Hero MotoCorp : ಮರುಮಾರಾಟಕ್ಕೂ ವೇದಿಕೆ ಕಲ್ಪಿಸಿದ ಹೀರೊ ಮೊಟೊಕಾರ್ಪ್‌ - Vistara News

ಆಟೋಮೊಬೈಲ್

Hero MotoCorp : ಮರುಮಾರಾಟಕ್ಕೂ ವೇದಿಕೆ ಕಲ್ಪಿಸಿದ ಹೀರೊ ಮೊಟೊಕಾರ್ಪ್‌

ಭಾರತದ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾಗಿರುವ Hero MotoCorp ಹಳೆ ಬೈಕ್‌ಗಳ ವಿನಿಮಯ ವೇದಿಕೆಯನ್ನು ಸೃಷ್ಟಿಸಿದೆ.

VISTARANEWS.COM


on

Hero MotoCorp
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ : ಕಾರು ಮಾರಾಟ ಕಂಪನಿಗಳಾದ ಮಾರುತಿ, ಹ್ಯುಂಡೈ ಸೇರಿದಂತೆ ಕೆಲವು ಕಂಪನಿಗಳು ಹಳೆಯ ಕಾರುಗಳನ್ನು ತಮ್ಮ ಹೊಸ ಕಾರುಗಳಿಗೆ ವಿನಿಮಯ ಮಾಡುವ ವ್ಯವಸ್ಥೆಯನ್ನು ಹೊಂದಿವೆ. ಆದರೆ ದ್ವಿ ಚಕ್ರ ವಾಹನ ತಯಾರಕರು ಈ ವ್ಯವಸ್ಥೆಯನ್ನು ಇದುವರೆಗೆ ಮಾಡಿರಲಿಲ್ಲ. ಇದೀಗ Hero MotoCorp ಮರು ಮಾರಾಟ ವೇದಿಕೆಯನ್ನು ಕಲ್ಪಿಸಿದ್ದು, Wheels of Trust ಎಂದು ಹೆಸರಿಟ್ಟಿದೆ.

ಆನ್‌ಲೈನ್‌ ಹಾಗೂ ಆನ್‌ಗ್ರೌಂಡ್‌ ರೀತಿಯಲ್ಲಿ ಈ ವಿನಿಮಯ ವ್ಯವಸ್ಥೆ ಕೆಲಸ ಮಾಡಲಿದ್ದು, ಹಳೆಯ ದ್ವಿ ಚಕ್ರ ವಾಹನಗಳಿಗೆ ಉತ್ತಮ ಬೆಲೆಯನ್ನು ನೀಡುವ ಭರವಸೆಯನ್ನು ಒದಗಿಸಿದೆ. ಮರು ಮಾರಾಟಕ್ಕಾಗಿ ಹೀರೊ ಮೋಟೊಕಾರ್ಪ್‌ “ಡು ಇಟ್‌ ಯುವರ್‌ಸೆಲ್ಫ್‌’ ಎಂಬ ವ್ಯವಸ್ಥೆಯನ್ನು ರೂಪಿಸಿದೆ. ಗ್ರಾಹಕರು ಮೊಬೈಲ್‌ ಫೋನ್ ಅಥವಾ ಕಂಪ್ಯೂಟರ್‌ ಮೂಲಕ ವೆಬ್‌ಸೈಟ್‌ಗೆ ಎಂಟ್ರಿಯಾಗಿ ತಮ್ಮ ವಾಹನಗಳಿಗೆ ಎಷ್ಟು ಬೆಲೆ ದೊರೆಯಬಹುದು ಎಂಬುದನ್ನು ಕುಳಿತಲ್ಲಿಯೇ ನಿರ್ಧರಿಸಬಹುದು. ಅದಕ್ಕಾಗಿ ಹೀರೊ ಕಂಪನಿಯು ಸುಮಾರು ೯೦೦ಕ್ಕೂ ಅಧಿಕ ಕಂಪನಿಗಳ ಜತೆ ಸಹಭಾಗಿತ್ವ ಪಡೆದುಕೊಂಡಿದೆ.

ಗ್ರಾಹಕರು ತಾವಿರುವ ರಾಜ್ಯ, ನಗರ, ಯಾವ ಮಾದರಿಯ ಬೈಕ್, ಉತ್ಪಾದಕ ಕಂಪನಿಯ ಹೆಸರು ಸೇರಿದಂತೆ ಬೈಕ್‌ನ ಕುರಿತು ಸಂಪೂರ್ಣ ಮಾಹಿತಿ ನಮೂದು ಮಾಡಬೇಕು. ಈ ವೇಳೆ ವೆಬ್‌ಸೈಟ್‌ನಲ್ಲಿ ಕೇಳಲಾಗುವ ಕೆಲವ ಪ್ರಶ್ನೆಗಳಿಗೆ ಗ್ರಾಹಕರು ಉತ್ತರ ನೀಡಬೇಕಾಗುತ್ತದೆ.

ವೆಬ್‌ಸೈಟ್‌ ಲಿಂಕ್ ಇಲ್ಲಿದೆ- www.wheelsoftrust.com

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Toyota: ಇಂಡಿಯಾ ಸ್ಕಿಲ್ಸ್ ಕಾಂಪಿಟೇಷನ್ 2024; ಟಿಟಿಟಿಐ ವಿದ್ಯಾರ್ಥಿಗಳ ಉತ್ತಮ ಸಾಧನೆ

Toyota: ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್‌ಎಸ್‌ಡಿಸಿ) ದಿಂದ ನವದೆಹಲಿಯ ಯಶೋಭೂಮಿ ದ್ವಾರಕಾದಲ್ಲಿ ಆಯೋಜಿಸಿದ್ದ ಇಂಡಿಯಾ ಸ್ಕಿಲ್ಸ್ ಕಾಂಪಿಟೇಷನ್ 2024 ರಲ್ಲಿ ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆ (ಟಿಟಿಟಿಐ) ಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

VISTARANEWS.COM


on

Toyota Technical Training Institute students Excellent performance in India Skills Competition 2024
Koo

ರಾಮನಗರ: ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್‌ಎಸ್‌ಡಿಸಿ) ದಿಂದ ನವದೆಹಲಿಯ ಯಶೋಭೂಮಿ ದ್ವಾರಕಾದಲ್ಲಿ ಆಯೋಜಿಸಿದ್ದ ಇಂಡಿಯಾ ಸ್ಕಿಲ್ಸ್ ಕಾಂಪಿಟೇಷನ್ 2024 ರಲ್ಲಿ ಟೊಯೊಟಾ (Toyota) ತಾಂತ್ರಿಕ ತರಬೇತಿ ಸಂಸ್ಥೆ (ಟಿಟಿಟಿಐ) ಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಸಂಯೋಜಿತ ಉತ್ಪಾದನೆ (ಎಡಿಟಿವ್ ಮ್ಯಾನುಫ್ಯಾಕ್ಚರಿಂಗ್ ) ವಿಭಾಗದ ವೈಯಕ್ತಿಕ ಪ್ರತಿಸ್ಪರ್ಧಿಯಾಗಿ ಪ್ರೇಮ್. ವಿ ಚಿನ್ನದ ಪದಕವನ್ನು ಗಳಿಸಿದ್ದಾರೆ. ಮ್ಯಾನುಫ್ಯಾಕ್ಚರಿಂಗ್ ಟೀಮ್ ಚಾಲೆಂಜ್‌ನಲ್ಲಿ ಮೋಹಿತ್ ಎಂ.ಯು, ಹರೀಶ್ ಆರ್, ಮತ್ತು ನೆಲ್ಸನ್ ವಿ ತಂಡ ಚಿನ್ನದ ಪದಕಗಳನ್ನು ಪಡೆದುಕೊಂಡಿದೆ.

ಮೆಕಾಟ್ರಾನಿಕ್ಸ್ ವಿಭಾಗದಲ್ಲಿ ದರ್ಶನ್ ಗೌಡ ಸಿ.ಎಸ್. ಮತ್ತು ಭಾನು ಪ್ರಸಾದ್ ಎಸ್.ಎಂ ತಂಡ ಚಿನ್ನದ ಪದಕ ಗಳಿಸಿದೆ. ಹೇಮಂತ್ ಕೆ.ವೈ ಮತ್ತು ಉದಯ್ ಕುಮಾರ್ ಬಿ ತಂಡ ಬೆಳ್ಳಿ ಪದಕ ಗಳಿಸಿದೆ. ಇದಲ್ಲದೆ, ರೋಹನ್ ಎ.ಎಸ್. ಬೆಳ್ಳಿ ಪದಕ ಮತ್ತು ಸುದೀಪ್ ಎಸ್.ಎಂ. ಅವರು ಕಾರ್ ಪೇಂಟಿಂಗ್‌ನಲ್ಲಿ ವೈಯಕ್ತಿಕ ಸ್ಪರ್ಧಿಯಾಗಿ ಮೆಡಲಿಯನ್ ಆಫ್ ಎಕ್ಸಲೆನ್ಸ್ ಪಡೆದಿದ್ದಾರೆ.

ಇದನ್ನೂ ಓದಿ: Credit Card Safety Tips: ಕ್ರೆಡಿಟ್‌ ಕಾರ್ಡ್ ವಂಚನೆಯಿಂದ ಪಾರಾಗಲು ಇಲ್ಲಿದೆ 9 ಸಲಹೆ

ನವದೆಹಲಿಯ ಯಶೋಭೂಮಿ ದ್ವಾರಕಾದಲ್ಲಿ ನಡೆದ ಸ್ಪರ್ಧೆಯ “ಆಫ್-ಸೈಟ್” ಭಾಗದ ನಾಲ್ಕು ವಿಭಾಗಗಳಲ್ಲಿ ಟಿಟಿಟಿಐ ಭಾಗವಹಿಸಿತ್ತು. ಮ್ಯಾನುಫ್ಯಾಕ್ಚರಿಂಗ್ ಟೀಮ್ ಚಾಲೆಂಜ್, ಮೆಕಾಟ್ರಾನಿಕ್ಸ್, ಕಾರ್ ಪೇಂಟಿಂಗ್ ಮತ್ತು ಎಡಿಟಿವ್ ಮ್ಯಾನುಫ್ಯಾಕ್ಚರಿಂಗ್ ಸೇರಿದಂತೆ ಹಲವು ವಿಭಾಗಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಟಿಟಿಟಿಐನ ವಿದ್ಯಾರ್ಥಿಗಳು ಅದ್ಭುತ ಕೌಶಲ್ಯ ಮತ್ತು ಡೆಡಿಕೇಷನ್ ಅನ್ನು ಪ್ರದರ್ಶಿಸಿದ್ದಾರೆ.

ಈ ವೇಳೆ ಎನ್‌ಎಸ್‌ಡಿಸಿ ಯ ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಷನ್ಸ್ ಜನರಲ್ ಮ್ಯಾನೇಜರ್ ಮೋನಿಕಾ ನಂದಾ ಮಾತನಾಡಿ, “ಇಂಡಿಯಾ ಸ್ಕಿಲ್ಸ್ ಕಾಂಪಿಟೇಷನ್ 2024 ರಲ್ಲಿ ಗಮನಾರ್ಹ ಸಾಧನೆ ಮಾಡಿದ ಟೊಯೋಟಾ ಟೆಕ್ನಿಕಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ (ಟಿಟಿಟಿಐ) ನ ವಿದ್ಯಾರ್ಥಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅವರ ಅನುಕರಣೀಯ ಕೌಶಲ್ಯಗಳು ಮತ್ತು ಸಮರ್ಪಣೆ ಟಿಟಿಟಿಐನ ತರಬೇತಿ ಕಾರ್ಯಕ್ರಮಗಳ ಪರಿಣಾಮಕಾರಿತ್ವಕ್ಕೆ ಸಾಕ್ಷಿಯಾಗಿದೆ. ಈ ವಿಜೇತರು ತಮ್ಮ ಸಂಸ್ಥೆಗೆ ಗೌರವವನ್ನು ತರುವುದಲ್ಲದೆ, ಜಾಗತಿಕ ಮಟ್ಟದಲ್ಲಿ ಭಾರತೀಯ ಕೌಶಲ್ಯ ಅಭಿವೃದ್ಧಿಯ ಖ್ಯಾತಿಯನ್ನು ಹೆಚ್ಚಿಸುತ್ತಾರೆ. ವಿಶ್ವ ಕೌಶಲ್ಯ ಸ್ಪರ್ಧೆಗೆ ಆಯ್ಕೆಯಾದವರು ಈ ಶ್ರೇಷ್ಠತೆಯ ಪರಂಪರೆಯನ್ನು ಮುಂದುವರಿಸುತ್ತಾರೆ. ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಹೆಮ್ಮೆಪಡುವಂತೆ ಮಾಡುತ್ತಾರೆ ಎಂದು ನಮಗೆ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಹಣಕಾಸು ಮತ್ತು ಆಡಳಿತದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜಿ.ಶಂಕರ ಮಾತನಾಡಿ, “ಇಂಡಿಯಾ ಸ್ಕಿಲ್ಸ್ ಕಾಂಪಿಟೇಷನ್ 2024 ರಲ್ಲಿ ಟಿಟಿಟಿಐ ವಿದ್ಯಾರ್ಥಿಗಳ ಗಮನಾರ್ಹ ಸಾಧನೆಗಳ ಬಗ್ಗೆ ನಾವು ಅಪಾರ ಹೆಮ್ಮೆ ಪಡುತ್ತೇವೆ. ಅವರ ಯಶಸ್ವಿ ಪ್ರಯಾಣ ನಮಗೆ ಹೆಚ್ಚು ಆನಂದವನ್ನು ನೀಡಿದೆ. ಕಠಿಣ ಪರಿಶ್ರಮದಿಂದಾಗಿ ಈ ಮೈಲಿಗಲ್ಲನ್ನು ವಿದ್ಯಾರ್ಥಿಗಳು ತಲುಪಿದ್ದಾರೆ ಎಂದು ತಿಳಿಸಿದ್ದಾರೆ.

Continue Reading

ಆಟೋಮೊಬೈಲ್

Car Care Tips : ಕಾಸು ಉಳಿಸಿ ಎಂಜಿನ್ ಬೆಳಗಿಸಿ, ಕಾರಿನ ಎಂಜಿನ್ ನೀವೇ ​ಕ್ಲೀನ್ ಮಾಡಲು ಇಲ್ಲಿವೆ ಟಿಪ್ಸ್​​​

Car Care Tips: ಕಾರಿನ ಎಂಜಿನ್ ಕ್ಲೀನಿಂಗ್ ಸವಾಲಿನಿಂದ ಕೂಡಿರುವುದಕ್ಕೆ ಅದರ ಮೇಲೆ ಅಂಟಿರುವ ಗ್ರೀಸ್ ಹಾಗೂ ಇನ್ನಿತರ ವಸ್ತುಗಳ ಹಾಗೂ ಜಟಿಲ ಪ್ರದೇಶವೇ ಕಾರಣ. ಅನೇಕರು ಈ ಕಾರ್ಯವನ್ನು ವೃತ್ತಿಪರರಿಗೆ ವಹಿಸುತ್ತಾರೆ. ಆದರೆ ಹಣವನ್ನು ಉಳಿಸಬೇಕಾದರೆ ನೀವೇ ಅದನ್ನು ತೊಳೆಯಬಹುದು. ಪ್ರತಿ ಒಂದು ಅಥವಾ ಎರಡು ತಿಂಗಳಿಗೊಮ್ಮೆ ಎಂಜಿನ್ ಸ್ವಚ್ಛಗೊಳಿಸುವುದರಿಂದ ಅದು ತುಕ್ಕು ಸೇರಿದಂತೆ ನಾನಾ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.

VISTARANEWS.COM


on

car care tips
Koo

ಬೆಂಗಳೂರು: ತಮ್ಮ ಕಾರುಗಳನ್ನು ಆಗಾಗ ತೊಳೆಯುವ ಮಂದಿ ಅದರ ಎಂಜಿನ್ (Car Engine) ಸ್ವಚ್ಛತೆ ಬಗ್ಗೆ ಹೆಚ್ಚು ಆಸಕ್ತಿ ವಹಿಸುವುದಿಲ್ಲ. ಎಂಜಿನ್ ಎಲ್ಲರಿಗೂ ಕಾಣುವುದಿಲ್ಲ ಎಂಬುದು ಮೊದಲ ಕಾರಣವಾದರೆ ಕ್ಲೀನ್ ಮಾಡಲು ಕಷ್ಟ ಎಂಬುದು ಎರಡನೇ ಸಂಗತಿ. ಆದರೆ, ಗ್ರೀಸ್​, ಆಯಿಲ್​ಗಳ ಸಣ್ಣ ಪ್ರಮಾಣದ ಸೋರಿಕೆ ಹಾಗೂ ಇನ್ನಿತ್ಯಾದಿ ಕಾರಣಕ್ಕೆ ಎಂಜಿನ್ ಮೇಲೆ ಹೆಚ್ಚು ಕೊಳೆ ಇರುತ್ತದೆ. ಅಂಕಿಅಂಶಗಳ ಪ್ರಕಾರ, 60% ಕ್ಕೂ ಹೆಚ್ಚು ಕಾರು ಮಾಲೀಕರಿಗೆ ಎಂಜಿನ್ ಸ್ವಚ್ಛ ಮಾಡುವುದೇ ಸವಾಲು. ಅದಕ್ಕಾಗಿ ವರ್ಷಕ್ಕೊಮ್ಮೆ ಸರ್ವಿಸ್​ಗೆ ಬಿಡುವಾಗ ಮಾತ್ರ ಎಂಜಿನ್ ಸ್ವಚ್ಛ ಮಾಡುತ್ತಾರೆ. ಹಾಗೆ ಮಾಡುವುದು ಸೂಕ್ತ ಮಾರ್ಗವಲ್ಲ. ಅದಕ್ಕಾಗಿ ಎಂಜಿನ್ ಶುಚಿ ಮಾಡುವಂಥ ಕೆಲವೊಂದು ಉಪಾಯಗಳನ್ನು ಈ ಕೆಳಗೆ (Car Care Tips) ನೀಡಲಾಗಿದೆ. ಅದನ್ನು ಪಾಲಿಸಿದರೆ ನಿಮ್ಮ ಕಾರಿನ ಎಂಜಿನ್ ಸದಾ ಬೆಳಗುತ್ತಿರುತ್ತದೆ.

ಕಾರ್ ಎಂಜಿನ್ ಅನ್ನು ಸ್ವಚ್ಛಗೊಳಿಸುವುದು ಹೇಗೆ

ಕಾರಿನ ಎಂಜಿನ್ ಕ್ಲೀನಿಂಗ್ ಸವಾಲಿನಿಂದ ಕೂಡಿರುವುದಕ್ಕೆ ಅದರ ಮೇಲೆ ಅಂಟಿರುವ ಗ್ರೀಸ್ ಹಾಗೂ ಇನ್ನಿತರ ವಸ್ತುಗಳ ಹಾಗೂ ಜಟಿಲ ಪ್ರದೇಶವೇ ಕಾರಣ. ಅನೇಕರು ಈ ಕಾರ್ಯವನ್ನು ವೃತ್ತಿಪರರಿಗೆ ವಹಿಸುತ್ತಾರೆ. ಆದರೆ ಹಣವನ್ನು ಉಳಿಸಬೇಕಾದರೆ ನೀವೇ ಅದನ್ನು ತೊಳೆಯಬಹುದು. ಪ್ರತಿ ಒಂದು ಅಥವಾ ಎರಡು ತಿಂಗಳಿಗೊಮ್ಮೆ ಎಂಜಿನ್ ಸ್ವಚ್ಛಗೊಳಿಸುವುದರಿಂದ ಅದು ತುಕ್ಕು ಸೇರಿದಂತೆ ನಾನಾ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.

ಎಂಜಿನ್ ತೊಳೆಯಲು ಹೊರಡುವ ಮೊದಲು ಅಗತ್ಯ ವಸ್ತುಗಳು ಮತ್ತು ಪರಿಕರಗಳನ್ನು ತರಬೇಕು. ಮುಖ್ಯ ಉತ್ಪನ್ನಗಳಲ್ಲಿ ಒಂದು ಡಿಗ್ರೀಸರ್. ಇವುಗಳು ಎಂಜಿನ್ ಮೇಲೆ ಕುಳಿತಿರುವ ಗ್ರೀಸ್​ನಂಥ ಜಿಡ್ಡಿನಂಶವನ್ನು ಬೇಗ ಕರಗಿಸುತ್ತದೆ. ಇಂಥ ಕೆಮಿಕಲ್​ಗಲು ಹೊಂದಿರುವ ಘಾಟು ವಾಸನೆಯಿಂದಾಗಿ ಅವುಗಳನ್ನು ಹೊರಾಂಗಣದಲ್ಲಿ ಬಳಸಬೇಕು. ಲಿಕ್ವಿಡ್​ ಮಾದರಿಯ ಡಿಗ್ರೀಸರ್​ಗಳನ್ನು ಬಳಸಲು ಅನುಕೂಲ ಮಾಡಬಹುದು.

ಇನ್ನೇನು ಬೇಕು?

ಸ್ವಚ್ಛಗೊಳಿಸುವ ದಿನ ಮಳೆ ಅಥವಾ ಹೆಚ್ಚು ಚಳಿ ಇಲ್ಲದಿದ್ದರೆ ಉತ್ತಮ. ಇದರಿಂದ ಎಂಜಿನ್ ಮತ್ತು ಅದರ ಘಟಕಗಳು ತೊಳೆದ ಸ್ವಲ್ಪ ಹೊತ್ತಿನಲ್ಲಿಯೇ ಒಣಗುತ್ತವೆ. ಇನ್ನು ಎಂಜಿನ್ ಆಫ್​ ಮಾಡಿದ ಬಳಿಕ ಸಾಕಷ್ಟು ಹೊತ್ತು ಕಾಯುವುದು ಉತ್ತಮ. ತೊಳೆಯುವ ಸಂದರ್ಭದಲ್ಲಿ ಉಂಟಾಗಬಹುದಾದ ಸುಟ್ಟ ಗಾಯಗಳನ್ನು ತಪ್ಪಿಸಬಹುದು.

ಮೊದಲಿಗೆ ಎಂಜಿನ್ ಕಂಪಾರ್ಟ್​ಮೆಂಟ್​ ಅನ್ನು ಓಪನ್ ಮಾಡಬೇಕು. ಮೇಲೆ ನಿಂತಿರುವ ಎಲೆಗಳು ಮತ್ತು ಕಡ್ಡಿಗಳನ್ನು ನಿಧಾನವಾಗಿ ತೆಗೆಯಬೇಕು. ವ್ಯಾಕ್ಯೂಮ್ ಕ್ಲೀನರ್ ಅಥವಾ ಏರ್ ಕಂಪ್ರೆಸರ್ ಅನ್ನು ಅದಕ್ಕಾಗಿ ಬಳಸಬಹುದು. ಈ ವೇಳೆ ಬ್ಯಾಟರಿ, ಇಗ್ನಿಷನ್ ಕೇಬಲ್ ಗಳು ಮತ್ತು ಎಂಜಿನ್ ಕಂಟ್ರೋಲ್ ಯುನಿಟ್ ನಂತಹ ಎಲ್ಲಾ ಎಲೆಕ್ಟ್ರಾನಿಕ್ ಘಟಕಗಳನ್ನು ಸೀಲ್​ ಮಾಡಿರಬೇಕು. ಇದಕ್ಕೆ ನೀರು ಬೀಳದಂತೆ ನೋಡಿಕೊಳ್ಳಬೇಕು. ಏರ್ ಫಿಲ್ಟರ್​ಗಳನ್ನು ತೆಗೆದುಬಿಡಿ. ಸರಿಯಾದ ಟೂಲ್ಸ್​ ಇದ್ದರೆ ಬ್ಯಾಟರಿ ಸಂಪರ್ಕವನ್ನೂ ತಪ್ಪಿಸಿ. ಇದರಿಂದ ಶಾರ್ಟ್​ ಸರ್ಕೀಟ್​ನಂಥ ಸಂಭಾವ್ಯ ಅವಘಡಗಳನ್ನು ತಪ್ಪಿಸಬಹುದು.

ಡಿಗ್ರೀಸರ್ ನ ಹಾಕಿ

ಎಂಜಿನ್​ ಮೇಲ್ಮೈ ಕೊಳೆಯನ್ನು ತೆಗೆಯಲು ಒತ್ತಡದೊಂದಿಗೆ ನೀರು ಹಾಯಿಸಿ. ಮಾರುಕಟ್ಟೆಯಲ್ಲಿ ಬಗೆಬಗೆಯ ಕಂಪ್ರೆಸರ್​​ಗಳಿವೆ. ಎಂಜಿನ್ ಗೆ ಡಿಗ್ರೀಸರ್ ಹಚ್ಚಿ, ವಿಶೇಷವಾಗಿ ಕವರ್ ಗಳು ಮತ್ತು ಪೈಪ್ ಗಳಂತಹ ಭಾರಿ ಕೊಳೆಯಿರುವ ಜಾಗಗಳಿಗೆ ಪರಿಣಾಮಕಾರಿಯಾಗಿ ಹಚ್ಚಿ. ಸ್ವಚ್ಛಗೊಳಿಸಲು ಸಿಂಥೆಟಿಕ್ ಬ್ರಿಸ್ಟಲ್ ಬ್ರಷ್ ಬಳಸಿ. ಅಗತ್ಯವಿದ್ದರೆ, ಡಿಗ್ರೀಸರ್ ಅಪ್ಲಿಕೇಶನ್ ಮತ್ತೆ ಮತ್ತೆ ಹಾಕಿ.

ಡಿಗ್ರೀಸರ್ ಅನ್ನು ತೆಗೆದುಹಾಕಲು ಎಂಜಿನ್ ಅನ್ನು ಮತ್ತೆ ನೀರಿನಿಂದ ತೊಳೆಯಿರಿ. ಹಾನಿಯನ್ನು ತಪ್ಪಿಸಲು ಎಲ್ಲ ಗ್ರೀಸರ್​ಗಳನ್ನು ಚೆನ್ನಾಗಿ ತೊಳೆಯಿರು.

ಒಣಗಿಸಿ

ಎಂಜಿನ್ ಮೇಲೆ ನೀರಿನ ಕಲೆಗಳು ನಿಲ್ಲುವುದನ್ನು ತಪ್ಪಿಸಲು ಚೆನ್ನಾಗಿ ಒಣಗಿಸಿ. ನೀವು ಅದನ್ನು ಗಾಳಿಯಲ್ಲಿ ಒಣಗಲು ಬಿಡಬಹುದು ಅಥವಾ ಸ್ವಚ್ಛವಾದ ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿ ಉಜ್ಜಬಹುದು. ಮೂಲೆಗಳನ್ನು ಮತ್ತು ತಲುಪಲು ಕಷ್ಟಕರವಾದ ಪ್ರದೇಶಗಳನ್ನು ಒಣಗಿಸಲು ಬಟ್ಟೆ ಬಳಸಿ. ಸಂಪೂರ್ಣವಾಗಿ ಒಣಗಿದ ನಂತರ, ಪ್ಲಾಸ್ಟಿಕ್ ಕವರ್​ ತೆಗೆದು ಎಲ್ಲಾ ವಿದ್ಯುತ್ ಸಂಪರ್ಕಗಳನ್ನು ಮರುಸಂಪರ್ಕಿಸಿ.

ಎಂಜಿನ್ ತೊಳೆಯುವುದರಿಂದ ಆಗುವ ಪ್ರಯೋಜಗಳು

ಎಂಜಿನ್​ ಮೇಲೆ ಕೊಳೆ ಕಡಿಯಿದ್ದಾಗ ಅದಕ್ಕೆ ಚೆನ್ನಾಗಿ ಗಾಳಿ ಬಡಿಯುತ್ತದೆ. ಅದರಿಂದ ಕಾರಿನ ಎಂಜಿನ್ ಅತಿಯಾಗಿ ಬಿಸಿಯಾಗುವ ಸಾಧ್ಯತೆ ಕಡಿಮೆ. ಎಂಜಿನ್ ನಿರ್ವಹಣೆ ಸುಲಭವಾಗುತ್ತದೆ. ಸೋರಿಕೆಗಳು, ಬಿರುಕುಗಳು ಮತ್ತು ಇತರ ಹಾನಿಯು ಚೆನ್ನಾಗಿ ಕಾಣಿಸುತ್ತದೆ. ನಿಯಮಿತವಾಗಿ ಸ್ವಚ್ಛಗೊಳಿಸುವುದರಿಂದ ಎಂಜಿನ್ ಭಾಗಗಳು ತುಕ್ಕು ಹಿಡಿಯುವುದನ್ನು ತಪ್ಪಿಸಬಹುದು.

ಇದನ್ನೂ ಓದಿ: Shilpa Shetty : 3.5 ಕೋಟಿ ರೂಪಾಯಿ ಬೆಲೆಯ ರೇಂಜ್​ ರೋವರ್​​ ಕಾರು ಖರೀದಿಸಿದ ಶಿಲ್ಪಾ ಶೆಟ್ಟಿ; ವಿಡಿಯೊ ನೋಡಿ

ಡಿಗ್ರೀಸರ್​ಗಳು ಯಾವುದೆಲ್ಲ?

ಆರ್ಗಾನಿಕ್​ ಡಿಗ್ರೀಸರ್​ಗಳು ಮಾರುಕಟ್ಟೆಯಲ್ಲಿವೆ. ಈ ಡಿಗ್ರೀಸರ್ ಗಳು ಕಡಿಮೆ ಬೆಲೆಗೆ ದೊರೆಯುತ್ತವೆ. ಡಾಂಬರು ಕಲೆಗಳು, ಯಂತ್ರ ತೈಲ, ಮ್ಯಾಸ್ಟಿಕ್, ನೈಸರ್ಗಿಕ ರಬ್ಬರ್ ಮತ್ತು ಸಿಲಿಕಾನ್ ಅನ್ನು ಇದರಿಂದ ತೆಗೆಯಬಹುದು. ಇದು ಬೆಂಕಿ ಅಪಾಯಕಾರಿ, ಆದ್ದರಿಂದ ಅವುಗಳನ್ನು ಬಳಸುವಾಗ ಎಚ್ಚರಿಕೆ ಅಗತ್ಯ.

ಎರಡನೆಯದದ್ದು ಲಿಕ್ವಿಡ್​ ಆಧಾರಿತ ಡಿಗ್ರೀಸರ್. ಇದು ಅತ್ಯುತ್ತಮ ಆಂಟಿ-ಸ್ಟ್ಯಾಟಿಕ್ ಗುಣಲಕ್ಷಣಗಳನ್ನು ಹೊಂದಿವೆ ಮತ್ತು ತುಕ್ಕು ಸೇರಿದಂತೆ ಕಠಿಣ ಕಲೆಗಳನ್ನು ತೆಗೆದುಹಾಕಬಹುದು. ಅವು ಸುರಕ್ಷಿತ ಮತ್ತು ನಿರುಪದ್ರವಿ. ಪ್ಲಾಸ್ಟಿಕ್ ಮೇಲ್ಮೈಗೂ ಹಾಕಬಹುದು. ಫೆರಸ್ ಮತ್ತು ಕಬ್ಬಿಣೇತರ ಲೋಹಗಳನ್ನು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸುತ್ತವೆ.
ಮೂರನೇ ಮಾದರಿಯ ಸಾವಯವ ದ್ರಾವಕಗಳ ಎಮಲ್ಷನ್​ಗಳು ಅತ್ಯುತ್ತಮ ನುಗ್ಗುವ ಸಾಮರ್ಥ್ಯ ಹೊಂದಿವೆ. ತೈಲ ಕಣಗಳೊಂದಿಗೆ ಮೇಲ್ಮೈ ಮರು-ಮಾಲಿನ್ಯ ತಡೆಯುತ್ತವೆ. ಮಸಿ ಮತ್ತು ಆಕ್ಸೈಡ್​ ಫಿಲ್ಮ್ ಗಳನ್ನು ತೆಗೆದುಹಾಕುವಲ್ಲಿ ಅವು ಅತ್ಯುತ್ತಮವಾಗಿವೆ.

ಡಿಗ್ರೀಸರ್ ಗಳನ್ನು ಬಳಸುವ ಮುನ್ನ

ಮೊದಲಿಗೆ ಬಾಟಲಿಗಳಲ್ಲಿ ಬರೆದಿರುವ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ. ತಯಾರಕರ ಶಿಫಾರಸುಗಳನ್ನು ಅನುಸರಿಸಿ. ಉತ್ಪನ್ನವು ನೀವು ತೊಳೆಯುವ ಎಂಜಿನ್​ಗೆ ಹೊಂದಿಕೆಯಾಗುತ್ತದೆ ಎಂದು ಖಚಿತಪಡಿಸಿಕೊಳ್ಳಿ. ಉದಾಹರಣೆಗೆ, ಟ್ರೈಕ್ಲೋರೋಫ್ಲೋರೋಮೀಥೇನ್ ಆಧಾರಿತ ಡಿಗ್ರೀಸರ್ ಗಳು ಅಲ್ಯೂಮಿನಿಯಂ ವಸ್ತುಗಳಿಗೆ ಬಿದ್ದಾಗ ಸ್ಫೋಟವಾಗುತ್ತದೆ.

ದ್ರಾವಣ ಆಧಾರಿತ ಡಿಗ್ರೀಸರ್ ಗಳನ್ನು ಬಳಸುವಾಗ, ಬಟ್ಟೆ, ಸುರಕ್ಷತಾ ಕನ್ನಡಕಗಳು ಮತ್ತು ಉಸಿರಾಟದ ಸಾಧನವನ್ನು ಧರಿಸಿ. ಗಾಳಿಯಾಡುವ ಪ್ರದೇಶದಲ್ಲಿ ಕೆಲಸ ಮಾಡಿ. ಬೆಂಕಿಯ ಸಮೀಪ ತೆಗೆದುಕೊಂಡು ಹೋಗಬೇಡಿ. ಡಿಗ್ರೀಸರ್ ಅನ್ನು ಸಮಾನವಾಗಿ ಹಾಕಲು ಸ್ಪ್ರೇಯರ್ ಅಥವಾ ಲಿಂಟ್-ಫ್ರೀ ಬಟ್ಟೆಯನ್ನು ಬಳಸಿ.
ರಾಸಾಯನಿಕ ಉತ್ಪನ್ನವನ್ನು ಸಂಪೂರ್ಣವಾಗಿ ಒಣಗಲು ಬಿಡಬೇಡಿ.

ಶುಚಿಗೊಳಿಸುವ ಗುಣಮಟ್ಟ ನಿಯಂತ್ರಣ

ಆಟೋಮೋಟಿವ್ ತಜ್ಞರ ಪ್ರಕಾರ, ಡಿಗ್ರೀಸರ್ ಗಳ ಸಮಪರ್ಕ ಬಳಕೆ ಮತ್ತು ನಿಯಮಿತ ಎಂಜಿನ್ ಕ್ಲೀನಿಂಗ್ ಕಾರಿನ ಜೀವಿತಾವಧಿಯನ್ನು ಗಮನಾರ್ಹವಾಗಿ ವಿಸ್ತರಿಸುತ್ತದೆ. ಅದರ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಡಿಗ್ರೀಸರ್ ಗಳನ್ನು ಆಯ್ಕೆ ಮಾಡಲು ಮತ್ತು ಬಳಸಲು ಮತ್ತು ನಿಯಮಿತ ಎಂಜಿನ್ ಕ್ಲೀನಿಂಗ್ ಗಾಗಿ ಶಿಫಾರಸುಗಳನ್ನು ಅನುಸರಿಸಬೇಕು.

Continue Reading

ಪ್ರಮುಖ ಸುದ್ದಿ

Electric Scooters : ದೊಡ್ಡ ಬೂಟ್​ ಸ್ಪೇಸ್ ಇರುವಂಥ 5 ಎಲೆಕ್ಟ್ರಿಕ್​ ಸ್ಕೂಟರ್​ಗಳು ಇವು

Electric Scooters : ಭಾರತೀಯ ಮಾರುಕಟ್ಟೆಯಲ್ಲಿರುವ ಐದು ಎಲೆಕ್ಟ್ರಿಕ್ ಸ್ಕೂಟರ್​ಗಳ ಬೂಟ್ ಸ್ಪೇಸ್​​ಗಳ ಮಾಹಿತಿ ನೀಡಲಾಗಿದೆ. ನಿಮಗೆ ಯಾವುದು ಇಷ್ಟವಾಯಿತು ಎಂಬುದನ್ನು ತಿಳಿಸಿ. ಹೋಲಿಕೆಗೊಂದು ಮಾಹಿತಿ, ನಾವು ರಸ್ತೆಯಲ್ಲಿ ಹೆಚ್ಚಾಗಿ ನೋಡುವ ಹೋಂಡಾ ಆ್ಯಕ್ಟಿವಾ ಎಲೆಕ್ಟ್ರಿಕ್​ ಸ್ಕೂಟರ್​ 18 ಲೀಟರ್ ಬೂಟ್​ ಸ್ಪೇಸ್ ಹೊಂದಿದೆ.

VISTARANEWS.COM


on

Electric Scooters
Koo

ಬೆಂಗಳೂರು: ಸ್ಕೂಟರ್​​ಗಳು ಅತ್ಯಂತ ಅಗತ್ಯ ವಸ್ತುಗಳಲ್ಲಿ ಒಂದಾಗಿದೆ. ಅದು ಪ್ರಾಯೋಗಿಕ ಅದು ಹೆಚ್ಚು ಉಪಯೋಗಕಾರಿ. ಯಾಕೆಂದರೆ ಸ್ಕೂಟರ್​​ಗಳಲ್ಲಿ ಹೆಚ್ಚು ಬೂಟ್​ ಸ್ಪೇಸ್​ ಹೊಂದಿದೆ. ಅದರಲ್ಲೂ ಎಲೆಕ್ಟ್ರಿಕ್​ ಸ್ಕೂಟರ್​ಗಳು ಹೆಚ್ಚು ಉಪಯೋಗಕಾರಿ. ಜತೆಗೆ ಹೈಟೆಕ್​ ಫೀಚರ್​ಗಳೂ ಇವೆ. ಇಂದಿನ ಕೆಲವು ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿನ ಬೂಟ್​ ಸ್ಪೇಸ್​ ಎಷ್ಟು ದೊಡ್ಡದಾಗಿದೆ ಎಂದರೆ ನಿಮಗೆ ಒಂದು ಕಲ್ಪನೆ ಮಾಡಲೂ ಸಾಧ್ಯವಿಲ್ಲದಷ್ಟು ದೊಡ್ಡದಾಗಿದೆ. ಹೀಗಾಗಿ ಭಾರತೀಯ ಮಾರುಕಟ್ಟೆಯಲ್ಲಿರುವ ಐದು ಎಲೆಕ್ಟ್ರಿಕ್ ಸ್ಕೂಟರ್​ಗಳ ಬೂಟ್ ಸ್ಪೇಸ್​​ಗಳ ಮಾಹಿತಿ ನೀಡಲಾಗಿದೆ. ನಿಮಗೆ ಯಾವುದು ಇಷ್ಟವಾಯಿತು ಎಂಬುದನ್ನು ತಿಳಿಸಿ. ಹೋಲಿಕೆಗೊಂದು ಮಾಹಿತಿ, ನಾವು ರಸ್ತೆಯಲ್ಲಿ ಹೆಚ್ಚಾಗಿ ನೋಡುವ ಹೋಂಡಾ ಆ್ಯಕ್ಟಿವಾ ಎಲೆಕ್ಟ್ರಿಕ್​ ಸ್ಕೂಟರ್​ 18 ಲೀಟರ್ ಬೂಟ್​ ಸ್ಪೇಸ್ ಹೊಂದಿದೆ.

ರಿವರ್ ಇಂಡಿ -​ 43 ಲೀಟರ್

ರಿವರ್​ ಇಂ ಡಿ ಕಂಪನಿಯ ​ ಸ್ಕೂಟರ್ 43 ಲೀಟರ್ ಬೂಟ್​ ಸ್ಪೇಸ್​ ಹೊಂದಿದೆ. ಇದರ ಬೂಟ್​ ಸ್ಪೇಸ್​ ನೋಡಿದರೆ ಇದಕ್ಕೆ ಯಾವುದೇ ಪರ್ಯಾಯ ಇಲ್ಲ. ಇದು ಯಾವುದೇ ಭಾರತೀಯ ಎಲೆಕ್ಟ್ರಿಕ್ ಸ್ಕೂಟರ್ ಪೈಕಿ ಅತಿದೊಡ್ಡ ಶೇಖರಣಾ ಸ್ಥಳವಾಗಿದೆ. ಪ್ರಾಯೋಗಿವಾಗಿ ಇಂಡಿ ಸ್ಕೂಟರ್​ನಲ್ಲಿ ಒಂದು ಜೋಡಿ ಪ್ಯಾನಿಯರ್ ಗಳು ಮತ್ತು ಅಕ್ಸಸರಿ ಹಾಗೂ ಟಾಪ್ ಬಾಕ್ಸ್ ನೀಡಲಾಗುತ್ತದೆ. ಇದು ಅದರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಅಥೆರ್ ರಿಶ್ತಾ- 34 ಲೀಟರ್

ರಿಶ್ತಾ ಮತ್ತು ಜೆನ್ 2 ಓಲಾ ಮಾದರಿಗಳು ಒಂದೇ ರೀತಿಯ ಬೂಟ್​ ಸ್ಪೇಸ್​ ಹೊಂದಿದೆ. ಆದರೆ, ಓಲಾದಲ್ಲಿ ಅದರ ಬೂಟ್​ ಸ್ಪೇಸ್​ ಆಳವಿಲ್ಲದ ಕಾರಣ ಅಥೆರ್ ಒಂದು ಹೆಜ್ಜೆ ಮುಂದಕ್ಕೆ ನಿಲ್ಲುತ್ತದೆ. ಅಥೆರ್ ರಿಜ್ಟಾದ ಆಳವಾದ ಶೇಖರಣಾ ಸಾಮರ್ಥ್ಯ ಹೊಂದಿದೆ. ಅಥೆರ್ ಬೂಟ್ ನ ಸ್ವಲ್ಪ ದೂರದಲ್ಲಿ ಒಂದು ಸಣ್ಣ ಕ್ಯೂಬಿಯನ್ನು ನೀಡಿದೆ. ಅಲ್ಲಿ ನೀವು ನಿಮ್ಮ ಸ್ಮಾರ್ಟ್ ಫೋನ್, ವ್ಯಾಲೆಟ್ ಮುಂತಾದ ನಿಕ್-ನಾಕ್ ಗಳನ್ನು ಇಟ್ಟುಕೊಳ್ಳಬಹುದು.

ಇದನ್ನೂ ಓದಿ: Jawa Yezdi : ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ನ ಜಾವಾ 42 ಬಾಬರ್ ರೆಡ್ ಶೀನ್‌ ಬಿಡುಗಡೆ

ಜೆನ್ 2 ಓಲಾ ಎಸ್ 1 ವೇರಿಯೆಂಟ್​- 34 ಲೀಟರ್

ಜೆನ್ 2 ಪ್ಲಾಟ್ ಫಾರ್ಮ್ ಗೆ ಸ್ಥಳಾಂತರಗೊಳ್ಳುವುದರೊಂದಿಗೆ, ಓಲಾದ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 34 ಲೀಟರ್ ಬೂಟ್ ಸಾಮರ್ಥ್ಯ ನೀಡಲಾಗಿದೆ. ವಾಸ್ತವವಾಗಿ 36 ಲೀಟರ್ ಬೂಟ್ ಸಾಮರ್ಥ್ಯ ಹೊಂದಿದ್ದ ಜೆನ್ 1 ಓಲಾ ಮಾದರಿಗಳಿಗಿಂತ ಸ್ವಲ್ಪ ಕಡಿಮೆ ಎನಿಸಿದೆ. ಏನೇ ಇರಲಿ ಓಲಾ ಎಲೆಕ್ಟ್ರಿಕ್ ಗಳು ಮಾರುಕಟ್ಟೆಯಲ್ಲಿ ದೊಡ್ಡ ಬೂಟ್ ನೀಡಿದ ಮೊದಲ ಎಲೆಕ್ಟ್ರಿಕ್ ಸ್ಕೂಟರ್​​.

ಟಿವಿಎಸ್ ಐಕ್ಯೂಬ್ 32 ಲೀಟರ್

ಐಕ್ಯೂಬ್ ಮೊದಲ ಬಾರಿಗೆ ಬಿಡುಗಡೆಯಾದಾಗ ಮಾರಾಟದಲ್ಲಿದ್ದ ಎರಡು ರೂಪಾಂತರಗಳು ಕೇವಲ 17 ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಸ್ಥಳ ಹೊಂದಿದ್ದವು. ಟಿವಿಎಸ್ ಈಗ ಜನಪ್ರಿಯ ಇ-ಸ್ಕೂಟರ್ ನ ಎಲ್ಲಾ ರೂಪಾಂತರಗಳ (ಬೇಸ್ ಐಕ್ಯೂಬ್ 2.2 ಕಿಲೋವ್ಯಾಟ್ ಹೊರತುಪಡಿಸಿ) ಬೂಟ್ 32 ಲೀಟರ್ ಗಳಿಗೆ ಹೆಚ್ಚಿಸಿದೆ. ಬೇಸ್ ಐಕ್ಯೂಬ್ 2.2 30 ಲೀಟರ್ ನಲ್ಲಿ ವೇರಿಯೆಂಟ್​ನಲ್ಲಿ 30 ಲೀಟರ್ ಬೂಟ್​ ಸ್ಪೇಸ್​ ನೀಡಲಾಗಿದೆ.

ಸಿಂಪಲ್ ಒನ್ 30 ಲೀಟರ್

ಸಿಂಪಲ್ ಒನ್ ಸ್ಕೂಟರ್​ 30 ಲೀಟರ್ ಬೂಟ್ ಸ್ಪೇಸ್​ ಐದು ಸ್ಕೂಟರ್​ಗಳ ಪಟ್ಟಿಯಲ್ಲಿ ಅತ್ಯಂತ ಚಿಕ್ಕದು. ಸಿಂಪಲ್ ಒನ್​ ಸ್ಕೂಟರ್ ಹೆಚ್ಚು ಜನಪ್ರಿಯವಾಗಿಲ್ಲ ಎಂಬುದು ಮೊದಲ ಮಾತು. ಅದರೆ, ಅದರ ಬೂಟ್​ ಸ್ಪೇಸ್​​ ಸ್ಪರ್ಧಾತ್ಮಕವಾಗಿದೆ. ಇಂಡಿ ಹೊರತುಪಡಿಸಿ ಟಿವಿಎಸ್​, ಅಥೆರ್ ಹಾಗೂ ಓಲಾ ಸ್ಕೂಟರ್​ಗಳು ನಾನಾ ರೀತಿಯಲ್ಲಿ ಜನಪ್ರಿಯವಾಗಿದೆ. ಆದಾಗ್ಯೂ ಸಿಂಪನ್​ ಒನ್​ ಸ್ಪರ್ಧಾತ್ಮಕ ರೀತಿಯಲ್ಲೇ ಬೂಟ್​ ಸ್ಪೇಸ್​ ನೀಡುತ್ತಿದೆ.

Continue Reading

ಆಟೋಮೊಬೈಲ್

Jawa Yezdi : ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ನ ಜಾವಾ 42 ಬಾಬರ್ ರೆಡ್ ಶೀನ್‌ ಬಿಡುಗಡೆ

Jawa Yezdi : ಫ್ಯಾಷನ್, ಸಂಗೀತ ಮತ್ತು ಕಲೆಯೊಂದಿಗೆ ಆಚರಿಸುವ ಎವೈಸಿಎಸ್ ಫೆಸ್ಟಿವಲ್ ನಲ್ಲಿ ನಡೆದ ಬಿಡುಗಡೆ ಕಾರ್ಯಕ್ರಮವು ರೋಮಾಂಚಕ ಜೀವನಶೈಲಿ ಮತ್ತು ಮೋಟಾರ್‌ಸೈಕ್ಲಿಂಗ್ ಪೋಷಿಸುವ ಜಾವಾ ಯೆಜ್ಡಿ ಮೋಟಾರ್‌ಸೈಕಲ್‌ನ ಬದ್ಧತೆಗೆ ಸಾಕ್ಷಿಯಾಗಿದೆ.

VISTARANEWS.COM


on

Jawa Yezdi
Koo

ಬೆಂಗಳೂರು: ಕಾರ್ಯಕ್ಷಮತೆ- ಕ್ಲಾಸಿಕ್ ಮೋಟಾರ್‌ಸೈಕಲ್‌ಗಳಿಗೆ ಹೆಸರುವಾಸಿಯಾಗಿರುವ ಪ್ರಮುಖ ಬೈಕ್ ತಯಾರಕರಾದ ಜಾವಾ ಯೆಜ್ಡಿ (Jawa Yezdi) ಮೋಟಾರ್‌ ಸೈಕಲ್ಸ್ ಇಂದು ಮುಂಬೈನಲ್ಲಿ ನಡೆದ ಆಲ್ ಯು ಕ್ಯಾನ್ ಸ್ಟ್ರೀಟ್ ಫೆಸ್ಟಿವಲ್ (ಎವೈಸಿಎಸ್) ನಲ್ಲಿ ಅತ್ಯಾಕರ್ಷಕವಾದ ಜಾವಾ 42 ಬಾಬರ್ ರೆಡ್ ಶೀನ್ ಅನ್ನು ಬಿಡುಗಡೆ ಮಾಡಿದೆ. ರೂ.2.29 ಲಕ್ಷ ಬೆಲೆಯನ್ನು (ಎಕ್ಸ್ ಶೋ ರೂಂ ದೆಹಲಿ) ಹೊಂದಿರುವ ಮತ್ತು ವೇರಿಯಂಟ್ ಗಳಲ್ಲಿ ಅಗ್ರ ಸ್ಥಾನ ಪಡೆದಿರುವ ರೆಡ್ ಶೀನ್ ಜನಪ್ರಿಯ ಬ್ಲ್ಯಾಕ್ ಮಿರರ್ ಎಡಿಷನ್ ಗೆ ಹೊಸ ಸೇರ್ಪಡೆ ಆಗಿದೆ.

ಫ್ಯಾಷನ್, ಸಂಗೀತ ಮತ್ತು ಕಲೆಯೊಂದಿಗೆ ಆಚರಿಸುವ ಎವೈಸಿಎಸ್ ಫೆಸ್ಟಿವಲ್ ನಲ್ಲಿ ನಡೆದ ಬಿಡುಗಡೆ ಕಾರ್ಯಕ್ರಮವು ರೋಮಾಂಚಕ ಜೀವನಶೈಲಿ ಮತ್ತು ಮೋಟಾರ್‌ಸೈಕ್ಲಿಂಗ್ ಪೋಷಿಸುವ ಜಾವಾ ಯೆಜ್ಡಿ ಮೋಟಾರ್‌ಸೈಕಲ್‌ನ ಬದ್ಧತೆಗೆ ಸಾಕ್ಷಿಯಾಗಿದೆ.

ಜಾವಾ 42 ಬಾಬರ್‌ನ ಯಶಸ್ಸಿನ ಬಳಿಕ ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ಕಂಪನಿಯು ಜಾವಾ 42 ರೆಡ್ ಶೀನ್ ಮೂಲಕ ತನ್ನ ಬಾಬರ್ ವಿಭಾಗದ ನಾಯಕತ್ವವನ್ನು ಗಟ್ಟಿಗೊಳಿಸುವ ಉದ್ದೇಶ ಹೊಂದಿದೆ. ಆಕರ್ಷಕವಾದ ಕೆಂಪು ಬಣ್ಣದ ಫ್ಯುಯಲ್ ಟ್ಯಾಂಕ್ ಅನ್ನು ಹೊಂದಿರುವ ಈ ಹೊಸ ವೇರಿಯಂಟ್ ಬೋಲ್ಡ್ ಆಗಿದೆ ಮತ್ತು ವಿಶಿಷ್ಟ ರೀತಿಯ ರೈಡ್ ಆನಂದಿಸುವ ಕಿರಿ ವಯಸ್ಸಿನ ಸವಾರರ ಗಮನ ಸೆಳೆಯಲೆಂದೇ ವಿನ್ಯಾಸ ಮಾಡಲಾಗಿದೆ.

ವಿನ್ಯಾಸ ಹೇಗಿದೆ?

ರೆಡ್ ಶೀನ್ ಬೈಕ್ ಅಪೂರ್ವವಾದ ಕ್ರೋಮ್ ಫಿನಿಶ್ ಹೊಂದಿರುವ ಟ್ಯಾಂಕ್ ಮತ್ತು ಡೈಮಂಡ್- ಕಟ್ ಅಲಾಯ್ ವೀಲ್ ಗಳನ್ನು ಹೊಂದಿದೆ. ಜೊತೆಗೆ ಈ ಬೈಕ್ ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ. ಇದರ ಶಕ್ತಿಶಾಲಿ 334 ಸಿಸಿ ಲಿಕ್ವಿಡ್-ಕೂಲ್ಡ್ ಎಂಜಿನ್ 29.9 ಪಿಎಸ್ ಮತ್ತು 30ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಮೃದುವಾದ ಮತ್ತು ನಿಖರವಾದ ಆರು-ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಈ ಬೈಕ್ ಹೊಂದಿದೆ. ಅಸಿಸ್ಟ್ ಆ್ಯಂಡ್​ ಸ್ಲಿಪ್ ಕ್ಲಚ್, ಏಳು- ಹಂತದ ಪ್ರೀ- ಲೋಡ್ ಅಡ್ಜಸ್ಟೇಬಲ್ ರೇರ್ ಮೊನೊ- ಶಾಕ್, ಎರಡು- ಹಂತದ ಅಡ್ಜಸ್ಟೇಬಲ್ ಸೀಟ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಡಿಜಿಟಲ್ ಕನ್ಸೋಲ್ ಮತ್ತು ಪೂರ್ಣ ಎಲ್ಇಡಿ ಲೈಟಿಂಗ್ ಅನ್ನು ಒದಗಿಸುವ ಮೂಲಕ ರೈಡರ್ ಗಳಿಗೆ ಉತ್ತಮ ಸೌಕರ್ಯವನ್ನು ಒದಗಿಸಲಾಗಿದೆ.

ಜಾವಾ 42 ಬಾಬರ್ ಅದ್ಭುತವಾದ ಯಶಸ್ಸನ್ನು ಕಂಡಿದೆ ಮತ್ತು ರೆಡ್ ಶೀನ್‌ ಅನ್ನು ಪರಿಚಯ ಮಾಡುವ ಮೂಲಕ ನಮ್ಮ ಕುಟುಂಬವನ್ನು ವಿಸ್ತರಣೆ ಮಾಡಲು ನಾವು ಸಂತೋಷ ಹೊಂದಿದ್ದೇವೆ ಎಂದು ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ಸಿಇಓ ಆಶಿಶ್ ಸಿಂಗ್ ಜೋಶಿ ಹೇಳಿದ್ದಾರೆ. ಮಾತು ಮುಂದುವರಿಸುತ್ತಾ ಅವರು, “ಈ ಅತ್ಯಾಕರ್ಷಕ ವೇರಿಯಂಟ್ ಬಾಬರ್ ವಿಭಾಗಕ್ಕೆ ಅತ್ಯಪೂರ್ವ ಶಕ್ತಿ ಮತ್ತು ಹುಮ್ಮಸ್ಸನ್ನು ತುಂಬಲಿದೆ. ತಮ್ಮ ವಿಶೇಷತೆಯನ್ನು ಪ್ರತಿಬಿಂಬಿಸುವ ಮೋಟಾರ್‌ಸೈಕಲ್ ಗೆ ಹಂಬಲಿಸುವ ಹೊಸ ತಲೆಮಾರಿನ ಸವಾರರಿಗಾಗಿ ಈ ಬೈಕ್ ಅನ್ನು ವಿನ್ಯಾಸ ಗೊಳಿಸಲಾಗಿದೆ. ಆಲ್ ಯು ಕ್ಯಾನ್ ಸ್ಟ್ರೀಟ್ ಫೆಸ್ಟಿವಲ್‌ನಲ್ಲಿ ಬಿಡುಗಡೆ ಮಾಡುವುದರ ಮೂಲಕ ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ನ ಸ್ವಯಂ ಅಭಿವ್ಯಕ್ತಿ ಮತ್ತು ರೈಡ್ ಮೇಲಿನ ಪ್ರೀತಿಯನ್ನು ಆಚರಿಸುವ ಸಂಸ್ಕೃತಿಯನ್ನು ಪೋಷಣೆ ಮಾಡುವ ಬದ್ಧತೆಯು ಸಾಕಾರಗೊಂಡಿದೆ” ಎಂದು ಹೇಳಿದರು.

ಇದನ್ನೂ ಓದಿ: Magnite GEZA CVT : ಮ್ಯಾಗ್ನೈಟ್ ಗೆಝಾ ಸಿವಿಟಿ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ನಿಸ್ಸಾನ್

42 ಬಾಬರ್ ರೆಡ್ ಶೀನ್ ಬಿಡುಗಡೆ ಮಾಡುವ ಮೂಲಕ ಕಂಪನಿಯು ಅತ್ಯಾಧುನಿಕ ಶೈಲಿ ಮತ್ತು ಕಾಲಾತೀತ ಪರಂಪರೆ ಎರಡನ್ನೂ ಹೊಂದಿರುವ ಮೋಟಾರ್‌ಸೈಕಲ್ ಅನ್ನು ಬಯಸುವ ಜೆನ್- ಝಡ್ ಗ್ರಾಹಕರಿಂದ ಅಪಾರ ಆಸಕ್ತಿಯನ್ನು ನಿರೀಕ್ಷೆ ಮಾಡುತ್ತಿದೆ. ಬೀದಿಗಳಲ್ಲಿ ಚಲಿಸುವ ತಮ್ಮ ಬೈಕ್ ಅನ್ನು ತಿರುಗಿ ನೋಡಬೇಕು ಎಂದು ಬಯಸುವ ಸವಾರರಿಗೆ ರೆಡ್ ಶೀನ್ ಅತ್ಯುತ್ತಮ ಆಯ್ಕೆಯಾಗಿದೆ. ಜಾವಾ 42 ಬಾಬರ್ ಜೊತೆಗೆ ಇತ್ತೀಚೆಗೆ ಪರಿಷ್ಕರಣೆ ಮಾಡಿದ ಜಾವಾ ಪೆರಾಕ್ ಮೂಲಕ ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ಪ್ರಸ್ತುತ ‘ಫ್ಯಾಕ್ಟರಿ ಕಸ್ಟಮ್’ ಪೋರ್ಟ್ ಪೋಲಿಯೋವನ್ನು ಒದಗಿಸುತ್ತಿದೆ. ಅವುಗಳೊಂದಿಗೆ ಜಾವಾ 350, ಜಾವಾ 42, ಯೆಜ್ಡಿ ರೋಡ್‌ಸ್ಟರ್, ಯೆಜ್ಡಿ ಸ್ಕ್ರ್ಯಾಂಬ್ಲರ್ ಮತ್ತು ಯೆಜ್ಡಿ ಅಡ್ವೆಂಚರ್ ಅನ್ನು ಒಳಗೊಂಡಿರುವ ಆಕರ್ಷಕ ಉತ್ಪನ್ನ ಶ್ರೇಣಿಯನ್ನು ಕಂಪನಿಯು ಗ್ರಾಹಕರಿಗೆ ಒದಗಿಸುತ್ತಿದೆ.

ಜಾವಾ ಪೆರಾಕ್ ಮತ್ತು ವಿವಿಧ ಜಾವಾ 42 ಬಾಬರ್ ವೇರಿಯಂಟ್ ಗಳ (ಎಕ್ಸ್ ಶೋ ರೂಂ ದೆಹಲಿ) ಬೆಲೆ ಈ ಕೆಳಗಿನಂತಿದೆ:

  • ಜಾವಾ ಪೆರಾಕ್: ರೂ. 2,13,187
  • ಜಾವಾ 42 ಬಾಬರ್ – ಮೂನ್‌ಸ್ಟೋನ್ ವೈಟ್: ರೂ 2,09,500
  • ಜಾವಾ 42 ಬಾಬರ್ – ಮಿಸ್ಟಿಕ್ ಕಾಪರ್ ಸ್ಪೋಕ್ ವೀಲ್: ರೂ 2,12,500
  • ಜಾವಾ 42 ಬಾಬರ್ – ಮಿಸ್ಟಿಕ್ ಕಾಪರ್ ಅಲಾಯ್ ವೀಲ್: ರೂ 2,18,900
  • ಜಾವಾ 42 ಬಾಬರ್ – ಜಾಸ್ಪರ್ ರೆಡ್ ಡ್ಯುಯಲ್ ಟೋನ್ ಸ್ಪೋಕ್ ವೀಲ್: ರೂ 2,15,187
  • ಜಾವಾ 42 ಬಾಬರ್ – ಜಾಸ್ಪರ್ ರೆಡ್ ಡ್ಯುಯಲ್ ಟೋನ್ ಅಲಾಯ್ ವೀಲ್: ರೂ 2,19,950
  • ಜಾವಾ 42 ಬಾಬರ್ – ಬ್ಲ್ಯಾಕ್ ಮಿರರ್: ರೂ. 2,29,500
  • ಹೊಸ ಜಾವಾ 42 ಬಾಬರ್ -ರೆಡ್ ಶೀನ್: ರೂ. 2,29,500
Continue Reading
Advertisement
Shakhahaari Movie 1 cr minutes of streaming amazon prime
ಸ್ಯಾಂಡಲ್ ವುಡ್9 mins ago

Shakhahaari Movie: ಪ್ರೇಕ್ಷಕರನ್ನು ಆವರಿಸಿದ ‘ಶಾಖಾಹಾರಿ’: ಪರಭಾಷಿಕರಿಂದಲೂ ಚಿತ್ರಕ್ಕೆ ಮೆಚ್ಚುಗೆ!

Arvind Kejriwal
ದೇಶ9 mins ago

Arvind Kejriwal: ಜಾಮೀನು ಅವಧಿ ವಿಸ್ತರಣೆಗೆ ಕೋರಿ ಅರ್ಜಿ; ಸುಪ್ರೀಂನಲ್ಲಿ ಕೇಜ್ರಿವಾಲ್‌ಗೆ ಭಾರೀ ಹಿನ್ನಡೆ-ಮತ್ತೆ ಜೈಲು ಫಿಕ್ಸ್‌!

Crime News
ಕ್ರೈಂ31 mins ago

Crime News: ಶಾಕಿಂಗ್‌: ಕುಟುಂಬದ 7 ಮಂದಿಯನ್ನು ಕೊಚ್ಚಿ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ; ಕಾರಣ ನಿಗೂಢ

belluru assault case
ಕ್ರೈಂ33 mins ago

Assault Case: ಬೆಳ್ಳೂರು ಹಿಂದೂ ಯುವಕನ ಮೇಲೆ ಹಲ್ಲೆ; ದೂರು ಸ್ವೀಕರಿಸದ ಪಿಎಸ್‌ಐ ಸಸ್ಪೆಂಡ್‌

Shilpa Shetty Visiting Nanjundeshwara Temple
ಸಿನಿಮಾ34 mins ago

Shilpa Shetty: ಮೈಸೂರಿನ ನಂಜುಂಡೇಶ್ವರನ ಸನ್ನಿಧಿಯಲ್ಲಿ ನಟಿ ಶಿಲ್ಪಾ ಶೆಟ್ಟಿ ಧ್ಯಾನ

Viral Video
ವೈರಲ್ ನ್ಯೂಸ್49 mins ago

Viral Video: “ನೀವು ಅಲ್ಲಿಂದ ದಾಳಿ ಮಾಡಿ..ನಾವು ಇಲ್ಲಿಂದ ಅಟ್ಯಾಕ್‌ ಮಾಡ್ತೇವೆ..ಪಾಕ್‌ ಧ್ವಂಸ ಆಗೋದು ಪಕ್ಕಾ”-ಆಫ್ಗನ್‌ ವೃದ್ಧನ ಈ ವಿಡಿಯೋ ಫುಲ್‌ ವೈರಲ್‌

India Highest Paid Item Girl not Malaika Nora, Katrina, Sunny
ಸಿನಿಮಾ54 mins ago

India Highest Paid Item Girl : ಅತಿ ಹೆಚ್ಚು ಸಂಭಾವನೆ ಪಡೆಯುವ ಐಟಂ ಗರ್ಲ್ ಯಾರು? ಮಲೈಕಾ, ಸನ್ನಿ, ನೋರಾ ಅಲ್ವೇ ಅಲ್ಲ!

Job Alert
ಉದ್ಯೋಗ1 hour ago

Job Alert: ಯುಪಿಎಸ್‌ಸಿಯಿಂದ 312 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ; ಆನ್‌ಲೈನ್‌ ಮೂಲಕ ಅಪ್ಲೈ ಮಾಡಿ

love jihad kasaragod 2
ಕ್ರೈಂ1 hour ago

Love Jihad: ನಾಪತ್ತೆಯಾದ ಹಿಂದೂ ಯುವತಿ ಮುಸ್ಲಿಂ ಯುವಕನ ಮದುವೆಯಾಗಿ ಪತ್ತೆ; ಮುಸ್ಲಿಂ ಲೀಗ್‌ ನಾಯಕನ ಕುಮ್ಮಕ್ಕು?

Kannada New Movie Aditya Shashikumar Kaadaadi Movie Lyrical song out
ಸ್ಯಾಂಡಲ್ ವುಡ್2 hours ago

Kannada New Movie: ಶಶಿಕುಮಾರ್ ಪುತ್ರನ ‘ಕಾದಾಡಿ’ ಸಿನಿಮಾದ ಲಿರಿಕಲ್ ಸಾಂಗ್ ಔಟ್‌!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ16 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 day ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌