Hill Station: ಮಾಥೇರಾನ್‌ ಗಿರಿಧಾಮದ ಭೇಟಿಗೆ ಥ್ರಿಲ್‌ ತುಂಬಲು ಬಂದಿದೆ ಪುಟಾಣಿ ವಿಸ್ಟಾಡೋಮ್ ರೈಲು! - Vistara News

ಪ್ರವಾಸ

Hill Station: ಮಾಥೇರಾನ್‌ ಗಿರಿಧಾಮದ ಭೇಟಿಗೆ ಥ್ರಿಲ್‌ ತುಂಬಲು ಬಂದಿದೆ ಪುಟಾಣಿ ವಿಸ್ಟಾಡೋಮ್ ರೈಲು!

ಇಂದಿಗೂ ಕೆಲವೇ ಕೆಲವು ಜಾಗಗಳಲ್ಲಿ ಹಳೆಯ ಮಾದರಿಯ ಪುಟಾಣಿ ರೈಲುಗಳು ಕಾರ್ಯ ನಿರ್ವಹಿಸುತ್ತಿದ್ದು, ಅವುಗಳಲ್ಲಿ ಪ್ರಯಾಣಿಸುವುದು ಬಹುತೇಕ ಪ್ರವಾಸ ಪ್ರಿಯರ ಬಕೆಟ್‌ ಲಿಸ್ಟಿನ ಬಯಕೆಗಳಾಗಿರುತ್ತವೆ ಎಂದರೆ ತಪ್ಪಲ್ಲ. ಇದೀಗ ಈ ಪಟ್ಟಿಗೆ ಹೊಸ ಬಗೆಯ ಇನ್ನೊಂದು ಪುಟಾಣಿ ರೈಲು ಸೇರ್ಪಡೆಯಾಗಿದೆ.

VISTARANEWS.COM


on

vistadome
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಟಾಯ್‌ ಟ್ರೈನ್‌ ಅಥವಾ ಪುಟಾಣಿ ರೈಲು ಎಂಬುದು ಕೇವಲ ಮಕ್ಕಳಿಗೆ ಮಾತ್ರವಲ್ಲ. ಹಿರಿಯರಾದಿಯಾಗಿ ಎಲ್ಲರನ್ನೂ ಮಕ್ಕಳಾಗಿಸಿಬಿಡುವ, ಅದ್ಭುತ ಕಲ್ಪನಾಲೋಕಕ್ಕೆ ಕರೆದೊಯ್ಯುವ ಅಯಸ್ಕಾಂತವದು. ಅದಕ್ಕಾಗಿಯೇ ಇಂದಿಗೂ ಎಂತೆಂತಹ ಥ್ರಿಲ್ಲಿಂಗ್‌ ಸೂಪರ್‌ ಫಾಸ್ಟ್‌ ವಾಹನಗಳ ಸೌಲಭ್ಯಗಳಿದ್ದರೂ, ಪುಟಾಣಿ ರೈಲಿನ ಲೋಕ ಕೊಡುವ ಮಜಾ ಯಾವುದೂ ಕೊಡದು. ಅದರಲ್ಲೂ, ಈ ರೈಲು ಪ್ರಯಾಣದ ಹಾದಿ ದಟ್ಟ ಕಾನನವಾದರೆ ಕಥೆ ಮುಗಿದಂತೆಯೇ. ಮಂಜು ಸುರಿವ ವಾತಾವರಣದಲ್ಲಿ, ಮುಖಕ್ಕೆ ಮುತ್ತಿಕ್ಕುವ ಬೆಳ್ಳನೆಯ ಮಂಜಿನ ಹನಿಯೊಳಗೆ ಕರಗಿಸುತ್ತಾ, ಎರಡೂ ಬದಿಗಳಲ್ಲಿ ಹಬ್ಬಿದ ಹಸಿರನ್ನು ಸೀಳಿಕೊಂಡು ರೈಲು ಹೋಗುತ್ತಿದ್ದರೆ, ಕಿಟಕಿಗೆ ಮುಖ ಕೊಟ್ಟು ಕುಳಿತೆವೆಂದರೆ, ಹೊತ್ತು ಹೋದದ್ದೇ ತಿಳಿಯದು. ಅದಕ್ಕಾಗಿಯೇ, ಎಲ್ಲರನ್ನೂ ಒಮ್ಮೆ ಬಾಲ್ಯಕ್ಕೆ ಕೊಂಡೊಯ್ಯಬಲ್ಲ ಶಕ್ತಿ ಅದಕ್ಕಿದೆ.

ಇಂದಿಗೂ ಕೆಲವೇ ಕೆಲವು ಜಾಗಗಳಲ್ಲಿ ಹಳೆಯ ಮಾದರಿಯ ಪುಟಾಣಿ ರೈಲುಗಳು ಕಾರ್ಯ ನಿರ್ವಹಿಸುತ್ತಿದ್ದು, ಅವುಗಳಲ್ಲಿ ಪ್ರಯಾಣಿಸುವುದು ಬಹುತೇಕ ಪ್ರವಾಸ ಪ್ರಿಯರ ಬಕೆಟ್‌ ಲಿಸ್ಟಿನ ಬಯಕೆಗಳಾಗಿರುತ್ತವೆ ಎಂದರೆ ತಪ್ಪಲ್ಲ. ಡಾರ್ಜಿಲಿಂಗ್‌ ಟಾಯ್‌ ಟ್ರೈನ್, ಕಾಂಗ್ರಾ ಕಣಿವೆಯ ಪುಟಾಣಿ ರೈಲು, ನೀಲಗಿರಿ ಬೆಟ್ಟಗಳ ಪುಟಾಣಿ ರೈಲು ಹೀಗೆ ಕೆಲವೇ ಕೆಲವು ಇಂದಿಗೂ ಹಳೆಯ ಖುಷಿಯನ್ನು ಜನರಿಗೆ ಉಣಬಡಿಸುತ್ತಿರುವ ರೈಲುಸೇವೆಗಳು. ಇದೀಗ ಈ ಪಟ್ಟಿಗೆ ಹೊಸ ಬಗೆಯ ಇನ್ನೊಂದು ಪುಟಾಣಿ ರೈಲು ಸೇರ್ಪಡೆಯಾಗಿದೆ. ಮೊದಲೇ ಸೇವೆಯಲ್ಲಿದ್ದರೂ ಆಗೀಗ ರದ್ದು ಅನುಭವಿಸುತ್ತಾ ಬಂದಿದ್ದ ಐತಿಹಾಸಿಕ ಮಾಥೆರಾನ್‌ ಪುಟಾಣಿ ರೈಲು ಈಗ ಆಧುನಿಕವಾಗಿ ಸಜ್ಜುಗೊಂಡು ಮತ್ತೆ ಪ್ರವಾಸಿಗರ ಸೇವೆಗೆ ಸಿದ್ಧಗೊಂಡಿದೆ.

ಮಾಥೇರಾನ್‌ ಹೆಸರು ಪ್ರಕೃತಿ ಪ್ರಿಯರಿಗೆ ಹೊಸತೇನೂ ಅಲ್ಲ. ಮುಂಬೈಯಿಂದ 100 ಕಿಮೀ ದೂರದಲ್ಲಿರುವ ಪುಟಾಣಿ ಗಿರಿಧಾಮವಿದು. ಸಹ್ಯಾದ್ರಿ ಬೆಟ್ಟಗಳ ಸಾಲಿನ ಇದು ತನ್ನ ಅದ್ಭುತ ಪ್ರಕೃತಿ ಸೌಂದರ್ಯದಿಂದ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಮಳೆಗಾಲದಲ್ಲಂತೂ ಇದರ ಸೌಂದರ್ಯ ದುಪ್ಪಟ್ಟಾಗುತ್ತದೆ. ಮುಂಬೈ ನಗರಿಯ ಮಂದಿಯ ಪಾಲಿಗಿದು ಪಕ್ಕದಲ್ಲೇ ಕೈಗೆಟಕುವ ಸ್ವರ್ಗ. ಇಂಥ ಮಾಥೇರಾನ್‌ ನೋಡಿ ಬರುವ ಕನಸಿದ್ದರೆ ಈಗ ನೀವು ಈ ಪುಟಾಣಿ ರೈಲನ್ನು ಆಯ್ಕೆ ಮಾಡಬಹುದು. ಅದರಲ್ಲೂ ಐಷಾರಾಮಿ ಸುತ್ತಲೂ ಗಾಜಿನ ಕಿಟಕಿಗಳಿಂದಾವೃತವಾದ ವಿಸ್ಟಾಡೋಮ್‌ ಕೋಚ್‌ ಕೂಡಾ ಆಯ್ಕೆಗೆ ಲಭ್ಯವಿದೆ!

೨೦೧೬ರಲ್ಲಿ ಈ ಪುಟಾಣಿ ರೈಲು ಸೇವೆ ರದ್ದುಗೊಂಡ ಮೇಲೆ ೨೦೧೮ರಲ್ಲಿ ಮತ್ತೆ ಮರು ಉದ್ಘಾಟನೆಗೊಂಡು ಪ್ರಯಾಣ ಆರಂಭಿಸಿತ್ತು. ಆದರೆ, ೨೦೧೯ರಲ್ಲಿ ಭೂಕುಸಿತದ ಕಾರಣದಿಂದ ನಿಂತುಹೋದ ಸೇವೆ, ಮತ್ತೆ ಸರಿಯಾಗಿ ಆರಂಭವಾಗಿರಲಿಲ್ಲ. ಕೇವಲ ನಿರ್ಧಿಷ್ಟ ಎರಡು ನಿಲ್ದಾಣಗಳ ನಡುವೆ ಮಾತ್ರ ಪ್ರಯಾಣ ಲಭ್ಯವಿತ್ತು. ಇದೀಗ ಪೂರ್ಣಪ್ರಮಾಣದಲ್ಲಿ ಮತ್ತಷ್ಟು ಹೊಸ ಸೇವೆಗಳೊಂದಿಗೆ ಮರಳಿದ್ದು ಈ ಬಗ್ಗೆ ಭಾರತೀಯ ರೈಲ್ವೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಪುಟ್ಟದೊಂದು ವಿಡಿಯೋವನ್ನೂ ಹಂಚಿಕೊಂಡಿದೆ. ೨೩ ಸೆಕೆಂಡುಗಳ ಈ ವಿಡಿಯೋ ಜನಮನಸೂರೆಗೊಳ್ಳುತ್ತಿದೆ.

ಇದನ್ನೂ ಓದಿ: Travel Tips: ಹಿಮದೂರುಗಳಲ್ಲಿ ಬದುಕಿನಲ್ಲೊಮ್ಮೆ ಮಾಡಲೇಬೇಕಾದ ಸಾಹಸ ಕ್ರೀಡೆಗಳಿವು!

ಸಾಂಪ್ರದಾಯಿಕ ಮಾದರಿಯ ಈ ನೇರಲ್-‌ ಮಾಥೇರಾನ್‌ ರೈಲು ಚುಕುಬುಕು ಪುಟಾಣಿ ರೈಲಾಗಿದ್ದು ಇದರಲ್ಲಿ ವಿಸ್ಟಾಡೋಮ್‌ ಕೋಚ್‌ ಕೂಡಾ ಇರಲಿದೆ. ಪಶ್ಚಿಮ ಘಟ್ಟಗಳ ಸುಮಾರು ೨೧ ಕಿಮೀ ದೂರಗಳಷ್ಟು ದಟ್ಟ ಕಾಡಿನ ದಾರಿಯಲ್ಲಿ ಕ್ರಮಿಸುವ ಇದು ಕಣ್ಣಿಗೆ ಹಬ್ಬ.

ಭಾರತೀಯ ರೈಲ್ವೆ ಪ್ರಕಾರ, ರೈಲು ಪ್ರಯಾಣ ಪ್ರವಾಸಿಗರಿಗೆ ಹಬ್ಬ. ಪ್ರಕೃತಿ ಸೌಂದರ್ಯವನ್ನು ಮೊಗೆಮೊಗೆದು ಕುಡಿಯಲು ಇದಕ್ಕಿಂದ ಚಂದದ ಅವಕಾಶ ಇನ್ನೊಂದು ಸಿಗಲಾರದು.

ಇದು ನೇರಲ್‌- ಮಾಥೇರಾನ್‌ ಮಧ್ಯೆ ಜುಮ್ಮಪತ್ತಿ, ಪಾವಟರ್‌ಪೈಪ್‌ ಹಾಗೂ ಅಮನ್‌ ಲಾಡ್ಜ್‌ ಎಂಬ ಮೂರು ನಿಲ್ದಾಣಗಳಲ್ಲಿ ಸ್ವಲ್ಪ ಹೊತ್ತಿನ ನಿಲುಗಡೆಯನ್ನು ಹೊಂದಿದೆ. ಈ ಎಲ್ಲ ನಿಲ್ದಾಣಗಳೂ ಸೌರಶಕ್ತಿಯ ಉತ್ಪಾದಕಗಳನ್ನು ಹೊಂದಿದ್ದು ಶಕ್ತಿ ಉತ್ಪಾದಕ ಗಾಳಿಯಂತ್ರಗಳನ್ನೂ ಹೊಂದಿದೆ. ಇವೆಲ್ಲವೂ ರೈಲಿನಲ್ಲಿ ಎಲ್‌ಇಡಿ ಲೈಟಿಂಗ್‌ ಹಾಗೂ ಫ್ಯಾನ್‌ಗಳಿಗೆ ಬಳಕೆಯಾಗಲಿದೆ.

ಈ ನ್ಯಾರೋಗೇಜ್‌ ರೈಲು ಮಾರ್ಗ ಸ್ವಾತಂತ್ರಪೂರ್ವದ್ದಾಗಿದ್ದು, ೧೯೦೦ರಲ್ಲಿ ವಿನ್ಯಾಸ ಮಾಡಲಾಗಿತ್ತು, ರೈಲುಮಾರ್ಗದ ಕಾರ್ಯ ೧೯೦೪ರಲ್ಲಿ ಆರಂಭವಾಗಿ ೧೯೦೭ರಲ್ಲಿ ಅಂತ್ಯಗೊಂಡಿತ್ತು.

ಇದನ್ನೂ ಓದಿ: 7 Wonders Of Karnataka : ಇವೇ ನೋಡಿ ಕರ್ನಾಟಕದ 7 ಅದ್ಭುತಗಳು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Special Food In Kashi: ನೀವು ಕಾಶಿಗೆ ಹೋದರೆ ಈ ತಿಂಡಿಗಳ ರುಚಿ ನೋಡಲು ಮರೆಯದಿರಿ!

ಕಾಶಿಗೆ ಹೋದರೆ ದರ್ಶನ, ಗಂಗಾತೀರ, ಗಂಗಾರತಿ, ಮಣಿಕರ್ಣಿಕಾ, ಕಾಳಭೈರವ ಮತ್ತಿತರ ದರ್ಶನ ಮಾತ್ರವಲ್ಲ, ಕಾಶಿಯ ಜೀವನಶೈಲಿ, ಊಟ ಇತ್ಯಾದಿಗಳ ದರ್ಶನವನ್ನೂ ಮಾಡಬೇಕು. ಕಾಶಿಯೊಳಗೆ ಹೊಕ್ಕರೆ ಸಾಕು, ಆಹಾರ ಪ್ರಿಯರಿಗೆ ನೆಮ್ಮದಿ ನೀಡುವ ನಾಳಿಗೆ ಚಪ್ಪರಿಸುವ ಸಾಕಷ್ಟು ಜಾಗಗಳಿವೆ. ಬಗೆಬಗೆಯ ಖಾದ್ಯಗಳೂ, ವಾರಣಾಸಿಯಲ್ಲಿ ಮಾತ್ರ ದಕ್ಕುವ ಆಹಾರ ವೈವಿಧ್ಯಗಳೂ ಇವೆ. ಈ ಕುರಿತ ಮಾಹಿತಿ (Special Food In Kashi) ಇಲ್ಲಿದೆ.

VISTARANEWS.COM


on

Special Food In Kashi
Koo

ಕಾಶಿ ಅಥವಾ ವಾರಣಾಸಿಗೆ ಜೀವನದಲ್ಲೊಮ್ಮೆಯಾದರೂ ಹೋಗಬೇಕು, ಕಾಶಿ ವಿಶ್ವನಾಥನ ದರ್ಶನ ಮಾಡಬೇಕು. ಗಂಗೆಯನ್ನು ಕಂಡು ಕೈಮುಗಿದು ಮುಳುಗೆದ್ದು ಗಂಗಾರತಿಯನ್ನು ನೋಡಿ ಈ ಬದುಕು ಧನ್ಯ ಎಂದು ನೆಮ್ಮದಿ ಪಡೆಯಬೇಕು ಎಂಬುದು ಬಹುತೇಕ ಹಿಂದೂಗಳ ಜೀವಿತಾವಧಿಯ ಕನಸು. ಹಿಂದೆಲ್ಲ ಕಾಶಿಗೆ ಹೋಗುವುದೇ ಜೀವಿತಾವಧಿಯ ಅತ್ಯುನ್ನತವಾದ ದೊಡ್ಡ ಕನಸು. ಬಹಳ ದೂರ ಎಂಬ ಕಾರಣದಿಂದ ಹಿಡಿದು ಬದುಕಿನ ಜಂಜಡಗಳನ್ನೆಲ್ಲ ಮುಗಿಸಿದ ಮೇಲೆ ವೃದ್ಧಾಪ್ಯ ಸಮೀಪಿಸುವ ಹೊತ್ತಿಗೆ ಕಾಶಿಗೊಮ್ಮೆ ಹೇಗಾದರೂ ಮಾಡಿ ಹೋಗಿ ನೋಡಿ ಪ್ರಾಣ ಬಿಡುತ್ತೇನೆ ಎಂಬ ಸ್ಥಿತಿ ಹಲವರದ್ದಾಗಿತ್ತು. ಆದರೆ ಇಂದು ಕಾಲ ಬದಲಾಗಿದೆ. ಜಗತ್ತು ಬದಲಾಗಿದೆ. ಕಾಶಿಯನ್ನು ನೋಡಲು ವೃದಾಪ್ಯದವರೆಗೆ ಕಾಯುವ ತಾಳ್ಮೆ ಯಾರಿಗೂ ಇಲ್ಲ. ಅಂದುಕೊಂಡ ತಕ್ಷಣ ವಿಮಾನದಲ್ಲೋ, ರೈಲಿನಲ್ಲೋ ಯುವಜನರೂ ಕೂಡಾ ಕಾಶಿಗೆ ಹೋಗಿ ಧನ್ಯರಾಗುತ್ತಿದ್ದಾರೆ. ಕಳೆದೊಂದು ದಶಕದಲ್ಲಿ ಕಾಶಿಯ ವಿಶ್ವನಾಥನನ್ನು ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರಷ್ಟೇ ಅಲ್ಲ, ಯುವಜನರ ಸಂಖ್ಯೆಯಲ್ಲಿಯೂ ಭಾರೀ ಏರಿಕೆಯಾಗಿದೆ.
ಆದರೆ, ಕಾಶಿಗೆ ಹೋದರೆ ದರ್ಶನ, ಗಂಗಾತೀರ, ಗಂಗಾರತಿ, ಮಣಿಕರ್ಣಿಕಾ, ಕಾಳಭೈರವ ಮತ್ತಿತರ ದರ್ಶನ ಮಾತ್ರವಲ್ಲ, ಕಾಶಿಯ ಜೀವನಶೈಲಿ, ಊಟ ಇತ್ಯಾದಿಗಳ ದರ್ಶನವನ್ನೂ ಮಾಡಬೇಕು. ಕಾಶಿಯೊಳಗೆ ಹೊಕ್ಕರೆ ಸಾಕು, ಆಹಾರ ಪ್ರಿಯರಿಗೆ ನೆಮ್ಮದಿ ನೀಡುವ ನಾಳಿಗೆ ಚಪ್ಪರಿಸುವ ಸಾಕಷ್ಟು ಜಾಗಗಳಿವೆ. ಬಗೆಬಗೆಯ ಖಾದ್ಯಗಳೂ, ವಾರಣಾಸಿಯಲ್ಲಿ ಮಾತ್ರ ದಕ್ಕುವ ಆಹಾರ ವೈವಿಧ್ಯಗಳೂ ಇವೆ. ಬನ್ನಿ, ಕಾಶಿಯ ಗಲ್ಲಿಗಳಲ್ಲೊಮ್ಮೆ ಸುತ್ತಾಡಿ, ಇಲ್ಲಿ ಬಂದರೆ ತಿನ್ನಲೇಬೇಕಾದ ತಿನಿಸುಗಳು ಯಾವುವು ಎಂಬುದನ್ನು ನೋಡಿಕೊಂಡು (Special Food In Kashi) ಬರೋಣ.

Kachodi Subji

ಕಚೋಡಿ ಸಬ್ಜಿ

ಕಾಶಿಯಲ್ಲಿ ನೀವು ಯಾವದೇ ಹೊಟೇಲಿನಲ್ಲಿ ಉಳಿದುಕೊಂಡರೂ, ತಿನ್ನಲೆಂದು ಕಾಶಿಯ ಯಾವುದೇ ಗಲ್ಲಿಗಿಳಿದರೂ ಸಾಕು ನಿಮ್ಮನ್ನು ಕಚೋಡಿ ಸಬ್ಜಿ ಸ್ವಾಗತಿಸುತ್ತದೆ. ಕಾಶಿಯ ಬೆಳಗ್ಗಿನ ಉಪಹಾರಗಳ ಪೈಕಿ ಕಚೋಡಿ ಸಬ್ಜಿ ಪ್ರಮುಖವಾದುದು. ಒಳಗಡೆ ಬೇಳೆಕಾಳುಗಳ ಹೂರಣ ಹಾಕಿ ವಡೆಯಂತೆ ತಟ್ಟಿ ಎಣ್ಣಿಯಲ್ಲಿ ಬೇಯಿಸಿ ಆಲೂಗಡ್ಡೆಯ ಸಬ್ಜಿಯೊಂದಗೆ ಅವರು ಸವಿಯಲು ಕೊಡುವ ಕಚೋಡಿಯು ಆಹಾ ಎಂಬ ರುಚಿ. ವೃದ್ಧರಿಂದ ಮಕ್ಕಳವರೆಗೆ ಎಲ್ಲರೂ ಸವಿದು ಚಪ್ಪರಿಸುವ ಈ ಬೆಳಗಿನ ತಿಂಡಿಯನ್ನು ಕಾಶಿಯಲ್ಲಿದ್ದಾಗ ತಿನ್ನದೇ ಇದ್ದರೆ ಏನೋ ಕಳೆದುಕೊಂಡಂತೆ.

Tomato chaat

ಟಮಾಟರ್‌ ಚಾಟ್‌

ಕಾಶಿಯ ಜನಪ್ರಿಯ ಚಾಟ್‌ ಎಂದರೆ ಟಮಾಟರ್‌ ಚಾಟ್‌. ಇಲ್ಲಿನ ಸ್ಥಳೀಯರೂ, ಇಲ್ಲಿಗೆ ಬರುವ ಪ್ರವಾಸಿಗರೂ ಇಷ್ಟಪಟ್ಟು ತಿನ್ನುವ ಚಾಟ್‌ ಇದು. ಗೋಲ್‌ಗಪ್ಪ, ಸೇವ್‌ಪುರಿ, ದಹಿ ಪುರಿ, ಟಿಕ್ಕಿ ಚಾಟ್‌ ಮತ್ತಿತರ ಚಾಟ್‌ಗಳು ಎಲ್ಲೆಡೆಯೂ ದೊರೆತರೂ, ಈ ಟಮಾಟರ್‌ ಚಾಟ್‌ ಮಾತ್ರ ಕಾಶಿಯ ಸ್ಪೆಷಲ್‌. ಇಲ್ಲಿ ಟಮಾಟರ್‌ ಚಾಟ್‌ನ ರುಚಿ ಜೀವನದಲ್ಲೊಮ್ಮೆಯಾದರೂ ನೋಡಬೇಕು ಎನ್ನುತ್ತಾರೆ ಚಾಟ್‌ ಪ್ರಿಯರು.

malaiyo sweet

ಮಲೈಯೋ

ಬಾಯಿಗಿಟ್ಟರೆ ಕರಗುವ ಹಾಲಿನ ಕೆನೆಯಿಂದಲೇ ಮಾಡುವ ಈ ಸಿಹಿತಿನಿಸು ಐಸ್‌ಕ್ರೀಮಿನಂತೆ. ಆಹಾ ಎನ್ನುವ ರುಚಿಯ, ಕೇಸರಿಯ ಘಮದ ತಿನಿಸು. ಕೇವಲ ಚಳಿಗಾಲದಲ್ಲಿ ಮಾತ್ರ ಲಭ್ಯವಿರುವ ಈ ತಿನಿಸು, ಚಳಿಗಾಲದಲ್ಲಿ ರಸ್ತೆಬದಿಯಲ್ಲಿ ಮಾರಾಟ ಮಾಡುತ್ತಾರೆ ಕೂಡ.

Rabdi Jalebi

ರಬ್ಡಿ ಜಿಲೇಬಿ

ರಬ್ಡೀ ಜೊತೆಗೆ ಜೀಲೇಬಿ ಸೇರಿಸಿ ತಿನ್ನುವ ಮಜಾವೇ ಬೇರೆ. ಹಾಲಿನಿಂದ ಮಾಡುವ ರಬ್ಡೀ ಎಂಬ ಸಿಹಿತಿನಿಸನ್ನು ಹಾಗೆಯೇ ತಿನ್ನಬಹುದಾದರೂ, ಬಿಸಿಬಿಸಿ ಜಿಲೇಬಿ ಜೊತೆಗೆ ಚಳಿಚಳಿಯಾಗ ರಬ್ಡೀ ಸುರಿದು ತಿಂದರೇನೇ ರುಚಿ.

Banarasi Paan

ಬನಾರಸಿ ಪಾನ್‌

ಭರ್ಜರಿ ಊಟವೊಂದನ್ನು ಉಂಡ ಮೇಲೆ ಒಂದು ಪಾನ್‌ ಹಾಕಿ ಬಾಯಿ ಚಪ್ಪರಿಸದಿದ್ದರೆ ಊಟ ಉಂಡಂತಾಗದು. ಕಾಶೀಯ ಪಾನ್‌ನ ರುಚಿಯನ್ನು ವರ್ಣಿಸಿ ಬರೆಯದ ಕವಿತೆಗಳಿಲ್ಲ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಹೀಗಿರುವಾಗ ಕಾಶಿಗೆ ಹೋಗಿ ಕವಳ ಹಾಕದಿದ್ದರೆ ಅದು ವ್ಯರ್ಥ ಜೀವನವೇ ಸರಿ.

Banarasi Lassi

ಲಸ್ಸೀ

ಲಸ್ಸಿಯ ನಿಜವಾದ ರುಚಿಯನ್ನು ಸವಿಯಬೇಕೆಂದಿದ್ದರೆ ಕಾಶಿಗೆ ಹೋಗಬೇಕು. ದಪ್ಪ ಮೊಸರಿನಿಂದ ಮಾಡಿದ ಈ ಲಸ್ಸಿಯ ಮೇಲೆ ಕೆನೆಯನ್ನೂ ಹಾಕಿ ಮಣ್ಣಿನ ಕಪ್‌ಗಳಲ್ಲಿ ನೀಡಿದರೆ, ಹೊಟ್ಟೆಗೂ ಮನಸ್ಸಿಗೂ ತಂಪು. ಕಾಶಿ ಗಲ್ಲಿಗಳಲ್ಲೆಲ್ಲ ಸುತ್ತಾಡಿ ಸುಸ್ತಾದ ಮೇಲೆ ಒಂದು ಲಸ್ಸಿ ಕುಡಿದರೆ ಸುಸ್ತೆಲ್ಲ ಮಾಯ!

ಇದನ್ನೂ ಓದಿ: Baking Powder: ಬೇಕಿಂಗ್‌ ಪುಡಿ ಹುಟ್ಟಿದ ಕತೆ ಕುತೂಹಲಕರ! ಅಡುಗೆ ಮಾಡುವ ಮೊದಲು ಇದರ ಹಿನ್ನೆಲೆ ಗೊತ್ತಿರಲಿ

Continue Reading

ಪ್ರವಾಸ

Haridwara Travel: ಹರಿದ್ವಾರಕ್ಕೆ ಭೇಟಿ ನೀಡಿದಾಗ ಈ ಸ‍್ಥಳಗಳನ್ನು ಮಿಸ್ ಮಾಡದೇ ನೋಡಿ!

Haridwara Travel: ಪವಿತ್ರತೆಗೆ ಹೆಸರಾದ ಗಂಗೆಯ ದಡದಲ್ಲಿರುವ ಹರಿದ್ವಾರ ಪುರಾಣಗಳಿಗೆ ಸಂಬಂಧಿಸಿದ ಮತ್ತು ಐತಿಹಾಸಿಕ ದೇವಾಲಯಗಳನ್ನು ಹೊಂದಿದೆ. ಹಾಗಾಗಿ ಈ ಸ್ಥಳ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. ಇಲ್ಲಿಗೆ ಬರುವವರು ತಪ್ಪದೇ ಈ ಸ್ಥಳಗಳಿಗೆ ಭೇಟಿ ನೀಡಿದರೆ ದೇವಾಲಯಗಳ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬಹುದು! ಹರಿದ್ವಾರದ ಪ್ರಮುಖ ಸ್ಥಳಗಳ ಪರಿಚಯಾತ್ಮಕ ವಿವರ ಇಲ್ಲಿದೆ.

VISTARANEWS.COM


on

Haridwara Travel
Koo

ಬೆಂಗಳೂರು: ರಜಾ ದಿನಗಳಲ್ಲಿ ಕೆಲವರು ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಆದರೆ ಇನ್ನೂ ಕೆಲವರಿಗೆ ದೇವಾಲಯಗಳಿಗೆ ಸುತ್ತುವುದೆಂದರೆ ತುಂಬಾ ಇಷ್ಟ. ಹಾಗಾಗಿ ಅಂಥವರು ಹರಿದ್ವಾರಕ್ಕೆ (Haridwara Travel) ಭೇಟಿ ನೀಡಿ. ಪವಿತ್ರತೆಗೆ ಹೆಸರಾದ ಗಂಗೆಯ ದಡದಲ್ಲಿರುವ ಹರಿದ್ವಾರ ಪುರಾಣಗಳಿಗೆ ಸಂಬಂಧಿಸಿದ ಮತ್ತು ಐತಿಹಾಸಿಕ ದೇವಾಲಯಗಳನ್ನು ಹೊಂದಿದೆ. ಹಾಗಾಗಿ ಈ ಸ್ಥಳ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. ಇಲ್ಲಿಗೆ ಬರುವವರು ತಪ್ಪದೇ ಈ ಸ್ಥಳಗಳನ್ನು ವೀಕ್ಷಿಸಿ.

Haridwara Travel

ಹರ್ ಕಿ ಪೌರಿ

ಹರಿದ್ವಾರದ ಅತ್ಯಂತ ಪ್ರಸಿದ್ಧವಾದ ಹರ್ ಕಿ ಪೌರಿಯಲ್ಲಿ ಪುರಾಣಗಳ ಪ್ರಕಾರ ನದಿ ದಡದಲ್ಲಿ ಹಿಂದೂ ದೇವರ ಮುದ್ರೆಗಳನ್ನು ಹೊಂದಿದೆಯಂತೆ. ಇದನ್ನು ಭಗವಾನ್ ವಿಷ್ಣುವಿನ ಹೆಜ್ಜೆ ಗುರುತು ಎಂದು ಭಾವಿಸಲಾಗುತ್ತದೆಯಂತೆ. ಇಲ್ಲಿನ ವಿಶೇಷವೆಂದರೆ ಸಂಜೆಯ ವೇಳೆ ಗಂಗಾ ನದಿಯಲ್ಲಿ ಧೂಪ, ದೀಪ ಮತ್ತು ಗಂಟೆಗಳೊಂದಿಗೆ ಆರತಿಯನ್ನು ಬೆಳಗಲಾಗುತ್ತದೆಯಂತೆ. ಇಲ್ಲಿ ಈ ಸಮಯದಲ್ಲಿ ಅನೇಕ ಜನರು ಸೇರುತ್ತಾರಂತೆ.

Haridwara Travel

ಮಾನಸ ದೇವಿ ದೇವಸ್ಥಾನ

ಅರಣ್ಯದಿಂದ ಕೂಡಿದ ಬಿಲ್ವಪರ್ವತದ ಬೆಟ್ಟಗಳ ಮೇಲಿರುವ ಈ ದೇವಸ್ಥಾನಕ್ಕೆ ನವವಿವಾಹಿತರು ಮತ್ತು ಭಕ್ತರು ದೇವಿಯ ಆಶೀರ್ವಾದವನ್ನು ಪಡೆಯಲು ಬರುತ್ತಾರೆ. ಪುರಾಣಗಳ ಪ್ರಕಾರ ಮಾನಸ ದೇವಿ ಬ್ರಹ್ಮಾಂಡದಲ್ಲಿ ವಿಲೀನರಾಗುವ ಮೊದಲು ಇಲ್ಲಿ ತಪಸ್ಸನ್ನು ಮಾಡಿದರು ಎನ್ನಲಾಗುತ್ತದೆ. ಇಲ್ಲಿ ರಮಣೀಯವಾದ ಮಾನಸ ದೇವಿಯ ಪ್ರತಿಮೆಗಳಿರುವ ಗರ್ಭಗುಡಿ ಇದೆ ಮತ್ತು ಬೆಳ್ಳಿ ಲೇಪಿತ ಸಿಂಹದ ವಿಗ್ರಹಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ.

Haridwara Travel

ಚಂಡಿ ದೇವಿ ದೇವಸ್ಥಾನ

ಇದು ಹರಿದ್ವಾರದ ಹೆಸರಾಂತ ದೇವಾಲಯ. ಸುಂದರವಾದ ನೀಲ್ ಪರ್ವತದ ಶಿಖರದ ಮೇಲಿರುವ ಈ ದೇವಾಲಯದಲ್ಲಿ ಪಾರ್ವತಿ ದೇವಿಯ ಉಗ್ರ ಅವತಾರಾದ ಚಂಡಿ ದೇವಿಯನ್ನು ಪೂಜಿಸಲಾಗುತ್ತದೆ. ದಂತ ಕಥೆಯ ಪ್ರಕಾರ ಚಂಡಿ ದೇವಿ ಶುಂಭ-ನಿಶುಂಭ ರಾಕ್ಷಸರನ್ನು ಸಂಹರಿಸಲು ಇಲ್ಲಿ ನೆಲೆಸಿದ್ದಳು ಎನ್ನಲಾಗಿದೆ. ಇಲ್ಲಿ ಪ್ರಾಚೀನ ವಾಸ್ತು ಶಿಲ್ಪ ಮತ್ತು ವಿವಿಧ ಹಿಂದೂ ದೇವತೆಗಳ ಕಥೆಗಳನ್ನು ಪ್ರದರ್ಶಿಸುವ ಉಬ್ಬುಶಿಲ್ಪಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ.

Haridwara Travel

ಮಾಯಾ ದೇವಿ ದೇವಸ್ಥಾನ

ಇಲ್ಲಿ ಮಾಯಾದೇವಿಯ ಕಪ್ಪು ಕಲ್ಲಿನ ಶಿಲ್ಪವನ್ನು ಪ್ರತಿಷ್ಠಾಪಿಸಲಾಗಿದೆ. ಇದು ಉತ್ತರ ಭಾರತದ ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಮಾಯ ದೇವಿ ಶಿವನ ಪತ್ನಿ ಶಕ್ತಿಯ ಒಂದು ಅವತಾರವಾಗಿದೆ. ಈ ಸ್ಥಳದಲ್ಲಿ ಗಂಗೆ ಭೂಮಿಗೆ ಇಳಿದಿದ್ದರಿಂದ ಇಲ್ಲಿ ಭಗೀರಥನನ್ನು ಪೂಜಿಸಲಾಗುತ್ತದೆ.

Haridwara Travel

ಭಾರತ್ ಮಾತಾ ಮಂದಿರ

ಇದು ದೇಶಭಕ್ತಿಗೆ ಸಮರ್ಪಿತವಾದ ವಿಶೇಷ ದೇವಾಲಯವಾಗಿದೆ. ಇಲ್ಲಿ ದೇವರುಗಳ ಬದಲಿಗೆ ಪರಿಹಾರ ನಕ್ಷೆಯನ್ನು ಪೂಜಿಸಲಾಗುತ್ತದೆ. ಈ ಮಂದಿರವು ಭಾರತೀಯ ಉಪಖಂಡವನ್ನು ಚಿತ್ರಿಸುವ 8×8 ಅಮೃತಶಿಲೆಯಲ್ಲಿ ಕೆತ್ತಿದ ಪರಹಾರ ನಕ್ಷೆಯನ್ನು ಹೊಂದಿದೆ. ಇದನ್ನು “ ಮದರ್ ಇಂಡಿಯಾ” ಎಂದು ಕರೆಯಲಾಗುತ್ತದೆ. ಇಲ್ಲಿ ಸ್ವಾತಂತ್ರ್ಯ ಹೋರಾಟದ ಘಟನೆಗಳನ್ನು ಚಿತ್ರಿಸುವ ಭಿತ್ತಿಚಿತ್ರಗಳು ಗೋಡೆಗಳಲ್ಲಿ ಕಂಡುಬರುತ್ತದೆ. ಇದು ಬೆಳಿಗ್ಗೆ 8 ಗಂಟೆಯಿಂದ 12 ಗಂಟೆ ಹಾಗೂ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯ ವೇಳೆ ತೆರೆದಿರುತ್ತದೆ.

Haridwara Travel

ರಾಜಾಜಿ ರಾಷ್ಟ್ರೀಯ ಉದ್ಯಾನವನ

ಇದು 820 ಚದರ ಕಿಮೀ ವ್ಯಾಪ್ತಿಯನ್ನು ಹೊಂದಿದೆ. ಇಲ್ಲಿ ಆಕರ್ಷಕ ಭೂದೃಶ್ಯಗಳು, ಸಮೃದ್ಧವಾದ ವನ್ಯಜೀವಿಗಳು ಮತ್ತು 23ಕ್ಕೂ ಹೆಚ್ಚು ಜಾತಿಯ ಆರ್ಕಿಡ್ ಗಳಿವೆ. ಇದಕ್ಕೆ ಸ್ವಾತಂತ್ರ್ಯ ಹೋರಾಟಗಾರ ಸಿ.ರಾಜಗೋಪಾಲಾಚಾರಿ ಅವರ ಹೆಸರನ್ನು ಇಡಲಾಗಿದೆ. ಇಲ್ಲಿ ಹರಿಯುವ ನದಿಗಳು, ಕಣಿವೆಗಳು, ಹುಲ್ಲುಗಾವಲು, ಅಪರೂಪ ಪಕ್ಷಿಗಳು ಕಂಡುಬರುತ್ತಿದೆ. ಇದು ಪ್ರತಿದಿನ ಮುಂಜಾನೆಯಿಂದ ಮುಸ್ಸಂಜೆಯವರೆಗೂ ತೆರೆದಿರುತ್ತದೆ.

Haridwara Travel

ದಕ್ಷೇಶ್ವರ ಮಹಾದೇವ ದೇವಸ್ಥಾನ

ಇದು ಕಂಖಾಲ್ ಪಟ್ಟಣದ ಸೋಲಾನಿ ನದಿಯ ದಡದಲ್ಲಿದೆ. ಪುರಾಣದಲ್ಲಿ ಇದನ್ನು ರಾಜ ದಕ್ಷನ ಅರಮನೆ ಮತ್ತು ಯಜ್ಞದ ಅಖಾಡವನ್ನು ಹೊಂದಿರುವ ಸ್ಥಳ ಎನ್ನಲಾಗುತ್ತದೆ. ಶಿವನಿಗಾದ ಅವಮಾನವನ್ನು ಸಹಿಸದೆ ಸತಿ ಇಲ್ಲಿ ಆತ್ಮಹತ್ಯೆ ಮಾಡಿಕೊಂಡಳು ಎನ್ನಲಾಗುತ್ತದೆ. 18 ಶಿಖರವನ್ನುಹೊಂದಿರುವ ಈ ದೇವಾಲಯಕ್ಕೆ ಶಿವನ ಭಕ್ತರು ಭೇಟಿ ನೀಡುತ್ತಾರೆ. ಇದು ಬೆಳಿಗ್ಗೆ 6ರಿಂದ ಸಂಜೆ 8ಗಂಟೆಯವರೆಗೆ ತೆರೆದಿರುತ್ತದೆ.

Haridwara Travel

ಭೀಮಗೋಡ ಟ್ಯಾಂಕ್

ಇದು ಹರ್ ಕಿ ಪೌರ್‌ಗೆ ಸಮೀಪದಲ್ಲಿರುವ ಮಾನವ ನಿರ್ಮಿತ ಜಲಾಶಯವಾಗಿದೆ. ಇದರ ಮೂಲ ಮಹಾಭಾರತದ ಪಾಂಡವರು ಎನ್ನಲಾಗುತ್ತದೆ. ಪಾಂಡವರಲ್ಲಿ ಒಬ್ಬನಾದ ಬಲಶಾಲಿ ಭೀಮನು ನೀರಿಗಾಗಿ ಇಲ್ಲಿ ನೆಲವನ್ನು ಒಡೆಯುವುದರ ಮೂಲಕ ಈ ಕುಂಡವನ್ನು ರಚಿಸಿದನು ಎನ್ನಲಾಗುತ್ತದೆ. ಸೊಂಪಾದ ಉದ್ಯಾನವನ , ದೇವಾಲಯಗಳಿಂದ ಸುತ್ತುವರಿದ ಈ ಸ್ಥಳಕ್ಕೆ ಭಕ್ತರು ಪೂರ್ವಜರಿಗೆ ಗೌರವ ಸಲ್ಲಿಸಲು ಇಲ್ಲಿಗೆ ಬಂದು ಸ್ನಾನ ಮಾಡುತ್ತಾರಂತೆ. ಇದಕ್ಕೆ ಪ್ರವೇಶ ಶುಲ್ಕವಿಲ್ಲ.

ಇದನ್ನೂ ಓದಿ: Salman Khan: ನಟ ಸಲ್ಮಾನ್ ಖಾನ್ ಗ್ಯಾಲಕ್ಸಿ ಅಪಾರ್ಟ್ ಮೆಂಟ್ ಮನೆ ನೋಡಿ ಅಭಿಮಾನಿಗಳಿಗೆ ಫುಲ್ ಶಾಕ್!

ಸಪ್ತ ಋಷಿ ಆಶ್ರಮ

ಇದು ಗಂಗಾ ನದಿಯ ದಡದಲ್ಲಿದೆ. ಈ ಪ್ರದೇಶ ತುಂಬಾ ಶಾಂತವಾಗಿದೆ. ಇಲ್ಲಿ ಕೆಲವು ವಿದ್ವಾಂಸರು ಗ್ರಂಥ ಪಠಣೆ ಮಾಡಲು ಬರುತ್ತಾರಂತೆ. ಇಲ್ಲಿ ಗಂಗಾ ಆರತಿ ಕಾರ್ಯಕ್ರಮ ನಡೆಯುತ್ತದೆ.

Continue Reading

ಲೈಫ್‌ಸ್ಟೈಲ್

Shirdi Tour: ಶಿರಡಿಗೆ ಹೋದಾಗ ಮರೆಯದೇ ಈ ಸ್ಥಳಗಳನ್ನು ನೋಡಿ

Shirdi Tour: ಶಿರಡಿ ಸಂತ ಸಾಯಿ ಬಾಬಾರ ಪುಣ್ಯ ಭೂಮಿಯಾಗಿದೆ. ಇಲ್ಲಿ ಶ್ರೀ ಸಾಯಿ ಬಾಬರು ಜೀವಂತ ಸಮಾಧಿಯಾಗಿ ಭಕ್ತರ Understood ನಿವಾರಿಸುತ್ತಾರೆ ಎಂಬ ನಂಬಿಕೆ ಇದೆ. ಹಾಗಾಗಿ ಶಿರಡಿಯ ಈ ಸ್ಥಳಗಳನ್ನು ಮಿಸ್ ಮಾಡದೇ ನೋಡಿ.

VISTARANEWS.COM


on

Shirdi Tour
Koo

ಬೆಂಗಳೂರು: ಬೇಸಿಗೆಯಲ್ಲಿ ಜನರು ಒಂದಲ್ಲ ಒಂದು ಕಡೆಗೆ ಪ್ರವಾಸಕ್ಕೆ ಹೋಗುತ್ತಾರೆ. ಪ್ರಕೃತಿ ಪ್ರಿಯರು ಪ್ರಕೃತಿ ಸೌಂದರ್ಯವನ್ನು ಸವಿಯುವಂತಹ ಸುಂದರವಾದ ಸ್ಥಳಗಳಿಗೆ ಭೇಟಿ ನೀಡಿದರೆ ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಆಸಕ್ತಿ ಇರುವವರು ಪುರಾಣದ ದೇವಾಲಯಗಳಿಗೆ, ಮಂದಿರಗಳಿಗೆ ಭೇಟಿ ನೀಡುತ್ತಾರೆ. ಹಾಗಾಗಿ ನೀವು ಶಿರಡಿಗೆ (Shirdi Tour) ಭೇಟಿ ನೀಡಲು ಮುಂದಾಗಿದ್ದಾರೆ. ಅಲ್ಲಿ ಈ ಸ್ಥಳಗಳಿಗೆ ತಪ್ಪದೇ ಭೇಟಿ ನೀಡಿ. ಇದರಿಂದ ನಿಮ್ಮ ಶಿರಡಿಯ ಪ್ರವಾಸದ ಅನುಭವ ಉತ್ತಮವಾಗಿರುತ್ತದೆ. ಶಿರಡಿ ಸಂತ ಸಾಯಿ ಬಾಬಾರ ಪುಣ್ಯ ಭೂಮಿಯಾಗಿದೆ. ಇಲ್ಲಿ ಶ್ರೀ ಸಾಯಿ ಬಾಬರು ಜೀವಂತ ಸಮಾಧಿಯಾಗಿ ಭಕ್ತರ ಕಷ್ಟಗಳನ್ನು ನಿವಾರಿಸುತ್ತಾರೆ ಎಂಬ ನಂಬಿಕೆ ಇದೆ. ಹಾಗಾಗಿ ಶಿರಡಿಯ ಈ ಸ್ಥಳಗಳನ್ನು ಮಿಸ್ ಮಾಡದೇ ನೋಡಿ.

  1. ಸಾಯಿ ಬಾಬಾರವರ ಸಮಾಧಿಯ ಗರ್ಭಗುಡಿ ವಸತಿಗೃಹದ ದರ್ಶನ ಮಾಡಿ. ಇಲ್ಲಿ ಬಿಳಿ ಅಮೃತಶಿಲೆಯ ಪ್ರತಿಮೆಯನ್ನು ಸಮಾಧಿ ಕಮಾನಿನ ಮೇಲೆ ಸ್ಥಾಪಿಸಲಾಗಿದೆ. ಇಲ್ಲಿ ಚಿನ್ನದ ಆಭರಣಗಳಿಂದ ಅಲಂಕರಿಸಲ್ಪಟ್ಟ ಗರ್ಭಗುಡಿ, ಭಕ್ತರ ಧನಸಹಾಯದಿಂದ ಕಸೂತಿ ಮಾಡಿದ ಕೆಂಪು ಸೀಲಿಂಗ್ ಅನ್ನು ನೋಡಬಹುದು.
Shirdi Tour
  1. ದೇವಾಲಯದ ಒಳ ಅಭಯಾರಣ್ಯದಿಂದ ಹಿತವಾದ ಕಾಕಡ್ ಆರತಿಯನ್ನು ದರ್ಶನ ಮಾಡಿ. ಅನಾದಿ ಕಾಲದ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿರುವ ಪಾರಂಪರಿಕ ಅರ್ಚಕರಿಂದ ಬೆಳಗುವ ಈ ಆರತಿ ಆನ್ ಲೈನ್ ಪಾಸ್ ಹೊಂದಿರುವವರಿಗೆ ಖಾಸಗಿ ಪ್ರವೇಶ ನೀಡಲಾಗುತ್ತದೆ. ಜನಸಂದಣಿಯಿಲ್ಲದ ಪ್ರಶಾಂತ ವಾತಾವರಣದಲ್ಲಿ ದೇವಾಲಯದ ಕೊಠಡಿಯ ಮೂಲಕ ಪ್ರತಿ ಧ್ವನಿಸುವ ಪವಿತ್ರ ಪಠಣಗಳನ್ನು ಕೇಳಿ ಧ್ಯಾನ ಮಗ್ನರಾಗಿ.
  2. ಸಾಯಿ ಬಾಬಾರ ಆಶ್ರಮದ ಸ್ಥಳವು ಬಾಬಾರ ಆರಾಧಕರಿಗೆ ಉತ್ತಮ ಸ್ಥಳವಾಗಿದೆ. ಇಲ್ಲಿ ಸಂಜೆಯ ವೇಳೆ ಶಾಸ್ರ್ತೋಕ್ತವಾಗಿ ಮೆರವಣಿಗೆ ನಡೆಯಲಿದ್ದು, ಈ ವೇಳೆ ಬಾಬಾ ಅವರು ಒಮ್ಮೆ ಬಳಸಿದ ಪವಿತ್ರ ವಸ್ತುಗಳನ್ನು ಪ್ರದರ್ಶನ ಮಾಡುತ್ತಾರೆ. ಈ ಕಟ್ಟಡದ ಹೊರಭಾಗದಲ್ಲಿ ಹಳ್ಳಿಯ ಶೈಲಿಯ ಕಲಾಕೃತಿ ಮತ್ತು ನೆಲದ ಮೇಲೆ ವರ್ಣ ಚಿತ್ರಗಳನ್ನು ನೋಡಬಹುದು.
  1. ಶಿರಡಿಯ ದ್ವಾರಕಾಮಾಯಿ ಮಠ- ಇಲ್ಲಿ ಬಾಬಾ ಅವರು ಬಳಸಿದ ಅವರ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಈ ಸ್ಥಳದಲ್ಲಿ ಬಾಬಾ ಅವರು ಬದುಕಿದ್ದು, ಇಲ್ಲಿ ಬಾಬಾ ಅವರು ಬದುಕಿದಾಗ ಹಲವಾರು ಪವಾಡಗಳನ್ನು ಮಾಡುತ್ತಿದ್ದರು ಎನ್ನಲಾಗಿದೆ. ಇಲ್ಲಿ ನಿತ್ಯ ಉರಿಯುತ್ತಿರುವ ಧುನಿ ಪವಿತ್ರ ಅಗ್ನಿಯನ್ನು ಪಾವನರಾದ ಬಾಬಾರು ಹಚ್ಚಿದ್ದರು ಎನ್ನಲಾಗಿದೆ.
  2. ಹಾಗೇ ಸುಂದರವಾದ ಹಳೆಯ ದೇವಾಲಯಗಳನ್ನು ಆಧ್ಯಾತ್ಮಿಕ ಸ್ಮರಣಿಕೆಗಳನ್ನು ಮಾರಾಟ ಮಾಡುವ ಮಳಿಗೆಗಳಾಗಿ ಪರಿವರ್ತಿಸಲಾಗಿದೆ. ಇಲ್ಲಿ ಪವಿತ್ರ ಮಣಿಗಳು, ಕಡಗಗಳು ಮತ್ತು ಪ್ರಾರ್ಥನೆಯ ಪುಸ್ತಕಗಳನ್ನು ಖರೀದಿಸಬಹುದು.
  3. ಇಲ್ಲಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ತಿಂಡಿ ತಿನಿಸುಗಳನ್ನು ಮತ್ತು ಮಿಸ್ಸಾಲ್ ನಂತಹ ಬಿಸಿಯಾದ ಉಪಾಹಾರದ ತಿಂಡಿಗಳು ಸಿಗುತ್ತದೆ. ದಿನವಿಡೀ ಸಾಬುದಾನ ವಡಾ, ಬಟಾಟ ವಡಾ ದೊರೆಯುತ್ತದೆ. ಶೀರಾ ಇಲ್ಲಿನ ವಿಶೇಷ ಸಿಹಿ ತಿಂಡಿ. ಬಹಳ ರುಚಿಕರವಾದ ಇದನ್ನು ತಿನ್ನುವುದನ್ನು ತಪ್ಪಿಸಬೇಡಿ.

ಇದನ್ನೂ ಓದಿ: Viral Video: ಎಸಿ ಕೋಚ್ ಸಿಗದಕ್ಕೆ ಸಿಟ್ಟಿಗೆದ್ದು ರೈಲಿನ ಬಾಗಿಲಿನ ಗಾಜನ್ನೇ ಪುಡಿ ಪುಡಿ ಮಾಡಿದ!

  1. ಇಲ್ಲಿ ಫ್ಲೋರಿಶಿಂಗ್ ಪಾರ್ಕ್ ಗಳು ಮತ್ತು ಗಾರ್ಡನ್ ಗಳಿದ್ದು, ಪ್ರಕೃತಿ ಸೌಂದರ್ಯವನ್ನು ಸವಿಯಬಹುದು. ನಗರದ ವಿಕಾಸ್ ಜಾಗೃತಿ ಪಾರ್ಕ್ ನಲ್ಲಿ ಹೂವಿನ ಪೊದೆಗಳ ನಡುವೆ ಪಿಕ್ ನಿಕ್ ಮಾಡಿ, ಪಾಲ್ಖಿಸ್ಥಾನಕ್ ನಲ್ಲಿ ಪುಟ್ಟ ಕೊಳಗಳು, ಸೇತುವೆಗಳನ್ನು ಹಾದುಹೋಗುವ ಸುಸಜ್ಜಿತ ವಾಕಿಂಗ್ ಟ್ರೇಲ್ಸ್ , ಸಾಯಿ ಸರೋವರದ ಮೇಲೆ ಹಾರಾಡುವ ಪಕ್ಷಿಗಳನ್ನು ನೋಟವನ್ನು ನೀವು ಸವಿಯಬಹುದು.
Continue Reading

ಚಾಮರಾಜನಗರ

Tiger Attack : ಮರಿಯಾನೆ ಕೊಂದ ಹುಲಿ; ಶವ ಬಿಟ್ಟು ಕದಲದ ತಾಯಿ ಆನೆ ರೋಧನೆ

Tiger Attack : ಹುಲಿಯೊಂದು ಮರಿಯಾನೆ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ. ಇತ್ತ ಮರಿಯಾನೆ ಬಿಟ್ಟು ಕದಲದ ತಾಯಿ ಆನೆಯು ರೋಧನೆ ಅನುಭವಿಸುತ್ತಿದ್ದು, ರಸ್ತೆಯಲ್ಲಿ ಬಿಡುಬಿಟ್ಟಿತ್ತು. ಇದರಿಂದಾಗಿ ವಾಹನ ಸವಾರರು ಕಿ.ಮೀ ಗಟ್ಟಲೇ ನಿಂತಲ್ಲೇ ನಿಲ್ಲುವಾಯಿತು.

VISTARANEWS.COM


on

By

tiger attack
Koo

ಚಾಮರಾಜನಗರ: ಮರಿಯಾನೆ ಮೇಲೆ ಹುಲಿಯೊಂದು ದಾಳಿ (Tiger Attack) ಮಾಡಿದೆ. ಹುಲಿಯ ದಾಳಿಗೆ ತುತ್ತಾದ ಮರಿ ಆನೆಯು (Elephant death) ಮೃತಪಟ್ಟ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದಲ್ಲಿ (Bandipura Road) ನಡೆದಿದೆ.

ರಸ್ತೆ ಪಕ್ಕದಲ್ಲೇ ಮರಿಯಾನೆ ಮೃತಪಟ್ಟ ಕಾರಣದಿಂದಾಗಿ ತಾಯಿ ಆನೆಯು ಮರಿಯನ್ನು ಬಿಟ್ಟು ಕದಲದೇ ನಿಂತಿತ್ತು. ಮರಿಯಾನೆಯ ಶವವನ್ನು ಮುಟ್ಟುತ್ತಾ ಎಬ್ಬಿಸಲು ಪ್ರಯತ್ನಿಸುತ್ತಿತ್ತು. ಮರಿಯಾನೆ ಮುಂದೆ ಆನೆ ರೋಧನೆಯು ಎಂತಹವರಿಗೂ ಕರುಳು ಚುರುಕ್‌ ಎನ್ನುವಂತೆ ಮಾಡಿತ್ತು.

ರಸ್ತೆ ಪಕ್ಕದಲ್ಲೇ ಆನೆ ನಿಂತಿದ್ದರಿಂದ ಕಿಲೋ ಮೀಟರ್ ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿತ್ತು. ಬಂಡೀಪುರ ಅರಣ್ಯ ವ್ಯಾಪ್ತಿಯ ಮೈಸೂರು- ಊಟಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಆನೆಯನ್ನು ದಾಟಿ ವಾಹನಗಳು ಮುಂದೆ ಹೋಗಲು ಆಗದೆ ನಿಂತಲ್ಲೇ ನಿಲ್ಲುವಂತಾಗಿತ್ತು.

ಇದನ್ನೂ ಓದಿ: Forest Bathing: ಬೆಂಗಳೂರಲ್ಲೂ ಶುರು ಫಾರೆಸ್ಟ್‌ ಬಾಥಿಂಗ್‌; ಕಬ್ಬನ್ ಪಾರ್ಕ್‌ನಲ್ಲಿ ಮರ ಅಪ್ಪಲು ಕೊಡಬೇಕು 1500 ರೂ.!

ನಿಟ್ಟೂರು ಗ್ರಾಮದಲ್ಲಿ ಹುಲಿ ದಾಳಿಗೆ ವ್ಯಕ್ತಿ ಬಲಿ; ಕನಕಗಿರಿಯಲ್ಲಿ ಕರಡಿ ದಾಳಿಗೆ ವೃದ್ಧ ಸಾವು

ಕೊಡಗು: ಹುಲಿ ದಾಳಿಗೆ (Wild Animals Attack) ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ. ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಿಟ್ಟೂರು ಗ್ರಾಮದ ರಾಜಪುರ ರಸ್ತೆ ಸಮೀಪ ಗುರುವಾರ ಸಂಜೆ ಈ ಘಟನೆ ನಡೆದಿದೆ.

ಅಸ್ಸಾಂ ಮೂಲದ ಮೊಹಿಸೂರು ರೆಹಮಾನ್ (51) ಹುಲಿ ದಾಳಿಗೆ ಬಲಿಯಾದ ವ್ಯಕ್ತಿ. ಹಸುವಿನ ಮೇಲೆ ದಾಳಿ ಮಾಡಲು ಬಂದಂತಹ ಹುಲಿ, ಅಲ್ಲೇ ಇದ್ದ ಅಸ್ಸಾಂ ಮೂಲದ ಕಾರ್ಮಿಕ ಮೊಹಿಸೂರು ರೆಹಮಾನ್ ಮೇಲೆ ಎಗರಿ ಬಲಿ ತೆಗೆದುಕೊಂಡಿದೆ.

ಇದನ್ನೂ ಓದಿ: DRDO Test: ದೇಶೀಯ ತಂತ್ರಜ್ಞಾನದ ಕ್ರೂಸ್‌ ಕ್ಷಿಪಣಿಯ ಯಶಸ್ವಿ ಪರೀಕ್ಷೆ

ಘಟನೆಯ ಕುರಿತು ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಹುಲಿಯನ್ನು ಸೆರೆಹಿಡಿಯುವಂತೆ ಒತ್ತಾಯಿಸಿದ್ದಾರೆ. ಈ ಹುಲಿ ದಾಳಿಯಿಂದ ದಕ್ಷಿಣ ಕೊಡಗಿನ ಜನತೆ ಭಯ ಭೀತರಾಗಿದ್ದು, ಒಬ್ಬೋಬ್ಬರೆ ಓಡಾಡಲು ಹಾಗೂ ಕಾಫಿ ತೋಟದಲ್ಲಿ ಕೆಲಸ ಮಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಪೊನ್ನಂಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಕನಕಗಿರಿಯಲ್ಲಿ ಕರಡಿ ದಾಳಿಗೆ ವೃದ್ಧ ಬಲಿ

ಕರಡಿ ದಾಳಿಯಿಂದ ತೀವ್ರ ಗಾಯಗೊಂಡಿದ್ದ ವೃದ್ಧನೋರ್ವ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ರಾಂಪುರ ಗ್ರಾಮದಲ್ಲಿ ಗುರುವಾರ ನಡೆದಿದೆ.

ಕರಡಿ ದಾಳಿ ಹಿನ್ನಲೆ ಘಟನಾ ಸ್ಥಳಕ್ಕೆ ಆಗಮಿಸಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸ್ಥಳೀಯರು ತೀವ್ರ ತರಾಟೆಗೆ ತೆಗೆದುಕೊಂಡರು.

ಚೆನ್ನಪ್ಪ (74) ಮೃತಪಟ್ಟ ವೃದ್ಧ. ರಾಂಪುರ ಗ್ರಾಮದ ಹೊರವಲಯದ ಕೆರೆ ಬಳಿ ಇರುವ ಆಂಜನೇಯ ದೇವಸ್ಥಾನದ ಬಳಿ ದುರ್ಘಟನೆ ನಡೆದಿದೆ.

ಘಟನೆಯ ಹಿನ್ನೆಲೆ

ದೇವಸ್ಥಾನದಲ್ಲಿದ್ದ ಕರಡಿಯನ್ನು ಗಮನಿಸಿದ್ದ ಗ್ರಾಮಸ್ಥರು ಅದನ್ನು ಕೂಡಿಹಾಕಿದ್ದರು. ಆದರೆ ಅಲ್ಲಿಂದ ತಪ್ಪಿಸಿಕೊಂಡು ಹೊರ ಬಂದ ಕರಡಿಯು ವೃದ್ಧ ಚೆನ್ನಪ್ಪನ ಮೇಲೆ ದಾಳಿ ನಡೆಸಿದ್ದು, ತೀವ್ರ ಗಾಯಗೊಂಡಿದ್ದ ವೃದ್ಧನನ್ನು ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವೃದ್ಧ ಚೆನ್ನಪ್ಪ ಸಾವನ್ನಪ್ಪಿದ್ದಾನೆ.

ಘಟನೆಯ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸ್ಥಳೀಯರು ತೀವ್ರ ತರಾಟೆಗೆ ತೆಗೆದುಕೊಂಡರು. ಕರಡಿಯನ್ನು ಸೆರೆ ಹಿಡಿಯಲು ಬೇಕಾದ ಬೋನು ಮತ್ತು ಇತರೆ ಪರಿಕರಗಳನ್ನು ತರದೇ ಹಾಗೆ ಬರೀಗೈಯ್ಯಲ್ಲಿ ಬಂದಿದ್ದ ಅಧಿಕಾರಿ, ಸಿಬ್ಬಂದಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡು, ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಕರಡಿ ಉಪಟಳವನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಕನಕಗಿರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
vistara Editorial ವಿಸ್ತಾರ ಸಂಪಾದಕೀಯ
ದೇಶ39 mins ago

ವಿಸ್ತಾರ ಸಂಪಾದಕೀಯ: ರಕ್ಷಣಾ ರಫ್ತು ಕ್ಷೇತ್ರದಲ್ಲಿ ಬೆಳವಣಿಗೆ ನಮ್ಮ ಹೆಗ್ಗಳಿಕೆ

IPL 2024
ಪ್ರಮುಖ ಸುದ್ದಿ44 mins ago

IPL 2024 : ಸ್ಟೊಯ್ನಿಸ್​​ ಶತಕ, ಚೆನ್ನೈ ವಿರುದ್ಧ 6 ವಿಕೆಟ್​ ಗೆಲವು ಸಾಧಿಸಿದ ಲಕ್ನೊ

Voters' Pledge
ಬೆಂಗಳೂರು60 mins ago

Voters Pledge: ಸಹಕಾರ ಸಂಘಗಳ ಕಾರ್ಯದರ್ಶಿಗಳು, ಸಿಬ್ಬಂದಿಗೆ ಮತದಾನ ಪ್ರತಿಜ್ಞಾವಿಧಿ ಬೋಧನೆ

Lok Sabha Election 2024
Lok Sabha Election 20241 hour ago

Lok Sabha Election 2024: ರಾಹುಲ್‌ ಗಾಂಧಿಯ ಡಿಎನ್‌ಎ ಪರೀಕ್ಷಿಸಬೇಕು; ವಿವಾದ ಹುಟ್ಟುಹಾಕಿದ ಶಾಸಕ ಅನ್ವರ್ ಹೇಳಿಕೆ

DCM DK Shivakumar Election campaign for Bangalore Rural Lok Sabha Constituency Congress candidate DK Suresh In Ramanagara
ರಾಮನಗರ2 hours ago

Lok Sabha Election 2024: ಕೇಂದ್ರ ಸರ್ಕಾರದಿಂದ ರಾಜ್ಯದ ಬಗ್ಗೆ ತಾರತಮ್ಯ ಧೋರಣೆ: ಡಿ.ಕೆ. ಸುರೇಶ್

Priyanka Gandhi
ಕರ್ನಾಟಕ2 hours ago

Priyanka Gandhi: ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ ಮಂಗಳಸೂತ್ರ ಉಳಿಸೋದು ಗೊತ್ತಿಲ್ಲವೇ?; ಮೋದಿ ವಿರುದ್ಧ ಪ್ರಿಯಾಂಕ ಗಾಂಧಿ ವಾಗ್ದಾಳಿ

Lok Sabha Election 2024
Lok Sabha Election 20242 hours ago

Lok Sabha Election 2024: ಕಾಂಗ್ರೆಸ್‌ ಅಧಿಕಾರಕ್ಕೆ ಬಂದೆ ದೇಶದಲ್ಲಿ ಶರಿಯಾ ಕಾನೂನು ಜಾರಿ; ಯೋಗಿ ಆದಿತ್ಯನಾಥ್ ವಾಗ್ದಾಳಿ

Amit Shah
ಕರ್ನಾಟಕ2 hours ago

Amit Shah: ಬೆಂಗಳೂರಲ್ಲಿ ಅಮಿತ್‌ ಶಾ ಹವಾ; ತೇಜಸ್ವಿ ಸೂರ್ಯ ಪರ ಭರ್ಜರಿ ರೋಡ್‌ ಶೋ

Public Sector Banks
ಪ್ರಮುಖ ಸುದ್ದಿ3 hours ago

Public Sector Banks : ಸಾರ್ವಜನಿಕ ಬ್ಯಾಂಕ್​ಗಳು ಸಾಲ ಕಟ್ಟದವರಿಗೆ ಲುಕ್ ಔಟ್ ನೋಟಿಸ್​ ನೀಡುವಂತಿಲ್ಲ, ಕೋರ್ಟ್​​ ಆದೇಶ

Union Minister Pralhad Joshi visit Sri Nuggikeri Anjaneya Swamy Temple in dharwad
ಕರ್ನಾಟಕ3 hours ago

Pralhad Joshi: ಸಚಿವ ಪ್ರಲ್ಹಾದ್‌ ಜೋಶಿಗೆ ಶ್ರೀ ಆಂಜನೇಯ ಸ್ವಾಮಿಯ ಆಶೀರ್ವಾದ; ತಾವರೆ ಹೂ ರೂಪದಲ್ಲಿ ಪ್ರಸಾದ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ20 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು1 day ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ1 day ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು1 day ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು2 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌