Twitter Blue Tick: ಸಿಎಂ ಯೋಗಿ, ಶಾರುಖ್ ಖಾನ್​, ರಾಹುಲ್ ಗಾಂಧಿ ಸೇರಿ ಹಲವರ ಅಕೌಂಟ್​​ನಿಂದ ಬ್ಲ್ಯೂಟಿಕ್​ ಕಿತ್ತೆಸೆದ ಟ್ವಿಟರ್​; ಹಣ ತುಂಬಿಲ್ಲವಂತೆ! - Vistara News

ತಂತ್ರಜ್ಞಾನ

Twitter Blue Tick: ಸಿಎಂ ಯೋಗಿ, ಶಾರುಖ್ ಖಾನ್​, ರಾಹುಲ್ ಗಾಂಧಿ ಸೇರಿ ಹಲವರ ಅಕೌಂಟ್​​ನಿಂದ ಬ್ಲ್ಯೂಟಿಕ್​ ಕಿತ್ತೆಸೆದ ಟ್ವಿಟರ್​; ಹಣ ತುಂಬಿಲ್ಲವಂತೆ!

ಟ್ವಿಟರ್ ಹೊಸದಾಗಿ ಪರಿಚಯಿಸಿದ ಈ ಹಣ ಪಾವತಿ ವ್ಯವಸ್ಥೆ ನಿಯಮವನ್ನು ಪಾಲಿಸದವರ ಅಕೌಂಟ್​ಗಳೆಲ್ಲ ಈಗ ಬ್ಲ್ಯೂಟಿಕ್​ ಕಳೆದುಕೊಂಡಿವೆ.

VISTARANEWS.COM


on

Top Indians lost their Twitter blue tick
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಸೆಲೆಬ್ರಿಟಿಗಳ ಟ್ವಿಟರ್​ ಖಾತೆಗೆ ಬ್ಲ್ಯೂಟಿಕ್​ (ಹೆಸರಿನ ಎದುರು ನೀಲಿ ಬಣ್ಣದ ಒಂದು ಮಾರ್ಕ್-Twitter Blue Tick​) ಇರುವುದು ಸಾಮಾನ್ಯ. ಹೀಗೆ ತಮ್ಮ ಟ್ವಿಟರ್ ಖಾತೆಗೆ ಬ್ಲ್ಯೂಟಿಕ್​ ಪಡೆದಿದ್ದ ಭಾರತದ ಹಲವು ಕ್ರಿಕೆಟ್ ಆಟಗಾರರು, ಸಿನಿತಾರೆಯರು, ರಾಜಕೀಯ ನಾಯಕರು ಈಗದನ್ನು ಕಳೆದುಕೊಂಡಿದ್ದಾರೆ. ಅವರಿಗೆ ನೀಡಿದ್ದ ನೀಲಿ ಬಣ್ಣದ ಮಾರ್ಕ್​ನ್ನು ಟ್ವಿಟರ್ ಕಂಪನಿಯೇ ತೆಗೆದುಹಾಕಿದೆ. ಎಲಾನ್​ ಮಸ್ಕ್​ ಸಿಇಒ ಆದ ಮೇಲೆ ಟ್ವಿಟರ್​​ನಲ್ಲಿ ಹಲವು ಬದಲಾವಣೆಗಳು ಆಗಿವೆ. ಅದರಲ್ಲಿ ಒಂದು ಈ ಬ್ಲ್ಯೂಟಿಕ್​​ಗಳಿಗೆ ಹಣ ಪಾವತಿ ಮಾಡುವ ವ್ಯವಸ್ಥೆ. ಭಾರತದಲ್ಲಿ ವೆಬ್​ ಟ್ವಿಟರ್​ ಬಳಕೆದಾರರು ತಿಂಗಳಿಗೆ 650 ರೂಪಾಯಿ ಮತ್ತು ಮೊಬೈಲ್​ ಆ್ಯಪ್​​ ಬಳಕೆದಾರರು ತಿಂಗಳಿಗೆ 900 ರೂಪಾಯಿ ತುಂಬಿ, ಈ ಬ್ಲ್ಯೂಟಿಕ್​ ಸೌಲಭ್ಯವನ್ನು ಉಳಿಸಿಕೊಳ್ಳಬೇಕಾಗಿದೆ. ಹಾಗೇ, ಯಾರಾದರೂ ಬ್ಲ್ಯೂಟಿಕ್​ ಪಡೆಯಬೇಕು ಎಂದರೂ ವರ್ಷಕ್ಕೆ/ತಿಂಗಳಿಗೆ ಎಂದು ಇಂತಿಷ್ಟು ಹಣ ಪಾವತಿಸಿ, ಚಂದಾದಾರರು ಆಗಬೇಕು.

ಟ್ವಿಟರ್ ಹೊಸದಾಗಿ ಪರಿಚಯಿಸಿದ ಈ ಹಣ ಪಾವತಿ ವ್ಯವಸ್ಥೆ ನಿಯಮವನ್ನು ಪಾಲಿಸದ ಕಾರಣ ಭಾರತದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಇನ್ನೂ ಹಲವು ರಾಜಕೀಯ ನಾಯಕರ, ಸಿನಿಮಾ ತಾರೆಯರಾದ ಶಾರುಖ್​ ಖಾನ್​, ಅಮಿತಾಭ್ ಬಚ್ಚನ್​, ಅಲಿಯಾ ಭಟ್​, ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮಹೇಂದ್ರ ಸಿಂಗ್ ಧೋನಿ, ಸಚಿನ್ ತೆಂಡೂಲ್ಕರ್​ ಸೇರಿ ಅನೇಕಾನೇಕರ ಟ್ವಿಟರ್​ ಅಕೌಂಟ್​​ಗಿದ್ದ ವೆರಿಫಿಕೇಶನ್​ ಮಾರ್ಕ್ ಆದ ಬ್ಲ್ಯೂಟಿಕ್​ನ್ನು ತೆಗೆದುಹಾಕಲಾಗಿದೆ. ಭಾರತದಲ್ಲಿ ಅಷ್ಟೇ ಅಲ್ಲ, ವಿಶ್ವದ ವಿವಿಧ ದೇಶಗಳ ಇನ್ನೂ ಹಲವು ಗಣ್ಯರ ಟ್ವಿಟರ್ ಅಕೌಂಟ್ ಕೂಡ ಬ್ಲ್ಯೂಟಿಕ್​​ನ್ನು ಕಳೆದುಕೊಂಡಿದೆ.

ಸಾಮಾನ್ಯವಾಗಿ ಯಾವುದೇ ಕ್ಷೇತ್ರದ ಗಣ್ಯರ ಹೆಸರಲ್ಲಿ ವಿವಿಧ ನಕಲಿ ಅಕೌಂಟ್​ಗಳು, ಅವರ ಅಭಿಮಾನಿಗಳು ಸೃಷ್ಟಿಸುವ ಟ್ವಿಟರ್ ಅಕೌಂಟ್​​ಗಳು ಜಾಸ್ತಿ ಇರುತ್ತವೆ. ಹೀಗಾಗಿ ನಿರ್ದಿಷ್ಟ ಆ ಗಣ್ಯರ ಅಧಿಕೃತ ಖಾತೆಗೆ ಬ್ಲ್ಯೂಟಿಕ್ ನೀಡುವ ಮೂಲಕ ಅಥಂಟಿಕೇಶನ್ ಮಾಡಲಾಗುತ್ತಿತ್ತು. ಯಾರ ಅಕೌಂಟ್​ಗೆ ಈ ಬ್ಲ್ಯೂಟಿಕ್​ ಇರುತ್ತದೆಯೋ ಅದು ಅವರ ನಿಜವಾದ ಟ್ವಿಟರ್ ಅಕೌಂಟ್​ ಎಂಬುದು ಖಾತರಿ ಆಗುತ್ತಿತ್ತು. ಎಲಾನ್ ಮಸ್ಕ್​ ಅವರು ಟ್ವಿಟರ್ ಖರೀದಿ ಮಾಡುವುದಕ್ಕೂ ಮೊದಲು ಈ ನೀಲಿ ಟಿಕ್​ ಪಡೆಯಲು ಅನುಸರಿಸಬೇಕಾದ ನಿಯಮಗಳು ಬೇರೆ ಇದ್ದವು. ಆದರೆ ಎಲಾನ್​ ಮಸ್ಕ್​ ಸಿಇಒ ಆದ ಬಳಿಕ ಕ್ರಮಗಳು ಬದಲಾಗಿವೆ. ನೀಲಿಟಿಕ್​ ಪಡೆಯಲು ಚಂದಾದಾರಿಕೆ ಪಡೆಯುವುದನ್ನು ಅವರು ಕಡ್ಡಾಯ ಮಾಡಿದ್ದಾರೆ. ಹೀಗೆ ಹೊಸ ನಿಯಮದ ಪ್ರಕಾರ ಯಾರೆಲ್ಲ ಇನ್ನೂ ಹಣ ತುಂಬಿಲ್ಲವೋ, ಅವರ ಟ್ವಿಟರ್​ ಅಕೌಂಟ್​​ನ ಬ್ಲ್ಯೂಟಿಕ್​ ತೆಗೆದುಹಾಕಲಾಗಿದೆ.

ಇದನ್ನೂ ಓದಿ: Twitter: ಇನ್ನು ಟ್ವಿಟರ್‌ನಿಂದಲೂ ಬಳಕೆದಾರರು ಹಣ ಗಳಿಸಬಹುದು! ಎಲಾನ್ ಮಸ್ಕ್ ಹೇಳಿದ್ದೇನು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ತಂತ್ರಜ್ಞಾನ

Self-Healing Roads: ರಸ್ತೆಗಳಲ್ಲಿ ಹೊಂಡಗಳೇ ಇರಲ್ಲ! ಬರಲಿವೆ ಸೆಲ್ಫ್‌ ಹೀಲಿಂಗ್‌ ರೋಡ್‌ಗಳು!

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ರಸ್ತೆಗಳನ್ನು ಸರಿಪಡಿಸಲು ಮತ್ತು ಗುಂಡಿಮುಚ್ಚಲು ಗಳಿಂದ ರಸ್ತೆಗೆ ಮುಕ್ತಿ ಕೊಡಲು ಹೊಸ ತಂತ್ರಜ್ಞಾನವನ್ನು (Self-Healing Roads) ಅಳವಡಿಸಿಕೊಳ್ಳುವ ಕೆಲಸವನ್ನು ಪ್ರಾರಂಭಿಸಿದೆ. ಇದು ಯಶಸ್ವಿಯಾದರೆ ಭಾರತದ ರಸ್ತೆ ಪ್ರಯಾಣದಲ್ಲಿ ಕ್ರಾಂತಿ ಉಂಟಾಗಲಿದೆ.

VISTARANEWS.COM


on

By

Self-Healing Roads
Koo

ಭಾರತದಲ್ಲಿ (india) ಕೆಲವು ರಸ್ತೆ (road) ಪ್ರವಾಸ ಸಾಮಾನ್ಯವಾಗಿ ಪ್ರಯಾಸಕರ ಎಂಬುದು ಎಲ್ಲರ ಅಭಿಪ್ರಾಯ. ಇದಕ್ಕೆ ಮುಖ್ಯ ಕಾರಣ ರಸ್ತೆಯಲ್ಲಿರುವ ಹೊಂಡ ಗುಂಡಿಗಳು, ಉಬ್ಬು ತಗ್ಗುಗಳು. ಭಾರತದ ರಸ್ತೆಗಳಲ್ಲಿ ಎದುರಾಗುವ ಸಮಸ್ಯೆಗಳ ಕುರಿತು ನಿತ್ಯವೂ ಸಾಮಾಜಿಕ ಜಾಲತಾಣದಲ್ಲಿ, (social media) ಸುದ್ದಿ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ. ಅಲ್ಲದೇ ಅವುಗಳ ಕುರಿತು ಸಾವಿರಾರು ಜೋಕ್‌ಗಳು ಹರಿದಾಡುತ್ತಿರುತ್ತದೆ. ಆದರೆ ಇದಕ್ಕೆ ಈಗ ಪರಿಹಾರ (SSelf-Healing Roads) ಸಿಕ್ಕಿದೆ.


ಈವರೆಗೆ ರಸ್ತೆಯ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಈ ನಿಟ್ಟಿನಲ್ಲಿ ಒಂದು ಭರವಸೆ ಹುಟ್ಟಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ರಸ್ತೆಗಳನ್ನು ಸರಿಪಡಿಸಲು ಮತ್ತು ಗುಂಡಿಮುಚ್ಚಲು ಗಳಿಂದ ರಸ್ತೆಗೆ ಮುಕ್ತಿ ಕೊಡಲು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಕೆಲಸವನ್ನು ಪ್ರಾರಂಭಿಸಿದೆ. ಇದು ಯಶಸ್ವಿಯಾದರೆ ಭಾರತದ ರಸ್ತೆ ಪ್ರಯಾಣದಲ್ಲಿ ಕ್ರಾಂತಿ ಉಂಟಾಗಲಿದೆ.

ರಸ್ತೆಗಳ ಸ್ವಯಂ ರಕ್ಷಣೆ

ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ರಸ್ತೆ ಜಾಲದ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ದೇಶದಲ್ಲಿ ನಿರಂತರವಾದ ಗುಂಡಿಗಳ ಸಮಸ್ಯೆಯನ್ನು ಪರಿಹರಿಸಲು ಸ್ವಯಂ-ಗುಣಪಡಿಸುವ ಡಾಂಬರು ಅಳವಡಿಸಿಕೊಳ್ಳಲು ಮುಂದಾಗಿದೆ.

ಯಾವ ರೀತಿ?

ರಸ್ತೆಗಳ ಬಾಳಿಕೆಯನ್ನು ಸುಧಾರಿಸಲು ಮತ್ತು ಗುಂಡಿಗಳ ಸಮಸ್ಯೆಯನ್ನು ಪರಿಹರಿಸಲು ಅತ್ಯಧುನಿಕ ತಂತ್ರಜ್ಞಾನ ವಿಧಾನಗಳನ್ನು ಪರಿಗಣಿಸುತ್ತಿದ್ದೇವೆ ಎಂಬುದಾಗಿ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ವೆಚ್ಚ ಪ್ರಯೋಜನ ವಿಶ್ಲೇಷಣೆ ನಡೆಸಿದ ಬಳಿಕವೇ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುವುದು. ಇದು ರಸ್ತೆಗಳ ಬಾಳಿಕೆ ಅವಧಿಯನ್ನು ಹೆಚ್ಚಿಸುತ್ತದೆ ಮತ್ತು ರಸ್ತೆ ನಿರ್ವಹಣೆಯ ಅಗತ್ಯವನ್ನು ಪ್ರಾಯೋಗಿಕವಾಗಿ ನಿವಾರಿಸುತ್ತದೆ. ಸಂಚಾರ ಅಡಚಣೆಯನ್ನು ಕಡಿಮೆ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಹೇಗೆ?

ರಸ್ತೆಗಳ ಗುಂಡಿ ನಿರ್ವಹಣೆಗೆ ಹಾಕುವ ಸ್ವಯಂ ರಕ್ಷಣೆ ಕಾರ್ಯವನ್ನು ಆಸ್ಫಾಲ್ಟ್ ಮಾಡುತ್ತದೆ. ಇದು ಡಾಂಬರು ರಸ್ತೆಯನ್ನು ರೂಪಿಸುವ ಪ್ರಮುಖ ಸಂಯುಕ್ತಗಳಲ್ಲಿ ಒಂದಾಗಿದೆ. ಇದು ನೈಸರ್ಗಿಕವಾಗಿ ಕಾರ್ಯ ನಿರ್ವಹಿಸುತ್ತದೆ. ಇದನ್ನು ಸ್ಮಾರ್ಟ್ ಆಸ್ಫಾಲ್ಟ್ ಎಂದೂ ಕರೆಯಲಾಗುತ್ತದೆ ಮತ್ತು ಇದು ರಸ್ತೆ ದುರಸ್ತಿ ಜಗತ್ತಿನಲ್ಲಿ ಹೆಚ್ಚು ಖ್ಯಾತಿ ಪಡೆಯುತ್ತಿದೆ.

ಯಾವ ರೀತಿ?

ಸ್ಮಾರ್ಟ್ ಆಸ್ಫಾಲ್ಟ್ ಉಕ್ಕಿನ ಫೈಬರ್ ಗಳು ಮತ್ತು ಎಪಾಕ್ಸಿ ಕ್ಯಾಪ್ಸುಲ್ ಗಳಿಂದ ತುಂಬಿದೆ. ಇದು ಸಣ್ಣ ಬಿರುಕುಗಳನ್ನು ಸರಿಪಡಿಸುತ್ತದೆ ಮತ್ತು ನೀರಿನ ಒಳನುಸುಳುವಿಕೆಯನ್ನು ತಡೆಯುತ್ತದೆ. ಇಂಡಕ್ಷನ್ ಯಂತ್ರವನ್ನು ಬಳಸಿಕೊಂಡು ರಸ್ತೆಯಲ್ಲಿ ಅಳವಡಿಸುವ ಉಕ್ಕಿಗೆ ಶಾಖವನ್ನು ಸೆಳೆಯುವಂತೆ ಮಾಡಿ ಇದನ್ನು ಮಾಡಲಾಗುತ್ತದೆ. ಇದರಿಂದ ಆಸ್ಫಾಲ್ಟ್ ನೊಂದಿಗೆ ಮಾರ್ಟರ್ ಕರಗಲು ಮತ್ತು ಸ್ವತಃ ದುರಸ್ತಿ ಮಾಡಲು ಪ್ರಾರಂಭಿಸುತ್ತದೆ.

ಯಾರು ಕಂಡು ಹಿಡಿದಿರುವುದು?

ಈ ತಂತ್ರಜ್ಞಾನವನ್ನು ನೆದರ್‌ಲ್ಯಾಂಡ್‌ನ ಡೆಲ್ಫ್ಟ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯಲ್ಲಿ ಸಿವಿಲ್ ಎಂಜಿನಿಯರಿಂಗ್ ಪ್ರಾಧ್ಯಾಪಕ ಎರಿಕ್ ಶ್ಲಾಂಗೆನ್ ಅಭಿವೃದ್ಧಿಪಡಿಸಿದ್ದಾರೆ. ಈಗಾಗಲೇ ನೆದರ್ಲ್ಯಾಂಡ್ ನ ಸಂಶೋಧಕರು ಕೆಲವು ಸ್ವಯಂ ರಕ್ಷಣೆ ಹೊಂದಿರುವ ರಸ್ತೆಗಳನ್ನು ನಿರ್ಮಿಸಿದ್ದಾರೆ. ಇದು ಬಾಹ್ಯ ಸಹಾಯವಿಲ್ಲದೆ ಬಿರುಕುಗಳನ್ನು ಮುಚ್ಚುವ ಸಾಮರ್ಥ್ಯವನ್ನು ಹೊಂದಿದೆ. ಈ ರಸ್ತೆಗಳನ್ನು ತಯಾರಿಸುವುದು ಹೆಚ್ಚು ದುಬಾರಿಯಾಗಿದ್ದರೂ ನಿರ್ವಹಣಾ ವೆಚ್ಚವನ್ನು ತೆಗೆದುಹಾಕುವುದರಿಂದ ದೀರ್ಘಾವಧಿಯಲ್ಲಿ ಅಗ್ಗವಾಗುತ್ತದೆ ಎನ್ನುತ್ತಾರೆ ಸಂಶೋಧಕರು.

ಈ ತಂತ್ರಜ್ಞಾನ ಬಳಕೆಯಿಂದ ರಸ್ತೆಗಳು ಸುಮಾರು 80 ವರ್ಷಗಳವರೆಗೆ ದೀರ್ಘಕಾಲ ಬಾಳಿಕೆ ಬರುವಂತೆ ಮಾಡುತ್ತದೆ. ಇದು ರಸ್ತೆಗಳನ್ನು ಸುಧಾರಿಸುವುದರ ಜೊತೆಗೆ ಇತರ ಪ್ರಯೋಜನಗಳನ್ನು ಹೊಂದಿದೆ ಎಂದು ಶ್ಲಾಂಗೆನ್ ಹೇಳುತ್ತಾರೆ. ಈ ರಸ್ತೆಗಳಲ್ಲಿ ಆಸ್ಫಾಲ್ಟ್‌ನಲ್ಲಿ ಸ್ಟೀಲ್ ಫೈಬರ್‌ಗಳನ್ನು ಹಾಕುವುದರಿಂದ ರಸ್ತೆಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಚಾರ್ಜ್ ಮಾಡಲು ಬಳಸಬಹುದು. ಮುಂದೆ ಇದು ಟ್ರಾಫಿಕ್ ದೀಪಗಳನ್ನು ಉರಿಸಲು ಪ್ರಯೋಗಗಳನ್ನು ಮಾಡಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.


ಭಾರತದ ರಸ್ತೆ ಸಮಸ್ಯೆಗೆ ಪರಿಹಾರ

ಹೊಂಡ ಗುಂಡಿಗಳೊಂದಿಗೆ ತುಂಬಿರುವ ಭಾರತದಲ್ಲಿ ಇದನ್ನು ಅಳವಡಿಸಿದರೆ ಸಾಕಷ್ಟು ಲಾಭವಿದೆ. ದೇಶದಾದ್ಯಂತ ಹುಂಡ ಗುಂಡಿಗಳಿಂದ ಕೂಡಿದ ರಸ್ತೆಗಳು ಹಲವಾರು ರಸ್ತೆ ಅಪಘಾತಗಳಿಗೆ ಕಾರಣವಾಗಿವೆ. 2022 ರಲ್ಲಿ ಸರ್ಕಾರಿ ಅಂಕಿಅಂಶಗಳು ರಸ್ತೆಗುಂಡಿಗಳಿಂದಾಗಿ 4,446 ಅಪಘಾತಗಳು ಸಂಭವಿಸಿವೆ, ಇದು 1,856 ಜನರ ಸಾವಿಗೆ ಕಾರಣವಾಯಿತು ಮತ್ತು 3,734 ಜನರಿಗೆ ಗಾಯಗಳಾಗಿವೆ.

2021ರಲ್ಲಿ ಗುಂಡಿಗಳಿಂದಾಗಿ 3,625 ಅಪಘಾತಗಳು ಸಂಭವಿಸಿ, 1,483 ಜನರು ಸಾವನ್ನಪ್ಪಿದರು ಮತ್ತು 3,103 ಜನರು ಗಾಯಗೊಂಡಿದ್ದರು.

ಇದನ್ನೂ ಓದಿ:Vande Bharat Metro: ಮೊದಲ ವಂದೇ ಭಾರತ್‌ ಮೆಟ್ರೋ ಸಂಚಾರಕ್ಕೆ ಸಿದ್ಧ; ಇಲ್ಲಿದೆ ವಿಡಿಯೊ

ನೆದರ್‌ಲ್ಯಾಂಡ್‌ನಲ್ಲಿ ಯಶಸ್ವಿ

ನೆದರ್‌ಲ್ಯಾಂಡ್ಸ್‌ನ 12 ರಸ್ತೆಗಳಿಗೆ ಸ್ವಯಂ ರಕ್ಷಕ ಆಸ್ಫಾಲ್ಟ್ ಅನ್ನು ಅಳವಡಿಸಿ ಪರೀಕ್ಷಿಸಲಾಗಿದೆ. ಇವುಗಳಲ್ಲಿ ಒಂದು ಕಾರ್ಯನಿರ್ವಹಿಸುತ್ತಿದ್ದು, 2010 ರಿಂದ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ. ಈ ತಂತ್ರಜ್ಞಾನವನ್ನು ಯುನೈಟೆಡ್ ಕಿಂಗ್‌ಡಮ್ ಪರಿಶೀಲನೆ ನಡೆಸುತ್ತಿದೆ. ಭಾರತದಲ್ಲಿ ಇದನ್ನು ಅಳವಡಿಸಿಕೊಂಡರೆ ವಿಶ್ವದಲ್ಲೇ ನಾವು ರಸ್ತೆ ಸ್ವಯಂ ರಕ್ಷಣಾ ತಂತ್ರಜ್ಞಾನ ಅಳವಡಿಸಿಕೊಂಡವರಲ್ಲಿ ಎರಡನೇಯವರಾಗುತ್ತೇವೆ.

Continue Reading

ತಂತ್ರಜ್ಞಾನ

Bomber Drone: ಭಾರತದ ಮೊದಲ ಬಾಂಬರ್ ಡ್ರೋನ್ ಅನಾವರಣ; ಇದರ ವಿಶೇಷತೆ ಹೀಗಿದೆ ನೋಡಿ

Bomber Drone: ಭಾರತದ ಮೊದಲ ಮಿಲಿಟರಿ ದರ್ಜೆಯ (Indian military) ಬಾಂಬರ್ ಡ್ರೋನ್ ಇದಾಗಿದೆ. ಡ್ರೋನ್‌ಗಿಂತ ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿರುವ, ಹೆಲಿಕಾಪ್ಟರ್‌ಗಿಂತ ಚಿಕ್ಕದಾಗಿರುವ ಈ ವಾಹಕ, ಪೈಲಟ್‌ರಹಿತವಾಗಿ ಕಾರ್ಯಾಚರಿಸಿ ಬಾಂಬ್‌ಗಳನ್ನು ಹೊತ್ತೊಯ್ದು ವೈರಿನೆಲೆಗಳ ಮೇಲೆ ಉದುರಿಸಬಲ್ಲುದು ಎಂದು ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಸಂಸ್ಥಾಪಕ, ಸಿಇಒ ಸುಹಾಸ್ ತೇಜ ಸ್ಕಂದ ವಿವರಿಸಿದ್ದಾರೆ.

VISTARANEWS.COM


on

bomber drone
Koo

ಬೆಂಗಳೂರು: ಭಾರತದ ಮೊತ್ತ ಮೊದಲ ಸ್ವದೇಶಿ ತಂತ್ರಜ್ಞಾನದ ಬಾಂಬರ್‌ ಡ್ರೋನ್‌ (Indigenous Bomber Drone) ಬೆಂಗಳೂರಿನಲ್ಲಿ ಅನಾವರಣಗೊಂಡಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ (Electronic City) ಅನಾವರಣಗೊಂಡಿರುವ ಈ ಬಾಂಬರ್‌ ಡ್ರೋನ್‌ ಅನ್ನು ʼಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಟೆಕ್ನಾಲಜೀಸ್ʼ ಸಂಸ್ಥೆ ನಿರ್ಮಾಣ ಮಾಡಿದೆ. ಇದಕ್ಕೆ FWD-200B UAV ಎಂದು ಹೆಸರಿಡಲಾಗಿದೆ.

ಭಾರತದ ಮೊದಲ ಮಿಲಿಟರಿ ದರ್ಜೆಯ (Indian military) ಬಾಂಬರ್ ಡ್ರೋನ್ ಇದಾಗಿದೆ. ಡ್ರೋನ್‌ಗಿಂತ ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿರುವ, ಹೆಲಿಕಾಪ್ಟರ್‌ಗಿಂತ ಚಿಕ್ಕದಾಗಿರುವ ಈ ವಾಹಕ, ಪೈಲಟ್‌ರಹಿತವಾಗಿ ಕಾರ್ಯಾಚರಿಸಿ ಬಾಂಬ್‌ಗಳನ್ನು ಹೊತ್ತೊಯ್ದು ವೈರಿನೆಲೆಗಳ ಮೇಲೆ ಉದುರಿಸಬಲ್ಲುದು ಎಂದು ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಸಂಸ್ಥಾಪಕ, ಸಿಇಒ ಸುಹಾಸ್ ತೇಜ ಸ್ಕಂದ ವಿವರಿಸಿದ್ದಾರೆ.

FWD-200B UAV ಎಂದು ತಾಮತ್ರಿಕವಾಗಿ ಕರೆಯಲಾಗುವ ಈ ಡ್ರೋನ್ ವಿಮಾನವನ್ನು ಇಂದು ಎಲೆಕ್ಟ್ರಾನಿಕ ಸಿಟಿಯಲ್ಲಿ ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಸಂಸ್ಥೆ ಅನಾವರಣ ಮಾಡಿದೆ. ರಕ್ಷಣಾ ಕ್ಷೇತ್ರದಲ್ಲಿ ವಿದೇಶಗಳ ಮೇಲಿನ ಅವಲಂಬನೆಗೆ ಬ್ರೇಕ್ ಹಾಕಲು ಸ್ವದೇಶಿ ಡ್ರೋನ್ ವಿಮಾನ‌ ತಯಾರಿಸಲಾಗಿದೆ. ಇದರೊಂದಿಗೆ ಸುಧಾರಿತ ಮಾನವರಹಿತ ಯುದ್ಧ ಡ್ರೋನ್ ಹೊಂದಿದ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರಲಿದೆ. ಇದರ ಆರಂಬಿಕ ಟೆಸ್ಟ್‌ಗಳು ಆಗಿದ್ದು, ಅಡ್ವಾನ್ಸ್‌ಡ್‌ ಪರೀಕ್ಷೆಗಳು ಇನ್ನೆರಡು ತಿಂಗಳಲ್ಲಿ ನೆರವೇರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಇದರ ಉದ್ಘಾಟನೆ ಮಾಡಿಸುವ ಚಿಂತನೆಯನ್ನು ಸುಹಾಸ್ ಹಂಚಿಕೊಂಡಿದ್ದಾರೆ.

bomber drone flying vedge ceo suhas

ಭಾರತದಲ್ಲಿ ಸದ್ಯ ದಾಳಿ ಡ್ರೋನ್‌ಗಳು ಲಭ್ಯವಿಲ್ಲ. ಇರಾನ್‌ ಹಾಗೂ ರಷ್ಯಾಗಳು ಇದನ್ನು ಈಗಾಗಲೇ ಬಳಸುತ್ತಿವೆ. ಇಸ್ರೇಲ್‌ ಮೇಲೆ ದಾಳಿ ಮಾಡಲು ಕೂಡ ಪ್ಯಾಲೆಸ್ತೀನಿನ ಬಂಡುಕೋರರು ಸಣ್ಣ ಗಾತ್ರದ ಇಂಥದೇ ಡ್ರೋನ್‌ಗಳನ್ನು ಬಳಸಿದ್ದರು. ಈ ಬಗೆಯ ಡ್ರೋನ್‌ಗಳು ಆಧುನಿಕ ಯುದ್ಧದ ವೈಖರಿಯನ್ನೇ ಬದಲಿಸಲಿವೆ. ಕ್ಷಿಪಣಿಗಳು ದುಬಾರಿಯಾಗಿದ್ದು, ಅದಕ್ಕಿಂತ ಡ್ರೋನ್‌ಗಳು ಅಗ್ಗವಾಗಿವೆ. FWD-200B UAV ಸುಮಾರು 200 ಕಿಲೋದಷ್ಟು ಪೇಲೋಡ್‌ ಅನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ಭಾರತ ಈಗ ಅಮೆರಿಕದ ಪ್ರಿಡೇಟರ್ ಡ್ರೋನ್‌ಗಳನ್ನು (Predator Drone) ತರಿಸುತ್ತಿದೆ. ಆದರೆ ಇದು 250 ಕೋಟಿಗಳಷ್ಟು ದುಬಾರಿಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ದೇಶೀಯವಾಗಿ ತಯಾರಾದ FWD-200B ಭಾರತದಲ್ಲಿ ಸ್ವದೇಶಿ ತಂತ್ರಜ್ಞಾನದೊಂದಿಗೆ ಕೇವಲ 25ಯಿಂದ 50 ಕೋಟಿ ವೆಚ್ಚದಲ್ಲಿ ತಯಾರಾಗಲಿದೆ. ಭಾರತವನ್ನು ಜಾಗತಿಕ ಡ್ರೋನ್ ಉತ್ಪಾದನೆ ಮತ್ತು ತಂತ್ರಜ್ಞಾನದ ಕೇಂದ್ರವಾಗಿಸುವ ಗುರಿ ತಮ್ಮದು. ಇನ್ನು ಎರಡು ತಿಂಗಳಲ್ಲಿ ಇದು ಭಾರತದ ಮಿಲಿಟರಿಯನ್ನು ಸೇರುವ ಆಶಯ ಇದೆ. ಈ ಮೂಲಕ ನಮ್ಮ ರಾಷ್ಟ್ರದ ವಾಯು ರಕ್ಷಣಾ ವ್ಯವಸ್ಥೆಯನ್ನು ಸಶಕ್ತಗೊಳಿಸಲು ಸಂಸ್ಥೆ ಮುಂದಾಗಿದೆ ಎಂದು ಸುಹಾಸ್‌ ತಿಳಿಸಿದ್ದಾರೆ.

ಇದನ್ನೂ ಓದಿ: Tejas Aircraft: ಸ್ವದೇಶಿ ʼತೇಜಸ್ʼ ವಿಮಾನದಲ್ಲಿ ಮೋದಿ ಹಾರಾಟ: ಪಾಕಿಸ್ತಾನ, ಚೀನಾಗೆ ನಡುಕ!

Continue Reading

ತಂತ್ರಜ್ಞಾನ

ಸ್ಯಾಮ್‌ಸಂಗ್‌ನ ‘ಫ್ಯಾಬ್ ಗ್ರಾಬ್ ಫೆಸ್ಟ್’: ಸ್ಮಾರ್ಟ್‌ಫೋನ್‌, ಟಿವಿ, ಲ್ಯಾಪ್‌ಟಾಪ್‌, ಡಿಜಿಟಲ್ ಉಪಕರಣಗಳ ಮೇಲೆ ಅದ್ಭುತ ಆಫರ್

Samsung: ಸ್ಯಾಮ್‌ಸಂಗ್ ತನ್ನ ಅತಿದೊಡ್ಡ ಬೇಸಿಗೆ ಮಾರಾಟ ಮೇಳವಾದ ‘ಫ್ಯಾಬ್ ಗ್ರಾಬ್ ಫೆಸ್ಟ್’ (Fab Grab Fest) ಅನ್ನು ಘೋಷಿಸಿದೆ. ಈ ಫೆಸ್ಟ್ ಮೂಲಕ ಕಂಪನಿಯು Samsung.com, ಸ್ಯಾಮ್‌ಸಂಗ್ ಶಾಪ್ ಆ್ಯಪ್ ಹಾಗೂ ಸ್ಯಾಮ್‌ಸಂಗ್ ಎಕ್ಸ್‌ಕ್ಲೂಸಿವ್ ಮಳಿಗೆಗಳಲ್ಲಿ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಮೇಲೆ ಅದ್ಭುತ ಆಫರ್‌ಗಳು ಮತ್ತು ಅತ್ಯಾಕರ್ಷಕ ಕ್ಯಾಶ್‌ಬ್ಯಾಕ್‌ಗಳನ್ನು ನೀಡುತ್ತದೆ.

VISTARANEWS.COM


on

Samsung
Koo

ಬೆಂಗಳೂರು: ಭಾರತದ ಅತಿ ದೊಡ್ಡ ಗ್ರಾಹಕ ಸ್ನೇಹಿ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ (Samsung) ತನ್ನ ಅತಿದೊಡ್ಡ ಬೇಸಿಗೆ ಮಾರಾಟ ಮೇಳವಾದ ‘ಫ್ಯಾಬ್ ಗ್ರಾಬ್ ಫೆಸ್ಟ್’ (Fab Grab Fest) ಅನ್ನು ಘೋಷಿಸಿದೆ. ಈ ಫೆಸ್ಟ್ ಮೂಲಕ ಕಂಪನಿಯು Samsung.com, ಸ್ಯಾಮ್‌ಸಂಗ್ ಶಾಪ್ ಆ್ಯಪ್ ಹಾಗೂ ಸ್ಯಾಮ್‌ಸಂಗ್ ಎಕ್ಸ್‌ಕ್ಲೂಸಿವ್ ಮಳಿಗೆಗಳಲ್ಲಿ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಮೇಲೆ ಅದ್ಭುತ ಆಫರ್‌ಗಳು ಮತ್ತು ಅತ್ಯಾಕರ್ಷಕ ಕ್ಯಾಶ್‌ಬ್ಯಾಕ್‌ಗಳನ್ನು ನೀಡುತ್ತದೆ.

‘ಫ್ಯಾಬ್ ಗ್ರಾಬ್ ಫೆಸ್ಟ್’ ಸಮಯದಲ್ಲಿ, ಗ್ರಾಹಕರು ಗ್ಯಾಲಕ್ಸಿ ಎಸ್ ಸರಣಿ, ಗ್ಯಾಲಕ್ಸಿ ಝಡ್ ಸರಣಿ ಮತ್ತು ಗ್ಯಾಲಕ್ಸಿ ಎ ಸರಣಿಯ ಸ್ಮಾರ್ಟ್‌ಫೋನ್‌ಗಳ ಆಯ್ದ ಮಾದರಿಗಳ ಮೇಲೆ 64%ವರೆಗೆ ರಿಯಾಯಿತಿ ಪಡೆಯಬಹುದು. ಗ್ಯಾಲಕ್ಸಿ ಟ್ಯಾಬ್ಲೆಟ್‌ಗಳ ಆಯ್ಕೆ ಮಾಡೆಲ್‌ಗಳು, ಆಕ್ಸೆಸರೀಸ್ ಮತ್ತು ವೇರೇಬಲ್ಸ್ ಉತ್ಪನ್ನಗಳ ಮೇಲೆ 77%ರಷ್ಟು ರಿಯಾಯಿತಿ ಲಭ್ಯ. ಗ್ಯಾಲಕ್ಸಿ ಬುಕ್4 ಸರಣಿಯ ಲ್ಯಾಪ್‌ಟಾಪ್‌ಗಳ ಆಯ್ದ ಮಾದರಿಗಳ ಖರೀದಿಯ ಮೇಲೆ ಗ್ರಾಹಕರು 24%ವರೆಗೆ ರಿಯಾಯಿತಿಗಳನ್ನು ಪಡೆಯಬಹುದು.

ಪ್ರಮುಖ ನಿಯೋ-ಕ್ಯೂಎಲ್‌ಇಡಿ 8ಕೆ, ನಿಯೋ ಕ್ಯೂಎಲ್‌ಇಡಿ, ಒಎಲ್‌ಇಡಿ, ದಿ ಫ್ರೇಮ್ ಟಿವಿಗಳು ಮತ್ತು ಕ್ರಿಸ್ಟಲ್ ಯುಹೆಚ್‌ಡಿ ಸರಣಿಯಂತಹ ಸ್ಯಾಮ್‌ಸಂಗ್ ಟಿವಿಗಳ ಆಯ್ಕೆ ಮಾಡೆಲ್‌ಗಳು 43%ರಷ್ಟು ರಿಯಾಯಿತಿಯಲ್ಲಿ ಲಭ್ಯವಿರುತ್ತವೆ. ನಿಯೋ ಕ್ಯೂಎಲ್ಇಡಿ 8ಕೆ, ನಿಯೋ ಕ್ಯೂಎಲ್ಇಡಿ ಮತ್ತು ಓಎಲ್ಇಡಿ ಟಿವಿಗಳ ಆಯ್ದ ಮಾಡೆಲ್‌ಗಳ ಖರೀದಿಯ ಮೇಲೆ ಗ್ರಾಹಕರು 20,000 ರೂ.ವರೆಗೆ ಬ್ಯಾಂಕ್ ಕ್ಯಾಶ್‌ಬ್ಯಾಕ್ ಪಡೆಯಬಹುದು. ಇದೆಲ್ಲದರ ಜತೆಗೆ ಗ್ರಾಹಕರು ಎಲ್ಲ ಟಿವಿಗಳ ಖರೀದಿಯಲ್ಲಿ 5,000 ರೂ.ವರೆಗೆ ಎಕ್ಸ್‌ಚೇಂಜ್‌ ಬೋನಸ್‌ನಂತೆ ಪ್ರಯೋಜನಗಳನ್ನು ಪಡೆಯಬಹುದು.

‘ಫ್ಯಾಬ್ ಗ್ರಾಬ್ ಫೆಸ್ಟ್’ 2024ರಲ್ಲಿ ರೆಫ್ರಿಜರೇಟರ್‌ಗಳು, ವಾಷಿಂಗ್ ಮೆಷಿನ್‌ಗಳು, ಮೈಕ್ರೋವೇವ್‌ಗಳು, ಮಾನಿಟರ್‌ಗಳು ಮತ್ತು ಏರ್ ಕಂಡಿಷನರ್‌ಗಳಂತಹ ಡಿಜಿಟಲ್ ಉಪಕರಣಗಳನ್ನು ಕಡಿಮೆ ಬೆಲೆ ಮತ್ತು ಹೆಚ್ಚು ರಿಯಾಯಿತಿಯಲ್ಲಿ ಪಡೆಯಬಹುದು.

ನಮ್ಮ ‘ಹೆಚ್ಚು ಖರೀದಿಸಿ ಹೆಚ್ಚು ಉಳಿಸಿ’ ವೇದಿಕೆಯನ್ನು ಬಳಸಿಕೊಂಡು ಗ್ರಾಹಕರು Samsung.com ಅಥವಾ ಸ್ಯಾಮ್ ಸಂಗ್ ಶಾಪ್ ಆ್ಯಪ್ ಮೂಲಕ ಎರಡು ಅಥವಾ ಹೆಚ್ಚಿನ ಉತ್ಪನ್ನಗಳ ಖರೀದಿಸಿದರೆ ಹೆಚ್ಚುವರಿ 5% ಉಳಿತಾಯ ಮಾಡಬಹುದಾಗಿದೆ. ‘ಹೆಚ್ಚು ಖರೀದಿಸಿ ಹೆಚ್ಚು ಉಳಿಸಿ’ ಪ್ಲಾಟ್‌ಫಾರ್ಮ್ ಗ್ರಾಹಕರಿಗೆ ಸ್ಯಾಮ್‌ಸಂಗ್ ಉತ್ಪನ್ನಗಳ ಮೇಲೆ ಹೆಚ್ಚು ಆಫರ್ ಗಳನ್ನು ಪಡೆಯುವ ಅವಕಾಶ ಒದಗಿಸುತ್ತದೆ.

ಖುಷಿಯ ವಿಚಾರ ಇನ್ನೂ ಇದೆ. ಈ ವೇಳೆಯಲ್ಲಿ ಗ್ರಾಹಕರು ಸೈಡ್-ಬೈ-ಸೈಡ್ ರೆಫ್ರಿಜರೇಟರ್‌ಗಳು, ಚಂದದ ಫ್ರೆಂಚ್-ಡೋರ್ ರೆಫ್ರಿಜರೇಟರ್‌ಗಳು ಮತ್ತು ಫ್ರಾಸ್ಟ್ ಫ್ರೀ ರೆಫ್ರಿಜರೇಟರ್‌ಗಳಂತಹ ವ್ಯಾಪಕ ಶ್ರೇಣಿಯ ಪ್ರೀಮಿಯಂ ಉಪಕರಣಗಳ ಮೇಲೆ 48%ವರೆಗೆ ರಿಯಾಯಿತಿ ಪಡೆಯಬಹುದು. ಬೀಸ್ಪೋಕ್ ಎಐ ಪ್ಯಾಕೇಜ್‌ನ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಆಯ್ದ ಉತ್ಪನ್ನಗಳನ್ನು ಖರೀದಿಸುವ ಮೂಲಕ ಗ್ರಾಹಕರು ತಮ್ಮ ಅಡುಗೆ ಮನೆಯನ್ನು ಅದ್ಭುತವಾಗಿ ರೂಪಾಂತರಿಸಬಹುದು ಮತ್ತು ಅದಕ್ಕಾಗಿ ಹೆಚ್ಚುವರಿ 10% ರಿಯಾಯಿತಿಯನ್ನು ಪಡೆಯಬಹುದು.

ವಾಷಿಂಗ್ ಮೆಷಿನ್‌ಗಳ ಆಯ್ದ ಮಾದರಿಗಳು 50%ವರೆಗಿನ ರಿಯಾಯಿತಿಯಲ್ಲಿ ಲಭ್ಯ. ಸಂಪೂರ್ಣ ಅಟೋಮ್ಯಾಟಿಕ್ ಫ್ರಂಟ್ ಲೋಡಿಂಗ್ ಮತ್ತು ಸಂಪೂರ್ಣ ಅಟೋಮ್ಯಾಟಿಕ್ ಟಾಪ್ ಲೋಡಿಂಗ್ ಯಂತ್ರಗಳ ಡಿಜಿಟಲ್ ಇನ್ವರ್ಟರ್ ಮೋಟಾರ್‌ಗೆ 20-ವರ್ಷದ ವಾರಂಟಿ ಲಭ್ಯವಿರುತ್ತದೆ. ಈ ಉತ್ಪನ್ನಗಳ ಸುಲಭ ಖರೀದಿಗೆ ಕೈಗೆಟುಕುವ ಇಎಂಐ ಆಯ್ಕೆ ಕೂಡ ಲಭ್ಯವಿದ್ದು, ಸಂಪೂರ್ಣ ಅಟೋಮ್ಯಾಟಿಕ್ ಫ್ರಂಟ್ ಲೋಡಿಂಗ್‌ ವಾಷಿಂಗ್ ಮೆಷಿನ್ ಕೇವಲ 1,490 ರೂ., ಸಂಪೂರ್ಣ ಅಟೋಮ್ಯಾಟಿಕ್ ಟಾಪ್ ಲೋಡಿಂಗ್‌ 990 ರೂ. ಮತ್ತು ಸೆಮಿ- ಅಟೋಮ್ಯಾಟಿಕ್ ವಾಷಿಂಗ್ ಮೆಷಿನ್‌ 756 ರೂ. ಇಎಂಐಗೆ ಲಭ್ಯ.

ಈ ಕುರಿತು ಮಾತನಾಡಿರುವ ಸ್ಯಾಮ್‌ಸಂಗ್ ಇಂಡಿಯಾದ ಡಿ2ಸಿ ಬಿಸಿನೆಸ್‌ನ ಉಪಾಧ್ಯಕ್ಷ ಸುಮಿತ್ ವಾಲಿಯಾ, “Samsung.com ಮತ್ತು ಸ್ಯಾಮ್ ಸಂಗ್ ಮಳಿಗೆಗಳಲ್ಲಿ ಬಹು ನಿರೀಕ್ಷಿತ ಬೇಸಿಗೆ ಮಾರಾಟ ಮೇಳ ಆರಂಭಿಸಿದ್ದೇವೆ. ಫ್ಯಾಬ್ ಗ್ರಾಬ್ ಫೆಸ್ಟ್ ಮೂಲಕ ನಾವು ನಮ್ಮ ಗ್ರಾಹಕರಿಗೆ ಉತ್ತಮ ಆಫರ್‌ಗಳು ಮತ್ತು ರಿಯಾಯಿತಿಗಳನ್ನು ನೀಡುತ್ತಿದ್ದೇವೆ. ಈ ಫ್ಯಾಬ್ ಗ್ರಾಬ್ ಫೆಸ್ಟ್‌ನಲ್ಲಿ ಹೆಚ್ಚು ಖರೀದಿಸಿ ಹೆಚ್ಚು ಉಳಿಸಿ ಎಂಬ ಯೋಜನೆ ಅಳವಡಿಕೆಯ ಮೂಲಕ ಸ್ಯಾಮ್‌ಸಂಗ್ ಶ್ರೇಣಿಗಳ ಹೆಚ್ಚು ಉತ್ಪನ್ನಗಳನ್ನು ಖರೀದಿಸುವ ನಮ್ಮ ಗ್ರಾಹಕರಿಗೆ ಹೆಚ್ಚುವರಿ 5% ರಿಯಾಯಿತಿಯನ್ನೂ ನೀಡಲಿದ್ದೇವೆ. ಗ್ರಾಹಕರ ಸಂತಸವನ್ನು ಹೆಚ್ಚಿಸುವ ಜತೆಗೆ, ಆಯ್ದ ಮಾಡೆಲ್‌ಗಳನ್ನು ನಾವು ಅದೇ ದಿನ ಡೆಲಿವರಿ ನೀಡಲಿದ್ದೇವೆ” ಎಂದು ಹೇಳಿದರು.

ಮಾನಿಟರ್‌ಗಳ ಆಯ್ದ ಮಾದರಿಗಳು 61%ವರೆಗಿನ ರಿಯಾಯಿತಿಯಲ್ಲಿ ಲಭ್ಯ. ಗ್ರಾಹಕರು ಸ್ಮಾರ್ಟ್ ಮತ್ತು ಗೇಮಿಂಗ್ ಮಾನಿಟರ್‌ಗಳ ಆಯ್ದ ಮಾದರಿಗಳ ಖರೀದಿಯ ಮೇಲೆ ಉಚಿತ ವಾಲ್ ಮೌಂಟ್ ಅನ್ನು ಕೂಡ ಪಡೆಯಬಹುದು. ಸ್ಯಾಮ್ ಸಂಗ್ ತನ್ನ ಎಲ್ಲ ಮಾನಿಟರ್‌ಗಳ ಮೇಲೆ 3 ವರ್ಷಗಳ ವಾರಂಟಿ ಮತ್ತು 20% ಬ್ಯಾಂಕ್ ಕ್ಯಾಶ್‌ಬ್ಯಾಕ್ (10,000 ರೂ.ವರೆಗೆ) ನೀಡುತ್ತದೆ.

ಕನ್ವರ್ಟಿಬಲ್ ಮತ್ತು ವಿಂಡ್ ಫ್ರೀTM ಏಸಿಗಳ ಆಯ್ದ ಮಾದರಿಗಳು 47%ವರೆಗಿನ ರಿಯಾಯಿತಿಯಲ್ಲಿ ಲಭ್ಯವಿರುತ್ತದೆ. ಎರಡು ಅಥವಾ ಹೆಚ್ಚು ವಿಂಡ್ ಫ್ರೀTM ಏಸಿ ಮಾದರಿಗಳನ್ನು ಖರೀದಿಸುವಾಗ ಗ್ರಾಹಕರು ಹೆಚ್ಚುವರಿ 10% ರಿಯಾಯಿತಿಯನ್ನು ಪಡೆಯಬಹುದು. ವಿಶೇಷವೆಂದರೆ, ಪಿಸಿಬಿ ವಿಭಾಗದಲ್ಲಿ ಈ ಮಾದರಿಗಳು ವಿಸ್ತೃತ ವಾರಂಟಿಯೊಂದಿಗೆ ಬರುತ್ತವೆ. 1-ವರ್ಷದ ಸ್ಟಾಂಡರ್ಡ್ ವಾರಂಟಿ ಜೊತೆಗೆ ಹೆಚ್ಚುವರಿ 4-ವರ್ಷದ ವಿಸ್ತೃತ ವಾರಂಟಿಯನ್ನು ಗ್ರಾಹಕರು ಪಡೆಯಬಹುದು.

ಅತ್ಯಾಕರ್ಷಕ ಬ್ಯಾಂಕ್ ಕೊಡುಗೆಗಳು ಕೂಡ ಲಭ್ಯವಿದೆ. ಗ್ರಾಹಕರು ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಇತರ ಪ್ರಮುಖ ಸಂಸ್ಥೆಗಳ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿದರೆ ಗರಿಷ್ಠ 25,000 ರೂ.ವರೆಗಿನ ಕ್ಯಾಶ್‌ಬ್ಯಾಕ್‌ ಪಡೆಯಬಹುದು ಮತ್ತು ಆ ಮೂಲಕ 22.5%ವರೆಗೆ ಉಳಿತಾಯವನ್ನು ಅನುಭವಿಸಬಹುದು.

ಟ್ಯಾಬ್ಲೆಟ್‌ಗಳು, ಆಕ್ಸೆಸರೀಸ್ ಮತ್ತು ವೇರೇಬಲ್ಸ್(ಧರಿಸಬಹುದಾದ ಉತ್ಪನ್ನಗಳು)ಗಳ ಆಯ್ದ ಮಾದರಿಗಳ ಮೇಲೆ 77%ವರೆಗೆ ರಿಯಾಯಿತಿ
ಗ್ಯಾಲಕ್ಸಿ ಎಸ್ ಸರಣಿ, ಝಡ್ ಸರಣಿ ಮತ್ತು ಎ ಸರಣಿಯ ಸ್ಮಾರ್ಟ್‌ಫೋನ್‌ಗಳ ಆಯ್ದ ಮಾದರಿಗಳ ಮೇಲೆ 64%ವರೆಗೆ ರಿಯಾಯಿತಿ
ಆಯ್ದ ರೆಫ್ರಿಜರೇಟರ್‌ಗಳು ಸೇರಿದಂತೆ ಡಿಜಿಟಲ್ ಉಪಕರಣಗಳ ಮೇಲೆ 48% ವರೆಗೆ ರಿಯಾಯಿತಿ ಮತ್ತು ಆಯ್ದ ಕನ್ವರ್ಟಿಬಲ್ ಮತ್ತು ವಿಂಡ್‌ಫ್ರೀTM ಏಸಿಗಳ ಮೇಲೆ 47%ವರೆಗೆ ರಿಯಾಯಿತಿ
ನಿಯೋ ಕ್ಯೂಎಲ್ಇಡಿ 8ಕೆ, ನಿಯೋ ಕ್ಯೂಎಲ್ಇಡಿ, ಕ್ಯೂಎಲ್ಇಡಿ, ಓಎಲ್ಇಡಿ ಮತ್ತು 4ಕೆ ಯುಎಚ್‌ಡಿ ಟಿವಿಗಳ ಆಯ್ದ ಮಾದರಿಗಳ ಮೇಲೆ 43%ವರೆಗೆ ರಿಯಾಯಿತಿ

ಇದನ್ನೂ ಓದಿ: Samsung AI TV: ಏಪ್ರಿಲ್ 17ರಂದು ಸ್ಯಾಮ್‌ಸಂಗ್‌ನ ಎಐ ಟಿವಿಗಳ ಹೊಸ ಶ್ರೇಣಿ ಬಿಡುಗಡೆ

Continue Reading

ದೇಶ

Vande Bharat Metro: ಮೊದಲ ವಂದೇ ಭಾರತ್‌ ಮೆಟ್ರೋ ಸಂಚಾರಕ್ಕೆ ಸಿದ್ಧ; ಇಲ್ಲಿದೆ ವಿಡಿಯೊ

Vande Bharat Metro: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸದ್ಯ ಭಾರತದಲ್ಲಿ ಸಂಪರ್ಕ ಕ್ರಾಂತಿಯನ್ನೇ ಉಂಟು ಮಾಡಿದೆ. ಇದೀಗ ವಂದೇ ಭಾರತ್‌ ಮೆಟ್ರೋ ಸರದಿ. ಹೌದು ದೇಶೀಯವಾಗಿ ನಿರ್ಮಿಸಲಾಗುತ್ತಿರುವ ವಂದೇ ಭಾರತ್‌ ಮೆಟ್ರೋದ ಬೋಗಿಗಳನ್ನು ಪಂಜಾಬ್‌ನ ಕಪುರ್ಥಾಲಾ ದ ರೈಲ್ವೆ ಕೋಚ್ ಫ್ಯಾಕ್ಟರಿಯಲ್ಲಿ ನಿರ್ಮಿಸಲಾಗುತ್ತಿದೆ. ಜುಲೈಯಲ್ಲಿ ಈ ಮೆಟ್ರೋಸ ಪರೀಕ್ಷಾರ್ಥ ಸಂಚಾರ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಈ ಮೆಟ್ರೋದ ವಿಡಿಯೊ ಹೊರ ಬಿಡಲಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಮೆಟ್ರೋ ಹೇಗಿದೆ? ನೀವೂ ನೋಡಿ.

VISTARANEWS.COM


on

Vande Bharat Metro
Koo

ನವದೆಹಲಿ: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು-ಇದು ಸದ್ಯ ಭಾರತದಲ್ಲಿ ಸಂಪರ್ಕ ಕ್ರಾಂತಿಯನ್ನೇ ಉಂಟು ಮಾಡಿದೆ. ಆರಂಭವಾಗಿ ಕೆಲವೇ ದಿನಗಳಲ್ಲಿ ಜನ ಮನ ಗೆದ್ದಿದೆ. ಇದೇ ಯಶಸ್ಸಿನಿಂದ ಸ್ಫೂರ್ತಿ ಪಡೆದು ವಂದೇ ಭಾರತ್‌ ಮೆಟ್ರೋ (Vande Bharat Metro) ಸಿದ್ಧಪಡಿಸಲಾಗುತ್ತಿದ್ದು, ಜುಲೈ ವೇಳೆಗೆ ಪರೀಕ್ಷಾರ್ಥ ಓಡಾಟ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಪಂಜಾಬ್‌ನ ಕಪುರ್ಥಾಲಾ (Punjab’s Kapurthala)ದ ರೈಲ್ವೆ ಕೋಚ್ ಫ್ಯಾಕ್ಟರಿಯಲ್ಲಿ ವಂದೇ ಭಾರತ್ ಮೆಟ್ರೋದ ಬೋಗಿಗಳನ್ನು ನಿರ್ಮಿಸಲಾಗುತ್ತದೆ. ಸದ್ಯ ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಗಮನ ಸೆಳೆಯುತ್ತಿದೆ (Viral Video).

ಮೊದಲ ಹಂತದಲ್ಲಿ 50 ವಂದೇ ಭಾರತ್ ಮೆಟ್ರೋ ರೈಲುಗಳನ್ನು ನಿರ್ಮಾಣ ಮಾಡಲಾಗುತ್ತದೆ ಮತ್ತು ಕ್ರಮೇಣ ಸಂಖ್ಯೆಯನ್ನು 400ಕ್ಕೆ ಏರಿಸಲಾಗುವುದು ಎಂದು ರೈಲ್ವೆ ಮೂಲಗಳು ತಿಳಿಸಿವೆ. ಭಾರತದಲ್ಲೇ ನಿರ್ಮಾಣವಾಗುತ್ತಿರುವ ಮೆಟ್ರೋ ರೈಲು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಇದು ದೊಡ್ಡ ನಗರಗಳಲ್ಲಿ ಮೆಟ್ರೋ ಸೇವೆಯನ್ನು ವಿಸ್ತರಣೆ ಮಾಡಲು ಸಹಾಯ ಮಾಡಲಿದೆ. ಅಲ್ಲದ ಮಹಾನಗರಗಳ ಅಕ್ಕಪಕ್ಕದ ನಗರಗಳಿಗೂ ಮೆಟ್ರೋ ಸೇವೆ ವಿಸ್ತರಿಸುವ ಯೋಜನೆಗೆ ಇದು ಉತ್ತೇಜನ ನೀಡಲಿದೆ.

ವಂದೇ ಭಾರತ್ ಮೆಟ್ರೋ 100 ಕಿ.ಮೀ.ನಿಂದ 250 ಕಿ.ಮೀ.ವರೆಗೆ ಪ್ರಯಾಣಿಸುವ ಸಾಮರ್ಥ್ಯ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಇದು 12 ಬೋಗಿಗಳನ್ನು ಹೊಂದಿದೆ. ಬೇಕಾದರೆ 16 ಬೋಗಿಗಳವರೆಗೆ ವಿಸ್ತರಿಸಬಹುದು ಎಂದು ಅವರು ಹೇಳಿದ್ದಾರೆ.

ಇರಲಿದೆ ಹಲವು ವೈಶಿಷ್ಟ್ಯ

ವಂದೇ ಭಾರತ್‌ ಮೆಟ್ರೋ ಅಸ್ತಿತ್ವದಲ್ಲಿರುವ ಹಳಿಗಳಲ್ಲಿ ಕಾರ್ಯನಿರ್ವಹಿಸಲಿದ್ದು, ಲಕ್ನೋ-ಕಾನ್ಪುರ, ಆಗ್ರಾ-ಮಥುರಾ ಮತ್ತು ತಿರುಪತಿ-ಚೆನ್ನೈನಂತಹ ಮಾರ್ಗಗಳಲ್ಲಿ ಸಂಚರಿಸಲಿದೆ. ಇದು ವಿಶಾಲವಾದ ಒಳಾಂಗಣ ಮತ್ತು ದೊಡ್ಡ ಸ್ವಯಂಚಾಲಿತ ಬಾಗಿಲುಗಳನ್ನು ಹೊಂದಿದೆ. ಜತೆಗೆ ಪ್ರಸ್ತುತ ಚಾಲನೆಯಲ್ಲಿರುವ ಮೆಟ್ರೋ ರೈಲುಗಳಲ್ಲಿ ಲಭ್ಯವಿಲ್ಲದ ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.‌ ಅಧಿಕಾರಿಗಳು ಈ ವರ್ಷವೇ ರೈಲು ಓಡಾಟ ಆರಂಭಿಸಲು ಸಾಧ್ಯವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2019ರಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ಪ್ರಾರಂಭವಾದಾಗಿನಿಂದ ಭಾರತದ ಸೆಮಿ-ಹೈಸ್ಪೀಡ್ ರೈಲು ಪ್ರಯಾಣದಲ್ಲಿ ಹಲವು ಸುಧಾರಣೆ ಕಂಡು ಬಂದಿದೆ. ಸದ್ಯ ವಂದೇ ಭಾರತ್‌ ಮೆಟ್ರೋ ಕೂಡ ಈ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ ಎನ್ನುವ ನಿರೀಕ್ಷೆ ಇದೆ.

ಇದನ್ನೂ ಓದಿ: PM Narendra Modi: ಬೆಂಗಳೂರು- ಕಲಬುರಗಿ, ಮೈಸೂರು- ಚೆನ್ನೈ ಸೇರಿ 10 ವಂದೇ ಭಾರತ್‌ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ

ಪ್ರಯಾಣಿಕರ ಸುರಕ್ಷತೆಗೆ ಒತ್ತು ನೀಡಲು ಪ್ರಧಾನಿ ಸೂಚನೆ

ರೈಲು ಪ್ರಯಾಣದಲ್ಲಿನ ಸುರಕ್ಷತೆಯನ್ನು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 2014ರಿಂದ ಹಲವಾರು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ರೈಲ್ವೆ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಸುರಕ್ಷತೆಗೆ ಸಂಬಂಧಿಸಿದ ಕೆಲಸಗಳಿಗಾಗಿ ಮೀಸಲಾದ ನಿಧಿಯನ್ನು ರಚಿಸುವುದು, ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದು ಹಾಕುವುದು, ಹಳಿಗಳ ನವೀಕರಣಕ್ಕೆ ಹೆಚ್ಚಿನ ಒತ್ತು ನೀಡುವುದು ಮತ್ತು ಸುರಕ್ಷಿತ ಪ್ರಯಾಣಿಕರ ಬೋಗಿಗಳ ಟ್ರ್ಯಾಕ್ ರೋಲ್ ಔಟ್ ಅನ್ನು ಹೆಚ್ಚಿನ ವೇಗದಲ್ಲಿ ಆಧುನೀಕರಿಸುವುದು ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದೆ.

Continue Reading
Advertisement
ED Raid
ದೇಶ3 mins ago

ED Raid: ಇಡಿ ಭರ್ಜರಿ ಬೇಟೆ; ಕಾಂಗ್ರೆಸ್‌ ಮುಖಂಡನ ಆಪ್ತ ಕಾರ್ಯದರ್ಶಿ ಮನೆಯಿಂದ 25 ಕೋಟಿ ರೂ. ವಶ

Mahanati Show Gagana Comedy About Rishi actor
ಕಿರುತೆರೆ13 mins ago

Mahanati Show: ‘ಮಹಾನಟಿʼ ವೇದಿಕೆಯಲ್ಲಿ ನಟ ರಿಷಿ ಫೋನ್‌ ನಂಬರ್‌ ಕೇಳಿದ ಚಿತ್ರದುರ್ಗದ ಗಗನಾ!

amethi unrest
ದೇಶ27 mins ago

Amethi Unrest: ಕಾಂಗ್ರೆಸ್‌ ಕಚೇರಿ ಮೇಲೆ ಕಿಡಿಗೇಡಿಗಳಿಂದ ಅಟ್ಯಾಕ್‌; ಬಿಜೆಪಿಯ ದುಷ್ಕೃತ್ಯ ಎಂದು ಆರೋಪ

Paris Olympics
ಕ್ರೀಡೆ1 hour ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ​ಭಾರತದ ಪುರುಷರ & ಮಹಿಳೆಯರ ರಿಲೇ ತಂಡ

Prajwal Revanna Case
ಕರ್ನಾಟಕ1 hour ago

Prajwal Revanna Case: ಗಂಡ, ಮಗನ ಕೇಸ್‌ನಿಂದ ಭವಾನಿ ರೇವಣ್ಣಗೂ ಕಾನೂನು ಕಂಟಕ?

Boat Capsize
ವೈರಲ್ ನ್ಯೂಸ್1 hour ago

Boat Capsizes: ಜಲಾವೃತ ಸೇತುವೆಗೆ ದೋಣಿ ಡಿಕ್ಕಿ; ಶಾಕಿಂಗ್‌ ವಿಡಿಯೋ ವೈರಲ್‌

T20 World Cup 2024
ಕ್ರೀಡೆ2 hours ago

T20 World Cup 2024: ಟಿ20 ವಿಶ್ವಕಪ್​ಗೆ ಪಾಕ್​ ಉಗ್ರರಿಂದ ಭಯೋತ್ಪಾದಕ ದಾಳಿಯ ಎಚ್ಚರಿಕೆ

Megha Dhade bigg boss marathi winner crptic post about rahul gandhi
ಸಿನಿಮಾ2 hours ago

Megha Dhade: ನಮ್ಮ ದೇಶ ಬಿಟ್ಟು ನರಕಕ್ಕೆ ಹೋಗಿ ಎಂದು ರಾಹುಲ್‌ ಗಾಂಧಿ ವಿರದ್ಧ ʻಬಿಗ್‌ ಬಾಸ್‌ʼ ವಿಜೇತೆ ಆಕ್ರೋಶ!

Prajwal Revanna Case
ಕರ್ನಾಟಕ2 hours ago

Prajwal Revanna Case: ಎಚ್‌.ಡಿ.ರೇವಣ್ಣರಿಗೆ ಇಂದು ಜಾಮೀನು ಸಿಗುತ್ತಾ?

Sunil Narine
ಕ್ರೀಡೆ2 hours ago

Sunil Narine: ಅತ್ಯಧಿಕ ಸಿಕ್ಸರ್​ ಸಾಧಕರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಸುನೀಲ್​ ನರೈನ್

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ6 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ15 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ17 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ17 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ4 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

ಟ್ರೆಂಡಿಂಗ್‌