Viral Post: ಹವ್ಯಾಸವೇ ವೃತ್ತಿ: ಕೆಲಸಕ್ಕೆ ಗುಡ್‌ಬೈ ಹೇಳಿ ತಿರುಗಾಟವೇ ಕೆಲಸ! - Vistara News

ಪ್ರವಾಸ

Viral Post: ಹವ್ಯಾಸವೇ ವೃತ್ತಿ: ಕೆಲಸಕ್ಕೆ ಗುಡ್‌ಬೈ ಹೇಳಿ ತಿರುಗಾಟವೇ ಕೆಲಸ!

ಲಿಂಕ್ಡ್‌ ಇನ್‌ನಲ್ಲಿ ಮಾಡುತ್ತಿದ್ದ ಕೆಲಸಕ್ಕೆ ಗುಡ್‌ ಬೈ ಹೇಳಿ ಈಗ ಪ್ರಪಂಚ ಸುತ್ತುವುದನ್ನೇ ನನ್ನ ಕೆಲಸವನ್ನಾಗಿ ಮಾಡಿ ಒಂದು ವರ್ಷವಾಯಿತು ಎಂದು ಯುವತಿಯೊಬ್ಬಳು ಬರೆದುಕೊಂಡಿರುವ ಪೋಸ್ಟ್‌ ಈಗ ಸಾಕಷ್ಟು ವೈರಲ್‌ (Viral post) ಆಗಿದ್ದು ಅಷ್ಟೇ ಚರ್ಚೆಯನ್ನೂ ಹುಟ್ಟು ಹಾಕಿದೆ.

VISTARANEWS.COM


on

traveling resigning job
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವೃತ್ತಿ ಹಾಗೂ ಹವ್ಯಾಸ ಇವೆರಡರನ್ನು ಮುಂದಿಟ್ಟು ಒಂದನ್ನು ಆಯ್ಕೆ ಮಾಡಿಕೊಳ್ಳಲು ಹೇಳಿದರೆ ಬಹುತೇಕರು, ವೃತ್ತಿಯನ್ನೇ ಆಯ್ಕೆ ಮಾಡಿಕೊಳ್ಳುವುದು ಸಹಜ. ಕಾರಣ ಇಷ್ಟೇ, ವೃತ್ತಿ ನೀಡುವ ಆರ್ಥಿಕ ಭದ್ರತೆಯನ್ನು ಹವ್ಯಾಸ ನೀಡಲಾರದು. ಹವ್ಯಾಸದ ಹಿಂದೆ ಬಿದ್ದು, ವೃತ್ತಿಯನ್ನು ನಿರ್ಲಕ್ಷ್ಯ ಮಾಡಿದರೆ ಖಂಡಿತಾ ಊಟಕ್ಕೆ ಗತಿಯಿಲ್ಲದಂತಾಗುತ್ತದೆ ಎಂಬುದು ಹಲವರ ಅಭಿಪ್ರಾಯ. ಅದಕ್ಕಾಗಿಯೇ. ಅನೇಕರು, ಮನಸ್ಸಿದ್ದರೂ, ಇಲ್ಲದಿದ್ದರೂ ವೃತ್ತಿಗೆ ಆತುಕೊಂಡೇ ಇರುತ್ತಾರೆ. ಇನ್ನೂ ಕೆಲವರು ಹವ್ಯಾಸವನ್ನೇ ವೃತ್ತಿಯನ್ನಾಗಿ ಬದಲಾಯಿಸಿಕೊಂಡು ಯಶಸ್ಸು ಸಾಧಿಸುವವರೂ ಇದ್ದಾರೆ. ಆದರೆ, ಅದಕ್ಕೆ ಸಾಕಷ್ಟು ಶ್ರಮ, ತಾಳ್ಮೆ ಹಾಗೂ ಕಠಿಣ ಪರಿಶ್ರಮದ ಅಗತ್ಯ ಇದ್ದೇ ಇರುತ್ತದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಚರ್ಚೆಯನ್ನು ಹುಟ್ಟು ಹಾಕುತ್ತಲೇ ಇರುತ್ತದೆ.

ಇತ್ತೀಚೆಗೆ ಯುವ ಮನಸ್ಸುಗಳು, ಹವ್ಯಾಸಗಳನ್ನೂ ಬದುಕಿನ ಆದ್ಯತೆಗಳಲ್ಲಿ ಒಂದಾಗಿ ಪರಿಗಣಿಸಿ ಬದುಕನ್ನು ಇಷ್ಟ ಬಂದ ಹಾಗೆ ಜೀವಿಸಬೇಕು ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಲು ಪ್ರಯತ್ನಿಸುವುದುಂಟು. ಪ್ರವಾಸ ಮಾಡುತ್ತಾ ಬದುಕು ಕಳೆಯಬೇಕು ಎಂದು ಬಯಸುವ ಯುವಜನರು ಇತ್ತೀಚೆಗೆ ಹೆಚ್ಚಾಗುತ್ತಿದ್ದಾರೆ. ತಿರುಗಾಡುವುದೇ ಜೀವನ. ತಿರುಗಾಟಕ್ಕೆ ಬೇಕಾದ ಹಣವನ್ನು ತಿರುಗಾಡುತ್ತಲೇ ಕೆಲಸ ಮಾಡಿ ಸಂಪಾದಿಸುತ್ತೇವೆ ಎಂದು ಹೊರಟ ಅನೇಕರ ಉದಾಹರಣೆಗಳು ಇಂದು ಸಿಗುತ್ತಿವೆ. ಇದೂ ಕೂಡಾ ಅಂಥದ್ದೇ ಒಂದು ಉದಾಹರಣೆ. ಸಾಮಾಜಿಕ ಜಾಲತಾಣದಲ್ಲಿ ದೆಹಲಿ ಮೂಲದ ಯುವತಿ ಆಕಾಂಕ್ಷಾ ಮೋಂಗಾ ಎಂಬಾಕೆ 2022ರಲ್ಲಿ ತಾನು ಲಿಂಕ್ಡ್‌ ಇನ್‌ನಲ್ಲಿ ಮಾಡುತ್ತಿದ್ದ ಕೆಲಸಕ್ಕೆ ಗುಡ್‌ ಬೈ ಹೇಳಿ ಈಗ ಪ್ರಪಂಚ ಸುತ್ತುವುದನ್ನೇ ನನ್ನ ಕೆಲಸವನ್ನಾಗಿ ಮಾಡಿ ಒಂದು ವರ್ಷವಾಯಿತು ಎಂದು ಬರೆದುಕೊಂಡಿರುವ ಪೋಸ್ಟ್‌ ಈಗ ಸಾಕಷ್ಟು ವೈರಲ್‌ ಆಗಿದ್ದು ಅಷ್ಟೇ ಚರ್ಚೆಯನ್ನೂ ಹುಟ್ಟು ಹಾಕಿದೆ.

ಕಳೆವ ವರ್ಷ ಇದೇ ಸಮಯಕ್ಕೆ ನಾನು ಕೆಲಸಕ್ಕೆ ರಾಜೀನಾಮೆ ಕೊಟ್ಟು ಪ್ರಪಂಚ ಸುತ್ತಲು ಹೊರಟೆ. ನಾನು ನನ್ನ ಈ ಕನಸನ್ನು ನನಸಾಗಿಸಲು ಬಹಳ ಕಷ್ಟ ಪಟ್ಟೆ. ಒಬ್ಬಳೇ ಕೆಲಸ ಮಾಡಿದೆ. ಸುಮಾರು ಎರಡೂವರೆ ಲಕ್ಷ ಫಾಲೋವರ್‌ಗಳನ್ನು ಇನ್ಸ್‌ಟಾದಲ್ಲಿ ಪಡೆದೆ. ಹೇಗೆ ಇವನ್ನೆಲ್ಲಾ ಮಾಡಿದೆ ಎಂದು ತಿಳೆಯಬೇಕೇ?ʼ ಎಂದು ಆಕೆ ತನ್ನ ಫಾಲೋವರ್ಸ್‌ಗೆ ಪ್ರಶ್ನೆ ಎಸೆದಿದ್ದರು. ಈಕೆ ಕೆಲಸಕ್ಕೆ ರಾಜೀನಾಮೆ ಕೊಡುವ ಮೊದಲು ಆರು ತಿಂಗಳ ಕಾಲ ಲಿಂಕ್ಡ್‌ ಇನ್‌ನಲ್ಲಿ ಕಾರ್ಯ ನಿರ್ವಹಿಸಿದ್ದರು.

ಮೊಂಗಾ ಒಂದು ವರ್ಷದಲ್ಲಿ ತನ್ನ ಕನಸನ್ನು ನನಸಾಗಿಸಲು ಸುಮಾರು 12 ದೇಶಗಳಲ್ಲಿ ಸುತ್ತಾಡಿದ್ದು, ಅವುಗಳ ಪೈಕಿ ಎಂಟು ದೇಶಗಳಲ್ಲಿ ಸೋಲೋ ಪ್ರವಾಸ ಮಾಡಿದ್ದಾರೆ. ಟ್ರಾವೆಲ್‌ ಅ ಮೋರ್‌ ಎಂಬ ವೆಬ್‌ಸೈಟ್‌ ಒಂದನ್ನೂ ಈಕೆ ನಡೆಸುತ್ತಿದ್ದು ಈಕೆಯ ಜೊತೆಗೆ ಆರು ಜನರು ಕೆಲಸ ಮಾಡುತ್ತಿದ್ದಾರೆ. 30ಕ್ಕೂ ಹೆಚ್ಚು ಬ್ರ್ಯಾಂಡ್‌ಗಳ ಜೊತೆಗೆ ಕೆಲಸ ಮಾಡಿರುವುದಲ್ಲದೆ, 300ಕ್ಕೂ ಹೆಚ್ಚು ವಿಡಿಯೋಗಳನ್ನು ಈಕೆ ಮಾಡಿದ್ದು ಇವೆಲ್ಲವನ್ನೂ ತನ್ನ ಪ್ರವಾಸ ಮಾಡುತ್ತಲೇ ಮಾಡಿದ್ದಾಳೆ. ರಾತ್ರಿ ಹಗಲೆನ್ನದೆ, ತಿಂಗಳುಗಟ್ಟಲೆ ಇದಕ್ಕಾಗಿ ಕೆಲಸ ಮಾಡಿದ್ದು ಸಾಕಷ್ಟು ಶ್ರಮ ಹಾಕಿದ್ದೇನೆ ಎಂದೂ ಆಕೆ ವಿವರಿಸಿದ್ದಾರೆ.

ಇದನ್ನೂ ಓದಿ: Viral Video: ಹಾರುವ ಸೋಫಾದ ವಿಡಿಯೊ ನೋಡಿ ಅಲ್ಲಾವುದ್ದೀನ್​ ಮ್ಯಾಜಿಕ್ ಕಾರ್ಪೆಟ್​ ನೆನಪಿಸಿಕೊಂಡ ಜನರು

ಈಕೆಯ ಈ ಪೋಸ್ಟ್‌ಗೆ ಹಲವಾರು ಪ್ರತಿಕ್ರಿಯೆಗಳು ಬಂದಿದ್ದು. ಬಹುತೇಕರು, ಹವ್ಯಾಸವನ್ನೇ ವೃತ್ತಿಯನ್ನಾಗಿ ಮಾಡಿದ ನಿಮಗೆ ಅಭಿನಂದನೆಗಳು, ಖುಷಿಯಾಗಿರಿ ಎಂದಿದ್ದಾರೆ. ಇನ್ನೂ ಕೆಲವರು, ಇವು ನಮಗೆ ಸ್ಪೂರ್ತಿ ಎಂದಿದ್ದಾರೆ. ಹವ್ಯಾಸವನ್ನೇ ವೃತ್ತಿಯನ್ನಾಗಿ ಆಯ್ಕೆ ಮಾಡಿ ದೇಶ ಸುತ್ತುವುದು ಅನೇಕರ ಕನಸು. ಆದರೆ, ಅದನ್ನು ನನಸಾಗಿ ಮಾಡುವ ಕೆಲವೇ ಮಂದಿಯಲ್ಲಿ ನೀವೂ ಒಬ್ಬರು. ಶುಭವಾಗಲಿ ಎಂದಿದ್ದಾರೆ.

ಆದರೆ, ವಿಶೇಷವೆಂದರೆ, ಇಂತಹ ಪ್ರೋತ್ಸಾಹದಾಯಕ ಪ್ರತಿಕ್ರಿಯೆಗಳ ಮಧ್ಯದಲ್ಲಿ ಕೆಲವರು ಚರ್ಚೆಯನ್ನೂ ಹುಟ್ಟು ಹಾಕಿದ್ದಾರೆ. ʻಮನೆಯಲ್ಲಿ ಅಪ್ಪ ಅಮ್ಮ ಮಾಡಿದ ಆಸ್ತಿ ಬೆನ್ನಿಗಿದ್ದರೆ ಹೀಗೆ ಹೇಳುವುದು ಸುಲಭ. ಹವ್ಯಾಸದ ಹೆಸರಿನಲ್ಲಿ ಮಹಾನ್‌ ಸಾಧನೆಗೈದವರಂತೆ ಹೇಳುತ್ತಿರುವ ನೀವು ಕಷ್ಟಪಟ್ಟು ದುಡಿಯುತ್ತಿರುವ ನಮ್ಮಂಥ ಸಾಮಾನ್ಯ ಜನರದ್ದೇನೂ ಸಾಧನೆಯೇ ಅಲ್ಲ ಎಂಬ ಭಾವನೆ ಬರುವಂತೆ ಮಾಡುತ್ತಿದ್ದೀರಿʼ ಎಂದಿದ್ದಾರೆ. ಈಕೆ ಒಮ್ಮೆ ತನ್ನ ಹಿರಿಯರು ಮಾಡಿಟ್ಟ ಆಸ್ತಿಯನ್ನು ತ್ಯಜಿಸಿ ಇದೇ ಮಾತು ಹೇಳಲಿ ನೋಡೋಣ ಎಂದೂ ಸವಾಲು ಹಾಕಿದ್ದಾರೆ! 

ಇದನ್ನೂ ಓದಿ: Viral News : ಗೂಗಲ್‌ ಸಿಇಒ ಸುಂದರ್‌ ಪಿಚ್ಚೈ ಹುಟ್ಟಿ, ಬೆಳೆದ ಮನೆ ಈಗ ತಮಿಳು ನಟನ ಸ್ವತ್ತು  

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Summer Tour: ಹಚ್ಚ ಹಸುರಿನ ಪ್ರಶಾಂತ ನಗರ ಶಿಲ್ಲಾಂಗ್; ಬೇಸಿಗೆ ಪ್ರವಾಸಕ್ಕೆ ಸೂಕ್ತ

Summer Tour: ಭಾರತದ ಇತರೆ ರಾಜಧಾನಿಗಳಲ್ಲಿರುವಂತೆ ಹೆಚ್ಚಿನ ಜನದಟ್ಟಣೆಯಿಲ್ಲದ ಸುಂದರ ನಗರ ಶಿಲ್ಲಾಂಗ್. ಮೋಡಿ ಮಾಡುವ ಹಲವು ಸುಪ್ರಸಿದ್ದ ತಾಣಗಳನ್ನು ಹೊಂದಿರುವ ಶಿಲ್ಲಾಂಗ್ ದಟ್ಟ ಅರಣ್ಯದ ನಡುವೆ ಕುಳಿತಿದೆಯೇನೋ ಎಂಬಂತೆ ಭಾಸವಾಗುತ್ತದೆ.

VISTARANEWS.COM


on

By

summer trip
Koo

ಜಗತ್ತಿನಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಚಿರಾಪುಂಜಿಯಿಂದ (cherrapunji) 55 ಕಿ.ಮೀ ದೂರದಲ್ಲಿರುವ ಮೇಘಾಲಯದ (meghalaya) ರಾಜಧಾನಿ ಶಿಲ್ಲಾಂಗ್ (Shillong) ತನ್ನ ನೈಸರ್ಗಿಕ ಸೌಂದರ್ಯದಿಂದ ದೇಶ- ವಿದೇಶಗಳಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಈ ಬೇಸಗೆಯಲ್ಲಿ (Summer Tour) ಹಸುರು ಬೆಟ್ಟಗಳ ನಡುವೆ ಕೆಲ ಕಾಲ ವಿಶ್ರಾಂತಿ ಪಡೆಯಬೇಕಿದ್ದರೆ ಶಿಲ್ಲಾಂಗ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

ಶಿಲ್ಲಾಂಗ್ ಗೆ ಭೇಟಿ ನೀಡಿದರೆ ಇಲ್ಲಿ ತಪ್ಪಿಸಿಕೊಳ್ಳಬಾರದ 9 ಪ್ರಮುಖ ಪ್ರವಾಸಿ ಆಕರ್ಷಣೆಗಳಿವೆ. ಹಚ್ಚಹಸುರಿನ ಬೆಟ್ಟಗಳ ನಡುವೆ ನೆಲೆಯಾಗಿರುವ ಶಿಲ್ಲಾಂಗ್ ನೈಸರ್ಗಿಕ ಔದಾರ್ಯ ಮತ್ತು ರೋಮಾಂಚಕ ಸಂಸ್ಕೃತಿಯಿಂದ ಪ್ರವಾಸಿಗರನ್ನು ಮೋಡಿ ಮಾಡುತ್ತದೆ.

ಮೇಘಾಲಯದ ರಾಜಧಾನಿ ಶಿಲ್ಲಾಂಗ್ ನಲ್ಲೇ ಜಲಪಾತ, ಸರೋವರ, ವಸ್ತುಸಂಗ್ರಹಾಲಯ, ಮಾರುಕಟ್ಟೆಗಳು ಸೇರಿದಂತೆ ಇನ್ನು ಹಲವು ಆಕರ್ಷಣಗಳನ್ನು ಹೊಂದಿದೆ. ಅವುಗಳಲ್ಲಿ ಈ ಒಂಬತ್ತು ಮುಖ್ಯ ಸ್ಥಳಗಳಿವೆ.

ಇದನ್ನೂ ಓದಿ: Summer Tour: ಬಿರು ಬೇಸಿಗೆಯಲ್ಲೂ ತಂಪಾದ ಅನುಭವ ನೀಡುವ ಕರ್ನಾಟಕದ ಪ್ರವಾಸಿ ತಾಣಗಳಿವು

ಶಿಲ್ಲಾಂಗ್ ಶಿಖರ

ಶಿಲ್ಲಾಂಗ್ ಶಿಖರದಿಂದ ಪನೋರಮಾಗಳು ರುದ್ರರಮಣೀಯ ಕಣಿವೆಯ ವೀಕ್ಷಣೆಗಾಗಿ ನಗರದ ಅತ್ಯುನ್ನತ ಕೇಂದ್ರ. ಇಲ್ಲಿಗೆ ಭೇಟಿ ನೀಡಿದ ವೇಳೆ ಮೊದಲು ಶಿಲ್ಲಾಂಗ್ ಪೀಕ್ ಗೆ ಭೇಟಿ ನೀಡಿ. 1965 ಮೀಟರ್ ಎತ್ತರದಲ್ಲಿರುವ ಇದು ಕೆಳಗಿನ ಹಸಿರು ಬೆಟ್ಟಗಳು ಮತ್ತು ಸರೋವರದ ದೃಶ್ಯದಿಂದ ಎಲ್ಲರನ್ನೂ ಬೆರಗುಗೊಳಿಸುತ್ತದೆ ಸಮೀಪದಲ್ಲೇ ಕೆಫೆಟೇರಿಯಾಗಲಿವೆ. ನಗರ ಕೇಂದ್ರದಿಂದ 12 ಕಿ.ಮೀ. ದೂರದಲ್ಲಿರುವ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ. ಹತ್ತಿರದಲ್ಲಿರುವ ಕೆಫೆಯಲ್ಲಿ ಶುಂಠಿ, ನಿಂಬೆ ಚಹಾ ಮತ್ತು ಜಿಲೇಬಿ ಅನ್ನು ಸವಿಯಬಹುದು.


ಉಮಿಯಂ ಸರೋವರ

ಶಿಲ್ಲಾಂಗ್‌ನಿಂದ ಉತ್ತರಕ್ಕೆ ಸುಮಾರು 15 ಕಿ.ಮೀ. ದೂರದಲ್ಲಿ ಹಸುರಿನಿಂದ ಕೂಡಿದ ಬೆಟ್ಟಗಳ ನಡುವೆ ನೆಲೆಸಿರುವ ಬಾರಾಪಾನಿ ಸರೋವರ ಎಂದೂ ಕರೆಯಲ್ಪಡುವ ಸಮ್ಮೋಹನಗೊಳಿಸುವ ಉಮಿಯಂ ಸರೋವರದಲ್ಲಿ ದೋಣಿ ವಿಹಾರವನ್ನು ಆನಂದಿಸಬಹುದು. ಮಂಜಿನಿಂದ ಆವೃತವಾದ ಬೆಟ್ಟದ ಸಿಲ್ಹೌಟ್‌ಗಳು ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುತ್ತದೆ. ದಡಗಳಲ್ಲಿ ಸಾಕಷ್ಟು ರೆಸಾರ್ಟ್ ಗಳು ಇರುವುದರಿಂದ ಸ್ಥಳೀಯ ಖಾದ್ಯಗಳನ್ನು ಸವಿಯಬಹುದು. ಇದಕ್ಕೆ ಹತ್ತಿರವಾಗಿ ಲುಮ್ ನೆಹರು ಪಾರ್ಕ್ ಇದೆ.


ಆನೆ ಜಲಪಾತ

ನೈಸರ್ಗಿಕ ಸೌಂದರ್ಯದ ನಡುವಿನ ಮೂರು-ಹಂತದ ಕ್ಯಾಸ್ಕೇಡಿಂಗ್ ಎಲಿಫೆಂಟ್ ಫಾಲ್ಸ್‌ ಅತ್ಯಾಕರ್ಷಕವಾಗಿದೆ. ಹಸಿರು ಬಂಡೆಗಳ ಕೆಳಗೆ ನೈಸರ್ಗಿಕ ಕೊಳಕ್ಕೆ ಧುಮುಕುತ್ತವೆ. ಆನೆಯ ಸೊಂಡಿಲನ್ನು ಹೋಲುವ ಹರಿವು ಅದಕ್ಕೆ ವಿಶಿಷ್ಟವಾದ ಹೆಸರನ್ನು ನೀಡಿದೆ. ಸೊಂಪಾದ ಅರಣ್ಯದ ನಡುವೆ ಪ್ರಾಚೀನ ನೋಟಗಳು ಮೋಡಿಮಾಡುತ್ತವೆ. 49 ಅಡಿ ಎತ್ತರವಿರುವ ಈ ಜಲಪಾತ ಶಿಲ್ಲಾಂಗ್‌ನಿಂದ 12 ಕಿ.ಮೀ. ದೂರದಲ್ಲಿದೆ.


ಡಾನ್ ಬಾಸ್ಕೋ ಮ್ಯೂಸಿಯಂ

ಅಸ್ಸಾಂ ಟ್ರಿಬ್ಯೂನ್ ಪ್ರೆಸ್ ಬಳಿಯ ಡಾನ್ ಬಾಸ್ಕೋ ಮ್ಯೂಸಿಯಂನಲ್ಲಿರುವ ಈಶಾನ್ಯ ಭಾರತದ ಬುಡಕಟ್ಟು ಸಂಸ್ಕೃತಿಯ ಅನನ್ಯ ಕಲಾಕೃತಿಗಳು, ವೇಷಭೂಷಣಗಳು, ಆಯುಧಗಳು, ಸಂಗೀತ ವಾದ್ಯಗಳನ್ನು ಛಾಯಾಚಿತ್ರಗಳು ಮತ್ತು ಖಾಸಿ, ಗಾರೋ ಮತ್ತು ಜೈನ್ತಿಯಂತಹ ಜನಾಂಗೀಯ ಸಮುದಾಯಗಳ ಬಗ್ಗೆ ಆಳವಾದ ಒಳನೋಟಗಳನ್ನು ನೀಡುತ್ತದೆ. ಇಲ್ಲಿಗೆ ಬೆಳಗ್ಗೆ 9 ರಿಂದ 5.30 ರವರೆಗೆ ಭೇಟಿ ನೀಡಬಹುದು. ಭಾನುವಾರದಂದು ಇದನ್ನು ಮುಚ್ಚಲಾಗುತ್ತದೆ.

ಪ್ರೆಟಿ ವಾರ್ಡ್‌ನ ಸರೋವರ

ಪೆಡಲ್ ಬೋಟಿಂಗ್ ಇಷ್ಟಪಡುವವರಿಗೆ ಮೇಘಾಲಯದ ಬೊಟಾನಿಕಲ್ ಗಾರ್ಡನ್ಸ್‌ನ ಮಧ್ಯ ಇರುವ ವಾರ್ಡ್‌ನ ಸರೋವರ ಮೋಡಿ ಮಾಡುತ್ತದೆ. ಅರಳುತ್ತಿರುವ ನೈದಿಲೆಗಳು, ಸುತ್ತಮುತ್ತಲಿನ ಆರ್ಕಿಡ್‌ಗಳು ಮತ್ತು ಪೈನ್ ಮರಗಳು ಸುಂದರ ಪ್ರಶಾಂತ ವಾತಾವರಣದ ಸವಿ ಉಣಿಸುವುದು. 1891 ರಲ್ಲಿ ಬ್ರಿಟಿಷರು ನಿರ್ಮಿಸಿದ್ದು, ಸುಂದರವಾದ ಉದ್ಯಾನ, ಕೆಫೆಗಳು ಇಲ್ಲಿನ ಆಕರ್ಷಣೆಯಾಗಿದೆ.

ಸೇಕ್ರೆಡ್ ಮಾವ್‌ಫ್ಲಾಂಗ್ ವುಡ್

ಶಿಲ್ಲಾಂಗ್‌ನಿಂದ 25 ಕಿ.ಮೀ. ದೂರದಲ್ಲಿರುವ ಮಾವ್‌ಫ್ಲಾಂಗ್ ಹಳ್ಳಿಯಲ್ಲಿ ದಟ್ಟವಾದ ತೋಪುಗಳ ನಡುವೆ ನಡೆದಾಡುವ ಸುಂದರ ಅನುಭೂತಿಯನ್ನು ನೀಡುತ್ತದೆ. ಇದು ಸ್ಥಳೀಯ ಖಾಸಿ ದೇವತೆಗಳಿಂದ ರಕ್ಷಿಸಲ್ಪಟ್ಟಿದೆ ಎಂದು ನಂಬಲಾಗಿದೆ. ಇಲ್ಲಿ ಪುರಾತನ ಮರಗಳು, ಅಪರೂಪದ ಸಸ್ಯಗಳನ್ನು ಕಾಣಬಹುದು. ಶಿಲ್ಲಾಂಗ್‌ನಿಂದ 25 ಕಿ.ಮೀ. ದೂರದಲ್ಲಿದ್ದು, ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ ಅಕ್ಟೋಬರ್ ನಿಂದ ಏಪ್ರಿಲ್ ವರೆಗೆ.

ಪೊಲೀಸ್ ಬಜಾರ್‌

ಶಾಪಿಂಗ್ ಪ್ರಿಯರಿಗಾಗಿ ಇಲ್ಲಿರುವ ಫಂಕಿ ಕೆಫೆಗಳು, ರೆಸ್ಟೋರೆಂಟ್‌ಗಳು ಮತ್ತು ಸ್ಥಳೀಯ ಕರಕುಶಲ ಮಳಿಗೆಳು ಅತ್ಯಾಕರ್ಷಕವಾಗಿದೆ. ಹಂದಿಮಾಂಸದ ಮೊಮೊಗಳು, ದೋಸೆಗಳು ಮತ್ತು ಬಬಲ್ ಚಹಾದೊಂದಿಗೆ ಜನಾಂಗೀಯ ಬುಡಕಟ್ಟು ಆಭರಣಗಳು, ಬಿದಿರಿನ ಕರಕುಶಲ ವಸ್ತುಗಳು ಮತ್ತು ಟ್ರೆಂಡಿ ಜಾಕೆಟ್‌ಗಳನ್ನು ಖರೀದಿ ಮಾಡಬಹುದು. ಇಲ್ಲಿ ಸಾಂಪ್ರದಾಯಿಕ ಉಡುಪುಗಳು, ಕರಕುಶಲ ವಸ್ತುಗಳು ಸಿಗುತ್ತವೆ.


ಶಿಲ್ಲಾಂಗ್ ಕೋರ್ಸ್‌

ಸುಂದರವಾದ ಶಿಲ್ಲಾಂಗ್ ಗಾಲ್ಫ್ ಕೋರ್ಸ್‌ನಲ್ಲಿ ಒಂದು ದಿನ ಸ್ವಿಂಗ್ ಅಭ್ಯಾಸ ಮಾಡಬಹುದು. ನೀಲಿ ಆಕಾಶದ ಕೆಳಗೆ ಪೈನ್ ಮರಗಳಿಂದ ಸುತ್ತುವರೆದಿರುವ ಇದು 1898 ರಲ್ಲಿ ಟಿಷ್ ನಾಗರಿಕ ಸೇವಕರಿಂದ ಸ್ಥಾಪಿಸಲಾದ ಭಾರತದ ಅತ್ಯಂತ ಹಳೆಯ ಗಾಲ್ಫ್ ಕೋರ್ಸ್ ಎನ್ನಲಾಗುತ್ತದೆ.


ಕ್ಯಾಥೆಡ್ರಲ್

ಶಿಲ್ಲಾಂಗ್ ನಲ್ಲಿ ಡಾನ್ ಬಾಸ್ಕೊ ಸ್ಕ್ವೇರ್ ಬಳಿಯ ಭವ್ಯವಾದ ಮತ್ತು ಸಾಂಪ್ರದಾಯಿಕ ಹಿನ್ನೆಲೆಯನ್ನು ಹೊಂದಿರುವ ಮೇರಿ ಹೆಲ್ಪ್ ಆಫ್ ಕ್ರಿಶ್ಚಿಯನ್ಸ್ ಕ್ಯಾಥೆಡ್ರಲ್‌ ಈಶಾನ್ಯದಲ್ಲಿರುವ ಅತ್ಯಂತ ಹಳೆಯ ಕ್ಯಾಥೋಲಿಕ್ ಚರ್ಚ್‌ಗಳಲ್ಲಿ ಒಂದಾಗಿದೆ. 1936ರಲ್ಲಿ ಇದನ್ನು ನಿರ್ಮಿಸಲಾಗಿದ್ದು, 1951 ರಲ್ಲಿ ವ್ಯಾಟಿಕನ್‌ನಿಂದ ಪವಿತ್ರಗೊಳಿಸಲಾಯಿತು. ಬಣ್ಣದ ಗಾಜಿನ ಫಲಕಗಳು, ಅವಳಿ ಗಂಟೆ ಗೋಪುರಗಳು ಇಲ್ಲಿನ ಆಕರ್ಷಣೆ.

Continue Reading

ಪ್ರವಾಸ

Summer Tour: ಪಾಂಡಿಚೇರಿಯಲ್ಲಿ ಸುತ್ತು ಹಾಕುವಾಗ ಇವುಗಳನ್ನು ಮಿಸ್ ಮಾಡಿಕೊಳ್ಳಬೇಡಿ!

Summer Tour: ಸುಂದರ ತಾಣಗಳಲ್ಲಿ ಈ ಬೇಸಿಗೆಯನ್ನು ಕಳೆಯಬೇಕು ಎನ್ನುವ ಯೋಚನೆ ಮಾಡುತ್ತಿದ್ದರೆ ಪಾಂಡಿಚೇರಿಯಲ್ಲಿ ಸುತ್ತಬಹುದು. ಈ ಪುಟ್ಟ ಪ್ರವಾಸಿ ತಾಣವು ರಜೆಯನ್ನು ಸ್ಮರಣೀಯವಾಗಿಸಲು ಸಾಕಷ್ಟು ಅವಕಾಶಗಳನ್ನು ಹೊಂದಿದೆ.

VISTARANEWS.COM


on

By

Summer tour
Koo

ಮನಸ್ಸಿಗೆ ಶಾಂತಿ ನೆಮ್ಮದಿ ನೀಡುವ ತಾಣಕ್ಕೆ ಈ ಬಾರಿ ಬೇಸಿಗೆಯಲ್ಲಿ ಪ್ರವಾಸ (Summer tour) ಹೋಗಬೇಕು ಎನ್ನುವ ಯೋಜನೆ ಇದ್ದರೆ ಭಾರತದ (india) ‘ಫ್ರೆಂಚ್ ರಾಜಧಾನಿ’ ಪಾಂಡಿಚೇರಿಗೆ (Pondicherry) ಪ್ರವಾಸ ಹೊರಡುವ ಪ್ಲಾನ್ ಮಾಡಿಕೊಳ್ಳಬಹುದು. ಅತ್ಯಂತ ಶಾಂತಿಯುತ ನಗರವಾದ ಪಾಂಡಿಚೇರಿ ಫ್ರೆಂಚ್ (french) ಪ್ರೇರಿತ ನಗರ ವಿನ್ಯಾಸದಿಂದಾಗಿ ವಿಶ್ವದಾದ್ಯಂತದಿಂದ ಪ್ರವಾಸಿಗರನ್ನು ಸೆಳೆಯುತ್ತದೆ.

ಸುಂದರ ತಾಣಗಳಲ್ಲಿ ಸುತ್ತಬೇಕು ಎನ್ನುವ ಯೋಚನೆ ಇದ್ದರೆ ಪಾಂಡಿಚೇರಿಯಲ್ಲಿ ಹರಸಾಹಸ ಮಾಡಬೇಕಾಗಿಲ್ಲ. ಯಾಕೆಂದರೆ ಈ ಪುಟ್ಟ ಪ್ರವಾಸಿ ತಾಣವು ರಜೆಯನ್ನು ಸ್ಮರಣೀಯವಾಗಿಸಲು ಸಾಕಷ್ಟು ಅವಕಾಶಗಳನ್ನು ಹೊಂದಿದೆ. ಇಲ್ಲಿನ ಅನುಭವಗಳ ಶ್ರೇಣಿಯು ಪ್ರವಾಸಿಗರನ್ನು ಆಶ್ಚರ್ಯಗೊಳಿಸುತ್ತದೆ. ಇಲ್ಲಿಗೆ ಪ್ರವಾಸ ಯೋಜನೆ ಮಾಡಿಕೊಂಡರೆ ಖಂಡಿತಾ ಯಾರಿಗೂ ನಿರಾಸೆಯಂತೂ ಆಗೋದಿಲ್ಲ.

ಫೆಂಚರ ನೆನಪುಗಳನ್ನು ಹೇಳುವ ಮರಗಳಿಂದ ಕೂಡಿದ ಬೌಲೆವಾರ್ಡ್‌ಗಳು, ಚಿನ್ನದ ಕಡಲತೀರಗಳು ಮತ್ತು ಕಲಾತ್ಮಕವಾಗಿ ಪುನಃಸ್ಥಾಪಿಸಿದ ವಸಾಹತುಶಾಹಿ ವಾಸ್ತುಶಿಲ್ಪಗಳು ಆಧುನಿಕತೆಯೊಂದಿಗೆ ಬೆರೆತು ತನ್ನ ಹಿಂದಿನ ನೆನಪುಗಳ ಕಥೆ ಹೇಳುತ್ತದೆ.

ಇದನ್ನೂ ಓದಿ: Mantralaya Tour: ಮಂತ್ರಾಲಯಕ್ಕೆ ಒಂದೇ ದಿನದಲ್ಲಿ ಹೋಗಿ ಬರಬೇಕೆ? ಈ ರೈಲುಗಳಲ್ಲಿ ಹೊರಡಿ

ಇತಿಹಾಸದ ಹೆಗ್ಗುರುತು

ಫ್ರೆಂಚ್ ವಸಾಹತುಶಾಹಿ ಟ್ರಯಲ್ ನಲ್ಲಿ ವಾಲ್ಕ್ ಡೌನ್ ಹಿಸ್ಟರಿಯನ್ನು ಕಾಣಬಹುದು. 28 ವಿಕ್ಟೋರಿಯನ್ ಸೈಟ್‌ಗಳಲ್ಲಿ 300 ವರ್ಷಗಳ ಇತಿಹಾಸವನ್ನು ಹೇಳುವಂತಿದೆ. ಮೈರಿ, ರಾಜ್ ನಿವಾಸ್ ಮತ್ತು ಹಳೆಯ ಲೈಟ್‌ಹೌಸ್‌ನಂತಹ ಹೆಗ್ಗುರುತುಗಳು ಬಂದರು ಚಟುವಟಿಗೆಳ ಬಗ್ಗೆ ವರ್ಣಿಸುತ್ತದೆ. ಫ್ರೆಂಚ್ ರಾಜಮನೆತನದ ಹಳದಿ ಬಣ್ಣವನ್ನು ಬಳಸಿ ಸೊಗಸಾದ ಟೌನ್‌ಹೌಸ್‌ಗಳಿಂದ ಲೇಪನ ಮಾಡಿ ನಿರ್ಮಿಸಲಾಗಿರುವ ಲ್ಯಾಟಿನ್ ಕ್ವಾರ್ಟರ್‌ಗಳನ್ನು ಇಲ್ಲಿ ನೋಡಲು ಮರೆಯದಿರಿ. ಇಲ್ಲಿನ ಲೆ ಕೆಫೆಯ ಪ್ಯಾಕೆಟ್ ಊಟದ ಪಾಕಪದ್ಧತಿಯು ರೋಮಾಂಚಕ ಅನುಭವ ಕೊಡುವುದು. ಇದು ಫ್ರಾಂಕೋ-ತಮಿಳು ಸಂಸ್ಕೃತಿಯನ್ನು ಸಾರುತ್ತದೆ.


ಸೆರೆನಿಟಿ ಬೀಚ್‌

ಬೆರಗುಗೊಳಿಸುವ ಸೂರ್ಯೋದಯವನ್ನು ಕಾಣಬೇಕಾದರೆ ಸೆರೆನಿಟಿ ಬೀಚ್ ಗೆ ಹೋಗಬಹುದು. ಸೂರ್ಯೋದಯವನ್ನು ನೋಡುತ್ತಾ ಸಮುದ್ರಕ್ಕೆ ಹೊರಟಿರುವ ಮೀನುಗಾರರನ್ನು ಮುಂಜಾನೆ ಇಲ್ಲಿಗೆ ಭೇಟಿ ಕೊಡಬಹುದು. ಹಸಿರು ಅಲೆಗಳು ಕಿತ್ತಳೆ ಆಕಾಶದಲ್ಲಿ ಕರಗುವಂತೆ ಕಾಣುವ ದೋಣಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ. ಇಲ್ಲಿ ಸಾಹಸಮಯ ಜಲಕ್ರೀಡೆಯಲ್ಲೂ ಪಾಲ್ಗೊಳ್ಳಬಹುದು. ಮೀನುಗಾರರ ಬದುಕಿನ ಅನುಭವದೊಂದಿಗೆ ಫ್ರೆಶ್ ಸಮುದ್ರಾಹಾರವನ್ನು ಇಲ್ಲಿ ಸವಿಯಬಹುದು.


ಪ್ರೊಮೆನೇಡ್ ಬೀಚ್ ರಸ್ತೆ

ಪಾಂಡಿಚೇರಿಯ ಪ್ರತಿಯೊಂದು ಬೀಚ್ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಅದರಲ್ಲಿ ಪ್ರೊಮೆನೇಡ್ ಬೀಚ್ ರಸ್ತೆಯಲ್ಲಿ ಸೈಕ್ಲಿಂಗ್ ಮಾಡುವುದು ಒಂದು ಸುಂದರ ಅನುಭವ. ಬೀಸುವ ತಂಗಾಳಿಯೊಂದಿಗೆ ಜಲಾಭಿಮುಖವನ್ನು ಹೆಲ್ಮೆಟ್ ಧರಿಸಿ ಬೈಸಿಕಲ್ ಓಡಿಸಲು ಅವಕಾಶವಿದೆ. ಇದರೊಂದಿದೆ ಚಿತ್ತಾಕರ್ಷಕ ಬ್ರಿಟಿಷ್ ವಿಲ್ಲಾಗಳು, ತಮಿಳು ದೇವಾಲಯಗಳನ್ನು ಕಾಣಬಹುದು. ಇಲ್ಲಿ ಕ್ಯಾಂಡಲ್-ಲೈಟ್ ಕೆಫೆಗಳು ಮತ್ತು ಜೆಲಾಟೊ ಜಾಯಿಂಟ್‌ಗಳು ಅದ್ಬುತ ಅನುಭವ ಕೊಡುವುದು.

ಅರಬಿಂದೋ ಆಶ್ರಮ

ಪ್ರಶಾಂತವಾದ ತಾಣದ ಹುಡುಕಾಟದಲ್ಲಿದ್ದಾರೆ ಧ್ಯಾನ ಮಾಡಲು ಸೂಕ್ತವಾದ ಸ್ಥಳ ಮಾತೃಮಂದಿರ ಉದ್ಯಾನವನದಲ್ಲಿರುವ ಅರಬಿಂದೋ ಆಶ್ರಮ. ಮಿರ್ರಾ ಅಲ್ಫಾಸ್ಸಾ ಅವರ ಮಾರ್ಗದರ್ಶನದಲ್ಲಿ ರಚಿಸಲಾದ ಇಲ್ಲಿನ ಸುಂದರವಾದ ಹಳ್ಳಿಗಾಡಿನ ಸೊಂಪಾದ ವಿಹಂಗಮ ನೋಟಗಳು ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ. ಸೊಂಪಾದ ಹುಲ್ಲುಹಾಸುಗಳ ಮೇಲೆ ನಡೆಯುವುದು ಹೆಚ್ಚು ಖುಷಿ ಕೊಡುತ್ತದೆ.

ವೈಬ್ರೆಂಟ್ ಬಜಾರ್

ಕಲಾತ್ಮಕ ಸಮುದಾಯದಿಂದ ನಿರ್ವಹಿಸಲ್ಪಡುವ ವೈಬ್ರೆಂಟ್ ಬಜಾರ್ ವಿಶಿಷ್ಟವಾದ ಸ್ಥಳೀಯ ಸಾಮಗ್ರಿಗಳನ್ನು ಒಳಗೊಂಡಿದೆ. ಕೇರಳದ ಸಾಂಪ್ರದಾಯಿಕ ಬ್ಲಾಕ್ ಪ್ರಿಂಟಿಂಗ್ ವಿಧಾನಗಳನ್ನು ಬಳಸಿಕೊಂಡು ಮುದ್ರಿಸಲಾದ ಬಿಳಿ ಕಾಟನ್ ಶರ್ಟ್‌ಗಳು, ಕೈಯಿಂದ ಮಾಡಿದ ಸಾವಯವ ಸಾಬೂನುಗಳು, ಸಾಂಪ್ರದಾಯಿಕವಾಗಿ ಹೊರತೆಗೆಯಲಾದ ಸುಗಂಧ ದ್ರವ್ಯಗಳು ಮತ್ತು ಜೇನುತುಪ್ಪ ಇಲ್ಲಿ ಹೆಚ್ಚು ಬೇಡಿಕೆಯುಳ್ಳ ವಸ್ತುಗಳು.


ಟೆಂಪಲ್ ರೀಫ್‌ನಲ್ಲಿ ಸ್ಕೂಬಾ

ಉಷ್ಣವಲಯದ ನೀರಿನಲ್ಲಿ ಸ್ಕೂಬಾ ಮಾಡಿ ಸುಂದರ ಅನುಭವವನ್ನು ತಮ್ಮದಾಗಿಸಿಕೊಳ್ಳಬಹುದು. ಸ್ತಬ್ಧ ಬೀಚ್ ಕರಾವಳಿಯಲ್ಲಿ ವರ್ಣರಂಜಿತ ಹವಳದ ಬಂಡೆಗಳಿಂದ ಬೀಸುತ್ತಿರುವ ಸ್ಪಾಟ್ ಏಂಜೆಲ್ ಮೀನುಗಳು, ಬೆರಗುಗೊಳಿಸುವ ನೀರೊಳಗಿನ ಜೀವವೈವಿಧ್ಯವನ್ನು ಹತ್ತಿರದಿಂದ ನೋಡಬಹುದು. ಇದಕ್ಕಾಗಿ ಪರಿಣಿತರು ಮೊದಲ ಬಾರಿಗೆ ಸ್ಕೂಬಾ ಮಾಡುವವರಿಗೆ ತರಬೇತಿ ನೀಡುತ್ತಾರೆ.

ತಮಿಳು- ಫ್ರೆಂಚ್ ಪಾಕಶಾಲೆ

ಪಾಂಡಿಚೇರಿಗೆ ಭೇಟಿ ನೀಡಿದರೆ ತಮಿಳು- ಫ್ರೆಂಚ್ ಪಾಕಶಾಲೆಗೆ ಭೇಟಿಯಾಗುವುದನ್ನು ತಪ್ಪಿಸಬೇಡಿ. ವಿಶ್ವ ಮಟ್ಟದ ಸುಪ್ರಸಿದ್ದ ಖಾದ್ಯಗಳೊಂದಿಗೆ ಸ್ಥಳೀಯ ಮಸಾಲೆಗಳನ್ನು ಬೆಸೆಯುವ ಇನ್ವೆಂಟಿವ್ ಈಸ್ಟ್-ಮೀಟ್ಸ್-ವೆಸ್ಟ್ ಪಾಕಪದ್ಧತಿ ಎಲ್ಲರನ್ನೂ ಸೆಳೆಯುತ್ತದೆ. ಇಲ್ಲಿನ ಸುಪ್ರಸಿದ್ದ ಸಹಿ ಭಕ್ಷ್ಯಗಳೆಂದರೆ ಕ್ರಿಯೋಲ್ ಥಾಲಿ, ಮಸಾಲಾ ಆಮ್ಲೆಟ್, ಕರಿ ಎಲೆಯ ಐಸ್ ಕ್ರೀಮ್, ಸಮುದ್ರಾಹಾರಗಳಲ್ಲಿ ಸ್ಟ್ಯೂ, ತರಕಾರಿ ಕಟ್ಲೆಟ್‌ಗಳು, ಚಿಕ್ ಹೆರಿಟೇಜ್ ಕೆಫೆಗಳಲ್ಲಿ ಕ್ರೋಸೆಂಟ್‌ಗಳು, ಆಕರ್ಷಕ ಬಿಸ್ಟ್ರೋಗಳಲ್ಲಿ ಪಾಂಡಿಯ ಪ್ರಸಿದ್ಧ ಕಾಫಿ, ವೈನ್, ಚೀಸ್ ನ ರುಚಿ ನೋಡಬಹುದು.

Continue Reading

ಪ್ರವಾಸ

Summer Tour: ಬಿರು ಬಿಸಿಲಿನಲ್ಲೂ ತಂಪಾದ ಅನುಭವ ನೀಡುವ ಕೊಡಗಿನಲ್ಲಿ ಸುತ್ತೋಣ ಬನ್ನಿ…

Summer Tour: ಭಾರತದ ಸ್ಕಾಟ್ಲೆಂಡ್ ಎಂದೇ ಕರೆಯಲ್ಪಡುವ ಕೊಡಗಿನಲ್ಲಿ ಹಲವು ರೋಮಾಂಚಕ ಅನುಭವ ಕೊಡುವ ತಾಣಗಳಿವೆ. ಕೊಡಗಿಗೆ ಭೇಟಿ ನೀಡುವಾಗ ಈ ಅನುಭವಗಳನ್ನು ನೆನಪಿನ ಜೋಳಿಗೆಯಲ್ಲಿ ಸೇರಿಸಲು ಮರೆಯದಿರಿ.

VISTARANEWS.COM


on

By

Kodagu tour
Koo

ಬೆಂಗಳೂರು: ಎಲ್ಲಿ ಕಣ್ಣು ಹಾಯಿಸಿದರೂ ದಟ್ಟವಾದ ಹಚ್ಚ ಹಸಿರು, ಸುವಾಸನೆ ಬೀರುವ ಕಾಫಿ ತೋಟಗಳು, ಮನ ಸೆಳೆಯುವ ವಿಭಿನ್ನ ಸಂಸ್ಕೃತಿ, ಪ್ರವಾಸಿಗರಿಗೆ ಹಲವು ವಿಶೇಷ ಅನುಭವವನ್ನು ಕಟ್ಟಿಕೊಡುವ ಇದು ಭಾರತದ ಸ್ಕಾಟ್ಲೆಂಡ್ (Scotland of India). ಕರ್ನಾಟಕದ (Karnataka) ಪಶ್ಚಿಮ ಘಟ್ಟದ (Western Ghat) ಪರ್ವತಗಳ ನಡುವೆ ನೆಲೆಯಾಗಿರುವ ಕೊಡಗು (Kodagu) ಭವ್ಯವಾದ ಅನುಭವಗಳನ್ನು ನೀಡುತ್ತದೆ (Summer Tour).

ಎಲ್ಲರನ್ನೂ ಮೋಡಿ ಮಾಡುವ ಕೂರ್ಗ್‌ಗೆ (Coorg) ಭೇಟಿ ನೀಡುವುದಿದ್ದರೆ ಈ ಏಳು ನಂಬಲಾಗದ ಆಕರ್ಷಣೆ, ಸರ್ವೋತ್ಕೃಷ್ಟ ಅನುಭವಗಳನ್ನು ನಿಮ್ಮ ನೆನಪಿನ ಬುಟ್ಟಿಯಲ್ಲಿ ಸೇರಿಸಲು ಮರೆಯದಿರಿ.

ಕಾಡುಗಳ ಮಧ್ಯೆ ಒಂದು ರಾತ್ರಿ

ಆಕಾಶದಲ್ಲಿ ಮಿನುಗುವ ನಕ್ಷತ್ರಗಳ ಅಡಿಯಲ್ಲಿ ರಾತ್ರಿಯಿಡೀ ಕುಳಿತುಕೊಳ್ಳಲು ಹಲವು ಅವಕಾಶ ಕೊಡಗಿನಲ್ಲಿದೆ. ಪ್ರಕೃತಿಯ ಮಡಿಲಲ್ಲಿ ಸಾಹಸವನ್ನು ಇಷ್ಟಪಡುವವರಿಗೆ ಕೂರ್ಗ್‌ನ ರಾತ್ರಿಯ ಕ್ಯಾಂಪಿಂಗ್‌ನಲ್ಲಿ ಕಾಲ ಕಳೆಯಬಹುದು. ಜಿಲ್ಲೆಯಾದ್ಯಂತ ವಿವಿಧ ಶಿಬಿರಗಳು ರಾತ್ರಿಯಿಡೀ ನಡೆಸಲಾಗುತ್ತದೆ. ಹಗಲಿನಲ್ಲಿ ದಟ್ಟವಾದ ಕಾಡಿನ ಅನ್ವೇಷಣೆಗೆ ಅನುಕೂಲವಾಗುವಂತೆ ಉಪಕರಣಗಳು ಮತ್ತು ಮಾರ್ಗದರ್ಶಿ ಸೇವೆಗಳನ್ನು ನೀಡುತ್ತದೆ.

ಇದನ್ನೂ ಓದಿ: Panaji tour: ಮೋಡಿ ಮಾಡುವ ಪಣಜಿ; ಗೋವಾ ಸುಂದರ ಲೋಕದ ಗೇಟ್‌ವೇ!

ಕಾವೇರಿ ನದಿಯಲ್ಲಿ ಮೀನು ಹಿಡಿಯಿರಿ

ಜಿಲ್ಲೆಗೆ ಪ್ರವೇಶ ಪಡೆಯುವ ಮೊದಲು ಸಣ್ಣ ಬುಗ್ಗೆಯಾಗಿ ತಲಕಾವೇರಿ ಬೆಟ್ಟಗಳಲ್ಲಿ ಕಾವೇರಿ ಹುಟ್ಟುತ್ತದೆ. ಏಕಾಂತವನ್ನು ಬಯಸುವ ಪ್ರವಾಸಿಗರಿಗೆ ಇದರಲ್ಲಿ ಮೀನು ಹಿಡಿಯಲು ಸಾಕಷ್ಟು ಅವಕಾಶವಿದೆ. ಸಿಹಿ ನೀರಿನಲ್ಲಿ ಮೀನುಗಳನ್ನು ಇಲ್ಲಿ ಕಾಣಬಹುದು. ಮಂಜು ಮುಸುಕಿದ ಪರಿಸರದಲ್ಲಿ ಮೀನುಗಳು ಹೆಚ್ಚು ಸಕ್ರಿಯವಾಗಿರುತ್ತವೆ. ವಿವಿಧ ತೊರೆಗಳು, ವರ್ಣರಂಜಿತ ಪಕ್ಷಿಗಳು, ವಿವಿಧ ಜಾತಿಯ ಮರಗಳು ಮನಃಶಾಂತಿಯನ್ನು ನೀಡುತ್ತದೆ.

ಕೂರ್ಗ್ ಸಂಸ್ಕೃತಿ ನೋಡ ಬನ್ನಿ

ಕೊಡಗಿನ ಹೋಂಸ್ಟೇಗಳಲ್ಲಿ ಅಧಿಕೃತ ಕೂರ್ಗಿ ಸಂಸ್ಕೃತಿಯನ್ನು ಕಾಣಬಹದು. ಸಾಂಪ್ರದಾಯಿಕ ಕೊಡವ ನೃತ್ಯಗಳು, ಬಾಯಲ್ಲಿ ನೀರೂರಿಸುವ ಸ್ಥಳೀಯ ಭಕ್ಷ್ಯಗಳು, ಸಾಂಪ್ರದಾಯಿಕ ವೇಷಭೂಷಣಗಳನ್ನು ಧರಿಸಲು ಮತ್ತು ಮೋಜಿನ ಚಿತ್ರಗಳನ್ನು ಕ್ಲಿಕ್ ಮಾಡಲು ಇದು ಅವಕಾಶ ಕೊಡುತ್ತದೆ. ಪ್ರವಾಸಿಗರಿಗೆ ಇಲ್ಲಿ ಒಂದು ಹೊಸ ಅನುಭವವನ್ನು ಕೊಡಲಿದೆ. ಕೆಲವೊಂದು ಹೋಂ ಸ್ಟೇಗಳನ್ನು ಪೂರ್ವಜರ ಮನೆಗಳಲ್ಲಿ ಮಾಡಲಾಗಿದೆ. ಇದರ ಸುತ್ತಲೂ ಪ್ರದರ್ಶಿಸಲಾದ ಕಲಾಕೃತಿಗಳನ್ನು ಪುರಾತನ ಹಳ್ಳಿಯ ದಿನಗಳನ್ನು ನೆನಪಿಸುತ್ತದೆ.

ರಾಫ್ಟಿಂಗ್ ಅನುಭವ

ಕೊಡಗಿಗೆ ಭೇಟಿ ನೀಡಿದ ಮೇಲೆ ರಾಫ್ಟಿಂಗ್ ಅನುಭವವನ್ನು ಪಡೆಯಲು ಮರೆಯದಿರಿ. ಬಾರಾಪೋಲ್ ನದಿಯ ಘರ್ಜನೆಯ ನಡುವೆ ರಾಪಿಡ್‌ಗಳು ಗ್ರೇಡ್ 3 ಮತ್ತು 4 ವೈಟ್ ವಾಟರ್ ನಲ್ಲಿ 9 ಕಿಲೋ ಮೀಟರ್ ದೂರದವರೆಗೆ ಸಂಚರಿಸುತ್ತದೆ. ಅನುಭವಿ ರಾಫ್ಟರ್‌ಗಳಿಗೆ ರೋಮಾಂಚನವನ್ನು ಒದಗಿಸುತ್ತದೆ. ಕೂರ್ಗ್ ಪಟ್ಟಣದಿಂದ ಕೇವಲ 90 ನಿಮಿಷಗಳ ದೂರದಲ್ಲಿರುವ ಇಲ್ಲಿಗೆ ಜೀಪ್‌ಗಳ ಮೂಲಕ ಶೀಘ್ರದಲ್ಲೇ ತಲುಪಬಹುದು. ಅರಣ್ಯ ಪ್ರದೇಶದ ಮೂಲಕ ದೊಡ್ಡ ಬಂಡೆಗಳ ಸುತ್ತಲೂ ಹರಿಯುವ ನೀರು ಮನಸ್ಸಿಗೆ ಉಲ್ಲಾಸವನ್ನು ಒದಗಿಸುತ್ತದೆ.

ಸಾಂಪ್ರದಾಯಿಕ ಕಾಫಿ ರುಚಿ ನೋಡಿ

ಭಾರತದ ಅತ್ಯುತ್ತಮ ಕಾಫಿ ಬೀಜಗಳನ್ನು ಉತ್ಪಾದಿಸುವ 150ಕ್ಕೂ ಹೆಚ್ಚು ಕಾಫಿ ತೋಟಗಳು ಕೊಡಗಿನಲ್ಲಿದೆ. ಧುಮ್ಮಿಕ್ಕುವ ಹೊಳೆಗಳ ಪಕ್ಕದಲ್ಲಿ ಹರಡಿಕೊಂಡಿರುವ ಕಾಫಿ ತೋಟಗಳಲ್ಲಿ ಸುತ್ತಾಡುವುದು ಒಂದು ರೋಚಕ ಅನುಭವ. ಇಲ್ಲಿನ ಹೆರಿಟೇಜ್ ಫ್ಯಾಕ್ಟರಿಗಳಲ್ಲಿ ಕಾಫಿ ಪುಡಿ ಸಿದ್ಧವಾಗುವುದನ್ನು ನೋಡಬಹುದು. ಇಲ್ಲಿನ ಸ್ಥಳೀಯರು ವಿವಿಧ ಪ್ರಭೇದಗಳ ಕಾಫಿಗಳ ಬಗ್ಗೆ ಹುರಿಯುವ, ಕುದಿಸುವ ವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಾರೆ.

ಮಡಿಕೇರಿ ಕೋಟೆ

17ನೇ ಶತಮಾನದಲ್ಲಿ ಹಲೇರಿ ರಾಜವಂಶದ ಆಳ್ವಿಕೆಯ ಅವಧಿಯಲ್ಲಿ ನಿರ್ಮಿಸಲಾಗಿರುವ ಮಡಿಕೇರಿ ಕೋಟೆ ಕೂರ್ಗ್ಸ್ ಇತಿಹಾಸವನ್ನು ವರ್ಣಿಸುತ್ತದೆ. ವಿಜಯನಗರದಿಂದ ಬ್ರಿಟಿಷರ ಕಾಲದವರೆಗಿನ ಹಿಂದಿನ ಶಿಲ್ಪಗಳು, ವೀರರ ಚಿತ್ರಣಗಳು ಮತ್ತು ಕಲ್ಲಿನ ಶಾಸನಗಳನ್ನು ಇಲ್ಲಿ ಕಾಣಬಹುದು. ಕೋಟೆಯ ಬೆಟ್ಟದ ಮೇಲಿನ ತಾಣವು ಸಂಪೂರ್ಣ ಮಡಿಕೇರಿ ಪಟ್ಟಣದ ಚಿತ್ರವನ್ನು ತೋರಿಸುತ್ತದೆ.


ಅಬ್ಬೆ ಫಾಲ್ಸ್‌

ಮಡಿಕೇರಿಯಿಂದ ಕೇವಲ 8 ಕಿ.ಮೀ. ದೂರದಲ್ಲಿರುವ ಅಬ್ಬೆ ಜಲಪಾತಕ್ಕೆ ಭೇಟಿ ನೀಡದೆ ಕೂರ್ಗ್ ನೆನಪುಗಳು ಪೂರ್ಣಗೊಳ್ಳುವುದಿಲ್ಲ. ತೂಗು ಸೇತುವೆ ಮೂಲಕ ಇದನ್ನು ಹತ್ತಿರದಿಂದ ವೀಕ್ಷಿಸಬಹುದಾಗಿದೆ.
ದಾರಿಯಲ್ಲಿ ಅಪರೂಪದ ಪ್ರಾಣಿಗಳು, ಹಸಿರು ಕಾಡು ಮನಸ್ಸಿಗೆ ತಂಪಿನ ಅನುಭವ ನೀಡುತ್ತದೆ. 70 ಅಡಿ ಎತ್ತರದಿಂದ ಅವಳಿ ಜಲಪಾತಗಳು ಕಾಡು ದಾರಿಯಲ್ಲಿ ಹರಿಯುತ್ತವೆ. ಇದಕ್ಕೆ ಹತ್ತಿರವಾಗಿ ಮಸಾಲೆ ತಯಾರಿ ಘಟಕಗಳು, ಉದ್ಯಾನಗಳು ಇವೆ.

Continue Reading

ಪ್ರವಾಸ

Summer Tour: ಬಿರು ಬೇಸಿಗೆಯಲ್ಲೂ ತಂಪಾದ ಅನುಭವ ನೀಡುವ ಕರ್ನಾಟಕದ ಪ್ರವಾಸಿ ತಾಣಗಳಿವು

Summer Tour: ಬೇಸಿಗೆಯ ಬೇಗೆಗೆ ಕೆಲವರು ತಂಪಾದ ಸ್ಥಳಗಳಿಗೆ ಪ್ರವಾಸಕ್ಕೆ ಹೊರಟು ಬಿಡುತ್ತಾರೆ. ಹಿತ್ತಲ್ಲ ಗಿಡ ಮದ್ದಲ್ಲ ಎಂಬಂತೆ ನಮ್ಮ ರಾಜ್ಯದಲ್ಲಿಯೇ ಇರುವ ಕೆಲವೊಂದು ಅದ್ಭುತ ತಾಣಗಳನ್ನು ಬಿಟ್ಟು ಬೇರೆ ಬೇರೆ ದೇಶಕ್ಕೆ ಹೋಗುವ ಬದಲು ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರೆ ನಿಮ್ಮ ಮೈ ಮನಸ್ಸು ಎರಡೂ ಖುಷಿಯಾಗುವದಂತೂ ಗ್ಯಾರಂಟಿ!

VISTARANEWS.COM


on

Summer Tour
Koo

ಬೆಂಗಳೂರು: ಬೇಸಿಗೆಯ ಬೇಗೆಯನ್ನು ತಣಿಸಲು ಜನರು ಬೇರೆ ರಾಜ್ಯಗಳಿಗೆ ಪ್ರಯಾಣ ಬೆಳೆಸುತ್ತಾರೆ. ಆದರೆ ನಮ್ಮ ಕರ್ನಾಟಕದಲ್ಲಿಯೂ ನಿಮಗೆ ಆಹ್ಲಾದಕರ ವಾತಾವರಣವನ್ನು ಒದಗಿಸುವಂತಹ ಸುಂದರ ತಾಣಗಳಿವೆ. ಸುಂದರವಾದ ಗಿರಿಧಾಮಗಳು, ಸಮುದ್ರ ತೀರಗಳು, ರಾಷ್ಟ್ರೀಯ ಉದ್ಯಾನವನಗಳು ಮತ್ತು ಐತಿಹಾಸಿಕ ಪರಂಪರೆಯನ್ನು ಸಾರುವಂತಹ ದೇವಾಲಯಗಳು, ತಾಣಗಳನ್ನು ಹೊಂದಿರುವ ನಮ್ಮ ಕರ್ನಾಟಕ ಬೇರೆ ರಾಜ್ಯಗಳಿಗಿಂತ ಕಡಿಮೆಯಿಲ್ಲ. ಹಾಗಾಗಿ ಬೇಸಿಗೆಯಲ್ಲಿ (Summer Tour) ನೀವು ತಾಜಾ ಅನುಭವವನ್ನು ಪಡೆಯಲು ಈ ಸ್ಥಳಗಳಿಗೆ ಭೇಟಿ ನೀಡಬಹುದು.

Summer Tour
  1. 1. ಚಿಕ್ಕಮಗಳೂರು
  2. ಇದು ಕಾಫಿ ಪ್ರಿಯರಿಗೆ ಉತ್ತಮ ಸ್ಥಳ. ಇಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಬೆಳೆಯನ್ನು ಮಾಡಲಾಗುತ್ತದೆ. ಹಾಗಾಗಿ ಚಿಕ್ಕಮಗಳೂರಿಗೆ ‘ಕಾಫಿ ನಾಡು’ ಎಂದು ಹೆಸರು. ಇಲ್ಲಿ ಬೆರಗುಗೊಳಿಸುವಂತಹ ಬೆಟ್ಟಗಳು, ಕಣಿವೆಗಳಿವೆ. ಪ್ರಕೃತಿಯ ಮಡಲಿನಲ್ಲಿರುವ ಈ ಸ್ಥಳಕ್ಕೆ ಪ್ರಕೃತಿ ಪ್ರಿಯರು ಭೇಟಿ ನೀಡಲೇಬೇಕು. ಹಾಗೇ ಗದ್ದಲದಿಂದ ಹೊರಬರಲು ಬಯಸುವಂತಹ ವ್ಯಕ್ತಿಗಳಿಗೆ ಇದು ಉತ್ತಮ ಸ್ಥಳವಾಗಿದೆ. ಇಲ್ಲಿ ಮುಳ್ಳಯ್ಯನಗಿರಿಗೆ ಟ್ರೆಕ್ಕಿಂಗ್, ಭದ್ರಾ ನದಿಯಲ್ಲಿ ರಿವರ್ ರಾಪ್ಟಿಂಗ್ ಸೇರಿದಂತೆ ಹಲವು ಚಟುವಟಿಕೆಗಳನ್ನು ಮಾಡಬಹುದು.
Summer Tour

2. ಮಡಿಕೇರಿ

ಬೃಹತ್ ಆದ ಅರಣ್ಯ ಪ್ರದೇಶ, ಕಮರಿಗಳು, ಜಲಪಾತಗಳು, ಮನಮೋಹಕ ಕಾಫಿ ಮತ್ತು ಮಸಾಲೆ ತೋಟಗಳು ಮಂಜಿನ ಪರ್ವತಗಳನ್ನು ಹೊಂದಿರುವ ಮಡಿಕೇರಿಯನ್ನು ‘ಭಾರತದ ಸ್ಕಾಟ್ಲೆಂಡ್’ ಹಾಗೂ ‘ದಕ್ಷಿಣದ ಕಾಶ್ಮೀರ’ ಎಂದು ಕರೆಯಲಾಗುತ್ತದೆ. ಇಲ್ಲಿ ಅಬೈ ಜಲಪಾತ, ಮಡಿಕೇರಿ ಕೋಟೆ, ಬೌದ್ಧ ಮಠಗಳು, ತಲಕಾವೇರಿಯನ್ನು ಹೊಂದಿರುವ ಮಡಿಕೇರಿ ಪ್ರವಾಸಿಗರಿಗೆ ಒಂದು ಉತ್ತಮ ತಾಣವಾಗಿದೆ.

Summer Tour

3. ನಂದಿ ಬೆಟ್ಟ

ಇದು ಚಿಕ್ಕಬಳ್ಳಾಪುರದಲ್ಲಿ ಗಂಗಾ ರಾಜವಂಶಸ್ಥರು ನಿರ್ಮಿಸಿದ ಪ್ರಾಚೀನ ಗಿರಿಧಾಮವಾಗಿದೆ. ಪ್ರವಾಸಿಗರಿಗೆ ಉತ್ತಮ ತಾಣವಾದ ನಂದಿಬೆಟ್ಟದಲ್ಲಿ ನೀವು ಅದ್ಭುತವಾದ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಬಹುದು. ಮತ್ತು ಇವುಗಳನ್ನು ವೀಕ್ಷಿಸಲು ನೀವು ಬೆಟ್ಟದ ತುದಿಗೆ ಚಾರಣ ಮಾಡಬಹುದು. ಇಲ್ಲಿ ಪ್ರಶಾಂತವಾದ ಸರೋವರ, ಸುಂದರವಾದ ದೇವಾಲಯಗಳು, ಐತಿಹಾಸಿಕ ಕೋಟೆಗಳು ಮತ್ತು ಆಕರ್ಷಕವಾದ ಭೂದೃಶ್ಯವನ್ನು ಸವಿಯಬಹುದು.

ಇದನ್ನೂ ಓದಿ: Mantralaya Tour: ಮಂತ್ರಾಲಯಕ್ಕೆ ಒಂದೇ ದಿನದಲ್ಲಿ ಹೋಗಿ ಬರಬೇಕೆ? ಈ ರೈಲುಗಳಲ್ಲಿ ಹೊರಡಿ

Summer Tour

4. ಕಬಿನಿ

ಬೆಂಗಳೂರಿನಿಂದ 200ಕಿ.ಮೀ ಮತ್ತು ಮೈಸೂರಿನಿಂದ 60ಕಿ.ಮೀ ದೂರದಲ್ಲಿರುವ ಕಬಿನಿ ಅದ್ಭುತ ಭೂದೃಶ್ಯಗಳು ಮತ್ತು ವನ್ಯಜೀವಿಗಳ ಭೂಮಿಯಾಗಿದೆ. ವನ್ಯಜೀವಿ ಉತ್ಸಾಹಿ, ಪ್ರಕೃತಿ ಪ್ರೇಮಿ, ಪ್ರಶಾಂತ ವಾತಾವರಣವನ್ನು ಇಷ್ಟಪಡುವ ವ್ಯಕ್ತಿ ಕಬಿನಿಗೆ ಭೇಟಿ ನೀಡಿ. ಇಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಜಂಗಲ್ ಸಫಾರಿಯಿಂದ ಹಿಡಿದು ಕಬಿನಿ ನದಿಯಲ್ಲಿ ಸಾಹಸಮಯ ಜಲಕ್ರೀಡೆಗಳು ಅಥವಾ ದಡದಲ್ಲಿ ಕ್ಯಾಂಪಿಂಗ್ ಮಾಡಲು ಬಯಸುವವರಿಗೆ ಇದು ಸೂಕ್ತ ಸ್ಥಳವಾಗಿದೆ.

Continue Reading
Advertisement
IPL 2024
ಕ್ರಿಕೆಟ್51 seconds ago

IPL 2024: ಸಿಕ್ಸರ್​ ಮೂಲಕ ದಾಖಲೆ ಬರೆದ ಹಿಟ್​ಮ್ಯಾನ್​ ರೋಹಿತ್​

Murder case In Raichur
ರಾಯಚೂರು18 mins ago

Murder Case : ಕಲ್ಲಿನಿಂದ ಜಜ್ಜಿ ಪತ್ನಿಯ ಕೊಂದು ನೇಣಿಗೆ ಶರಣಾದ ಅನುಮಾನ ಪಿಶಾಚಿ

Lok sabha election-2024
Latest19 mins ago

Lok Sabha Election 2024: ಲೋಕಸಭೆ ಚುನಾವಣೆ ಮೊದಲ ಹಂತದಲ್ಲಿ ಪ್ರಬಲ ಪೈಪೋಟಿಯ ಟಾಪ್ 10 ಕ್ಷೇತ್ರಗಳಿವು

tamanna bhatia gold
ಚಿನ್ನದ ದರ21 mins ago

Gold Rate Today: ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ; ಬೆಂಗಳೂರಿನಲ್ಲಿ ಇಂದು ಹೀಗಿದೆ ದರ

CET 2024 exam Complaint against syllabus question of Mathematics and Biology KEA to set up committee on April 24
ಶಿಕ್ಷಣ26 mins ago

CET 2024 Exam: ಗಣಿತ, ಜೀವಶಾಸ್ತ್ರದ ಔಟ್‌ ಆಫ್‌ ಸಿಲಬಸ್‌ ಪ್ರಶ್ನೆ ವಿರುದ್ಧ ದೂರು; ಏಪ್ರಿಲ್‌ 24ಕ್ಕೆ ಸಮಿತಿ ರಚನೆಗೆ ಕೆಇಎ ನಿರ್ಧಾರ

Uttarakaanda Movie Yogaraj bhat entry
ಸ್ಯಾಂಡಲ್ ವುಡ್28 mins ago

Uttarakaanda Movie: ಪಾಟೀಲನಾಗಿ ‘ಉತ್ತರಕಾಂಡ’ ಸಿನಿಮಾಗೆ ಎಂಟ್ರಿ ಕೊಟ್ಟ ಯೋಗರಾಜ್ ಭಟ್

Suicide bomb Attack karachi
ವಿದೇಶ45 mins ago

Suicide bomb Attack: ಪಾಕ್‌ನಲ್ಲಿ ಜಪಾನೀಯರಿದ್ದ ವಾಹನಕ್ಕೆ ಆತ್ಮಹತ್ಯಾ ಬಾಂಬ್‌ ದಾಳಿ: 2 ಬಲಿ

Dubai Rain
ಕ್ರೀಡೆ45 mins ago

Dubai Rain: ಭಾರತೀಯ ಕುಸ್ತಿಪಟುಗಳ ಪ್ಯಾರಿಸ್​ ಒಲಿಂಪಿಕ್ಸ್​ ಕನಸಿಗೆ ತಣ್ಣೀರೆರಚಿದ ದುಬೈ ಮಳೆ

Self Harming In Karwar
ಉತ್ತರ ಕನ್ನಡ49 mins ago

Self Harming : ಕಾಲೇಜಿನಿಂದ ಬಂದವಳೇ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ

Neha Murder Case Neha stabbed in ISIS model murdered for not working Love jihad says Pramod Muthalik
ಕ್ರೈಂ1 hour ago

Neha Murder Case: ಐಸಿಸ್‌ ಮಾದರಿಯಲ್ಲಿ ನೇಹಾಗೆ ಚಾಕು ಇರಿತ; ಲವ್‌ ಜಿಹಾದ್‌ ಫಲಿಸದ್ದಕ್ಕೆ ಕೃತ್ಯ: ಪ್ರಮೋದ್‌ ಮುತಾಲಿಕ್

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ8 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ2 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ3 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ5 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ6 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 week ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ1 week ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

ಟ್ರೆಂಡಿಂಗ್‌