INDvsPAK | ಪಾಕಿಸ್ತಾನ ವಿರುದ್ಧ ದ್ವಿಪಕ್ಷೀಯ ಸರಣಿಯಲ್ಲಿ ಆಡುವುದಿಲ್ಲ, ಬಿಸಿಸಿಐ ಸಭೆಯಲ್ಲಿ ಸ್ಪಷ್ಟನೆ - Vistara News

ಕ್ರಿಕೆಟ್

INDvsPAK | ಪಾಕಿಸ್ತಾನ ವಿರುದ್ಧ ದ್ವಿಪಕ್ಷೀಯ ಸರಣಿಯಲ್ಲಿ ಆಡುವುದಿಲ್ಲ, ಬಿಸಿಸಿಐ ಸಭೆಯಲ್ಲಿ ಸ್ಪಷ್ಟನೆ

ಬದ್ಧ ವೈರಿಗಳ ನಡುವಿನ ಕ್ರಿಕೆಟ್​ ಸಮರಕ್ಕೆ ಬಿಸಿಸಿಐ ಪರಾಮರ್ಶೆ ಸಭೆಯಲ್ಲಿ ನಿರಾಕರಣೆ ವ್ಯಕ್ತಗೊಂಡಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ : ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ತಟಸ್ಥ ಸ್ಥಳದಲ್ಲಿ ದ್ವಿಪಕ್ಷೀಯ ಸರಣಿಗಳು ನಡೆಯುತ್ತವೆ ಎಂಬ ನಿರೀಕ್ಷೆಗಳು ಸುಳ್ಳಾಗಿವೆ. ಭಾನುವಾರ (ಜನವರಿ 1ರಂದು) ನಡೆದ ಟೀಮ್​ ಇಂಡಿಯಾದ ಪ್ರದರ್ಶನ ಪರಾಮರ್ಶೆ ಸಭೆಯಲ್ಲಿ ಬಿಸಿಸಿಐ ಅಧಿಕಾರಿಗಳು ಈ ಯೋಜನೆಗೆ ಸಮ್ಮತಿ ಸೂಚಿಸಿಲ್ಲ.

ಭಾರತ ಹಾಗೂ ಪಾಕಿಸ್ತಾನ ತಂಡಗಳಿಗೆ ಪರಸ್ಪರ ಉಭಯ ದೇಶಗಳಿಗೆ ಪ್ರವಾಸ ಮಾಡಲು ಸಾಧ್ಯವಾಗದ ಹೊರತಾಗಿಯೂ, ಯುಎಇ ಆಸ್ಟ್ರೇಲಿಯಾದಂಥ ತಟಸ್ಥ ತಾಣದಲ್ಲಿ ಪಂದ್ಯ ನಡೆಸಬಹುದು ಎಂದು ಕ್ರಿಕೆಟ್​ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆಸ್ಟ್ರೇಲಿಯಾದ ಮೆಲ್ಬೋರ್ನ್​ ಕ್ರಿಕೆಟ್​ ಕ್ಲಬ್​ ಈ ಯೋಜನೆಯ ಬಗ್ಗೆ ಇತ್ತೀಚೆಗೆ ಪ್ರಸ್ತಾಪವೊಂದನ್ನು ಮಾಡಿತ್ತು. ಈ ವಿಚಾರ ಭಾನುವಾರ ನಡೆದ ಸಭೆಯಲ್ಲೂ ಚರ್ಚೆಗೆ ಬಂದಿತ್ತು ಎನ್ನಲಾಗಿದೆ. ಆದರೆ, ಬಿಸಿಸಿಐ ನೂತನ ಅಧ್ಯಕ್ಷ ರೋಜರ್​ ಬಿನ್ನಿ ಸೇರಿದಂತೆ ಎಲ್ಲ ಪದಾಧಿಕಾರಿಗಳು ಈ ಬಗ್ಗೆ ಉತ್ಸಾಹ ವ್ಯಕ್ತಪಡಿಸಿಲ್ಲ ಎನ್ನಲಾಗಿದೆ.

2007ರಿಂದ ಭಾರತ ಕ್ರಿಕೆಟ್​ ತಂಡ ಪಾಕಿಸ್ತಾನಕ್ಕೆ ಪ್ರವಾಸ ಮಾಡಿಲ್ಲ. ಎರಡೂ ದೇಶಗಳ ನಡುವೆ ಗಡಿ ತಂಟೆ ಹಾಗೂ ರಾಜಕೀಯ ಭಿನ್ನಾಭಿಪ್ರಾಯ ಇರುವ ಕಾರಣ ಸರಣಿ ಆಯೋಜನೆ ಸಾಧ್ಯವಾಗುತ್ತಿಲ್ಲ. ಆದರೆ, ಅತಿ ಹೆಚ್ಚು ಆದಾಯ ತಂದುಕೊಡುವ ಈ ಸರಣಿಯನ್ನು ನಡೆಸುವುದು ಹಲವರ ಅಭಿಪ್ರಾಯವಾಗಿದೆ. ಆದರೆ, ಬಿಸಿಸಿಐ ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲ.

ಇದನ್ನೂ ಓದಿ | BCCI Meeting | ಹೊಸ ವರ್ಷಕ್ಕೆ ಸಭೆ ಕರೆದ ಬಿಸಿಸಿಐ; ಕೋಚ್ ದ್ರಾವಿಡ್​, ನಾಯಕ ರೋಹಿತ್​ಗೆ ನಡುಕ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

MS Dhoni : ಧೋನಿಯನ್ನು ತಂಡದಲ್ಲಿ ಉಳಿಸಿಕೊಳ್ಳಲು ನಿಯಮವನ್ನೇ ಬದಲಾಯಿಸಲು ಕೋರಿದ ಚೆನ್ನೈ ಸೂಪರ್ ಕಿಂಗ್ಸ್​

MS Dhoni: ಮುಂಬೈನಲ್ಲಿ ಇತ್ತೀಚೆಗೆ ನಡೆದ ಐಪಿಎಲ್ ಸಮಿತಿ ಮತ್ತು ಹತ್ತು ಫ್ರಾಂಚೈಸಿಗಳ ನಡುವಿನ ಸಭೆಯಲ್ಲಿ, ಸಿಎಸ್​ಕೆ ಹಳೆಯ ನಿಯಮವನ್ನು ಮರಳಿ ತರಲು ಪ್ರಸ್ತಾಪಿಸಿದೆ. ಆಗಸ್ಟ್ 15, 2020 ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾದ ಅನುಭವಿ ವಿಕೆಟ್ ಕೀಪರ್-ಬ್ಯಾಟರ್​ ಧೋನಿಯನ್ನು ಉಳಿಸಿಕೊಳ್ಳುವುದು ಅವರ ಉದ್ದೇಶವಾಗಿದೆ. ಈ ಬದಲಾವಣೆ ಜಾರಿಗೆ ಬಂದರೆ ಸಿಎಸ್​ಕೆ ಮುಂದಿನ ಋತುವಿನಲ್ಲಿ ಧೋನಿಯನ್ನು ಉಳಿಸಿಕೊಳ್ಳಲಿದೆ. ಅದಕ್ಕಾಗಿ ಪ್ರಸ್ತುತ ಅವರು ಹೊಂದಿರುವ 12 ಕೋಟಿ ರೂ. ವೇತನದಲ್ಲಿ ಉಳಿಕೆಯಾಗಲಿದೆ.

VISTARANEWS.COM


on

MS Dhoni
Koo

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ನಲ್ಲಿ ಆಟಗಾರರನ್ನು ಪರಿಗಣಿಸುವ ನಿಯಮ ಬದಲಾವಣೆ ಮಾಡುವಂತೆ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಐಪಿಎಲ್ ಮ್ಯಾನೇಜ್ಮೆಂಟ್​ಗೆ ಕೋರಿದೆ. ಅದರ ಮೂಲ ಉದ್ದೇಶ ಧೋನಿಯನ್ನು (MS Dhoni) ಉಳಿಸಿಕೊಳ್ಳುವುದು. ‘ಎಂಎಸ್ ಧೋನಿ ಅವರನ್ನು 2025 ರ ಋತುವಿನಲ್ಲಿ ಅನ್​ಕ್ಯಾಪ್ಡ್​​ ಆಟಗಾರನಾಗಿ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಈ ಪ್ರಸ್ತಾಪವು ಫ್ರಾಂಚೈಸಿಗಳಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ ಮತ್ತು ಲೀಗ್​ನಲ್ಲಿ ಆಟಗಾರರ ಮೌಲ್ಯಮಾಪನ ಮತ್ತು ನ್ಯಾಯಸಮ್ಮತತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಐಪಿಎಲ್ 2008 ರಲ್ಲಿ ಪ್ರಾರಂಭವಾದ ಐಪಿಎಲ್​ ಭಾರತೀಯ ಕ್ರಿಕೆಟ್​​ನ ಮೂಲಾಧಾರವಾಗಿದೆ. ಇಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ನಿಯಮಗಳು ಬದಲಾಯಿಸಲಾಗುತ್ತದೆ. 2021 ರವರೆಗೆ ಐದು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್​ನಿಂದದ ನಿವೃತ್ತಿ ಪಡೆದು ದೂರವಿದ್ದ ಆಟಗಾರರನ್ನು ಅನ್​ಕ್ಯಾಪ್ಡ್​ ಎಂದು ವರ್ಗೀಕರಿಸುವ ನಿಯಮವಿತ್ತು. ತಂಡಗಳ ಕೋರಿಕೆಯ ಮೇರೆಗೆ ಈ ನಿಯಮ ರದ್ದುಪಡಿಸಲಾಗಿತ್ತು ಎಂದು ವರದಿಯಾಗಿದೆ. ಆದರೆ ಸಿಎಸ್​ಕೆ ಈಗ ಅದರ ಪುನಃಸ್ಥಾಪನೆಯನ್ನು ಬಯಸಿದೆ. ಯಾಕೆಂದರೆ ತಂಡದಲ್ಲಿ ಧೋನಿಯನ್ನು ಅನ್​ಕ್ಯಾಪ್ಡ್​ ಪ್ಲೇಯರ್ ಎಂದು ಉಳಿಸಿಕೊಳ್ಳುವುದೇ ಅವರ ಉದ್ದೇಶವಾಗಿದೆ.

ಮುಂಬೈನಲ್ಲಿ ಇತ್ತೀಚೆಗೆ ನಡೆದ ಐಪಿಎಲ್ ಸಮಿತಿ ಮತ್ತು ಹತ್ತು ಫ್ರಾಂಚೈಸಿಗಳ ನಡುವಿನ ಸಭೆಯಲ್ಲಿ, ಸಿಎಸ್​ಕೆ ಹಳೆಯ ನಿಯಮವನ್ನು ಮರಳಿ ತರಲು ಪ್ರಸ್ತಾಪಿಸಿದೆ. ಆಗಸ್ಟ್ 15, 2020 ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾದ ಅನುಭವಿ ವಿಕೆಟ್ ಕೀಪರ್-ಬ್ಯಾಟರ್​ ಧೋನಿಯನ್ನು ಉಳಿಸಿಕೊಳ್ಳುವುದು ಅವರ ಉದ್ದೇಶವಾಗಿದೆ. ಈ ಬದಲಾವಣೆ ಜಾರಿಗೆ ಬಂದರೆ ಸಿಎಸ್​ಕೆ ಮುಂದಿನ ಋತುವಿನಲ್ಲಿ ಧೋನಿಯನ್ನು ಉಳಿಸಿಕೊಳ್ಳಲಿದೆ. ಅದಕ್ಕಾಗಿ ಪ್ರಸ್ತುತ ಅವರು ಹೊಂದಿರುವ 12 ಕೋಟಿ ರೂ. ವೇತನದಲ್ಲಿ ಉಳಿಕೆಯಾಗಲಿದೆ.

ಈ ಸಲಹೆಯು ಇತರ ಫ್ರಾಂಚೈಸಿಗಳಿಂದ ಪ್ರತಿರೋಧವನ್ನು ಎದುರಿಸಿದೆ. ಸನ್ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾದ ಕಾವ್ಯಾ ಮಾರನ್ ಅವರು ನಿವೃತ್ತ ಅಂತಾರಾಷ್ಟ್ರೀಯ ಆಟಗಾರರನ್ನು ಅನ್​ಕ್ಯಾಪ್ಡ್​​ ಆಟಗಾರರು ಎಂದು ವರ್ಗೀಕರಿಸುವುದು ಅವರ ಮೌಲ್ಯಕ್ಕೆ ಅಗೌರವ ಎಂದಿದ್ದಾರೆ. ಹರಾಜು ಪ್ರಕ್ರಿಯೆಯ ಮೂಲಕ ಆಟಗಾರನ ಮೌಲ್ಯ ನಿರ್ಧರಿಸಲು ಅವಕಾಶ ನೀಡುವುದು ಹೆಚ್ಚು ಸೂಕ್ತವಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಆಗಸ್ಟ್​​ 2ರಂದು ಭಾರತದ ಅಥ್ಲೀಟ್​ಗಳ ಸ್ಪರ್ಧೆಯ ವಿವರ ಇಲ್ಲಿದೆ

ಇತರ ತಂಡಗಳು ಸಹ ಈ ಹೇಳಿಕೆಯನ್ನು ಬೆಂಬಲಿಸಿವೆ. ಹಲವಾರು ಫ್ರಾಂಚೈಸಿಗಳು ಮಾಜಿ ಅಂತರರಾಷ್ಟ್ರೀಯ ಆಟಗಾರರನ್ನು ಅವರ ನಿವೃತ್ತಿಯ ಅವಧಿಯನ್ನು ಲೆಕ್ಕಿಸದೆ ಅನ್​ಕ್ಯಾಪ್ಡ್​ ವಿಭಾಗದಲ್ಲಿ ಪರಿಗಣಿಸುವ ಆಲೋಚನೆಯನ್ನು ವಿರೋಧಿಸಿದವು.

ಭಾರತ ತಂಡದ ನಿವೃತ್ತ ಆಟಗಾರರಿಗೆ ಸಂಬಂಧಿಸಿದ ವಿಷಯದ ಬಗ್ಗೆಯೂ ಚರ್ಚೆ ನಡೆಯಿತು. ಐದು ವರ್ಷಗಳಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದ ಭಾರತೀಯ ಆಟಗಾರರಿಗೆ ಹರಾಜಿನಲ್ಲಿ ತಮ್ಮ ಮೂಲ ಬೆಲೆಯನ್ನು ಕಡಿಮೆ ಮಾಡಲು ಅವಕಾಶ ನೀಡುವ ಪ್ರಸ್ತಾಪವನ್ನು ಫ್ರಾಂಚೈಸಿಗಳು ಸರ್ವಾನುಮತದಿಂದ ಒಪ್ಪಿಕೊಂಡವು.

Continue Reading

ಆರೋಗ್ಯ

Blood Cancer: ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್‌ರನ್ನು ಬಲಿ ಪಡೆದ ರಕ್ತದ ಕ್ಯಾನ್ಸರ್‌ಗೆ ಏನು ಕಾರಣ? ಇದರ ಲಕ್ಷಣಗಳೇನು?

ಭಾರತೀಯ ತಂಡದ ಮುಖ್ಯ ಕೋಚ್ ಆಗಿದ್ದ ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಒಂದು ವರ್ಷದಿಂದ ರಕ್ತದ ಕ್ಯಾನ್ಸರ್ (Blood Cancer) ವಿರುದ್ಧ ಹೋರಾಡುತ್ತಿದ್ದರು. ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಫಲ ನೀಡಲಿಲ್ಲ. ಬುಧವಾರ ಅವರು ಎಲ್ಲರನ್ನೂ ಅಗಲಿದ್ದಾರೆ. ಮಾರಣಾಂತಿಕ ಕ್ಯಾನ್ಸರ್ ಗಳಲ್ಲಿ ಒಂದಾಗಿರುವ ರಕ್ತದ ಕ್ಯಾನ್ಸರ್ ಎಂದರೇನು, ಅದರ ಲಕ್ಷಣಗಳು ಯಾವುದು ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

Blood Cancer
Koo

ರಕ್ತದ ಕ್ಯಾನ್ಸರ್‌ನೊಂದಿಗೆ (Blood Cancer) ದೀರ್ಘ ಕಾಲ ಹೋರಾಡಿದ ಭಾರತದ ಮಾಜಿ ಕ್ರಿಕೆಟಿಗ (Indian cricketer) ಅಂಶುಮಾನ್ ಗಾಯಕ್ವಾಡ್ (Anshuman Gaekwad) 71ನೇ ವಯಸ್ಸಿನಲ್ಲಿ ಬುಧವಾರ ನಿಧನರಾದರು. 1997, 1999 ಮತ್ತು 2000 ನಡುವೆ ಭಾರತೀಯ ತಂಡದ ಮುಖ್ಯ ಕೋಚ್ ಆಗಿದ್ದ ಗಾಯಕ್ವಾಡ್ ಒಂದು ವರ್ಷದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೂ ಚಿಕಿತ್ಸೆ ಫಲ ನೀಡಲಿಲ್ಲ. ರಕ್ತದ ಕ್ಯಾನ್ಸರ್ ಮಾರಣಾಂತಿಕ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ. ಹಾಗಾದರೆ ರಕ್ತದ ಕ್ಯಾನ್ಸರ್ ಎಂದರೇನು, ಅದರ ಲಕ್ಷಣಗಳು ಯಾವುದು ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ರಕ್ತದ ಕ್ಯಾನ್ಸರ್‌ಗೆ ಏನು ಕಾರಣ?

ದೇಹವು ರಕ್ತ ಕಣಗಳನ್ನು ಹೇಗೆ ಉತ್ಪಾದಿಸುತ್ತದೆ ಮತ್ತು ಅವು ಎಷ್ಟು ಚೆನ್ನಾಗಿ ಕೆಲಸ ಮಾಡುತ್ತದೆ ಎಂಬುದರ ಮೇಲೆ ಪರಿಣಾಮ ಬೀರುವ ರಕ್ತ ಕ್ಯಾನ್ಸರ್ ಮೂಳೆಯಲ್ಲಿ ಪ್ರಾರಂಭವಾಗುತ್ತದೆ. ಮೂಳೆಗಳ ಮಧ್ಯಭಾಗದಲ್ಲಿರುವ ಸ್ಪಾಂಜ್ ನಂತಹ ವಸ್ತು ಕಾಂಡಕೋಶಗಳನ್ನು ಪ್ರಬುದ್ಧಗೊಳಿಸುತ್ತದೆ. ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು ಮತ್ತು ಪ್ಲೇಟ್ಲೆಟ್ ಗಳಾಗಿ ಮಾರ್ಪಡುವಂತೆ ಮಾಡುತ್ತದೆ.

ಸಾಮಾನ್ಯ ರಕ್ತ ಕಣಗಳು ಸೋಂಕಿನ ವಿರುದ್ಧ ಹೋರಾಡುತ್ತವೆ. ದೇಹದಾದ್ಯಂತ ಆಮ್ಲಜನಕವನ್ನು ಸಾಗಿಸುತ್ತವೆ ಮತ್ತು ರಕ್ತಸ್ರಾವವನ್ನು ನಿಯಂತ್ರಿಸುತ್ತವೆ. ಆದರೆ ದೇಹವು ರಕ್ತ ಕಣಗಳನ್ನು ತಯಾರಿಸುವಾಗ ಏನಾದರೂ ಅಡ್ಡಿಯಾದರೆ ಅದು ರಕ್ತದ ಕ್ಯಾನ್ಸರ್ ಆಗಿ ಪರಿವರ್ತನೆಯಾಗುತ್ತದೆ.

ವೈದ್ಯರ ಪ್ರಕಾರ, ರಕ್ತದ ಕ್ಯಾನ್ಸರ್ ಹೊಂದಿರುವವರಲ್ಲಿ ಅಸಹಜ ರಕ್ತ ಕಣಗಳು ಸಾಮಾನ್ಯ ರಕ್ತ ಕಣಗಳನ್ನು ನಾಶಪಡಿಸುತ್ತವೆ. ಇದು ವೈದ್ಯಕೀಯ ಪರಿಸ್ಥಿತಿಗಳ ಏರಿಳಿತದ ಪರಿಣಾಮವನ್ನು ಉಂಟುಮಾಡುತ್ತದೆ.

Blood Cancer
Blood Cancer


ಭಾರತದಲ್ಲೇ ಹೆಚ್ಚು

ಅಂಕಿಅಂಶಗಳ ಪ್ರಕಾರ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ರಕ್ತದ ಕ್ಯಾನ್ಸರ್ ಪ್ರಮಾಣವನ್ನು ಹೊಂದಿದೆ. ವರ್ಷಕ್ಕೆ 1 ಲಕ್ಷದಿಂದ 5.5 ಲಕ್ಷ ಜನರಲ್ಲಿ ರಕ್ತ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಪ್ರತಿ ವರ್ಷ ಕನಿಷ್ಠ 80,000 ಹೊಸ ಪ್ರಕರಣಗಳು ಅಥವಾ ಪ್ರತಿ ಏಳು ಸೆಕೆಂಡಿಗೆ ಒಂದು ಹೊಸ ಪ್ರಕರಣ ದಾಖಲಾಗುತ್ತಿದೆ. 2022ರಲ್ಲಿ ಭಾರತದಲ್ಲಿ 70,000ಕ್ಕೂ ಹೆಚ್ಚು ಜನರು ರಕ್ತದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದರು.

ಇದರಲ್ಲಿ ಮೂರು ವಿಧ

ರಕ್ತ ಕ್ಯಾನ್ಸರ್ ಮೂರು ವಿಧವನ್ನು ಹೊಂದಿದ್ದು, ಇದರಲ್ಲಿ ಉಪವಿಧಗಳೂ ಸೇರಿವೆ.

ಲ್ಯುಕೇಮಿಯಾ: ಮಕ್ಕಳು ಮತ್ತು ಹದಿಹರೆಯದವರಲ್ಲಿ ಇದು ಸಾಮಾನ್ಯ ರಕ್ತ ಕ್ಯಾನ್ಸರ್ ಆಗಿದೆ. ಲ್ಯುಕೇಮಿಯಾದ ವಿಧಗಳಲ್ಲಿ ತೀವ್ರವಾದ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ, ತೀವ್ರವಾದ ಮೈಲೋಯ್ಡ್ ಲ್ಯುಕೇಮಿಯಾ, ದೀರ್ಘಕಾಲದ ಲಿಂಫೋಸೈಟಿಕ್ ಲ್ಯುಕೇಮಿಯಾ ಮತ್ತು ದೀರ್ಘಕಾಲದ ಮೈಲೋಜೆನಸ್ ಲ್ಯುಕೇಮಿಯಾ ಸೇರಿವೆ.

ಲಿಂಫೋಮಾ: ಇದು ದುಗ್ಧರಸ ವ್ಯವಸ್ಥೆಯ ಕ್ಯಾನ್ಸರ್. ಇದು ಮೂಳೆ ಮಜ್ಜೆಯನ್ನು ಒಳಗೊಂಡಿರುತ್ತದೆ. ಇದರ ವಿಧಗಳಲ್ಲಿ ಹಾಡ್ಗ್ ಕಿನ್ ಲಿಂಫೋಮಾ, ಹಾಡ್ಗ್ ಕಿನ್ ಅಲ್ಲದ ಲಿಂಫೋಮಾ, ಬಿ-ಸೆಲ್ ಲಿಂಫೋಮಾ ಮತ್ತು ಚರ್ಮದ ಟಿ-ಸೆಲ್ ಲಿಂಫೋಮಾ ಸೇರಿವೆ.

ಮೈಲೋಮಾ: ಮೈಲೋಮಾ ಮೂಳೆ ಮಜ್ಜೆಯಲ್ಲಿ ಪ್ರಾರಂಭವಾಗುತ್ತದೆ. ಇದು ಪ್ಲಾಸ್ಮಾ ಜೀವಕೋಶಗಳ ಮೇಲೆ ಪರಿಣಾಮ ಬೀರುವ ಕ್ಯಾನ್ಸರ್ ಆಗಿದೆ. ಮಲ್ಟಿಪಲ್ ಮೈಲೋಮಾ ಅತ್ಯಂತ ಸಾಮಾನ್ಯವಾದ ಮೈಲೋಮಾ ವಿಧವಾಗಿದೆ. ಮೈಲೋಮಾ ರೋಗ ನಿರ್ಣಯ ಮಾಡಿದ ಅರ್ಧಕ್ಕಿಂತ ಹೆಚ್ಚು ಜನರು ರೋಗ ನಿರ್ಣಯದ ಅನಂತರ ಕನಿಷ್ಠ ಐದು ವರ್ಷಗಳವರೆಗೆ ಬದುಕುತ್ತಾರೆ.

Blood Cancer
Blood Cancer


ಯಾಕೆ ಬರುತ್ತದೆ?

ರಕ್ತದ ಕ್ಯಾನ್ಸರ್ ಯಾಕೆ ಬರುತ್ತದೆ ಎಂಬುದಕ್ಕೆ ಖಚಿತ ಕಾರಣವಿಲ್ಲ. ಆದರೂ ಇದಕ್ಕೆ ಮುಖ್ಯವಾಗಿ ಡಿಎನ್ಎ ಕಾರಣ ಎಂದು ಅಧ್ಯಯನಗಳು ಹೇಳಿವೆ.

ಡಿಎನ್‌ಎ ರಕ್ತ ಕಣಗಳನ್ನು ಯಾವಾಗ ವಿಭಜಿಸಬೇಕು ಅಥವಾ ಗುಣಿಸಬೇಕು ಮತ್ತು ಯಾವಾಗ ಸಾಯಬೇಕು ಎಂದು ನಿರ್ಧರಿಸುತ್ತದೆ. ಆದ್ದರಿಂದ ಡಿಎನ್‌ಎ ನಿಮ್ಮ ಜೀವಕೋಶಗಳಿಗೆ ಹೊಸ ಸೂಚನೆಗಳನ್ನು ನೀಡಿದಾಗ ದೇಹವು ಅಸಹಜ ರಕ್ತ ಕಣಗಳನ್ನು ಅಭಿವೃದ್ಧಿಪಡಿಸುತ್ತದೆ. ಅದು ಸಾಮಾನ್ಯಕ್ಕಿಂತ ವೇಗವಾಗಿ ಬೆಳೆಯುತ್ತದೆ. ಗುಣಿಸುತ್ತದೆ ಮತ್ತು ಕೆಲವೊಮ್ಮೆ ಸಾಮಾನ್ಯಕ್ಕಿಂತ ಹೆಚ್ಚು ಕಾಲ ಬದುಕುತ್ತದೆ. ಸಾಮಾನ್ಯ ರಕ್ತ ಕಣಗಳು ನಿರಂತರವಾಗಿ ಬೆಳೆಯುತ್ತಿರುವ ಅಸಹಜ ಕೋಶಗಳ ಗುಂಪಿನಲ್ಲಿ ಕಳೆದುಹೋಗುತ್ತವೆ. ಅದು ಸಾಮಾನ್ಯ ಕೋಶಗಳನ್ನು ಒಟ್ಟುಗೂಡಿಸುತ್ತದೆ ಮತ್ತು ಮೂಳೆ ಮಜ್ಜೆಯಲ್ಲಿ ಜಾಗವನ್ನು ಏಕಸ್ವಾಮ್ಯಗೊಳಿಸುತ್ತದೆ. ಅಂತಿಮವಾಗಿ ಮೂಳೆ ಮಜ್ಜೆಯು ಕಡಿಮೆ ಸಾಮಾನ್ಯ ಜೀವಕೋಶಗಳನ್ನು ಉತ್ಪಾದಿಸುತ್ತದೆ. ಆದ್ದರಿಂದ ಆನುವಂಶಿಕ ಬದಲಾವಣೆಯು ಮೂರು ವಿಧದ ರಕ್ತದ ಕ್ಯಾನ್ಸರ್ ಗೆ ಕಾರಣವಾಗುತ್ತದೆ.

ರಕ್ತ ಕ್ಯಾನ್ಸರ್ ಲಕ್ಷಣಗಳೇನು?

ರಕ್ತದ ಕ್ಯಾನ್ಸರ್ ಲಕ್ಷಣಗಳು ಎಲ್ಲರಲ್ಲೂ ಒಂದೇ ರೀತಿ ಇರುವುದಿಲ್ಲ ಎನ್ನುತ್ತಾರೆ ತಜ್ಞರು. ಆದರೂ ಮೂರು ಸಾಮಾನ್ಯವಾಗಿರುವ ಕೆಲವು ಚಿಹ್ನೆಗಳನ್ನು ಹೊಂದಿರುತ್ತದೆ.

ಆಯಾಸ, ಕಡಿಮೆ ರೋಗನಿರೋಧಕ ಶಕ್ತಿಯಿಂದಾಗಿ ನಿರಂತರ ಮತ್ತು ಹೆಚ್ಚಿನ ಜ್ವರ, ರಾತ್ರಿ ಬೆವರುವಿಕೆ, ಅಸಾಮಾನ್ಯ ರಕ್ತಸ್ರಾವ, ಅನಿರೀಕ್ಷಿತ ತೂಕ ನಷ್ಟ, ಆಗಾಗ್ಗೆ ಸೋಂಕುಗಳು, ಊದಿಕೊಂಡ ದುಗ್ಧರಸ ಗ್ರಂಥಿಗಳು, ಯಕೃತ್ತು ತೊಂದರೆಗಳು, ಮೂಳೆ ನೋವು ಕಾಣಿಸಿಕೊಳ್ಳುತ್ತವೆ.

ಇದನ್ನೂ ಓದಿ: Condom Cause Cancer: ಕಾಂಡೋಮ್, ಲೂಬ್ರಿಕೆಂಟ್‍ ಬಳಸಿದರೂ ಕ್ಯಾನ್ಸರ್‌! ಅಧ್ಯಯನ ವರದಿಯಲ್ಲಿ ಆಘಾತಕಾರಿ ಸಂಗತಿ

ರಕ್ತ ಕ್ಯಾನ್ಸರ್‌ನ ಅನೇಕ ರೋಗಲಕ್ಷಣಗಳು ಸಾಮಾನ್ಯ ಕಾಯಿಲೆಗಳಿಗೂ ಹೋಲುತ್ತವೆ. ಆದ್ದರಿಂದ ಈ ಯಾವುದೇ ರೋಗಲಕ್ಷಣಗಳನ್ನು ಹೊಂದಿರುವವರು ರಕ್ತದ ಕ್ಯಾನ್ಸರ್ ಹೊಂದಿದ್ದಾರೆ ಎಂದೇ ಅರ್ಥವಲ್ಲ. ಆದರೆ ಕೆಲವು ವಾರಗಳಿಗಿಂತ ಹೆಚ್ಚು ಕಾಲ ದೇಹದಲ್ಲಿ ರೋಗಲಕ್ಷಣಗಳು ಅಥವಾ ಬದಲಾವಣೆಗಳನ್ನು ಗಮನಿಸಿದರೆ ವೈದ್ಯರಿಂದ ಪರೀಕ್ಷಿಸಿಕೊಳ್ಳುವುದು ಒಳ್ಳೆಯದು.

Continue Reading

ಪ್ರಮುಖ ಸುದ್ದಿ

Rohit Sharma : ಟಿ20 ನಿವೃತ್ತಿಯಲ್ಲ, ಅದು ವಿಶ್ರಾಂತಿ; ಕೌತುಕ ಮೂಡಿಸಿದ ರೋಹಿತ್ ಶರ್ಮಾ ಹೇಳಿಕೆ

Rohit Sharma : ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಏಳು ರನ್ಗಳಿಂದ ಸೋಲಿಸುವ ಮೂಲಕ ಮೆನ್ ಇನ್ ಬ್ಲೂ 11 ವರ್ಷಗಳ ಐಸಿಸಿ ಟ್ರೋಫಿ ಬರವನ್ನು ಕೊನೆಗೊಳಿಸಿತು ಮತ್ತು ಎರಡನೇ ಟಿ 20 ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿತು. ಭಾರತವನ್ನು ಐತಿಹಾಸಿಕ ಗೆಲುವಿನತ್ತ ಮುನ್ನಡೆಸಿದ ನಂತರ, ನಾಯಕ ರೋಹಿತ್ ಶರ್ಮಾ ಅವರು ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರೊಂದಿಗೆ ಟಿ 20 ಪಂದ್ಯಗಳಿಂದ ನಿವೃತ್ತಿ ಘೋಷಿಸಿದರು.

VISTARANEWS.COM


on

Rohit Sharma
Koo

ನವದೆಹಲಿ: ವಿಶ್ವ ಕಪ್ ಗೆಲುವಿನ ಬಳಿಕ ಟಿ20 ಮಾದರಿಗೆ ನಿವೃತ್ತಿ ಹೇಳಿರುವ ರೋಹಿತ್ ಶರ್ಮಾ (Rohit Sharma) ಇದೀಗ ಅದು ಕೇವಲ ವಿಶ್ರಾಂತಿ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಅವರು ನಿವೃತ್ತಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂಬುದಾಗಿ ಹೇಳಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ನಲ್ಲಿ ನಡೆದ 2024 ರ ಟಿ 20 ವಿಶ್ವಕಪ್ ಗೆಲುವಿನ ನಂತರ ರೋಹಿತ್ ಟಿ20 ಕ್ರಿಕೆಟ್​ನಿಂದ ನಿವೃತ್ತಿ ಹೇಳಿದ್ದರು. ಅದಕ್ಕೆ ಮೊದಲು ಕೊಹ್ಲಿ ನಿವೃತ್ತಿ ಘೋಷಿಸಿದ್ದರು. ಆದರೆ ರೋಹಿತ್​ ಆ ರೀತಿ ಮಾಡಿದ್ದು ಯಾಕೆ ಎಂಬುದು ಗೊತ್ತಿಲ್ಲ.

ವಿಶ್ವ ಕಪ್​ ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾವನ್ನು ಏಳು ರನ್​ಗಳಿಂದ ಸೋಲಿಸುವ ಮೂಲಕ ಮೆನ್ ಇನ್ ಬ್ಲೂ 11 ವರ್ಷಗಳ ಐಸಿಸಿ ಟ್ರೋಫಿ ಬರ ಕೊನೆಗೊಳಿಸಿತ್ತು. ಎರಡನೇ ಟಿ 20 ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತು. ಭಾರತವನ್ನು ಐತಿಹಾಸಿಕ ಗೆಲುವಿನತ್ತ ಮುನ್ನಡೆಸಿದ್ದರು.

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಮುಂಚಿತವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ರೋಹಿತ್, ಅವರು ನಾನು ಇನ್ನೂ ನನ್ನು ನಿವೃತ್ತಿಗೆ ಹೊಂದಾಣಿಕೆಯಾಗಿಲ್ಲ. ದೊಡ್ಡ ಟಿ 20 ಅಂತಾರಾಷ್ಟ್ರೀಯ ಟೂರ್ನಿಗೆ ಮೊದಲು ತಂಡಕ್ಕೆ ಮತ್ತೆ ಸೇರಿಕೊಳ್ಳುತ್ತೇವೆ ಎಂದು ಅನಿಸುತ್ತದೆ ಎಂದು ಹೇಳಿದರು.

ಈ ಹಿಂದೆ ನಡೆದಂತೆ ನನಗೆ ಟಿ 20 ಯಿಂದ ವಿಶ್ರಾಂತಿ ನೀಡಲಾಗಿದೆ ಎಂದು ನಾನು ಭಾವಿಸುತ್ತೇನೆ. ದೊಡ್ಡ ಪಂದ್ಯಾವಳಿ ಮುಂದೆ ಬರಲಿದೆ ಮತ್ತು ನಾವು ಮತ್ತೆ ಟಿ 20 ಗಳಿಗೆ ಸಿದ್ಧರಾಗಬೇಕಾಗಿದೆ. ಆದ್ದರಿಂದ ನಾನು ಫಾರ್ಮಾಟ್​ನಿಂದ ಸಂಪೂರ್ಣವಾಗಿ ಹೊರಗುಳಿದಿದ್ದೇನೆ ಎಂದು ನಾನು ಭಾವಿಸುವುದಿಲ್ಲ”ಎಂದು ಶರ್ಮಾ ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಟಿ20 ವಿಶ್ವ ಕಪ್​ನಲ್ಲಿ ರೋಹಿತ್ ಶರ್ಮಾ ಭರ್ಜರಿ ಆಟ

2024 ರ ಟಿ 20 ವಿಶ್ವಕಪ್​​ನಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಭಾರತದ ಆರಂಭಿಕ ಆಟಗಾರ ತಮ್ಮ ಟಿ 20 ಐ ವೃತ್ತಿಜೀವನಕ್ಕೆ ಪರಿಪೂರ್ಣ ವಿದಾಯ ಹೇಳಿದ್ದರು. ಬಲಗೈ ಬ್ಯಾಟ್ಸ್ಮನ್ ಎಂಟು ಇನ್ನಿಂಗ್ಸ್​ಗಳಿಂದ 36.71 ಸರಾಸರಿಯಲ್ಲಿ 257 ರನ್ ಗಳಿಸಿದ್ದಾರೆ. ಮೂರು ಅರ್ಧಶತಕಗಳೊಂದಿಗೆ 156.70 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಇದನ್ನೂ ಓದಿ: MS Dhoni: ಆ ಒಂದು ರನ್​​ ಔಟ್ ನನ್ನ ​​ ಕ್ರಿಕೆಟ್​ ವೃತ್ತಿ ಜೀವನದ ಅತ್ಯಂತ ಕೆಟ್ಟ ಕ್ಷಣ; ವಿಶ್ವ ಕಪ್​ ಆಘಾತವನ್ನು ವಿವರಿಸಿದ ಧೋನಿ

151 ಇನ್ನಿಂಗ್ಸ್ಗಳಲ್ಲಿ 32.05ರ ಸರಾಸರಿಯಲ್ಲಿ 4231 ರನ್ ಗಳಿಸಿರುವ 37ರ ಹರೆಯದ ರೋಹಿತ್​​, ಜಂಟಿ ದಾಖಲೆಯ 5 ಶತಕ ಮತ್ತು 32 ಅರ್ಧಶತಕಗಳೊಂದಿಗೆ 140.89ರ ಸ್ಟ್ರೈಕ್ ರೇಟ್​​ನೊಂದಿಗೆ ಟಿ20ಐನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು.

ನಾಗ್ಪುರ ಮೂಲದ ಕ್ರಿಕೆಟಿಗ 2023 ರ ಏಕದಿನ ವಿಶ್ವಕಪ್ ನಂತರ ಮೊದಲ ಬಾರಿಗೆ ಏಕದಿನ ಕ್ರಿಕೆಟ್​​ಗೆ ಮರಳಲಿದ್ದಾರೆ. ಭಾರತದ ನಾಯಕ 11 ಇನ್ನಿಂಗ್ಸ್​ಗಳಿಂದ 54.27 ಸರಾಸರಿಯಲ್ಲಿ 597 ರನ್ ಗಳಿಸುವ ಮೂಲಕ ಮತ್ತು 125.94 ಸ್ಟ್ರೈಕ್ ರೇಟ್ ಮೂಲಕ ಮಿಂಚಿದ್ದರು ಆಗಸ್ಟ್ 1 ರಿಂದ ಪ್ರಾರಂಭವಾಗಲಿರುವ ಮುಂಬರುವ ಸರಣಿಯಲ್ಲಿ ರೋಹಿತ್ ತಮ್ಮ ಫಾರ್ಮ್ ಅನ್ನು ಮುಂದುವರಿಸಲು ಉತ್ಸುಕರಾಗಿದ್ದಾರೆ.

Continue Reading

ಪ್ರಮುಖ ಸುದ್ದಿ

MS Dhoni: ಆ ಒಂದು ರನ್​​ ಔಟ್ ನನ್ನ ​​ ಕ್ರಿಕೆಟ್​ ವೃತ್ತಿ ಜೀವನದ ಅತ್ಯಂತ ಕೆಟ್ಟ ಕ್ಷಣ; ವಿಶ್ವ ಕಪ್​ ಆಘಾತವನ್ನು ವಿವರಿಸಿದ ಧೋನಿ

MS Dhoni: 2019ರ ವಿಶ್ವ ಕಪ್​ನಲ್ಲಿ ಪ್ರಬಲ ಪ್ರದರ್ಶನದೊಂದಿಗೆ ಲೀಗ್ ಹಂತದಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತವು ಹೆಚ್ಚಿನ ಭರವಸೆ ಹೊಂದಿತ್ತು. ಆದಾಗ್ಯೂ, ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್​ನಲ್ಲಿ ನಡೆದ ಸೆಮಿಫೈನಲ್ ಭಾರತ ಸೋತಿತು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಗೆ 240 ರನ್ ಗಳ ಟಾರ್ಗೆಟ್ ಭಾರತಕ್ಕೆ ನೀಡಿತ್ತು. ಮಳೆಯಿಂದಾಗಿ ಪಂದ್ಯವನ್ನು ಮೀಸಲು ದಿನಕ್ಕೆ ವಿಸ್ತರಿಸಲಾಗಿತ್ತು. ಭಾರತ ಗೆಲುವಿನ ನೆಚ್ಚಿನ ತಂಡವಾಗಿತ್ತು.

VISTARANEWS.COM


on

MS Dhoni
Koo

ನವದೆಹಲಿ: 2019ರ ಏಕ ದಿನ ವಿಶ್ವ ಕಪ್​ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋತಿರುವುದು ತಮ್ಮ ವೃತ್ತಿ ಜೀವನದ ಅತ್ಯಂತ ‘ಹೃದಯ ವಿದ್ರಾವಕ ಕ್ಷಣ’ ಎಂಬುದಾಗಿ ಧೋನಿ (MS Dhoni) ಹೇಳಿದ್ದಾರೆ. 2019 ರಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯವು ಶತಕೋಟಿ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಬೇಸರಕ್ಕೆ ನೂಕಿತ್ತು. ಜುಲೈ ರಂದು ನಡೆದ ಈ ಪಂದ್ಯವು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಭಾವನೆಗಳನ್ನು ಕೆರಳಿಸಿತ್ತು. ಭಾರತಕ್ಕೆ ನಾಟಕೀಯ ಸೋಲಾಗಿತ್ತು. ಇದು ಕೇವಲ ನಷ್ಟವಲ್ಲ, ಇದು ಶತಕೋಟಿ ಕನಸುಗಳ ಅಂತ್ಯವಾಗಿತ್ತು. ಯಾಕೆಂದರೆ ಅದು ಧೋನಿ ಆ ಪಂದ್ಯದಲ್ಲಿ ರನ್​ ಔಟ್ ಆಗಿದ್ದು ಸೋಲಿಗೆ ಕಾರಣವಾಗಿತ್ತು.

2004 ರಲ್ಲಿ ಚೊಚ್ಚಲ ಪಂದ್ಯದಲ್ಲೇ ರನ್ ಔಟ್ ಮಾಡುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ವಿಕೆಟ್ ಕೀಪರ್-ಬ್ಯಾಟರ್​ ತಮ್ಮ ಏಕದಿನ ವೃತ್ತಿಜೀವನವನ್ನು ರನ್​ಔಟ್​ ಆಗುವ ಮೂಲಕ ಕೊನೆಗೊಳಿಸಿದ್ದರು. ಆ ವಿಶ್ವ ಕಪ್​ ಬಳಿಕ ಧೋನಿ ವಿದಾಯ ಹೇಳಿದ್ದರು.

2019ರ ವಿಶ್ವ ಕಪ್​ನಲ್ಲಿ ಪ್ರಬಲ ಪ್ರದರ್ಶನದೊಂದಿಗೆ ಲೀಗ್ ಹಂತದಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತವು ಹೆಚ್ಚಿನ ಭರವಸೆ ಹೊಂದಿತ್ತು. ಆದಾಗ್ಯೂ, ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್​ನಲ್ಲಿ ನಡೆದ ಸೆಮಿಫೈನಲ್ ಭಾರತ ಸೋತಿತು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಗೆ 240 ರನ್ ಗಳ ಟಾರ್ಗೆಟ್ ಭಾರತಕ್ಕೆ ನೀಡಿತ್ತು. ಮಳೆಯಿಂದಾಗಿ ಪಂದ್ಯವನ್ನು ಮೀಸಲು ದಿನಕ್ಕೆ ವಿಸ್ತರಿಸಲಾಗಿತ್ತು. ಭಾರತ ಗೆಲುವಿನ ನೆಚ್ಚಿನ ತಂಡವಾಗಿತ್ತು.

ಇದನ್ನೂ ಓದಿ: SL vs IND : ಲಂಕಾಗೆ ಗಾಯದ ಸಂಕಟ; ಏಕದಿನ ಸರಣಿಯಿಂದ ದಿಲ್ಶಾನ್ ಮಧುಶಂಕಾ, ಮತೀಶಾ ಪಥಿರಾನಾ ಔಟ್

ಭಾರತದ ಚೇಸಿಂಗ್​ ಕೆಟ್ಟದಾಗಿ ಪ್ರಾರಂಭವಾಯಿತು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಸೇರಿದಂತೆ ಅಗ್ರ ಕ್ರಮಾಂಕದ ಬ್ಯಾಟರ್​ಗಳು ವಿಫಲಗೊಂಡರು. ಈ ವೇಳೆ ಅಭಿಮಾನಿಗಳಲ್ಲಿ ಅಪನಂಬಿಕೆಯ ಭಾವನೆ ಹರಡಿತು. ನಂತರ ರವೀಂದ್ರ ಜಡೇಜಾ ಮತ್ತು ಎಂಎಸ್ ಧೋನಿ ಇನ್ನಿಂಗ್ಸ್ ಕಟ್ಟುವ ಕೆಲಸ ಆರಂಭಿಸಿದರು. ಇದು ತಂಡದಲ್ಲಿ ಹಾಗೂ ಅಭಿಮಾನಿಗಳಿಗೆ ಭರವಸೆ ಮೂಡಿಸಿತು.

ಜಡೇಜಾ 59 ಎಸೆತಗಳಲ್ಲಿ 77 ರನ್ ಗಳಿಸಿದರು. ಅವರು ಔಟಾದ ನಂತರ ಭಾರತಕ್ಕೆ ಕೊನೆಯ 12 ಎಸೆತಗಳಲ್ಲಿ 31 ರನ್​ಗಳ ಅವಶ್ಯಕತೆಯಿತ್ತು. ಕೂಲ್ ಆಟಗಾರ ಧೋನಿ ರಾಷ್ಟ್ರದ ಭರವಸೆಗಳ ಭಾರವನ್ನು ಹೊತ್ತಿದ್ದರು. ಗೆಲುವಿಗೆ 10 ಎಸೆತಗಳಲ್ಲಿ 25 ರನ್​ಗಳ ಅವಶ್ಯಕತೆಯಿತ್ತು. ಅದು ಕಷ್ಟವಾಗಿರಲಿಲ್ಲ.

ಧೋನಿ ರನೌಟ್

ಮಾರ್ಟಿನ್ ಗಪ್ಟಿಲ್ ಅವರ ಫೀಲ್ಡಿಂಗ್​ ಧೋನಿಯನ್ನು ಕ್ರೀಸ್ ನಿಂದ ಹೊರಗಿಡಿತು. ಧೋನಿಯ ರನೌಟ್ ಭಾರತದ ವಿಶ್ವಕಪ್ ಕನಸನ್ನು ಭಗ್ನಗೊಳಿಸಿತು. ಅವರು ಪೆವಿಲಿಯನ್ ಗೆ ಹಿಂತಿರುಗುತ್ತಿದ್ದಂತೆ ಸ್ಟೇಡಿಯಮ್​ ಮೌನವಾಯಿತು. ಪ್ರಪಂಚದಾದ್ಯಂತದ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದರು.

ಈ ಸೋಲು ಹೃದಯ ವಿದ್ರಾವಕ ಘಟನೆ ಎಂದು ಧೋನಿ ಒಪ್ಪಿಕೊಂಡಿದ್ದಾರೆ. “ಇದು ಕಷ್ಟಕರವಾಗಿತ್ತು ಏಕೆಂದರೆ ಇದು ನನ್ನ ಕೊನೆಯ ವಿಶ್ವಕಪ್ ಎಂದು ನನಗೆ ತಿಳಿದಿತ್ತು. ಆದ್ದರಿಂದ ಗೆಲುವು ನನಗ ಅನಿವಾರ್ಯವಾಗಿತ್ತು. ಆದರೆ ರನ್​ಔಟ್​​ ಹೃದಯ ವಿದ್ರಾವಕ ಕ್ಷಣವಾಗಿತ್ತು, “ಎಂದು ಧೋನಿ ಕಾರ್ಯಕ್ರಮವೊಂದರಲ್ಲಿ ಹೇಳಿದರು.

ವಿಶ್ವ ಕಪ್​ ಅತ್ಯುತ್ತಮ ಸಮಯವಾಗಿತ್ತು. ಆದರೆ, ರನ್​ಔಟ್ ಬಳಿಕ ಆದ ಸೋಲು ಬೇಸರ ಮೂಡಿತು. ಅದರಿಂದ ಸುಧಾರಿಸಿಕೊಳ್ಳುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಂಡೆ. ಅದರ ನಂತರ ನಾನು ಅಂತರರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ, ಆದ್ದರಿಂದ ನನಗೆ ಸಾಕಷ್ಟು ಸಮಯ ಸಿಕ್ಕಿತು ಎಂದು ಧೋನಿ ಹೇಳಿದ್ದಾರೆ.

Continue Reading
Advertisement
Yogi Adityanath
ದೇಶ4 mins ago

Yogi Adityanath: ನೀರು ಎರಚಿ ಮಹಿಳೆಗೆ ಕಿರುಕುಳ ಕೇಸ್‌; ಇಡೀ ಪೊಲೀಸ್‌ ಚೌಕಿಯೇ ಅಮಾನತು; ಇನ್ಮುಂದೆ ʼಬುಲೆಟ್‌ ರೈಲ್‌ʼ ಓಡಿಸಲಾಗುತ್ತೆ ಎಂದು ವಾರ್ನಿಂಗ್‌

India's National Pension System
ಮನಿ-ಗೈಡ್12 mins ago

National Pension System: ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆಗಾಗಿ ಎನ್‌ಪಿಎಸ್ ಯೋಜನೆ ಸೂಕ್ತ

Karnataka Rain
ಮಳೆ17 mins ago

Karnataka Rain News: ಮಳೆ ಆರ್ಭಟ, ಇಂದು ಶಾಲೆ ಕಾಲೇಜುಗಳಿಗೆ ರಜೆ

wilma rudolph ರಾಜಮಾರ್ಗ ಅಂಕಣ
ಅಂಕಣ41 mins ago

ರಾಜಮಾರ್ಗ ಅಂಕಣ: ಬಾಲ್ಯದಲ್ಲಿ ಎರಡೂ ಕಾಲು ಪೋಲಿಯೋ ಪೀಡಿತಳಾದ ಹುಡುಗಿ ಮಹೋನ್ನತ ಕ್ರೀಡಾಪಟು ಆದ ಕಥೆ!

Things to Avoid Cleaning with Lemon
ಲೈಫ್‌ಸ್ಟೈಲ್1 hour ago

Things to Avoid Cleaning with Lemon: ಇವುಗಳನ್ನು ಸ್ವಚ್ಛ ಮಾಡಲು ಯಾವ ಕಾರಣಕ್ಕೂ ನಿಂಬೆಹಣ್ಣನ್ನು ಬಳಸಲೇಬೇಡಿ!

LIC New Jeevan Shanti Plan
ಮನಿ-ಗೈಡ್1 hour ago

LIC New Jeevan Shanti Plan: ಒಮ್ಮೆ ಪಾವತಿಸಿದರೆ ಸಾಕು; ಜೀವನ ಪರ್ಯಂತ ಪಿಂಚಣಿ!

Vastu Tips
ಧಾರ್ಮಿಕ2 hours ago

Vastu Tips: ಗಲ್ಲಾ ಪೆಟ್ಟಿಗೆಯಲ್ಲಿ ಇಂಥ ವಸ್ತುಗಳನ್ನು ಇಟ್ಟರೆ ಲಾಸ್‌!

Paris Olympics 2024
ಪ್ರಮುಖ ಸುದ್ದಿ2 hours ago

Paris Olympics 2024 : ಒಲಿಂಪಿಕ್ಸ್​ನಲ್ಲಿ ಇಂದು ಕಣಕ್ಕೆ ಇಳಿಯಲಿರುವ ಭಾರತದ ಸ್ಪರ್ಧಿಗಳು ಯಾರ್ಯಾರು? ಇಲ್ಲಿದೆ ಎಲ್ಲ ವಿವರ

Tea vs Coffee
ಆರೋಗ್ಯ2 hours ago

Tea vs Coffee: ಟೀ ಒಳ್ಳೆಯದಾ ಕಾಫಿ ಒಳ್ಳೆಯದಾ? ಇಲ್ಲಿದೆ ಉತ್ತರ

karnataka Rain
ಮಳೆ2 hours ago

Karnataka Weather : 7 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ ಕೊಟ್ಟ ಹವಾಮಾನ ತಜ್ಞರು

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ18 hours ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ19 hours ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ19 hours ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ3 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ3 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ4 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ4 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ4 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ5 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌