Phone Charging Tips: ಫೋನ್‌ಗಳನ್ನು ಚಾರ್ಜ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! - Vistara News

ಗ್ಯಾಜೆಟ್ಸ್

Phone Charging Tips: ಫೋನ್‌ಗಳನ್ನು ಚಾರ್ಜ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!

ಫೋನ್ ಚಾರ್ಜ್ ಮಾಡುವುದು (Phone Charging Mistakes) ಎಲ್ಲರ ಬದುಕಿನ ದೈನಂದಿನ ದಿನಚರಿಯ ಒಂದು ಭಾಗವಾಗಿದೆ. ಫೋನ್‌ಗಳ ಬ್ಯಾಟರಿ ಅವಧಿಯನ್ನು ಆಗಾಗ ಮೇಲ್ವಿಚಾರಣೆ ಮಾಡುವ ಜೊತೆಗೆ ಫೋನ್ ಬ್ಯಾಟರಿ ಬೇಗನೆ ಖಾಲಿಯಾಗದಂತೆ ನೋಡಿಕೊಳ್ಳಲು ಚಾರ್ಜಿಂಗ್ ವೇಳೆ ಕೆಲವೊಂದು ಅಭ್ಯಾಸಗಳು ಪಾಲಿಸುವುದು ಬಹುಮುಖ್ಯ. ಅವು ಯಾವುದು ಎನ್ನುವುದರ ಕುರಿತು ಇಲ್ಲಿದೆ ಮಾಹಿತಿ. ಈ ಟಿಪ್ಸ್‌ಗಳನ್ನು ಪಾಲಿಸಿ, ಬ್ಯಾಟರಿ ಬಾಳಿಕೆ ಹೆಚ್ಚಿಸಿ. ಜತೆಗೆ ನೀವೂ ಅಪಾಯದಿಂದ ಪಾರಾಗಿ.

VISTARANEWS.COM


on

Phone Charging Tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಳಗ್ಗೆ ಶೇ. 100ರಷ್ಟು ಚಾರ್ಜ್ ಮಾಡಿದ್ದ ಫೋನ್ ಬ್ಯಾಟರಿ (Phone Charging Tips) ಮಧ್ಯಾಹ್ನಕ್ಕೆ ಖಾಲಿಯಾಗುತ್ತದೆ. ಮಧ್ಯಾಹ್ನ ಮಾಡಿದ್ದು ಸಂಜೆ ವೇಳೆಗೆ ಬ್ಯಾಟರಿ ಲೋ (Battery Low) ತೋರಿಸುತ್ತದೆ. ಹೊಸ ಫೋನ್ ಬ್ಯಾಟರಿಯಲ್ಲಿ (New Phone battery) ಏನೂ ಸಮಸ್ಯೆ ಇರಲಿಕ್ಕಿಲ್ಲ. ಆದರೂ ಯಾಕೆ ಹೀಗಾಗುತ್ತಿದೆ ಎನ್ನುವ ಪ್ರಶ್ನೆ ಮೂಡುವುದು ಸಹಜ.

ಫೋನ್ ಚಾರ್ಜ್ ಮಾಡುವುದು ಎಲ್ಲರ ಬದುಕಿನ ದೈನಂದಿನ ದಿನಚರಿಯ ಒಂದು ಭಾಗವಾಗಿ ಬಿಟ್ಟಿದೆ. ಅಲ್ಲದೇ ಫೋನ್ ಗಳ ಬ್ಯಾಟರಿ ಅವಧಿಯನ್ನು ಆಗಾಗ್ಗೆ ಮೇಲ್ವಿಚಾರಣೆ ನಡೆಸುತ್ತಿರುತ್ತೇವೆ. ಫೋನ್ ಬ್ಯಾಟರಿ ಬೇಗನೆ ಖಾಲಿಯಾಗದಂತೆ ನೋಡಿಕೊಳ್ಳಲು ಚಾರ್ಜಿಂಗ್ ವೇಳೆ ಕೆಲವೊಂದು ಅಭ್ಯಾಸಗಳು ಬಹು ದೊಡ್ಡ ಪಾತ್ರವನ್ನು ವಹಿಸುತ್ತವೆ.


ಪೂರ್ಣ ಖಾಲಿ ಆಗುವ ಮೊದಲೇ ಚಾರ್ಜ್‌ಗೆ ಇಡಬೇಡಿ

ಆಧುನಿಕ ಫೋನ್‌ಗಳು ಬಹುತೇಕವಾಗಿ ಪುನರ್ ಭರ್ತಿ ಮಾಡಬಹುದಾದ ಲಿಥಿಯಂ- ಐಯಾನ್ ಬ್ಯಾಟರಿಗಳನ್ನು ಬಳಸುತ್ತವೆ. ಈ ಬ್ಯಾಟರಿಗಳಿಗೆ ಹೆಚ್ಚು ಸಂಗ್ರಹ ಸಾಮರ್ಥ್ಯ ಇದೆ. ಆದರೆ ಇವು ಕೆಲವು ಮಿತಿಗಳನ್ನು ಹೊಂದಿವೆ. ನಿರ್ದಿಷ್ಟವಾಗಿ ಹೇಳುವುದಾದರೆ ಸಂಪೂರ್ಣವಾಗಿ ಬರಿದಾಗಲು ಅಥವಾ ಈಗಾಗಲೇ ತುಂಬಿರುವಾಗ ಚಾರ್ಜ್ ಆಗಲು ಈ ಬ್ಯಾಟರಿಗಳು ಸೂಕ್ತವಲ್ಲ.

ಅನ್ ಪ್ಲಗ್ ಮಾಡಲು ಮರೆಯದಿರಿ

ಫೋನ್ ಅನ್ನು ನಿರ್ದಿಷ್ಟ ಗಂಟೆಗಳ ಕಾಲ ಮಾತ್ರ ಚಾರ್ಜ್ ಮಾಡಿ. ನಿಗದಿತ ಸಮಯಕ್ಕಿಂತ ಹೆಚ್ಚು ಕಾಲ ಚಾರ್ಜ್ ಮಾಡಲು ಇಡದಿರಿ. ಬ್ಯಾಟರಿ ಶೇ. 100 ಆದಾಗ ಕೂಡಲೇ ಅನ್‌ಪ್ಲಗ್ ಮಾಡಿ. ಬಹಳಷ್ಟು ಫೋನ್‌ಗಳು ತುಂಬಿದ ಅನಂತರ ಚಾರ್ಜ್ ಆಗುವುದನ್ನು ನಿಲ್ಲಿಸುವ ಸಿಸ್ಟಮ್‌ಗಳನ್ನು ಒಳಗೊಂಡಿವೆ. ಆದರೆ ಇವುಗಳ ಕಾರ್ಯವಿಧಾನದ ಮೇಲೆ ನೀವು ಅನ್‌ಪ್ಲಗ್ ಮಾಡದೇ ಇದ್ದರೆ ಪರಿಣಾಮ ಬೀರಬಹುದು. ಸ್ಫೋಟ ಆಗಲೂಬಹುದು.


ಬೆಚ್ಚಗಿನ ಸ್ಥಳದಲ್ಲಿ ಚಾರ್ಜ್ ಮಾಡಬೇಡಿ

ಬೆಚ್ಚಗಿನ ಸ್ಥಳದಲ್ಲಿ ಇಟ್ಟು ಫೋನ್‌ ಚಾರ್ಜ್ ಮಾಡಬೇಡಿ. ಯಾಕೆಂದರೆ ಬ್ಯಾಟರಿಯ ಆರೋಗ್ಯಕ್ಕಿಂತ ನಿಮ್ಮ ಸುರಕ್ಷತೆಯ ಬಗ್ಗೆ ಹೆಚ್ಚು ಗಮನ ನೀಡಿ. ಫೋನ್‌ಗಳನ್ನು ಹೆಚ್ಚು ಚಾರ್ಜ್ ಮಾಡುವುದರಿಂದ ಬ್ಯಾಟರಿ ತುಂಬಿ ಗಮನಾರ್ಹವಾದ ಉಷ್ಣತೆಗೆ ಕಾರಣವಾಗುತ್ತದೆ. ಇದು ಮೊಬೈಲ್ ಸ್ಫೋಟಕ್ಕೂ ಕಾರಣವಾಗಬಹುದು. ಹೀಗಾಗಿ ಮೊಬೈಲ್ ಅನ್ನು ಸುರಕ್ಷಿತ ಸ್ಥಳದಲ್ಲಿ ಇಟ್ಟು ಚಾರ್ಜ್ ಮಾಡಿ.

ಉತ್ತಮ ಗುಣಮಟ್ಟದ ಕೇಬಲ್‌, ಪ್ಲಗ್‌ ಬಳಸಿ

ಫೋನ್ ಪಡೆದ ಕೆಲವು ವರ್ಷಗಳ ಅನಂತರವೂ ಮೂಲ ಚಾರ್ಜಿಂಗ್ ಕೇಬಲ್ ಮತ್ತು ಪ್ಲಗ್ ಹೊಂದಿದ್ದರೆ ಅದನ್ನು ಬದಲಾಯಿಸುವುದು ಉತ್ತಮ. ಅಗ್ಗದ ಬದಲಿಗೆ ಹೆಚ್ಚು ಗುಣಮಟ್ಟಕ್ಕೆ ಆದ್ಯತೆ ನೀಡಿ.

ಇದನ್ನೂ ಓದಿ: Phone Storage Issue: ನಿಮ್ಮ ಮೊಬೈಲ್ ಸ್ಟೋರೇಜ್ ಸಮಸ್ಯೆಗೆ ಇಲ್ಲಿದೆ ಸರಳ ಪರಿಹಾರ!


ಬ್ಯಾಟರಿ ಉಳಿಸಿ

ಮೊಬೈಲ್‌ನಲ್ಲಿ ಕೆಲವು ಆಪ್‌ಗಳು ಮೊಬೈಲ್ ಬ್ಯಾಟರಿ ಲೈಫ್ ಅನ್ನು ಉಳಿಸುತ್ತದೆ. ಇಂತಹ ಆಪ್‌ಗಳನ್ನು ಡೌನ್ ಲೋಡ್ ಮಾಡಿಕೊಳ್ಳಿ. ಸಾಧ್ಯವಾದಷ್ಟು ಮೊಬೈಲ್‌ನಲ್ಲಿ ಬ್ಯಾಟರಿ ಸೇವ್ ಮೋಡ್ ಬಳಸಿ. ಅನಗತ್ಯವಾದ ಆಪ್‌ಗಳ ನೋಟಿಫಿಕೇಶನ್‌ಗಳನ್ನು ಆಫ್ ಮಾಡಿ.

ಚಾರ್ಜ್‌ಗೆ ಇಟ್ಟು ಸ್ಟ್ರೀಮಿಂಗ್ ನೋಡಬೇಡಿ

ಚಾರ್ಜ್ ಗೆ ಇಟ್ಟು ಮೊಬೈಲ್‌ನಲ್ಲಿ ವಿಡಿಯೋ ನೋಡುವುದು, ಗೇಮ್ ಆಡುವುದು, ಕರೆ ರಿಸೀವ್ ಮಾಡುವುದು ಹೆಚ್ಚು ಅಪಾಯಕಾರಿ. ಇದರಿಂದ ಫೋನ್‌ಗಳು ಹೆಚ್ಚು ಬಿಸಿಯಾಗುತ್ತವೆ. ಯಾವಾಗ ಬೇಕಾದರೂ ಸ್ಫೋಟಗೊಂಡು ಭಾರಿ ಅಪಾಯ ಸಂಭವಿಸಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

Mukesh Ambani Mobile: ಮುಕೇಶ್ ಅಂಬಾನಿ, ನೀತಾ ಅಂಬಾನಿ ಯಾವ ಮೊಬೈಲ್‌ ಬಳಸುತ್ತಾರೆ? ಅವುಗಳ ವೈಶಿಷ್ಟ್ಯ ಏನೇನು?

Mukesh Ambani Mobile: ಅಯೋಧ್ಯೆ ರಾಮ ಮಂದಿರದ ಉದ್ಘಾಟನೆ ಸಮಾರಂಭದಲ್ಲಿ ಪತ್ನಿ ನೀತಾ ಅಂಬಾನಿ ಅವರೊಂದಿಗೆ ಆಗಮಿಸಿದ್ದ ರಿಲಯನ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಅವರು ಬಳಸುತ್ತಿರುವ ಫೋನ್ ಎಲ್ಲರ ಗಮನ ಸೆಳೆಯಿತು. ಮುಕೇಶ್ ಅಂಬಾನಿ (Mukesh Ambani) ಬಳಸುತ್ತಿದ್ದ ಈ ಫೋನ್ ಅತ್ಯಂತ ದುಬಾರಿಯಾಗಿದೆ. ಇದಕ್ಕೆ ಕಾರಣವೂ ಇದೆ. ಅದು ಏನು ಎಂಬ ಮಾಹಿತಿ ಇಲ್ಲಿದೆ. ವಿಶೇಷ ಏನೆಂದರೆ, ಮುಕೇಶ್‌ ಅಂಬಾನಿ ಮತ್ತು ನೀತಾ ಅಂಬಾನಿ ಒಂದೇ ಮಾಡೆಲ್‌ನ ಮೊಬೈಲ್‌ ಫೋನ್‌ ಬಳಸುತ್ತಾರೆ.

VISTARANEWS.COM


on

By

Mukesh Ambani Mobile
Koo

ರಿಲಾಯನ್ಸ್ ಇಂಡಸ್ಟ್ರೀಸ್ (Reliance Industries) ಮಾಲೀಕ ಮತ್ತು ಭಾರತದ ಶ್ರೀಮಂತ ವ್ಯಕ್ತಿ (India’s richest man) ಮುಕೇಶ್ ಅಂಬಾನಿ (Mukesh Ambani) ಅವರು ಧರಿಸುವ, ಬಳಸುವ ಪ್ರತಿಯೊಂದು ವಸ್ತುವಿನ ಬಗ್ಗೆಯೂ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಪತ್ನಿ ನೀತಾ ಅಂಬಾನಿ (nita ambani) ಅವರೊಂದಿಗೆ ಪಾಲ್ಗೊಂಡಿದ್ದ ಮುಕೇಶ್ ಅಂಬಾನಿ ಅವರ ಕೈಯಲ್ಲಿದ್ದ ಫೋನ್ (Mukesh Ambani Mobile) ಎಲ್ಲರ ಗಮನ ಸೆಳೆದಿತ್ತು.

ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯಾಗಿ ಸುಮಾರು ಎಂಟು ತಿಂಗಳಾಗುತ್ತ ಬಂದರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಲೆಬ್ರಿಟಿಗಳು, ವಿಐಪಿಗಳು ಎಲ್ಲರ ಗಮನ ಸೆಳೆದಿರುವುದು ಇನ್ನೂ ಚರ್ಚೆಯಾಗುತ್ತಲೇ ಇದೆ. ಮುಕೇಶ್ ಅಂಬಾನಿ ಕೂಡ ತಮ್ಮ ಕುಟುಂಬದೊಂದಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಎಲ್ಲರ ಗಮನ ಸೆಳೆದಿದ್ದು ಅವರು ಬಳಸುತ್ತಿದ್ದ ಫೋನ್.

ಅದ್ಧೂರಿ ಸಮಾರಂಭದಲ್ಲಿ ಮುಖೇಶ್ ಅಂಬಾನಿ ತಮ್ಮ ಪತ್ನಿ ನೀತಾ ಅಂಬಾನಿ ಅವರೊಂದಿಗೆ ಕಾಣಿಸಿಕೊಂಡರು. ಅವರ ಕೈಯಲ್ಲಿದ್ದ ಸ್ಮಾರ್ಟ್ ಫೋನ್ ಎಲ್ಲರ ಗಮನ ಸೆಳೆಯಲು ಹಲವು ಕಾರಣಗಳಿವೆ. ಮುಕೇಶ್ ಅಂಬಾನಿ ಇತ್ತೀಚಿನ ಆಪಲ್ ಐಫೋನ್ ಅನ್ನು ಬಳಸುತ್ತಿದ್ದಾರೆ. ಐಫೋನ್ 15 ಪ್ರೊ ಮ್ಯಾಕ್ಸ್ ಕೇವಲ ಸಾಮಾನ್ಯ ಐಫೋನ್ ಅಲ್ಲ. ಇದು ಐಫೋನ್ 15 ಸರಣಿಯ ಅತ್ಯಂತ ದುಬಾರಿ ಮಾದರಿಯಾಗಿದೆ. ಈ ಫೋನ್‌ನ 256 GB ಮಾದರಿಯು ಸುಮಾರು 1.50 ಲಕ್ಷ ರೂ. ನದ್ದಾಗಿದೆ. 1 ಟಿಬಿ ಸ್ಟೋರೇಜ್ ರೂಪಾಂತರದ ಬೆಲೆ ಅಂದಾಜು 2 ಲಕ್ಷ ರೂ.

Mukesh Ambani
Mukesh Ambani


ನೀತಾ ಅಂಬಾನಿ ಫೋನ್

ನೀತಾ ಅಂಬಾನಿ ಕೂಡ ಅದೇ ಮಾದರಿಯ ಐಫೋನ್ ಅನ್ನು ಬಳಸುತ್ತಿದ್ದಾರೆ. ಅನೇಕ ಇತರ ಪ್ರಮುಖ ವ್ಯಕ್ತಿಗಳು ಮತ್ತು ಸೆಲೆಬ್ರಿಟಿಗಳು ಈ ಫೋನ್ ಅನ್ನು ಅದರ ಅಸಾಧಾರಣ ವೈಶಿಷ್ಟ್ಯಗಳಿಗಾಗಿ ಆದ್ಯತೆ ನೀಡುತ್ತಾರೆ. ಐಫೋನ್ 15 ಪ್ರೊ ಮ್ಯಾಕ್ಸ್ ಅತ್ಯುತ್ತಮ ಕೆಮರಾ, ನೀರಿನ ಪ್ರತಿರೋಧ ಮತ್ತು ಅತ್ಯಂತ ಗಟ್ಟಿಮುಟ್ಟಾದ ವಿನ್ಯಾಸವನ್ನು ಹೊಂದಿದೆ. ಇದರ ವಿನ್ಯಾಸ ಮತ್ತು ವೈಶಿಷ್ಟ್ಯಗಳು ಉನ್ನತ ದರ್ಜೆಯದ್ದಾಗಿದ್ದು, ಪ್ರೀಮಿಯಂ ನೋಟ ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಪ್ರತಿಯೊಂದು ಅಂಶದಲ್ಲೂ ಈ ಫೋನ್ ಮಾರುಕಟ್ಟೆಯಲ್ಲಿನ ಇತರ ಸ್ಮಾರ್ಟ್‌ಫೋನ್‌ಗಳನ್ನು ಮೀರಿಸುತ್ತದೆ.

Mukesh Ambani
Mukesh Ambani


ಐಫೋನ್ 15 ಪ್ರೊ ಮ್ಯಾಕ್ಸ್ ನ ವೈಶಿಷ್ಟ್ಯಗಳು ಏನೇನು?

ಐಫೋನ್ 15 ಪ್ರೊ ಮ್ಯಾಕ್ಸ್ ಅಸಾಧಾರಣವಾದ ಫೋಟೋ ಮತ್ತು ವಿಡಿಯೋ ಗುಣಮಟ್ಟವನ್ನು ನೀಡುವ ಉನ್ನತ ಆಫ್ ಲೈನ್ ಕೆಮೆರಾವನ್ನು ಒಳಗೊಂಡಿದೆ.

ಇದನ್ನೂ ಓದಿ: Indian Currency: 2000 ರೂ. ನೋಟು ತಯಾರಿಸಲು 4 ರೂ. ಖರ್ಚು; 10 ರೂ. ನೋಟು ಮುದ್ರಿಸಲು 96 ಪೈಸೆ ಬೇಕು!

ಈ ಫೋನ್ ಜಲ ನಿರೋಧಕವಾಗಿದೆ (ವಾಟರ್‌ ಪ್ರೂಫ್‌) ಮತ್ತು ಬಲಿಷ್ಠ ಸಾಮಗ್ರಿಗಳಿಂದ ನಿರ್ಮಿಸಲಾಗಿದೆ. ಇದು ಯಾವುದೇ ಕಠಿಣ ಪರಿಸ್ಥಿತಿಗಳನ್ನು ತಡೆದುಕೊಳ್ಳುತ್ತದೆ.

ಐಫೋನ್ 15 ಪ್ರೊ ಮ್ಯಾಕ್ಸ್ ನ ನಯವಾದ ಮತ್ತು ಪ್ರೀಮಿಯಂ ವಿನ್ಯಾಸವು ಅದನ್ನು ಸೊಗಸಾದ ಆಯ್ಕೆಯನ್ನಾಗಿ ಮಾಡುತ್ತದೆ. ಹಲವು ಸುಧಾರಿತ ವೈಶಿಷ್ಟ್ಯಗಳು ಮತ್ತು ಶಕ್ತಿಯುತ ಕಾರ್ಯಕ್ಷಮತೆಯನ್ನು ಒಳಗೊಂಡಿದೆ. 256ಜಿಬಿ ಮತ್ತು 1 ಟಿಬಿ ಸೇರಿದಂತೆ ಮಲ್ಟಿ ಸ್ಟೋರೇಜ್‌ ರೂಪಾಂತರಗಳಲ್ಲಿ ಇದು ಲಭ್ಯವಿದೆ.

Continue Reading

ಸಿನಿಮಾ

Cable vs Ott: ಒಟಿಟಿ ಪೈಪೋಟಿ; ಕೇಬಲ್‌ ಟಿವಿ ವೀಕ್ಷಕರ ಸಂಖ್ಯೆ 12 ಕೋಟಿಯಿಂದ 9 ಕೋಟಿಗೆ ಇಳಿಕೆ!

Cable vs Ott: ದೇಶದಲ್ಲಿ ಟಿವಿ ಹೊಂದಿರುವವರ ಸಂಖ್ಯೆ 2018ರಲ್ಲಿ 197 ಮಿಲಿಯನ್‌ ಇತ್ತು. 2022ರಲ್ಲಿ ಈ ಸಂಖ್ಯೆ 210 ಮಿಲಿಯನ್‌ಗೆ (21 ಕೋಟಿ) ಏರಿದೆ ಎಂದು ದೆಹಲಿಯ ಸ್ಥಳೀಯ ಕೇಬಲ್ ಆಪರೇಟರ್ ಅಸೋಸಿಯೇಷನ್ ತಿಳಿಸಿದೆ. ಆದರೆ ಕೇಬಲ್ ಟಿವಿ ಸೇವೆಗಳನ್ನು ಬಳಸುವ ಮನೆಗಳ ಸಂಖ್ಯೆ 2018ರಲ್ಲಿ 120 ಮಿಲಿಯನ್‌ (12 ಕೋಟಿ) ಇದ್ದಿದ್ದು 2020ರಲ್ಲಿ 90 ಮಿಲಿಯನ್‌ಗೆ (9 ಕೋಟಿ) ಇಳಿದಿದೆ ಮತ್ತು ಈ ಸಂಖ್ಯೆಗಳು ಕುಸಿಯುತ್ತಲೇ ಇದೆ. ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಜಿಯೋ ಟಿವಿ ಏರ್ ಲೀನಿಯರ್ ಕಂಟೆಂಟ್‌ಗಳು ಗ್ರಾಹಕರು, ವಿಶೇಷವಾಗಿ ಗೃಹಿಣಿಯರು, ವಿದ್ಯಾರ್ಥಿಗಳು ಮತ್ತು ಯುವಕರನ್ನು ಒಟಿಟಿ ಕಡೆಗೆ ಸೆಳೆಯುತ್ತಿದೆ. ಇದು ಕೇಬಲ್ ಟಿವಿ ಉದ್ಯಮವನ್ನು ಕೊಲ್ಲುತ್ತಿದೆ ಎಂದು ಕೇಬಲ್ ಆಪರೇಟರ್‌ಗಳ ಸಂಸ್ಥೆ ದೂರಿದೆ.

VISTARANEWS.COM


on

By

Cable Operators
Koo

ಉದ್ಯಮಿ ಮುಕೇಶ್ ಅಂಬಾನಿ (Businessman Mukesh Ambani) ಒಡೆತನದ ಜಿಯೋ ಟಿವಿ (Jio TV) ಒಟಿಟಿ ಪ್ಲ್ಯಾಟ್ ಫಾರ್ಮ್‌ನಿಂದಾಗಿ (OTT platform) ತಮ್ಮ ವ್ಯವಹಾರದ (Cable vs Ott) ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ. ಹೀಗಾಗಿ ಜಿಯೋ ಟಿವಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿ ಮೂಲದ ಕೇಬಲ್ ಆಪರೇಟರ್‌ಗಳ ಸಂಸ್ಥೆಯು (Cable Operators) ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾಗೆ (TRAI) ಮನವಿ ಸಲ್ಲಿಸಿದೆ.

ಕೇಬಲ್ ಟಿವಿ ಉದ್ಯಮದಲ್ಲಿ ಉಂಟಾದ ಉದ್ಯೋಗ ಕಡಿತ ಮತ್ತು ಭಾರೀ ಆರ್ಥಿಕ ನಷ್ಟಕ್ಕೆ ಇದೂ ಕಾರಣ ಎಂದು ಹೇಳಿರುವ ಕೇಬಲ್ ಆಪರೇಟರ್‌ಗಳ ಸಂಸ್ಥೆಯು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಜಿಯೋ ಟಿವಿ ತನ್ನ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಲೈವ್ ಮತ್ತು ಇತರ ವಿಷಯವನ್ನು ಪ್ರಸಾರ ಮಾಡುವ ಮೂಲಕ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ದೆಹಲಿಯ ಎಲ್ಲಾ ಸ್ಥಳೀಯ ಕೇಬಲ್ ಆಪರೇಟರ್ ಅಸೋಸಿಯೇಷನ್ ​​(ALCOA) ಆರೋಪಿಸಿದೆ.

1995ರ ಕೇಬಲ್ ಕಾಯಿದೆಯನ್ನು ಉಲ್ಲೇಖಿಸಿರುವ ದೆಹಲಿಯ ಎಲ್ಲಾ ಸ್ಥಳೀಯ ಕೇಬಲ್ ಆಪರೇಟರ್ ಅಸೋಸಿಯೇಷನ್, ಕೇವಲ ಮಲ್ಟಿ-ಸಿಸ್ಟಮ್ ಆಪರೇಟರ್‌ಗಳು (MSOs), ಹೆಡೆಂಡ್ ಇನ್ ದಿ ಸ್ಕೈ (HITS) ಆಪರೇಟರ್‌ಗಳು, ಡೈರೆಕ್ಟ್- ಟು- ಹೋಮ್ (DTH) ಪ್ಲೇಯರ್‌ಗಳು ಮತ್ತು ಐಪಿಟಿವಿ ಪೂರೈಕೆದಾರರಿಗೆ ಮಾತ್ರ ಲೈವ್ ವಿಷಯವನ್ನು ಪ್ರಸಾರ ಮಾಡಲು ಅನುಮತಿಸಬೇಕು. ಆದರೆ ಜಿಯೋ ಲೈವ್ ವಿಷಯವನ್ನು ಸ್ಟ್ರೀಮಿಂಗ್ ಮಾಡುವ ಮೂಲಕ ಟಿವಿ ನಿಯಮಗಳನ್ನು ಉಲ್ಲಂಘಿಸುತ್ತಿದೆ.

Cable Operators
Cable Operators


ಟಿವಿ ಹೊಂದಿರುವವರ ಸಂಖ್ಯೆ 2018ರಲ್ಲಿ 197 ಮಿಲಿಯನ್‌ ಇತ್ತು. 2022ರಲ್ಲಿ ಈ ಸಂಖ್ಯೆ 210 ಮಿಲಿಯನ್‌ಗೆ (21 ಕೋಟಿ) ಏರಿದೆ ಎಂದು ದೆಹಲಿಯ ಸ್ಥಳೀಯ ಕೇಬಲ್ ಆಪರೇಟರ್ ಅಸೋಸಿಯೇಷನ್ ತಿಳಿಸಿದೆ. ಆದರೆ ಕೇಬಲ್ ಟಿವಿ ಸೇವೆಗಳನ್ನು ಬಳಸುವ ಮನೆಗಳ ಸಂಖ್ಯೆ 2018ರಲ್ಲಿ 120 ಮಿಲಿಯನ್‌ (12 ಕೋಟಿ) ಇದ್ದಿದ್ದು 2020ರಲ್ಲಿ 90 ಮಿಲಿಯನ್‌ಗೆ (9 ಕೋಟಿ) ಇಳಿದಿದೆ ಮತ್ತು ಈ ಸಂಖ್ಯೆಗಳು ಕುಸಿಯುತ್ತಲೇ ಇದೆ. ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಜಿಯೋ ಟಿವಿ ಏರ್ ಲೀನಿಯರ್ ಕಂಟೆಂಟ್‌ಗಳು ಗ್ರಾಹಕರು, ವಿಶೇಷವಾಗಿ ಗೃಹಿಣಿಯರು, ವಿದ್ಯಾರ್ಥಿಗಳು ಮತ್ತು ಯುವಕರನ್ನು ಒಟಿಟಿ ಕಡೆಗೆ ಸೆಳೆಯುತ್ತಿದೆ. ಇದು ಕೇಬಲ್ ಟಿವಿ ಉದ್ಯಮವನ್ನು ಕೊಲ್ಲುತ್ತಿದೆ ಎಂದು ಕೇಬಲ್ ಆಪರೇಟರ್‌ಗಳ ಸಂಸ್ಥೆ ದೂರಿದೆ.

ಜಿಯೋ ಟಿವಿ ತನ್ನ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಶ್ರೀಲಂಕಾ ಕ್ರಿಕೆಟ್ ಪಂದ್ಯಗಳನ್ನು ಉಚಿತವಾಗಿ ಸ್ಟ್ರೀಮ್ ಮಾಡುವುದರಿಂದ ಕೇಬಲ್ ಆಪರೇಟರ್‌ಗಳಿಗೆ ಸಮಸ್ಯೆಯಾಗಿದೆ. ಕೇಬಲ್ ಟಿವಿ ಉದ್ಯಮವು ಟೆನ್ ಸ್ಪೋರ್ಟ್ಸ್ ಲೈವ್ ಕಂಟೆಂಟ್‌ಗೆ 19 ರೂ. ಜೊತೆಗೆ ಜಿಎಸ್‌ಟಿಯನ್ನು ಪಾವತಿಸುತ್ತಿದೆ. ಜಿಯೋ ಟಿವಿ ಒಟಿಟಿ ಇದನ್ನು ಗ್ರಾಹಕರಿಗೆ ಉಚಿತವಾಗಿ ನೀಡುತ್ತಿದೆ ಎಂದು ಕೇಬಲ್ ಆಪರೇಟರ್‌ಗಳು ತಿಳಿಸಿದ್ದಾರೆ.

ಇದನ್ನೂ ಓದಿ: Jio Games: ಜಿಯೋಗೇಮ್ಸ್‌ನಲ್ಲಿ ಗೂಗಲ್‌ನ ಗೇಮ್‌ಸ್ನ್ಯಾಕ್ಸ್‌ ಗೇಮ್ಸ್‌ ಲಭ್ಯ

ಇದು ಅನ್ಯಾಯದ ಸ್ಪರ್ಧೆಯಾಗಿದೆ. ಇದು ಭಾರತೀಯ ಕೇಬಲ್ ಟಿವಿ ಉದ್ಯಮವನ್ನು ನಾಶಪಡಿಸುತ್ತದೆ. ಬ್ರಾಡ್‌ಕಾಸ್ಟರ್ ಲೈವ್ ಭಾರತ ವಿರುದ್ಧ ಶ್ರೀಲಂಕಾ ಸರಣಿ ವಿಷಯವನ್ನು ಜಿಯೋ ಟಿವಿಗೆ ಹೇಗೆ ಒದಗಿಸುತ್ತಿದೆ ಎಂದು ಕೇಬಲ್‌ ಒಕ್ಕೂಟದವರು ಪ್ರಶ್ನಿಸಿದ್ದಾರೆ.

Continue Reading

ಗ್ಯಾಜೆಟ್ಸ್

Phone Storage Issue: ನಿಮ್ಮ ಮೊಬೈಲ್ ಸ್ಟೋರೇಜ್ ಸಮಸ್ಯೆಗೆ ಇಲ್ಲಿದೆ ಸರಳ ಪರಿಹಾರ!

ಫೋನ್‌ನಲ್ಲಿ ಸ್ಟೋರೇಜ್ ಸಮಸ್ಯೆ ಎದುರಾಗುವುದು ಸಾಮಾನ್ಯ. ವಿಶೇಷವಾಗಿ ಅನೇಕ ಅಪ್ಲಿಕೇಶನ್‌, ಫೋಟೋ, ವಿಡಿಯೋಗಳು ಮತ್ತು ಇತರ ಫೈಲ್‌ಗಳನ್ನು ಹೆಚ್ಚಾಗುತ್ತಾ ಹೋದಂತೆ ಫೋನ್ ನಲ್ಲಿ ಜಾಗದ ಸಮಸ್ಯೆ (Phone Storage Issue) ಎದುರಾಗುತ್ತದೆ. ಹೊಸ ಫೋನ್ ಖರೀದಿಸದೆಯೇ ಫೋನ್‌ನಲ್ಲಿ ಜಾಗವನ್ನು ಮುಕ್ತಗೊಳಿಸಲು ಕೆಲವು ಸುಲಭ ಮಾರ್ಗಗಳು ಇಲ್ಲಿವೆ.

VISTARANEWS.COM


on

By

Phone Storage Issue
Koo

ಎಲ್ಲರ ಫೋನ್ ನಲ್ಲಿ (phone) ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ ಎಂದರೆ ಸ್ಟೋರೇಜ್ (Phone Storage Issue). ಎಷ್ಟೇ ಒಳ್ಳೆಯ ಫೋನ್ ಆಗಿದ್ದರೂ ವರ್ಷ ಕಳೆಯುವಷ್ಟರಲ್ಲಿ ಸ್ಟೋರೇಜ್ ಫುಲ್ (storage full) ಎಂಬುದಾಗಿ ತೋರಿಸಲು ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ ನಾವು ಜೋಪಾನ ಮಾಡಿ ಇಡಬೇಕು ಎಂದುಕೊಂಡಿರುವ ಫೈಲ್, ಫೋಟೋ, ವಿಡಿಯೋಗಳನ್ನು ಇಷ್ಟವಿಲ್ಲದೇ ಇದ್ದರೂ ಡಿಲೀಟ್ ಮಾಡಲೇಬೇಕಾದ ಸಂದರ್ಭ ಎದುರಾಗುತ್ತದೆ.

ಫೋನ್‌ನಲ್ಲಿ ಸ್ಟೋರೇಜ್ ಸಮಸ್ಯೆ ಎದುರಾಗುವುದು ಸಾಮಾನ್ಯ. ವಿಶೇಷವಾಗಿ ಅನೇಕ ಅಪ್ಲಿಕೇಶನ್‌, ಫೋಟೋ, ವಿಡಿಯೋಗಳು ಮತ್ತು ಇತರ ಫೈಲ್‌ಗಳನ್ನು ಹೆಚ್ಚಾಗುತ್ತಾ ಹೋದಂತೆ ಫೋನ್ ನಲ್ಲಿ ಜಾಗದ ಸಮಸ್ಯೆ ಎದುರಾಗುತ್ತದೆ.
ಹೊಸ ಫೋನ್ ಖರೀದಿಸದೆಯೇ ಫೋನ್‌ನಲ್ಲಿ ಜಾಗವನ್ನು ಮುಕ್ತಗೊಳಿಸಲು ಕೆಲವು ಸುಲಭ ಮಾರ್ಗಗಳು ಇಲ್ಲಿವೆ.

Phone Storage Issue
Phone Storage Issue


ಅನಗತ್ಯ ಅಪ್ಲಿಕೇಶನ್‌ಗಳನ್ನು ಅಳಿಸಿ

ಸಾಮಾನ್ಯವಾಗಿ ನಮಗೆ ಬೇಡವಾದ ಸಾಕಷ್ಟು ಆಪ್ ಗಳು ಮೊಬೈಲ್ ನಲ್ಲಿ ತುಂಬಿಕೊಂಡಿರುತ್ತವೆ. ಎಷ್ಟೋ ಸಂದರ್ಭದಲ್ಲಿ ಕೆಲವೊಂದು ಆಪ್ ಗಳನ್ನು ನಾವು ಬಳಸುವುದೇ ಇಲ್ಲ. ಇಂತಹ ಆಪ್ ಗಳನ್ನೂ ಅಳಿಸಿ. ಇದರಿಂದ ನೋಟಿಫಿಕೇಶನ್ ಗಳನ್ನು ತಪ್ಪಿಸಬಹುದು. ಜೊತೆಗೆ ಮೊಬೈಲ್ ನಲ್ಲಿ ಹೆಚ್ಚು ಸ್ಪೇಸ್ ಸೃಷ್ಟಿಸಬಹುದು.

ಕ್ಲೌಡ್‌ ಸೇವೆಗಳನ್ನು ಬಳಸಿ

ಫೋಟೋ, ವಿಡಿಯೋಗಳನ್ನು ಸಂಗ್ರಹಿಸಲು ಗೂಗಲ್ ಫೋಟೋಗಳು, ಒನ್ ಡ್ರೈವ್ ಅಥವಾ ಯಾವುದೇ ಇತರ ಕ್ಲೌಡ್ ಸಂಗ್ರಹಣೆಯಂತಹ ಕ್ಲೌಡ್ ಸಂಗ್ರಹಣೆ ಸೇವೆಗಳನ್ನು ಬಳಸಿ. ಇದು ಫೋನ್‌ನಲ್ಲಿ ಸಾಕಷ್ಟು ಜಾಗವನ್ನು ಮುಕ್ತಗೊಳಿಸುತ್ತದೆ. ಇದು ಅನೇಕ ಸಂಗ್ರಹಣೆ ಸಮಸ್ಯೆಗಳನ್ನು ನಿವಾರಿಸುತ್ತದೆ.

Phone Storage Issue
Phone Storage Issue


ಚಾಟಿಂಗ್ ಆಪ್ ಡೇಟಾಗಳನ್ನು ಅಳಿಸಿ

ವಾಟ್ಸಾಪ್, ಟೆಲಿಗ್ರಾಮ್ ನಂತಹ ಅಪ್ಲಿಕೇಶನ್‌ಗಳಿಂದ ಹಳೆಯ ಸಂದೇಶ, ವಿಡಿಯೋ ಮತ್ತು ಫೋಟೋಗಳನ್ನು ಅಳಿಸುವುದು ಉತ್ತಮ ಆಯ್ಕೆಯಾಗಿದೆ. ವಾಟ್ಸಾಪ್ ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ಅನಗತ್ಯ ಡೇಟಾವನ್ನು ತೆಗೆದುಹಾಕಲು ಸಂಗ್ರಹ ನಿರ್ವಹಣೆ ಆಯ್ಕೆಯನ್ನು ಆರಿಸಿ. ಹೆಚ್ಚುವರಿಯಾಗಿ ದೀರ್ಘ ಅಥವಾ ಅನಗತ್ಯ ಆಡಿಯೋ ಮತ್ತು ವಿಡಿಯೋ ಫೈಲ್ ಗಳನ್ನು ಅಳಿಸಿ. ಈ ಫೈಲ್‌ಗಳನ್ನು ಕಂಪ್ಯೂಟರ್ ಅಥವಾ ಬಾಹ್ಯ ಹಾರ್ಡ್ ಡ್ರೈವ್‌ಗೆ ವರ್ಗಾಯಿಸಿ ಇಟ್ಟುಕೊಳ್ಳಬಹುದು.

ಇದನ್ನೂ ಓದಿ: Honor 200 Series : ಒಂದೇ ದಿನ 2 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ಹಾನರ್

ವಾಲ್‌ಪೇಪರ್‌, ರಿಂಗ್‌ಟೋನ್‌ಗಳನ್ನು ಆಪ್ಟಿಮೈಜ್ ಮಾಡಿ

ಹೆಚ್ಚಿನ ರೆಸಲ್ಯೂಶನ್ ಇರುವ ವಾಲ್‌ಪೇಪರ್‌ ಮತ್ತು ರಿಂಗ್‌ಟೋನ್‌ಗಳನ್ನು ಬಳಸುವುದನ್ನು ತಪ್ಪಿಸಿ. ಯಾಕೆಂದರೆ ಅವುಗಳು ಸಾಕಷ್ಟು ಜಾಗವನ್ನು ತೆಗೆದುಕೊಳ್ಳುತ್ತದೆ. ಮೊಬೈಲ್ ನಲ್ಲಿ ಹೆಚ್ಚು ಸ್ಟೋರೇಜ್ ಆಗುವುದನ್ನು ತಪ್ಪಿಸಲು ಎಸ್ ಡಿ ಕಾರ್ಡ್ ಬಳಸಿ. ಕೆಲವನ್ನು ಆಪ್ಟಿಮೈಜ್ ಮಾಡುವುದರಿಂದ ಫೋನ್ ಅನ್ನು ಅಪ್‌ಡೇಟ್ ಮಾಡಿ. ಇದು ಫೋನ್ ನಲ್ಲಿರುವ ಸಂಗ್ರಹಣೆ ಸಮಸ್ಯೆಗಳನ್ನು ಪರಿಹರಿಸುತ್ತದೆ.

Continue Reading

ತಂತ್ರಜ್ಞಾನ

Alternative to Whatsapp: ವಾಟ್ಸಾಪ್ ಸ್ಥಗಿತಗೊಂಡರೆ ಏನ್‌ ಮಾಡೋದು? ಇಲ್ಲಿದೆ ಪರ್ಯಾಯ ಆ್ಯಪ್‌ಗಳ ಪಟ್ಟಿ

ವಾಟ್ಸಾಪ್ ಭಾರತಕ್ಕೆ ಬಂದಾಗಿನಿಂದ ಜನರು ಪರಸ್ಪರ ಮಾಹಿತಿಯನ್ನು ಹಂಚಿಕೊಳ್ಳುವುದು ಸುಲಭವಾಗಿದೆ. ಪಠ್ಯ ಸಂದೇಶಗಳು, ಆಡಿಯೋ, ವಿಡಿಯೋ ಸೇರಿದಂತೆ ಹಲವು ವಿಷಯಗಳನ್ನು ಹಂಚಿಕೊಳ್ಳುವ ವೇದಿಕೆಯಾಗಿತ್ತು. ಈಗಾಗಲೇ ಹಲವಾರು ಬಾರಿ ಭಾರತದಲ್ಲಿ ವಾಟ್ಸಾಪ್ ನಿಷೇಧವಾಗುವ (Whatsapp Shutdown) ಬೆದರಿಕೆ ಹಾಕಲಾಗಿತ್ತು. ಒಂದು ವೇಳೆ ವಾಟ್ಸಾಪ್ ನಿಷೇಧಿಸಲ್ಪಟ್ಟರೆ ಭಾರತೀಯರಿಗೆ ಇರುವ ಮುಂದಿನ ಆಯ್ಕೆ ಏನು? ಎನ್ನುವ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Whatsapp Shutdown
Koo

ಹೊಸ ಐಟಿ ನಿಯಮಗಳು (New IT Rules) ಬಂದಾಗಿನಿಂದ ದೇಶದಲ್ಲಿ (Alternative to Whatsapp) ವಾಟ್ಸಾಪ್ ನಿಷೇಧವಾಗುವ (Whatsapp Shutdown) ಆತಂಕ ಎದುರಾಗಿದೆ. 53.58 ಕೋಟಿಗಿಂತಲೂ ಹೆಚ್ಚು ಭಾರತೀಯ ಗ್ರಾಹಕರು (Indian customers) ಬಳಸಲ್ಪಡುತ್ತಿರುವ ವಾಟ್ಸಾಪ್ (whatsapp) ಒಂದು ವೇಳೆ ನಿಷೇಧಿಸಲ್ಪಟ್ಟರೆ ಮುಂದೇನು ಎನ್ನುವ ಚಿಂತೆ ಹೆಚ್ಚಿನವರನ್ನು ಕಾಡಲಾರಂಭಿಸಿದೆ.

ವಾಟ್ಸಾಪ್ ಭಾರತಕ್ಕೆ ಬಂದಾಗಿನಿಂದ ಜನರು ಪರಸ್ಪರ ಮಾಹಿತಿಯನ್ನು ಹಂಚಿಕೊಳ್ಳುವುದು ಸುಲಭವಾಗಿದೆ. ಅದು ಪಠ್ಯ ಸಂದೇಶಗಳು ಅಥವಾ ಆಡಿಯೋ, ವಿಡಿಯೋ ಹೀಗೆ ಎಲ್ಲವನ್ನೂ ಸುಲಭವಾಗಿ ಹಂಚಿಕೊಳ್ಳಲು ವೇದಿಕೆಯನ್ನು ಸೃಷ್ಟಿಸಿತ್ತು. ಈಗಾಗಲೇ ಹಲವಾರು ಬಾರಿ ಭಾರತದಲ್ಲಿ ವಾಟ್ಸಾಪ್ ನಿಷೇಧವಾಗುವ ಬೆದರಿಕೆ ಹಾಕಲಾಗಿತ್ತು. ಒಂದು ವೇಳೆ ವಾಟ್ಸಾಪ್ ನಿಷೇಧಿಸಲ್ಪಟ್ಟರೆ ಭಾರತೀಯರಿಗೆ ಇರುವ ಮುಂದಿನ ಆಯ್ಕೆ ಏನು?

Whatsapp Shutdown
Whatsapp Shutdown


ವಾಟ್ಸಾಪ್ ದೇಶದಲ್ಲಿ ಸ್ಥಗಿತಗೊಂಡರೆ ಗ್ರಾಹಕರು ಉಳಿದ ಚಾಟಿಂಗ್ ಆಪ್‌ಗಳತ್ತ ಹೊರಳುವ ಸಾಧ್ಯತೆ ಇದೆ. ಭಾರತದಲ್ಲಿ ವಾಟ್ಸಾಪ್‌ಗೆ ಪರ್ಯಾಯವಾಗಿ ಹಲವು ಆಯ್ಕೆಗಳಿವೆ.

Whatsapp Shutdown
Whatsapp Shutdown


ಟೆಲಿಗ್ರಾಮ್

ಟೆಲಿಗ್ರಾಮ್ ವಾಟ್ಸಾಪ್‌ಗೆ ಪರ್ಯಾಯವಾಗಿರಬಹುದು. ಟೆಲಿಗ್ರಾಮ್ ಚಾಟಿಂಗ್, ಗ್ರೂಪ್ ಚಾಟ್, ಧ್ವನಿ, ವಿಡಿಯೋ ಕರೆಗಳು ಮತ್ತು ವಾಟ್ಸಾಪ್‌ನಂತೆಯೇ ಫೈಲ್ ಹಂಚಿಕೆಯಂತಹ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇದಲ್ಲದೆ ಟೆಲಿಗ್ರಾಮ್ ಚಾನೆಲ್ ಮೂಲಕ ಹೆಚ್ಚಿನ ಜನರನ್ನು ಸಂಪರ್ಕಿಸುವುದು ಸಾಧ್ಯವಿದೆ.

Whatsapp Shutdown
Whatsapp Shutdown


ಸಿಗ್ನಲ್

ಸಿಗ್ನಲ್ ಮೆಸೇಜಿಂಗ್ ಅಪ್ಲಿಕೇಶನ್ ಆಗಿದ್ದು, ಇದು ಭಾರತದಲ್ಲಿ ನಿಧಾನವಾಗಿ ಜನಪ್ರಿಯವಾಗುತ್ತಿದೆ. ಇದು ವಾಟ್ಸಾಪ್ ನಂತೆಯೇ ಹಲವು ವೈಶಿಷ್ಟ್ಯಗಳನ್ನು ಗ್ರಾಹಕರಿಗೆ ನೀಡುತ್ತದೆ.

Whatsapp Shutdown
Whatsapp Shutdown


ಸ್ನ್ಯಾಪ್ ಚಾಟ್

ವಾಟ್ಸಾಪ್‌ಗೆ ಪರ್ಯಾಯವಾಗಿ ಸ್ನ್ಯಾಪ್ ಚಾಟ್ ಅನ್ನು ಅತ್ಯುತ್ತಮ ಆಯ್ಕೆಯಾಗಿ ಇರಿಸಬಹುದು. ಇದರ ಮೂಲಕ ಪರಸ್ಪರ ಚಿತ್ರಗಳು ಮತ್ತು ಫೈಲ್‌ಗಳನ್ನು ಹಂಚಿಕೊಳ್ಳಬಹುದು.


ಇದನ್ನೂ ಓದಿ: Whatsapp Shutdown: ಭಾರತದಲ್ಲಿ ಇನ್ಮುಂದೆ ಬಂದ್‌ ಆಗುತ್ತಾ ವಾಟ್ಸ್‌ಆ್ಯಪ್‌? ಕೇಂದ್ರ ಸರ್ಕಾರ ಹೇಳೋದೇನು?

ವಾಟ್ಸಾಪ್ ಸ್ಥಗಿತವಾದರೆ ಏನು ಸಮಸ್ಯೆ?

ಭಾರತದಲ್ಲಿ ವಾಟ್ಸಾಪ್ ತನ್ನ ಸೇವೆಯನ್ನು ಸ್ಥಗಿತಗೊಳಿಸಿದರೆ ಗ್ರಾಹಕರು ಮುಖ್ಯವಾಗಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಯಾಕೆಂದರೆ ಈ ಆಪ್ ಅನ್ನು ಸಾಕಷ್ಟು ಗ್ರಾಹಕರು ಹಲವಾರು ವರ್ಷಗಳಿಂದ ಬಳಸುತ್ತಿದ್ದಾರೆ. ಇದರಿಂದ ಬೇರೆ ಆಪ್ ಗೆ ಹೊಂದಿಕೊಳ್ಳಲು ಸಾಕಷ್ಟು ಕಾಲಾವಕಾಶ ಬೇಕಾಗಬಹುದು. ಆಗ ಕೆಲವೊಂದು ಸಮಸ್ಯೆಗಳು ಎದುರಾಗಬಹುದು. ಆದರೂ ಪರ್ಯಾಯ ಆಪ್‌ಗಳಿಗೆ ಜನ ಕ್ರಮೇಣ ಒಗ್ಗಿಕೊಳ್ಳಬಹುದು.

Continue Reading
Advertisement
Vinay Rajkumar pepe preset Vinay Rajkumar Shreelesh S Nair
ಸ್ಯಾಂಡಲ್ ವುಡ್6 mins ago

Vinay Rajkumar: ʻಪೆಪೆ’ ಸಿನಿಮಾದಲ್ಲಿ ಜೇನು ಕುರುಬ ಸಾಂಗ್: ಚಿತ್ರತಂಡದ ವಿಭಿನ್ನ ಪ್ರಯತ್ನಕ್ಕೆ ಪ್ರೇಕ್ಷಕರ ಜೈಕಾರ!

Mary Kom
ಕ್ರೀಡೆ10 mins ago

Mary Kom: ಒಂದೇ ತಾಸಿನಲ್ಲಿ 2 ಕೆಜಿ ತೂಕ ಇಳಿಸಿ ಚಿನ್ನ ಗೆದ್ದಿದ್ದ ಬಾಕ್ಸರ್​ ಮೇರಿ ಕೋಮ್

Repo Rate
ವಾಣಿಜ್ಯ13 mins ago

Repo Rate: ಗೃಹಸಾಲದ ಇಎಂಐ ಭಾರ ಇಳಿಕೆ ಇಲ್ಲ; ರೆಪೋ ದರ ಯಥಾಸ್ಥಿತಿ

Naga Chaitanya Nagarjuna Called Sobhita Dhulipala Hot
ಟಾಲಿವುಡ್20 mins ago

Naga Chaitanya: ನಾನು ಹೀಗೆ ಹೇಳಬಾರದು..ಆದರೂ ಶೋಭಿತಾ ತುಂಬಾ ಹಾಟ್‌ ಎಂದಿದ್ದ ನಾಗಾರ್ಜುನ; ವಿಡಿಯೊ ವೈರಲ್‌!

Henna Jihad
ದೇಶ32 mins ago

Henna Jihad: ಹಿಂದೂ ಮಹಿಳೆಯರಿಗೆ ಮುಸ್ಲಿಮರು ಮೆಹಂದಿ ಹಚ್ಚಿದರೆ ಹುಷಾರ್‌! ಭುಗಿಲೆದ್ದ ಹೆನ್ನಾ ಜಿಹಾದ್‌ ವಿವಾದ

lalbagh flower show 2024
ಪ್ರಮುಖ ಸುದ್ದಿ36 mins ago

Lalbagh Flower Show: ಸಸ್ಯಕಾಶಿಯಲ್ಲಿ ಇಂದಿನಿಂದ ಫಲಪುಷ್ಪ ಪ್ರದರ್ಶನ; ಏನೇನಿದೆ, ಪಾರ್ಕಿಂಗ್‌ ಎಲ್ಲಿ, ಟಿಕೆಟ್‌ ದರ ಎಷ್ಟು?

Gold Rate Today
ಚಿನ್ನದ ದರ41 mins ago

Gold Rate Today: ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ; ಬಂಗಾರ ಇಂದು ಇಷ್ಟು ಅಗ್ಗ

ಉದ್ಯೋಗ47 mins ago

Banking Recruitment 2024: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 896 ಸ್ಪೆಷಲಿಸ್ಟ್ ಆಫೀಸರ್ ಹುದ್ದೆ; ಆಯ್ಕೆ ಪ್ರಕ್ರಿಯೆ ಹೇಗೆ? Complete Details

Actor Yash journey begins Yash Gave Update On Toxic Movie
ಸ್ಯಾಂಡಲ್ ವುಡ್49 mins ago

Actor Yash:  ʻಟಾಕ್ಸಿಕ್‌ʼ ಪಯಣ ಶುರುವಾಗಿದೆ ಎಂದು ಗುಡ್‌ ನ್ಯೂಸ್‌ ಕೊಟ್ಟ ರಾಕಿಂಗ್‌ ಸ್ಟಾರ್‌ ಯಶ್‌!

head master self harming
ಕ್ರೈಂ58 mins ago

Self Harming: ಇಬ್ಬರು ಇನ್‌ಸ್ಪೆಕ್ಟರ್‌ಗಳ ಬಳಿಕ ಹೆಡ್‌ಮಾಸ್ಟರ್‌ ಶಾಲೆಯಲ್ಲೇ ಆತ್ಮಹತ್ಯೆ; ಏನಾಗ್ತಿದೆ ರಾಜ್ಯದಲ್ಲಿ?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Wild Animals Attack
ಚಿಕ್ಕಮಗಳೂರು2 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ5 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ7 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ7 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ7 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ1 week ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

ಟ್ರೆಂಡಿಂಗ್‌