Monsoon car care tips : ಮಳೆಗಾಲದಲ್ಲಿ ನಿಮ್ಮ ಕಾರನ್ನು ಈ ರೀತಿ ಮೆಂಟೇನ್ ಮಾಡಿ - Vistara News

ಆಟೋಮೊಬೈಲ್

Monsoon car care tips : ಮಳೆಗಾಲದಲ್ಲಿ ನಿಮ್ಮ ಕಾರನ್ನು ಈ ರೀತಿ ಮೆಂಟೇನ್ ಮಾಡಿ

ಮಳೆಗಾಲದಲ್ಲಿ ನಿಮ್ಮ ಕಾರನ್ನು (Monsoon car care tips) ನೀವು ಈ ರೀತಿ ಮೆಂಟೇನ್​ ಮಾಡಿದರೆ ತೊಂದರೆಯಿಲ್ಲದ ಪ್ರಯಾಣ ಮಾಡಬಹುದು.

VISTARANEWS.COM


on

Car Care Tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮಾನ್ಸೂನ್​ ಮಾರುತ ಭಾರತದ ಎಲ್ಲೆಡೆಗೆ ವ್ಯಾಪಿಸಿದ್ದು, ಮಳೆ ಸುರಿಯಲು ಅರಂಭಿಸಿದೆ. ಕರ್ನಾಟಕದ ಕೆಲವು ಕಡೆ ಬಿಡದೇ ಮಳೆ ಸುರಿಯುತ್ತಿದ್ದು ಮಳೆಗಾಲಕ್ಕೆ ಬೇಕಾಗಿರುವ ಎಲ್ಲ ಸಿದ್ಧತೆಗಳನ್ನು ಮುಗಿಸಿಕೊಂಡಿದ್ದಾರೆ. ಹೀಗಾಗಿ ಕಾರಿನ ಮಾಲೀಕರು ನೀವಾಗಿದ್ದರೆ ಮಳೆಗಾಲಕ್ಕೆ ಅಗತ್ಯವಾಗಿರುವ ಮೆಂಟೇನೆನ್ಸ್​ (Monsoon car care tips) ಕೂಡ ಬೇಕಾಗಿದೆ. ಹಾಗಾದರೆ ಮಾನ್ಸೂನ್ ಪ್ರಾರಂಭವಾಗುವ ಮೊದಲು ನೀವು ಪರಿಶೀಲಿಸಬೇಕಾದ ಅಥವಾ ಸರಿಪಡಿಸಬೇಕಾದ ಕೆಲವು ಪ್ರಮುಖ ಅಂಶಗಳು ಈ ಕೆಳಗಿನಂತಿವೆ.

ಹಳೆ ಟೈರ್​​ಗಳನ್ನು ಬದಲಾಯಿಸಿ

ಟೈರ್​ಗಳ ಬಗ್ಗೆ ಹೆಚ್ಚಿನ ಕಾರು ಮಾಲೀಕರು ನಿರ್ಲಕ್ಷ್ಯ ವಹಿಸುತ್ತಾರೆ. ಆದರೆ, ಟೈರ್​ಗಳು ಚಾಲನೆ ವೇಳೆ ದೊಡ್ಡ ಪರಿಣಾಮ ಬೀರುವ ಭಾಗವಾಗಿರುತ್ತವೆ. ಅದರಲ್ಲೂ ಮಳೆಗಾಲದಲ್ಲಿ ಸಾಕಷ್ಟ್ರು ಪ್ರಮಾಣದ ಥ್ರೆಡ್​ ಇರಬೇಕಾಗುತ್ತದೆ. ಒಣ ರಸ್ತೆಗಳಿಗೆ ಹೋಲಿಸಿದರೆ ಒದ್ದೆಯಾದ ರಸ್ತೆಗಳಲ್ಲಿ ವಾಹನ ಜಾರುವುದು ಹೆಚ್ಚು. ನೀರು ತುಂಬಿದ ರಸ್ತೆಗಳು, ಸೋರಿಕೆಯಾದ ತೈಲ ಮತ್ತು ಇತರ ವಾಹನ ನೀರಿನೊಂದಿಗೆ ಬೆರೆತಾಗ ಇನ್ನಷ್ಟು ಪರಿಸ್ಥಿತಿ ಹಾಳಾಗುತ್ತದೆ. ಹೀಗಾಗಿ ಮಳೆಗಾಲದಲ್ಲಿ ರೋಡ್​ ಗ್ರಿಪ್​ ಚೆನ್ನಾಗಿರಬೇಕು ಅಥವಾ ಸ್ಕಿಡ್​ ಆಗಬಾರದು ಎಂದಾದರೆ ಥ್ರೆಡ್​ ಚೆನ್ನಾಗಿರುವ ಟೈರ್​ಗಳು ಬೇಕು.

ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಟೈರ್​​ಗಳು ಥ್ರೆಡ್ ವೇರ್ ಇಂಡಿಕೇಟರ್ ಗಳೊಂದಿಗೆ ಬರುತ್ತವೆ. ಟೈರ್​ನ ಗ್ರೌವ್ ಗಳ ನಡುವೆ ಒಂದು ಸಣ್ಣ ರಬ್ಬರ್ ಬಾರ್. ಟೈರ್ ರಬ್ಬರ್ ಸವೆಯುತ್ತಿದ್ದ ಹಾಗೆಯೇ ಟ್ರೆಡ್ ಇಂಡಿಕೇಟರ್ ತೆಳುವಾಗಲು ಪ್ರಾರಂಭಿಸುತ್ತದೆ. ಒಂದು ವೇಳೆ ಇಂಡಿಕೇಟರ್ ಕಳಚಿಕೊಂಡರೆ ಟೈರ್ ಬದಲಾಯಿಸಲೇಬೇಕು.

ಟೈರ್​ನ ಗಾಳಿಯ ಒತ್ತಡ ಸರಿಯಾಗಿರಲಿ

ಯಾವುದೇ ಋತುವಾಗಿದ್ದರೂ ಟೈರ್​ನಲ್ಲಿ ಸೂಚಿಲಾಗಿರುವ ಗಾಳಿ ಒತ್ತಡ ಇರಲೇಬೇಕಿ. ಆದರೆ, ಮಳೆಗಾಲದಲ್ಲಿ, ಟೈರ್ ಒತ್ತಡವು ನಿರ್ಣಾಯಕ. ರಸ್ತೆಯ ಮೇಲ್ಮೈಯಲ್ಲಿ ನೀರು ಇದ್ದರೆ ಮತ್ತು ಟೈರ್ ಕಡಿಮೆ ಉಬ್ಬಿದರೆ, ಜಾರು ಜಾರಿಕೊಂಡು ಹೋಗುವುದು ಖಚಿತ. ಮಳೆಗಾಲದ ನೀರು ಟೈರ್ ಮತ್ತು ರಸ್ತೆಯ ಮೇಲ್ಮೈ ನಡುವೆ ನೀರು ಒಂದು ಪದರ ರೂಪಿಸುತ್ತದೆ. ಇದು ವಾಹನವು ಸ್ಕಿಡ್ ಆಗಲು ಕಾರಣವಾಗುತ್ತದೆ.

ಹೆಡ್​ಲೈಟ್​ಗಳನ್ನು ಸರಿಪಡಿಸಿ

ಮಳೆಗಾಲದಲ್ಲಿ ಚಾಲಕನಿಗೆ ರಸ್ತೆ ಸ್ಪಷ್ಟವಾಗಿ ಕಾಣುವುದಿಲ್ಲ. ಲೈಟ್​​ಗಳು ಮಸುಕಾಗಿದ್ದರೆ ಗೋಚರತೆ ಇನ್ನಷ್ಟು ಕಡಿಮೆಯಾಗುತ್ತದೆ. ಹೀಗಾಗಿ ಮಳೆಗಾಲಕ್ಕೆ ಮೊದಲು ಎಲ್ಲಾ ಲೈಟ್​ಗಳನ್ನು ಪರಿಶೀಲಿಸಬೇಕು. ಹೆಡ್ ಲ್ಯಾಂಪ್ ಗಳು, ಟೈಲ್ ಲ್ಯಾಂಪ್, ಹೈ-ಸ್ಟಾಪ್ ಲ್ಯಾಂಪ್ ಮತ್ತು ಫಾಗ್ ಲ್ಯಾಂಪ್ ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಖಚಿತಪಡಿಸಿಕೊಳ್ಳಿ.

ಬೀಡಿಂಗ್​ಗಳನ್ನು ಬದಲಾಯಿಸಿ

ಕಾರಿನ ಡೋರ್​ಗಳ ಸುತ್ತಲೂ ರಬ್ಬರ್ ಬೀಡಿಂಗ್​ಗಳನ್ನು ಹಾಕಿರಲಾಗುತ್ತದೆ. ಬೇಸಿಗೆ ಬಿಸಿಯಲ್ಲಿ ರಬ್ಬರ್ ಗಟ್ಟಿಯಾಗಿ ಪುಡಿಯಾಗುತ್ತದೆ. ಇದರಿಂದ ಮಳೆಗಾಲದಲ್ಲಿ ನೀರು ಕಾರಿನೊಳಗೆ ಸೋರಿಕೆಯಾಗಬಹುದು. ಹೀಗಾಗಿ ಮಳೆಗಾಲದಲ್ಲಿ ಡೊರ್​ ಹಾಗೂ ಗ್ಲಾಸ್​ಗಳ ಬದಿಯಲ್ಲಿರುವ ಬೀಡಿಂಗ್​​ಗಳನ್ನು ಪರಿಶೀಲಿಸಿ. ಪುಡಿಯಾಗಿದ್ದರೆ ಅದನ್ನು ತಕ್ಷಣ ಬದಲಿಸಿ.

ವಾಹನದ ಕೆಳಭಾಗ ಪರೀಕ್ಷಿಸಿ

ಕಾರಿನ ಮೇಲ್ಮೈ ತುಕ್ಕು ಹಿಡಿದರೆ ಗಮನಕ್ಕೆ ಬರುತ್ತದೆ. ಆದರೆ, ಕೆಳಭಾಗದಲ್ಲಿ ತುಕ್ಕು ಹಿಡಿದಿದ್ದರೆ ಗೊತ್ತಾಗುವುದಿಲ್ಲ. ಹೀಗಾಗಿ ಕೆಳಭಾಗವನ್ನು ಮಳೆಗಾಲಕ್ಕೆ ಮೊದಲು ಪರೀಕ್ಷೆ ಮಾಡಬೇಕು. ರಸ್ಟಿಂಗ್ ಆರಂಭವಾಗಿದ್ದರೆ ತಕ್ಷಣ ರಿಪೇರಿ ಮಾಡಿ. ಇಲ್ಲವಾದರೆ ರಸ್ತೆಯಲ್ಲಿ ವೇಗವಾಗಿ ತೂತು ಅಥವಾ ತುಕ್ಕು ಹಿಡಿದ ಜಾಗದ ಮೂಲಕ ಒಳಗೆ ನೀರು ನುಗ್ಗಬಹುದು.

ಬ್ರೇಕ್ ಪ್ಯಾಡ್​ಗಳನ್ನು ಬದಲಾಯಿಸಿ

ಮಾನ್ಸೂನ್ ಮೆಂಟೇನೆನ್ಸ್​ ವೇಳೆ ಬ್ರೇಕ್ ಗಳ ಸ್ಥಿತಿಯನ್ನು ಪರಿಶೀಲಿಸುವುದು ಕಡ್ಡಾಯ. ಕಾರು ಸೂಕ್ತ ರೀತಿಯಲ್ಲಿ ನಿಲ್ಲುತ್ತದೆಯೇ ಎಂಬುದನ್ನು ಪರಿಶೀಲನೆ ನಡೆಸಬೇಕು. ಬ್ರೇಕ್ ಪ್ಯಾಡ್ಗಳು ಮತ್ತು ಬ್ರೇಕ್ ಫ್ಲ್ಯೂಡ್​ ಪರಿಶೀಲಿಸಬೇಕು. ಒದ್ದೆಯಾದ ರಸ್ತೆಗಳಲ್ಲಿ ಬ್ರೇಕ್​ ಹಿಡಿಯುವುದು ಕಡಿಮೆ. ಆದ್ದರಿಂದ, ಉತ್ತಮ ಸ್ಥಿತಿಯಲ್ಲಿರುವ ಬ್ರೇಕ್ ಗಳು ವಾಹನವನ್ನು ಸುರಕ್ಷಿತವಾದ ಅಂತರದಲ್ಲಿ ನಿಲ್ಲಿಸಲು ಸಹಾಯ ಮಾಡುತ್ತದೆ.

ಎಸಿ ವ್ಯವಸ್ಥೆ ಪರಿಶೀಲಿಸಿ

ಮಳೆಗಾಲದಲ್ಲಿ ಹವಾಮಾನವು ತಂಪಾಗಿರುವ ಹೊರತಾಗಿಯೂ ಎಸಿ ವ್ಯವಸ್ಥೆಯ ಕಾರ್ಯನಿರ್ವಹಣೆ ಬಹಳ ಮುಖ್ಯ. ಮುಂಭಾಗದ ಡಿ-ಫಾಗರ್ ವ್ಯವಸ್ಥೆ ಎಸಿಯನ್ನು ಅವಲಂಬಿಸಿದೆ. ಎಸಿ ವ್ಯವಸ್ಥೆ ವಿಫಲವಾದರೆ, ವಿಂಡ್​ಶೀಲ್ಡ್ ಮೇಲೆ ಮಂಜು ಹಿಡಿಯುತ್ತದೆ. ಇದು ಚಾಲಕನ ಗೋಚರತೆಯನ್ನು ಕಡಿಮೆ ಮಾಡುತ್ತದೆ.

ವೈಪರ್ ಬ್ಲೇಡ್ ಗಳು

ಬೇಸಿಗೆಯಲ್ಲಿ ನಿಷ್ಕ್ರಿಯವಾಗಿರುವ ವೈಪರ್​ ಬ್ಲೇಡ್​ಗಳು ನಿಷ್ಪ್ರಯೋಜಕವಾಗಬಹುದು. ಶಾಖ ಮತ್ತು ಹವಾಮಾನದಿಂದಾಗಿ, ವೈಪರ್ ಬ್ಲೇಡ್​ಗಳು ಗಾಜನ್ನು ಒರೆಸುವ ದಕ್ಷತೆಯನ್ನು ಕಳೆದುಕೊಳ್ಳುತ್ತವೆ. ಮಳೆಗಾಲದಲ್ಲಿ ವೈಪರ್ ಬ್ಲೇಡ್ ಗಳನ್ನು ಪರಿಶೀಲಿಸುವುದು ಮತ್ತು ಅಗತ್ಯವಿದ್ದರೆ ಅವುಗಳನ್ನು ಬದಲಾಯಿಸುವುದು ಮುಖ್ಯ. ನಿಮ್ಮ ವೈಪರ್ ಬ್ಲೇಡ್ ಗಳನ್ನು ಯಾವಾಗಲೂ ಸ್ವಚ್ಛವಾಗಿರಿಸಿಕೊಳ್ಳಿ.

ಬ್ಯಾಟರಿ ಪರಿಶೀಲಿಸಿ

ಸರಿಯಾಗಿ ಕಾರ್ಯನಿರ್ವಹಿಸುವ ಬ್ಯಾಟರಿಯನ್ನು ಕಾರಲ್ಲಿ ಇರುವುದು ಅತ್ಯಗತ್ಯ. ಆದರೂ ಇದು ಮಳೆಗಾಲದಲ್ಲಿ ಇನ್ನಷ್ಟು ಮುಖ್ಯ, ಮಳೆ ಮತ್ತು ಮೋಡ ಕವಿದ ವಾತಾವರಣದಿಂದಾಗಿ ಕಡಿಮೆ ಗೋಚರತೆ ಉಂಟಾಗುವ ಕಾರಣ ನಿಮ್ಮ ವೈಪರ್ ಗಳು ಮತ್ತು ಲೈಟ್​​ಗಳನ್ನು ಹೆಚ್ಚು ಬಳಸಬೇಕಾಗುತ್ತ.ಎ ಇದು ಬ್ಯಾಟರಿಯ ಮೇಲೆ ದೊಡ್ಡ ಹೊರೆಯನ್ನು ಮಾಡುತ್ತದೆ. ಹೀಗಾಗಿ ಸರಿಯಾಗಿ ಚಾರ್ಜ್ ಆಗುವ ಬ್ಯಾಟರಿ ಇರುವುದು ಅಗತ್ಯ. ಒಂದು ವೇಳೆ ಇಲ್ಲದಿದ್ದರೆ ತಕ್ಷಣದಲ್ಲೇ ಬದಲಾಯಿಸಿ.

ಇದನ್ನೂ ಓದಿ : TVS Bike : ಸೆಪ್ಟೆಂಬರ್​ 5ಕ್ಕೆ ಲಾಂಚ್​ ಆಗಲಿದೆ ಟಿವಿಎಸ್​ನ ಹೊಸ ಬೈಕ್​, ಕುತೂಹಲ ಮೂಡಿಸಿ ಘೋಷಣೆ

ವೈರಿಂಗ್​ಗಳು ಪರಿಶೀಲಿಸಿ

ಕಾರಿನ ವೈರಿಂಗ್​ಗಳನ್ನು ಮಳೆಗಾಲದಲ್ಲಿ ಪರಿಶೀಲಿಸುವುದು ಉತ್ತಮ. ಲೈಟ್​ ಸೇರಿದಂತೆ ಕಾರಿನಾದ್ಯಂತ ಸುತ್ತುವರಿದಿರುವ ವೈರ್​ಗಳು ಕಟ್​ ಆಗಿದ್ದರೆ ಅಥವಾ ಓಪನ್ ಆಗಿದ್ದರೆ ಮಳೆಗಾದಲ್ಲಿ ನೀರು ಬಿದ್ದಾಗ ಅಪಾಯ ಉಂಟಾಗುತ್ತದೆ. ಶಾರ್ಟ್​ ಸರ್ಕೀಟ್ ಆಗಿ ಇಡೀ ವೈರಿಂಗ್ ವ್ಯವಸ್ಥೆ ತೊಂದರೆ ಒಳಪಡುತ್ತದೆ. ಹೀಗಾಗಿ ಮಳೆಗಾಲದಲ್ಲಿ ಕಡ್ಡಾಯವಾಗಿ ಕಾರಿನ ವೈರಿಂಗ್ ಸರಿಪಡಿಸಬೇಕು.

ಈ ಎಲ್ಲ ಸ್ಪೇರ್​ಗಳು ಜತೆಗಿರಲಿ

ಮಳೆಗಾಲದಲ್ಲಿ ನಿಮ್ಮ ಕಾರಿನಲ್ಲಿ ಕೆಲವು ವಸ್ತುಗಳನ್ನು ಇಟ್ಟುಕೊಳ್ಳುವುದು ಉತ್ತಮ ಅಭ್ಯಾಸ. ಇವುಗಳಲ್ಲಿ ವೈಪರ್ ಬ್ಲೇಡ್ ಗಳು ಮತ್ತು ಫ್ಯೂಸ್ ಗಳಂತಹ ಬಿಡಿಭಾಗಗಳು ಇರಬೇಕು. ರಿಫ್ಲೆಕ್ಟರ್​ಗಳು. ವೈದ್ಯಕೀಯ ಕಿಟ್ ನಂತಹ ಪ್ರಮಾಣಿತ ಉಪಕರಣಗಳನ್ನು ಇಟ್ಟುಕೊಳ್ಳಬೇಕು . ಬಟ್ಟೆಗಳು, ಹೆಚ್ಚುವರಿ ಶೂಗಳು, ಛತ್ರಿ / ರೇನ್​ಕೋಟ್​ ಮತ್ತು ಟವೆಲ್​ನಂಥ ವಸ್ತುಗಳುಇದ್ದರೆ ಉತ್ತಮ. ನೀವು ಮಳೆಯಲ್ಲಿ ಸಿಕ್ಕಿಬಿದ್ದರೆ ಮತ್ತು ಮಳೆ ಬೀಳಲು ಪ್ರಾರಂಭಿಸಿದರೆ ನಿಮಗೆ ಈ ಎಲ್ಲ ವಸ್ತುಗಳು ಅಗತ್ಯವಾಗಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆಟೋಮೊಬೈಲ್

Maruti Suzuki: ಶೀಘ್ರ ರಸ್ತೆಗಿಳಿಯಲಿದೆ ಬರೋಬ್ಬರಿ 26 ಕಿ.ಮೀ ಮೈಲೇಜ್ ಕೊಡುವ ಮಾರುತಿ ಸ್ವಿಫ್ಟ್​; ಶುರುವಾಗಿದೆ ಬುಕಿಂಗ್​

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಮಾರುತಿ ಸುಜುಕಿಯ (Maruti Suzuki) 4ನೇ-ಜನ್ ಸ್ವಿಫ್ಟ್‌ ಗಾಗಿ 1,450 ಕೋಟಿ ರೂ. ಹೂಡಿಕೆ ಮಾಡಿದ್ದು,2030 ರ ವೇಳೆಗೆ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಉತ್ಪಾದನೆಯು 10 ಲಕ್ಷ ವರೆಗೆ ಬೆಳೆಯುವ ನಿರೀಕ್ಷೆ ಇದೆ. ಹೊಸ ಸ್ವಿಫ್ಟ್ ಹೊಸ ಎಂಜಿನ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬರಲಿದೆ.

VISTARANEWS.COM


on

By

Maruti Suzuki
Koo

ನವದೆಹಲಿ: ಮಾರುತಿ ಸುಜುಕಿ (Maruti Suzuki) ಇಂಡಿಯಾ ಲಿಮಿಟೆಡ್ (MSIL) ತನ್ನ ಜನಪ್ರಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ (hatchback) ಸ್ವಿಫ್ಟ್‌ನ ಹೊಸ-ಪೀಳಿಗೆ ಮಾದರಿಯನ್ನು (4th-gen Swift) ಶೀಘ್ರ ಮಾರುಕಟ್ಟೆಗೆ ಇಳಿಸಲಿದೆ. ಕಾರನ್ನು ಈಗಾಗಲೇ ಕಂಪನಿ ಪರಿಚಯಿಸಿದ್ದು ಬುಕಿಂಗ್ ಕೂಡ ಆರಂಭಗೊಂಡಿದೆ. ಈ ಕಾರಿನ ಮಾಡೆಲ್​ಗಾಗಿ ಕಂಪನಿಯು ಸುಮಾರು 1,450 ಕೋಟಿ ರೂ. ಹೂಡಿಕೆ ಮಾಡಿದ್ದು, ಇದು ಹೊಸ Z-ಸರಣಿ 1.2L ಎಂಜಿನ್‌ ಜತೆಗೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸ್ವಿಫ್ಟ್ ನ 4 ನೇ ಪೀಳಿಗೆಯ ಬೆಲೆಗಳು 6.49 ಲಕ್ಷ ರೂ. ನಿಂದ ಪ್ರಾರಂಭವಾಗಿ 9.64 ಲಕ್ಷ ರೂ. ವರೆಗೆ ಇರುತ್ತದೆ. ಇದು ಎಕ್ಸ್​ ಶೋರೂಮ್​ ಬೆಲೆಯಾಗಿದೆ.

ಆರು ಏರ್‌ಬ್ಯಾಗ್‌ಗಳು, ಎಲ್ಲಾ ಆಸನಗಳಿಗೆ 3 ಪಾಯಿಂಟ್ ಸೀಟ್‌ಬೆಲ್ಟ್‌ಗಳೊಂದಿಗೆ ರಿಮೈಂಡರ್‌ಗಳು, ಎಬಿಎಸ್ ಸೇರಿದಂತೆ ಹಲವು ಸುರಕ್ಷತಾ ಫೀಚರ್​ಗಳು ಹೊಚ್ಚ ಹೊಸ ಜೆನ್​ 4 ಸ್ವಿಫ್ಟ್​ನಲ್ಲಿ ಇರಲಿವೆ. ಪ್ರತಿ ಲೀಟರ್‌ಗೆ 25.75 ಕಿ.ಮೀ. ವರೆಗೆ ಮೈಲೇಜ್​ ನೀಡುವ ಮೂಲಕ ಸ್ವಿಫ್ಟ್​ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗುವುದು ಖಾತರಿ. ಹೊಸ ಮಾದರಿಯ ಸ್ವಿಫ್ಟ್​​ನ ಬುಕಿಂಗ್ ಮೇ 1ರಿಂದ ಆರಂಭಗೊಂಡಿದ್ದು, 11,000 ರೂಪಾಯಿ ಟೋಕನ್ ಮೊತ್ತ ನೀಡಿ ಕಾಯ್ದಿರಿಸಬಹುದು.

ಹ್ಯಾಚ್​ ಬ್ಯಾಕ್​ ಸೆಗ್ಮೆಂಟ್​ನಲ್ಲಿ ಸ್ವಿಫ್ಟ್​ ಪ್ರಾಬಲ್ಯ

19 ವರ್ಷಗಳಿಂದ ಭಾರತದ ರಸ್ತೆಗಳಲ್ಲಿ ಓಡುತ್ತಿರುವ ಸಿಫ್ಟ್ ಕಾರಿನ ಮೊದಲ ಮಾಡೆಲ್​ ಅನ್ನು 2005 ರಲ್ಲಿ ಬಿಡುಗಡೆ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ 29 ಲಕ್ಷ ಸ್ವಿಫ್ಟ್ ಮಾರಾಟ ಮಾಡಿರುವುದಾಗಿ ಕಂಪನಿ ಹೇಳಿಕೊಂಡಿದೆ. 2011 ರಲ್ಲಿ 2 ನೇ ಪೀಳಿಗೆಯ ಸ್ವಿಫ್ಟ್​ ಪರಿಚಯಿಸಲಾಯಿತು. ನಂತರ 2018 ರಲ್ಲಿ 3ನೇ ಪೀಳಿಗೆಯನ್ನು ರಸ್ತೆಗೆ ಇಳಿಯಿತು. ಸ್ವಿಫ್ಟ್ ತನ್ನ ಮೊದಲ 10 ಲಕ್ಷ ಯೂನಿಟ್​ಗಳ ಮಾರಾಟವನ್ನು 2013 ರಲ್ಲಿ ಪೂರ್ಣಗೊಳಿಸಿತ್ತು ಮತ್ತು 2018 ರ ವೇಳೆಗೆ 20 ಲಕ್ಷದ ಗಡಿ ದಾಟಿ ಈ ಸೆಗ್ಮೆಂಟ್​ನಲ್ಲಿ ಪ್ರಾಬಲ್ಯ ಸಾಧಿಸಿತು.

2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಆದ್ದರಿಂದ ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಆರ್ಥಿಕ ಚಟುವಟಿಕೆ ಹೆಚ್ಚಾಗಲಿದ್ದು ಆಟೋಮೊಬೈಲ್ ಕ್ಷೇತ್ರಕ್ಕೆ ಹೆಚ್ಚಿನ ಬೇಡಿಕೆ ಉಂಟಾಗುವ ಸಾಧ್ಯತೆ ಇದೆ. ಭಾರತದಲ್ಲಿ ಬೆಳೆಯಲು ಸಾಕಷ್ಟು ಅವಕಾಶಗಳಿವೆ. ಕಾರಿನ ಮಾಲೀಕತ್ವ ಹೆಚ್ಚಾದಂತೆ ಹ್ಯಾಚ್‌ಬ್ಯಾಕ್ ವಿಭಾಗವು ಗ್ರಾಹಕರಿಗೆ ಹೆಚ್ಚು ಪ್ರಿಯವಾಗಲಿದೆ. ಹೀಗಾಗಿ ಹ್ಯಾಚ್‌ಬ್ಯಾಕ್ ಕಾರುಗಳ ಅಭಿವೃದ್ಧಿಯನ್ನು ವಿಸ್ತರಿಸುತ್ತಿದ್ದೇವೆ ಎಂದು ಮಾರುತಿ ಸುಜುಕಿಯ ಎಂಡಿ ಮತ್ತು ಸಿಇಒ ಹಿಸಾಶಿ ಟೇಕುಚಿ ಹೇಳಿದರು.


ಸುಜುಕಿಗೆ ಪ್ರಮುಖ ಮಾರುಕಟ್ಟೆ

ಭಾರತವು ಸುಜುಕಿಗೆ ಪ್ರಮುಖ ಮಾರುಕಟ್ಟೆಯಾಗಿದೆ. ವೈವಿಧ್ಯಮಯ ಗ್ರಾಹಕರ ಬೇಡಿಕೆಗಳನ್ನು ಪೂರೈಸುವುದು ಮುಖ್ಯವಾಗಿರುವುದರಿಂದ ಹ್ಯಾಚ್​ಬ್ಯಅಕ್​ ವಿಭಾಗದ ಮೇಲೆ ನಮ್ಮ ಹೆಚ್ಚಿನ ಗಮನವಿದೆ. ಹೊಸ ಸ್ವಿಫ್ಟ್ ಈ ವಿಭಾಗದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆಯಲಿದೆ ಎಂದು ಅವರು ತಿಳಿಸಿದರು.

ಸ್ಪರ್ಧೆಯಲ್ಲಿ ಹಲವು ಕಾರುಗಳು

ಹ್ಯಾಚ್‌ಬ್ಯಾಕ್ ಸ್ವಿಫ್ಟ್‌ ಗೆ ಪ್ರತಿ ಸ್ಪರ್ಧಿಯಾಗಿ ಹ್ಯುಂಡೈ ಗ್ರಾಂಡ್ ಐ10 ನಿಯೋಸ್, ಟಾಟಾ ಆಲ್ಟ್ರೋಜ್ . ಹ್ಯುಂಡೈ ಎಕ್ಸ್‌ಟರ್ ಮತ್ತು ಟಾಟಾ ಪಂಚ್ ಸೇರಿದಂತೆ ಮೈಕ್ರೋ ಎಸ್‌ಯುವಿಗಳು ಮಾರುಕಟ್ಟೆಯಲ್ಲಿವೆ. ಇವುಗಳು ಇದೇ ಶ್ರೇಣಿಯಲ್ಲಿನ ಬೆಲೆಯನ್ನು ಹೊಂದಿವೆ.

ಕಳೆದ 3- 4 ವರ್ಷಗಳಲ್ಲಿ ಒಟ್ಟು ಪ್ರಯಾಣಿಕ ವಾಹನ ಮಾರಾಟ ಶೇಕಡಾ 47 ರಷ್ಟಿದ್ದು, ಇದರಲ್ಲಿ ಸಣ್ಣ ಕಾರು ಮಾರುಕಟ್ಟೆಯ ಪಾಲು 2024ನೇ ಹಣಕಾಸು ವರ್ಷದಲ್ಲಿ ಸುಮಾರು ಶೇ. 28ರಷ್ಟಾಗಿದೆ. ಮಾರುತಿ ಸುಜುಕಿ ಹ್ಯಾಚ್‌ಬ್ಯಾಕ್ ವಿಭಾಗದ ಬೇಡಿಕೆ 2026 ಅಂತ್ಯ ಅಥವಾ 2027 ರ ವೇಳೆಗೆ ಪುನರುಜ್ಜೀವನಗೊಳ್ಳುವ ನಿರೀಕ್ಷೆಯಿದೆ ಎಂದು ಹಿಸಾಶಿ ಟೇಕುಚಿ ಹೇಳಿದರು.

ಇದನ್ನೂ ಓದಿ: Tata Motors: Tata Ace EV 1000 ಬಿಡುಗಡೆ ಮಾಡಿದ ಟಾಟಾ ಮೋಟರ್ಸ್‌; ಏನಿದರ ವಿಶೇಷತೆ? ದರ ಎಷ್ಟು?

ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಬೆಳವಣಿಗೆ ಭಾರತದಲ್ಲಿನ ಒಟ್ಟು ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಶೇ. 28ರಷ್ಟು ಪಾಲನ್ನು ಪಡೆದುಕೊಳ್ಳುತ್ತವೆ. ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಪಾರ್ಥೋ ಬ್ಯಾನರ್ಜಿ ಪ್ರಕಾರ, ಪ್ರಸ್ತುತ ಒಟ್ಟು 7 ಲಕ್ಷ ವಾರ್ಷಿಕ ಉತ್ಪಾದನೆ ಹೊಂದಿರುವ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗವು 2030 ರ ವೇಳೆಗೆ 10 ಲಕ್ಷಕ್ಕೆ ಬೆಳೆಯಬಹುದು. ಮಾರುತಿ ಪ್ರಸ್ತುತ ಸ್ವಿಫ್ಟ್ ಮತ್ತು ಬಲೆನೊದಂತಹ ಮಾದರಿಗಳೊಂದಿಗೆ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಶೇ. 62ರಷ್ಟು ಪಾಲನ್ನು ಹೊಂದಿದೆ.

Continue Reading

ವಾಣಿಜ್ಯ

Tata Motors: Tata Ace EV 1000 ಬಿಡುಗಡೆ ಮಾಡಿದ ಟಾಟಾ ಮೋಟರ್ಸ್‌; ಏನಿದರ ವಿಶೇಷತೆ? ದರ ಎಷ್ಟು?

Tata Motors: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟರ್ಸ್ ಹೊಚ್ಚ ಹೊಸದಾದ ಏಸ್ ಇವಿ 1000 (Ace EV 1000) ಯನ್ನು ಬಿಡುಗಡೆ ಮಾಡಿದ್ದು, ಈ ಮೂಲಕ ತನ್ನ ಇ-ಕಾರ್ಗೊ ಸಾರಿಗೆ ಪರಿಹಾರಗಳನ್ನು ಇನ್ನಷ್ಟು ಬಲಪಡಿಸಿಕೊಂಡಿದೆ. ಇದು ಶೂನ್ಯ ಮಾಲಿನ್ಯ ಹೊರಹೊಮ್ಮುವ ಮಿನಿ ಟ್ರಕ್ ಆಗಿದೆ.

VISTARANEWS.COM


on

New Tata Ace EV 1000 launched by Tata Motors
Koo

ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟರ್ಸ್ (Tata Motors) ಹೊಚ್ಚ ಹೊಸದಾದ ಏಸ್ ಇವಿ 1000 (Ace EV 1000) ಬಿಡುಗಡೆ ಮಾಡಿದ್ದು, ಈ ಮೂಲಕ ತನ್ನ ಇ-ಕಾರ್ಗೊ ಸಾರಿಗೆ ಪರಿಹಾರಗಳನ್ನು ಇನ್ನಷ್ಟು ಬಲಪಡಿಸಿಕೊಂಡಿದೆ. ಕಟ್ಟಕಡೆಯ ಮೈಲು ತಲುಪಲು ಪೂರಕವಾಗಿ ಈ ವಾಹನವನ್ನು ಕ್ರಾಂತಿಕಾರಕವಾಗಿ ಅಭಿವೃದ್ಧಿಪಡಿಸಲಾಗಿದೆ.

ಏಸ್ ಇವಿ ವಿಶೇಷತೆ ಏನು?

ಹೊಸದಾದ ಏಸ್ ಇವಿ ವಾಹನವು ಶೂನ್ಯ ಮಾಲಿನ್ಯ ಹೊರಹೊಮ್ಮುವ ಮಿನಿ ಟ್ರಕ್ ಆಗಿದ್ದು, 1 ಟನ್‌ವರೆಗೆ ಪೇಲೋಡ್ ಅನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 161 ಕಿಲೋಮೀಟರ್‌ವರೆಗೆ ಕ್ರಮಿಸಬಲ್ಲದು. ತನ್ನ ಗ್ರಾಹಕರಿಂದ ಅತ್ಯಮೂಲ್ಯವಾದ ಸಲಹೆಗಳನ್ನು ಪಡೆದುಕೊಂಡು ಅದಕ್ಕೆ ತಕ್ಕಂತೆ ಈ ಏಸ್ ಇವಿಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ಹೊಸ ಶ್ರೇಣಿಯ ವಾಹನವು ಎಫ್ಎಂಸಿಜಿ, ಬೇವರೇಜಸ್, ಪೇಂಟ್ಸ್ & ಲ್ಯೂಬ್ರಿಕೆಂಟ್ಸ್, ಎಲ್‌ಪಿಜಿ & ಡೈರಿ ಉತ್ಪನ್ನಗಳ ಸಾಗಣೆ ಅಗತ್ಯತೆಗಳನ್ನು ಪೂರೈಸಲಿದೆ.

ಇದನ್ನೂ ಓದಿ: UGCET 2024: ಯುಜಿಸಿಇಟಿ ಅರ್ಜಿ ತಿದ್ದುಪಡಿಗೆ ಅಂತಿಮ ಅವಕಾಶ ನೀಡಿದ ಕೆಇಎ; ಕೊನೆಯ ದಿನಾಂಕ ಯಾವಾಗ?

ದೇಶಾದ್ಯಂತ 150ಕ್ಕೂ ಹೆಚ್ಚು ಎಲೆಕ್ಟ್ರಿಕ್ ವೆಹಿಕಲ್ ಸಪೋರ್ಟ್ ಸೆಂಟರ್‌ಗಳ ಬೆಂಬಲದೊಂದಿಗೆ ಈ ಏಸ್ ಇವಿ ವಾಹನವು ಅತ್ಯಾಧುನಿಕ, ಸುಧಾರಿತ ಬ್ಯಾಟರಿ ಮ್ಯಾನೇಜ್ಮೆಂಟ್ ಸಿಸ್ಟಂ, ಫ್ಲೀಟ್ ಎಡ್ಜ್ ಟೆಲಿಮ್ಯಾಟಿಕ್ಸ್ ಸಿಸ್ಟಂ ಮತ್ತು ಅತ್ಯುತ್ತಮ ಸಾಮರ್ಥ್ಯವನ್ನು ಹೊಂದಿದ ವಾಹನವಾಗಿದೆ.

ಟಾಟಾ ಸಮೂಹ ಸಂಸ್ಥೆಗಳ ಅಂಗವಾಗಿರುವ Tata UniEVerse ಅಗಾಧವಾದ ಸಾಮರ್ಥ್ಯಗಳನ್ನು ಬಳಸಿಕೊಂಡು ಈ ಏಸ್ ಇವಿಯನ್ನು ಸಿದ್ಧಪಡಿಸಲಾಗಿದೆ. ಗ್ರಾಹಕರಿಗೆ ಸಮಗ್ರ ಇ-ಕಾರ್ಗೊ ಮೊಬಿಲಿಟಿ ಪರಿಹಾರವನ್ನು ನೀಡಲು ದೇಶದ ಪ್ರಮುಖ ಹಣಕಾಸು ಸಂಸ್ಥೆಗಳ ಪಾಲುದಾರಿಕೆಯನ್ನೂ ಸಹ ಹೊಂದಲಾಗಿದೆ. ಇದು ಬಹುಮುಖ ಕಾರ್ಗೊ ಡೆಕ್‌ಗಳೊಂದಿಗೆ ಲಭ್ಯವಿದೆ ಮತ್ತು ದೇಶಾದ್ಯಂತ ಎಲ್ಲಾ ಟಾಟಾ ಮೋಟರ್ಸ್ ವಾಣಿಜ್ಯ ವಾಹನಗಳ ಡೀಲರ್ ಶಿಪ್‌ಗಳಲ್ಲಿ ಮಾರಾಟವಾಗಲಿದೆ. ಇದರ ಬೆಲೆ ಸುಮಾರು 9 ಲಕ್ಷ ರೂ. ಆಗುತ್ತದೆ.

ಇದನ್ನೂ ಓದಿ: Money Guide: ಭಾರತದಲ್ಲಿಯೂ ಆರಂಭವಾಯ್ತು ಬಹು ನಿರೀಕ್ಷಿತ ಗೂಗಲ್ ವ್ಯಾಲೆಟ್‌; ಇದು ಗೂಗಲ್‌ ಪೇಗಿಂತ ಹೇಗೆ ಭಿನ್ನ?

ಟಾಟಾ ಮೋಟರ್ಸ್ ವಾಣಿಜ್ಯ ವಾಹನಗಳ ಎಸ್‌ಸಿವಿ & ಪಿಯು ವಿಭಾಗದ ಉಪಾಧ್ಯಕ್ಷ & ಬ್ಯುಸಿನೆಸ್ ಹೆಡ್ ವಿನಯ್ ಪಾಠಕ್ ಈ ಕುರಿತು ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ನಮ್ಮ ಏಸ್ ಇವಿ ಗ್ರಾಹಕರು ಸರಿಸಾಟಿಯಿಲ್ಲದ ಅನುಭವವನ್ನು ಪಡೆಯುವ ಮೂಲಕ ಅತ್ಯಮೂಲ್ಯ ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ. ಇದೇ ವೇಳೆ ಅವರು ಲಾಭವನ್ನು ಮತ್ತು ಸುಸ್ಥಿರತೆಯನ್ನು ಪಡೆದುಕೊಂಡಿದ್ದಾರೆ. ಕ್ರಾಂತಿಕಾರಕ ಶೂನ್ಯ ಮಾಲಿನ್ಯದ ಕಟ್ಟಕಡೆಯ ಸಾರಿಗೆ ಪರಿಹಾರಗಳ ರಾಯಭಾರಿಗಳಾಗಿ ಈ ಗ್ರಾಹಕರು ಹೊರಹೊಮ್ಮಿದ್ದಾರೆ.

ಇದೀಗ ಏಸ್ ಇವಿ 1000 ಬಿಡುಗಡೆಯೊಂದಿಗೆ ಗ್ರಾಹಕರಿಗೆ ಸುಧಾರಿತ ಅನುಭವವನ್ನು ನೀಡುತ್ತಿದ್ದೇವೆ. ಈ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವುದರೊಂದಿಗೆ ಆರ್ಥಿಕತೆಯನ್ನು ಸುಧಾರಣೆ ಮಾಡಲಾಗುತ್ತಿದೆ. ಏಸ್ ಇವಿ 1000 ಉತ್ಕೃಷ್ಟ ಮೌಲ್ಯ ಮತ್ತು ಕಡಿಮೆ ವೆಚ್ಚದ ಮಾಲೀಕತ್ವವನ್ನು ನೀಡುವ ಮೂಲಕ ಹಸಿರು ಭವಿಷ್ಯಕ್ಕೆ ಕೊಡುಗೆ ನೀಡಲಿದೆ ಎಂಬ ವಿಶ್ವಾಸ ನಮ್ಮದಾಗಿದೆ ಎಂದು ತಿಳಿಸಿದ್ದಾರೆ.

ಏಸ್ ಇವಿಯು EVOGEN ಪವರ್ ಟ್ರೇನ್‌ನಿಂದ ಚಾಲಿತವಾಗಿದ್ದು, ಇದು 7 ವರ್ಷಗಳ ಬ್ಯಾಟರಿ ವಾರಂಟಿ ಮತ್ತು 5 ವರ್ಷದ ಸಮಗ್ರ ನಿರ್ವಹಣೆ ಪ್ಯಾಕೇಜ್‌ನೊಂದಿಗೆ ಸರಿಸಾಟಿಯಿಲ್ಲದ ಚಾಲನಾ ಅನುಭವವನ್ನು ನೀಡುತ್ತದೆ. ಇದು ಚಾಲನಾ ಶ್ರೇಣಿಯನ್ನು ಹೆಚ್ಚಿಸಲು ಸುಧಾರಿತ ಬ್ಯಾಟರಿ ಕೂಲಿಂಗ್ ಸಿಸ್ಟಂ ಮತ್ತು ಪುನರುತ್ಪಾದಕ ಬ್ರೇಕಿಂಗ್ ಸಿಸ್ಟಂನೊಂದಿಗೆ ಸುರಕ್ಷಿತ, ಎಲ್ಲಾ ಹವಾಮಾನ ಕಾರ್ಯಾಚರಣೆಗಳನ್ನು ನೀಡುತ್ತದೆ.

ಇದನ್ನೂ ಓದಿ: IPL 2024 : ಆರ್​ಸಿಬಿಯ ಪ್ಲೇಆಫ್​ ಚಾನ್ಸ್​ ಇದೆಯೇ? ಇಲ್ಲಿದೆ ನೋಡಿ ಲೆಕ್ಕಾಚಾರ

ಇದು ಹೆಚ್ಚಿನ ಸಮಯಕ್ಕಾಗಿ ನಿಯಮಿತ ಮತ್ತು ವೇಗದ ಚಾರ್ಜಿಂಗ್ ಸಾಮರ್ಥ್ಯಗಳನ್ನು ಹೊಂದಿದೆ. ಇದು 27kW (36hp) ಮೋಟರ್ ನಿಂದ 130Nm ಪೀಕ್ ಟಾರ್ಕ್ ನೊಂದಿಗೆ ಚಾಲಿತವಾಗಿದೆ. ಬೆಸ್ಟ್-ಇನ್-ಕ್ಲಾಸ್ ಪಿಕಪ್ ಮತ್ತು ಗ್ರೇಡ್ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣವಾಗಿ ಲೋಡ್ ಮಾಡಲಾದ ಪರಿಸ್ಥಿತಿಗಳಲ್ಲಿ ಸುಲಭವಾಗಿ ಸಾಗಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದೆ.

Continue Reading

ಆಟೋಮೊಬೈಲ್

Nissan India : ಉಚಿತ ಏಸಿ ರಿಪೇರಿ ಮಾಡಿಸಿಕೊಳ್ಳಲು ನಿಸ್ಸಾನ್ ಕಾರು ಮಾಲೀಕರಿಗೆ ಇಲ್ಲಿದೆ ಅವಕಾಶ

Nissan India: ಉಚಿತ ಏಸಿ ತಪಾಸಣಾ ಕಾರ್ಯಾಗಾರ ಏಪ್ರಿಲ್ 15ರಿಂದಲೇ ಆರಂಭಗೊಂಡಿದ್ದು ಜೂನ್ 15ರವರೆಗೆ ನಡೆಯಲಿದೆ. ನಿಸ್ಸಾನ್ ಗ್ರಾಹಕರು ವಿವಿಧ ಶ್ರೇಣಿಗಳ ಸರ್ವೀಸ್ ಗಳು ಮತ್ತು ರಿಯಾಯಿತಿ ಪಡೆಯುವ ಭಾರತದಾದ್ಯಂತ ಇರುವ ಎಲ್ಲಾ ನಿಸ್ಸಾನ್ ಅಧಿಕೃತ ಸರ್ವೀಸ್ ವರ್ಕ್ ಶಾಪ್ ಗಳಲ್ಲಿ ಈ ಸೌಲಭ್ಯ ಲಭ್ಯವಿದೆ.

VISTARANEWS.COM


on

Nissan India
Koo

ಬೆಂಗಳೂರು: ನಿಸ್ಸಾನ್ ಮೋಟಾರ್ ಇಂಡಿಯಾ (Nissan India) ದೇಶಾದ್ಯಂತ ಇರುವ ತನ್ನ ಗ್ರಾಹಕರಿಗೆ ಎರಡು ತಿಂಗಳ ಕಾಲ ಉಚಿತ ಏಸಿ ತಪಾಸಣಾ ಕಾರ್ಯಾಗಾರ ಆಯೋಜಿಸಿದೆ. ಆ ಮೂಲಕ ಗ್ರಾಹಕ ತೃಪ್ತಿಯನ್ನು ಬಯಸು ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ನಿಸ್ಸಾನ್ ಉಚಿತ ಏಸಿ ತಪಾಸಣಾ ಕಾರ್ಯಾಗಾರ ಏಪ್ರಿಲ್ 15ರಿಂದಲೇ ಆರಂಭಗೊಂಡಿದ್ದು ಜೂನ್ 15ರವರೆಗೆ ನಡೆಯಲಿದೆ. ನಿಸ್ಸಾನ್ ಗ್ರಾಹಕರು ವಿವಿಧ ಶ್ರೇಣಿಗಳ ಸರ್ವೀಸ್ ಗಳು ಮತ್ತು ರಿಯಾಯಿತಿ ಪಡೆಯುವ ಭಾರತದಾದ್ಯಂತ ಇರುವ ಎಲ್ಲಾ ನಿಸ್ಸಾನ್ ಅಧಿಕೃತ ಸರ್ವೀಸ್ ವರ್ಕ್ ಶಾಪ್ ಗಳಲ್ಲಿ ಈ ಸೌಲಭ್ಯ ಲಭ್ಯವಿದೆ. ನಿಸ್ಸಾನ್‌ನ ನುರಿತ ಮತ್ತು ತರಬೇತಿ ಪಡೆದ ಸರ್ವೀಸ್ ಉದ್ಯೋಗಿಗಳು ನಿಸ್ಸಾನ್ ನಿಜವಾದ ಬಿಡಿಭಾಗಗಳನ್ನು ಬಳಸಿಕೊಂಡು ಏಸಿ ತಪಾಸಣೆ ಶಿಬಿರವನ್ನು ನಡೆಸಿಕೊಡುತ್ತಾರೆ.

ಎಲ್ಲಾ ನಿಸ್ಸಾನ್ ಮತ್ತು ಡಾಟ್ಸನ್ ವಾಹನ ಮಾಲೀಕರು ನಿಸ್ಸಾನ್ ಒನ್ ಆ್ಯಪ್ ಅಥವಾ ನಿಸ್ಸಾನ್ ಮೋಟಾರ್ ಇಂಡಿಯಾ ವೆಬ್‌ಸೈಟ್ (www.nissan.in) ಮೂಲಕ ತಪಾಸಣೆ ಪಡೆಯಲು ಸರ್ವೀಸ್ ಅಪಾಯಿಂಟ್‌ಮೆಂಟ್ ಅನ್ನು ಪಡೆಯಬಹುದು. ಇದರಿಂದಾಗಿ ಗ್ರಾಹಕರು ಯಾವುದೇ ತೊಂದರೆ ಇಲ್ಲದೆ ನಿಸ್ಸಾನ್ ಮಾಲೀಕತ್ವವನ್ನು ಅನುಭವಿಸುವ ಸೌಕರ್ಯ ಪಡೆಯುವುದಲ್ಲದೆ, ಈ ಉಪಕ್ರಮವು ಬ್ರಾಂಡ್ ಮೇಲೆ ಗ್ರಾಹಕರು ಇಟ್ಟಿರುವ ವಿಶ್ವಾಸಕ್ಕೆ ಸಣ್ಣ ಪ್ರಮಾಣದ ಕೊಡುಗೆಯೂ ಆಗಿದೆ. ಈ ಸರ್ವೀಸ್ ಶಿಬಿರಗಳು ಎಲ್ಲಾ ನಿಸ್ಸಾನ್ ಮತ್ತು ಡಾಟ್ಸನ್ ಬ್ರಾಂಡ್ ವಾಹನಗಳಿಗೆ ಸರ್ವೀಸ್ ಒದಗಿಸುವ ಕಂಪನಿಯ ವ್ಯಾಪಕವಾದ 120 ಸರ್ವೀಸ್ ವರ್ಕ್ ಶಾಪ್ ಗಳಲ್ಲಿಯೂ ನಡೆಯಲಿದೆ.

ಇದನ್ನೂ ಓದಿ: Air Purifier: ಕಾರುಗಳಲ್ಲಿ ಏರ್ ಪ್ಯೂರಿಫೈಯರ್‌ ಏಕೆ ಅಗತ್ಯ ಗೊತ್ತೆ?

ಶಿಬಿರವು ಉಚಿತ ಕಾರ್ ಟಾಪ್ ವಾಶ್ ಅನ್ನು ಕೂಡ ಒಳಗೊಂಡಿದೆ. ಜೊತೆಗೆ ಸಮಗ್ರ 20-ಪಾಯಿಂಟ್ ತಪಾಸಣೆಯನ್ನು ಮಾಡಲಾಗುತ್ತದೆ. ಪಿಎಂಎಸ್ (ಪೀರಿಯಾಡಿಕಲ್ ಮೇಂಟನೆನ್ಸ್ ಸರ್ವೀಸ್) ಆಯ್ಕೆ ಮಾಡುವ ಗ್ರಾಹಕರಿಗೆ ಉಚಿತ ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯ ಕೂಡ ನೀಡಲಾಗುತ್ತದೆ. ಹೆಚ್ಚುವರಿಯಾಗಿ, ಗ್ರಾಹಕರು ಶೇ.20ರವರೆಗೆ ಭಾಗಗಳು/ಪರಿಕರಗಳ ಮೇಲೆ ರಿಯಾಯಿತಿ (ಡೀಲರ್ ತೀರ್ಮಾನದ ಪ್ರಕಾರ) ಪಡೆಯಬಹುದು. ಕಾರ್ಮಿಕ ಶುಲ್ಕಗಳ ಮೇಲೆ 20% ವರೆಗೆ ಮತ್ತು ಮೌಲ್ಯವರ್ಧಿತ ಸೇವೆಗಳ ಮೇಲೆ (ವಿಎಎಸ್) 10% ವರೆಗೆ ರಿಯಾಯಿತಿ ಪಡೆಯಬಹುದು. ಕಂಪನಿಯು ಎಲ್ಲಾ ನಿಸ್ಸಾನ್ ಮತ್ತು ಡಾಟ್ಸನ್ ವಾಹನಗಳು ಈ ವಿಶೇಷ ಕೊಡುಗೆಗಳ ಲಾಭವನ್ನು ಪಡೆಯಬೇಕು ಮತ್ತು ಅದರಿಂದ ವಾಹನಗಳ ಕಾರ್ಯಕ್ಷಮತೆ ಉತ್ತಗೊಳಿಸಬೇಕು, ವಾಹನಗಳು ಆಯುಷ್ಯ ಹೆಚ್ಚಿಸಬೇಕು ಎಂದು ಹೇಳಿದೆ.

Continue Reading

ಆಟೋಮೊಬೈಲ್

Air Purifier: ಕಾರುಗಳಲ್ಲಿ ಏರ್ ಪ್ಯೂರಿಫೈಯರ್‌ ಏಕೆ ಅಗತ್ಯ ಗೊತ್ತೆ?

ಕಾರಿನಲ್ಲಿರುವ ಏರ್ ಪ್ಯೂರಿಫೈಯರ್ ಗಾಳಿಯ ಗುಣಮಟ್ಟವನ್ನು ಸುಧಾರಿಸುವಲ್ಲಿ ಮತ್ತು ಆರೋಗ್ಯವನ್ನು ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಕಾರುಗಳಲ್ಲಿ ಏರ್ ಪ್ಯೂರಿಫೈಯರ್‌ಗಳು (Air Purifier) ಅಗತ್ಯವಾಗಿರುವುದಕ್ಕೆ ಕೆಲವು ಪ್ರಮುಖ ಕಾರಣಗಳೂ ಇವೆ. ಕಾರಿನಲ್ಲಿ ಓಡಾಡುವವರಿಗೆ ಏರ್‌ ಪ್ಯೂರಿಫೈಯರ್‌ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

By

Air Purifier
Koo

ವಾಯು ಮಾಲಿನ್ಯವು (Air pollution) ಈಗ ಜಾಗತಿಕವಾಗಿ ಒಂದು ಸಮಸ್ಯೆಯಾಗಿದೆ. ಹೊರಾಂಗಣ ಪರಿಸರವನ್ನು ಮಾತ್ರವಲ್ಲದೆ ಇದು ನಮ್ಮ ಮನೆ (home) ಮತ್ತು ವಾಹನಗಳ (vehicles) ಒಳಗಿನ ಗಾಳಿಯ ಮೇಲೂ ಪರಿಣಾಮ ಬೀರುತ್ತಿದೆ. ಒಳಾಂಗಣ ವಾಯು ಮಾಲಿನ್ಯವನ್ನು ಎದುರಿಸಲು ಅನೇಕ ಜನರು ತಮ್ಮ ಮನೆಗಳಲ್ಲಿ ಏರ್ ಪ್ಯೂರಿಫೈಯರ್‌ಗಳನ್ನು (Air Purifier) ಬಳಸಲು ಪ್ರಾರಂಭಿಸಿದ್ದಾರೆ. ಆದರೆ ಕಾರುಗಳಲ್ಲಿ ಏರ್ ಪ್ಯೂರಿಫೈಯರ್‌ಗಳ ಅಗತ್ಯವನ್ನು ಸಾಮಾನ್ಯವಾಗಿ ಹೆಚ್ಚಿನವರು ಕಡೆಗಣಿಸುತ್ತಾರೆ.

ಕಲುಷಿತ ಗಾಳಿಯು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ಜಾಗೃತಿ ಹೆಚ್ಚಾಗುತ್ತಿದ್ದು, ವಾಹನಗಳಲ್ಲಿ ಏರ್ ಪ್ಯೂರಿಫೈಯರ್ ಗಳ ಪ್ರಾಮುಖ್ಯತೆಯು ಎಲ್ಲರ ಗಮನ ಸೆಳೆಯುತ್ತಿದೆ. ಸ್ವಂತ ವಾಹನ ಚಾಲನೆ ಮಾಡುವಾಗ ವಿಶೇಷವಾಗಿ ಭಾರೀ ವಾಹನ ದಟ್ಟಣೆಯ ಪ್ರದೇಶಗಳಲ್ಲಿ ಸುತ್ತಮುತ್ತ ನಿರಂತರವಾಗಿ ಹಾನಿಕಾರಕ ಅನಿಲಗಳು ಮತ್ತು ಕಣಗಳು ಹೊರಸೂಸುತ್ತಿರುತ್ತದೆ. ಈ ಮಾಲಿನ್ಯಕಾರಕಗಳು ಕಾರಿನ ಕ್ಯಾಬಿನ್ ಅನ್ನು ಪ್ರವೇಶಿಸಬಹುದು. ಇದು ಒಳಗೆ ಕಲುಷಿತ ಗಾಳಿಯ ಸಂಗ್ರಹಕ್ಕೆ ಕಾರಣವಾಗುತ್ತದೆ. ಪರಿಸರದಲ್ಲಿರುವ ಧೂಳು, ಹೊಗೆ, ಬ್ಯಾಕ್ಟೀರಿಯಾ, ವೈರಸ್‌ಗಳು ಮತ್ತು ಅಲರ್ಜಿನ್‌ಗಳಂತಹ ಅಂಶಗಳಿಂದ ಇದು ಮತ್ತಷ್ಟು ಹದಗೆಡುತ್ತದೆ.
ಕಾರಿನಲ್ಲಿರುವ ಏರ್ ಪ್ಯೂರಿಫೈಯರ್ ಗಾಳಿಯ ಗುಣಮಟ್ಟವನ್ನು ಸುಧಾರಿಸುವಲ್ಲಿ ಮತ್ತು ಆರೋಗ್ಯವನ್ನು ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಕಾರುಗಳಲ್ಲಿ ಏರ್ ಪ್ಯೂರಿಫೈಯರ್‌ಗಳು ಅಗತ್ಯವಾಗಿರುವುದಕ್ಕೆ ಕೆಲವು ಪ್ರಮುಖ ಕಾರಣಗಳೂ ಇವೆ.


1. ಮಾಲಿನ್ಯಕಾರಕಗಳನ್ನು ಕಡಿಮೆ ಮಾಡುತ್ತದೆ

ಗಾಳಿಯ ಶುದ್ಧೀಕರಣವು ಕಾರಿನೊಳಗಿನ ಗಾಳಿಯಿಂದ ಧೂಳು, ಹೊಗೆ, ಪರಾಗ, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಂತಹ ಮಾಲಿನ್ಯಕಾರಕಗಳನ್ನು ಪರಿಣಾಮಕಾರಿಯಾಗಿ ಫಿಲ್ಟರ್ ಮಾಡುತ್ತದೆ. ಚಾಲನೆ ಮಾಡುವಾಗ ನೀವು ಉಸಿರಾಡುವ ಹಾನಿಕಾರಕ ಕಣಗಳ ಸಾಂದ್ರತೆಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

2. ಅಲರ್ಜಿಕಾರಕಗಳನ್ನು ತೆಗೆದು ಹಾಕುತ್ತದೆ

ಅಲರ್ಜಿ ಅಥವಾ ಆಸ್ತಮಾದಂತಹ ಉಸಿರಾಟದ ತೊಂದರೆ ಹೊಂದಿರುವ ವ್ಯಕ್ತಿಗಳಿಗೆ ಕಲುಷಿತ ಗಾಳಿಯು ಅಸ್ವಸ್ಥತೆ ಮತ್ತು ಆರೋಗ್ಯ ಸಮಸ್ಯೆಗಳನ್ನು ಪ್ರಚೋದಿಸುತ್ತದೆ. ಏರ್ ಪ್ಯೂರಿಫೈಯರ್ ಗಾಳಿಯಿಂದ ಅಲರ್ಜಿಯನ್ನು ತೆಗೆದುಹಾಕುತ್ತದೆ. ಸೂಕ್ಷ್ಮ ವ್ಯಕ್ತಿಗಳಿಗೆ ಸ್ವಚ್ಛ ಮತ್ತು ಸುರಕ್ಷಿತ ವಾತಾವರಣವನ್ನು ಸೃಷ್ಟಿಸುತ್ತದೆ.

3. ವಾಸನೆ ತೊಡೆದು ಹಾಕುವುದು

ಮಾಲಿನ್ಯಕಾರಕಗಳ ಜೊತೆಗೆ ಏರ್ ಪ್ಯೂರಿಫೈಯರ್‌ಗಳು ಕಾರಿನೊಳಗಿನ ಅಹಿತಕರ ವಾಸನೆಯನ್ನು ತೆಗೆದು ಹಾಕುತ್ತದೆ. ಅದು ಹೊಗೆ, ಆಹಾರ ಅಥವಾ ಇತರ ವಾಸನೆಯ ಪದಾರ್ಥಗಳು ತೊಡೆದು ಹಾಕಿ ಗಾಳಿ ಶುದ್ಧೀಕರಣ ಮಾಡಿ ಸುವಾಸನೆಯನ್ನು ಬೀರುತ್ತದೆ. ವಾಹನ ಚಾಲನೆಯ ಅನುಭವವನ್ನು ಹೆಚ್ಚಿಸುತ್ತದೆ.

4. ಆರೋಗ್ಯದ ಅಪಾಯಗಳ ವಿರುದ್ಧ ರಕ್ಷಣೆ

ಕಲುಷಿತ ಗಾಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಉಸಿರಾಟದ ಸಮಸ್ಯೆಗಳು, ಅಲರ್ಜಿಗಳು, ಆಸ್ತಮಾ ಮತ್ತು ಹೃದಯರಕ್ತನಾಳದ ಕಾಯಿಲೆಗಳು ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಕಾರಿನೊಳಗಿನ ಗಾಳಿಯನ್ನು ಶುದ್ಧೀಕರಿಸುವ ಮೂಲಕ ಈ ಆರೋಗ್ಯದ ಅಪಾಯಗಳನ್ನು ಕಡಿಮೆ ಮಾಡಲು ಮತ್ತು ಆರೋಗ್ಯಕರ ಚಾಲನಾ ವಾತಾವರಣವನ್ನು ಉತ್ತೇಜಿಸಲು ಏರ್ ಪ್ಯೂರಿಫೈಯರ್ ಸಹಾಯ ಮಾಡುತ್ತದೆ.

5. ಚಾಲನಾ ಸೌಕರ್ಯವನ್ನು ಹೆಚ್ಚಿಸುವುದು

ಕಾರಿನೊಳಗೆ ಶುದ್ಧ ಮತ್ತು ತಾಜಾ ಗಾಳಿಯು ಹೆಚ್ಚು ಆರಾಮದಾಯಕ ಮತ್ತು ಆನಂದದಾಯಕ ಚಾಲನಾ ಅನುಭವಕ್ಕೆ ಕೊಡುಗೆ ನೀಡುತ್ತದೆ. ವಿಶೇಷವಾಗಿ ದೀರ್ಘ ಪ್ರಯಾಣದ ಸಮಯದಲ್ಲಿ ಅಥವಾ ಸವಾಲಿನ ಚಾಲನಾ ಪರಿಸ್ಥಿತಿಗಳಲ್ಲಿ ಇದು ಗಮನ ಮತ್ತು ಜಾಗರೂಕತೆಯನ್ನು ಸುಧಾರಿಸುತ್ತದೆ.

ಇದನ್ನೂ ಓದಿ: Xiaomi EV: ತಿಂಗಳಲ್ಲಿ 75 ಸಾವಿರ ಆರ್ಡರ್ ಸ್ವೀಕರಿಸಿದ ಕ್ಸಿಯೋಮಿ ಎಸ್‌ಯು 7 ಎಲೆಕ್ಟ್ರಿಕ್‌ ಕಾರು; ಟೆಸ್ಲಾಗಿಂತ ಅಗ್ಗ!

6. ಕಾರುಗಳಲ್ಲಿ ಏರ್ ಪ್ಯೂರಿಫೈಯರ್‌

ಕಾರು ತಯಾರಕರು ಈಗ ತಮ್ಮ ವಾಹನದ ವೈಶಿಷ್ಟ್ಯಗಳ ಭಾಗವಾಗಿ ಇನ್‌ಬಿಲ್ಟ್‌ ಆಗಿ ಏರ್ ಪ್ಯೂರಿಫೈಯರ್‌ಗಳನ್ನು ನೀಡುತ್ತಿದ್ದಾರೆ. ಹೆಚ್ಚುವರಿಯಾಗಿ ಕಾರುಗಳಲ್ಲಿ ಬಳಸಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಪೋರ್ಟಬಲ್ ಮತ್ತು ಕಾಂಪ್ಯಾಕ್ಟ್ ಏರ್ ಪ್ಯೂರಿಫೈಯರ್‌ಗಳು ಇವೆ. ಚಾಲಕರು ತಮ್ಮ ವಾಹನದ ಮಾದರಿಯನ್ನು ಲೆಕ್ಕಿಸದೆಯೇ ಶುದ್ಧ ಗಾಳಿಯನ್ನು ಆನಂದಿಸಲು ಇದು ಅನುವು ಮಾಡಿಕೊಡುತ್ತದೆ.

Continue Reading
Advertisement
Hoax bomb threat
ಕರ್ನಾಟಕ11 mins ago

Hoax Bomb Threat: ದೆಹಲಿ ಬೆನ್ನಲ್ಲೇ ಬೆಂಗಳೂರಿನ ಪ್ರಮುಖ‌ ಆಸ್ಪತ್ರೆಗೆ ಹುಸಿ ಬಾಂಬ್ ಬೆದರಿಕೆ‌; ಆತಂಕ ಸೃಷ್ಟಿ

IPL 2024
ಕ್ರೀಡೆ20 mins ago

IPL 2024 : ಕೆಕೆಆರ್ ತಂಡದ ಇನ್ನೊಬ್ಬ ಆಟಗಾರನಿಗೆ ದಂಡ ವಿಧಿಸಿದ ಬಿಸಿಸಿಐ

Prajwal Revanna Case Basavaraj Bommai says DK Shivakumar should be questioned
ಕರ್ನಾಟಕ22 mins ago

Prajwal Revanna Case: ದಿಕ್ಕು ತಪ್ಪಿದೆ ಪ್ರಜ್ವಲ್ ರೇವಣ್ಣ ಕೇಸ್‌; ಡಿಕೆಶಿ ವಿಚಾರಣೆಯೂ ಆಗಲಿ ಎಂದ ಬಸವರಾಜ ಬೊಮ್ಮಾಯಿ

Bomb Threat
ದೇಶ39 mins ago

Bomb Threat:  ಏರ್​ಪೋರ್ಟ್​ ಸೇರಿ ದೆಹಲಿಯ ಹತ್ತಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ

BDA Complex
ಕರ್ನಾಟಕ50 mins ago

BDA Complex: ವಿರೋಧದ ನಡುವೆ ಖಾಸಗಿ ಕಂಪನಿ ತೆಕ್ಕೆಗೆ 7 ಬಿಡಿಎ ಕಾಂಪ್ಲೆಕ್ಸ್; ಆದಾಯದಲ್ಲಿ 70:30 ಪಾಲು

IPL 2024
ಐಪಿಎಲ್ 20241 hour ago

IPL 2024: ರಾಜಸ್ಥಾನ ವಿರುದ್ಧ ಗೆದ್ದು ಬೀಗಿದ ಚೆನ್ನೈ; ಪ್ಲೇಆಫ್‌ ಆಸೆ ಜೀವಂತ, ಆರ್‌ಸಿಬಿಗೆ ಹೆಚ್ಚಿದ ಒತ್ತಡ

French Yoga Teacher
ಮಹಿಳೆ2 hours ago

French Yoga Teacher: ಹಸಿರು ಸೀರೆ ಧರಿಸಿ ಪದ್ಮಶ್ರೀ ಸ್ವೀಕರಿಸಿದ 101 ವರ್ಷದ ವಿದೇಶಿ ಯೋಗ ಶಿಕ್ಷಕಿ!

Vande Bharat Express
ದೇಶ2 hours ago

Vande Bharat Express: ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶೀಘ್ರ ಪ್ರಾರಂಭ

ಕರ್ನಾಟಕ2 hours ago

Vijayapura News: ಮೀನುಗಳ ಮಾರಣ ಹೋಮ; ಬಿಸಿಲ ತಾಪಕ್ಕೆ 17 ಸಾವಿರ ಮತ್ಸ್ಯಗಳ ಸಾವು

Prajwal Revanna Case I was never kidnapped and son has made a false complaint Video of victim goes viral
ಕ್ರೈಂ2 hours ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case I was never kidnapped and son has made a false complaint Video of victim goes viral
ಕ್ರೈಂ2 hours ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ3 hours ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

Prajwal Revanna Case Naveen Gowda post against MLA A Manju
ರಾಜಕೀಯ3 hours ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ವಿಡಿಯೊ ವೈರಲ್‌ಗೆ ಟ್ವಿಸ್ಟ್‌; ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ6 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case Two people of pen drive allottees arrested
ಕ್ರೈಂ8 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ16 hours ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು1 day ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ2 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ2 days ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

ಟ್ರೆಂಡಿಂಗ್‌