಡಿದೆ. ಪವರ್​ ಪ್ಲೇಯಲ್ಲಿ ಮೊದಲ ಬಾರಿಗೆ 100ರನ್​ ಗಡಿ ದಾಡಿದ ದಾಖಲೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಹೆಸರಿನಲ್ಲಿದೆ. 2014ರಲ್ಲಿ ಪಂಜಾಬ್​ ವಿರುದ್ಧ 2 ವಿಕೆಟ್​ಗೆ ಭರ್ತಿ 100ರನ್​ ಬಾರಿಸಿತ್ತು.

ಪವರ್​ ಪ್ಲೇಯಲ್ಲಿ ಅತ್ಯಧಿಕ ರನ್​ ಗಳಿಸಿದ ತಂಡ


ಹೈದರಾಬಾದ್​- 125/0. ಡೆಲ್ಲಿ ವಿರುದ್ಧ(2024)

ಕೆಕೆಆರ್​-105/0. ಆರ್​ಸಿಬಿ ವಿರುದ್ಧ(2017)

ಚೆನ್ನೈ-100/2. ಪಂಜಾಬ್​ ವಿರುದ್ಧ(2014)

ಚೆನ್ನೈ-90/0. ಮುಂಬೈ ವಿರುದ್ಧ(2015)

ಕೆಕೆಆರ್​-88/1. ಡೆಲ್ಲಿ ವಿರುದ್ಧ(2024)

ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸಿದ ಅಭಿಷೇಕ್​ ಶರ್ಮ ಅವರು ಕೇವಲ 12 ಎಸೆತಗಳಲ್ಲಿ 6 ಸಿಕ್ಸರ್​ ಮತ್ತು 2 ಬೌಂಡರಿ ನೆರವಿನಿಂದ 46 ರನ್​ ಗಳಿಸಿ ಕುಲ್​ದೀಪ್​ ಯಾದವ್​ಗೆ ವಿಕೆಟ್​ ಒಪ್ಪಿಸಿದರು. ಅಭಿಷೇಕ್​ ಮತ್ತು ಹೆಡ್​ ಸೇರಿಕೊಂಡು ಮೊದಲ ವಿಕೆಟ್​ಗೆ 131 ರನ್​ ಜತೆಯಾಟ ನಡೆಸಿದರು. 16 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದ ಟ್ರಾವಿಸ್​ ಹೆಡ್​ 11 ಬೌಂಡರಿ ಮತ್ತು 6 ಸಿಕ್ಸರ್​ ನೆರವಿನಿಂದ 89 ರನ್​ ಬಾರಿಸಿದರು. ಎದುರಿಸಿದ್ದು ಕೇವಲ 32 ಎಸೆತ. ಉಭಯ ಆಟಗಾರರ ವಿಕೆಟ್​ ಪತನದ ಬಳಿಕ ಹೈದರಾಬಾದ್​ ನಾಟಕೀಯ ಕುಸಿತ ಕಂಡಿತು. ಐಡೆನ್​ ಮಾರ್ಕ್ರಮ್​(1) ಮತ್ತು ಹೆನ್ರಿಚ್​ ಕ್ಲಾಸೆನ್​(15) ರನ್​ ಗಳಿಸಿ ನಿರಾಸೆ ಮೂಡಿಸಿದರು.

Continue Reading

ಕ್ರೀಡೆ

IPL 2024: ಕ್ಯಾಚ್​ ಬಿಟ್ಟ ಹೂಡಾಗೆ ಬೆಸ್ಟ್​ ಫೀಲ್ಡರ್ ಅವಾರ್ಡ್​​; ಇದರ ಹಿಂದಿದೆ ಬಲವಾದ ಕಾರಣ

IPL 2024: ಫೀಲ್ಡಿಂಗ್ ಪ್ರಶಸ್ತಿಯು ಕೇವಲ ಅದ್ಭುತ ಪ್ರದರ್ಶನಗಳಲಿಗೆ ಮಾತ್ರವಲ್ಲ. ಗೆಲುವಿಗಾಗಿ ಕಲೆ ಕೆಟ್ಟ ಫೀಲ್ಡಿಂಗ್ ತಂತ್ರ ಕೂಡ ಮಾಡಬೇಕು. ಇದನ್ನು ಹೂಡಾ ಮಾಡಿದ್ದಾರೆ. ಧೋನಿ ಬೇಗನೇ ಕ್ರೀಸ್​ಗೆ ಬರುತ್ತಿದ್ದರೆ ಇನ್ನೂ ಹೆಚ್ಚಿನ ಎಸೆತಗಳು ಅವರಿಗೆ ಲಭಿಸುತ್ತಿತ್ತು. ಜತೆಗೆ ದೊಡ್ಡ ಮೊತ್ತದ ಗುರಿ ಕೂಡ ಲಭಿಸುತ್ತಿತ್ತು. ಇದನ್ನು ಹೂಡಾ ತಪ್ಪಿಸಿದ್ದಾರೆ. ಇದು ನಿಜವಾಗಿಯೂ ಅವರ ಬುದ್ಧಿವಂತ ನಿರ್ಧಾರ ಎಂದು ಲಕ್ನೋ ತಂಡ ಫೀಲ್ಡಿಂಗ್​ ಕೋಚ್​ ಜಾಂಟಿ ರೋಡ್ಸ್‌ ಮೆಚ್ಚುಗೆ ಸೂಚಿಸಿದ್ದಾರೆ.

VISTARANEWS.COM


on

IPL 2024
Koo

ಲಕ್ನೋ: ಎಲ್ಲ ತಂಡದ ಕೋಚ್​ಗಳು ಪಂದ್ಯವೊಂದರಲ್ಲಿ ಉತ್ತಮವಾಗಿ ಬ್ಯಾಟಿಂಗ್​, ಬೌಲಿಂಗ್​ ಮತ್ತು ಫೀಲ್ಡಿಂಗ್​ ನಡೆಸಿದರೆ ಅಂತಹ ಆಟಗಾರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರನ್ನು ಶ್ಲಾಘಿಸುವುದು ವಾಡಿಕೆ. ಆದರೆ, ಲಕ್ನೋ ತಂಡ ಫೀಲ್ಡಿಂಗ್​ ಕೋಚ್​ ಜಾಂಟಿ ರೋಡ್ಸ್‌(Jonty Rhodes) ಅವರು ಕ್ಯಾಚ್​ ಕೈಚೆಲ್ಲಿದ ದೀಪಕ್​ ಹೂಡಾಗೆ(Deepak Hooda) ಮೆಚ್ಚುಗೆ ಜತೆಗೆ ಬೆಸ್ಟ್​ ಫೀಲ್ಡರ್​ ಅವಾರ್ಡ್ ನೀಡಿ(IPL 2024) ಗೌರವಿಸಿದ್ದಾರೆ. ಹೌದು, ಇದಕ್ಕೆ ಕಾರಣ ಧೋನಿ ಅವರ ಬ್ಯಾಟಿಂಗ್​ ಭಯ.

ರವೀಂದ್ರ ಜಡೇಜಾ ಅವರ ಸುಲಭದ ಕ್ಯಾಚ್ ಅನ್ನು ದೀಪಕ್ ಹೂಡಾ ಬೌಂಡರಿ ಲೈನ್​ನಲ್ಲಿ ಕೈ ಚೆಲ್ಲಿ ಸಿಕ್ಸರ್​ ನೀಡಿದ್ದರು. ಪ್ರತಿ ಪಂದ್ಯದಲ್ಲಿಯೂ ಬೆಸ್ಟ್​ ಫೀಲ್ಡಿಂಗ್​ ನಡೆಸಿದ ಲಕ್ನೋ ತಂಡದ ಆಟಗಾರನಿಗೆ ಡ್ರೆಸಿಂಗ್​ ರೂಮ್​ನಲ್ಲಿ ಜಾಂಟಿ ರೋಡ್ಸ್‌ ಅವರು ಮ್ಯಾಜಿಕ್ ಮೈಕ್ ಎನ್ನುವ ಹೆಸರಿನ ಗೊಂಬೆಯೊಂದನ್ನು ನೀಡಿ ಗೌರವಿಸುತ್ತಾರೆ. ಚೆನ್ನೈ ವಿರುದ್ಧದ ಪಂದ್ಯದ ಬಳಿಕ ಜಾಂಟಿ ಈ ಪ್ರಶಸ್ತಿಯನ್ನು ಕ್ಯಾಚ್​ ಬಿಟ್ಟ ದೀಪಕ್​ ಹೂಡಾಗೆ ನೀಡಿದರು. ಈ ವೇಳೆ ಸಹ ಆಟಗಾರರು ಸೇರಿ ಹೂಡಾಗೂ ಒಂದು ಕ್ಷಣ ಆಶ್ಚರ್ಯವಾಯಿತು.

ಇದನ್ನೂ ಓದಿ IPL 2024: ‘ಕ್ಯಾಚ್ ಆಫ್ ದಿ ಐಪಿಎಲ್ 2024’; ಜಡೇಜಾ ಫ್ಲೈಯಿಂಗ್ ಕ್ಯಾಚ್​ಗೆ ಶಬ್ಬಾಶ್ ಎಂದ ರವಿಶಾಸ್ತ್ರಿ

ದೀಪಕ್​ ಹೂಡಾಗೆ ಈ ಪ್ರಶಸ್ತಿಯನ್ನು ನೀಡುತ್ತಿರುವುದು ಏಕೆಂದು ಕೂಡ ಜಾಂಟಿ ವಿವರಿಸಿದರು. ಒಂದೊಮ್ಮೆ ಹೂಡಾ ಅವರು ಜಡೇಜಾ ಕ್ಯಾಚ್​ ಹಿಡಿಯುತ್ತಿದ್ದರೆ ಧೋನಿ ಬೇಗನೆ ಕ್ರೀಸ್​ಗೆ ಆಗಮಿಸುತ್ತಿದ್ದರು. ಇದನ್ನು ಹೂಡಾ ತಡೆದಿದ್ದಾರೆ. ಇದಕ್ಕಾಗಿ ಅವರಿಗೆ ಈ ಪ್ರಶಸ್ತಿ ನೀಡುತ್ತೇನೆ ಎಂದರು.

“ಫೀಲ್ಡಿಂಗ್ ಪ್ರಶಸ್ತಿಯು ಕೇವಲ ಅದ್ಭುತ ಪ್ರದರ್ಶನಗಳಲಿಗೆ ಮಾತ್ರವಲ್ಲ. ಗೆಲುವಿಗಾಗಿ ಕಲೆ ಕೆಟ್ಟ ಫೀಲ್ಡಿಂಗ್ ತಂತ್ರ ಕೂಡ ಮಾಡಬೇಕು. ಇದನ್ನು ಹೂಡಾ ಮಾಡಿದ್ದಾರೆ. ಧೋನಿ ಬೇಗನೇ ಕ್ರೀಸ್​ಗೆ ಬರುತ್ತಿದ್ದರೆ ಇನ್ನೂ ಹೆಚ್ಚಿನ ಎಸೆತಗಳು ಅವರಿಗೆ ಲಭಿಸುತ್ತಿತ್ತು. ಜತೆಗೆ ದೊಡ್ಡ ಮೊತ್ತದ ಗುರಿ ಕೂಡ ಲಭಿಸುತ್ತಿತ್ತು. ಇದನ್ನು ಹೂಡಾ ತಪ್ಪಿಸಿದ್ದಾರೆ. ಇದು ನಿಜವಾಗಿಯೂ ಅವರ ಬುದ್ಧಿವಂತ ನಿರ್ಧಾರ ಎಂದು ನಾನು ಭಾವಿಸುತ್ತೇನೆ” ಎಂದು ರೋಡ್ಸ್ ಹೇಳಿದರು. ಈ ವಿಡಿಯೊ ವೈರಲ್​ ಆಗಿದೆ.

ಇಲ್ಲಿನ ಭಾರತ ರತ್ನ ಶ್ರೀ ಅಟಲ್​ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಮಾಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ ಆರಂಭಿಕ ವಿಕೆಟ್​ಗಳ ನಷ್ಟದ ಹೊರತಾಗಿಯೂ ಕೊನೇ ಹಂತದಲ್ಲಿ ಉತ್ತಮವಾಗಿ ಆಡಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 176 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಲಕ್ನೊ ತಂಡ 19 ಓವರ್​ಗಳಲ್ಲಿ 2ವಿಕೆಟ್ ನಷ್ಟಕ್ಕೆ 180 ರನ್​ ಬಾರಿಸಿ ಗೆಲುವು ಸಾಧಿಸಿತು.

Continue Reading

ಕ್ರೀಡೆ

Ashutosh Sharma: ಖಿನ್ನತೆಗೆ ಒಳಗಾಗಿದ್ದ ಬಿಗ್​ ಹಿಟ್ಟರ್​ ಅಶುತೋಷ್‌ ಶರ್ಮ; ಕ್ರಿಕೆಟ್​ ಜರ್ನಿಯೇ ರೋಚಕ

Ashutosh Sharma: ಸದ್ಯ 4 ಐಪಿಎಲ್ ಪಂದ್ಯ ಆಡಿರುವ ಅಶುತೋಷ್‌ ಶರ್ಮ 156 ರನ್ ಬಾರಿಸಿದ್ದಾರೆ. ಮಿಂಚಿನ ಬ್ಯಾಟಿಂಗ್​ ಮೂಲಕ ಎಲ್ಲರ ಗಮನಸೆಳೆಯುತ್ತಿರುವ 25 ವರ್ಷದ, ಶಾಂತ ಸ್ವಭಾವದ ಈ ಬಿಗ್​ ಹಿಟ್ಟರ್​ ಮುಂದಿನ ದಿನಗಳಲ್ಲಿ ಟೀಮ್​ ಇಂಡಿಯಾ ಪರ ಆಡಿದರೂ ಅಚ್ಚರಿಯಿಲ್ಲ.

VISTARANEWS.COM


on

Ashutosh Sharma
Koo

ಬೆಂಗಳೂರು: ಈ ಬಾರಿಯ ಐಪಿಎಲ್​ನಲ್ಲಿ(IPL 2024) ಸ್ಫೋಟಕ ಬ್ಯಾಟಿಂಗ್ ಮೂಲಕ ಸಂಚಲನ ಮೂಡಿಸಿರುವ​ ಪಂಜಾಬ್​ ಕಿಂಗ್ಸ್(Punjab Kings)​ ತಂಡದ ಅಶುತೋಷ್‌ ಶರ್ಮ(Ashutosh Sharma) ಕ್ರಿಕೆಟ್​ ಆಡುವುದಕ್ಕು ಮುನ್ನ ಅಂಪೈರಿಂಗ್​ ಮಾಡಿ ಜೀವನ ಸಾಗಿಸುತ್ತಿದ್ದರು. ಕ್ರಿಕೆಟ್​ನಲ್ಲಿ ಅವಕಾಶ ಕಡಿಮೆಯಾದಾಗ 6 ತಿಂಗಳು ಖಿನ್ನತೆಗೂ ಒಳಗಾಗಿದ್ದರು.

ಹಾದು, ಅಶುತೋಷ್‌ ಮಧ್ಯಪ್ರದೇಶ ಮೂಲದವರು. ಬಡಕುಟುಂಬದಲ್ಲಿ ಜನಿಸಿದ ಅಶುತೋಷ್‌ ಚಿಕ್ಕ ವಯಸ್ಸಿನಿಂದಲೇ ಕ್ರಿಕೆಟರ್ ಆಗಬೇಕೆನ್ನುವ ಕನಸು ಇಟ್ಟುಕೊಂಡೆ ಬೆಳೆದವರು. ಕ್ರಿಕೆಟ್​ಗಾಗಿಯೇ ಅವರು ಇಂದೋರ್‌ಗೆ ಶಿಫ್ಟ್ ಆದರು. ಆರಂಭಿಕ ಹಂತದಲ್ಲಿ ಅಶುತೋಷ್‌ ಸ್ಥಳೀಯ ಕ್ರಿಕೆಟ್​ ಟೂರ್ನಿಗಳಲ್ಲಿ ಅಂಪೈರಿಂಗ್ ವೃತ್ತಿ ಆರಂಭಿಸಿದರು. ಜತೆಗೆ ತಮ್ಮ ನೆಚ್ಚಿನ ಕ್ರಿಕೆಟ್​ ಕೂಡ ಆಡುತ್ತಾ ಬೆಳೆದರು.

ಟೆನಿಸ್​ ಬಾಲ್​ನಲ್ಲಿ ಉತ್ತಮವಾಗಿ ಆಡುತ್ತಿದ್ದ ಇವರನ್ನು ಮಧ್ಯಪ್ರದೇಶದ ಮಾಜಿ ಕ್ರಿಕೆಟಿಗ, ಅಮಾಯ್ ಖುರೇಸಿಯಾ ಗುರುತಿಸಿ ದೇಶೀಯ ಕ್ರಿಕೆಟ್​ಗೆ ಪರಿಚಯಿಸಿದರು. ಖುರೇಸಿಯಾ ಗರಡಿಯಲ್ಲೇ ಪಳಗಿದ ಅಶುತೋಷ್‌, 2018ರ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮಧ್ಯಪ್ರದೇಶ ಪರ ಆಡಿ ತಂಡದ ಪರ ಅತಿಹೆಚ್ಚು ರನ್‌ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಈ ಪ್ರದರ್ಶನ ತೋರಿದರೂ ಕೂಡ 2019ರಲ್ಲಿ ತಂಡದಿಂದ ಕೈಬಿಡಲಾಯಿತು. ಇದರಿಂದ ತೀವ್ರವಾಗಿ ನೊಂದುಕೊಂಡ ಅವರು 6 ತಿಂಗಳ ಕಾಲ ಖಿನ್ನತೆಯಿಂದಲೂ ಬಳಲಿದ್ದರು.

ತವರು ತಂಡದಲ್ಲಿ ಸ್ಥಾನ ಸಿಗದ ಕಾರಣ ರೈಲ್ವೇಸ್​ ಪರ ಆಡುವ ಅವಕಾಶ ಪಡೆದರು. ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಕೇವಲ 11 ಎಸೆತಗಳಲ್ಲಿ 50 ರನ್ ಸಿಡಿಸಿ ತಮ್ಮ ಬ್ಯಾಟಿಂಗ್​ ಪರಾಕ್ರಮ ತೋರಿಸಿದ್ದರು.

ಕಳೆದ ವರ್ಷ ದುಬೈನಲ್ಲಿ ನಡೆದಿದ್ದ ಮಿನಿ ಹರಾಜಿನಲ್ಲಿ ಪಂಜಾಬ್​ ಕಿಂಗ್ಸ್​ ಇವರನ್ನು ಕೇವಲ 20 ಲಕ್ಷ ರೂ. ನೀಡಿ ಖರೀದಿ ಮಾಡಿತ್ತು. ಆರಂಭದಲ್ಲಿ ಇವರನ್ನು ಇಂಪ್ಯಾಕ್ಟ್​ ಆಟಗಾರನನ್ನಾಗಿ ಪಂಜಾಬ್​ ಕಣಕ್ಕಿಳಿಸಿತ್ತು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಇವರು ಇದೀಗ ತಂಡದ ಪ್ರಮುಖ ಆಟಗಾರನಾಗಿ ಸ್ಥಾನ ಪಡೆಯುತ್ತಿದ್ದಾರೆ. ಅದರಲ್ಲೂ ಕಳೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಜಸ್​ಪ್ರೀತ್​ ಬುಮ್ರಾ ಎಸೆತಕ್ಕೆ ಸ್ವೀಪ್​ ಶಾಟ್​ ಮೂಲಕ ಸಿಕ್ಸರ್​ ಬಾರಿಸಿದ್ದು ಎಲ್ಲರನ್ನು ಅಚ್ಚರಿಗೊಳ್ಳುವಂತೆ ಮಾಡಿತ್ತು. ಏಕೆಂದರೆ ಬುಮ್ರಾ ಅವರ ಘಾತಕ ಬೌಲಿಂಗ್​ಗೆ ಯಾರು ಕೂಡಚ ಇದುವರೆಗೆ ಈ ಶಾಟ್​ ಹೊಡೆದಿರಲಿಲ್ಲ. ಈ ಪ್ರತಿಭಾವಂತ ಆಟಗಾರ ಸಾಧನೆಗೆ ಸ್ವತಃ ಬುಮ್ರಾ ಅವರೇ ಪಂದ್ಯದ ಮುಕ್ತಾಯದ ಬಳಿಕ ಕೈ ಮುಗಿದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಸದ್ಯ 4 ಐಪಿಎಲ್ ಪಂದ್ಯ ಆಡಿರುವ ಇವರು 156 ರನ್ ಬಾರಿಸಿದ್ದಾರೆ. ಮಿಂಚಿನ ಬ್ಯಾಟಿಂಗ್​ ಮೂಲಕ ಎಲ್ಲರ ಗಮನಸೆಳೆಯುತ್ತಿರುವ 25 ವರ್ಷದ, ಶಾಂತ ಸ್ವಭಾವದ ಈ ಬಿಗ್​ ಹಿಟ್ಟರ್​ ಮುಂದಿನ ದಿನಗಳಲ್ಲಿ ಟೀಮ್​ ಇಂಡಿಯಾ ಪರ ಆಡಿದರೂ ಅಚ್ಚರಿಯಿಲ್ಲ.

Continue Reading
Advertisement
Crime Scene
ಶಿವಮೊಗ್ಗ22 mins ago

Murder Case: ಶಿವಮೊಗ್ಗದಲ್ಲಿ ವ್ಯಕ್ತಿಯ ಬರ್ಬರ ಹತ್ಯೆ; ಕ್ರಿಕೆಟ್ ಬ್ಯಾಟ್, ವಿಕೆಟ್‌ಗಳಿಂದ ಹೊಡೆದು ಕೊಂದ ದುಷ್ಕರ್ಮಿಗಳು

SRH vs DC
ಕ್ರೀಡೆ42 mins ago

SRH vs DC: ವಿಸ್ಫೋಟಕ ಬ್ಯಾಟಿಂಗ್​ ಮೂಲಕ ದಾಖಲೆ ಬರೆದ ಸನ್​ರೈಸರ್ಸ್ ತಂಡ

Lok Sabha Election
Lok Sabha Election 202444 mins ago

Lok Sabha Election: ಕೇರಳದಲ್ಲಿ 2 ಲಕ್ಷಕ್ಕಿಂತ ಅಧಿಕ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ದೂರು ದಾಖಲು

Viral Video
ವೈರಲ್ ನ್ಯೂಸ್56 mins ago

Video Viral: ಜಲ ತರಂಗ್‌ನಲ್ಲಿ ಮಹಿಳೆ ನುಡಿಸಿದ ಐಗಿರಿ ನಂದಿನಿ ವಿಡಿಯೋ ವೈರಲ್

ಹರಿಹರಪುರ ಧರ್ಮಸಭೆ
ಚಿಕ್ಕಮಗಳೂರು57 mins ago

ಹರಿಹರಪುರ ಧರ್ಮಸಭೆ; ಸನಾತನ ಹಿಂದು ಸಮಾಜ ಕಟ್ಟುವುದು ನಮ್ಮೆಲ್ಲರ ಧ್ಯೇಯ ಎಂದ ತ್ರಯಾಚಾರ್ಯರು

Kunwar Sarvesh Singh
ದೇಶ1 hour ago

Kunwar Sarvesh: ಮತದಾನ ನಡೆದ ಮರುದಿನವೇ ಬಿಜೆಪಿ ಅಭ್ಯರ್ಥಿ ಹೃದಯಾಘಾತಕ್ಕೆ ಬಲಿ!

IPL 2024
ಕ್ರೀಡೆ1 hour ago

IPL 2024: ಟಿ20 ಕ್ರಿಕೆಟ್​ನಲ್ಲೇ ನೂತನ ದಾಖಲೆ ಬರೆದ ಸನ್​ರೈರ್ಸ್​ ಹೈದರಾಬಾದ್

Prajadhwani 2 Lok Sabha election campaign meeting at KR Nagar
ಮಂಡ್ಯ1 hour ago

Lok Sabha Election 2024: ನನ್ನನ್ನು ಗೆಲ್ಲಿಸಿ, ಕಾಂಗ್ರೆಸ್‌ಗೆ ಶಕ್ತಿ ತುಂಬಿ: ವೆಂಕಟರಮಣೇಗೌಡ ಮನವಿ

Uttara Kannada Lok Sabha Constituency BJP Candidate Vishweshwara Hegde Kageri latest Statement
ಉತ್ತರ ಕನ್ನಡ2 hours ago

Sirsi News: ಕಾಂಗ್ರೆಸ್ ಸರ್ಕಾರದ ಮತಾಂಧರ ಓಲೈಕೆಯೇ ನೇಹಾ ಹತ್ಯೆಗೆ ಕಾರಣ: ಕಾಗೇರಿ ಖಂಡನೆ

Narendra Modi
ಪ್ರಮುಖ ಸುದ್ದಿ2 hours ago

ಚಾಯ್‌ವಾಲಾ ಮೋದಿ ಐಐಟಿ ಬಗ್ಗೆ ಹೇಗೆ ಮಾತನಾಡುತ್ತಾರೆ ಎಂದ ಕಾಂಗ್ರೆಸ್ ನಾಯಕ; ಭುಗಿಲೆದ್ದ ವಿವಾದ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ5 hours ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20246 hours ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20248 hours ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ9 hours ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ10 hours ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ17 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ1 day ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ2 days ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ4 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ5 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

ಟ್ರೆಂಡಿಂಗ್‌