Best Budget Camera Phone: 15 ಸಾವಿರ ರೂ. ಒಳಗಿನ, 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಫೋನ್‌ಗಳು! - Vistara News

ಗ್ಯಾಜೆಟ್ಸ್

Best Budget Camera Phone: 15 ಸಾವಿರ ರೂ. ಒಳಗಿನ, 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಫೋನ್‌ಗಳು!

ಕಡಿಮೆ ಬೆಲೆಗೆ ಅತ್ಯುತ್ತಮ ಕ್ವಾಲಿಟಿಯ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ರಿಯಲ್‌ಮಿಯಿಂದ ಹಿಡಿದು ಸ್ಯಾಮ್ಸಂಗ್‌ವರೆಗೆ ಈ ಫೋನ್‌ಗಳನ್ನು ಕಾಣಬಹುದು. 50 ಮೆಗಾಪಿಕ್ಸೆಲ್ ಕ್ಯಾಮೆರಾ ಇರುವ ಈ ಫೋನುಗಳ್ನು 15 ಸಾವಿರ ರೂ.ಒಳಗೆ ಖರೀದಿಸಬಹುದು(Best Budget Camera Phone).

VISTARANEWS.COM


on

Best Budget Camera Phone under RS 15000 with 50MP Camera
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಫೋನುಗಳು ಈಗ ಕೇವಲ ಸಂವಹನದ ಸಾಧನಗಳಾಗಿ ಉಳಿದಿಲ್ಲ. ಸ್ಮಾರ್ಟ್‌ಫೋನ್‌‌ಗಳಂತೂ ಮಾನವನ ನಿತ್ಯದ ಅಗತ್ಯಗಳಲ್ಲಿ ಒಂದಾಗಿ ಮಾರ್ಪಟ್ಟಿವೆ. ಪ್ರತಿಯೊಂದು ಕೆಲಸವನ್ನು ಸ್ಮಾರ್ಟ್‌ಫೋನ್ ಮೂಲಕವೇ ಮಾಡಬಹುದು. ಹಲವರಿಗೆ ಹಲವು ರೀತಿಯ ಅಗತ್ಯಗಳಿಗೆ ಸ್ಮಾರ್ಟ್‌ಫೋನ್‌ಗಳು ಬಳಕೆಯಾಗುತ್ತವೆ. ಕೆಲವೊಬ್ಬರಿಗೆ ಸಂವಹನಕ್ಕಾಗಿ, ಮತ್ತೊಬ್ಬರಿಗೆ ಗೇಮ್ಸ್‌ಗಾಗಿ, ಇನ್ನೊಬ್ಬರಿಗೆ ಮನಂಜನೆಗಾಗಿ…. ಹೀಗೆ ಹಲವು ಉದ್ದೇಶಕ್ಕಾಗಿ ಫೋನ್‌ ಬಳಕೆಯಾಗುತ್ತದೆ. ಅದೇ ರೀತಿ, ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಕ್ಯಾಮೆರಾಗಳಾಗಿ ಬದಲಾಗಿವೆ. ಅದರಲ್ಲೂ ಹೈ ರೆಸೊಲ್ಯೂಷನ್ ಕ್ಯಾಮೆರಾಗಳಿಂದಾಗಿ ಸ್ಮಾರ್ಟ್‌ಫೋನ್‌ಗಳ ಖದರ್ ಬದಲಾಗಿದೆ. ಬಹಳಷ್ಟು ಮಂದಿ ಉತ್ತಮ ಕ್ಯಾಮೆರಾ ಫೋನ್‌ಗಳಿಗಾಗಿ ಹೆಚ್ಚಿನ ದುಡ್ಡು ವೆಚ್ಚ ಮಾಡಲು ಹೋಗುವುದಿಲ್ಲ. ಅಂಥವರಿಗಾಗಿ ಹಲವು ಕಂಪನಿಗಳು ಅತ್ಯುತ್ತಮ ಕ್ಯಾಮೆರಾಗಳನ್ನು ಹೊಂದಿರುವ ಫೋನ್‌ಗಳನ್ನು ಕಡಿಮೆ ರೇಟಿಗೆ ಮಾರಾಟ ಮಾಡುತ್ತವೆ(Best Budget Camera Phone). ಅಂಥ ಫೋನ್‌ಗಳ ಬಗ್ಗೆ ನಾವು ಇಲ್ಲಿ ಮಾಹಿತಿ ನೀಡಿದ್ದೇವೆ. ಸುಮಾರು 15 ಸಾವಿರ ರೂ. ಒಳಗಿನ ಹಾಗೂ 50 ಮೆಗಾ ಪಿಕ್ಸೆಲ್ ಕ್ಯಾಮೆರಾಗಳನ್ನು ಒಳಗೊಂಡಿರುವ ಬೆಸ್ಟ್ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲದೆ…

ಐಕ್ಯೂ ಜೆ6 ಲೈಟ್ 5ಜಿ (iQOO Z6 Lite 5G)

ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಪಾಲು ಹೊಂದಿರುವ ಐಕ್ಯೂ ಸ್ಮಾರ್ಟ್‌ಫೋನ್‌ಗಳು ಗಮನ ಸೆಳೆಯುಂತಿವೆ. ಸುಮಾರು 13,999 ರೂ. ಬೆಲೆಯ ಐಕ್ಯೂ ಜೆ6 ಲೈಟ್ 5ಜಿ (iQOO Z6 Lite 5G) ಫೋನ್ ಕೂಡ 50 ಮೆಗಾ ಪಿಕ್ಸೆಲ್ ಮೇನ್ ಕ್ಯಾಮೆರಾವನ್ನು ಒಳಗೊಂಡಿದೆ. ಉಳಿದಂತೆ 2 ಮೆಗಾ ಪಿಕ್ಸೆಲ್ ಎರಡು ಕ್ಯಾಮೆರಾಗಳ ಸೆಟ್‌ಅಪ್ ಇದೆ. 5000mAh ಬ್ಯಾಟರಿ ಇದೆ.

ಪೋಕೋ ಎಂ5 (Poco M5)

ಬ್ಯಾಟರಿ, ಕ್ಯಾಮೆರಾ, ಪ್ರದರ್ಶನ ಸೇರಿ ಎಲ್ಲ ರೀತಿಯಿಂದಲೂ ಪೋಕೋ ಎಂ5 (Poco M5)
ಫೋನ್ ಅತ್ಯುತ್ತಮವಾಗಿದೆ ಎಂಬ ವಿಶ್ಲೇಷಣೆಗಳಿವೆ. ಈ ಫೋನ್ ಬೆಲೆ 14,499 ರೂ. 2 ಮೆಗಾ ಪಿಕ್ಸೆಲ್‌ನ ಎರಡು ಕ್ಯಾಮೆರಾಗಳೊಂದಿಗೆ ಮೇನ್ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಇದೆ. ಎಲ್ಲ ವಿವರಗಳನ್ನು ಕ್ಯಾಮೆರಾ ಸ್ಪಷ್ಟವಾಗಿ ದಾಖಲಿಸುತ್ತದೆ.

ಮೊಟೊ ಜಿ62 5ಜಿ (Moto G62 5G)

RAM ಮತ್ತು ಸ್ಟೋರೇಜ್ ದೃಷ್ಟಿಯಿಂದ ಹೈ ಎಂಡ್ ಫೋನ್‌ ಎನಿಸಿರುವ ಮೊಟೊ ಜಿ62 5ಜಿ ಸ್ಮಾರ್ಟ್‌ಫೋನ್ ಬೆಲೆ ಕೇವಲ 14,999 ರೂ. ಅದೇ ರೀತಿ, ಈ ಫೋನಿನ ಕ್ಯಾಮೆರಾ ಕೂಡ ಅದ್ಭುತವಾಗಿದೆ. ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 695 ಚಿಪ್‌ಸೆಟ ಇದೆ. ಇನ್ನುಳಿದಂತೆ ಈ ಫೋನಿನ ಒಟ್ಟಾರೆ ಪ್ರದರ್ಶನವೂ ಅತ್ಯುತ್ತಮವಾಗಿದೆ.

ರಿಯಲ್‌ಮಿ10(Realme10)

ಚೀನಾ ಮೂಲದ ರಿಯಲ್‌ಮಿ ಕಂಪನಿಯ ಹೊಸ ಸ್ಮಾರ್ಟ್‌ಫೋನ್ ಇದು. ಸುಮಾರು 13,999 ರೂ. ಬೆಲೆ ಈ ಸ್ಮಾರ್ಟ್‌ಫೋನ್‌ನಲ್ಲೂ ನೀವು 50 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಕಾಣಬಹುದು. ಜತೆಗೆ, ಮೀಡಿಯಾಹೆಲಿಯೋ ಜಿ99 ಚಿಪ್‌ಸೆಟ್‌ ಇದೆ. ಸೆಲ್ಫಿ ಕ್ಯಾಮೆರಾ ಕೂಡ ಸಖತ್ ಆಗಿದೆ.

ಇದನ್ನೂ ಓದಿ: Samsung no. 1: ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ಗೆ ಮತ್ತೆ ಅಗ್ರ ಸ್ಥಾನ: ಸಮೀಕ್ಷೆ

ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್23 5ಜಿ (Samsung Galaxy F23 5G)

ಸ್ನ್ಯಾಪ್‌ಡ್ರಾಗನ್ 750ಜಿ ಪ್ರೊಸೆಸರ್ ಹೊಂದಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್23 5ಜಿ ಫೋನ್‌ ಕೂಡ ಉತ್ತಮ ಫೋನ್ ಹೊಂದಿದೆ. ಅಂದ ಹಾಗೆ ಈ ಫೋನ್ ಬೆಲೆ ಹದಿನೈದು ಸಾವಿರಕ್ಕಿಂತಲೂ ಕೊಂಚ ಹೆಚ್ಚಿದೆ. ಅಂದರೆ, 15,999 ರೂ. ಇದೆ. ಇದು 4ಜಿಬಿ RAM ವೆರಿಯಂಟ್ ಫೋನ್ ಬೆಲೆ. ಇನ್ನೂ ಹೆಚ್ಚಿನ RAM ವೆರಿಯಂಟ್ ಖರೀದಿಸಿದರೆ ಬೆಲೆ ಕೂಡ ಹೆಚ್ಚಾಗಲಿದೆ. ಆದರೆ, ಈ ಫೋನ್‌ನಲ್ಲಿ ಪ್ರೈಮರಿ 50 ಮೆಗಾಪಿಕ್ಸೆಲ್ ಮತ್ತು ಅಲ್ಟ್ರಾವೈಡ್‌ಗಾಗಿ 8 ಮೆಗಾ ಪಿಕ್ಸೆಲ್ ಮ್ತತು 2 ಮೆಗಾಪಿಕ್ಸೆಲ್ ಮೈಕ್ರೊ ಲೆನ್ಸ್ ಕ್ಯಾಮೆರಾ ಒದಗಿಸಲಾಗಿದೆ. ಕಡಿಮೆ ಬೆಲೆಗೆ ಅತ್ಯುತ್ತಮ ಕ್ಯಾಮೆರಾ ಫೋನ್ ಬೇಕು ಎಂದಾದರೆ, ಈ ಫೋನ್ ಖರೀದಿಸಬಹುದು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಗ್ಯಾಜೆಟ್ಸ್

Mobile Data Saving: ಮೊಬೈಲ್ ಡೇಟಾ ಉಳಿಸಲು ಇಲ್ಲಿದೆ ಕೆಲವು ಸರಳ ಉಪಾಯಗಳು!

Mobile data saving: ಡೇಟಾ ಮೊಬೈಲ್ ಗೆ ಜೀವ ತುಂಬುತ್ತದೆ. ನಮ್ಮ ಕೆಲವೊಂದು ಅಭ್ಯಾಸ, ನಿರ್ಲಕ್ಷ್ಯದಿಂದಾಗಿ ನಮಗೆ ಅರಿವಿಲ್ಲದಂತೆ ಹೆಚ್ಚಿನ ಡೇಟಾ ನಷ್ಟಕ್ಕೆ ಕಾರಣವಾಗಬಹುದು. ಡೇಟಾ ನಷ್ಟವನ್ನು ಕಡಿಮೆ ಮಾಡಲು, ಡೇಟಾ ಬಳಕೆಯನ್ನು ಗರಿಷ್ಠಗೊಳಿಸಲು ಸಹಾಯ ಮಾಡಲು ಕೆಲವು ಸಲಹೆಗಳು ಇಲ್ಲಿವೆ.

VISTARANEWS.COM


on

By

Mobile data
Koo

ಆಂಡ್ರಾಯ್ಡ್ (Android) ಸ್ಮಾರ್ಟ್ ಫೋನ್‌ಗಳು (smart phones) ಈಗ ಎಲ್ಲರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಒಂದು ಕ್ಷಣ ಕೈಕೊಟ್ಟರೂ, ಎಲ್ಲಾದರೂ ಕಳೆದು ಹೋದರೂ ಓಡುತ್ತಿದ್ದ ಬದುಕು ಒಂದು ಕ್ಷಣ ನಿಂತಂತಾಗುತ್ತದೆ. ಇಂತಹ ಮೊಬೈಲ್‌ ಬಗ್ಗೆ ಕೆಲವೊಂದು ವಿಷಯಗಳನ್ನು ಪ್ರತಿಯೊಬ್ಬರೂ ತಿಳಿದುಕೊಂಡಿರಬೇಕು. ಅವುಗಳಲ್ಲಿ ಮೊಬೈಲ್ ಡೇಟಾ (mobile data saving) ಕೂಡ ಒಂದಾಗಿದೆ.

ಮೊಬೈಲ್ ನಲ್ಲಿ ಡೇಟಾ ಎನ್ನುವುದು ಅದರ ಉಸಿರಿದ್ದಂತೆ. ನಿರಂತರ ಸಂಪರ್ಕದಲ್ಲಿರಲು, ಮಾಹಿತಿಯನ್ನು ಪ್ರವೇಶಿಸಲು ಮತ್ತು ಪ್ರಯಾಣದಲ್ಲಿರುವಾಗ ಮಲ್ಟಿಮೀಡಿಯಾ (Multimedia) ವಿಷಯವನ್ನು ಆನಂದಿಸಲು ಇದು ನಮಗೆ ಅವಕಾಶ ಮಾಡಿಕೊಡುತ್ತದೆ. ಆದರೆ ಮೊಬೈಲ್ ಡೇಟಾದ ಮೇಲೆ ಹೆಚ್ಚಿನ ಅವಲಂಬನೆ ಸೀಮಿತ ಡೇಟಾ (Limited data) ಯೋಜನೆಗಳನ್ನು ಹೊಂದಿರುವವರಿಗೆ ದುಬಾರಿಯಾಗಬಹುದು. ಇದಕ್ಕಾಗಿಯೇ ಮೊಬೈಲ್ ಡೇಟಾವನ್ನು ಹೇಗೆ ಉಳಿಸುವುದು ಎನ್ನುವುದನ್ನು ತಿಳಿದುಕೊಂಡಿರಬೇಕು.

ಮೊಬೈಲ್ ಡೇಟಾವನ್ನು ಕಡಿಮೆ ಬಳಕೆ ಮಾಡುವುದು ಹೇಗೆ ಎಂಬುದನ್ನು ಕಲಿಯುವುದು ಬಹಳ ಮುಖ್ಯ. ಇದಕ್ಕಾಗಿ ಮೊಬೈಲ್ ಡೇಟಾ ಬಳಕೆಯ ಅಭ್ಯಾಸದಲ್ಲಿ ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡರೆ ಅನಗತ್ಯವಾಗಿ ಡೇಟಾ ನಷ್ಟವಾಗುವುದನ್ನು ತಡೆಯಬಹುದು.

ಇದನ್ನು ಓದಿ: Kishan Bagaria: ಒಂದೇ ಒಂದು ಆ್ಯಪ್​ ಅಭಿವೃದ್ಧಿ ಮಾಡಿ ರಾತ್ರೋರಾತ್ರಿ ಕೋಟ್ಯಾಧೀಶ್ವರನಾದ ಅಸ್ಸಾಂ ಯುವಕ!


1. ಬಳಕೆಯ ಮೇಲ್ವಿಚಾರಣೆ ಮಾಡಿ

ಸಾಮಾನ್ಯವಾಗಿ ಡೇಟಾ ಬಳಕೆಯನ್ನು ಕಡಿಮೆ ಮಾಡುವ ಮೊದಲ ಹಂತವೆಂದರೆ ಬಳಕೆಯನ್ನು ಟ್ರ್ಯಾಕ್ ಮಾಡುವುದು. ಹೆಚ್ಚಿನ ಮೊಬೈಲ್ ಸಾಧನಗಳು ಡೇಟಾ ಬಳಕೆಯ ಮಾನಿಟರ್ ಮಾಡುತ್ತದೆ. ಅದು ನಿಮ್ಮ ಡೇಟಾ ಬಳಕೆಯ ಮೇಲೆ ಕಣ್ಣಿಡಲು ಅನುವು ಮಾಡಿಕೊಡುತ್ತದೆ. ನಿರ್ದಿಷ್ಟ ಮಿತಿಯನ್ನು ತಲುಪಿದಾಗ ಎಚ್ಚರಿಕೆಗಳನ್ನು ನೀಡುತ್ತದೆ.


2. ವೈ-ಫೈ ಬಳಸಿ

ಮೊಬೈಲ್ ಡೇಟಾ ಬಳಕೆಯನ್ನು ಕಡಿಮೆ ಮಾಡಲು ವೈ-ಫೈ ಉತ್ತಮ ಮಾರ್ಗವಾಗಿದೆ. ದೊಡ್ಡ ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು ಅಥವಾ ವೀಡಿಯೊಗಳನ್ನು ಸ್ಟ್ರೀಮ್ ಮಾಡಲು ಮನೆ, ಕಚೇರಿ, ಕಾಫಿ ಶಾಪ್‌ಗಳಲ್ಲಿ ಇರುವ ವೈ ಫೈಗಳನ್ನು ಬಳಸಿ. ಇದು ಮೊಬೈಲ್ ಡೇಟಾವನ್ನು ಹೆಚ್ಚಾಗಿ ಬಳಸುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ.

3. ಅಪ್ಲಿಕೇಶನ್‌ ನಿಯಂತ್ರಿಸಿ

ಮೊಬೈಲ್ ಡೇಟಾವನ್ನು ಉಳಿಸಲು ಸಹಾಯ ಮಾಡಲು ಕೆಲವು ಅಪ್ಲಿಕೇಶನ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಕೆಲವೊಂದು ಅಪ್ಲಿಕೇಶನ್‌ಗಳು ಡೇಟಾವನ್ನು ಕುಗ್ಗಿಸಿದರೆ, ಇನ್ನು ಕೆಲವು ಅಪ್ಲಿಕೇಶನ್ ಗಳು ಬಳಸುವ ಡೇಟಾದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಕ್ರೋಮ್ ಡೇಟಾ ಸೇವರ್, ಒಪೇರಾ ಮ್ಯಾಕ್ಸ್ ಮತ್ತು ಒನಾವೊ ಎಕ್ಸ್‌ಟೆಂಡ್ ಕೂಡ ಸೇರಿವೆ.


4. ಅಪ್ಡೇಟ್ ನಿಷ್ಕ್ರಿಯಗೊಳಿಸಿ

ಹೆಚ್ಚಿನ ಮೊಬೈಲ್ ಸಾಧನಗಳಲ್ಲಿ ಇರುವ ಅಪ್ಲಿಕೇಶನ್‌ಗಳು ನಿರಂತರ ಅಪ್ಡೇಟ್ ಆಗುತ್ತಿರುತ್ತದೆ. ಇದನ್ನು ಸ್ವಯಂಚಾಲಿತವಾಗಿ ಮಾಡುವುದನ್ನು ನಿಷ್ಕ್ರಿಯಗೊಳಿಸಿದರೆ ಬಹಳಷ್ಟು ಡೇಟಾವನ್ನು ಉಳಿಸಬಹುದು. ವೈಫೈ ಸಂಪರ್ಕವಿದ್ದಾಗ ಮಾತ್ರ ಅಪ್ಲಿಕೇಶನ್‌ ಗಳನ್ನು ಅಪ್ಡೇಟ್ ಮಾಡಿಕೊಳ್ಳಿ.


5. ಸ್ವಯಂ-ಪ್ಲೇ ನಿಷ್ಕ್ರಿಯಗೊಳಿಸಿ

ಹೆಚ್ಚಿನ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳು ಸ್ವಯಂ-ಪ್ಲೇ (self play) ವಿಡಿಯೋ ವೈಶಿಷ್ಟ್ಯವನ್ನು ಹೊಂದಿರುತ್ತದೆ. ಅದು ಹೆಚ್ಚಿನ ಡೇಟಾವನ್ನು ತಿನ್ನುತ್ತದೆ. ಇದನ್ನು ತಡೆಯಲು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಲ್ಲಿ ಸ್ವಯಂ-ಪ್ಲೇ ವಿಡಿಯೋ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸಿ.

6. ಆಫ್‌ಲೈನ್ ಆಯ್ಕೆ ಮಾಡಿ

ಆಫ್‌ಲೈನ್‌ನಲ್ಲಿ ವಿಡಿಯೊ ನೋಡುವುದು ಮತ್ತು ಡಾಟಾ ಸಂಗ್ರಹ ಇರುವಾಗ ಡೌನ್‌ಲೋಡ್ ಮಾಡುವುದು ಡೇಟಾ ಬಳಕೆಯನ್ನು ಕಡಿಮೆ ಮಾಡುವ ಅತ್ಯುತ್ತಮ ಮಾರ್ಗವಾಗಿದೆ. ವೈ-ಫೈಗೆ ಸಂಪರ್ಕಗೊಂಡಿರುವಾಗ ನಿಮ್ಮ ಮೆಚ್ಚಿನ ಹಾಡು, ಚಲನಚಿತ್ರ ಮತ್ತು ಟಿವಿ ಕಾರ್ಯಕ್ರಮಗಳನ್ನು ಡೌನ್‌ಲೋಡ್ ಮಾಡಬಹುದು ಮತ್ತು ಮೊಬೈಲ್ ಡೇಟಾವನ್ನು ಬಳಸದೆಯೇ ಅವುಗಳನ್ನು ಅನಂತರ ವೀಕ್ಷಿಸಬಹುದು.

7. Lite ಆವೃತ್ತಿಗಳನ್ನು ಬಳಸಿ

ಅಪ್ಲಿಕೇಶನ್‌ಗಳ ಲೈಟ್ ಆವೃತ್ತಿಗಳು ಕಡಿಮೆ ಡೇಟಾವನ್ನು ಬಳಸುತ್ತವೆ. ಅವುಗಳು ಕಡಿಮೆ ಡೇಟಾವನ್ನು ಬಳಸುವಂತೆ ವಿನ್ಯಾಸಗೊಳಿಸಲಾಗಿದೆ. ಉದಾಹರಣೆಗೆ Facebook Lite, Messenger Lite ಮತ್ತು YouTube Go ಮೊದಲಾದವುಗಳು ಮೊಬೈಲ್ ಡೇಟಾವನ್ನು ಕಡಿಮೆ ಬಳಸುತ್ತದೆ.

8. ಹಿನ್ನೆಲೆ ಡೇಟಾ ಬಳಕೆ ನಿರ್ಬಂಧಿಸಿ

ಕೆಲವು ಅಪ್ಲಿಕೇಶನ್‌ಗಳು ಬಳಸದಿದ್ದರೂ ಹಿನ್ನೆಲೆಯಲ್ಲಿ ಡೇಟಾವನ್ನು ಬಳಸುತ್ತವೆ. ಇದನ್ನು ತಡೆಗಟ್ಟಲು ನಿರಂತರ ಸಂಪರ್ಕದ ಅಗತ್ಯವಿಲ್ಲದ ಅಪ್ಲಿಕೇಶನ್‌ಗಳಿಗೆ ಹಿನ್ನೆಲೆ ಡೇಟಾ ಬಳಕೆಯನ್ನು ನಿರ್ಬಂಧಿಸಿ. ಇದು ಡೇಟಾವನ್ನು ಉಳಿಸಲು ಮತ್ತು ಮೊಬೈಲ್ ಬ್ಯಾಟರಿ ಅವಧಿಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ.

Continue Reading

ತಂತ್ರಜ್ಞಾನ

Kishan Bagaria: ಒಂದೇ ಒಂದು ಆ್ಯಪ್​ ಅಭಿವೃದ್ಧಿ ಮಾಡಿ ರಾತ್ರೋರಾತ್ರಿ ಕೋಟ್ಯಾಧೀಶ್ವರನಾದ ಅಸ್ಸಾಂ ಯುವಕ!

Kishan Bagaria: ಮೆಸೇಜಿಂಗ್ ಅಪ್ಲಿಕೇಶನ್ ವೊಂದನ್ನು ಸಿದ್ದ ಪಡಿಸಿದ ಅಸ್ಸಾಂನ ಹಳ್ಳಿಯೊಂದರ 26 ವರ್ಷದ ಯುವಕನಿಗೆ ಅದು ಹೆಸರು ಮತ್ತು ಹಣ ಎರಡನ್ನು ತಂದುಕೊಡುತ್ತದೆ ಎಂಬ ಕನಸು ಕೂಡ ಇರರಲಿಲ್ಲ. ಆದರೆ ಅವನು ಸಿದ್ದಪಡಿಸಿದ ಒಂದು ಆಪ್ ಅವನನ್ನು ರಾತ್ರೋರಾತ್ರಿ ಕೋಟ್ಯಾಧೀಶ್ವರನ್ನಾಗಿ ಮಾಡಿದೆ.

VISTARANEWS.COM


on

By

Kishan Bagaria
Koo

ಮೆಸೇಜಿಂಗ್ ಅಪ್ಲಿಕೇಶನ್ (Messaging App) ಅಭಿವೃದ್ಧಿ ಮಾಡಿದ ಅಸ್ಸಾಂನ (assam) ಹಳ್ಳಿಯೊಂದರ 26 ವರ್ಷದ ಯುವಕ ಈಗ ವಿಶ್ವ ಖ್ಯಾತಿಗಳಿಸಿದ್ದಾನೆ. ಇವನು ತಯಾರಿಸಿದ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಯುಎಸ್ ನ (US) ಟೆಕ್ ದೈತ್ಯ ( tech giant) ಕಂಪೆನಿಯೊಂದು ಬರೋಬ್ಬರಿ 400 ಕೋಟಿ ರುಪಾಯಿಗಿಂತಲೂ ಹೆಚ್ಚು ಮೌಲ್ಯಕ್ಕೆ ಖರೀದಿ ಮಾಡಿದೆ. ಅಸ್ಸಾಂನ ದಿಬ್ರುಗಢದ (Dibrugarh) ಕಿಶನ್ ಬಗಾರಿಯಾ (Kishan Bagaria) ತಾನು ಸೃಷ್ಟಿ ಮಾಡಿದ ಅಪ್ಲಿಕೇಶನ್ ನಿಂದಾಗಿ ತನಗೆ ಜಾಗತಿಕ ಮನ್ನಣೆಯೊಂದಿಗೆ ಖ್ಯಾತಿ ಮತ್ತು ಹಣ ಎರಡು ಸಿಗುತ್ತದೆ ಎಂದು ಊಹೆಯನ್ನೂ ಮಾಡಿರಲಿಲ್ಲ.

ಕಿಶನ್ ಬಗಾರಿಯಾ ಸಿದ್ದಪಡಿಸಿದ Texts.com ಎಂಬ ಹೆಸರಿನ ಸಿಂಗಲ್​ ಪ್ಲಾಟ್‌ಫಾರ್ಮ್ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಯುಎಸ್ ನ ಟೆಕ್ ದೈತ್ಯ (US tech giant) ಆಟೋಮ್ಯಾಟಿಕ್ (Automattic) 50 ಮಿಲಿಯನ್‌ ಡಾಲರ್ ಗೆ ಖರೀದಿ ಮಾಡಿದೆ. ಈ ಕಂಪೆನಿಯು ಮ್ಯಾಟ್ ಮುಲ್ಲೆಂಗ್ ಅವರ ಒಡೆತನದಲ್ಲಿದೆ. ಇವರು WordPress.com ಮತ್ತು Tumblr ನ ಮಾಲೀಕರಾಗಿದ್ದಾರೆ.

ಇದನ್ನೂ ಓದಿ: WhatsApp Update: ವಾಟ್ಸ್ ಆಪ್ ನಲ್ಲಿ ಮತ್ತೊಂದು ಹೊಸ ಫೀಚರ್! ಫೋಟೊ, ವಿಡಿಯೊ ಶೇರಿಂಗ್ ಇನ್ನೂ ಸುಲಭ

Kishan Bagaria


ಯಾರು ಈ ಕಿಶನ್ ?

ಉದ್ಯಮಿ ಮಹೇಂದ್ರ ಬಗಾರಿಯಾ ಮತ್ತು ನಮೀತಾ ದಂಪತಿಯ ಮಗನಾಗಿರುವ ಕಿಶನ್ ದಿಬ್ರುಗಢದ ಥಾನಾ ಚರಿಯಾಲಿ ನಿವಾಸಿ.ಕಂಪೆನಿಯು Texts.com ಖರೀದಿ ಮಾಡಿದ ಬಳಿಕ ಅವರು ರಾತ್ರೋರಾತ್ರಿ ಕೋಟ್ಯಾಧೀಶ್ವರನಾಗಿದ್ದಾರೆ. ಅವರ ಆಪ್ ಸುಮಾರು 416 ಕೋಟಿ ರೂಪಾಯಿ ಗೆ ಮಾರಾಟವಾಗಿದೆ. ಮಾತ್ರವಲ್ಲ ಕಿಶನ್ ನ ಆಪ್ ಅನ್ನು ಖರೀದಿ ಮಾಡಿರುವ ಆಟೋಮ್ಯಾಟಿಕ್ ಕಂಪೆನಿ Texts.com ನ ಕಾರ್ಯಚಟುವಟಿಕೆಗಳ ಉಸ್ತುವಾರಿಯನ್ನು ಅವರು ವಹಿಸಿಕೊಂಡಿದ್ದಾರೆ.

ಹೇಗಿತ್ತು ಪಯಣ ?

ಕಿಶನ್ ಕಂಪ್ಯೂಟರ್ ಮತ್ತು ಇಂಟರ್ನೆಟ್ ಸಂಪರ್ಕವನ್ನು ಹೊರತುಪಡಿಸಿ ಬೇರೆ ಯಾವುದೇ ತಂತ್ರಜ್ಞಾನ ಅವರ ಬಳಿ ಇರಲಿಲ್ಲ. ವಿಂಡೋಸ್ ಅಪ್ಲಿಕೇಶನ್‌ ನಲ್ಲಿ ಅವರು ತಮ್ಮ ಪ್ರಯೋಗಗಳನ್ನು ಮಾಡುತ್ತಿದ್ದರು. ಇವರ ಸಾಧನೆಯ ಹಾದಿ ಉದಯೋನ್ಮುಖ ಅಪ್ಲಿಕೇಶನ್ ಡೆವಲಪರ್‌ಗಳಿಗೆ ದಾರಿದೀಪವಾಗಿದೆ.

ಇತರ ಆಪ್ ಗಳಿಗಿಂತ ಹೇಗೆ ಭಿನ್ನ ?

Texts.com ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಾದ Instagram, Twitter, Messenger, WhatsApp ಗಳಂತೆ ಕಾರ್ಯ ನಿರ್ವಹಿಸಲಿದ್ದು, ಇದನ್ನೂ ಅದೇ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.
Texts.com ಸಂದೇಶ ಕಳುಹಿಸುವುದರಲ್ಲಿ ಕ್ರಾಂತಿ ಎಂದೇ ಹೇಳಬಹದು.

ಇತ್ತೀಚೆಗೆ ಸ್ಮಾರ್ಟ್‌ಫೋನ್‌ಗಳು ಹಲವಾರು ಮೆಸೇಜಿಂಗ್ ಅಪ್ಲಿಕೇಶನ್‌ ಗಳನ್ನು ಹೊಂದಿದೆ. ಸಾಮಾನ್ಯವಾಗಿ ಸಂದೇಶ ಕಳುಹಿಸುವ ಆಪ್ ಗಳು ವಿವಿಧ ಪ್ಲಾಟ್‌ಫಾರ್ಮ್‌ಗಳಿಂದ ಸಂದೇಶಗಳನ್ನು ಒಂದು ಅರ್ಥಗರ್ಭಿತ ಇಂಟರ್ಫೇಸ್‌ಗೆ ಮನಬಂದಂತೆ ಸಂಯೋಜಿಸುತ್ತದೆ. ಆದರೆ ಇದು ಕೇವಲ ಅಪ್ಲಿಕೇಶನ್ ಆಗಿಲ್ಲ. ವಿವೇಚನಾಯುಕ್ತ ಸಂದೇಶ ವೀಕ್ಷಣೆ ಮತ್ತು ಆರಂಭದಿಂದ ಅಂತ್ಯದ ವರೆಗೆ ಗೂಢಲಿಪೀಕರಣದಂತಹ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಡಿಜಿಟಲ್ ಸಂವಹನದಲ್ಲಿ ಗೌಪ್ಯತೆ ಮತ್ತು ಸರಳತೆಯನ್ನು ಖಾತ್ರಿಪಡಿಸುತ್ತದೆ. ಎಲ್ಲ ಸಂದೇಶಗಳು ಒಂದೇ ವೇದಿಕೆಯಡಿ ಲಭ್ಯವಾಗುವಂತೆ ಮಾಡುತ್ತದೆ.

Kishan Bagaria


ಭವಿಷ್ಯ ಹೇಗಿದೆ ?

ಆಟೋಮ್ಯಾಟಿಕ್‌ನ ಬೆಂಬಲದೊಂದಿಗೆ, ಕಿಶನ್ ಅವರ Texts.com ಜಾಗತಿಕ ಸಂವಹನ ಸೇವೆಗಳೊಂದಿಗೆ ಲಭ್ಯವಾಗುತ್ತಿದೆ. ಡಿಜಿಟಲ್ ಸಂವಹನವನ್ನು ಸುಲಭವಾಗಿ ಮತ್ತು ಸುರಕ್ಷಿತವಾಗಿಸಲು ಅವರು ನಿರಂತರ ಬದ್ಧತೆಯನ್ನು ಒತ್ತಿಹೇಳುತ್ತಿರುವುದರಿಂದ ಮುಂದಿನ ದಿನಗಳಲ್ಲಿ Texts.com ಮತ್ತಷ್ಟು ವಿಕಸನಗೊಳ್ಳುವುದು. ಇದರಲ್ಲಿ ಇನ್ನಷ್ಟು ಅದ್ಭುತ ವೈಶಿಷ್ಟ್ಯಗಳನ್ನು ಪರಿಚಯಿಸುವ ಭರವಸೆಯನ್ನು ಅವರು ನೀಡುತ್ತಾರೆ.

ಕಿಶನ್ ಬಗ್ಗೆ ಈಗ ಜಾಗತಿಕವಾಗಿ ಸಾಕಷ್ಟು ನಿರೀಕ್ಷೆಗಳು ಮೂಡಿದೆ. ಅವರು ಮುಂದೆ ಏನನ್ನು ಆವಿಷ್ಕರಿಸುತ್ತಾರೆ ಎಂದು ಎದುರು ನೋಡುತ್ತಿರುವುದಾಗಿ ಟೆಕ್ ದೈತ್ಯ ಕಂಪೆನಿಗಳು ಹೇಳಿವೆ. ಅವರ ಕಥೆ ಈಗ ಡಿಜಿಟಲ್ ವಿಕಾಸದ ಸಾಹಸಗಾಥೆಯಲ್ಲಿ ಸೇರಿಕೊಂಡಿದೆ.

Continue Reading

ತಂತ್ರಜ್ಞಾನ

WhatsApp Update: ವಾಟ್ಸ್ ಆಪ್ ನಲ್ಲಿ ಮತ್ತೊಂದು ಹೊಸ ಫೀಚರ್! ಫೋಟೊ, ವಿಡಿಯೊ ಶೇರಿಂಗ್ ಇನ್ನೂ ಸುಲಭ

WhatsApp Update: ವಿಶ್ವದ ಅತೀ ಹೆಚ್ಚು ಮಂದಿ ಬಳಸಲ್ಪಡುತ್ತಿರುವ ವಾಟ್ಸ್ ಆಪ್ ನಲ್ಲಿ ಹಲವು ಪ್ರಯೋಗಗಳು ನಡೆಯುತ್ತಲೇ ಇದೆ. ಶೀಘ್ರದಲ್ಲಿ ಹೊಸ ಫೀಚರ್ ಒಂದು ಇದರಲ್ಲಿ ಸೇರಿಕೊಳ್ಳಲಿದ್ದು, ಗ್ರಾಹಕರಿಗೆ ಇದು ಖಂಡಿತಾ ಇಷ್ಟವಾಗುವುದು.

VISTARANEWS.COM


on

By

whatsapp update
Koo

ಪ್ರತಿಯೊಬ್ಬರ ಮೊಬೈಲ್ ನಲ್ಲೂ (mobile) ಈಗ ವಾಟ್ಸ್ ಆಪ್ (whatsapp) ಇದ್ದೇ ಇರುತ್ತೆ. ಬೆಳಗ್ಗೆ ಎದ್ದು ವಾಟ್ಸ್ ಆಪ್ ನೋಡದೇ ಇದ್ದರೆ ದಿನದ ಆರಂಭವೇ ಆಗೋದಿಲ್ಲ ಎನ್ನುವಷ್ಟು ಇದು ಈಗ ಎಲ್ಲರಿಗೂ ಅತ್ಯಾಪ್ತವಾಗಿದೆ. ಭಾರೀ ಸಂಖ್ಯೆಯಲ್ಲಿ ಗ್ರಾಹಕರನ್ನು ಹೊಂದಿದ್ದರೂ ತನ್ನ ಗ್ರಾಹಕರನ್ನು ಹಿಡಿದಿಡಲು, ಹೊಸ ಗ್ರಾಹಕರನ್ನು (new customer) ತನ್ನತ್ತ ಸೆಳೆಯಲು ವಾಟ್ಸ್ ಆಪ್ ನಿರಂತರ ಅಪ್ಡೇಟ್ ಗಳನ್ನು (WhatsApp Update) ನಡೆಸುತ್ತಲೇ ಇದೆ.

ಭಾರತದ (india) ಅತ್ಯಂತ ಜನಪ್ರಿಯ ಮೆಸೇಜಿಂಗ್ ಆಪ್ ವಾಟ್ಸ್ ಆಪ್ ವಿಶ್ವದಾದ್ಯಂತ (world) ಲಕ್ಷಾಂತರ ಗ್ರಾಹಕರನ್ನು ಹೊಂದಿದೆ. ಸಂದೇಶ (message), ಕಾಲ್ (call) ಮೂಲಕ ಪರಸ್ಪರ ಸಂಪರ್ಕ ಸಾಧಿಸಲು ನೆರವಾಗುವ ಈ ಆಪ್ ಇತ್ತೀಚಿನ ದಿನಗಳಲ್ಲಿ ಗ್ರಾಹಕರಿಗೆ ಮನೋರಂಜನೆಯ ಜೊತೆಗೆ ಹಲವು ವಿಶೇಷತೆಗಳನ್ನು ಒದಗಿಸುವ ಪ್ರಯತ್ನ ಮಾಡುತ್ತಿದೆ.

ಏನು ಹೊಸತು?

ಮೆಟಾ ಮಾಲೀಕತ್ವದ ಕಂಪನಿಯು ಕಳೆದ ಕೆಲವು ತಿಂಗಳುಗಳಲ್ಲಿ ಒಟ್ಟಾರೆ ಬಳಕೆದಾರರ ಅನುಭವವನ್ನು ಹೆಚ್ಚಿಸಲು ಹಲವಾರು ಹೊಸ ವೈಶಿಷ್ಟ್ಯಗಳನ್ನು ಪ್ರಕಟಿಸಿದೆ. ಈಗ ಇದರಲ್ಲಿ ಮತ್ತೊಂದು ವೈಶಿಷ್ಟ್ಯ ಸೇರ್ಪಡೆಯಾಗಿದೆ. ಅದು ಬಳಕೆದಾರರಿಗೆ ಡಾಕ್ಯುಮೆಂಟ್‌ಗಳನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Electoral Bonds: ಆರ್‌ಟಿಐ ಅನ್ವಯ ಚುನಾವಣಾ ಬಾಂಡ್‌ ಮಾಹಿತಿ ಕೊಡಲ್ಲ ಎಂದ ಎಸ್‌ಬಿಐ!‌

ಡಬ್ಲ್ಯೂ ಎ ಬೀಟಾ ಮಾಹಿತಿ ಪ್ರಕಾರ ವಾಟ್ಸ್ ಆಪ್ ಆಂಡ್ರಾಯ್ಡ್ ಫೋನ್ ಗಳಿಗಾಗಿ ಹೊಸ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ. ಇದರಲ್ಲಿ ಸಂದೇಶ ಕಳುಹಿಸುವ ಅಪ್ಲಿಕೇಶನ್, ಡಾಕ್ಯುಮೆಂಟ್ ಪೂರ್ವವೀಕ್ಷಣೆಗಳನ್ನು ಸೇರಿಸುವ ಕಲ್ಪನೆಯ ಬಗ್ಗೆ ಯೋಚಿಸುತ್ತಿದೆ.

ಅಂದರೆ ಇದರಲ್ಲಿ ಡಾಕ್ಯುಮೆಂಟ್ ಅನ್ನು ಹಂಚಿಕೊಂಡಾಗ ಅದನ್ನು ತೆರೆಯುವ ಮೊದಲು ಅದರ ಸಣ್ಣ ಚಿತ್ರ ಕಾಣುತ್ತದೆ. ಇದು ಚಾಟ್‌ನಲ್ಲಿ ಸರಿಯಾದ ಡಾಕ್ಯುಮೆಂಟ್ ಅನ್ನು ಹುಡುಕಲು ಸುಲಭಗೊಳಿಸುತ್ತದೆ. ಅಂದರೆ ಬಂದ ಮೆಸೇಜ್ ಅನ್ನು ತೆರೆಯದೆಯೇ ಅದು ಹೇಗೆ ಕಾಣುತ್ತದೆ ಎಂಬುದನ್ನು ತಿಳಿಯಬಹುದು.


ಯಾರಿಗೆ ಹೆಚ್ಚು ಉಪಯುಕ್ತ ?

ವಿಶೇಷವಾಗಿ ಫೋಟೋ, ವಿಡಿಯೋ ಗಳನ್ನು ಹಂಚಿಕೊಳ್ಳುತ್ತಿರುವಾಗ ಇದು ಹೆಚ್ಚು ಉಪಯುಕ್ತ. ಇದರ ಪೂರ್ವವೀಕ್ಷಣೆಗಳು ಡಾಕ್ಯುಮೆಂಟ್ ಅನ್ನು ತೆರೆಯದೆಯೇ ಅದರ ವಿಷಯಗಳನ್ನು ನಿರ್ಣಯಿಸಲು ಅವಕಾಶ ಸಿಗುತ್ತದೆ.

ಪ್ರಸ್ತುತ ವಾಟ್ಸ್ ಆಪ್ ನಲ್ಲಿ ಫೋಟೋ ಅಥವಾ ವಿಡಿಯೋ ವನ್ನು ಡಾಕ್ಯುಮೆಂಟ್‌ನಂತೆ ಹಂಚಿಕೊಂಡರೆ ಸ್ವೀಕರಿಸುವವರು ಅದನ್ನು ಡೌನ್‌ಲೋಡ್ ಮಾಡದ ಹೊರತು ಅದನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಆದರೆ ಈ ವೈಶಿಷ್ಟ್ಯವು ಈ ಸಮಸ್ಯೆಯನ್ನು ಪರಿಹರಿಸುತ್ತದೆ.

ಚಾಟಿಂಗ್ ನಲ್ಲೂ ಹೊಸ ಸೇರ್ಪಡೆ

ಇದರೊಂದಿಗೆ ಸಂಪರ್ಕಗಳನ್ನು ಚಾಟ್ ಮಾಡಲು ಸೂಚಿಸುವ ವೈಶಿಷ್ಟ್ಯದಲ್ಲಿ ವಾಟ್ಸ್ ಆಪ್ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಬಳಕೆದಾರರು ದೀರ್ಘಕಾಲದಿಂದ ಸಂಭಾಷಣೆ ನಡೆಸದೇ ಇರುವವರನ್ನು ಗುರುತಿಸಲು ಪ್ರಯತ್ನ ನಡೆಸಲಾಗುತ್ತಿದೆ.

ಈ ವೈಶಿಷ್ಟ್ಯವು ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ ಎನ್ನಲಾಗುತ್ತಿತ್ತು. ಆದರೆ ಇತ್ತೀಚಿನ ಮಾಹಿತಿ ಪ್ರಕಾರ ಇದು iOS ಬಳಕೆದಾರರಿಗೂ ಸಿಗಲಿದೆ.


ಡಬ್ಲ್ಯೂ ಎ ಬೀಟಾ ಮಾಹಿತಿ ಹಂಚಿಕೊಂಡ ಸ್ಕ್ರೀನ್‌ಶಾಟ್ ಪ್ರಕಾರ ಇದು ಸಂವಹನ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಚಾಟ್‌ಗಳ ಪಟ್ಟಿಯ ಕೆಳಭಾಗದಲ್ಲಿ ಅನುಕೂಲಕರವಾಗಿ ಇರಿಸಲಾಗುತ್ತದೆ. ಈ ವೈಶಿಷ್ಟ್ಯವು ಸಂದೇಶ ಕಳುಹಿಸಲು ಅಡ್ಡಿಯಾಗದಂತೆ ಹೊಸ ಸಂಭಾಷಣೆಗಳಿಗೆ ಸುಲಭ ಪ್ರವೇಶವನ್ನು ನೀಡುತ್ತದೆ.

ಹೊಸ ಚಾಟ್‌ಗಳನ್ನು ಪ್ರಾರಂಭಿಸಲು ಸಲಹೆಗಳನ್ನು ಸ್ವೀಕರಿಸದಿರಲು ಆದ್ಯತೆ ನೀಡಲಾಗುತ್ತದೆ. ಇದಕ್ಕಾಗಿ ಬಳಕೆದಾರರು ಚಾಟ್‌ಗಳ ಪಟ್ಟಿಯ ಕೆಳಭಾಗದಲ್ಲಿರುವ ಮೀಸಲಾದ ವಿಭಾಗವನ್ನು ಮುಚ್ಚಬಹುದು.

ಡಬ್ಲ್ಯೂ ಎ ಬೀಟಾ ಮಾಹಿತಿ ಅಧಿಕೃತವಾಗಿದ್ದರೂ ಇದನ್ನು ಈವರೆಗೆ ವಾಟ್ಸ್ ಆಪ್ ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಶೀಘ್ರದಲ್ಲೇ ಘೋಷಣೆಯಾಗುವ ಸಾಧ್ಯತೆ ಇದೆ.

Continue Reading

Latest

Canadian brand: ಭಾರತೀಯ ವ್ಯಕ್ತಿ ಹೆಸರಿಗೆ ಅಪಹಾಸ್ಯ; ಟೀಕೆ ಬಳಿಕ ಕ್ಷಮೆಕೋರಿದ ಕೆನಡಾ ಕಂಪನಿ!

Canadian brand: ಕೆನಡಾದ ಪ್ರಸಿದ್ಧ ಕಂಪನಿಯೊಂದು ಭಾರತೀಯ ಮೂಲದ ವ್ಯಕ್ತಿಯ ಉಪನಾಮದ ಬಗ್ಗೆ ಅಪಹಾಸ್ಯ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಯನ್ನು ಎದುರಿಸಿದ ಬಳಿಕ ಇದೀಗ ಕ್ಷಮೆಯಾಚಿಸಿ 10 ಸಾವಿರ ಡಾಲರ್ ಪರಿಹಾರ ಘೋಷಿಸಿದೆ.

VISTARANEWS.COM


on

By

Canadian Brand
Koo

ಕೆನಡಾ: ಭಾರತೀಯ ಮೂಲದ (Indian Origin) ವ್ಯಕ್ತಿಯ ಉಪನಾಮದ (Surname) ಬಗ್ಗೆ ಅಪಹಾಸ್ಯ ಮಾಡಿದ ಐಫೋನ್ , ಮ್ಯಾಕ್‌ಬುಕ್ ಸ್ಕಿನ್‌ಗಳಿಗೆ ಹೆಸರುವಾಸಿಯಾಗಿರುವ ಕೆನಡಾದಲ್ಲಿ (Canadian brand) ಪ್ರಧಾನ ಕಛೇರಿ ಹೊಂದಿರುವ ಕಂಪನಿ ದಿಬ್ರ್ಯಾಂಡ್ (Dbrand) ಈಗ ಆ ವ್ಯಕ್ತಿಯ ಕ್ಷಮೆಯಾಚಿಸಿ 10,000 ಡಾಲರ್ ಪರಿಹಾರ ನೀಡುವುದಾಗಿ ಹೇಳಿದೆ.

ನೆದರ್‌ಲ್ಯಾಂಡ್ಸ್‌ ನಲ್ಲಿ( Netherlands) ಕೆಲಸ ಮಾಡುತ್ತಿರುವ ಪುಣೆ (pune) ಮೂಲದ ಭುವನ್ ಚಿತ್ರಾಂಶ್ (Bhuwan Chitransh) ಅವರು ದಿಬ್ರ್ಯಾಂಡ್ ನಿಂದ ಮ್ಯಾಕ್‌ಬುಕ್ ಸ್ಕಿನ್ ಖರೀದಿ ಮಾಡಿದ್ದರು. ಆದರೆ ಮ್ಯಾಕ್ ಬುಕ್ ಸ್ಕಿನ್ ಖರೀದಿ ಮಾಡಿದ ಎರಡೇ ತಿಂಗಳಲ್ಲಿ ಅದರ ಮೇಲ್ಮೈ ಬಣ್ಣ ಬದಲಾಗಿದೆ. ಈ ಬಗ್ಗೆ ಆಕ್ಷೇಪಿಸಿ ಅವರು ಸಾಮಾಜಿಕ ಜಾಲತಾಣದ ಮೂಲಕ ದೂರು ನೀಡಿದ್ದರು.

ಇದನ್ನೂ ಓದಿ: Money Guide: ಎಚ್‌ಡಿಎಫ್‌ಸಿಯಿಂದ ಎಸ್‌ಬಿಐವರೆಗೆ; ಫಿಕ್ಸೆಡ್‌ ಡೆಪಾಸಿಟ್‌ಗೆ ಶೇ. 7ಕ್ಕಿಂತ ಅಧಿಕ ಬಡ್ಡಿ ನೀಡುವ ಬ್ಯಾಂಕ್‌ಗಳಿವು

ಉಪನಾಮದ ಬಗ್ಗೆ ಅಪಹಾಸ್ಯ

ಇದಕ್ಕೆ ಪ್ರತಿಯಾಗಿ ಕಂಪನಿ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿ ನಿಮ್ಮ ಹೆಸರಿನ ಕೊನೆಯಲ್ಲಿ ರಾಶ್ ಎಂದಿದೆ. ಹೀಗಾಗಿ ಎಚ್ಚರವಾಗಿರಿ ಎಂದು ಭಾರತೀಯ ಟೆಕ್ಕಿಗೆ ದಿಬ್ರ್ಯಾಂಡ್ ಪ್ರತಿಕ್ರಿಯಿಸಿದೆ.


ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಮ್ಯಾಕ್ ಬುಕ್ ನ ಮೇಲ್ಮೈ ಅನ್ನು ಜನಾಂಗೀಯವಾಗಿ ನೋಡಲಾಗಿದೆ ಎಂದು ಹಲವಾರು ಮಂದಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಅನೇಕ ಬಳಕೆದಾರರು ಕಂಪನಿಯ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.

ಕ್ಷಮೆಗೆ ಆಗ್ರಹ

ಅನೇಕರು ಕಂಪೆನಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದು, 80 ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದ್ದು, 2,800 ಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದ ಬಳಿಕ ದಿಬ್ರ್ಯಾಂಡ್ ವಿವರವಾದ ಪ್ರತಿಕ್ರಿಯೆಯೊಂದಿಗೆ ಬುಧವಾರ ಪ್ರತಿಕ್ರಿಯೆ ನೀಡಿದೆ.


ತಮ್ಮ ತಪ್ಪನ್ನು ಒಪ್ಪಿಕೊಂಡ ಕಂಪನಿ, ಅದು ತಕ್ಷಣದ ಪ್ರತಿಕ್ರಿಯೆಯಾಗಿದೆ. ನಾವು ಒಬ್ಬ ವ್ಯಕ್ತಿಯ ಹೆಸರನ್ನು ಅಪಹಾಸ್ಯ ಮಾಡಿದ್ದೆವು. ಇದು ದೊಡ್ಡ ಎಡವಟ್ಟು ಆಗಿತ್ತು. ನಾವು ನೇರವಾಗಿ ಅವರಿಗೆ ಕ್ಷಮೆಯಾಚಿಸಿದ್ದೇವೆ ಮತ್ತು ಅವರಿಗೆ 10,000 ಡಾಲರ್ ಪರಿಹಾರವನ್ನೂ ನೀಡಿದ್ದೇವೆ. ಎಂದು ಕಂಪನಿ ಹೇಳಿದೆ.

ಹಾಸ್ಯ ಮಾಡುವುದನ್ನು ನಿಲ್ಲಿಸುವುದಿಲ್ಲ

ಕಳೆದ ಒಂದು ದಶಕದಿಂದ ಸಾಮಾಜಿಕ ಮಾಧ್ಯಮದಲ್ಲಿ ನಾವು ಗ್ರಾಹಕರಿಗೆ ತಮಾಷೆ ಮಾಡುತ್ತಿದ್ದೇವೆ. ಇದನ್ನು ನಾವು ನಿಲ್ಲಿಸುವುದಿಲ್ಲ. ಇದರಲ್ಲಿ ಮುಂದಿನ ಬಾರಿ 10,000 ಡಾಲರ್ ಪಡೆಯುವವರು ನೀವಾಗಬಹುದು ಎಂದು ಕಂಪನಿ ತಿಳಿಸಿದೆ.

ಕಂಪನಿ ಮಾಡಿರುವ ಟ್ವಿಟ್ ಅನ್ನು ಭುವನ್ ಚಿತ್ರಾಂಶ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಬಿಜೆಪಿಯನ್ನು ಟ್ಯಾಗ್ ಮಾಡಿದ್ದಾರೆ. ಕೆನಡಾದ ಬ್ರ್ಯಾಂಡ್‌ನಿಂದ ಅವರು ಹೇಗೆ ಟೀಕೆಗೆ ಗುರಿಯಾಗಿದ್ದಾರೆ ಎಂಬುದನ್ನು ಹೇಳಿದ್ದಾರೆ. ಈ ಕಾಮೆಂಟ್ ಭಾರತೀಯ ಗ್ರಾಹಕರ ಕಡೆಗೆ ಬ್ರ್ಯಾಂಡ್‌ನ ಅಮೂಲ್ಯವಾದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.

Continue Reading
Advertisement
Virat Kohli
ಪ್ರಮುಖ ಸುದ್ದಿ42 seconds ago

Virat kohli : ಅಂಪೈರ್​ಗಳ ಕೈ ಕುಲುಕಲೂ ನಿರಾಕರಿಸಿದ್ದ ವಿರಾಟ್​ ಕೊಹ್ಲಿ; ವಿಡಿಯೊ ಇದೆ

The Legend of Hanuman
ಸಿನಿಮಾ8 mins ago

The Legend of Hanuman: ಹನುಮ ಜಯಂತಿಯಂದೇ ‘ದಿ ಲೆಜೆಂಡ್ ಆಫ್ ಹನುಮಾನ್’ ಸೀಸನ್ 4 ಘೋಷಣೆ

HD Kumaraswamy challenges Congress to give Cauvery guarantee to Mandya
Lok Sabha Election 202415 mins ago

HD Kumaraswamy: ಜನರ ಕಣ್ಣಿಗೆ ಮಣ್ಣೆರಚಬೇಡಿ; ಮಂಡ್ಯಕ್ಕೆ ಕಾವೇರಿ ಗ್ಯಾರಂಟಿ ಕೊಡಿ: ಕಾಂಗ್ರೆಸ್‌ಗೆ ಎಚ್‌ಡಿಕೆ ಸವಾಲು

Fantasy Gaming
ಕ್ರೀಡೆ35 mins ago

Fantasy Gaming : 8ನೇ ಕ್ಲಾಸ್​ ಫೇಲ್​, ಕ್ರಿಕೆಟ್​ ಗೊತ್ತಿಲ್ಲ; ಆದ್ರೂ ಒಲಿಯಿತು ಕ್ರಿಕೆಟ್​ ಫ್ಯಾಂಟಸಿ ಗೇಮ್​ನಲ್ಲಿ 1.5 ಕೋಟಿ ರೂ!

Shivasharane Akkamahadevi Jayanti Celebration and Shivanubhava programme at Soraba
ಶಿವಮೊಗ್ಗ35 mins ago

Shivamogga News: ಶಿವಶರಣೆ ಅಕ್ಕಮಹಾದೇವಿ ವಿಚಾರಧಾರೆ, ಚಿಂತನೆ ಸರ್ವಕಾಲಕ್ಕೂ ಪ್ರಸ್ತುತ: ಶ್ರೀ ಸಿದ್ದ ವೃಷಭೇಂದ್ರ ಸ್ವಾಮೀಜಿ

World Book and Copyright Day celebration at Kottur
ವಿಜಯನಗರ37 mins ago

Vijayanagara News: ಕೊಟ್ಟೂರಿನಲ್ಲಿ ವಿಶ್ವ ಪುಸ್ತಕ, ಕೃತಿ ಸ್ವಾಮ್ಯ ದಿನ ಆಚರಣೆ

Minister Sharanbassappa Gowda Darshanpur Election campaign
ಯಾದಗಿರಿ38 mins ago

Lok Sabha Election 2024: ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿಯನ್ನು ಗೆಲ್ಲಿಸಿ: ಸಚಿವ ದರ್ಶನಾಪುರ

Viral News
ವೈರಲ್ ನ್ಯೂಸ್41 mins ago

Viral News: ರಾಮನ ಚಿತ್ರವಿರುವ ಪ್ಲೇಟ್‌ನಲ್ಲಿ ನಾನ್‌ವೆಜ್‌ ಬಿರಿಯಾನಿ; ಅಂಗಡಿ ಮಾಲೀಕ ಅರೆಸ್ಟ್‌

DK ShivaKumar
ಕರ್ನಾಟಕ50 mins ago

DK Shivakumar: ಮತದಾರರಿಗೆ ಬೆದರಿಕೆ ಪ್ರಕರಣ; ಎಫ್ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಡಿಕೆಶಿ ಅರ್ಜಿ

Zero Shadow Day
ವಿಜ್ಞಾನ1 hour ago

Zero Shadow Day: ನಾಳೆ ಬೆಂಗಳೂರಿನಲ್ಲಿ ನೆರಳೇ ಮೂಡುವುದಿಲ್ಲ; ಅದ್ಯಾಕೆ? ಏನಿದು ʼಶೂನ್ಯ ನೆರಳಿನ ದಿನʼ ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ15 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು1 day ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ1 day ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು1 day ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು1 day ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌