ರಾಕೆಟ್‌ ಉಡಾಯಿಸುವಷ್ಟು ಶಕ್ತಿಶಾಲಿ ಜೈವಿಕ ಇಂಧನ ಬ್ಯಾಕ್ಟೀರಿಯಾದಿಂದ ಸೃಷ್ಟಿ - Vistara News

ತಂತ್ರಜ್ಞಾನ

ರಾಕೆಟ್‌ ಉಡಾಯಿಸುವಷ್ಟು ಶಕ್ತಿಶಾಲಿ ಜೈವಿಕ ಇಂಧನ ಬ್ಯಾಕ್ಟೀರಿಯಾದಿಂದ ಸೃಷ್ಟಿ

ಬ್ಯಾಕ್ಟೀರಿಯಾದಿಂದ ಸಿದ್ಧಪಡಿಸಲಾದ ಅಣುವಿನಿಂದ ಜೈವಿಕ ಇಂಧನ ತಯಾರಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ರಾಕೆಟ್‌ ಉಡಾವಣೆಗೂ ಇದನ್ನು ಬಳಸಬಹುದಂತೆ.

VISTARANEWS.COM


on

bio fuel
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬ್ಯಾಕ್ಟೀರಿಯಾ ನಿರ್ಮಿತ ಅಣುವೊಂದರಿಂದ ಪ್ರಬಲವಾದ ಜೈವಿಕ ಇಂಧನವನ್ನು ತಯಾರಿಸುವುದರಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ರಾಕೆಟ್‌ಗಳನ್ನೂ ಉಡಾಯಿಸುವಷ್ಟು ಕಾರ್ಯಕ್ಷಮತೆ ಈ ಜೈವಿಕ ಇಂಧನಕ್ಕಿದೆ ಎಂದು ಹೇಳಲಾಗಿದೆ. ಅಮೆರಿಕದ ಲಾರೆನ್ಸ್‌ ಬರ್ಕಲಿ ರಾಷ್ಟ್ರೀಯ ಪ್ರಯೋಗಾಲಯದ ನೇತೃತ್ವದಲ್ಲಿ ಜೈವಿಕ ಇಂಧನ ತಜ್ಞರ ತಂಡವೊಂದು ಈ ನಿಟ್ಟಿನಲ್ಲಿ ಪ್ರಯೋಗಶೀಲವಾಗಿದ್ದು, ಸ್ಟ್ರೆಪ್ಟೋಮೈಸಸ್‌ ಬ್ಯಾಕ್ಟೀರಿಯಾದಿಂದ ನಿರ್ಮಿತವಾದ ಶಿಲೀಂಧ್ರರೋಧಕ ಅಣುವೊಂದರಿಂದ ಈ ಇಂಧನವನ್ನು ತಯಾರಿಸಲಾಗಿದೆ. ಇಂದಿನ ದಿನಗಳಲ್ಲಿ ಉಪಯೋಗಿಸುತ್ತಿರುವ ಯಾವ ಪ್ರಬಲ ಇಂಧನಗಳಿಗೂ, ಉಪಗ್ರಹ ಇಂಧನಗಳಿಗೂ ಸೇರಿದಂತೆ, ಕಡಿಮೆ ಇಲ್ಲದಷ್ಟು ಶಕ್ತಿ ಸಾಂದ್ರತೆ ಈ ಜೈವಿಕ ಇಂಧನದಲ್ಲಿರುವುದನ್ನು ಗುರುತಿಸಲಾಗಿದೆ.

ʻಈ ಜೈವಿಕ ಸಂಶ್ಲೇಷಣೆಯ ಮಾರ್ಗ ಅತ್ಯಂತ ಸ್ವಚ್ಛ ಮತ್ತು ಪರಿಸರ ಸ್ನೇಹಿ. ಇದಕ್ಕಿಂತ ಮೊದಲು, ಇಷ್ಟೊಂದು ಕಾರ್ಯಕ್ಷಮತೆಯ ಇಂಧನವನ್ನು ಸಂಶ್ಲೇಷಿಸುವುದಕ್ಕೆ ಪೆಟ್ರೋಲಿಯಂ ಬಳಸಿ, ಕಲುಷಿತ ಮಾರ್ಗಗಳಿಂದ ಮಾತ್ರವೇ ಸಾಧ್ಯವಿತ್ತುʼ ಎಂದು ಈ ಯೋಜನೆಯ ಮುಖ್ಯಸ್ಥರಾಗಿರುವ ಜೇಯ್‌ ಕೀಸ್ಲಿಂಗ್‌ ತಿಳಿಸಿದ್ದಾರೆ. ʻಈ ಇಂಧನವನ್ನು ತಯಾರಿಸುವುದಕ್ಕೆ ಅಗತ್ಯವಾದ ಬ್ಯಾಕ್ಟೀರಿಯಾಗಳು ಸಸ್ಯಾಹಾರಿಗಳು. ಇಂಥ ಇಂಧನವನ್ನು ಸುಡುವುದರಿಂದ ಯಾವ ಪೆಟ್ರೋಲಿಯಂ ಉತ್ಪನ್ನಗಳನ್ನು ಉರಿಸುವುದಕ್ಕಿಂತಲೂ ಅತಿ ಕಡಿಮೆ ಪ್ರಮಾಣದ ಹಸಿರುಮನೆ ಅನಿಲಗಳು ವಾತಾವರಣಕ್ಕೆ ಸೇರುತ್ತವೆʼ ಎಂಬುದು ಅವರ ಅಭಿಪ್ರಾಯ.

ಈ ಬಗೆಗಿನ ತಾಂತ್ರಿಕ ಪರಿಕರಗಳನ್ನು ವಿವರಿಸಿದ ಅವರು, ಉಪಗ್ರಹ ಇಂಧನವಾಗಿ ಬಳಸಲು ಇದು ಅನುಕೂಲಕರವಾಗಿದೆ. ಈ ಇಂಧನಕ್ಕೆ ಅಗತ್ಯವಾಗಿ ಬೇಕಾದ್ದು ಪಾಲಿಸೈಕ್ಲೋಪ್ರೊಪನೇಟೆಡ್‌ ಫ್ಯಾಟಿಆಸಿಡ್‌ ಮಿಥೈಲ್‌ ಎಸ್ಟರ್ಸ್‌ (ಪಿಒಪಿ-ಎಫ್‌ಎಎಂಇ) ಅಣುಗಳು. ಇದಕ್ಕಾಗಿ ಸ್ಟ್ರೆಪ್ಟೋಮೈಸಸ್‌ ಕುಟುಂಬದ ಬ್ಯಾಕ್ಟೀರಿಯಾಗಳ ಮೇಲೆ ಅಧ್ಯಯನ ನಡೆಸಿದಾಗ, ಎಸ್‌. ಆಲ್ಬಿರೆಟಿಕ್ಯುಲಿ ಸ್ಟ್ರೇನ್‌ನಲ್ಲಿ ಪಿಒಪಿ-ಎಫ್‌ಎಎಂಇ ಅಣುಗಳು ಪತ್ತೆಯಾದವು. ಆದರೆ ಅಗತ್ಯವಾದ ಪ್ರಮಾಣದಲ್ಲಿ ಪಿಒಪಿ-ಎಫ್‌ಎಎಂಇ ತಯಾರಿಸಲು ಈ ಬ್ಯಾಕ್ಟೀರಿಯಾಗಳಿಗೆ ಸಾಧ್ಯವಾಗದಿದ್ದಾಗ, ಅದಕ್ಕಾಗಿ ವಂಶವಾಹಿಗಳನ್ನು ಸೂಕ್ತ ಸ್ವರೂಪಕ್ಕೆ ಮಾರ್ಪಾಡುಗೊಳಿಸಲಾಯಿತು ಎಂದರು.

ಈ ಪ್ರಯೋಗದ ಮುಂದಿನ ಹಂತವಾಗಿ, ಅಗತ್ಯ ಪ್ರಮಾಣದ ಅಣುಗಳ ಉತ್ಪಾದನೆ ಮಾಡಬೇಕಾಗಿದೆ. ಇದರಿಂದ ಮಾತ್ರವೇ ರಾಕೆಟ್‌ ಇಂಧನದ ತಯಾರಿಕೆ ಸಾಧ್ಯವಿದ್ದು, ಕನಿಷ್ಟ ೧೦ ಕೆ.ಜಿ. ಉತ್ಪಾದನೆಯಿಂದ ಮಾತ್ರ ನಿಗದಿತ ಪರೀಕ್ಷೆಗಳು ಸಾಧ್ಯ. ಆದರೆ ವಿಜ್ಞಾನಿಗಳು ಆ ಹಂತವನ್ನಿನ್ನೂ ತಲುಪಿಲ್ಲವಾದ್ದರಿಂದ, ಈ ಸಂಶೋಧನೆ ಮತ್ತು ಪ್ರಯೋಗಗಳ ಮುಂದಿನ ಹಂತಗಳ ಬಗ್ಗೆ ಯಾವುದೂ ನಿರ್ಣಯವಾಗಿಲ್ಲ. ಆದರೆ ಸ್ವಚ್ಛ ಮತ್ತು ಪರಿಸರ ಸ್ನೇಹಿಯಾದ ಇಂಧನದ ಉತ್ಪಾದನೆ ಬಗ್ಗೆ ವಿಜ್ಞಾನಿಗಳು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿಸ್ತಾರ Explainer: ʼನಂಬಿʼ ಕೆಟ್ಟವರಲ್ಲ! ದೇಶ ಪ್ರೇಮಿ ವಿಜ್ಞಾನಿ ದೇಶ ದ್ರೋಹಿ ಆಗಿದ್ದು ಹೇಗೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಗ್ಯಾಜೆಟ್ಸ್

WhatsApp Features: ವಾಟ್ಸ್ ಆ್ಯಪ್ ನಲ್ಲಿರುವ ಈ 7 ವಿಶೇಷ ಫೀಚರ್ ಗಳ ಬಗ್ಗೆ ಗೊತ್ತೇ? ನೀವೂ ಬಳಸಿ

ಸಂದೇಶ ಕಳುಹಿಸುವಲ್ಲಿ ಬಹುತೇಕ ಮಂದಿಯ ಮೆಚ್ಚಿನ ಆಪ್ ಎನಿಸಿರುವ ವಾಟ್ಸ್ ಆಪ್ ನಲ್ಲಿ (WhatsApp Features) ಹಲವು ವೈಶಿಷ್ಟ್ಯಗಳಿವೆ. ಇದನ್ನು ಹೆಚ್ಚಿನವರು ಬಳಸಿರಲಿಕ್ಕಿಲ್ಲ. ಆದರೆ ಇವುಗಳಿಂದ ಹೊಸ ಅನುಭವವಂತೂ ಸಿಗುವುದು. ಸಾಕಷ್ಟು ಪ್ರಯೋಜನಕಾರಿಯಾಗಿರುವ ಇದನ್ನು ಉಪಯೋಗಿಸಿಕೊಳ್ಳಲು ಸೆಟ್ಟಿಂಗ್ ನಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಬೇಕು ಅಷ್ಟೇ. ಅದು ಹೇಗೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ.

VISTARANEWS.COM


on

By

WhatsApp Features
Koo

ಸಂದೇಶಗಳನ್ನು (messaging) ಕಳುಹಿಸುವ ಆ್ಯಪ್ ಗಳ (Apps) ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವ ವಾಟ್ಸ್ ಆ್ಯಪ್ (WhatsApp Features) ಅನ್ನು ವಿಶ್ವದಾದ್ಯಂತ ಕೋಟ್ಯಂತರ ಜನರು ಬಳಸುತ್ತಿದ್ದಾರೆ. ನಿರಂತರ ಹೊಸತನವನ್ನು ಪರಿಚಯಿಸುವಲ್ಲಿ ಮುಂಚೂಣಿಯಲ್ಲಿರುವ ಈ ಆಪ್ ಗ್ರಾಹಕ ಸ್ನೇಹಿ ಎಂದೆನಿಸಿಕೊಂಡಿದೆ.

ಕೇವಲ ಸಂದೇಶ ಕಳುಹಿಸಲು, ಕರೆ ಮಾಡಲು, ಸ್ಟೇಟಸ್ ಹಂಚಿಕೊಳ್ಳಲು ಸೀಮಿತ ಎಂದೆನಿಸುವ ವಾಟ್ಸ್ ಆಪ್ ನಲ್ಲಿ ಇನ್ನೂ ಹಲವಾರು ವೈಶಿಷ್ಟ್ಯಗಳಿವೆ. ಇದರ ಇಂಟರ್ಫೇಸ್ ಅಡಿಯಲ್ಲಿ ಹಲವು ‘ಗುಪ್ತ ರತ್ನ’ಗಳಿವೆ. ಇದು ನಿಮ್ಮ ಊಹೆಗೂ ಮೀರಿ ವಾಟ್ಸ್ ಆಪ್ ಬಳಕೆಯ ಅನುಭವವನ್ನು ಹೆಚ್ಚಿಸುತ್ತದೆ. ಅವುಗಳು ಯಾವುದು ಎಂಬ ವಿವರ ಇಲ್ಲಿದೆ.

ಟೋನ್ ಸೆಟ್ಟಿಂಗ್

ಮೆಸೇಜ್ ಸ್ವೀಕರಿಸುವಾಗ ಸಾಮಾನ್ಯ ಟೋನ್ ನಿಂದ ಬೇಸತ್ತಿದ್ದೀರೆ ವೈಯಕ್ತಿಕ ಸಂಪರ್ಕ ಅಥವಾ ಗುಂಪುಗಳಿಗಾಗಿ ಟೋನ್ ಗಳನ್ನು ಸೆಟ್ ಮಾಡಲು ವಾಟ್ಸ್ ಆಪ್ ಅನುಮತಿಸುತ್ತದೆ. ಚಾಟ್ ಅನ್ನು ಸರಳವಾಗಿ ತೆರೆದು, ಸಂಪರ್ಕದ ಹೆಸರು ಅಥವಾ ಗುಂಪಿನ ಶೀರ್ಷಿಕೆಯ ಮೇಲೆ ಟ್ಯಾಪ್ ಮಾಡಿ. “ಕಸ್ಟಮ್ ನೋಟಿಫಿಕೇಶನ್ ” ಆಯ್ಕೆ ಮಾಡಿ ಮತ್ತು ಆದ್ಯತೆಯ ಟೋನ್ ಅನ್ನು ಸೆಟ್ ಮಾಡಿ. ಈಗ ಪರದೆಯನ್ನು ನೋಡದೆಯೇ ಯಾರು ನಿಮಗೆ ಸಂದೇಶ ಕಳುಹಿಸುತ್ತಿದ್ದಾರೆ ಎಂಬುದನ್ನು ತಕ್ಷಣ ತಿಳಿದುಕೊಳ್ಳಬಹುದು.

ಸುಲಭ ಪ್ರವೇಶಕ್ಕಾಗಿ ಸ್ಟಾರ್

ಚಾಟ್‌ ಗಳು ಸಾಕಷ್ಟು ಇದ್ದಾಗ ಪ್ರಮುಖ ಸಂದೇಶ ಮಧ್ಯೆ ಕಳೆದು ಹೋಗುತ್ತದೆ. ಅಗತ್ಯವಿದ್ದಾಗ ಎಷ್ಟು ಹುಡುಕಿದರೂ ಸಿಗುವುದಿಲ್ಲ. WhatsApp ನ “Starred Messages” ವೈಶಿಷ್ಟ್ಯದಲ್ಲಿ ಸ್ಕ್ರೋಲಿಂಗ್‌ಗೆ ವಿದಾಯ ಹೇಳಿ. ಸಂದೇಶವನ್ನು ದೀರ್ಘವಾಗಿ ಒತ್ತಿ ಸ್ಟಾರ್ ಐಕಾನ್ ಅನ್ನು ಟ್ಯಾಪ್ ಮಾಡಿ. ಅನಂತರ ಸುಲಭವಾಗಿ ಈ ಸಂದೇಶಗಳನ್ನು ಮರುಪಡೆಯಲು ನಕ್ಷತ್ರ ಹಾಕಿದ ಸಂದೇಶಗಳ ಫೋಲ್ಡರ್‌ ನಲ್ಲಿ ಅದನ್ನು ಉಳಿಸಲಾಗುತ್ತದೆ.


ಹಿಡನ್ ಚಾಟ್ ಆರ್ಕೈವ್

ಕೆಲವು ಚಾಟ್‌ಗಳನ್ನು ಮರೆ ಮಾಚಬೇಕಾದರೆ WhatsApp ನ “ಆರ್ಕೈವ್ ಚಾಟ್” ವೈಶಿಷ್ಟ್ಯವು ಸಂಭಾಷಣೆಗಳನ್ನು ಅಳಿಸದೆಯೇ ಗೌಪ್ಯವಾಗಿ ಇಡುತ್ತದೆ. ಚಾಟ್‌ನಲ್ಲಿ ಎಡಕ್ಕೆ ಸ್ವೈಪ್ ಮಾಡಿ, “ಆರ್ಕೈವ್” ಟ್ಯಾಪ್ ಮಾಡಿ ಮತ್ತು ಅದು ನಿಮ್ಮ ಮುಖ್ಯ ಚಾಟ್ ಪಟ್ಟಿಯಿಂದ ಕಣ್ಮರೆಯಾಗುತ್ತದೆ. ನಿಮ್ಮ ಖಾಸಗಿ ಸಂಭಾಷಣೆಗಳನ್ನು ಖಾಸಗಿಯಾಗಿ ಇರಿಸುತ್ತದೆ. ಆರ್ಕೈವ್ ಮಾಡಿದ ಚಾಟ್‌ಗಳನ್ನು ಪ್ರವೇಶಿಸಲು, ನಿಮ್ಮ ಚಾಟ್ ಪಟ್ಟಿಯ ಕೆಳಭಾಗಕ್ಕೆ ಸ್ಕ್ರಾಲ್ ಮಾಡಿ ಅಥವಾ ಅವುಗಳನ್ನು ಹುಡುಕಿ.

ಗ್ರೂಪ್ ಚಾಟ್‌ ಗಳ ಮ್ಯೂಟ್

ಗ್ರೂಪ್ ಚಾಟ್‌ಗಳು ಕೆಲವೊಮ್ಮೆ ಕಿರಿಕಿರಿ ಉಂಟು ಮಾಡುತ್ತದೆ. ಯಾಕೆಂದರೆ ಇದರಲ್ಲಿ ಸಾಕಷ್ಟು ಸಂದೇಶಗಳು ನಿರಂತರವಾಗಿ ಬರುತ್ತಿರುತ್ತದೆ. ಇಂತಹ ಗುಂಪುಗಳನ್ನು ಮ್ಯೂಟ್ ಮಾಡಲು WhatsApp ಅನುಮತಿಸುತ್ತದೆ. ಗುಂಪು ಚಾಟ್ ತೆರೆಯಿರಿ ಗುಂಪಿನ ಹೆಸರಿನ ಮೇಲೆ ಟ್ಯಾಪ್ ಮಾಡಿ, “ಅಧಿಸೂಚನೆಗಳನ್ನು ಮ್ಯೂಟ್ ಮಾಡಿ” ಆಯ್ಕೆ ಮಾಡಿ ಮತ್ತು ಬಯಸಿದ ಅವಧಿಯನ್ನು ಸೆಟ್ ಮಾಡಿಕೊಳ್ಳಿ. ಇದರಲ್ಲಿ 8 ಗಂಟೆಗಳು, 1 ವಾರ ಅಥವಾ 1 ವರ್ಷ ಮ್ಯೂಟ್ ಮಾಡುವ ಅವಕಾಶವಿರುತ್ತದೆ.

ಬ್ಲೂ ಟಿಕ್ ಇಲ್ಲದೆ ಸಂದೇಶಗಳನ್ನು ಓದಿ

ಬ್ಲೂ ಟಿಕ್‌ಗಳು ಸಂದೇಶ ಓದಿದ್ದಾರೆ ಎನ್ನುವ ಕುರುಹು ಕೊಡುತ್ತದೆ. ಇದು ಕೆಲವರಿಗೆ ಆತಂಕವನ್ನು ಉಂಟುಮಾಡಬಹುದು. ಸಂದೇಶಗಳನ್ನು ಓದಿ ರಿಪ್ಲೈ ಮಾಡಿಲ್ಲ ಎನ್ನುವ ಬೇಸರವನ್ನು ಮಾಡಬಹುದು. ಆದರೆ ಬ್ಲೂ ಟಿಕ್ ಇಲ್ಲದೆಯೂ ನೀವು ಅಜ್ಞಾತವಾಗಿ ಸಂದೇಶಗಳನ್ನು ಓದಬಹುದು. ಇದಕ್ಕಾಗಿ ಸೆಟ್ಟಿಂಗ್‌ಗಳು- ಖಾತೆ- ಗೌಪ್ಯತೆಗೆ ಹೋಗುವ ಮೂಲಕ ರೀಡ್ ರಿಸಿಪ್ಟ್ ಅನ್ನು ನಿಷ್ಕ್ರಿಯಗೊಳಿಸಿ.

ಇದನ್ನೂ ಓದಿ: WhatsApp Update : ವಾಯ್ಸ್ ನೋಟ್ ಅವಧಿ ಹೆಚ್ಚಿಸಲಿದೆ ವಾಟ್ಸ್ಆ್ಯಪ್; ವಿಸ್ತರಣೆ ಅವಧಿ ಎಷ್ಟು ಗೊತ್ತೇ?

ಚಾಟ್‌ಗಳಿಗಾಗಿ ವೈಯಕ್ತಿಕ ವಾಲ್‌ಪೇಪರ್‌

ವೈಯಕ್ತಿಕ ಸಂಭಾಷಣೆಗಳಿಗಾಗಿ ಕಸ್ಟಮ್ ವಾಲ್‌ಪೇಪರ್‌ಗಳನ್ನು ಹೊಂದಿಸುವ ಮೂಲಕ ನಿಮ್ಮ ಚಾಟ್‌ಗಳಿಗೆ ವೈಯಕ್ತಿಕ ಸ್ಪರ್ಶವನ್ನು ನೀಡಬಹುದು. ಚಾಟ್ ತೆರೆಯಿರಿ ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ, “ವಾಲ್‌ಪೇಪರ್” ಆಯ್ಕೆ ಮಾಡಿ ಮತ್ತು WhatsApp ನ ಅಂತರ್ನಿರ್ಮಿತ ಆಯ್ಕೆಗಳಿಂದ ಆಯ್ಕೆ ಮಾಡಿ ಅಥವಾ ಸ್ವಂತ ಹಿನ್ನೆಲೆ ಚಿತ್ರವನ್ನು ಹೊಂದಿಸಿ. ಇದು ನಿಮ್ಮ ಚಾಟ್‌ ಗಳಿಗೆ ವಿಶೇಷತೆಯನ್ನು ಒದಗಿಸುತ್ತದೆ.

ಬ್ರಾಡ್‌ಕಾಸ್ಟ್ ಪಟ್ಟಿಗಳು

ಒಂದೇ ಸಂದೇಶವನ್ನು ಅನೇಕ ಸಂಪರ್ಕಗಳಿಗೆ ಕಳುಹಿಸುವುದು ಬೇಸರದ ಸಂಗತಿಯಾಗಿದೆ. ಆದರೆ WhatsApp ನ ಪ್ರಸಾರ ಪಟ್ಟಿ ಈ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ. ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡುವ ಮೂಲಕ ಪ್ರಸಾರ ಪಟ್ಟಿಯನ್ನು ರಚಿಸಿ, “ಹೊಸ ಪ್ರಸಾರ” ಆಯ್ಕೆ ಮಾಡಿ ಮತ್ತು ನಿಮ್ಮ ಸಂಪರ್ಕ ಪಟ್ಟಿಯಿಂದ ಸ್ವೀಕರಿಸುವವರನ್ನು ಆಯ್ಕೆ ಮಾಡಿ. ಈಗ, ಗುಂಪು ಚಾಟ್‌ನೊಂದಿಗೆ ಪ್ರತಿಯೊಬ್ಬರ ಇನ್‌ಬಾಕ್ಸ್‌ಗಳನ್ನು ಅಸ್ತವ್ಯಸ್ತಗೊಳಿಸದೆ ಸಾಮೂಹಿಕ ಸಂದೇಶಗಳನ್ನು ಕಳುಹಿಸಬಹುದು.

Continue Reading

ಅಂಕಣ

ಸೈಬರ್‌ ಸೇಫ್ಟಿ ಅಂಕಣ: 2024ರ ಸೈಬರ್‌ ಸೆಕ್ಯುರಿಟಿ ಟ್ರೆಂಡ್‌ಗಳು

ಸೈಬರ್‌ ಸೇಫ್ಟಿ ಅಂಕಣ: ನಿಮ್ಮ ಟೆಕ್ನಾಲಜಿ ಯಾತ್ರೆಯನ್ನು ಸುರಕ್ಷಿತಗೊಳಿಸಲು ಬಹುರಾಷ್ಟ್ರೀಯ ಸೈಬರ್‌ ಭದ್ರತಾ ಸಂಸ್ಥೆಯೊಂದು ಡಿಸೆಂಬರ್‌ 2023ಲ್ಲಿ ಪ್ರಕಟಿಸಿದ ಟ್ರೆಂಡ್‌ಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಇಲ್ಲಿದೆ. ಇದು ತಂತ್ರಜ್ಞಾನವನ್ನು ಹೆಚ್ಚು ಪ್ರಜ್ಞಾಪೂರ್ವಕವಾಗಿ ಮತ್ತು ಸುರಕ್ಷಿತವಾಗಿ ಬಳಸುವ ಉತ್ತಮ ಅಭ್ಯಾಸಗಳನ್ನು ತಿಳಿಸುತ್ತದೆ.

VISTARANEWS.COM


on

cyber attack ನನ್ನ ದೇಶ ನನ್ನ ದನಿ
Koo
cyber-safty-logo

ಸೈಬರ್‌ ಸೇಫ್ಟಿ ಅಂಕಣ: ತಂತ್ರಜ್ಞಾನದ ಪ್ರಗತಿ ನಮ್ಮ ದೈನಂದಿನ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತಿದೆ. ನಮ್ಮ ಜೀವನದಲ್ಲಿ ಅದರ ಬಳಕೆ ಹೆಚ್ಚುತ್ತಿದೆ. ಹಾಗಾಗಿ ತಂತ್ರಜ್ಞಾನವನ್ನು ಪ್ರಜ್ಞಾಪೂರ್ವಕವಾಗಿ ಮತ್ತು ಸುರಕ್ಷಿತವಾಗಿ ಬಳಸುವ ಅಭ್ಯಾಸಗಳನ್ನು ಸಂಸ್ಥೆಗಳು, ಮತ್ತು ನಾವು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಅಭಿವೃದ್ಧಿಯ ಜೊತೆಗೆ ಆತಂಕಕಾರಿಯಾಗಿ ಸೈಬರ್ ದಾಳಿಗಳು (cyber attack) ಮತ್ತು ವಂಚನೆಯ (cyber fraud) ಪ್ರಕರಣಗಳೂ ಹೆಚ್ಚುತ್ತಿವೆ. ಆದ್ದರಿಂದ, ಪ್ರತಿ ವರ್ಷವೂ ಸೈಬರ್ ಭದ್ರತೆಯ (cyber security) ಟ್ರೆಂಡ್‌ಗಳ ಬಗ್ಗೆ ತಿಳಿದು ಮುನ್ನೆಚ್ಚರಿಕೆ ವಹಿಸುವುದು ಕಾರ್ಪೊರೇಟ್‌ (corporate) ವಲಯದಲ್ಲಿ ಮುಖ್ಯವಾದ ಕಾರ್ಯಕ್ರಮ.

2021ರವರೆಗೆ ಜಾಗತಿಕವಾಗಿ ಸೈಬರ್‌ ಅಟ್ಯಾಕ್‌ಗಳು ಶೇಕಡಾ 125ರಷ್ಟು ಹೆಚ್ಚಾಗಿದೆ. ಸೈಬರ್ ಕ್ರಿಮಿನಲ್‌ಗಳು (cyber criminals) ಕಂಪನಿಗಳಿಗೆ ಮತ್ತು ವ್ಯಕ್ತಿಗಳಿಗೆ ಬೆದರಿಕೆ ಹಾಕುತ್ತಲೇ ಇದ್ದಾರೆ. ರಷ್ಯಾ-ಉಕ್ರೇನ್ ಸಂಘರ್ಷವು ಸೈಬರ್ ದಾಳಿಗಳ ಮೇಲೆ ಭಾರಿ ಪರಿಣಾಮ ಬೀರಿದೆ. ಆನ್‌ಲೈನ್‌ನಲ್ಲಿ ಫಿಶಿಂಗ್ (fishing) ಮುಖಾಂತರ ಹಣ ದೋಚುವ ಕಾರ್ಯತಂತ್ರ ಹೆಚ್ಚಾಗಿದೆ. ಯುರೋಪಿನಲ್ಲಿ ransomware ದಾಳಿಯು ಶೇಕಡ 26ರಷ್ಟಿದ್ದು ಪ್ರಮುಖವಾದ ಪ್ರಕಾರವಾಗಿದೆ. ಸರ್ವರ್‌ ಮೇಲಿನ ದಾಳಿಗಳು (12%) ಮತ್ತು ಡೇಟಾ ಕಳ್ಳತನ (10%) ಇತರ ರೀತಿಯ ಸೈಬರ್ ದಾಳಿಗಳಾಗಿವೆ.

ಸೈಬರ್ ಕ್ರೈಮ್ ಹೆಚ್ಚು ಕಾಲ ನಿಶ್ಚಲವಾಗಿ ಉಳಿಯುವುದಿಲ್ಲ. ಕ್ರಿಮಿನಲ್‌ಗಳು ನಿರಂತರವಾಗಿ ಅವಕಾಶಗಳನ್ನು ಹುಡುಕುತ್ತಿರುತ್ತಾರೆ. ತಾಂತ್ರಿಕ ಮತ್ತು ಸಾಮಾಜಿಕ ಆವಿಷ್ಕಾರಗಳು, ಬ್ರೌಸರ್‌ಗಳ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಏಮಾರಿಸಲು ಹ್ಯಾಕರ್‌ಗಳು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಇಕಾಮರ್ಸ್ (E commerce) ಸೈಟ್‌ಗಳು ಅಥವಾ ಮೊಬೈಲ್ ಕಂಪ್ಯೂಟಿಂಗ್ ಸಾಧನಗಳ ಸುರಕ್ಷತೆಯಲ್ಲಿ ಲೋಪಗಳನ್ನು ಹುಡುಕುತ್ತಲೇ ಇರುತ್ತಾರೆ. ಸೈಬರ್‌ ಸೆಕ್ಯೂರಿಟಿ ಚಾಪೆ ಕೆಳಗೆ ತೂರಿದರೆ, ಸೈಬರ್‌ ಕ್ರಿಮಿನಲ್‌ಗಳು ರಂಗೋಲಿ ಕೆಳಗೇ ತೂರುವ ಜಾಣತನ ಹೊಂದಿರುತ್ತಾರೆ. ಈ ನಿಟ್ಟಿನಲ್ಲಿ ನಿಮ್ಮ ಟೆಕ್ನಾಲಜಿ ಯಾತ್ರೆಯನ್ನು ಸುರಕ್ಷಿತಗೊಳಿಸಲು ಬಹುರಾಷ್ಟ್ರೀಯ ಸೈಬರ್‌ ಭದ್ರತಾ ಸಂಸ್ಥೆಯೊಂದು ಡಿಸೆಂಬರ್‌ 2023ಲ್ಲಿ ಪ್ರಕಟಿಸಿದ ಟ್ರೆಂಡ್‌ಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಮಾಡಿದ್ದೇನೆ. ಇದು ಕಂಪೆನಿಗಳ ಮುಖ್ಯಸ್ಥರಿಗಷ್ಟೇ ಅಲ್ಲ, ಜನಸಾಮಾನ್ಯರೂ ತಿಳಿದು ಜಾಗರೂಕರಾಗುವಂತಿದೆ. ತಂತ್ರಜ್ಞಾನವನ್ನು ಹೆಚ್ಚು ಪ್ರಜ್ಞಾಪೂರ್ವಕವಾಗಿ ಮತ್ತು ಸುರಕ್ಷಿತವಾಗಿ ಬಳಸುವ ಉತ್ತಮ ಅಭ್ಯಾಸಗಳನ್ನು ತಿಳಿಸುತ್ತದೆ.

1) ರಕ್ಷಣೆ ಮತ್ತು ದಾಳಿಗಾಗಿ ಕೃತಕ ಬುದ್ಧಿಮತ್ತೆಯ ಅಳವಡಿಕೆ: ಕೃತಕ ಬುದ್ಧಿಮತ್ತೆ ಹೆಚ್ಚು ಸಂಕೀರ್ಣವಾಗುತ್ತಿದೆ. ಸೈಬರ್ ದಾಳಿಕೋರರು ದಾಳಿಗಳನ್ನು ರೂಪಿಸಲು ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಸೈಬರ್ ಸುರಕ್ಷತಾ ಪರಿಣಿತರು ಕೃತಕ ಬುದ್ಧಿಮತ್ತೆಯ ಸಹಾಯದಿಂದ ಹೊಸ ಬಗೆಯ ರಕ್ಷಣಾ ವ್ಯವಸ್ಥೆಗಳನ್ನು ರೂಪಿಸುತ್ತಿದ್ದಾರೆ.

2) ಫಿಶಿಂಗ್ ಅಟ್ಯಾಕ್‌ಗಳ ವಿಕಸನ: ಫಿಶಿಂಗ್, ಆಕ್ರಮಣಕಾರರಿಗೆ ಪ್ರವೇಶವನ್ನು ನೀಡಲು ಬಳಕೆದಾರರನ್ನು ಮೋಸಗೊಳಿಸುವುದನ್ನು ಒಳಗೊಂಡಿರುವ ಒಂದು ರೀತಿಯ ಸಾಮಾಜಿಕ ಎಂಜಿನಿಯರಿಂಗ್ ದಾಳಿ. ಇದು 2024 ರಲ್ಲಿ ಆತಂಕಕಾರಿಯಾಗಿ ಮುಂದುವರಿಯುತ್ತದೆ. ವರ್ಷದ ಮೊದಲಾರ್ಧ ಮುಗಿಯುವಷ್ಟರಲ್ಲಿ ಇದು ಕಳೆದ ವರ್ಷಕ್ಕಿಂದ ಜಾಸ್ತಿಯಾಗಿರುವುದು ಗಮನಿಸಿದ್ದಾರೆ.

3) ಸಂಸ್ಥೆಗಳಲ್ಲಿ ಸೈಬರ್‌ ಸುರಕ್ಷತೆಗೆ ಆದ್ಯತೆ: ಸೈಬರ್‌ ದಾಳಿಗಳ ಹೆಚ್ಚುತ್ತಿರುವ ಆವರ್ತನದೊಂದಿಗೆ, 2024 ರಲ್ಲಿ ಐಟಿ ವಿಭಾಗದ ಅವಿಭಾಜ್ಯ ಅಂಗವಾಗಿರುವುದಕ್ಕಿಂತ ಹೆಚ್ಚಾಗಿ ಸೈಬರ್‌ ಸುರಕ್ಷತೆಯು ಸಂಸ್ಥೆಗಳಲ್ಲಿ ಕಾರ್ಯತಂತ್ರದ ಆದ್ಯತೆಯಾಗಿರಬೇಕು.

cyber attacks

4) IoT-ಚಾಲಿತ ಸೈಬರ್ ದಾಳಿಗಳು: ಇಂಟರ್ನೆಟ್ ಆಫ್‌ ತಿಂಗ್ಸ್ (IoT: ಮನೆಗಳಲ್ಲಿ ಧ್ವನಿ ಮೂಲಕ ಬಳಸುವ ಸಾಧನಗಳು ಉದಾಹರಣೆ: ಅಲೆಕ್ಸಾ) ಮೂಲಕ ಪರಸ್ಪರ ಸಂವಹನ ನಡೆಸುವ ಸಾಧನಗಳು ಹೆಚ್ಚಾಗುತ್ತಿದೆ. ಇದು ಸೈಬರ್ ದಾಳಿಕೋರರಿಗೆ ದಾಳಿ ಮಾಡಲು ಹೆಚ್ಚು ಸಂಭಾವ್ಯ ವ್ಯವಸ್ಥೆಗಳನ್ನು ಕೊಡುತ್ತದೆ.

5) ಸೈಬರ್ ಸ್ಥಿತಿಸ್ಥಾಪಕತ್ವ ಮತ್ತು ಸೈಬರ್ ಭದ್ರತೆ: 2024ರಲ್ಲಿ, ಸೈಬರ್ ಸ್ಥಿತಿಸ್ಥಾಪಕತ್ವ ಮತ್ತು ಸೈಬರ್ ಭದ್ರತೆಯ ನಡುವಿನ ಸ್ಪಷ್ಟವಾದ ವ್ಯತ್ಯಾಸವು ಹೊರಹೊಮ್ಮುತ್ತದೆ.

6) ಝೀರೋ-ಟ್ರಸ್ಟ್ ಮಾದರಿ: ಶೂನ್ಯ-ಟ್ರಸ್ಟ್ ಮಾದರಿಯು ಎಲ್ಲವೂ ಬೆದರಿಕೆ ಎಂದು ಪರಿಗಣಿಸುತ್ತದೆ. ಅಂದರೆ ಕಾರ್ಪೊರೇಟ್ ನೆಟ್‌ವರ್ಕ್‌ನಲ್ಲಿ ಒಳಗೊಂಡಿರುವ ಎಲ್ಲಾ ಸಂವಹನವನ್ನೂ ರೆಕಾರ್ಡ್ ಮಾಡಬೇಕು ಮತ್ತು ವಿಶ್ಲೇಷಿಸಬೇಕು. ಉದ್ಯೋಗಿಯ ಪ್ರವೇಶ ಮತ್ತು ಅವರಿಗೆ ಕೊಟ್ಟಿರುವ ವ್ಯಾಪ್ತಿಯ ಪರಿಧಿಯನ್ನು ವನ್ನು ಪರಿಶೀಲಿಸುವುದು.

7) ಸೈಬರ್ ವಾರ್‌ಫೇರ್ ಮತ್ತು ಪ್ರಭುತ್ವ-ಪ್ರಾಯೋಜಿತ ಸೈಬರ್ ದಾಳಿಗಳು: ಉಕ್ರೇನ್‌ನಲ್ಲಿನ ಯುದ್ಧದೊಂದಿಗೆ, ಸೈಬರ್ ವಾರ್‌ಫೇರ್ ಹೆಚ್ಚು ಜನಪ್ರಿಯವಾಗಿದೆ ಮತ್ತು ಸೈಬರ್ ದಾಳಿಯ ವಿಕಾಸವು ಸ್ಪಷ್ಟವಾಗಿದೆ.

8) Ransomware ಎವಲ್ಯೂಷನ್: Ransomware ಒಂದು ಸೇವೆಯಾಗಿ (RaaS – Ransomware as a service), ಬಳಕೆದಾರರು ಸುಲಿಗೆ ಪಾವತಿಸುವವರೆಗೆ ಕಂಪ್ಯೂಟರ್ ಸಿಸ್ಟಮ್‌ಗೆ ಪ್ರವೇಶವನ್ನು ನಿರ್ಬಂಧಿಸುವುದನ್ನು ಒಳಗೊಂಡಿರುವ ಈ ಸೈಬರ್‌ ದಾಳಿ, ವಿಶೇಷವಾಗಿ ಆರೋಗ್ಯ ಪೂರೈಕೆದಾರರಿಗೆ ಆತಂಕಕಾರಿಯಾಗಿದೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಜೀವನವೇ ಸ್ಕ್ರೋಲಿಂಗ್: ನೀವು ಸಾಮಾಜಿಕ ಮಾಧ್ಯಮದ ವ್ಯಸನಿಯಾಗಿದ್ದೀರಾ?

9) ಗೌಪ್ಯತೆ ಮತ್ತು ನಿಯಂತ್ರಕ ಅನುಸರಣೆ: NIS2, ಯುರೋಪಿಯನ್ ಒಕ್ಕೂಟದ ನೆಟ್‌ವರ್ಕ್ ಮತ್ತು ಮಾಹಿತಿ ಭದ್ರತಾ ನಿರ್ದೇಶನ, ಸೈಬರ್ ಸುರಕ್ಷತೆಯನ್ನು ಸುಧಾರಿಸಲು ಮತ್ತು ಸೈಬರ್ ಬೆದರಿಕೆಗಳ ವಿರುದ್ಧ ಮೂಲಸೌಕರ್ಯಗಳನ್ನು ರಕ್ಷಿಸಲು ಸಮಗ್ರ ಪ್ರಯತ್ನ ಮಾಡುತ್ತಿದೆ.

10) ವಿಸ್ತೃತ ಪತ್ತೆ ಮತ್ತು ಪ್ರತಿಕ್ರಿಯೆ: (XDR – Extended Detection and Response) ನಿರಂತರ ತಾಂತ್ರಿಕ ಪ್ರಗತಿಯೊಂದಿಗೆ, ಸಾಂಪ್ರದಾಯಿಕ ಸೈಬರ್‌ ಸೆಕ್ಯುರಿಟಿ ಉಪಕರಣಗಳು ಸಮಗ್ರ ಪರಿಹಾರಗಳನ್ನು ಕೊಡುವಂತಹ ಉಪಕರಣಗಳಿಗೆ ಮತ್ತು ಕಾರ್ಯತಂತ್ರಗಳಿಗೆ ದಾರಿ ಮಾಡಿಕೊಡುತ್ತದೆ.

11) ಥರ್ಡ್-ಪಾರ್ಟಿ ರಿಸ್ಕ್ ಮ್ಯಾನೇಜ್‌ಮೆಂಟ್‌ನಲ್ಲಿ ಹೆಚ್ಚಿದ ಹೂಡಿಕೆಗಳು: ಇದು ಮೂರನೇ ವ್ಯಕ್ತಿಗಳಿಗೆ ಉಪಗುತ್ತಿಗೆ ನೀಡುವ ಪೂರೈಕೆದಾರರು ಅಥವಾ ಸೇವಾ ಪೂರೈಕೆದಾರರಿಗೆ ಸಂಬಂಧಿಸಿದ ಅಪಾಯಗಳನ್ನು ವಿಶ್ಲೇಷಿಸುವ ಮತ್ತು ಕಡಿಮೆ ಮಾಡುವ ಪ್ರಕ್ರಿಯೆಯಾಗಿದೆ.

12) ಗೌಪ್ಯತೆ-ಸಂರಕ್ಷಿಸುವ ತಂತ್ರಜ್ಞಾನಗಳು: ಡೇಟಾ ಗೌಪ್ಯತೆ (Data privacy) ಮತ್ತು ಅದರ ನಿಯಂತ್ರಣವು ಹೋಮೋಮಾರ್ಫಿಕ್ ಎನ್‌ಕ್ರಿಪ್ಶನ್‌ನಂತಹ ಗೌಪ್ಯತೆ-ಸಂರಕ್ಷಿಸುವ ತಂತ್ರಜ್ಞಾನಗಳ ಅಭಿವೃದ್ಧಿಗೆ ಚಾಲನೆ ನೀಡುತ್ತದೆ

13) DevSecOps ನ ಏಕೀಕರಣ: DevSecOps ಇನ್ನು ಮುಂದೆ ಒಂದು ಪರಿಕಲ್ಪನೆಯಾಗಿರುವುದಿಲ್ಲ ಆದರೆ ಸಾಫ್ಟ್‌ವೇರ್ ಅಭಿವೃದ್ಧಿಯ ಮೂಲಭೂತ ಭಾಗವಾಗುತ್ತದೆ

14) ಕ್ಲೌಡ್ ಮತ್ತು ಮಲ್ಟಿ-ಕ್ಲೌಡ್ ಪರಿಸರದಲ್ಲಿ ಭದ್ರತೆ: ಕ್ಲೌಡ್ (cloud) ಅಥವಾ ಬಹು-ಕ್ಲೌಡ್ ಪರಿಸರದಲ್ಲಿ ಭದ್ರತೆ ಐಟಿ ಪರಿಸರ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳ ಬೇಕಾದ ಪ್ರವೃತ್ತಿ ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಸ್ಮಾರ್ಟ್‌ ಫೋನಿನ ಸ್ಮಾರ್ಟ್ ಬಳಕೆಗೆ 12 ಸೂತ್ರಗಳು

Continue Reading

ತಂತ್ರಜ್ಞಾನ

Air Conditioner Safety: ಎಸಿ ಏಕೆ ಬ್ಲಾಸ್ಟ್ ಆಗುತ್ತದೆ? ಅಪಾಯ ತಡೆಯುವುದು ಹೇಗೆ?

ಹವಾನಿಯಂತ್ರಣ ಘಟಕದಲ್ಲಿ ಉಂಟಾಗುವ ಸ್ಫೋಟ ಅಥವಾ ಬೆಂಕಿಯನ್ನು “ಎಸಿ ಬ್ಲಾಸ್ಟ್” ಎಂದು ಕರೆಯಲಾಗುತ್ತದೆ. ಹವಾನಿಯಂತ್ರಣಗಳು (Air Conditioner Safety) ಏಕೆ ಸ್ಫೋಟಗೊಳ್ಳುತ್ತವೆ ಮತ್ತು ಅದು ಸಂಭವಿಸದಂತೆ ಹೇಗೆ ತಡೆಯಬಹುದು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Air Conditioner Safety
Koo

ಹವಾ ನಿಯಂತ್ರಣಗಳು (air conditioner) ಈಗ ಎಲ್ಲ ಕಡೆ ಇದ್ದೇ ಇರುತ್ತವೆ. ಬೇಸಿಗೆಯ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮನೆ (home), ಕಚೇರಿಯಲ್ಲಿ (office) ಅಳವಡಿಸುವ ಈ ಹವಾ ನಿಯಂತ್ರಕಗಳು (Air Conditioner Safety) ಕೆಲವೊಮ್ಮೆ ಅಪಾಯವನ್ನು ಉಂಟು ಮಾಡುತ್ತದೆ. ಎಸಿ ಯಲ್ಲಿ ಸ್ಫೋಟ ಉಂಟಾಗುವುದು ಅಪರೂಪವೇನಲ್ಲ.

ಇತ್ತೀಚೆಗೆ ಕರ್ನಾಟಕದ (karnataka) ಚಿನ್ನದ ಮಳಿಗೆಯೊಂದರಲ್ಲಿ ಏರ್ ಕಂಡಿಷನರ್ ಸ್ಫೋಟಗೊಂಡಿತು. ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಅದೇ ರೀತಿ ನೋಯ್ಡಾದ (noida) ರೆಸಿಡೆನ್ಶಿಯಲ್ ಸೊಸೈಟಿಯ ಫ್ಲ್ಯಾಟ್‌ ನಲ್ಲೂ ಇದೀಗ ಈ ಘಟನೆ ನಡೆದಿರುವ ವರದಿಯಾಗಿದೆ. ಇದರ ಪರಿಣಾಮವಾಗಿ ಬೃಹತ್ ಬೆಂಕಿ ಬಹುಮಹಡಿ ಅಪಾರ್ಟ್ಮೆಂಟ್ ಕಟ್ಟಡದಲ್ಲಿನ ಇತರ ಫ್ಲಾಟ್‌ಗಳಿಗೆ ಹರಡಿತ್ತು.

ಹವಾನಿಯಂತ್ರಣ ಘಟಕದಲ್ಲಿ ಉಂಟಾಗುವ ಸ್ಫೋಟ ಅಥವಾ ಬೆಂಕಿಯನ್ನು “ಎಸಿ ಬ್ಲಾಸ್ಟ್” ಎಂದು ಕರೆಯಲಾಗುತ್ತದೆ. ಘಟನೆಗಳು ವಿವಿಧ ಕಾರಣಗಳಿಂದ ಸಂಭವಿಸಬಹುದು, ಸಾಮಾನ್ಯವಾಗಿ ಯಾಂತ್ರಿಕ ಅಥವಾ ವಿದ್ಯುತ್ ಅಸಮರ್ಪಕ ಕಾರ್ಯಗಳು. ಹವಾನಿಯಂತ್ರಣಗಳು ಏಕೆ ಸ್ಫೋಟಗೊಳ್ಳುತ್ತವೆ ಮತ್ತು ಅದು ಸಂಭವಿಸದಂತೆ ಹೇಗೆ ತಡೆಯಬಹುದು ಎಂಬುದರ ಕುರಿತು ಮಾಹಿತಿ ಇಲ್ಲಿದೆ.


ಎಸಿ ಏಕೆ ಸ್ಫೋಟಗೊಳ್ಳುತ್ತವೆ?

ಹವಾನಿಯಂತ್ರಣ ಸ್ಫೋಟಗಳು ಸಾಮಾನ್ಯವಾಗಿ ಆಂತರಿಕ ಸಮಸ್ಯೆಗಳಿಂದ ಉಂಟಾಗುತ್ತದೆ. ಮೊಂಟಾನಾ ಮೂಲದ ಎಸಿ ರಿಪೇರಿ ಕಂಪನಿಯಾದ ಪ್ರೀಮಿಯರ್ ಸಿಸ್ಟಮ್ಸ್ ಪ್ರಕಾರ, ಎಸಿ ಘಟಕದೊಳಗೆ ನಿರ್ಮಿಸಲಾದ ಒತ್ತಡವು ಸ್ಫೋಟಗೊಳ್ಳಲು ಕಾರಣವಾಗುತ್ತದೆ. ಅಲ್ಲದೇ ಇನ್ನು ಕೆಲವು ಕಾರಣಗಳಿವೆ.

ವಿದ್ಯುತ್ ಸಮಸ್ಯೆಗಳು

ದೋಷಯುಕ್ತ ತಂತಿಗಳು ಮತ್ತು ಕನೆಕ್ಟರ್‌ಗಳು ಬೆಂಕಿಯ ಅಪಾಯವನ್ನು ಉಂಟುಮಾಡಿ ಎಸಿ ಸ್ಪೋಟಕ್ಕೆ ಕಾರಣವಾಗುತ್ತದೆ.

ಶೈತ್ಯೀಕರಣದ ಸೋರಿಕೆಗಳು

ಎಸಿಯಲ್ಲಿ ನೀರಿನ ಸೋರಿಕೆಯು ತಂಪಾಗಿಸುವ ಪ್ರಕ್ರಿಯೆಯನ್ನು ಅಡ್ಡಿಪಡಿಸುತ್ತದೆ. ಇದರಿಂದಾಗಿ ಘಟಕವು ಹೆಚ್ಚು ಕೆಲಸ ಮಾಡುತ್ತದೆ ಮತ್ತು ಸಂಭಾವ್ಯವಾಗಿ ಬೆಂಕಿ ಹೊತ್ತಿಕೊಳ್ಳುತ್ತದೆ. ಇದು ಸ್ಫೋಟಕ್ಕೆ ಕಾರಣವಾಗುತ್ತದೆ.

ಕಡಿಮೆ ಲೂಬ್ರಿಕಂಟ್ ಮಟ್ಟಗಳು

ಸಾಕಷ್ಟು ನಯಗೊಳಿಸುವಿಕೆಯು ಘರ್ಷಣೆ ಮತ್ತು ಶಾಖದ ರಚನೆ ಬೆಂಕಿ ಮತ್ತು ಸ್ಫೋಟಗಳಿಗೆ ಕಾರಣವಾಗುತ್ತದೆ.

ಕೊಳೆಯುಕ್ತ ಕಾಯಿಲ್‌ಗಳು

ಕಂಡೆನ್ಸರ್ ಕಾಯಿಲ್‌ಗಳ ಮೇಲೆ ಸಂಗ್ರಹವಾಗುವ ಕೊಳೆ ತಂಪಾಗಿಸುವ ಪ್ರಕ್ರಿಯೆಗೆ ಅಡ್ಡಿಯಾಗಬಹುದು. ಇದು ಹೆಚ್ಚುವರಿ ಶಾಖದ ರಚನೆ ಮತ್ತು ಘಟಕದೊಳಗೆ ಒತ್ತಡಕ್ಕೆ ಕಾರಣವಾಗಿ ಸ್ಫೋಟ ಉಂಟಾಗುವುದು.


ಎಸಿ ಸ್ಫೋಟ ತಡೆಯುವುದು ಹೇಗೆ?

ಏರ್ ಕಂಡಿಷನರ್ ಸ್ಫೋಟಗಳನ್ನು ತಡೆಗಟ್ಟಲು ಕೆಲವೊಂದು ಮುನ್ನೆಚ್ಚರಿಕೆಗಳನ್ನು ವಹಿಸಬೇಕು ಎನ್ನುತ್ತದೆ ಪ್ರೀಮಿಯರ್ ಸಿಸ್ಟಮ್ಸ್.
1. ಸಿಡಿಲು, ಮಳೆ, ಗಾಳಿಯಂತಹ ತೀವ್ರವಾದ ಹವಾಮಾನ ಪರಿಸ್ಥಿತಿಗಳಲ್ಲಿ ಎಸಿ ಅನ್ನು ಅನ್‌ಪ್ಲಗ್ ಮಾಡುವ ಮೂಲಕ ವಿದ್ಯುತ್ ತೊಂದರೆಯಾಗುವುದರಿಂದ ತಪ್ಪಿಸಿ.
2. ಮಿತಿಮೀರಿದ ಎಸಿ ಬಳಕೆಯನ್ನು ತಪ್ಪಿಸಲು ನಿಯಮಿತವಾಗಿ ಮಧ್ಯಂತರದಲ್ಲಿ ಎಸಿ ಯನ್ನು ಸ್ವಿಚ್ ಆಫ್ ಮಾಡಿ. ಎಸಿಯಲ್ಲಿನ ತೊಡಕುಗಳನ್ನು ನಿವಾರಿಸಲು ಕಡಿಮೆ ಶೈತ್ಯೀಕರಣದ ಮಟ್ಟವನ್ನು ಸರಿಯಾದ ಶೀತಕದೊಂದಿಗೆ ಬದಲಾಯಿಸಿ.
3. ಘಟಕವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ತಿಳಿಯಲು ದಿನನಿತ್ಯದ ನಿರ್ವಹಣೆ ಮತ್ತು ತಪಾಸಣೆಗಳನ್ನು ನಡೆಸಿ.
4. ಸರ್ಜ್ ಪ್ರೂಫ್ ಎಕ್ಸ್‌ಟೆನ್ಶನ್ ಕಾರ್ಡ್‌ಗಳೊಂದಿಗೆ ಎಸಿಯನ್ನು ಸುರಕ್ಷಿತವಾಗಿರಿಸಿ.

ಎಸಿಯಲ್ಲಿ ದೋಷವಿದೆ ಎಂಬುದನ್ನು ಪತ್ತೆ ಹಚ್ಚುವುದು ಹೇಗೆ?

ಎಸಿ ಯುನಿಟ್ ದೋಷಪೂರಿತವಾಗಿದೆಯೇ ಎಂದು ತಿಳಿಯಲು ಸೂಕ್ಶ್ಮವಾಗಿ ಅವುಗಳನ್ನು ಪರಿಶೀಲಿಸಿ. ಅದರ ಕಂಪ್ರೆಸರ್ ನಿರಂತರವಾಗಿ ಚಾಲನೆಯಲ್ಲಿದ್ದರೆ ಅದನ್ನು ಯಾವಾಗಲೂ ಪರೀಕ್ಷಿಸಿ. ಅಲ್ಲದೇ ಅದರೊಳಗೆ ಅಸಾಮಾನ್ಯ ಶಬ್ದಗಳು ಬರುತ್ತಿದ್ದರೆ, ಶಾಖ ವರ್ಗಾವಣೆಯಲ್ಲಿ ವ್ಯತ್ಯಾಸದಿಂದ ಎಸಿಯಲ್ಲಿ ದೋಷವಿರುವುದನ್ನು ಕಂಡುಕೊಳ್ಳಬಹುದು.

ಇದನ್ನೂ ಓದಿ: Water Aerator : ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ್ರೆ 10 ನಿಮಿಷದಲ್ಲಿ ಮನೆ ತಲುಪುತ್ತದೆ ವಾಟರ್ ಏರಿಯೇಟರ್​

ಎಸಿ ನಿರ್ವಹಣೆಗೆ ಟಿಪ್ಸ್

  1. 1. ಯೂನಿಟ್‌ನಲ್ಲಿನ ಒತ್ತಡವನ್ನು ಕಡಿಮೆ ಮಾಡಲು ಏರ್ ಫಿಲ್ಟರ್ ಅನ್ನು ಸ್ವಚ್ಛವಾಗಿಡಿ.
    2. ಎಸಿಯ ಕಿಟಕಿ ಘಟಕಗಳು ಸ್ವಲ್ಪ ಹೊರಕ್ಕೆ ಓರೆಯಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
    3. ಎಸಿ ಅನ್ನು ನೇರವಾಗಿ ಅದರ ಸರ್ಕ್ಯೂಟ್‌ಗೆ ಸಂಪರ್ಕಗೊಳಿಸಿ.
    4.ಎಸಿ ಯುನಿಟ್‌ಗೆ ಎಂದಾದರೂ ಬೆಂಕಿ ಬಿದ್ದಿದ್ದರೆ ಅದನ್ನು ಅನ್‌ಪ್ಲಗ್ ಮಾಡಿ ಮತ್ತು ನಿಯಮಿತವಾಗಿ ವೈರಿಂಗ್ ಅನ್ನು ಪರೀಕ್ಷಿಸಿ.
    5. ಹಳೆಯ ಘಟಕಗಳನ್ನು ಮರುಪೂರಣ ಮಾಡುವಾಗ ಸರಿಯಾದ ಅನಿಲವನ್ನು ಬಳಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
    6. ಸರಿಯಾದ ವೈರಿಂಗ್ ಹೊಂದಿಸುವ ಮೂಲಕ, ವೋಲ್ಟೇಜ್ ಸುರಕ್ಷತೆಗಳನ್ನು ಸೇರಿಸುವ ಮೂಲಕ ಮತ್ತು ಎಸಿ ಅನ್ನು ನಿಯಮಿತವಾಗಿ ನಿರ್ವಹಿಸುವ ಮೂಲಕ ಸಂಭಾವ್ಯ ಬೆಂಕಿಯ ಅಪಾಯ ಉಂಟಾಗುವುದನ್ನು ತಡೆಯಬಹುದು.
Continue Reading

ಬೆಂಗಳೂರು

Yamaha: ಬೆಂಗಳೂರಿನಲ್ಲಿ ಹೊಸ ‘ಬ್ಲೂ ಸ್ಕ್ವೇರ್’ ಔಟ್‌ಲೆಟ್ ತೆರೆದ ಯಮಹಾ

India Yamaha: ಬೆಂಗಳೂರಿನಲ್ಲಿ ಇಂಡಿಯಾ ಯಮಹಾ ಮೋಟಾರ್ (ಐವೈಎಂ) ಪ್ರೈ. ಲಿಮಿಟೆಡ್‌ನ ಹೊಸ ಅತ್ಯಾಧುನಿಕ “ಬ್ಲೂ ಸ್ಕ್ವೇರ್” ಔಟ್‌ಲೆಟ್ ಅನ್ನು ತೆರೆದಿದೆ. ಬೆಂಗಳೂರು ವರ್ತೂರು ಹೋಬಳಿಯ ಅಂಬಲಿಪುರದಲ್ಲಿ ಮೋಟೋ ವರ್ಲ್ಡ್ ಹೆಸರಿನಲ್ಲಿ ಈ ಹೊಸ ಔಟ್‌ಲೆಟ್ ಅನ್ನು ಪ್ರಾರಂಭಿಸಲಾಗಿದೆ.ಯಮಹಾ ಬ್ಲೂ ಸ್ಕ್ವೇರ್ ಶೋರೂಮ್‌ಗಳನ್ನು ಗ್ರಾಹಕರಿಗೆ ವೈಯಕ್ತೀಕರಿಸಿದ ವಿಧಾನದಲ್ಲಿ ಅತ್ಯುತ್ತಮ ಮಾರಾಟ, ಸರ್ವೀಸ್ ಮತ್ತು ನೆರವನ್ನು ನೀಡುವ ಮೂಲಕ ಉತ್ತಮ ಅನುಭವವನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ.

VISTARANEWS.COM


on

Yamaha has opened a new Blue Square outlet in Bengaluru
Koo

ಬೆಂಗಳೂರು: ಇಂಡಿಯಾ ಯಮಹಾ ಮೋಟಾರ್ (India Yamaha Motor Pvt Ltd) ಪ್ರೈ. ಲಿಮಿಟೆಡ್, ಬೆಂಗಳೂರಿನಲ್ಲಿ ಹೊಸ ಅತ್ಯಾಧುನಿಕ “ಬ್ಲೂ ಸ್ಕ್ವೇರ್” ಔಟ್‌ಲೆಟ್ ಅನ್ನು ತೆರೆದಿದೆ. ಬೆಂಗಳೂರು ವರ್ತೂರು ಹೋಬಳಿಯ ಅಂಬಲಿಪುರದಲ್ಲಿ ಮೋಟೋ ವರ್ಲ್ಡ್ ಹೆಸರಿನಲ್ಲಿ ಈ ಹೊಸ ಔಟ್‌ಲೆಟ್ ಅನ್ನು ಪ್ರಾರಂಭಿಸಲಾಗಿದ್ದು, ಈ ಔಟ್‌ಲೆಟ್ 7,100 ಚದರ ಅಡಿಯಷ್ಟು ವಿಶಾಲವಾಗಿದೆ. ಯಮಹಾ ಬ್ಲೂ ಸ್ಕ್ವೇರ್ ಶೋರೂಮ್‌ಗಳನ್ನು ಗ್ರಾಹಕರಿಗೆ ವೈಯಕ್ತೀಕರಿಸಿದ ವಿಧಾನದಲ್ಲಿ ಅತ್ಯುತ್ತಮ ಮಾರಾಟ, ಸರ್ವೀಸ್ ಮತ್ತು ನೆರವನ್ನು ನೀಡುವ ಮೂಲಕ ಉತ್ತಮ ಅನುಭವವನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ.

ಈ ಬ್ಲೂ ಸ್ಕ್ವೇರ್ ಔಟ್‌ಲೆಟ್ ಯಮಹಾ ಬ್ರ್ಯಾಂಡ್‌ನ ಹುಮ್ಮಸ್ಸನ್ನು ದಾಟಿಸುತ್ತದೆ ಮತ್ತು ಗ್ರಾಹಕರಿಗೆ ಸಂಪೂರ್ಣ ಸೇವೆಯನ್ನು ಒದಗಿಸುವಂತೆ ವಿನ್ಯಾಸಗೊಂಡಿದೆ. ವೈಯಕ್ತೀಕರಿಸಿದ ವಿಧಾನದ ಮೂಲಕ ಗ್ರಾಹಕರಿಗೆ ಸೇವೆ ಒದಗಿಸಲಾಗುತ್ತಿದ್ದು, ಪ್ರತಿಯೊಬ್ಬ ಗ್ರಾಹಕರು ತೃಪ್ತಿಕರ ಸೇವೆ ಪಡೆಯಲಿದ್ದಾರೆ. ಈ ವಿಶೇಷವಾದ ಔಟ್‌ಲೆಟ್‌ಗಳನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಅನುವು ಮಾಡಿಕೊಟ್ಟಿರುವ ಬ್ರ್ಯಾಂಡ್ ಗ್ರಾಹಕರಿಗೆ ಯಮಹಾ ರೇಸಿಂಗ್ ಜಗತ್ತಿಗೆ ಪ್ರವೇಶಿಸುವ ಅವಕಾಶವನ್ನೂ ನೀಡುತ್ತಿದೆ.

ಇದನ್ನೂ ಓದಿ: Koppala News: ವಿಜೃಂಭಣೆಯಿಂದ ಜರುಗಿದ ಹುಲಗಿಯ ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವ

ಈ ಪ್ರೀಮಿಯಂ ಔಟ್‌ಲೆಟ್‌ಗಳ ಪ್ರತಿಯೊಂದು ವಿಭಾಗವನ್ನೂ ಅಂತರರಾಷ್ಟ್ರೀಯ ಮೋಟಾರ್‌ ಸ್ಪೋರ್ಟ್‌ಗಳಲ್ಲಿ ತೊಡಗಿಸಿಕೊಂಡಿರುವ ಜಾಗತಿಕ ಬ್ರ್ಯಾಂಡ್‌ ಆದ ಯಮಹಾ ಜತೆಗೆ ಸಂಬಂಧ ಹೊಂದುವ ಹೆಮ್ಮೆಯ ಭಾವವನ್ನು ಮೂಡಿಸುವಂತೆ ಚಿಂತನಶೀಲವಾಗಿ ರಚಿಸಲಾಗಿದೆ. ಯಮಹಾ, ಬ್ರ್ಯಾಂಡ್‌ನ ಹೆಮ್ಮೆಯ ರೇಸಿಂಗ್ ಪರಂಪರೆಯನ್ನು ಪ್ರತಿನಿಧಿಸುವ “ಬ್ಲೂ (ನೀಲಿ)” ಬಣ್ಣ ಮತ್ತು ಗ್ರಾಹಕರು ಯಮಹಾದ ಹರ್ಷದಾಯಕ ಮತ್ತು ಸೊಗಸಾದ ಶ್ರೇಣಿಯ ದ್ವಿಚಕ್ರ ವಾಹನಗಳೊಂದಿಗೆ ಸಂಪರ್ಕ ಸಾಧಿಸಲು ರಚಿಸಲಾದ ಪ್ಲಾಟ್‌ಫಾರ್ಮ್ ಅನ್ನು ಸಂಕೇತಿಸುವ “ಸ್ಕ್ವೇರ್” ಸಂಯೋಜನೆಯ ಮೂಲಕ ಗ್ರಾಹಕರೊಂದಿಗೆ ಉತ್ತಮ ಸಂಪರ್ಕವನ್ನು ಸಾಧಿಸಿದೆ.

ಉದ್ಯಮ-ಪ್ರಧಾನ ಅನುಭವವನ್ನು ಒದಗಿಸುವುದರ ಜತೆಗೆ, ಈ ಬ್ಲೂ ಸ್ಕ್ವೇರ್ ಔಟ್‌ಲೆಟ್‌ಗಳು ಬ್ಲೂ ಸ್ಟ್ರೀಕ್ಸ್ ರೈಡರ್‌ಗಳಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತವೆ. ಯಮಹಾದ ವಿಶೇಷ ಬೈಕರ್ ಸಮುದಾಯದ ಸವಾರರು ಇತರ ಸವಾರರನ್ನು ಭೇಟಿ ಮಾಡಲು ಮತ್ತು ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ. ಹೊಸ ಔಟ್‌ಲೆಟ್ ಸೇರಿದಂತೆ ಈಗ ಕರ್ನಾಟಕ ಮಾರುಕಟ್ಟೆಯಲ್ಲಿ ಯಮಹಾ 23 ಎಕ್ಸ್‌ಕ್ಲೂಸಿವ್ ಬ್ಲೂ ಸ್ಕ್ವೇರ್ ಶೋ ರೂಂಗಳನ್ನು ಹೊಂದಿದೆ.

ಯಮಹಾದ ಸೂಪರ್‌ಸ್ಪೋರ್ಟ್ ಆರ್3 (321ಸಿಸಿ), ಟಾರ್ಕ್-ರಿಚ್ ಎಂಟಿ -03 (321 ಸಿಸಿ) ಮತ್ತು ಮ್ಯಾಕ್ಸಿ-ಸ್ಪೋರ್ಟ್ಸ್ ಏರಾಕ್ಸ್(155 ಸಿಸಿ) ಮತ್ತು ಏರಾಕ್ಸ್ ವರ್ಷನ್ ಎಸ್ (155 ಸಿಸಿ)ಗಳನ್ನು ಬ್ಲೂ ಸ್ಕ್ವೇರ್ ಶೋರೂಮ್‌ಗಳ ಮೂಲಕ ವಿಶೇಷವಾಗಿ ಮಾರಾಟ ಮಾಡಲಾಗುತ್ತದೆ. ಈ ಪ್ರೀಮಿಯಂ ಔಟ್‌ಲೆಟ್‌ಗಳು ವೈಝಡ್‌ಎಫ್‌-ಆರ್‌15 ಎಂ (155 ಸಿಸಿ), ವೈಝಡ್‌ಎಫ್‌-ಆರ್‌15 ವಿ4 (155ಸಿಸಿ), ವೈಝಡ್‌ಎಫ್‌-ಆರ್‌15ಎಸ್ ವಿ3 (155 ಸಿಸಿ), ಎಂಟಿ-15 ವಿ2 (155 ಸಿಸಿ), ಬ್ಲೂ ಕೋರ್ ತಂತ್ರಜ್ಞಾನ ಆಧರಿತ ಮಾಡೆಲ್ ಗಳಾದ ಎಫ್‌ಝಡ್‌ಎಸ್‌-ಎಫ್‌ಐ ವರ್ಷನ್ 4.0 (149 ಸಿಸಿ), ಎಫ್‌ಝಡ್‌ಎಸ್‌-ಎಫ್‌ಐ ವರ್ಷನ್ 3.0 (149 ಸಿಸಿ), ಎಫ್‌ಝಡ್‌-ಎಫ್‌ಐ ವರ್ಷನ್ 3.0 (149 ಸಿಸಿ), ಎಫ್‌ಝಡ್‌-ಎಕ್ಸ್ (149 ಸಿಸಿ), ಮತ್ತು ಸ್ಕೂಟರ್ ಗಳಾದ ಫ್ಯಾಸಿನೋ 125 ಎಫ್ಐ ಹೈಬ್ರಿಡ್ (125 ಸಿಸಿ), ರೇ ಝಡ್ಆರ್ 125 ಎಫ್ಐ ಹೈಬ್ರಿಡ್ (125 ಸಿಸಿ), ರೇ ಝಡ್ಆರ್ ಸ್ಟ್ರೀಟ್ ರಾಲಿ 125 ಎಫ್ಐ ಹೈಬ್ರಿಡ್ (125 ಸಿಸಿ) ಮುಂತಾದ ನವೀಕರಿಸಿದ ಲೈನ್-ಅಪ್‌ಗಳನ್ನು ಪ್ರದರ್ಶಿಸಲಾಗುತ್ತದೆ.

ಇದನ್ನೂ ಓದಿ: Vastu Tips: ನೆಲ ಒರೆಸುವಾಗಲೂ ವಾಸ್ತು ನಿಯಮ ಪಾಲಿಸಲೇಬೇಕು!

ಹೆಚ್ಚು ಸಮಗ್ರವಾದ ಅನುಭವವನ್ನು ಒದಗಿಸುವ ಭರವಸೆಯನ್ನು ನೀಡುತ್ತಾ, ಈ ಪ್ರೀಮಿಯಂ ಬ್ಲೂ ಸ್ಕ್ವೇರ್ ಔಟ್‌ಲೆಟ್‌ಗಳು ಯಮಹಾದ ನಿಜವಾದ ಆ್ಯಕ್ಸೆಸರೀಸ್‌ಗಳು, ಅಧಿಕೃತ ಉಡುಪುಗಳು ಮತ್ತು ಯಮಹಾ ನಿಜವಾದ ಬಿಡಿಭಾಗಗಳನ್ನು ಗ್ರಾಹಕರಿಗೆ ಪ್ರದರ್ಶನ ಮತ್ತು ಮಾರಾಟ ಮಾಡುತ್ತವೆ.

Continue Reading
Advertisement
Karnataka Rain
ಮಳೆ33 seconds ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Bhavani Revanna hide Not Present For SIT Questioning At Home
ಕರ್ನಾಟಕ4 mins ago

Bhavani Revanna: ಭವಾನಿ ರೇವಣ್ಣ ಕಣ್ಣಾಮುಚ್ಚಾಲೆ ಆಟ; ಎಸ್ ಐ ಟಿಗೆ ಅರೆಸ್ಟ್ ಮಾಡಿ ಜೈಲಿಗಟ್ಟುವ ಹಟ!

IND vs PAK
ಕ್ರಿಕೆಟ್11 mins ago

IND vs PAK: ಇಂಡೋ-ಪಾಕ್​ ಹೈವೋಲ್ಟೇಜ್​ ಟಿ20 ಪಂದ್ಯ ವೀಕ್ಷಿಸಲು ಅಭಿಮಾನಿಗಳ ಹಿಂದೇಟು; ಇನ್ನೂ ಮಾರಾಟವಾಗಿಲ್ಲ ಟಿಕೆಟ್​

Foeticide Case Foeticide another Case in Bagalkot
ಬಾಗಲಕೋಟೆ43 mins ago

Foeticide Case: ಬಾಗಲಕೋಟೆಯಲ್ಲಿ ಮತ್ತೊಂದು ಭ್ರೂಣ ಹತ್ಯೆ: ಗಾಢ ನಿದ್ರೆಯಲ್ಲಿದ್ದಾರಾ ಅಧಿಕಾರಿಗಳು?

Healthy Sandwich Spread
ಆರೋಗ್ಯ47 mins ago

Healthy Sandwich Spread: ಮನೆಯಲ್ಲೇ ಮಾಡಿ ಕಡಿಮೆ ಕ್ಯಾಲರಿಯ ಆರೋಗ್ಯಕರ ಸ್ಯಾಂಡ್‌ವಿಚ್‌ ಸ್ಪ್ರೆಡ್‌!

Taiwan Athletics Open
ಕ್ರೀಡೆ59 mins ago

Taiwan Athletics Open: ತೈವಾನ್‌ ಓಪನ್​ನಲ್ಲಿ ಚಿನ್ನ ಗೆದ್ದ ಕನ್ನಡಿಗ ಡಿ.ಪಿ. ಮನು

Assembly Election Results 2024:
ದೇಶ60 mins ago

Assembly Election Results 2024: ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ, ಸಿಕ್ಕಿಂನಲ್ಲಿ ಕ್ಲೀನ್‌ ಸ್ವೀಪ್‌ನತ್ತ SKM

Man
ಆರೋಗ್ಯ60 mins ago

Health Tips For Rainy Season: ಮಳೆಗಾಲ ಶುರುವಾಗಿದೆ, ಅನಾರೋಗ್ಯಕ್ಕೆ ತುತ್ತಾಗದಿರಲು ಈ ಸಲಹೆ ಪಾಲಿಸಿ

WhatsApp Features
ಗ್ಯಾಜೆಟ್ಸ್1 hour ago

WhatsApp Features: ವಾಟ್ಸ್ ಆ್ಯಪ್ ನಲ್ಲಿರುವ ಈ 7 ವಿಶೇಷ ಫೀಚರ್ ಗಳ ಬಗ್ಗೆ ಗೊತ್ತೇ? ನೀವೂ ಬಳಸಿ

USA vs CAN
ಕ್ರೀಡೆ1 hour ago

USA vs CAN: ಆರನ್ ಜೋನ್ಸ್ ಪ್ರಚಂಡ ಬ್ಯಾಟಿಂಗ್​; ಗೆಲುವಿನ ಶುಭಾರಂಭ ಕಂಡ ಅಮೆರಿಕ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Liquor ban
ಬೆಂಗಳೂರು18 hours ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ3 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು5 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ6 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ7 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು7 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 weeks ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

ಟ್ರೆಂಡಿಂಗ್‌