Eelectric Vehicles : 2030ಕ್ಕೆ ಭಾರತದ ರಸ್ತೆಗಳಿರುತ್ತವೆ 2 ಕೋಟಿ ಬ್ಯಾಟರಿ ಚಾಲಿತ ವಾಹನಗಳು: ಗಡ್ಕರಿ ಭರವಸೆ - Vistara News

ಆಟೋಮೊಬೈಲ್

Eelectric Vehicles : 2030ಕ್ಕೆ ಭಾರತದ ರಸ್ತೆಗಳಿರುತ್ತವೆ 2 ಕೋಟಿ ಬ್ಯಾಟರಿ ಚಾಲಿತ ವಾಹನಗಳು: ಗಡ್ಕರಿ ಭರವಸೆ

ಎಲೆಕ್ಟ್ರಿಕ್​ ವಾಹನಗಳ (Eelectric Vehicles) ಉತ್ಪಾದನಾ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಾದರೆ ಉದ್ಯೋಗವಕಾಶಗಳೂ ವೃದ್ಧಿಸಲಿವೆ ಎಂಬುದಾಗಿ ನಿತಿನ್​ ಗಡ್ಕರಿ ಹೇಳಿದ್ದಾರೆ.

VISTARANEWS.COM


on

EV cars
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: 2030ರ ರ ವೇಳ ಭಾರತದಲ್ಲಿ 2 ಕೋಟಿಗೂ ಅಧಿಕ ಬ್ಯಾಟರಿ ಚಾಲಿತ (Eelectric Vehicles) ವಾಹನಗಳಿರುತ್ತವೆ. ಇದರಿಂದ ಎಲೆಕ್ಟ್ರಿಕ್​ ವಾಹನಗಳ ಉತ್ಪಾದನಾ ಕ್ಷೇತ್ರ ಹಿಗ್ಗಲಿದೆ ಹಾಗೂ ಹೂಡಿಕೆ ಪ್ರಮಾಣವೂ ಹೆಚ್ಚಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಭಾನುವಾರ (ಫೆಬ್ರವರಿ 12) ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಪರಿಸರಕ್ಕೆ ಪ್ರಯೋಜನ ಸಿಗುವ ಜತೆಗೆ ಭಾರತದ ಆರ್ಥಿಕತೆಗೂ ನೆರವಾಗಲಿದೆ ಎಂದು ಅವರು ಹೇಳಿದರು.

ಎಲೆಕ್ಟ್ರಿಕ್ ವಾಹನಗಳು ಹಾಗೂ ಭವಿಷ್ಯದ ಸಾರಿಗೆ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇವಿ ವಾಹನಗಳ ಉತ್ಪಾದನಾ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಗಳು ಹೆಚ್ಚಾಗಲಿವೆ. ಇದರಿಂದ ಭಾರತದಲ್ಲಿ ಉದ್ಯೋಗದ ಅವಕಾಶಗಳೂ ವ್ಯಾಪಕವಾಗಲಿವೆ. ಪರಿಸರ ಸ್ನೇಹಿ ಎಂಬುದು ಒಂದು ಲಾಭವಾದರೆ ಜನರಿಗೂ ಅದರ ಲಾಭ ಸಿಗುವುದು ಭಾರತದ ಪಾಲಿಗೆ ಪೂರಕ ಸಂಗತಿ ಎಂದು ಅವರು ಹೇಳಿದರು.

ಭಾರತದಲ್ಲಿ ಶಬ್ದ ಹಾಗೂ ವಾಯು ಮಾಲಿನ್ಯದಲ್ಲಿ ವಾಹನಗಳ ಪಾಲು ಶೇಕಡಾ 40. ಹೀಗಾಗಿ ಎಲೆಕ್ಟ್ರಿಕ್​ ವಾಹನಗಳ ಹೆಚ್ಚಳದಿಂದಾಗಿ ಈ ಎರಡೂ ಸಮಸ್ಯೆಗೆ ಪರಿಹಾರ ಸಿಗಲಿದೆ. ಸ್ವಚ್ಛ ಸಾರಿಗೆ ವ್ಯವಸ್ಥೆಗೆ ಈ ಬದಲಾವಣೆಯಿಂದ ನೆರವಾಗಲಿದೆ ಎಂದು ಹೇಳಿದರು.

ಇಂಧನ ಸ್ವಾವಲಂಬನೆ ಸಾಧ್ಯ

ಎಲೆಕ್ಟ್ರಿಕ್ ವಾಹನಗಳ ಹೆಚ್ಚಳದಿಂದಾಗಿ ಇಂಧನ ಸ್ವಾವಲಂಬನೆಯೂ ಸಾಧ್ಯ ಎಂಬುದಾಗಿ ಗಡ್ಕರಿ ಇದೇ ವೇಳೆ ನುಡಿದರು. ಸುಮಾರು 18 ಲಕ್ಷ ಕೋಟಿ ರೂಪಾಯಿ ಮೊತ್ತವನ್ನು ವಿದೇಶಗಳಿಂದ ಇಂಧನ ಆಮದಿಗಾಗಿ ವಿನಿಯೋಗಿಸಲಾಗುತ್ತಿದೆ. ಶೇ 80ರಷ್ಟು ಪೆಟ್ರೋಲ್​ ವಿದೇಶದಿಂದ ತರುವ ಕಾರಣ ಈ ಹೊರೆ ಅನುಭವಿಸಲಾಗುತ್ತದೆ. ಎಲೆಕ್ಟ್ರಿಕ್​ ವಾಹನಗಳ ಬಳಕೆಯಿಂದ ಆರ್ಥಿಕ ಹೊರೆಯೂ ತಗ್ಗಲಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ : Union Budget 2023 : ಲೀಥಿಯಮ್​ ಬ್ಯಾಟರಿ ತಯಾರಿಗೆ ಬೆಂಬಲ, ಇನ್ನು ಮುಂದೆ ಇವಿ ವಾಹನಗಳು ಅಗ್ಗ

ಇದೇ ವೇಳೆ ಅವರು ರಾಜ್ಯ ಸರಕಾರಗಳು, ಎಲೆಕ್ಟ್ರಿಕ್​ ವಾಹನಗಳಿಗೆ ಬೇಕಾಗಿರುವ ಬ್ಯಾಟರಿಗಳ ಪೂರೈಕೆಗೆ ಅನುಗುಣವಾಗಿ ನಿಯಮಗಳನ್ನು ರೂಪಿಸಬೇಕು ಎಂಬುದಾಗಿ ಸಲಹೆ ನೀಡಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

Tata Motors: ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗಲು ಟಾಟಾ ಮೋಟಾರ್ಸ್‌ನಿಂದ ‘ವಿದ್ಯಾಧನ’, ‘ಉತ್ಕರ್ಷ’ ಯೋಜನೆ

Tata Motors: ಟಾಟಾ ಮೋಟಾರ್ಸ್ ಸಂಸ್ಥೆಯು ಪುಣೆ, ಲಕ್ನೋ, ಜಮ್‌ಶೆಡ್‌ಪುರ, ಧಾರವಾಡ, ಸನಂದ್ ಮತ್ತು ಪಂತ್ ನಗರ ಸೇರಿದಂತೆ ಭಾರತದಾದ್ಯಂತ ಇರುವ ತಮ್ಮ ಉತ್ಪಾದನಾ ಘಟಕಗಳಲ್ಲಿ ಕೆಲಸ ಮಾಡುವ ತಂತ್ರಜ್ಞರ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗಲು ‘ವಿದ್ಯಾಧನ’ ಮತ್ತು ‘ಉತ್ಕರ್ಷ’ ಎಂಬ ಎರಡು ವಿಶೇಷ ಧನಸಹಾಯ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತಿರುವುದಾಗಿ ಇಂದು ಘೋಷಿಸಿದೆ. ಈ ಮೂಲಕ ಕಂಪನಿಯು ಮಹತ್ವಾಕಾಂಕ್ಷೆ ಮತ್ತು ಅದನ್ನು ಸಾಧಿಸುವ ಪ್ರಕ್ರಿಯೆ ಮಧ್ಯೆ ಇರುವ ಅಂತರವನ್ನು ಕಡಿಮೆಗೊಳಿಸುವ ಗುರಿಯನ್ನು ಹೊಂದಿದೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Tata Motors launched two programs Vidyadhana and Utkarsha to facilitate higher education of technician children
Koo

ಭಾರತದ ಪ್ರಮುಖ ಆಟೋಮೊಬೈಲ್ ತಯಾರಕ ಟಾಟಾ ಮೋಟಾರ್ಸ್ ಸಂಸ್ಥೆಯು (Tata Motors) ಪುಣೆ, ಲಕ್ನೋ, ಜಮ್‌ಶೆಡ್‌ಪುರ, ಧಾರವಾಡ, ಸನಂದ್ ಮತ್ತು ಪಂತ್ ನಗರ ಸೇರಿದಂತೆ ಭಾರತದಾದ್ಯಂತ ಇರುವ ತಮ್ಮ ಉತ್ಪಾದನಾ ಘಟಕಗಳಲ್ಲಿ ಕೆಲಸ ಮಾಡುವ ತಂತ್ರಜ್ಞರ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗಲು ‘ವಿದ್ಯಾಧನ’ ಮತ್ತು ‘ಉತ್ಕರ್ಷ’ ಎಂಬ ಎರಡು ವಿಶೇಷ ಧನಸಹಾಯ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತಿರುವುದಾಗಿ ಇಂದು ಘೋಷಿಸಿದೆ. ಈ ಮೂಲಕ ಕಂಪನಿಯು ಮಹತ್ವಾಕಾಂಕ್ಷೆ ಮತ್ತು ಅದನ್ನು ಸಾಧಿಸುವ ಪ್ರಕ್ರಿಯೆ ಮಧ್ಯೆ ಇರುವ ಅಂತರವನ್ನು ಕಡಿಮೆಗೊಳಿಸುವ ಗುರಿಯನ್ನು ಹೊಂದಿದೆ.

ʼವಿದ್ಯಾಧನʼ ಕಾರ್ಯಕ್ರಮದ ಅಡಿಯಲ್ಲಿ 10ನೇ ಮತ್ತು 12ನೇ ತರಗತಿಯಲ್ಲಿ ಉತ್ತೀರ್ಣರಾದ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗಲು ರಿಯಾಯಿತಿ ದರದಲ್ಲಿ ಶಿಕ್ಷಣ ಸಾಲಗಳನ್ನು ಒದಗಿಸಲಾಗುತ್ತದೆ. ‘ಉತ್ಕರ್ಷ’ ಕಾರ್ಯಕ್ರಮದಲ್ಲಿ ಹುಡುಗಿಯರು, ಲಿಂಗತ್ವ ಅಲ್ಪಸಂಖ್ಯಾತರು ಮತ್ತು ವಿಶೇಷ ಚೇತನ ಮಕ್ಕಳಿಗೆ ಹೆಚ್ಚುವರಿ ವಾರ್ಷಿಕ ವಿದ್ಯಾರ್ಥಿವೇತನ ಪ್ರಯೋಜನ ನೀಡಲಾಗುತ್ತದೆ.

ವಿದ್ಯಾಧನ ಮತ್ತು ಉತ್ಕರ್ಷ ಕಾರ್ಯಕ್ರಮ ಆರಂಭವನ್ನು ಘೋಷಿಸಿದ ಟಾಟಾ ಮೋಟಾರ್ಸ್‌ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ (ಸಿಎಚ್‌ಆರ್‌ಓ) ಸೀತಾರಾಮ್ ಕಂಡಿ ಮಾತನಾಡಿ, “ಪ್ರಗತಿ ಮತ್ತು ಅಭಿವೃದ್ಧಿ ಸಾಧಿಸಲು ಗುಣಮಟ್ಟದ ಶಿಕ್ಷಣ ಬಹಳ ಮುಖ್ಯ. ಈ ಕಾರ್ಯಕ್ರಮಗಳು ಸುಲಭವಾಗಿ ಉನ್ನತ ಶಿಕ್ಷಣ ಪಡೆಯುವಂತೆ ಮಾಡುತ್ತದೆ ಮತ್ತು ನಮ್ಮ ಮುಂದಿನ ಪೀಳಿಗೆಯ ಭವಿಷ್ಯದ ಹಾದಿಯನ್ನು ಉತ್ತಮಗೊಳಿಸುತ್ತದೆ.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಆ.3ರಂದು ‘ಬೌದ್ಧ ಸಾಹಿತ್ಯ-ಹಲವು ನೆಲೆಗಳು’ ರಾಷ್ಟ್ರೀಯ ವಿಚಾರ ಸಂಕಿರಣ

ನಮ್ಮ ಸಂಸ್ಥೆಯಲ್ಲಿ ಕಷ್ಟಪಟ್ಟು ದುಡಿಯುವ ತಂತ್ರಜ್ಞರ ಮಕ್ಕಳು ತಮ್ಮ ಸ್ವಂತ ಕನಸುಗಳನ್ನು ಮತ್ತು ಅವರ ಹೆತ್ತವರ ಕನಸುಗಳನ್ನು ಈ ಕಾರ್ಯಕ್ರಮಗಳ ಮುಖಾಂತರ ಈಡೇರಿಸಲಿದ್ದಾರೆ. ಇನ್ನು ನಮ್ಮ ತಂತ್ರಜ್ಞರ ಮಕ್ಕಳು 10 ಮತ್ತು 12 ನೇ ತರಗತಿ ನಂತರ ತಮ್ಮ ಆಯ್ಕೆಯ ಯಾವುದೇ ವಿಷಯದಲ್ಲಿ ಅಧ್ಯಯನ ಮಾಡಲು ಮುಂದಾಗಬಹುದು. ಪೋಷಕರು ಅದಕ್ಕೆ ಅಗತ್ಯವಿರುವ ಹಣಕಾಸಿನ ಬಗ್ಗೆ ಇನ್ನು ಮುಂದೆ ಚಿಂತಿಸಬೇಕಾದ ಅಗತ್ಯ ಇರುವುದಿಲ್ಲ. ಸೂಕ್ತ ರೀತಿಯ ಕ್ವಾಲಿಫಿಕೇಷನ್ ಮತ್ತು ಕೌಶಲ್ಯಗಳನ್ನು ಹೊಂದುವುದರ ಮೂಲಕ ಯಶಸ್ವಿಯಾಗಿ ವೃತ್ತಿ ರೂಪಿಸಲು ಮತ್ತು ಜೀವನವನ್ನು ನಿರ್ಮಿಸಲು ಅವರಿಗೆ ಈ ಕಾರ್ಯಕ್ರಮಗಳು ಉತ್ತಮ ಅವಕಾಶವಾಗಿದೆ” ಎಂದು ತಿಳಿಸಿದರು.

ವಿದ್ಯಾಧನ

‘ವಿದ್ಯಾಧನ’ ಎಂಬುದು ಶಿಕ್ಷಣ ಸಾಲ ಕಾರ್ಯಕ್ರಮವಾಗಿದ್ದು, ಅದು ಮುಂದಿನ ಪೀಳಿಗೆಗೆ ಉನ್ನತ ಶಿಕ್ಷಣ ಪಡೆದು ತಮ್ಮ ಸಾಮರ್ಥ್ಯವನ್ನು ಪೂರ್ಣವಾಗಿ ಅರಿತುಕೊಳ್ಳಲು ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಅರ್ಹ ತಂತ್ರಜ್ಞರು ದೇಶೀಯ ಶಿಕ್ಷಣದ ಶುಲ್ಕದ 95% ವರೆಗೆ ಅಥವಾ ಅಂತಾರಾಷ್ಟ್ರೀಯ ಶಿಕ್ಷಣ ಶುಲ್ಕದ 85% ವರೆಗೆ ಕಟ್ಟುವ ಸಲುವಾಗಿ 7.5 ಲಕ್ಷ ರೂ.ವರೆಗೆ ಸಾಲವನ್ನು ಪಡೆಯಬಹುದು. ಈ ಶಿಕ್ಷಣ ಸಾಲಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಹಯೋಗದಿಂದ ಒದಗಿಸಲಾಗುತ್ತದೆ ಮತ್ತು ಟಾಟಾ ಮೋಟಾರ್ಸ್ ಎಸ್‌ಬಿಐ ವಿಧಿಸುತ್ತಿರುವ ಬಡ್ಡಿದರದ ಮೇಲೆ ರಿಯಾಯಿತಿಗಳನ್ನು ನೀಡುತ್ತದೆ. ಹುಡುಗರಿಗೆ 50% ಕಡಿಮೆ ಬಡ್ಡಿದರ ಮತ್ತು ಹುಡುಗಿಯರು, ಲಿಂಗತ್ವ ಅಲ್ಪಸಂಖ್ಯಾತರು ಮತ್ತು ವಿಶೇಷ ಚೇತನ ಮಕ್ಕಳು 70% ಬಡ್ಡಿ ರಿಯಾಯಿತಿ ಪಡೆಯಲು ಅರ್ಹರಾಗಿರುತ್ತಾರೆ. ಈ ಪ್ರಯೋಜನ ಪಡೆಯಲು ವಿದ್ಯಾರ್ಥಿಯು ಕನಿಷ್ಠ 2 ವರ್ಷಗಳ ಅವಧಿಯುಳ್ಳ ಫುಲ್ ಟೈಮ್ ಪದವಿ ಕೋರ್ಸಿಗೆ ಅಥವಾ ಸ್ನಾತಕೋತ್ತರ ಕೋರ್ಸ್‌ಗೆ ದಾಖಲಾಗಿರಬೇಕು ಮತ್ತು ಆ ಸಂಸ್ಥೆಗಳು ಭಾರತ ಅಥವಾ ವಿದೇಶದಲ್ಲಿರುವ ಮಾನ್ಯತೆ ಪಡೆದ ಎಐಸಿಟಿಇ- ಸಮಾನ ಸಂಸ್ಥೆಗಳು ಅಥವಾ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಜತೆ ಸಂಯೋಜಿತಗೊಂಡಿರಬೇಕು.

ಇದನ್ನೂ ಓದಿ: Namma Metro : ವಿದ್ಯುತ್‌ ಸರಬರಾಜು ವ್ಯವಸ್ಥೆಯಲ್ಲಿ ದೋಷ; ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ವ್ಯತ್ಯಯ

ಉತ್ಕರ್ಷ ವಿದ್ಯಾರ್ಥಿವೇತನ

‘ಉತ್ಕರ್ಷʼ ಕಾರ್ಯಕ್ರಮವು 10ನೇ ಅಥವಾ 12ನೇ ತರಗತಿಯನ್ನು ಪೂರ್ಣಗೊಳಿಸಿದ ಹುಡುಗಿಯರು, ಲಿಂಗತ್ವ ಅಲ್ಪಸಂಖ್ಯಾತರು ಮತ್ತು ವಿಶೇಷ ಚೇತನ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗಲು ಪ್ರತೀ ವರ್ಷ ರೂ.25,000/- ವಿದ್ಯಾರ್ಥಿವೇತನ ಒದಗಿಸುವ ಕಾರ್ಯಕ್ರಮವಾಗಿದೆ. ಇದಕ್ಕೆ ಅರ್ಹತೆ ಪಡೆಯಲು ಅರ್ಜಿದಾರರು ಕನಿಷ್ಠ 60% ಅಂಕಗಳನ್ನು ಗಳಿಸಿರಬೇಕು ಮತ್ತು ಭಾರತ ಅಥವಾ ವಿದೇಶದಲ್ಲಿರುವ ಮಾನ್ಯತೆ ಪಡೆದ ಎಐಸಿಟಿಇ- ಸಮಾನ ಸಂಸ್ಥೆಗಳು ಅಥವಾ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ದಾಖಲಾತಿ ಪಡೆದುಕೊಂಡಿರಬೇಕು.

Continue Reading

ಆಟೋಮೊಬೈಲ್

4 ಲಕ್ಷ ಬೈಕ್‌, ಸ್ಕೂಟರ್‌ ಹಿಂಪಡೆಯಲು ಮುಂದಾದ ಸುಜುಕಿ ಇಂಡಿಯಾ; ಈ ಪಟ್ಟಿಯಲ್ಲಿ ನಿಮ್ಮ ವಾಹನವೂ ಇದ್ಯಾ? ಹೀಗೆ ಚೆಕ್‌ ಮಾಡಿ

Suzuki India: ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿ ಸುಜುಕಿ ಇಂಡಿಯಾ ಗ್ರಾಹಕರು ಈ ಸುದ್ದಿ ಓದಲೇಬೇಕು. ಕಂಪನಿ ಸುಮಾರು 4 ಲಕ್ಷಕ್ಕೂ ಹೆಚ್ಚು ಬೈಕ್‌ ಮತ್ತು ಸ್ಕೂಟರ್‌ಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಮುಂದಾಗಿದೆ. ಇಗ್ನಿಷನ್ ಕಾಯಿಲ್‌ಗೆ ಸಂಪರ್ಕ ಹೊಂದಿರುವ ಹೈ-ಟೆನ್ಶನ್ ಕಾರ್ಡ್‌ನಲ್ಲಿ ದೋಷ ಪತ್ತೆಯಾದ ಹಿನ್ನಲೆಯಲ್ಲಿ ಒಟ್ಟು 3,88,411 ದ್ವಿಚಕ್ರ ವಾಹನಗಳನ್ನು ತಪಾಸಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಪಟ್ಟಿಯಲ್ಲಿ ನಿಮ್ಮ ವಾಹನವೂ ಇದ್ಯಾ ಎನ್ನುವುದನ್ನು ಪರಿಶೀಲಿಸಲು ಇಲ್ಲಿದೆ ಸುಲಭ ವಿಧಾನ.

VISTARANEWS.COM


on

Suzuki India
Koo

ನವದೆಹಲಿ: ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿ ಸುಜುಕಿ ಇಂಡಿಯಾ (Suzuki India) ಸುಮಾರು 4 ಲಕ್ಷಕ್ಕೂ ಹೆಚ್ಚು ಬೈಕ್‌ ಮತ್ತು ಸ್ಕೂಟರ್‌ಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಮುಂದಾಗಿದೆ. ಇಗ್ನಿಷನ್ ಕಾಯಿಲ್‌ಗೆ ಸಂಪರ್ಕ ಹೊಂದಿರುವ ಹೈ-ಟೆನ್ಶನ್ ಕಾರ್ಡ್‌ನಲ್ಲಿ ದೋಷ ಪತ್ತೆಯಾದ ಹಿನ್ನಲೆಯಲ್ಲಿ ಒಟ್ಟು 3,88,411 ದ್ವಿಚಕ್ರ ವಾಹನಗಳನ್ನು ತಪಾಸಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ.

2022ರ ಏಪ್ರಿಲ್ 30 ಮತ್ತು 2022ರ ಡಿಸೆಂಬರ್ 3ರ ನಡುವೆ ತಯಾರಿಸಲಾದ, ಬಹು ಬೇಡಿಕೆಯ ಆಕ್ಸೆಸ್ 125, ಅವೆನಿಸ್ 125 ಮತ್ತು ಬರ್ಗ್‌ಮ್ಯಾನ್ ಸ್ಟ್ರೀಟ್ 125 (Access 125, Avenis 125, and Burgman Street 125) ಅನ್ನು ಹಿಂಪಡೆಯಲು ಕಂಪನಿ ಮುಂದಾಗಿದೆ ಎಂದು ವರದಿ ತಿಳಿಸಿದೆ. ಇನ್ನು ಬೈಕ್‌ಗಳ ಪೈಕಿ ಟೆಕ್-ಲೋಡೆಡ್ ವಿ-ಸ್ಟ್ರೋಮ್ 800 ಡಿಇ (V-Strom 800 DE) ಮಾಡೆಲ್‌ನಲ್ಲಿ ಕೂಡ ಇದೇ ಸಮಸ್ಯೆ ಕಂಡು ಬಂದಿದೆ. ಜತೆಗೆ ಹಿಂದಿನ ಟೈರ್‌ ವಿಚಾರದಲ್ಲಿ ಸಮಸ್ಯೆ ಇರುವ ಬಗ್ಗೆಯೂ ಕಂಪನಿ ಗಮನಿಸಿದೆ. ಬ್ರ್ಯಾಂಡ್ ಹಂಚಿಕೊಂಡ ವಿವರಗಳ ಪ್ರಕಾರ, ಟೈರ್ ಟ್ರೆಡ್‌ನ ಕೆಲವು ಭಾಗವು ಬೇರ್ಪಟ್ಟು ಅದರಲ್ಲಿ ಬಿರುಕುಗಳನ್ನು ಉಂಟು ಮಾಡಬಹುದು ಈ ಕಾರಣಕ್ಕೆ ವಿ-ಸ್ಟ್ರೋಮ್ 800 ಡಿಇ ಅನ್ನೂ ಪರಿಶೀಲನೆಗೆ ಒಳಪಡಿಸಲಾಗುತ್ತದೆ.

ಹೀಗೆ ಪರಿಶೀಲಿಸಿ

ಒಂದುವೇಳೆ ನೀವು ಖರೀದಿಸಿದ ವಾಹನ ಕಂಪನಿ ಹಿಂಪಡೆಯಲಿರುವ ಲಿಸ್ಟ್‌ನಲ್ಲಿದ್ದು ಅದನ್ನು ಹೇಗೆ ಕಂಡುಕೊಳ್ಳುವುದು ಎನ್ನುವ ಚಿಂತೆಯಲ್ಲಿದ್ದೀರಾ? ಪರಿಶೀಲಿಸಲು ಇಲ್ಲಿದೆ ಸುಲಭ ವಿಧಾನ. ನೀವು ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ವಾಹನದ ವಿಐಎನ್‌ (VIN) ನಮೂದಿಸಿ ನಿಮ್ಮ ವಾಹನದಲ್ಲಿಯೂ ಬದಲಾವಣೆಯ ಅವಶ್ಯಕತೆ ಇದೆಯೇ ಇಲ್ಲವೇ ಎನ್ನುವುದನ್ನು ತಿಳಿದುಕೊಳ್ಳಬಹುದಾಗಿದೆ.

ನಿಮ್ಮ ವಾಹನವನ್ನು ಚೆಕ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ (https://www.suzukimotorcycle.co.in/service-campaign)

ಅಪಾರ ಬೇಡಿಕೆ

ಸುಜುಕಿ ಇಂಡಿಯಾ ಸದ್ಯ ಸ್ಕೂಟರ್ ಮತ್ತು ಬೈಕ್ ವಿಭಾಗಗಳಲ್ಲಿ ಭಾರತದ ಗ್ರಾಹಕರ ಮನಸ್ಸು ಗೆದ್ದಿದೆ. ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಹೊಂದಿದ್ದು ಪ್ರತಿಸ್ಪರ್ಧಿಗಳಿಗೆ ಸವಾಲೊಡ್ಡಿದೆ. ಈ ಪಟ್ಟಿಯಲ್ಲಿ ಸುಜುಕಿ ಆಕ್ಸೆಸ್ 125, ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ ಮತ್ತು ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125, ಸುಜುಕಿ ಕಟಾನಾ, ಸುಜುಕಿ ಜಿಕ್ಸರ್ ಎಸ್ಎಫ್, ಸುಜುಕಿ ಜಿಕ್ಸರ್ 250, ಸುಜುಕಿ ವಿ-ಸ್ಟ್ರೋಮ್ ಎಸ್ಎಕ್ಸ್, ಸುಜುಕಿ ಜಿಎಸ್ಎಕ್ಸ್-ಆರ್ 1000 ಆರ್‌ಗೆ ಅಪಾರ ಬೇಡಿಕೆ ಇದೆ.

ಕಂಪನಿ ಹೇಳಿದ್ದೇನು?

ಎಂಜಿನ್ ಸ್ಥಗಿತ, ಸ್ಟಾರ್ಟ್ ಮಾಡುವಾಗ ಕಂಡುಬರುವ ತೊಂದರೆ, ದೋಷಪೂರಿತ ಸ್ಪೀಡೋಮೀಟರ್‌ಗಳ ಬಗ್ಗೆ ಗ್ರಹಾಕರು ದೂರು ಸಲ್ಲಿಸಿರುವ ಹಿನ್ನಲೆಯಲ್ಲಿ ವಾಹನಗಳನ್ನು ಹಿಂಪಡೆಯಲಾಗುತ್ತಿದೆ. ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಅಧಿಕೃತ ಸುಜುಕಿ ಸೇವಾ ಕೇಂದ್ರಗಳಲ್ಲಿ ತಮ್ಮ ವಾಹನಗಳನ್ನು ದುರಸ್ತಿ ಪಡಿಸಬೇಕು ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ: Royal Enfield Guerrilla 450 : ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಖರೀದಿ ಮಾಡಲು ಐದು ಕಾರಣ ಇಲ್ಲಿದೆ

Continue Reading

ಆಟೋಮೊಬೈಲ್

Nissan SUV X-TRAIL : ನಿಸ್ಸಾನ್ ನ ಹೊಚ್ಚ ಹೊಸ 4 ಜನರೇಷನ್ ಪ್ರೀಮಿಯಂ ಅರ್ಬನ್ ಎಸ್‌ಯುವಿ ಎಕ್ಸ್-ಟ್ರಯಲ್ ಬಿಡುಗಡೆ

Nissan SUV X-TRAIL : ನಿಸ್ಸಾನ್ ಈ ಎಸ್‌ಯುವಿ ಅನ್ನು ಈಗಾಗಲೇ ಜಾಗತಿಕವಾಗಿ ಬಿಡುಗಡೆ ಮಾಡಿದ್ದು, ನಿಸ್ಸಾನ್ ಎಕ್ಸ್-ಟ್ರಯಲ್ ಪ್ರಸ್ತುತ 150ಕ್ಕೂ ಹೆಚ್ಚು ಮಾರುಕಟ್ಟೆಗಳಲ್ಲಿ ಲಭ್ಯವಿದೆ. ವಿಶೇಷ ಎಂದರೆ ಈಗಾಗಲೇ ವಿಶ್ವದಾದ್ಯಂತ ಈ ಕಾರಿನ 7.8 ಮಿಲಿಯನ್ ಯುನಿಟ್ ಗಳು ಮಾರಾಟವಾಗಿವೆ. 2023ನೇ ವರ್ಷದಲ್ಲಿ ಜಾಗತಿಕವಾಗಿ ಮಾರಾಟವಾಗಿರುವ ಟಾಪ್ 5 ಎಸ್‌ಯುವಿಗಳಲ್ಲಿ ಇದೂ ಕೂಡ ಒಂದಾಗಿದೆ.

VISTARANEWS.COM


on

Nissan SUV X-TRAIL
Koo

ಬೆಂಗಳೂರು: ನಿಸ್ಸಾನ್ ಮೋಟಾರ್ ಇಂಡಿಯಾ ಇಂದು ಹೊಚ್ಚ ಹೊಸ ಮೇಡ್ ಇನ್ ಜಪಾನ್ 4 ಜನರೇಷನ್ ಪ್ರೀಮಿಯಂ ಅರ್ಬನ್‌ ಎಸ್‌ಯುವಿ ನಿಸ್ಸಾನ್‌ ಎಕ್ಸ್-ಟ್ರಯಲ್ (Nissan SUV X-TRAIL) ಅನ್ನು ಬಿಡುಗಡೆ ಮಾಡಿದೆ. ಇದು 7 ಸೀಟರ್ ಎಸ್‌ಯುವಿ ಆಗಿದ್ದು, ಜುಲೈ 26ರಿಂದ ರೂ.1 ಲಕ್ಷ ನೀಡಿ ಬುಕ್ ಬುಕ್ ಮಾಡಬಹುದಾಗಿದೆ. ಆಗಸ್ಟ್ ನಲ್ಲಿ ಎಕ್ಸ್ ಟ್ರಯಲ್ ಡೆಲಿವರಿ ಆರಭವಾಗಲಿದೆ.

ನಿಸ್ಸಾನ್ ಈ ಎಸ್‌ಯುವಿ ಅನ್ನು ಈಗಾಗಲೇ ಜಾಗತಿಕವಾಗಿ ಬಿಡುಗಡೆ ಮಾಡಿದ್ದು, ನಿಸ್ಸಾನ್ ಎಕ್ಸ್-ಟ್ರಯಲ್ ಪ್ರಸ್ತುತ 150ಕ್ಕೂ ಹೆಚ್ಚು ಮಾರುಕಟ್ಟೆಗಳಲ್ಲಿ ಲಭ್ಯವಿದೆ. ವಿಶೇಷ ಎಂದರೆ ಈಗಾಗಲೇ ವಿಶ್ವದಾದ್ಯಂತ ಈ ಕಾರಿನ 7.8 ಮಿಲಿಯನ್ ಯುನಿಟ್ ಗಳು ಮಾರಾಟವಾಗಿವೆ. 2023ನೇ ವರ್ಷದಲ್ಲಿ ಜಾಗತಿಕವಾಗಿ ಮಾರಾಟವಾಗಿರುವ ಟಾಪ್ 5 ಎಸ್‌ಯುವಿಗಳಲ್ಲಿ ಇದೂ ಕೂಡ ಒಂದಾಗಿದೆ.

ನಿಸಾನ್ ತನ್ನ ಜಾಗತಿಕ ಉತ್ಪನ್ನಗಳನ್ನು ಮತ್ತು ತಂತ್ರಜ್ಞಾನವನ್ನು ಭಾರತಕ್ಕೆ ಒದಗಿಸುವ ಉದ್ದೇಶವನ್ನು ಹೊಂದಿದ್ದು, ಅದರ ಆರಂಭಿಕ ಹೆಜ್ಜೆಯಾಗಿ ಎಕ್ಸ್ ಟ್ರಯಲ್ ಬಿಡುಗಡೆ ಆಗಿದೆ. ಈ ಮೂಲಕ ಕಂಪನಿಯು ತನ್ನ ಸಿಬಿಯು ಬಿಸಿನೆಸ್ ಅನ್ನು ಮರು ಆರಂಭಿಸುವುದಾಗಿ ಘೋಷಿಸಿದೆ.

ಎಂಜಿನ್ ಪವರ್​

ಈ ಮೇಡ್ ಇನ್ ಜಪಾನ್ 4ನೇ ಜನರೇಷನ್ ನ ನಿಸ್ಸಾನ್‌ಎಕ್ಸ್-ಟ್ರಯಲ್ ವಿಶ್ವದ ಮೊತ್ತ ಮೊದಲ ಪ್ರೊಡಕ್ಷನ್ ವೇರಿಯೇಬಲ್ ಕಂಪ್ರೆಷನ್-ಟರ್ಬೊ ಎಂಜಿನ್‌ ಅನ್ನು ಹೊಂದಿದೆ. ಇದರ ಅತ್ಯಾಧುನಿಕ ಡಿಎನ್ಎ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿದ್ದು, ಅದರಿಂದ ಟಾರ್ಕ್ ಅಸಿಸ್ಟ್, ಹೆಚ್ಚುವರಿ ಐಡಲ್-ಸ್ಟಾಪ್, ಕ್ವಿಕ್ ರೀಸ್ಟಾರ್ಟ್ ಮತ್ತು ಸುಧಾರಿತ ಮೈಲೇಜ್​ ಇತ್ಯಾದಿ ಸೌಕರ್ಯಗಳು ದೊರೆಯಲಿವೆ.

ಎಕ್ಸ್-ಟ್ರಯಲ್ 1.5ಲೀ ಪೆಟ್ರೋಲ್ ವೇರಿಯೇಬಲ್ ಕಂಪ್ರೆಷನ್- ಟರ್ಬೊ ಎಂಜಿನ್ ಹೊಂದಿದೆ. ಇದರ ಮೈಲ್ಡ್ ಹೈಬ್ರಿಡ್ 2ಡಬ್ಲ್ಯೂಡಿ ಎಂಜಿನ್‌ ಜೊತೆಗೆ 3 ಜೆನ್ ಎಕ್ಸ್‌ ಟ್ರಾನಿಕ್ ಸಿವಿಟಿ ಪವರ್‌ಟ್ರೇನ್‌ ಅನ್ನು ಸಂಯೋಜಿಸಲಾಗಿದೆ. ಈ ಎಂಜಿನ್ 163ಪಿಎಸ್ ಮತ್ತು 300ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಆಕರ್ಷಕ ಸೀಟ್​​​ಗಳು

ಎಕ್ಸ್-ಟ್ರಯಲ್ ವಿಶಾಲವಾದ ಜಾಗ ಹೊಂದಿದೆ. 7- ಸೀಟರ್ ವಿನ್ಯಾಸದಲ್ಲಿ ಲಭ್ಯವಿರುವ ಈ ಕಾರಿನ 2ನೇ ಮತ್ತು 3 ನೇ ಸಾಲಿನ ಆಸನಗಳಿಗೆ ಸುಲಭವಾಗಿ ಪ್ರವೇಶಿಸಲು/ಅಲ್ಲಿಂದ ಹೊರಹೋಗಲು ವಿಶೇಷವಾದ 85-ಡಿಗ್ರಿ ರೇರ್ ಡೋರ್ ಓಪನಿಂಗ್ ಅನುಕೂಲ ಒದಗಿಸಲಾಗಿದೆ. ಜಪಾನಿ ಶೈಲಿಯ ವಿನ್ಯಾಸ ಹೊಂದಿರುವ ಈ ಕಾರು ಸುಂದರವಾದ ಎಕ್ಸ್ ಟೀರಿಯರ್ ಮತ್ತು ಇಂಟೀರಿಯರ್ ಅನ್ನು ಹೊಂದಿದೆ. ಇ-ಶಿಫ್ಟರ್, ಡ್ರೈವ್ ಮೋಡ್ ಸೆಲೆಕ್ಟರ್ ಮತ್ತು ಟ್ವಿನ್ ಕಪ್ ಹೋಲ್ಡರ್‌ಗಳು, ಹಾಗೆಯೇ ಸ್ಮಾರ್ಟ್‌ಫೋನ್‌ಗಳಿಗಾಗಿ 15w ವೈರ್‌ಲೆಸ್ ಚಾರ್ಜ್ ಪ್ಯಾಡ್ ಅನ್ನು ಕಾರು ಒಳಗೊಂಡಿದೆ. ಮುಂಭಾಗದ ಸೀಟಿನಲ್ಲಿ ಕುಳಿತುಕೊಳ್ಳುವವರಿಗೆ ಆರ್ಮ್​ರೆಸ್ಟ್​ ಇದೆ. ಬೆಲೆಬಾಳುವ ವಸ್ತುಗಳನ್ನು ಇಡಲು ಸ್ಟೋರೇಜ್ ಸ್ಪೇಸ್ ನೀಡಲಾಗಿದೆ. ಸೈಡಿನಲ್ಲಿ ಹಿಂದಿನ ಸೀಟಿನ ಪ್ರಯಾಣಿಕರಿಗೆ ವಸ್ತು ಗಳನ್ನು ಇಡಬಹುದಾದ ಸ್ಥಳಗಳನ್ನು ನೀಡಲಾಗಿದೆ. ಪ್ಯಾನೋರಮಿಕ್ ಸನ್‌ರೂಫ್ ಸೌಕರ್ಯ ಹೊಂದಿದ್ದು, ಇದರ 3ನೇ ಸಾಲಿನ ಸೀಟನ್ನು ಮಡಿಸಿದರೆ ಒಟ್ಟು 585 ಲೀಟರ್‌ಗಳಷ್ಟು ಸಾಮರ್ಥ್ಯದ ಲಗೇಜ್ ಜಾಗ ಸಿಗುತ್ತದೆ. ಎಕ್ಸ್‌ಟ್ರಯಲ್‌ ಹೈ-ಡೆಫಿನಿಷನ್, ಸಂಪೂರ್ಣ ಎಲೆಕ್ಟ್ರಾನಿಕ್ 31.2ಸೆಂಮೀನ ಟಿ ಎಫ್ ಟಿ ಮಲ್ಟಿ-ಇನ್ಫರ್ಮೇಷನ್ ಸ್ಕ್ರೀನ್ ಹೊಂದಿದೆ.

ಇದನ್ನೂ ಓದಿ: Honor 200 Series : ಒಂದೇ ದಿನ 2 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ಹಾನರ್

7 ಏರ್‌ಬ್ಯಾಗ್‌ಗಳು, ಅರೌಂಡ್ ವ್ಯೂ ಮಾನಿಟರ್ (ಎವಿಎಂ) ಜೊತೆಗೆ ಮೂವಿಂಗ್ ಆಬ್ಜೆಕ್ಟ್ ಡಿಟೆಕ್ಷನ್ (ಎಂಓಡಿ), ಬ್ರೇಕ್ ಲಿಮಿಟೆಡ್ ಸ್ಲಿಪ್ ಡಿಫರೆನ್ಷಿಯಲ್ (ಬಿಎಲ್ಎಸ್ಡಿ(, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್‌ (ಇ ಎಸ್ ಸಿ), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್(ಟಿಸಿಎಸ್), ಹಿಲ್ ಸ್ಟಾರ್ಟ್ ಅಸಿಸ್ಟ್ (ಎಚ್ಎಸ್ಎ), ಎಬಿಡಿ ಜೊತೆಗೆ ಎಬಿಎಸ್, ಫ್ರಂಟ್ ಆಂಡ್ ರೇರ್ ಪಾರ್ಕಿಂಗ್ ಸೆನ್ಸರ್ ಗಳು ಮತ್ತು 4 ವೀಲ್ ಡಿಸ್ಕ್ ಬ್ರೇಕ್ ಗಳು ಮುಂತಾದ ಹಲವಾರು ಸುರಕ್ಷತಾ ಫೀಚರ್ ಗಳಿವೆ.

ಹೊಸ ಎಕ್ಸ್-ಟ್ರಯಲ್ ನಲ್ಲಿ ಲಭ್ಯವಿರುವ 12ವಿ ಎಎಲ್ಐಎಸ್ (ಸುಧಾರಿತ ಲೀಥಿಯಂ ಐಯಾನ್ ಬ್ಯಾಟರಿ ಸಿಸ್ಟಮ್) ಮೈಲ್ಡ್ ಹೈಬ್ರಿಡ್ ಸಿಸ್ಟಮ್, ಟಾರ್ಕ್ ಅಸಿಸ್ಟ್, ಹೆಚ್ಚುವರಿ ಐಡಲ್ ಸ್ಟಾಪ್, ಕ್ವಿಕ್ ರೀಸ್ಟಾರ್ಟ್ ಮತ್ತು ಕೋಸ್ಟಿಂಗ್ ಸ್ಟಾಪ್ ಫೀಚರ್ ಒದಗಿಸುತ್ತದೆ.

ಎಕ್ಸ್-ಟ್ರಯಲ್ ಷಾಂಪೇನ್ ಸಿಲ್ವರ್, ಪರ್ಲ್ ವೈಟ್ ಮತ್ತು ಡೈಮಂಡ್ ಬ್ಲ್ಯಾಕ್ ಎಂಬ ಮೂರು ಸೊಗಸಾದ ಬಣ್ಣಗಳಲ್ಲಿ ಲಭ್ಯವಿದೆ. ಬುಕಿಂಗ್‌ಗಳು ಜುಲೈ 26 ರಂದು ರಾಷ್ಟ್ರಾದ್ಯಂತ ಇರುವ ನಿಸ್ಸಾನ್ ಡೀಲರ್‌ಶಿಪ್‌ಗಳು ಮತ್ತು ನಿಸ್ಸಾನ್‌ನ ವೆಬ್‌ಸೈಟ್ ನಲ್ಲಿ https://book.Nissan.in/ ನಲ್ಲಿ ಪ್ರಾರಂಭವಾಗುತ್ತಿದೆ. ಎಕ್ಸ್-ಟ್ರಯಲ್ ಗಾಗಿ ಬುಕಿಂಗ್ ಮೊತ್ತ ರೂ. 100,000 ಆಗಿದೆ ಮತ್ತು ವಾಹನದ ಡೆಲಿವರಿ 2024ರ ಆಗಸ್ಟ್ ನಲ್ಲಿ ರಿಂದ ಪ್ರಾರಂಭವಾಗುತ್ತದೆ.

ನಿಸ್ಸಾನ್ ಇಂಡಿಯಾ ಆಪರೇಷನ್ಸ್ ಪ್ರೆಸಿಡೆಂಟ್ ಮತ್ತು ಎಎಂಐಇಓ ರೀಜನ್ ಬಿಸಿನೆಸ್ ಟ್ರಾನ್ಸ್‌ ಫಾರ್ಮೇಶನ್ ನ ಡಿವಿಷನಲ್ ವೈಸ್ ಪ್ರೆಸಿಡೆಂಟ್ ಫ್ರಾಂಕ್ ಟೊರೆಸ್, ನಿಸ್ಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೌರಭ್ ವತ್ಸಾ ಹರ್ಷ ವ್ಯಕ್ತ ಪಡಿಸಿದ್ದಾರೆ.

Continue Reading

ಆಟೋಮೊಬೈಲ್

Tata Curvv : ಎಸ್​ಯುವಿ ವಿಭಾಗದಲ್ಲಿ ವಿಭಿನ್ನ ವಿನ್ಯಾಸದ ಕಾರನ್ನು ಪರಿಚಯಿಸಿದ ಮಾಡಿದ ಟಾಟಾ

Tata Curvv : ಹೊಸ ಕಾಲದ ಎಸ್‌ಯುವಿ ವಿನ್ಯಾಸವನ್ನು ಪ್ರದರ್ಶಿಸುವ ಕರ್ವ್ ನಲ್ಲಿ ಎಸ್‌ಯುವಿಯ ದೃಢತೆ ಮತ್ತು ನೈಜವಾದ ಕೂಪ್ ನ ಸೌಂದರ್ಯ ಮತ್ತು ಸ್ಪೋರ್ಟಿ ಸಿಲೂಯೆಟ್‌ ವಿನ್ಯಾಸವಿದೆ. ಆಗಸ್ಟ್ 7ರಂದು ಈ ಹೊಚ್ಚ ಹೊಸ ಟಾಟಾ ಕರ್ವ್ ಬಿಡುಗಡೆ ಆಗಲಿದ್ದು, ಟಾಟಾ ಮೋಟಾರ್ಸ್‌ನ ಮಲ್ಟಿ- ಪವರ್‌ಟ್ರೇನ್ ತಂತ್ರಕ್ಕೆ ಅನುಗುಣವಾಗಿ ಬಿಡುಗಡೆಗೊಳ್ಳಲಿದೆ. ಮೊದಲು ಟಾಟಾ ಕರ್ವ್ ಇವಿ ಆವೃತ್ತಿ ಬಿಡುಗಡೆಯಾಗಲಿದ್ದು, ಅದರ ಬೆನ್ನಲ್ಲಿ ಶೀಘ್ರದಲ್ಲಿಯೇ ಐಸಿಐ ಆವೃತ್ತಿಗಳು ರಸ್ತೆಗೆ ಇಳಿಯಲಿವೆ.

VISTARANEWS.COM


on

Tata Curvv
Koo

ಬೆಂಗಳೂರು,: ಭಾರತದ ಪ್ರಮುಖ ವಾಹನ ತಯಾರಕರಾದ ಟಾಟಾ ಮೋಟಾರ್ಸ್ (Tata Motors) ಸೋಮವಾರ ಎಸ್‌ಯುವಿ ವಿನ್ಯಾಸದಲ್ಲಿ ಹೊಸ ಭಾಷ್ಯ ಬರೆಯಲಿರುವ ಟಾಟಾ ಕರ್ವ್ (Tata Curvv) ಐಸಿಇ ಮತ್ತು ಇವಿಯನ್ನು ಅನಾವರಣಗೊಳಿಸಿದೆ. ಅತ್ಯಾಕರ್ಷಕ ಫಿಲಾಸಫಿ, ರೂಪ ಮತ್ತು ಕಾರ್ಯ ನಿರ್ವಹಣೆ ಹೊಂದಿರುವ ಟಾಟಾ ಕರ್ವ್ ಭಾರತದ ಮೊದಲ ಎಸ್‌ಯುವಿ ಕೂಪ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.

ಹೊಸ ಕಾಲದ ಎಸ್‌ಯುವಿ ವಿನ್ಯಾಸವನ್ನು ಪ್ರದರ್ಶಿಸುವ ಕರ್ವ್ ನಲ್ಲಿ ಎಸ್‌ಯುವಿಯ ದೃಢತೆ ಮತ್ತು ನೈಜವಾದ ಕೂಪ್ ನ ಸೌಂದರ್ಯ ಮತ್ತು ಸ್ಪೋರ್ಟಿ ಸಿಲೂಯೆಟ್‌ ವಿನ್ಯಾಸವಿದೆ. ಆಗಸ್ಟ್ 7ರಂದು ಈ ಹೊಚ್ಚ ಹೊಸ ಟಾಟಾ ಕರ್ವ್ ಬಿಡುಗಡೆ ಆಗಲಿದ್ದು, ಟಾಟಾ ಮೋಟಾರ್ಸ್‌ನ ಮಲ್ಟಿ- ಪವರ್‌ಟ್ರೇನ್ ತಂತ್ರಕ್ಕೆ ಅನುಗುಣವಾಗಿ ಬಿಡುಗಡೆಗೊಳ್ಳಲಿದೆ. ಮೊದಲು ಟಾಟಾ ಕರ್ವ್ ಇವಿ ಆವೃತ್ತಿ ಬಿಡುಗಡೆಯಾಗಲಿದ್ದು, ಅದರ ಬೆನ್ನಲ್ಲಿ ಶೀಘ್ರದಲ್ಲಿಯೇ ಐಸಿಐ ಆವೃತ್ತಿಗಳು ರಸ್ತೆಗೆ ಇಳಿಯಲಿವೆ.

ಟಾಟಾ ಕರ್ವ್ ಅನಾವರಣದ ಕುರಿತು ಮಾತನಾಡಿರುವ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶೈಲೇಶ್ ಚಂದ್ರ, “ಟಾಟಾ ಮೋಟಾರ್ಸ್ ಭಾರತೀಯ ಎಸ್‌ಯುವಿ ಕ್ಷೇತ್ರದ ಪರಿವರ್ತಕ ಸಂಸ್ಥೆಯಾಗಿದೆ. ನಾವು ಸದಾ ಆಕರ್ಷಕ ವಿನ್ಯಾಸ, ಅತ್ಯುತ್ತಮ ರೋಡ್ ಪ್ರೆಸೆನ್ಸ್ ಮತ್ತು ಅತ್ಯಪೂರ್ವ ಕಾರ್ಯಕ್ಷಮತೆ ಹೊಂದಿರುವ ಕೆಟಗರಿಯಲ್ಲೇ ಕಾರುಗಳನ್ನು ನೀಡುತ್ತಾ ಬಂದಿದ್ದೇವೆ. ಸಿಯೆರಾ, ಸಫಾರಿ, ನೆಕ್ಸಾನ್, ಪಂಚ್ ಮತ್ತು ಹ್ಯಾರಿಯರ್ ಮಾರುಕಟ್ಟೆಯಲ್ಲಿಯೇ ವಿಶೇಷ ವಿನ್ಯಾಸದ ಎಸ್‌ಯುವಿಗಳನ್ನು ಟಾಟಾ ತನ್ನ ಪೋರ್ಟ್​ಪೋಲಿಯೊದಲ್ಲಿ ಹೊಂದಿರುವುದೇ ಅದಕ್ಕೆ ಸಾಕ್ಷಿ. ಈ ಪರಂಪರೆಯನ್ನು ಮುಂದುವರಿಸಲು ಹಾಗೂ ಬಲಪಡಿಸಲು ನಾವು ಮಧ್ಯಮ ಎಸ್‌ಯುವಿ ಮಿಡ್​ವೇರಿಯೆಂಟ್​​ನಲ್ಲಿ ಮೊದಲ ಎಸ್‌ಯುವಿ ಕೂಪ್ ಆಗಿರುವ ಟಾಟಾ ಕರ್ವ್ ಅನ್ನು ಅನಾವರಣಗೊಳಿಸುತ್ತಿದ್ದೇವೆ. ಕೂಪ್ ದೇಹ ರಚನೆಯುಳ್ಳ ಇದರ ವಿಶಿಷ್ಟ ವಿನ್ಯಾಸವು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಒದಗಿಸಲಿದೆ ಎಂದು ನುಡಿದರು.

ಮುಂದುವರಿ ಅವರು ಟಾಟಾ ಕರ್ವ್ ಮಲ್ಟಿ ಪವರ್ ಟ್ರೇನ್ ಗಳಲ್ಲಿ ಲಭ್ಯವಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಪವರ್‌ಟ್ರೇನ್‌ ಆಯ್ಕೆಗಳಲ್ಲಿ ದೊರೆಯಲಿದೆ. ಕರ್ವ್ ಮೂಲಕ ನಾವು ಮಧ್ಯಮ ಎಸ್‌ಯುವಿ ಬಯಸುವ ಗ್ರಾಹಕರ ಅಗತ್ಯಗಳನ್ನು ಪೂರೈಸಲಿದ್ದೇವೆ ಎಂದು ಹೇಳಿದರು.

ವಿಶೇಷತೆ ಏನು?

ಟಾಟಾ ಕರ್ವ್ ಆಕರ್ಷಕ ವಿನ್ಯಾಸ, ಉತ್ತಮ ಪ್ರಾಯೋಗಿಕತೆ ಮತ್ತು ಉಲ್ಲಾಸದಾಯಕ ಕಾರ್ಯಕ್ಷಮತೆ ಪರಿಪೂರ್ಣ ಮಿಶ್ರಣವಾಗಿದೆ. ಕರ್ವ್ ಎಸ್‌ಯುವಿ ಕೂಪ್ , ಮಿಡ್- ಎಸ್‌ಯುವಿ ಮಾರುಕಟ್ಟೆಯ ಸಾಂಪ್ರದಾಯಿಕ ಬಾಕ್ಸ್ ವಿನ್ಯಾಸಕ್ಕೆ ವ್ಯತಿರಿಕ್ತವಾಗಿದೆ. ಇದು ದೃಢವಾದ ಏರೋ ಡೈನಾಮಿಕ್ ಥೀಮ್ ಅನ್ನು ಹೊಂದಿದ್ದು, ಮುಂಭಾಗದಲ್ಲಿ ವಿಭಿನ್ನವಾಗಿ ಕಾಣಿಸುತ್ತದೆ. ಕರ್ವ್ ನ ಇಳಿಜಾರಾದ ಮೇಲ್ಛಾವಣಿಯು ವಿಂಡ್ ರೆಸಿಸ್ಟೆನ್ಸ್ ಗುಣ ಹೊಂದಿದೆ. ಅದರ ದೊಡ್ಡ ಚಕ್ರಗಳು, ದೃಢವಾದ ಶೈಲಿ, ಡಿಪಾರ್ಚರ್ ಆಂಗಲ್ ಮತ್ತು ಜಾಸ್ತಿ ಇರುವ ಗ್ರೌಂಡ್ ಕ್ಲಿಯರೆನ್ಸ್ ಟಾಟಾ ಕರ್ವ್ ಗೆ ಬ್ಯಾಲೆನ್ಸ್ ಡ್ ಲುಕ್ ಹೊಂದಿದೆ. ಈ ಎಸ್‌ಯುವಿ ಕೂಪ್ ಎರಡು ಹೊಸ ಬಣ್ಣದ ಶೇಡ್​ನಲ್ಲಿ ಬಿಡುಗಡೆ ಆಗಲಿದೆ. ಆ ಬಣ್ಣಗಳು ಹೀಗಿವೆ: ಕರ್ವ್.ಇವಿಯಲ್ಲಿ ವರ್ಚುವಲ್ ಸನ್‌ರೈಸ್ ಬಣ್ಣ ಮತ್ತು ಕರ್ವ್ ಇಸಿಇಯಲ್ಲಿ ಗೋಲ್ಡ್ ಎಸೆನ್ಸ್ ಬಣ್ಣ.

ಲಾಂಗ್ ಡ್ರೈವ್‌ಗಳಿಗೆ ಹೋಗಲು ಇಷ್ಟಪಡುವ ಭಾರತೀಯ ಕುಟುಂಬಗಳಿಗಾಗಿ ಪ್ರಾಯೋಗಿಕವಾಗಿ ವಿನ್ಯಾಸಗೊಳಿಸಲಾಗಿರುವ ಮತ್ತು ಎಸ್‌ಯುವಿ ಕೂಪ್ ವಿನ್ಯಾಸ ಹೊಂದಿರುವ ಟಾಟಾ ಕರ್ವ್ ಆಧುನಿಕ ಮತ್ತು ಅತ್ಯುತ್ತ ಇಂಟೀರಿಯರ್ ಅನ್ನು ಹೊಂದಿದೆ. ವಿಶಾಲವಾದ ಕ್ಯಾಬಿನ್ ಸ್ಪೇಸ್ ಲಭ್ಯವಿದೆ ಮತ್ತು ಎಸ್‌ಯುವಿ ಕೂಪ್ ದೇಹ ರಚನೆ ಇರುವುದರಿಂದ ಸ್ಟೋರೇಜ್ ಗೆ ಜಾಸ್ತಿ ಸ್ಥಳ ಇಲ್ಲ ಎಂದು ಭಾವಿಸಬೇಕಾಗಿಲ್ಲ. ಇದರ ಪ್ಯಾನೋರಾಮಿಕ್ ಗ್ಲಾಸ್ ರೂಫ್ ಕ್ಯಾಬಿನ್‌ಗೆ ನೈಸರ್ಗಿಕ ಬೆಳಕು ಬೀಳಲು ಅನುವು ಮಾಡಿಕೊಡುತ್ತದೆ. ಗ್ರಾಹಕರ ಅಗತ್ಯಗಳನ್ನು ಪೂರೈಸಲು ಬೂಟ್ ಸ್ಪೇಸ್ ಅಥವಾ ಸ್ಟೋರೇಜ್ ಜಾಗ ನೀಡಲಾಗಿದೆ.

ಇದನ್ನು ಓದಿ: Royal Enfield Guerrilla 450 : ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಖರೀದಿ ಮಾಡಲು ಐದು ಕಾರಣ ಇಲ್ಲಿದೆ

ಟಾಟಾ ಕರ್ವ್ ಶಕ್ತಿಯುತ ಪೆಟ್ರೋಲ್ ಮತ್ತು ಡೀಸೆಲ್‌ ಎಂಜಿನ್ ಆಯ್ಕೆಗಳಲ್ಲಿ ದೊರೆಯುತ್ತದೆ. ಅವುಗಳ ಜೊತೆಗೆ ಕೆಟಗರಿಯಲ್ಲಿಯೇ ಉತ್ತಮ ಅನ್ನಿಸುವ ಲಾಂಗ್ ಡ್ರೈವಿಂಗ್ ರೇಂಜ್ ಒದಗಿಸುವ ಎಲೆಕ್ಟ್ರಿಕ್ ವೇರಿಯಂಟ್ ಗಳು ಲಭ್ಯವಾಗಲಿದೆ. ಸುಧಾರಿತ ಇನ್ಫೋಟೇನ್ ಮೆಂಟ್, ದೊಡ್ಡ ಸ್ಕ್ರೀನ್ ಗಳು ಮತ್ತು ಕನೆಕ್ಟೆಡ್ ಕಾರ್ ಟೆಕ್ನಾಲನಜಿ ಹೊಂದಿರುವ ಟಾಟಾ ಕರ್ವ್ ಈ ವಿಭಾಗದಲ್ಲಿಯೇ ಹೊಚ್ಚ ಹೊಸತಾಗಿ ಪರಿಚಯಿಸಲಾಗಿರುವ ಹಲವಾರು ಫೀಚರ್ ಗಳನ್ನು ಹೊಂದಿದೆ.

Continue Reading
Advertisement
Indian Navy Recruitment
ಅವಿಭಾಗೀಕೃತ47 seconds ago

Indian Navy Recruitment: ಭಾರತೀಯ ನೌಕಾ ಪಡೆಯಲ್ಲಿದೆ ಉದ್ಯೋಗಾವಕಾಶ; ಅಪ್ಲೈ ಮಾಡಲು ಆ. 2 ಕೊನೆಯ ದಿನ

Pooja Khedkar
ದೇಶ7 mins ago

Puja Khedkar: ನಕಲಿ ದಾಖಲೆ ಸೃಷ್ಟಿ; ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ನೇಮಕ ರದ್ದು, ಪರೀಕ್ಷೆಯಿಂದಲೇ ಯುಪಿಎಸ್‌ಸಿ ಬ್ಯಾನ್!

krishna byre gowda
ಪ್ರಮುಖ ಸುದ್ದಿ18 mins ago

Krishna Byre Gowda: ರಾಜ್ಯಪಾಲರ ಅಧಿಕಾರ ದುರುಪಯೋಗಪಡಿಸಿಕೊಂಡರೆ ಕೋರ್ಟ್‌ಗೆ ಹೋಗುತ್ತೇವೆ: ಕೃಷ್ಣಭೈರೇಗೌಡ

Money Guide
ಮನಿ-ಗೈಡ್23 mins ago

Money Guide: PPF v/s NPS Vatsalya ನಿಮ್ಮ ಮಕ್ಕಳಿಗೆ ಯಾವುದು ಉತ್ತಮ ಯೋಜನೆ? ಇಲ್ಲಿದೆ ವಿವರ

Vinay Guruji met by master anand brother
ಸ್ಯಾಂಡಲ್ ವುಡ್25 mins ago

Vinay Guruji: ಬೈಕೊಂಡು ವಿನಯ್ ಗುರೂಜಿ ಆಶ್ರಮಕ್ಕೆ ಹೋಗಿದ್ದೆ ಆದರೆ ನನ್ನ ಅಷ್ಟೂ ಜಾತಕ ಬಿಚ್ಚಿಟ್ರು ಎಂದ ಮಾಸ್ಟರ್ ಆನಂದ್ ಸಹೋದರ!

Anurag Thakur
ದೇಶ30 mins ago

Anurag Thakur: ಅನುರಾಗ್‌ ಠಾಕೂರ್‌ ‘ಜಾತಿ’ ಅಸ್ತ್ರಕ್ಕೆ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಹಕ್ಕುಚ್ಯುತಿ ಪ್ರತ್ಯಸ್ತ್ರ!

Viral Video
Latest31 mins ago

Viral Video: ಮಹಿಳೆಯ ಎದೆ, ಕುತ್ತಿಗೆಗೆ ಭೀಕರವಾಗಿ ತಿವಿದ ಬೀದಿ ಹಸು; ಮೈ ನಡುಗಿಸುವ ವಿಡಿಯೊ

Paris Olympic
ಕ್ರೀಡೆ32 mins ago

Paris Olympic: ಪ್ರೀ ಕ್ವಾರ್ಟರ್​ಗೆ ಲಗ್ಗೆಯಿಟ್ಟ ಲಕ್ಷ್ಯ ಸೇನ್; ಜೊನಾಥನ್​ ಕ್ರಿಸ್ಟಿಗೆ ಆಘಾತಕಾರಿ ಸೋಲು

Wayanad Landslide
ದೇಶ35 mins ago

Wayanad Landslide: ಭೂಕುಸಿತದ ಬಗ್ಗೆ ಒಂದು ವಾರ ಮೊದಲೇ ನೀಡಲಾಗಿತ್ತಾ ಎಚ್ಚರಿಕೆ? ಕೇಂದ್ರದ ಸೂಚನೆ ನಿರ್ಲಕ್ಷಿಸಿತ್ತಾ ಕೇರಳ ಸರ್ಕಾರ?

DK Shivakumar
ಕರ್ನಾಟಕ40 mins ago

DK Shivakumar: ಪ್ರಧಾನಿ ಮೋದಿ ಭೇಟಿಯಾದ ಡಿಕೆಶಿ; ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲು ಬೇಡಿಕೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ22 hours ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 day ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ2 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ2 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ2 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ3 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ3 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ3 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ3 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌