Be careful if the exterior of the new car is altered, if there is an accident, you will be responsible ಹೊಸ ಕಾರಿಗೆ ಆಲ್ಟ್ರೇಷನ್​ ಮಾಡಿಸಬೇಡಿ ಎಚ್ಚರ; ಅನಾಹುತವಾದರೆ ನೀವೇ ಹೊಣೆ - Vistara News

ಆಟೋಮೊಬೈಲ್

ಹೊಸ ಕಾರಿಗೆ ಆಲ್ಟ್ರೇಷನ್​ ಮಾಡಿಸಬೇಡಿ ಎಚ್ಚರ; ಅನಾಹುತವಾದರೆ ನೀವೇ ಹೊಣೆ

ಅನಧಿಕೃತ ವರ್ಕ್​ಶಾಪ್​ಗಳಲ್ಲಿ ರಿಪೇರಿ ಮಾಡಿಸಿ ಸಮಸ್ಯೆ ಉಂಟಾದರೆ ಕಂಪನಿಗಳು ಅದಕ್ಕೆ ಹೊಣೆಯಾಗುವುದಿಲ್ಲ.

VISTARANEWS.COM


on

Be careful if the exterior of the new car is altered, if there is an accident, you will be responsible
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸಾಕಷ್ಟು ಜನರು ಶೋರೂಮ್​ನಲ್ಲಿ ಕಾರು ಖರೀದಿ ಮಾಡಿ ಹೊರಗಡೆ ಆಲ್ಟ್ರೇಷನ್ ಮಾಡಿಸುತ್ತಾರೆ . ಫಾಗ್​ಲ್ಯಾಂಪ್​, ಮ್ಯೂಸಿಕ್​ ಸಿಸ್ಟಮ್​ನಂಥ ಅಗತ್ಯ ಆಕ್ಸೆಸರಿಗಳಿಗೆ ಶೂರೂಮ್​ಗಿಂತ ಹೊರಗಡೆ ಬೆಲೆ ಕಡಿಮೆ ಎಂಬ ಕಾರಣಕ್ಕೆ ಈ ರೀತಿ ಮಾಡಿಸುತ್ತಾರೆ. ಇದು ತಪ್ಪೊ, ಸರಿಯೊ ಎಂಬುದು ಹಿಂದಿನಿಂದಲೂ ಚರ್ಚೆಯ ವಿಷಯ. ಹೊರಗಿನ ವರ್ಕ್​ಶಾಪ್​​ಗಳಲ್ಲಿ ಮಾಡಿಸಿದರೆ ಏನೂ ಆಗುವುದಿಲ್ಲ, ಹಣ ಉಳಿಸಬಹುದು ಎಂದು ಸಾಕಷ್ಟು ಜನರು ಹೇಳುತ್ತಾರೆ. ಆದರೆ, ಇಂಥ ಸಂದರ್ಭದಲ್ಲಿ ಗಮನಿಸಬೇಕಾದ ಒಂದು ಪ್ರಮುಖ ಸಂಗತಿಯೇನೆಂದರೆ, ಒಂದು ಬಾರಿ ನೀವು ಹೊರಗಡೆ ಆಲ್ಟ್ರೇಷನ್ ಮಾಡಿಸಿದರೆ ನಿಮ್ಮ ವಾಹನದ ವಾರಂಟಿ ಬಹುತೇಕ ನಷ್ಟವಾಗುತ್ತದೆ. ಅಗ್ನಿ ಅನಾಹುತವೇನಾದರೂ ನಡೆದರೆ ಕಾರು ತಯಾರಿಸಿದ ಕಂಪನಿಯವರು ಹೊಣೆಗಾರಿಕೆ ತೆಗೆದುಕೊಳ್ಳುತ್ತಿಲ್ಲ. ಅನಧಿಕೃ ತ ಸರ್ವಿಸ್ ಎಂದು ನಿಮ್ಮತ್ತ ಬೊಟ್ಟು ಮಾಡುತ್ತಾರೆ. ಇಂಥ ಸಂದರ್ಭದಲ್ಲಿ ಕಾರು ರಿಪೇರಿಯ ಸಂಪೂರ್ಣ ದುಡ್ಡನ್ನು ನೀವೇ ಕೈಯಿಂದ ಹಾಕಬೇಕಾಗುತ್ತದೆ. ಇನ್ಯುರೆನ್ಸ್​ ಕಂಪನಿಯೂ ಕೈ ಎತ್ತುತ್ತವೆ.

ನೀವು ಖರೀದಿಸಿದ ಕಾರು ಅಥವಾ ಇನ್ಯಾವುದೇ ವಾಹನ ವಾರಂಟಿ ಅವಧಿಯಲ್ಲಿದ್ದರೆ ಸರ್ವಿಸ್​ ಸೇರಿದಂತೆ ಎಲ್ಲ ರೀತಿಯ ರಿಪೇರಿಯನ್ನು ಅಧಿಕೃತ ಸರ್ವಿಸ್​ ಸೆಂಟರ್​ನಲ್ಲಿ ಮಾತ್ರ ಮಾಡಿಸಬೇಕು. ಆದರೆ, ಶೋರೂಮ್​ ಸಿಬ್ಬಂದಿ ಎಲ್ಲ ರೀತಿಯ ಆಲ್ಟ್ರೇಷನ್​ಗೆ ಒಪ್ಪುವುದಿಲ್ಲ. ಕಂಪನಿ ನಿಗದಿ ಮಾಡಿದ ರಿಪೇರಿ ಮಾತ್ರ ಮಾಡುತ್ತಾರೆ. ಹೆಡ್​ಲ್ಯಾಂಪ್​ ಸೇರಿದಂತೆ ಕೆಲವೊಂದು ಭಾಗಗಗಳನ್ನು ಬದಲಾಯಿಸುವುದಕ್ಕೆ ಅಥವಾ ಅಪ್​ಗ್ರೇಡ್​ ಮಾಡುವುದಕ್ಕೂ ಸಿದ್ಧರಿರುವುದಿಲ್ಲ. ಸ್ಟಾಕ್​ನಲ್ಲಿ (ವಾಹನ ತಯಾರಾಗುವ ವೇಳೆ) ಬಂದಿದ್ದನ್ನು ಮಾತ್ರ ಅವರು ಹಾಕಿ ಕೊಡುತ್ತಾರೆ. ಹೀಗಾಗಿ ವಾಹನ ಹೆಚ್ಚು ಅಂದ ಕಾಣುವುದಕ್ಕೋಸ್ಕರ ಹೆಡ್​ಲ್ಯಾಂಪ್​ ಬದಲಾವಣೆ, ಫಾಗ್ ಲ್ಯಾಂಪ್​, ಆಂಬಿಯೆಂಟ್​ ಲೈಟ್​​ಗಳನ್ನು ಅಳವಡಿಸುವುದು ಮಾಮೂಲಿ. ಇಂಥ ವೇಳೆಯಲ್ಲಿ ವಾಹನ ತಯಾರಿಸುವ ವೇಳೆ ಮಾಡಲಾಗಿದ್ದ ವೈರಿಂಗ್​ಗಳನ್ನು ಬದಲಾಯಿಸಲಾಗುತ್ತದೆ. ಈ ಶಾರ್ಟ್​ ಸರ್ಕೀಟ್​ ಆಗಿ ವಾಹನಗಳಿಗೆ ಬೆಂಕಿ ತಗುಲು ಸಾಧ್ಯತೆಗಳಿರುತ್ತದೆ. ಇಂಥ ಸಂದರ್ಭದಲ್ಲಿ ಇನ್ಯುರೆನ್ಸ್​ ಕಂಪನಿಗಳೂ ಯಾವುದೇ ಪರಿಹಾರ ಒದಗಿಸುವುದಿಲ್ಲ.

ಇಲ್ಲಿದೆ ನೋಡಿ ಉದಾಹರಣೆ?

ಪುಣೆಯಲ್ಲಿ ಕೆಲವು ತಿಂಗಳ ಹಿಂದೆ ಟಾಟಾ ಮೋಟಾರ್ಸ್​ನ ನೆಕ್ಸಾನ್ ಇವಿ ಕಾರಿಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಭಸ್ಮವಾಗಿತ್ತು. ಈ ವೇಳೆ ಎಲೆಕ್ಟ್ರಿಕ್​ ವಾಹನಗಳ ಸುರಕ್ಷತೆಯ ಬಗ್ಗೆ ಜೋರು ಚರ್ಚೆ ನಡೆಯಿತು. ಈ ಬಗ್ಗೆ ಟಾಟಾ ಮೋಟಾರ್ಸ್​ ಪ್ರತ್ಯೇಕ ಸಂಸ್ಥೆಯಿಂದ ತನಿಖೆ ನಡೆಸಿತು. ಆ ವರದಿಯ ಪ್ರಕಾರ ಕಾರಿಗೆ ಬೆಂಕಿ ಹಿಡಿಯಲು ಮಾಲೀಕರೇ ಕಾರಣ. ಕಾರಿನ ಮಾಲೀಕರು ನೆಕ್ಸಾನ್ ಕಾರಿನ ಹೆಡ್​ಲೈನ್ ಅನ್ನು ಅಧಿಕೃತವದಲ್ಲದ ಸರ್ವಿಸ್​ ಸ್ಟೇಷನ್​ನಲ್ಲಿ ಬದಲಾಯಿಸಿದ್ದರು. ಈ ವೇಳೆ ವೈರ್​ಗಳ ಜೋಡಣೆಯಲ್ಲಿ ಲೋಪ ಉಂಟಾಗಿತ್ತು. ಇದರಿಂದ ಉಂಟಾದ ಶಾರ್ಟ್​​ ಸರ್ಕೀಟ್​ನಿಂದ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಿದೆ. ಈ ಮೂಲಕ ಟಾಟಾ ಮೋಟಾರ್ಸ್​ ಈ ಘಟನೆಯಲ್ಲಿ ನಮ್ಮದೇನೂ ತಪ್ಪಿಲ್ಲ ಎಂದು ಹೇಳಿದೆ. ಇದೀಗ ಅನಧಿಕೃತ ಸರ್ವಿಸ್​ ಸ್ಟೇಷನ್ ಕಾರಣವೊಡ್ಡಿ ಇನ್ಶುರೆನ್ಸ್​ ಕಂಪನಿ ವಿಮೆಯನ್ನು ಕೂಡ ನೀಡುವುದಿಲ್ಲ.

ಏನು ಪರಿಹಾರ?

ಹೊಸ ವಾಹನಗಳನ್ನು ಎಂದಿಗೂ ಅನಧಿಕೃತ ವರ್ಕ್​ಶಾಪ್​ಗಳಲ್ಲಿ ರಿಪೇರಿ ಮಾಡಿಸಬಾರದು. ಕಾರಿನ ಎಲೆಕ್ಟ್ರಿಕ್​ ವಸ್ತುಗಳು ಬೆಂಕಿ ಹೊತ್ತಿಕೊಳ್ಳುವುದಕ್ಕೆ ಪ್ರಮುಖ ಕಾರಣ. ಹೀಗಾಗಿ ಎಲೆಕ್ಟ್ರಿಕ್​ ಸಂಬಂಧಿಸಿದ ವಸ್ತುಗಳನ್ನು ಬದಲಾಯಿಸುವಾಗ ಹೆಚ್ಚು ಎಚ್ಚರಿಕೆಯಿಂದ ಇರಬೇಕು.

ಕೆಲವೊಂದು ಮಾಡೆಲ್​ನ ಕಾರುಗಳಿಗೆ ಶೋರೂಮ್​ಗಳೇ ಕಸ್ಟಮೈಸ್ಡ್​ ಆಪ್ಷನ್​ ಆಪ್ಷನ್​ ನೀಡುತ್ತಿವೆ. ಲೋವರ್​ ವೇರಿಯೆಂಟ್​ ಕಾರುಗಳಿಗೆ ಟಾಪ್​ ಎಂಡ್​ನಲ್ಲಿರುವ ಕೆಲವೊಂದು ಆಕ್ಸೆಸರಿಗಳನ್ನು ನೀಡುತ್ತಿವೆ. ಇಂಥದ್ದನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು.

ಇದನ್ನೂ ಓದಿ : Tata Motors : ಕಾರುಗಳ ಎಂಜಿನ್​​ಗಳನ್ನು ಅಪ್​ಗ್ರೇಡ್​ ಮಾಡಿದ ಟಾಟಾ ಮೋಟಾರ್ಸ್​​

ವಾರಂಟಿ ಅವಧಿಯ ಮುಗಿಯುವ ತನಕ ಹೊಸ ಕಾರಿನಲ್ಲಿ ಯಾವುದೇ ಬದಲಾವಣೆ ಮಾಡಬಾರದು. ವಾರಂಟಿ ಮುಗಿದ ಬಳಿಕ ವಾಹನಗಳಿಗೆ ನಾವು ಹೊಣೆಯಾಗಿರುತ್ತೇವೆ. ಇನ್ಶುರೆನ್ಸ್ ಕಂಪನಿಗಳಿಗೆ ಪ್ರೀಮಿಯಮ್​ ಕಟ್ಟಿಕೊಂಡರೆ ಸಾಕು.

ಕಾರುಗಳಿಗೆ ಮಿತಿ ಮೀರಿದ ಆಲ್ಟ್ರೇಷನ್​ ಕೂಡ ಮಾಡಲು ಹೋಗಬಾರದು. ಇದರಿಂದ ಕಾರಿನ ಕ್ಷಮತೆಗೆ ಪೆಟ್ಟು ಬೀಳುತ್ತದೆ. ಏರೋಡೈನಮಿಕ್ಸ್​ ಅಡಚಣೆಯಾಗಿ ಮೈಲೇಜ್​ ಕೂಡ ಕಡಿಮೆಯಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆಟೋಮೊಬೈಲ್

Safe Drive Tips: ಜೀವ ಅಮೂಲ್ಯ; ಕಾರು ಓಡಿಸುವಾಗ ಈ ಸಂಗತಿಗಳನ್ನು ಮರೆಯಬೇಡಿ!

ಇತ್ತೀಚಿನ ದಿನಗಳಲ್ಲಿ ಕಾರುಗಳ ಬಳಕೆ ಹೆಚ್ಚಾಗಿದೆ. ಜೊತೆಗೆ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ರಸ್ತೆ ನಿಯಮಗಳು ನಮಗೆ ಗೊತ್ತಿಲ್ಲ ಎಂದಲ್ಲ. ಗೊತ್ತಿರುವ ನಿಯಮಗಳನ್ನು ನಾವು ಪಾಲಿಸದೇ ಇರುವುದು. ಕಾರು ಚಾಲನೆ ಮಾಡುವಾಗ ಎಚ್ಚರಿಕೆ ವಹಿಸುವುದು ಬಹುಮುಖ್ಯ. ಇದಕ್ಕಾಗಿ ಕೆಲವೊಂದು ನಿಯಮಗಳನ್ನು (Safe Drive Tips) ಪಾಲಿಸಲೇಬೇಕು. ಅವು ಯಾವುದು ಗೊತ್ತೇ? ಈ ಲೇಖನ ಓದಿ.

VISTARANEWS.COM


on

By

Safe Drive Tips
Koo

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರ ಮನೆಯಲ್ಲಿ ಕಾರುಗಳು (car) ಇದ್ದೇ ಇವೆ. ಕೆಲವರು ಕಾರು ಓಡಿಸುವುದು (drive) ಕಲಿತಿದ್ದರೂ ರಸ್ತೆಯಲ್ಲಿ (road) ಕಾರು ಓಡಿಸಲು ಹಿಂಜರಿಯುತ್ತಾರೆ. ಕಾರುಗಳು ಇವತ್ತು ಎಲ್ಲರಿಗೂ ಬೇಕೇ ಬೇಕು ಎನ್ನುವಷ್ಟು ಅನಿವಾರ್ಯವಾಗಿದೆ. ಇದಕ್ಕೆ ಕಾರಣ ಪ್ರಯಾಣ ಹೆಚ್ಚು ಸುರಕ್ಷಿತ (Safe Drive Tips) ಎನ್ನುವ ಭಾವನೆ. ಹೀಗಾಗಿ ಕಚೇರಿ ಕೆಲಸ, ಸ್ನೇಹಿತರ ಭೇಟಿ, ಸಣ್ಣಪುಟ್ಟ ಪ್ರಯಾಣಕ್ಕೂ ಹೆಚ್ಚಿನವರು ತಮ್ಮಲ್ಲಿರುವ ಕಾರುಗಳನ್ನೇ ತೆಗೆದುಕೊಂಡು ಹೋಗಲು ಇಷ್ಟ ಪಡುತ್ತಾರೆ.

ಅನೇಕ ಬಾರಿ ಕಾರು ಚಾಲನೆ ಮಾಡುವಾಗ ಕೆಲವೊಂದು ವಿಷಯಗಳ ಬಗ್ಗೆ ನಾವು ಗಮನ ಹರಿಸುವುದಿಲ್ಲ. ಇದು ಅಪಘಾತಗಳ ಅಪಾಯವನ್ನು ಹೆಚ್ಚಿಸುತ್ತದೆ. ಕಾರು ಚಾಲನೆ ಮಾಡುವಾಗ ಕೆಲವು ವಿಷಯಗಳನ್ನು ನಾವು ನೆನಪಿನಲ್ಲಿ ಇಟ್ಟುಕೊಂಡರೆ ಅಪಘಾತಗಳಿಂದ ನಮ್ಮನ್ನು ನಾವು ಮಾತ್ರವಲ್ಲ ನಮ್ಮ ಕಾರುಗಳನ್ನೂ ರಕ್ಷಿಸಬಹುದು.

ಸಂಚಾರ ನಿಯಮಗಳನ್ನು ಅನುಸರಿಸಿ

ಕಾರು ಚಾಲನೆ ಮಾಡುವಾಗ ಯಾವಾಗಲೂ ಸಂಚಾರ ನಿಯಮಗಳನ್ನು ಅನುಸರಿಸಿ. ವೇಗದ ಮಿತಿಗಳನ್ನು ಅನುಸರಿಸುವುದು, ಕೆಂಪು ದೀಪಗಳನ್ನು ಗಮನಿಸಿ ನಿಲ್ಲಿಸುವುದು ಮತ್ತು ಸ್ಟಾಪ್ ಚಿಹ್ನೆಗಳನ್ನು ಪಾಲಿಸುವುದು ಇದರಲ್ಲಿ ಸೇರಿದೆ. ಇದಲ್ಲದೆ, ಜೀಬ್ರಾ ಕ್ರಾಸಿಂಗ್‌ಗಳಲ್ಲಿ ಪಾದಚಾರಿಗಳಿಗೆ ದಾರಿ ಮಾಡಿಕೊಡುವುದು ಮತ್ತು ತಪ್ಪು ದಿಕ್ಕಿನಲ್ಲಿ ವಾಹನ ಚಲಾಯಿಸದಿರುವುದು ಸಹ ಮುಖ್ಯವಾಗಿದೆ.


ಯಾವಾಗಲೂ ಸೀಟ್ ಬೆಲ್ಟ್ ಧರಿಸಿ

ಕಾರು ಚಾಲನೆ ಮಾಡುವಾಗ ಯಾವಾಗಲೂ ಸೀಟ್ ಬೆಲ್ಟ್ ಧರಿಸುವುದು ಮುಖ್ಯ. ನಿಮ್ಮ ಮತ್ತು ನಿಮ್ಮೊಂದಿಗೆ ಪ್ರಯಾಣಿಸುವ ಜನರ ಸುರಕ್ಷತೆಗೆ ಇದು ಬಹಳ ಮುಖ್ಯವಾಗಿದೆ. ಸೀಟ್ ಬೆಲ್ಟ್‌ಗಳು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಳ್ಳುವುದರಿಂದ ನಮ್ಮನ್ನು ರಕ್ಷಿಸುತ್ತದೆ.

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ

ಆಲ್ಕೋಹಾಲ್ ಅಥವಾ ಡ್ರಗ್ಸ್ ಸೇವಿಸಿದ ಅನಂತರ ವಾಹನ ಚಲಾಯಿಸುವುದು ತುಂಬಾ ಅಪಾಯಕಾರಿ. ಇದು ಮನಸ್ಸನ್ನು ಕ್ರಿಯಾಶೀಲವಾಗದಂತೆ ಮಾಡುತ್ತದೆ. ಇದರಿಂದ ಕಾರಿನ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳಬಹುದು. ಇದು ಅಪಘಾತಗಳ ಅಪಾಯವನ್ನು ಹೆಚ್ಚಿಸುತ್ತದೆ.

ಮೊಬೈಲ್ ಫೋನ್ ಬಳಸಬೇಡಿ

ಕರೆ ಮಾಡಲು ಅಥವಾ ಸಂದೇಶಗಳನ್ನು ಕಳುಹಿಸಲು ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಬೇಡಿ. ಇದು ನಿಮ್ಮ ಗಮನವನ್ನು ರಸ್ತೆಯಿಂದ ಬೇರೆಡೆಗೆ ತಿರುಗಿಸುತ್ತದೆ ಮತ್ತು ಇದರಿಂದ ರಸ್ತೆ ಅಪಘಾತಕ್ಕೆ ಬಲಿಯಾಗಬಹುದು.

ಸುಸ್ತಾಗಿದ್ದಾಗ ಅಥವಾ ನಿದ್ದೆ ಬಂದಾಗ ವಾಹನ ಚಲಾಯಿಸಬೇಡಿ

ಹೆಚ್ಚು ದಣಿದಿದ್ದರೆ ಅಥವಾ ನಿದ್ರೆ ಬರುತ್ತಿದ್ದರೆ ವಾಹನ ಚಲಾಯಿಸಬೇಡಿ. ಆಯಾಸವು ಡ್ರೈವಿಂಗ್ ಮಾಡುವಾಗ ನಿಮಗೆ ನಿದ್ರೆ ಬರುವಂತೆ ಮಾಡುತ್ತದೆ. ಇದು ಕಾರಿನ ನಿಯಂತ್ರಣ ತಪ್ಪಲು ಕಾರಣವಾಗಬಹುದು. ಇದು ಅಪಘಾತದ ಅಪಾಯವನ್ನು ಹೆಚ್ಚಿಸುತ್ತದೆ.

ಹೆಚ್ಚಿನ ವೇಗದಲ್ಲಿ ಚಾಲನೆ ಮಾಡಬೇಡಿ

ರಸ್ತೆ ಪರಿಸ್ಥಿತಿಗಳು ಮತ್ತು ಹವಾಮಾನದ ಪ್ರಕಾರ ವಾಹನದ ವೇಗವನ್ನು ನಿಯಂತ್ರಿಸಿ. ಹೆಚ್ಚಿನ ವೇಗದಲ್ಲಿ ಚಾಲನೆ ಮಾಡುವುದು ತುಂಬಾ ಅಪಾಯಕಾರಿ. ವಿಶೇಷವಾಗಿ ಮಳೆ ಅಥವಾ ಮಂಜಿನಂತಹ ಕೆಟ್ಟ ಹವಾಮಾನ ಪರಿಸ್ಥಿತಿಗಳಲ್ಲಿ ಹೆಚ್ಚು ವೇಗವಾಗಿ ಚಾಲನೆ ಮಾಡುವುದನ್ನು ತಪ್ಪಿಸಿ.

ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಿ

ಇತರ ವಾಹನಗಳಿಂದ ಯಾವಾಗಲೂ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಿ. ಇದರಿಂದ ಎದುರಿನ ವಾಹನ ಹಠಾತ್ತನೆ ನಿಂತರೆ ಸಕಾಲದಲ್ಲಿ ಬ್ರೇಕ್ ಹಾಕುವ ಅವಕಾಶ ಸಿಗುತ್ತದೆ.

ಇದನ್ನೂ ಓದಿ: Tata Motors: ನೆಕ್ಸಾನ್, ಪಂಚ್‌ ಮೂಲಕ ಎಸ್‌ಯುವಿ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದ ಟಾಟಾ ಮೋಟಾರ್ಸ್

ಓವರ್ ಟೇಕ್ ಮಾಡುವಾಗ ಜಾಗರೂಕರಾಗಿರಿ

ಓವರ್‌ಟೇಕ್ ಮಾಡುವಾಗ ಯಾವಾಗಲೂ ಜಾಗರೂಕರಾಗಿರಿ. ರಸ್ತೆಯಲ್ಲಿ ಓವರ್‌ಟೇಕ್ ಮಾಡಲು ಸಾಕಷ್ಟು ಸ್ಥಳವಿದೆ ಮತ್ತು ಮುಂಭಾಗದಿಂದ ಯಾವುದೇ ವಾಹನ ಬರುತ್ತಿಲ್ಲ ಎಂದು ಖಚಿತಪಡಿಸಿಕೊಂಡ ಬಳಿಕವೇ ಓವರ್ ಟೇಕ್ ಮಾಡಿ.


ರಸ್ತೆ ಚಿಹ್ನೆಗಳಿಗೆ ಗಮನ ಕೊಡಿ

ರಸ್ತೆ ಚಿಹ್ನೆ ಮತ್ತು ಗುರುತುಗಳತ್ತ ಯಾವಾಗಲೂ ಗಮನ ಕೊಡಿ. ಈ ಚಿಹ್ನೆಗಳು ನಿಮಗೆ ರಸ್ತೆ ನಿಯಮಗಳು ಮತ್ತು ಅಪಾಯಗಳ ಬಗ್ಗೆ ಮಾಹಿತಿಯನ್ನು ನೀಡುತ್ತವೆ.

Continue Reading

ಆಟೋಮೊಬೈಲ್

Safe Drive Tips: ಮಳೆಯಲ್ಲಿ ಬೈಕ್ ಓಡಿಸುವಾಗ ಈ ಸಂಗತಿಗಳು ಗಮನದಲ್ಲಿರಲಿ

ಮಳೆಯಲ್ಲಿ ಬೈಕ್ ಸವಾರಿ ಮಾಡುವಾಗ ಸಾಕಷ್ಟು ಎಚ್ಚರಿಕೆ (Safe Drive Tips) ವಹಿಸುವುದು ಮುಖ್ಯ. ಪ್ರಯಾಣದಲ್ಲಿ ಸುರಕ್ಷತೆ ಮತ್ತು ಆನಂದವನ್ನು ಅನುಭವಿಸಬೇಕಾದರೆ ಬೈಕು, ಗೇರ್ ಮತ್ತು ರೈಡಿಂಗ್ ಶೈಲಿಯ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವುದು ಬಹು ಮುಖ್ಯ.

VISTARANEWS.COM


on

By

Safe Drive Tips
Koo

ಮಳೆಗಾಲದಲ್ಲಿ (rainy season) ವಾಹನ ಓಡಿಸುವಾಗ ಎಷ್ಟು ಎಚ್ಚರವಾಗಿದ್ದರೂ ಸಾಲದು. ಅದರಲ್ಲೂ ಬೈಕ್ ರೈಡಿಂಗ್ (bike riding) ಮಾಡುವವರು ಕೆಲವು ಸೂಕ್ಷ್ಮ ವಿಷಯಗಳನ್ನು (Safe Drive Tips) ಗಮನಿಸಬೇಕಾಗುವುದು. ದೂರ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ವಾತಾವರಣದ ಪರಿಸ್ಥಿತಿ, ಬೈಕ್ ಸುಸ್ಥಿತಿಯಲ್ಲಿ ಇದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳುವುದು ಕೂಡ ಬಹು ಮುಖ್ಯವಾಗಿರುತ್ತದೆ.

ಮಳೆಗಾಲದಲ್ಲಿ ಬೈಕ್ ನಲ್ಲಿ ದೂರ ಪ್ರಯಾಣ ಪ್ರಾರಂಭಿಸುವ ಮೊದಲು ಕೆಲವೊಂದು ವಿಷಯಗಳನ್ನು ಗಮನಿಸಬೇಕು. ಅವುಗಳಲ್ಲಿ ಮುಖ್ಯವಾದದ್ದು ಯಾವುದು ಎನ್ನುವ ಮಾಹಿತಿ ಇಲ್ಲಿದೆ.

ಟಯರ್, ಬ್ರೇಕ್‌ಗಳನ್ನು ಪರಿಶೀಲಿಸಿ

ಮಳೆಯಲ್ಲಿ ಸುರಕ್ಷಿತ ಪ್ರಯಾಣಕ್ಕಾಗಿ ಬೈಕ್‌ನ ಟಯರ್, ಬ್ರೇಕ್‌ಗಳ ಸ್ಥಿತಿಯು ನಿರ್ಣಾಯಕವಾಗಿದೆ. ಟಯರ್‌ನ ಹೊರ ಭಾಗದ ಆಳವನ್ನು ಮೊದಲು ಪರೀಕ್ಷಿಸಿ. ಚಕ್ರದ ಹೊರಮೈಯಲ್ಲಿರುವ ಟಯರ್ ಗಳು ಒದ್ದೆಯಾದ ಮೇಲ್ಮೈಗಳಲ್ಲಿ ಉತ್ತಮ ಹಿಡಿತವನ್ನು ಒದಗಿಸುತ್ತವೆ, ಜಾರಿಬೀಳುವ ಅಥವಾ ಸ್ಕಿಡ್ ಆಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ಟೈರ್‌ಗಳು ಸವೆದಿದ್ದರೆ ಅವುಗಳನ್ನು ಬದಲಾಯಿಸಿ. ಸಾಮಾನ್ಯವಾಗಿ ಆಳವಾದ ಚಕ್ರದ ಹೊರಮೈಗಳು ಮತ್ತು ಒದ್ದೆಯಾದ ರಸ್ತೆಗಳಲ್ಲಿ ಜಾರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬ್ರೇಕ್‌ಗಳು ಯಾವುದೇ ವಿಳಂಬ ಅಥವಾ ಹೆಚ್ಚಿನ ಬಲದ ಅಗತ್ಯವಿಲ್ಲದೆ ಸರಾಗವಾಗಿ ಹಿಡಿಯುವಂತಿರಬೇಕು. ಬ್ರೇಕ್‌ಗಳು ಸ್ಪಂಜಿಯಾಗಿದ್ದರೆ ಅಥವಾ ತಕ್ಷಣವೇ ಪ್ರತಿಕ್ರಿಯಿಸದಿದ್ದರೆ ಕೂಡಲೇ ಸರಿಪಡಿಸಿ.

ಹೆಡ್ ಲೈಟ್, ಸಿಗ್ನಲ್ ಲೈಟ್

ಮಳೆಯ ವಾತಾವರಣದಲ್ಲಿ ಗೋಚರತೆಯು ಕಡಿಮೆಯಾಗಿರುತ್ತದೆ. ಬೈಕ್‌ನ ದೀಪ ಮತ್ತು ಸಿಗ್ನಲ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ. ಹೆಡ್‌ಲೈಟ್‌, ಸಿಗ್ನಲ್ ಲೈಟ್ ಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಕೂಡಲೇ ದುರಸ್ತಿ ಪಡಿಸಿ. ಮಳೆಯಿರುವಾಗ ಹಗಲಿನಲ್ಲಿ ಸ್ಪಷ್ಟವಾಗಿ ಗೋಚರಿಸುವಂತಾಗಲು ಹೆಡ್ ಲೈಟ್ ಗಳನ್ನು ಬಳಸಿ.

ಬ್ರೇಕ್ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸಿ. ಬ್ರೇಕ್‌ಗಳನ್ನು ಅನ್ವಯಿಸಿದಾಗ ಬ್ರೇಕ್ ಲೈಟ್‌ಗಳು ನಿಮ್ಮ ಹಿಂದಿರುವ ವಾಹನಗಳನ್ನು ನಿಧಾನಗೊಳಿಸಲು ಅಥವಾ ನಿಲ್ಲಿಸಲು ಎಚ್ಚರಿಕೆ ವಹಿಸಲು ತಕ್ಷಣವೇ ಬೆಳಗಬೇಕು.


ಸೂಕ್ತವಾದ ಗೇರ್

ಮಳೆಯಲ್ಲಿ ಸವಾರಿ ಮಾಡುವಾಗ ಶುಷ್ಕ, ಆರಾಮದಾಯಕ ಮತ್ತು ಸುರಕ್ಷಿತವಾಗಿ ಉಳಿಯಲು ಸರಿಯಾಗಿ ಗೇರ್ ಅನ್ನು ಆಯ್ಕೆ ಮಾಡುವುದು ಮುಖ್ಯವಾಗಿದೆ.

ರೈನ್ ಕೋಟ್

ಮಳೆಗಾಲದಲ್ಲಿ ಉತ್ತಮ ಗುಣಮಟ್ಟದ ರೈನ್ ಕೋಟ್‌ಗಳನ್ನು ಧರಿಸುವುದು ಬಹಳ ಮುಖ್ಯ. ಮಳೆಯಿಂದ ಬೆಚ್ಚಗಿರಲು ಇದು ಬಹುಮುಖ್ಯ. ಜೊತೆಗೆ ಮಳೆ ನೀರು ಹೋಗದ ಬೂಟುಗಳನ್ನು ಹಾಕಿ. ಪಾದಗಳನ್ನು ಶುಷ್ಕ ಮತ್ತು ಬೆಚ್ಚಗಾಗಲು ಇದು ಸಹಾಯ ಮಾಡುತ್ತದೆ. ಒದ್ದೆಯಾದ ಬಟ್ಟೆ, ಪಾದಗಳು ತ್ವರಿತವಾಗಿ ತಣ್ಣಗಾಗಬಹುದು ಮತ್ತು ಅಹಿತಕರವಾಗಬಹುದು. ಸವಾರಿ ಮಾಡುವಾಗ ಏಕಾಗ್ರತೆ ಮತ್ತು ನಿಯಂತ್ರಣದ ಮೇಲೆ ಪರಿಣಾಮ ಬೀರುತ್ತದೆ.

ಹೆಲ್ಮೆಟ್ ತಪ್ಪದೇ ಧರಿಸಿ

ಮಳೆಗಾಲದಲ್ಲಿ ಗೋಚರತೆಯನ್ನು ಕಾಪಾಡಿಕೊಳ್ಳಲು ಸ್ಪಷ್ಟವಾದ ಹೆಲ್ಮೆಟ್ ಧರಿಸುವುದು ಕೂಡ ಬಹುಮುಖ್ಯ. ಆಂಟಿ-ಫಾಗ್ ಲೇಪನವನ್ನು ಹೊಂದಿರುವ ಹೆಲ್ಮೆಟ್ ಧರಿಸಿ. ಹೆಲ್ಮೆಟ್ ಮೇಲೆ ಮಳೆಹನಿಗಳು ವೀಕ್ಷಣೆಗೆ ಅಡ್ಡಿಯಾಗಬಹುದು.

ರಸ್ತೆ ಬಗ್ಗೆ ತಿಳಿದುಕೊಳ್ಳಿ

ಮಳೆಗಾಲದಲ್ಲಿ ದೂರ ಸವರಿ ಮಾಡುವಾಗ ರಸ್ತೆ ಬಗ್ಗೆ ಮೊದಲೇ ತಿಳಿದಿದ್ದರೆ ಉತ್ತಮ. ಆರ್ದ್ರ ಮತ್ತು ಜಾರು ರಸ್ತೆಗಳಲ್ಲಿ ಚಾಲನೆ ಮಾಡುವಾಗ ನಿಯಂತ್ರಣ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಸವಾರಿ ತಂತ್ರವನ್ನು ಸರಿಹೊಂದಿಸುವುದು ಕೂಡ ಅತ್ಯಗತ್ಯ.

ನಿಧಾನವಾಗಿ ಸಂಚರಿಸಿ

ಬ್ರೇಕ್ ಹಾಕುವಾಗ, ವಾಹನ ತಿರುಗಿಸುವಾಗ ವಾಹನದ ವೇಗವನ್ನು ನಿಧಾನಗೊಳಿಸಿ. ಹಠಾತ್ ಅಥವಾ ಆಕ್ರಮಣಕಾರಿ ಕುಶಲತೆಯು ವಾಹನ ರಸ್ತೆಯಲ್ಲಿ ಜಾರಿ ಬೀಳಲು ಕಾರಣವಾಗಬಹುದು.

ವಾಹನಗಳ ನಡುವೆ ಅಂತರವಿರಲಿ

ಒದ್ದೆಯಾದ ರಸ್ತೆಗಳಲ್ಲಿ ವಾಹನಗಳ ನಡುವೆ ಸಾಕಷ್ಟು ಅಂತರ ಕಾಯ್ದುಕೊಳ್ಳಿ. ಒದ್ದೆಯಾದ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ನೆನಪಿನಲ್ಲಿರಲಿ. ಮಳೆಯಲ್ಲಿ ಟ್ರಾಫಿಕ್, ರಸ್ತೆ ಪರಿಸ್ಥಿತಿಗಳಲ್ಲಿನ ಬದಲಾವಣೆಗಳಿಗೆ ಪ್ರತಿಕ್ರಿಯಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಹೀಗಾಗಿ ವಾಹನಗಳ ನಡುವೆ ಸಾಕಷ್ಟು ಅಂತರ ಕಾಯ್ದುಕೊಳ್ಳುವುದು ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದು.

ಗೋಚರತೆ

ಇತರ ರಸ್ತೆ ಬಳಕೆದಾರರಿಗೆ ನಿಮ್ಮ ಗೋಚರತೆಯನ್ನು ಹೆಚ್ಚಿಸುವುದು ಮಳೆಯಲ್ಲಿ ಅತ್ಯಗತ್ಯ. ಇದಕ್ಕಾಗಿ ಹಗಲು ಹೊತ್ತಿನಲ್ಲಿಯೂ ಬೈಕ್‌ನ ಹೆಡ್‌ಲೈಟ್‌ಗಳನ್ನು ಬಳಸಿ. ಬೈಕ್ ಫ್ರೇಮ್ ಮತ್ತು ಚಕ್ರಗಳಿಗೆ ಪ್ರತಿಫಲಿತ ಸ್ಟಿಕ್ಕರ್‌ ಅಥವಾ ಟೇಪ್ ಗಳನ್ನು ಹಾಕುವುದು ಇತರ ವಾಹನಗಳಿಗೆ ನಿಮ್ಮ ಉಪಸ್ಥಿತಿಯನ್ನು ಕಡಿಮೆ ಬೆಳಕಿನಲ್ಲೂ ಪ್ರತಿಬಿಂಬಿಸುವಂತೆ ಮಾಡುತ್ತದೆ.

ಸಿಗ್ನಲ್ ಸ್ಪಷ್ಟವಾಗಿರಲಿ

ಇತರ ರಸ್ತೆ ಬಳಕೆದಾರರಿಗೆ ನಿಮ್ಮ ಉದ್ದೇಶಗಳನ್ನು ತಿಳಿಸಲು ಕೈ ಸಂಕೇತಗಳು ಮತ್ತು ಸೂಚಕಗಳನ್ನು ಬಳಸಿ. ಹಿಂದೆ ಮೋಟಾರು ಚಾಲಕರು ಮತ್ತು ಸೈಕ್ಲಿಸ್ಟ್‌ಗಳಿಗೆ ಪ್ರತಿಕ್ರಿಯಿಸಲು ಸಮಯವನ್ನು ನೀಡಲು ನಿಮ್ಮ ತಿರುವುಗಳು ಮತ್ತು ಲೇನ್ ಬದಲಾವಣೆಗಳನ್ನು ಮೊದಲೇ ಸೂಚಿಸಿ. ಸ್ಪಷ್ಟವಾದ ಮತ್ತು ಸ್ಥಿರವಾದ ಸಿಗ್ನಲಿಂಗ್ ತಪ್ಪುಗ್ರಹಿಕೆಯನ್ನು ತಡೆಯುತ್ತದೆ ಮತ್ತು ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Top 10 Motar Bike: ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಟಾಪ್ 10 ಬೈಕ್‌ಗಳಿವು

ಜಾಗರೂಕರಾಗಿರಿ

ಮಳೆಯಲ್ಲಿ ರಸ್ತೆ ಪರಿಸ್ಥಿತಿಗಳು ಅಪಾಯಕಾರಿಯಾಗಿರುತ್ತದೆ. ಹೀಗಾಗಿ ಹೆಚ್ಚಿನ ಜಾಗೃತಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ದೊಡ್ಡ ಕೊಚ್ಚೆ ಗುಂಡಿಗಳು ಅಥವಾ ನಿಂತಿರುವ ನೀರಿನ ಮೂಲಕ ಸವಾರಿ ಮಾಡುವುದನ್ನು ತಪ್ಪಿಸಿ.

ಜಾರುವ ರಸ್ತೆಗಳ ಮೇಲೆ ಗಮನವಿರಲಿ

ಮಳೆಯಲ್ಲಿ ರಸ್ತೆಯಲ್ಲಿ ಚಿತ್ರಿಸಿದ ರೇಖೆಗಳು ಅಥವಾ ರಸ್ತೆ ಗುರುತುಗಳ ಮೇಲೆ ಸವಾರಿ ಮಾಡುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು. ತೇವವಾದ ಮೇಲ್ಮೈಗಳು ಜಾರುವ ಅಪಾಯ ಹೆಚ್ಚಾಗಿರುತ್ತದೆ. ಟಯರ್ ನ ಹಿಡಿತವನ್ನು ಕಡಿಮೆ ಮಾಡುತ್ತದೆ. ಸ್ಕಿಡ್ಡಿಂಗ್ ಅಥವಾ ಸ್ಲೈಡಿಂಗ್ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಈ ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸಿ.

Continue Reading

ಆಟೋಮೊಬೈಲ್

Mahindra Scorpio N : ಮಹೀಂದ್ರಾ ತನ್ನ ಸ್ಕಾರ್ಪಿಯೋ-ಎನ್ Z8 ವೇರಿಯೆಂಟ್​ನಲ್ಲಿ ನೀಡಿದ ಹಲವು ಫೀಚರ್​ಗಳು

Mahindra Scorpio N :ಒಳ್ಳೆಯ ವಿಷಯವೆಂದರೆ ಈ ಫೀಚರ್​ಗಳ ಸೇರ್ಪಡೆಗಳು ಯಾವುದೇ ಹೆಚ್ಚುವರಿ ದರವಿಲ್ಲದೆ ಗ್ರಾಹಕರಿಗೆ ಸಿಗುತ್ತದೆ. ಝಡ್8 ಸೆಲೆಕ್ಟ್ ಮಾದರಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.17.10 ಲಕ್ಷಗಳಾದರೆ, ಝಡ್8 ಮಾದರಿಯ ಬೆಲೆಯು ರೂ.18.74 ಲಕ್ಷಗಳಾಗಿದೆ. ಮಹೀಂದ್ರಾ ಇತ್ತೀಚೆಗೆ ಸ್ಕಾರ್ಪಿಯೋ ಎನ್ ಶ್ರೇಣಿಯ ಬೆಲೆಗಳನ್ನು ಸುಮಾರು 10,000 ರೂ.ಗಳಷ್ಟು ಹೆಚ್ಚಿಸಿದೆ.

VISTARANEWS.COM


on

Koo

ಬೆಂಗಳೂರು: ಇತ್ತೀಚೆಗೆ ಬಿಡುಗಡೆಯಾದ ಮಹೀಂದ್ರಾ ಸ್ಕಾರ್ಪಿಯೊ ಎನ್​ (Mahindra Scorpio N ) ಝಡ್ 8 ಸೆಲೆಕ್ಟ್ ಮತ್ತು ಝಡ್ 8 ಈಗ ವೈರ್ ಲೆಸ್ ಚಾರ್ಜರ್ ಮತ್ತು ಸೆಂಟರ್ ಕನ್ಸೋಲ್ ಹೊಸ ಹೈ-ಗ್ಲೋಸ್ ಫಿನಿಶ್ ಪಡೆದುಕೊಂಡಿದೆ. ಏತನ್ಮಧ್ಯೆ, ರೇಂಜ್-ಟಾಪಿಂಗ್ ಝಡ್ 8 ಎಲ್ ಈಗ ವೆಂಟಿಲೇಟೆಡ್​ ಮುಂಭಾಗದ ಸೀಟುಗಳು, ಆಟೋ-ಡಿಮ್ಮಿಂಗ್ ರಿಯರ್ ವ್ಯೂ ಮಿರರ್, ಆ್ಯಕ್ಟಿವ್​ ಕೂಲಿಂಗ್ ಹೊಂದಿರುವ ವೈರ್ ಲೆಸ್ ಚಾರ್ಜಿಂಗ್ ಪ್ಯಾಡ್ ಮತ್ತು ಸೆಂಟರ್ ಕನ್ಸೋಲ್ ಗಾಗಿ ಹೈ-ಗ್ಲೋಸ್ ಫಿನಿಶ್ ಪಡೆದುಕೊಂಡಿದೆ. ಇದಲ್ಲದೆ, ಈ ಹಿಂದೆ ಕೇವಲ ಝಡ್ 8 ಸೆಲೆಕ್ಟ್ ಗೆ ಸೀಮಿತವಾಗಿದ್ದ ಮಿಡ್ ನೈಟ್ ಬ್ಲ್ಯಾಕ್ ಬಣ್ಣವನ್ನು ಈಗ ಎಲ್ಲಾ ಝಡ್ 8 ಟ್ರಿಮ್ ಗಳಲ್ಲಿ ಕೊಡಲಾಗಿದೆ.

ಒಳ್ಳೆಯ ವಿಷಯವೆಂದರೆ ಈ ಫೀಚರ್​ಗಳ ಸೇರ್ಪಡೆಗಳು ಯಾವುದೇ ಹೆಚ್ಚುವರಿ ದರವಿಲ್ಲದೆ ಗ್ರಾಹಕರಿಗೆ ಸಿಗುತ್ತದೆ. ಝಡ್8 ಸೆಲೆಕ್ಟ್ ಮಾದರಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.17.10 ಲಕ್ಷಗಳಾದರೆ, ಝಡ್8 ಮಾದರಿಯ ಬೆಲೆಯು ರೂ.18.74 ಲಕ್ಷಗಳಾಗಿದೆ. ಮಹೀಂದ್ರಾ ಇತ್ತೀಚೆಗೆ ಸ್ಕಾರ್ಪಿಯೋ ಎನ್ ಶ್ರೇಣಿಯ ಬೆಲೆಗಳನ್ನು ಸುಮಾರು 10,000 ರೂ.ಗಳಷ್ಟು ಹೆಚ್ಚಿಸಿದೆ.

ಸ್ಕಾರ್ಪಿಯೋ ಎನ್ ನ ಉಪಕರಣಗಳ ಪಟ್ಟಿ ಬದಲಾಗದೆ ಉಳಿದಿದೆ. ಟಾಪ್-ಸ್ಪೆಕ್ ಝಡ್ 8 ಎಲ್ ನಲ್ಲಿ 6 ಏರ್ ಬ್ಯಾಗ್ ಗಳು, 7 ಇಂಚಿನ ಟಚ್ ಸ್ಕ್ರೀನ್, ಪವರ್ ಚಾಲಿತ ಡ್ರೈವರ್ ಸೀಟ್, ಸನ್ ರೂಫ್, 18 ಇಂಚಿನ ಅಲಾಯ್ಸ್, ಸೋನಿ ಆಡಿಯೊ ಸಿಸ್ಟಮ್, ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾ ಮತ್ತು ಡ್ರೈವರ್ ಮಂಪರು ಪತ್ತೆ ವ್ಯವಸ್ಥೆಯನ್ನು ಹೊಂದಿದೆ.

ಮಹೀಂದ್ರಾ ಸ್ಕಾರ್ಪಿಯೋ ಎನ್ 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ನಿಂದ ಚಾಲನೆ ಪಡೆಯುತ್ತದೆ. ಪ್ರತಿಯೊಂದೂ 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳನ್ನು ಹೊಂದಿದೆ. ಆದಾಗ್ಯೂ, 4 ಡಬ್ಲ್ಯುಡಿ ಆಯ್ಕೆಯು ಕೇವಲ ಡೀಸೆಲ್ ಎಂಜಿನ್ ಇರುವ ಕಾರಿಗೆ ಸೀಮಿತವಾಗಿದೆ.

Continue Reading

ಕರ್ನಾಟಕ

Foreign Investment: ರಾಜ್ಯದಲ್ಲಿ ವಾಹನ ಬಿಡಿಭಾಗ ತಯಾರಿಕೆ; ಬಂಡವಾಳ ಹೂಡಿಕೆಗೆ ದ.ಕೊರಿಯಾ ಒಲವು

Foreign Investment: ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿರುವ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗವು ಸೋಮವಾರ ಸೋಲ್‌ನಲ್ಲಿ ಹೊಯ್ಸಂಗ್‌ ಅಡ್ವಾನ್ಸ್ಡ್‌ ಮಟೇರಿಯಲ್ಸ್‌, ಎಚ್‌ಎಲ್‌ ಮಾಂಡೊ ಕಾರ್ಪೊರೇಷನ್‌, ನಿಫ್ಕೊ, ಡಿಎನ್‌ ಸೊಲುಷನ್ಸ್‌ ಮತ್ತು ಹುಂಡೈ ಮೋಟರ್ಸ್‌ನ ಮುಖ್ಯಸ್ಥರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿತು.

VISTARANEWS.COM


on

Manufacturing of auto parts in the state Increased propensity for capital investment
Koo

ಬೆಂಗಳೂರು: ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿರುವ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ (Foreign Investment) ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗವು ಸೋಮವಾರ ಸೋಲ್‌ನಲ್ಲಿ ಹೊಯ್ಸಂಗ್‌ ಅಡ್ವಾನ್ಸ್ಡ್‌ ಮಟೇರಿಯಲ್ಸ್‌, ಎಚ್‌ಎಲ್‌ ಮಾಂಡೊ ಕಾರ್ಪೊರೇಷನ್‌, ನಿಫ್ಕೊ, ಡಿಎನ್‌ ಸೊಲುಷನ್ಸ್‌ ಮತ್ತು ಹುಂಡೈ ಮೋಟರ್ಸ್‌ನ ಮುಖ್ಯಸ್ಥರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿತು.

ಜಪಾನಿನ ಐದು ದಿನಗಳ ಯಶಸ್ವಿ ಭೇಟಿ ಪೂರ್ಣಗೊಳಿಸಿ ದಕ್ಷಿಣ ಕೊರಿಯಾಕ್ಕೆ ತೆರಳಿರುವ ನಿಯೋಗವು ಈ ತಿಂಗಳ 5 ರವರೆಗೆ ಅಲ್ಲಿನ ಬಹುರಾಷ್ಟ್ರೀಯ ಕಂಪನಿಗಳ ಜತೆ ಸಮಾಲೋಚನೆ ನಡೆಸಿ ಬಂಡವಾಳ ಹೂಡಿಕೆ ಆಕರ್ಷಿಸಲಿದೆ.

ರಾಜ್ಯದಲ್ಲಿ ವಾಹನ ಬಿಡಿಭಾಗ, ಜವಳಿ ಉತ್ಪನ್ನ, ನವೀಕರಿಸಬಹುದಾದ ಇಂಧನ, ಮಷಿನ್‌ಟೂಲ್ಸ್‌ ತಯಾರಿಕಾ ವಲಯಗಳಲ್ಲಿ ಬಂಡವಾಳ ಹೂಡಿಕೆ ಹೆಚ್ಚಿಸಲು, ವಹಿವಾಟು ವಿಸ್ತರಿಸಲು ದಕ್ಷಿಣ ಕೊರಿಯಾದ ಈ ಬಹುರಾಷ್ಟ್ರೀಯ ಕಂಪನಿಗಳು ತೀವ್ರ ಆಸಕ್ತಿ ವ್ಯಕ್ತಪಡಿಸಿವೆ.

ಇದನ್ನೂ ಓದಿ: Press Day: ಸುಳ್ಳು ಸುದ್ದಿಗಳ ಮೇಲೆ ನಿಗಾ ಇಡಲು ಪ್ರತೀ ಜಿಲ್ಲೆಗಳಲ್ಲೂ ವಿಶೇಷ ಘಟಕ: ಸಿದ್ದರಾಮಯ್ಯ

ರಾಜ್ಯದಲ್ಲಿ ವಿದ್ಯುತ್‌ಚಾಲಿತ ವಾಹನಗಳ (ಇವಿ) ಮಾರುಕಟ್ಟೆಯು ವ್ಯಾಪಕವಾಗಿ ವಿಸ್ತರಣೆ ಆಗುತ್ತಿರುವುದು ಮತ್ತು ಭಾರತದಲ್ಲಿನ ತಯಾರಿಕಾ ಘಟಕಗಳಲ್ಲಿ ʼಇವಿʼಗಳನ್ನು ತಯಾರಿಸುವ ಬಗ್ಗೆ ಹುಂಡೈ ಮುಖ್ಯಸ್ಥರ ಜತೆಗಿನ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು.

ರಾಜ್ಯದಲ್ಲಿ ಕೈಗಾರಿಕಾ ಅಶಾಂತಿ (ಕಾರ್ಮಿಕರ ವಿವಾದಗಳು) ಕಡಿಮೆ ಪ್ರಮಾಣದಲ್ಲಿ ಇರುವುದು ಮತ್ತು ಪೂರೈಕೆ ಸರಪಣಿಯಲ್ಲಿ ಸ್ಥಿರತೆ ಇರುವುದನ್ನು ಸಚಿವರು ಹುಂಡೈ ಕಂಪನಿಯ ಪ್ರಮುಖರ ಗಮನಕ್ಕೆ ತಂದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ವಾಹನಗಳ ಪ್ಲಾಸ್ಟಿಕ್‌ ಬಿಡಿಭಾಗ ತಯಾರಿಸುವ ಘಟಕ ಸ್ಥಾಪಿಸಲಿರುವ ನಿಫ್ಕೊ ಕೊರಿಯಾ ಕಂಪನಿಗೆ ಅಗತ್ಯವಾದ ಭೂಮಿ ಸ್ವಾಧೀನ ಮತ್ತು ಇತರ ಅನುಮೋದನೆಗಳಿಗೆ ರಾಜ್ಯ ಸರ್ಕಾರ ತ್ವರಿತವಾಗಿ ಸ್ಪಂದಿಸಲಿದೆ. ಕಾರ್ಖಾನೆಗೆ ಸಂಸ್ಕರಿಸಿದ ನೀರನ್ನು ಪೂರೈಸಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ ಭರವಸೆ ನೀಡಿದರು.

ರಾಜ್ಯದಲ್ಲಿ ಫೈಬರ್‌ ಆಪ್ಟಿಕ್‌ ಅಳವಡಿಕೆ ಯೋಜನೆಗಳು ಮತ್ತು ವಿದ್ಯುತ್‌ಚಾಲಿತ ವಾಹನಗಳ (ಇವಿ) ಬಳಕೆ ಹೆಚ್ಚಿಸುವ ಕ್ಷೇತ್ರಗಳಲ್ಲಿ ವಹಿವಾಟು ನಡೆಸಲು ಹೊಯ್ಸಂಗ್‌ ಅಡ್ವಾನ್ಸ್ಡ್‌ ಮಟೇರಿಯಲ್ಸ್‌ ಇಂಗಿತ ವ್ಯಕ್ತಪಡಿಸಿದೆ.

ಕಂಪನಿಯ ಉಪಾಧ್ಯಕ್ಷ ಹಾಂಗ್‌ ಸಂಗ್‌ ಅಹ್ನ್‌ ಅವರು ರಾಜ್ಯದ ನಿಯೋಗದ ಜತೆಗಿನ ಮಾತುಕತೆಯಲ್ಲಿ ಭಾಗಿಯಾಗಿದ್ದರು. ಟೈರ್‌ ಕೋರ್ಡ್ಸ್‌ ತಯಾರಿಕೆಗೆ ಭಾರತವನ್ನು ಪ್ರಮುಖ ನೆಲೆಯನ್ನಾಗಿ ಅಭಿವೃದ್ಧಿಪಡಿಸಲು ಕಂಪನಿಯ ಉದ್ದೇಶಿಸಿದೆ. ಭಾರತದಲ್ಲಿ ಪರಿಸರ ಸ್ನೇಹಿ ಸರಕುಗಳು ಹಾಗೂ ಸುಧಾರಿತ ಜವಳಿ ಉತ್ಪನ್ನಗಳನ್ನು ತಯಾರಿಸುವ ವಹಿವಾಟು ವಿಸ್ತರಿಸುವ ಅವಕಾಶಗಳನ್ನು ಕಂಪನಿಯು ಪರಿಶೀಲಿಸುತ್ತಿದೆ.

ಇದನ್ನೂ ಓದಿ: Kabzaa movie: ಅತಿ ಹೆಚ್ಚು ತೆರಿಗೆ ಪಾವತಿ; ಆರ್. ಚಂದ್ರು ನಿರ್ಮಾಣ ಸಂಸ್ಥೆಗೆ ಕೇಂದ್ರದಿಂದ ಪ್ರಶಂಸಾ ಪತ್ರ!

ರಾಜ್ಯದಲ್ಲಿನ ನವೀಕರಿಸಬಹುದಾದ ಇಂಧನ ವಲಯದಲ್ಲಿನ ಭವಿಷ್ಯದ ವಿಸ್ತರಣೆ ಬಗ್ಗೆ ಸೌರಕೋಶಗಳ ಸೆಮಿಕಂಡಕ್ಟರ್‌ ತಯಾರಿಸುವ ಒಸಿಐ ಹೋಲ್ಡಿಂಗ್ಸ್‌ ಕಂಪನಿ ಜೊತೆ ಸಚಿವರು ಮಾತುಕತೆ ನಡೆಸಿದರು.

ಸೌರಶಕ್ತಿ ಫಲಕಗಳನ್ನು ತಯಾರಿಸುವ ಯೋಜನೆಗಳಿಗೆ ರಾಜ್ಯ ಸರ್ಕಾರವು ಕೊಡಮಾಡುತ್ತಿರುವ ಉತ್ತೇಜನಗಳನ್ನು ನಿಯೋಗವು ಕಂಪನಿಯ ಪ್ರಮುಖರಿಗೆ ಮನವರಿಕೆ ಮಾಡಿಕೊಟ್ಟಿತು.

ವಾಹನ ಬಿಡಿಭಾಗ ತಯಾರಿಸುವ ಎಚ್‌ಎಲ್‌ ಮಂಡೊ ಕಾರ್ಪೊರೇಷನ್ನಿನ ಸಿಎಫ್‌ಒ ಲೀ ಚುಲ್‌ ಮತ್ತು ನಿರ್ದೇಶಕ ಕಿಮ್‌ ಇವುನ್‌ ಸಂಗ್‌ ಅವರನ್ನು ರಾಜ್ಯದ ನಿಯೋಗವು ಭೇಟಿಯಾಗಿತ್ತು.

ಇದನ್ನೂ ಓದಿ: Kannada New Movie: ಪ್ರವೀಣ್ ತೇಜ್ ಅಭಿನಯದ ʼಜಿಗರ್ ಚಿತ್ರ ಜುಲೈ 5ರಂದು ಬಿಡುಗಡೆ

ಬೆಂಗಳೂರಿನಲ್ಲಿ ತಯಾರಿಕಾ ಘಟಕ ಹೊಂದಿರುವ ಕಂಪನಿಯು ರಾಜ್ಯದಲ್ಲಿ ಇನ್ನಷ್ಟು ಬಂಡವಾಳ ಹೂಡಿಕೆ ಮಾಡಲು ಉತ್ಸುಕತೆ ತೋರಿದೆ. ವಿದ್ಯುತ್‌ಚಾಲಿತ ಸೇರಿದಂತೆ ರಾಜ್ಯದಲ್ಲಿನ ಒಟ್ಟಾರೆ ವಾಹನ ಉದ್ಯಮ ಕ್ಷೇತ್ರದಲ್ಲಿನ ಅನುಕೂಲತೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ರಾಜ್ಯದ ನಿಯೋಗವು ಆಹ್ವಾನ ನೀಡಿದೆ. ಮಷೀನ್‌ಟೂಲ್ಸ್‌ ತಯಾರಿಕಾ ಕಂಪನಿ ಡಿಎನ್‌ ಸೊಲುಷನ್ಸ್‌, ಬೆಂಗಳೂರು ಬಳಿ 25 ಎಕರೆ ಪ್ರದೇಶದಲ್ಲಿ ತನ್ನ ತಯಾರಿಕಾ ಘಟಕ ಆರಂಭಿಸಲಿದೆ.

Continue Reading
Advertisement
Team India
ಪ್ರಮುಖ ಸುದ್ದಿ3 hours ago

Team India : ಮುಂಬೈನಲ್ಲಿ ನಡೆದ ಭಾರತ ತಂಡದ ವಿಜಯೋತ್ಸವ ನೋಡಿದರೆ ರೋಮಾಂಚನ ಖಾತರಿ

Viral Video
ದೇಶ3 hours ago

10 ರೂ.ಗಾಗಿ ಎಲ್ಲರ ಮುಂದೆ ಪ್ಯಾಂಟ್‌ ಬಿಚ್ಚಿ, ಆಟೋ ಡ್ರೈವರ್‌ ಮೇಲೆ ಮಂಗಳಮುಖಿ ಹಲ್ಲೆ; Video ಇಲ್ಲಿದೆ

A lorry collided with a bike Two persons died on the spot
ಕರ್ನಾಟಕ4 hours ago

Road Accident: ಬೈಕ್‌ಗೆ ಲಾರಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು!

Drowned In Water A woman died while crossing the kalu sanka
ಕರ್ನಾಟಕ4 hours ago

Drowned In Water: ಕಾಲು ಸಂಕ ದಾಟುವಾಗ ನೀರಲ್ಲಿ ಕೊಚ್ಚಿ ಹೋದ ಮಹಿಳೆ!

Fans came from Japan to Hyderabad to watch Prabhas starrer Kalki 2898 AD
ಕರ್ನಾಟಕ4 hours ago

Kalki 2898 AD: “ಕಲ್ಕಿ 2898 ಎಡಿ” ಸಿನಿಮಾ ನೋಡಲು ಜಪಾನ್‌ನಿಂದ ಹೈದರಾಬಾದ್‌ಗೆ ಬಂದ ಫ್ಯಾನ್ಸ್‌!

India's open-bus parade
ಪ್ರಮುಖ ಸುದ್ದಿ4 hours ago

India’s open-bus parade : ಮುಂಬೈನಲ್ಲಿ ನಡೆದ ಭಾರತ ಕ್ರಿಕೆಟ್​ ತಂಡದ ವಿಜಯೋತ್ಸವ ಕಾರ್ಯಕ್ರಮದ ಚಿತ್ರಗಳು ಇಲ್ಲಿವೆ

Dr Jitendra Singh
ದೇಶ4 hours ago

2025ರ ವೇಳೆಗೆ ಬಾಹ್ಯಾಕಾಶ, ಸಮುದ್ರದ ಆಳಕ್ಕೆ ಮಾನವ ಸಹಿತ ಮಿಷನ್;‌ ಕೇಂದ್ರ ಸಚಿವ ಮಹತ್ವದ ಘೋಷಣೆ

Rohit Sharma
ಕ್ರಿಕೆಟ್5 hours ago

Rohit Sharma : ವಾಂಖೆಡೆ ಸ್ಟೇಡಿಯಮ್​ನಲ್ಲಿ ಡಾನ್ಸ್ ಮಾಡಿದ ರೋಹಿತ್ ಶರ್ಮಾ

Mukesh Ambani
ದೇಶ5 hours ago

Mukesh Ambani: ಸೋನಿಯಾ ಗಾಂಧಿಯನ್ನು ಮಗನ ಮದುವೆಗೆ ಆಹ್ವಾನಿಸಿದ ಮುಕೇಶ್‌ ಅಂಬಾನಿ

India's open-bus parade
ಪ್ರಮುಖ ಸುದ್ದಿ6 hours ago

India’s open-bus parade : ಭಾರತ ತಂಡದ ವಿಜಯೋತ್ಸವ ಮೆರವಣಿಗೆಯಲ್ಲಿ ಭದ್ರತಾ ವೈಫಲ್ಯ; ಬಸ್​​ನಲ್ಲಿದ್ದ ಆಟಗಾರರು ಜಸ್ಟ್​ ಮಿಸ್​​

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ9 hours ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ11 hours ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

wild animal attack
ಬೆಂಗಳೂರು ಗ್ರಾಮಾಂತರ12 hours ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Chikkaballapura News
ಚಿಕ್ಕಬಳ್ಳಾಪುರ13 hours ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ14 hours ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Karnataka Rain
ಮಳೆ15 hours ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ16 hours ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ದದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

karnataka weather Forecast
ಮಳೆ2 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ3 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ4 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

ಟ್ರೆಂಡಿಂಗ್‌