Spring Tourism: ವಸಂತ ಕಾಲದಲ್ಲಿ ವೀಕ್ಷಿಸಲೇಬೇಕಾದ ಭಾರತದ ರಮ್ಯ ತಾಣಗಳಿವು! - Vistara News

ಪ್ರವಾಸ

Spring Tourism: ವಸಂತ ಕಾಲದಲ್ಲಿ ವೀಕ್ಷಿಸಲೇಬೇಕಾದ ಭಾರತದ ರಮ್ಯ ತಾಣಗಳಿವು!

ತಿಳಿ ಹಸಿರಿನಿಂದ ಬೆಟ್ಟ ಗುಡ್ಡಗಳೆಲ್ಲ ನಳನಳಿಸಿ ಅದ್ಭುತವಾಗಿ ಕಾಣುವ ಇಂಥ ಸಂದರ್ಭದಲ್ಲಿ ಪ್ರವಾಸವೇ ಒಂದು ಮಧುರ ಅನುಭೂತಿ. ಅತ್ತ ಬಿಸಿಲೂ ಖಾರವಿಲ್ಲದ, ಇತ್ತ ಚಳಿಯೂ ಇಲ್ಲದ ಹಿತವಾದ ತಂಗಾಳಿ ಬೀಸುವ ಕಾಲ. ಈ ಕಾಲದಲ್ಲಿ ಎಲ್ಲಿ ಪ್ರವಾಸ (Spring Tourism) ಮಾಡಬಹುದು? ಇಲ್ಲಿದೆ ಮಾಹಿತಿ.

VISTARANEWS.COM


on

Spring Tourism
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಸಂತ ಕಾಲಕ್ಕೆ ಅತ್ಯಂತ ಸುಂದರ ಕಾಲಗಳಲ್ಲಿ ಪ್ರಮುಖ ಸ್ಥಾನ. ಚಳಿಗಾಲದಲ್ಲಿ ಬೋಳಾಗಿದ್ದ ಮರಗಿಡಗಳೆಲ್ಲ ಚಿರುಗಿ ಮೊಗ್ಗರಳಿ ಹೂವಾಗಿ ಜಗತ್ತೆಲ್ಲ ಖುಷಿಯಿಂದ ನಳನಳಿಸುವಂತೆ ಕಾಣುವ ಕಾಲ. ಈ ಕಾಲದಲ್ಲಿ ಪ್ರವಾಸ ಅತ್ಯಂತ ಮಧುರ. ಹಕ್ಕಿಗಳೆಲ್ಲ ಸಂತಸದಿಂದ ಹಾಡಿ ಹಾರಾಡಿ ಕುಣಿವ ಕಾಲವಿದು. ತಿಳಿ ಹಸಿರಿನಿಂದ ಬೆಟ್ಟ ಗುಡ್ಡಗಳೆಲ್ಲ ನಳನಳಿಸಿ ಅದ್ಭುತವಾಗಿ ಕಾಣುವ ಇಂಥ ಸಂದರ್ಭದಲ್ಲಿ ಪ್ರವಾಸವೇ ಒಂದು ಮಧುರ ಅನುಭೂತಿ. ಅತ್ತ ಬಿಸಿಲೂ ಖಾರವಿಲ್ಲದ, ಇತ್ತ ಚಳಿಯೂ ಇಲ್ಲದ ಹಿತವಾದ ತಂಗಾಳಿ ಬೀಸುವ ಕಾಲ. ಕೆಲವು ಸ್ಥಳಗಳನ್ನು ಅಕ್ಷರಶಃ ವಸಂತ ಕಾಲದಲ್ಲೇ ನೋಡಬೇಕು. ಯಾಕೆಂದರೆ, ಎಲ್ಲ ಕಾಲದಲ್ಲೂ ಸುಂದರವಾಗಿ ಕಾಣುವ ಸ್ಥಳ ವಸಂತಕಾಲದಲ್ಲಿ ಹೇಗಿದ್ದೀತು ಎಂಬ ಕಲ್ಪನೆಯನ್ನು ಯಾವುದೇ ಪ್ರಕೃತಿ ಪ್ರಿಯನೂ ಮಾಡಬಲ್ಲ. ಹಾಗಾದರೆ ಬನ್ನಿ, ವಸಂತಕಾಲದಲ್ಲಿ ಹೋಗಲೇಬೇಕಾದ (Spring Tourism) ಭಾರತದ ಪ್ರವಾಸೀ ಸ್ಥಳಗಳ್ಯಾವುವು ಎಂಬುದನ್ನು ನೋಡೋಣ.

Dal lake at Srinagar, Kashmir, India India Tourism

ಶ್ರೀನಗರ, ಕಾಶ್ಮೀರ

ಭೂಲೋಕದ ಸ್ವರ್ಗ ಎಂದೇ ಹೆಸರು ಪಡೆದ ಕಾಶ್ಮೀರವನ್ನು ಚಳಿಗಾಲದಲ್ಲಿ ಹಿಮದಲ್ಲಿ ನೋಡಿ ಖುಷಿ ಪಡುವುದು ಬೇರೆಯೇ ಆದರೂ ವಸಂತ ಕಾಲದಲ್ಲಿ ನೋಡುವುದು ಇನ್ನೂ ಸೊಗಸು. ಕಾಶ್ಮೀರದ ಶ್ರೀನಗರದ ಟ್ಯುಲಿಪ್‌ ಉದ್ಯಾನದಲ್ಲಿ ಬಣ್ಣಬಣ್ಣದಲ್ಲಿ ಟ್ಯುಲಿಪ್‌ ಹೂವರಳಿ ನಗುವುದನ್ನು ನೋಡಲು ಎರಡು ಕಣ್ಣು ಸಾಲದು. ವಿದೇಶಗಳಲ್ಲಿ ಕಾಣುವ ಈ ಹೂವು ಭಾರತದಲ್ಲಿ ಕಾಣಸಿಗುವ ಕೆಲವೇ ನಗರಗಳ ಪೈಕಿ ಶ್ರೀನಗರಕ್ಕೆ ಪ್ರಮುಖ ಸ್ಥಾನ. ಕಾಶ್ಮೀರದ ಗುಲ್ಮಾರ್ಗ್‌, ಸೋನ್‌ಮಾರ್ಗ್‌ ಸೇರಿದಂತೆ ಎಲ್ಲ ಪ್ರೇಕ್ಷಣೀಯ ಸ್ಥಳಗಳೂ ಈ ಕಾಲದಲ್ಲಿ ಮನಮೋಹಕ.

munnar

ಮುನ್ನಾರ್‌, ಕೇರಳ

ಕೇರಳದ ಮುನ್ನಾರ್‌ ಕೂಡಾ ಅತ್ಯಂತ ಸುಂದರ ಊರುಗಳಲ್ಲಿ ಒಂದು ಈ ಬೆಟ್ಟದೂರು ಹಸಿರ ಸ್ವರ್ಗ. ಹಲವಾರು ಜಲಪಾತಗಳು, ಟೂರಿಸ್ಟ್‌ ಪಾಯಿಂಟ್‌ಗಳು ಇಲ್ಲಿದ್ದು, ವಸಂತ ಕಾಲದ ಚಿಗುರು ಹಸಿರಿನಲ್ಲಿ ಚಂದವಾಗಿ ಕಾಣುತ್ತದೆ. ಹೆಚ್ಚು ಸೆಖೆಯೂ ಇಲ್ಲದ ಈ ಕಾಲದಲ್ಲಿ ಮುನ್ನಾರ್‌ ನೋಡುವುದು ಬಲು ಸೊಗಸು.

ಶಿಲ್ಲಾಂಗ್‌, ಮೇಘಾಲಯ

ಮೇಘಾಲಯವನ್ನು ನೋಡಲು ಸಕಾಲ ಎಂದರೆ ಅದು ವಸಂತ ಕಾಲ. ಹಸಿರಿನಿಂದ ನಳನಳಿಸುವ ಈ ಕಾಲದಲ್ಲಿ ಮಳೆಯೂ ಅಷ್ಟಾಗಿ ಸುರಿಯದ ಕಾರಣ ಶಿಲ್ಲಾಂಗ್‌ ಸುತ್ತಿ ನೋಡಲು ಮಳೆ ಅಡ್ಡ ಬರದು. ಅದ್ಭುತ ಸೌಂದರ್ಯದ ದಟ್ಟ ಹಸಿರಿನ ಮೇಘಾಲಯದ ಪ್ರಕೃತಿ ಸೌಂದರ್ಯವನ್ನು ಸವಿಯಲು ಇದು ಅತ್ಯುತ್ತಮ ಕಾಲ.

Darjeeling

ಡಾರ್ಜಿಲಿಂಗ್‌, ಪಶ್ಚಿಮ ಬಂಗಾಳ

ತನ್ನ ಚಹಾ ತೋಟಗಳ ಹಾಗೂ ಹಿಮಾಲಯ ಅದ್ಭುತ ಸೌಂದರ್ಯವನ್ನು ಜೊತೆಯಾಗಿ ಕಟ್ಟಿಕೊಡಬಲ್ಲ ತಾಣಗಳಲ್ಲಿ ಡಾರ್ಜಿಲಿಂಗ್‌ಗೆ ಮಹತ್ವದ ಸ್ಥಾನವಿದೆ. ಹಾಗಾಗಿ ಇದು ಪ್ರೇಮಿಗಳಿಗೆ ಸ್ವರ್ಗ. ಚಳಿಗಾಲದ ಚಳಿಯಿಂದ ಕೊಂಚ ಹೊರಬಂದು ಹಿತವಾದ ಬಿಸಿಲು, ಹೊದ್ದು ಮಲಗುವ ಚಳಿ ಎರಡನ್ನೂ ನೀಡಬಲ್ಲ ಸಮಯವೆಂದರೆ ಅದು ವಸಂತ ಕಾಲ. ಡಾರ್ಜಿಲಿಂಗನ್ನು ಈ ಕಾಲದಲ್ಲಿ ನೋಡಬೇಕು.

Gangtok, Sikkim

ಗ್ಯಾಂಗ್ಟಕ್‌, ಸಿಕ್ಕಿಂ

ಸಿಕ್ಕಿಂ ಎಂಬ ಭಾರದ ರಾಜ್ಯದ ಸೌಂದರ್ಯವನ್ನು ಬಣ್ಣಿಸಲು ಪದಗಳ ಶ್ರೀಮಂತಿಕೆ ಬೇಕು. ಸದಾ ಸುಂದರವಾಗಿ ಕಾಣುವ, ಹಿಮಾಲಯದ ಸೌಂದರ್ಯವನ್ನು ತೋರಿಸುವ ರಾಜ್ಯ. ಇಲ್ಲಿನ ಹಿಮದೂರುಗಳನ್ನೂ ನೋಡಿಕೊಂಡು, ವಸಂತದಲ್ಲಿ ನಿಧಾನವಾಗಿ ಚಿಗುರೊಡೆವ ಮರಗಿಡಗಳನ್ನೂ ಕಣ್ತುಂಬಿಕೊಂಡು, ಹೂಗಳ ರಾಶಿಯನ್ನು ನೋಡಲು ಜೀವನದಲ್ಲೊಮ್ಮೆಯಾದರೂ ಹೋಗಲೇ ಬೇಕಲ್ಲವೇ?

City of ooty, Tamil Nadu

ಊಟಿ, ತಮಿಳುನಾಡು

ನಮ್ಮ ನೆರೆಯ ರಾಜ್ಯದ ಈ ಊರಿಗೆ ನಾವು ಮನಸು ಮಾಡಿದಾಗಲೆಲ್ಲ ಹೋಗಬಹುದು. ಮೊದಲೇ ಊಟಿ ಪ್ರೇಮಿಗಳಿಗೆ ಸ್ವರ್ಗ. ಇನ್ನು, ವಸಂತ ಕಾಲದಲ್ಲಿ ಉದ್ಯಾನಗಳಲ್ಲೆಲ್ಲ ನಳನಳಿಸುವ ಹೂಗಳರಳಿದ್ದರೆ ಕೇಳಬೇಕೇ? ಪ್ರೇಮಿಗಳಿಗೆ, ನವದಂಪತಿಗಳಿಗೆ ರಮ್ಯಗಳಿಗೆಯನ್ನು ತಂದು ಕೊಡುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ, ದೂರ ಪ್ರವಾಸ ಹೋಗಲಾಗದೆ ಇರುವವರು ಬೇಸರ ಪಡಬೇಕಾಗಿಲ್ಲ. ಹತ್ತಿರದ ಊಟಿಗೇ ಹೋಗಿ ಬಣ್ಣಬಣ್ಣದ ಹೂಗಳನ್ನು ಕಣ್ತುಂಬಿಕೊಂಡು ಬರಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಬೆಂಗಳೂರು

Wonderla Offer: ವಂಡರ್‌ಲಾದಿಂದ ವಿಶೇಷ ಆಫರ್‌; 1 ಟಿಕೆಟ್‌ ಖರೀದಿಸಿದರೆ ಮತ್ತೊಂದು ಟಿಕೆಟ್‌ ಫ್ರೀ!

Wonderla Offer: ಸ್ನೇಹಿತರ ದಿನಾಚರಣೆ ಪ್ರಯುಕ್ತ ಆಗಸ್ಟ್ 4ರಂದು ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್‌ಲಾ ಹಾಲಿಡೇಸ್ ವಿಶೇಷ ಕೊಡುಗೆ ಘೋಷಿಸಿದೆ. ಆಗಸ್ಟ್‌ 4 ಸ್ನೇಹಿತರ ದಿನದಂದು ಒಂದು ಟಿಕೆಟ್‌ ಖರೀದಿಸಿದರೆ ಮತ್ತೊಂದು ಟಿಕೆಟ್‌ ಉಚಿತವಾಗಿರಲಿದೆ. ಈ ಕೊಡುಗೆಯು ಆನ್‌ಲೈನ್‌ನಲ್ಲಿ ಬುಕ್‌ ಮಾಡುವವರಿಗೆ ಮಾತ್ರ ಅನ್ವಯವಾಗಲಿದೆ.

VISTARANEWS.COM


on

On the occasion of Friendship Day Wonderla announced a buy one ticket get another ticket free offer
Koo

ಬೆಂಗಳೂರು: ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್‌ಲಾ ಹಾಲಿಡೇಸ್, ಸ್ನೇಹಿತರ ದಿನಾಚರಣೆ ಪ್ರಯುಕ್ತ ಆಗಸ್ಟ್ 4 ರಂದು ವಿಶೇಷ ಕೊಡುಗೆ ಘೋಷಿಸಿದೆ. (Wonderla Offer) ಆಗಸ್ಟ್‌ 4 ಸ್ನೇಹಿತರ ದಿನದಂದು ಒಂದು ಟಿಕೆಟ್‌ ಖರೀದಿಸಿದರೆ ಮತ್ತೊಂದು ಟಿಕೆಟ್‌ ಉಚಿತವಾಗಿರಲಿದೆ. ಈ ಕೊಡುಗೆಯು ಆನ್‌ಲೈನ್‌ನಲ್ಲಿ ಬುಕ್‌ ಮಾಡುವವರಿಗೆ ಮಾತ್ರ ಅನ್ವಯವಾಗಲಿದೆ.

ಈ ಕುರಿತು ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಿಲಪ್ಪಿಳ್ಳಿ ಮಾತನಾಡಿ, ಸ್ನೇಹಿತರ ದಿನವನ್ನು ಇನ್ನಷ್ಟು ವಿಶೇಷಗೊಳಿಸಲು ವಂಡರ್‌ಲಾ ಟಿಕೆಟ್‌ ಖರೀದಿಯ ಮೇಲೆ ಕೊಡುಗೆ ನೀಡಿದೆ. ಪ್ರತಿಯೊಬ್ಬರು ಹೆಚ್ಚು ಮನರಂಜನೆ ಅನುಭವಿಸುವುದು ಸ್ನೇಹಿತರು ಜತೆಗಿದ್ದ ಸಂದರ್ಭದಲ್ಲಿ. ಈ ಮನರಂಜನೆಗೆ ವೇದಿಕೆಯಾಗಿ ವಂಡರ್‌ಲಾ ಈ ಕೊಡುಗೆ ನೀಡಿರುವುದು, ತಮ್ಮ ಸ್ನೇಹಿತರೊಂದಿಗೆ ವಂಡರ್‌ಲಾಗೆ ಆಗಮಿಸಿ ಇಲ್ಲಿನ ಇನ್ನಷ್ಟು ಮೋಜು ಮಸ್ತಿ ಮಾಡಲು ಪ್ರೇರೇಪಿಸುತ್ತದೆ.

ಇದನ್ನೂ ಓದಿ: Bengaluru Power Cut: ಜು.27, 28, 30ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಈ ವಿಶೇಷ ಕೊಡುಗೆಗಳಲ್ಲಿ ಲೈವ್ ಡಿಜೆ, ವಿಶೇಷ ಸಂಜೆ ಜುಂಬಾ ಸೆಷನ್‌ಗಳು, ಮೋಜಿನ ಆಟಗಳು ಮತ್ತು ಬಹುಮಾನಗಳು, ಎಲ್ಲಾ ರೋಮಾಂಚಕ ಪಾರ್ಕ್ ರೈಡ್‌ಗಳು ಮತ್ತು ಸೌಕರ್ಯಗಳನ್ನು ಒದಗಿಸುತ್ತಿದ್ದು, ನಿಮ್ಮ ಸ್ನೇಹಿತರೊಂದಿಗೆ ಮೋಜು-ಮಸ್ತಿ ಮಾಡಲು ವಂಡರ್‌ಲಾ ಉತ್ತಮ ತಾಣವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಎಲ್ಲಾ ಉದ್ಯಾನವನಗಳು ವಿಸ್ತೃತ ಅವಧಿಯವರೆಗೆ ತೆರೆದಿರಲಿವೆ. ಹೀಗಾಗಿ ಸಂಜೆಯ ಹೆಚ್ಚುವರಿ ಸಮಯವನ್ನು ವಂಡರ್‌ಲಾದಲ್ಲಿ ಕಳೆಯಬಹುದು.

ಇದನ್ನೂ ಓದಿ: Dengue Fever: ರಾಜ್ಯದಲ್ಲಿ ನಿಫಾ ವೈರಸ್ ಪ್ರಕರಣ ಪತ್ತೆಯಾಗಿಲ್ಲ: ದಿನೇಶ್ ಗುಂಡೂರಾವ್

ಆನ್‌ಲೈನ್ ಪೋರ್ಟಲ್ https://bookings.wonderla.com/ ನಲ್ಲಿ ಮುಂಗಡವಾಗಿ ತಮ್ಮ ಪ್ರವೇಶ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು. ಅಥವಾ ಗ್ರಾಹಕರು ನೇರವಾಗಿ ಪಾರ್ಕ್ ಕೌಂಟರ್‌ಗಳಿಂದ ಟಿಕೆಟ್‌ಗಳನ್ನು ಖರೀದಿಸಬಹುದು. ಹೆಚ್ಚಿನ ಮಾಹಿತಿಗಾಗಿ +91 80372 30333 ಅಥವಾ +91 80350 73966 ಬೆಂಗಳೂರು ಪಾರ್ಕ್ ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Continue Reading

ಪ್ರವಾಸ

Travel Tips: ಪ್ರಯಾಣದ ಪ್ರಯಾಸದಿಂದ ಪಾರಾಗುವುದು ಹೇಗೆ?

Travel Tips: ವಾರಾಂತ್ಯದಲ್ಲಿ ಮಳೆಗಾಲಕ್ಕೊಂದು ಮಜವಾದ ಟ್ರಿಪ್‌ ಹಾಕೋಣವೆಂದು ಕುಟುಂಬದವರೆಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಪ್ರಯಾಣವೆಂದರೆ ನಿಮಗೆ ಪ್ರಯಾಸ! ಟ್ರಾವೆಲ್‌ ಸಿಕ್‌ನೆಸ್‌ ಅಥವಾ ಪ್ರಯಾಣದ ಅಸ್ವಸ್ಥತೆ ಎನ್ನುವುದು ಏನಂಥ ದೊಡ್ಡ ವಿಷಯವಲ್ಲದಿದ್ದರೂ, ಮೊಣಕೈಗೆ ಕುಟ್ಟಿದಂತೆ! ಪ್ರಯಾಣ ಸುಖಕರಗೊಳಿಸುವುದು ಹೇಗೆ? ಇಲ್ಲಿದೆ ಪ್ರವಾಸ ಪ್ರಿಯರಿಗೆ ಉಪಯುಕ್ತ ಮಾಹಿತಿ.

VISTARANEWS.COM


on

Travel Tips
Koo

ಮಳೆಗಾಲ (Travel Tips) ಜೋರಾಗಿದೆ. ಎಲ್ಲ ನದಿಗಳೂ ಭೋರ್ಗರೆಯುತ್ತಿವೆ. ಯಾವುದೋ ಬೆಟ್ಟದ ತುದಿಯಿಂದ, ಗುಡ್ಡದ ಅಂಚಿನಿಂದ ಧುಮ್ಮಿಕ್ಕುವ ಜಲಪಾತವನ್ನು ನೋಡುವ ಉತ್ಸಾಹ ನಿಮಗಿದೆ. ವಾರಾಂತ್ಯದಲ್ಲಿ ಮಳೆಗಾಲಕ್ಕೊಂದು ಮಜವಾದ ಟ್ರಿಪ್‌ ಹಾಕೋಣವೆಂದು ಕುಟುಂಬದವರೆಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಪ್ರಯಾಣವೆಂದರೆ ನಿಮಗೆ ಪ್ರಯಾಸ! ಗಾಡಿ ಹತ್ತಿದ ಸ್ವಲ್ಪವೇ ಹೊತ್ತಿನಲ್ಲಿ ತಲೆನೋವು, ತಲೆ ಸುತ್ತು, ಹೊಟ್ಟೆ ತೊಳೆಸುವುದು, ವಾಂತಿ… ದೇವರೇ! ಒಂದೆರಡೇ ಅಲ್ಲ ನಿಮ್ಮ ಅವಸ್ಥೆ. ಮೋಷನ್‌ ಸಿಕ್‌ನೆಸ್‌, ಟ್ರಾವೆಲ್‌ ಸಿಕ್‌ನೆಸ್‌ ಅಥವಾ ಪ್ರಯಾಣದ ಅಸ್ವಸ್ಥತೆ ಎನ್ನುವುದು ಏನಂಥ ದೊಡ್ಡ ವಿಷಯವಲ್ಲದಿದ್ದರೂ, ಮೊಣಕೈಗೆ ಕುಟ್ಟಿದಂತೆ! ಉಳಿದವರಿಗೆ ಅದರ ನೋವು ತಿಳಿಯುವುದಿಲ್ಲ, ನೋವಾದವರಿಗೆ ತಡೆಯಲಾಗುವುದಿಲ್ಲ!
ಪ್ರಯಾಣದ ಅಸ್ವಸ್ಥತೆ ಕೇವಲ ಬಸ್ಸು, ಕಾರಿನ ಪ್ರವಾಸದಲ್ಲೇ ಬರಬೇಕೆಂದಿಲ್ಲ. ಹಡಗು, ರೈಲು, ವಿಮಾನಗಳಿಂದ ಹಿಡಿದು ಯಾವುದೇ ವಾಹನದ ಮೂಲಕ ಪ್ರಯಾಣಿಸಿದರೂ ಹೊಟ್ಟೆಯಲ್ಲಿ ತೌಡು ಕುಟ್ಟುವುದಕ್ಕೆ ಶುರು. ಅದರಲ್ಲೂ ಹೋಗುವ ದಾರಿ ಹಾವಿನಂತೆ ಸಾಗುವುದಾದರೆ, ಅವರ ಅವಸ್ಥೆ ಶತ್ರುಗಳಿಗೂ ಬೇಡ. ಅಲ್ಲಿಯವರೆಗೆ ನಗುನಗುತ್ತ ಇದ್ದವರು ಇದ್ದಕ್ಕಿದ್ದಂತೆ ಹೈರಾಣಾಗಿ ಹೋಗುತ್ತಾರೆ. ಕೆಲವರು ಮಾತ್ರೆಯೊಂದನ್ನು ನುಂಗಿ ಗಪ್ಪಾಗಿ ಕೂತರೆ, ಹಲವರಿಗೆ ಅದನ್ನು ಸೇವಿಸಿದರೂ ಹೊಟ್ಟೆಯೊಳಗೆ ಭೂಮಿ ತಿರುಗುವುದು ತಪ್ಪುವುದಿಲ್ಲ. ಕೆಲವು ಕ್ರಮಗಳನ್ನು ಅನುಸರಿಸುವುದರಿಂದ ಹೆಚ್ಚಿನ ತಾಪತ್ರಯವಿಲ್ಲದೆ ಸುಲಲಿತವಾಗಿ ಪ್ರಯಾಣದ ಸುಖವನ್ನು ಅನುಭವಿಸುವುದಕ್ಕೆ ಸಾಧ್ಯವಿದೆ.

Woman Meditating in the Workplace Sitting in Front of a Laptop Practicing Stress Relief Exercises Ashwagandha Herb Benefits

ಆಸನ ಯಾವುದು?

ಇಲ್ಲಿಂದಲೇ ನಿಮ್ಮ ಸುಖಕರ ಪ್ರಯಾಣದ ಸಿದ್ಧತೆ ಆರಂಭವಾಗುತ್ತದೆ. ಕಾರಿನಲ್ಲಿ ಪ್ರಯಾಣವಾದರೆ ಮುಂದಿನ ಸೀಟ್‌ ಮಾತ್ರವೇ ನಿಮ್ಮದು. ಹಿಂದಿನ ಆಸನಗಳಲ್ಲಿ ಕುಲುಕಾಟ ಹೆಚ್ಚಿರುವುದರಿಂದ ಹೊಟ್ಟೆ ತೊಳೆಸುವ ಸಾಧ್ಯತೆ ಅಧಿಕ. ಬಸ್ಸಿನಲ್ಲಿ ಮಧ್ಯಮ ಆಸನಗಳಿಗಿಂತ ಹಿಂದೆ ಹೋಗಬೇಡಿ. ಅದರಲ್ಲೂ ಗಾಲಿ ಮೇಲಿನ ಆಸನಗಳು ನಿಮಗಲ್ಲವೇ ಅಲ್ಲ. ವಿಮಾನದಲ್ಲಾದರೆ ರೆಕ್ಕೆ ಮೇಲಿನ ಆಸನಗಳನ್ನು ಆಯ್ದುಕೊಳ್ಳಿ.

ದೃಷ್ಟಿ ಕೀಲಿಸಿ

ಕಿಟಕಿಯ ಪಕ್ಕದ ಆಸನಗಳು ಎಲ್ಲರಿಗೂ ಇಷ್ಟ. ಆದರೆ ದಾರಿಯಲ್ಲಿ ನಮ್ಮೊಂದಿಗೇ ಓಡುತ್ತಿರುವ ವಸ್ತುಗಳನ್ನು ದಿಟ್ಟಿಸಿದರೆ, ಹೊಟ್ಟೆಯಲ್ಲೂ ಇಲಿಗಳ ಓಡಾಟ ಆರಂಭವಾಗುತ್ತದೆ. ಹಾಗಾಗಿ ಸಾಧ್ಯವಾದರೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರ, ದಿಗಂತ… ಹೀಗೆ ಸ್ತಿರವಾಗಿರುವ ಯಾವುದಾದರೂ ವಸ್ತುವಿನತ್ತ ಕಣ್ಣು ಕೀಲಿಸಿ. ಮೊಬೈಲ್‌ ನೋಡುವುದು, ಓದುವುದು ಬೇಡ. ಬದಲಿಗೆ ಕಣ್ಣು ಮುಚ್ಚಿಕೊಂಡು ನಿಮ್ಮಿಷ್ಟ ಹಾಡು ಹೇಳುವುದು ಒಳ್ಳೆಯ ಕ್ರಮ.

Happy Woman at the Beach with Spread Arms

ತಾಜಾ ಗಾಳಿ

ಹವಾನಿಯಂತ್ರಣ ಇದ್ದರೆ, ಕಿಟಕಿ ಮುಚ್ಚಿದ್ದರೆ ಹಲವರಿಗೆ ಹೊಟ್ಟೆಯೆಲ್ಲ ಮೊಗುಚುತ್ತದೆ. ನೀವು ಕುಳಿತಿದ್ದೆಡೆಗೆ ತಾಜಾ ಗಾಳಿ ಇರುವಂತೆ ನೋಡಿಕೊಳ್ಳಿ. ಬಸ್ಸು, ಕಾರುಗಳಲ್ಲಿ ಕಿಟಕಿ ತೆರೆಯುವುದು ಸರಿ. ವಿಮಾನದಲ್ಲೇನು ಮಾಡುವುದು ಎಂದು ಕೇಳಬಹುದು. ವೆಂಟ್‌ಗಳ ತೀವ್ರತೆ ಕಡಿಮೆ ಮಾಡಿ, ಅವುಗಳು ನೇರವಾಗಿ ನಿಮಗೇ ತಾಗುವಂತೆ ಇರಿಸಿಕೊಳ್ಳಿ. ಗಾಳಿಯ ಓಡಾಡ ಹೆಚ್ಚಿದ್ದಷ್ಟೂ ಹೊಟ್ಟೆಯಲ್ಲಿ ತಳಮಳ ಕಡಿಮೆಯಾಗುತ್ತದೆ.

ಆಹಾರ

ಹೊರಡುವ ಮುನ್ನ ಭೂರಿ ಭೋಜನವನ್ನು ಯಾರಾದರು ಬಿಟ್ಟಿ ಕೊಟ್ಟರೂ ಮಾಡಬೇಡಿ! ಆಹಾರ ಲಘುವಾಗಿರಲಿ. ಎಣ್ಣೆ, ಮಸಾಲೆ, ಖಾರದ ತಿನಿಸುಗಳು ಬೇಡ. ಹಣ್ಣುಗಳು, ದೋಸೆ-ಚಪಾತಿಯಂಥ ಲಘುವಾದ ತಿನಿಸುಗಳು ಸಾಕು. ನೀರನ್ನು ಯಥೇಚ್ಛವಾಗಿ ಕುಡಿಯಿರಿ. ಆಲ್ಕೋಹಾಲ್‌ ಮತ್ತು ಕೆಫೇನ್‌ ಸೇವನೆ ಖಂಡಿತ ಬೇಡ.

Stress Reduction Tea Benefits

ವಿರಾಮ ತೆಗೆದುಕೊಳ್ಳಿ

ರಸ್ತೆ ಪ್ರಯಾಣವಾದರೆ, ವಾಹನ ನಿಮ್ಮದೇ ಆದರೆ, ನಡುವಿಗೆ ವಿರಾಮ ತೆಗೆದುಕೊಳ್ಳಿ. ಇದರಿಂದ ತಾಜಾ ಗಾಳಿಗೆ ಬಂದಂತೆಯೂ ಆಗುತ್ತದೆ, ಕೈ-ಕಾಲುಗಳಿಗೆ ಸ್ವಲ್ಪ ಚಲನೆ ದೊರೆತಂತೆಯೂ ಆಗುತ್ತದೆ. ನಡೆಯುವಾಗ ಚೆನ್ನಾಗಿ ಸ್ಟ್ರೆಚ್‌ ಮಾಡಿ. ಗಮ್ಯ ತಲುಪುವುದು ಕೊಂಚ ತಡವಾದರೂ, ನೆಮ್ಮದಿಯ ಪ್ರಯಾಣ ನಿಮ್ಮದಾಗುತ್ತದೆ.

ಇದನ್ನೂ ಓದಿ: Contact Lens: ಕಾಂಟ್ಯಾಕ್ಟ್‌ ಲೆನ್ಸ್‌ ಬಳಸುತ್ತೀರಾ? ಈ ವಿಷಯಗಳು ತಿಳಿದಿರಲಿ!

ಮನೆಮದ್ದುಗಳು

ಭಾವನಾ ಶುಂಠಿ ಅಥವಾ ಪೆಪ್ಪರ್‌ಮಿಂಟ್‌ಗಳು ಈ ನಿಟ್ಟಿನಲ್ಲಿ ಸಹಕಾರಿ. ಶುಂಠಿ ಅಥವಾ ಕ್ಯಾಮೊಮೈಲ್‌ ಚಹಾ, ನಿಂಬೆಹಣ್ಣಿನ ಕ್ಯಾಂಡಿ ಮುಂತಾದವು ಹೊಟ್ಟೆ ತೊಳೆಸುವ ಅನುಭವವನ್ನು ನಿಯಂತ್ರಣಕ್ಕೆ ತರುತ್ತವೆ. ನಿಂಬೆ ಹಣ್ಣನ್ನು ಕೈಯಲ್ಲಿ ಹಿಡಿದು, ಅದರ ಸಿಪ್ಪೆಯನ್ನೊಮ್ಮೆ ಉದುರಿನಲ್ಲಿ ಚುಚ್ಚಿದರೆ, ಸೊನೆಯ ಘಮ ಬರುತ್ತದೆ. ಇದನ್ನೆ ಮೂಸುತ್ತಿದ್ದರೆ ಹೊಟ್ಟೆಯಲ್ಲಿ ತಳಮಳ ಹುಟ್ಟುವುದಿಲ್ಲ. ಯಾವುದೇ ಸಾರಸತ್ವ ತೈಲದ ಒಂದೆರಡು ಹನಿಗಳನ್ನು ಕರ್ಚೀಫಿನಲ್ಲಿ ಹಾಕಿಕೊಂಡು, ಘಮ ತೆಗೆದುಕೊಳ್ಳುತ್ತಾ ಇರುವುದೂ ಪರಿಣಾಮಕಾರಿ.

Continue Reading

ಪ್ರವಾಸ

Amazing Tourist Places: ಹಿಮಾಚಲ ಪ್ರದೇಶದ ಕುಫ್ರಿ; ಧರೆಯ ಮೇಲಿನ ಸ್ವರ್ಗದ ತುಣುಕು!

Amazing Tourist Places: ನೈಸರ್ಗಿಕ ಸೌಂದರ್ಯ, ಸಾಹಸ ಕ್ರೀಡೆಗಳು, ಐತಿಹಾಸಿಕ ಹೆಗ್ಗುರುತುಗಳು ಮತ್ತು ವಿಶ್ವದ ಅತಿ ಎತ್ತರದ ಗೋ-ಕಾರ್ಟ್ ಟ್ರ್ಯಾಕ್ ಹೊಂದಿರುವ ಕುಫ್ರಿ (Kufri Tour) ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರಸಿದ್ಧ ತಾಣವಾಗಿದೆ. ಸಾಹಸಮಯ ಆಟಗಳನ್ನು ಬಯಸಿದರೆ ಅಥವಾ ಪ್ರಕೃತಿಯಿಂದ ಸುತ್ತುವರಿದ ಶಾಂತಿಯುತ ಕ್ಷಣಗಳನ್ನು ಬಯಸಿದರೆ ಕುಫ್ರಿ ಸೂಕ್ತ ಸ್ಥಳವಾಗಿದೆ. ಯಾಕೆಂದರೆ ಈ ಸ್ಥಳವು ಹಿಮಾಲಯದ ನಡುವೆ ಅಸಾಮಾನ್ಯ ಅನುಭವವನ್ನು ನೀಡುತ್ತದೆ.

VISTARANEWS.COM


on

By

Amazing Tourist Places
Koo

ಪರಿಪೂರ್ಣವಾಗಿ ನೈಸರ್ಗಿಕ ಸೌಂದರ್ಯವನ್ನು (natural beauty) ಆಸ್ವಾದಿಸಬೇಕು (Amazing Tourist Places) ಎಂದು ಬಯಸುವವರು ಹಿಮಾಚಲ ಪ್ರದೇಶದಲ್ಲಿರುವ (Himachal Pradesh hill station) ಪ್ರಶಾಂತ ಗಿರಿಧಾಮ ಕುಫ್ರಿಗೆ (Kufri Tour) ಭೇಟಿ ನೀಡಬಹುದು. ಆಕರ್ಷಕ ವಾತಾವರಣದಿಂದ ಪ್ರವಾಸಿಗರನ್ನು ಸೆಳೆಯುವ ಕುಫ್ರಿ ಸ್ವರ್ಗದ ಪುಟ್ಟ ತುಣುಕು ಧರೆಯಲ್ಲಿ ಬಿದ್ದಂತಿದೆ!

ಮನಮೋಹಕಗೊಳಿಸುವ ಕುಫ್ರಿಯ ಬಗ್ಗೆ ಅನೇಕ ತಿಳಿದುಕೊಳ್ಳಬೇಕಾದ ಹಲವು ಸಂಗತಿಗಳಿವೆ. ಹಿಮಾಲಯಕ್ಕೆ ಭೇಟಿ ನೀಡುವವರು ಶಾಂತಿಯನ್ನು ಬಯಸುವ ತಾಣಕ್ಕೆ ಹೋಗಬೇಕೆಂದು ಬಯಸಿದರೆ ಕುಫ್ರಿಗೆ ಭೇಟಿ ನೀಡಲು ಮರೆಯದಿರಿ.

Kufri Tour
Kufri Tour


ಕ್ರೀಡಾ ತಾಣ

ಸಮುದ್ರ ಮಟ್ಟದಿಂದ 2,510 ಮೀಟರ್ ಎತ್ತರದಲ್ಲಿರುವ ಕುಫ್ರಿಯು ಭಾರತದಲ್ಲಿ ಚಳಿಗಾಲದ ಕ್ರೀಡಾ ತಾಣವಾಗಿ ಪ್ರಸಿದ್ಧವಾಗಿದೆ. ಚಳಿಗಾಲದಲ್ಲಿ ಈ ಪಟ್ಟಣವು ಸ್ಕೀಯಿಂಗ್ ಮತ್ತು ಟೊಬೊಗ್ಯಾನಿಂಗ್‌ಗೆ ಹಾಟ್‌ಸ್ಪಾಟ್ ಆಗುತ್ತದೆ. ದೇಶದ ವಿವಿಧ ಭಾಗಗಳಿಂದ ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವವರನ್ನು ಆಕರ್ಷಿಸುತ್ತದೆ.

ಹಿಮಾಲಯನ್ ನೇಚರ್ ಪಾರ್ಕ್ ತವರು

ಕುಫ್ರಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಹಿಮಾಲಯನ್ ನೇಚರ್ ಪಾರ್ಕ್ ತನ್ನ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳಿಂದ ಜನರನ್ನು ಆಕರ್ಷಿಸುತ್ತದೆ. ಪ್ರವಾಸಿಗರು ಹಿಮಾಚಲ ಪ್ರದೇಶದ ರಾಜ್ಯ ಪಕ್ಷಿಯಾಗಿರುವ ಹಿಮಾಲಯನ್ ಮೋನಾಲ್ ಸೇರಿದಂತೆ ಅಪರೂಪದ ಜಾತಿಗಳನ್ನು ನೋಡಬಹುದು. ಜಿಂಕೆ, ಯಾಕ್ ಅಥವಾ ಕರಡಿಗಳಂತಹ ಇತರ ಪ್ರಾಣಿಗಳನ್ನೂ ಇಲ್ಲಿ ಕಾಣಬಹುದು.

Kufri Tour
Kufri Tour


ವಾರ್ಷಿಕ ಚಳಿಗಾಲದ ಕ್ರೀಡಾ ಉತ್ಸವ

ಪ್ರತಿ ಫೆಬ್ರವರಿಯಲ್ಲಿ ಕುಫ್ರಿಯು ಚಳಿಗಾಲದ ಕ್ರೀಡಾ ಉತ್ಸವವನ್ನು ಆಯೋಜಿಸುತ್ತದೆ. ಇದು ಚಳಿಗಾಲದ ಕ್ರೀಡೆಗಳ ಪ್ರಿಯರಿಗೆ ಮತ್ತು ಸ್ಥಳೀಯ ಸಂಸ್ಕೃತಿಯ ಉತ್ಸಾಹಿಗಳಿಗೆ ವರ್ಣರಂಜಿತ ಕೂಟವಾಗಿದೆ. ಸ್ಕೀಯಿಂಗ್ ಅಥವಾ ಸ್ನೋಬೋರ್ಡಿಂಗ್ ಸ್ಪರ್ಧೆಗಳು ಮತ್ತು ಇಲ್ಲಿನ ಪ್ರಾಚೀನ ಪದ್ಧತಿಗಳನ್ನು ತೋರಿಸುವ ಸಾಂಸ್ಕೃತಿಕ ಪ್ರಸ್ತುತಿಗಳಂತಹ ವಿವಿಧ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.

ವಿಶ್ವದ ಅತಿ ಎತ್ತರದ ಗೋ-ಕಾರ್ಟ್ ಟ್ರ್ಯಾಕ್

ವಿಶ್ವದ ಅತಿ ಎತ್ತರದ ಗೋ-ಕಾರ್ಟ್ ಟ್ರ್ಯಾಕ್ ಅನ್ನು ಹೊಂದಿರುವ ಕುಫ್ರಿಯು ಸಮುದ್ರ ಮಟ್ಟದಿಂದ 2600 ಮೀಟರ್‌ಗಿಂತಲೂ ಹೆಚ್ಚಿನ ಎತ್ತರದಲ್ಲಿ ಈ ಹಿಂದೆ ತಿಳಿದಿರುವ ಹೊಂದಿದೆ ಎಂದು ಅದು ತಿರುಗುತ್ತದೆ. ಜನರು ಹೆಚ್ಚಿನ ವೇಗದಲ್ಲಿ ಈ ಸರ್ಕ್ಯೂಟ್ ಮೂಲಕ ಚಾಲನೆ ಮಾಡುವಾಗ, ನೆರೆಯ ಹಿಮದಿಂದ ಆವೃತವಾದ ಪರ್ವತಗಳ ಸ್ಪಷ್ಟ ನೋಟವನ್ನು ಹೊಂದಲು ಅವರು ಸವಲತ್ತು ಹೊಂದಿದ್ದಾರೆ.

Kufri Tour
Kufri Tour


ಪ್ರಕೃತಿ ಪ್ರಿಯರ ಸ್ವರ್ಗ

ಸಾಹಸ ಕ್ರೀಡೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಹೊರತಾಗಿ ಕುಫ್ರಿ ಪ್ರಕೃತಿ ಪ್ರಿಯರಿಗೆ ಸ್ವರ್ಗವಾಗಿದೆ. ಪೈನ್ ಮತ್ತು ದೇವದಾರು ಮರಗಳಿಂದ ಮಾಡಲ್ಪಟ್ಟ ದಟ್ಟವಾದ ಕಾಡುಗಳಿಂದ ಸುತ್ತುವರಿದಿರುವ ಪಟ್ಟಣವು ಪಾದಯಾತ್ರೆ, ಪಿಕ್ನಿಕ್ ಗೆ ಸೂಕ್ತವಾದ ತಾಣವಾಗಿದೆ.

ಶಿಮ್ಲಾದ ಚಳಿಗಾಲದ ವಂಡರ್‌ಲ್ಯಾಂಡ್‌ಗೆ ಗೇಟ್‌ವೇ

ಕುಫ್ರಿಯು ಶಿಮ್ಲಾದ ಚಳಿಗಾಲದ ವಂಡರ್‌ಲ್ಯಾಂಡ್‌ಗೆ ಹೆಬ್ಬಾಗಿಲಾಗಿದೆ. ಇದು ಹಿಮಾಚಲ ಪ್ರದೇಶದ ರಾಜಧಾನಿ ನಗರದಿಂದ ಕೇವಲ 13 ಕಿಲೋಮೀಟರ್ ದೂರದಲ್ಲಿದೆ. ಕುಫ್ರಿಯಂತಹ ಕಡಿಮೆ ಜನಸಂದಣಿಯನ್ನು ಹೊಂದಿರುವ ಶಾಂತಿಯುತ ವಾತಾವರಣವನ್ನು ಆನಂದಿಸುತ್ತಿರುವಾಗ ಶಿಮ್ಲಾದ ಮೋಡಿಯನ್ನು ಅನುಭವಿಸಬಹುದು.

ಐತಿಹಾಸಿಕ ಮಹತ್ವ

ಬ್ರಿಟಿಷ್ ವಸಾಹತುಶಾಹಿ ಯುಗದಿಂದಲೂ ಕುಫ್ರಿ ಪ್ರಮುಖ ತಾಣವಾಗಿತ್ತು. ಇದನ್ನು ಮೊದಲು ಬ್ರಿಟಿಷರು ತಮ್ಮ ಅಧಿಕಾರಿಗಳು ಮತ್ತು ವಸಾಹತುಗಾರರಿಗೆ ಹಿಮ್ಮೆಟ್ಟಿಸಲು 1819 ರಲ್ಲಿ ಸಣ್ಣ ಗಿರಿಧಾಮವಾಗಿ ಸ್ಥಾಪಿಸಿದರು. ಇಲ್ಲಿ ಕಟ್ಟಡಗಳು ಮತ್ತು ವಿನ್ಯಾಸಗಳಲ್ಲಿ ವಸಾಹತುಶಾಹಿ ಗತಕಾಲದ ಅವಶೇಷಗಳನ್ನು ಕಾಣಬಹುದು.

Kufri Tour
Kufri Tour


ಮಹಾಸು ಶಿಖರದಿಂದ ವಿಹಂಗಮ ನೋಟ

ಸುತ್ತಲಿನ ಕಣಿವೆಗಳು ಮತ್ತು ಹಿಮದಿಂದ ಆವೃತವಾದ ಶಿಖರಗಳ ವಿಹಂಗಮ ನೋಟವನ್ನು ಕಾಣಬಯಸುವವರು ಮಹಾಸು ಶಿಖರದ ಕಡೆಗೆ ಪಾದಯಾತ್ರೆ ಮಾಡಬಹುದು ಅಥವಾ ಕುದುರೆ ಸವಾರಿ ಮಾಡಬಹುದು. ಇಲ್ಲಿಂದ ಹಿಮಾಲಯ ಶ್ರೇಣಿಯ ಅದ್ಭುತ ನೋಟವನ್ನು ಕಣ್ತುಂಬಿಕೊಳ್ಳಬಹುದು.

Kufri Tour
Kufri Tour


ಚಿನಿ ಬಂಗಲೆ

ವಸಾಹತುಶಾಹಿ ವಾಸ್ತುಶಿಲ್ಪದ ವಿನ್ಯಾಸಗಳೊಂದಿಗೆ ಸಾಂಪ್ರದಾಯಿಕ ಹಿಮಾಚಲಿ ಮಿಶ್ರಣವನ್ನು ಹೊಂದಿರುವ ಕುಫ್ರಿಯಲ್ಲಿರುವ ಮತ್ತೊಂದು ಆಕರ್ಷಣೆ ಚಿನಿ ಬಂಗಲೆ. ಭಾರತವು ಬ್ರಿಟಿಷ್ ಆಳ್ವಿಕೆಯಲ್ಲಿದ್ದಾಗ ನಿರ್ಮಿಸಲಾದ ವಿಶಿಷ್ಟವಾದ ವಾಸ್ತುಶಿಲ್ಪ ಶೈಲಿಯನ್ನು ಹೊಂದಿರುವ ಈ ಐತಿಹಾಸಿಕ ಕಟ್ಟಡವು ಈಗ ಸರ್ಕಾರಿ ಅತಿಥಿ ಗೃಹವಾಗಿದೆ.

ಇದನ್ನೂ ಓದಿ: Uttarkashi Tour: ಪರಿಪೂರ್ಣ ಪ್ರವಾಸದ ಅನುಭವ ಕೊಡುವ ಉತ್ತರಕಾಶಿಯ 5 ಗಿರಿಧಾಮಗಳು

ವರ್ಷದುದ್ದಕ್ಕೂ ಹಬ್ಬ

ಕುಫ್ರಿ ಕೇವಲ ಚಳಿಗಾಲದ ತಾಣವಲ್ಲ. ಇಲ್ಲಿ ಪ್ರತಿದಿನ ಹಬ್ಬದ ಉತ್ಸಾಹವನ್ನು ಕಾಣಬಹುದು. ಮೇ ತಿಂಗಳಲ್ಲಿ ಬೇಸಿಗೆ ಉತ್ಸವ ಮತ್ತು ಡಿಸೆಂಬರ್ ಕುಫ್ರಿ ಉತ್ಸವದಂತಹ ಸ್ಥಳೀಯ ಮೇಳಗಳು ಮತ್ತು ಉತ್ಸವಗಳು ಪ್ರವಾಸಿಗರಿಗೆ ಸ್ಥಳೀಯ ಜೀವನವನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ. ಸಂಗೀತ, ನೃತ್ಯ ಮತ್ತು ಸಾಂಪ್ರದಾಯಿಕ ಕರಕುಶಲಗಳ ಮೂಲಕ ಪ್ರದೇಶದ ಸಾಂಸ್ಕೃತಿಕ ಪರಂಪರೆಯನ್ನು ಆಚರಿಸಬಹುದು.

Continue Reading

ಪ್ರವಾಸ

Khajjiar Tour: ಖಜ್ಜಿಯಾರ್! ಇದು ಹಿಮಾಲಯದ ತಪ್ಪಲಿನಲ್ಲಿರುವ ಮಿನಿ ಸ್ವಿಟ್ಜರ್ಲೆಂಡ್!

ಏಕಾಂಗಿಯಾಗಿ ಪ್ರವಾಸ ಮಾಡಲು ಬಯಸುವವರು ಖಜ್ಜಿಯಾರ್‌ಗೆ (Khajjiar Tour) ಭೇಟಿ ನೀಡಬಹುದು. ಆದರೆ ಪ್ರವಾಸಕ್ಕಾಗಿ ಎಚ್ಚರಿಕೆಯ ಯೋಜನೆಗಳನ್ನು ಮಾಡುವ ಮೂಲಕ, ಸ್ಥಳೀಯ ಅಭ್ಯಾಸಗಳಿಂದ ಕಲಿಯುವ ಮೂಲಕ ಮತ್ತು ಆ ಸ್ಥಳದ ಸಂಸ್ಕೃತಿಯೊಂದಿಗೆ ಬೆರೆಯುವ ಮೂಲಕ ಪ್ರವಾಸವನ್ನು ಸ್ಮರಣೀಯಗೊಳಿಸಬಹುದು. ಇಲ್ಲಿನ ಬೆಟ್ಟಗಳ ಮಾಂತ್ರಿಕ ಸೌಂದರ್ಯ, ಏಕಾಂತ ಅನುಭವ ಕೊಡುವ ಸುರಕ್ಷಿತ ಮತ್ತು ಆನಂದದಾಯಕ ತಾಣಗಳಲ್ಲಿ ಸುತ್ತಾಡಲು ಮರೆಯದಿರಿ.

VISTARANEWS.COM


on

By

Khajjiar Tour
Koo

ಈ ಗಿರಿಧಾಮವು ಹಸಿರು ಹುಲ್ಲುಗಾವಲುಗಳು, ದಟ್ಟವಾದ ಪೈನ್ ಕಾಡುಗಳು ಮತ್ತು ಶಾಂತವಾದ ಸರೋವರದಂತಹ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಏಕಾಂಗಿಯಾಗಿ ಪ್ರಕೃತಿಯ ಮಡಿಲಲ್ಲಿ ಅನ್ವೇಷಿಸಲು ಬಯಸುವ ಪ್ರವಾಸ ಪ್ರಿಯರಿಗೆ ಇದು ಆಯ್ಕೆ ಮಾಡಿಕೊಳ್ಳಬಹುದಾದ ಸೂಕ್ತವಾದ ತಾಣವಾಗಿದೆ.

ಹಿಮಾಲಯದ ತಪ್ಪಲಿನಲ್ಲಿರುವ ಖಜ್ಜಿಯಾರ್ (Khajjiar Tour) ಹಿಮಾಚಲ ಪ್ರದೇಶದಲ್ಲಿರುವ (himachal pradesh  hill station) ಅತ್ಯಾಕರ್ಷಕ ಗಿರಿಧಾಮವಾಗಿದೆ. ಇದನ್ನು ಸಾಮಾನ್ಯವಾಗಿ “ಮಿನಿ ಸ್ವಿಟ್ಜರ್ಲೆಂಡ್ ಆಫ್ ಇಂಡಿಯಾ” (Mini Switzerland of India) ಎಂದು ಕರೆಯಲಾಗುತ್ತದೆ. ನೆಮ್ಮದಿ ಮತ್ತು ಸಾಹಸವನ್ನು ಬಯಸುವ ಪ್ರವಾಸಿಗಳಿಗೆ ಇದು ಸೂಕ್ತ ತಾಣವಾಗಿದೆ.

ಖಜ್ಜಿಯಾರ್‌ಗೆ ಒಂಟಿಯಾಗಿ ಪ್ರವಾಸ ಮಾಡಬೇಕು ಎಂದು ಬಯಸುವವರು ಮೊದಲು ಸರಿಯಾದ ಸಿದ್ಧತೆ, ಸ್ಥಳದ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಳ್ಳುವುದು ಉತ್ತಮ. ಇದರಿಂದ ಪ್ರವಾಸವನ್ನು ಸುರಕ್ಷಿತವಾಗಿ ಮತ್ತು ಹೆಚ್ಚು ಆನಂದದಾಯಕವಾಗಿ ಕಳೆಯಬಹುದು.

Khajjiar Tour
Khajjiar Tour


ಸರಿಯಾದ ಯೋಜನೆ ಹಾಕಿಕೊಳ್ಳಿ

ಖಜ್ಜಿಯಾರ್‌ಗೆ ಪ್ರವಾಸ ಹೊರಡುವ ಮೊದಲು ಪ್ರವಾಸವನ್ನು ಹೆಚ್ಚು ಆನಂದದಾಯಕವಾಗಿಸಲು ತಯಾರಿಯನ್ನು ಮುಂಚಿತವಾಗಿಯೇ ಮಾಡಿಕೊಳ್ಳಬೇಕು. ಅದರಲ್ಲಿ ಮುಖ್ಯವಾಗಿ ಋತುವಿನ ಆಯ್ಕೆ. ಖಜ್ಜಿಯಾರ್‌ಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಮಾರ್ಚ್‌ನಿಂದ ಜೂನ್‌ವರೆಗಿನ ಬೇಸಿಗೆಕಾಲ ಅಥವಾ ಸೆಪ್ಟೆಂಬರ್ ಮತ್ತು ನವೆಂಬರ್ ನಡುವಿನ ಶರತ್ಕಾಲದ ಆರಂಭ ಹೆಚ್ಚು ಸೂಕ್ತವಾಗಿದೆ. ಈ ಸಂದರ್ಭದಲ್ಲಿ ಇಲ್ಲಿ ಹೆಚ್ಚು ಬಿಸಿಯಾಗಿರುವುದಿಲ್ಲ ಅಥವಾ ತಂಪಾಗಿರುವುದಿಲ್ಲ ಆದರೆ ಸ್ಪಷ್ಟವಾದ ಆಕಾಶದ ಜೊತೆಗೆ ಆರಾಮದಾಯಕವಾದ ತಾಪಮಾನ ಸುಂದರ ಪ್ರವಾಸದ ಅನುಭವವನ್ನು ಕೊಡುತ್ತದೆ.

ವಸತಿ ವ್ಯವಸ್ಥೆ ಮೊದಲೇ ಮಾಡಿಕೊಳ್ಳಿ. ಖಜ್ಜಿಯಾರ್‌ನಲ್ಲಿ ಸಾಕಷ್ಟು ಹೊಟೇಲ್ , ರೆಸಾರ್ಟ್‌ ಅಥವಾ ಹೋಮ್ ಸ್ಟೇಗಳಿವೆ. ಕೆಲವು ಕಾರಣಗಳಿಗಾಗಿ ಏಕಾಂಗಿ ಪ್ರಯಾಣಿಕರು ಹೋಮ್‌ಸ್ಟೇಗಳನ್ನೇ ಇಷ್ಟಪಡುತ್ತಾರೆ. ಪೀಕ್ ಸೀಸನ್‌ಗಳಲ್ಲಿ ಈ ಸ್ಥಳದಲ್ಲಿ ವಾಸ್ತವ್ಯವನ್ನು ಆನಂದಿಸಲು ಬಯಸಿದರೆ ಸಾಕಷ್ಟು ಮುಂಚಿತವಾಗಿ ಬುಕ್ ಮಾಡಲು ಮರೆಯದಿರಿ.

ಸಾರಿಗೆ ವಿಧಾನ ಆಯ್ಕೆ ಮೊದಲೇ ಮಾಡಿಕೊಳ್ಳಿ. ಖಜ್ಜಿಯಾರ್‌ನಿಂದ ಸುಮಾರು 24 ಕಿಲೋಮೀಟರ್ ದೂರದಲ್ಲಿರುವ ಡಾಲ್‌ಹೌಸಿಯು ಅತ್ಯಂತ ಹತ್ತಿರದ ಮಹತ್ವದ ನಗರವಾಗಿದೆ. ಟ್ಯಾಕ್ಸಿ ಅಥವಾ ಸ್ಥಳೀಯ ಬಸ್ಸು ಮೂಲಕ ಡಾಲ್ ಹೌಸಿಯಿಂದ ಖಜ್ಜಿಯಾರ್‌ಗೆ ತಲುಪಬಹುದು. ಏಕಾಂಗಿಯಾಗಿ ಖಜ್ಜಿಯಾರ್ ಗೆ ಪ್ರಯಾಣಿಸುತ್ತಿದ್ದರೆ, ಟ್ಯಾಕ್ಸಿಗಳು ಸುಲಭವಾಗಿ ಲಭ್ಯವಿರುತ್ತವೆ. ಇದು ಸುತ್ತಮುತ್ತಲಿನ ಇತರ ಆಸಕ್ತಿದಾಯಕ ಸ್ಥಳಗಳಿಗೆ ಭೇಟಿ ನೀಡುವುದನ್ನು ಸುಲಭಗೊಳಿಸುತ್ತದೆ.

Khajjiar Tour
Khajjiar Tour


ವಿವಿಧ ಚಟುವಟಿಕೆಯನ್ನು ಆನಂದಿಸಿ

ಖಜ್ಜಿಯಾರ್ ಅದ್ಭುತವಾದ ಪ್ರಶಾಂತತೆಯನ್ನು ಹೊಂದಿದ್ದು, ಇಲ್ಲಿ ಏಕಾಂಗಿ ಪ್ರವಾಸ ಮಾಡುವವರು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಬಹುದು.

ಹಸಿರು ಹುಲ್ಲುಗಾವಲು ಮತ್ತು ದೇವದಾರು ಮರಗಳ ನಡುವೆ ನೆಲೆಗೊಂಡಿರುವ ಖಜ್ಜಿಯಾರ್ ಸರೋವರಕ್ಕೆ ಭೇಟಿ ನೀಡುವ ಮೂಲಕ ಇಲ್ಲಿ ಪ್ರಯಾಣವನ್ನು ಪ್ರಾರಂಭಿಸಬಹುದು. ಸರೋವರದ ಸುತ್ತಲೂ ಕಾಲ್ನಡಿಗೆಯಲ್ಲಿ ಅಥವಾ ಅದರ ದಡದಲ್ಲಿ ಪ್ಯಾಡಲ್ ಬೋಟ್ ಅನ್ನು ಬಾಡಿಗೆಗೆ ತೆಗೆದುಕೊಳ್ಳುವ ಮೂಲಕ ಇಲ್ಲಿ ಮಾಡಬಹುದಾದ ಕೆಲವು ಚಟುವಟಿಕೆಗಳು ಅಥವಾ ಸುಮ್ಮನೆ ಕುಳಿತು ಪ್ರಶಾಂತತೆಯನ್ನು ಆನಂದಿಸಬಹುದು.

ಐತಿಹಾಸಿಕ ಖಜ್ಜಿಯಾರ್ ನಾಗ್ ದೇವಾಲಯದಲ್ಲಿ ಹಾವಿಗೆ ಪೂಜೆ ಸಲ್ಲಿಸಲಾಗುತ್ತದೆ. ಇತಿಹಾಸ ಮತ್ತು ಸಂಸ್ಕೃತಿಯನ್ನು ಪ್ರೀತಿಸುತ್ತಿದ್ದರೆ ಇದು ಸೂಕ್ತ ಪ್ರವಾಸ ಸ್ಥಳವಾಗಿದೆ. ಪ್ರಕೃತಿ ಪ್ರಿಯರು ಕಲಾಟಾಪ್ ವನ್ಯಜೀವಿ ಅಭಯಾರಣ್ಯದಲ್ಲಿ ಪಾದಯಾತ್ರೆಯನ್ನು ನಡೆಸಬಹುದು. ಹಿಮಾಲಯನ್ ಕಪ್ಪು ಕರಡಿಗಳು ಮತ್ತು ಹಲವಾರು ಪಕ್ಷಿಗಳು ಸೇರಿದಂತೆ ವಿವಿಧ ರೀತಿಯ ಪ್ರಾಣಿ ಮತ್ತು ಸಸ್ಯಗಳನ್ನು ಇಲ್ಲಿ ಕಾಣಬಹುದು. ಏಕಾಂಗಿಯಾಗಿ ಪ್ರವಾಸ ಮಾಡಲು ಬಯಸುವವರು ನೆಮ್ಮದಿಯನ್ನು ಹುಡುಕುತ್ತಿದ್ದರೆ ಇಲ್ಲಿ ಅದನ್ನು ಪಡೆಯಬಹುದು.

ಖಜ್ಜಿಯಾರ್‌ನಲ್ಲಿ ಸಾಹಸವನ್ನು ಹುಡುಕುವವರಿಗೆ ಇಲ್ಲಿ ಝೋರ್ಬಿಂಗ್ ಮತ್ತು ಪ್ಯಾರಾಗ್ಲೈಡಿಂಗ್‌ಗೆ ಅವಕಾಶಗಳಿವೆ. ಸುತ್ತಲಿನ ಕಣಿವೆಗಳು ಮತ್ತು ಬೆಟ್ಟಗಳ ನಡುವೆ ರೋಮಾಂಚಕ ಅನುಭವವನ್ನು ಪಡೆಯಬಹುದು.

Khajjiar Tour
Khajjiar Tour


ಸುರಕ್ಷತೆಯ ಕಡೆ ಗಮನವಿರಲಿ

ಏಕಾಂಗಿ ಪ್ರಯಾಣಿಕರು ಖಜ್ಜಿಯಾರ್‌ಗೆ ಭೇಟಿ ನೀಡುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಏಕಾಂಗಿಯಾಗಿ ಹೊರಗೆ ಹೋಗುವವರು, ಹಿಂತಿರುಗುವ ಬಗ್ಗೆ ವಸತಿ ಒದಗಿಸುವವರು ಅಥವಾ ನಂಬಲರ್ಹ ವ್ಯಕ್ತಿಗೆ ತಿಳಿಸಿ ಹೋಗಬೇಕು.

ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಾಗ ಡ್ರೆಸ್ಸಿಂಗ್ ಮಾಡುವಂತಹ ಸ್ಥಳೀಯ ಪದ್ಧತಿ ಮತ್ತು ಸಂಪ್ರದಾಯಗಳನ್ನು ಗಮನಿಸಿ. ಯಾವುದೇ ಅನಿರೀಕ್ಷಿತ ಸಂದರ್ಭಗಳಲ್ಲಿ ಸ್ಥಳೀಯ ಅಧಿಕಾರಿಗಳು ಅಥವಾ ದೇಶದ ರಾಯಭಾರ ಕಚೇರಿ/ದೂತಾವಾಸ ಕಚೇರಿಗಳು ಸೇರಿದಂತೆ ತುರ್ತು ಸಂಪರ್ಕ ಸಂಖ್ಯೆಗಳನ್ನು ನೆನಪಿಡಿ. ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ.ನೀರು, ಅಗತ್ಯವಿರುವ ಔಷಧಗಳು ಜೊತೆಯಲ್ಲಿ ಇರಲಿ.

ಇದನ್ನೂ ಓದಿ: Varanasi Tour: ವಾರಣಾಸಿಗೆ ಹೋದಾಗ ನೋಡಲೇಬೇಕಾದ ಅದ್ಭುತ ಸ್ಥಳಗಳಿವು

Khajjiar Tour
Khajjiar Tour


ಸ್ಥಳೀಯ ಸಂಸ್ಕೃತಿಯನ್ನು ಆನಂದಿಸಿ

ಹಿಮಾಚಲ ಪ್ರದೇಶದ ಸ್ಥಳೀಯ ಆಹಾರ ಮತ್ತು ಅದರ ಸರಳತೆ ಮತ್ತು ರುಚಿಗೆ ಹೆಸರುವಾಸಿಯಾಗಿದೆ. ಹೀಗಾಗಿ ಇಲ್ಲಿನ ವಿವಿಧ ಭಕ್ಷ್ಯಗಳನ್ನು ಪ್ರಯತ್ನಿಸಿ. ಸ್ಥಳೀಯರೊಂದಿಗೆ ಸಂವಹನ ನಡೆಸಿ ಅವರ ಜೀವನ, ಪದ್ಧತಿಗಳು ಮತ್ತು ಜಾನಪದದ ಬಗ್ಗೆ ತಿಳಿದುಕೊಳ್ಳಿ. ಇದು ಖಜ್ಜಿಯಾರ್‌ಗೆ ಸಂಬಂಧಿಸಿದ ಒಳನೋಟಗಳನ್ನು ನೀಡುತ್ತದೆ. ಕೈಯಿಂದ ಮಾಡಿದ ಉಣ್ಣೆಬಟ್ಟೆಗಳು, ಕರಕುಶಲ ವಸ್ತುಗಳು ಅಥವಾ ಸ್ಮಾರಕಗಳ ಸ್ಥಳೀಯ ಮಾರುಕಟ್ಟೆಗಳು ಇಲ್ಲಿ ಸಾಕಷ್ಟು ನೆನಪುಗಳನ್ನು ಕಟ್ಟಿಕೊಡುತ್ತದೆ.

Continue Reading
Advertisement
puneeth kerehalli dog meat
ಕ್ರೈಂ18 mins ago

Dog Meat: ನಾಯಿ ಮಾಂಸದ ಗಲಾಟೆ, ಪುನೀತ್‌ ಕೆರೆಹಳ್ಳಿ ಪೊಲೀಸ್‌ ಠಾಣೆಯಲ್ಲೇ ತೀವ್ರ ಅಸ್ವಸ್ಥ

Family Drama Film Review
ಸಿನಿಮಾ31 mins ago

Family Drama Film Review: ಹೊಸ ಅನುಭವ ನೀಡುವ ಫ್ಯಾಮಿಲಿ ಡ್ರಾಮಾ

Michel Phelps ರಾಜಮಾರ್ಗ ಅಂಕಣ
ಅಂಕಣ56 mins ago

ರಾಜಮಾರ್ಗ ಅಂಕಣ: 28 ಒಲಿಂಪಿಕ್ ಪದಕಗಳ ವಿಶ್ವದಾಖಲೆ- ಮೈಕೆಲ್ ಫೆಲ್ಪ್ಸ್

Aadhaar Update
ವಾಣಿಜ್ಯ1 hour ago

Aadhaar Update: ಹೊಸ ನಿಯಮ ಪ್ರಕಾರ ಆಧಾರ್ ವಿಳಾಸ ನವೀಕರಣಕ್ಕೆ ಯಾವ ದಾಖಲೆ ಬಳಸಬಹುದು?

Health Tips Kannada
ಆರೋಗ್ಯ1 hour ago

Health Tips Kannada: ಚಹಾ, ಕಾಫಿಯನ್ನು ಯಾವ ಸಮಯದಲ್ಲಿ ಕುಡಿಯಬಾರದು ಗೊತ್ತೇ?

Vastu Tips
ಧಾರ್ಮಿಕ2 hours ago

Vastu Tips: ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಬೇಕೆಂದರೆ ಅಡುಗೆ ಮನೆ ಹೀಗಿರಬೇಕು!

Remedies For Fatty Liver
ಆರೋಗ್ಯ2 hours ago

Remedies For Fatty Liver: ಲಿವರ್‌ನ ಕೊಬ್ಬನ್ನು ನೈಸರ್ಗಿಕವಾಗಿ ಹೀಗೆ ಕರಗಿಸಲು ಸಾಧ್ಯ!

Shravan Month 2024
ಧಾರ್ಮಿಕ2 hours ago

Shravan 2024: ಶ್ರಾವಣ ಮಾಸದಲ್ಲಿ ಯಾವ ಆಹಾರ ತಿನ್ನಬೇಕು, ಯಾವುದನ್ನು ತಿನ್ನಬಾರದು?

karnataka Weather Forecast
ಮಳೆ2 hours ago

Karnataka Weather : ಕರಾವಳಿ-ಮಲೆನಾಡಿನಲ್ಲಿ ಮುಂದುವರಿಯಲಿದೆ ಮಳೆ ಅಬ್ಬರ- ಇರಲಿ ಎಚ್ಚರ

dina bhavishya
ಭವಿಷ್ಯ3 hours ago

Dina Bhavishya : ಈ ರಾಶಿಯವರಿಗೆ ಮಾತೇ ಮೃತ್ಯು, ಮೌನಕ್ಕೆ ಶರಣಾಗಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Ankola landslide
ಉತ್ತರ ಕನ್ನಡ13 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ14 hours ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ15 hours ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ16 hours ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ3 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ4 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

ಟ್ರೆಂಡಿಂಗ್‌