WPL 2023: ಮೂರು ಕೋಟಿ ರೂ. ನೀರಲ್ಲಿ ಹೋಮ; ಸ್ಮೃತಿ ಮಂಧಾನಾ ಟ್ರೋಲ್​ ಮಾಡಿದ ನೆಟ್ಟಿಗರು - Vistara News

ಕ್ರಿಕೆಟ್

WPL 2023: ಮೂರು ಕೋಟಿ ರೂ. ನೀರಲ್ಲಿ ಹೋಮ; ಸ್ಮೃತಿ ಮಂಧಾನಾ ಟ್ರೋಲ್​ ಮಾಡಿದ ನೆಟ್ಟಿಗರು

ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ಆರ್​ಸಿಬಿ ತಂಡದ ಸತತ ಸೋಲಿಗೆ ನಾಯಕಿ ಸ್ಮೃತಿ ಮಂಧಾನಾ ಅವರನ್ನು ನೆಟ್ಟಿಗರು ಸೇರಿ ತಂಡದ ಅಭಿಮಾನಿಗಳು ಟ್ರೋಲ್​ ಮಾಡಿದ್ದಾರೆ.

VISTARANEWS.COM


on

Bowling selection by the captain of RBC team who won the toss
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ(WPL 2023) ಬಲಿಷ್ಠ ತಂಡ ಎಂದು ಗುರುತಿಸಿಕೊಂಡಿದ್ದ ರಾಯಲ್ ಚಾಲೆಂಜರ್ಸ್​ ಬೆಂಗಳೂರು(RCB) ತಂಡ ತನ್ನ ಖ್ಯಾತಿಗೆ ತಕ್ಕಂತೆ ಆಟವಾಡುವಲ್ಲಿ ಯಶಸ್ಸು ಕಂಡಿಲ್ಲ. ಆಡಿದ 4 ಪಂದ್ಯದಲ್ಲಿಯೂ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ತಂಡದ ಸೋಲಿಗೆ ನೆಟ್ಟಿಗರು ಸೇರಿ ತಂಡದ ಅಭಿಮಾನಿಗಳು ಕೂಡ ನಾಯಕಿ ಸ್ಮೃತಿ ಮಂಧಾನಾ(smriti mandhana) ಅವರನ್ನು ಟ್ರೋಲ್​ ಮಾಡಲು ಆರಂಭಿಸಿದ್ದಾರೆ.

ಆರ್​ಸಿಬಿ ತಂಡ ವಿಶ್ವ ದರ್ಜೆಯ ಶ್ರೇಷ್ಠ ಆಟಗಾರ್ತಿಯರಿಂದಲೇ ಕೂಡಿದೆ. ಆದರೆ ಅವರು ನೀಡುತ್ತಿರುವ ಪ್ರದರ್ಶನ ಮಾತ್ರ ಅನ್​ಕ್ಯಾಪ್ಡ್​​ ಆಟಗಾರ್ತಿಯರಿಗಿಂತಲೂ ಕಳಪೆಯಾಗಿದೆ. ತಂಡದ ಸತತ ಸೋಲಿನಿಂದ ಕಂಗೆಟ್ಟ ಆರ್​ಸಿಬಿಯ ಕೆಲ ಅಭಿಮಾನಿಗಳು ನಾಯಕಿ ಸ್ಮೃತಿ ಮಂಧಾನಾ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಮಾಡಲು ಆರಂಭಿಸಿದ್ದಾರೆ.

ಡಬ್ಲ್ಯೂಪಿಎಲ್​ನಲ್ಲಿ ಅತಿ ದುಬಾರಿ ಆಟಗಾರ್ತಿಯಾಗಿ ಗುರುತಿಸಿಕೊಂಡ ಮಂಧಾನಾಗೆ ನೀಡಿದ ಹಣ ಸಂಪೂರ್ಣ ವ್ಯರ್ಥವಾಗಿದೆ. ಅವರು ನಾಯಕತ್ವ ಜತೆಗೆ ಬ್ಯಾಟಿಂಗ್​ನಲ್ಲೂ ಕಳಪೆ ಪ್ರದರ್ಶನ ತೋರಿದ್ದಾರೆ. ಇವರಿಗೆ ನೀಡಿದ ಹಣದಲ್ಲಿ ತಂಡಕ್ಕೆ ಅಂಡರ್​-19 ವಿಶ್ವ ಕಪ್​ ಆಡಿದ ನಾಲ್ಕು ಆಟಗಾರ್ತಿಯರನ್ನು ಖರೀದಿಸಬಹುದಾಗಿತ್ತು ಎಂದು ನೆಟ್ಟಿಗರೊಬ್ಬರು ಟ್ವೀಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಸ್ಮೃತಿ ಮಂಧಾನಾ ತುಂಬಾ ಕೆಟ್ಟ ನಾಯಕಿ. ಅವರ ನಿರ್ಧಾರಗಳು ಕಳಪೆಯಾಗಿವೆ. ಅವರಿಗೆ ನಾಯಕತ್ವದ ಯಾವುದೇ ಅರ್ಹತೆಗಳಿಲ್ಲ. ಯಾವ ಆಟಗಾರ್ತಿಯರನ್ನು ಯಾವ ಕ್ರಮಾಂಕದಲ್ಲಿ ಆಡಿಸಬೇಕು ಎನ್ನುವ ತಿಳುವಳಿಕೆಯೇ ಇಲ್ಲ. ಅವರಿಗೆ ನೀಡಿದ ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ” ಎಂದು ಮತ್ತೊಬ್ಬ ನೆಟ್ಟಿಗರು ಟ್ರೋಲ್​ ಮಾಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Dinesh Karthik : ದಕ್ಷಿಣ ಆಫ್ರಿಕಾದ ಲೀಗ್​ನಲ್ಲಿ ಪಾರ್ಲ್​ ರಾಯಲ್ಸ್​ ತಂಡ ಸೇರಿದ ದಿನೇಶ್ ಕಾರ್ತಿಕ್​

Dinesh Karthik : ಜೂನ್​ನಲ್ಲಿ 39ನೇ ವರ್ಷಕ್ಕೆ ಕಾಲಿಟ್ಟ ದಿನದಂದು ಭಾರತೀಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ ನಂತರ ಕಾರ್ತಿಕ್ ಆಡಲಿರುವ ಮೊದಲ ಪಂದ್ಯಾವಳಿ ಎಸ್ಎ 20. ಭಾರತಕ್ಕಾಗಿ 180 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಕಾರ್ತಿಕ್ ಕೊನೆಯ ಬಾರಿಗೆ ಐಪಿಎಲ್ 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಕಾಣಿಸಿಕೊಂಡಿದ್ದರು. ಇ

VISTARANEWS.COM


on

Dinesh Karthik
Koo

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್​ಕೀಪರ್ ಬ್ಯಾಟರ್​ ದಿನೇಶ್ ಕಾರ್ತಿಕ್ (Dinesh Karthik) ಎಸ್ಎ 20 ಯಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಜನವರಿ 9 ರಿಂದ ಪ್ರಾರಂಭವಾಗುವ ಹೊಸ ಋತುವಿಗೆ ಮುಂಚಿತವಾಗಿ ಕಾರ್ತಿಕ್ ವಿದೇಶಿ ಆಟಗಾರನಾಗಿ ಪಾರ್ಲ್ ರಾಯಲ್ಸ್​​ ಫ್ರಾಂಚೈಸಿ ಸೇರಿಕೊಂಡಿದ್ದಾರೆ.

ಜೂನ್​ನಲ್ಲಿ 39ನೇ ವರ್ಷಕ್ಕೆ ಕಾಲಿಟ್ಟ ದಿನದಂದು ಭಾರತೀಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ ನಂತರ ಕಾರ್ತಿಕ್ ಆಡಲಿರುವ ಮೊದಲ ಪಂದ್ಯಾವಳಿ ಎಸ್ಎ 20. ಭಾರತಕ್ಕಾಗಿ 180 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಕಾರ್ತಿಕ್ ಕೊನೆಯ ಬಾರಿಗೆ ಐಪಿಎಲ್ 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಕಾಣಿಸಿಕೊಂಡಿದ್ದರು. ಇತ್ತೀಚೆಗೆ, ಅವರು ತಮ್ಮ ಮಾಜಿ ಆರ್​ಸಿಬಿ ತಂಡದ ಸಹ ಆಟಗಾರ ಎಬಿ ಡಿವಿಲಿಯರ್ಸ್ ಅವರೊಂದಿಗೆ ಎಸ್ಎ 20 ಪಂದ್ಯಾವಳಿಯ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದರು.

ಕಾರ್ತಿಕ್ ಟಿ20 ಸರ್ಕೀಟ್​ ನ ಅಪಾರ ಅನುಭವ ಹೊಂದಿದ್ದರು. ಅಲ್ಲದೆ ಕ್ರಿಕೆಟ್​ನ ಪಂಡಿತರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಪ್ರಸ್ತುತ ಸ್ಕೈ ಸ್ಪೋರ್ಟ್ಸ್ ಪರ ಹಂಡ್ರೆಟ್ ಟೂರ್ನಿಯ ವೀಕ್ಷಕ ವಿವರಣೆಗಾರರಾಗಿರುವ ಕಾರ್ತಿಕ್, 401 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್​​ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಸೇರಿದಂತೆ ಆರು ತಂಡಗಳಿಗಾಗಿ ಆಡಿದ್ದಾರೆ. 17 ಋತುಗಳಲ್ಲಿ ಕೇವಲ ಎರಡು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಕಾರ್ತಿಕ್ ಐಪಿಎಲ್​​ನ ಅತ್ಯಂತ ಫಿಟ್ ಆಟಗಾರರಲ್ಲಿ ಒಬ್ಬರಾಗಿದ್ದರು.

ವಿದೇಶಿ ಟಿ 20 ಲೀಗ್​​ನಲ್ಲಿ ಭಾಗವಹಿಸಲು ನಿವೃತ್ತ ಭಾರತೀಯ ಆಟಗಾರರಿಗೆ ಮಾತ್ರ ಬಿಸಿಸಿಐ ಅವಕಾಶ ನೀಡುತ್ತದೆ. ಕಳೆದ ವರ್ಷ ಅಂಬಾಟಿ ರಾಯುಡು ಸಿಪಿಎಲ್​​ನಲ್ಲಿ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ಪರ ಆಡಿದರೆ, ರಾಬಿನ್ ಉತ್ತಪ್ಪ ಮತ್ತು ಯೂಸುಫ್ ಪಠಾಣ್ ಐಎಲ್​ಟಿ 20 ನಲ್ಲಿ ದುಬೈ ಕ್ಯಾಪಿಟಲ್ಸ್ ಪರ ಆಡಿದ್ದರು. ಎರಡು ವರ್ಷಗಳ ಹಿಂದೆ ಸುರೇಶ್ ರೈನಾ ಅಬುಧಾಬಿ ಟಿ10ಯಲ್ಲಿ ಡೆಕ್ಕನ್ ಗ್ಲಾಡಿಯೇಟರ್ಸ್ ತಂಡದ ಭಾಗವಾಗಿದ್ದರು.

ಇದನ್ನೂ ಓದಿ: Smriti Mandhana : ಐಸಿಸಿ ತಿಂಗಳ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ಸ್ಮೃತಿ ಮಂದಾನ, ಶಫಾಲಿ ವರ್ಮಾ ಆಯ್ಕೆ

ಕಳೆದ ವಾರ ಹೊಸ ಋತುವಿಗೆ ಮುಂಚಿತವಾಗಿ ಪಾರ್ಲ್ ರಾಯಲ್ಸ್ ತಮ್ಮ ಉಳಿಸಿಕೊಳ್ಳುವಿಕೆಯನ್ನು ಘೋಷಿಸಿತು, ನಾಯಕ ಡೇವಿಡ್ ಮಿಲ್ಲರ್, ಲುಂಗಿ ಎನ್​​ಗಿಡಿ, ಆಂಡಿಲೆ ಫೆಹ್ಲುಕ್ವಾಯೊ ಸ್ಥಾನ ಪಡೆದಿದ್ದಾರೆ. ಕಳೆದ ಎಸ್ಎ 20 ಆವೃತ್ತಿಯಲ್ಲಿ ರಾಯಲ್ಸ್ ಕ್ವಾಲಿಫೈಯರ್ಸ್​​ ಪ್ರವೇಶಿಸಿತು. ಜೋಬರ್ಗ್ ಸೂಪರ್ ಕಿಂಗ್ಸ್ ವಿರುದ್ಧ ಎಲಿಮಿನೇಟರ್​ನಲ್ಲಿ ಒಂಬತ್ತು ವಿಕೆಟ್​ಗಳ ಗೆಲುವು ಸೇರಿದಂತೆ ಸತತ ಐದು ಸೋಲುಗಳನ್ನು ಅನುಭವಿಸಿತು.

ಕಾರ್ತಿಕ್ ಅವರಲ್ಲದೆ, ಪಾರ್ಲ್ ರಾಯಲ್ಸ್ ಮುಂಬರುವ ಋತುವಿನಲ್ಲಿ ಇಂಗ್ಲೆಂಡ್ ಬ್ಯಾಟರ್​​ ಜೋ ರೂಟ್ ಅವರ ಸೇವೆಗಳನ್ನು ಸಹ ಪಡೆದುಕೊಂಡಿದೆ.

ಪಾರ್ಲ್ ರಾಯಲ್ಸ್ ತಂಡ ಹೀಗಿದೆ

ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ಜೋರ್ನ್ ಫೋರ್ಟುಯಿನ್, ಆಂಡಿಲೆ ಫೆಹ್ಲುಕ್ವಾಯೊ, ದಿನೇಶ್ ಕಾರ್ತಿಕ್, ಮಿಚೆಲ್ ವ್ಯಾನ್ ಬುರೆನ್, ಕೋಡಿ ಯೂಸುಫ್, ಕೀತ್ ಡಡ್ಜೆನ್, ಎನ್ಕಾಬಾ ಪೀಟರ್, ಕ್ವೆನಾ ಮಾಫಾಕಾ, ಲುವಾನ್-ಡ್ರೆ ಪ್ರಿಟೋರಿಯಸ್, ದಯಾನ್ ಗಲೀಮ್.

Continue Reading

ಕ್ರೀಡೆ

Smriti Mandhana : ಐಸಿಸಿ ತಿಂಗಳ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ಸ್ಮೃತಿ ಮಂದಾನ, ಶಫಾಲಿ ವರ್ಮಾ ಆಯ್ಕೆ

Smriti Mandhana, :ಸ್ಮೃತಿ ಮಂದಾನ ಅವರು ಜೂನ್ 2024 ರ ಐಸಿಸಿ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ವಿಜೇತರಾಗಿದ್ದರು. ಸತತ ಎರಡನೇ ತಿಂಗಳು ಮತ್ತೆ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಅವರು ಇತ್ತೀಚೆಗೆ ಬ್ಯಾಟಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಎಡಗೈ ಆಟಗಾರ್ತಿ ಕಳೆದ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧದ ತವರು ಸರಣಿಯಲ್ಲಿ ಹೆಚ್ಚು ಪ್ರಭಾವಶಾಲಿಯಾಗಿದ್ದರು. ಈ ತಿಂಗಳು ತಮ್ಮ ಫಾರ್ಮ್ ಅನ್ನು ಮುಂದುವರಿಸಿದ್ದಾರೆ.

VISTARANEWS.COM


on

Smriti Mandhana,
Koo

ಬೆಂಗಳೂರು: ಜುಲೈ 2024ರ ಐಸಿಸಿ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ನಾಮನಿರ್ದೇಶನಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಮೂವರು ಆಟಗಾರರಲ್ಲಿ ಇಬ್ಬರು ಭಾರತೀಯರು ಸ್ಥಾನ ಪಡೆದಿದ್ದಾರೆ. ಎಲ್ಲಾ ಮೂವರು ಆಟಗಾರರು ಆರಂಭಿಕ ಬ್ಯಾಟರ್​ಗಳು. ಸ್ಮೃತಿ ಮಂದಾನ (Smriti Mandhana) ಮತ್ತು ಶಫಾಲಿ ವರ್ಮಾ ಪ್ರತಿಷ್ಠಿತ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಇಬ್ಬರು ಭಾರತೀಯರು. ಇಬ್ಬರೂ ಆಟದ ಎಲ್ಲಾ ಸ್ವರೂಪಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಇನ್ನೊಬ್ಬ ಆಟಗಾರ ಶ್ರೀಲಂಕಾದ ನಾಯಕ ಚಾಮರಿ ಅಟ್ಟಪ್ಟು

ಸ್ಮೃತಿ ಮಂದಾನ ಅವರು ಜೂನ್ 2024 ರ ಐಸಿಸಿ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ವಿಜೇತರಾಗಿದ್ದರು. ಸತತ ಎರಡನೇ ತಿಂಗಳು ಮತ್ತೆ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಅವರು ಇತ್ತೀಚೆಗೆ ಬ್ಯಾಟಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಎಡಗೈ ಆಟಗಾರ್ತಿ ಕಳೆದ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧದ ತವರು ಸರಣಿಯಲ್ಲಿ ಹೆಚ್ಚು ಪ್ರಭಾವಶಾಲಿಯಾಗಿದ್ದರು. ಈ ತಿಂಗಳು ತಮ್ಮ ಫಾರ್ಮ್ ಅನ್ನು ಮುಂದುವರಿಸಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾ ಕಪ್ 2024 ರಲ್ಲಿ, ಮಂದಾನ ಐದು ಪಂದ್ಯಗಳಲ್ಲಿ 57.66 ಸರಾಸರಿ ಮತ್ತು 137.30 ಸ್ಟ್ರೈಕ್ ರೇಟ್​​ನಲ್ಲಿ 173 ರನ್ ಗಳಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಫೈನಲ್​​ನಲ್ಲಿ ಅವರು 47 ಎಸೆತಗಳಲ್ಲಿ 60 ರನ್ ಗಳಿಸಿದರು ಆದರೆ ಫೈನಲ್ ಪಂದ್ಯದಲ್ಲಿ ಭಾರತ ಸೋತಿತ್ತು.

ಈ ತಿಂಗಳ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಟಿ 20 ಐ ಸರಣಿಯಲ್ಲಿ, ಮಂದಾನ ಎರಡು ಇನ್ನಿಂಗ್ಸ್​​ಳಲ್ಲಿ 100 ಸರಾಸರಿ ಮತ್ತು 142.85 ಸ್ಟ್ರೈಕ್ ರೇಟ್​​​ನಲ್ಲಿ 100 ರನ್ ಗಳಿಸಿದ್ದರು. ಅಂತಿಮ ಟಿ 20 ಪಂದ್ಯದಲ್ಲಿ ಅವರು 54* ರನ್ ಗಳಿಸಿ ಭಾರತವು ಸರಣಿಯನ್ನು 1-1 ರಿಂದ ಸಮಬಲಗೊಳಿಸಲು ಸಹಾಯ ಮಾಡಿದ್ದರು. ಜುಲೈ 2024ರಲ್ಲಿ ಆಡಿದ ಎಲ್ಲಾ ಟಿ 20 ಪಂದ್ಯಗಳಲ್ಲಿ ಮಂದಾನ 68.25 ಸರಾಸರಿ ಮತ್ತು 139.28 ಸ್ಟ್ರೈಕ್ ರೇಟ್ನಲ್ಲಿ 273 ರನ್ ಗಳಿಸಿದ್ದಾರೆ.

ಶಫಾಲಿ ಸಾಧನೆ

ಮಂದಾನ ಅವರ ಆರಂಭಿಕ ಪಾಲುದಾರರಾಧ ಶಫಾಲಿ ವರ್ಮಾ ಕೂಡ ಈ ಪ್ರತಿಷ್ಠಿತ ಪಟ್ಟಿಗೆ ಸೇರಿದ್ದಾರೆ. 2024ರ ಏಷ್ಯಾಕಪ್​​ನಲ್ಲಿ ವರ್ಮಾ 50ರ ಸರಾಸರಿಯಲ್ಲಿ 200 ರನ್ ಹಾಗೂ 140.84ರ ಸ್ಟ್ರೈಕ್ ರೇಟ್ನಲ್ಲಿ 200 ರನ್ ಗಳಿಸುವ ಮೂಲಕ ಟೂರ್ನಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನಿಸಿಕೊಂಡಿದ್ದರು.

ಪಂದ್ಯಾವಳಿಯ ಭಾರತದ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಅವರು 29 ಎಸೆತಗಳಲ್ಲಿ 40 ರನ್ ಗಳಿಸಿದರು. ನಂತರ, ಅವರು ನೇಪಾಳದ ವಿರುದ್ಧ 48 ಎಸೆತಗಳಲ್ಲಿ 81 ರನ್ ಬಾರಿಸಿದ್ದರು.

ಮಿಥಾಲಿ ರಾಜ್ ನಂತರ ದ್ವಿಶತಕ ಬಾರಿಸಿದ ಎರಡನೇ ಭಾರತೀಯ ಮಹಿಳಾ ಬ್ಯಾಟರ್​​ ಎಂಬ ಹೆಗ್ಗಳಿಕೆಗೆ ಶೆಫಾಲಿ ವರ್ಮಾ ಪಾತ್ರರಾಗಿದ್ದಾರೆ. ವರ್ಮಾ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ ೧೯೪ ಎಸೆತಗಳಲ್ಲಿ ದ್ವಿಶತಕ ಗಳಿಸಿದ್ದರು. ಅವರು 205 ರನ್ ಗಳಿಸಿದರೆ ಭಾರತವು 603-6 ಸ್ಕೋರ್ ಮಾಡಿ. ಇದು ಮಹಿಳಾ ಟೆಸ್ಟ್​​ನಲ್ಲಿ ತಂಡವೊಂದರ ಗರಿಷ್ಠ ಮೊತ್ತವಾಗಿದೆ.

ಇದನ್ನೂ ಓದಿ: Prakash Padukone : ಪದಕಗಳನ್ನು ತಪ್ಪಿಸಿಕೊಂಡ ಅಥ್ಲೀಟ್​ಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಪ್ರಕಾಶ್​ ಪಡುಕೋಣೆ

ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಐ ಸರಣಿಯಲ್ಲಿ, ಶೆಫಾಲಿ ವರ್ಮಾ 45 ರನ್ ಗಳಿಸಿದರೆ, ಎರಡು ಇನ್ನಿಂಗ್ಸ್​ಗಳಲ್ಲಿ 115.38 ಸ್ಟ್ರೈಕ್ ರೇಟ್​​ನಂತೆ ಆಡಿದ್ದರು. ಈ ಅವಧಿಯಲ್ಲಿ ವರ್ಮಾ ಟೆಸ್ಟ್​​ನಲ್ಲಿ 229 ರನ್ ಮತ್ತು ಟಿ 20ಐನಲ್ಲಿ 245 ರನ್ ಗಳಿಸಿದ್ದಾರೆ.

ಚಾಮರಿ ಅಟ್ಟಪಟ್ಟು ಮೂರನೇ ಪ್ರಶಸ್ತಿಗೆ ಹೋರಾಟ


ಶ್ರೀಲಂಕಾದ ನಾಯಕ ಚಾಮರಿ ಅಟ್ಟಪಟ್ಟು ಅತ್ಯುತ್ತಮ ಮಹಿಳಾ ಕ್ರಿಕೆಟರ್ ಎಂದೆನಿಸಿದ್ದಾರೆ. ಭಾರತ ವಿರುದ್ಧ ಫೈನಲ್​​ನಲ್ಲಿ ಗೆದ್ದು ಐತಿಹಾಸಿಕ ಏಷ್ಯಾ ಕಪ್ ಟ್ರೋಫಿ ಪಡೆಯುವಲ್ಲಿ ತಂಡ ಪಾಲಿಗೆ ಪ್ರಮುಖ ಪಾತ್ರ ವಹಿಸಿದ್ದರು. ಇದು ಆ ತಂಡದ ಮೊದಲ ಏಷ್ಯಾ ಕಪ್ ಪ್ರಶಸ್ತಿಯೂ ಆಗಿತ್ತು. ಆಲ್ರೌಂಡರ್ ಐದು ಪಂದ್ಯಗಳಲ್ಲಿ 101.33 ಸರಾಸರಿ ಮತ್ತು 146.85 ಸ್ಟ್ರೈಕ್ ರೇಟ್​ನೊಂಇಗೆ 304 ರನ್​ ಬಾರಿಸಿದ್ದಾರೆ. ಇದು ಪಂದ್ಯಾವಳಿಯಲ್ಲಿ ವೈಯಕ್ತಿ ಅತಿ ಹೆಚ್ಚು ರನ್. ಅವರು ಚೆಂಡಿನೊಂದಿಗೆ ಮೂರು ವಿಕೆಟ್ ಕೂಡ ಪಡೆದಿದ್ದಾರೆ.

ಭಾರತ ವಿರುದ್ಧದ ಫೈನಲ್​​ನಲ್ಲಿ ಶ್ರೀಲಂಕಾದ ನಾಯಕಿ 43 ಎಸೆತಗಳಲ್ಲಿ 61 ರನ್ ಗಳಿಸಿ ತಮ್ಮ ತಂಡಕ್ಕೆ ಪ್ರಶಸ್ತಿ ಗೆಲ್ಲಲು ಸಹಾಯ ಮಾಡಿದ್ದರು.

Continue Reading

ಪ್ರಮುಖ ಸುದ್ದಿ

Dinesh Karthik : ಆರ್​ಸಿಬಿ ಮೆಂಟರ್​ ​ ದಿನೇಶ್​ ಕಾರ್ತಿಕ್​​ಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್​ನಿಂದ ವಿಶೇಷ ಗೌರವ

Dinesh Karthik : ಎಸ್ಎ 20 ರಾಯಭಾರಿಯಾಗಿ ಸೇರಲು ನಾನು ಉತ್ಸುಕನಾಗಿದ್ದೇನೆ” ಎಂದು ಕಾರ್ತಿಕ್ ಹೇಳಿದರು. ಮೊದಲ ಎರಡು ಋತುಗಳಲ್ಲಿ ಲೀಗ್ ಅದ್ಭುತವಾಗಿ ನಡೆದಿದ್ದು ವಿಶ್ವದ ಕೆಲವು ಅತ್ಯುತ್ತಮ ಆಟಗಾರರು ಪ್ರದರ್ಶನ ನೀಡಿದ್ದಾರೆ. ಎಸ್ಎ 20 ಯೊಂದಿಗೆ ಸಂಬಂಧ ಹೊಂದಿರುವುದು ಒಂದು ಗೌರವ. ಗ್ರೇಮ್ ಸ್ಮಿತ್​ ಮತ್ತು ಅವರ ತಂಡದೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಕಾರ್ತಿಕ್​ ಹೇಳಿದ್ದಾರೆ.

VISTARANEWS.COM


on

Dinesh Karthik
Koo

ಜೋಹಾನ್ಸ್​ಬರ್ಗ್​: ದಕ್ಷಿಣ ಆಫ್ರಿಕಾದ ಪ್ರಮುಖ ಟಿ 20 ಟೂರ್ನಿಯಾದ ಎಸ್ಎ 20 ಲೀಗ್ ರಾಯಭಾರಿಯಾಗಿ ದಿನೇಶ್ ಕಾರ್ತಿಕ್ (Dinesh Karthik ) ಅವರನ್ನು ನೇಮಕ ಮಾಡಲಾಗಿದೆ. ವಿಶ್ವಕಪ್ ವಿಜೇತ ಮತ್ತು ಮಾಜಿ ಭಾರತೀಯ ರಾಷ್ಟ್ರೀಯ ಆಟಗಾರನಾಗಿ ಕಾರ್ತಿಕ್ ಅವರ ಅಪಾರ ಕ್ರಿಕೆಟ್ ಪರಿಣತಿಯನ್ನು ಪರಿಗಣಿಸಿ ಅವರನ್ನು ಬ್ರಾಂಡ್​ ಅಂಬಾಸಿಡರ್​ ಆಗಿ ಆಯ್ಕೆ ಮಾಡಲಾಗಿದೆ. ಇದು ವಿಶ್ವದ ಉನ್ನತ ಶ್ರೇಣಿಯ ಫ್ರ್ಯಾಂಚೈಸ್ ಲೀಗ್​​ಗಳಲ್ಲಿ ಒಂದಾಗಿ ಬೆಳೆಯುತ್ತಿದೆ.

ಎಸ್ಎ 20 ರಾಯಭಾರಿಯಾಗಿ ಸೇರಲು ನಾನು ಉತ್ಸುಕನಾಗಿದ್ದೇನೆ” ಎಂದು ಕಾರ್ತಿಕ್ ಹೇಳಿದರು. ಮೊದಲ ಎರಡು ಋತುಗಳಲ್ಲಿ ಲೀಗ್ ಅದ್ಭುತವಾಗಿ ನಡೆದಿದ್ದು ವಿಶ್ವದ ಕೆಲವು ಅತ್ಯುತ್ತಮ ಆಟಗಾರರು ಪ್ರದರ್ಶನ ನೀಡಿದ್ದಾರೆ. ಎಸ್ಎ 20 ಯೊಂದಿಗೆ ಸಂಬಂಧ ಹೊಂದಿರುವುದು ಒಂದು ಗೌರವ. ಗ್ರೇಮ್ ಸ್ಮಿತ್​ ಮತ್ತು ಅವರ ತಂಡದೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಕಾರ್ತಿಕ್​ ಹೇಳಿದ್ದಾರೆ.

39 ವರ್ಷದ ಭಾರತದ ಮಾಜಿ ಅಂತರರಾಷ್ಟ್ರೀಯ ಆಟಗಾರ ಫ್ರ್ಯಾಂಚೈಸ್ ಟಿ 20 ಕ್ರಿಕೆಟ್ ಬಗ್ಗೆ ನಿಕಟ ಜ್ಞಾನ ಹೊಂದಿದ್ದಾರೆ. 2008 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭವಾದಾಗಿನಿಂದ ಲೀಗ್​​ನ ಭಾಗವಾಗಿದ್ದಾರೆ.

ಅವರು ತಮ್ಮ 16 ವರ್ಷಗಳ ಐಪಿಎಲ್ ವೃತ್ತಿಜೀವನದಲ್ಲಿ ಆರು ತಂಡಗಳನ್ನು ಪ್ರತಿನಿಧಿಸಿದ್ದಾರೆ. ಈ ಅವಧಿಯಲ್ಲಿ, ಕಾರ್ತಿಕ್ 26.32 ಸರಾಸರಿಯಲ್ಲಿ 4842 ರನ್ ಗಳಿಸಿದ್ದಾರೆ ಮತ್ತು 135.66 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಅವರು ವಿಕೆಟ್ ಹಿಂದೆ 145 ಕ್ಯಾಚ್ ಗಳನ್ನು ಪಡೆದಿದ್ದಾರೆ ಮತ್ತು 37 ಸ್ಟಂಪಿಂಗ್ ಗಳನ್ನು ಪೂರ್ಣಗೊಳಿಸಿದ್ದಾರೆ.

ತಮ್ಮ ವೃತ್ತಿಜೀವನದ ಕೊನೆಯ ಹಂತಗಳಲ್ಲಿ, ಕಾರ್ತಿಕ್ ತಮ್ಮ ಆಟಕ್ಕೆ ಸ್ಫೋಟಕ ಅಂಶವನ್ನು ಸೇರಿಸುವ ಮೂಲಕ ಕಿರು ಸ್ವರೂಪದ ಅತ್ಯುತ್ತಮ ಫಿನಿಶರ್ಗಳಲ್ಲಿ ಒಬ್ಬರಾಗಿ ಮಾರ್ಪಟ್ಟಿದ್ದಾರೆ.

ಪ್ರೀತಿಯಿಂದ ‘ಡಿಕೆ’ ಎಂದು ಕರೆಯುವ ಅವರು ವಿಶ್ವದ ಅತ್ಯಂತ ಇಷ್ಟಪಡುವ ದೂರದರ್ಶನ ವೀಕ್ಷಕ ವಿವರಣೆಗಾರರಲ್ಲಿ ಒಬ್ಬರಾಗಿ ಬೆಳೆದಿದ್ದಾರೆ. ಆಟದ ಬಗ್ಗೆ ಅವರ ಜ್ಞಾನವು ಮುನ್ನೆಲೆಗೆ ಬರುವುದಲ್ಲದೆ, ಅವರ ವಿಶಿಷ್ಟ ಹಾಸ್ಯ ಪ್ರಜ್ಞೆಯೂ ವಿಶೇಷ.

ಇದನ್ನೂ ಓದಿ: Women’s T20 World Cup : ಬಾಂಗ್ಲಾದಲ್ಲಿ ಕ್ಷೋಭೆ; ಮಹಿಳೆಯ ಟಿ20 ವಿಶ್ವ ಕಪ್ ಮುಂದೂಡಿಕೆ?

ಲೀಗ್ ರಾಯಭಾರಿಯಾಗಿ ದಿನೇಶ್ ಕಾರ್ತಿಕ್ ಅವರ ನೇಮಕದ ಬಗ್ಗೆ ಮಾತನಾಡಿದ ಎಸ್ಎ 20 ಲೀಗ್ ಆಯುಕ್ತ ಗ್ರೇಮ್ ಸ್ಮಿತ್, “ಎಸ್ಎ 20 ಸೀಸನ್ 3 ರ ರಾಯಭಾರಿಯಾಗಿ ಡಿಕೆ ಅವರನ್ನು ಸ್ವಾಗತಿಸಲು ನಾವು ರೋಮಾಂಚನಗೊಂಡಿದ್ದೇವೆ. ಅವರ ಅಸಾಧಾರಣ ಕ್ರಿಕೆಟ್ ಪ್ರತಿಭೆ ಮತ್ತು ವ್ಯಕ್ತಿತ್ವವು ಅವರನ್ನು ನಮ್ಮ ಲೀಗ್​​ಗೆ ಸೂಕ್ತವಾಗಿದೆ. ಅವರ ಪಾಲ್ಗೊಳ್ಳುವಿಕೆಯು ನಿಸ್ಸಂದೇಹವಾಗಿ ಜಾಗತಿಕವಾಗಿ ಮತ್ತು ಭಾರತದಲ್ಲಿ ಲೀಗ್​​ನ ಸ್ಥಾನಮಾನ ಹೆಚ್ಚಿಸುತ್ತದೆ. ಮುಂಬರುವ ಅದ್ಭುತ ಋತುವನ್ನು ನಾವು ಎದುರು ನೋಡುತ್ತಿದ್ದೇವೆ, ಇದನ್ನು ಅದ್ಭುತ ಯಶಸ್ಸನ್ನು ಮಾಡುವಲ್ಲಿ ಡಿಕೆ ಪ್ರಮುಖ ಪಾತ್ರ ವಹಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Women’s T20 World Cup : ಬಾಂಗ್ಲಾದಲ್ಲಿ ಕ್ಷೋಭೆ; ಮಹಿಳೆಯ ಟಿ20 ವಿಶ್ವ ಕಪ್ ಮುಂದೂಡಿಕೆ?

Women’s T20 World Cup: ಹಿಂಸಾಚಾರದ ನಡುವೆ, ಮಹಿಳಾ ಟಿ 20 ವಿಶ್ವಕಪ್ 2024 ರ ಭವಿಷ್ಯದ ಬಗ್ಗೆ ಸಾಕಷ್ಟು ಊಹಾಪೋಹಗಳೆದ್ದಿವೆ. ಪಂದ್ಯಾವಳಿಗೆ ಇನ್ನೂ ಎರಡು ತಿಂಗಳು ಉಳಿದಿವೆ. ಪ್ರಕ್ಷುಬ್ಧತೆ ಎಷ್ಟು ದಿನ ಮುಂದುವರಿಯಬಹುದು ಎಂಬುದು ಗೊತ್ತಿಲ್ಲ. ಅಕ್ಟೋಬರ್ ವರೆಗೆ ವಿಸ್ತರಿಸಿದರೆ ಪಂದ್ಯಾವಳಿಯ ಭವಿಷ್ಯಕ್ಕೆ ತೊಂದರೆಯಾಗಬಹುದು.

VISTARANEWS.COM


on

Women's T20 World Cup
Koo

ಬೆಂಗಳೂರು: ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಹದಗೆಟ್ಟ ನಂತರ ಆ ದೇಶದಲ್ಲಿ ನಡೆಯಬೇಕಿದ್ದ ಮಹಿಳಾ ಟಿ 20 ವಿಶ್ವಕಪ್ 2024 (Women’s T20 World Cup) ಆತಂಕಕ್ಕೆ ಒಳಗಾಗಿದೆ. ಅಕ್ಟೋಬರ್ 3 ರಿಂದ 20 ರವರೆಗೆ ಢಾಕಾ ಮತ್ತು ಸಿಲ್ಹೆಟ್ನ ಎರಡು ಸ್ಥಳಗಳಲ್ಲಿ ಏಷ್ಯನ್ ಕೌಂಟಿಯಲ್ಲಿ ಪಂದ್ಯಾವಳಿ ಆಯೋಜನೆಗೊಂಡಿತ್ತು. ಬಾಂಗ್ಲಾದೇಶದಲ್ಲಿ ಪ್ರಸ್ತುತ ಪರಿಸ್ಥಿತಿ ಉತ್ತಮವಾಗಿಲ್ಲ. ದೇಶದಲ್ಲಿ ಗಲಭೆಗಳು ನಡೆಯುತ್ತಿವೆ. ಜನರನ್ನು ಕೊಲ್ಲಲಾಗುತ್ತಿದೆ. ದೇಶದ ಪ್ರಧಾನಿ ಶೇಖ್ ಹಸೀನಾ ಕೂಡ ರಾಜೀನಾಮೆ ನೀಡಿ ದೇಶದಿಂದ ಪರಾರಿಯಾಗಿದ್ದಾರೆ.

ಹಿಂಸಾಚಾರದ ನಡುವೆ, ಮಹಿಳಾ ಟಿ 20 ವಿಶ್ವಕಪ್ 2024 ರ ಭವಿಷ್ಯದ ಬಗ್ಗೆ ಸಾಕಷ್ಟು ಊಹಾಪೋಹಗಳೆದ್ದಿವೆ. ಪಂದ್ಯಾವಳಿಗೆ ಇನ್ನೂ ಎರಡು ತಿಂಗಳು ಉಳಿದಿವೆ. ಪ್ರಕ್ಷುಬ್ಧತೆ ಎಷ್ಟು ದಿನ ಮುಂದುವರಿಯಬಹುದು ಎಂಬುದು ಗೊತ್ತಿಲ್ಲ. ಅಕ್ಟೋಬರ್ ವರೆಗೆ ವಿಸ್ತರಿಸಿದರೆ ಪಂದ್ಯಾವಳಿಯ ಭವಿಷ್ಯಕ್ಕೆ ತೊಂದರೆಯಾಗಬಹುದು.

ಟಿ20 ವಿಶ್ವಕಪ್ 2024 18 ದಿನಗಳ ಕಾಲ ನಡೆಯಲಿದ್ದು, 10 ತಂಡಗಳು ಬಾಂಗ್ಲಾದೇಶದ ಎರಡು ಸ್ಥಳಗಳಾದ ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಮತ್ತು ಸಿಲ್ಹೆಟ್ನ ಸಿಲ್ಹೆಟ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ 23 ಪಂದ್ಯಗಳನ್ನು ಆಡಲಿವೆ. ಗದ್ದಲಗಳ ನಡುವೆ, ಐಸಿಸಿ ವಕ್ತಾರರು ಪಂದ್ಯಾವಳಿಯನ್ನು ಸ್ಥಳಾಂತರಿಸುವ ಸಾಧ್ಯತೆಯ ಬಗ್ಗೆ ಮಾತನಾಡಿದ್ದಾರೆ. ಅವರು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯೊಂದಿಗೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುವುದಾಗಿ ಹೇಳಿದ್ದಾರೆ. ಎಲ್ಲಾ ತಂಡಗಳ ಸುರಕ್ಷತೆ ಮತ್ತು ಯೋಗಕ್ಷೇಮವು ಅವರ ಆದ್ಯತೆ ಎಂದು ಅವರು ಹೇಳಿದ್ದಾರೆ.

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ), ಅವರ ಭದ್ರತಾ ಸಂಸ್ಥೆಗಳು ಮತ್ತು ನಮ್ಮ ಸ್ವತಂತ್ರ ಭದ್ರತಾ ಸಲಹೆಗಾರರ ಸಮನ್ವಯದೊಂದಿಗೆ ಐಸಿಸಿ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಭಾಗವಹಿಸುವವರ ಸುರಕ್ಷತೆ ಮತ್ತು ಯೋಗಕ್ಷೇಮವು ನಮ್ಮ ಆದ್ಯತೆಯಾಗಿದೆ ಎಂದು ಅವರು ಹೇಳಿದ್ದಾರೆ.

ಚರ್ಚೆಯಾಗದ ವಿಷಯ

ಕೊಲಂಬೊದಲ್ಲಿ ನಡೆದ ಐಸಿಸಿಯ ವಾರ್ಷಿಕ ಸಮ್ಮೇಳನದಲ್ಲಿ, ಕೆಲವು ಕ್ರಿಕೆಟ್ ಮಂಡಳಿಗಳು ಈ ವಿಷಯವನ್ನು ಎತ್ತಿವೆ ಎಂದು ಕೆಲವು ವರದಿಗಳು ಹೇಳಿಕೊಂಡಿವೆ ಆದರೆ ಆಡಳಿತ ಮಂಡಳಿಯು ಈ ವಿಷಯವನ್ನು ಔಪಚಾರಿಕವಾಗಿ ಚರ್ಚಿಸಲಿಲ್ಲ ಎಂದೂ ಹೇಳಲಾಗಿದೆ.

ಟಿಕೆಟ್​ ಮಾರಾಟ ಬಂದ್​

ವರದಿಗಳ ಪ್ರಕಾರ, ಬಾಂಗ್ಲಾದೇಶದಲ್ಲಿನ ಪ್ರಕ್ಷುಬ್ಧತೆಯ ಕಾರಣಕ್ಕೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗೆ ಟಿಕೆಟ್ ವಿತರಣೆ ಪ್ರಕ್ರಿಯೆಯನ್ನು ನಿಲ್ಲಿಸಿದೆ. ಅದೇ ರೀತಿ ಮಾಧ್ಯಮ ಮಾನ್ಯತೆಯನ್ನು ಸಹ ಅನುಮತಿಸಿಲ್ಲ ಎಂದು ತಿಳಿದುಬಂದಿದೆ. ಇದು ಸಾಮಾನ್ಯವಾಗಿ ಪಂದ್ಯಾವಳಿಗೆ ಎರಡು ತಿಂಗಳ ಮೊದಲು ಪ್ರಾರಂಭವಾಗುತ್ತದೆ. ಇಲ್ಲಿ ಇನ್ನೂ ಪ್ರಾರಂಭವಾಗಿಲ್ಲ.

ಇದನ್ನೂ ಓದಿ: Rohit Sharma : ಧೋನಿಯ ನಾಯಕತ್ವದ ದಾಖಲೆಯೊಂದನ್ನು ಮುರಿದ ರೋಹಿತ್ ಶರ್ಮಾ

2024ರ ಟಿ20 ವಿಶ್ವಕಪ್ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮೇ ತಿಂಗಳಲ್ಲಿ ಢಾಕಾದಲ್ಲಿ ಅನಾವರಣಗೊಳಿಸಿತ್ತು. ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಮತ್ತು ಬಾಂಗ್ಲಾದೇಶ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕಿ ನಿಗರ್ ಸುಲ್ತಾನಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಾಲಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ಆರು ಬಾರಿ ಪ್ರಶಸ್ತಿ ಗೆದ್ದಿದ್ದು, ಟೂರ್ನಿಯಲ್ಲಿ ತಮ್ಮ ಪ್ರಾಬಲ್ಯ ಮುಂದುವರಿಸುವ ವಿಶ್ವಾಸದಲ್ಲಿದೆ. ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಎರಡು ಬಾರಿ ಪ್ರಶಸ್ತಿ ಗೆದ್ದರೆ, ಭಾರತ ಇನ್ನೂ ಗೆದ್ದಿಲ್ಲ. ಹರ್ಮ್​ನ್​ಪ್ರೀತ್​ ಕೌರ್ ನೇತೃತ್ವದ ತಂಡವು ಪಂದ್ಯಾವಳಿಯಲ್ಲಿ ಛಾಪು ಮೂಡಿಸಲು ಮತ್ತು ಇತಿಹಾಸವನ್ನು ಬರೆಯಲು ಉತ್ಸುಕವಾಗಿದೆ.

Continue Reading
Advertisement
Karnataka Trains
Latest2 mins ago

Konkan Railway: ಕಾರವಾರ – ಬೆಂಗಳೂರು ನಡುವಿನ ಎಲ್ಲಾ ರೈಲುಗಳ ಸಂಚಾರ ಆ. 8ರವರೆಗೆ ರದ್ದು

Sharan Prakash Patil
ಬೆಂಗಳೂರು15 mins ago

Sharan Prakash Patil: ಮೆಡಿಕಲ್‌ ಕಾಲೇಜುಗಳಲ್ಲಿ ವ್ಯಾಸ್ಕ್ಯುಲಾರ್‌ ವಿಭಾಗ ಪ್ರಾರಂಭ : ಸಚಿವ ಶರಣಪ್ರಕಾಶ್‌ ಪಾಟೀಲ್‌

actor darshan photo with god
ರಾಯಚೂರು22 mins ago

Actor Darshan: ಆಂಜನೇಯನ ಮೂರ್ತಿ ಜೊತೆಗೆ ದರ್ಶನ್‌ ಫೋಟೋ ಇಟ್ಟು ಪೂಜೆ! ಕಿಡಿ ಕಾರಿದ ಭಕ್ತರು

MUDA scam
ಕರ್ನಾಟಕ32 mins ago

MUDA scam: ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು

PRO KABADDI LEAGUE
ಕ್ರೀಡೆ32 mins ago

PRO KABADDI LEAGUE : ಪ್ರೊ ಕಬಡ್ಡಿ ಲೀಗ್ ಉಳಿಸಿಕೊಂಡ ಆಟಗಾರರ ಪಟ್ಟಿ ಪ್ರಕಟ! ಪವನ್ ಸೆಹ್ರಾವತ್, ಪ್ರದೀಪ್ ನರ್ವಾಲ್ ಹರಾಜಿಗೆ

Road Accident
ವಿಜಯಪುರ56 mins ago

Road Accident : ಅಂಗನವಾಡಿಗೆ ಹೊರಟಿದ್ದ ಬಾಲಕನ ಬಲಿ ಪಡೆದ ಖಾಸಗಿ ಶಾಲಾ ವಾಹನ

Stock Market
ವಾಣಿಜ್ಯ59 mins ago

Stock Market: ಮಹಾ ಕುಸಿತದಿಂದ ಚೇತರಿಕೆಯ ಹಾದಿಯಲ್ಲಿ ಷೇರುಪೇಟೆ; ಸೆನ್ಸೆಕ್ಸ್‌ 921, ನಿಫ್ಟಿ 285 ಪಾಯಿಂಟ್‌ ಜಿಗಿತ

spandana vijay raghavendra
ಸಿನಿಮಾ1 hour ago

Spandana Vijay Raghavendra: ಸ್ಪಂದನ ಅಗಲಿ ಒಂದು ವರ್ಷ, ಭಾವುಕ ಪೋಸ್ಟ್‌ ಮಾಡಿದ ವಿಜಯ್‌ ರಾಘವೇಂದ್ರ

Muhammad Yunus
ಪ್ರಮುಖ ಸುದ್ದಿ1 hour ago

Muhammad Yunus : ನೊಬೆಲ್ ಪುರಸ್ಕೃತ ಮುಹಮ್ಮದ್ ಯೂನುಸ್​ ಬಾಂಗ್ಲಾ ಮಧ್ಯಂತರ ಸರ್ಕಾರದ ಸಲಹೆಗಾರ

murder case
ರಾಮನಗರ2 hours ago

Murder case : ರಾಮನಗರದಲ್ಲಿ ಸಂಬಂಧಿಕರಿಂದಲೇ ಯುವಕನ ಬರ್ಬರ ಹತ್ಯೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ2 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ5 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ5 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ5 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ7 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ1 week ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ1 week ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌