Nokia Logo: 60 ವರ್ಷಗಳ ನಂತರ ಲೋಗೋ ಬದಲಿಸಿದ ನೋಕಿಯಾ; ನೀಲಿ ಬಣ್ಣ ಹೋಯ್ತು, ಅಕ್ಷರಗಳ ವಿನ್ಯಾಸ ಬದಲಾಯ್ತು - Vistara News

ತಂತ್ರಜ್ಞಾನ

Nokia Logo: 60 ವರ್ಷಗಳ ನಂತರ ಲೋಗೋ ಬದಲಿಸಿದ ನೋಕಿಯಾ; ನೀಲಿ ಬಣ್ಣ ಹೋಯ್ತು, ಅಕ್ಷರಗಳ ವಿನ್ಯಾಸ ಬದಲಾಯ್ತು

ನೋಕಿಯಾ ತನ್ನ ಕಾರ್ಯತಂತ್ರ ಬದಲಿಸಿಕೊಂಡು, ಟೆಲಿಕಾಂ ಉಪಕರಣದ ಮಾರುಕಟ್ಟೆಯಲ್ಲಿ ಆಕ್ರಮಣಕಾರಿಯಾಗಿ ಮುಂದುವರಿಯಲು ಯೋಜನೆ ರೂಪಿಸಿದ್ದು, ಅದರ ಮೊದಲ ಹಂತವಾಗಿ ತನ್ನ ಬ್ರ್ಯಾಂಡ್​ ಗುರುತನ್ನು ಬದಲಿಸಿಕೊಂಡಿದೆ.

VISTARANEWS.COM


on

Nokia changes Logo for the First time In 60 Years
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹಿಂದೊಂದು ಕಾಲದಲ್ಲಿ ಮೊಬೈಲ್​ ಎಂದರೆ ಅದು ‘ನೋಕಿಯಾ’ ಎಂಬಂತಿತ್ತು. ಸಣ್ಣ ಬೇಸಿಕ್​ ಸೆಟ್​​ನಿಂದ ಆ್ಯಂಡ್ರಾಯ್ಡ್​ವರೆಗೆ ನೋಕಿಯಾ ಕಂಪನಿಯದ್ದೇ ಕಾರುಬಾರು. ಆದರೆ ಈಗ ಆ್ಯಂಡ್ರಾಯ್ಡ್​ ಮಾರ್ಕೆಟ್​​ನಲ್ಲಿ ನೋಕಿಯಾ ಬೇಡಿಕೆ ಕುಸಿದಿದೆ. ನೋಕಿಯಾ ಸ್ಮಾರ್ಟ್​ಫೋನ್​ಗಳನ್ನು ಖರೀದಿಸುವವರೇ ಇಲ್ಲವೆಂಬಂತಾಗಿದೆ. ಇದೇ ಹೊತ್ತಲ್ಲಿ ನೋಕಿಯಾ ಕಂಪನಿ ಈಗ 60 ವರ್ಷಗಳ ನಂತರ ತನ್ನ ‘ಲೋಗೋ’ವನ್ನು ಬದಲಿಸಿದೆ.

ನೋಕಿಯಾ ತನ್ನ ಕಾರ್ಯತಂತ್ರ ಬದಲಿಸಿಕೊಂಡು, ಟೆಲಿಕಾಂ ಉಪಕರಣದ ಮಾರುಕಟ್ಟೆಯಲ್ಲಿ ಆಕ್ರಮಣಕಾರಿಯಾಗಿ ಮುಂದುವರಿಯಲು ಯೋಜನೆ ರೂಪಿಸಿದ್ದು, ಅದರ ಮೊದಲ ಹಂತವಾಗಿ ತನ್ನ ಬ್ರ್ಯಾಂಡ್​ ಗುರುತನ್ನು ಬದಲಿಸಿಕೊಂಡಿದೆ. ಇಷ್ಟು ವರ್ಷಗಳ ಕಾಲ ಇದ್ದ ನೀಲಿ ಬಣ್ಣದ ಲೋಗೋವನ್ನು ಕೈಬಿಟ್ಟಿದೆ. ಇದೀಗ ಹೊಸ ಲೋಗೋದಲ್ಲಿ NOKIA ಎಂಬ ಶಬ್ದವನ್ನು ಐದು ವಿಭಿನ್ನ ಆಕಾರಗಳಲ್ಲಿ ರೂಪಿಸಲಾಗಿದ್ದು, ಗಮನಸೆಳೆಯುತ್ತದೆ. ಹಾಗೇ, ಲೋಗೊ ಬಳಕೆಗೆ ತಕ್ಕಂತೆ ಬಣ್ಣವನ್ನೂ ಬದಲಿಸುವುದಾಗಿ ಕಂಪನಿ ಹೇಳಿದೆ.

ಇದನ್ನೂ ಓದಿ: Nokia 5710 | 4,999 ರೂ.ಗೆ ನೋಕಿಯಾ 5710 ಫೋನ್! ಜತೆಗೇ ಇಯರ್‌ಬಡ್ಸ್ ಫ್ರೀ!

ಫಿನ್​ಲ್ಯಾಂಡ್​ ಮೂಲದ ನೋಕಿಯಾ ಕಂಪನಿಗೆ 2020ರಲ್ಲಿ ಸಿಇಒ ಆಗಿ ನೇಮಕಗೊಂಡಿರುವ ಪೆಕ್ಕಾ ಲುಂಡ್ಮಾರ್ಕ್ ಅವರು ಈ ಕಂಪನಿಯನ್ನು ಮತ್ತೆ ಉದ್ಧರಿಸಲು ನಿರ್ಧಾರ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಮರುಜೋಡಣೆ, ವೇಗ ಹೆಚ್ಚಳ ಮತ್ತು ಮಾನದಂಡ ಎಂಬ ಮೂರು ಹಂತದ ಕಾರ್ಯತಂತ್ರ ರೂಪಿಸಿದ್ದಾಗಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ನೋಕಿಯಾ ಕಂಪನಿಯನ್ನು ಮರು ಜೋಡಣೆ ಮಾಡುವ ಕೆಲಸ ಪೂರ್ಣಗೊಂಡಿದ್ದು, ಈಗ ಎರಡನೇ ಹಂತದಲ್ಲಿದ್ದೇವೆ. ಅಂದರೆ ನೋಕಿಯಾ ಕಂಪನಿಯ ಕಾರ್ಯ ವೇಗವನ್ನು ಹೆಚ್ಚಿಸುವ ಕೆಲಸದಲ್ಲಿ ತೊಡಗಿದ್ದೇವೆ ಎಂದೂ ಅವರು ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Akasa Air: ಗೋರಖ್​ಪುರದಿಂದ ದೆಹಲಿ ಮತ್ತು ಬೆಂಗಳೂರಿಗೆ ಆಕಾಶ ಏರ್ ನೇರ ವಿಮಾನ

Akasa Air: ಗೋರಖಪುರದಿಂದ ದೆಹಲಿ ಮತ್ತು ಬೆಂಗಳೂರಿಗೆ ಪ್ರತಿನಿತ್ಯ ಹಾರಾಟ ಮಾಡುವಂತಹ ವಿಮಾನ ಸಂಪರ್ಕವನ್ನು ಕಲ್ಪಿಸಿದ ಆಕಾಶ ಏರ್ ಪ್ರಯಾಣಿಕರಿಗೆ ಅನೇಕ ಗುಣಮಟ್ಟದ ಉತ್ಪನ್ನಗಳು ಹಾಗೂ ವಿಭಿನ್ನ ಸೇವೆಗಳನ್ನು ಪರಿಚಯಿಸಿದೆ. ಪ್ರಯಾಣಿಕರಿಗೆ ಕೈಗೆಟಕುವ ದರಗಳಲ್ಲಿ ಎಲ್ಲವನ್ನು ಒಳಗೊಂಡ ಮತ್ತು ಅಗತ್ಯಕ್ಕೆ ತಕ್ಕಂತೆ ಬದಲಾಯಿಸಬಹುದಾದಂತಹ ರಜಾ ಪ್ಯಾಕೇಜ್ ಅನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

VISTARANEWS.COM


on

Akasa Air
Koo

ದೆಹಲಿ: ಭಾರತದ ಪ್ರಸಿದ್ಧ ವಿಮಾನಸಂಸ್ಥೆಯಾದ ಆಕಾಶ ಏರ್ (Akasa Air) ಗೋರಖ್​ಪುರದಿಂದ ದೆಹಲಿ ಮತ್ತು ಬೆಂಗಳೂರಿಗೆ ಪ್ರತಿನಿತ್ಯ ವಿಮಾನ ಸಂಪರ್ಕವನ್ನು ಕಲ್ಪಿಸಿದೆ. 2024 ಮೇ 29 ರಂದು ಸೇವೆ ಆರಂಭಗೊಂಡಿದ್ದು  ಮೊದಲ ವಿಮಾನ ಹಾರಾಟವು ಮಹಾಯೋಗಿ ಗೋರಖ್​ನಾಥ್ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 2:45 ಗಂಟೆಗೆ ಹೊರಟು, ಸಂಜೆ 4 ಗಂಟೆಗೆ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ತಲುಪಲಿದೆ.

ಇದು  ಉತ್ತರ ಪ್ರದೇಶದಲ್ಲಿ ಹೆಚ್ಚುತ್ತಿರುವ ಜನರ ಬೇಡಿಕೆಯನ್ನು ಪೂರೈಸುವ ಮೂಲಕ ಆಕಾಶ ಏರ್ ತನ್ನ  ಖ್ಯಾತಿಯನ್ನು ಹೆಚ್ಚಿಸಿಕೊಂಡಿದೆ. ಅಲ್ಲದೇ ಗೋರಖಪುರ ಹಾಗೂ ಬೆಂಗಳೂರ ನಡುವೆ ನೇರ ವಿಮಾನ ಸಂಪರ್ಕವನ್ನು ಕಲ್ಪಸಿದ ಏಕೈಕ ಸಂಸ್ಥೆ ಆಕಾಶ ಏರ್ ಎನಿಸಿಕೊಂಡಿದೆ. ದೇಶದಾದ್ಯಂತ ಮೆಟ್ರೋ ಹಾಗೂ ಮೆಟ್ರೋ ಇಲ್ಲದ ನಗರಗಳಿಗೆ ತಡೆರಹಿತ ಸಂಪರ್ಕ ಒದಗಿಸಬೇಕೆನ್ನುವ ವಿಮಾನ ಸಂಸ್ಥೆಯ ಧೋರಣೆಯನ್ನು ಎತ್ತಿ ಹಿಡಿದಿದೆ.

ಇತಿಹಾಸ ಮತ್ತು ಸಂಸ್ಕೃತಿಯ ಭಂಡಾರವಾದ ಗೋರಖಪುರ ನಗರ ಅತಿ ಶೀಘ್ರದಲ್ಲಿಯೇ ಆರ್ಥಿಕ ಕೇಂದ್ರವಾಗಿ ಪರಿವರ್ತನೆಗೊಳ್ಳುವುದರಲ್ಲಿ ಅನುಮಾನವಿಲ್ಲ. ಹಾಗೇ ಈ ನಗರ ತಮ್ಮ ಮೂಲ ಸೌಕರ್ಯಗಳ ಮೂಲಕ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಮೆಟ್ರೋ ನಗರಗಳಾದ ಬೆಂಗಳೂರು ಮತ್ತು ದೆಹಲಿಯಲ್ಲಿ ಪ್ರತಿನಿತ್ಯದ ವಿಮಾನ ಹಾರಾಟ ಮತ್ತು ವಿಮಾನ ಪ್ರಯಾಣದಲ್ಲಿ ಕೈಗೆಟಕ್ಕುವ ಆಯ್ಕೆಗಳನ್ನು ಒದಗಿಸಿ ಈ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಇದು ಕಾರಣವಾಗಿದೆ.

ಈ ಸಂಸ್ಥೆಯ ವತಿಯಿಂದ ವಿಮಾನ ಹಾರಾಟ ಪ್ರಾರಂಭವಾದಾಗಿನಿಂದಲೂ ಉತ್ತರ ಪ್ರದೇಶದಲ್ಲಿ ಪ್ರಗತಿ ಹೆಚ್ಚುತ್ತಿದೆ. ಮತ್ತು  ಈ ಪ್ರದೇಶದಲ್ಲಿ ಇದು ತನ್ನ ಅಸ್ತಿತ್ವವನ್ನು ಬಲವಾಗಿ ನೆಲೆಯೂರಲಿದೆ ಎನ್ನಲಾಗಿದೆ. ಈಗ ಈ ರಾಜ್ಯದಲ್ಲಿ ಲಕ್ನೌ, ವಾರಣಾಸಿ, ಅಯೋಧ್ಯ, ಪ್ರಯಾಗ ಹಾಗೂ ಗೋರಖಪುರ ಸೇರಿದಂತೆ 5 ಮೆಟ್ರೋ ನಗರಗಳನ್ನು ದೇಶದಾದ್ಯಂತ ಇರುವ ಇತರ ಮೆಟ್ರೋಗಳೊಂದಿಗೆ ತಡೆರಹಿತವಾಗಿ ಸಂಪರ್ಕಿಸುತ್ತಿದೆ.

ಪ್ರಯಾಣಿಕರು ಆರಾಮದಾಯಕವಾದ ಪ್ರಯಾಣದ ಅನುಭವವನ್ನು ಪಡೆಯುತ್ತಿದ್ದಾರೆಯೇ ಎಂಬುದನ್ನು ತಿಳಿಯಲು ಆಕಾಶ ಏರ್ ಅನೇಕ ಗುಣಮಟ್ಟದ ಉತ್ಪನ್ನಗಳು ಹಾಗೂ ವಿಭಿನ್ನ ಸೇವೆಗಳನ್ನು ಪರಿಚಯಿಸಿದೆ. ಇದರಲ್ಲಿ ಕಾಲನ್ನು ಆರಾಮದಾಯಕವಾಗಿ ಇರಿಸಿಕೊಳ್ಳುವಂತೆ ಹೆಚ್ಚು ಸ್ಥಳಾವಕಾಶವಿರುವ ಸೀಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹಾಗೇ ಇದರಲ್ಲಿ ಯುಎಸ್ ಬಿ ಪೋರ್ಟ್ಸ್ ಅಳವಡಿಸಿದ್ದು, ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸುವಾಗಲೇ ತಮ್ಮ ಮೊಬೈಲ್ , ಇತರ ಸಾಧನಗಳನ್ನು ಚಾರ್ಜ್ ಮಾಡಬಹುದಾಗಿದೆ. ಇಲ್ಲಿ ‘café akasa’ ದ ಮೂಲಕ ಆಹಾರ ಸೇವೆಯನ್ನು ಒದಗಿಸಲಾಗುತ್ತದೆ. ಇದರಲ್ಲಿ ಹಬ್ಬದ ಮೆನುಗಳು, ಹಾಗೂ ಕೊಂಬುಚಾದಂತಹ ಆಯ್ಕೆಗಳಿವೆ. ಒಟ್ಟಾರೆ ಇಲ್ಲಿ ಆರೋಗ್ಯಕರವಾದ ಸ್ವಾದಿಷ್ಟ ಭೋಜನವನ್ನು ಪ್ರಯಾಣಿಕರಿಗೆ ಒದಗಿಸುತ್ತದೆ. ಹಾಗೇ ಪ್ರಯಾಣಿಕರು ತಮ್ಮ ಜೊತೆ ತಮ್ಮ ಸಾಕು ಪ್ರಾಣಿಗಳನ್ನು ಅವುಗಳ ತೂಕದ ಆಧಾರದ ಮೇಲೆ ಕ್ಯಾಬಿನ್ ಒಳಗೆ ಅಥವಾ ಕಾರ್ಗೋದಲ್ಲಿ ಕರೆದೊಯ್ಯಲು ಅವಕಾಶವಿದೆ. ಹಾಗೇಆಕಾಶಏರ್ ದೃಷ್ಟಿಮಾಂದ್ಯತೆಯಿರುವವರಿಗಾಗಿ ಬ್ರೇಲ್ ನಲ್ಲಿ ತನ್ನ ಸುರಕ್ಷತಾ ಸೂಚನಾಕಾರ್ಡ್ ಮತ್ತು ಆನ್ ಬೋರ್ಡ್ ಮೆನು ಕಾರ್ಡ್ ಪರಿಚಯಿಸಿದೆ. ಪ್ರಯಾಣಿಕರಿಗೆ ಕೈಗೆಟಕುವ ದರಗಳಲ್ಲಿ ಎಲ್ಲವನ್ನು ಒಳಗೊಂಡ ಮತ್ತು ಅಗತ್ಯಕ್ಕೆ ತಕ್ಕಂತೆ ಬದಲಾಯಿಸಬಹುದಾದಂತಹ ರಜಾ ಪ್ಯಾಕೇಜ್ಅನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ: Air India Flight: ಏರ್ ಇಂಡಿಯಾ ವಿಮಾನ 20 ಗಂಟೆ ವಿಳಂಬ; ಎಸಿ ಇಲ್ಲದೆ ಪ್ರಜ್ಞೆ ತಪ್ಪಿ ಬಿದ್ದ ಪ್ರಯಾಣಿಕರು

ಆಕಾಶ ಏರ್ ನ ನಿರಂತರವಾದ ಕಾರ್ಯ ಚರಣೆ ಸಾಮರ್ಥ್ಯಗಳು ಹಾಗೂ ಪ್ರಯಾಣಿಕರ ಮೆಚ್ಚುಗೆಯ ಮೂಲಕ ಅದು ಭಾರತದ ನಂಬರ್ ಒನ್ ಆಗಿದೆ ಮತ್ತು  ಕಳೆದ 12 ತಿಂಗಳುಗಳಿಂದ 85%ಗಿಂತ ಹೆಚ್ಚಿನ ಸರಾಸರಿ ಪ್ರಯಾಣಿಕರು ಇದರಲ್ಲಿ ಪ್ರಯಾಣಿಸುತ್ತಿದ್ದಾರೆ ಎನ್ನಲಾಗಿದೆ.

Continue Reading

ವೈರಲ್ ನ್ಯೂಸ್

Viral Video: ಹೃದಯ ಸ್ತಬ್ಧಗೊಳಿಸುವ ಈ 3ಡಿ ದೃಶ್ಯ ನೋಡಿ! ಇನ್ನಾದರು ಸುರಕ್ಷಿತವಾಗಿ ವಾಹನ ಚಲಾಯಿಸಿ

3ಡಿ ಕಲಾವಿದ ಮಜಿದ್ ಮೌಸವಿ ಅವರ ಕೈ ಚಳಕದಿಂದ ನಿರ್ಮಾಣವಾಗಿರುವ ಸುರಕ್ಷಿತ ವಾಹನ ಚಾಲನೆ ಬಗ್ಗೆ ಎಚ್ಚರಿಕೆ ನೀಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, (Viral Video) ವೀಕ್ಷಕರ ಹೃದಯ ಸ್ತಬ್ದಗೊಳಿಸುವಂತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನೂ ಜಾಗೃತಗೊಳಿಸುವಂತೆ ಮಾಡಿದೆ ಮಾತ್ರವಲ್ಲದೇ ಸಾಕಷ್ಟು ಚರ್ಚೆಯನ್ನೂ ಹುಟ್ಟು ಹಾಕಿದೆ.

VISTARANEWS.COM


on

By

Viral Video
Koo

ಕಲ್ಪನೆ ಮತ್ತು ವಾಸ್ತವವನ್ನು ಸೇರಿಸಿ ಮಾಡುವ ಆಕರ್ಷಕ ವಿಡಿಯೋಗಳಿಗೆ (video) ಹೆಸರುವಾಸಿಯಾಗಿರುವ ಪ್ರತಿಭಾವಂತ 3ಡಿ ಕಲಾವಿದ (3D artist) ಮಜಿದ್ ಮೌಸವಿ (Majid Mousavi) ಇದೀಗ ಮತ್ತೊಂದು ವಿಡಿಯೋವೊಂದನ್ನು (Viral Video) ಸಾಮಾಜಿಕ ಜಾಲತಾಣದಲ್ಲಿ (social media) ಹಾಕಿದ್ದು, ಇದು ಸಾಕಷ್ಟು ಮಂದಿಯ ಗಮನ ಸೆಳೆದಿದೆ.

ಅವರ ಇತ್ತೀಚಿನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನೂ ಜಾಗೃತಗೊಳಿಸುವಂತೆ ಮಾಡಿದೆ ಮಾತ್ರವಲ್ಲದೇ ಸಾಕಷ್ಟು ಚರ್ಚೆಯನ್ನೂ ಹುಟ್ಟು ಹಾಕಿದೆ.

ವಿಡಿಯೋದಲ್ಲಿ ಏನಿದೆ?

ಈ ವಿಡಿಯೋ ನೆಟ್ಟಿಗರನ್ನು ಚಿಂತೆಗೀಡು ಮಾಡುವಂತೆ ಮಾಡಿರುವುದು ಮಾತ್ರವಲ್ಲ ಜಾಗೃತಿಯನ್ನೂ ಮೂಡಿಸಿದೆ. ವಾಹನ ಚಾಲನೆ ಮಾಡುವಾಗ ವೇಗದ ಮಿತಿಗಳನ್ನು ಅನುಸರಿಸುವ ಪ್ರಾಮುಖ್ಯತೆಯನ್ನು ಅವರು ಈ ವಿಡಿಯೋ ಮೂಲಕ ಹೇಳಿದ್ದಾರೆ.

ಅಜಾಗರೂಕ ಚಾಲನೆಯ ಪರಿಣಾಮಗಳ ಕುರಿತು ಹೇಳುವ ಈ ವಿಡಿಯೋದಲ್ಲಿ ಖಾಲಿ ರಸ್ತೆಯಲ್ಲಿ ಬೈಕರ್ ವೇಗವಾಗಿ ವಾಹನ ಚಲಾಯಿಸುವುದನ್ನು ತೋರಿಸುತ್ತದೆ.

ಒಬ್ಬ ಬೈಕ್ ಸವಾರ ಟ್ರಕ್ ಅನ್ನು ಹಿಂದಿಕ್ಕಲು ಪ್ರಯತ್ನಿಸುತ್ತಾನೆ. ಆಗ ಅವನು ರಸ್ತೆಯ ಇನ್ನೊಂದು ಬದಿಗೆ ಚಲಿಸುತ್ತಾನೆ ಮತ್ತು ವೇಗವಾಗಿ ಬರುವ ಟ್ರಕ್‌ ಗೆ ಡಿಕ್ಕಿಯಾಗುತ್ತಾನೆ. ಅಲ್ಲಿಗೆ ಒಂದು ವಿಡಿಯೋ ಕ್ಲಿಪ್ ನಿಲ್ಲುತ್ತದೆ.

ಮುಂದಿನ ಶಾಟ್‌ನಲ್ಲಿ ರಸ್ತೆ ಬದಿಯಲ್ಲಿ ನಿಂತಿರುವ ಭೂತದ ಆಕೃತಿಯನ್ನು ಕಾಣಬಹುದು. ವಿಡಿಯೋದಲ್ಲಿ ಬೈಕರ್ ಮತ್ತು ಟ್ರಕ್ ಡ್ರೈವರ್ ನಡುವಿನ ಅಪಘಾತವನ್ನು ತೋರಿಸಲಾಗಿದೆ.


ಈ ಪೋಸ್ಟ್ ಅನ್ನು ಒಂದು ವಾರದ ಹಿಂದೆ ಇನ್ ಸ್ಟಾ ಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದೆ. ಬಳಿಕ ಇದು 156 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ. ಪೋಸ್ಟ್ 11 ಮಿಲಿಯನ್ ಲೈಕ್‌ಗಳನ್ನು ಪಡೆದಿದ್ದು, ಇದರ ಸಂಖ್ಯೆಗಳು ಹೆಚ್ಚುತ್ತಿವೆ. ಕೆಲವರು ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Rahul Dravid: ಸುದ್ದಿಗೋಷ್ಠಿಯಲ್ಲಿ ಉರ್ದು ಮಾತನಾಡಿದ ರಾಹುಲ್​ ದ್ರಾವಿಡ್​; ವಿಡಿಯೊ ವೈರಲ್​

ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?

ಒಬ್ಬ ವ್ಯಕ್ತಿ ಕಾಮೆಂಟ್ ಮಾಡಿ, ಓ ದೇವರೇ. ನಾನು ತುಂಬಾ ಹೆದರುತ್ತಿದ್ದೆ. ನಾನು ಬೈಕ್ ಓಡಿಸುತ್ತಿದ್ದೇನೆ ಎಂದು ಭಾವಿಸಿದೆ ಮತ್ತು ಸಣ್ಣ ಹೃದಯಾಘಾತವಾದಂತಾಯಿತು ಎಂದು ಹೇಳಿದ್ದಾನೆ.

ಇನ್ನೊಬ್ಬ, ನನ್ನ ಆತ್ಮವು ನನ್ನ ದೇಹವನ್ನು ತೊರೆದಿದೆ! ಅದ್ಭುತ ಎಡಿಟಿಂಗ್ ಎಂದು ಹೇಳಿದ್ದಾರೆ.

ಮತ್ತೊಬ್ಬ, ಹಾಗಾಗಿಯೇ ರಸ್ತೆಗಳಲ್ಲಿ ಜಾಗರೂಕರಾಗಿರಬೇಕು. ಅದು ಖಾಲಿಯಾಗಿರುವುದರಿಂದ ಅಜಾಗರೂಕರಾಗಿರಬೇಕೆಂದು ಅರ್ಥವಲ್ಲ ಎಂದು ತಿಳಿಸಿದ್ದಾರೆ. ಇನ್ನೊಬ್ಬರು ಇದು ಆಟ ಎಂದು ಹೇಳುವವರಿಗೆ ಇದು ನಿಜ ಜೀವನದಲ್ಲಿಯೂ ನಡೆಯುತ್ತದೆ. ಜಾಗರೂಕರಾಗಿರಿ ಎಂದು ತಿಳಿಸಿದ್ದಾರೆ. ಮತ್ತೊಬ್ಬರು ಇದು ನನಗೆ ಹೃದಯಾಘಾತವನ್ನು ನೀಡಿತು ಎಂದು ಹೇಳಿದ್ದಾರೆ.

Continue Reading

ಆಟೋಮೊಬೈಲ್

Mahindra Discount Offers: ಎಕ್ಸ್‌ಯುವಿ 700, 400 ಇವಿ ಮತ್ತು ಸ್ಕಾರ್ಪಿಯೋ ಮೇಲೆ ಭರ್ಜರಿ ರಿಯಾಯಿತಿ!

2023ರಲ್ಲಿ ತಯಾರಿಸಲಾದ ಎಕ್ಸ್ ಯುವಿ 400 ಇವಿ, ಎಕ್ಸ್ ಯುವಿ 700 ಮತ್ತು ಸ್ಕಾರ್ಪಿಯೋ ಎನ್ ನಂತಹ ಮಾದರಿಗಳು ಕಳೆದ ತಿಂಗಳಂತೆಯೇ ಗಣನೀಯ ಉಳಿತಾಯದೊಂದಿಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಮಹೀಂದ್ರ ಎಸ್‌ಯುವಿಗಳಲ್ಲಿ ಲಭ್ಯವಿರುವ ರಿಯಾಯಿತಿಗಳ (Mahindra Discount Offers) ವಿವರ ಇಲ್ಲಿದೆ.

VISTARANEWS.COM


on

By

Mahindra Discount Offers
Koo

ಹೊಸ ವರ್ಷ ಬಂದು ಆರು ತಿಂಗಳಾದರೂ ಮಹೀಂದ್ರಾದ (Mahindra) 2023ರ ಕೆಲವು ಮಾದರಿಗಳು (2023 models) ಸ್ಟಾಕ್‌ನಲ್ಲಿ (stock) ಉಳಿದಿವೆ. ಈ ದಾಸ್ತಾನು ತೆರವುಗೊಳಿಸಲು ಬ್ರ್ಯಾಂಡ್ ಗಮನಾರ್ಹ ರಿಯಾಯಿತಿ ಮತ್ತು ವಿಶೇಷ ಪ್ರಯೋಜನಗಳನ್ನು (Mahindra Discount Offers) ನೀಡುವುದಾಗಿ ಘೋಷಿಸಿದೆ.

2023ರಲ್ಲಿ ತಯಾರಿಸಲಾದ ಎಕ್ಸ್ ಯುವಿ 400 ಇವಿ, ಎಕ್ಸ್ ಯುವಿ 700 ಮತ್ತು ಸ್ಕಾರ್ಪಿಯೋ ಎನ್‌ನಂತಹ ಮಾದರಿಗಳು ಕಳೆದ ತಿಂಗಳಂತೆಯೇ ಗಣನೀಯ ಉಳಿತಾಯದೊಂದಿಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಮಹೀಂದ್ರ ಎಸ್‌ಯುವಿಗಳಲ್ಲಿ ಲಭ್ಯವಿರುವ ರಿಯಾಯಿತಿಗಳ ವಿವರ ಇಲ್ಲಿದೆ.

ಮಹೀಂದ್ರ ಎಕ್ಸ್ ಯುವಿ 700

ಮಹೀಂದ್ರಾ ಎಕ್ಸ್ ಯುವಿ 700 ಖರೀದಿಯ ಮೇಲೆ 1.5 ಲಕ್ಷ ರೂ.ವರೆಗೆ ರಿಯಾಯಿತಿಗಳನ್ನು ನೀಡುವುದನ್ನು ಮುಂದುವರೆಸಿದೆ. ಎಎಕ್ಸ್ 5 7-ಸೀಟರ್ ಡೀಸೆಲ್-ಎಂಟಿ, ಡೀಸೆಲ್-ಎಟಿ ಮತ್ತು ಪೆಟ್ರೋಲ್-ಎಂಟಿ ರೂಪಾಂತರಗಳನ್ನು ಹೊರತುಪಡಿಸಿ ಎಲ್ಲಾ ರೂಪಾಂತರಗಳು 1.5 ಲಕ್ಷ ರೂ. ವರೆಗೆ ಫ್ಲಾಟ್ ನಗದು ರಿಯಾಯಿತಿಯನ್ನು ಘೋಷಿಸಲಾಗಿದೆ.

1.3 ಲಕ್ಷ ರಿಯಾಯಿತಿಯೊಂದಿಗೆ ಎಕ್ಸ್ ಯುವಿ 700 ಟಾಟಾ ಸಫಾರಿ ಮತ್ತು ಎಮ್ ಜಿ ಹೆಕ್ಟರ್ ಪ್ಲಸ್‌ಗೆ ಪ್ರತಿಸ್ಪರ್ಧಿಯಾಗಿದೆ. ಇದರಲ್ಲಿ ಎಂಜಿನ್ ಆಯ್ಕೆಗಳೊಂದಿಗೆ ಹಲವು ವೈಶಿಷ್ಟ್ಯಗಳಿವೆ.

2.0 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅಥವಾ 2.2 ಲೀಟರ್ ಟರ್ಬೊ- ಡೀಸೆಲ್ ಎಂಜಿನ್. ಎಕ್ಸ್ ಯುವಿ 700 ಎಕ್ಸ್ ಶೋ ರೂಂ ಬೆಲೆಗಳು 13.99 ಲಕ್ಷದಿಂದ ರೂ 27.14 ಲಕ್ಷ ರೂ. ವರೆಗೆ ಇದೆ.

ಮಹೀಂದ್ರ ಎಕ್ಸ್ ಯುವಿ 400

2023ರ ಹೆಚ್ಚಿನ ಮಹೀಂದ್ರಾ ಎಕ್ಸ್ ಯುವಿ 400 ಇವಿ ರೂಪಾಂತರಗಳಲ್ಲಿ 4.4 ಲಕ್ಷ ರೂ. ವರೆಗಿನ ರಿಯಾಯಿತಿಗಳು ಲಭ್ಯವಿದೆ. ಅದರ ದೊಡ್ಡ 39.4ಕೆ ಡಬ್ಲ್ಯೂ ಹೆಚ್ ಬ್ಯಾಟರಿ, 7.2ಕೆ ಡಬ್ಲ್ಯೂ ವೇಗದ ಚಾರ್ಜರ್ ಮತ್ತು ಇಎಸ್ ಸಿ ನೊಂದಿಗೆ ಹೆಚ್ಚಿನ-ಸ್ಪೆಕ್ ಇಎಲ್ ರೂಪಾಂತರವು 3.4 ಲಕ್ಷ ರೂ. ಗಳ ರಿಯಾಯಿತಿಯನ್ನು ಹೊಂದಿದೆ. ಎಕ್ಸ್ ಯುವಿ ಎಕ್ಸ್ ಯುವಿ 400 ಬೆಲೆಯು 15.49 ಲಕ್ಷ ಮತ್ತು 17.49 ಲಕ್ಷ ರೂ.ಗಳ ನಡುವೆ ಮತ್ತು ಇಸಿ ಮತ್ತು ಇಎಲ್ ಟ್ರಿಮ್‌ಗಳಲ್ಲಿ ಲಭ್ಯವಿದೆ.

ಮಹೀಂದ್ರ ಸ್ಕಾರ್ಪಿಯೋ ಎನ್

ಮಹೀಂದ್ರಾ ಸ್ಕಾರ್ಪಿಯೊ ಎನ್ ಉನ್ನತ-ಸ್ಪೆಕ್ ಝೆಡ್ 8 ಮತ್ತು ಟಾಪ್-ಸ್ಪೆಕ್ ಝೆಡ್ 8 ಎಲ್ ರೂಪಾಂತರಗಳಿಗೆ 1 ಲಕ್ಷ ರೂ. ವರೆಗೆ ರಿಯಾಯಿತಿಗಳನ್ನು ನೀಡುತ್ತದೆ. 4ಡಬ್ಲ್ಯೂ ಡಿ ಡೀಸೆಲ್ ರೂಪಾಂತರಗಳು 1 ಲಕ್ಷ ರೂ. ವರೆಗೆ ನಗದು ರಿಯಾಯಿತಿಯನ್ನು ಹೊಂದಿದ್ದರೆ, 2ಡಬ್ಲ್ಯೂ ಡಿ ಪೆಟ್ರೋಲ್ ಮತ್ತು ಡೀಸೆಲ್ ಟ್ರಿಮ್‌ಗಳು 60,000 ರೂ.ವರೆಗೆ ರಿಯಾಯಿತಿಯನ್ನು ನೀಡುತ್ತವೆ.

ಇದನ್ನೂ ಓದಿ: Upcoming Vehicles: ಈ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿರುವ ಹೊಸ ಕಾರು, ಬೈಕ್‌ಗಳಿವು!

ಟಾಟಾ ಸಫಾರಿ, ಮಹೀಂದ್ರಾ ಎಕ್ಸ್‌ಯುವಿ700, ಎಂಜಿ ಹೆಕ್ಟರ್ ಪ್ಲಸ್ ಮತ್ತು ಹ್ಯುಂಡೈ ಅಲ್ಕಾಜರ್‌ನಂತಹ ಮಾದರಿಗಳೊಂದಿಗೆ ಸ್ಪರ್ಧಿಸುವ ಇದರ ಎಕ್ಸ್-ಶೋರೂಂ ಬೆಲೆಗಳು 13.60 ಲಕ್ಷದಿಂದ 24.54 ಲಕ್ಷ ರೂ. ವರೆಗೆ ಇರುತ್ತದೆ.

Continue Reading

ಗ್ಯಾಜೆಟ್ಸ್

Phone Cooling Tips: ಸ್ಮಾರ್ಟ್ ಫೋನ್ ಹೆಚ್ಚು ಬಿಸಿಯಾಗುತ್ತಿದೆಯೇ? ಹಾಗಿದ್ದರೆ ಈ 5 ಟಿಪ್ಸ್ ಫಾಲೋ ಮಾಡಿ

ನೇರ ಸೂರ್ಯನ ಬೆಳಕಿನಲ್ಲಿ ಸಾಧನವನ್ನು ಬಳಸುವುದರಿಂದ ಗ್ಯಾಜೆಟ್ ನ ಬಿಸಿ ಹೆಚ್ಚಾಗಬಹುದು. ಗ್ಯಾಜೆಟ್ ಗಳಲ್ಲಿ ಅಧಿಕ ತಾಪದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅದನ್ನು ಸರಿಪಡಿಸಲು (Phone Cooling Tips) ಐದು ಸಲಹೆಗಳು ಇಲ್ಲಿವೆ. ಮೊಬೈಲ್ ಫೋನ್ ಹೆಚ್ವು ಬಿಸಿಯಾಗದಂತೆ ಏನೇನು ಮಾಡಬಹುದು ಎನ್ನುವುದರ ಕುರಿತಂತೆ ಇರುವ ಈ ಸಲಹೆಗಳನ್ನು ಪಾಲಿಸಿ.

VISTARANEWS.COM


on

By

Phone Cooling Tips
Koo

ವಾತಾವರಣದಲ್ಲಿ ತಾಪಮಾನ (Temperature) ಅಧಿಕವಾದಾಗ ಇದರ ಪರಿಣಾಮ ಸ್ಮಾರ್ಟ್‌ಫೋನ್‌ (smartphone), ಲ್ಯಾಪ್‌ಟಾಪ್‌ (laptop) ಅಥವಾ ಯಾವುದೇ ಇತರ ಬ್ಯಾಟರಿ (battery) ಚಾಲಿತ ಸಾಧನಗಳಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್‌ ಗಳ (electronic gadgets) ಮೇಲೂ ಬೀರುತ್ತದೆ. ಹೀಗಾಗಿ ಬ್ಯಾಟರಿ ಚಾಲಿತ ಗ್ಯಾಜೆಟ್ ಗಳು ಹೆಚ್ಚು ಬಿಸಿಯಾಗುವುದನ್ನು (Phone Cooling Tips) ತಪ್ಪಿಸಬೇಕಿದೆ. ಫೋನ್ ಹೆಚ್ಚು ಬಿಸಿಯಾದರೆ ಗ್ಯಾಜೆಟ್ ನಲ್ಲಿ ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ವಾತಾವರಣ ಬಿಸಿಯಿದ್ದಾಗ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ನಂತಹ ಗ್ಯಾಜೆಟ್‌ಗಳು ಹೆಚ್ಚು ಬಿಸಿಯಾಗುತ್ತದೆ. ಜೊತೆಗೆ ದೈನಂದಿನ ಬಳಕೆಯ ಪರಿಣಾಮವೂ ಇದರ ಮೇಲೆ ಉಂಟಾಗುತ್ತದೆ. ಕೆಲವೊಮ್ಮೆ ಬಳಕೆ ಕಡಿಮೆ ಇದ್ದರೂ ಗೇಮಿಂಗ್, ಹಾಟ್‌ಸ್ಪಾಟ್ ಆಧಾರಿತ ಇಂಟರ್ನೆಟ್ ಹಂಚಿಕೆ ಭಾರೀ ಚಟುವಟಿಕೆಗಳನ್ನು ನಡೆಸುವುದರಿಂದ ಅಥವಾ ನೇರ ಸೂರ್ಯನ ಬೆಳಕಿನಲ್ಲಿ ಸಾಧನವನ್ನು ಬಳಸುವುದರಿಂದ ಗ್ಯಾಜೆಟ್ ನ ಬಿಸಿ ಹೆಚ್ಚಾಗಬಹುದು. ಗ್ಯಾಜೆಟ್ ಗಳಲ್ಲಿ ಅಧಿಕ ತಾಪದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅದನ್ನು ಸರಿಪಡಿಸಲು ಐದು ಸಲಹೆಗಳು ಇಲ್ಲಿವೆ.

ಲೋಡ್ ಕಡಿಮೆ ಮಾಡಿ

ಸ್ಮಾರ್ಟ್‌ಫೋನ್ ಹೆಚ್ಚು ಬಿಸಿಯಾಗುತ್ತಿದೆ ಎಂದು ಭಾವಿಸಿದರೆ ಬ್ಯಾಟರಿ ಮೇಲೆ ಪ್ರಭಾವ ಬೀರುವ GPS, Wi-Fi, ಡೇಟಾವನ್ನು ಆಫ್ ಮಾಡಿ. ಇದರೊಂದಿಗೆ ಅನಗತ್ಯ ಅಪ್ಲಿಕೇಶನ್‌ಗಳನ್ನು ಆಫ್ ಮಾಡಿ. ಪವರ್ ಬ್ಯಾಂಕ್ ಅಥವಾ ವಾಲ್ ಚಾರ್ಜರ್‌ನಂತಹ ಯಾವುದೇ ಪವರ್ ಮೂಲದಿಂದ ಲಿಂಕ್‌ಗಳನ್ನು ತೆಗೆದುಹಾಕಬಹುದು. ಸಾಧ್ಯವಾದರೆ, ಸ್ವಲ್ಪ ಸಮಯದವರೆಗೆ ಸಾಧನವನ್ನು ಸ್ವಿಚ್ ಆಫ್ ಮಾಡಿ.

ಅಪ್ಲಿಕೇಶನ್‌ಗಳನ್ನು ಮುಚ್ಚಿ

ಅಗತ್ಯವಿಲ್ಲದ ಅಪ್ಲಿಕೇಶನ್‌ಗಳನ್ನು ಮುಚ್ಚಿ ಹಾಗೂ ಪರದೆಯ ಹೊಳಪನ್ನು ಕಡಿಮೆ ಮಾಡಿ. ಇದರ ಬದಲು ಸ್ವಯಂ ಪ್ರಕಾಶಮಾನವನ್ನು ಬಳಸಬಹುದು. ಇದರಿಂದ ಫೋನ್ ಸುತ್ತುವರಿದ ಬೆಳಕನ್ನು ಅವಲಂಬಿಸಿ ಹೊಳಪನ್ನು ಸರಿಹೊಂದಿಸುತ್ತದೆ ಮತ್ತು ಬ್ಯಾಟರಿಯನ್ನು ಉಳಿಸುತ್ತದೆ. ಅಲ್ಲದೆ, ಬ್ಯಾಟರಿ ಜೀವಿತಾವಧಿಯನ್ನು ಉಳಿಸಲು ಮತ್ತು ತಾಪಮಾನ ಹೆಚ್ಚಳವನ್ನು ಮಿತಿಗೊಳಿಸಲು ಕಾರ್ಯಕ್ಷಮತೆಗಿಂತ ದಕ್ಷತೆಗೆ ಆದ್ಯತೆ ನೀಡಲು ವಿದ್ಯುತ್ ಉಳಿತಾಯ ವಿಧಾನಗಳನ್ನು ಬಳಸಿ.

ಬಿಸಿ ತಾಗುವುದನ್ನು ತಪ್ಪಿಸಿ

ಗ್ಯಾಜೆಟ್ ಹೆಚ್ಚು ಬಿಸಿಯಾಗುತ್ತಿದ್ದರೆ ವೇಗವಾಗಿ ಶಾಖವನ್ನು ಹೊರಹಾಕಲು ಹಿಂಬದಿಯ ಕವರ್ ಅನ್ನು ತೆಗೆದುಹಾಕಿ ಮತ್ತು ಸ್ಮಾರ್ಟ್‌ಫೋನ್ ಅನ್ನು ಫ್ಯಾನ್ ಅಡಿಯಲ್ಲಿ ಅಥವಾ ಹವಾನಿಯಂತ್ರಿತ ಕೋಣೆಯಲ್ಲಿ ಇರಿಸಿ. ಅಲ್ಲದೇ ತಾಪಮಾನವು ಗಮನಾರ್ಹ ಮಟ್ಟಕ್ಕೆ ಏರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸಾಧ್ಯವಿರುವಲ್ಲೆಲ್ಲಾ ನೇರ ಸೂರ್ಯನ ಬೆಳಕನ್ನು ತಪ್ಪಿಸಿ.

ಪ್ರಮಾಣೀಕೃತ ಚಾರ್ಜರ್/ ಕೇಬಲ್ ಬಳಸಿ

ಸ್ಮಾರ್ಟ್‌ಫೋನ್ ಚಾರ್ಜ್ ಮಾಡಲು ಮೂಲ ಅಡಾಪ್ಟರ್ ಅಥವಾ ಯು ಎಸ್ ಬಿ ಕೇಬಲ್ ಅಥವಾ ಪ್ರಮಾಣೀಕೃತ ಬಿಡಿಭಾಗಗಳನ್ನು ಬಳಸಿ. ಪ್ರಮಾಣೀಕರಿಸದ ಪರಿಕರವು ನಿಧಾನವಾಗಿ ಚಾರ್ಜಿಂಗ್ ಅಥವಾ ಅತಿಯಾಗಿ ಬಿಸಿಯಾಗುವುದರ ಮೂಲಕ ಬ್ಯಾಟರಿಗೆ ಒತ್ತಡವನ್ನು ಉಂಟುಮಾಡಬಹುದು. ಚಾರ್ಜ್ ಮಾಡುವಾಗ ಹೆಚ್ಚುವರಿ ಶಾಖವನ್ನು ತಪ್ಪಿಸಲು ನಿಮ್ಮ ಫೋನ್‌ನಲ್ಲಿ ವೇಗದ ಚಾರ್ಜಿಂಗ್ ಮೋಡ್ ಅನ್ನು ಸ್ವಿಚ್ ಆಫ್ ಮಾಡಿ. ಯಾವುದೇ ಗ್ಯಾಜೆಟ್ ಗೆ ಬೆಂಕಿ ಹಿಡಿದರೆ ನೀರನ್ನು ಬಳಸಬಾರದು ಎಂಬುದು ನೆನಪಿರಲಿ. ಅಪಾಯವನ್ನು ಕಡಿಮೆ ಮಾಡಲು ಅಗ್ನಿಶಾಮಕದವರನ್ನು ಕರೆಸಿ.

ಇದನ್ನೂ ಓದಿ: Battery Life Tips: ಈ 5 ಸಲಹೆ ಪಾಲಿಸಿ; ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಸಾಮರ್ಥ್ಯ ಹೆಚ್ಚಿಸಿ!

ಹೆಚ್ವಿನ ಟಾಸ್ಕ್ ಮಿತಿಗೊಳಿಸಿ

ವಿಪರೀತ ಶಾಖದಲ್ಲಿ ಹೊರಾಂಗಣದಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ಆಟಗಳನ್ನು ಆಡುವುದನ್ನು ಅಥವಾ ಸಿಪಿಯು, ಜಿಪಿಯು ತೀವ್ರ ಟಾಸ್ಕ್ ನಿರ್ವಹಿಸುವುದನ್ನು ತಪ್ಪಿಸಿ. ಜೊತೆಗೆ, ಹೆಚ್ಚಿನ ಹೊಳಪಿನಲ್ಲಿ (ಬ್ರೈಟ್ ನೆಸ್) ಹೆಚ್ ಡಿ ಆರ್ ವೀಡಿಯೊ ಪ್ಲೇಬ್ಯಾಕ್ ಅನ್ನು ಸೀಮಿತಗೊಳಿಸುವುದು ಸಹ ತಾಪಮಾನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Continue Reading
Advertisement
T20 World Cup
ಪ್ರಮುಖ ಸುದ್ದಿ15 mins ago

T20 World Cup : ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ ಅಮೆರಿಕ ತಂಡ

All achievements in life are easy if there is Guru's grace says Sri Satyatmatirtha Swamiji
ಮೈಸೂರು21 mins ago

Mysore News: ಗುರುಗಳ ಅನುಗ್ರಹವಿದ್ದರೆ ಜೀವನದಲ್ಲಿ ಎಲ್ಲ ಸಾಧನೆಗಳು ಸುಲಭ; ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ

Akasa Air
ದೇಶ25 mins ago

Akasa Air: ಗೋರಖ್​ಪುರದಿಂದ ದೆಹಲಿ ಮತ್ತು ಬೆಂಗಳೂರಿಗೆ ಆಕಾಶ ಏರ್ ನೇರ ವಿಮಾನ

Alliance Candidates Win in MLC South West Constituency Celebration at Ripponpet
ಶಿವಮೊಗ್ಗ40 mins ago

Shivamogga News: ನೈರುತ್ಯ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗಳ ಭರ್ಜರಿ ಗೆಲುವು; ರಿಪ್ಪನ್‌ಪೇಟೆಯಲ್ಲಿ ಸಂಭ್ರಮಾಚರಣೆ

A trader lost more than three and a half lakhs by opening a WhatsApp group message
ಕರ್ನಾಟಕ46 mins ago

Cyber Crime: ವಾಟ್ಸ್ಆ್ಯಪ್‌ ಗ್ರೂಪ್‌ ಮೆಸೇಜ್‌ ಓಪನ್‌ ಮಾಡಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಾಪಾರಿ

Nitish Kumar
ದೇಶ48 mins ago

Nitish Kumar: ಮುಂದಿನ ಸಲ ನಿಮ್ಮೆದುರು ಪ್ರತಿಪಕ್ಷಗಳ ಎಲ್ಲರಿಗೂ ಸೋಲು; ನಿತೀಶ್‌ ಮಾತಿಗೆ ನಕ್ಕ ಮೋದಿ!

World Environment Day
Latest49 mins ago

World Environment Day:ವಿಶ್ವ ಪರಿಸರ ದಿನವನ್ನು ವಿಶೇಷವಾಗಿ ಆಚರಿಸಿದ ‘ಕೇಳಚಂದ್ರ ಕಾಫಿ’

MLC Election Results
ಕರ್ನಾಟಕ50 mins ago

MLC Election Results: ಬೆಂಗಳೂರು ಪದವೀಧರ, ಆಗ್ನೇಯ ಶಿಕ್ಷಕರ ಕ್ಷೇತ್ರ; ಕಾಂಗ್ರೆಸ್ ಪಾಲಾದ ಎರಡೂ ಸ್ಥಾನ!

Karnataka weather Forecast
ಮಳೆ1 hour ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Narendra Modi
ದೇಶ1 hour ago

Narendra Modi: ರಾಷ್ಟ್ರಪತಿಯನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಮೋದಿ; ಈಗ ಹಂಗಾಮಿ ಪ್ರಧಾನಿ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ1 hour ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ3 hours ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ4 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ4 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ4 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು6 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌